Maha Shivratri : ಮಹಾಶಿವರಾತ್ರಿಗೆ ಕೆಎಸ್‌ಆರ್‌ಟಿಸಿಯಿಂದ ಸ್ಪೆಷಲ್‌ ಬಸ್‌; ಶೇ.10ರಷ್ಟು ಡಿಸ್ಕೌಂಟ್‌! - Vistara News

ಮಹಾ ಶಿವರಾತ್ರಿ

Maha Shivratri : ಮಹಾಶಿವರಾತ್ರಿಗೆ ಕೆಎಸ್‌ಆರ್‌ಟಿಸಿಯಿಂದ ಸ್ಪೆಷಲ್‌ ಬಸ್‌; ಶೇ.10ರಷ್ಟು ಡಿಸ್ಕೌಂಟ್‌!

Maha Shivratri : ಮಾರ್ಚ್‌ 8ರಂದು ಮಹಾಶಿವರಾತ್ರಿ ಹಬ್ಬ ಜತೆಗೆ ವಾರಾಂತ್ಯ ಇರುವುದರಿಂದ ಕೆಎಸ್‌ಆರ್‌ಟಿಸಿ ನಿಗಮದಿಂದ 1,500 ಹೆಚ್ಚುವರಿ ವಿಶೇಷ ಬಸ್‌ಗಳ ನಿಯೋಜನೆ ಮಾಡಲಾಗಿದೆ.

VISTARANEWS.COM


on

KSRTC to operate special buses for Mahashivratri
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಹಾಶಿವರಾತ್ರಿಗೆ ದಿನಗಣನೆ (Maha Shivratri) ಶುರುವಾಗಿದೆ. ಎಲ್ಲೆಲ್ಲೂ ಶಿವನಾಮಸ್ತರಣೆಯೊಂದಿಗೆ ಜಾಗರಣೆ ಆಚರಿಸಲು ಜನರು ಸಜ್ಜಾಗುತ್ತಿದ್ದಾರೆ. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ ನಿಗಮವು ಹೆಚ್ಚುವರಿ ಬಸ್‌ಗಳ ನಿಯೋಜನೆ ಮಾಡಿದೆ.

ಮಾರ್ಚ್‌ 8 ಶುಕ್ರವಾರ ಮಹಾಶಿವರಾತ್ರಿ ಹಾಗೂ 9,10ರಂದು ವಾರಾಂತ್ಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮಾ. 7 ರಿಂದ 10ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 1,500 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಮಾ.10 -11ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

*ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ. ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ ಹಾಗೂ ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದ‌ರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್‌ ಇರಲಿದೆ.

*ಮೈಸೂರು ರಸ್ತೆ ಬಸ್ ನಿಲ್ದಾಣದಿಂದ (ಸ್ಟ್ಯಾಟ್‌ಲೈಟ್‌) ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಕಾರ್ಯಾಚರಣೆ ನಡೆಸಲಾಗುತ್ತದೆ.

ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುತ್ತದೆ.

ಇದನ್ನೂ ಓದಿ:Train services: ರೈಲ್ವೆ ಕ್ರಾಸಿಂಗ್‌ ಕಾಮಗಾರಿ; 5 ದಿನ ಬೆಂಗಳೂರು-ಮೈಸೂರು ರೈಲು ಸಂಚಾರ ಬಂದ್‌

ಶೇ. 10ರಷ್ಟು ರಿಯಾಯಿತಿ

ಇ-ಟಿಕೇಟ್ ಬುಕಿಂಗ್‌ ಅನ್ನು www.ksrtc.karnataka.gov.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಕರ್ನಾಟಕ ಹಾಗೂ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳು ಇದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

Tumkur News: ಶಿರಾದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

Tumkur News: ಶಿರಾ ನಗರ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮಹಾಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

VISTARANEWS.COM


on

Mahashivaratri celebration in Shira
Koo

ಶಿರಾ: ನಗರ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮಹಾಶಿವರಾತ್ರಿಯನ್ನು (Mahashivaratri) ಶ್ರದ್ಧಾ ಭಕ್ತಿಯಿಂದ (Tumkur News) ಆಚರಿಸಲಾಯಿತು.

ಮಹಾಶಿವರಾತ್ರಿ ಅಂಗವಾಗಿ ಶಿವ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ವಿಶೇಷ ದೀಪೋತ್ಸವ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಬೆಳಗ್ಗೆಯಿಂದಲೇ ಭಕ್ತಾದಿಗಳು ಶಿವ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ನಗರದ ಶ್ರೀ ಕೊಳದಪ್ಲೇಶ್ವರ ದೇವಸ್ಥಾನ ಸೇರಿದಂತೆ ಶಿವ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಇದನ್ನೂ ಓದಿ: IND vs ENG: ಅಂತಿಮ ಟೆಸ್ಟ್​ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ನೂತನ ದಾಖಲೆ ಸೃಷ್ಟಿ

ಶಿರಾದ ಶ್ರೀ ಶಂಕರ ಸಹಸ್ರ ಲಿಂಗಾರ್ಚನೆ ಸಮಿತಿಯ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ನಗರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಲಿಂಗಾರ್ಚನೆ ಕಾರ್ಯಕ್ರಮ ಜರುಗಿತು.

ತಾಲೂಕಿನ ಪೂಜಾರಮದ್ದನಹಳ್ಳಿಯ ಸಿದ್ಧಾರೂಢ ಶಿವಾನಂದ ಮಂದಿರದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಪಂಚವೃಕ್ಷದಡಿ ಶ್ರೀ ಪಂಚಮುಖಿ ಲಿಂಗ ಸನ್ನಿಧಿಯಲ್ಲಿ ಶಿವಪಂಚಾಕ್ಷರಿ ಜಪ, ಯಜ್ಞ ಕಾರ್ಯಕ್ರಮ ಹಾಗೂ ಭಕ್ತರಿಂದ ಜಲಾಭಿಷೇಕ ನಡೆಯಿತು.

ಇದನ್ನೂ ಒದಿ: Vinay Rajkumar: ವಿನಯ್‌ ರಾಜ್‌ಕುಮಾರ್ ನಟನೆಯ ʻಗ್ರಾಮಾಯಣʼ ಸೆಟ್‌ಗೆ ಭೇಟಿ ಕೊಟ್ಟ ಶಿವಣ್ಣ-ಗೀತಾ!

ಇನ್ನು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಯಿತು.

Continue Reading

ದಾವಣಗೆರೆ

Davanagere News: ಹೊನ್ನಾಳಿಯಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

Davanagere News: ಹೊನ್ನಾಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

VISTARANEWS.COM


on

Mahashivaratri celebration in Honnali
Koo

ಹೊನ್ನಾಳಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಹಾಶಿವರಾತ್ರಿ (Mahashivaratri) ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು (Davanagere News) ನೆರವೇರಿದವು.

ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಕಳೆದ ಒಂದು ವಾರದಿಂದ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ, ಸಂಜೆ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ನೀಲಕಂಠೇಶ್ವರನ ದರ್ಶನ ಪಡೆದು ಪುನೀತರಾದರು ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು. ವಿಶೇಷವಾಗಿ ಶಿವನಿಗೆ ಬಿಲ್ವ ಪತ್ರೆ, ಹೂವುಗಳನ್ನು ಅರ್ಪಿಸಿ, ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ: IND vs ENG: ಅಂತಿಮ ಟೆಸ್ಟ್​ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ನೂತನ ದಾಖಲೆ ಸೃಷ್ಟಿ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಪಟ್ಟಣದ ನೀಲಕಂಠೇಶ್ವರ ದೇವರ ಸನ್ನಿಧಿಯಲ್ಲಿ ಸಹಸ್ರಲಿಂಗ ಲಿಂಗ ದೀಪೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: Vinay Rajkumar: ವಿನಯ್‌ ರಾಜ್‌ಕುಮಾರ್ ನಟನೆಯ ʻಗ್ರಾಮಾಯಣʼ ಸೆಟ್‌ಗೆ ಭೇಟಿ ಕೊಟ್ಟ ಶಿವಣ್ಣ-ಗೀತಾ!

ಮಹಾಶಿವರಾತ್ರಿ ಅಂಗವಾಗಿ ಶಿವದೇವಾಲಯಗಳಿಗೆ ಭಕ್ತರ ದಂಡೆ ಹರಿದು ಬಂದಿತ್ತು. ಪಟ್ಟಣದ ಶ್ರೀ ಚನ್ನಪ್ಪ ಸ್ವಾಮಿ ಹಿರೇಕಲ್ ಮಠದಲ್ಲಿರುವ ಶಿವನ ದೇವಾಲಯದಲ್ಲಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಗೆಡ್ಡೆ ರಾಮೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

Continue Reading

ಶಿವಮೊಗ್ಗ

Shivamogga News: ಸೊರಬದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

Shivamogga News: ಸೊರಬ ಪಟ್ಟಣ ಸೇರಿ ತಾಲೂಕಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

VISTARANEWS.COM


on

Mahashivaratri celebration in soraba
Koo

ಸೊರಬ: ಪಟ್ಟಣ ಸೇರಿ ತಾಲೂಕಿನಾದ್ಯಂತ ಮಹಾಶಿವರಾತ್ರಿ (Mahashivaratri) ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು (Shivamogga News) ನೆರವೇರಿದವು.

ಪಟ್ಟಣದ ದಂಡಾವತಿ ನದಿ ದಂಡೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಕಳೆದ ಒಂದು ವಾರದಿಂದ ಶಿವಪಂಚಾಕ್ಷರಿ ಜಪ ನಡೆಯುತ್ತಿದ್ದು, ಇಂದು ಶಿವಪಂಚಾಕ್ಷರಿ ಹವನ ಮತ್ತು ಚಂದ್ರಮೌಳೇಶ್ವರ ಸ್ವಾಮಿಗೆ ಸುಮಾರು 14 ಜನ ಪುರೋಹಿತರಿಂದ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು.

ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಸಮೀಪದ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಉಮಾಮಹೇಶ್ವರ ಭಾವೆ ಫೌಂಡೇಷನ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಶ್ರೀ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಂತರ ಪ್ರಸಾದ ವಿತರಣೆ ನಡೆಯಿತು. ವಿಶೇಷವಾಗಿ ಶಿವನಿಗೆ ಬಿಲ್ವ ಪತ್ರೆ, ಕುಂಸಲ ಹೂವು,ಮುತ್ತುಗದ ಹೂವು, ಪಾರಿಜಾತ ಹೂವು, ಎಕ್ಕದ ಹೂವು, ಗಂಟೆ ಹೂವು, ಕಣಗಾಲ ಹೂವುಗಳನ್ನು ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ: Karnataka Weather : ಇಂದಿನಿಂದ ಮಾರ್ಚ್‌ 14ರವರೆಗೆ ರಾಜ್ಯಾದ್ಯಂತ ಒಣಹವೆ ಸಾಧ್ಯತೆ

ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೂ ಸಹ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಜತೆಗೆ ದೇವಸ್ಥಾನದ ಆವರಣದಲ್ಲಿರುವ ಶ್ರೀ ಕಾಲಭೈರವ, ಪರಶುರಾಮ, ತ್ರಿಶೂಲದ ಭೈರಪ್ಪ ಸೇರಿದಂತೆ ಪರಿವಾರ ದೇವರುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಶಿವರಾತ್ರಿಯ ಅಂಗಾವಾಗಿ ಪ್ರತಿ ವರ್ಷದಂತೆ ಶ್ರೀ ರಂಗನಾಥ ದೇವಾಲಯದಲ್ಲಿ ಧಾರ್ಮಿಕ, ರಾಷ್ಟ್ರೀಯ ಹಾಗೂ ಸಾಹಿತ್ಯಿಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: Ind vs Eng : ಗಿಲ್, ರೋಹಿತ್​ ಶತಕ, ಭಾರತಕ್ಕೆ 255 ರನ್​ ಮುನ್ನಡೆ

ಮಹಾಶಿವರಾತ್ರಿ ಅಂಗವಾಗಿ ಶಿವದೇವಾಲಯಗಳಿಗೆ ಭಕ್ತರ ದಂಡೆ ಹರಿದು ಬಂದಿತ್ತು. ನದಿ ದಂಡೆಯ ಶ್ರೀಚಂದ್ರ ಮೌಳೇಶ್ವರ ದೇವಾಲಯದಲ್ಲಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬಸ್ ನಿಲ್ದಾಣ ಸಮೀಪದ ಶ್ರೀ ಕಲ್ಲೇಶ್ವರ ದೇವಸ್ಥಾನ, ಜಡೆ ಸಂಸ್ಥಾನ ಮಠ ಹಾಗೂ ಹಿರೇಮಠ, ಗೊಗ್ಗೆಹಳ್ಳಿ ಮಠ, ಬಂಕಸಾಣದ ಶ್ರೀ ಹೊಳೆಲಿಂಗೇಶ್ವರ, ಕರಡಿಗೇರಿ ಶ್ರೀ ರಾಮೇಶ್ವರ, ಉರುಗನಹಳ್ಳಿಯ ಶ್ರೀ ಕಾಳಿಂಗೇಶ್ವರ, ಕುಪ್ಪಗಡ್ಡೆ ರಾಮೇಶ್ವರ, ಆನವಟ್ಟಿ ಸಮೀಪದ ಕೋಟಿಪುರದ ಕದಂಬರ ಕಾಲದ ಶ್ರೀ ಕೈಠಭೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

Continue Reading

ಮಹಾ ಶಿವರಾತ್ರಿ

Maha Shivaratri 2024: ಮಹೇಶ್ವರನ ಕುರಿತು ಎಷ್ಟೊಂದು ಕುತೂಹಲಕರ ಸಂಗತಿಗಳು!

Maha Shivaratri 2024 : ಯಾವುದೇ ಆಚರಣೆಗೂ ಸುತ್ತಮುತ್ತೆಲ್ಲ ಒಂದಿಷ್ಟು ಕಥೆಗಳು, ಪ್ರತೀತಿಗಳು ಹರಡಿರುತ್ತವೆ. ಸ್ಮಶಾನವಾಸಿ ಎನಿಸಿಕೊಂಡು, ಭೂತಗಣಗಳ ನಾಥ ಎನಿಸಿಕೊಳ್ಳುತ್ತಾ, ತಂಪಾದ ಹಿಮಾಲಯದಲ್ಲಿ ಉಮೆಯೊಂದಿಗೆ ಸಂಸಾರ ಮಾಡಿ, ಕೈಲಾಸನಾಥ ಎಂದೂ ಕರೆಸಿಕೊಳ್ಳುವ ಮಹಾದೇವನ ಬಗ್ಗೆಯೂ ಇಂಥದ್ದೇ ಕಥೆಗಳು ಹರಡಿಕೊಂಡಿದೆ

VISTARANEWS.COM


on

Maheshwar
Koo

ಅಲಕಾ ಕೆ

ಭಕ್ತರ ಕರೆಗೆ ಓಗೊಳ್ಳದ ದೇವರಿಲ್ಲ. ಆದರೆ ಕರೆಯುವ (Maha Shivaratri 2024) ಭಕ್ತರು ಮೌನಿಗಳಾದರೆ ಅದರಲ್ಲಿ ದೇವರ ಪಾತ್ರವಿಲ್ಲ. ಹೀಗೆ ಮಹಾದೇವನನ್ನು ಕರೆಯುವವರು, ಜಪಿಸುವವರು, ಭಜಿಸುವವರು ಅವನ ಹಲವು ರೂಪಗಳನ್ನು, ಸಾಧ್ಯತೆಗಳನ್ನು ಕಲ್ಪಿಸಿಕೊಂಡಿದ್ದಾರೆ. ಹೆಸರು ಯಾವುದೇ ಹೇಳಿದರೂ, ಉಸಿರಿನಲ್ಲಿ ದೇವನಿದ್ದರೆ ಆತನ ಕಿವಿಗಾ ಕರೆ ದೂರವಲ್ಲ. ಹೀಗೆ ಕರೆಯುವ ಮುನ್ನ, ಆ ಮಹಾದೇವನ ಬಗೆಗೊಂದಿಷ್ಟು ಭಾವಗಳು ಈ ರೀತಿಯಲ್ಲಿ ಹರಡಿಕೊಂಡಿವೆ.
ಯಾವುದೇ ಆಚರಣೆಗೂ ಸುತ್ತಮುತ್ತೆಲ್ಲ ಒಂದಿಷ್ಟು ಕಥೆಗಳು, ಪ್ರತೀತಿಗಳು ಹರಡಿರುತ್ತವೆ. ಸ್ಮಶಾನವಾಸಿ ಎನಿಸಿಕೊಂಡು, ಭೂತಗಣಗಳ ನಾಥ ಎನಿಸಿಕೊಳ್ಳುತ್ತಾ, ತಂಪಾದ ಹಿಮಾಲಯದಲ್ಲಿ ಉಮೆಯೊಂದಿಗೆ ಸಂಸಾರ ಮಾಡಿ, ಕೈಲಾಸನಾಥ ಎಂದೂ ಕರೆಸಿಕೊಳ್ಳುವ ಮಹಾದೇವನ ಬಗ್ಗೆಯೂ ಇಂಥದ್ದೇ ಕಥೆಗಳು ಹರಡಿಕೊಂಡಿದೆ. ದೇವರಾದರೂ ಸಂಸಾರಿಯಾಗಿ, ಸಂಸಾರಿಯಾದರೂ ವಿರಾಗಿಯಾಗಿ, ಭಕ್ತರಲ್ಲಿ ಅನುರಕ್ತನೂ ಆಗಿರುವ ಆತ ಲೋಕಕ್ಕೆ ನೀಡುವ ಸಂದೇಶವೇನು? ಶಿವಾರಾಧನೆಯ ಈ ಪರ್ವಕಾಲದಲ್ಲಿ ಮಹೇಶ್ವರನ ಬಗೆಗಿನ ಒಂದಿಷ್ಟು ಕುತೂಹಲಗಳನ್ನಿಲ್ಲಿ ತಣಿಸಿಕೊಳ್ಳೋಣ.

ಪರಿವರ್ತನೆ

ಈಗಿರುವ ಸಂವತ್ಸರ ಹೊರಳಿ ಮುಂಬರುವ ಹೊಸ ಸಂವತ್ಸರಕ್ಕೆ ದಾರಿ ಮಾಡುವ ಕೊಂಚ ಮೊದಲು, ಅಂದರೆ ಫಾಲ್ಗುಣ ಮಾಸದ ಅಮವಾಸ್ಯೆಯ ಮುನ್ನಾದಿನದ ಚತುರ್ದಶಿಯ ತಿಥಿಗೆ ಶಿವರಾತ್ರಿಯ ಆಚರಣೆ ನಡೆಯುತ್ತದೆ. ಹಾಗಾಗಿ ಈತ ಲಯಕ್ಕೆ ಮಾತ್ರವಲ್ಲ, ಪರಿವರ್ತನೆಗೂ ದೇವ. ಆದರೆ ಲೋಕದಲ್ಲಿ ಪರಿವರ್ತನೆ ಎನ್ನುವುದು ನಿತ್ಯನೂತನ ಎಂದಾದ್ದರಿಂದ, ನಿತ್ಯವೂ ಸ್ಮರಣೆಗೆ ಬರುವವ, ಭಕ್ತರನ್ನು ಉದ್ಧರಿಸುವವ ಈ ಲೋಕನಾಥ.

ಲಯವೆಂಬ ಬಿಡುಗಡೆ

ಕಾಲವನ್ನು ಚಕ್ರವೆಂದು ಕರೆಯಲಾಗುತ್ತದೆ. ಒಳಿತು-ಕೆಡುಕು, ಸುಖ-ಶೋಕಗಳ ಕಾಲಗಳು ಮೇಲೆ-ಕೆಳಗೆ ಉರುಳುತ್ತಲೇ ಇರುತ್ತವೆ. ಹಾಗಾಗಿ ಹೊಸತು ಸೃಷ್ಟಿಯಾಗಿ, ಇರುವುದು ನಿರ್ವಹಣೆಯಾಗಿ, ಬೇಡದ್ದು ಅಳಿಯುತ್ತಲೇ ಇರಬೇಕು. ಈ ಪ್ರಕ್ರಿಯೆಯನ್ನು ಸಾಗರದ ಉಬ್ಬರ-ಇಳಿತಕ್ಕೆ ಹೋಲಿಸುವವರೂ ಇದ್ದಾರೆ. ಕಾರಣ, ಈ ಎಲ್ಲಾ ಪ್ರಕ್ರಿಯೆಗೆ ತನ್ನದೇ ಆದ ವಿಶಿಷ್ಟವಾದ ಲಯವೊಂದಿದೆ- ನೃತ್ಯವೊಂದರ ಲಯದಂತೆ. ನಟರಾಜನ ಹೆಜ್ಜೆಯ ರಿಂಗಣದಂತೆ, ಕಾಲಚಕ್ರದ ಗತಿಯೂ ಲಯಬದ್ಧವಾದುದು ಎಂಬ ಕಲ್ಪನೆಯಿದೆ. ಇದೇ ಹಿನ್ನೆಲೆಯಲ್ಲಿ ನೋಡಿದಾಗ, ಪ್ರಳಯ ಶಿವನ ತಾಂಡವಕ್ಕೆ ಬಹಳಷ್ಟು ಹೊಳಹುಗಳು ದೊರೆಯುತ್ತದೆ. ʻಲಯʼ ಎನ್ನುವ ಕ್ರಿಯೆಗೂ ವಿಶಿಷ್ಟವಾದ ಲಯವೊಂದಿರುವುದನ್ನು ಈ ತಾಂಡವದ ಮೂಲಕ ಅರಿತುಕೊಳ್ಳಬಹುದು ನಾವು.
ಆದಿಗುರು, ಆದಿಯೋಗಿ ಎನ್ನುವ ಹೆಸರುಗಳು ಮಹಾದೇವನಿಗಿವೆ. ತಪಸ್ಸು, ಧ್ಯಾನಗಳು ಆತನ ಯಾವತ್ತಿನ ಚರ್ಯೆಗಳು. ಭವಬಂಧನಗಳನ್ನು ಕಳೆಯುವುದಕ್ಕೆ ಇವೆಲ್ಲ ಮಾರ್ಗಗಳಾಗಿ ಭವಿಗಳಾದ ನಮಗೆ ಗೋಚರಿಸಿದರೆ, ನಮ್ಮಂತೆ ಹುಟ್ಟಿಲ್ಲದ ಆತ ಅಭವ. ಯೋಗ ಭಂಗಿಗಳಲ್ಲಿ, ಆದಿಯೋಗಿಯನ್ನು ಸಾಂಕೇತಿಸುವ ನಟರಾಜಾಸನಕ್ಕೆ ಅದರದ್ದೇ ಆದ ಮಹತ್ವವವಿದೆ. ಇದನ್ನು ಕ್ರಮಬದ್ಧವಾಗಿ ಮಾಡುವುದಕ್ಕೆ ದೇಹ-ಮನಸ್ಸುಗಳಲ್ಲಿ ಅತಿ ಹೆಚ್ಚಿನ ಸಮತೋಲನವನ್ನು ಈ ಆಸನ ಬೇಡುತ್ತದೆ. ಮಾತ್ರವಲ್ಲ, ಯೋಗಾಭ್ಯಾಸಿಯಲ್ಲಿನ ಋಣಾತ್ಮಕ ಶಕ್ತಿಗಳೆಲ್ಲ ಲಯವಾಗುವಂತೆಯೂ ಮಾಡಬಲ್ಲ ಭಂಗಿಯಿದು. ಹಾಗಾಗಿ ಮಹಾಶಿವರಾತ್ರಿಯಲ್ಲಿ ಪರಶಿವನ ತಾಂಡವವನ್ನೂ ನೆನಪಿಸಿಕೊಳ್ಳಲಾಗುತ್ತದೆ. ಮಹಾದೇವನ ಸ್ಮರಣೆಯ ಮೂಲಕ ಹಳೆಯದು, ಬೇಡದ್ದೆಲ್ಲ ಲಯವಾಗಿ ಹೊಸ ಪರಿವರ್ತನೆಗೆ ನಾಂದಿಯಾಗಲಿ ಎನ್ನುವ ಮಹೋನ್ನತ ಆಶಯವನ್ನು ಅರಿಯಬೇಕಿದೆ

ನೀಲಕಂಠ

ದೇವಾಸುರರು ಸಮುದ್ರ ಮಥನವನ್ನು ಮಾಡಿದ ಕಥೆಯನ್ನು ನಾವೆಲ್ಲರೂ ಕೇಳಿದವರೇ. ಅಮೃತವನ್ನು ಬಯಸಿ ಎಲ್ಲರೂ ನಿರೀಕ್ಷೆಯಲ್ಲಿದ್ದಾಗ ಮೊದಲಿಗೆ ಹಾಲಾಹಲ ಬಂತು. ಅದಕ್ಕೊಂದು ಸರಿಯಾದ ಅಂತ್ಯ ಕಾಣಿಸದಿದ್ದರೆ ಲೋಕವನ್ನೆಲ್ಲ ಆ ವಿಷ ನಾಶ ಮಾಡುವ ಭೀತಿ ಎದುರಾಯಿತು. ದೇವತೆಗಳು ಜಗದೀಶ್ವರನ ಮೊರೆ ಹೊಕ್ಕರು. ಲೋಕವನ್ನು ಕಾಪಾಡುವ ಉದ್ದೇಶದಿಂದ ಆ ಘೋರ ವಿಷವನ್ನು ಈಶ ತನ್ನ ಕಂಠದಲ್ಲಿ ಇರಿಸಿಕೊಂಡ, ಈ ಮೂಲಕ ನೀಲಕಂಠನಾದ. ಇದೇ ಹಿನ್ನೆಲೆಯಲ್ಲಿ, ಲೋಕದ ಕಷ್ಟಗಳನ್ನೆಲ್ಲ ಕಳೆಯಬಲ್ಲ ಆತನ ಮಹಿಮೆಯನ್ನು ಶಿವರಾತ್ರಿಯಲ್ಲಿ ಕೊಂಡಾಡಲಾಗುತ್ತದೆ.

ಶಿವ-ಶಕ್ತಿಯ ಸಂಯೋಗ

ಒಂದಾನೊಂದು ಕಾಲದಲ್ಲಿ ಲೋಕಕಂಟಕನಾಗಿದ್ದ ತಾರಕ ಎಂಬ ಅಸುರನ ಸಂಹಾರಕ್ಕಾಗಿ ಲೋಕವೇ ನಿರೀಕ್ಷಿಸುತ್ತಿತ್ತು. ಆದರೆ ಆತನ ಮೃತ್ಯು ಶಿವ-ಪಾರ್ವತಿಯ ಸಂತಾನದಿಂದಲೇ ಎಂಬುದು ವಿಧಿ ಲಿಖಿತವಾಗಿತ್ತು. ಆದರೆ ದಾಕ್ಷಾಯಿಣಿಯನ್ನು ಕಳೆದುಕೊಂಡ ಶೋಕದಲ್ಲಿದ್ದ ಶಿವ, ಲೋಕದ ಪರಿವೆಯಿಲ್ಲದಂತೆ ಘೋರ ತಪಸ್ಸಿನಲ್ಲಿ ತೊಡಗಿಕೊಂಡಿದ್ದ. ಹಾಗಿದ್ದ ಮೇಲೆ, ಪರ್ವತ ರಾಜನ ಮಗಳಾಗಿ ಶಿವನಿಗಾಗಿಯೇ ಹುಟ್ಟಿದ್ದ ಪಾರ್ವತಿಯನ್ನು ಆತ ವರಿಸುವುದು ಹೇಗೆ? ಶಿವನ ಮನಸ್ಸನ್ನು ಪರಿವರ್ತಿಸುವುದಕ್ಕೆ ಮನ್ಮಥ ಬಾಣಗಳನ್ನು ಹೂಡಿದ. ತನ್ನ ತಪೋಭಂಗವಾಗಿದ್ದಕ್ಕೆ ಕುಪಿತನಾದ ಶಿವ, ಮೂರನೇ ಕಣ್ಣಿನಿಂದ ಕಾಮನನ್ನು ದಹಿಸಿಬಿಟ್ಟ. ಇದ್ಯಾವುದಕ್ಕೂ ವಿಚಲಿತಳಾಗದ ಪಾರ್ವತಿ ತನ್ನ ಭಕ್ತಿಯಿಂದಲೇ ಶಿವನನ್ನು ಒಲಿಸಿಕೊಂಡಳು. ಇವರಿಬ್ಬರ ವಿವಾಹದಿಂದ ಜನಿಸಿದ ಸ್ಕಂದ ಅಥವಾ ಕಾರ್ತಿಕೇಯನಿಂದಲೇ ತಾರಕಾಸುವ ಹತನಾದ. ಆವರೆಗೆ ಖಂಡ ಶಕ್ತಿಯಾಗಿದ್ದ ಶಿವ-ಪಾರ್ವತಿಯರು, ಒಂದಾಗಿ ಅಖಂಡ ಶಕ್ತಿಯಾದ ಹಿನ್ನೆಲೆಯೂ ಶಿವರಾತ್ರಿಗಿದೆ.

Continue Reading
Advertisement
dina bhavishya read your daily horoscope predictions for May 01 2024
ಭವಿಷ್ಯ40 mins ago

Dina Bhavishya: ಎಚ್ಚರ.. ಎಚ್ಚರ.. ಈ ರಾಶಿಯವರು ಇತರರನ್ನು ನಂಬಿ ಹೂಡಿಕೆ ಮಾಡಿದರೆ ಭಾರಿ ನಷ್ಟ!

Kaladarpana-Art Reflects
ಬೆಂಗಳೂರು5 hours ago

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Covishield Vaccine
ಪ್ರಮುಖ ಸುದ್ದಿ5 hours ago

ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Narendra modi
ಪ್ರಮುಖ ಸುದ್ದಿ6 hours ago

Narendra Modi : ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ಇಲ್ಲ ಎಂದ ಮೋದಿ

DK Shivakumar
ಪ್ರಮುಖ ಸುದ್ದಿ6 hours ago

DK Shivakumar: ಅಶ್ಲೀಲ ಚಿತ್ರಕ್ಕೆ ಡಿಕೆಶಿ ಫೋಟೊ ಮಾರ್ಫಿಂಗ್ ಆರೋಪ; ಮೂವರ ವಿರುದ್ಧ ಎಫ್‌ಐಆರ್‌

IPL 2024
Latest6 hours ago

IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

Union Minister Pralhad Joshi election campaign in Shiggavi
ಧಾರವಾಡ6 hours ago

Lok Sabha Election 2024: ಈ ಲೋಕಸಭಾ ಚುನಾವಣೆ ಭಾರತದ ಸುವರ್ಣ ಯುಗಕ್ಕೆ ನಾಂದಿ: ಪ್ರಲ್ಹಾದ್‌ ಜೋಶಿ

Lok Sabha Election 2024 Bike rally for voting awareness in Hosapete
ವಿಜಯನಗರ6 hours ago

Lok Sabha Election 2024: ಹೊಸಪೇಟೆಯಲ್ಲಿ ಮತದಾನ ಜಾಗೃತಿಗಾಗಿ ಬೈಕ್ ರ‍್ಯಾಲಿ

BJP National President JP Nadda Election Campaign for Haveri Gadag Lok Sabha Constituency BJP Candidate Basavaraj Bommai
ಕರ್ನಾಟಕ6 hours ago

Lok Sabha Election 2024: ಮೋದಿಯವರ ವಿಕಸಿತ ಭಾರತ ಸಾಕಾರಗೊಳಿಸಲು ಬೊಮ್ಮಾಯಿಯವರನ್ನು ಗೆಲ್ಲಿಸಿ: ಜೆಪಿ ನಡ್ಡಾ

2nd PUC Paper Leak
ಕರ್ನಾಟಕ6 hours ago

2nd PUC Paper Leak: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ವಜಾಗೊಂಡಿದ್ದ ಎಸ್‌ಡಿಎ ಮರು ನೇಮಕ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌