Israel-Hamas War: ಪುತ್ರರ ವೀರ್ಯವನ್ನು ಸಂಗ್ರಹಿಸಿಡುತ್ತಿರುವ ಇಸ್ರೇಲ್ ಪೋಷಕರು! ಯಾಕೆ ಹೀಗೆ? - Vistara News

ವಿದೇಶ

Israel-Hamas War: ಪುತ್ರರ ವೀರ್ಯವನ್ನು ಸಂಗ್ರಹಿಸಿಡುತ್ತಿರುವ ಇಸ್ರೇಲ್ ಪೋಷಕರು! ಯಾಕೆ ಹೀಗೆ?

Israel-Hamas War: ಹಮಾಸ್ ದಾಳಿಯಿಂದ ಮೃತಪಟ್ಟಿರುವ ಪುತ್ರರ ವೀರ್ಯವನ್ನು ಇಸ್ರೇಲ್ ಪೋಷಕರು ಸಂಗ್ರಹಿಸಿ ಇಡುತ್ತಿದ್ದಾರೆ. ಈಗಾಗಲೇ 170ಕ್ಕೂ ಹೆಚ್ಚು ಸೈನಿಕರ ಮತ್ತು ನಾಗರಿಕರ ದೇಹದಿಂದ ವೀರ್ಯವನ್ನು ಸಂಗ್ರಹಿಸಿ ಇಡಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಸಂಗ್ರಹಿಸಿದ ವೀರ್ಯಕ್ಕಿಂತ ಇದು 15 ಪಟ್ಟು ಹೆಚ್ಚಾಗಿದೆ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ಹೇಳಿದೆ.

VISTARANEWS.COM


on

Israel-Hamas War
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಮಾಸ್ ದಾಳಿಯಿಂದ (Israel-Hamas War) ಮೃತಪಟ್ಟಿರುವ ಪುತ್ರರ ವೀರ್ಯವನ್ನು (sperm of the sons) ಇಸ್ರೇಲ್ ನ ಹೆಚ್ಚಿನ ದುಃಖಿತ ಪೋಷಕರು (parents demand) ಕೇಳುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಸೈನಿಕರ (soldier) ಪೋಷಕರಾಗಿದ್ದಾರೆ. ತಮ್ಮ ಪುತ್ರರ ಶವವನ್ನು ಫ್ರೀಜ್ ಮಾಡಲು ಅನೇಕರು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ 170ಕ್ಕೂ ಹೆಚ್ಚು ಸೈನಿಕರ ಮತ್ತು ನಾಗರಿಕರ ದೇಹದಿಂದ ವೀರ್ಯವನ್ನು ಸಂಗ್ರಹಿಸಿ ಇಡಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಸಂಗ್ರಹಿಸಿದ ವೀರ್ಯಕ್ಕಿಂತ ಇದು 15 ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ತಮ್ಮ ಮಕ್ಕಳ ವೀರ್ಯದಿಂದ ಮುಂದೆ ಗರ್ಭಿಣಿಯಾಗ ಬಯಸುವ ಮಹಿಳೆಯರಿಂದ ಪೋಷಕರು ಮಕ್ಕಳನ್ನು ಪಡೆಯಲು ಅನೇಕರು ಇದರ ಮೊರೆ ಹೋಗಿದ್ದಾರೆ.

ಅಕ್ಟೋಬರ್ 7ರ ಹಮಾಸ್ ದಾಳಿಯ ಬಳಿಕ ಇಸ್ರೇಲ್‌ನಲ್ಲಿ ಕೆಲವು ನಿಯಮಗಳನ್ನು ಸಡಿಲಿಸಲಾಗಿದೆ. ಇದೀಗ ಸೇನಾ ಅಧಿಕಾರಿಗಳೇ ಮೃತಪಟ್ಟ ಸೈನಿಕರ ವೀರ್ಯವನ್ನು ಸಂಗ್ರಹಿಸಿ ಇಡಬೇಕೆ ಎಂದು ಪೋಷಕರನ್ನು ಸಂಪರ್ಕಿಸಿ ಕೇಳುತ್ತಿದ್ದಾರೆ.

2024ರ ಏಪ್ರಿಲ್ 6 ರಂದು ಗಾಜಾ ಪಟ್ಟಿಯಲ್ಲಿ 20 ವರ್ಷದ ರೀಫ್ ಯುದ್ಧದಲ್ಲಿ ಕೊಲ್ಲಲ್ಪಟ್ಟಿದ್ದಾನೆ. ರೀಫ್ ನ ಮನೆಬಾಗಿಲಿಗೆ ಬಂದ ಸೇನಾಧಿಕಾರಿಗಳು ಪೋಷಕರ ಬಳಿ ರೀಫ್ ನ ವೀರ್ಯವನ್ನು ಹಿಂಪಡೆಯಲು ಇನ್ನೂ ಸಮಯವಿದೆ. ಕುಟುಂಬವು ಇದಕ್ಕೆ ಆಸಕ್ತಿ ಹೊಂದಿದೆಯೇ ಎಂದು ಕೇಳಿದ್ದಾರೆ. ಇದಕ್ಕೆ ರೀಫ್ ನ ತಂದೆ ತಕ್ಷಣವೇ ಪ್ರತಿಕ್ರಿಯಿಸಿ ರೀಫ್ ಜೀವನವನ್ನು ಪೂರ್ಣವಾಗಿ ಬದುಕಲಿ ಎಂದು ಹೇಳಿದರು. ರೀಫ್ ಮಕ್ಕಳನ್ನು ಪ್ರೀತಿಸುತ್ತಿದ್ದ, ಸ್ವಂತ ಮಕ್ಕಳನ್ನು ಬಯಸಿದ್ದ. ಆದರೆ ಆತನಿಗೆ ಹೆಂಡತಿ ಅಥವಾ ಗೆಳತಿ ಇಲ್ಲ ಎಂದು ಹೇಳಿಕೊಂಡಿದ್ದರು.

ಮಗನ ವೀರ್ಯ ರಕ್ಷಣೆಗೆ ಪೋಷಕರು ಮುಂದಾಗಿದ್ದರಿಂದ ಆತನ ಮಗುವಿಗೆ ಜನ್ಮ ನೀಡಲು ಹಲವಾರು ಮಹಿಳೆಯರು ಮುಂದೆ ಬಂದಿರುವುದಾಗಿ ರೀಫ್ ಪೋಷಕರು ಹೇಳಿದ್ದಾರೆ. ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಮಾಸ್ ದಾಳಿಯ ಅನಂತರ ವೀರ್ಯವನ್ನು ಸಂರಕ್ಷಿಸಲು ಬಯಸುವ ಕುಟುಂಬಗಳ ಸಂಖ್ಯೆ ಬೆಳೆಯುತ್ತಿದೆ. ಈ ದಾಳಿಯಲ್ಲಿ ಸುಮಾರು 1,200 ಜನರು ಕೊಲ್ಲಲ್ಪಟ್ಟರು ಮತ್ತು 251ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳಾಗಿ ಮಾಡಲಾಗಿತ್ತು.

ಹಮಾಸ್ ವಿರುದ್ಧ ಇಸ್ರೇಲ್ ಗಾಜಾದಲ್ಲಿ ನಡೆಸಿದ ಪ್ರಮುಖ ಮಿಲಿಟರಿ ಕಾರ್ಯಾಚರಣೆಯಲ್ಲಿ 39,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ. ಸುಮಾರು 400 ಇಸ್ರೇಲಿಗಳು ಸಾವನ್ನಪ್ಪಿದ್ದಾರೆ. ಇಸ್ರೇಲಿ ಆರೋಗ್ಯ ಸಚಿವಾಲಯದ ಪ್ರಕಾರ ಅಕ್ಟೋಬರ್ 7 ರಿಂದ ನಾಗರಿಕರು ಮತ್ತು ಸೈನಿಕರ ಸುಮಾರು 170 ಯುವಕರಿಂದ ವೀರ್ಯವನ್ನು ಪಡೆಯಲಾಗಿದೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸರಿಸುಮಾರು 15 ಪಟ್ಟು ಹೆಚ್ಚು.


ಈ ಪ್ರಕ್ರಿಯೆಯಲ್ಲಿ ಮೃತ ವ್ಯಕ್ತಿಯ ವೃಷಣದಲ್ಲಿ ಛೇದನವನ್ನು ಮಾಡಿ ಅಂಗಾಂಶದ ಒಂದು ಸಣ್ಣ ತುಂಡನ್ನು ತೆಗೆದು ಜೀವಂತ ವೀರ್ಯ ಕೋಶಗಳನ್ನು ಪ್ರಯೋಗಾಲಯದಲ್ಲಿ ಪ್ರತ್ಯೇಕಿಸಿ ಮತ್ತು ಫ್ರೀಜ್ ಮಾಡಲಾಗುತ್ತದೆ. ವ್ಯಕ್ತಿ ಮೃತಪಟ್ಟ 24 ಗಂಟೆಗಳ ಒಳಗೆ ಇದನ್ನು ಮಾಡಿದರೆ ಯಶಸ್ಸಿನ ಪ್ರಮಾಣ ಹೆಚ್ಚಾಗಿರುತ್ತದೆ. 72 ಗಂಟೆಗಳವರೆಗೆ ಇದನ್ನು ಮಾಡಲು ಅವಕಾಶವಿದೆ.

ಅಕ್ಟೋಬರ್‌ನಲ್ಲಿ ಇಸ್ರೇಲಿ ಆರೋಗ್ಯ ಸಚಿವಾಲಯವು ಪೋಷಕರಿಗೆ ಇದರ ಕಾರ್ಯವಿಧಾನವನ್ನು ಕೋರಲು ನ್ಯಾಯಾಲಯದ ಆದೇಶವನ್ನು ಪಡೆಯುವ ಅಗತ್ಯವನ್ನು ಮನ್ನಾ ಮಾಡಿದೆ. ಐಡಿಎಫ್ ಇತ್ತೀಚಿನ ವರ್ಷಗಳಲ್ಲಿ ದುಃಖಿತ ಪೋಷಕರಿಗೆ ಅದನ್ನು ನೀಡುವಲ್ಲಿ ಮುಂದಾಗಿದೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾ ದಂಗೆ ಹಿಂದೆ ಇದ್ಯಾ ಪಾಕ್‌ ISI ಕೈವಾಡ? ಶೇಖ್‌ ಹಸೀನಾ ಪುತ್ರ ಹೇಳಿದಿಷ್ಟು!

ವೀರ್ಯವನ್ನು ಸಂಗ್ರಹಿಸಿಡುವುದು ಸುಲಭವಾಗಿದ್ದರೂ ಮಗುವನ್ನು ಪಡೆಯಲು ಅದನ್ನು ಬಳಸಲು ಬಯಸುವ ವಿಧವೆಯರು ಅಥವಾ ಪೋಷಕರು ನ್ಯಾಯಾಲಯದಲ್ಲಿ ಅದಕ್ಕೆ ದಾಖಲೆಗಳನ್ನು ಸಲ್ಲಿಸಿ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಈ ಪ್ರಕ್ರಿಯೆಯು ಕೆಲವು ವರ್ಷಗಳನ್ನು ತೆಗೆದುಕೊಳ್ಳಬಹುದು. ಇದು ಸಮಯವಾಗಿರಲಿದೆ ಎನ್ನುತ್ತಾರೆ ದುಃಖಿತ ಪೋಷಕರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Viral News: ಇಸ್ರೇಲ್ ಮಹಿಳಾ ಸೈನಿಕರಿಂದ ನಿರಂತರ ಅತ್ಯಾಚಾರ; ಕ್ರೂರ ಅನುಭವ ಬಿಚ್ಚಿಟ್ಟ ಪ್ಯಾಲೇಸ್ಟಿನಿಯನ್ ಬಂಧಿತ

ಮಹಿಳಾ ಸೈನಿಕರು ತಮ್ಮ ಮೇಲೆ ಅತ್ಯಾಚಾರ ನಡೆಸುತ್ತಿದ್ದರು, ವಿದ್ಯುತ್ ಆಘಾತ ನೀಡಿದ್ದಾರೆ, ಸಾಕಷ್ಟು ಏಟು, ಅವಮಾನವನ್ನು ಮಾಡಿದ್ದಾರೆ. ಎರಡು ರಾತ್ರಿ ಅತ್ಯಂತ ಕನಿಷ್ಠ ಬಟ್ಟೆಯಲ್ಲಿ ಮಳೆಯಲ್ಲಿ ನಿಲ್ಲಿಸಿದ್ದಾರೆ ಎಂದು ಇಸ್ರೇಲ್ ಸೈನಿಕರ ಬಂಧನದಿಂದ ಬಿಡುಗಡೆಯಾದ ಪ್ಯಾಲೇಸ್ಟಿನಿಯನ್ ಇಬ್ರಾಹಿಂ ಸಲೇಂ (Viral News) ಹೇಳಿಕೊಂಡಿದ್ದಾರೆ. ಪ್ಯಾಲೇಸ್ಟಿನಿಯನ್ ಬಂಧಿತ ತಾನು ಅನುಭವಿಸಿರುವ ಕರಾಳ ಅನುಭವವನ್ನು ವಿವರಿಸಿದ್ದಾರೆ. ಅವರ ಮಾತಿನ ವಿಡಿಯೊ ಸಂಚಲನ ಮೂಡಿಸಿದೆ.

VISTARANEWS.COM


on

By

Viral News
Koo

ಪ್ಯಾಲೇಸ್ಟಿನಿಯನ್ ಬಂಧಿತರನ್ನು (Palestinian prisoners) ಇಸ್ರೇಲ್ (Israeli army) ಎಷ್ಟು ಕ್ರೂರವಾಗಿ ನಡೆಸಿಕೊಳ್ಳುತ್ತಿದೆ ಎಂಬುದನ್ನು ಎಂಟು ತಿಂಗಳ ಕಾಲ ಇಸ್ರೇಲ್ ಸೈನಿಕರ ಬಂಧನ ಅನುಭವಿಸಿ ಬಿಡುಗಡೆಯಾದ ಇಬ್ರಾಹಿಂ ಸಲೇಂ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಸುದ್ದಿ ಈಗ ಭಾರಿ ವೈರಲ್ (Viral News) ಆಗಿದೆ.

ಪ್ರಸ್ತುತ ಕೇಂದ್ರ ಗಾಜಾದ (central gaza) ದೇರ್ ಅಲ್-ಬಾಲಾಹ್‌ನಲ್ಲಿರುವ ಅವರು, ಕುಖ್ಯಾತ ಎಸ್ ಡಿ ಇ ತೇಮಾನ್ ಬಂಧನ ಶಿಬಿರದಲ್ಲಿ ತಮ್ಮ ಮೇಲೆ ಅತ್ಯಾಚಾರವಾಗಿದೆ, ವಿದ್ಯುದಾಘಾತ ನೀಡಲಾಗಿದೆ ಮತ್ತು ಸಾಕಷ್ಟು ಏಟು ಕೂಡ ಬಿದ್ದಿದೆ ಎಂಬುದಾಗಿ ತಮ್ಮ ಭಯಾನಕ ನಿಂದನೆಯ ಅನುಭವವನ್ನು ಹೇಳಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಮುಳ್ಳುತಂತಿಯ ಬೇಲಿಯ ಹಿಂದೆ ನಿಂತಿರುವ ಸೇಲಂ ಅವರ ಚಿತ್ರವು ಅನೇಕ ಪ್ಯಾಲೇಸ್ಟಿನಿಯನ್ ಕೈದಿಗಳು ಅನುಭವಿಸುತ್ತಿರುವ ದೌರ್ಜನ್ಯದ ಚಿತ್ರವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇವರ ಅಪಹರಣವಾಗಿದ್ದು ಹೇಗೆ?

2023ರ ಡಿಸೆಂಬರ್ ನಲ್ಲಿ ಇಸ್ರೇಲ್ ಪಡೆಗಳು ಉತ್ತರ ಗಾಜಾದ ಕಮಲ್ ಅಡ್ವಾನ್ ಆಸ್ಪತ್ರೆಯ ಮೇಲೆ ದಾಳಿ ಮಾಡಿದಾಗ ಸೇಲಂ ಅವರಿಗೆ ಅಗ್ನಿಪರೀಕ್ಷೆ ಎದುರಾಯಿತು. ಅಲ್ಲಿ ತೀವ್ರವಾಗಿ ಗಾಯಗೊಂಡ ಮಕ್ಕಳ ಪಕ್ಕದಲ್ಲಿ ಅವರೂ ಇದ್ದರು. ಇಸ್ರೇಲ್ ದಾಳಿಯಲ್ಲಿ ಸೇಲಂನ ಅನೇಕ ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಅದು ಅವರ ಒಡಹುಟ್ಟಿದವರು ಮತ್ತು ಅವರ ಹಲವಾರು ಮಕ್ಕಳನ್ನು ಬಲಿ ತೆಗೆದುಕೊಂಡಿತು. ಅವರ ಮನವಿ ಮತ್ತು ಆಸ್ಪತ್ರೆಯ ವರದಿಗಳ ಹೊರತಾಗಿಯೂ ಇಸ್ರೇಲ್ ಸೈನಿಕರು ಅವರನ್ನು ಬಲವಂತವಾಗಿ ಐಸಿಯುನಿಂದ ಕರೆದುಕೊಂಡು ಹೋಗಿ ಬಂಧಿಸಿದರು.


ಮಳೆಯಲ್ಲಿ ಎರಡು ದಿನ

ಸೇಲಂ ಇತರ ಪುರುಷರೊಂದಿಗೆ ಸೈನಿಕರಿಂದ ವಿವಸ್ತ್ರಗೊಳ್ಳಲ್ಪಟ್ಟರು, ಥಳಿಸಲ್ಪಟ್ಟರು ಮತ್ತು ನಿಂದಿಸಲ್ಪಟ್ಟರು. ಸಾಕಷ್ಟು ಅವಮಾನ ಮಾಡಲಾಯಿತು. ಬಳಿಕ ಸೇಲಂ ಅವರನ್ನು ನೆಗೆವ್ ಮರುಭೂಮಿಯಲ್ಲಿನ ಬಂಧನ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಬಂಧಿತರನ್ನು ಎರಡು ರಾತ್ರಿಗಳ ಕಾಲ ಮಳೆಯಲ್ಲಿ ಕಟ್ಟಿಹಾಕಲಾಯಿತು ಮತ್ತು ಕನಿಷ್ಠ ಬಟ್ಟೆ ಮತ್ತು ಆಹಾರವನ್ನು ನೀಡುವ ಮೊದಲು ಬಹುತೇಕ ಅವರು ಬೆತ್ತಲೆಯಾಗಿದ್ದರು.

ಅಲ್ಲಿಂದ ಎಸ್ ಡಿ ಇ ತೇಮಾನ್ ಸೇನಾ ನೆಲೆಗೆ ವರ್ಗಾಯಿಸಲಾಯಿತು. ಇದು ಅತ್ಯಂತ ಕೆಟ್ಟ ಅನುಭವ ಎಂದು ಅವರು ಹೇಳಿದ್ದಾರೆ. 52 ದಿನಗಳವರೆಗೆ ಅವರು ಮಾನಸಿಕವಾಗಿ ಜರ್ಜರಿತದರು. ಅವರಿಗೆ ನಿಯಮಿತ ಶಿಕ್ಷೆ ಮತ್ತು ನಿರಂತರ ಅವಮಾನ ಮಾಡಲಾಯಿತು. ಅತ್ಯಾಚಾರ ನಡೆಸಿದ್ದರಿಂದ ಅನೇಕ ಕೈದಿಗಳು ಗುದನಾಳದ ಗಾಯಗಳನ್ನು ಅನುಭವಿಸಿದರು. ಇಲ್ಲಿ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯಗಳು ಅತಿರೇಕವಾಗಿವೆ. ಇಸ್ರೇಲ್ ಮಹಿಳಾ ಸೈನಿಕರೂ ಅತ್ಯಾಚಾರ ನಡೆಸುತ್ತಾರೆ ಎಂದು ಸೇಲಂ ಹೇಳಿದ್ದಾರೆ.


ಆಗಾಗ್ಗೆ ಮಹಿಳಾ ಸೈನಿಕರಿಂದ ಆಘಾತವು ಎಷ್ಟು ತೀವ್ರವಾಗಿತ್ತು ಎಂದರೆ ಖೈದಿಗಳು ತಮ್ಮ ಗಾಯಗಳಿಗೆ ಮೂಲವ್ಯಾಧಿ ಕಾರಣ ಎಂದು ತಪ್ಪಾಗಿ ಭಾವಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Israel-Hamas War: ಪುತ್ರರ ವೀರ್ಯವನ್ನು ಸಂಗ್ರಹಿಸಿಡುತ್ತಿರುವ ಇಸ್ರೇಲ್ ಪೋಷಕರು! ಯಾಕೆ ಹೀಗೆ?

ಸೇಲಂ ಅವರ ಈ ಸಾಕ್ಷ್ಯವು ಇಸ್ರೇಲ್ ವಶದಲ್ಲಿರುವ ಪ್ಯಾಲೇಸ್ಟಿನಿಯನ್ ಬಂಧಿತರನ್ನು ಎಷ್ಟು ಕ್ರೂರವಾಗಿ ನಡೆಸಿಕೊಲ್ಲಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಅವರ ಅನುಭವಗಳು ಬಂಧನ ಶಿಬಿರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಗಮನ ಮತ್ತು ಹಸ್ತಕ್ಷೇಪದ ಅಗತ್ಯದ ಮೇಲೆ ಬೆಳಕು ಚೆಲ್ಲಿದೆ.

Continue Reading

ದೇಶ

Bangladesh Unrest: ದಂಗೆ ಪೀಡಿತ ಬಾಂಗ್ಲಾದಲ್ಲಿ ಸಿಲುಕಿರುವ ಭಾರತೀಯರು, ಹಿಂದೂಗಳ ರಕ್ಷಣೆಗೆ ಕೇಂದ್ರದಿಂದ ಸಮಿತಿ

Bangladesh Unrest: “ಭಾರತ ಸರ್ಕಾರವು ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ (IBB) ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಬಾಂಗ್ಲಾದೇಶದಲ್ಲಿರುವ ಭಾರತೀಯ ನಾಗರಿಕರು ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶದಲ್ಲಿರುವ ತಮ್ಮ ಸಹವರ್ತಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಲಿದೆ” ಎಂದು ಸರ್ಕಾರ ಹೇಳಿದೆ.

VISTARANEWS.COM


on

Bangladesh Unrest
Koo

ನವದೆಹಲಿ: ದಂಗೆ ಪೀಡಿತ ಬಾಂಗ್ಲಾದೇಶ(Bangladesh Unrest)ದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಹಾಗೂ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳು(Hindu Minorities) ದಿನೇ ದಿನೇ ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ವಹಣೆಗಾಗಿ ಭಾರತ ಸರ್ಕಾರ ಸಮಿತಿಯೊಂದು ರಚಿಸಿದೆ. ಶೇಖ್ ಹಸೀನಾ(Sheikh hasina) ಸರ್ಕಾರದ ಪತನದ ನಂತರ ಉಗ್ರ ಪ್ರತಿಭಟನೆಗಳ ಮಧ್ಯೆ ಈ ಸಮಿತಿಯು ದೇಶದಲ್ಲಿ ಭಾರತೀಯರು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

“ಭಾರತ ಸರ್ಕಾರವು ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ (IBB) ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಬಾಂಗ್ಲಾದೇಶದಲ್ಲಿರುವ ಭಾರತೀಯ ನಾಗರಿಕರು ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶದಲ್ಲಿರುವ ತಮ್ಮ ಸಹವರ್ತಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಲಿದೆ” ಎಂದು ಸರ್ಕಾರ ಹೇಳಿದೆ.

“ಸಮಿತಿಯ ನೇತೃತ್ವವನ್ನು ಎಡಿಜಿ, ಗಡಿ ಭದ್ರತಾ ಪಡೆ (ಬಿಎಸ್ಎಫ್), ಪೂರ್ವ ಕಮಾಂಡ್ ವಹಿಸಲಿದೆ. ಇನ್ನು ದಕ್ಷಿಣ ಬಂಗಾಳ, ತ್ರಿಪುರ ಬಿಎಸ್‌ಎಫ್‌ ನ ಐಜಿಗಳು, ಲ್ಯಾಂಡ್‌ ಪೋರ್ಟ್ಸ್‌ ಅಥಾರಿಟಿ ಆಫ್‌ ಇಂಡಿಯಾ(LPAI)ನ ಸೆಕ್ರೆಟರಿ ಈ ಸಮಿತಿಯ ಸದಸ್ಯರಾಗಿರಲಿದ್ದಾರೆ” ಎಂದು ಹೇಳಿದೆ.

ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ಭುಗಿಲೆದ್ದಿರುವ ದಂಗೆಯಲ್ಲಿ ಅಲ್ಪಸಂಖ್ಯಾತ ಹಿಂದೂ ದಿನೇ ದಿನೇ ನರಕಯಾತನೆ ಅನುಭವಿಸುವಂತಾಗಿದೆ. ಕಂಡ ಕಂಡಲ್ಲಿ ಹಿಂದೂಗಳನ್ನು, ಅವರಿಗೆ ಸಂಬಂಧಿಸಿದ ಮನೆ ಅಂಗಡಿಗಳನ್ನು ಮತ್ತು ದೇಗುಲಗಳನ್ನು ಕಿಡಿಗೇಡಿಗಳು ಪುಡಿಗಟ್ಟಿದ್ದಾರೆ. ಕೈಗೆ ಸಿಕ್ಕವಸ್ತುಗಳನ್ನು ದೋಚುತ್ತಿದ್ದಾರೆ. ಇದೀಗ ಬಾಂಗ್ಲಾದೇಶದ ಖ್ಯಾತ ಗಾಯಕನ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

ಅಲ್ಲಿನ ಸುಮಾರು 600 ಜನ ಅಕ್ರಮವಾಗಿ ಪಶ್ಚಿಮ ಬಂಗಾಳದ ಗಡಿಪ್ರದೇಶದೊಳಗೆ ಅಕ್ರಮವಾಗಿ ಒಳನುಸುಳಲು ಯತ್ನಿಸಿದ್ದು, ಅವರನ್ನು ತಡೆಯುವಲ್ಲಿ ಗಡಿ ಭದ್ರತಾ ಪಡೆ(BSF) ಯಶಸ್ವಿಯಾಗಿದೆ. ಬಾಂಗ್ಲಾದಲ್ಲಿ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು, ಕ್ಷಣ ಕ್ಷಣಕ್ಕೂ ಪ್ರಾಣಭೀತಿ ಎದುರಿಸುತ್ತಿರುವುದಾಗಿ ಹೇಳಿಕೊಂಡು ಅನೇಕ ಜನರು ಭಾರತದ ಗಡಿಯೊಳಗೆ ಪ್ರವೇಶಿಸಲು ಅವಕಾಶ ನೀಡುವಂತೆ ಬಿಎಸ್‌ಎಫ್‌ ಸಿಬ್ಬಂದಿ ಮನವಿ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ದಕ್ಷಿಣ್ ಬೆರುಬರಿ ಗ್ರಾಮದಲ್ಲಿ ಈ ಗುಂಪು ಭಾರತದ ಗಡಿ ದಾಟಲು ಪ್ರಯತ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾದೇಶದ ಪತ್ರಿಕೆಗಳ ವರದಿ ಪ್ರಕಾರ 27 ಜಿಲ್ಲೆಗಳಲ್ಲಿ ಹಿಂದೂಗಳ ವ್ಯಾಪಾರ ಮಳಿಗೆ ಮತ್ತು ಮನೆಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಇನ್ನು ಜಮಾತ್‌-ಎ- ಇಸ್ಲಾಮಿ ಹಿಂದೂ ದೇಗುಲಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದನ್ನು ಒಪ್ಪಿಕೊಂಡಿದೆ.

ಬಾಂಗ್ಲಾದೇಶದ ಖುಲ್ನಾ ವಿಭಾಗದಲ್ಲಿರುವ ಮೆಹೆರೆಪುರದಲ್ಲಿರುವ ಇಸ್ಕಾನ್‌ ದೇಗುಲದ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಅಲ್ಲದೇ ಅಲ್ಲಿರುವ ಕಾಳಿ ಮಂದಿರವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಇಸ್ಕಾನ್ ವಕ್ತಾರ ಯುಧಿಸ್ತಿರ್ ಗೋವಿಂದ ದಾಸ್ ಟ್ವೀಟ್‌ ಮಾಡಿದ್ದು, ಮೆಹರ್‌ಪುರದಲ್ಲಿರುವ ನಮ್ಮ ಇಸ್ಕಾನ್ ಕೇಂದ್ರಗಳಲ್ಲಿ ಒಂದನ್ನು (ಬಾಡಿಗೆಗೆ ನೀಡಲಾಗಿದೆ) ಭಗವಾನ್ ಜಗನ್ನಾಥ, ಬಲದೇವ್ ಮತ್ತು ಸುಭದ್ರಾ ದೇವಿ ದೇವತೆಗಳನ್ನು ಸುಟ್ಟು ಹಾಕಲಾಯಿತು. ಕೇಂದ್ರದಲ್ಲಿ ವಾಸವಾಗಿದ್ದ ಮೂವರು ಭಕ್ತರು ಹೇಗಾದರೂ ತಪ್ಪಿಸಿಕೊಂಡು ಬದುಕುಳಿದರು ಎಂದಿದ್ದಾರೆ.

ಇದನ್ನೂ ಓದಿ: Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ಗೆ ಮೋದಿ ಆಗ್ರಹ

Continue Reading

ವಿದೇಶ

Bangladesh Unrest: ಬಾಂಗ್ಲಾ ದಂಗೆ ಹಿಂದೆ ಇದ್ಯಾ ಪಾಕ್‌ ISI ಕೈವಾಡ? ಶೇಖ್‌ ಹಸೀನಾ ಪುತ್ರ ಹೇಳಿದಿಷ್ಟು!

Bangladesh Unrest: ಸಾಂದರ್ಭಿಕ ಪುರಾವೆಗಳಿಂದ ನನಗೆ ಕೆಲವೊಂದು ವಿಚಾರಗಳು ಖಚಿತವಾಗಿದ್ದು, ಈ ದುರ್ಘಟನೆಯಲ್ಲಿ ಪಾಕಿಸ್ತಾನದ ಐಎಸ್‌ಐ ಭಾಗಿಯಾಗಿದೆ ಎಂದು ನಾನು ಶಂಕಿಸುತ್ತೇನೆ. ದಾಳಿಗಳು ಮತ್ತು ಪ್ರತಿಭಟನೆಗಳು ಬಹಳ ಸಂಘಟಿತವಾಗಿವೆ. ಇದೊಂದು ಸಂಘಟಿತ ದಾಳಿ. ಸರ್ಕಾರ ಎಷ್ಟೇ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಿದರೂ ಅದನ್ನು ಹಾಳುಗೆಡವುವ ಪ್ರಯತ್ನ ನಡೆಯುತ್ತಲೇ ಇತ್ತು ಎಂದು ಅವರು ಪಾಕಿಸ್ತಾನದ ವಿರುದ್ಧ ಬೆರಳು ಮಾಡಿ ತೋರಿಸಿದ್ದಾರೆ.

VISTARANEWS.COM


on

Bangladesh Unrest
Koo

ನವದೆಹಲಿ: ಬಾಂಗ್ಲಾದೇಶದಲ್ಲಿ ಅಶಾಂತಿ, ದಂಗೆ(Bangladesh Unrest) ಭುಗಿಲೆದ್ದಿರುವ ಹಿಂದೆ ಪಾಕಿಸ್ತಾನ(Pakistan)ದ ಕೈವಾಡ ಇದೆ ಎಂದು ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ(Sheikh Hasina) ಪುತ್ರ ಸಜೀಬ್‌ ವಾಝೇದ್‌ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ತಲೆದೋರಿರುವ ಹಿಂಸಾಚಾರದ ಹಿಂದೆ ವಿದೇಶಿಗರ ಹಸ್ತಕ್ಷೇಪ ಮತ್ತು ಪಾಕ್‌ ಗುಪ್ತಚರ ಇಲಾಖೆ(ISI)ದ ಕೈವಾಡ ಇರುವುದಕ್ಕೆ ಪುರಾವೆಗಳಿವೆ ಎಂದು ಅವರು ತಿಳಿಸಿದ್ದಾರೆ.

“ಸಾಂದರ್ಭಿಕ ಪುರಾವೆಗಳಿಂದ ನನಗೆ ಕೆಲವೊಂದು ವಿಚಾರಗಳು ಖಚಿತವಾಗಿದ್ದು, ಈ ದುರ್ಘಟನೆಯಲ್ಲಿ ಪಾಕಿಸ್ತಾನದ ಐಎಸ್‌ಐ ಭಾಗಿಯಾಗಿದೆ ಎಂದು ನಾನು ಶಂಕಿಸುತ್ತೇನೆ. ದಾಳಿಗಳು ಮತ್ತು ಪ್ರತಿಭಟನೆಗಳು ಬಹಳ ಸಂಘಟಿತವಾಗಿವೆ. ಇದೊಂದು ಸಂಘಟಿತ ದಾಳಿ. ಸರ್ಕಾರ ಎಷ್ಟೇ ಪರಿಸ್ತಿತಿ ಸುಧಾರಿಸಲು ಪ್ರಯತ್ನಿಸಿದರೂ ಅದನ್ನು ಹಾಳುಗೆಡವುವ ಪ್ರಯತ್ನ ನಡೆಯುತ್ತಲೇ ಇತ್ತು ಎಂದು ಅವರು ಪಾಕಿಸ್ತಾನದ ವಿರುದ್ಧ ಬೆರಳು ಮಾಡಿ ತೋರಿಸಿದ್ದಾರೆ.

ಇನ್ನು ದಂಗೆಕೋರರು ಬಂದೂಕು ಹಿಡಿದು ದಾಳಿ ನಡೆಸುತ್ತಿದ್ದಾರೆ ಎಂದಾದರೆ ಖಂಡಿತವಾಗಿ ಅವರಿಗೆ ಉಗ್ರರಿಂದಲೇ ಬಂದೂಕು ಪೂರೈಕೆ ಆಗುತ್ತಿದೆ ಎಂದರ್ಥ ಎಂದು ಹೇಳಿದ್ದಾರೆ. ಇನ್ನು ಶೇಖ್‌ ಹಸೀನಾ ಶೀಘ್ರವೇ ದೇಶಕ್ಕೆ ಮರಳುವುದಾಗಿ ಹೇಳಿಕೆ ನೀಡಿರುವ ವಾಝೇದ್‌, ಹೌದು ಶೇಖ್‌ ಹಸೀನಾ ಅವರು ವಾಪಾಸ್‌ ಹೋಗುವುದಿಲ್ಲ ಎಂದು ನಾನು ಹೇಳಿದ್ದೆ. ಆದರೆ ಎರಡು ದಿನಗಳ ಆಗಿರುವ ಸಾಕಷ್ಟು ಬೆಳವಣಿಗೆಗಳಿಂದಾಗಿ ಅವರು ಸ್ವದೇಶಕ್ಕೆ ಮರರಳು ಚಿಂತನೆ ನಡೆಸುತ್ತಿದ್ದಾರೆ. ನಮ್ಮ ಪಕ್ಷದ ನಾಯಕರ ಮೇಲೆ ಎಗ್ಗಿಲ್ಲದೇ ದಾಳಿ ನಡೆಯುತ್ತಿವೆ. ಹೀಗಿರುವಾಗಿ ಅವರ ರಕ್ಷಣೆಗಾಗಿ ಅಲ್ಲೇ ನಿಂತು ಎಷ್ಟು ಸಾಧ್ಯವೋ ಅಂತ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದಿದ್ದಾರೆ.

ಪ್ರಧಾನಿ ಮೋದಿಗೆ ಧನ್ಯವಾದ

ವಾಝೇದ್‌ ಅವರು ತಮ್ಮ ತಾಯಿಯನ್ನು ರಕ್ಷಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಅಂತರರಾಷ್ಟ್ರೀಯ ಅಭಿಪ್ರಾಯವನ್ನು ನಿರ್ಮಿಸಲು ಮತ್ತು ಒತ್ತಡವನ್ನು ಹೇರಲು ಸಹಾಯ ಮಾಡಲು ಭಾರತಕ್ಕೆ ಮನವಿ ಮಾಡಿದರು. ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಜಾಯ್ ಒತ್ತಾಯಿಸಿದರು, “ದೇಶವು ಅರಾಜಕತೆಯ ಸ್ಥಿತಿಗೆ ತಿರುಗುತ್ತಿದೆ ಮತ್ತು ಈ ಪ್ರದೇಶದಲ್ಲಿ ಎರಡನೇ ಅಫ್ಘಾನಿಸ್ತಾನವಾಗುತ್ತಿದೆ ಎಂದರು.

Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ಗೆ ಮೋದಿ ಆಗ್ರಹ

Continue Reading

ವಿದೇಶ

Trump Assassination Bid: ಟ್ರಂಪ್‌ ಹತ್ಯೆ ಯತ್ನಕ್ಕೆ ಸಂಬಂಧ ಮತ್ತೊಂದು ವಿಡಿಯೋ ರಿಲೀಸ್‌; ಕೆಲವೇ ಕ್ಷಣಗಳಿಗೂ ಮುನ್ನ ನಡೆದಿದ್ದೇನು?

Trump Assassination Bid: ಘಟನೆ ನಡೆಯುವ ಕೆಲವೇ ಕೆಲವು ಕ್ಷಣಗಳಿಗೆ ಮುನ್ನ ನಡೆದ ಘಟನೆಯ ದೃಶ್ಯವನ್ನು ಪೆನ್ಸಿಲ್ವೇನಿಯಾದ ಪೊಲೀಸರು ಬಿಡುಗಡೆ ಮಾಡಿದ್ದು, ಗುರುವಾರ ಬಿಡುಗಡೆಯಾದ ತುಣುಕಿನಲ್ಲಿ, ಬಟ್ಲರ್ ಟೌನ್‌ಶಿಪ್ ಪೊಲೀಸ್ ಅಧಿಕಾರಿಗಳು ಡಿಪಿಎಂಎಸ್ ಎಆರ್ -15 ರೈಫಲ್‌ನೊಂದಿಗೆ ಶಸ್ತ್ರಸಜ್ಜಿತರಾಗಿದ್ದ ಆರೋಪಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ನನ್ನು ತಡೆಯಲು ಪ್ರಯತ್ನಿಸಿದಾಗ ಅವರ ಹತಾಶ ಪ್ರಯತ್ನಗಳನ್ನು ಸೆರೆಹಿಡಿಯಲಾಗಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

VISTARANEWS.COM


on

trump assassination bid
Koo

ವಾಷಿಂಗ್ಟನ್:‌ ಕಳೆದ ತಿಂಗಳು ಚುನಾವಣಾ ಪ್ರಚಾರ(US Presidential Election)ದ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Trump Assassination Bid) ಮೇಲೆ ನಡೆದ ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಂದು ವಿಡಿಯೋ ರಿಲೀಸ್‌ ಮಾಡಿದ್ದಾರೆ. ಟ್ರಂಪ್‌ ಹತ್ಯೆ ಯತ್ನವನ್ನು ಪೊಲೀಸರು ತಡೆಯುತ್ತಿರುವ ದೃಶ್ಯ ಇದಾಗಿದ್ದು, ಪೊಲೀಸರ ಮೈಮೇಲಿದ್ದ ಬಾಡಿಕ್ಯಾಮ್‌ನಲ್ಲಿ ರೆಕಾರ್ಡ್‌ ಆಗಿದೆ.

ಘಟನೆ ನಡೆಯುವ ಕೆಲವೇ ಕೆಲವು ಕ್ಷಣಗಳಿಗೆ ಮುನ್ನ ನಡೆದ ಘಟನೆಯ ದೃಶ್ಯವನ್ನು ಪೆನ್ಸಿಲ್ವೇನಿಯಾದ ಪೊಲೀಸರು ಬಿಡುಗಡೆ ಮಾಡಿದ್ದು, ಗುರುವಾರ ಬಿಡುಗಡೆಯಾದ ತುಣುಕಿನಲ್ಲಿ, ಬಟ್ಲರ್ ಟೌನ್‌ಶಿಪ್ ಪೊಲೀಸ್ ಅಧಿಕಾರಿಗಳು ಡಿಪಿಎಂಎಸ್ ಎಆರ್ -15 ರೈಫಲ್‌ನೊಂದಿಗೆ ಶಸ್ತ್ರಸಜ್ಜಿತರಾಗಿದ್ದ ಆರೋಪಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ನನ್ನು ತಡೆಯಲು ಪ್ರಯತ್ನಿಸಿದಾಗ ಅವರ ಹತಾಶ ಪ್ರಯತ್ನಗಳನ್ನು ಸೆರೆಹಿಡಿಯಲಾಗಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನಿಂದ ಕ್ರೂಕ್ಸ್, ಬಟ್ಲರ್‌ನಲ್ಲಿ ಹೊರಾಂಗಣ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಒಂದು ಬುಲೆಟ್ ಟ್ರಂಪ್ ಕಿವಿಗೆ ತಾಗಿತು. ಬಟ್ಲರ್ ಫಾರ್ಮ್ ಶೋ ಮೈದಾನದಲ್ಲಿ ವೇದಿಕೆಯಿಂದ 130 ಗಜಗಳಷ್ಟು ದೂರದಲ್ಲಿರುವ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕ್ರೂಕ್ಸ್ ಗನ್‌ ಸಮೇತ ಇದ್ದ ಎನ್ನಲಾಗಿದೆ. ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಶನಿವಾರ ಸಂಜೆ ನಡೆದ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಕ್ರೂಕ್‌ನನ್ನು ಸೀಕ್ರೆಟ್‌ ಸರ್ವಿಸ್‌ ಏಜೆಂಟ್‌ ಹೊಡೆದುರುಳಿಸಿತ್ತು.

ಇನ್ನು ಕ್ರೂಕ್‌ನ ಕಾರಿನಲ್ಲಿ ಅನುಮಾನಾಸ್ಪದ ಸಾಧನ ಪತ್ತೆಯಾಗಿದೆ. ಇದು ಮೇಲ್ನೋಟಕ್ಕೆ ಸ್ಫೋಟಕ ವಸ್ತುವಿನಂತೆ ಕಾಣುತ್ತಿದ್ದು, ಬಾಂಬ್‌ ನಿಷ್ಕ್ರೀಯ ದಳ ಅದನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. ಇನ್ನು ಆತನ ಫೋನ್‌ ಅನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಇನ್ನು ಟ್ರಂಪ್‌ ಮೇಲಿನ ದಾಳಿಗೆ ಕ್ರೂಕ್‌ ಬಳಸಿದ್ದ ಬಂದೂಕು AR ಸೆಮಿ ಅಟೋಮ್ಯಾಟಿಕ್‌ ಬಂದೂಕ್‌ ಆಗಿದ್ದು, ಇದನ್ನು ಕ್ರೂಕ್‌ನ ತಂದೆ ಕಾನೂನು ಪ್ರಕಾರ ಖರೀದಿಸಿದ್ದ ಎನ್ನಲಾಗಿದೆ.

ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಶನಿವಾರ ಸಂಜೆ ನಡೆದ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಆರಂಭಿಕ ದೊಡ್ಡ ಸ್ಫೋಟದ ನಂತರ ಟ್ರಂಪ್ ಗಾಯಗೊಂಡಂತೆ ನೆಲಕ್ಕೆ ಬಿದ್ದರು. ಇನ್ನು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
ಇನ್ನು ತಕ್ಷಣ ಅವರನ್ನು ಭದ್ರತಾ ಸಿಬ್ಬಂದಿ ರಕ್ಷಿಸಿ ವೇದಿಕೆಯಿಂದ ಹೊರಗೆ ಕರೆದೊಯ್ಯುತ್ತಿದ್ದರು. ಇನ್ನು ಅಲ್ಲಿ ನೆರೆದಿದ್ದ ಅನೇಕ ಜನ ಗಾಬರಿಯಲ್ಲಿ ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಟ್ರಂಪ್ ಜನಸಮೂಹದ ಕಡೆಗೆ ಕೂಗುತ್ತಿರುವಂತೆ ತೋರಿತು ಮತ್ತು ಅವರು ಆತುರದಿಂದ ಹೊರಟಾಗ ತಮ್ಮ ಮುಷ್ಟಿಯನ್ನು ಪಂಪ್ ಮಾಡುತ್ತಿರುವುದು ಕಂಡುಬಂದಿದೆ. ಟ್ರಂಪ್ ಸುರಕ್ಷಿತವಾಗಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.

ಇದನ್ನೂ ಓದಿ: Asif Merchant: ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ಸಂಚು ರೂಪಿಸಿದ್ದ ಪಾಕಿಸ್ತಾನಿ ಪ್ರಜೆ ಅರೆಸ್ಟ್‌

Continue Reading
Advertisement
ವಾಣಿಜ್ಯ9 mins ago

Richest Indian Family: ಭಾರತದ ಜಿಡಿಪಿಯ ಶೇ. 10ರಷ್ಟು ಸಂಪತ್ತು ಹೊಂದಿರುವ ಅಂಬಾನಿ ಕುಟುಂಬ! ಇತರ ಶ್ರೀಮಂತ ಕುಟುಂಬಗಳು ಯಾವವು?

Viral news
ವೈರಲ್ ನ್ಯೂಸ್19 mins ago

Viral News: ಮಾಂಸದೂಟಕ್ಕಾಗಿ ಜಗಳ: ಮೆದುಳು ಹೊರಬರುವಂತೆ ಬಡಿದು ಪತಿಯನ್ನೇ ಕೊಂದ ಮಹಿಳೆ

CM Siddaramaiah
ಕರ್ನಾಟಕ22 mins ago

CM Siddaramaiah: 4 ದಶಕದಿಂದ ರಾಜಕೀಯದಲ್ಲಿರುವ ನನ್ನ ಬದುಕು ತೆರೆದ ಪುಸ್ತಕ: ಸಿಎಂ ಸಿದ್ದರಾಮಯ್ಯ

Paris Olympics 2024
ಪ್ರಮುಖ ಸುದ್ದಿ32 mins ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 10ರಂದು ಭಾರತಕ್ಕೆ ಯಾವ್ಯಾವ ಸ್ಪರ್ಧೆಗಳಿವೆ? ಇಲ್ಲಿದೆ ವಿವರ

Viral News
ವಿದೇಶ46 mins ago

Viral News: ಇಸ್ರೇಲ್ ಮಹಿಳಾ ಸೈನಿಕರಿಂದ ನಿರಂತರ ಅತ್ಯಾಚಾರ; ಕ್ರೂರ ಅನುಭವ ಬಿಚ್ಚಿಟ್ಟ ಪ್ಯಾಲೇಸ್ಟಿನಿಯನ್ ಬಂಧಿತ

Lending Rate
ದೇಶ1 hour ago

Lending Rate: ಬ್ಯಾಂಕ್‌ ಆಫ್‌ ಬರೋಡಾ ಬಡ್ಡಿದರ ಹೆಚ್ಚಳ; ಸಾಲಗಾರರಿಗೆ ಇಎಂಐ ಇನ್ನಷ್ಟು ಭಾರ

Vinesh Phogat
ಕ್ರೀಡೆ1 hour ago

Vinesh Phogat: ಕುಸ್ತಿಯಲ್ಲಿ ಅರಳಿದ ಪ್ರೀತಿ, ಒಂದು ರೂಪಾಯಿ ಖರ್ಚಿನಲ್ಲಿ ಮದುವೆ; ಇದುವೇ ವಿನೇಶ್​ ಫೋಗಟ್​ – ಸೋಮ್​ವೀರ್​ ಪ್ರೇಮದ ಕತೆ

Hijab Ban
ಪ್ರಮುಖ ಸುದ್ದಿ2 hours ago

Hijab Ban: ಕಾಲೇಜಿನಲ್ಲಿ ಹಿಜಾಬ್‌ ನಿಷೇಧಿಸಿದ್ದಕ್ಕೆ ಸುಪ್ರೀಂ ಕೋರ್ಟ್‌ ತರಾಟೆ; ತಿಲಕಕ್ಕೆ ವಿನಾಯಿತಿ ಏಕೆ ಎಂದು ಪ್ರಶ್ನೆ!

Vinesh Phogat
ಪ್ರಮುಖ ಸುದ್ದಿ2 hours ago

Vinesh Phogat : ವಿನೇಶ್​ ಪೋಗಟ್​ಗೆ ಬೆಳ್ಳಿ ಪದಕ ಕೊಡಿ; ಕುಸ್ತಿಪಟುವಿನ ಬೆಂಬಲಕ್ಕೆ ನಿಂತ ಸಚಿನ್ ತೆಂಡೂಲ್ಕರ್​

Snake Bite
ಕರ್ನಾಟಕ2 hours ago

Snake Bite: ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಬಾಣಂತಿ ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 day ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 day ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 day ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌