Jerusalem Terror Attack: ಇಸ್ರೇಲ್​​ನ ಪ್ರಾರ್ಥನಾ ಮಂದಿರದ ಮೇಲೆ ಉಗ್ರ ದಾಳಿ; 8 ಮಂದಿ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ Vistara News
Connect with us

ವಿದೇಶ

Jerusalem Terror Attack: ಇಸ್ರೇಲ್​​ನ ಪ್ರಾರ್ಥನಾ ಮಂದಿರದ ಮೇಲೆ ಉಗ್ರ ದಾಳಿ; 8 ಮಂದಿ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

ಪ್ಯಾಲಿಸ್ಟೀನ್​ ಮೂಲದ ಹಮಾಸ್​ ಭಯೋತ್ಪಾದಕರ ವಿರುದ್ಧ ಇಸ್ರೇಲ್​ ಸರಣಿ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಮತ್ತೊಮ್ಮೆ ಉಗ್ರ ದಾಳಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

VISTARANEWS.COM


on

Jerusalem terror attack 8 died
Koo

ಇಸ್ರೇಲ್​ ರಾಜಧಾನಿ ಜೆರುಸಲೇಮ್​​ನಲ್ಲಿರುವ ಯಹೂದಿಗಳ ಪ್ರಾರ್ಥನಾಮಂದಿರದ ಮೇಲೆ ಭಯೋತ್ಪಾದಕನೊಬ್ಬ ನಡೆಸಿದ ದಾಳಿಯಲ್ಲಿ (Jerusalem Terror Attack) 8 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಇಸ್ರೇಲ್​ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.

ಈ ಪ್ರಾರ್ಥನಾ ಮಂದಿರ ನೆವೆ ಯಾಕೋವ್​ ರಸ್ತೆಯಲ್ಲಿದ್ದು, ಅಲ್ಲಿನ ಕಾಲಮಾನದ ಪ್ರಕಾರ ಸಂಜೆ 8.15ರ ಹೊತ್ತಿಗೆ ಉಗ್ರ ದಾಳಿ ಮಾಡಿದ್ದಾನೆ. ದಾಳಿ ನಡೆದ ಬೆನ್ನಲ್ಲೇ ಆ ಸ್ಥಳವೆಲ್ಲ ರಕ್ತಸಿಕ್ತವಾಗಿತ್ತು. ಗಾಯಗೊಂಡವರು ಅಲ್ಲೇ ನರಳಾಡುತ್ತಿದ್ದರು. ರಕ್ಷಣಾ ಪಡೆಗಳ ಜತೆ ಪ್ಯಾರಾಮೆಡಿಕಲ್​ ಸಿಬ್ಬಂದಿ ಆಗಮಿಸಿ, ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಸಾಗಿಸುವ ಕಾರ್ಯವೂ ನಡೆದಿದೆ. ಅಷ್ಟೇ ಅಲ್ಲ, ದಾಳಿ ನಡೆಸಿದವನನ್ನು ಕೆಲವೇ ಹೊತ್ತಲ್ಲಿ ಪೊಲೀಸರು ಕೊಂದು ಹಾಕಿದ್ದಾರೆ.

ಇಸ್ರೇಲ್​​ಗೆ ಕಂಟಕವಾಗಿರುವ ಪ್ಯಾಲೆಸ್ಟೀನ್​ ಮೂಲದ ಹಮಾಸ್​​ ಭಯೋತ್ಪಾದಕರ ವಿರುದ್ಧ ಆ ರಾಷ್ಟ್ರ ಸಮರ ಸಾರಿದೆ. ಅವರನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಹಲವು ವರ್ಷಗಳಿಂದ ನಡೆಯುತ್ತಿದೆ. ಗುರುವಾರವಷ್ಟೇ ವೆಸ್ಟ್​ ಬ್ಯಾಂಕ್​ ಸಿಟಿಯ ಜೆನಿನ್​​ನಲ್ಲಿರುವ ಹಮಾಸ್ ಉಗ್ರರ ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್​ ಸೇನಾಪಡೆ ದಾಳಿ ನಡೆಸಿತ್ತು. ಇದರಲ್ಲಿ ಪ್ಯಾಲಿಸ್ಟೀನ್​​ನ ವಯಸ್ಸಾದ ಮಹಿಳೆ ಸೇರಿ 9 ಮಂದಿ ಮೃತಪಟ್ಟಿದ್ದರು.

ಇದನ್ನೂ ಓದಿ: Kabul Hotel Attack | ಕಾಬೂಲ್‌ನಲ್ಲಿರುವ ಚೀನಾ ಹೋಟೆಲ್‌ ಮೇಲೆ ಮುಂಬೈ ಮಾದರಿ ಉಗ್ರ ದಾಳಿ, ಮೂವರ ಸಾವು

ಇನ್ನು ಹಮಾಸ್ ಉಗ್ರರು ಇಸ್ರೇಲ್​ನ ವಿವಿಧ ಸ್ಥಳಗಳ ಮೇಲೆ ರಾಕೆಟ್​ ದಾಳಿ ನಡೆಸಿದ ಬೆನ್ನಲ್ಲೇ, ಇಸ್ರೇಲ್​ ಸೇನಾ ಪಡೆಯೂ ಗಾಜಾಪಟ್ಟಿಯಲ್ಲಿ ಸರಣಿ ವೈಮಾನಿಕ ದಾಳಿ ನಡೆಸಿದೆ. ಒಟ್ಟಾರೆ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್​ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಬೆನ್ನಲ್ಲೇ, ಭಯೋತ್ಪಾದಕರೂ ಕೂಡ ಪ್ರತಿದಾಳಿ ನಡೆಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ

ಪ್ರಮುಖ ಸುದ್ದಿ

Conversion In Pakistan: ಪಾಕ್‌ನಲ್ಲಿ 81 ಹಿಂದು ಹೆಣ್ಣುಮಕ್ಕಳ ಮತಾಂತರ; ಸಂಘಟನೆಗಳಿಂದ ಪ್ರತಿಭಟನೆ

Conversion In Pakistan: ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ಮೂಲಭೂತವಾದಿಗಳ ದೌರ್ಜನ್ಯವು ಎಗ್ಗಿಲ್ಲದೆ ನಡೆಯುತ್ತಿದೆ. ಬಾಲಕಿಯರು ಸೇರಿ ಹಿಂದು ಹೆಣ್ಣುಮಕ್ಕಳ ಮತಾಂತರ ಖಂಡಿಸಿ ಹಿಂದುಗಳು ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

VISTARANEWS.COM


on

Edited by

Members of Pakistans Hindu community protest against forced conversions
Koo

ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ದಶಕಗಳಿಂದಲೂ ದೌರ್ಜನ್ಯ ನಡೆಯುತ್ತಿದೆ. ಹಿಂದುಗಳ ಮೇಲೆ ಹಲ್ಲೆ, ದೇವಸ್ಥಾನಗಳ ಮೇಲೆ ದಾಳಿ, ಹಿಂದು ಬಾಲಕಿಯರ ಮೇಲೆ ಅತ್ಯಾಚಾರ ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ, ಅನಾಚಾರ ನಡೆಯುತ್ತದೆ. ಕ್ರೈಸ್ತರು ಹಾಗೂ ಸಿಖ್ಖರ ಮೇಲೂ ಇಂತಹ ದಾಳಿಗಳು ನಡೆಯುತ್ತಿವೆ. ಅದರಲ್ಲೂ, ಹಿಂದು ಬಾಲಕಿಯರನ್ನು ಬಲವಂತವಾಗಿ ಇಸ್ಲಾಂಗೆ (Conversion In Pakistan) ಮತಾಂತರಗೊಳಿಸುವ ಅನಿಷ್ಟ ಪದ್ಧತಿ ಮುಂದುವರಿದಿದ್ದು, ಇದನ್ನು ಖಂಡಿಸಿ ಹಿಂದುಗಳು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಆ ಮೂಲಕ ಬಲವಂತದ ಮತಾಂತರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಾಚಿ ಪ್ರೆಸ್‌ ಕ್ಲಬ್‌ ಮುಂಭಾಗದಲ್ಲಿ ಹಾಗೂ ಸಿಂಧ್‌ ಅಸೆಂಬ್ಲಿ ಕಟ್ಟಡದ ಎದುರು ಮಾರ್ಚ್‌ 30ರಂದು ಹಿಂದುಗಳು, ಹಿಂದು ಸಂಘಟನೆಯಾದ ಪಾಕಿಸ್ತಾನ ದಾರಾವರ್‌ ಇತ್ತೇಹಾದ್‌ (PDI) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಪಸಂಖ್ಯಾತರಾಗಿರುವ ಹಿಂದು ಬಾಲಕಿಯರನ್ನು ಅಪಹರಿಸಿ, ಅವರನ್ನು ಬಲವಂತವಾಗಿ ಮತಾಂತರಗೊಳಿಸುವುದಲ್ಲದೆ, ಮದುವೆಯಾಗುತ್ತಿರುವ ಪ್ರಕರಣಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.

“ಪಾಕಿಸ್ತಾನದಲ್ಲಿ ಸಿಂಧಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ. ಅದರಲ್ಲೂ, ಗ್ರಾಮೀಣ ಭಾಗದ ಹಿಂದು ಬಾಲಕಿಯರನ್ನು ಮತಾಂತರ ಮಾಡುತ್ತಿರುವುದು ಖಂಡನೀಯವಾಗಿದೆ. 12-13 ವರ್ಷದ ಬಾಲಕಿಯರನ್ನು ಅಪಹರಿಸಿ, ಅವರನ್ನು ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ. ಹಾಗೆಯೇ, ವೃದ್ಧರ ಜತೆ ಅವರ ಮದುವೆ ಮಾಡಲಾಗುತ್ತಿದೆ. ಮೂಲಭೂತವಾದಿಗಳ ಹಿಂಸಾಚಾರಕ್ಕೆ ಹಿಂದು ಬಾಲಕಿಯರು ಬಲಿಯಾಗುತ್ತಿದ್ದಾರೆ” ಎಂದು ಪಿಡಿಐ ಮುಖಂಡರೊಬ್ಬರು ಹೇಳಿದ್ದಾರೆ.

ಪ್ರತಿಭಟನೆಯ ವಿಡಿಯೊ ಇಲ್ಲಿದೆ

ನೂರಾರು ಪೊಲೀಸರ ನಿಯೋಜನೆ ಮಧ್ಯೆಯೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು. ಹಿಂದು ಬಾಲಕಿಯರು ಹಾಗೂ ಮಹಿಳೆಯರ ಮತಾಂತರವನ್ನು ತಡೆಯಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು. ಹಿಂದು ಹೆಣ್ಣುಮಕ್ಕಳಿಗೆ ಕಾನೂನಿನ ರಕ್ಷಣೆ ಒದಗಿಸಬೇಕು. ಸಿಂಧ್‌ ಪ್ರಾಂತ್ಯದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

81 ಹೆಣ್ಣುಮಕ್ಕಳ ಮತಾಂತರ

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮತಾಂತರದ ಕುರಿತು ಮಾನವ ಹಕ್ಕುಗಳ ಮೇಲೆ ನಿಗಾ ಇರಿಸುವ ಸಂಸ್ಥೆಯೊಂದು ವರದಿ ಬಿಡುಗಡೆ ಮಾಡಿದ್ದು, 2022ರಲ್ಲಿ ಪಾಕಿಸ್ತಾನದಲ್ಲಿ 81 ಬಾಲಕಿಯರು ಹಾಗೂ ಹೆಣ್ಣುಮಕ್ಕಳನ್ನು ಮತಾಂತರಗೊಳಿಸಲಾಗಿದೆ ಎಂದು ತಿಳಿಸಿದೆ. ಇವರಲ್ಲಿ ಶೇ.23ರಷ್ಟು ಹೆಣ್ಣುಮಕ್ಕಳು 14ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಹಾಗೆಯೇ, ಶೇ.36ರಷ್ಟು ಹೆಣ್ಣುಮಕ್ಕಳು 14-18 ವರ್ಷದವರಾಗಿದ್ದಾರೆ ಎಂದು ವರದಿ ನೀಡಿದೆ. ಪಾಕಿಸ್ತಾನದಲ್ಲಿ 75 ಲಕ್ಷ ಹಿಂದುಗಳು ವಾಸಿಸುತ್ತಿದ್ದಾರೆ. ನೆರೆ ರಾಷ್ಟ್ರದಲ್ಲಿ ಶೇ.96ರಷ್ಟು ಜನ ಮುಸ್ಲಿಮರಾಗಿದ್ದು, ಹಿಂದುಗಳ ಪ್ರಮಾಣ ಶೇ.2.1ರಷ್ಟಿದೆ. ಶೇ.1.6ರಷ್ಟಿರುವ ಕ್ರೈಸ್ತರು ಕೂಡ ಸಂಕಷ್ಟದಲ್ಲಿಯೇ ದಿನ ದೂಡುತ್ತಿದ್ದಾರೆ. ಇವರ ಮೇಲೂ ದೌರ್ಜನ್ಯಗಳು ಸಾಮಾನ್ಯ ಎಂಬಂತಾಗಿದೆ. ಇವರಿಗಿಂತ ಕಡಿಮೆ ಇರುವ ಸಿಖ್ಖರ ಪರಿಸ್ಥಿತಿಯೂ ಭಿನ್ನವಾಗಿಲ್ಲ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದು ಮಹಿಳೆಯ ಭೀಕರ ಹತ್ಯೆ; ಗ್ಯಾಂಗ್​ರೇಪ್​ ಮಾಡಿ, ಆಕೆಯ ತಲೆ-ಸ್ತನಗಳನ್ನು ಕತ್ತರಿಸಿ ಕೊಂದ ಕಟುಕರು

Continue Reading

ತಂತ್ರಜ್ಞಾನ

Viral News : ಚಾಟ್‌ಜಿಪಿಟಿ ಬಗ್ಗೆ ಪಾಠ ಮಾಡಿ ಮೂರೇ ತಿಂಗಳಲ್ಲಿ 28 ಲಕ್ಷ ರೂ. ದುಡಿದ!

ಜಾಟ್‌ಜಿಪಿಟಿ ಬಗ್ಗೆ ಅರ್ಥ ಮಾಡಿಸುವುದಕ್ಕೆ, ಅದನ್ನು ಕಲಿಸುವುದಕ್ಕೆಂದೇ ಯವಕನೊಬ್ಬ ಕೋರ್ಸ್‌ ನಡೆಸುತ್ತಿದ್ದಾನೆ. ಅದರಿಂದ ಆತನಿಗೆ ಮೂರೇ ತಿಂಗಳಲ್ಲಿ 28 ಲಕ್ಷ ರೂ. ಲಾಭ ಬಂದಿರುವುದಾಗಿಯೂ (Viral News) ವರದಿಯಾಗಿದೆ.

VISTARANEWS.COM


on

Edited by

ChatGPT chatbot
Koo

ಬೆಂಗಳೂರು: ಚಾಟ್‌ಜಿಪಿಟಿ (ChatGPT) ಬಗ್ಗೆ ಇತ್ತೀಚಿನ ದಿನಗಳಲ್ಲಿ ನೀವು ಕೇಳಿರುತ್ತೀರಿ. ಈ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ(ಎಐ) ಬಗ್ಗೆ ಎಲ್ಲೆಲ್ಲೂ ಸುದ್ದಿಯಾಗುತ್ತಿದೆ. ತಾಂತ್ರಿಕ ಕ್ಷೇತ್ರದಲ್ಲಿ ಸಮಸ್ಯೆ ಉಂಟು ಮಾಡಬಹುದು ಎನ್ನಲಾಗಿದ್ದ ಈ ಎಐ ಇದೀಗ ಯುವಕನೊಬ್ಬನಿಗೆ ಬದುಕನ್ನೂ ಕಟ್ಟಿಕೊಟ್ಟಿದೆ. ಈ ಎಐ ಅನ್ನೇ ನಂಬಿಕೊಂಡು ಯುವಕನೊಬ್ಬ ಕೇವಲ ಮೂರು ತಿಂಗಳುಗಳಲ್ಲಿ ಬರೋಬ್ಬರಿ 28 ಲಕ್ಷ ರೂ. ಲಾಭ (Viral News) ಗಳಿಸಿಕೊಂಡಿದ್ದಾನೆ.

ಇದನ್ನೂ ಓದಿ: Viral News: ಮಥುರಾ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತ ಕುಳಿತಿದ್ದವನ ಕೊಲೆ
ಲ್ಯಾನ್ಸ್‌ ಜಂಕ್(23) ಹೆಸರಿನ ವ್ಯಕ್ತಿ ಚಾಟ್‌ಜಿಪಿಟಿಯನ್ನೇ ತನ್ನ ಆದಾಯ ಮೂಲವಾಗಿಸಿಕೊಂಡಿದ್ದಾರೆ. ಚಾಟ್‌ಜಿಪಿಟಿಯನ್ನು ಹಲವರು ಸರಾಗವಾಗಿ ಬಳಕೆ ಮಾಡುತ್ತಿದ್ದರೆ, ಇನ್ನೂ ಹಲವರು ಬಳಸಲಾಗದೆ ಒದ್ದಾಡುತ್ತಿದ್ದದ್ದನ್ನು ಲ್ಯಾನ್ಸ್‌ ಗಮನಿಸಿದ್ದಾರೆ. ಅದಕ್ಕಾಗಿ ಜನರಿಗೆ ಚಾಟ್‌ಜಿಪಿಟಿ ಬಗ್ಗೆ ತಿಳಿಸುವುದಕ್ಕೆಂದೇ ಉಡೆಮಿ ಆಪ್‌ನಲ್ಲಿ ಕೋರ್ಸ್‌ ಒಂದನ್ನು ಆರಂಭಿಸಿದ್ದಾರೆ. “ಚಾಟ್‌ಜಿಪಿಟಿ ಮಾಸ್ಟರ್‌ಕ್ಲಾಸ್‌: ಎ ಕಂಪ್ಲೀಟ್‌ ಚಾಟ್‌ಜಿಪಿಟಿ ಗೈಡ್‌ ಫಾರ್‌ ಬಿಗಿನರ್ಸ್‌” ಹೆಸರಿನಲ್ಲಿ ಕೋರ್ಸ್‌ ಆರಂಭಿಸಿದ್ದು, ಕೋರ್ಸ್‌ ಆರಂಭವಾದ ಕೆಲವೇ ದಿನಗಳಲ್ಲಿ ಬರೋಬ್ಬರಿ 15,000 ಮಂದಿ ಕೋರ್ಸ್‌ ಸೇರಿಕೊಂಡಿದ್ದಾರೆ. ಅದರಿಂದಾಗಿ ಒಟ್ಟಾರೆಯಾಗಿ 35,000 ಡಾಲರ್‌ ಅಂದರೆ 28 ಲಕ್ಷ ರೂ. ಲಾಭವನ್ನೂ ಗಳಿಸಿದ್ದಾರೆ.

“ಜನರು ಚಾಟ್‌ಜಿಪಿಟಿ ಬಗ್ಗೆ ಭಯ ಪಟ್ಟಿರುವುದು ನನಗೆ ಗೊತ್ತಾಯಿತು. ಆ ಭಯವನ್ನು ಹೋಗಲಾಡಿಸುವ ಪ್ರಯತ್ನವನ್ನು ನಾನು ಮಾಡಿದೆ. ನಾನೇನು ಚಾಟ್‌ಜಿಪಿಟಿ ಬಗ್ಗೆ ಬೇರೆ ಕಡೆ ತರಬೇತಿ ಪಡೆದಿಲ್ಲ. ನಾನಾಗೇ ನಾನು ಪ್ರಯತ್ನಗಳನ್ನು ಮಾಡಿ ಅನುಭವ ಪಡೆದೆ” ಎಂದು ಹೇಳಿದ್ದಾರೆ ಲ್ಯಾನ್ಸ್‌.

ಇದನ್ನೂ ಓದಿ: Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ಜಂಕ್‌ ಒಟ್ಟಾರೆಯಾಗಿ ಏಳು ಗಂಟೆಗಳ ಕೋರ್ಸ್‌ ಅನ್ನು ಕೊಡುತ್ತಿದ್ದಾರೆ. ಅದಕ್ಕೆಂದೇ ಒಟ್ಟು 50 ತಜ್ಞರಿಂದ ವಿಡಿಯೊಗಳನ್ನು ಮಾಡಿಸಿಕೊಂಡಿದ್ದಾರೆ. ಆ ವಿಡಿಯೊಗಳನ್ನು ಮಾಡುವುದಕ್ಕೆಂದೇ ಜಂಕ್‌ ಅವರಿಗೆ ಮೂರು ವಾರಗಳು ತಗುಲಿವೆ. ಒಬ್ಬ ವಿದ್ಯಾರ್ಥಿಗೆ 20 ಡಾಲರ್‌ನಂತೆ ಶುಲ್ಕ ವಿಧಿಸಲಾಗುತ್ತಿದೆ. ಅಮೆರಿಕ, ಭಾರತ, ಜಪಾನ್‌, ಕೆನಡಾ ಸೇರಿ ಹಲವಾರು ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಈ ಕೋರ್ಸ್‌ ಸೇರಿಕೊಂಡಿರುವುದಾಗಿ ಹೇಳಲಾಗಿದೆ.

Continue Reading

ವಿದೇಶ

Donald Trump : ರಹಸ್ಯ ಮುಚ್ಚಿಡುವುದಕ್ಕೆ ಪೋರ್ನ್‌ ಸ್ಟಾರ್‌ಗೆ ಹಣ ಸುರಿದಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌!

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ತಮ್ಮ ಲೈಂಗಿಕ ಹಗರಣ ಮುಚ್ಚಿ ಹಾಕುವುದಕ್ಕೆಂದು ಪೋರ್ನ್‌ ಸ್ಟಾರ್‌ಗೆ ಭಾರೀ ಹಣ ನೀಡಿದ್ದರು ಎನ್ನುವ ಆರೋಪ ಕೇಳಿಬಂದಿದೆ.

VISTARANEWS.COM


on

Edited by

Koo

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಯಾವಾಗಲೂ ಸುದ್ದಿಯಲ್ಲಿರುವಂತಹ ವ್ಯಕ್ತಿ. ಇದೀಗ ಅವರ ಬಗ್ಗೆ ದೊಡ್ಡ ಆರೋಪವೊಂದು ಕೇಳಿಬಂದಿದೆ. ತಮ್ಮ ಲೈಂಗಿಕ ಸಂಬಂಧವನ್ನು ಮುಚ್ಚಿಡುವುದಕ್ಕೆಂದು ಟ್ರಂಪ್‌ ಪೋರ್ನ್‌ ಸ್ಟಾರ್‌ ಒಬ್ಬರಿಗೆ ಭಾರೀ ಹಣ ಕೊಟ್ಟಿದ್ದರು ಎನ್ನುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Viral News: ಮಥುರಾ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತ ಕುಳಿತಿದ್ದವನ ಕೊಲೆ
ಈ ಬಗ್ಗೆ ಪೋರ್ನ್‌ ಸ್ಟಾರ್‌ ಸ್ಟಾರ್ಮಿ ಡೇನಿಯೆಲ್‌ ಅವರೇ ಆರೋಪ ಮಾಡಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಗೂ ಮೊದಲು ಟ್ರಂಪ್‌ ಅವರು ತಮ್ಮ ಹಗರಣವನ್ನು ಮುಚ್ಚಿಡುವುದಕ್ಕೆಂದು ನನಗೆ ಹಣ ನೀಡಿದ್ದರು ಎಂದು ಆಕೆ ಹೇಳಿಕೊಂಡಿದ್ದಾರೆ. ಸ್ಟೆಫೈನ್‌ ಗ್ರೆಗೊರಿ ಕ್ಲಿಫೋರ್ಡ್‌ ಎನ್ನುವ ಅಧಿಕೃತ ಹೆಸರಿರುವ ಈ ನಟಿ 2006ರಲ್ಲಿ ಟ್ರಂಪ್‌ ಅವರನ್ನು ಗೋಲ್ಫ್‌ ಟೂರ್ನಮೆಂಟ್‌ನಲ್ಲಿ ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.

ಟ್ರಂಪ್‌ ಅವರೊಂದಗಿನ ಲೈಂಗಿಕ ಸಂಬಂಧ ಅತ್ಯಂತ ಕೆಟ್ಟದರಲ್ಲಿ ಒಂದಾಗಿತ್ತು ಎಂದು ಆಕೆ ಹೇಳಿದ್ದಾರೆ. ತಮ್ಮ ಸಂಬಂಧದ ಬಗ್ಗೆ ಸುದ್ದಿ ಮಾಡದಿರುವಂತೆ ಮುಚ್ಚಿ ಹಾಕುವುದಕ್ಕೆ ಟ್ರಂಪ್‌ ಹಣ ಕೊಟ್ಟಿದ್ದರು ಎಂದು ಆಕೆ ಹೇಳಿದ್ದಾರೆ. ಟ್ರಂಪ್‌ ಅವರ ವಕೀಲರು ಕೂಡ ಈ ವಿಚಾರವನ್ನು ಒಪ್ಪಿಕೊಂಡಿದ್ದು, ಟ್ರಂಪ್‌ ಅವರು ಸ್ಟಾರ್ಮಿ ಅವರಿಗೆ ಕೊಡುವುದಕ್ಕೆಂದು 1,30,000 ಡಾಲರ್‌ ವ್ಯವಸ್ಥೆ ಮಾಡಿಸಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ಸ್ಟಾರ್ಮಿ ಅವರು ಹೈ ಸ್ಕೂಲ್‌ನಲ್ಲಿಯೇ ಸ್ಟ್ರಿಪ್‌ ಕ್ಲಬ್‌ನಲ್ಲಿ ಕೆಲಸ ಆರಂಭಿಸಿದವರು. ನಾಲ್ಕು ಮದುವೆ ಆಗಿರುವ ಅವರಿಗೆ ಒಬ್ಬಳು ಮಗಳಿದ್ದಾಳೆ. ಅವರು ಕೊನೆಯದಾಗಿ ಕಳೆದ ವರ್ಷ ಪೋರ್ನ್‌ ಸ್ಟಾರ್‌ ಬ್ಯಾರೆಟ್‌ ಬ್ಲೇಡ್‌ ಅವರನ್ನು ಮದುವೆಯಾದರು.

Continue Reading

ದೇಶ

Amit Kshatriya: ಚಂದ್ರನಿಂದ ಮಂಗಳನ ಅಂಗಳಕ್ಕೆ ನಾಸಾ ಯೋಜನೆ; ಭಾರತ ಮೂಲದ ಅಮಿತ್‌ ಮುಖ್ಯಸ್ಥ

Amit Kshatriya: ಭಾರತ ಮೂಲದವರಾದ ಅಮಿತ್‌ ಕ್ಷತ್ರಿಯ ಅವರು ನಾಸಾದ ಚಂದ್ರನಿಂದ ಮಂಗಳನ ಅಂಗಳಕ್ಕೆ ಗಗನಯಾನ ಯೋಜನೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಅವರು ಇಡೀ ಯೋಜನೆಯನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Edited by

Indian Origin Engineer Amit Kshatriya To Head NASAs New Moon To Mars Programme
Koo

ವಾಷಿಂಗ್ಟನ್‌: ಚಂದ್ರನ ಅಂಗಳದಿಂದ ಮಂಗಳನ ಅಂಗಳಕ್ಕೆ ಮಾನವಸಹಿತ ಗಗನಯಾನ ಕೈಗೊಳ್ಳಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ರೂಪಿಸಿರುವ ಯೋಜನೆಯ (Moon to Mars Programme) ಮುಖ್ಯಸ್ಥರಾಗಿ ಭಾರತ ಮೂಲದ ಸಾಫ್ಟ್‌ವೇರ್‌ ಹಾಗೂ ರೋಬೊಟಿಕ್‌ ಎಂಜಿನಿಯರ್‌ ಅಮಿತ್‌ ಕ್ಷತ್ರಿಯ (Amit Kshatriya) ನೇಮಕಗೊಂಡಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಿತ್‌ ಕ್ಷತ್ರಿಯ ಅವರನ್ನು ನೇಮಿಸಿ ನಾಸಾ ಆದೇಶ ಹೊರಡಿಸಿದೆ.

ನಾಸಾದ ಸಾಮಾನ್ಯ ಪರಿಶೋಧನೆ ವ್ಯವಸ್ಥೆಗಳ ಅಭಿವೃದ್ಧಿ ವಿಭಾಗದ ಪ್ರಭಾರ ಉಪ ಸಹಾಯಕ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್‌ ಕ್ಷತ್ರಿಯ ಅವರನ್ನು ಉನ್ನತ ಹುದ್ದೆಗೆ ನೇಮಿಸಲಾಗಿದೆ. ಮನುಕುಲದ ಒಳಿತಿಗಾಗಿ ಚಂದ್ರ ಹಾಗೂ ಮಂಗಳನ ಅಂಗಳದಲ್ಲಿ ಮಾನವ ಪರಿಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವ ಗುರಿಯನ್ನು ಮೂನ್‌ ಟೂ ಮಾರ್ಸ್‌ ಯೋಜನೆಯು ಹೊಂದಿದೆ. ಹಾಗಾಗಿ, ಅಮಿತ್‌ ಕ್ಷತ್ರಿಯ ಅವರ ಕಾರ್ಯಕ್ಷಮತೆ, ಚಾಣಾಕ್ಷತೆಯನ್ನು ಗಮನಿಸಿ ನಾಸಾ ನೇಮಕ ಮಾಡಿದೆ ಎಂದು ತಿಳಿದುಬಂದಿದೆ. ಮಾನವ ಸಹಿತ ಗಗನಯಾನವನ್ನು ಮೊದಲು ಚಂದ್ರನ ಅಂಗಳಕ್ಕೆ ಕೈಗೊಂಡು, ಅಲ್ಲಿಯೇ ಸುದೀರ್ಘವಾಗಿ ನೆಲೆಸಿ, ಬಳಿಕ ಚಂದ್ರನ ಅಂಗಳಕ್ಕೆ ಗಗನಯಾನ ಕೈಗೊಳ್ಳುವುದು ಯೋಜನೆಯ ಗುರಿಯಾಗಿದೆ.

ಯಾರಿದು ಅಮಿತ್‌ ಕ್ಷತ್ರಿಯ?

ಭಾರತ ಮೂಲದ ಅಮಿತ್‌ ಕ್ಷತ್ರಿಯ ಅವರು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದು, ಟೆಕ್ಸಾಸ್‌ ವಿವಿಯಿಂದ ಗಣಿತದಲ್ಲಿ ಎಂಎ ಪದವಿ ಗಳಿಸಿದ್ದಾರೆ. ಭಾರತ ಮೂಲದ ದಂಪತಿಗೆ ಜನಿಸಿರುವ ಅಮಿತ್‌ ಕ್ಷತ್ರಿಯ, 2003ರಲ್ಲಿ ಅಮೆರಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ, ರೋಬೊಟಿಕ್ಸ್‌ ಎಂಜಿನಿಯರ್‌ ಆಗಿ ವೃತ್ತಿ ಆರಂಭಿಸಿದರು. 2014ರಿಂದ 2017ರ ಅವಧಿಯಲ್ಲಿ ಸ್ಪೇಸ್‌ ಸ್ಟೇಷನ್‌ನ ಫ್ಲೈಟ್‌ ಡೈರೆಕ್ಟರ್‌ ಆಗಿ, 2017ರಿಂದ 2021ರವರೆಗೆ ಇಂಟರ್‌ನ್ಯಾಷನಲ್‌ ಸ್ಪೇಸ್‌ ಸ್ಟೇಷನ್‌ನ ಡೆಪ್ಯುಟಿ, ಕಾರ್ಯಕಾರಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಅವರಿಗೆ ನಾಸಾ ಯೋಜನೆಯ ಮಹೋನ್ನತ ಉದ್ದೆ ಲಭಿಸಿದೆ.

ಭಾರತ ಮೂಲದವರೇ ಚೀಫ್‌ ಟೆಕ್ನಾಲಜಿಸ್ಟ್‌

ಕೆಲ ತಿಂಗಳ ಹಿಂದಷ್ಟೇ ಏರೋಸ್ಪೇಸ್ ತಜ್ಞರಾಗಿರುವ ಭಾರತ ಮೂಲದ ಎ ಸಿ ಚರಾನಿಯಾ (AC Charania) ಅವರು ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್(ನಾಸಾ) ಚೀಫ್ ಟೆಕ್ನಾಲಜಿಸ್ಟ್ (NASA Chief Technologist) ಆಗಿ ನೇಮಕಗೊಂಡಿದ್ದಾರೆ. ನಾಸಾದ ಟೆಕ್ನಾಲಜಿ, ಪಾಲಿಸಿ ಮತ್ತು ಸ್ಟ್ರಾಟರ್ಜಿ ವ್ಯಾಪ್ತಿಯಲ್ಲಿ ಚರಾನಿಯಾ ಅವರು ಕೆಲಸ ಮಾಡಲಿದ್ದಾರೆಂದು ನಾಸಾ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಎಸಿ ಚರಾನಿಯಾ ಅವರು ಆರು ಮಿಷನ್ ನಿರ್ದೇಶನಾಲಯಗಳಾದ್ಯಂತ ಮಿಷನ್ ಅಗತ್ಯತೆಗಳೊಂದಿಗೆ ನಾಸಾದ ಏಜೆನ್ಸಿಯಾದ್ಯಂತ ತಂತ್ರಜ್ಞಾನ ಹೂಡಿಕೆಗಳನ್ನು ಒಟ್ಟುಗೂಡಿಸಲಿದ್ದಾರೆ. ಇತರ ಫೆಡರಲ್ ಏಜೆನ್ಸಿಗಳು, ಖಾಸಗಿ ವಲಯ ಮತ್ತು ಬಾಹ್ಯ ಮಧ್ಯಸ್ಥಗಾರರೊಂದಿಗೆ ತಂತ್ರಜ್ಞಾನ ಸಹಯೋಗದ ಮೇಲ್ವಿಚಾರಣೆ ಹೊಣೆಯನ್ನು ನಿರ್ವಹಿಸುತ್ತಾರೆ ಎಂದು ಹೇಳಿತ್ತು.

ಇದನ್ನೂ ಓದಿ: NASA Chief Technologist | ಇಂಡಿಯನ್- ಅಮೆರಿಕನ್ ಎ ಸಿ ಚರಾನಿಯಾ ಈಗ ನಾಸಾದ ಚೀಫ್ ಟೆಕ್ನಾಲಜಿಸ್ಟ್

Continue Reading
Advertisement
Elephant trap
ಕರ್ನಾಟಕ4 hours ago

Elephant trapped : ಮೂರು ತಿಂಗಳಿನಿಂದ ಸತಾಯಿಸುತ್ತಿರುವ 10 ವರ್ಷದ ಗಂಡಾನೆ ಕೊನೆಗೂ ಹನಿ ಟ್ರ್ಯಾಪ್‌ಗೆ ಬಿತ್ತು!

Unaccounted 6.4 Crore rupees seized in Chikmagalur
ಕರ್ನಾಟಕ4 hours ago

Karnataka Election 2023: ಚುನಾವಣೆ ಹಿನ್ನೆಲೆ ಹಣದ ಹೊಳೆ, ದಾಖಲೆ ಇಲ್ಲದ 6 ಕೋಟಿ ರೂ., 17 ಕೆಜಿ ಚಿನ್ನ, ಬೆಳ್ಳಿ ವಶ

Champion Gujarat won by 5 wickets in the first match, CSK was disappointed
ಕ್ರಿಕೆಟ್4 hours ago

IPL 2023 : ಚಾಂಪಿಯನ್​ ಗುಜರಾತ್​​ಗೆ ಮೊದಲ ಪಂದ್ಯದಲ್ಲಿ 5 ವಿಕೆಟ್ ಜಯ, ಸಿಎಸ್​ಕೆ ನಿರಾಸೆ

holalu urus
ಕರ್ನಾಟಕ4 hours ago

Communal Harmony : ಉರೂಸ್‌ ಸಂಭ್ರಮದಲ್ಲಿ ಹಿಂದೂ ಶ್ರೀಗಳನ್ನು ಗೌರವಿಸಿ ಭಾವೈಕ್ಯತೆ ಮೆರೆದ ಮುಸ್ಲಿಮರು

Nelyadi suicide
ಕರ್ನಾಟಕ4 hours ago

Suicide case : ಮೊಬೈಲ್‌ನಲ್ಲಿ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ, ಆ ಮನೆಯಲ್ಲಿ ಇದು ಮೂರನೇ ಸುಸೈಡ್‌!

Bangalore mysore highway
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ಟೋಲ್ ದರ ಜನರಿಗೆ ದುಃಸ್ವಪ್ನವಾಗದಿರಲಿ

IT Raid on the bank owned by Belgaum Congress leader VS Sadhunavar
ಕರ್ನಾಟಕ5 hours ago

IT Raid: ಕಾಂಗ್ರೆಸ್‌ ಮುಖಂಡ ವಿ.ಎಸ್.‌ ಸಾಧುನವರ ಒಡೆತನದ ಬ್ಯಾಂಕ್‌ ಮೇಲೆ ಐಟಿ ದಾಳಿ

IPL 2023
ಕ್ರಿಕೆಟ್5 hours ago

IPL 2023 : ಐಪಿಎಲ್​ನ ಮೊದಲ ಇಂಪ್ಯಾಕ್ಟ್​​ ಪ್ಲೇಯರ್​ ಯಾರು? ಅನುಕೂಲ ಬಳಸಿಕೊಂಡಿದ್ದು ಯಾವ ತಂಡ?

People In Pakistan Unhappy, Believe Partition Was A Mistake: Says Mohan Bhagwat
ದೇಶ5 hours ago

Mohan Bhagwat: ಪಾಕ್ ಜನಕ್ಕೆ ನೆಮ್ಮದಿ ಇಲ್ಲ, ದೇಶ ವಿಭಜನೆ ಪ್ರಮಾದ ಎಂಬ ಭಾವನೆ ಇದೆ: ಮೋಹನ್‌ ಭಾಗವತ್‌

Mohammad Shami who scored a century in bowling, what is the achievement?
ಕ್ರಿಕೆಟ್6 hours ago

IPL 2023 : ಬೌಲಿಂಗ್​ನಲ್ಲಿ ಶತಕ ಬಾರಿಸಿದ ಮೊಹಮ್ಮದ್​ ಶಮಿ, ಏನಿದು ಸಾಧನೆ?

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್6 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಕರ್ನಾಟಕ16 hours ago

SSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು

ಕರ್ನಾಟಕ1 day ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ2 days ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ5 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ5 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ2 weeks ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ2 weeks ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ಟ್ರೆಂಡಿಂಗ್‌

error: Content is protected !!