Independence Day 2024: ಒಂದೇ ದಿನ ಸ್ವಾತಂತ್ರ್ಯ ಪಡೆದಿದ್ದರೂ ಪಾಕಿಸ್ತಾನದಲ್ಲೇಕೆ ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ದಿನಾಚರಣೆ? - Vistara News

ವಿದೇಶ

Independence Day 2024: ಒಂದೇ ದಿನ ಸ್ವಾತಂತ್ರ್ಯ ಪಡೆದಿದ್ದರೂ ಪಾಕಿಸ್ತಾನದಲ್ಲೇಕೆ ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ದಿನಾಚರಣೆ?

1947ರ ಆಗಸ್ಟ್‌ನಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ದೇಶವನ್ನು ಎರಡು ಸ್ವತಂತ್ರ ರಾಷ್ಟ್ರಗಳಾಗಿ ವಿಭಜಿಸಿದರು. ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ಏಕಕಾಲದಲ್ಲಿ ವಿಭಜನೆಯಾಗಿದ್ದರೂ ಎರಡು ವಿಭಿನ್ನ ದಿನಗಳಲ್ಲಿ ಯಾಕೆ ಸ್ವಾತಂತ್ರ್ಯವನ್ನು ಆಚರಿಸುತ್ತಾರೆ (Independence day 2024) ಎನ್ನುವುದು ಕುತೂಹಲಕರವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Independence day 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತ ಮತ್ತು ಪಾಕಿಸ್ತಾನ (India and Pakistan) ಒಟ್ಟಿಗೆ ಈ ಬಾರಿ 78ನೇ ಸ್ವಾತಂತ್ರ್ಯ ದಿನವನ್ನು (Independence day 2024) ಆಚರಿಸುವ ಸಂಭ್ರಮದಲ್ಲಿದೆ. ಆದರೆ ಭಾರತವು ಆಗಸ್ಟ್ 15ರಂದು ಸಂಭ್ರಮಾಚರಣೆ ನಡೆಸಿದರೆ ನೆರೆಯ ರಾಷ್ಟ್ರ ಪಾಕಿಸ್ತಾನವು ಒಂದು ದಿನ ಮುಂಚಿತವಾಗಿ ಅಂದರೆ ಆಗಸ್ಟ್ 14ರಂದು ಈ ಆಚರಣೆಯನ್ನು ನಡೆಸುತ್ತದೆ. 1947ರ ಆಗಸ್ಟ್‌ನಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ದೇಶವನ್ನು ಎರಡು ಸ್ವತಂತ್ರ ರಾಷ್ಟ್ರಗಳಾಗಿ ವಿಭಜಿಸಿದರು. ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ಏಕಕಾಲದಲ್ಲಿ ವಿಭಜನೆಯಾಗಿದ್ದರೂ ಎರಡು ವಿಭಿನ್ನ ದಿನಗಳಲ್ಲಿ ಯಾಕೆ ಸ್ವಾತಂತ್ರ್ಯವನ್ನು ಆಚರಿಸುತ್ತಾರೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಇತಿಹಾಸದಲ್ಲಿ ಏನಿದೆ?

1947ರ ಜುಲೈ 18ರಂದು ಘೋಷಿಸಲಾದ 1947ರ ಭಾರತೀಯ ಸ್ವಾತಂತ್ರ್ಯ ಕಾಯಿದೆಯು ಭಾರತ ಮತ್ತು ಪಾಕಿಸ್ತಾನಕ್ಕೆ ಜನ್ಮ ನೀಡಿತು. ಕಾಯಿದೆಯ ಪ್ರಕಾರ, 1947ರ ಆಗಸ್ಟ್ 15ರಂದು ಭಾರತದಲ್ಲಿ ಎರಡು ಸ್ವತಂತ್ರ ರಾಷ್ಟ್ರಗಳನ್ನು ಸ್ಥಾಪಿಸಲಾಗುವುದು. ಇದನ್ನು ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನ ಎಂದು ಕರೆಯಲಾಗುತ್ತದೆ ಎಂಬ ಉಲ್ಲೇಖ ಇತ್ತು.


ಆಗಸ್ಟ್ 15 ಪಾಕಿಸ್ತಾನದ ಸ್ವಾತಂತ್ರ್ಯ ದಿನವಾಗಿತ್ತು ಎಂಬುದು ಪಾಕಿಸ್ತಾನದ ಸ್ಥಾಪಕ ಪಿತಾಮಹ ಮೊಹಮ್ಮದ್ ಅಲಿ ಜಿನ್ನಾ ಅವರ ಐತಿಹಾಸಿಕ ರೇಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಇದರಲ್ಲಿ ಅವರು, ಆಗಸ್ಟ್ 15 ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾದ ಪಾಕಿಸ್ತಾನದ ಜನ್ಮದಿನವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ತನ್ನ ತಾಯ್ನಾಡನ್ನು ಹೊಂದಲು ದೊಡ್ಡ ತ್ಯಾಗ ಮಾಡಿದ ಮುಸ್ಲಿಂ ರಾಷ್ಟ್ರದ ಜನತೆಯ ಕನಸನ್ನು ಇದು ನನಸು ಮಾಡಿರುವುದನ್ನು ಸೂಚಿಸುತ್ತದೆ ಎಂದು ಜಿನ್ನಾ ಹೇಳಿದ್ದರು.

2016ರಲ್ಲಿ ಪಾಕಿಸ್ತಾನದ ಹಿರಿಯ ಪತ್ರಕರ್ತೆ ಶಾಹಿದಾ ಖಾಜಿ ಅವರು ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ, ನಾವು ಯಾವುದೇ ರೀತಿಯ ತರ್ಕವನ್ನು ಬಳಸಿದರೂ ಆಗಸ್ಟ್ 15 ಪಾಕಿಸ್ತಾನ ತನ್ನ ಸ್ವಾತಂತ್ರ್ಯವನ್ನು ಆಚರಿಸಬೇಕಾದ ದಿನವಾಗಿದೆ ಎಂದು ಹೇಳಿದ್ದರು. ಜಿನ್ನಾ ಮತ್ತು ಪಾಕಿಸ್ತಾನ ಕ್ಯಾಬಿನೆಟ್ 1947ರ ಆಗಸ್ಟ್ 15ರಂದು ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದರು.

Independence day 2024
Independence day 2024

ಅಂಚೆ ಚೀಟಿಗಳಲ್ಲೂ ಮುದ್ರಣ

ಜುಲೈ 1948ರಲ್ಲಿ ಬಿಡುಗಡೆಯಾದ ಪಾಕಿಸ್ತಾನದ ಮೊದಲ ಸ್ಮರಣಾರ್ಥ ಅಂಚೆ ಚೀಟಿಗಳಲ್ಲಿ 1947ರ ಆಗಸ್ಟ್ 15 ಅನ್ನು ದೇಶದ ಸ್ವಾತಂತ್ರ್ಯ ದಿನವೆಂದು ಉಲ್ಲೇಖಿಸಲಾಗಿದೆ. ಮುಸ್ಲಿಮರಿಗೆ 1947ರ ಆಗಸ್ಟ್ 15ರಂದು ಪವಿತ್ರವಾದ ರಂಜಾನ್ ತಿಂಗಳ ಕೊನೆಯ ಶುಕ್ರವಾರವಾದ್ದರಿಂದ ಇದು ಮಂಗಳಕರ ದಿನವಾಗಿತ್ತು.

ಪಾಕಿಸ್ತಾನದ ಮಾಜಿ ಪ್ರಧಾನಿ ಚೌಧರಿ ಮುಹಮ್ಮದ್ ಅಲಿ ಅವರು ತಮ್ಮ 1967ರ ಪುಸ್ತಕ ʼದಿ ಎಮರ್ಜೆನ್ಸ್ ಆಫ್ ಪಾಕಿಸ್ತಾನʼದಲ್ಲಿ ಹೀಗೆ ಬರೆದಿದ್ದಾರೆ: ಹದಿನೈದನೇ ಆಗಸ್ಟ್ 1947 ರಂಜಾನ್-ಉಲ್-ಮುಬಾರಕ್‌ನ ಕೊನೆಯ ಶುಕ್ರವಾರ ಇದು ಇಸ್ಲಾಂ ಧರ್ಮದ ಪವಿತ್ರ ದಿನಗಳಲ್ಲಿ ಒಂದಾಗಿದೆ. ಆ ಮಂಗಳಕರ ದಿನದಂದು, ಕ್ವೈಡ್-ಇ-ಆಜಮ್ [ಜಿನ್ನಾ] ಪಾಕಿಸ್ತಾನದ ಗವರ್ನರ್-ಜನರಲ್ ಆದರು ಮತ್ತು ಸಂಪುಟವು ಪ್ರಮಾಣ ವಚನ ಸ್ವೀಕರಿಸಿತು. ನಕ್ಷತ್ರ ಮತ್ತು ಅರ್ಧಚಂದ್ರ ಧ್ವಜವನ್ನು ಹಾರಿಸಲಾಯಿತು. ಪಾಕಿಸ್ತಾನವು ವಿಶ್ವ ಭೂಪಟದಲ್ಲಿ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು.

1947ರ ಆಗಸ್ಟ್ 14ರಂದು ಏನಾಯಿತು?

1947ರ ಆಗಸ್ಟ್ 14ರಂದು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಪಾಕಿಸ್ತಾನದ ಸಂವಿಧಾನ ಸಭೆಯಲ್ಲಿ ಭಾಷಣ ಮಾಡಿದರು. ಅವರು ಆಗಸ್ಟ್ 15ರ ಮಧ್ಯರಾತ್ರಿ ಭಾರತ ಮತ್ತು ಪಾಕಿಸ್ತಾನಕ್ಕೆ ಅಧಿಕಾರವನ್ನು ಹಸ್ತಾಂತರಿಸಬೇಕಿತ್ತು. ಆದರೆ, ಮೌಂಟ್ ಬ್ಯಾಟನ್ ಏಕಕಾಲದಲ್ಲಿ ನವದೆಹಲಿ ಮತ್ತು ಕರಾಚಿ ಎರಡರಲ್ಲೂ ಇರಲು ಸಾಧ್ಯವಿರಲಿಲ್ಲ. ಹಾಗಾಗಿ
ಮೌಂಟ್ ಬ್ಯಾಟನ್ ಅವರು ಆಗಸ್ಟ್ 14ರಂದು ಕರಾಚಿಯಲ್ಲಿ ಮೊದಲು ಪಾಕಿಸ್ತಾನಕ್ಕೆ ಅಧಿಕಾರವನ್ನು ವರ್ಗಾಯಿಸಿದರು ಮತ್ತು ಅನಂತರ ನವದೆಹಲಿಗೆ ಪ್ರಯಾಣಿಸಿದರು.


ಖ್ಯಾತ ಪಾಕಿಸ್ತಾನಿ ಇತಿಹಾಸಕಾರ ಖುರ್ಷೀದ್ ಕಮಲ್ ಅಜೀಜ್ ಅವರು ತಮ್ಮ ʼಮರ್ಡರ್ ಆಫ್ ಹಿಸ್ಟರಿʼ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: ಭಾರತದಲ್ಲಿ ಬ್ರಿಟಿಷ್ ರಾಜನ ಏಕೈಕ ಪ್ರತಿನಿಧಿಯಾಗಿದ್ದ ವೈಸ್‌ರಾಯ್ ಅಧಿಕಾರವನ್ನು ವೈಯಕ್ತಿಕವಾಗಿ ಹೊಸ ದೇಶಗಳಿಗೆ ವರ್ಗಾಯಿಸಬೇಕಾಗಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಕರಾಚಿ ಮತ್ತು ನವದೆಹಲಿಯಲ್ಲಿ ಒಂದೇ ಕ್ಷಣದಲ್ಲಿ ಖುದ್ದಾಗಿ ಹಾಜರಾಗಲು ಸಾಧ್ಯವಾಗಲಿಲ್ಲ. ಆಗಸ್ಟ್ 15ರ ಬೆಳಗ್ಗೆ ಭಾರತಕ್ಕೆ ಅಧಿಕಾರವನ್ನು ವರ್ಗಾಯಿಸಿ ಅನಂತರ ಕರಾಚಿಗೆ ಹೋಗುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಆ ಹೊತ್ತಿಗೆ ಅವರು ಹೊಸ ಭಾರತೀಯ ಡೊಮಿನಿಯನ್‌ನ ಗವರ್ನರ್ ಜನರಲ್ ಆಗುತ್ತಿದ್ದರು. ಹೀಗಾಗಿ ಅವರು ಭಾರತದ ವೈಸ್‌ರಾಯ್ ಆಗಿ ಆಗಸ್ಟ್ 14ರಂದು ಪಾಕಿಸ್ತಾನಕ್ಕೆ ಹೋಗಿ ಅಧಿಕಾರವನ್ನು ವರ್ಗಾಯಿಸಿದರು. ಇದರ ಅರ್ಥ ಪಾಕಿಸ್ತಾನವು ಆಗಸ್ಟ್ 14ರಂದು ತನ್ನ ಸ್ವಾತಂತ್ರ್ಯವನ್ನು ಗಳಿಸಿತು ಎಂಬುದಲ್ಲ.

ದಿನಾಂಕ ಏಕೆ ಬದಲಾಯಿತು?

ಭಾರತದಂತೆಯೇ ಪಾಕಿಸ್ತಾನವೂ ತನ್ನ ಸ್ವಾತಂತ್ರ್ಯವನ್ನು ಪ್ರತಿ ವರ್ಷ ಆಗಸ್ಟ್ 15ರಂದು ಆಚರಿಸಬೇಕಿತ್ತು. ಆದರೆ 1948ರಲ್ಲಿ ಪಾಕಿಸ್ತಾನವು ತನ್ನ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 14ಕ್ಕೆ ಮುಂದೂಡಿತು. ಮಾಧ್ಯಮಗಳ ವರದಿ ಪ್ರಕಾರ ಕೆಲವು ಪಾಕಿಸ್ತಾನ ನಾಯಕರು ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಬಯಸಿದ್ದರು. 1948ರ ಜೂನ್ ಅಂತ್ಯದ ವೇಳೆಗೆ ಆಗಿನ ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ನೇತೃತ್ವದಲ್ಲಿ ಮಂತ್ರಿಗಳ ಗುಂಪು ಇದಕ್ಕಾಗಿ ಸಭೆಯನ್ನು ಕರೆದಿತ್ತು. ಈ ಸಭೆಯಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಒಂದು ದಿನದ ಟ್ಟಿಗೆ ಹಿಂದೂಡಲು ನಿರ್ಧರಿಸಲಾಯಿತು. ಹೀಗಾಗಿ ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 14ಕ್ಕೆ ನಡೆಸುವ ಪ್ರಸ್ತಾಪವನ್ನು ಜಿನ್ನಾ ಅನುಮೋದಿಸಿದರು ಎನ್ನಲಾಗುತ್ತದೆ.


ಎಲ್ಲರ ಒಪ್ಪಿಗೆ ಸಿಕ್ಕಿಲ್ಲ

ʼಜಿನ್ನಾ: ಮಿಥ್ ಅಂಡ್ ರಿಯಾಲಿಟಿʼಯ ಲೇಖಕ ಯಾಸರ್ ಲತೀಫ್ ಹಮ್ದಾನಿ ಅವರು 2013ರಲ್ಲಿ ಮಾಧ್ಯಮವೊಂದಕ್ಕೆ ಮಾತನಾಡಿ, ದಿನಾಂಕ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದರು. ಪಾಕಿಸ್ತಾನವು ತನ್ನ ಗುರುತನ್ನು ತಾನೇ ಕೆತ್ತ ಬಹುದಾದ ಹೊಸ ರಾಷ್ಟ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

ಪಾಕಿಸ್ತಾನದ ನಾಯಕರು ಸ್ವಾತಂತ್ರ್ಯ ದಿನಾಚರಣೆಯನ್ನು ಆ. 14ರಂದು ಆಚರಿಸಲು ಏಕೆ ನಿರ್ಧರಿಸಿದ್ದಾರೆ ಎಂಬುದು ಸಂಪೂರ್ಣವಾಗಿ ವಿಶಿಷ್ಟ ಕತೆಯಾಗಿದೆ. ಅವರು ಬಹುಶಃ ಭಾರತಕ್ಕಿಂತ ವಿಭಿನ್ನ ದಿನದಲ್ಲಿ ಇದನ್ನು ಆಚರಿಸಬೇಕೆಂದು ಬಯಸಿದ್ದರು ಎಂದು ಪತ್ರಕರ್ತ ಖಾಜಿ ಹೇಳಿದ್ದರು. ಹೀಗಾಗಿ 1948ರಿಂದ ಪಾಕಿಸ್ತಾನವು ಆಗಸ್ಟ್ 14ರಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Bangladesh Unrest: ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; ಮತ್ತೊಂದು ದೇಗುಲ, ಮನೆಗೆ ಬೆಂಕಿ

Bangladesh Unrest: ಗಲಭೆ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಮತ್ತೊಂದು ಹಿಂದೂ ದೇವಾಲಯ ಮತ್ತು ಮನೆಗೆ ಬೆಂಕಿ ಹಚ್ಚಲಾಗಿದೆ. ಕುರಿಗ್ರಾಮ್ ಜಿಲ್ಲೆಯ ಮುಕುಲ್ ಚಂದ್ರರಾಯ್ ಎಂಬವರ ಮನೆ ಮತ್ತು ದೇವಾಲಯದ ಮೇಲೆ ದಾಳಿ ನಡೆದಿದೆ. ರಾಯ್‌ ಅವರ ಮನೆ ಮತ್ತು ದೇವಸ್ಥಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Bangladesh Unrest
Koo

ಢಾಕಾ: ಬಾಂಗ್ಲಾದೇಶ (Bangladesh Unrest)ದಲ್ಲಿ ತಲೆದೋರಿರುವ ಅರಾಜಕತೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಜೀವಕ್ಕೆ ಅಪಾಯವನ್ನು ತಂದೊಡ್ಡಿದೆ. ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಮತ್ತೊಂದು ಹಿಂದೂ ದೇವಾಲಯ ಮತ್ತು ಮನೆಗೆ ಬೆಂಕಿ ಹಚ್ಚಲಾಗಿದೆ.

ಮಂಗಳವಾರ (ಆಗಸ್ಟ್‌ 13) ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕುರಿಗ್ರಾಮ್ ಜಿಲ್ಲೆಯ ಮುಕುಲ್ ಚಂದ್ರರಾಯ್ ಎಂಬವರ ಮನೆ ಮತ್ತು ದೇವಾಲಯದ ಮೇಲೆ ದಾಳಿ ನಡೆದಿದೆ. ರಾಯ್‌ ಅವರ ಮನೆ ಮತ್ತು ದೇವಸ್ಥಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ದುಷ್ಕರ್ಮಿಗಳು ಬೆಂಕಿ ಹಚ್ಚಿದ ತಕ್ಷಣ ಸ್ಥಳೀಯರು ಧಾವಿಸಿ ಬಂದು ನಂದಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಷ್ಟೊತ್ತಿಗಾಗಲೇ ಎಲ್ಲವೂ ಹೊತ್ತಿ ಉರಿದಿತ್ತು. ಮನೆಯಲ್ಲಿದ್ದ ಎಲ್ಲವೂ ನಾಶವಾಗಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಮುಕುಲ್ ಚಂದ್ರರಾಯ್ ಅವರು ಕುರಿಗ್ರಾಮ್ ಜಿಲ್ಲೆಯ ರಾಜರ್ಹತ್ ಉಪಜಿಲಾದ ಚಕೀರ್ ಪೋಷಾ ಯೂನಿಯನ್ ಅಡಿಯಲ್ಲಿ ಪಟೋವರಿ ಪ್ಯಾರಾ ಗ್ರಾಮದಲ್ಲಿ ವಾಸವಾಗಿದ್ದಾರೆ. ಅವರ ಪತ್ನಿ ಮತ್ತು ಮಗ ತಮ್ಮ ಸುಟ್ಟ ಮನೆ ಮತ್ತು ದೇವಾಲಯದ ಮುಂದೆ ಅಳುತ್ತಿರುವುದು ಕಂಡು ಬಂದಿದೆ.

ಸೇನೆಯೊಂದಿಗೆ ಸಂಘರ್ಷ

ಹೆಚ್ಚುತ್ತಿರುವ ಅಶಾಂತಿಯ ಮಧ್ಯೆ ಬಾಂಗ್ಲಾದೇಶದ ಹಿಂದೂ ಸಮುದಾಯದವರು ಮಂಗಳವಾರ ಢಾಕಾದಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ವಾರ ನಡೆದ ರಾಜಕೀಯ ವಿಪ್ಲವದ ನಂತರ ದೇಶದಲ್ಲಿ ಹಿಂದೂ ವಿರೋಧಿ ಹಿಂಸಾಚಾರದ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ನೊಬೆಲ್ ಪ್ರಶಸ್ತಿ ವಿಜೇತ, ಮಧ್ಯಂತರ ಸರ್ಕಾರದ ನಾಯಕ ಮುಹಮ್ಮದ್ ಯೂನುಸ್ ಪ್ರಸ್ತುತ ತಂಗಿರುವ ಢಾಕಾದ ಜಮುನಾ ಅತಿಥಿ ಗೃಹದ ಹೊರಗೆ ಪ್ರತಿಭಟನಾಕಾರರು ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಕಾಣೆಯಾದ ಕುಟುಂಬ ಸದಸ್ಯರ ಪೋಸ್ಟರ್‌ಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಮತ್ತು ಬಾಂಗ್ಲಾದೇಶ ಸೈನಿಕರ ನಡುವೆ ಘರ್ಷಣೆಯೂ ನಡೆಯಿತು.

ಇತ್ತೀಚೆಗೆ ಢಾಕಾದ ಐತಿಹಾಸಿಕ ಢಾಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯೂನುಸ್ ಹಿಂದೂ ಸಮುದಾಯಕ್ಕೆ ರಕ್ಷಣೆ ಒದಗಿಸುವ ಭರವಸೆ ನೀಡಿದ್ದರು. ಹಕ್ಕುಗಳು ಎಲ್ಲರಿಗೂ ಸಮಾನವಾಗಿರಬೇಕು ಎಂದು ಅವರು ಒತ್ತಿ ಹೇಳಿದ್ದರು. “ಹಕ್ಕುಗಳು ಎಲ್ಲರಿಗೂ ಸಮಾನವಾಗಿ ಲಭಿಸಬೇಕಿದೆ. ದಯವಿಟ್ಟು ತಾಳ್ಮೆಯಿಂದಿರಿ” ಎಂದು ಯೂನುಸ್ ಹೇಳಿದ್ದರು. ಅದಾಗ್ಯೂ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿಯುತ್ತಿರುವುದು ಕಳವಳ ಹುಟ್ಟುಹಾಕಿದೆ.

ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ ಹಿಂದೂಗಳು ಸುಮಾರು ಶೇ. 8ರಷ್ಟಿದ್ದು, ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಗುಂಪು ಎನಿಸಿಕೊಂಡಿದೆ. ದಂಗೆ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಈಗಾಗಲೇ ಹಲವೆಡೆ ಶಿಲ್ಪಗಳು, ವಿಗ್ರಹಗಳು ಮತ್ತು ದೇವಾಲಯಗಳನ್ನು ನಾಶಪಡಿಸಲಾಗಿದೆ. ವಾಸ್ತವವಾಗಿ, ಸೇನೆ ಮತ್ತು ಪೊಲೀಸರು ಹಿಂದೂಗಳ ಮನೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾ ಹಿಂದೂಗಳ ಪರ ಸೋಶಿಯಲ್‌ ಮೀಡಿಯಾ ಅಭಿಯಾನ; All eyes on hindus ಭಾರೀ ಟ್ರೆಂಡ್!

ʼʼಕೆಲವು ದಿನಗಳ ಹಿಂದೆ ಒಬ್ಬ ಹಿಂದೂ ಪ್ರಾಧ್ಯಾಪಕನನ್ನು ಬಡಿಗೆಯಿಂದ ಬರ್ಬರವಾಗಿ ಕೊಲ್ಲಲಾಯಿತು. ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬಗಳು ಎಲ್ಲವನ್ನೂ ಕಳೆದುಕೊಂಡಿವೆ ಮತ್ತು ಈಗಲೂ ಹಿಂದೂ ಸಂಘಟನೆಗಳು ಬಹಿರಂಗವಾಗಿ ಮಾತನಾಡಲು ಹೆದರುತ್ತಿವೆ. ಈ ದಾಳಿಗಳು ಮೂಲಭೂತವಾದಿಗಳಿಂದ ಅಲ್ಲ, ಆದರೆ ಪ್ರತಿಭಟನೆಯು ಭಯೋತ್ಪಾದಕ ಚಳುವಳಿಯಾಗುತ್ತಿದೆʼʼ ಎಂದು ಮೂಲಗಳು ತಿಳಿಸಿವೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ಪ್ಯಾರಿಸ್ ಒಲಿಂಪಿಕ್ಸ್ – ಭಾರತದ ಸಾಧನೆ ಕಳಪೆಯೇ?

ರಾಜಮಾರ್ಗ ಅಂಕಣ: ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಭಾರತದ ಸಾಧನೆಯು ಕಳಪೆ ಎಂದು ಹಲವರು ವಿಶ್ಲೇಷಣೆ ಮಾಡುತ್ತಾ ಇದ್ದಾರೆ. ಆದರೆ ಇದು ಕಳಪೆ ಒಲಿಂಪಿಕ್ಸ್ ಅನ್ನೋದಕ್ಕಿಂತ ಭಾರತಕ್ಕಿದು ದುರದೃಷ್ಟದ ಒಲಿಂಪಿಕ್ಸ್ ಎಂದೇ ಹೇಳಬಹುದು.

VISTARANEWS.COM


on

ರಾಜಮಾರ್ಗ ಅಂಕಣ Paris Olympics
Koo

ಭಾರತದಲ್ಲಿ ಯಾಕೆ ಶ್ರೇಷ್ಠ ಕ್ರೀಡಾ ಪ್ರತಿಭೆಗಳು ಅರಳುತ್ತಿಲ್ಲ?

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಬಹಳ ನಿರೀಕ್ಷೆಯ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕೂಟಕ್ಕೆ ತೆರೆಬಿದ್ದಾಗಿದೆ. ಭಾರತಕ್ಕೆ (India) ದೊರಕಿದ್ದು 5 ಕಂಚಿನ ಪದಕಗಳು (Bronze medal) ಮತ್ತು ಒಂದು ಬೆಳ್ಳಿಯ ಪದಕ (Silver Meadl). ಒಲಿಂಪಿಕ್ ಗ್ರಾಮದಲ್ಲಿ ಒಮ್ಮೆ ಕೂಡ ಭಾರತದ ರಾಷ್ಟ್ರಗೀತೆ ಮೊಳಗಲೇ ಇಲ್ಲ ಎಂಬ ದುಃಖ ನಮಗೆ. ಭಾರತಕ್ಕೆ ದೊರಕಿದ್ದು 71ನೇ ಸ್ಥಾನ. ಈ ಒಲಿಂಪಿಕ್ ಕೂಟದಲ್ಲಿ ಭಾರತದ ಸಾಧನೆಯು ಕಳಪೆ ಎಂದು ಹಲವರು ವಿಶ್ಲೇಷಣೆ ಮಾಡುತ್ತಾ ಇದ್ದಾರೆ. ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದು ಚಿನ್ನದ ಪದಕ (Gold Medal) ಸೇರಿ ಏಳು ಪದಕಗಳು ದೊರೆತಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿ ಭಾರತ ಸ್ವಲ್ಪ ಹಿಂದೆ ಬಿದ್ದಿದೆ.

ನಮಗೆ ಈ ಬಾರಿ 7-8 ಪದಕಗಳು ಕೂದಲೆಳೆಯ ಅಂತರದಲ್ಲಿ ಮಿಸ್ ಆದವು!

ಇದು ಕಳಪೆ ಒಲಿಂಪಿಕ್ಸ್ ಅನ್ನೋದಕ್ಕಿಂತ ಭಾರತಕ್ಕಿದು ದುರದೃಷ್ಟದ ಒಲಿಂಪಿಕ್ಸ್ ಎಂದೇ ಹೇಳಬಹುದು. ದೇಶದ 6 ಮಂದಿ ಕ್ರೀಡಾಪಟುಗಳು ಕೂಟದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದು ಪದಕವಂಚಿತರಾದರು. ಅರ್ಜುನ್ ಬಬುತಾ, ಅಂಕಿತ ಧೀರಜ್, ಮನು ಭಾಕರ್ (Manu Bhaker – ಮೂರನೇ ಪದಕ), ಅನಂತ್ ಜೀತ್, ಮಹೇಶ್ವರಿ, ಲಕ್ಷ್ಯ ಸೇನ್, ಮೀರಾಬಾಯಿ ಚಾನು ಇವರು ನಾಲ್ಕನೇ ಸ್ಥಾನಿಗಳಾಗಿ ಸ್ಪರ್ಧೆಯನ್ನು ಮುಗಿಸಿದವರು. ಹಾಗೆಯೇ ವಿನೇಶ್ ಫೊಗಟ್ (Vinesh Phogat), ನಿಶಾ ದಹಿಯ, ರಿತಿಕ ಹೂಡ ಮೊದಲಾದ ಕುಸ್ತಿ ಪಟುಗಳು ಒಲಿಂಪಿಕ್‌ನ ಕರಾಳ ನಿಯಮಕ್ಕೆ ಬಲಿಯಾಗಿ ಪದಕ ಮಿಸ್ ಮಾಡಿಕೊಂಡರು ಅನ್ನೋದು ನಮ್ಮ ನೋವು. ಇವರೆಲ್ಲರೂ ಪದಕ ಪಡೆದಿದ್ದರೆ ಭಾರತದ ಟೋಟಲ್ ಪದಕಗಳ ಸಂಖ್ಯೆ 15 ದಾಟುತ್ತಿತ್ತು ಅಲ್ಲವೇ? ಕೆಲವೊಮ್ಮೆ ಪ್ರತಿಭೆ, ಸಾಮರ್ಥ್ಯಗಳು ಇದ್ದರೆ ಸಾಕಾಗುವುದಿಲ್ಲ, ಅದೃಷ್ಟವೂ ಜೊತೆಗೆ ಇರಬೇಕು ಎಂಬ ಸಿದ್ಧಾಂತವನ್ನು ನಾವು ಈ ಬಾರಿ ಒಪ್ಪಿಕೊಳ್ಳಲೇಬೇಕಾಯಿತು.

130 ಕೋಟಿ ಜನಸಂಖ್ಯೆ ಇರುವ, ಅದರಲ್ಲಿ 60%ಕ್ಕಿಂತ ಅಧಿಕ ಯುವಜನತೆ (Below 40) ಇರುವ ದೇಶವಾದ ಭಾರತದಲ್ಲಿ ಶ್ರೇಷ್ಠ ಕ್ರೀಡಾಪ್ರತಿಭೆಗಳು ಯಾಕೆ ಅರಳುತ್ತಿಲ್ಲ ಅನ್ನುವುದು ಹಲವರು ಕೇಳುವ ಪ್ರಶ್ನೆ. ಭಾರತಕ್ಕೆ ಈಗ ಅದರದ್ದೇ ಆದ ಕ್ರೀಡಾನೀತಿ ಇದೆ. ಒಳ್ಳೆಯ ಬಜೆಟ್ ಇದೆ. ವಿದೇಶದ ಕೋಚುಗಳ ನೇಮಕ ಆಗಿದೆ. ಸ್ವತಃ ಕ್ರೀಡಾಪಟು ಆಗಿದ್ದ ಪಿಟಿ ಉಷಾ ಅಧ್ಯಕ್ಷೆಯಾಗಿರುವ ಬಲಿಷ್ಠವಾದ ಒಲಿಂಪಿಕ್ ಸಮಿತಿ ಇದೆ. ಆದರೂ ಅದಕ್ಕೆ ಅನುಗುಣವಾದ ಫಲಿತಾಂಶ ಈ ಬಾರಿ ದೊರೆತಿಲ್ಲ. ಯಾಕೆ?

ಎಲ್ಲರೂ ಉತ್ತರಿಸಲೇ ಬೇಕಾದ ಪ್ರಶ್ನೆಗಳು

1) ಅಮೇರಿಕಾ, ಚೀನಾದಂತಹ ದೇಶಗಳಲ್ಲಿ ಬಾಲ್ಯದಲ್ಲಿಯೇ ಮಗುವಿನ ಕ್ರೀಡಾಪ್ರತಿಭೆಗಳನ್ನು ಹುಡುಕಿ ತರಬೇತು ಆರಂಭ ಮಾಡುತ್ತಾರೆ. ಆದರೆ ನಮ್ಮಲ್ಲಿ ಬಾಲ್ಯದಲ್ಲಿ ಮಗು ಮೈದಾನಕ್ಕೆ ಇಳಿಯುವುದನ್ನು ಹೆತ್ತವರು ಇಷ್ಟ ಪಡುವುದಿಲ್ಲ. ಕ್ರೀಡೆಯ ಮೂಲಕ ಮಗುವಿನ ಭವಿಷ್ಯ ಕಟ್ಟುವ ಭರವಸೆ ಭಾರತದ ಹೆಚ್ಚಿನ ಪೋಷಕರಿಗೆ ಇಲ್ಲ.

2) ಒಳ್ಳೆಯ ಕ್ರೀಡಾಪಟು ರೂಪುಗೊಳ್ಳಬೇಕು ಅಂತಾದರೆ ಪರಿಣತ ಕೋಚ್, ತರಬೇತುದಾರ ಬೇಕು. ಭಾರತವು ಇನ್ನೂ ಉತ್ತಮ ಕೋಚುಗಳನ್ನು ಬೆಳೆಸಿಲ್ಲ. ಕ್ರೀಡಾ ಸಲಕರಣೆಗಳು, ಜಿಮ್ ಗಳು ಮಕ್ಕಳಿಗೆ ಹತ್ತಿರದಲ್ಲಿ ದೊರೆಯುತ್ತಿಲ್ಲ. ವಿದೇಶದ ಕೋಚಗಳನ್ನು ನೇಮಕ ಮಾಡುವಷ್ಟು ಭಾರತದ ಗ್ರಾಮಾಂತರ, ಮಧ್ಯಮವರ್ಗದ ಪೋಷಕರು ಶ್ರೀಮಂತರಾಗಿಲ್ಲ.

Neeraj Chopra
Paris Olympics

3) ಒಬ್ಬ ಒಳ್ಳೆಯ ಕ್ರೀಡಾಪಟುವು ಅರಳಬೇಕಾದರೆ ದೈಹಿಕ ಕ್ಷಮತೆ (ಫಿಸಿಕಲ್ ಫಿಟ್ನೆಸ್)ಯು ತುಂಬಾನೆ ಪ್ರಾಮುಖ್ಯ. ಅಂದರೆ ಸಣ್ಣ ಪ್ರಾಯದಲ್ಲಿ ಪೌಷ್ಟಿಕ ಆಹಾರ, ವಿಟಮಿನಗಳು ದೊರೆಯಬೇಕು. ಆ ಮಗು ಬೆವರು ಬಸಿದು ಕೆಲಸ ಮಾಡಬೇಕು. ಜಿಮ್, ಟೆನಿಸ್ ಕೋರ್ಟ್, ಬ್ಯಾಡ್ಮಿಂಟನ್ ಕೋರ್ಟು ಹತ್ತಿರದಲ್ಲಿ ಇರಬೇಕು. ಇದೆಲ್ಲ ಸಾಧ್ಯ ಆಗ್ತಾ ಇದೆಯಾ?

4) ಯಾವುದೇ ರಾಜ್ಯದಲ್ಲಿ ಕ್ರೀಡೆಗೆ ಪ್ರತ್ಯೇಕ ಸಚಿವಾಲಯ ಬೇಕು. ಒಳ್ಳೆಯ ಬಜೆಟ್ ಬೇಕು. ಆದರೆ ನಮ್ಮಲ್ಲಿ ಕ್ರೀಡಾ ಇಲಾಖೆಯು ಯುವಜನ ಸೇವಾ ಇಲಾಖೆಯ ಜೊತೆಗೆ ಇದೆ. ಬಜೆಟ್ ಕೇಳಿದರೆ ನೀವು ಖಂಡಿತವಾಗಿ ನಗುತ್ತೀರಿ. ಇನ್ನು ಪದಕ ನಿರೀಕ್ಷೆ ಮಾಡುವುದು ಹೇಗೆ?

5) ನಮ್ಮ ಶೈಕ್ಷಣಿಕ ವರ್ಷವು ಆರಂಭವಾಗುವುದೇ ಮಳೆಗಾಲದಲ್ಲಿ. ಮೊದಲ ನಾಲ್ಕು ತಿಂಗಳ ಒಳಗೆ ಎಲ್ಲ ಪಂದ್ಯಾಟಗಳು, ಕ್ರೀಡಾಕೂಟಗಳು ಮುಗಿಯಬೇಕು. ಅಂದರೆ ನಮ್ಮ ಪುಟ್ಟ ಮಕ್ಕಳು ಮಳೆಗೆ ತಲೆಕೊಟ್ಟು, ಜಾರುವ ಮೈದಾನದಲ್ಲಿ ಓಡಬೇಕು. ಮಳೆಗಾಲದ ಹೊತ್ತಲ್ಲಿ ತರಬೇತಿ ಪಡೆಯುವುದು ಯಾವಾಗ? ಒಳಾಂಗಣ ಕ್ರೀಡಾಂಗಣಗಳು ಎಷ್ಟು ಕಡೆ ಇವೆ? ಇದು ಕ್ರೀಡೆಗೆ ಪೂರಕವೇ?

6) ಕೆಲವು ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲು ಕೋಟಾ ಇದೆ. ಕೃಪಾಂಕದ ವ್ಯವಸ್ಥೆ ಇದೆ. ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆ ಇದೆ. ಆದರೆ ನಮ್ಮಲ್ಲಿ?

7) ಬಾಲ್ಯದಿಂದ ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವ, ಅದೇ ಕನಸುಗಳನ್ನು ಮಗುವಿನ ತಲೆಗೆ ತುಂಬುವ ಹೆತ್ತವರು ಮಕ್ಕಳು ಮೈದಾನಕ್ಕೆ ಇಳಿಯುವುದನ್ನು ಇಷ್ಟ ಪಡುವುದೇ ಇಲ್ಲ. ಕ್ರೀಡೆಗಳಲ್ಲಿ ಸಾಧನೆ ಮಾಡಬೇಕಾದರೆ ಮಗು ತರಗತಿ ಪಾಠ, ಪರೀಕ್ಷೆಗಳು ಇತ್ಯಾದಿಗಳಲ್ಲಿ ರಿಯಾಯಿತಿ ಪಡೆಯಬೇಕು. ಆಗ್ತಾ ಇದೆಯಾ?

8) ಎಷ್ಟೋ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ಪದವಿಪೂರ್ವ ಕಾಲೇಜುಗಳ ಹಂತಕ್ಕೆ ಬಂದರೆ 50% ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ದೊಡ್ಡ ದೊಡ್ಡ ಶಾಲೆಗಳ ಕಟ್ಟಡಗಳನ್ನು ಕಟ್ಟುವ ಕಾಲೇಜುಗಳು ಗ್ರೌಂಡ್ ಇಲ್ಲದೆ ಕೂಡ ಕ್ಲಾಸ್ ನಡೆಸುತ್ತವೆ ಎಂದರೆ ನೀವು ನಂಬಲೇಬೇಕು.

9) ಶೂಟಿಂಗ್, ಗಾಲ್ಫ್, ಜಿಮ್ನಾಸ್ಟಿಕ್ ಉಪಕರಣಗಳು ತುಂಬಾ ದುಬಾರಿ. ಸರಕಾರಿ ಬ್ಯಾಡ್ಮಿಂಟನ್ ಕೋರ್ಟು, ಸ್ವಿಮ್ಮಿಂಗ್ ಪೂಲ್, ಜಿಮ್ ಗಳು ಇರುವುದು ತಾಲೂಕಿಗೆ ಒಂದೇ! ಎಷ್ಟೋ ಕಡೆಗಳಲ್ಲಿ ಅದೂ ಇಲ್ಲ. ಖಾಸಗಿಯವರು ಹೆಚ್ಚು ಫೀಸ್ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಕ್ರೀಡಾಪ್ರತಿಭೆಗಳು ತರಬೇತು ಪಡೆಯಲು ತುಂಬಾ ದೂರಕ್ಕೆ ಹೋಗಬೇಕು. ಹಾಗಿರುವಾಗ ಪ್ರತಿಭೆಗಳು ಅರಳುವುದು ಹೇಗೆ?

10) ಸ್ಥಳೀಯ, ತಾಲೂಕು, ಜಿಲ್ಲಾಮಟ್ಟದ ಕ್ರೀಡಾಕೂಟಗಳಿಗೆ ಅದರಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅನುದಾನದ ಬೆಂಬಲ ತುಂಬ ಕಡಿಮೆ. ಹೆತ್ತವರು ಅಥವಾ ಶಿಕ್ಷಕರೇ ಖರ್ಚು ಮಾಡಬೇಕು ಅಂತಾದಾಗ ಸಹಜವಾಗಿ ಎಲ್ಲರ ಆಸಕ್ತಿ ಕಡಿಮೆ ಆಗುತ್ತದೆ.

Paris Olympics
Paris Olympics

11) ಏಷಿಯಾಡ್, ಕಾಮನ್ ವೆಲ್ತ್ ಅಥವಾ ಒಲಿಂಪಿಕ್ಸ್ ಮೊದಲಾದ ಕೂಟಗಳಲ್ಲಿ ಅರ್ಹತೆಯನ್ನು ಪಡೆಯಬೇಕಾದರೆ ಒಬ್ಬ ಕ್ರೀಡಾಪಟು ದಿನಕ್ಕೆ ಕನಿಷ್ಟ 10-12 ಘಂಟೆ ಮೈದಾನದಲ್ಲಿ ಕಠಿಣ ಪರಿಶ್ರಮಪಡಬೇಕು. ಬೆವರು ಸುರಿಸಬೇಕು. ಒಳ್ಳೆಯ ತರಬೇತುದಾರರು ಸಿಗಬೇಕು. ಸರಕಾರಗಳು ಅಂತಹ ಕ್ರೀಡಾ ಪ್ರತಿಭೆಗಳನ್ನು ದತ್ತುಸ್ವೀಕಾರ ಮಾಡಬೇಕು. ಒಳ್ಳೆಯ ಸೌಲಭ್ಯಗಳನ್ನು ಖಾತರಿ ಪಡಿಸಬೇಕು. ಪೌಷ್ಟಿಕವಾದ ಆಹಾರದ ವ್ಯವಸ್ಥೆ ಮಾಡಬೇಕು. ನೀನು ಕ್ರೀಡೆಯಲ್ಲಿ ಗಮನ ಕೊಡು, ನಾನಿದ್ದೇನೆ ಎಂದು ಭರವಸೆಯನ್ನು ತುಂಬಬೇಕು. ಇದು ಆಗ್ತಾ ಇದೆಯಾ?

12) ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಮಟ್ಟದ ಕ್ರೀಡಾತಾರೆಗಳನ್ನು ನ್ಯಾಶನಲ್ ಹೀರೋಗಳಾಗಿ ಘೋಷಣೆ ಮಾಡಬೇಕು. ಅವರ ಬದುಕಿನ ಕಥೆಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯಪುಸ್ತಕದಲ್ಲಿ ಇರಬೇಕು. ಕ್ರಿಕೆಟ್ ನಮ್ಮ ಧರ್ಮ ಆಗಿರುವ, ಕ್ರಿಕೆಟರಗಳು ನಮಗೆ ದೇವರಾಗಿರುವ ಈ ದೇಶದಲ್ಲಿ ಕ್ರೀಡಾಪಟುಗಳಿಗೆ ಸ್ಟಾರ್ ವ್ಯಾಲ್ಯೂ ತರುವುದು ಸಾಧ್ಯ ಆಗಿದೆಯಾ?

ಎಲ್ಲಕ್ಕಿಂತ ಹೆಚ್ಚಾಗಿ ಹೆತ್ತವರ ಮೈಂಡ್ ಸೆಟ್ ಬದಲಾಗಬೇಕು. ಇಲ್ಲಾಂದರೆ ನಾವು ಭಾರತದ ಕ್ರೀಡಾ ಸಾಧನೆಯನ್ನು ಕಳಪೆ ಎಂದು ದೂರುವುದನ್ನು ಬಿಡಬೇಕು.

ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

Continue Reading

ಪ್ರಮುಖ ಸುದ್ದಿ

Sheikh Hasina : ಬಾಂಗ್ಲಾದಿಂದ ಪಲಾಯನ ಮಾಡಿದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿದ ಶೇಖ್​ ಹಸೀನಾ

Sheikh Hasina : ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ನಾಯಕತ್ವದಲ್ಲಿ ನಾವು ಸ್ವತಂತ್ರ ರಾಷ್ಟ್ರವಾಗಿ ಸ್ವಾಭಿಮಾನವನ್ನು ಗಳಿಸಿದ್ದೆವು. ಸ್ವಯಂ ಗುರುತನ್ನು ಪಡೆದುಕೊಂಡಿದ್ದೆವು. ಸ್ವತಂತ್ರ ದೇಶವನ್ನು ಪಡೆದಿದ್ದೇವೆ. ಈಗ ಅವರನ್ನು ತೀವ್ರವಾಗಿ ಅವಮಾನಿಸಲಾಗಿದೆ” ಎಂದು ಹಸೀನಾ ತಮ್ಮ ಮಗ ಸಜೀಬ್ ವಾಜೀದ್ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

VISTARANEWS.COM


on

Sheikh Hasina
Koo

ಬೆಂಗಳೂರು ; ಬಾಂಗ್ಲಾದೇಶ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡು ಬಳಿಕ ಅಲ್ಲಿಂದ ಪರಾರಿಯಾಗಿ ಭಾರತಕ್ಕೆ ಬಂದಿರುವ ಪ್ರಧಾನಿ ಶೇಖ್ ಹಸೀನಾ (Sheikh Hasina) ಮಂಗಳವಾರ ತಮ್ಮ ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅವಾಮಿ ಲೀಗ್ ವಿರುದ್ಧದ ದಂಗೆಯನ್ನು ತನ್ನ ತಂದೆ, ಬಾಂಗ್ಲಾದೇಶದ ಸ್ಥಾಪಕ ಅಧ್ಯಕ್ಷ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಮತ್ತು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅನೇಕ ಹುತಾತ್ಮರಿಗೆ ಮಾಡಿದ ಗಂಭೀರ ಅವಮಾನ ಎಂದು ಹೇಳಿಕೆ ನೀಡಿದ್ದಾರೆ.

ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ನಾಯಕತ್ವದಲ್ಲಿ ನಾವು ಸ್ವತಂತ್ರ ರಾಷ್ಟ್ರವಾಗಿ ಸ್ವಾಭಿಮಾನವನ್ನು ಗಳಿಸಿದ್ದೆವು. ಸ್ವಯಂ ಗುರುತನ್ನು ಪಡೆದುಕೊಂಡಿದ್ದೆವು. ಸ್ವತಂತ್ರ ದೇಶವನ್ನು ಪಡೆದಿದ್ದೇವೆ. ಈಗ ಅವರನ್ನು ತೀವ್ರವಾಗಿ ಅವಮಾನಿಸಲಾಗಿದೆ” ಎಂದು ಹಸೀನಾ ತಮ್ಮ ಮಗ ಸಜೀಬ್ ವಾಜೀದ್ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವರು ಲಕ್ಷಾಂತರ ಹುತಾತ್ಮರ ತ್ಯಾಗವನ್ನು ಅವಮಾನಿಸಿದ್ದಾರೆ. ನಾನು ದೇಶವಾಸಿಗಳಿಂದ ನ್ಯಾಯವನ್ನು ಬಯಸುತ್ತೇನೆ” ಎಂದು ಹಸೀನಾ ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಹೊರಹಾಕಿದ ಹಿಂದಿನ ಶಕ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಶೇಖ್ ಮುಜಿಬುರ್ ರಹಮಾನ್ ಅವರ ಹತ್ಯೆಯಾದ ದಿನದ ವಾರ್ಷಿಕೋತ್ಸವದ ನೆನಪಿಗಾಗಿ ಆಗಸ್ಟ್ 15 ರಂದು ರಾಷ್ಟ್ರೀಯ ಶೋಕಾಚರಣೆ ದಿನ ಆಚರಿಸುವಂತೆ ಅವಾಮಿ ಲೀಗ್ ಮುಖ್ಯಸ್ಥರು ಬಾಂಗ್ಲಾದೇಶದ ಪ್ರಜೆಗಳನ್ನು ಒತ್ತಾಯಿಸಿದ್ದಾರೆ.

ಆಗಸ್ಟ್ 15 ರಂದು ರಾಷ್ಟ್ರೀಯ ಶೋಕ ದಿನವನ್ನು ಸೂಕ್ತ ಘನತೆ ಮತ್ತು ಗಂಭೀರತೆಯಿಂದ ಆಚರಿಸುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ. ಬಂಗಬಂಧು ಭವನದಲ್ಲಿ ಹೂವಿನ ಹಾರಗಳನ್ನು ಅರ್ಪಿಸುವ ಮೂಲಕ ಮತ್ತು ಪ್ರಾರ್ಥಿಸುವ ಮೂಲಕ ಎಲ್ಲರಿಗೂ ಪ್ರಾರ್ಥಿಸಿ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: Arshad Nadeem : ಲಷ್ಕರ್ ಉಗ್ರನ ಜತೆ ಕಾಣಿಸಿಕೊಂಡ ಪಾಕಿಸ್ತಾನದ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಅರ್ಷದ್​ ನದೀಮ್​!

“ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಪೊಲೀಸರು, ಪತ್ರಕರ್ತರು, ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಮುಗ್ಧ ಪ್ರೇಕ್ಷಕರು ಭಯೋತ್ಪಾದನೆ ಮತ್ತು ಹಿಂಸಾಚಾರದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ನನ್ನಂತೆ, ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನೊಂದಿಗೆ ಬದುಕುತ್ತಿರುವವರಿಗೆ ನನ್ನ ಆಳ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ಹಸೀನಾ ಹೇಳಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಹತ್ಯೆಗಳು ಮತ್ತು ವಿಧ್ವಂಸಕ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಸೀನಾ ಒತ್ತಾಯಿಸಿದ್ದಾರೆ. ಬಾಂಗ್ಲಾದೇಶದ ಪ್ರಧಾನಿಯಾಗಿ ಶೇಖ್ ಹಸೀನಾ ಅವರ 15 ವರ್ಷಗಳ ಅಧಿಕಾರಾವಧಿ ಆಗಸ್ಟ್ 5 ರಂದು ಹಠಾತ್ತನೆ ಕೊನೆಗೊಂಡಿತು. ಪ್ರಸ್ತುತ, ಹಸೀನಾ ಭಾರತದಲ್ಲಿ ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂದು ವರದಿಯಾಗಿದೆ.

Continue Reading

ಪ್ರಮುಖ ಸುದ್ದಿ

Arshad Nadeem : ಲಷ್ಕರ್ ಉಗ್ರನ ಜತೆ ಕಾಣಿಸಿಕೊಂಡ ಪಾಕಿಸ್ತಾನದ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಅರ್ಷದ್​ ನದೀಮ್​!

Arshad Nadeem : ಪುರುಷರ ಜಾವೆಲಿನ್ ಥ್ರೋ ಫೈನಲ್​ನಲ್ಲಿ ನದೀಮ್ 92.97 ಮೀಟರ್ ಎಸೆದು ಒಲಿಂಪಿಕ್ಸ್​​ ದಾಖಲೆ ನಿರ್ಮಿಸಿದ್ದರು. . 27ರ ಹರೆಯದ ನೀರಜ್ ಚೋಪ್ರಾ 89.35 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಗೆದ್ದಿದ್ದಾರೆ. ಇಬ್ಬರೂ ಕ್ರೀಡಾಪಟುಗಳು ಪರಸ್ಪರ ಉತ್ತಮ ಸ್ನೇಹಿತರು ಎಂಬುದು ಒಲಿಂಪಿಕ್ಸ್​ ಬಳಿಕದ ದೊಡ್ಡ ಹೈಲೈಟ್​

VISTARANEWS.COM


on

Arshad Nadeem
Koo

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕವನ್ನು ಗೆದ್ದ ಪಾಕಿಸ್ತಾನದ ಜಾವೆಲಿನ್​ ಎಸೆತಗಾಗ ಅರ್ಷದ್ ನದೀಮ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ನಾಯಕ ಹ್ಯಾರಿಸ್ ಧರ್ ಜತೆ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಒಂದು ವರ್ಗದ ಜನರು ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನದೀಮ್ ಅವರು ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದು ತನ್ನ ದೇಶದ 32 ವರ್ಷಗಳ ಚಿನ್ನದ ಪದಕ ಬರಗಾಲವನ್ನು ಕೊನೆಗೊಳಿಸಿದ್ದರು. ಆದಾಗ್ಯೂ, ವಿಶ್ವ ಸಂಸ್ಥೆಯೇ ಭಯೋತ್ಪಾದಕ ಸಂಘಟನೆ ಎಂದು ಕರೆದಿರುವ ಲಷ್ಕರ್-ಎ-ತೈಬಾದ ನಾಯಕನ ಜತೆ ಕಾಣಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಪುರುಷರ ಜಾವೆಲಿನ್ ಥ್ರೋ ಫೈನಲ್​ನಲ್ಲಿ ನದೀಮ್ 92.97 ಮೀಟರ್ ಎಸೆದು ಒಲಿಂಪಿಕ್ಸ್​​ ದಾಖಲೆ ನಿರ್ಮಿಸಿದ್ದರು. . 27ರ ಹರೆಯದ ನೀರಜ್ ಚೋಪ್ರಾ 89.35 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಗೆದ್ದಿದ್ದಾರೆ. ಇಬ್ಬರೂ ಕ್ರೀಡಾಪಟುಗಳು ಪರಸ್ಪರ ಉತ್ತಮ ಸ್ನೇಹಿತರು ಎಂಬುದು ಒಲಿಂಪಿಕ್ಸ್​ ಬಳಿಕದ ದೊಡ್ಡ ಹೈಲೈಟ್​

ಪ್ಯಾರಿಸ್​​ನಿಂದ ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ನದೀಮ್ ಅವರಿಗೆ ಭವ್ಯ ಸ್ವಾಗತ ದೊರಕಿದೆ. ಅಲ್ಲಿನ ಸರ್ಕಾರವು ಅವರಿಗೆ ವಿಜಯ ಮೆರವಣಿಗೆಯನ್ನು ಸಹ ಆಯೋಜಿಸಿತ್ತು. ಇದಲ್ಲದೆ, ನದೀಮ್ ಅವರು ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಯನ್ನೂ ಪಡೆದಿದ್ದಾರೆ. ದೊಡ್ಡ ಪ್ರಮಾಣದ ಬಹುಮಾನಗಳು ಅವರ ಕಡೆಗೆ ಬರುತ್ತಿದೆ. ಕಾರು, ಹಣ,ಪ್ರಶಸ್ತಿಗಳು ಅವರನ್ನು ಸುತ್ತುವರಿಯುತ್ತಿವೆ. ಆದರೆ ಅವರು ಲಷ್ಕರ್​ ನಾಯಕನೊಂದಿಗೆ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಎಕ್ಸ್ನಲ್ಲಿನ ಒಎಸ್ಐಎನ್​ಟಿ (ಓಪನ್ ಸೋರ್ಸ್ ಇಂಟೆಲಿಜೆನ್ಸ್) ಖಾತೆಯು ನದೀಮ್ ಮತ್ತು ದಾರ್ ಸಂಭಾಷಣೆಯ ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೊದಲ್ಲಿ, ದಾರ್ ನದೀಮ್ ಅವರ ಒಲಿಂಪಿಕ್ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾನೆ. ಅಲ್ಲದೆ, ನದೀಮ್ ಸಾಧನೆಯು ಮುಸ್ಲಿಂಮರನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಹೇಳಿದ್ದಾನೆ. ದಾರ್ ಅವರ ಹೊಗಳಿಕೆ ಮತ್ತು ಇಬ್ಬರನ್ನು ಒಟ್ಟಿಗೆ ಕಾಣಿಸಿಕೊಂಡಿರುವುದು ನದೀಮ್ ಅವರ ಜಾಗತಿಕ ಮನ್ನಣೆಗೆ ಹಾನಿ ಮಾಡಲಿದೆ ಎನ್ನಲಾಗಿದೆ.

ಇದನ್ನೂ ಓದಿ: Sheikh Hasina : ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಕೊಲೆ ಕೇಸ್​ ದಾಖಲಿಸಿದ ಕೋರ್ಟ್​​

ಉಗ್ರಗಾಮಿ ಸಂಘಟನೆ

ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲ್ಪಟ್ಟಿರುವ ಲಷ್ಕರ್-ಎ-ತೈಬಾ ಹಲವಾರು ಹಿಂಸಾಚಾರ ಮತ್ತು ಭಯೋತ್ಪಾದಕ ಕೃತ್ಯಗಳೊಂದಿಗೆ ಸಂಪರ್ಕ ಹೊಂದಿದೆ. ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ನಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನ ಹೊಂದಿರುವ ಮುಹಮ್ಮದ್ ಹ್ಯಾರಿಸ್ ದಾರ್ ಎಲ್ಇಟಿಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಎಲ್ಇಟಿ ನಾಯಕ ಹಫೀಜ್ ಸಯೀದ್ ಸ್ಥಾಪಿಸಿದ ಎಂಎಂಎಲ್ ಅನ್ನು ಭಯೋತ್ಪಾದಕ ಗುಂಪಿನ ಮುಂಚೂಣಿ ಸಂಘಟನೆ ಎಂದು ಪರಿಗಣಿಸಲಾಗಿದೆ. 166 ಜನರ ಸಾವಿಗೆ ಕಾರಣವಾದ 26/11 ಮುಂಬೈ ದಾಳಿಯ ರೂವಾರಿ ಹಫೀಜ್​ ಸಯೀದ್.

2018 ರಲ್ಲಿ, ಅಮೆರಿಕ ಎಂಎಂಎಲ್ ಮತ್ತು ಅದರ ನಾಯಕತ್ವವನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿತ್ತು. ಅದರಲ್ಲಿ ಮುಹಮ್ಮದ್ ಹ್ಯಾರಿಸ್ ದಾರ್ ಕೂಡ ಇದ್ದಾನೆ. ಆತ ಎಲ್ಇಟಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಎಲ್ಇಟಿಯ ವಿದ್ಯಾರ್ಥಿ ವಿಭಾಗವಾದ ಅಲ್-ಮುಹಮ್ಮದಿಯಾ ಸ್ಟೂಡೆಂಟ್ಸ್ (ಎಎಂಎಸ್) ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆನ. ಪ್ರಥಮ ಚಿಕಿತ್ಸೆ, ಅಗ್ನಿಶಾಮಕ, ಶಸ್ತ್ರಾಸ್ತ್ರ ಕೌಶಲ್ಯಗಳು ಮತ್ತು ದಾಳಿ ತಂತ್ರಗಳನ್ನು ಒಳಗೊಂಡ ಎಲ್ಇಟಿ ಶಿಬಿರಗಳಲ್ಲಿ ದಾರ್ ತರಬೇತಿ ಪಡೆದಿದ್ದಾನೆ.

ಚಿನ್ನ ಗೆಲ್ಲುವ ವಿಶ್ವಾಸ ಇತ್ತು

ನಾನು ರಾಷ್ಟ್ರಕ್ಕೆ ಕೃತಜ್ಞನಾಗಿದ್ದೇನೆ. ಎಲ್ಲರೂ ನನಗಾಗಿ ಪ್ರಾರ್ಥಿಸಿದ್ದರು. ಮತ್ತು ನಾನು ಉತ್ತಮವಾಗಿ ಆಡುವ ಭರವಸೆ ಹೊಂದಿದ್ದೆ. ವರ್ಷಗಳಲ್ಲಿ, ನಾನು ಮೊಣಕಾಲು ಗಾಯಕ್ಕೆ ಒಳಗಾಗಿ ಚೇತರಿಸಿಕೊಂಡೆ ಮತ್ತು ನನ್ನ ಫಿಟ್ನೆಸ್​ಗಾಗಿ ಶ್ರಮಿಸಿದೆ. ನಾನು 92.97 ಮೀಟರ್ ಮೀರಿ ಎಸೆಯುವ ವಿಶ್ವಾಸದಲ್ಲಿದ್ದೆ, ಆದರೆ ಚಿನ್ನ ಗೆಲ್ಲಲು ಆ ಎಸೆತ ಸಾಕು. ನಾನು ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಮತ್ತು ಮುಂಬರುವ ದಿನಗಳು ಮತ್ತು ತಿಂಗಳುಗಳಲ್ಲಿ ನನ್ನ ಅತ್ಯುತ್ತಮವಾದದ್ದನ್ನು ನೀಡುತ್ತೇನೆ ಎಂದು ಗೆದ್ದ ಬಳಿಕ ಅರ್ಷದ್​ ಹೇಳಿದ್ದಾರೆ.

Continue Reading
Advertisement
Terror Attack
ದೇಶ21 mins ago

Terror Attack: ಕ್ಯಾಪ್ಟನ್‌ ಹುತಾತ್ಮರಾಗಿರುವ ಬೆನ್ನಲ್ಲೇ ಉಗ್ರನನ್ನು ಹೊಡೆದುರುಳಿಸಿದ ಸೇನೆ; ಮುಂದುವರೆದ ಕಾರ್ಯಾಚರಣೆ

Viral Video
Latest23 mins ago

Viral Video: ಶಾಲೆಯಲ್ಲಿ ಶಿಕ್ಷಕಿ, ಶಿಕ್ಷಕನ ನಡುವೆ ಭೀಕರ ಮಾರಾಮಾರಿ! ವಿಡಿಯೊ ನೋಡಿದವರಿಗೆ ಗಾಬರಿ!

Sexual Abuse
Latest51 mins ago

Sexual Abuse: ದಲಿತ ಬಾಲಕಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ; ಮುಸ್ಲಿಂ ಧರ್ಮಗುರು ಬಂಧನ

Government Employees
ಕರ್ನಾಟಕ1 hour ago

Government Employees: ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಆ.17ಕ್ಕೆ ಅಭಿನಂದನಾ ಸಮಾರಂಭ, ಕಾರ್ಯಾಗಾರ: ಸಿ.ಎಸ್. ಷಡಾಕ್ಷರಿ

Viral News
Latest1 hour ago

Viral News: ಭರತನಾಟ್ಯ ರಂಗಪ್ರವೇಶ ಮಾಡಿ ಇತಿಹಾಸ ನಿರ್ಮಿಸಿದ 13 ವರ್ಷದ ಚೀನೀ ಬಾಲಕಿ

kolkata doctor murder case
ದೇಶ1 hour ago

Kolkata Doctor Murder Case: ದೇಹದಲ್ಲಿ 150 ಮಿಲಿ ಗ್ರಾಂ ವೀರ್ಯ ಪತ್ತೆ- ಟ್ರೈನಿ ವೈದ್ಯೆಯ ಮೇಲೆ ಗ್ಯಾಂಗ್‌ರೇಪ್‌ ಆಗಿತ್ತಾ?

Sexual Abuse
Latest1 hour ago

Sexual Abuse: ಹಿಂದೂ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಬಲವಂತವಾಗಿ ಗೋಮಾಂಸ ತಿನ್ನಿಸಿ ದೌರ್ಜನ್ಯ

Independence Day 2024
ದೇಶ1 hour ago

Independence day 2024: ಆಗಸ್ಟ್ 15ರ ಕುರಿತ 8 ಪ್ರಶ್ನೆಗಳಿಗೆ ಇಲ್ಲಿದೆ ಕುತೂಹಲಕರ ಉತ್ತರ!

Disha Patani Goes Bold in Strapless Gown As She Flaunts Her Curves During Sexy Photoshoot
ಬಾಲಿವುಡ್2 hours ago

Disha Patani: ಬೋಲ್ಡ್‌ ಫೋಟೊಶೂಟ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ದಿಶಾ ಪಟಾನಿ!

Google AI Robot
ತಂತ್ರಜ್ಞಾನ2 hours ago

Google AI Robot: ಟೇಬಲ್ ಟೆನಿಸ್ ಅಂಗಳಕ್ಕೂ ಇಳಿದ ರೋಬೋಟ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌