Ratha Saptami 2023 : ನಮಸ್ಕಾರ ಪ್ರಿಯ ಸೂರ್ಯನನ್ನು ನಮಸ್ಕರಿಸುವ ಹಬ್ಬ ರಥಸಪ್ತಮಿ - Vistara News

ಧಾರ್ಮಿಕ

Ratha Saptami 2023 : ನಮಸ್ಕಾರ ಪ್ರಿಯ ಸೂರ್ಯನನ್ನು ನಮಸ್ಕರಿಸುವ ಹಬ್ಬ ರಥಸಪ್ತಮಿ

ನಮಸ್ಕಾರ ಪ್ರಿಯೋ ಭಾನುಃ ಎಂದು ಶ್ಲೋಕವೊಂದರಲ್ಲಿ ಹೇಳಲಾಗಿದೆ. ಸೂರ್ಯೋಪಾಸನೆ ದಿನವಾದ ರಥಸಪ್ತಮಿಯ ದಿನವಾದ (Ratha Saptami 2023) ಇಂದು ಸೂರ್ಯ ದೇವನ ಮಹತ್ಮೆಯನ್ನು ಅರಿಯೋಣ, ನಮಿಸೋಣ.

VISTARANEWS.COM


on

Ratha Saptami 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಸಪ್ತಾಶ್ವ ರಥಮಾರುಡಾಂ ಪ್ರಚಂಡಮ್ ಕಶ್ಯಪಾತ್ಯಜಂl
ಶ್ವೇತ ಪದ್ಮದರದೇವಂ ತಮಂ ಸೂರ್ಯಮ್ ಪ್ರಣಮಾಮ್ಯಹಮ್ ll

(ಬಿಳಿ ಕಮಲವನ್ನು ಕೈಯಲ್ಲಿ ಹಿಡಿದವನೂ, ಪ್ರಚಂಡ ತೇಜಸ್ವಿಯೂ ಆದ ಎಲೈ ಕಶ್ಯಪ ಋಷಿ ಕುಮಾರನೇ, ಬಿಳಿಯ ಬಣ್ಣದ ಏಳು ಕುದುರೆಗಳಿಂದ ಎಳೆಯಲ್ಪಡುವ ರಥದ ಮೇಲೆ, ಆಸೀನನಾದ ಸೂರ್ಯ ಭಗವಾನನೇ ನಿನಗೆ ಪ್ರಣಾಮಗಳು).

ಹಿಂದೂ ಧರ್ಮದಲ್ಲಿ ಕೋಟಿ ಕೋಟಿ ದೇವತೆಗಳು ಇದ್ದರೂ ನಮ್ಮ ಕಣ್ಣಿಗೆ ಕಾಣುವ ದೇವರೆಂದರೇ ಅದು ಸೂರ್ಯದೇವನೇ ಆಗಿದ್ದಾನೆ. ಈತನನ್ನು ಪ್ರತಿದಿನವು ನಾವು ನೋಡಲೇಬೇಕು ಮತ್ತು ಪೂಜಿಸಲೇ ಬೇಕು. ಪ್ರತಿದಿನವು ಈತನಿಂದಲೇ ಆರಂಭ, ಈತನಿಂದಲೇ ಅಂತ್ಯ.

ಸೂರ್ಯನನ್ನು ವೈವಸ್ವತ, ರವಿ, ಆದಿತ್ಯ, ಪುಷ, ದಿವಾಕರ, ಸವಿತಾ, ಅರ್ಕ, ಮಿತ್ರ, ಭಾನು, ಭಾಸ್ಕರ ಮತ್ತು ಗ್ರಹಪತಿ ಅಥವಾ ಗ್ರಹರಾಜ ಎಂದೂ ಕೂಡ ಕರೆಯಲಾಗುತ್ತದೆ. ಈ ರೀತಿಯಿಂದ ಕರೆಸಿಕೊಳ್ಳುವ ಸೂರ್ಯ ದೇವನಿಗೆ ಅವನದ್ದೇ ಮಂತ್ರಗಳ ಪಠಣ ಮಾಡಿ ಅವನನ್ನು ಪೂಜಿಸಿದರೆ ನಮಗೆ ಒಳ್ಳೆಯ ಆಯಸ್ಸು ಮತ್ತು ಜೀವನ ಪ್ರಾಪ್ತಿಯಾಗುತ್ತದೆ ಎಂಬುದನ್ನು ನಮ್ಮ ಋಷಿಮುನಿಗಳು ಸಾರಿ ಹೋಗಿದ್ದಾರೆ.

ಸನಾತನ ಸಂಪ್ರದಾಯದಲ್ಲಿ ಪೂಜಿಸಲ್ಪಡುವ ಪ್ರಮುಖ ದೇವರಾದ ಸೂರ್ಯನು ಕತ್ತಲನ್ನು ನಿವಾರಿಸಿ ಬೆಳಕನ್ನು ಹೊರಸೂಸುವ ದೇವ. ಇದರರ್ಥ ಜಗತ್ತಿನಲ್ಲಿ ಅಜ್ಞಾನವನ್ನು ತೊಡೆದು ಹಾಕಿ ಸುಜ್ಞಾನವು ಬೆಳಗುವಂತೆ ಮಾಡುವ ಈತನ ಕಿರಣಗಳಿಗೆ ಜೀವರಾಶಿಯನ್ನು ಸಂರಕ್ಷಿಸುವ, ಸಂಹಾರ ಮಾಡುವ ಎರಡೂ ಗುಣವೂ ಇದೆ. ಪ್ರತಿದಿನವು ಬೆಳಗಿನಿಂದ ಸಂಜೆಯವರೆಗೆ ಒಳಿತನ್ನು ಮಾಡುವ ಸೂರ್ಯದೇವನನ್ನು ಪೂಜಿಸಿದರೆ ಪ್ರತಿನಿತ್ಯದ ಕಷ್ಟವು ದೂರಾಗುತ್ತದೆ.

ಜಗತ್ತಿಗೆ ಬೆಳಕನ್ನು ನೀಡುವ ಪ್ರತ್ಯಕ್ಷ ದೈವ ಸೂರ್ಯನನ್ನು ಪೂಜಿಸುವುದರಿಂದ ನಮ್ಮ ಜೀವನದಲ್ಲೂ ಸಕಾರಾತ್ಮಕ, ಸಂತೋಷದ, ಯಶಸ್ಸು ಮತ್ತು ಸಮೃದ್ಧಿಯ ಬೆಳಕು ಮೂಡುವುದು. ‌ಸೂರ್ಯ ನಮ್ಮ ಆತ್ಮವನ್ನು ಪ್ರತಿನಿಧಿಸುತ್ತಾನೆ. ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯ ದೇವನಿಗೆ ವಿಶೇಷ ಪೂಜೆ ಪುನಸ್ಕಾರ ಮಾಡುವುದರಿಂದ ಬದುಕಲ್ಲಿ ಸಾಕಷ್ಟು ಬದಲಾವಣೆ ಹಾಗೂ ಧನಾತ್ಮಕ ರೀತಿಯಲ್ಲಿ ಯಶಸ್ಸು ದೊರೆಯುವುದು.

ಹೊಸ ರಥವನ್ನೇರುವ ಸೂರ್ಯ

ಯುಗಾದಿ ಹೊಸತನವನ್ನು ಹೊತ್ತು ತಂದರೆ, ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿ.
ಈ ದಿನ ಸೂರ್ಯ ಹಳೆಯ ರಥವನ್ನು ಬಿಟ್ಟು ಹೊಸ ರಥ ಹತ್ತುತ್ತಾನೆ. ಅಲ್ಲದೆ ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪ್ರಾಜ್ಞರು ಹೇಳುತ್ತಾರೆ.

ಯಾವುದೇ ವಸ್ತು ಹಳೆಯದಾದ ಮಾತ್ರಕ್ಕೆ ಬದುಕು ಹಳತಾಗದು. ಅದು ನಿತ್ಯ ನವೀನ. ಹೀಗಾಗಿಯೇ ದೇಹ ಹಳತಾದಂತೆ ಹಳೆಯ ಬಟ್ಟೆ ಕಳಚಿ ಹೊಸದನ್ನು ಧರಿಸಿದಂತೆ ಅದನ್ನು ವಿಸರ್ಜಿಸಿ ಆತ್ಮ ಹೊಸತನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ. ಸೂರ್ಯನೂ ಹಾಗೆಯೇ, ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ರಥಸಪ್ತಮಿ ಆಚರಿಸಲಾಗುತ್ತಿದೆ.

ಸಪ್ತಮಿ ಪೌರಾಣಿಕ ಹಿನ್ನೆಲೆ ಏನು?

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿಯ ಬಗ್ಗೆ ಹೇಳಿದ ಕಥೆಯಿದೆ. ಈ ಕಥೆಯ ಪ್ರಕಾರ, ಸಾವಿರಾರು ವರ್ಷಗಳ ಹಿಂದೆ ಒಂದು ರಾಜ್ಯವನ್ನು ಯಶೋವರ್ಮನೆಂಬ ರಾಜನು ಆಳುತ್ತಿದ್ದನು. ಆ ರಾಜ್ಯದ ಹೊಣೆಗಾರಿಕೆಯನ್ನು ನಿರಂತರವಾಗಿ ನಿರ್ವಹಿಸಲು, ತನಗೆ ಒಬ್ಬ ಮಗನಿಲ್ಲವೆಂಬ ಕೊರಗು ಸದಾ ರಾಜನನ್ನು ಕೊರೆಯುತ್ತಿತ್ತು. ಋಷಿಮುನಿಯ ಸಲಹೆಯ ಮೇರೆಗೆ, ದೇವರನ್ನು ಕುರಿತು ಅನೇಕ ವರ್ಷಗಳು ರಾಜನು ಘೋರವಾದ ತಪಸ್ಸಿನಲ್ಲಿ ತೊಡಗಿದನು. ರಾಜನ ತಪಸ್ಸಿಗೆ ಮೆಚ್ಚಿ ಭಗವಂತನು ಪ್ರತ್ಯಕ್ಷನಾಗಿ, ರಾಜನ ಆಸೆಯಂತೆ ಒಬ್ಬ ಪುತ್ರನನ್ನು ದೇವರು ಕರುಣಿಸಿದನು.

ದಿನಗಳೆದಂತೆ ಆ ಪುತ್ರನು ನಿತ್ಯ ರೋಗಿಯಾಗಿ ಅಲ್ಪಾಯುಷ್ಯವುಳ್ಳವನಾಗುತ್ತಾನೆ. ಮಗ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ತನ್ನ ಮಗನು ಬೇಗ ಮರಣ ಹೊಂದುವನೆಂದು ರಾಜನು ಪುನಃ ಚಿಂತಾಕ್ರಾಂತನಾದನು. ತನ್ನ ಸಮಸ್ಯೆಯನ್ನು ಯಾರೂ ಬಗೆಹರಿಸದಾದಾರು. ಒಂದು ದಿನ ಋಷಿಯೊಬ್ಬನು ರಥಸಪ್ತಮಿಯ ಆಚರಣೆಯ ಮಹಿಮೆಯನ್ನು ರಾಜನಿಗೆ ಹೇಳಿ ತನ್ನ ಮಗನು ರಥ ಸಪ್ತಮಿ ವ್ರತವನ್ನು ಭಕ್ತಿಯಿಂದ ಮಾಡಿ ಸೂರ್ಯನನ್ನು ಒಲಿಸಿಕೊಂಡುದುದೇ ಆದರೆ, ಆರೋಗ್ಯವಂತನಾಗುವನೆಂದು ಮತ್ತು ಧೀರ್ಘಾಯುಷ್ಯ ಹೊಂದುವನೆಂದು ಹೇಳುವನು.

ಋಷಿಯ ಅಮೃತವಾಣಿಯನ್ನು ಕೇಳಿದ ಮೇರೆಗೆ, ರಥ ಸಪ್ತಮಿ ವ್ರತವನ್ನು ಮಾಡುವಂತೆ ಮಗನಿಗೆ ಪ್ರೇರೇಪಿಸುವನು. ಭಕ್ತಿಯಿಂದ ಬಾಲಕನು ವಿಧಿವತ್ತಾಗಿ, ರಥ ಸಪ್ತಮಿಯನ್ನು ಆಚರಣೆ ಮಾಡಿ ಸೂರ್ಯ ದೇವನಿಗೆ ಅರ್ಘ್ಯ ನೀಡಿ ಸಂತೃಪ್ತಿ ಮಾಡುವನು. ಈ ಪೂಜೆಯ ಫಲವಾಗಿ, ಬಾಲಕನು ಅರೋಗ್ಯ ಮತ್ತು ದೀರ್ಘಾಯುಷ್ಯವನ್ನು ಪಡೆದು ಅನೇಕ ವರ್ಷಗಳು ಪುತ್ರ ಪೌತ್ರರನ್ನು ಪಡೆದು ರಾಜ್ಯವನ್ನು ಸುಖವಾಗಿ ಅನೇಕ ವರ್ಷಗಳ ಕಾಲ ಆಳುವವನಾಗುತ್ತಾನೆ.

ಅಂದಿನಿಂದ ಮಾಘ ಮಾಸದ ಶುಕ್ಲ ಪಕ್ಷ ಸಪ್ತಮಿಯಂದು ಜನರು ಈ ವ್ರತವನ್ನು ಆಚರಣೆ ಮಾಡಲು
ಪ್ರಾರಂಭಿಸಿ,ಇಂದಿನವರೆಗೂ ಮುಂದುವರಿಸಿಕೊಂಡು ಬಂದು ಸೂರ್ಯ ಭಾಗವಾನನ ಕೃಪೆಗೆ ಪಾತ್ರರಾಗಿರುತ್ತಾರೆ.

ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು. ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯ ಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಸ್ಯಮಂತಕಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ.

ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.
ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

ವೈದಿಕ ಧರ್ಮದಲ್ಲಿ ಸೂರ್ಯೋಪಾಸನೆ

ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಇನ್ನು, ‘ಭೂರ್ಭುವಸ್ವಃ’. . . ॥ ಎಂಬ ವ್ಯಾಹೃತಿಯ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

ನಮ್ಮ ಋಗ್ವೇದ, ಯಜುರ್ವೇದ ಸಾಮವೇದಗಳು ಸೂರ್ಯನಿಂದ ಆಗುವ ಅನೇಕ ವಿವಿಧ ಉಪಯೋಗಗಳನ್ನು ಮಂತ್ರಗಳಲ್ಲಿ ನಮಗೆ ಕೊಟ್ಟರೂ ಸಹ ಅಥರ್ವವೇದ ಸೂರ್ಯನ ಕಿರಣಗಳ ಉಪಯೋಗದ ಕುರಿತಾಗಿಯೇ ತಿಳಿಸಿಕೊಡುತ್ತದೆ. ಅಥರ್ವವೇದದ ಪ್ರಥಮ ಕಾಂಡದ ೨೨ ನೇ ಸೂಕ್ತ ದ್ರಷ್ಟಾರನಾದ ಋಷಿ ಬ್ರಹ್ಮಾ ಎನ್ನುವವರು ಸೂರ್ಯ ಹರಿಮಾ ಮತ್ತು ಹೃದ್ರೋಗದ ಕುರಿತಾಗಿ ಸ್ತುತಿಸುತ್ತಾರೆ.
“ಅನು ಸೂರ್ಯಮುದಯತಾಂ ಹೃದ್ದ್ಯೋತೋ ಹರಿಮಾ ಚ ತೇ..।ʼʼ ಎಂದು.

ಯಜುರ್ವೇದದಲ್ಲಿ ಹೀಗೆ ಸೂರ್ಯನ ಕುರಿತಾಗಿ ಹೀಗೆ ಹೇಳಲಾಗಿದೆ.
ಹಂಸಃ ಶುಚಿಷದ್ವಸುರನ್ತರಿಕ್ಷಸದ್ಧೋತಾ ವೇದಿಷದತಿಥಿರ್ದುರೋಣಸತ್ ।
ನೃಷದ್ವರಸದೃತಸದ್ವ್ಯೋಮಸದಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್ ॥ ೬ ॥

Ratha Saptami 2023

ಇದರ ಒಂದು ಅರ್ಥವೇನೆಂದರೆ; ಸದಾಕಾಲ ಸಂಚಾರ ಮಾಡುತ್ತಿರುವವನು ,ಜ್ಯೋತಿರ್ಮಯವಾದ ಸೂರ್ಯ ಮಂಡಲದಲ್ಲಿರುವವನು, ವಾಯುವೆಂಬ ಸೂತ್ರಾತ್ಮನಾಗಿರುವವನು, ಅಂತರಿಕ್ಷದಲ್ಲಿ ಸಂಚರಿಸುವ ಸಕಲ ಪ್ರಾಣಿಗಲ್ಲಿರುವವನು, ಹೋತೃವಾಗಿ ಸಕಲ ಯಾಗಾದಿಗಳಲ್ಲಿರುವವನು, ಪ್ರಧಾನ ಯಜ್ಞ ಯಾಗಾದಿಗಳ ವೇದಿಕೆಗಳಲ್ಲಿರುವವನು, ಎಲ್ಲರಿಗೂ ಬೆಳಕನಿತ್ತು ಅತಿಥಿಯಂತೆ ಒಂದು ಕ್ಷಣವೂ ನಿಲ್ಲದೆ ಮುಂದೆ ಹೊರಟು ಹೋಗುವವನು, ಕಲಶ(ದುರೋಣ) ದಲ್ಲಿರುವವನು, ಸಕಲ ಮನುಷ್ಯರಲ್ಲೂ(ನೃಷತ್) ಇರುವವನು, ಪುಣ್ಯಕ್ಷೇತ್ರದಲ್ಲಿ ಪೂಜಿಸಲ್ಪಡುವ ವರಸದನು, ಕರ್ಮ ಗಳ ಫಲ(ಋತ)ಕೊಡುವವನೂ, ನಕ್ಷತ್ರ, ಗ್ರಹ ರೂಪದಲ್ಲಿರುವ ವ್ಯೋಮಸದನು, ನೀರಿನಲ್ಲಿ ಹುಟ್ಟಿರುವ ಸಕಲ ಚರಾಚರಗಳಲ್ಲಿರುವ ಅಬ್ಜನು (ಅಪ್+ಜ),ಗೋವಿನ ಉತ್ಪತ್ತಿಗಳಲ್ಲಿರುವವ ಗೋಜ ನು, ಬೆಟ್ಟ ಗುಡ್ಡಗಳ ಮೇಳೆ ಹುಟ್ಟುವ ಜೀವರಾಶಿಗಳ ಒಡೆಯ ಅದ್ರಿಜನೂ, ಕಾಲ ಸ್ವರೂಪದ ಋತಜನು, ಸತ್ಯಾತ್ಮದ ಬೃಹತ್ಸ್ವರೂಪನೂ ಆಗಿರುವ ಹೇ ಆದಿತ್ಯನೇ ನಿನಗೆ ನಮನವು ಎಂದು.

ಸೂರ್ಯನಿಂದ ರೋಗ ನಿವಾರಣೆ

ಉತ್ತಮ ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಲಾಗಿದೆ. ಸೂರ್ಯನಿಂದ ಭೂಮಿಗೆ ಬರುವ ಕಿರಣಗಳು ನಮಗೆ ಒಂದೇ ಬಣ್ಣದಿಂದ ಕಾಣಿಸಿದರೂ ಅದು ಏಳು ಪ್ರತ್ಯೇಕ ಬಣ್ಣದ ಕಿರಣಗಳು ಒಂದಾಗಿ ರೂಪುಗೊಂಡಿದ್ದಾಗಿವೆ. ಇದನ್ನು ಔಷಧೀಯವಾಗಿ ಉಪಯೋಗಿಸುವ ಕಲೆ ಪ್ರಾಚೀನ ಕಾಲದ ಜನರಿಗೆ ಗೊತ್ತಿತ್ತು.

ಕುಷ್ಟ ರೋಗಕ್ಕೆ ಸೂರ್ಯನ ಕಿರಣಗಳನ್ನು ಹಾಯಿಸಿ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತಿತ್ತು. ಗಂಟಲುವಾಳ, ಗಳಗಂಡರೋಗ ಅಥವಾ ಗಾಯಿಟರ್ ರೋಗವನ್ನು ಚಂದ್ರನ ಕಿರಣಗಳಿಂದ ಗುಣಪಡಿಸುತ್ತಿದ್ದರು. ಸೂರ್ಯನ ಕಿರಣಗಳಿಲ್ಲದೇ ಮನುಷ್ಯ ಜೀವಿಸುವುದು ಸಾದ್ಯವಿರದ ಮಾತು.

ಅಥರ್ವವೇದದ ಪ್ರಥಮ ಕಾಂಡದ ೨೨ನೇ ಸೂಕ್ತ ದ್ರಷ್ಟಾರ ಋಷಿ ಬ್ರಹ್ಮಾ ಎನ್ನುವವರು ಸೂರ್ಯ ಹರಿಮಾ ಮತ್ತು ಹೃದ್ರೋಗವನ್ನು ಸ್ತುತಿಸುತ್ತಾರೆ. “ಅನು ಸೂರ್ಯಮುದಯತಾಂ ಹೃದ್ದ್ಯೋತೋ ಹರಿಮಾ ಚ ತೇʼʼ ಎನ್ನುವಲ್ಲಿ ರೋಗಗ್ರಸ್ತ ಮನುಷ್ಯನ ಕುರಿತಾಗಿ ಹೇಳುತ್ತಾ, ಹೃದ್ರೋಗ ದೇಹವನ್ನೇ ಸುಡುವಂತೆ ಮಾಡುತ್ತದೆ, ಕಾಮಾಲೆ ಮತ್ತು ರಕ್ತಹೀನತೆ ಸಹ ಅದೇ ರೀತಿ ತೊಂದರೆ ಕೊಡುತ್ತವೆ. ಆದರೆ, ನಿಮ್ಮ ದೇಹವನ್ನು ಕೆಂಬಣ್ಣದ ಹಸುವಿನ ಕಿರಣಗಳಿಂದ ಮತ್ತು ಸೂರ್ಯೋದಯದ ಕಿರಣಗಳನ್ನು ದೆಹಕ್ಕೆ ಹಾಯಿಸುವುದರಿಂದ ರೋಗವನ್ನು ತಡೆಗಟ್ಟ ಬಹುದು ಎನ್ನುವುದನ್ನು ಹೇಳಲಾಗಿದೆ.

ಸೂರ್ಯನ ಕಿರಣಗಳಲ್ಲಿನ ಲೋಹಿತವರ್ಣದ ಕಿರಣಗಳನ್ನು ದೇಹಕ್ಕೆ ಹಾಯಿಸಿ ಪಾಂಡುರೋಗವನ್ನು ಗುಣಪಡಿಸಬಹುದು, ಇದೇ ಸೂಕ್ತದಲ್ಲಿ ಮುಂದೆ ಕೆಂಪುಬಣ್ಣದ ಕಿರಣಗಳನ್ನು ಮತ್ತು ಅವುಗಳ ಪ್ರಬೇಧಗಳನ್ನು ಬೇರ್ಪಡಿಸಿ ದೇಹಕ್ಕೆ ಹಾಯಿಸುವುದರಿಂದ ಆಯುಷ್ಯ ವೃದ್ಧಿಗೊಳಿಸಬಹುದು ಎನ್ನುವುದು ಸಿಗುತ್ತದೆ. ಸೂರ್ಯನ ಕಿರಣಗಳಿಂದ ಮನುಷ್ಯನ ದೇಹದಲ್ಲಿರುವ ವಿಷಕಾರಕ ಕೀಟಾಣುಗಳನ್ನು ನಾಶಪಡಿಸಬಹುದು ಎನ್ನುವುದು ಸೂಕ್ತದ್ರಷ್ಟಾರ ಋಷಿಯ ಸ್ತುತಿಯಿಂದ ತಿಳಿದುಬರುತ್ತದೆ.

ಸೂರ್ಯನ ರಥಕ್ಕೆ ಏಳು ಕುದುರೆ!
ರಥ ಸಪ್ತಮಿಯ ದಿನ ಸೂರ್ಯನ ರಥದ ಪಥ ಬದಲಾಗುತ್ತದೆ. ಸೂರ್ಯ ಹೊಸ ರಥವನ್ನೇರಿ ಹೊರಡುತ್ತಾನೆ ಎನ್ನುತ್ತೇವೆ. ನಿಮಗೆ ಗೊತ್ತೇ ಸೂರ್ಯನ ರಥಕ್ಕೆ ಏಳು ಕುದುರೆಗಳಿರುತ್ತವೆ. ಅವುಗಳ ಹೆಸರು ಇಂತಿದೆ; ಗಾಯತ್ರಿ, ಬೃಹತೀ, ಉಷ್ಣಿಕ್‌, ಜಗತೀ, ತ್ರಿಷ್ಟುಪ್‌, ಅನುಷ್ಟುಪ್‌ ಮತ್ತು ಪಂಕ್ತಿ ಎಂದು.

ಅಥರ್ವವೇದದ ಭೈಷಜ್ಯ ಸೂಕ್ತದ ದ್ರಷ್ಟಾರ ಋಷಿ ಅಂಗಿರಾ ಎನ್ನುವವರು ಸೂರ್ಯ ಚಂದ್ರ ರೋಹಿಣೀ ರಾಮಾಯಣೀಯನ್ನು ದೇವತೆಗಳನ್ನಾಗಿ ಸ್ತುತಿಸುವಲ್ಲಿ;
ಸೂರ್ಯ ಕೃಣೋತು ಬೇಷಜಂ ಚಂದ್ರಮಾ ವೋಪೋಚ್ಛತು..॥
ಎನ್ನುವಲ್ಲಿ ಸೂರ್ಯನು ಗಾಯಿಟರ್ (ಗಳಗಂಡ) ರೋಗವನ್ನು ಕಡಿಮೆ ಮಾಡಿದರೆ, ಚಂದ್ರನು ಆ ರೋಗವನ್ನೇ ಓಡಿಸುತ್ತಾನೆ ಎನ್ನುವಲ್ಲಿ ಸೂರ್ಯ ಮತ್ತು ಚಂದ್ರನ ಕಿರಣಗಳು ಗಳಗಂಡ ರೋಗಕ್ಕೂ ಔಷಧೀಯ ರೂಪವಾಗಿ ಪರಿಹಾರವನ್ನು ಕೊಡಬಲ್ಲವು ಎನ್ನುವುದು ತಿಳಿಯುತ್ತದೆ. ಗಳಗಂಡದ ಮೂಲ ಬೇರನ್ನೇ ಈ ಕಿರಣಗಳು ನಾಶಮಾಡಬಲ್ಲವು ಎನ್ನುವುದು ಮುಂದಿನ ಮಂತ್ರ ಹೇಳುತ್ತದೆ. ಹೀಗೇ ಪ್ರಕೃತಿಯಿಂದ ಸ್ವಾಭಾವಿಕವಾಗಿ ಸಿಗುವ ಸೂರ್ಯನ ಕಿರಣಗಳಿಂದ ಅನೇಕ ವಿಧದ ರೋಗಗಳನ್ನು ಸಮೂಲವಾಗಿ ನಿವಾರಿಸಬಹುದು ಎನ್ನುವುದು ಅಥರ್ವವೇದದ ಅನೇಕ ಸೂಕ್ತಗಳಿಂದ ತಿಳಿದು ಬರುತ್ತವೆ.

ಅದರಲ್ಲೂ ಏಳು ಕಿರಣಗಳನ್ನು ಬೇರ್ಪಡಿಸಿಕೊಂಡಾಗ ಪ್ರತ್ಯೇಕವಾಗಿ ಬೇರೆ ಬೇರೆ ರೋಗವನ್ನು ಗುಣಪಡಿಸಬಹುದು ಎನ್ನುವಲ್ಲಿನ ಸೂಕ್ಷ್ಮವನ್ನು ಗಮನಿಸಿದರೆ ಅದ್ಯಾವುದೋ ಕಾಲದಲ್ಲಿ ಸೂರ್ಯನಿಂದ ಸಿಗುವ ಕಿರಣಗಳಲ್ಲಿನ ಬಣ್ಣಗಳನ್ನು ಗುರುತಿಸಿ ಬೇರ್ಪಡಿಸುವ ವಿಧಾನ ತಿಳಿದಿರಬಹುದು ಎನ್ನಿಸುತ್ತದೆ.

ಸೂರ್ಯ ಆರೋಗ್ಯದಾಯಿ ವೈಜ್ಞಾನಿಕವಾಗಿಯಯೂ ಇದು ಸಾಬೀತಾಗಿದೆ. ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಚಂದ್ರನ ಬೆಳಕಿನಲ್ಲಿ ವಿಟಮಿನ್ ‘ಬಿ 12’ ಇದ್ದರೆ, ಸೂರ್ಯನ ಕಿರಣಗಳಲ್ಲಿ ವಿಟಮಿನ್ ‘ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಗೆ ವಿಗ್ರಹಾರಾಧನೆ ಬಳಕೆಗೆ ಬರುವ ಮುಂಚಿನಿಂದಲೂ ಚಾಲ್ತಿಯಲ್ಲಿತ್ತು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ

ನವಗ್ರಹಗಳಿಗೆ ಸೂರ್ಯನೆ ಅಧಿಪತಿ. ಸೌರಕೇಂದ್ರ ವ್ಯವಸ್ಥೆಯನ್ನು ವಿಜ್ಞಾನಿಗಳು ಪತ್ತೆ ಮಾಡುವ ಮೊದಲೇ, ಹಿಂದೂ ಪುರಾಣಗಳಲ್ಲಿ ಅದು ಉಲ್ಲೇಖವಾಗಿತ್ತು. ಅದಕ್ಕೆಂದೇ ನಾವು ನವಗ್ರಹಗಳಿಗೆ ಸೂರ್ಯನೇ ಅಧಿಪತಿ ಎಂದು ಸೂರ್ಯನ ಪೂಜೆಯನ್ನು ಎಂದಿನಿಂದಲೋ ಮಾಡಿಕೊಂಡು ಬಂದಿದ್ದೆವು. ಸಮಸ್ತ ವಿಶ್ವಕ್ಕೂ ಸೂರ್ಯನೇ ಒಡೆಯ ಎಂಬುದನ್ನು ಕಂಡುಕೊಂಡ ನಮ್ಮ ಋಷಿಮುನಿಗಳು ವಿಶೇಷವಾಗಿ ರಥಸಪ್ತಮಿಯಂದು ಸೂರ್ಯನನ್ನು ಪೂಜಿಸುತ್ತ ಬಂದಿದ್ದಾರೆ.

ರವಿಯು ಜಾತಕದಲ್ಲಿ ಸಿಂಹ ರಾಶಿಯ ಒಡೆಯನಾಗಿದ್ದು, ಅವನು ನೇತ್ರಕಾರಕ,ಅರೋಗ್ಯಕಾರಕ, ಮತ್ತು ಪಿತೃಕಾರಕನಾಗಿ ತಂದೆಯ ಆಯುಷ್ಯ ವೃದ್ಧಿಗಾಗಿ, ಕಣ್ಣಿನ ಉತ್ತಮ ದೃಷ್ಟಿಗಾಗಿ ಮತ್ತು ಉತ್ತಮ ಅರೋಗ್ಯ ಪ್ರಾಪ್ತಿಗಾಗಿ ಕಾರಣ ಕರ್ತನಾಗಿರುತ್ತಾನೆ.

ಭಾರತೀಯ ಸಂಸ್ಕೃತಿಯು ಎಲ್ಲರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಕಲಿಸುತ್ತದೆ. ಇದಕ್ಕನುಸಾರ, ಸೂರ್ಯದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ರಥಸಪ್ತಮಿಯ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ.
ಸರ್ವೇ ಸಂತು ನಿರಾಮಯಃ ಲೋಕಾಃ ಸಮಸ್ತಾ ಸುಖಿನೋ ಭವಂತು

ಲೇಖಕರು ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇದನ್ನೂ ಓದಿ : Ratha Saptami 2023 : ಸರ್ವರಿಗೂ ಪ್ರಿಯ ಸೂರ್ಯದೇವನನ್ನು ಪೂಜಿಸುವ ಹಬ್ಬ ರಥ ಸಪ್ತಮಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Chikkalluru Siddappaji Temple : ಚಿಕ್ಕಲ್ಲೂರಲ್ಲಿ ಪೂಜೆ ವಿಚಾರಕ್ಕೆ ತ್ರಿಶೂಲದಲ್ಲಿ ಹೊಡೆದಾಟ; ಮೂವರು ಅರ್ಚಕರಿಗೆ ಗಾಯ

Chikkalluru Siddappaji Temple: ಚಿಕ್ಕಲ್ಲೂರಿನಲ್ಲಿ ಸಿದ್ದಪ್ಪಾಜಿ ದೇವರ ಗುಡ್ಡ ದೀಕ್ಷೆ ನೀಡುವ ವಿಚಾರಕ್ಕೆ ಅರ್ಚಕರ ಗುಂಪಿನ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ದೇವರ ತ್ರಿಶೂಲ, ಬೆತ್ತ ಹಿಡಿದು ಹೊಡೆದಾಡಿಕೊಂಡಿದ್ದಾರೆ.

VISTARANEWS.COM


on

By

Chikkalluru Siddappaji temple
Koo

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಸ್ಥಳ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದಲ್ಲಿ (Chikkalluru Siddappaji Temple) ಪೂಜೆ ವಿಚಾರಕ್ಕೆ ತ್ರಿಶೂಲಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಮೂವರು ಅರ್ಚಕರಿಗೆ ಗಂಭೀರ ಗಾಯವಾಗಿದೆ. ಚಿಕ್ಕಲೂರು ದೇವಸ್ಥಾನದ ಅರ್ಚಕ ಶಂಕರಪ್ಪ (65), ಶಿವಕುಮಾರಸ್ವಾಮಿ (40) ಹಾಗೂ ನಂಜುಂಡಸ್ವಾಮಿ (32) ಗಂಭೀರ ಗಾಯಗೊಂಡವರು.

ಪೂಜೆ ಹಾಗೂ ದೀಕ್ಷೆ ಕೊಡುವ ವಿಚಾರಕ್ಕೆ ಅರ್ಚಕರ ಗುಂಪಿನಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿ, ಸಿದ್ದಪ್ಪಾಜಿ ದೇವಸ್ಥಾನದ ಬೆತ್ತ ಮತ್ತು ತ್ರಿಶೂಲಗಳನ್ನು ಹಿಡಿದುಕೊಂಡು ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ.

ಸದ್ಯ ಕೊಳ್ಳೆಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದಪ್ಪಾಜಿ ದೇವರ ಗುಡ್ಡ ದೀಕ್ಷೆ ನೀಡುವ ವಿಚಾರಕ್ಕೆ ಅರ್ಚಕರ ಗುಂಪಿನ ನಡುವೆ ಗಲಾಟೆ ನಡೆದಿದೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Physical Abuse : ವೈದ್ಯಾಧಿಕಾರಿ ಅಶ್ಲೀಲ ವರ್ತನೆ; ರಾತ್ರಿಯಾದರೆ ವಿಡಿಯೊ ಕಾಲ್‌ನಲ್ಲಿ ವೈದ್ಯೆಗೆ ಟಾರ್ಚರ್‌‌

ದೇವಸ್ಥಾನಕ್ಕೆ ನುಗ್ಗಿ ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳು

ವಿಜಯನಗರ: ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಆಂಜನೇಯ ಪ್ರತಿಮೆ ತುಂಡಾಗಿದೆ. ವಿಜಯನಗರ (Vijayanagara News) ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸ ಹಂಪಿ ಗ್ರಾಮದಲ್ಲಿ ಘಟನೆ ನಡೆದಿದೆ.

ತಡರಾತ್ರಿ ಕಾರ್ಯಸಿದ್ಧಿ ಶ್ರೀ ಆಂಜನೇಯ ಸ್ವಾಮಿ ದೇಗುಲದ ಬೀಗ ಮುರಿದು, ಒಳ ನುಗ್ಗಿರುವ ದುಷ್ಟರು ಮೂರ್ತಿಯನ್ನು ಒಡೆದು ಹಾಕಿದ್ದಾರೆ. ಮುಂಜಾನೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ವಿಭಾಗ ತಜ್ಞರು, ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಹೊಸಪೇಟೆ ಡಿವೈಎಸ್‌ಪಿ ಶರಣಬಸವೇಶ್ವರ, ಹಂಪಿ ಪ್ರವಾಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇವರ ಹರಕೆ ಕುರಿಯನ್ನೇ ಕದ್ಯೊಯ್ದ ಕಳ್ಳರು

ದಾವಣಗೆರೆ ದೇವರ ಹರಕೆಗಾಗಿ ತಂದಿದ್ದ ಕುರಿಯನ್ನೇ ಕಳ್ಳರು (Theft Case) ಹೊತ್ತೊಯ್ದಿದ್ದಾರೆ. ದಾವಣಗೆರೆ (Davanagere news) ತಾಲೂಕಿನ ಮಾಯಾಕೊಂಡದಲ್ಲಿ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ‌ ಕಿರಾತಕರು ರಾತ್ರೋ ರಾತ್ರಿ ಕುರಿಯನ್ನು ಕದ್ದಿದ್ದಾರೆ.

ಸುಮಾರು 8 ಮಂದಿ ಖದೀಮರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಯಾಕೊಂಡದ ನಿವಾಸಿ ಪ್ರಭು ಎಂಬುವರಿಗೆ ಸೇರಿದ ಕುರಿಯನ್ನು ಬೆಳಗಿನ‌ ಜಾವ 3ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದು ಎಗರಿಸಿದ್ದಾರೆ. ಸದ್ಯ ಪ್ರಭು ಅವರು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಖದೀಮರನ್ನು ಹಿಡಿಲು ಮುಂದಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Vastu Tips: ಮನೆಯ ಯಾವ ಕೋಣೆಗೆ ಯಾವ ಬಣ್ಣ ಇದ್ದರೆ ನೆಮ್ಮದಿ ಸಿಗುತ್ತದೆ? ವಾಸ್ತು ಸಲಹೆ ಹೀಗಿದೆ

ಮನೆಯ ಕೋಣೆಗಳು, ದಿಕ್ಕುಗಳಿಗೆ ಪೂರಕವಾಗಿ ಬಣ್ಣ ಬಳಿಯುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಯಾಗುವಂತೆ ಮಾಡಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ (Vastu Tips). ಯಾವ ಕೋಣೆಗೆ ಯಾವ ಬಣ್ಣ ಸೂಕ್ತ? ಯಾವ ಬಣ್ಣದಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ? ಈ ಕುರಿತ ವಾಸ್ತು ಪರಿಣಿತರ ಸಲಹೆ ಇಲ್ಲಿದೆ.

VISTARANEWS.COM


on

By

Vastu Tips
Koo

ಬಣ್ಣಗಳು (Colours) ನಮ್ಮ ಬದುಕಿನಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ನಮ್ಮ ಮನಸ್ಥಿತಿ, ಭಾವನೆ ಮತ್ತು ಸಂತೋಷದ ಮೇಲೆ ಇದರ ಪರಿಣಾಮವಿರುತ್ತದೆ. ವಾಸ್ತು ಶಾಸ್ತ್ರದಲ್ಲಿ (Vastu Tips) ಬಣ್ಣಗಳು ಮನೆಯಲ್ಲಿ ಶಕ್ತಿಯ ಹರಿವಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ವಾಸ್ತುತತ್ತ್ವಗಳ ಆಧಾರದ ಮೇಲೆ ಪ್ರತಿ ಕೋಣೆಗೆ ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡುವುದರಿಂದ ಮನೆಯಲ್ಲಿ ಶಾಂತಿ (peaceful) ಮತ್ತು ಸಕಾರಾತ್ಮಕತೆ (Positive Energy) ತುಂಬುತ್ತದೆ.

ವಾಸ್ತು ಪ್ರಕಾರ ಮನೆಯ ಪ್ರತಿಯೊಂದು ಕೋಣೆಗೂ ಬಣ್ಣಗಳಿವೆ. ವಾಸ್ತು ನಿರ್ದೇಶನಗಳ ಪ್ರಕಾರ ಗೋಡೆಯ ಬಣ್ಣಗಳನ್ನು ಹೇಗೆ ಆರಿಸುವುದು ಮತ್ತು ಧನಾತ್ಮಕ, ಉತ್ಸಾಹಭರಿತ ವಾತಾವರಣವನ್ನು ರಚಿಸಲು ಯಾವ ಬಣ್ಣಗಳನ್ನು ಬಳಸಬೇಕು ಎನ್ನುವ ಮಾಹಿತಿ ಇಲ್ಲಿದೆ.

ವಾಸ್ತುತತ್ತ್ವಗಳ ಆಧಾರದ ಮೇಲೆ ಮನೆಯ ಪ್ರತಿಯೊಂದು ಪ್ರದೇಶಕ್ಕೂ ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡುವುದರಿಂದ ಜಾಗದ ಶಕ್ತಿ ಮತ್ತು ಭಾವನೆಯನ್ನು ಸುಧಾರಿಸಬಹುದು.


ಅಡುಗೆ ಕೋಣೆ

ಕಿತ್ತಳೆ, ಕೆಂಪು, ಹಳದಿ ಮತ್ತು ಗುಲಾಬಿ ಬಣ್ಣಗಳು ಅಡುಗೆ ಮನೆಗೆ ಸೂಕ್ತವಾಗಿದೆ. ಈ ಗಾಢ ಬಣ್ಣಗಳು ಹಸಿವನ್ನು ಹೆಚ್ಚಿಸುತ್ತವೆ ಮತ್ತು ಉತ್ಸಾಹಭರಿತ ವಾತಾವರಣವನ್ನು ಸೃಷ್ಟಿಸುತ್ತವೆ. ಅಡುಗೆ ಮತ್ತು ಊಟವನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ. ಅಡುಗೆಮನೆಯಲ್ಲಿ ಶಕ್ತಿ, ಚೈತನ್ಯ ಮತ್ತು ಉತ್ಸಾಹವನ್ನು ಈ ಬಣ್ಣಗಳು ಹೆಚ್ಚಿಸುತ್ತದೆ. ಕಪ್ಪು ಮತ್ತು ಬೂದು ಬಣ್ಣವನ್ನು ಅಡುಗೆ ಕೋಣೆಗೆ ಬಳಸಬೇಡಿ. ಏಕೆಂದರೆ ಅವುಗಳು ಜಾಗವನ್ನು ಕತ್ತಲೆಯಾದ ಮತ್ತು ಭಾರವಾದ ಭಾವನೆಯನ್ನು ಉಂಟುಮಾಡಬಹುದು. ಅದರ ಧನಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಮಲಗುವ ಕೋಣೆ

ನೀಲಿ, ಹಸಿರು ಮತ್ತು ಗುಲಾಬಿ ಬಣ್ಣದ ತಿಳಿ ಛಾಯೆಗಳು ಹಿತವಾದವು ಮತ್ತು ಶಾಂತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಈ ಶಾಂತಿಯುತ ಬಣ್ಣಗಳು ದೀರ್ಘ ದಿನದ ಅನಂತರ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಶಾಂತಿ, ಸಾಮರಸ್ಯ ಮತ್ತು ಭಾವನಾತ್ಮಕ ಯೋಗಕ್ಷೇಮದೊಂದಿಗೆ ಇದು ಸಂಬಂಧವನ್ನು ಹೊಂದಿದೆ. ಮಲಗುವ ಕೋಣೆಯಲ್ಲಿ ಗಾಢವಾದ ಮತ್ತು ದಪ್ಪ ಬಣ್ಣಗಳನ್ನು ತಪ್ಪಿಸಿ. ಏಕೆಂದರೆ ಅವು ತುಂಬಾ ಉತ್ತೇಜಕವಾಗಬಹುದು. ವಿಶ್ರಾಂತಿ ಮತ್ತು ಚೆನ್ನಾಗಿ ನಿದ್ರೆ ಮಾಡಲು ತೊಂದರೆ ಉಂಟು ಮಾಡಬಹುದು.

ಲಿವಿಂಗ್ ರೂಮ್

ಲೀವಿಂಗ್ ರೂಮ್ ಗೆ ಸ್ನೇಹಶೀಲ ಮತ್ತು ಸ್ನೇಹಪರ ಭಾವನೆಯನ್ನು ಉಂಟುಮಾಡುವ ಬಣ್ಣಗಳನ್ನು ಆಯ್ಕೆ ಮಾಡುವುದು ಮುಖ್ಯ. ಹಳದಿ, ಹಸಿರು ಮತ್ತು ನೀಲಿ ಬಣ್ಣಗಳಂತಹ ಗಾಢವಾದ ಬಣ್ಣಗಳು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಅವು ಕೋಣೆಯಲ್ಲಿ ಉತ್ಸಾಹಭರಿತ ಮತ್ತು ಸಂತೋಷದ ಭಾವನೆಯನ್ನು ನೀಡುತ್ತವೆ. ಗಾಢವಾದ ಬಣ್ಣಗಳು ಸಂತೋಷ, ಬೆಳವಣಿಗೆ ಮತ್ತು ಶಾಂತತೆಯನ್ನು ಪ್ರತಿನಿಧಿಸುತ್ತವೆ. ಇದು ಮೋಜಿನ ವಾತಾವರಣಕ್ಕೆ ಸೂಕ್ತವಾಗಿದೆ.


ಪೂಜಾ ಕೊಠಡಿ

ಈ ಸ್ಥಳಕ್ಕಾಗಿ ಆಯ್ಕೆ ಮಾಡಲಾದ ಬಣ್ಣಗಳು ಶುದ್ಧತೆ, ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತವೆ. ಬಿಳಿ ಬಣ್ಣವು ಅತ್ಯುತ್ತಮ ಬಣ್ಣವಾಗಿದೆ. ಏಕೆಂದರೆ ಇದು ಶುದ್ಧತೆ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ. ಪೂಜಾ ಕೋಣೆಯಲ್ಲಿ ಬಿಳಿಯ ಸುತ್ತಲಿದ್ದರೆ ಅದು ಶಾಂತ ಮತ್ತು ಪವಿತ್ರ ಭಾವನೆಯನ್ನು ನೀಡುತ್ತದೆ. ನೀವು ಅದನ್ನು ಇನ್ನಷ್ಟು ಶಾಂತಿಯುತವಾಗಿಸಲು ಹಳದಿ, ತಿಳಿ ನೀಲಿ ಅಥವಾ ತಿಳಿ ಗುಲಾಬಿ ಬಣ್ಣದ ಬೆಳಕಿನ ಸ್ಪರ್ಶಗಳನ್ನು ಕೂಡ ಸೇರಿಸಬಹುದು. ಗಾಢ ಬಣ್ಣಗಳನ್ನು ಬಳಸದಿರುವುದು ಮುಖ್ಯವಾಗಿದೆ. ಯಾಕೆಂದರೆ ಪ್ರಾರ್ಥನೆ ಮತ್ತು ಧ್ಯಾನಕ್ಕೆ ಅಗತ್ಯವಿರುವ ಶಾಂತ ಮತ್ತು ಶಾಂತಿಯುತ ವಾತಾವರಣವನ್ನು ಅದು ಹಾಳು ಮಾಡಬಹುದು.

ಗೋಡೆಯ ಬಣ್ಣಗಳು

ವಾಸ್ತು ಪ್ರಕಾರ ಮನೆಗೆ ಸರಿಯಾದ ಬಣ್ಣಗಳನ್ನು ಯಾವುದು, ಯಾವ ದಿಕ್ಕಿನಲ್ಲಿ ಇರಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ. ವಿಭಿನ್ನ ದಿಕ್ಕುಗಳು ವಿಭಿನ್ನ ಬಣ್ಣಗಳೊಂದಿಗೆ ಹೊಂದಿಕೆಯಾಗುತ್ತವೆ. ಅದು ಮನೆಯನ್ನು ಹೆಚ್ಚು ಸಮತೋಲಿತ ಮತ್ತು ಧನಾತ್ಮಕವಾಗಿ ಮಾಡುತ್ತದೆ.

ಉತ್ತರ

ಉತ್ತರಕ್ಕೆ ಎದುರಾಗಿರುವ ಗೋಡೆಗಳಿಗೆ ಹಸಿರು ಪರಿಪೂರ್ಣವಾಗಿದೆ. ಇದು ಸಮೃದ್ಧಿ ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ. ಇದು ಉತ್ತಮ ಶಕ್ತಿಯನ್ನು ತರುತ್ತದೆ. ಈ ಗೋಡೆಗಳ ಹಸಿರು ಬಣ್ಣವು ಸಂಪತ್ತು ಮತ್ತು ಯಶಸ್ಸನ್ನು ಆಹ್ವಾನಿಸುತ್ತದೆ. ಮನೆಯಲ್ಲಿ ಸಾಮರಸ್ಯದ ವೈಬ್ ಅನ್ನು ಉಂಟು ಮಾಡುತ್ತದೆ. ಇದು ನೀರಿನ ಅಂಶದೊಂದಿಗೆ ಸಂಬಂಧಿಸಿದೆ. ಜೀವನ ಮತ್ತು ಪುನರ್ಯೌವನಗೊಳಿಸುವಿಕೆಯನ್ನು ಸೂಚಿಸುತ್ತದೆ.

ದಕ್ಷಿಣ

ದಕ್ಷಿಣಕ್ಕೆ ಎದುರಾಗಿರುವ ಗೋಡೆಗಳಿಗೆ, ಉಷ್ಣತೆ ಮತ್ತು ಶಕ್ತಿಯನ್ನು ಸೇರಿಸಲು ಕೆಂಪು ಮತ್ತು ಹಳದಿ ಬಳಸಿ. ದಕ್ಷಿಣವು ಬೆಂಕಿಯನ್ನು ಪ್ರತಿನಿಧಿಸುತ್ತದೆ. ಉತ್ಸಾಹ ಮತ್ತು ಬದಲಾವಣೆಯನ್ನು ಸಂಕೇತಿಸುತ್ತದೆ. ಕೆಂಪು, ಹಳದಿ ಸಂತೋಷವನ್ನು ತರುತ್ತದೆ. ದಕ್ಷಿಣಾಭಿಮುಖ ಗೋಡೆಗಳ ಮೇಲೆ ಈ ಬಣ್ಣಗಳನ್ನು ಬಳಸುವುದರಿಂದ ಮನೆಯು ಉತ್ಸಾಹಭರಿತ ಮತ್ತು ಶಕ್ತಿಯಿಂದ ತುಂಬಿರುತ್ತದೆ.

ಪೂರ್ವ

ಪೂರ್ವಕ್ಕೆ ಎದುರಾಗಿರುವ ಗೋಡೆಗಳಿಗೆ ಬಿಳಿ ಉತ್ತಮ ಆಯ್ಕೆಯಾಗಿದೆ. ಇದು ಶುದ್ಧತೆ ಮತ್ತು ಹೊಸ ಆರಂಭವನ್ನು ಪ್ರತಿನಿಧಿಸುತ್ತದೆ. ಪೂರ್ವವು ಗಾಳಿಗೆ ಸಂಬಂಧಿಸಿದೆ. ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ. ಈ ಗೋಡೆಗಳನ್ನು ಬಿಳಿ ಬಣ್ಣದಿಂದ ಚಿತ್ರಿಸುವುದರಿಂದ ಕೊಠಡಿಯು ಸ್ಪಷ್ಟ ಮತ್ತು ತೆರೆದಿರುವಂತೆ ಮಾಡುತ್ತದೆ. ಧನಾತ್ಮಕ ಚಿಂತನೆ ಮತ್ತು ಕಲಿಕೆಯನ್ನು ಉತ್ತೇಜಿಸುತ್ತದೆ.

ಪಶ್ಚಿಮ

ಪಶ್ಚಿಮಕ್ಕೆ ಎದುರಾಗಿರುವ ಗೋಡೆಗಳಿಗೆ ನೀಲಿ ಬಣ್ಣವು ಸೂಕ್ತವಾಗಿದೆ. ಇದು ಶಾಂತಿ ಮತ್ತು ಭಾವನಾತ್ಮಕ ಸಮತೋಲನವನ್ನು ಪ್ರತಿನಿಧಿಸುತ್ತದೆ. ಪಶ್ಚಿಮವು ಭೂಮಿಯನ್ನು ಪ್ರತಿನಿಧಿಸುತ್ತದೆ. ಇದು ಸ್ಥಿರತೆಯನ್ನು ಸಂಕೇತಿಸುತ್ತದೆ. ಈ ಗೋಡೆಗಳಿಗೆ ನೀಲಿ ಬಣ್ಣವನ್ನು ಚಿತ್ರಿಸುವುದರಿಂದ ಕೊಠಡಿಯು ಶಾಂತಿಯುತವಾಗಿರುವಂತೆ ಮಾಡುತ್ತದೆ. ವಿಶ್ರಾಂತಿ ಪಡೆಯಲು ಮತ್ತು ಭಾವನಾತ್ಮಕವಾಗಿ ಉತ್ತಮವಾಗಲು ಸಹಾಯ ಮಾಡುತ್ತದೆ.

ಈಶಾನ್ಯ

ಈಶಾನ್ಯಕ್ಕೆ ಎದುರಾಗಿರುವ ಗೋಡೆಗಳಿಗೆ ಬಿಳಿ ಮತ್ತು ತಿಳಿ ನೀಲಿ ಬಣ್ಣವು ಉತ್ತಮವಾಗಿದೆ. ಅದು ಆಧ್ಯಾತ್ಮಿಕತೆ ಮತ್ತು ಶಾಂತಿಯನ್ನು ತರುತ್ತದೆ. ಈಶಾನ್ಯವು ವಾಸ್ತುವಿನಲ್ಲಿ ವಿಶೇಷವಾಗಿದೆ, ಆಧ್ಯಾತ್ಮಿಕ ಬೆಳವಣಿಗೆಗೆ ಸಂಬಂಧಿಸಿದೆ. ಈ ಬಣ್ಣಗಳನ್ನು ಬಳಸುವುದರಿಂದ ಕೊಠಡಿಯನ್ನು ಶಾಂತವಾಗಿ ಮತ್ತು ಧ್ಯಾನಕ್ಕೆ ಪರಿಪೂರ್ಣವಾಗಿಸಬಹುದು.

ಆಗ್ನೇಯ

ಆಗ್ನೇಯಕ್ಕೆ ಎದುರಾಗಿರುವ ಗೋಡೆಗಳಿಗೆ ಬೆಳ್ಳಿ ಮತ್ತು ತಿಳಿ ಬೂದು ಚೆನ್ನಾಗಿ ಕೆಲಸ ಮಾಡುತ್ತದೆ. ಆಗ್ನೇಯವು ಬೆಂಕಿಗೆ ಸಂಬಂಧಿಸಿದೆ. ಇದು ಸೃಜನಶೀಲತೆಯನ್ನು ಸಂಕೇತಿಸುತ್ತದೆ. ಈ ಗೋಡೆಗಳನ್ನು ಬೆಳ್ಳಿ ಅಥವಾ ತಿಳಿ ಬೂದು ಬಣ್ಣದಲ್ಲಿ ಚಿತ್ರಿಸುವುದು ಸೃಜನಶೀಲತೆಯನ್ನು ಪ್ರೇರೇಪಿಸುತ್ತದೆ ಮತ್ತು ಮನೆಯನ್ನು ಕ್ಲಾಸಿಯಾಗಿ ಕಾಣುವಂತೆ ಮಾಡುತ್ತದೆ.

ಇದನ್ನೂ ಓದಿ: Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!


ನೈಋತ್ಯ

ನೈಋತ್ಯಕ್ಕೆ ಎದುರಾಗಿರುವ ಗೋಡೆಗಳಿಗೆ ಪೀಚ್ ಮತ್ತು ತಿಳಿ ಕಂದು ಬಣ್ಣವನ್ನು ಬಳಸಿ. ಇದು ಕೊಠಡಿಯನ್ನು ಬೆಚ್ಚಗಿರಿಸುತ್ತದೆ ಮತ್ತು ಆರಾಮದಾಯಕವಾಗಿಸುತ್ತದೆ. ನೈಋತ್ಯವು ಭೂಮಿಗೆ ಸಂಪರ್ಕ ಹೊಂದಿದೆ, ಇದು ಸ್ಥಿರತೆಯನ್ನು ಸಂಕೇತಿಸುತ್ತದೆ. ಈ ಬಣ್ಣಗಳನ್ನು ಬಳಸುವುದರಿಂದ ಕೊಠಡಿಯು ಹಿತಕರವಾಗಿ ಮತ್ತು ಸುರಕ್ಷಿತವಾಗಿರುವಂತೆ ಮಾಡುತ್ತದೆ. ಭಾವನಾತ್ಮಕವಾಗಿ ಉತ್ತಮವಾಗಲು ಸಹಾಯ ಮಾಡುತ್ತದೆ.

ವಾಯವ್ಯ

ವಾಯುವ್ಯಕ್ಕೆ ಎದುರಾಗಿರುವ ಗೋಡೆಗಳಿಗೆ ಬಿಳಿ ಮತ್ತು ತಿಳಿ ಬೂದು ಬಣ್ಣ ಬಳಸಿ. ಇದು ಶುದ್ಧತೆ ಮತ್ತು ಸ್ಪಷ್ಟ ಚಿಂತನೆಯನ್ನು ಪ್ರತಿನಿಧಿಸುತ್ತದೆ. ವಾಯುವ್ಯವು ಗಾಳಿಯೊಂದಿಗೆ ಸಂಪರ್ಕ ಹೊಂದಿದೆ. ಇದು ಸಂವಹನವನ್ನು ಸಂಕೇತಿಸುತ್ತದೆ. ಗೋಡೆಗಳನ್ನು ಬಿಳಿ ಅಥವಾ ತಿಳಿ ಬೂದು ಬಣ್ಣದಲ್ಲಿ ಚಿತ್ರಿಸುವುದರಿಂದ ಜನರು ಮುಕ್ತವಾಗಿ ಮಾತನಾಡಲು ಮತ್ತು ಸ್ಪಷ್ಟವಾಗಿ ಯೋಚಿಸಲು ಸಹಾಯ ಮಾಡುತ್ತದೆ. ಇದು ಸಂಬಂಧಗಳು ಮತ್ತು ವೈಯಕ್ತಿಕ ಬೆಳವಣಿಗೆಗೆ ಒಳ್ಳೆಯದು.

Continue Reading

ಧಾರ್ಮಿಕ

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Koppala News: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಮಹಾರಥೋತ್ಸವವು ಶುಕ್ರವಾರ ಅಪಾರ ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.

VISTARANEWS.COM


on

Sri Huligemma Devi Maharathotsava in Hulagi
Koo

ಕೊಪ್ಪಳ: ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಅಪಾರ ಭಕ್ತಸಾಗರದ ನಡುವೆ ಮಹಾರಥೋತ್ಸವವು ವಿಜೃಂಭಣೆಯಿಂದ (Koppala News) ಜರುಗಿತು.

ಇದನ್ನೂ ಓದಿ: Old Students Association: ಸರ್ಕಾರಿ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ, ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಲು ಆದೇಶ

ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಹುಲಗಿಯ ಶ್ರೀ ಹುಲಿಗೆಮ್ಮ ದೇವಿಯ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರದಿಂದ ಜೂನ್ 3 ರ ಸೋಮವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶುಕ್ರವಾರ ಸಂಜೆ ಮಹಾರಥೋತ್ಸವವು ಲಕ್ಷಾಂತರ ಭಕ್ತಾಧಿಗಳ ಸಮೂಹದ ನಡುವೆ ಅದ್ದೂರಿಯಾಗಿ ನಡೆಯಿತು.

ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗಿ

ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವದಲ್ಲಿ ಭಕ್ತರ ಉಧೋ ಉಧೋ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತವೃಂದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ, ಭಕ್ತಿ ಭಾವ ಮೆರೆದರು. ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಆಂಧ್ರಪ್ರದೇಶದ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳ ಸುಮಾರು ಐದು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಜಾತ್ರೆಗೆ ಆಗಮಿಸಿ, ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು.

ರಥೋತ್ಸವ ಸಂದರ್ಭದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಸುತಗುಂಡಿ ಹಾಗೂ ಕೊಪ್ಪಳ ಮತ್ತು ಗಂಗಾವತಿ ಡಿವೈಎಸ್ಪಿಗಳು ಹಾಗೂ ಇತರರು ಉಪಸ್ಥಿತರಿದ್ದರು

Continue Reading

ಧಾರ್ಮಿಕ

Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!

ಮನೆಯನ್ನು ಸ್ವಚ್ಛ ಮಾಡುವಾಗಲೂ ಪಾಲಿಸಬೇಕಾದ ವಾಸ್ತು ನಿಯಮಗಳಿವೆ. ಅದರಲ್ಲೂ ಮನೆ ಒರೆಸುವ ಕುರಿತು ವಾಸ್ತು ಶಾಸ್ತ್ರದಲ್ಲಿ (Vastu Tips) ಏನು ಹೇಳಿದೆ ಗೊತ್ತೇ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಮನೆಯ (home) ಒಳಾಂಗಣ, ಹೊರಾಂಗಣ ಸ್ವಚ್ಛತೆ (cleaning) ಬಗ್ಗೆ ನಾವೆಲ್ಲ ಅತೀ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಇದರಲ್ಲೂ ವಾಸ್ತು ನಿಯಮ (Vastu Tips) ಪಾಲಿಸುವುದು ಬಹು ಮುಖ್ಯ ಎಂಬುದನ್ನು ಮರೆಯಬಾರದು. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಮನೆಯಿಂದ ಕಸ (garbage) ಹೊರಗೆ ಹಾಕುವ, ಕೊಳಕು ನೀರು ಹೊರ ಚೆಲ್ಲುವ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ನಿಯಮಗಳಿವೆ. ಇದನ್ನು ಪಾಲಿಸಿದರೆ ಮನೆಯ ವಾಸ್ತುವಿಗೆ ಬಹಳ ಒಳ್ಳೆಯದು.

ಲಕ್ಷ್ಮಿ ದೇವಿಯು ಯಾವಾಗಲೂ ಸ್ವಚ್ಛವಾಗಿರುವ ಮನೆಗಳಲ್ಲಿ ನೆಲೆಸುತ್ತಾಳೆ. ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಒರೆಸುವುದು ನಿತ್ಯ ಮಾಡಲೇಬೇಕಾದ ಸಾಮಾನ್ಯ ವಿಷಯ. ಮನೆಯ ಕೊಳೆಯನ್ನು ನಿತ್ಯ ಶುಚಿಗೊಳಿಸುವುದರಿಂದ ಮನೆಯಿಂದ ರೋಗಗಳನ್ನು ದೂರ ಮಾಡಬಹುದು ಮತ್ತು ಲಕ್ಷ್ಮಿ ದೇವಿಯು ಮನೆಯಲ್ಲಿ ಸಂತೋಷವಾಗಿ ನೆಲೆಯಾಗುವಂತೆ ಮಾಡಬಹುದು. ವಾಸ್ತು ಶಾಸ್ತ್ರದಲ್ಲಿ ನೆಲ ಒರೆಸುವ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಮನೆಯ ಸ್ವಚ್ಛತೆ ಮಾಡುವ ನೆಲ ಒರೆಸುವಾಗ ಕೆಲವು ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬಾರದು.


ಮಾಪ್ ಅನ್ನು ಬಾಲ್ಕನಿಯಲ್ಲಿ ಇಡಬೇಡಿ

ಮನೆಯ ಬಾಲ್ಕನಿಯಲ್ಲಿ ಮಾಪ್ ಅನ್ನು ಎಂದಿಗೂ ನಿಲ್ಲಿಸಬಾರದು. ಮಾಪ್ ಮಾಡುವಾಗ ಬಟ್ಟೆಯನ್ನು ಹಿಸುಕಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿ. ಇದನ್ನು ಮಾಡದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.

ತಕ್ಷಣ ಮಾಪ್ ಮಾಡಬಾರದು

ಮನೆಯಿಂದ ಯಾರಾದರೂ ಹೊರಗೆ ಹೋಗುತ್ತಿದ್ದರೆ ಅವರು ಹೋದ ತಕ್ಷಣ ನೆಲವನ್ನು ಒರೆಸಬಾರದು. ಹೀಗೆ ಮಾಡುವುದರಿಂದ ಹೊರಗೆ ಹೋದವರ ಆರೋಗ್ಯ ಕೆಡುತ್ತದೆ. ಅವರು ತಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.

ಮುರಿದ ಬಕೆಟ್ ಬಳಸದಿರಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನೆಲವನ್ನು ಒರೆಸುವಾಗ ತಪ್ಪಾಗಿಯೂ ಮುರಿದ ಬಕೆಟ್‌ನಲ್ಲಿ ನೆಲವನ್ನು ಒರೆಸದಂತೆ ವಿಶೇಷ ಕಾಳಜಿ ವಹಿಸಿ. ಮುರಿದ ಬಕೆಟ್ ಕೆಂಪು ಬಣ್ಣದಲ್ಲಿರಬಾರದು. ಅಪ್ಪಿತಪ್ಪಿಯೂ ಮಧ್ಯಾಹ್ನ ನೆಲವನ್ನು ಒರೆಸಬಾರದು. ಬೆಳಗ್ಗೆ ನೆಲವನ್ನು ಒರೆಸುವುದು ಸರಿಯಾದ ಸಮಯ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ Vastu Tips: ಮನೆಯಲ್ಲಿ ಚಪ್ಪಲಿ, ಶೂ ಎಲ್ಲೆಂದರಲ್ಲಿ ಇಟ್ಟು ಸಂಕಷ್ಟ ಮೈಮೇಲೆ ಎಳೆದುಕೊಳ್ಳಬೇಡಿ!

ಹೊಸ್ತಿಲಲ್ಲಿ ನೀರು ಸುರಿಯಬಾರದು

ಹೆಚ್ಚಿನ ಜನರು ಇದನ್ನು ಮಾಡುತ್ತಾರೆ. ನೆಲವನ್ನು ಒರೆಸಿದ ಅನಂತರ ಅವರು ಹೊಸ್ತಿಲಲ್ಲಿ ಕೊಳಕು ನೀರನ್ನು ಸುರಿಯುತ್ತಾರೆ. ಆದರೆ ಇದನ್ನು ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಮನೆಯ ಹೊಸ್ತಿಲನ್ನು ಲಕ್ಷ್ಮಿ ದೇವಿಯ ಪ್ರವೇಶ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಕೊಳಕು ನೀರನ್ನು ಸುರಿದರೆ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು.

Continue Reading
Advertisement
Chikballapur lok sabha constituency
ಪ್ರಮುಖ ಸುದ್ದಿ15 mins ago

Chikballapur lok sabha constituency : ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ತರುವರೇ ಸುಧಾಕರ್​?

Bangalore Rain
ಕರ್ನಾಟಕ39 mins ago

Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

Kannada New Movie
ಸಿನಿಮಾ42 mins ago

Kannada New Movie: ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರದಲ್ಲಿ ಒಂದಾದ ದುನಿಯಾ ವಿಜಯ್, ಶ್ರೇಯಸ್ ಮಂಜು

Koppal Lok Sabha Constituency
ಕೊಪ್ಪಳ44 mins ago

Koppal Lok Sabha Constituency: ಮಾಜಿ ಶಾಸಕರ ಪುತ್ರರ ನಡುವಿನ ಸ್ಪರ್ಧೆಯಲ್ಲಿ ಯಾರಾಗುವರು ಸಂಸದ?

kolar lok sabha constituency
ಪ್ರಮುಖ ಸುದ್ದಿ1 hour ago

Kolar lok sabha constituency : ಕೋಲಾರವನ್ನು ವಾಪಸ್​ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದೇ ಕಾಂಗ್ರೆಸ್​

Money Guide
ಮನಿ-ಗೈಡ್1 hour ago

Money Guide: ಗೃಹಸಾಲದ ಕಂತು ಪೂರ್ತಿಯಾಯ್ತೆ? ನಿಲ್ಲಿ, ನಿಮ್ಮ ಜವಾಬ್ದಾರಿ ಇನ್ನೂ ಇದೆ!

mandya lok sabha constituency
ಪ್ರಮುಖ ಸುದ್ದಿ1 hour ago

Mandya Lok Sabha Constituency : ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಕುಮಾರಸ್ವಾಮಿಗೆ ಗೆಲುವು ಸಿಗುವುದೇ?

Bellary Lok Sabha Constituency
ಬಳ್ಳಾರಿ2 hours ago

Bellary Lok Sabha Constituency: ಶ್ರೀರಾಮುಲು vs ತುಕಾರಾಮ್;‌ ಗಣಿ ನಾಡಲ್ಲಿ ಯಾರು ಧಣಿ?

YouTube channels
ವೈರಲ್ ನ್ಯೂಸ್2 hours ago

YouTube channels: ಅತಿ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಟಾಪ್‌ 10 ಯುಟ್ಯೂಬ್‌ ಚಾನೆಲ್‌ಗಳಿವು!

Highest Paying Companies
ವಾಣಿಜ್ಯ2 hours ago

Highest Salary Paying Companies: ಎಂಜಿನಿಯರ್‌ಗಳಿಗೆ ಅತೀ ಹೆಚ್ಚು ಸಂಬಳ ಕೊಡುವ ಕಂಪನಿಗಳ ಪಟ್ಟಿ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ11 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌