Gowri Habba 2022 | ಗೌರಿ ಹಬ್ಬದಂದು ಸ್ವರ್ಣಗೌರಿ ವ್ರತ ಹೇಗೆ ಮಾಡಬೇಕು? Vistara News
Connect with us

ಗಣೇಶ ಚತುರ್ಥಿ

Gowri Habba 2022 | ಗೌರಿ ಹಬ್ಬದಂದು ಸ್ವರ್ಣಗೌರಿ ವ್ರತ ಹೇಗೆ ಮಾಡಬೇಕು?

ಗೌರಿ ಹಬ್ಬ (Gowri Habba 2022 ) ಬಂದೇ ಬಿಟ್ಟಿದೆ. ಈ ಹಬ್ಬದಂದು ಸ್ವರ್ಣ ಗೌರಿಯನ್ನು ಹೇಗೆ ಪೂಜಿಸಬೇಕು, ಇದಕ್ಕೆ ಸಿದ್ಧತೆ ಹೇಗಿರಬೇಕೆಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಲೇಖನ ಓದಿ, ಜತೆಗೆ ವಿಡಿಯೋವನ್ನೂ ನೋಡಿ.

VISTARANEWS.COM


on

Gowri Habba 2022
Koo

ಡಾ. ಅನಸೂಯ ಎಸ್‌. ರಾಜೀವ್‌
ಭಾದ್ರಪದ ಮಾಸದ ಶುಕ್ಲಪಕ್ಷ ತದಿಗೆಯಂದು ಆಚರಿಸುವ ವ್ರತವೇ ಸ್ವರ್ಣಗೌರಿ ವ್ರತ ಅಥವಾ ಗೌರಿಹಬ್ಬ (Gowri Habba 2022). ಗೌರಿಯು ಕೈಲಾಸದಿಂದ ಭೂಮಿಗೆ ಭಾದ್ರಪದ ಶುಕ್ಲ ತದಿಗೆಯಂದು ಬರುತ್ತಾಳೆ. ಅವಳನ್ನು ಕರೆದು ತವರು ಮನೆಯ ಆತಿಥ್ಯ ಮಾಡಿ ವಾಪಸ್ಸು ಮಗನೊಂದಿಗೆ ಕಳುಹಿಸಿಕೊಡುವುದೇ ಹಬ್ಬದ ವೈಶಿಷ್ಟ್ಯ. ಗೌರಿ ಹಬ್ಬವು ಸ್ತ್ರೀಯರು ಸೌಭಾಗ್ಯಕ್ಕಾಗಿ, ಪತಿದೇವರ ಒಳಿತಿಗಾಗಿ ಆಚರಿಸುವ ವ್ರತ. ಗೌರಿಯು ಭಾದ್ರಪದ ಶುಕ್ಲ ತದಿಗೆಯಂದು ಶಿವಲಿಂಗ ಮಾಡಿ ಶಿವನನ್ನು ಭಕ್ತಿಯಿಂದ ಪೂಜಿಸಿದಳು.

Gowri Habba 2022
<strong>ಡಾ ಅನಸೂಯ ಎಸ್‌ ರಾಜೀವ್‌<strong>

ಹಬ್ಬದ ಆಚರಣೆ ಹೇಗೆ?
ಮೊದಲಿಗೆ ಮನೆಯನ್ನು ತಳಿರು ತೋರಣಗಳಿಂದ,ರಂಗೋಲಿಗಳಿಂದ ಅಲಂಕರಿಸಬೇಕು. ಮಂಟಪವನ್ನು ಸಿದ್ಧಪಡಿಸಿ, ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿಕೊಂಡು ಪದ್ಮ ಬರೆದು ಸಣ್ಣ ತಟ್ಟೆಯಲ್ಲಿ ಅರಿಶಿನ ಗೌರಿಯನ್ನು ಇಟ್ಟುಕೊಳ್ಳಬೇಕು. ಇದರ ಹಿಂದೆ ಮಣ್ಣಿನಗೌರಿಯನ್ನು ಇಡಬೇಕು. ಇಲ್ಲಿ ಗೌರಿದೇವಿಯ ಸುವರ್ಣ ಪ್ರತಿಮೆಯನ್ನಿಡಬೇಕೆಂದು ಶಾಸ್ತ್ರ ಹೇಳುತ್ತದೆ. ಆದರೆ ಅದು ಆಚರಣೆಯಲ್ಲಿ ಕಷ್ಟಸಾಧ್ಯ.

ಗೌರಿಯು ಸುವರ್ಣ ವರ್ಣದವಳು. ಚಿನ್ನವನ್ನು ನೋಡಿದಾಗ, ಮುಟ್ಟಿದಾಗ, ಅಥವಾ ಧರಿಸಿದಾಗ ಪ್ರಕೃತಿಯಲ್ಲಿ ದೇವತಾ ಪ್ರಸನ್ನತೆಗೆ ಬೇಕಾದ ಯಾವ ಸ್ಥಿತಿ ಉಂಟಾಗುತ್ತದೋ ಆ ಸ್ಥಿತಿಯು ಅರಿಶಿನವನ್ನು ನೋಡಿದಾಗ ಮುಟ್ಟಿದಾಗ ಅಥವಾ ಧರಿಸಿದಾಗಲೂ ಉಂಟಾಗುತ್ತದೆ.

ಪದ್ಧತಿ ಇರುವವರು ಮಣ್ಣಿನ ಗೌರಿಯನ್ನೂ ಪದ್ಧತಿ ಇಲ್ಲದವರು ಅರಿಶಿನದ ಗೌರಿಯನ್ನೂ ಇಟ್ಟು ಪೂಜಿಸುತ್ತಾರೆ. ಮೊದಲಿಗೆ ಗಂಗೆ ಪೂಜೆ ಮಾಡಿ ನಂತರ ಗಂಗೆಯ ಮತ್ತಿಕೆಯಿಂದ ಗೌರಿ ತಯಾರಿಸಿ ಅದನ್ನು ಮನೆಗೆ ತಂದು ಷೋಡಷೋಪಚಾರ ಪೂಜೆ ಮಾಡತಕ್ಕದ್ದು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈಗಿನ ಕಾಲದಲ್ಲಿ ಅಷ್ಟೊಂದು ಸಮಯವಿಲ್ಲದ ಕಾರಣ, ಹಿಂದಿನ ದಿನವೇ ಗೌರಿ ಗಣೇಶನನ್ನು ತಂದಿಟ್ಟಿರುತ್ತಾರೆ.

ಗೌರಿ ಹಬ್ಬದ ದಿನ ಮಣ್ಣಿನ ಗೌರಿಯ ಪೂಜೆಗೆ ಮುಂಚೆ ಗಂಗೆಪೂಜೆ ಮಾಡಿ ನಂತರ ಗೌರಿಯನ್ನು ಪ್ರತಿಷ್ಠಾಪಿಸಿ ಅದರ ಸುತ್ತಲೂ ಸೀರೆಯನ್ನೋ, ರವಿಕೆ ಕಣವನ್ನೋ ಸುತ್ತುವುದು. ಘಂಟಾನಾದ ಸಹಿತ ಪೂಜೆಯಾರಂಭಿಸಿ, ಆಚಮನ, ಸಂಕಲ್ಪ, ಕಳಶ ಪೂಜೆ, ಮಹಾಗಣಪತಿ ಪಜೆ, ಗೌರಿ ಪ್ರತಿಷ್ಠಾಪನೆ, ಮಾಡಿ ದೇವಿಯನ್ನು ಧ್ಯಾನಿಸಿ ಪುಷ್ಪಾಕ್ಷತೆಗಳಿಂದ ಆಕೆಯನ್ನು ಆವಾಹಿಸಿ ರತ್ನ ಸಿಂಹಾಸನವನ್ನು ಸಮರ್ಪಿಸಿ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಪಂಚಾಮೃತ ಸ್ನಾನ, ಶುದ್ಧೋದಕ ಸ್ನಾನ, ವಸ್ತ್ರ ಆಭರಣ, ಬಳೆಬಿಚ್ಚೋಲೆ, ಕಾಡಿಗೆ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ, ಕುಂಕುಮ, ಇತ್ಯಾದಿ ಸೌಭಾಗ್ಯ ದ್ರವ್ಯಗಳು ಮತ್ತು ಪುಷ್ಪಗಳನ್ನು ಗೌರಿಗೆ ಸಮರ್ಪಿಸಬೇಕು.

ದೇವಿಗೆ ಅಂಗಪೂಜೆ, ಪುಷ್ಪಪೂಜೆ, ಪತ್ರಪೂಜೆ, ನಾಮಪೂಜೆಗಳನ್ನು ಸಲ್ಲಿಸಿ, ದಾರದ ಹದಿನಾರು ಗ್ರಂಥಿಗಳಿಗೂ ಪೂಜೆ ಸಲ್ಲಿಸಬೇಕು. ಗೌರೀದೇವಿಯ ಅಂಗಪೂಜೆ ಮಾಡುವುದು ಹದಿನಾರು ಸ್ಥಾನಗಳಲ್ಲಿ. ಗೌರೀ ಪೂಜೆಯ ಪತ್ರ ಪುಷ್ಪಗಳ ಸಂಖ್ಯೆ ಹದಿನಾರು. ದೋರ ಗ್ರಂಥಿಗಳು ಹದಿನಾರು. ಗೌರೀ ವ್ರತದ ಸಾಲ್ಯಕ್ಕೆ ಬೇಕಾಗುವ ವರ್ಷಗಳು ಹದಿನಾರು. ಬಾಗಿನಗಳು ಹದಿನಾರು. ಹದಿನಾರು ಕಲೆಗಳಿಂದ ಕೂಡಿದ ಪರಮಾತ್ಮಮಯಿಯಾದ ಪ್ರಕೃತಿ ಮಾತೆಯೇ ಗೌರೀದೇವಿ ಎಂಬ ತತ್ತ್ವವು ಸೂಚಿತವಾಗಿದೆ.

ಅಷ್ಟೋತ್ತರ ದಿವ್ಯನಾಮಗಳಿಂದ ದೇವಿಯನ್ನು ಅರ್ಚಿಸಿ, ಧೂಪ, ದೀಪ, ನೈವೇದ್ಯ, ತಾಂಬೂಲ, ಫಲ, ದಕ್ಷಿಣೆ, ಅರ್ಘ್ಯ, ನೀರಾಜನ, ಪುಷ್ಪಾಂಜಲಿ, ಪ್ರದಕ್ಷಿಣೆ ನಮಸ್ಕಾರಗಳನ್ನು ಸಮರ್ಪಿಸಬೇಕು ದೇವಿಯ ನೈವೇದ್ಯಕ್ಕೆ ಸಮರ್ಪಿಸಬೇಕಾದ ವಿಶೇಷ ದ್ರವ್ಯ ಹುಗ್ಗಿ, ಗುಡಾನ್ನ, ಕೋಸಂಬರಿ, ಹೋಳಿಗೆ, ಪಾಯಸ.

ಮೊರದ ಬಾಗಿನ ನೀಡುವುದು
ಪೂಜೆಯಾದ ಮೇಲೆ ಮೊರದ ಬಾಗಿನಗಳನ್ನು ದೇವಿಗೆ ಮೂರು ಸಲ ಒಪ್ಪಿಸಿಬಿಡುವುದು.ಮೊರದ ಬಾಗಿನವನ್ನು ಜೋಡಿಸುವುದು ಹೇಗೆಂದರೆ, ಮೊರಕ್ಕೆ ಪೇಪರ್ ಅಥವಾ ಬಾಳೆ ಎಲೆ ಹಾಕಿ ಒಂದು ಪಾವು ಅಕ್ಕಿ, ತೊಗರಿಬೇಳೆ, ಕಡಲೇಬೇಳೆ, ಉದ್ದಿನಬೇಳೆ, ಹೆಸರುಬೇಳೆ, ಉಪ್ಪು, ರವೆ, ಬೆಲ್ಲದಚ್ಚು, ತೆಂಗಿನಕಾಯಿ, ವೀಳ್ಯದೆಲೆ ಅಡಿಕೆ, ದಕ್ಷಿಣೆ, ರವಿಕೆ ಕಣ, ಬಳೆ ಬಿಚ್ಚೋಲೆ, ಬಳೆಗಳು, ಅರಿಶಿನ ಕುಂಕುಮಗಳನ್ನು ಹಾಕಿ ಇಡುವುದು.

ಗೌರಿಗೆ ಉಪ್ಪಕ್ಕಿ: ಗೌರಿ ಪೂಜೆಯಾದ ನಂತರ ಮಧ್ಯಾಹ್ನ ಊಟಕ್ಕೆ ಮುನ್ನ ಗೌರಿಯ ಮುಂದೆ ಒಂದು ತಟ್ಟೆಯಲ್ಲಿ ಉಪ್ಪು ಹಾಗೂ ಅಕ್ಕಿಯನ್ನು ತಟ್ಟೆಗೆ ಹಾಕಿಕೊಂಡು ಅದನ್ನು ಮೂರು ಸಲ ತೆಗೆದು ತೆಗೆದು ಬೇರೆ ತಟ್ಟೆಗೆ ಹಾಕಬೇಕು.
ಸೋಬಲಕ್ಕಿ: ಗಣಪತಿ ಹಬ್ಬದಂದು ಗಣಪತಿಯನ್ನು ವಿಸರ್ಜಿಸುವುದಕ್ಕಿಂತ ಮೊದಲ ಗೌರಿಯನ್ನು ವಿಸರ್ಜಿಸಬೇಕು. ಗೌರಿಯನ್ನು ವಿಸರ್ಜಿಸಿ ಕೆಳಗಿಳಿಸಿದಾಗ ಅವಳಿಗೆ ಒಂದು ತಟ್ಟೆಯಲ್ಲಿ ರವಿಕೆ ಕಣ, ತೆಂಗಿನಕಾಯಿ, ಎಲೆ ಅಡಿಕೆ, ಬೆಲ್ಲದಚ್ಚು ಇಟ್ಟು ದೇವಿಗೆ ತೋರಿಸಿ ಆರತಿ ಮಾಡಬೇಕು. ಮಗಳು ತವರು ಮನೆಗೆ ಬಂದು ವಾಪಸ್ಸು ಹೊರಡುವಾಗ ತಾಯಿಯು ಅವಳಿಗೆ ಸೋಬಲಕ್ಕಿಯನ್ನು ಇಟ್ಟು ಕಳುಹಿಸುವುದು ಒಂದು ವಾಡಿಕೆ. ಅದರ ಪ್ರತೀಕವೇ ಈ ಸೋಬಲಕ್ಕಿ ಇಡುವ ವಿಧಾನ.

ಗೌರಿಯನ್ನು ಕಳುಹಿಸಿಕೊಡುವಾಗ ಮಂಗಳೋತ್ಸವದ ಅಂಗವಾಗಿ ಗುಡಾನ್ನ, ಘೃತಾನ್ನ, ಹುಳಿಯನ್ನ, ಪಾಯಸ, ಪರಮಾನ್ನ ಎಂಬ ಪಂಚಪಕ್ವಾನ್ನಗಳನ್ನು ಅರ್ಪಿಸಿ ಮಂಗಳಾರತಿ ಮಾಡಿ ಅವಳನ್ನು ಕಳುಹಿಸಿಕೊಡಬೇಕು.

– ಲೇಖಕರು ಪ್ರವಚನಕಾರರರು, ಜ್ಯೋತಿಷಿಗಳು

ಇದನ್ನೂ ಓದಿ | Festive makeup | ಹಬ್ಬದ ಆಕರ್ಷಕ ಮೇಕಪ್‌ಗೆ 5 ಐಡಿಯಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಕರ್ನಾಟಕ

ಗಣೇಶ ವಿಸರ್ಜನೆ | ಡಿಜೆ ಸೌಂಡ್‌ಗೆ ವ್ಯಕ್ತಿ ಹೃದಯಾಘಾತದಿಂದ ಸಾವು?

ಡಿಜೆ ಸೌಂಡ್ ಎಫೆಕ್ಟ್‌ಗೆ ಹೃದಯಾಘಾತದಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವುದಾಗಿ ಹೆಬ್ಬಾಕ ಗ್ರಾಮಸ್ಥರು ಆರೋಪಿಸಿದ್ದಾರೆ. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಈ ಘಟನೆ ನಡೆದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

Edited by

dj sound
ಗಣೇಶ ವಿಸರ್ಜನೆ ಮೆರವಣಿಗೆ ತರಲಾಗಿದ್ದ ಡಿಜೆ ಸ್ಪೀಕರ್‌
Koo

ತುಮಕೂರು: ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್‌ ಹಾಕಿಕೊಂಡು ಭರ್ಜರಿಯಾಗಿ ಕುಣಿದು ಕುಪ್ಪಳಿಸಿ ಸಂಭ್ರಮಿಸಲಾಗಿದೆ. ಆದರೆ, ಇದೇ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ, ಡಿಜೆ ಶಬ್ದಕ್ಕೇ ಮೃತಪಟ್ಟಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.

ಇಲ್ಲಿನ ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಸ್ಥರೆಲ್ಲ ಸೇರಿ ಸಂಭ್ರಮದಿಂದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಶನಿವಾರ ವಿಸರ್ಜನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಶನಿವಾರ ರಾತ್ರಿ ವಿವಿಧ ಕಲಾತಂಡಗಳೊಂದಿಗೆ ಡಿಜೆಯನ್ನು ಸಹ ತರಿಸಲಾಗಿತ್ತು. ಈ ವೇಳೆ ಡಿಜೆ ಸೌಂಡ್‌ಗೆ ವಿರೂಪಾಕ್ಷಪ್ಪ (50) ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಆದರೆ, ವಿರೂಪಾಕ್ಷಪ್ಪ ಸಾವಿಗೆ ಅತಿಯಾದ ಡಿಜೆ ಸೌಂಡ್‌ ಕಾರಣ ಎಂದು ಕೆಲವರು ಆರೋಪ ಮಾಡಿದ್ದಾರೆ. ಈ ಸಂಬಂಧ ಗ್ರಾಮದಲ್ಲಿ ನಡೆದ ಗಣಪತಿ ವಿಸರ್ಜನಾ ಮಹೋತ್ಸವದ ವಿಡಿಯೊಗಳನ್ನು ಸಹ ಶೇರ್‌ ಮಾಡಲಾಗಿದೆ. ಈ ವಿಡಿಯೊ ಸಹ ವೈರಲ್ ಆಗಿದೆ. ಸರ್ಕಾರವು ಡಿಜೆಗೆ ಸಂಬಂಧಿಸಿದಂತೆ ಕೆಲವು ಸುತ್ತೋಲೆಗಳನ್ನು ಹೊರಡಿಸಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಡಿಜೆಗೆ ಅನುಮತಿ ಕಡ್ಡಾಯ ಎಂದು ಆದೇಶವಿದೆ. ಆದರೆ, ಕಾರ್ಯಕ್ರಮದ ಆಯೋಜಕರು ಸರ್ಕಾರಿ ಆದೇಶವನ್ನು ಪಾಲಿಸದೆ ಅನಧಿಕೃತವಾಗಿ ಡಿಜೆ ಸೆಟ್ ತರಿಸಿದ್ದರು ಎನ್ನಲಾಗಿದೆ. ಆದರೆ, ವಿರೂಪಾಕ್ಷಪ್ಪ ಅವರ ಸಾವು ಯಾವ ಕಾರಣಕ್ಕೆ ಎಂಬ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

ಇದನ್ನೂ ಓದಿ | Viral Video | ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡ್ಯಾಗರ್ ಹಿಡಿದು ಕುಣಿದು ಕುಪ್ಪಳಿಸಿದ ಪುಂಡರು

Continue Reading

ಕರ್ನಾಟಕ

ಹೊಸಪೇಟೆ | ಬೃಹತ್‌ ಗಣಪತಿ ಮೂರ್ತಿ ಸಹಿತ ಕ್ರೇನ್‌ ಪಲ್ಟಿ: ಅಡಿಗೆ ಸಿಲುಕಿ ಇಬ್ಬರು ಯುವಕರು ದಾರುಣ ಮೃತ್ಯು

ಹೊಸಪೇಟೆಯ ಟಿಬಿ ಡ್ಯಾಂ ಬಳಿ ಗಣೇಶ ಮೂರ್ತಿ ವಿಸರ್ಜನೆಯ ವೇಳೆ ಕ್ರೇನ್‌ ಪಲ್ಟಿಯಾಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

VISTARANEWS.COM


on

Edited by

hosapete crane
ಹೊಸಪೇಟೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಉರುಳಿದ ಕ್ರೇನ್
Koo

ವಿಜಯನಗರ: ಗಣಪತಿ ಮೂರ್ತಿ ವಿಸರ್ಜನೆಯ ವೇಳೆ ಬೃಹತ್‌ ಮೂರ್ತಿಯನ್ನು ನೀರಿಗೆ ಇಳಿಸುತ್ತಿದ್ದ ಕ್ರೇನ್‌ ಪಲ್ಟಿಯಾಗಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ.

ಹೊಸಪೇಟೆಯ ತುಂಗ ಭದ್ರಾ ಡ್ಯಾಂ ಕಾಲುವೆಯ ಬಳಿ ಶನಿವಾರ ರಾತ್ರಿ ೧.೩೦ರ ಹೊತ್ತಿಗೆ ಈ ದುರ್ಘಟನೆ ನಡೆದಿದೆ. ಮಗುಚಿಬಿದ್ದ ಕ್ರೇನ್‌ನ ಅಡಿ ಸಿಲುಕಿದ ಇಬ್ಬರು ಯುವಕರಲ್ಲಿ ಒಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ತುಂಗಭದ್ರಾ ಡ್ಯಾಂನ ಇವಿ ಕ್ಯಾಂಪ್‌ ನಿವಾಸಿಗಳಾದ ಅಶೋಕ್‌ (೧೮) ಮತ್ತು ಸಾಯಿ ನಿಖಿಲ್‌ (೧೮) ಮೃತಪಟ್ಟವರು.

೩೪ ಅಡಿ ಎತ್ತರದ ‌ ಹೊಸಪೇಟೆ ಗಣಪ
ಹೊಸಪೇಟೆಯಲ್ಲಿ ಕಳೆದ ಆಗಸ್ಟ್‌ ೩೧ರಂದು ಸುಮಾರು ೩೪ ಅಡಿ ಎತ್ತರದ ಬೃಹತ್‌ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಶನಿವಾರ ವಿಸರ್ಜನಾ ಮೆರವಣಿಗೆ ನಡೆದಿತ್ತು. ಅಂತಿಮವಾಗಿ ಟಿಬಿ ಡ್ಯಾಂನ ಕಾಲುವೆಯಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜಿಸಲು ಸಕಲ ಸಿದ್ಧತೆ ನಡೆದಿತ್ತು. ವಾಹನದಲ್ಲಿ ಅಲಂಕರಿಸಿ ತರಲಾಗಿದ್ದ ಗಣೇಶ ಮೂರ್ತಿಯನ್ನು ಕ್ರೇನ್‌ ಮೂಲಕ ಎತ್ತಿ ಕಾಲುವೆಗೆ ಇಳಿಸಬೇಕು ಎನ್ನುವಷ್ಟರಲ್ಲಿ ಕ್ರೇನೇ ಆಯತಪ್ಪಿ ಪಲ್ಟಿಯಾಗಿದೆ. ಆಗ ಈ ಇಬ್ಬರು ಯುವಕರು ಅದರ ಅಡಿಗೆ ಸಿಲುಕಿದ್ದಾರೆ.

ಗಣಪತಿ ಶೋಭಾ ಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಈ ಇಬ್ಬರು ಯುವಕರು ಕೂಡಾ ವಿಸರ್ಜನೆಯ ಅಂತಿಮ ಹಂತವನ್ನು ನೋಡುವ ಕುತೂಹಲದಿಂದ ಬಂದಿದ್ದರು. ಇವರು ಉತ್ಸವ ಸಮಿತಿಗೆ ಸೇರಿದವರೇನೂ ಅಲ್ಲ. ಸಾಮಾನ್ಯ ನಾಗರಿಕರು ಅಷ್ಟೆ.

ಇದು ಹೊಸಪೇಟೆಯ ಹೊರವಲಯದಲ್ಲಿರುವ ಟಿಬಿ ಡ್ಯಾಂನ ಕಾಲುವೆ ಬಳಿ ನಡೆದ ದುರಂತವಾಗಿದ್ದು, ರೈಲು ನಿಲ್ದಾಣದ ಸಮೀಪ ಬರುತ್ತದೆ. ಕ್ರೇನ್‌ ಪಲ್ಟಿಯಾಗಿ ಇಬ್ಬರು ಅಡಿಯಲ್ಲಿ ಸಿಲುಕಿದ ವಿಷಯ ತಿಳಿಯುತ್ತಲೇ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು. ಆದರೆ ಯುವಕರು ಕ್ರೇನ್‌ನ ಅಡಿಯಲ್ಲಿ ಸಿಕ್ಕಿದ್ದರಿಂದ ಹೊರತೆಗೆಯುವುದು ಸಾಧ್ಯವಿರಲಿಲ್ಲ. ಅದರಲ್ಲೂ ಇಬ್ಬರೂ ತೀವ್ರವಾಗಿ ನರಳುತ್ತಿದ್ದರು.

ಕೂಡಲೇ ಬೇರೆ ಎರಡು ಕ್ರೇನ್‌ಗಳನ್ನು ತರಿಸಿಕೊಂಡು ಬಿದ್ದ ಕ್ರೇನನ್ನು ಮೇಲೆ ಎತ್ತಿ ಇಬ್ಬರನ್ನೂ ಹೊರತೆಗೆಯಲಾಗಿತ್ತು. ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಅವರನ್ನು ಹೊರಗೆ ತರಲಾಯಿತು. ಆದರೆ, ಅಷ್ಟು ಹೊತ್ತಿಗೆ ಅಶೋಕ್‌ ಪ್ರಾಣ ಹೋಗಿತ್ತು. ಸಾಯಿನಿಖಿಲ್‌ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಒಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಂತಿಮವಾಗಿ ನಿಖಿಲ್‌ ಕೂಡಾ ಪ್ರಾಣ ಕಳೆದುಕೊಂಡಿದ್ದಾರೆ.

ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ , ಪಿಐಗಳಾದ ಹುಲುಗಪ್ಪ, ಶ್ರೀನಿವಾಸ್ ಮೇಟಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದರು. ಮಧ್ಯರಾತ್ರಿಯೇ ಟಿಬಿ ಡ್ಯಾಂನ ಇವಿ ಕ್ಯಾಂಪಸ್‌ ನಿವಾಸಿಗಳು ಧಾವಿಸಿ ಬಂದರು. ಮನೆಯವರ ಸಂಕಟ, ಗೋಳಾಟಗಳು ಕಲ್ಲೆದೆಯನ್ನೂ ಕರಗಿಸುವಂತಿತ್ತು. ಇನ್ನೂ ಪಿಯುಸಿ ಓದುವ ಹಂತದಲ್ಲಿದ್ದ ಹುಡುಗರ ಸಾವು ಅವರನ್ನು ಕಂಗೆಡಿಸಿತ್ತು.

ಇದನ್ನೂ ಓದಿ | Ganesh Chaturthi | ವಿಸರ್ಜನೆ ಬದಲು ಠಾಣೆಯತ್ತ ಗಣೇಶ ಮೆರವಣಿಗೆ: ಡಿಜೆ ಸೀಜ್‌ಗೆ ಆಕ್ರೋಶ

Continue Reading

ಕರ್ನಾಟಕ

Ganeshotsav | ಹುಬ್ಬಳ್ಳಿಯಲ್ಲಿ ಬೃಹತ್‌ ಗಣಪತಿ ಮೂರ್ತಿಗಳ ವಿಸರ್ಜನೆ

ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ರಸ್ತೆಯುದ್ದಕ್ಕೂ ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿಯುವ ಮೂಲಕ ಯುವ ಸಮೂಹ ಗಮನ ಸೆಳೆಯಿತು.

VISTARANEWS.COM


on

Edited by

Ganeshotsav
Koo

ಹುಬ್ಬಳ್ಳಿ: ನಗರದ ದುರ್ಗದಬೈಲ್, ದಾಜೀಬಾನ್ ಪೇಟ್, ಮರಾಠಾ ಗಲ್ಲಿ ಸೇರಿ ವಿವಿಧ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬೃಹತ್ ಗಣೇಶ ಮೂರ್ತಿಗಳ ವಿಸರ್ಜನೆಯೊಂದಿಗೆ ಸಾರ್ವಜನಿಕ ಗಣೇಶೋತ್ಸವಕ್ಕೆ(Ganeshotsav) ಶುಕ್ರವಾರ ತೆರೆಬಿದ್ದಿದೆ.

ವಿಸರ್ಜನೆ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ರಸ್ತೆಯುದ್ದಕ್ಕೂ ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿಯುವ ಮೂಲಕ ಯುವ ಸಮೂಹ ಗಮನ ಸೆಳೆಯಿತು. ಒಂದೆಡೆ ಡಿಜೆ ಮತ್ತೊಂದೆಡೆ ವಿವಿಧ ವಾದ್ಯಗಳು ಮೆರವಣಿಗೆ ಮೆರುಗು ನೀಡಿದವು. ಡೊಳ್ಳು ಕುಣಿತ, ಜಾಂಜ್, ಗೆಜ್ಜೆಮಜಲು, ಡೋಲು ಸೇರಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

ಸಾರ್ವಜನಿಕರ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ಇದನ್ನೂ ಓದಿ | Ganeshotsav | ಶಿವಮೊಗ್ಗದಲ್ಲಿ ಬಿಗಿ ಭದ್ರತೆ ನಡುವೆ ಅದ್ಧೂರಿ ಗಣೇಶ ರಾಜಬೀದಿ ಉತ್ಸವ

Continue Reading

ಕರ್ನಾಟಕ

Ganeshotsav | ಶಿವಮೊಗ್ಗದಲ್ಲಿ ಬಿಗಿ ಭದ್ರತೆ ನಡುವೆ ಅದ್ಧೂರಿ ಗಣೇಶ ರಾಜಬೀದಿ ಉತ್ಸವ

ಗಣೇಶನ ರಾಜಬೀದಿ ಉತ್ಸವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಸಂಪೂರ್ಣ ಕೇಸರಿಮಯವಾಗಿತ್ತು. ಕೇಸರಿ ಪೇಟದಲ್ಲಿ ಮಿಂಚುತ್ತಿದ್ದ ಯುವಕ ಹಾಗೂ ಯುವತಿಯರು ಡೊಳ್ಳು ಹಾಗೂ ಡಿಜೆ ಸದ್ದಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು.

VISTARANEWS.COM


on

Edited by

Ganeshotsav
Koo

ಶಿವಮೊಗ್ಗ: ನಗರದಲ್ಲಿ ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ(Ganeshotsav) ಸಾವಿರಾರು ಜನರ ಸಮ್ಮುಖದಲ್ಲಿ ಶುಕ್ರವಾರ ಪೊಲೀಸ್‌ ಬಿಗಿ ಬಂದೋಬಸ್ತ್‌ ನಡುವೆ ಶಾಂತಿಯುತವಾಗಿ ನಡೆಯಿತು.

ಗಣೇಶನ ರಾಜಬೀದಿ ಉತ್ಸವ ಹಿನ್ನೆಲೆಯಲ್ಲಿ ನಗರ ಸಂಪೂರ್ಣ ಕೇಸರಿಮಯವಾಗಿತ್ತು. ಕೋಟೆ ಪಾರ್ವತಿ ಭೀಮೇಶ್ವರ ದೇವಾಲಯದಿಂದ ರಾಜ ಬೀದಿ ಉತ್ಸವಕ್ಕೆ ಮಧ್ಯಾಹ್ನ ಚಾಲನೆ ನೀಡಲಾಯಿತು. ಕೇಸರಿ ಪೇಟದಲ್ಲಿ ಮಿಂಚುತ್ತಿದ್ದ ಯುವಕ ಹಾಗೂ ಯುವತಿಯರು ಡೊಳ್ಳು ಹಾಗೂ ಡಿಜೆ ಸದ್ದಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಹಿಂದು ಕಾರ್ಯಕರ್ತ ಹರ್ಷ, ದಕ್ಷಿಣ ಕನ್ನಡ ಪ್ರವೀಣ್ ನೆಟ್ಟಾರು, ಸಾವರ್ಕರ್‌ ಭಾವಚಿತ್ರಗಳು ಹಾಗೂ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಮೆರವಣಿಗೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕೆ.ಎಸ್‌.ಈಶ್ವರಪ್ಪ, ಎಂಪಿ ರೇಣುಕಾಚಾರ್ಯ ಮತ್ತಿತರ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.

ಗಣೇಶ ಮೆರವಣಿಗೆ ಸಾಗಿದ ಗಾಂಧಿ ಬಜಾರ್‌ನ ಸುನ್ನಿ ಜಾಮಿಯಾ ಮಸೀದಿ ಬಳಿ ಕ್ಷಿಪ್ರ ಕಾರ್ಯಾಚರಣೆ (ಆರ್‌ಎಎಫ್) ನಿಯೋಜನೆ ಮಾಡಿ, ಮೆರವಣಿಗೆ ಮೇಲೆ ಸಿಸಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿತ್ತು. ಇನ್ನುಳಿದಂತೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಎಸ್‌ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ನೇತೃತ್ವದಲ್ಲಿ ಪೊಲೀಸ್‌ ಸರ್ಪಗಾವಲು ಏರ್ಪಡಿಸಲಾಗಿತ್ತು.

ಇದನ್ನೂ ಓದಿ | Banking | ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ 31.14 ಕೋಟಿ ರೂ. ಲಾಭ, ಬೆಂಗಳೂರು ವಿಭಾಗದಲ್ಲೇ ನಂ. 1 ಸ್ಥಾನದ ಗೌರವ

Continue Reading
Advertisement
Transport Minister Ramalinga reddy
ಕರ್ನಾಟಕ2 hours ago

Ramalinga Reddy: 4 ಸಾರಿಗೆ ನಿಗಮಗಳ ಅಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ನೇಮಕ

DCM DK Shivakumar
ಕರ್ನಾಟಕ3 hours ago

Hosakerehalli Lake: ಕೆರೆಯಲ್ಲಿ ರಸ್ತೆ; ಡಿಕೆಶಿ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು

Indian Railways help desk
ದೇಶ3 hours ago

Odisha Train Accident : ಅವಘಡದಲ್ಲಿ ಮೃತಪಟ್ಟವರನ್ನು ಗುರುತಿಸಲು ಭಾರತೀಯ ರೈಲ್ವೆ ಮನವಿ

Water tap
ಕರ್ನಾಟಕ4 hours ago

Koppal News: ಕನಕಗಿರಿಯಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Rehena Fathima
ದೇಶ4 hours ago

ಬೆತ್ತಲೆಯಾಗುವುದು ಯಾವಾಗಲೂ ಅಶ್ಲೀಲವಲ್ಲ: ಬೆತ್ತಲಾದ 33 ವರ್ಷದ ಮಹಿಳೆಗೆ ಕೇರಳ ಹೈಕೋರ್ಟ್​​ನಿಂದ ರಿಲೀಫ್​

A sapling was planted on the banks of Tunga in Shivamogga
ಕರ್ನಾಟಕ4 hours ago

World Environment Day: ಶಿವಮೊಗ್ಗದಲ್ಲಿ ಸಹಸ್ರ ವೃಕ್ಷಾರೋಪಣ; ಸಾವಿರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ

Ashwini Vaishnav
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ರೈಲು ದುರಂತ ಬಳಿಕ ಪರಿಹಾರ ಕಾರ್ಯ; ರೈಲ್ವೆ ಸಚಿವರ ನಡೆ ಅನುಕರಣೀಯ

World Environment Day celebration at Shirsi veda health centere
ಉತ್ತರ ಕನ್ನಡ5 hours ago

Uttara Kannada News: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

Ekana Stadium
ಕ್ರಿಕೆಟ್5 hours ago

ತಾಯಿ, ಮಗಳ ಜೀವ ತೆಗೆಯಿತು ಐಪಿಎಲ್ ಲಕ್ನೊ ತಂಡದ ಹೋರ್ಡಿಂಗ್

Bike Accident in Charmadi Ghat
ಕರ್ನಾಟಕ5 hours ago

Bike Accident: ಚಾರ್ಮಾಡಿ ಘಾಟ್‌ನಲ್ಲಿ ಸಾರಿಗೆ ಬಸ್‌ ಚಕ್ರಕ್ಕೆ ಸಿಲುಕಿ ಸ್ಕೂಟರ್‌ ಸವಾರ ಸಾವು

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Land Surveyor Recruitment
ಉದ್ಯೋಗ4 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Chakravarthy Sulibele and MB Patil
ಕರ್ನಾಟಕ15 hours ago

Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

Sevanthige Flower Farming
ಕೃಷಿ15 hours ago

Krishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!

Horoscope Today
ಪ್ರಮುಖ ಸುದ್ದಿ22 hours ago

Horoscope Today : ಈ ನಾಲ್ಕು ರಾಶಿಯ ಉದ್ಯೋಗಿಗಳಿಗೆ ಇಂದು ಅದೃಷ್ಟದ ದಿನವಂತೆ!

Mangalore Moral Policing News
ಉಡುಪಿ2 days ago

Video: ನಮ್ಮ ನಿದ್ದೆಗೆಡಿಸಿದ್ದಾರೆ; ಮುಸ್ಲಿಮರೊಂದಿಗೆ ಬೀಚ್​​ಗೆ ಬಂದಿದ್ದ ಹುಡುಗಿಯರ ವಿರುದ್ಧ ನಿಂತ ಮಹಿಳೆಯರು

horoscope today
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಲೇಬೇಕು!

South facing house vastu
ಭವಿಷ್ಯ3 days ago

Vastu Tips : ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆ ಕೂಡ ಶುಭವಂತೆ! ಹೌದೇ? ಏನೆನ್ನುತ್ತದೆ ವಾಸ್ತು ಶಾಸ್ತ್ರ?

jackfruit
ಕೃಷಿ3 days ago

Krishi Khajane : ಹುಲುಸಾಗಿ ಹಲಸು ಬೆಳೆಯಿರಿ, ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ!

Bus Driver
ಕರ್ನಾಟಕ3 days ago

Viral Video: ಬೆಂಗಳೂರು ಟ್ರಾಫಿಕ್‌ನಲ್ಲೇ ಊಟ ಮಾಡಿ ಮುಗಿಸಿದ ಡ್ರೈವರ್! ಇಲ್ಲಿದೆ ನೋಡಿ ವಿಡಿಯೊ

horoscope today
ಪ್ರಮುಖ ಸುದ್ದಿ3 days ago

Horoscope Today : ಈ ಮೂರು ರಾಶಿಯವರಿಗೆ ಖರ್ಚು ಹೆಚ್ಚು; ಇಂದು ನಿಮ್ಮ ಭವಿಷ್ಯ ಹೀಗಿದೆ

Siddaramaiah
ಕರ್ನಾಟಕ3 days ago

Congress Guarantee : ಹೂ ಈಸ್‌ ಯುವರ್‌ ಯಜಮಾನಿ? ಸಿದ್ದರಾಮಯ್ಯ ಸುದ್ದಿಗೋಷ್ಠಿಯ ತಮಾಷೆ ಪ್ರಸಂಗಗಳು ಇಲ್ಲಿವೆ!

ಟ್ರೆಂಡಿಂಗ್‌

error: Content is protected !!