Tulsi Puja 2022 | ಇಂದು ಉತ್ಥಾನ ದ್ವಾದಶಿ; ತುಳಸಿಯ ಮಹಿಮೆಯ ಬಲ್ಲಿರೇನು? - Vistara News

ದೀಪಾವಳಿ

Tulsi Puja 2022 | ಇಂದು ಉತ್ಥಾನ ದ್ವಾದಶಿ; ತುಳಸಿಯ ಮಹಿಮೆಯ ಬಲ್ಲಿರೇನು?

ಇಂದು ಉತ್ಥಾನ ದ್ವಾದಶಿ. ತುಳಸಿಯನ್ನು ಪೂಜಿಸುವ ಹಬ್ಬ (Tulsi Puja 2022). ಧಾರ್ಮಿಕವಾಗಿ ಮತ್ತು ಔಷಧಿಯಾಗಿ ಬಳಕೆಯಾಗುವ ತುಳಸಿಯ ಮಹತ್ವವನ್ನು ತಿಳಿಸುವ ವಿಶೇಷ ಲೇಖನ ಇಲ್ಲಿದೆ. ನೀವು ಈ ಲೇಖನವನ್ನು ಓದಬಹುದು ಅಥವಾ ಕೇಳಬಹುದು!

VISTARANEWS.COM


on

Tulsi Puja 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ಲೇಖನವನ್ನು ಇಲ್ಲಿ ಕೇಳಿ

Tulsi Puja 2022

ಡಾ. ಗಣಪತಿ ಆರ್. ಭಟ್
ಪ್ರಕೃತಿಯಿಲ್ಲದೇ ನಾವಿಲ್ಲ. ಪ್ರಕೃತಿಗೂ ಮನುಷ್ಯನಿಗೂ ಇರುವ ಅವಿನಾಭಾವ ಸಂಬಂಧವನ್ನು ಮನಗಂಡು ನಮ್ಮ ಪ್ರಾಚೀನರು ಪ್ರಕೃತಿ ಆರಾಧನೆಯನ್ನು ಆರಂಭಿಸಿದರು. ನೆಲ, ನೀರು, ಗಾಳಿ, ವೃಕ್ಷ ಎಲ್ಲದರಲ್ಲಿಯೂ ದೇವರನ್ನು ಕಂಡರು. ಅಂಥಹ ಪ್ರಕೃತಿಯ ಆರಾಧನೆಯ ಸಾಲಿಗೆ ಸೇರುವುದು ತುಳಸಿ ಪೂಜೆ ಅಥವಾ ತುಳಸಿ ವಿವಾಹ (Tulsi Puja 2022). ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯ ದಿನ ಮನೆ ಮನೆಗಳಲ್ಲಿ ತುಳಸಿಕಟ್ಟೆಯನ್ನು ಅಲಂಕರಿಸಿ ತುಳಸಿಯ ಮದುವೆ ಮಾಡುವುದು ವಾಡಿಕೆ.

ಈ ದಿನವನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯಲಾಗುತ್ತದೆ. ನಾಲ್ಕು ತಿಂಗಳುಗಳ ಕಾಲ ಕ್ಷೀರಸಾಗರದಲ್ಲಿ ಶೇಷಶಯನನಾಗಿದ್ದ ವಿಷ್ಣುವು ಇಂದೇ ನಿದ್ರಾವಸ್ಥೆಯಿಂದ ಎದ್ದು ಭಕ್ತರಿಗೆ ದರ್ಶನ ನೀಡುವನು ಎಂಬ ಪ್ರತೀತಿ ಇದೆ. ವಿಷ್ಣು ಪ್ರಿಯೆ ಎನಿಸಿದ ತುಳಸಿಯನ್ನು ಇಂದೇ ಆರಾಧಿಸುವುದರಲ್ಲಿಯೂ ಸಾಕಷ್ಟು ವಿಶೇಷತೆಗಳಿವೆ.

ತುಳಸಿ ಎಂದರೆ ಕೇವಲ ಸಸ್ಯವಲ್ಲ. ಧಾರ್ಮಿಕ ಶ್ರದ್ಧೆಯುಳ್ಳವರಿಗೆ ನಿತ್ಯದರ್ಶನವೀಯುವ ಮನೆಯ ಮುಂದಣ ದೇವತೆ. ಕೃಷ್ಣನ ಪ್ರಿಯಸಖಿ ಎಂಬ ಕಾರಣಕ್ಕಾಗಿ ಕೃಷ್ಣೋಪಾಸಕರಿಗೆಲ್ಲ ಪರಮಾಪ್ತೆಯಾಕೆ. ತುಳಸಿಯ ಸೇವನೆಯಿಂದ ಶರೀರಕ್ಕೆ ಆಗುವ ಲಾಭವೂ ಅಷ್ಟಿಷ್ಟಲ್ಲ. ಆಸ್ತಿಕರೆಲ್ಲರೂ ದಿನದ ಸ್ವಲ್ಪ ಸಮಯವಾದರೂ ತುಳಸಿಗಾಗಿ ವ್ಯಯಿಸುತ್ತಾರೆ. ನಿತ್ಯವೂಸೂರ್ಯ ರಶ್ಮಿಯು ತುಳಸಿಯನ್ನು ತಾಕಿಕೊಂಡೇ ಮನೆಯ ಒಳಗೆ ಪಸರಿಸಬೇಕೆಂಬ ಭಾವನೆ ಅನೇಕರದ್ದು.

ತುಳಸಿಗಿದೆ ನಾನಾ ಹೆಸರುಗಳು
ಪದ್ಮಪುರಾಣ, ಸ್ಕಂದಪುರಾಣ, ವಿಷ್ಣುಧರ್ಮೋತ್ತರ ಪುರಾಣ, ದೇವೀ ಭಾಗವತ ಹೀಗೇ ನಾನಾ ಪುರಾಣಗಳಲ್ಲಿ ತುಳಸಿಯ ಕುರಿತಾದ ಕಥೆಗಳು, ಮಹಾತ್ಮೆ ವರ್ಣಿತವಾಗಿವೆ. ಬ್ರಹ್ಮವೈವರ್ತಪುರಾಣದಲ್ಲಿ ‘ಯಸ್ಯಾಃ ದೇವ್ಯಾಸ್ತುಲಾ ನಾಸ್ತಿ ವಿಶ್ವೇಷು ನಿಖಿಲೇಷು ಚ ತುಲಸೀ ತೇನ ವಿಖ್ಯಾತಾ’ಎಂಬುದಾಗಿ ವಿಶ್ವದ ಸಕಲ ವೃಕ್ಷಗಳ ಪೈಕಿ ಇದಕ್ಕೆ ಸರಿಸಮಾನವಾದ ಇನ್ನೊಂದು ಸಸ್ಯವಿಲ್ಲ ಎನ್ನಲಾಗಿದೆ. ಆಕಾರಣಕ್ಕಾಗಿಯೇ ಇದು ‘ತುಲಸೀ’ ಎಂಬ ಹೆಸರಿನಿಂದಕರೆಯಲ್ಪಟ್ಟಿತು.

ಇನ್ನು ಋಷಿಮುನಿಗಳಿಗೆ ಅತ್ಯಂತ ಸಂತಸವನ್ನು ಉಂಟು ಮಾಡುವವಳು ಎಂಬ ಕಾರಣಕ್ಕೆ ತುಳಸಿಯನ್ನು ನಂದಿನೀ ಎಂದು ಕರೆಯಲಾಗುತ್ತದೆ. ವೃಂದಾವನದಲ್ಲಿ ಕೃಷ್ಣನಿಂದ ಬೆಳೆಸಲ್ಪಟ್ಟವಳು ಹಾಗಾಗಿ ಅವಳಿಗೆ “ವೃಂದಾವನೀ” ಎಂಬ ಹೆಸರಿದೆ. ಕೃಷ್ಣನ ಪ್ರೀತಿಪಾತ್ರಳು ಎಂಬ ಕಾರಣಕ್ಕೆ ಕೃಷ್ಣಜೀವನೀ ಎಂಬ ಹೆಸರು ಬಂತು. ಎಲ್ಲ ಹೂವುಗಳ ಸಾರವನ್ನು ಧರಿಸಿರುವಕಾರಣಕ್ಕೆ ಪುಷ್ಪಸಾರಾ ಎಂಬುದಾಗಿಯೂ, ವಿಶ್ವವನ್ನು ಪವಿತ್ರಗೊಳಿಸುತ್ತಾಳೆ ಎಂಬ ಕಾರಣಕ್ಕಾಗಿ ವಿಶ್ವಪಾವನೀ ಎಂಬ ಹೆಸರೂ ತುಳಸಿಗೆ ಇದೆ.

Tulsi Puja 2022

ತುಳಸಿ ಕುರಿತ ಪೌರಾಣಿಕ ಕಥೆಗಳು
ತುಳಸಿಯ ಜನ್ಮ ವೃತ್ತಾಂತದ ಕುರಿತಾಗಿ ನಾನಾ ಬಗೆಯ ಕಥಾನಕಗಳಿವೆ. ಪೂರ್ವದಲ್ಲಿ ಅವಳು ವೃಂದಾ ಎಂಬ ಹೆಸರಿನ ಸಾಧ್ವಿಯಾಗಿದ್ದಳು. ಜಲಂಧರನೆಂಬ ಅಸುರನ ಪತ್ನಿಯಾಗಿದ್ದರೂ ವಿಷ್ಣುಭಕ್ತಳೂ, ಪತಿವ್ರತಾ ಶಿರೋಮಣಿಯೂ ಆಗಿದ್ದಳೆಂಬುದು ಗೊತ್ತಾಗುತ್ತದೆ. ಅವಳ ಪಾತಿವ್ರತ್ಯದಿಂದಾಗಿ ಜಲಂಧರನು ಏಷ್ಟೇ ಪಾಪಕೃತ್ಯ ಎಸಗಿದರೂ ಅವನಿಗೆ ಸಾವು ಬರುತ್ತಿರಲಿಲ್ಲ. ದೇವತೆಗಳೆಲ್ಲ ಮೊರೆಹೋಗಲು, ಜಲಂಧರನನ್ನು ಕೊಲ್ಲುವುದಕ್ಕೋಸ್ಕರ ವಿಷ್ಣುವು ವೃಂದೆಯ ಪತಿ ವ್ರತಾಧರ್ಮಕ್ಕೆ ಭಂಗತರುತ್ತಾನೆ. ಇದರಿಂದ ಕುಪಿತಳಾದ ಅವಳು ವಿಷ್ಣುವಿಗೆ ಶಿಲೆಯಾಗೆಂದು ಶಾಪ ನೀಡುತ್ತಾಳೆ. ಆ ಪ್ರಕಾರ ವಿಷ್ಣುವು ಶಾಲಗ್ರಾಮ ಶಿಲೆಯ ರೂಪದಲ್ಲಿ ಪೂಜಿತನಾಗುತ್ತಾನೆ. ವಿಷ್ಣುವೂ ಕೂಡ ಅವಳಿಗೆ ಆ ಶಾಲಗ್ರಾಮದ ಪೂಜೆಗೆ ಅರ್ಹಳಾಗುವಂತೆ ಮಾಡುತ್ತಾನೆ. ಹಾಗೆ ಜನಿಸಿದವಳೇ ತುಳಸಿ.

ಇನ್ನೊಂದು ಕಥೆಯ ಪ್ರಕಾರ ಸುರಾಸುರರುಕ್ಷೀರ ಸಾಗರವನ್ನು ಮಥನ ಮಾಡಿದಾಗ ಕೊನೆಯಲ್ಲಿ ಅಮೃತವು ಹುಟ್ಟಿತು. ಅದನ್ನು ಪಡೆದುಕೊಳ್ಳಲು ವಿಷ್ಣುವು ಸಾಹಸವನ್ನು ಮಾಡಬೇಕಾಯಿತು. ಅಮೃತ ಕಲಶವು ಆತನ ಕೈಗೆ ಸಿಕ್ಕಾಗ ಉಂಟಾದ ಆನಂದಭಾಷ್ಪದ ಒಂದು ಹನಿ ಅದೇ ಕಲಶದಲ್ಲಿ ಬಿದ್ದು ತುಳಸಿಯು ಹುಟ್ಟಿತು.

ವಿಷಯವೇನೇ ಇರಲಿ, ತುಳಸಿಯು ಒಂದು ಚಿಕ್ಕ ಸಸ್ಯ ಪ್ರಬೇಧವಾದರೂ ಅದರ ಮಹತ್ವವನ್ನು ಅರಿತು ನಮ್ಮವರು ಅದಕ್ಕೆ ಇಷ್ಟೊಂದು ಪ್ರಾಧಾನ್ಯತೆಯನ್ನು ಕೊಟ್ಟಿರುವುದು ಗೊತ್ತಾಗುತ್ತದೆ.

ತುಲಸಿಯ ಮಹಿಮೆ ಬಲ್ಲಿರೇನು?
ಪುರಾಣಗಳಲ್ಲಿ ತುಳಸಿಯನ್ನು ಪಾಪನಾಶಿನಿ, ಸುಖದಾಯಿನಿ, ಪುಣ್ಯಪ್ರದಾಯಿನಿ ಇಂಬಿತ್ಯಾದಿಯಾಗಿ ವರ್ಣಿಸಲಾಗಿದೆ. ಯಾರು ತುಲಸಿದಳದಿಂದ ಶ್ರೀವಿಷ್ಣುವನ್ನು ಪೂಜಿಸುತ್ತಾರೋ, ಅವರಿಗೆ ಸದ್ಗತಿ ಸಿಗುತ್ತದೆ. ಎಲ್ಲಿ ತುಳಸಿಯು ಇರುತ್ತದೆಯೋ ಅಲ್ಲಿ ಕೃಷ್ಣನು ಸದಾ ವಾಸವಾಗಿರುತ್ತಾನೆ ಎಂಬುದಾಗಿ ಪದ್ಮಪುರಾಣದಲ್ಲಿ ಹೇಳಲಾಗಿದೆ.

ಪ್ರತಿನಿತ್ಯ ತುಳಸಿಯ ದರ್ಶನಮಾಡುವುದರಿಂದ ಕೋಟಿಗೋವುಗಳನ್ನು ದಾನ ಮಾಡಿದ ಪುಣ್ಯ ಪ್ರಾಪ್ತವಾಗುತ್ತದೆ. ದೇವಾನು ದೇವತೆಗಳೆಲ್ಲ ತುಳಸಿಯ ಮಹತ್ವ ಅರಿತಿದ್ದರು. ಕೃಷ್ಣನು ಲೋಕಹಿತಕ್ಕಾಗಿ ಗೋಮತಿ ತೀರದಲ್ಲಿ ತುಳಸಿಯನ್ನು ನೆಟ್ಟನು. ಸಕಲ ಕಷ್ಟಗಳನ್ನು ಕಳೆಯುವ ಶಕ್ತಿ ಉಳ್ಳ ತುಳಸಿಯನ್ನು ವಸಿಷ್ಠರ ವಚನಾನುಸಾರ ರಾಮನು ಸರಯೂ ನದಿಯ ತಟದಲ್ಲಿ ನೆಟ್ಟನು. ತನ್ಮೂಲಕ ಅಸುರರನ್ನು ಸಂಹರಿಸುವ ಶಕ್ತಿಯನ್ನು ಪಡೆದನು. ಸೀತೆಯೂ ಕೂಡ ಅಶೋಕ ವನದಲ್ಲಿ ತುಳಸಿಯನ್ನು ನೆಡುವುದರ ಮೂಲಕ ತನ್ನ ಗಂಡನಾದ ರಾಮನನ್ನು ಪುನಃ ಸೇರಿದಳು. ಪಾರ್ವತಿಯೂ ಕೂಡ ತುಳಸಿ ಗಿಡವನ್ನು ನೆಟ್ಟ ಪುಣ್ಯದಿಂದಲೇ ಪರಶಿವನನ್ನು ವರಿಸಿದಳು ಎಂಬುದಾಗಿ ತುಳಸಿಯ ಮಹಿಮೆಯನ್ನು ಪುರಾಣ ಕಾವ್ಯಗಳಲ್ಲಿ ಬಣ್ಣಿಸಲಾಗಿದೆ.

ಬಹೂಪಯೋಗಿ ತುಳಸಿ
ಧಾರ್ಮಿಕಆಚರಣೆಯ ವಿಧಿ ವಿಧಾನಗಳಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ಕೃಷ್ಣನ ಪೂಜೆಯಲ್ಲಿ ಮತ್ತು ಶಾಲಗ್ರಾಮದ ಪೂಜೆಯಲ್ಲಿ ತುಳಸಿಯೇ ಶ್ರೇಷ್ಠ. ತೀರ್ಥದಲ್ಲಿ ತುಳಸಿಯ ದಳವನ್ನು ಸೇರಿಸಲಾಗುತ್ತದೆ. ನೈವೇದ್ಯ ಮಾಡುವಾಗಲೂ ತುಳಸಿ ಜಲದಿಂದಲೇ ಪರಿಸಿಂಚನ ಮಾಡಲಾಗುವುದು. ದಾನದ ಸಂದರ್ಭದಲ್ಲಿಯೂ ತುಳಸಿ ನೀರನ್ನು ದಾನದ ವಸ್ತುವಿನ ಮೇಲೆ ಬಿಡಲಾಗುತ್ತದೆ. ಅಂತ್ಯೇಷ್ಟಿಯ ಸಮಯದಲ್ಲಿಯೂ ತುಳಸಿಯ ಕಾಷ್ಟವನ್ನು ಸಮರ್ಪಿಸಲಾಗುತ್ತದೆ.

Tulsi Puja 2022

ತುಳಸಿಯ ಧಾರ್ಮಿಕ ಲಾಭಗಳು ಒಂದೆಡೆಯಾದರೆ,ಇನ್ನೊಂದೆಡೆ ಅದನ್ನು ನೆಟ್ಟು ಬೆಳಸುವ ಮೂಲಕ ಆರೋಗ್ಯಾತ್ಮಕ ಲಾಭಗಳನ್ನೂ ಪಡೆಯಬಹುದಾಗಿದೆ. ತುಳಸಿಯನ್ನು ನಮ್ಮ ವಾಸಸ್ಥಳದ ಸುತ್ತಮುತ್ತ ಬೆಳಸಿದರೆ ರೋಗ ಕಾರಕ ಜಂತುಗಳು ನಾಶವಾಗಿ ವಾತಾವರಣವು ಪರಿಶುದ್ಧವಾಗಿರುತ್ತದೆ. ಪ್ರಾಣವಾಯುವನ್ನು ಹೇರಳವಾಗಿ ನೀಡುವ ಸಸ್ಯ ಇದಾಗಿದ್ದು, ಪ್ರತಿನಿತ್ಯ ತುಳಸಿ ಕಟ್ಟೆಯನ್ನು ಸುತ್ತುವ ಮೂಲಕ ಅದರ ಲಾಭವನ್ನು ಪಡೆದುಕೊಳ್ಳಬಹುದು.

ಆಯುರ್ವೇದದ ಚಿಕಿತ್ಸೆಗಳಲ್ಲಿ ಜೊತೆಗೆ ಮನೆಮದ್ದುಗಳಲ್ಲಿಯೂ ತುಳಸಿಯು ಹೆಚ್ಚಾಗಿ ಬಳಕೆಯಾಗುತ್ತದೆ. ತುಳಸಿ ಕಷಾಯವು ನೆಗಡಿ, ಶೀತ, ಕೆಮ್ಮುಗಳನ್ನು ನಿವಾರಿಸುತ್ತದೆ. ಉದುರಿದ ತುಳಸಿಯ ಎಲೆಯು ಮಣ್ಣಿನೊಂದಿಗೆ ಬೆರೆತು ಚರ್ಮವ್ಯಾಧಿಯ ಔಷಧಿಯಾಗಿ ಮಾರ್ಪಡುತ್ತದೆ. ಅಷ್ಟೇ ಅಲ್ಲದೆ ಬೊಜ್ಜು ನಿವಾರಣೆ, ವಾಂತಿ, ಸಂಧಿವಾತ ಇತ್ಯಾದಿ ತೊಂದರೆಗಳಲ್ಲಿಯೂ ತುಳಸಿಯನ್ನು ಔಷಧಿಯಾಗಿ ಬಳಸುತ್ತಾರೆ. ಗಾಯಗಳಿಗೆ ಕೀವಾಗದಂತೆ ತಡೆಯಲು ತುಳಸಿ ರಸವನ್ನು ಮತ್ತು ಕಡ್ಡಿಯನ್ನು ಬಳಸಲಾಗುತ್ತದೆ. ಸಾಬೂನು ಹಾಗೂ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿಯೂ ತುಳಸಿಯು ಬಳಕೆಯಾಗುತ್ತದೆ.

ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಿಂದ ಹುಣ್ಣಿಮೆಯವರೆಗೂ ಯಾವುದೇ ದಿನವು ತುಳಸಿ ಪೂಜೆಗೆ ಪ್ರಸಕ್ತವಾಗಿರುತ್ತದೆ. ತುಲಸಿಯಷ್ಟೇ ಧಾರ್ಮಿಕವಾಗಿ ಹಾಗೂ ಔಷಧದ ದೃಷ್ಟಿಯಿಂದ ಮಹತ್ವ ಹೊಂದಿರುವ ಬೆಟ್ಟದ ನೆಲ್ಲಿಕಾಯಿಯ ಟೊಂಗೆಯನ್ನೂ ತುಳಸಿಯ ಜೊತೆಗೆ ಇರಿಸಿ ಪೂಜಿಸಬೇಕು. ನಿತ್ಯವೂ ತುಳಸಿಯನ್ನು ಉಪಾಸಿಸುವುದರ ಜೊತೆಗೆ ಈ ಪರ್ವಕಾಲದಲ್ಲಿ ತುಳಸಿಯನ್ನು ಆರಾಧಿಸುವ ಮೂಲಕ ತುಳಸಿಯ ನಿತ್ಯೋಪಯೋಗಿ ಗುಣವನ್ನು ಅರಿಯೋಣ. ಅದರ ಲಾಭವನ್ನು ನಮ್ಮದಾಗಿಸಿಕೊಳ್ಳೋಣ.

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)

ಇದನ್ನೂ ಓದಿ | Tulsi Puja 2022 | ಉತ್ಥಾನ ದ್ವಾದಶಿಯಂದು ತುಳಸಿಯೊಂದಿಗೆ ನೆಲ್ಲಿಗಿಡಕ್ಕೇಕೆ ಪೂಜೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೀಪಾವಳಿ

After Deepavali Skin Care: ದೀಪಾವಳಿ ನಂತರ ತ್ವಚೆಯ ಆರೈಕೆಗೆ 5 ಸಿಂಪಲ್‌ ಸಲಹೆ

ದೀಪಾವಳಿ ಹಬ್ಬದ ನಂತರ ನಿಮ್ಮ ತ್ವಚೆಯ ಆರೈಕೆ (After Deepavali Skin Care) ಮಾಡುವುದು ಅತ್ಯಗತ್ಯ. ಇದಕ್ಕಾಗಿ ನೀವು ಏನೆಲ್ಲಾ ಮಾಡಬಹುದು? ಎಂಬುದನ್ನು ಬ್ಯೂಟಿ ಎಕ್ಸ್‌ಪಟ್ರ್ಸ್ ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

After Deepavali Skin Care
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೀಪಾವಳಿ ಹಬ್ಬದ ನಂತರ ನಿಮ್ಮ ತ್ವಚೆಯ ಆರೈಕೆ (After Deepavali Skin Care) ಅತ್ಯವಶ್ಯ. ಅದ್ಯಾಕೆ? ಎಂದು ಯೋಚಿಸುತ್ತಿದ್ದೀರಾ! ಹಬ್ಬದ ಸಂಭ್ರಮಕ್ಕಾಗಿ ಪ್ರತಿದಿನ ಹಚ್ಚಿದ ಗ್ರ್ಯಾಂಡ್‌ ಓವರ್‌ ಮೇಕಪ್‌, ಒಂದರ ಮೇಲೊಂದು ಸವಿದ ಸಿಹಿ ತಿಂಡಿ ಹಾಗೂ ಜಂಕ್‌ ಪದಾರ್ಥ ಸೇವನೆ ಎಲ್ಲವೂ ತ್ವಚೆಯನ್ನು ಡಲ್‌ ಆಗಿಸಬಹುದು. ಕೆಲವರಿಗೆ ಇದರಿಂದ ಮೊಡವೆ ಹಾಗೂ ಜಿಡ್ಡಿನಿಂದ ಚರ್ಮದ ಸಮಸ್ಯೆ ಎದುರಾಗಬಹುದು. ಇವೆಲ್ಲವನ್ನು ನಿಭಾಯಿಸಲು ಫೆಸ್ಟಿವ್‌ ಸೀಸನ್‌ ಮುಗಿದ ನಂತರ ಮುಖದ ಆರೈಕೆಯತ್ತ ಗಮನ ನೀಡುವುದು ಉತ್ತಮ. ಇದರಿಂದ ನಾನಾ ಸ್ಕಿನ್‌ ಸಮಸ್ಯೆಗಳಿಂದ ದೂರಾಗಿ, ಎಂದಿನಂತೆ ನವೋಲ್ಲಾಸದಿಂದ ಕಾಣುವ ತ್ವಚೆಯನ್ನು ತಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ. ಇದಕ್ಕೆ ಪೂರಕ ಎಂಬಂತೆ ಅವರು 5 ಸಿಂಪಲ್‌ ಸಲಹೆ ನೀಡಿದ್ದು, ಪಾಲಿಸಿ ನೋಡಿ ಎಂದಿದ್ದಾರೆ.

Give the makeup a break first

ಮೊದಲು ಮೇಕಪ್‌ಗೆ ಬ್ರೇಕ್‌ ನೀಡಿ

ಪ್ರತಿದಿನ ಮೇಕಪ್‌ ಹಚ್ಚಿದ ಮುಖಕ್ಕೆ ಕೊಂಚ ಬ್ರೇಕ್ ಹಾಕಿ. ಮಾಯಿಶ್ಚರೈಸ್‌ ಮಾಡಿ. ಮುಖದ ತ್ವಚೆಗೆ ಉಸಿರಾಡಲು ಅವಕಾಶ ನೀಡಿ. ಬೇಕಿದ್ದಲ್ಲಿ ರಿಜುನುವೇಟ್‌ ಆಗಲು ಸಹಾಯ ಮಾಡುವ ಹೈಡ್ರೋ ಫೇಶಿಯಲ್‌ ಮಾಡಿಸಿ.

ಕ್ಲೆನ್ಸಿಂಗ್‌- ಟೋನಿಂಗ್‌-ಮಾಯಿಶ್ಚರೈಸಿಂಗ್

ಪ್ರತಿದಿನ ಕ್ಲೆನ್ಸಿಂಗ್‌-ಟೋನಿಂಗ್‌ ಹಾಗೂ ಮಾಯಿಶ್ಚರೈಸಿಂಗ್‌ ಮಾಡಿ. ಇದು ತ್ವಚೆಯನ್ನು ರಿಲ್ಯಾಕ್ಸ್‌ ಮಾಡುವುದರೊಂದಿಗೆ ಸ್ಕಿನ್‌ ಆರೋಗ್ಯ ಸುಧಾರಿಸುತ್ತದೆ.

Get a good night's sleep

ಕಣ್ತುಂಬ ನಿದ್ರೆ ಮಾಡಿ

ಹಬ್ಬದ ಗಡಿಬಿಡಿಯಲ್ಲಿ ಸಾಕಷ್ಟು ಜನ ನಿದ್ರೆ ಕಡಿಮೆ ಮಾಡುತ್ತಾರೆ. ಇದು ಮುಖದ ಮೇಲೆ ಎದ್ದು ಕಾಣದಂತೆ ಮಾಡಲು ಮೇಕಪ್‌ ಹಚ್ಚುತ್ತಾರೆ. ಆದರೆ. ಇದು ತಾತ್ಕಲಿಕ ಪರಿಹಾರ. ನ್ಯಾಚುರಲ್‌ ಆಗಿ ತ್ವಚೆ ಚೆನ್ನಾಗಿ ಕಾಣಲು ಕನಿಷ್ಠ 7-8 ಗಂಟೆಯಾದರೂ ಕಣ್ತುಂಬ ನಿದ್ರೆ ಮಾಡುವುದು ಅಗತ್ಯ. ಮಲಗಿದಾಗ ತ್ವಚೆಯ ರಿಜುನುವೆಟ್‌ಗೆ ಅಗತ್ಯವಿರುವ ಕೊಲಾಜೆನ್‌ ಉತ್ಪತ್ತಿಯಾಗುತ್ತದೆ.

ಶೀಟ್‌ ಮಾಸ್ಕ್‌ ಉಪಯೋಗಿಸಿ

ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ತ್ವಚೆಯ ಫ್ರೆಂಡ್ಲಿ ಹಾಗೂ ಅಗತ್ಯ ಪೌಷ್ಟಿಕಾಂಶಗಳನ್ನು ಪೂರೈಸುವ, ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಶೀಟ್‌ ಮಾಸ್ಕ್‌ ಆಯ್ಕೆ ಮಾಡಿ ಬಳಸಿ. ಇದು ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ.

Use a scrub

ಸ್ಕ್ರಬ್‌ ಬಳಸಿ

ಸ್ಕ್ರಬ್‌ ಬಳಕೆಯಿಂದ ಚರ್ಮದ ಮೇಲಿನ ಡೆಡ್‌ ಸ್ಕಿನ್‌ ಹೋಗುತ್ತದೆ. ಜೊತೆಗೆ ರಕ್ತ ಸಂಚಾರ ಸುಗಮವಾಗುತ್ತದೆ. ಹೋಮ್‌ ಮೇಡ್‌ ಸ್ಕ್ರಬ್‌ ಉತ್ತಮ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Deepavali Mens Fashion: ದೀಪಾವಳಿ ಹಬ್ಬದ ಮೆನ್ಸ್ ಟ್ರೆಡಿಷನಲ್‌ ಸ್ಟೈಲಿಂಗ್‌ಗೆ ಸಾಥ್‌ ನೀಡುವ ಎಥ್ನಿಕ್‌ವೇರ್ಸ್

Continue Reading

ದೀಪಾವಳಿ

ದೀಪಾವಳಿ ಆಚರಣೆ ವೇಳೆ ಹಿಂದುಗಳ ಮೇಲೆ ಖಲಿಸ್ತಾನಿಗಳ ದಾಳಿ; ಕಲ್ಲು ತೂರಿದ ಉಗ್ರರು!

ಕೆನಡಾದಲ್ಲಿ ಖಲಿಸ್ತಾನಿ ಉಗ್ರರು, ಪ್ರತ್ಯೇಕವಾದಿಗಳು ಇದಕ್ಕೂ ಮೊದಲು ಕೂಡ ಹಿಂದುಗಳ ಮೇಲೆ ದಾಳಿ ನಡೆಸಿದ್ದಾರೆ. ಹಿಂದು ದೇವಾಲಯಗಳ ಮೇಲೆ ದಾಳಿ ನಡೆಸಲಾಗಿದೆ. ಈಗ ದೀಪಾವಳಿ ಆಚರಣೆ ವೇಳೆಯೂ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ.

VISTARANEWS.COM


on

Khalistani Attack
Koo

ಒಟ್ಟಾವ: ಕೆನಡಾದಲ್ಲಿ ಹಿಂದುಗಳ ಮೇಲೆ ಖಲಿಸ್ತಾನಿ ಉಗ್ರರು (Khalistani Terrorists), ಮೂಲಭೂತವಾದಿಗಳ ದಾಳಿ ಮುಂದುವರಿದಿದೆ. ಟೊರೊಂಟೊ ಹೊರವಲಯದ ಮಿಸ್ಸಿಸ್ಸೌಗ ಪಟ್ಟಣದಲ್ಲಿ ಹಿಂದುಗಳು ದೀಪಾವಳಿ (Deepavali 2023) ಆಚರಣೆ ಮಾಡುವ ವೇಳೆ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಮೇಲೆ ಕಲ್ಲು ತೂರಾಟ ಮಾಡುವ, ಖಲಿಸ್ತಾನಿ ಧ್ವಜ ಹಾರಿಸಿ ಉದ್ಧಟತನ ಮಾಡಿರುವ ವಿಡಿಯೊ (Viral Video) ಈಗ ಲಭ್ಯವಾಗಿದೆ.

ಕೆನಡಾದ ಟೊರೊಂಟೊ ಸೇರಿ ಹಲವೆಡೆ ಹಿಂದುಗಳು ಸಡಗರ-ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಆದರೆ, ಮಿಸ್ಸಿಸ್ಸೌಗ, ಬ್ರ್ಯಾಂಪ್ಟನ್‌ ಸೇರಿ ಕೆಲವೆಡೆ ಹಿಂದುಗಳು ಪಟಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡುವಾಗ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಆಚರಣೆಗೆ ಅಡ್ಡಿಪಡಿಸುವ ಜತೆಗೆ ಕಲ್ಲು ತೂರಾಟ ಮಾಡಿದ್ದಾರೆ. ಖಲಿಸ್ತಾನಿ ಧ್ವಜ ಹಾರಿಸಿದ ಅವರು ಭಾರತ ವಿರೋಧಿ ಘೋಷಣೆಗಳನ್ನೂ ಕೂಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಕೆನಡಾದಲ್ಲಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಹಲವು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಹಾಗೆಯೇ, ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದೆಲ್ಲ ಆರೋಪಿಸಿದ್ದಾರೆ. ಇದಕ್ಕೆಲ್ಲ ಸೊಪ್ಪು ಹಾಕದ ಭಾರತ ಸರ್ಕಾರವು ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಕೆನಡಾದಲ್ಲಿ ಹಿಂದುಗಳ ಮೇಲೆ ದಾಳಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಸ್ಫೋಟಕ್ಕೆ ಸಂಚು; ಭಾರತ ಆಗ್ರಹಿಸಿದ ಬಳಿಕ ತನಿಖೆಗೆ ಕೆನಡಾ ಆದೇಶ

ಏರ್‌ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಪನ್ನುನ್‌ ಎಚ್ಚರಿಕೆ

ನವೆಂಬರ್‌ 19ರಂದು ಏರ್‌ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಎಚ್ಚರಿಕೆ ನೀಡಿದ್ದಾನೆ. ನವೆಂಬರ್‌ 4ರಂದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ವಿಡಿಯೊ ಪೋಸ್ಟ್‌ ಮಾಡಿದ್ದ. “ನವೆಂಬರ್‌ 19ರಂದು ಸಿಖ್ಖರು ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬಾರದು.‌ ಅಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು” ಎಂದು ಹೇಳಿದ್ದ. ನವೆಂಬರ್‌ 19 ಇಂದಿರಾ ಗಾಂಧಿ ಜನ್ಮದಿನವಾದ ಕಾರಣ ಅಂದೇ ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು ಎಂದಿದ್ದಾನೆ. ಅಮೃತಸರದ ಸ್ವರ್ಣಮಂದಿರ ಹೊಕ್ಕಿದ್ದ ಉಗ್ರರ ವಿರುದ್ಧ ಇಂದಿರಾ ಗಾಂಧಿ ಅವರು ಆಪರೇಷನ್‌ ಬ್ಲ್ಯೂ ಸ್ಟಾರ್‌ಗೆ ಆದೇಶ ಮಾಡಿದ ಬಳಿಕ ಅವರು 1984ರಲ್ಲಿ ಹತ್ಯೆಗೀಡಾದರು. ಈಗ ಅವರ ಜನ್ಮದಿನದಂದೇ ಏರ್‌ ಇಂಡಿಯಾ ವಿಮಾನ ಸ್ಫೋಟಿಸಲು ಸಂಚು ರೂಪಿಸಲಾಗಿದೆ. ಭಾರತದ ಆಗ್ರಹದ ಬಳಿಕ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಕೆನಡಾ ತಿಳಿಸಿದೆ.

Continue Reading

ದೀಪಾವಳಿ

ಬ್ರಿಟನ್ ಪಿಎಂ ಕಚೇರಿಯಲ್ಲಿ ದೀಪಾವಳಿ! ಗಮನ ಸೆಳೆದ ಅಕ್ಷತಾ ಮೂರ್ತಿ ಉಡುಗೆ

Diwali 2023: ಬ್ರಿಟನ್ ಪಿಎಂ ಸರ್ಕಾರಿ ಅಧಿಕೃತ ನಿವಾಸದಲ್ಲಿ ಈ ಬಾರಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕದ ಅಳಿಯನಾಗಿರುವ ಬ್ರಿಟನ್ ಪಿಎಂ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

VISTARANEWS.COM


on

Diwali in British PM's office! Akshata Murthy fashionable dress caught attention
Koo

ಲಂಡನ್: ಬ್ರಿಟನ್ ಪ್ರಧಾನಿ ಅಧಿಕೃತ ಕಚೇರಿ ನಿವಾಸದಲ್ಲಿ (10 Downing Street) ಈ ಬಾರಿ ದೀಪಾವಳಿಯ ( Diwali 2023) ಕಲರವ ಮೇಳೈಸಿತ್ತು. ಪ್ರಧಾನಿ ರಿಷಿ ಸುನಕ್ (UK PM Rishi Sunak) ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಹಾಗೂ ಮಕ್ಕಳು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅಕ್ಷತಾ ಅವರು ಯಾವಾಗಲೂ ಫ್ಯಾಶನೇಬಲ್ ಆಗಿರುತ್ತಾರೆ. ಈಗ ದೀಪಾವಳಿಯಂದು ಅವರ ಸಾಂಪ್ರದಾಯಿಕ ಉಡುಗೆ ಗಮನ ಸೆಳೆದಿದೆ. ಅಕ್ಷತಾ ಅವರು ಎಲೆಕ್ಟ್ರಿಕ್ ನೀಲಿ ಮೈಸೂರು ರೇಷ್ಮೆ ಸೀರೆಯಲ್ಲಿ ಸೊಗಸಾಗಿ ಕಾಣುತ್ತಿದ್ದರು. ಅವರು ಸೀರೆಯನ್ನು ಸೊಗಸಾಗಿ ಧರಿಸಿದ್ದರು. ಸೀರೆಯೊಂದಿಗೆ ಸಣ್ಣ ತೋಳಿನ ಕುಪ್ಪಸವನ್ನು ಧರಿಸಿದ್ದರು. ಸರಳವಾದ ಸೀರೆಯು ತೆಳುವಾದ ಚಿನ್ನದ ಅಂಚುಗಳನ್ನು ಪ್ರದರ್ಶಿಸಿತು ಮತ್ತು ಕುಪ್ಪಸವು ಹೂವಿನ ಮೋಟಿಫ್‌ಗಳನ್ನು ಒಳಗೊಂಡಿತ್ತು. ಅಕ್ಷತಾ ಒಂದು ಜೊತೆ ನೇತಾಡುವ ಕಿವಿಯೋಲೆಗಳು, ಗಂಡಬೇರುಂಡ ನೆಕ್ಲೇಸ್ ಮತ್ತು ಬಳೆಗಳನ್ನು ಧರಿಸಿದ್ದರು.

ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಯಾವಾಗಲೂ ಪ್ರೇಕ್ಷಕರ ಮೇಲೆ ಫ್ಯಾಶನ್ ಪ್ರಭಾವ ಬೀರಿದ್ದಾರೆ. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಅಥವಾ ಅಂತರಾಷ್ಟ್ರೀಯ ಶೃಂಗಸಭೆಗಳಿಗೆ ಆಕೆಯ ವಿಶಿಷ್ಟ ತೊಡುಗೆ, ಆಕೆಯ ಶೈಲಿ ಮತ್ತು ಸೊಬಗುಗೆ ಮಿತಿಯಿರಲಿಲ್ಲ.

ದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಅಕ್ಷತಾ ಮೂರ್ತಿ ಅವರ ವಾರ್ಡ್ರೋಬ್ ಆಯ್ಕೆಗಳು ಉನ್ನತ ದರ್ಜೆಯದ್ದಾಗಿದ್ದವು ಎಂಬುದು ಮನವರಿಕೆಯಾಗಿತ್ತು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆದ ರಾಗಿ ಪ್ರದರ್ಶನಕ್ಕಾಗಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಆಯೋಜಿಸಿದ್ದ ಜಿ20 ಸಂಗಾತಿಗಳ ಕಾರ್ಯಕ್ರಮಕ್ಕೆ ಮುದ್ರಿತ ನೀಲಕ ಮಿಡಿ ಉಡುಗೆಯನ್ನು ಆರಿಸಿಕೊಂಡಿದ್ದರು. ಉಡುಪಿನಲ್ಲಿ ಹೂವಿನ ಮುದ್ರಿತ ನಾಟಕೀಯ ಪಫ್ಡ್ ಸ್ಲೀವ್‌ಗಳು ಎ-ಲೈನ್ ಸಿಲೂಯೆಟ್ ಮತ್ತು ಭುಗಿಲೆದ್ದ ಕೆಳಭಾಗವನ್ನು ಒಳಗೊಂಡಿತ್ತು. ಇದು ಆಕರ್ಷಕವಾಗಿತ್ತು.

ಈಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಕ್ಷತಾ ಮೂರ್ತಿ ಅವರು ತೊಡುಗೆ ಶೈಲಿಯ ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣಗೊಂಡಿದೆ. ಅಕ್ಷತಾ ಮೂರ್ತಿ ಅವರು ತಮ್ಮ ಫ್ಯಾಶನೇಬಲ್ ಸ್ಟೇಟ್‌ಮೆಂಟ್ ಮಾಡಿದ್ದಾರೆ. ಬ್ರಿಟನ್ ಪ್ರಧಾನಿಯ ಮನೆಯಲ್ಲಿ ನಡೆದ ದೀಪಾವಳಿ ಹಬ್ಬದ ಆಚರಣೆಯು ವಾವ್ ಎನ್ನುವಂತಿತ್ತು. ಇದಕ್ಕೆ ಅಕ್ಷತಾ ಮೂರ್ತಿ ಅವರು ಉಡುಗೆ-ತೊಡುಗೆ ಕಳಶವಿಟ್ಟಂತೆ ಇತ್ತು ಎಂದು ಫ್ಯಾಶನ್ ಜಗತ್ತಿನ ತಜ್ಞರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: 75 ವರ್ಷದಲ್ಲೇ ಮೊದಲ ಬಾರಿಗೆ ಕಾಶ್ಮೀರದ ಶಾರದಾ ದೇವಿ ದೇಗುಲದಲ್ಲಿ ದೀಪಾವಳಿ ಆಚರಣೆ!

Continue Reading

ಕ್ರಿಕೆಟ್

KL Rahul: ಕನ್ನಡದಲ್ಲೇ ದೀಪಾವಳಿಯ ಶುಭ ಕೋರಿದ ಕೆ.ಎಲ್​ ರಾಹುಲ್​

ಟೀಮ್ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರು ನಾಡಿದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ(diwali wishes) ಕೋರಿದ್ದಾರೆ.

VISTARANEWS.COM


on

kl rahul century celebration
Koo

ಬೆಂಗಳೂರು: ದೇಶಾದ್ಯಂತ ದೀಪಾವಳಿ(diwali 2023) ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲೆಲ್ಲೂ ಪಟಾಕಿ ಸದ್ದು ಕೇಳಿಸುತ್ತಿದೆ. ಕುಟುಂಬಸ್ಥರು, ಸಂಬಂಧಿಕರು, ಗೆಳೆಯರ ಜತೆ ಹಬ್ಬದ ಆಚರಣೆ ಭರ್ಜರಿಯಾಗಿದೆ. ಇದರ ಬೆನ್ನಲೇ ಟೀಮ್ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರು ನಾಡಿದ ಜನತೆಗೆ ದೀಪಾವಳಿ ಶುಭಾಶಯ(diwali wishes) ಕೋರಿದ್ದಾರೆ​. ಅದು ಕೂಡ ಕನ್ನಡದಲ್ಲೇ ಶುಭ ಕೋರಿ ಎಲ್ಲ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅವರು ಶತಕ ಬಾರಿಸಿ ಸಂಭ್ರಮಿಸಿದ್ದರು. ತಮ್ಮ ಶತಕದ ಮತ್ತು ಪಂದ್ಯದ ಫೋಟೊಗಳನ್ನು ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಾಕಿ ‘ದೀಪಾವಳಿಯ ಶುಭಾಶಯಗಳು’ ಎಂದು ಬರೆದು ತಿವರ್ಣ ಧ್ವಜ ಮತ್ತು ಹಣತೆಯ ಎಮೋಜಿಯನ್ನು ಹಾಕಿದ್ದಾರೆ.

ದಾಖಲೆ ಬರೆದ ರಾಹುಲ್​

ನೆದರ್ಲೆಂಡ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು 2023 ರ (ಹಾಲಿ ಆವೃತ್ತಿಯ) ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆ ಅವರು ಮುರಿದರು.

ರಾಹುಲ್ 64 ಎಸೆತಗಳಲ್ಲಿ 102 ರನ್ ಗಳಿಸುವ ಹಾದಿಯಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್​ಗಳನ್ನು ಬಾರಿಸಿದರು, ಇದು ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಎರಡನೇ ಅತಿ ಹೆಚ್ಚು ಮೊತ್ತಕ್ಕೆ (410/4) ಮುನ್ನಡೆಸಿತು. ಇದು ರಾಹುಲ್ ಅವರ ಆರನೇ ಏಕದಿನ ಶತಕವಾಗಿದೆ. ಭಾರತದ 5ನೇ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್ ಜೊತೆಗೂಡಿ 208 ರನ್​ಗಳ ಜೊತೆಯಾಟವಾಡಿದ್ದು, ಇದು ಏಕದಿನ ವಿಶ್ವಕಪ್​​ನಲ್ಲಿ ನಾಲ್ಕನೇ ವಿಕೆಟ್​ಗೆ ಅತಿ ಹೆಚ್ಚು ರನ್​ಗಳ ಜೊತೆಯಾಟದ ದಾಖಲೆಯಾಗಿದೆ.

ಇದನ್ನೂ ಓದಿ MS Dhoni: ಧೋನಿ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ ರಿಷಭ್​ ಪಂತ್​

ತವರಿನ ಅಂಗಳದಲ್ಲಿ ರಾಹುಲ್ ಅವರು ಪ್ರಚಂಡ ಬ್ಯಾಟಿಂಗ್​ ತೋರ್ಪಡಿಸುವ ಮೂಲಕ ನೆರೆದಿದ್ದ ತವರಿನ ಅಭಿಮಾನಿಗಳಿಗೆ ಭರಪೂರ ರಂಚನೆ ನೀಡಿದರು. ಬ್ಯಾಟಿಂಗ್​ ಮಾತ್ರವಲ್ಲದೆ ಕೀಪಿಂಗ್​ನಲ್ಲಿಯೂ ಮಿಂಚಿದ ಅವರು 2 ಅದ್ಭುತ ಕ್ಯಾಚ್​ಗಳನ್ನು ಕೂಡ ಹಿಡಿದು ಮಿಂಚಿದರು.

ಜತೆಯಾಟದಲ್ಲಿಯೂ ದಾಖಲೆ ಬರೆದ ರಾಹುಲ್​

ಈ ಪಂದ್ಯದಲ್ಲಿ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ಪರವಾಗಿ ನಾಲ್ಕನೇ ಅತ್ಯಧಿಕ ರನ್​ಗಳ ಜತೆಯಾಟ ನಡೆಸಿ ದಾಖಲೆಯ ಬರೆದರು. ಉಭಯ ಆಟಗಾರರು ನಾಲ್ಕನೇ ವಿಕೆಟ್​ಗೆ 208 ರನ್​ಗಳ ಜತೆಯಾಟ ನೀಡಿದರು. ಈ ಮೂಕಲ ವಿಶ್ವಕಪ್​ನಲ್ಲಿ ನಾಲ್ಕನೇ ವಿಕೆಟ್ ಅಥವಾ ಅದಕ್ಕಿಂತ ಕಡಿಮೆ ವಿಕೆಟ್​ಗೆ ಭಾರತದ ಅತ್ಯಧಿಕ ಜತೆಯಾಟ ನಡೆಸಿದ ದಾಖಲೆ ನಿರ್ಮಿಸಿದರು.

Continue Reading
Advertisement
KEA
ಕರ್ನಾಟಕ7 mins ago

UGCET 2024: ಯುಜಿಸಿಇಟಿ ಅರ್ಜಿ ತಿದ್ದುಪಡಿಗೆ ಅಂತಿಮ ಅವಕಾಶ ನೀಡಿದ ಕೆಇಎ; ಕೊನೆಯ ದಿನಾಂಕ ಯಾವಾಗ?

Money Guide
ಮನಿ-ಗೈಡ್9 mins ago

Money Guide: ಭಾರತದಲ್ಲಿಯೂ ಆರಂಭವಾಯ್ತು ಬಹು ನಿರೀಕ್ಷಿತ ಗೂಗಲ್ ವ್ಯಾಲೆಟ್‌; ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ?

Sam Pitroda
ದೇಶ10 mins ago

ಪಿತ್ರೋಡಾ ‘ಸಂಪತ್ತು ಹಂಚಿಕೆ’ ಹೇಳಿಕೆ, ಮಣಿಶಂಕರ್‌ ಅಯ್ಯರ್‌ ಪಾಕ್‌ ಪ್ರೇಮ; ಕಾಂಗ್ರೆಸ್‌ಗೆ ಈಗ ತೀವ್ರ ಫಜೀತಿ!

IPL 2024
ಕ್ರೀಡೆ20 mins ago

IPL 2024: ಕೆ.ಎಲ್​ ರಾಹುಲ್​ಗೆ ಬೈದ ಎಲ್​​ಎಸ್​​ಜಿ ಮಾಲೀಕ ಗೋಯೆಂಕಾ ವರ್ತನೆಗೆ ಮೊಹಮ್ಮದ್​ ಶಮಿ ಆಕ್ರೋಶ

Self Harming Murder case In kodagu
ಕೊಡಗು27 mins ago

Self Harming : ಕೊಡಗಿನಲ್ಲಿ ಬಾಲಕಿಯ ರುಂಡ ಕತ್ತರಿಸಿದ್ದ ಪ್ರೇಮಿ ನೇಣಿಗೆ ಶರಣು

IPL 2024
ಕ್ರೀಡೆ39 mins ago

IPL 2024 : ಆರ್​ಸಿಬಿಯ ಪ್ಲೇಆಫ್​ ಚಾನ್ಸ್​ ಇದೆಯೇ? ಇಲ್ಲಿದೆ ನೋಡಿ ಲೆಕ್ಕಾಚಾರ

Prajwal Revanna case SIT did not contact woman to file false case
ಕ್ರೈಂ42 mins ago

Prajwal Revanna case: ಸುಳ್ಳು ಕೇಸ್‌ ಹಾಕಲು ಮಹಿಳೆಯನ್ನು SIT ಸಂಪರ್ಕ ಮಾಡಿಲ್ಲ; ಕಾಟ ಕೊಟ್ಟವನನ್ನು ಬಿಡಲ್ಲ!

Murder case
ಕ್ರೈಂ48 mins ago

Murder case : ತೃತೀಯ ಲಿಂಗಿಯನ್ನು ಕೊಂದ ಮಹಿಳೆ; ಮಗನಿಗೆ ನಾಯಿ ಚೈನ್‌ ಹಾಕಿ ಎಳೆಯುವಾಗ ಸಾವು

IPL 2024
ಪ್ರಮುಖ ಸುದ್ದಿ1 hour ago

IPL 2024 : ರಾಹುಲ್ ದ್ರಾವಿಡ್ ಸೃಷ್ಟಿಸಿದ್ದ 14 ವರ್ಷಗಳ ಹಿಂದಿನ ದಾಖಲೆ ಮುರಿದ ದಿನೇಶ್ ಕಾರ್ತಿಕ್

Madara Channaiah Gurupeeta
ಕರ್ನಾಟಕ1 hour ago

Madara Channaiah Gurupeeta: ಮಾದಾರ ಚನ್ನಯ್ಯ ಗುರುಪೀಠಕ್ಕೆ ನೂತನ ವಟು ಸ್ವೀಕಾರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ3 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ5 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ6 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ12 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ19 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ21 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ21 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌