Vidyarthi Bhavan : ಹೊಸ ಲುಕ್‌ನಲ್ಲಿ ಮಿಂಚುತ್ತಿದೆ ವಿದ್ಯಾರ್ಥಿ ಭವನ; ಏನೇನು ಬದಲಾಗಿದೆ ನೋಡಿ! - Vistara News

ಕರ್ನಾಟಕ

Vidyarthi Bhavan : ಹೊಸ ಲುಕ್‌ನಲ್ಲಿ ಮಿಂಚುತ್ತಿದೆ ವಿದ್ಯಾರ್ಥಿ ಭವನ; ಏನೇನು ಬದಲಾಗಿದೆ ನೋಡಿ!

Vidyarthi Bhavan: ಬೆಂಗಳೂರಿನ ಜನಪ್ರಿಯ ವಿದ್ಯಾರ್ಥಿ ಭವನ ಈಗ ಹೊಸ ಲುಕ್‌ನೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತಿದೆ. ಹಾಗಿದ್ದರೆ ಏನಾಗಿದೆ ಬದಲಾವಣೆ.

VISTARANEWS.COM


on

Vidyarthi Bhavana
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನ ಐಡೆಂಟಿಟಿ ಎಂಬಂತೆ ಗುರುತಿಸಿಕೊಂಡಿರುವ ಜನಪ್ರಿಯ ಫುಡ್‌ ಜಾಯಿಂಟ್‌ ಗಾಂಧಿ ಬಜಾರ್‌ನ ವಿದ್ಯಾರ್ಥಿ ಭವನ (Vidyarthi Bhavan). ರಾಜಧಾನಿಗೆ ಬಂದವರು ಒಮ್ಮೆಯಾದರೂ ವಿದ್ಯಾರ್ಥಿ ಭವನಕ್ಕೆ ಹೋಗದೆ ಇರುವುದಿಲ್ಲ. ಇಂಥ ಆಕರ್ಷಕ ಹೋಟೆಲ್‌ ಈಗ ಹೊಸ ರೂಪ ಪಡೆದುಕೊಂಡಿದೆ. ತನ್ನ ಪಾರಂಪರಿಕ ಶೈಲಿಯೊಂದಿಗೆ ಗಮನ ಸೆಳೆಯುತ್ತಿರುವ ಈ ರೆಸ್ಟೋರೆಂಟ್‌ ಈಗ ಹೊಸ ವಿನ್ಯಾಸಗಳೊಂದಿಗೆ ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿ ಭವನಕ್ಕೆ ದೊಡ್ಡ ಇತಿಹಾಸವೇ ಇದೆ. 1943ರಲ್ಲಿ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ (Gandhi Bazar in Basavanagudi) ಆರಂಭಗೊಂಡ ಈ ಹೋಟೆಲ್‌ 80 ವರ್ಷಗಳ ಬಳಿಕವೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇದಕ್ಕೆ ಕಾರಣ ಅಲ್ಲಿನ ರುಚಿಕರ ಮಸಾಲೆ ದೋಸೆ (Vidyarthi Bhavan Masala dosa) ಮತ್ತು ಘಮಘಮಿಸುವ ಫಿಲ್ಟರ್‌ ಕಾಫಿ (Vidyarthi Bhavan).

ಉಡುಪಿಯ ವೆಂಕಟರಮಣ ಉರಾಳರು ಸ್ಥಾಪಿಸಿದ ಈ ಹೋಟೆಲ್‌ಗೆ ವಿದ್ಯಾರ್ಥಿ ಭವನ ಎಂಬ ಹೆಸರು ಬರುವುದಕ್ಕೂ ಒಂದು ಒಂದು ಕಥೆ ಇದೆ. ಮೊದಲು ಈ ಹೋಟೆಲ್‌ಗೆ ಹೆಸರು ಇರಲಿಲ್ಲ. ಈ ಭಾಗದಲ್ಲಿ ಶಾಲೆ ಮತ್ತು ಕಾಲೇಜುಗಳು ಇದ್ದಿದ್ದರಿಂದ ವಿದ್ಯಾರ್ಥಿಗಳನ್ನೇ ಟಾರ್ಗೆಟ್‌ ಮಾಡಿ ಈ ಹೋಟೆಲ್‌ ಆರಂಭಿಸಲಾಗಿತ್ತು. ಹೀಗಾಗಿ ವಿದ್ಯಾರ್ಥಿ ಭವನ ಎಂಬ ಹೆಸರು ಇಡಲಾಯಿತು. ಅಲ್ಪ ಕಾಲದಲ್ಲೇ ಜನಪ್ರಿಯತೆಯನ್ನು ಗಳಿಸಿದ ವಿದ್ಯಾರ್ಥಿ ಭವನವನ್ನು ಮುಂದೆ ವೆಂಕಟರಮಣ ಉರಾಳರ ತಮ್ಮ ಪರಮೇಶ್ವರ ಉರಾಳ ಅವರು ಮುಂದುವರಿಸಿದರು.

ಮುಚ್ಚುವ ಹೋಟೆಲ್‌ಗೆ ಜೀವದಾನ ನೀಡಿದ್ದು ನಾರಾಯಣಮೂರ್ತಿ!

ನಿಜವೆಂದರೆ, ಈ ಹೋಟೆಲ್‌ ಇವತ್ತು ಕೂಡಾ ಉಳಿದಿದೆ ಎಂದರೆ ಅದಕ್ಕೆ ಕಾರಣ ಇನ್ಫೋಸಿಸ್‌ ಸ್ಥಾಪಕರಾದ ನಾರಾಯಣ ಮೂರ್ತಿ ಅವರು ಎಂದು ಹೇಳಲಾಗುತ್ತಿದೆ. ಪರಮೇಶ್ವರ ಉರಾಳರು 1970ರಲ್ಲಿ ಈ ಹೋಟೆಲನ್ನು ಕುಂದಾಪುರದ ರಾಮಕೃಷ್ಣ ಅಡಿಗರಿಗೆ ಮಾರಾಟ ಮಾಡಿದ್ದರು. ಮುಂದೆ ಹಲವು ವರ್ಷ ಇದು ಚೆನ್ನಾಗಿಯೇ ನಡೆಯಿತು. ಆದರೆ, ರಾಮಕೃಷ್ಣ ಅಡಿಗರಿಗೆ ವಯಸ್ಸಾದಾಗ ಅದನ್ನು ನೋಡಿಕೊಳ್ಳುವುದು ಕಷ್ಟವಾಯಿತು. ಅವರ ಮಕ್ಕಳು ಒಳ್ಳೆಯ ಉದ್ಯೋಗದಲ್ಲಿದ್ದರು. ಹೀಗಾಗಿ ಈ ಹೋಟೆಲ್‌ನ್ನು ಪಡೆದು ಒಂದು ಕಮರ್ಷಿಯಲ್‌ ಕಾಂಪ್ಲೆಕ್ಸ್‌ ಕಟ್ಟಿಸುವುದು ಉತ್ತಮ ಎಂಬ ಅಭಿಪ್ರಾಯ ಬಂತು. ಆಗ ಅದು ಇನ್ಫೋಸಿಸ್‌ನ ನಾರಾಯಣ ಮೂರ್ತಿ ಅವರ ಕಿವಿಗೆ ಬಿತ್ತು. ನಾರಾಯಣ ಮೂರ್ತಿ ಅವರು ರಾಮಕೃಷ್ಣ ಅಡಿಗರ ಮಗ ಅರುಣ್‌ ಅಡಿಗರ ಜತೆ ಮಾತನಾಡಿ ಹೋಟೆಲ್‌ ಉದ್ಯಮ ಮುಂದುವರಿಸುವಂತೆ ಸಲಹೆ ನೀಡಿದರು ಎನ್ನಲಾಗಿದೆ. ಅದರಂತೆ ಅರುಣ್‌ ಅವರು ತಮ್ಮ ಉದ್ಯೋಗ ಬಿಟ್ಟು ವಿದ್ಯಾರ್ಥಿ ಭವನವನ್ನು ನೋಡಿಕೊಳ್ಳುತ್ತಿದ್ದಾರೆ. ಹೊಸ ಹೊಸ ಅನ್ವೇಷಣೆಗಳ ಮೂಲಕ ಜನಮನ ಗೆಲ್ಲುತ್ತಿದ್ದಾರೆ.

ವಿದ್ಯಾರ್ಥಿ ಭವನದಲ್ಲಿ ಕ್ಯೂನಲ್ಲಿ ನಿಲ್ಲುವುದೇ ಖುಷಿ!

ನಿಜವೆಂದರೆ ವಿದ್ಯಾರ್ಥಿ ಭವನ ಒಂದು ಸಣ್ಣ ಹೋಟೆಲ್‌. ನೀವು ಅಲ್ಲಿ ಒಂದು ದೋಸೆ ತಿನ್ನಬೇಕು ಎಂದರೆ ಅರ್ಧ ಗಂಟೆಯಾದರೂ ಕಾಯಬೇಕು. ಆದರೆ, ಜನರು ಕಾಯುವಿಕೆಯಲ್ಲೇ ಖುಷಿಪಡುತ್ತಾರೆ. ಅದೆಷ್ಟೋ ಸಾಹಿತಿಗಳು, ಸಿನಿಮಾ ನಟ-ನಟಿಯರು, ರಾಜಕಾರಣಿಗಳಿಗೆ ಇದೊಂದು ಫೇವರಿಟ್‌ ತಾಣವಾಗಿ ಮಾರ್ಪಟ್ಟಿದೆ. ಕೆಲವರಿಗೆ ಅಲ್ಲಿಗೆ ಹೋಗಿ ಒಂದು ಫೋಟೊ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಹಾಕುವುದೇ ಘನತೆಯ ಸಂಕೇತ.

ಇಲ್ಲಿ ತುಪ್ಪ, ದೋಸೆ, ಮಸಾಲೆ ದೋಸೆಯಲ್ಲದೆ, ಇಡ್ಲಿ, ಖಾರಾಬಾತ್‌, ಪೂರಿ ಸಾಗು, ರವೆ ವಡೆ, ಕೇಸರಿ ಬಾತ್‌ ಕೂಡಾ ಭಾರಿ ಫೇಮಸ್‌. ಇಲ್ಲಿನ ಫುಡ್‌ಗೆ ಯಾವುದೇ ಕೃತಕ ವಸ್ತುಗಳನ್ನು ಬೆರೆಸುವುದಿಲ್ಲ. ಬೆಣ್ಣೆಯೂ ಶುದ್ಧ, ತುಪ್ಪವೂ ಶುದ್ಧ. ಬೆಣ್ಣೆಯನ್ನು ಹಳ್ಳಿಯ ಭಾಗದಿಂದಲೇ ತರಿಸಲಾಗುತ್ತದೆ. ಹೀಗಾಗಿ ನೀವು ಇಲ್ಲಿ ದೋಸೆ ತಿಂದರೆ ಕೈ ತೊಳೆದರೂ ಪರಿಮಳ ಹಾಗೇ ಇರುತ್ತದೆ.

ಈ ಹೋಟೆಲ್‌ನಲ್ಲಿ ಸರ್ವ್‌ ಮಾಡುವವರು ಒಮ್ಮೆಗೇ 14 ತಟ್ಟೆಗಳನ್ನು ಹಿಡಿದುಕೊಂಡು ಬಂದು ಸರ್ವ್‌ ಮಾಡುವುದು ವಿಶೇಷ. ಅದರ ವಿಡಿಯೋಗಳು ಗಮನ ಸೆಳೆದಿವೆ. ಈ ವಿಡಿಯೊವನ್ನು ಸ್ವತಃ ಉದ್ಯಮಿ ಆನಂದ ಮಹೀಂದ್ರಾ ಅವರೇ ಹಂಚಿಕೊಂಡಿದ್ದರಿಂದ ವಿದ್ಯಾರ್ಥಿ ಭವನ ದೇಶಾದ್ಯಂತ ಮಿರಮಿರ ಮಿಂಚಿತ್ತು.

ಈಗ ನಡೆದಿರುವ ಬದಲಾವಣೆ ಏನು?

ಮೊದಲು ಇಲ್ಲಿ ಅಲ್ಲೇ ತಿನ್ನುವವರಿಗೆ ಮತ್ತು ಪಾರ್ಸೆಲ್‌ಗೆ ಒಂದೇ ಕೌಂಟರ್‌ ಇತ್ತು. ಈಗ ಪಾರ್ಸೆಲ್‌ಗೆ ಪ್ರತ್ಯೇಕ ಕೌಂಟರ್‌ ಮಾಡಲಾಗಿದೆ. ಹೀಗಾಗಿ ಕಾಯುವಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಹೋಟೆಲ್‌ನಲ್ಲಿರುವ ಹೊಸ ಆಕರ್ಷಣೆ ಏನೆಂದರೆ, ಹೋಟೆಲ್‌ನ ಪ್ರವೇಶ ದ್ವಾರದ ಪಕ್ಕದ ಗೋಡೆಯಲ್ಲಿ ಬರೆಯಲಾಗಿರುವ ಆಕರ್ಷಕ ಚಿತ್ರಗಳು. ಕಳೆದ ಕೆಲವು ದಿನಗಳಿಂದ ಟೀಮ್‌ ಇನ್‌ಕ್ರೇಜ್‌ ಎಂಬ ತಂಡ ಹೋಟೆಲ್‌ನ ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸುತ್ತಿತ್ತು, ಅದೀಗ ಪೂರ್ಣಗೊಂಡಿದೆ.

ಈ ಚಿತ್ರಗಳು ಪೂರ್ಣಗೊಂಡಾಗ ಅಲ್ಲಿ ಇಡೀ ಬಸವನ ಗುಡಿಯೇ ಅರಳಿಕೊಂಡಿದೆ. ಬಸವನ ಗುಡಿಯ ಚಾರಿತ್ರಿಕ ಚೆಲುವು, ಈಗಿನ ಬಣ್ಣ, ಬ್ಯೂಗಲ್‌ ರಾಕ್‌ ಬೆಟ್ಟ.. ಹೀಗೆ ಎಲ್ಲವನ್ನೂ ಒಳಗೊಂಡ ದೃಶ್ಯಗಳು ರೇಖಾಚಿತ್ರಗಳಲ್ಲಿ ಜೀವ ತಳೆದಿದೆ. ಇಲ್ಲಿ ಬುಲ್‌ ಟೆಂಪಲ್‌ನ ದೊಡ್ಡ ಗಣೇಶ ಇದ್ದಾನೆ, ಕೆಂಪೇಗೌಡರಿದ್ದಾರೆ, ಕಡಲೆ ಪರಿಷೆ ಸೇರಿದಂತೆ ಸಾಂಸ್ಕೃತಿಕ ಅಸ್ಮಿತೆಗಳಿವೆ.

ಈ ಹೋಟೆಲ್‌ಗೆ ಬಂದು ಹೋದ ದ.ರಾ. ಬೇಂದ್ರೆ, ನಿಸಾರ್‌ ಅಹಮದ್‌ ಸೇರಿದಂತೆ ಹಲವು ಸಾಹಿತಿಗಳ ಚಿತ್ರಗಳಿವೆ.

ನಿಮ್ಮ ಪ್ರತಿಭೆ ಮತ್ತು ಶ್ರದ್ಧೆಗಳು ಹೋಟೆಲ್‌ಗೆ ಹೊಸ ಲವಲವಿಕೆಯನ್ನು ತಂದುಕೊಟ್ಟಿವೆ. ನಮ್ಮ ಪುಟ್ಟ ಜಾಗವನ್ನು ನೀವು ಸಮೃದ್ಧಗೊಳಿಸಿದ್ದೀರಿ. ಆ ಮೂಲಕ ಎಲ್ಲರನ್ನೂ ಇಲ್ಲಿಗೆ ಬರುವಂತೆ ಪ್ರೇರೇಪಿಸುತ್ತಿದ್ದೀರಿ ಎಂದು ವಿದ್ಯಾರ್ಥಿ ಭವನದ ಫೇಸ್‌ಬುಕ್‌ನಲ್ಲಿ ಬರೆಯಲಾಗಿದೆ.

ಇದನ್ನು ಓದಿ: ಒಲಿಂಪಿಕ್ಸ್‌ಗೆ ಸೇರಿಸಿ: ವಿದ್ಯಾರ್ಥಿ ಭವನದ ವೇಯ್ಟರ್‌ ಬಗ್ಗೆ ಆನಂದ್‌ ಮಹೀಂದ್ರ ಟ್ವೀಟ್

ಹಾಗಿದ್ದರೆ ಅಲ್ಲಿಗೆ ಯಾವಾಗ ಹೋಗಬೇಕು?

ಇಷ್ಟೆಲ್ಲ ಕೇಳಿದ ಮೇಲೆ ನಿಮಗೆ ಅಲ್ಲಿಗೊಮ್ಮೆ ಹೋಗಿ ಚಿತ್ರಗಳನ್ನು ನೋಡಬೇಕು, ಒಂದು ದೋಸೆ, ಫಿಲ್ಟರ್‌ ಕಾಫಿ ಕುಡಿಯಬೇಕು ಅನಿಸಿದರೆ ಖಂಡಿತವಾಗಿಯೂ ಹೋಗಿ. ಹೋಗುವ ಮುನ್ನ ಸಮಯ ನೋಡಿಕೊಳ್ಳಿ.

ಸೋಮವಾರದಿಂದ ಗುರುವಾರ: ಬೆಳಗ್ಗೆ 6.30 ರಿಂದ 11.30, ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ
ಶುಕ್ರವಾರ ವಾರದ ರಜಾ ದಿನ
ಶನಿವಾರ ಮತ್ತು ಭಾನುವಾರ: ಬೆಳಗ್ಗೆ 6.30ರಿಂದ 12, ಮಧ್ಯಾಹ್ನ 1.30ರಿಂದ ರಾತ್ರಿ 8
ಅಂದ ಹಾಗೆ ಮಲ್ಲೇಶ್ವರದಲ್ಲೂ ಹೊಸ ಬ್ರಾಂಚ್‌ ಓಪನ್‌ ಆಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಚಿತ್ರದುರ್ಗ

Self Harming: ಪ್ರೀತ್ಸೆ ಅಂತ ಪ್ರಾಣ ತಿಂದ ಯುವಕ; ಕಾಲೇಜು ಕಟ್ಟಡದ ಮೇಲಿಂದು ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

Self Harming: ಯುವಕನ ಕಾಟಕ್ಕೆ ಬೇಸತ್ತ ಯುವತಿಯೊಬ್ಬಳು ಕಾಲೇಜು ಕಟ್ಟದ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

VISTARANEWS.COM


on

By

Self Harming
Koo

ಚಿತ್ರದುರ್ಗ/ ಬೆಂಗಳೂರು: ಕಾಲೇಜು ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿನಿ (Self Harming) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಟ್ಟಡ ಮೇಲಿಂದ ಬಿದ್ದು ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ. ಚಿತ್ರದುರ್ಗ ನಗರದ ಚಿತ್ರಾ ಡಾನ್ ಬೋಸ್ಕೋ ಕಾಲೇಜಲ್ಲಿ ಪ್ರಥಮ ಬಿಎಸ್ಸಿ ಓದುತ್ತಿದ್ದ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟವಳು.

ಚಿತ್ರದುರ್ಗದ ಮೆದೆಹಳ್ಳಿ ನಿವಾಸಿ ಆಗಿದ್ದ ಪ್ರೇಮಾ, ಶುಕ್ರವಾರ ಬೆಳಗ್ಗೆ ಕಾಲೇಜಿಗೆ ಬಂದು ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಬಡಾವಣೆ ಪೊಲೀಸ್ ಠಾಣೆ ಪಿಎಸ್‌ಐ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರೇಮಾಳಿಗೆ ಯುವಕನೊಬ್ಬ ಕಿರುಕುಳ ನೀಡುತ್ತಿದ್ದ ಎನನ್ಲಾಗಿದೆ. ತರುಣ್‌ ಎಂಬಾತ ಪ್ರೀತಿ‌ ಮಾಡುವಂತೆ ಪ್ರೇಮಾಳಿಗೆ ಪೀಡುಸುತ್ತಿದ್ದ ಎನ್ನಲಾಗಿದೆ. ವಾಟ್ಸ್‌ ಆ್ಯಪ್‌ನಲ್ಲಿ ನಿತ್ಯವೂ ಚಾಟಿಂಗ್ ಮಾಡಿ ಕಿರಿಕಿರಿ ಮಾಡುತ್ತಿದ್ದ. ಆತ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ತರುಣ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಕ್ರಾಸ್ ಬಳಿ ನಡೆದಿದೆ. ಇಬ್ರಾಜ್ ಗುರುಂಗ(49) ಆತ್ಮಹತ್ಯೆಗೆ ಶರಣಾದವರು. ಅಸ್ಸಾಂ ಮೂಲದ ಇಬ್ರಾಜ್ ಗುರುಂಗ ಪ್ಯೊಚರ್ ಕಿಚನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂಡ್ಲವಾಡಿ ಬಳಿ ಬಾಡಿಗೆ ಮನೆಯಲ್ಲಿ ಮೂವರು ಸ್ನೇಹಿತರೊಂದಿಗೆ ವಾಸವಿದ್ದರು. ಕಳೆದ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ನೇಹಿತರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆ. ಮೃತದೇಹವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿ ಸಾವು

ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ – ರಾಜಾನುಕುಂಟೆ ರೈಲ್ವೆ ಮಾರ್ಗದ ಮಧ್ಯೆ ಘಟನೆ ನಡೆದಿದೆ. 55 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎನ್ನುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಲಿಸುತ್ತಿದ್ದ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಸಿನಿಮಾ

Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ನಿಧನ

Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

VISTARANEWS.COM


on

By

Actress Amulyas brother film director Deepak aras passes away
Koo

ಬೆಂಗಳೂರು: ನಟಿ ಅಮೂಲ್ಯ ಸಹೋದರ, ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ (46) ಬದುಕಿನ ಪಯಣ ಮುಗಿಸಿದ್ದಾರೆ. ದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದ ದೀಪಕ್ (Deepak Aras) ಶುಕ್ರವಾರ ಬೆಳಗ್ಗೆ 6 ಗಂಟೆಗೆ ನಿಧನರಾಗಿದ್ದಾರೆ. ಮನಸಾಲಜಿ, ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ದೀಪಕ್ ಅರಸ್ ನಿರ್ದೇಶಿಸಿದ್ದರು. 3 ದಿನಗಳಿಂದ ಕೋಮದಲಿದ್ದ ದೀಪಕ್ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಮಲ್ಲೇಶ್ವರಂ ಪೈಪ್ ಲೈನ್ ರಸ್ತೆಯಲ್ಲಿರುವ ಮನೆ ಬಳಿ ದೀಪಕ್ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ದೀಪಕ್ ಸಹೋದರ ಪವನ್ ಮಾಹಿತಿ ನೀಡಿದ್ದಾರೆ. ಅಣ್ಣ ದೀಪಕ್ ಕುರಿತು ನಟಿ ಅಮೂಲ್ಯ ಪೋಸ್ಟ್ ಹಾಕಿದ್ದಾರೆ. ದೀಪಣ್ಣ ಇಂದು ಬೆಳಗ್ಗೆ 6ಗಂಟೆಗೆ ನಮೆಲ್ಲರನ್ನು ಅಗಲಿದ್ದಾರೆ.

ಮದುವೆ ಆಗಿ ಎರಡು ಮಕ್ಕಳಿರುವ ದೀಪಕ್‌ಗೆ ಕಿಡ್ನಿ ಫೆಲ್ಯುರ್‌ ಆಗಿತ್ತು, ಡಯಾಲಿಸಿಸ್ ಮಾಡಿಸುತ್ತಿದ್ದರು. ಆರ್ ಆರ್ ನಗರದಲ್ಲಿರುವ ಬಿಜಿಎಸ್ ಆಸ್ಪತ್ರೆಯಲ್ಲಿ ದೀಪಕ್ ಅರಸ್ ಕೊನೆಯುಸಿರೆಳೆದಿದ್ದಾರೆ.

Continue Reading

ಬೆಂಗಳೂರು

Fraud Case : ಲೋಕಸಭೆ ಚುನಾವಣೆಗೆ ಟಿಕೆಟ್‌ ಕೊಡಿಸುವುದಾಗಿ ಕೋಟಿ ರೂ. ಲೂಟಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರನ ವಿರುದ್ಧ ಎಫ್‌ಐಆರ್‌ ದಾಖಲು

Fraud Case : ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಮಾಜಿ ಶಾಸಕನಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಸಹೋದರ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಕೊಟ್ಟ ಹಣ ಕೇಳಿದರೆ ಹಲ್ಲೆ ಮಾಡಿ, ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ.

VISTARANEWS.COM


on

By

Fraud case Union Minister Pralhad Joshis brother duped of ticket for Lok Sabha polls
ಮಾಜಿ ಶಾಸಕ ದೇವಾನಂದ್ ಚೌಹಾಣ್ ಹಾಗೂ ಗೋಪಾಲ್‌ ಜೋಶಿ
Koo

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಸಹೋದರನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಪ್ರಲ್ಹಾದ ಜೋಶಿ ಸಹೋದರ ಗೋಪಾಲ್‌ ಜೋಶಿ ಎಂಬುವವರು ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಬರೋಬ್ಬರಿ 2 ಕೋಟಿ ರೂ. ವಂಚಿಸಿರುವುದಾಗಿ (Fraud Case) ಎಫ್‌ಐಆರ್‌ ದಾಖಲಾಗಿದೆ. ಗೋಪಾಲ್ ಜೋಶಿ ಸೇರಿದಂತೆ ಸಹೋದರಿ ವಿಜಯಲಕ್ಷ್ಮಿ ಜೋಶಿ, ಪುತ್ರ ಅಜಯ್ ಜೋಶಿ ವಿರುದ್ಧವೂ ಕೇಸ್ ದಾಖಲಾಗಿದೆ.

ಮಾಜಿ ಶಾಸಕ ದೇವಾನಂದ್ ಚೌಹಾಣ್ ಅವರ ಪತ್ನಿ ಸುನೀತಾ ಚೌಹಾಣ್ ಎಂಬುವರಿಂದ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. 2018ರಲ್ಲಿ ನಾಗಠಾಣಾ ಕ್ಷೇತ್ರದಿಂದ ಜೆಡಿಎಸ್‌ (JDS)ದೇವಾನಂದ್ ಚೌಹಾಣ್ ಶಾಸಕರಾಗಿದ್ದರು. 2023ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ದೇವಾನಂದ್ ಚೌಹಾಣ್ ಸೋತಿದ್ದರು. ಬಳಿಕ ಪರಿಚಯಸ್ಥ ಶೇಖರ್ ನಾಯಕ್ ಮೂಲಕ ಗೋಪಾಲ್ ಜೋಶಿ ಪರಿಚಯವಾಗಿದ್ದರು. ಮಾರ್ಚ್ ಮೊದಲ ವಾರ ಹುಬ್ಬಳ್ಳಿಯಲ್ಲಿ ಗೋಪಾಲ್ ಜೋಶಿ ಚೌಹಾಣ್ ದಂಪತಿಯನ್ನು ಭೇಟಿ ಮಾಡಿದ್ದರು. ಈ ವೇಳೆ 2024ರ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿದ್ದರು. ನನ್ನ ತಮ್ಮನಿಗೆ ಕೇಂದ್ರ ಸರ್ಕಾರದಲ್ಲಿ ವರ್ಚಸ್ಸು ಚೆನ್ನಾಗಿದೆ. ಪ್ರಹ್ಲಾದ್ ಜೋಶಿ ಹೇಳಿದಂತೆ ಮೋದಿ, ಅಮಿತ್ ಶಾ ಕೇಳುತ್ತಾರೆ. ಹೀಗಾಗಿ ಬಿಜಾಪುರ ಕ್ಷೇತ್ರದಿಂದ ನಿಮಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿದ್ದರು.

ಗೋಪಾಲ್ ಜೋಶಿ ಟಿಕೆಟ್‌ಗೆ ಬರೋಬ್ಬರಿ 5 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಯಲ್ಲಿಯೇ ಡೀಲ್ ನಡೆದಿತ್ತು. ಆದರೆ 5 ಕೋಟಿ ರೂ.‌ಸಾಧ್ಯವಿಲ್ಲ ಎಂದು ಚೌಹಣ್ ದಂಪತಿ ಹೊರಟು ಹೋಗಿದ್ದರು ಎನ್ನಲಾಗಿದೆ. ಬಳಿಕ ಗೋಪಾಲ್ ಜೋಶಿ ಮತ್ತು ಶೇಖರ್ ಇಬ್ಬರು ಚೌಹಣ್ ದಂಪತಿ ಮನವೊಲಿಸಿದ್ದರು. ಸದ್ಯಕ್ಕೆ 25 ಲಕ್ಷ ರೂ. ಕೊಟ್ಟು ಉಳಿದ ಹಣಕ್ಕೆ ಚೆಕ್ ಕೊಡಿ ಎಂದಿದ್ದರಂತೆ. ಹೀಗಾಗಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಗೋಪಾಲ್ ಜೋಶಿ ಸಹೋದರಿ ವಿಜಯಲಕ್ಷ್ಮಿ ಮನೆಗೆ 25 ಲಕ್ಷ ರೂ. ಹಣವನ್ನು ತಂದು ಸುನೀತಾ ಚೌಹಣ್ ನೀಡಿದ್ದರು. ಆದರೆ ದೇವನಾಂದ್‌ಗೆ ಗೋಪಾಲ್ ಜೋಶಿ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸಲಿಲ್ಲ.

ಸುನೀತಾ ಚೌಹಾಣ್ ತಮ್ಮ 25 ಲಕ್ಷ ರೂ.‌ ಹಣ ನೀಡುವಂತೆ ಕೇಳಿದ್ದಾರೆ. ಹಣ ಕೇಳಿದರೆ 200 ಕೋಟಿ ರೂ. ಪ್ರಾಜೆಕ್ಟ್ ಹಣ ಬರಬೇಕು ಕೊಡುವುದಾಗಿ ಸಬೂಬು ನೀಡಿದ್ದಾರೆ. ಅಷ್ಟಲ್ಲದೇ ಗೋಪಾಲ್ ಜೋಶಿ, ಸುನೀತಾ ಬಳಿ ಮತ್ತೆ 1.75 ಕೋಟಿ ರೂ. ಹಣ ಕೇಳಿದ್ದರು. ಮುಂದಿನ ಚುನಾವಣೆಗೆ ಸಹಾಯ ಮಾಡುವುದಾಗಿ ಹಣ ಕೇಳಿದ್ದರು. ಈ ಮಾತನ್ನು ನಂಬಿ ಮತ್ತೆ 1.75 ಕೋಟಿ ಹಣವನ್ನು ವಿಜಯಲಕ್ಷ್ಮಿಗೆ ಸುನೀತಾ ಚೌಹಣ್ ನೀಡಿದ್ದರು. ಆದರೆ ಹಣ ಕೇಳಿದಾಗ ಸಬೂಬು ಗೋಪಾಲ್, ವಿಜಯಲಕ್ಷ್ಮಿ ಹೇಳುತ್ತಿದ್ದರು.

ಈ ವೇಳೆ ಗೋಪಾಲ್ ಜೋಶಿ ಪುತ್ರ ಅಜಯ್ ಜೋಶಿ ಹಣ ನಾನು ವಾಪಸ್ ಕೊಡುವುದಾಗಿ ಹೇಳಿದ್ದರು. ಆದರೆ ಯಾರು ಕೂಡ ಸುನೀತಾಗೆ ಹಣ ವಾಪಸ್ ನೀಡಿರಲಿಲ್ಲ. ಕಳೆದ ಆ. 1ರಂದು ವಿಜಯಲಕ್ಷ್ಮಿ ಮನೆ ಬಳಿ ಬಂದಿದ್ದ ಸುನೀತಾ, ಹಣ ಕೇಳಿದಾಗ, ಹಲ್ಲೆ ಮಾಡಿ, ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಪೊಲೀಸರ ಮೊರೆ ಹೋಗಿರುವ ಸುನೀತಾ ಚೌಹಣ್ ಬಸವೇಶ್ವರ ನಗರ ಠಾಣೆಯಲ್ಲಿ ವಂಚನೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

Continue Reading

ಗದಗ

Lakshmeshwara Town: ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್; ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಶ್ರೀರಾಮಸೇನೆ ಕರೆ

Lakshmeshwara Town : ನ್ಯಾಯ ಕೇಳಲು ಹೋದ ಗೋಸಾವಿ ಸಮುದಾಯದ ಜನರಿಗೆ ಲಕ್ಷ್ಮೇಶ್ವರ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಲಕ್ಷ್ಮೇಶ್ವರ ಪಿಎಸ್ಐ ಈರಣ್ಣ ರಿತ್ತಿ ಅವರು ಏಕಪಕ್ಷಿಯಗಾಗಿ ನಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಲಾಠಿ ಚಾರ್ಜ್ ಪ್ರಕರಣ ಖಂಡಿಸಿ, ಶ್ರೀರಾಮಸೇನೆ ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಿದ್ದು, ಅಕ್ಟೋಬರ್ 19 ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಮತ್ತಷ್ಟು ಬಿಸಿ‌ ಮುಟ್ಟಿಸಲು ಸಜ್ಜಾಗಿದೆ.

VISTARANEWS.COM


on

By

Gosavi samaj lathicharged Sri Ram Sene calls for bandh in Lakshmeshwara town on October 19
Koo

ಗದಗ: ಲಕ್ಷ್ಮೇಶ್ವರ ಪಟ್ಟಣವನ್ನು (Lakshmeshwara Town) ಬಂದ್‌ ಮಾಡುವುದು ಖಚಿತ ಎಂದು ಶ್ರೀರಾಮ ಸೇನೆ ಪಣ ತೊಟ್ಟಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್ ಪ್ರಕರಣ ಖಂಡಿಸಿ, ಶ್ರೀರಾಮಸೇನೆ ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಿದ್ದು, ಅಕ್ಟೋಬರ್ 19 ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಮತ್ತಷ್ಟು ಬಿಸಿ‌ ಮುಟ್ಟಿಸಲು ಸಜ್ಜಾಗಿದೆ.

ಗುರುವಾರ ಗದಗನ ಪತ್ರಿಕಾ ಭವನದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಶ್ರೀರಾಮಸೇನೆ ರಾಜ್ಯ‌ ಕಾರ್ಯದರ್ಶಿ ರಾಜು ಖಾನಪ್ಪನವರ, ದಸರಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರಿಂದ ಗೋಸಾವಿ ಸಮಾಜದ ಯುವಕರ ಮೇಲೆ ಹಲ್ಲೆಯಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್ ಆಗಿದೆ. ಇದೆಲ್ಲದಕ್ಕೂ‌ ಕಾರಣ, ಠಾಣೆಯ ಪಿಎಸ್ಐ ಈರಣ್ಣ ರಿತ್ತಿ ಆಗಿದ್ದು, ಅವರನ್ನು ಕೂಡಲೇ‌ ಅಮಾನತು ಮಾಡುವಂತೆ ಒತ್ತಾಯಿಸಿದರು.

ಇನ್ನು ಈ ಬಂದ್ ಕರೆ ವಿರೋಧಿಸಿ ಮುಸ್ಲಿಂ ಹಾಗೂ ಹಿಂದೂ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸಿ ವಿರೋಧ ಮಾಡಿದ್ದಾರೆ. ಆದರೆ ಅ.19 ರಂದು ಲಕ್ಷ್ಮೇಶ್ವರ ಬಂದ್ ಮಾಡೋದಕ್ಕೆ ಸ್ಥಳಿಯರೇ ನಮಗೆಲ್ಲ ಬೆಂಬಲ ನೀಡುತ್ತಿದ್ದಾರೆ. ಬಂದ್‌ಗೆ ವಿರೋಧಿಸುತ್ತಿರುವವರು ಯಾರೂ ಸಹ ಸ್ಥಳೀಯ ನಾಯಕರಲ್ಲ. ಅವರೆಲ್ಲ ಗ್ಯಾಂಬ್ಲರ್ ಗಳು. ಇವರು ಮಾಡುವ ದಂಧೆಗೆಲ್ಲ ಪಿಎಸ್ಐ ಈರಣ್ಣ ರಿತ್ತಿ ಬೆಂಬಲ ಇದೆ.‌ ಹೀಗಾಗಿ ಪಿಎಸ್‌ಐ ಪರವಾಗಿ ಇವರೆಲ್ಲ ನಿಂತಿದ್ದಾರೆ.‌ ಅದೇನೆ ಇರಲಿ,‌ ನಾವು ಮಾತ್ರ ಬಂದ್ ಮಾಡುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಿದ್ದರು.

ಏನಿದು ಘಟನೆ?

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ದಸರಾ ಅಂಗವಾಗಿ ದುರ್ಗಾದೇವಿ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯುತ್ತಿತ್ತು. ಗೋಸಾವಿ ಸಮುದಾಯ ಸಂಭ್ರಮ ಸಡಗರದಿಂದ ಭಾಗಿಯಾಗಿದ್ದರು. ಈ ವೇಳೆ ಲಕ್ಷ್ಮೇಶ್ವರ ಪಟ್ಟಣದ ಮಾರ್ಕೆಟ್ ಪ್ರದೇಶದಲ್ಲಿ ಮೆರವಣಿಗೆ ಸಾಗುವ ವೇಳೆ,‌ ಅನ್ಯಕೋಮಿನ ಯುವಕರು ಬಂದು ಮೆರವಣಿಗೆಯಲ್ಲಿ ಭಾಗಿಯಾದ ಗೋಸಾವಿ ಯುವಕರ ನಡುವೆ ಗಲಾಟೆಯಾಗಿದೆ. ಆಗ ಗೋಸಾವಿ ಯುವಕರು ಕೇಸರಿ ಶಾಲನ್ನು ಹಿಡಿದು ಹಲ್ಲೆ ಮಾಡಿದ್ದಾರಂತೆ.

ಹೀಗಾಗಿ ಶನಿವಾರ ತಡವಾಗಿದ್ದಕ್ಕೆ ಮರುದಿನ ರವಿವಾರ, ಹಲ್ಲೆಗೊಳಗಾದ ಯುವಕರು ಹಾಗೂ ಗೋಸಾವಿ ಸಮುದಾಯದ ಜನರು ಲಕ್ಷ್ಮೇಶ್ವರ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಆಗ ಲಕ್ಷ್ಮೇಶ್ವರ ಪೊಲೀಸರು ದೂರು ದಾಖಲು ಮಾಡಿಕೊಳ್ಳದೆ,‌ ಗೋಸಾವಿ ಸಮುದಾಯದ ಮೇಲೆ ಲಾಠಿ ಚಾರ್ಜ್ ಮಾಡಿದ್ದರಂತೆ. ಹೀಗಾಗಿ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ, ಗೋಸಾವಿ ಸಮುದಾಯದವರು ಲಕ್ಷ್ಮೇಶ್ವರ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಲಕ್ಷ್ಮೇಶ್ವರ ಪೊಲೀಸರಿಂದ ನಮಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಒತ್ತಾಯ ಮಾಡಿದ್ದರು. ಇನ್ನು ನ್ಯಾಯ ಕೇಳಲು ಹೋದ ಗೋಸಾವಿ ಸಮುದಾಯದ ಜನರಿಗೆ ಲಕ್ಷ್ಮೇಶ್ವರ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಲಕ್ಷ್ಮೇಶ್ವರ ಪಿಎಸ್ಐ ಈರಣ್ಣ ರಿತ್ತಿ ಅವರು ಏಕಪಕ್ಷಿಯಗಾಗಿ ನಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಲಕ್ಷ್ಮೇಶ್ವರ ಪೊಲೀಸರಿಂದ ನಮಗೆ ಅನ್ಯಾಯವಾಗಿದೆ ಎಂದು ಗದಗ ಎಸ್ಪಿ ಕಚೇರಿಗೆ ಗೋಸಾವಿ ಸಮುದಾಯದ, ಯುವಕರು, ಮಹಿಳೆಯರು, ಹಿರಿಯರು ಆಗಮಿಸಿದ್ದರು.

ನಾವು ಬಡ ಜನರು, ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತೇವೆ. ನಾವು ಹಿಂದೂಗಳು ಹೀಗಾಗಿ ಎಲ್ಲ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ಆದರೆ, ಅನ್ಯಕೋಮಿನ ಯುವಕರು ನಮ್ಮ ಯುವಕರು ಹಾಕಿದ ಕೇಸರಿ ಶಾಲ್ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಆದರೆ ಹಲ್ಲೆ‌ಗೊಳಗಾದವರು ನ್ಯಾಯ ಕೇಳಲು ಹೋದರೆ ಅವರ ಮೇಲೆಯೇ ಲಾಠಿ ಚಾರ್ಜ್ ಮಾಡಿದ್ದಾರೆ. ಯುವಕರು, ಮಹಿಳೆಯರಿಗೆ ಏಟು ಬಿದ್ದಿವೆ. ನಮಗೆ ನ್ಯಾಯ ಕೊಡಿಸಿ ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯ ಮಾಡಿದ್ದರು.

ಆದರೆ ಪೊಲೀಸರ ಹೇಳಿಕೆ‌ ಪ್ರಕಾರ, ಠಾಣೆ ಎದುರು ಗುಂಪು ಚದುರಿಸುವ ಸಲುವಾಗಿ, ಲಾಠಿ ಚಾರ್ಜ್ ಮಾಡಲಾಗಿದೆ ಎಂದು ವಾದಿಸಿದ್ದಾರೆ. ಸದ್ಯ ಎರಡು ಕಡೆ ದೂರು- ಪ್ರತಿದೂರು ದಾಖಲಿಸಿಕೊಂಡು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಮುಂದುವರೆದ ಭಾಗವಾಗಿ, ಅ.19 ರಂದು ಶ್ರೀರಾಮಸೇನೆ ಸಂಘಟನೆ, ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಕರೆ ನೀಡಿದೆ.

Continue Reading
Advertisement
Self Harming
ಚಿತ್ರದುರ್ಗ2 ಗಂಟೆಗಳು ago

Self Harming: ಪ್ರೀತ್ಸೆ ಅಂತ ಪ್ರಾಣ ತಿಂದ ಯುವಕ; ಕಾಲೇಜು ಕಟ್ಟಡದ ಮೇಲಿಂದು ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

Actress Amulyas brother film director Deepak aras passes away
ಸಿನಿಮಾ4 ಗಂಟೆಗಳು ago

Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ನಿಧನ

Fraud case Union Minister Pralhad Joshis brother duped of ticket for Lok Sabha polls
ಬೆಂಗಳೂರು4 ಗಂಟೆಗಳು ago

Fraud Case : ಲೋಕಸಭೆ ಚುನಾವಣೆಗೆ ಟಿಕೆಟ್‌ ಕೊಡಿಸುವುದಾಗಿ ಕೋಟಿ ರೂ. ಲೂಟಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರನ ವಿರುದ್ಧ ಎಫ್‌ಐಆರ್‌ ದಾಖಲು

Dina bhavishya
ಭವಿಷ್ಯ11 ಗಂಟೆಗಳು ago

Dina Bhavishya : ಅತಿಯಾದ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಪಿತೂರಿ ಮಾಡುವ ಜನರ ಬಗ್ಗೆ ಇರಲಿ ಎಚ್ಚರ

Gosavi samaj lathicharged Sri Ram Sene calls for bandh in Lakshmeshwara town on October 19
ಗದಗ1 ದಿನ ago

Lakshmeshwara Town: ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್; ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಶ್ರೀರಾಮಸೇನೆ ಕರೆ

A man killed his wife and her lover then committed suicide
ಬೆಂಗಳೂರು1 ದಿನ ago

Murder Case: ಪ್ರಿಯಕರ ಜತೆ ಏಕಾಂತದಲ್ಲಿ ಇರುವಾಗಲೆ ಪತ್ನಿ ಲಾಕ್‌; ಇಬ್ಬರನ್ನು ಕೊಂದು ಪತಿ ಸೂಸೈಡ್‌

Parvati Nair to play dual role in suspense thriller un Paravail Tamil film
ಸಿನಿಮಾ1 ದಿನ ago

Parvati Nair : ಸಸ್ಪೆನ್ಸ್ ಥ್ರಿಲ್ಲರ್‌ ʻಊಣ್‌ ಪರವೈಲ್‌ʼ ತಮಿಳು ಚಿತ್ರದಲ್ಲಿ ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಮಿಂಚಿಂಗ್‌

ಬೆಂಗಳೂರು1 ದಿನ ago

Bengaluru Airport : ಬೆಂಗಳೂರು ಏರ್‌ಪೋರ್ಟ್‌ನ 17.7 ಎಕರೆಗಳಲ್ಲಿ ತಲೆ ಎತ್ತಲಿದೆ ಬಿಸಿನೆಸ್‌ ಪಾರ್ಕ್‌

Jio Cloud PC to turn home TV into computer
ಹೊಸ ಸುದ್ದಿ1 ದಿನ ago

Jio Cloud PC : ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲಿದೆ ‘ಜಿಯೋ ಕ್ಲೌಡ್ ಪಿಸಿ’

Dina Bhavishya
ಭವಿಷ್ಯ1 ದಿನ ago

Dina Bhavishya : ಕುಟುಂಬದ ಸದಸ್ಯರಿಂದ ರಹಸ್ಯ ಸುದ್ದಿಯೊಂದು ಈ ರಾಶಿಯವರಿಗೆ ಅಚ್ಚರಿ ತರಲಿದೆ

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌