Viral News: ವಿದೇಶಿ ಕೆಲಸ: ಅತೀ ಹೆಚ್ಚು ಸಂಬಳ ನೀಡುವ ದೇಶ ಇದಂತೆ! - Vistara News

ವಿದೇಶ

Viral News: ವಿದೇಶಿ ಕೆಲಸ: ಅತೀ ಹೆಚ್ಚು ಸಂಬಳ ನೀಡುವ ದೇಶ ಇದಂತೆ!

ವರದಿಯ ಪ್ರಕಾರ, ವೃತ್ತಿ ಜೀವನ ಸಂಬಂಧಿಸಿ ವಿದೇಶ ಪ್ರಯಾಣ ಮಾಡುವುದಾದರೆ ಅತ್ಯಂತ ಹೆಚ್ಚು ಸಂಬಳ ಪಡೆಯಬಹುದಾದ ಸಾಧ್ಯತೆ ಇರುವ ದೇಶವಾಗಿ ಸ್ವಿಜರ್‌ಲ್ಯಾಂಡ್‌ ಹೊರಹೊಮ್ಮಿದೆ.

VISTARANEWS.COM


on

switzerland
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿದೇಶದಲ್ಲಿ ಕೆಲಸ ಮಾಡುವ ಕನಸು ಯಾರಿಗಿಲ್ಲ ಹೇಳಿ! ಹೆಚ್ಚು ಸಂಬಳ, ವಿಪುಲ ಅವಕಾಶ ಅರಸಿ ವಿದೇಶಕ್ಕೆ ಹೋದರೆ, ಯಾವ ದೇಶದಲ್ಲಿ ಅತ್ಯಂತ ಹೆಚ್ಚು ಸಂಬಳ (salary) ಸಿಗುತ್ತದೆ ಗೊತ್ತಾ? ಅದು ಸ್ವಿಜರ್‌ಲ್ಯಾಂಡ್ (switzerland)!‌ ಹೌದು. ಸ್ವಿಜರ್‌ಲ್ಯಾಂಡ್‌ ಅತೀ ಹೆಚ್ಚು ಸಂಬಳ ಕೊಡುವ ದೇಶವಾದರೆ, ಯುಎಸ್‌ ಇದರಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತ ಏಳನೇ ಸ್ಥಾನದಲ್ಲಿದೆ.

ವೃತ್ತಿಜೀವನಕ್ಕೆ ಸಂಬಂಧಿಸಿ ನಾವು ಆರಿಸಿಕೊಂಡ ನಮ್ಮದೇ ದೇಶದ ಸ್ಥಳವೊಂದರಲ್ಲಿ ಕಂಫರ್ಟ್‌ಗಳನ್ನು ಪಡೆದುಕೊಂಡು ಅದಕ್ಕೇ ಅಂಟಿಕೊಂಡು ಯಾವುದೇ ರಿಸ್ಕ್‌ ತೆಗೆದುಕೊಳ್ಳದ ವರ್ಗ ಒಂದಾದರೆ, ರಿಸ್ಕ್‌ಗಳ್ನು ಎದುರು ಹಾಕಿಕೊಂಡು ಕಂಫರ್ಟ್‌ಗಳನ್ನು ಮೀರಿ, ಮುಂದೊಂದು ದಿನದ ಅತ್ಯುತ್ತಮ ಬದುಕಿನ ಕನಸಿನಲ್ಲಿ ಹೊಸ ಅವಕಾಶಗಳನ್ನು ಅರಸುತ್ತಾ ವಿದೇಶಕ್ಕೆ ಹಾರುವ ವರ್ಗ ಇನ್ನೊಂದೆಡೆ. ಕೆಲವರಿಗೆ, ಮನೆಯವರು, ಪ್ರೀತಿಪಾತ್ರರೆಲ್ಲರನ್ನು ಬಿಟ್ಟು ಹೊಸ ನೆಲ, ಹೊಸ ಜನರು ಸೇರಿದಂತೆ ಎಲ್ಲೂ ಹೊಸತೇ ಆಗಿರುವ ಅಪರಿಚಿತವಾದ ಇನ್ನೊಂದು ಜಾಗಕ್ಕೆ ಹೋಗಿ ಅಲ್ಲಿ ದೊಡ್ಡ ಕೊಳದಲ್ಲಿ ಈಜಾಡಲು ಕಲಿಯುವುದು ಸ್ವಲ್ಪ ಚಾಲೆಂಜಿಂಗ್‌ ಅನಿಸಬಹುದು. ಆದರೆ ಬದುಕಿನ ಮುಂದೆ ಇದು ಹರವಿಬಿಡುವ ಸಾಧ್ಯತೆಗಳು, ವಿಸ್ತರಿಸುವ ಅವಕಾಶಗಳು ಎಲ್ಲವೂ ನಮ್ಮ ಕೆಲವು ವೀಕ್‌ನೆಸ್‌ಗಳನ್ನು ಮೆಟ್ಟಿ ನಿಲ್ಲುವಂತೆ ಮಾಡಿಬಿಡುತ್ತದೆ.

ಇಂತಹ ವಿಶಾಲ ಸಮುದ್ರದಲ್ಲಿ ಈಜಲು ಒಮ್ಮೆ ಹಾರಿದರೆಂದರೆ, ಬಹುತೇಕರಿಗೆ ಮತ್ತೆ ತಿರುಗಿ ನೋಡುವುದು ಬೇಕಾಗಿರುವುದಿಲ್ಲ. ಈಜಲು ಬರುತ್ತದೋ ಇಲ್ಲವೋ ಈಜಿಯೇನು ಎಂಬ ಧೈರ್ಯವೇ ಸಾಕಾಗುತ್ತದೆ. ಹೀಗೆ ಒಮ್ಮೆ ಹಾರಿದರೆಂದರೆ ಒಟ್ಟು ವಾರ್ಷಿಕ ಆದಾಯದಲ್ಲಿ, ಇಲ್ಲಿನ ಅದೇ ಕೆಲಸಕ್ಕೆ ಇನ್ನೊಂದು ದೇಶದಲ್ಲಿ ಸಿಗುವ ದೊಡ್ಡ ಜಂಪ್‌ ಇದ್ದಕ್ಕಿದಂತೆ ಬದುಕನ್ನೇ ಬೇರೊಂದು ಸ್ತರಕ್ಕೆ ಕೊಂಡೊಯ್ಯಬಲ್ಲದು. ಒಂದು ಅಂದಾಜಿನ ಪ್ರಕಾರ, ಹೀಗೆ ತಮ್ಮ ದೇಶದಿಂದ ವಿದೇಶಕ್ಕೆ ಹಾರಿದ ಮಂದಿಯಲ್ಲಿ ಪ್ರತಿಯೊಬ್ಬನ ವಾರ್ಷಿಕ ಆದಾಯದಲ್ಲಿ ಸರಾಸರಿ ಸುಮಾರು 21,000 ಡಾಲರ್‌ಗಳಷ್ಟು ಏರಿಕೆಯಾಗಿಬಿಡುತ್ತದೆಯಂತೆ. ಹಾಗೆ ನೋಡಿದರೆ ಇದು ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯೇ ಸರಿ.

2015ರ ವರದಿಯೊಂದರ ಆಧಾರದಲ್ಲಿ, ವಿದೇಶದಲ್ಲಿ ಕೆಲಸವು ಈಗಿರುವ ಕೆಲಸಕ್ಕಿಂತ ಸುಮಾರು ಶೇ.28ರಷ್ಟು ಹೆಚ್ಚುವರಿ ಸಂಬಳದ ಸರಾಸರಿ ತಂದುಕೊಡುತ್ತದಂತೆ. ವರದಿಯ ಪ್ರಕಾರ, ವೃತ್ತಿ ಜೀವನ ಸಂಬಂಧಿಸಿ ವಿದೇಶ ಪ್ರಯಾಣ ಮಾಡುವುದಾದರೆ ಅತ್ಯಂತ ಹೆಚ್ಚು ಸಂಬಳ ಪಡೆಯಬಹುದಾದ ಸಾಧ್ಯತೆ ಇರುವ ದೇಶವಾಗಿ ಸ್ವಿಜರ್‌ಲ್ಯಾಂಡ್‌ ಹೊರಹೊಮ್ಮಿದೆ. ನಂತರ ಸ್ಥಾನದಲ್ಲಿ ಅಮೆರಿಕಾ (ಯುಎಸ್‌), ಮೂರನೇ ಸ್ಥಾನದಲ್ಲಿ ಹಾಂಗ್‌ಕಾಂಗ್‌ ಇದೆ. ನಾಲ್ಕನೇ ಸ್ಥಾನದಲ್ಲಿ ಚೈನಾ, ಐದನೇ ಸ್ಥಾನದಲ್ಲಿ ಸಿಂಗಾಪುರ ಇದ್ದರೆ, ಟಾಪ್‌ ೧೦ರ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ಕ್ರಮವಾಗಿ ಯುಎಇ, ಭಾರತ, ಇಂಡೋನೇಶಿಯಾ, ಜಪಾನ್‌ ಹಾಗೂ ಆಸ್ಟ್ರೇಲಿಯಾ ಇವೆ. ಭಾರತ ಏಳನೇ ಸ್ಥಾನದಲ್ಲಿರುವುದು ವಿಶೇಷ!

high salary nation

ಇದೇ ವರದಿಯ ಆಧಾರದಲ್ಲಿ ಪುರುಷರ ವಾರ್ಷಿಕ ಆದಾಯದ ಸರಾಸರಿಗಿಂತ ಮಹಿಳೆಯರ ಆದಾಯದ ಸರಾಸರಿ ಕಡಿಮೆಯಿದೆ. ವಿದೇಶೀ ಉದ್ಯೋಗವೊಂದು ಮಹಿಳೆಯರ ಆದಾಯದಲ್ಲಿ ಶೇಕಡಾ 27ರಷ್ಟು ಏರಿಕೆ ನೀಡಿದರೆ, ಪುರುಷರು ಶೇಕಡಾ 47ರಷ್ಟು ಏರಿಕೆ ಪಡೆದಿರುತ್ತಾರೆ. ಮಹಿಳೆಯರು ಇಲ್ಲಿ ಸಮಾನತೆಯನ್ನು ಕಾಯ್ದುಕೊಂಡಿರದಿರುವುದಕ್ಕೆ ಬಹುಶಃ ಅವರ ಕಲಿಕೆ ಅಥವಾ ಆಯ್ಕೆ ಮಾಡಿಕೊಂಡ ವೃತ್ತಿಯ ಆಧಾರದಲ್ಲಿಯೂ ಇರಬಹುದು ಎಂದು ಅಂದಾಜಿಸಲಾಗಿದೆ.

ಸ್ತ್ರೀಪುರುಷ ಸಮಾನತೆಯ ಆಧಾರದಲ್ಲಿ ವೃತ್ತಿಯಲ್ಲಿ ಬೆಳವಣಿಗೆ ಸಿಗಬಹುದಾದ ದೇಶಗಳ ಪೈಕಿ ಫಿಲಿಪೈನ್ಸ್‌ ಮುಂಚೂಣಿಯಲ್ಲಿದೆ. ಮಹಿಳೆಯರು ಫಿಲಿಫೈನ್ಸ್‌ ಬೆಳವಣಿಗೆಯ ವಿಚಾರದಲ್ಲಿ ತಮಗೆ ಅತ್ಯಂತ ಸೂಕ್ತ ದೇಶ ಎಂದಿದ್ದಾರೆ.  2018ರ ವರದಿಯಲ್ಲೂ ಏಷ್ಯಾದ ದೇಶಗಳ ಪೈಕಿ ಫಿಲಿಪೈನ್ಸ್‌ ಈ ವಿಷಯದಲ್ಲಿ ಅತ್ಯುತ್ತಮ ದೇಶವಾಗಿ ಹೊರಹೊಮ್ಮಿದ್ದು, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್‌ ಮತ್ತಿತರ ಕ್ಷೇತ್ರಗಳಲ್ಲಿ ಈ ದೇಶದಲ್ಲಿ ಸ್ತ್ರೀಸಮಾನತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Viral News : ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ! ವಿವೇಕ್‌ ಬಿಂದ್ರಾ ಫೋಟೋ ವೈರಲ್ ಆಗಿದ್ದೇಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

White House: ಭಾರತದಲ್ಲಿದೆ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ: ಅಮೆರಿಕದ ಮೆಚ್ಚುಗೆ; ಮೋದಿ ನಾಯಕತ್ವಕ್ಕೂ ಸಿಕ್ತು ಶಹಬ್ಬಾಸ್‌ಗಿರಿ

White House: ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದಕ್ಕೆ ಅಮೆರಿಕದ ಶ್ವೇತಭವನವು ಭಾರತೀಯರನ್ನು ಶ್ಲಾಘಿಸಿದೆ. ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಈ ಬಗ್ಗೆ ಮಾತನಾಡಿ, ಭಾರತವು ಜಾಗತಿಕವಾಗಿ ಅತ್ಯಂತ ರೋಮಾಂಚಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ ಎಂದು ಬಣ್ಣಿಸಿದ್ದಾರೆ.

VISTARANEWS.COM


on

White House
Koo

ವಾಷಿಂಗ್ಟನ್‌: ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದಕ್ಕೆ ಅಮೆರಿಕದ ಶ್ವೇತಭವನ (White House)ವು ಭಾರತೀಯರನ್ನು ಶ್ಲಾಘಿಸಿದೆ. ಶ್ವೇತಭವನದ ವಕ್ತಾರ ಜಾನ್ ಕಿರ್ಬಿ (John Kirby) ಈ ಬಗ್ಗೆ ಮಾತನಾಡಿ, ಭಾರತವು ಜಾಗತಿಕವಾಗಿ ಅತ್ಯಂತ ರೋಮಾಂಚಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ ಎಂದು ಬಣ್ಣಿಸಿದ್ದಾರೆ. ʼʼಸುಮಾರು 2,660 ನೋಂದಾಯಿತ ಪಕ್ಷಗಳನ್ನು ಪ್ರತಿನಿಧಿಸುವ ಸಾವಿರಾರು ಅಭ್ಯರ್ಥಿಗಳ ಪೈಕಿ 545 ಸಂಸದರನ್ನು ಆಯ್ಕೆ ಮಾಡಲು ಕೋಟ್ಯಂತರ ಮಂದಿ ಹತ್ತು ಲಕ್ಷಕ್ಕೂ ಅಧಿಕ ಮತದಾನ ಕೇಂದ್ರಗಳಲ್ಲಿ ಹಕ್ಕು ಚಲಾ ಚಲಾಯಿಸುತ್ತಿದ್ದಾರೆʼʼ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಭಾರತಕ್ಕಿಂತ ಹೆಚ್ಚು ವ್ಯವಸ್ಥಿತ ಪ್ರಜಾಪ್ರಭುತ್ವ ಜಗತ್ತಿನ ಬೇರೆ ಕಡೆ ಇಲ್ಲ. ಮತ ಚಲಾಯಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿರುವುದಕ್ಕಾಗಿ ಮತ್ತು ತಮ್ಮ ಭವಿಷ್ಯದ ಸರ್ಕಾರವನ್ನು ನಿರ್ಧರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿರುವುದಕ್ಕಾಗಿ ನಾವು ಭಾರತೀಯರನ್ನು ಶ್ಲಾಘಿಸುತ್ತೇವೆ. ಈ ಮತದಾನದ ಪ್ರಕ್ರಿಯೆಯುದ್ದಕ್ಕೂ ನಾವು ಅವರಿಗೆ ಶುಭ ಹಾರೈಸುತ್ತೇವೆ” ಎಂದು ಜಾನ್ ಕಿರ್ಬಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರಿಗೂ ಮೆಚ್ಚುಗೆ

ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ವೃದ್ಧಿಸುತ್ತಿರುವ ಬಗ್ಗೆಯೂ ಅವರು ಪ್ರಸ್ತಾವಿಸಿದ್ದಾರೆ. ʼʼಮೋದಿ ಅವರ ನಾಯಕತ್ವದ ಅಡಿಯಲ್ಲಿ ವಿಶೇಷವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದ ಕೊನೆಯ ಮೂರು ವರ್ಷಗಳಲ್ಲಿ ಭಾರತ-ಅಮೆರಿಕ ಸಂಬಂಧ ಬಲವಾಗಿದೆ. ಉಭಯ ದೇಶಗಳ ನಡುವಿನ ಬಂಧವು ನಿರಂತರವಾಗಿ ವೃದ್ಧಿಸುತ್ತಿದೆʼʼ ಎಂದು ವಿವರಿಸಿದ್ದಾರೆ.

“ನಾವು ಎರಡೂ ದೇಶಗಳ ಸಂಬಂಧ ವೃದ್ಧಿಗೆ ಎಲ್ಲ ರೀತಿಯ ಹೊಸ ಉಪಕ್ರಮಗಳನ್ನು ಪ್ರಾರಂಭಿಸಿದ್ದೇವೆ. ನಿರ್ಣಾಯಕ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಇಂಡೋ-ಪೆಸಿಫಿಕ್ ಕ್ವಾಡ್‌ನ ಪ್ರಸ್ತುತತೆಯನ್ನು ಹೆಚ್ಚಿಸುತ್ತಿದ್ದೇವೆ. ಜತೆಗೆ ನಾವು ರಕ್ಷಣಾ ಕ್ಷೇತ್ರದಲ್ಲಿಯೂ ಪರಸ್ಪರ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ನಾವು ಕೃತಜ್ಞರಾಗಿದ್ದೇವೆʼʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: PM Modi US visit : ಶ್ವೇತಭವನದ ಔತಣಕೂಟದಲ್ಲಿ ಮಿಂಚಿದ ಮುಕೇಶ್‌, ನೀತಾ ಅಂಬಾನಿ, ನಿಖಿಲ್‌ ಕಾಮತ್

ಶ್ವೇತಭವನದಲ್ಲಿ ಮೊಳಗಿದ ʼಸಾರೆ ಜಹಾನ್‌ ಸೇ ಅಚ್ಚಾʼ

ಇತ್ತೀಚೆಗಷ್ಟೇ ಅಮೆರಿಕದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾರತದ ದೇಶಭಕ್ತಿಗೀತೆ ʼಸಾರಾ ಜಹಾನ್‌ ಸೇ ಅಚ್ಚಾʼ ಹಾಡು ಮೊಳಗಿತ್ತು. ಶ್ವೇತಭವನದಲ್ಲಿ ಆಯೋಜನೆಗೊಂಡಿದ್ದ ಏಷಿಯನ್‌ ಅಮೆರಿಕನ್‌, ಸ್ಥಳೀಯ ಹವಾಯಿಯನ್‌ ಮತ್ತು ಪೆಸಿಫಿಕ್‌ ಐಲ್ಯಾಂಡರ್‌ ಪಾರಂಪರ್ಯ ಮಾಸಾಚರಣೆ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರೀಸ್‌ ಭಾಗಿಯಾಗಿದ್ದರು. ಈ ವೇಳೆ ಶ್ವೇತಭವನದ ಮೆರೈನ್ ಬ್ಯಾಂಡ್ ʼಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾʼ ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿತ್ತು. ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ವೈರಲ್‌ ಆಗಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಶ್ವೇತಭವನ ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದೆ.

Continue Reading

ದೇಶ

World Aids Vaccine Day: ಇಂದು ವಿಶ್ವ ಏಡ್ಸ್ ಲಸಿಕೆ ದಿನ; ಈ ದಿನದ ಹಿನ್ನೆಲೆ ಏನು?

ಕೆಲವೊಂದು ಕಾಯಿಲೆಗಳಿಗೆ ಔಷಧವನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಮುನ್ನೆಚ್ಚರಿಕೆಯಿಂದ ಮಾತ್ರ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಯಬಹುದು. ಅಂತಹ ಒಂದು ಸಾಂಕ್ರಾಮಿಕ ಕಾಯಿಲೆಯಲ್ಲಿ ಹೆಚ್ ಐವಿ ಏಡ್ಸ್ ಕೂಡ (World Aids Vaccine Day) ಒಂದು. ಈ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರುವುದೇ ಇದರಿಂದ ರಕ್ಷಿಸಿಕೊಳ್ಳುವ ಒಂದು ಉತ್ತಮ ಉಪಾಯ.

VISTARANEWS.COM


on

By

World Aids Vaccine Day
Koo

ಜಗತ್ತಿನ ಬಹುತೇಕ ಕಾಯಿಲೆಗಳಿಗೆ ಈಗ ಔಷಧ ಲಭ್ಯವಿದೆ. ಆದರೆ ಎಚ್‌ಐವಿ (HIV) ಸೋಂಕಿಗೆ ಮಾತ್ರ ಇನ್ನೂ ಯಾವುದೇ ಚಿಕಿತ್ಸೆ ಕಂಡು ಹಿಡಿಯಲಾಗಿಲ್ಲ. ಹೀಗಾಗಿಯೇ ಇದರ ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ (world) ಮೇ 18 ರಂದು ವಿಶ್ವ ಏಡ್ಸ್ (AIDS) ಲಸಿಕೆ ದಿನ ಅಥವಾ ಎಚ್ಐವಿ ಲಸಿಕೆ ಜಾಗೃತಿ ದಿನವನ್ನು (World Aids Vaccine Day) ಆಚರಿಸಲಾಗುತ್ತದೆ. ಎಚ್ಐವಿ ಸೋಂಕಿಗೆ ಯಾವುದೇ ಚಿಕಿತ್ಸೆ ಇಲ್ಲ. ಇದಕ್ಕೆ ಆಂಟಿರೆಟ್ರೋವೈರಲ್ ಔಷಧಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದು ದೇಹದಲ್ಲಿ ವೈರಸ್ ಪುನರಾವರ್ತನೆಯಾಗದಂತೆ ತಡೆಯುತ್ತದೆ.

ವಿಶ್ವ ಏಡ್ಸ್ ಲಸಿಕೆ ದಿನ ಅಥವಾ ಎಚ್‌ಐವಿ ಲಸಿಕೆ ಜಾಗೃತಿ ದಿನವನ್ನು ಮೇ 18ರಂದು ಎಚ್‌ಐವಿ ಲಸಿಕೆ, ರೋಗನಿರೋಧಕ ಪ್ರಯೋಜನಗಳು ಮತ್ತು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ಇತರ ವಿವರಗಳ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಎಚ್ಐವಿ ಸೋಂಕನ್ನು ತಡೆಗಟ್ಟಲು ಈ ಅರಿವು ಎಲ್ಲರಿಗೂ ಮುಖ್ಯವಾಗಿದೆ.
ಈ ದಿನವು ಲಸಿಕೆ ಸಂಶೋಧನೆಯ ಭಾಗವಾಗಿರುವ ಆರೋಗ್ಯ ವೃತ್ತಿಪರರು ಮತ್ತು ಸಹಾಯಕ ಸಿಬ್ಬಂದಿಯ ನಿರಂತರ ಕೊಡುಗೆಯನ್ನು ಸ್ಮರಿಸಲು ಆಚರಿಸಲಾಗುತ್ತದೆ.

ಎಷ್ಟು ಸೋಂಕಿತರು?

ಎಚ್ಐವಿ ಜಾಗತಿಕ ಸಾಂಕ್ರಾಮಿಕವಾಗಿದ್ದು, ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಸರಿಸುಮಾರು 38.4 ಮಿಲಿಯನ್ ಜನರು HIVಯೊಂದಿಗೆ ವಾಸಿಸುತ್ತಿದ್ದಾರೆ, ಅವರಲ್ಲಿ ಮೂರನೇ ಎರಡರಷ್ಟು ಜನರು WHO ಆಫ್ರಿಕನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಪ್ರಪಂಚದಾದ್ಯಂತ ಸುಮಾರು ಏಳು ಜನರಲ್ಲಿ ಒಬ್ಬರು HIV ಯೊಂದಿಗೆ ವಾಸಿಸುತ್ತಿದ್ದಾರೆ. ಇದು ವಿಶ್ವದ ಜನಸಂಖ್ಯೆಯ 37.9 ಮಿಲಿಯನ್ ನಷ್ಟಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ 2022 ರ ಅಂತ್ಯದ ವೇಳೆಗೆ 39 ಮಿಲಿಯನ್ ಎಚ್ಐವಿ ಪಾಸಿಟಿವ್ ಜನರಿದ್ದಾರೆ. ಅದರಲ್ಲಿ 1.5 ಮಿಲಿಯನ್ 0- 14 ವರ್ಷಗಳ ನಡುವಿನ ಮಕ್ಕಳು ಇದ್ದಾರೆ.

ಹರಡಲು ಕಾರಣ ಏನು?

ಬಡ ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ವೈರಸ್ ಹೆಚ್ಚು ಹರಡುತ್ತದೆ. ಶೈಕ್ಷಣಿಕ ಮಾಹಿತಿಯ ಕೊರತೆ, ತಡೆಗಟ್ಟುವ ಕ್ರಮಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳು ಎಚ್ಐವಿ ಹರಡುವಿಕೆಗೆ ಪ್ರಮುಖ ಕಾರಣಗಳಾಗಿವೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಮಾಡಿದ ಗಮನಾರ್ಹ ಪ್ರಯತ್ನಗಳ ಹೊರತಾಗಿಯೂ ಹೆಚ್ ಐವಿಯೊಂದಿಗೆ ವಾಸಿಸುವ ಜನರ ಸಂಖ್ಯೆಯು ಹೆಚ್ಚಾಗಿದೆ. ಇದರಿಂದಾಗಿ ವೈರಸ್ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಪರಿಣಾಮಕಾರಿ ಲಸಿಕೆಗಾಗಿ ಸಂಶೋಧನೆಯನ್ನು ಮುಂದುವರಿಸುವುದು ಅತ್ಯಗತ್ಯ.


ವಿಶ್ವ ಏಡ್ಸ್ ಲಸಿಕೆ ದಿನದ ಇತಿಹಾಸ

1997ರ ಮೇ 18ರಂದು ಮೇರಿಲ್ಯಾಂಡ್‌ನ ಮೋರ್ಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಮಾಡಿದ ಭಾಷಣದಲ್ಲಿ ಆಗಿನ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್, ಪರಿಣಾಮಕಾರಿ ಎಚ್‌ಐವಿ ತಡೆಗಟ್ಟುವ ಲಸಿಕೆ ಮಾತ್ರ ಏಡ್ಸ್ ಬೆದರಿಕೆಯನ್ನು ನಿಯಂತ್ರಣದಲ್ಲಿ ಇರಿಸುತ್ತದೆ ಮತ್ತು ಅಂತಿಮವಾಗಿ ತೆಗೆದುಹಾಕುತ್ತದೆ ಎಂದು ಹೇಳಿದರು. ಪರಿಣಾಮಕಾರಿ ಲಸಿಕೆಯ ತುರ್ತು ಅಗತ್ಯವನ್ನು ಒತ್ತಿ ಹೇಳುವ ಕ್ಲಿಂಟನ್ ಅವರ ಭಾಷಣದ ಗೌರವಾರ್ಥವಾಗಿ ಮೇ 18 ಅನ್ನು ವಿಶ್ವ ಏಡ್ಸ್ ಲಸಿಕೆ ದಿನವೆಂದು ಘೋಷಿಸಲಾಗಿದೆ. ವಿಶ್ವ ಏಡ್ಸ್ ಲಸಿಕೆ ದಿನವನ್ನು ಮೊದಲ ಬಾರಿಗೆ 1998ರಲ್ಲಿ ಆಚರಿಸಲಾಯಿತು.

ಇದನ್ನೂ ಓದಿ: Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

ವಿಶ್ವ ಏಡ್ಸ್ ಲಸಿಕೆ ದಿನದ ಮಹತ್ವ

ಎಚ್‌ಐವಿ ಮತ್ತು ಏಡ್ಸ್ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲು ಈ ದಿನ ಮಹತ್ವದ್ದಾಗಿದೆ. ಸರ್ಕಾರಗಳು ಮತ್ತು ಎನ್‌ಜಿಒಗಳ ಉಪಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ಮತ್ತು ತಡೆಗಟ್ಟುವ ಎಚ್‌ಐವಿ ಲಸಿಕೆಯ ಅಗತ್ಯತೆಯ ಕಡೆಗೆ ಗಮನ ಸೆಳೆಯಲು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತದೆ.

Continue Reading

ವಿದೇಶ

Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

Gopi Hinduja: ಗೋಪಿಚಂದ್‌ ಅವರ ಆಸ್ತಿಯ ಮೌಲ್ಯವು ಕಳೆದ ವರ್ಷ 35 ಶತಕೋಟಿ ಪೌಂಡ್ಸ್‌ ಇತ್ತು. ಈಗ ಅದು 37 ಶತಕೋಟಿ ಪೌಂಡ್ಸ್‌ಗೆ ಏರಿಕೆಯಾಗಿದೆ. ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌ ಕಳೆದ ಹಲವು ವರ್ಷಗಳಿಂದಲೂ ಪ್ರಕಟವಾಗುತ್ತಿದೆ. ಆದರೆ, ಹಿಂದುಜಾ ಗ್ರೂಪ್, ಕಳೆದ 3 ವರ್ಷದಿಂದಲೂ ಮೊದಲ ಸ್ಥಾನದಲ್ಲಿದೆ.

VISTARANEWS.COM


on

Gopi Hinduja
Koo

ಲಂಡನ್‌: ಬ್ರಿಟಿಷರು ನಮ್ಮನ್ನು ಆಳಿದರು, ಶತಮಾನಗಳವರೆಗೆ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದರು ಎಂಬ ಬೇಸರವು ಪ್ರತಿ ಭಾರತೀಯನನ್ನೂ ಕಾಡುತ್ತದೆ. ಆದರೆ, ಭಾರತ ಮೂಲದ ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾದರೆ, ಭಾರತವು ಆರ್ಥಿಕತೆ ಸೇರಿ ಯಾವುದೇ ವಿಷಯದಲ್ಲಿ ಹಿಂದಿಕ್ಕಿದರೆ ನಮಗೆ ಖುಷಿಯಾಗುತ್ತದೆ. ಇಂತಹ ಖುಷಿಗೆ ಮತ್ತೊಂದು ಕಾರಣ ಸಿಕ್ಕಿದೆ. ಭಾರತ ಮೂಲದ ಗೋಪಿಚಂದ್‌ ಹಿಂದುಜಾ (Gopi Hinduja) ಹಾಗೂ ಅವರ ಕುಟುಂಬವು ಬ್ರಿಟನ್‌ನ ಶ್ರೀಮಂತ (UK’s Richest) ಕುಟುಂಬ ಅಥವಾ ಉದ್ಯಮಿ ಎಂಬ ಖ್ಯಾತಿಗೆ ಭಾಜನವಾಗಿದೆ. ಅಷ್ಟೇ ಅಲ್ಲ, ಸತತ ಮೂರನೇ ವರ್ಷವೂ ಹಿಂದುಜಾ ಕುಟುಂಬವೇ ಅತ್ಯಂತ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರವಾಗಿದೆ.

‘ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌’ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಗೋಪಿಚಂದ್‌ ಹಿಂದುಜಾ ಅವರೇ ಬ್ರಿಟನ್‌ನ ಶ್ರೀಮಂತ ಉದ್ಯಮಿ ಎನಿಸಿದ್ದಾರೆ. ಇವರ ಆಸ್ತಿಯ ಒಟ್ಟು ಮೌಲ್ಯವು 37 ಶತಕೋಟಿ ಪೌಂಡ್ಸ್‌ (ಸುಮಾರು 3.9 ಲಕ್ಷ ಕೋಟಿ ರೂ.) ಇದೆ. ಬ್ರಿಟನ್‌ನವರೇ ಆದ ಸರ್‌ ಲೆನಾರ್ಡ್‌ ಬ್ಲಾವಾಟ್ನಿಕ್‌ (29 ಶತಕೋಟಿ ಪೌಂಡ್ಸ್)‌, ಡೇವಿಡ್‌, ಸೈಮನ್‌ ರುಬೇನ್‌ ಮತ್ತು ಕುಟುಂಬ (24.98 ಶತಕೋಟಿ ಪೌಂಡ್ಸ್)‌, ಸರ್‌ ಜಿಮ್‌ ರ‍್ಯಾಟ್‌ಕ್ಲಿಫ್‌ (23 ಶತಕೋಟಿ ಪೌಂಡ್ಸ್)‌ ಆಸ್ತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಗೋಪಿಚಂದ್‌ ಹಿಂದುಜಾ ಅವರು ಭಾರತ ಮೂಲದವರಾಗಿದ್ದು, ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಇವರ ತಂದೆಯೂ ಉದ್ಯಮಿಯಾಗಿದ್ದರು. ಹಿಂದುಜಾ ಗ್ರೂಪ್‌ಗೆ ಗೋಪಿಚಂದ್‌ ಹಿಂದುಜಾ ಅವರು ಸಹ ಚೇರ್ಮನ್‌ ಆಗಿದ್ದಾರೆ. ಇವರ ಆಸ್ತಿಯ ಮೌಲ್ಯವು ಕಳೆದ ವರ್ಷ 35 ಶತಕೋಟಿ ಪೌಂಡ್ಸ್‌ ಇತ್ತು. ಈಗ ಅದು 37 ಶತಕೋಟಿ ಪೌಂಡ್ಸ್‌ಗೆ ಏರಿಕೆಯಾಗಿದೆ. ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌ ಕಳೆದ ಹಲವು ವರ್ಷಗಳಿಂದಲೂ ಪ್ರಕಟವಾಗುತ್ತಿದೆ. ಆದರೆ, ಹಿಂದುಜಾ ಗ್ರೂಪ್, ಕಳೆದ 3 ವರ್ಷದಿಂದಲೂ ಮೊದಲ ಸ್ಥಾನದಲ್ಲಿದೆ.

“ಗೋಪಿಚಂದ್‌ ಹಿಂದುಜಾ ಹಾಗೂ ಅವರ ಕುಟುಂಬವು ಜಗತ್ತಿನಾದ್ಯಂತ 48 ದೇಶಗಳಲ್ಲಿ ಉದ್ಯಮಗಳನ್ನು ಹೊಂದಿದೆ. ಆಟೋಮೋಟಿವ್‌, ತೈಲ, ಕೆಮಿಕಲ್‌, ಬ್ಯಾಂಕಿಂಗ್‌, ಐಟಿ, ಫೈನಾನ್ಸ್‌, ಸೈಬರ್‌ ಸೆಕ್ಯುರಿಟಿ, ಆರೋಗ್ಯ, ಮೂಲ ಸೌಕರ್ಯ ಅಭಿವೃದ್ಧಿ, ಮನರಂಜನೆ, ಮಾಧ್ಯಮ, ರಿಯಲ್‌ ಎಸ್ಟೇಟ್‌ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಹಿಂದುಜಾ ಗ್ರೂಪ್‌ ಪ್ರಾಬಲ್ಯ ಸಾಧಿಸಿದೆ” ಎಂದು ದಿ ಸಂಡೇ ಟೈಮ್ಸ್‌ ಬಣ್ಣಿಸಿದೆ. ಹಿಂದುಜಾ ಕುಟುಂಬಸ್ಥರು ಮುಂಬೈನಲ್ಲಿ ಸಣ್ಣದೊಂದು ಉದ್ಯಮ ಆರಂಭಿಸಿ, ಈಗ ಬ್ರಿಟನ್‌ನ ಶ್ರೀಮಂತ ಔದ್ಯಮಿಕ ಕುಟುಂಬ ಎನಿಸಿದೆ. ಇವರ ಮನೆಯು ಬ್ರಿಟನ್‌ ಅರಸ ವಾಸಿಸುವ ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ ಬಳಿಯೇ ಇದೆ.

ಇದನ್ನೂ ಓದಿ: Indian billionaires: ಭಾರತದಲ್ಲಿ 200 ಬಿಲಿಯನೇರ್‌ಗಳು! ಅತಿ ಶ್ರೀಮಂತರ ಸಂಖ್ಯೆಯಲ್ಲಿ ಭಾರತ ನಂ.3

Continue Reading

ಕಲೆ/ಸಾಹಿತ್ಯ

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್- ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಕೃತಿಯನ್ನು ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Konkani Book Release ) ಬಿಡುಗಡೆಗೊಳಿಸಿದರು. ಕರಾವಳಿಯಲ್ಲಿ ಕೊಂಕಣಿ ಮಾತನಾಡುವ ಜಿಎಸ್‌ಬಿ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇದೊಂದು ಅಪೂರ್ವ ಕೃತಿಯಾಗಿದೆ.

VISTARANEWS.COM


on

By

Konkani Book Release
Koo

ಮಂಗಳೂರು: ಇಟಾಲಿಯನ್- ಬ್ರಿಟಿಷ್ ಲೇಖಕ (Italian-born British citizen) ಗಿನೋ ಡಿ’ಕ್ಲೆಮೆಂಟೆ ಅವರು ಸಂಪಾದಿಸಿದ ಕೃತಿ ”ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ’ ಕೃತಿಯನ್ನು (Konkani Book Release) ಕೇರಳದ (kerala) ಎರ್ನಾಕುಲಂನಲ್ಲಿರುವ (Ernakulam) ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Samyameendra Thirtha Swamiji ) ಬಿಡುಗಡೆಗೊಳಿಸಿದರು.

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್-ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಸಂವಾದಾತ್ಮಕ ಜಿಎಸ್‌ಬಿ (ಗೌಡ ಸಾರಸ್ವತ ಬ್ರಾಹ್ಮಣ) ಕೊಂಕಣಿ ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ರಚಿಸಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಪ್ರತಿಷ್ಠಿತ ದಿಗ್ವಿಜಯ್ ಮಹೋತ್ಸವದಲ್ಲಿ ಅನಾವರಣಗೊಂಡ ಈ ಮಾರ್ಗದರ್ಶಿ ಕೃತಿ ಶ್ರೀಮಂತ ಭಾರತೀಯ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ಮಹತ್ವದ ಮೈಲುಗಲ್ಲನ್ನು ಗುರುತಿಸುತ್ತದೆ.


Gino’s Guide for Conversational GSB Konkani ಕೃತಿಯು ಜಿ ಎಸ್ ಬಿ ಸಮುದಾಯದ ಪರಂಪರೆಯನ್ನು ಪೋಷಿಸುವ ಸಮರ್ಪಿತ ಸಂಸ್ಥೆಯಾದ ಜಿಎಸ್ ಬಿ ವರ್ಲ್ಡ್‌ವೈಡ್‌ನ ಯುವಜನರಿಂದ ಸುಗಮಗೊಳಿಸಲ್ಪಟ್ಟ ಅಡ್ಡ-ಸಾಂಸ್ಕೃತಿಕ ತಿಳುವಳಿಕೆ ಮತ್ತು ಭಾಷಾ ಸಂರಕ್ಷಣೆಗೆ ಅಸಾಧಾರಣ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಕೃತಿಯ ಕುರಿತು ಮಾತನಾಡಿದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಇದು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳ ಮೇಲೆ ಬೀರುವ ಮಹತ್ವದ ಪರಿಣಾಮವನ್ನು ಒತ್ತಿ ಹೇಳುತ್ತದೆ ಎಂದರು.

ಗಿನೋ ಡಿ ಕ್ಲೆಮೆಂಟೆ ಅವರ ಕೆಲಸವು ಸಮರ್ಪಣಾ ಶಕ್ತಿ ಮತ್ತು ಸಾಂಸ್ಕೃತಿಕ ಮೆಚ್ಚುಗೆಗೆ ಸಾಕ್ಷಿಯಾಗಿದೆ. ನಮ್ಮ ಸಮುದಾಯದ ಹೊರಗಿನವರಿಂದ ಅಂತಹ ಆಳವಾದ ತೊಡಗಿಸಿಕೊಳ್ಳುವಿಕೆಯನ್ನು ನೋಡುವುದು ಅಪರೂಪ. ಈ ಮಾರ್ಗದರ್ಶಿ ನಮ್ಮ ಭಾಷಾ ಸಂರಕ್ಷಣೆಯ ಪ್ರಯತ್ನಗಳಲ್ಲಿ ಒಂದು ಸ್ಮಾರಕ ಸಾಧನೆಯಾಗಿದೆ ಎಂದು ಹೇಳಿದರು.

ಮಾರ್ಗದರ್ಶಿಯು ದೈನಂದಿನ ಸಂಭಾಷಣೆಗಳಿಗೆ ಪ್ರಾಯೋಗಿಕ ನುಡಿಗಟ್ಟುಗಳು ಮತ್ತು ಉದಾಹರಣೆಗಳೊಂದಿಗೆ ಉಚ್ಚಾರಣೆ, ವ್ಯಾಕರಣ ಮತ್ತು ಶಬ್ದಕೋಶದ ವಿವರವಾದ ಅವಲೋಕನವನ್ನು ನೀಡುತ್ತದೆ. ಇದು ಆರಂಭಿಕ ಮತ್ತು ಮುಂದುವರಿದ ಕಲಿಯುವವರಿಬ್ಬರನ್ನೂ ಪೂರೈಸುತ್ತದೆ, ಜಿಎಸ್ ಬಿ ಕೊಂಕಣಿಯನ್ನು ಕರಗತ ಮಾಡಿಕೊಳ್ಳಲು ಉತ್ಸುಕರಾಗಿರುವ ಯಾರಿಗಾದರೂ ಇದೊಂದು ಬಹುಮುಖ್ಯ ಸಂಪನ್ಮೂಲವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Narayana Murthy: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಕತ್ತರಿ? ನಾರಾಯಣ ಮೂರ್ತಿ ಶಾಕಿಂಗ್‌ ಹೇಳಿಕೆ

ಲೇಖಕರ ಹಿನ್ನೆಲೆ ಏನು?

ಜಿನೋ ಡಿ ಕ್ಲೆಮೆಂಟೆ ಮೂಲತಃ ಇಟಲಿಯವರಾಗಿದ್ದು, ಈಗ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಮದುವೆಯ ಮೂಲಕ ಜಿ ಎಸ್ ಬಿ ಸಂಸ್ಕೃತಿಗೆ ಆಳವಾದ ವೈಯಕ್ತಿಕ ಸಂಪರ್ಕವನ್ನು ಹೊಂದಿದ್ದಾರೆ. ಅವರ ಸಂಗಾತಿಯು ಕರ್ನಾಟಕದ ಕಾರ್ಕಳ ತಾಲೂಕಿನ ಮೂಲದವರಾಗಿದ್ದಾರೆ. ಈ ಕೌಟುಂಬಿಕ ಬಂಧವು ಜಿನೋ ಅವರ ಜಿಎಸ್‌ಬಿ ಕೊಂಕಣಿಯ ತಲ್ಲೀನಗೊಳಿಸುವ ಅಧ್ಯಯನಕ್ಕೆ ಪ್ರೇರೇಪಿಸಿತು. ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಉತ್ಸಾಹವು ಈ ಸಮಗ್ರ ಮಾರ್ಗದರ್ಶಿಯಲ್ಲಿ ಉತ್ತುಂಗಕ್ಕೇರಿತು. ಭಾರತೀಯ ಭಾಷೆಗಳ ದಾಖಲೀಕರಣ ಮತ್ತು ಪ್ರಚಾರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ.

Continue Reading
Advertisement
naturals ic cream raghunandan kamath
ಶ್ರದ್ಧಾಂಜಲಿ19 mins ago

Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

IPL 2024
ಪ್ರಮುಖ ಸುದ್ದಿ23 mins ago

IPL 2024 : ಸಹ ಆಟಗಾರ ರೊಮಾರಿಯೊ ಶೆಫರ್ಡ್​ಗೆ ಆಟೋಗ್ರಾಫ್​ ಕೊಟ್ಟ ರೋಹಿತ್​ , ಚಿತ್ರಗಳು ಇಲ್ಲಿವೆ

Kajal Aggarwal Kannappa Movie Entry
ಟಾಲಿವುಡ್42 mins ago

Kajal Aggarwal: ವಿಷ್ಣು ಮಂಚು `ಕಣ್ಣಪ್ಪ’ ಚಿತ್ರಕ್ಕೆ ಕಾಜಲ್ ಅಗರ್​ವಾಲ್​​ ಎಂಟ್ರಿ; ಪಾತ್ರ ಏನಿರಬಹುದು?

White House
ವಿದೇಶ44 mins ago

White House: ಭಾರತದಲ್ಲಿದೆ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ: ಅಮೆರಿಕದ ಮೆಚ್ಚುಗೆ; ಮೋದಿ ನಾಯಕತ್ವಕ್ಕೂ ಸಿಕ್ತು ಶಹಬ್ಬಾಸ್‌ಗಿರಿ

IPL 2024
ಕ್ರೀಡೆ44 mins ago

IPL 2024 : ಆರ್​ಸಿಬಿ- ಚೆನ್ನೈ ಪಂದ್ಯದ ವೇಳೆ ಮಳೆ ಬಂದು ರದ್ದಾದರೆ ಮುಂದೇನಾಗುವುದು?

hd deve gowda birthday
ಪ್ರಮುಖ ಸುದ್ದಿ45 mins ago

HD Deve Gowda: ಈ ಅವಮಾನದಿಂದ ಪಾರು ಮಾಡು: 93ರ ಜನ್ಮದಿನಂದು ದೇವೇಗೌಡರ ಮೌನ ಪ್ರಾರ್ಥನೆ

Gurucharan Singh returns home after almost a month
ಕಿರುತೆರೆ1 hour ago

Gurucharan Singh: ಕಾಣೆಯಾಗಿದ್ದ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ ಮತ್ತೆ ಮನೆಗೆ ವಾಪಸ್‌!

Pavithra Jayaram Last Instagram post to chandrakanth
South Cinema1 hour ago

Pavithra Jayaram: ಗೆಳೆಯ ಚಂದು ಜತೆ ಪವಿತ್ರ ಜಯರಾಮ್ ರೀಲ್ಸ್ ನೋಡಿದ್ರೆ ಕಣ್ಣು ಒದ್ದೆಯಾಗುತ್ತೆ!

Aiden Markram
ಪ್ರಮುಖ ಸುದ್ದಿ1 hour ago

Aiden Markarm : ವಿಂಡೀಸ್ ವಿರುದ್ಧದ ಸರಣಿಗೆ ದ. ಆಫ್ರಿಕಾ ತಂಡದಲ್ಲಿ ಮಾರ್ಕ್ರಮ್​​ಗೆ ಇಲ್ಲ ಚಾನ್ಸ್​

Fire Accident
ದೇಶ2 hours ago

Fire Accident: ಚಲಿಸುತ್ತಿದ್ದ ಬಸ್‌ನಲ್ಲಿ ಕಾಣಿಕೊಂಡ ಬೆಂಕಿ; 10 ಮಂದಿ ಭಕ್ತರ ಸಜೀವ ದಹನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ14 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌