Sadguru Column : ಹಿಂದು ಒಂದು `ಇಸಂ' ಅಲ್ಲ, ಅದೊಂದು ಭೌಗೋಳಿಕ, ಸಂಸ್ಕೃತಿಯ ಐಡೆಂಟಿಟಿ - Vistara News

ಧಾರ್ಮಿಕ

Sadguru Column : ಹಿಂದು ಒಂದು `ಇಸಂ’ ಅಲ್ಲ, ಅದೊಂದು ಭೌಗೋಳಿಕ, ಸಂಸ್ಕೃತಿಯ ಐಡೆಂಟಿಟಿ

Sadguru Column : ಸದ್ಗುರು ಜಗ್ಗಿ ವಾಸುದೇವ್‌ ಅವರು ಹಿಂದುತ್ವವನ್ನು ಇಲ್ಲಿ ಪರಿಪೂರ್ಣವಾಗಿ ವಿಶ್ಲೇಷಣೆ ಮಾಡಿದ್ದಾರೆ. ಯಾಕೆ ಹಿಂದುತ್ವ ಒಂದು ಇಸಂ ಅಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳನ್ನು ನೀಡಿದ್ದಾರೆ. ಯಾಕೆ ಹಿಂದು ಧರ್ಮ ಎಲ್ಲವನ್ನೂ ಒಳಗೊಂಡಿದೆ ಎನ್ನುವುದಕ್ಕೂ ಉತ್ತರ ನೀಡಿದ್ದಾರೆ.

VISTARANEWS.COM


on

Sadguru Column hindu god
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Sadhuru Jaggi Vasudev

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ವಾಸ್ತವದಲ್ಲಿ ಹಿಂದುತ್ವ ಎಂಬುದಿಲ್ಲ (Hindutva does not exist). ಈ ಪದ ಹಾಗೂ ಕಲ್ಪನೆಯು ಇತ್ತೀಚಿನದು. ಹಿಂದು ನಾಗರಿಕತೆಯು ಸಿಂಧು ನದಿಯ ತೀರದಲ್ಲಿ ಹುಟ್ಟಿಕೊಂಡಿತು (Sadguru Column). ಇಂದು ಅದನ್ನು ಆಂಗ್ಲ ಭಾಷೆಯಲ್ಲಿ ಇಂಡಸ್ ಎಂದು ಕರೆದರು. ಪರ್ಷಿಯನ್ನರು ಬಂದಾಗ ಹಿಂದು ಎಂಬ ಪದವನ್ನು ಬಳಸಿದರು. ಸಿಂಧು ನದಿಯಾಚೆ ನೆಲೆಸಿದವರನ್ನು ಸೂಚಿಸಲು ಸಂಸ್ಕೃತ ಮೂಲದ ಸಿಂಧು ಎಂಬುದು ಹಿಂದು ಎಂದಾಯಿತು. ಮೂಲಭೂತವಾಗಿ, ಹಿಂದು ಎನ್ನುವುದು ಒಂದು ಭೌಗೋಳಿಕ ಹಾಗೂ ಸಂಸ್ಕೃತಿಯ ಗುರುತಷ್ಟೆ. ಅದನ್ನು ಪ್ರತ್ಯೇಕವಾಗಿ ಸಂಘಟಿಸುವ ಉದ್ದೇಶ ಎಂದಿಗೂ ಇರಲಿಲ್ಲ. ಮೂಲಭೂತವಾಗಿ ಈ ಪರಿಪೂರ್ಣ ಸಂಸ್ಕೃತಿಯು ವ್ಯಕ್ತಿಯ ಪೂರ್ಣ ಸಾಮರ್ಥ್ಯವನ್ನು ಅರಿಯುವ ನಿಟ್ಟಿನಲ್ಲಿ ಸ್ಥಾಪಿಸಲ್ಪಟ್ಟದ್ದು.

Sadguru Column hindu Dharma

ಹಿಂದು, ಎಂದಿಗೂ ಒಂದು “ಇಸಂ” ಆಗಿರಲಿಲ್ಲ (Hinduism). ಈ ಭೌಗೋಳಿಕ ಹಾಗೂ ಸಂಸ್ಕೃತಿಯ ಅನನ್ಯತೆಯನ್ನು ಒಂದು ಧರ್ಮವನ್ನಾಗಿ ಸಂಘಟಿಸುವ ಪ್ರಯತ್ನವು ಇದುವರೆಗೂ ಫಲಕಾರಿಯಾಗಿಲ್ಲ. ಏಕೆಂದರೆ ಸನಾತನ ಧರ್ಮವೆಂದು ಕರೆಯುವ ಹಿಂದು ಪದ್ಧತಿಯ ಜೀವನ ಅಥವಾ ಸಾರ್ವತ್ರಿಕ ನಿಯಮವು ಎಲ್ಲ ಗುಣಗಳನ್ನೂ ಒಳಗೊಂಡಿದ್ದಾಗಿದೆ ಮತ್ತು ಯಾವುದನ್ನೂ ಅದರಿಂದ ತೆಗೆದು ಹಾಕಿಲ್ಲ. ಹಿಂದು ಮಾದರಿಯ ಜೀವನವು ಒಂದು ಸಂಘಟಿತ ನಂಬಿಕೆಯ ಪದ್ಧತಿಯಲ್ಲ. ಅದೊಂದು ಮುಕ್ತಿ ಮಾರ್ಗದ ವಿಜ್ಞಾನವಾಗಿದೆ.

ಪ್ರಪಂಚದ ಘರ್ಷಣೆಗಳನ್ನು ಸದಾ ಒಳ್ಳೆಯದರ ವಿರುದ್ಧ ಕೆಟ್ಟದ್ದು ಎಂದು ಬಿಂಬಿಸಲಾಗಿದೆ. ವಾಸ್ತವದಲ್ಲಿ ಈ ಘರ್ಷಣೆಯು – ಒಬ್ಬರ ನಂಬಿಕೆಯ ವಿರುದ್ಧ ಇನ್ನೊಬ್ಬರ ನಂಬಿಕೆಯದ್ದಾಗಿದೆ. ಆದರೆ ಈ ಸಂಸ್ಕೃತಿಯಲ್ಲಿ ಪುರೋಹಿತಶಾಹಿ ದೇವಪ್ರಭುತ್ವವಾದಿ ರಾಜ್ಯಗಳಿರಲಿಲ್ಲ. ಆಳುವವನಿಗೆ ಅವನದೇ ಆದ ಮತಧರ್ಮವಿದ್ದರೆ, ಪ್ರಜೆಗಳು ತಮ್ಮ ಆಯ್ಕೆಯ ಮತಧರ್ಮವನ್ನು ಅನುಸರಿಸಬಹುದಾಗಿತ್ತು. ಅಲ್ಲಿ ಘರ್ಷಣೆಯೇ ಇರಲಿಲ್ಲ. ಜನರು ಮತಧರ್ಮವನ್ನು ಒಂದು ಸಂಘಟಿತ ಪ್ರಕ್ರಿಯೆಯಾಗಿ ನೋಡಲಿಲ್ಲ.

Sadguru Column : ಬೇರೆ ಧರ್ಮಗಳು ವಿರೋಧಿಸಿದವರನ್ನು ಮೊದಲು ಹೇಳಿದ್ದೇ ʻಸಾಯಿಸಿʼ!

ಪ್ರಪಂಚದ ಇತರ ಸಂಸ್ಕೃತಿಗಳಲ್ಲಿ, ಆ ಕಾಲದಲ್ಲಿ ಪ್ರಸ್ತುತದಲ್ಲಿದ್ದ ಯಾವುದೇ ಸಂಘಟಿತ ಮತಧರ್ಮದ ವಿರುದ್ಧ ಮಾತನಾಡಿದರೆ, ಜನರ ಮೊದಲ ಪ್ರತಿಕ್ರಿಯೆ, ಸಾಯಿಸಿ!!! ಎಂದಾಗಿತ್ತು. ಸಾಕ್ರಟೀಸ್, ಮನ್ಸೂರ್ ಅಥವಾ ಜೀಸಸ್ ರಂತಹ ಎಷ್ಟೋ ಜನ ಪ್ರಸಿದ್ಧರನ್ನು ಇದೇ ಕಾರಣಕ್ಕಾಗಿಯೇ ಕೊಲ್ಲಲಾಗಿದ್ದು. ಪ್ರಪಂಚದ ಪಾಶ್ಚಾತ್ಯ ಭಾಗಗಳಲ್ಲಿ ಸಾಧಕರು ಬುದ್ಧಿವಂತಿಕೆಯಿಂದ ಮೌನವಾಗಿದ್ದು, ಸಾಧನೆಯಲ್ಲಿ ತೊಡಗಿರುತ್ತಿದ್ದರು. ಏನಾದರು ಜೋರಾಗಿ ಧ್ವನಿ ಎತ್ತಿದರೆ ಮರಣಶಿಕ್ಷೆ. ಯೂರೋಪಿನಲ್ಲಿ ಎರಡು ಮಿಲಿಯನ್ ಸ್ತ್ರೀಯರನ್ನು ಸುಟ್ಟು ಹಾಕಲಾಯಿತು, ಏಕೆಂದರೆ ಸಂಘಟಿತ ಮತಧರ್ಮದ ವಿರುದ್ಧ ಅವರ ಪ್ರದರ್ಶನವು ಒಂದು ಬೆದರಿಕೆ ಎಂದು ಪರಿಗಣಿಸಲಾಯಿತು.

Sadguru Column Jesus Christ

ಜೀಸಸ್ ಬಂಡಾಯವಾಗುವಂತದೇನನ್ನೂ ಮಾಡಲಿಲ್ಲ. ಪೂಜಾ ಮಂದಿರಗಳನ್ನು ಕೆಡವಲು ಹೇಳಲಿಲ್ಲ, ದೇವರುಗಳನ್ನು ಸ್ಥಾನಪಲ್ಲಟಗೊಳಿಸಿರೆಂದಾಗಲಿ, ಅಥವಾ ಮತಧರ್ಮವನ್ನು ಬದಲಾಯಿಸಿ ಎಂದಾಗಲಿ ಕರೆ ನೀಡಲಿಲ್ಲ. ಅವರು ಕೇವಲ ದೇವಮಂದಿರದಾಚೆ ತಮ್ಮ ವ್ಯವಹಾರಗಳನ್ನು ಮಾಡಿರೆಂದರು. ಅದಕ್ಕಾಗಿ ಅವರಿಗೆ ಘೋರ ಶಿಕ್ಷೆ ನೀಡಲಾಯಿತು.

Sadguru Column : ಬುದ್ಧ ದೇವರಿಲ್ಲ ಎಂದಾಗಲೂ ವಿರೋಧಿಸಲಿಲ್ಲ

ಜೀಸಸ್‌ಗಿಂತಲೂ ಐನೂರು ವರ್ಷಗಳ ಹಿಂದೆ ಗೌತಮಬುದ್ಧನು, ಹಿಂದು ದೇವರುಗಳನ್ನು ಪರಿಹಾಸ್ಯ ಮಾಡಿ, ನೀವು ಸರ್ಪಗಳು, ಮರಗಳು, ಗೋವುಗಳ ಆರಾಧಕರಾಗಿದ್ದೀರಿ, ನಿಮಗೆ ದೇವರೆಂದರೆ ಏನೆಂಬುದೇ ತಿಳಿದಿಲ್ಲ ಎಂದ. ಅದಕ್ಕೆ ಉತ್ತರವಾಗಿ ಜನರು ಒಬ್ಬನೇ ದೇವನೆಂಬುದು ನಮಗೂ ತಿಳಿದಿದೆ, ಆದರೆ ನಾವು ವಿಭಿನ್ನತೆಯನ್ನು ಆನಂದಿಸುತ್ತೇವೆ ಎಂದರು. ಮುಂದುವರಿದು ಗೌತಮನು, ದೇವರೇ ಇಲ್ಲ ಎಂದನು. ಹಿಂದುಗಳು ಹಿಮ್ಮೆಟ್ಟಿದರು. ಉಪನಿಷತ್ತುಗಳ ಮೊರೆ ಹೊಕ್ಕರು, “ನೋಡಿಲ್ಲಿ, ನಮ್ಮ ಉಪನಿಷತ್ತುಗಳು ದೇವರಿಲ್ಲವೆಂದು ಹೇಳುತ್ತವೆಯಾದರೂ, ಆತ್ಮ ಎಂಬುದಿದೆ ಹಾಗೂ ಸಾರ್ವತ್ರಿಕ ಆತ್ಮವಾದ ಪರಮಾತ್ಮ ಎಂಬುದಿದೆ ಎಂದು ಸಾರುತ್ತದೆ” ಎಂದರು. ಗೌತಮಬುದ್ಧನು “ಆತ್ಮವೂ ಇಲ್ಲ, ಪರಮಾತ್ಮವೂ ಇಲ್ಲ, ನೀವು ಅನಾತ್ಮ” ಎಂದನು.

Sadguru Column buddha

ಹೀಗೆ ಆತನು ಎಲ್ಲವನ್ನೂ ವಿರೋಧಿಸಿ ಪರಿಹಾಸ್ಯ ಮಾಡಿದರೂ ಅವನಿಗೆ ಯಾರೂ ಕಲ್ಲು ಹೊಡೆಯಲಿಲ್ಲ. ವಿಷ ಉಣಿಸಲಿಲ್ಲ ಅಥವಾ ಶಿಲುಬೆಗೇರಿಸಲಿಲ್ಲ. ಬದಲಿಗೆ, ಅವನೊಡನೆ ವಾದಿಸಿದರು. ತಿಂಗಳಾನುಗಟ್ಟಲೆ ವಾದವಿವಾದ ನಡೆದು ವಾದದಲ್ಲಿ ಸೋತಾಗ ಅವನ ಶಿಷ್ಯರಾದರು! ಏಕೆಂದರೆ ಅನ್ವೇಷಣೆಯು ಸತ್ಯವಾದುದು. ಜನರು ಕುಳಿತು ‘ನಾವು ತಿಳಿದುಕೊಂಡಿರುವುದು ಸರಿಯೋ ಅಥವಾ ಅವರ ವಾದವು ಸರಿಯೋ’ ಎಂದು ಸಮಾಲೋಚಿಸುತ್ತಿದ್ದರು. ಅದೊಂದು ವಿಭಿನ್ನ ರೀತಿಯ ಪರಿಶೋಧನೆ. ಜನರು ಜ್ಞಾನಕ್ಕಾಗಿ ಅನ್ವೇಷಿಸುತ್ತಿದ್ದರು. ಅವರು ಕೇವಲ ತಮ್ಮ ನಂಬಿಕೆಯೇ ಸರಿಯೆಂದು ಸಾಧಿಸಲು ಪ್ರಯತ್ನಿಸಲಿಲ್ಲ. ಹಿಂದೂಗಳ ಜೀವನಶೈಲಿ ನಂಬಿಕೆಯದಲ್ಲ. ಕೆಲವರು ದೇವರನ್ನು ನಂಬಿದರೆ ಮತ್ತೆ ಕೆಲವರು ದೇವರಿಲ್ಲವೆಂಬ ಆಯ್ಕೆಯನ್ನೂ ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆರಾಧನೆಯ ಮಾರ್ಗವಿದೆ, ಮುಕ್ತಿಯ ಮಾರ್ಗವಿದೆ. ಒಂದೇ ಕುಟುಂಬದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಇಚ್ಛೆಯ ದೇವರುಗಳನ್ನು ಪೂಜಿಸಬಹುದು, ಪೂಜಿಸದೆಯೂ ಒಳ್ಳೆಯ ಹಿಂದುವಾಗಬಹುದು.

ನಮ್ಮ ಸಂಸ್ಕೃತಿಯಲ್ಲಿ ಮನುಷ್ಯರ ಜೀವನದ ಏಕಮಾತ್ರ ಗುರಿಯೆಂದರೆ ಮುಕ್ತಿ, ಸೀಮಿತವನ್ನು ಮೀರಿ ಹೋಗುವುದು. ಈ ಸಂಸ್ಕೃತಿಯಲ್ಲಿ ದೇವರೇ ಅಂತಿಮವೆಂದು ಪರಿಗಣಿಸುವುದಿಲ್ಲ. ಜಗತ್ತಿನಲ್ಲಿ ಹಿಂದು ಜನತೆ ಮಾತ್ರ – ದೇವರಿಲ್ಲದ ಕಲ್ಪನೆಗೂ ಮಾನ್ಯತೆ ನೀಡಿದೆ. ನೀವೊಂದು ಕಲ್ಲನ್ನಾಗಲಿ, ಗೋವನ್ನಾಗಲಿ, ನಿಮ್ಮ ತಾಯಿಯನ್ನಾಗಲಿ ಪೂಜಿಸಬಹುದು – ನಿಮಗಿಷ್ಟವಾದುದನ್ನು ಪೂಜಿಸಬಹುದು. ಬೇರೆಲ್ಲ ಕಡೆ ದೇವರು ನಮ್ಮನ್ನು ಸೃಷ್ಟಿಸಿದ ಎಂದು ಜನರು ನಂಬುತ್ತಾರೆ. ಭಾರತದಲ್ಲಿ, ನಾವು ದೇವರನ್ನು ಸೃಷ್ಟಿಸಿದೆವೆಂದು’, ನಮಗೆ ತಿಳಿದಿದೆ. ಅದಕ್ಕಾಗಿಯೇ ನಮಗೆ ಯಾವ ರೀತಿಯ ದೇವರನ್ನಾದರೂ ಸೃಷ್ಟಿಸಲು ಸ್ವಾತಂತ್ರ್ಯವಿದೆ.

ಇದನ್ನೂ ಓದಿ: Sadguru Column : ಬದುಕಿನಲ್ಲಿ ಆಟವಾಡುವುದರ ಮಹತ್ವ ತುಂಬ ದೊಡ್ಡದು

ಪ್ರಾಚ್ಯ ದೇಶಗಳಲ್ಲಿ ಆಧ್ಯಾತ್ಮಿಕತೆ ಹಾಗೂ ಮತಧರ್ಮ ಇವೆರಡೂ ಎಂದಿಗೂ ಸಂಘಟಿತ ಪ್ರಕ್ರಿಯೆಯಾಗಿರಲಿಲ್ಲ – ಕೇವಲ ಸರ್ವರಿಗೂ ಆಧ್ಯಾತ್ಮಿಕತೆ ದೊರೆಯುವಂತೆ ಮಾಡುವುದಾಗಿತ್ತು. ಗೆಲುವು ಸಾಧಿಸುವುದಕ್ಕಲ್ಲ. ರೈತನು ತನ್ನ ನೇಗಿಲನ್ನು ಪೂಜಿಸಿದರೆ, ಮೀನುಗಾರನು ತನ್ನ ದೋಣಿಯನ್ನು ಪೂಜಿಸಿದನು; ಜನರು ತಮ್ಮ ಜೀವನದ ಪ್ರಮುಖ ವಿಷಯಕ್ಕೆ ಸಂಬಂಧ ಕಲ್ಪಿಸಿ ಅದನ್ನು ಪೂಜಿಸಲು ಮೊದಲಾದರು. ಅದು ಒಳ್ಳೆಯದೇ, ಮೂಲಭೂತವಾಗಿ, ಪ್ರಾಚ್ಯ ರಾಷ್ಟ್ರಗಳಲ್ಲಿ ಮತಧರ್ಮವು ನಿಮ್ಮನ್ನು ಕುರಿತದ್ದೇ ಹೊರತು ದೇವರನ್ನು ಕುರಿತದ್ದಲ್ಲ. ಮತಧರ್ಮವು ಮುಕ್ತಿಯ ಕುರಿತದ್ದಾಗಿದೆ. ದೇವರು ಕೇವಲ ಮತ್ತೊಂದು ಮುನ್ನಡೆಯ ಸೋಪಾನವಷ್ಟೇ – ಅದನ್ನು ನೀವು ಅಂತಿಮ ಮುಕ್ತಿಗೆ ಉಪಯೋಗಿಸಬಹುದು ಅಥವಾ ಬಿಡಬಹುದು. ಈ ಸಂಸ್ಕೃತಿಯಲ್ಲಿ ದೇವರ ಪ್ರಾಮುಖ್ಯತೆಗಿಂತಲೂ, ಮನುಷ್ಯನ ಯೋಗಕ್ಷೇಮ ಮತ್ತು ಸ್ವಾತಂತ್ರ್ಯಕ್ಕೆ ಹೆಚ್ಚು ಮಾನ್ಯತೆ ನೀಡಲಾಗಿದೆ.

ನಮ್ಮದೊಂದು ದೇವರಿಲ್ಲದ ಆದರೆ ಭಕ್ತಿಯುತ ದೇಶ. “ದೇವರಿಲ್ಲದ” ಎನ್ನುವುದರರ್ಥ, ಮನುಷ್ಯರು ದೇವರುಗಳ ಆಯ್ಕೆಯನ್ನು ಮಾಡಿಕೊಳ್ಳುವುದಷ್ಟೇ ಅಲ್ಲದೆ, ಅವರಿಗೆ ಸಂಬಂಧಿಸಿದ ದೇವರನ್ನು ಸೃಷ್ಟಿಸಿಕೊಳ್ಳಬಹುದಾದ ಸ್ವಾತಂತ್ರ್ಯವಿದೆ. ಆದ್ದರಿಂದ ದೇವರನ್ನು ಸೃಷ್ಟಿಸುವ ತಂತ್ರಜ್ಞಾನ, ವಿಜ್ಞಾನವನ್ನು ವಿಕಸಿತಗೊಳಿಸಿ ನಾನಾ ರೀತಿಯ ರೂಪಗಳು, ಶಕ್ತಿರೂಪಗಳು ಹಾಗೂ ಕ್ಷೇತ್ರಗಳನ್ನು ಪವಿತ್ರಗೊಳಿಸಲಾಗಿದೆ.

Sadguru Column Hindu

Sadguru Column : ವ್ಯಕ್ತಿಯಲ್ಲಿ ಪೂಜ್ಯ ಭಾವನೆ ಸೃಷ್ಟಿಸುವ ಪ್ರಕ್ರಿಯೆಯೇ ದೇವರ ಕಲ್ಪನೆ

ದೇವರು ಎಂಬ ಕಲ್ಪನೆಯ ಮೂಲೋದ್ದೇಶವೆಂದರೆ, ವ್ಯಕ್ತಿಯಲ್ಲಿ ಭಕ್ತಿ, ಪೂಜ್ಯ ಭಾವನೆಯನ್ನು ಸೃಷ್ಟಿಸುವುದು. ನೀವು ಏನನ್ನು ಆರಾಧಿಸುತ್ತೀರೆಂಬುದು ಮುಖ್ಯವಲ್ಲ. ಒಂದನ್ನು ಇಷ್ಟಪಟ್ಟು ಮತ್ತೊಂದನ್ನು ಇಷ್ಟಪಡದೇ ಇರುವುದಲ್ಲ. ನಿಮ್ಮ ಜೀವನದ ಗುಣಮಟ್ಟವನ್ನು ಭಕ್ತಿಭಾವನೆಯಿಂದ ಯೋಜಿಸಿಕೊಂಡಾಗ ನೀವು ಜೀವನಕ್ಕೆ ಹೆಚ್ಚು ಸ್ಪಂದಿಸುವಿರಿ ಅಥವಾ ಜೀವನವನ್ನು ಗ್ರಹಿಸುವಿರಿ. ನಿಮ್ಮ ಜೀವನವು ಮಹತ್ತರವಾಗಿರುತ್ತದೆ. ಒಂದು ರೀತಿಯಲ್ಲಿ ಹಿಂದು ಎಂದು ಹೇಳಲಾಗುವ ಈ ಸಮಗ್ರ ಸಂಸ್ಕೃತಿಯು ಪ್ರತಿ ವ್ಯಕ್ತಿಯು ತನ್ನ ಜೀವನದ ಮೂಲಗುರಿಯಾಗಿ ಪರಮಮುಕ್ತಿಯನ್ನು ಪಡೆಯುವತ್ತ ಶ್ರಮಿಸುವ ಒಂದು ವಿಶಿಷ್ಟ ಆಧ್ಯಾತ್ಮಿಕ ಲಕ್ಷಣವಾಗಿದೆ.

ಭಾರತದ ಅಧ್ಯಾತ್ಮವನ್ನು ಪರಿಶೋಧಿಸಿದರೆ, ಅದು ಅಚ್ಚರಿಗೊಳಿಸುವಂತಹದು. ಇದು ನಂಬಿಕೆ ಪದ್ಧತಿಯಿಂದ ಬಂದದ್ದಲ್ಲ, ಆದರೆ ಭೌತಿಕವನ್ನೂ ಮೀರಿದ ಆಯಾಮಗಳ ಪರಿಶೋಧನೆಯ ವೈಜ್ಞಾನಿಕ ಸಾಧನೆಗಳ ಮೂಲಕ ಸಂಭವಿಸಿರುವುದು.

ಭಾರತವು ಒಂದು ಸಾಧ್ಯತೆಯ ಸಂಗತಿಯಾಗಿದೆ. ಅದೊಂದು ಅನೇಕ ಸಂಸ್ಕೃತಿಗಳ, ಜನಾಂಗಗಳ, ಧರ್ಮಗಳ ಹಾಗೂ ಭಾಷೆಗಳ ಕಲಸುಮೇಲೋಗರವಾಗಿದೆ. ಇವೆಲ್ಲವನ್ನೂ ಒಂದೇ ಅನ್ವೇಷಣೆಯ ಸೂತ್ರದಿಂದ ಬಂಧಿಸಲಾಗಿದೆ. ಮಹತ್ತರವಾದ ಮುಕ್ತಿಯ ಹಂಬಲವನ್ನು ದೇಶದ ಜನರಲ್ಲಿ ಪೋಷಿಸಲಾಗಿದೆ.

ಭಾರತವನ್ನು ಅಧ್ಯಯನ ಮಾಡಲಾಗುವುದಿಲ್ಲ, ಆದರೆ ವ್ಯಕ್ತಿಯು ಅದರಲ್ಲಿ ನೆನೆಯಬೇಕು, ಹಾಗೆಯೇ ಕರಗಿ ಹೋಗಬೇಕು. ಇದೊಂದೇ ಮಾರ್ಗ. ಅದರ ಅಧ್ಯಯನ ಅಸಾಧ್ಯ. ಭಾರತವನ್ನು ಕುರಿತ ಪಾಶ್ಚಾತ್ಯ ದೇಶಗಳ ವಿಶ್ಲೇಷಣೆಯು ಇನ್ನೂ ಪ್ರಾರಂಭಾವಸ್ಥೆಯಲ್ಲಿದೆ, ಏಕೆಂದರೆ ಭಾರತದ ಲಕ್ಷಣದ ವಿಶ್ಲೇಷಣೆಯು ದೇಶವನ್ನು ಅತ್ಯಂತ ತಪ್ಪುಗ್ರಹಿಕೆಯ ತೀರ್ಮಾನದತ್ತ ಒಯ್ಯುವಂತೆ ಮಾಡುತ್ತಿದೆ. ಭಾರತದ ಸಂಸ್ಕೃತಿ ಅವ್ಯವಸ್ಥಿತವಾಗಿ ವರ್ಧಿಸುತ್ತಿದ್ದರೂ ಸಹ ಅದು ಸುಸಂಘಟಿತ ಹಾಗೂ ಸಮೃದ್ಧವಾಗಿದೆ.

ಭೂಮಿಯ ಮೇಲಣ ಈ ಪ್ರಾಚೀನ ದೇಶವು, ಇದರ ಪ್ರಖ್ಯಾತ ಪೌರರ ಆಧಾರ ತತ್ತ್ವಗಳ ಮೇಲಾಗಲಿ ಅಥವಾ ನಂಬಿಕೆಗಳ ಮೇಲಾಗಲಿ ಅಥವಾ ಅವರ ಮಹತ್ವಾಕಾಂಕ್ಷೆಗಳ ಮೇಲಾಗಲಿ ನಿರ್ಮಿತವಾಗಿಲ್ಲ. ಇದು ಅನ್ವೇಷಕರ ದೇಶವಾಗಿದೆ, ಐಶ್ವರ್ಯ ಮತ್ತು ಸುಖ ಸಂತೋಷದ ಅನ್ವೇಷಣೆಯಲ್ಲ, ಆದರೆ ವಿಮೋಚನೆಯ ಅನ್ವೇಷಣೆ – ಆರ್ಥಿಕ ಅಥವಾ ರಾಜಕೀಯದ್ದಲ್ಲ, ಆದರೆ ಉತ್ಕೃಷ್ಟ ಮುಕ್ತಿಯ ಅನ್ವೇಷಣೆ.

Sadguru Column Adiyogi

ಜ್ಞಾನೋದಯಕ್ಕೆ 112 ಮಾರ್ಗಗಳಿವೆ ಎಂದ ಆದಿಯೋಗಿ

ಆದಿಯೋಗಿಯನ್ನು ಜ್ಞಾನೋದಯಕ್ಕೆ ಎಷ್ಟು ಮಾರ್ಗಗಳಿವೆ ಎಂದು ಕೇಳಿದಾಗ, ನೀವು ನಿಮ್ಮ ಶಾರೀರಿಕ ವ್ಯವಸ್ಥೆಯ ಕ್ಷೇತ್ರದಲ್ಲಿರುವಾಗ 112 ಮಾರ್ಗಗಳಿವೆ, ಆದರೆ ನೀವು ಭೌತಿಕವನ್ನು ಮೀರಿದಾಗ ವಿಶ್ವದಲ್ಲಿನ ಪ್ರತಿಯೊಂದು ಅಣುವೂ ಸಹ ಒಂದು ಬಾಗಿಲ ದಾರಿಯಾಗುತ್ತದೆ ಎಂದನು.

ಭಾರತವು ಒಂದು ಆಧ್ಯಾತ್ಮಿಕ ಸಾಧ್ಯತೆಗಳ, ವೈವಿದ್ಯತೆಗಳ ಸಂಮಿಶ್ರಿತ ಸಂಯೋಜನೆಯಾಗಿದೆ. ನೀವು ಮಹಾಕುಂಭದಲ್ಲಿ ಭಾಗವಹಿಸಿದ್ದರೆ ಇದರ ಪ್ರದರ್ಶನವನ್ನು ಕಾಣಬಹುದು. ಮಾರ್ಕ್‌ಟ್ವೈನ್ ಹೇಳಿರುವಂತೆ, “ನನ್ನ ಅಭಿಪ್ರಾಯದಲ್ಲಿ, ಮಾನವರಿಂದಾಗಲಿ ಅಥವಾ ಪ್ರಕೃತಿಯಿಂದಾಗಲಿ ಭಾರತವನ್ನು ಹೆಚ್ಚು ಅಸಾಧಾರಣ ದೇಶವನ್ನಾಗಿ ಮಾಡಲು ಎಲ್ಲ ಕಾರ್ಯಗಳನ್ನೂ ಮಾಡಲಾಗಿದೆ. ಯಾವುದನ್ನೂ ಮರೆತಿಲ್ಲ. ಯಾವುದನ್ನೂ ಉದಾಸೀನ ಮಾಡಿಲ್ಲ”.

ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Tirupati Temple: ತಿರುಪತಿಯ ಆಗಸ್ಟ್ ತಿಂಗಳ ಟಿಕೆಟ್ ವೇಳಾಪಟ್ಟಿ ಬಿಡುಗಡೆ: ಹೀಗೆ ಬುಕ್‌ ಮಾಡಿ

Tirupati Temple: ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

VISTARANEWS.COM


on

Tirupathi Temple
Koo

ತಿರುಪತಿ: ದೇಶದ ಪ್ರಸಿದ್ಧ ಯಾತ್ರಾ ಸ್ಥಳ ತಿರುಮಲ ತಿರುಪತಿ ದೇವಸ್ಥಾನ(Tirupati Temple)ಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ (TTD) ಬಿಡುಗಡೆ ಮಾಡಿದೆ. ಹೀಗಾಗಿ ಆಗಸ್ಟ್‌ನಲ್ಲಿ ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರು ಈ ಪಟ್ಟಿಯನ್ನು ಗಮನಿಸಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

ಶ್ರೀವಾರಿ ದೇವಸ್ಥಾನದಲ್ಲಿ ವಾರ್ಷಿಕ ಪವಿತ್ರೋತ್ಸವ ಆಗಸ್ಟ್ 15ರಿಂದ 17ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಸುವ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕರ ಸೇವೆ, ವಾರ್ಷಿಕ ಪವಿತ್ರೋತ್ಸವ ಸೇವಾ ಟಿಕೆಟ್‌ಗಳನ್ನು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮಾತ್ರವಲ್ಲ ತಿರುಮಲ ಶ್ರೀವಾರಿ ವರ್ಚುವಲ್ ಸೇವೆಗಳಿಗೆ ಸಂಬಂಧಿಸಿದ ಆಗಸ್ಟ್ ತಿಂಗಳ ಕೋಟಾ ಮತ್ತು ಅವುಗಳ ಸ್ಲಾಟ್‌ಗಳನ್ನು ಮೇ 21ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯ. ಜತೆಗೆ ಆಗಸ್ಟ್‌ನ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಚೇತನರು, ವೃದ್ಧರಿಗಾಗಿ ವಿಶೇಷ ಕೋಟಾ

ವೃದ್ಧರು, ವಿಶೇಷ ಚೇತನರು ಮತ್ತು ದೀರ್ಘಕಾಲದ ಕಾಯಿಲೆ ಇರುವವರಿಗೆ ನೀಡಲಾಗುವ ಆಗಸ್ಟ್‌ನ ಉಚಿತ ವಿಶೇಷ ದರ್ಶನ ಟಿಕೆಟ್‌ಗಳು ಮೇ 23ರಂದು ಮಧ್ಯಾಹ್ನ 3 ಗಂಟೆಯಿಂದ ಆನ್‌ಲೈನ್‌ನಲ್ಲಿ ಲಭಿಸಲಿದೆ. ಮೇ 24ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆಗಸ್ಟ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪ್ರಕಟಿಸಲಿದೆ. ಜತೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಆಗಸ್ಟ್ ರೂಮ್ ಕೋಟಾವನ್ನು ಮೇ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಟಿಕೆಟ್‌ ಬುಕ್‌ ಮಾಡುವ ವಿಧಾನ

  • ತಿರುಮಲ ತಿರುಪತಿ ದೇವಸ್ಥಾನಗಳ ದರ್ಶನ ಟಿಕೆಟ್ ಬುಕ್ ಮಾಡಲು, ಟಿಟಿಡಿಯ ಅಧಿಕೃತ ಆನ್‌ಲೈನ್ ಬುಕಿಂಗ್ ವೆಬ್‌ಸೈಟ್‌ https://ttdevasthanams.ap.gov.inಗೆ ಭೇಟಿ ನೀಡಿ.
  • ದರ್ಶನ ಪ್ರಕಾರವನ್ನು ಆಯ್ಕೆ ಮಾಡಿಕೊಂಡು ಮೊಬೈಲ್‌ ನಂಬರ್‌ ನೀಡಿ ಲಾಗಿನ್‌ ಆಗಿ.
  • ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ.
  • ಆಲ್‌ನೈಲ್‌ ಮೂಲಕ ಟಿಕೆಟ್‌ ಮೊತ್ತವನ್ನು ಪಾವತಿಸಿ.
  • ನಿಮ್ಮ ಟಿಕೆಟ್‌ ಬುಕ್‌ ಆಗಿರುವ ಬಗ್ಗೆ ಮಾಹಿತಿ ಎಸ್‌ಎಂಎಸ್‌ ಮೂಲಕ ನಿಮಗೆ ರವಾನೆಯಾಗುತ್ತದೆ.

ಇದನ್ನೂ ಓದಿ: Ayodhya: ಅಯೋಧ್ಯೆಯಲ್ಲಿ ಜನದಟ್ಟಣೆ ನಿಭಾಯಿಸುವ ಸಲಹೆ ನೀಡಿದ ತಿರುಪತಿಯ ಎಂಜಿನಿಯರ್‌ಗಳ ತಂಡ

Continue Reading

ಧಾರ್ಮಿಕ

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

ಶ್ರೀ ಶಂಕರರು (Shankara Jayanti 2024) ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡಿದ್ದರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತಿದ್ದರು. ಸಂನ್ಯಾಸಕ್ಕೆ ತಾಯಿಯ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಆಗ ತಾಯಿ ಒಪ್ಪಲೇಬೇಕಾಯಿತು.

VISTARANEWS.COM


on

Shankara Jayanti 2024
Koo

ಶಂಕರಾಚಾರ್ಯರು (Shankara Jayanti 2024) ಜೀವಿಸಿದ್ದು ಕೇವಲ 32 ವರ್ಷ. ಆದರೆ ಅವರು ಸಾಧಿಸಿದ್ದು ಅಪಾರ. ಹಿಂದೂ ಧರ್ಮದ ಏಳಿಗೆಗೆ ಅವರ ಕೊಡುಗೆ ಅಮೂಲ್ಯ. ಶಂಕರರ ಬದುಕಿನ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ.

Adi Shankaracharya Jayanti
  1. ಶ್ರೀ ಶಂಕರರು ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡುಬಿಟ್ಟರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತರು. ಸಾಮಾನ್ಯರಿಗೆ ಒಂದು ವೇದವನ್ನು ಅರ್ಥ ಮಾಡಿಕೊಳ್ಳಲೇ ಹತ್ತಾರು ವರ್ಷಗಳು ಬೇಕು.
  2. ಶಂಕರಾಚಾರ್ಯರು ಜನಿಸಿದ್ದು ಕೇರಳ ಕಾಲಟಿ ಎಂಬ ಪುಟ್ಟ ಗ್ರಾಮದಲ್ಲಿ. ತಂದೆಯನ್ನು ಕಳೆದುಕೊಂಡರು. ತಾಯಿ ಅವರನ್ನು ಬೆಳೆಸಿದರು. ಅವರು ಸಂನ್ಯಾಸ ಸ್ವೀಕರಿಸಲು ಒಂದು ಪುಟ್ಟ ಪವಾಡವನ್ನೇ ಮಾಡಬೇಕಾಯಿತು. ಸಂನ್ಯಾಸಕ್ಕೆ ತಾಯಿ ಆರ್ಯಾಂಬೆಯವರ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಮಗ ಬದುಕುತ್ತಾನಲ್ಲ ಎಂಬ ಭರವಸೆಯೊಂದಿಗೆ ತಾಯಿ ಒಪ್ಪಿದರು.
  3. ಹದಿನಾರು ವರ್ಷ ಪ್ರಾಯ ಆಗುವುದರೊಳಗಾಗಿ ಅವರು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ರಚಿಸಿದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.
  4. ಭಾರತದಾದ್ಯಂತ ‘ದಿಗ್ವಿಜಯ ಯಾತ್ರೆʼ ಕೈಗೊಂಡರು. ವೇದವಿರೋಧಿಗಳನ್ನು ವಾಗ್ವಾದಕ್ಕೆ ಕರೆದರು. ಏಕಾಂಗಿಯಾಗಿ ಚರ್ಚೆ, ವಿಚಾರಮಂಡನೆ, ವಾದಗಳ‌ ಮೂಲಕ ಬ್ರಹ್ಮವಾದಕ್ಕೆ ಎಳೆತಂದರು. ದೇಶದುದ್ದಗಲಕ್ಕೂ ಸಂಚರಿಸಿ, ಅಲ್ಲಿಯ ವಿದ್ವಾಂಸರನ್ನು, ಜನರನ್ನು, ರಾಜರನ್ನು ವೈದಿಕತೆಗೆ ತಂದರು.
  5. ಆರು ಮತಗಳನ್ನು ಖಂಡಿಸಿ ತಮ್ಮ ಮತವನ್ನು ಸ್ಥಾಪಿಸಿದ ಪರಿಣಾಮ ಅವರನ್ನು ‘ಷಣ್ಮತ ಖಂಡನಾಚಾರ್ಯ’ ಮತ್ತು ಷಣ್ಮತ ಪ್ರತಿಷ್ಠಾಪನಾಚಾರ್ಯ’ ಎಂದು ಕರೆಯಲಾಯಿತು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು.
  6. ಧರ್ಮವನ್ನು ಉಳಿಸಿ ಬೆಳೆಸುವ ಉದ್ದೇಶಕ್ಕಾಗಿ ಮಠಗಳ ಪರಿಕಲ್ಪನೆಯನ್ನು ತಂದರು. ಮಠ ಮತ್ತು ಯತಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬ ಆಶಯ ಅವರದಾಗಿತ್ತು. ದೇಶದ ಉದ್ದಗಲಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದದ್ದು ಶೃಂಗೇರಿಯ ಮಠ. ಇತರವು ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರೀನಾಥ, ಕಂಚಿಯ ಕಾಮಕೋಟಿಗಳಲ್ಲಿವೆ.
  7. ಸೂರ್ಯ- ಗಣಪತಿ- ಅಂಬಿಕಾ- ಶಿವ- ವಿಷ್ಣುಗಳನ್ನು ಪೂಜಿಸುವ ಪಂಚಾಯತನ ಪೂಜೆಯನ್ನು ತಂದರು. ಈ ದೇವತೆಗಳನ್ನು ಭಾರತದ ಐದು ಕಡೆಗಳಲ್ಲಿ ಸಿಗುವ ಸ್ಫಟಿಕ, ಶೋಣಾಭದ್ರ, ಸ್ವರ್ಣಮುಖಿ, ಬಾಣಲಿಂಗ, ಸಾಲಿಗ್ರಾಮ ಎಂಬ ಕಲ್ಲಿನ ಮೂಲಕ ಪೂಜಿಸಲಾಗುತ್ತದೆ.
  8. ಮೂವತ್ತೆರಡು ವರ್ಷಗಳಲ್ಲಿ ಹಲವು ಮನುಷ್ಯರು ಸೇರಿ ಹಲವು ಜನ್ಮಗಳಲ್ಲಿ ಮಾಡುವಷ್ಟು ಕೆಲಸವನ್ನು ಮಾಡಿ ಮುಗಿಸಿದರು. ಭಾಷ್ಯಗಳನ್ನು ಹೊರತುಪಡಿಸಿ ನೂರಾರು ಸ್ತೋತ್ರ – ಸಾಹಿತ್ಯಗಳನ್ನು ರಚಿಸಿದರು.
  9. ಮೂರು ಸೂತ್ರಗಳಲ್ಲಿ ಶ್ರೀ ಶಂಕರರ ಉಪದೇಶವನ್ನು ಸೂತ್ರೀಕರಿಸಬಹುದು- “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಮತ್ತು ಜೀವಶ್ಶಿವೋಹಂʼ (ಜೀವನೇ ಶಿವ) ಎಂಬುದು ಅದ್ವೈತ ತತ್ವದ ಮೂಲ ಮಂತ್ರಗಳು. ಇದಲ್ಲದೇ ಪರಮಾತ್ಮ ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.
Continue Reading

ಪ್ರಮುಖ ಸುದ್ದಿ

PM Narendra Modi: ವಿಡಿಯೋ ಸಂದೇಶ ಮೂಲಕ ಬಸವೇಶ್ವರ ಜಯಂತಿಗೆ ಶುಭ ಕೋರಿದ ಪಿಎಂ

PM Narendra Modi: ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ ಎಂದು ಮೋದಿ ಹೇಳಿದ್ದಾರೆ.

VISTARANEWS.COM


on

pm narendra modi basava jayanti 2024
Koo

ಹೊಸದಿಲ್ಲಿ: ಭಕ್ತಿ ಭಂಡಾರಿ, ಸಮಾಜ ಸುಧಾರಕ, ವಚನ ಚಳವಳಿಯ ಆದ್ಯ ಪೂಜ್ಯ ಶ್ರೀ ಬಸವೇಶ್ವರ ಜಯಂತಿ (Basava Jayanti 2024) ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪಠ್ಯ ಸಂದೇಶ ಹಾಗೂ ವಿಡಿಯೋ ಸಂದೇಶಗಳೆರಡನ್ನೂ ಅವರು ನೀಡಿದ್ದಾರೆ.

“ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

“ಭಗವಾನ್‌ ಬಸವೇಶ್ವರರ ಸಂದೇಶ ಹಾಗೂ ಅವರ ವಚನಗಳು ನನಗೆ ಹೊಸಹೊಸದಾಗಿ ಕಲಿಸುತ್ತಲೇ ಇರುತ್ತವೆ. ನಾವು ಅವರಿಂದ ಅವರ ದೈವೀಯ ಗುಣವನ್ನೂ ಕಲಿಯಬಹುದು; ಜೊತೆಗೆ ಅವರು ಉತ್ತಮ ಆಡಳಿತಗಾರ, ಸುಧಾರಕನೂ ಹೌದು. ಸಮಾಜ ಸುಧಾರಣೆಯ ಅವರ ಬದುಕು ನಮಗೆ ಪ್ರೇರಣೆಯಾಗುವಂಥದು. ಬಸವಣ್ಣನವರ ವಚನಗಳು ಹಾಗೂ ಸಂದೇಶಗಳು ಆಧ್ಯಾತ್ಮಿಕವೂ ಹೌದು, ಬದುಕಿನ ಪ್ರಾಯೋಗಿಕ ಮಾರ್ಗದರ್ಶಕ ಸೂತ್ರಗಳೂ ಹೌದು” ಎಂದು ಅವರು ಕೊಂಡಾಡಿದ್ದಾರೆ.

“ಅವರ ಉಪದೇಶಗಳು ನಮಗೆ ಉತ್ತಮ ಮಾನವರಾಗುವುದನ್ನು ಕಲಿಸುತ್ತವೆ. ಇನ್ನಷ್ಟು ದಯಾಳು, ಅಧಿಕ ಉದಾರಿ, ಹೆಚ್ಚಿನ ಮಾನವೀಯ ಸಂವೇದನೆಗಳನ್ನು ನಮ್ಮಲ್ಲಿ ತುಂಬುತ್ತದೆ. ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ. ಈ ಶುಭಸಂದರ್ಭದಲ್ಲಿ ನಿಮಗೆಲ್ಲರಿಗೂ ಶುಭಕಾಮನೆಗಳು” ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ: Basava Jayanti 2024: ಬದುಕಿನ ಪಾಠ ಕಲಿಸುವ ಬಸವಣ್ಣನ 10 ವಚನಗಳಿವು

Continue Reading

ಪ್ರಮುಖ ಸುದ್ದಿ

Akshaya Tritiya 2024: ಇಂದು ಏನೇನು ಖರೀದಿಸಬಹುದು? ಚಿನ್ನ- ಬೆಳ್ಳಿ ಏಕೆ ಖರೀದಿಸಬೇಕು?

Akshaya Tritiya 2024: ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

VISTARANEWS.COM


on

Akshaya Tritiya 2024
Koo

ಅಕ್ಷಯ ತೃತೀಯ (Akshaya Tritiya 2024) ಅಂದರೆ ಚಿನ್ನ- ಬೆಳ್ಳಿ (gold, silver) ಖರೀದಿಸಬೇಕು ಎಂಬುದು ಸಾಮಾನ್ಯ ನಂಬಿಕೆ. ಆದರೆ ಇದು ಮಾತ್ರವಲ್ಲ. ಸಂಪತ್ತು ಎಂದು ಕರೆಸಿಕೊಳ್ಳುವ ಯಾವುದನ್ನೇ ಆದರೂ ಇಂದು ನೀವು ಖರೀದಿಸಬಹುದು ಅಥವಾ ಹೊಂದಬಹುದು. ಅದರಿಂದ ಆ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ. ಈ ಹಿಂದಿನ ಕಾಲದಲ್ಲಿ ಕೃಷಿಪ್ರಧಾನ ಸಮಾಜದಲ್ಲಿ ಅಕ್ಕಿ ರಾಗಿ ಗೋಧಿಯಂಥ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುತ್ತಿದ್ದರು.

ಹಿಂದೂಗಳಿಗೆ ಸಂಪತ್ತಿನ ಪುಣ್ಯ ಫಲ ನೀಡುವ ಹಬ್ಬ. ಅಕ್ಷಯ ತೃತೀಯದಂದು (Akshaya Tritiya 2024) ಶುಭ, ಅಶುಭ ಮುಹೂರ್ತಗಳನ್ನು ನೋಡದೇ ಯಾವುದೇ ಕಾರ್ಯವನ್ನು ಪ್ರಾರಂಭಿಸಬಹುದು ಎಂಬ ಮಾತಿದೆ. ಉತ್ತರ ಭಾರತದಲ್ಲಿ ಅಖಾ ತೀಜ್ ಎಂದೂ ಕರೆಯಲ್ಪಡುವ ಈ ಮಂಗಳಕರ ದಿನ ಅಪಾರ ಪ್ರಾಮುಖ್ಯತೆ ಹೊಂದಿದೆ. ಈ ದಿನದಂದು ಪ್ರಾರಂಭಿಸಿದ ಯಾವುದೇ ಕಾರ್ಯ ಯಾವಾಗಲೂ ಯಶಸ್ವಿಯಾಗುತ್ತದೆ ಎಂಬ ನಂಬಿಕೆ. ಖರೀದಿಸಿದ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ.

ಈ ದಿನವು ಅದೃಷ್ಟ, ಯಶಸ್ಸು ಮತ್ತು ಅದೃಷ್ಟದ ಲಾಭದ ಸಂಕೇತವಾಗಿದೆ. ಅಕ್ಷಯ ತೃತೀಯದಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದು ವಾಡಿಕೆ. ಅಕ್ಷಯ ತೃತೀಯವನ್ನು ಭಾರತ ಮತ್ತು ನೇಪಾಳದ ಅನೇಕ ಪ್ರದೇಶಗಳಲ್ಲಿ ಹಿಂದೂಗಳು ಮತ್ತು ಜೈನರು ಹೊಸ ಉದ್ಯಮಗಳು, ಮದುವೆಗಳು, ದಾನ, ಮತ್ತು ಚಿನ್ನ ಅಥವಾ ಇತರ ಆಸ್ತಿಯಂತಹ ಹೂಡಿಕೆಗಳಿಗೆ ಮಂಗಳಕರವೆಂದು ಪರಿಗಣಿಸುತ್ತಾರೆ. ಅಂದು ಚಿನ್ನ, ಬೆಳ್ಳಿ, ವಾಹನ ಖರೀದಿಸಿ ತಂದರೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ಹಲವರು ನಂಬುತ್ತಾರೆ.

ಸಂಸ್ಕೃತದಲ್ಲಿ ಅಕ್ಷಯ ಪದವು “ಅಭ್ಯುದಯ, ಭರವಸೆ, ಸಂತೋಷ, ಯಶಸ್ಸು” ಎಂಬ ಅರ್ಥದಲ್ಲಿ “ಎಂದಿಗೂ ಕಡಿಮೆಯಾಗುವುದಿಲ್ಲ” ಎಂಬ ಅರ್ಥವನ್ನು ಸೂಚಿಸುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ಇಬ್ಬರೂ ತಮ್ಮ ಗ್ರಹಗಳ ಅತ್ಯುತ್ತಮ ನೆಲೆಯಲ್ಲಿರುತ್ತಾರೆ ಎಂದು ನಂಬಲಾಗಿದೆ.

ಅಕ್ಷಯ ತೃತೀಯ ಆಚರಣೆಯ ಇತಿಹಾಸದ ಪ್ರಕಾರ ಅಕ್ಷಯ ತೃತೀಯ ದಿನದಂದು ನಾಲ್ಕು ಯುಗಗಳಲ್ಲಿ ಎರಡನೇ ಯುಗವಾದ ತ್ರೇತಾಯುಗವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ಅಕ್ಷಯ ತೃತೀಯ ದಿನದಂದು ಜನಿಸಿದರು ಎಂದು ಹೇಳಲಾಗುತ್ತದೆ. ಹೀಗಾಗಿ ಭಕ್ತರು ಅಕ್ಷಯ ತೃತೀಯವನ್ನು ಪರಶುರಾಮನ ಜನ್ಮ ದಿನವಾಗಿ ಆಚರಿಸುತ್ತಾರೆ. ಅಕ್ಷಯ ತೃತೀಯದ ಆಚರಣೆಗಳು ಅಕ್ಷಯ ತೃತೀಯದಂದು ಭಕ್ತರು ಪವಿತ್ರ ಸ್ನಾನ ಮಾಡುವ ಮೂಲಕ ಮತ್ತು ಹಳದಿ ವೇಷಭೂಷಣದಲ್ಲಿ ತಮ್ಮನ್ನು ತಾವು ಅಲಂಕರಿಸಿಕೊಳ್ಳುವುದರೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಈ ದಿನ ವಿಶೇಷವಾಗಿ ವಿಷ್ಣು ಸಹಸ್ರನಾಮ ಮತ್ತು ವಿಷ್ಣು ಚಾಲೀಸಾದ ಪಠಣಗಳೊಂದಿಗೆ ಭಗವಾನ್ ವಿಷ್ಣುವಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

ಚಿನ್ನ, ಬೆಳ್ಳಿ ಏಕೆ ಖರೀದಿಸಬೇಕು?

ದಂತಕಥೆಯ ಪ್ರಕಾರ, ಅಕ್ಷಯ ತೃತೀಯದಲ್ಲಿ, ಸಂಪತ್ತಿನ ದೇವತೆಯಾದ ಕುಬೇರನು ಭಗವಾನ್ ಶಿವ ಮತ್ತು ಬ್ರಹ್ಮನಿಂದ ಆಶೀರ್ವಾದವನ್ನು ಪಡೆದನು, ಅಲಕಾಪುರಿ ಎಂದು ಕರೆಯಲ್ಪಡುವ ಲೋಕವನ್ನು ಸ್ವಾಧೀನಪಡಿಸಿಕೊಂಡ. ಪರಿಣಾಮವಾಗಿ, ಈ ದಿನ ಕುಬೇರನ ಹೆಸರಿನಲ್ಲಿ ಚಿನ್ನದ ಆಭರಣಗಳು ಮತ್ತು ಆಸ್ತಿಗಳನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೊಸ ವ್ಯಾಪಾರ, ಉದ್ಯಮಗಳು, ನಿರ್ಮಾಣ ಕಾರ್ಯಗಳನ್ನು ಈ ವಿಶೇಷ ದಿನದಂದು ಪ್ರಾರಂಭಿಸಲಾಗುತ್ತದೆ. ಉದ್ಯಮಿಗಳು ಮುಂದಿನ ಆರ್ಥಿಕ ವರ್ಷಕ್ಕೆ ಹೊಸ ಆಡಿಟ್ ಪುಸ್ತಕವನ್ನು ಪ್ರಾರಂಭಿಸುವ ಮೊದಲು ಅಕ್ಷಯ ತೃತೀಯ ದಿನದಂದು ಗಣೇಶ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಇದನ್ನು ಹಲ್ಖಾತಾ ಎಂದು ಕರೆಯುತ್ತಾರೆ.

ಇದಲ್ಲದೇ ಅಕ್ಕಿ ಕೊಳ್ಳುವವರು, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವವರು, ಯಾವುದೇ ರೀತಿಯ ಹೊಸ ವಸ್ತುಗಳು ಅಥವಾ ಪಾತ್ರೆಗಳನ್ನು ಖರೀದಿಸುವವರು- ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

ಇದನ್ನೂ ಓದಿ: Akshaya Tritiya 2024: ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಅಕ್ಷಯ ತೃತೀಯ

Continue Reading
Advertisement
IPL 2024
ಕ್ರೀಡೆ9 mins ago

IPL 2024: ಲಕ್ನೋಗೆ ಸೋಲು; ಪ್ಲೇ ಆಫ್​ ಪ್ರವೇಶಿಸಿದ ರಾಜಸ್ಥಾನ್​ ರಾಯಲ್ಸ್​

blackmail case kgf
ಕೋಲಾರ12 mins ago

Blackmail Case: ಗ್ರಾಮ ಪಂಚಾಯಿತಿಯಲ್ಲೇ ಬಲವಂತದ ರೊಮ್ಯಾನ್ಸ್‌, ಬ್ಲ್ಯಾಕ್‌ಮೇಲ್‌ ಎಸಗಿದ ಬಿಲ್‌ ಕಲೆಕ್ಟರ್‌ ಬಂಧನ

Madhuri Dixit birthday extend wishes
ಬಾಲಿವುಡ್25 mins ago

Madhuri Dixit: ಮಾಧುರಿ ದೀಕ್ಷಿತ್‌ಗೆ ಇಂದು ಜನುಮದಿನ ಸಂಭ್ರಮ; ಅವರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

Prajwal Revanna Case Can women trust your government Writers open letter to Siddaramaiah
ರಾಜಕೀಯ33 mins ago

Prajwal Revanna Case: ನಿಮ್ಮ ಸರ್ಕಾರದ ಮೇಲೆ ಮಹಿಳೆಯರು ವಿಶ್ವಾಸ ಇಡಬಹುದೇ? ಸಿದ್ದರಾಮಯ್ಯಗೆ ಸಾಹಿತಿಗಳ ಬಹಿರಂಗ ಪತ್ರ!

Acharya Shankara Jayanthyutsava programme at Ranebennur
ಹಾವೇರಿ38 mins ago

Ranebennur News: ಆಧುನಿಕ ವಿಜ್ಞಾನಕ್ಕೆ ಶಂಕರಾಚಾರ್ಯರು ನೀಡಿದ ಕೊಡುಗೆ ಅಪಾರ; ವಿ. ನವೀನಶಾಸ್ತ್ರಿ ರಾ. ಪುರಾಣಿಕ

Miyazaki Mango
ಪ್ರಮುಖ ಸುದ್ದಿ1 hour ago

Miyazaki Mango: ಧಾರವಾಡಕ್ಕೆ ಬಂತು 2.7 ಲಕ್ಷ ರೂ. ಬೆಲೆಯ ಮಾವು!

Bomb Threat
ದೇಶ1 hour ago

Bomb Threat: ದೆಹಲಿ, ಅಹಮದಾಬಾದ್‌ ಬಳಿಕ ಕಾನ್ಪುರ ಶಾಲೆಗಳಿಗೂ ಬಾಂಬ್‌ ಬೆದರಿಕೆ; ಇಮೇಲ್‌ ಮೂಲಕ ಸಂದೇಶ

M‌ine Lift Collapse
ದೇಶ1 hour ago

M‌ine Lift Collapse: ರಾಜಸ್ಥಾನ ಲಿಫ್ಟ್‌ ದುರಂತ: ಟ್ರ್ಯಾಪ್‌ ಆಗಿದ್ದ 14 ಮಂದಿ ರಕ್ಷಣೆ; ಒಬ್ಬ ಅಧಿಕಾರಿ ದಾರುಣ ಸಾವು

Cannes 2024 seven Indian Films To Be Screened
ಸಿನಿಮಾ2 hours ago

Cannes 2024: ʻಕಾನ್ ಫಿಲ್ಮ್ ಫೆಸ್ಟಿವಲ್‌ʼನಲ್ಲಿ ಪ್ರದರ್ಶನ ಕಾಣಲಿರುವ ಭಾರತೀಯ ಸಿನಿಮಾಗಳಿವು

pes university student self harming
ಕ್ರೈಂ2 hours ago

Student Self Harming: ಪ್ರತಿಷ್ಠಿತ ಕಾಲೇಜು ಕಟ್ಟಡದಿಂದ ಜಿಗಿದು ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ7 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ10 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ20 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 202422 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ1 day ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌