Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ Vistara News

ಕಲೆ/ಸಾಹಿತ್ಯ

Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ

Yakshagana Show: ಮದರ್‌ ಫೌಂಡೇಶನ್‌ ಅರ್ಪಿಸುವ ಯಕ್ಷನೂಪುರ ʼರಾಜಾ ತ್ರೀʼ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್‌ ಚಾನೆಲ್‌ ಮಾಧ್ಯಮ ಸಹಯೋಗ ನೀಡಿದೆ.

VISTARANEWS.COM


on

Raja Three yakshagana
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್‌ ಭಟ್‌ ಜಕ್ಕೂರು ಅವರ ಸಂಯೋಜನೆಯಲ್ಲಿ ಜಲವಳ್ಳಿ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅಕ್ಟೋಬರ್‌ 7ರಂದು ರಾತ್ರಿ 9.30ಕ್ಕೆ ನಗರ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ, ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನ ಹಾಗೂ ಅಜ್ಞಾನ ಕವಿ ವಿರಚಿತ ʼರಾಜಾ ಉರಗಕೇತನʼ ಯಕ್ಷಗಾನ ಪ್ರಸಂಗ (Yakshagana Show) ಪ್ರದರ್ಶನವಾಗಲಿದೆ.

ಮದರ್‌ ಫೌಂಡೇಶನ್‌ ಅರ್ಪಿಸುವ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್‌ ಚಾನೆಲ್‌ ಮಾಧ್ಯಮ ಸಹಯೋಗ ನೀಡಿದೆ.

ಕೊಳಗಿ, ಜನ್ಸಾಲೆ, ಮೂಡುಬೆಳ್ಳೆ, ಬ್ರಹ್ಮೂರು ಅವರ ಗಾನ ರಸಧಾರೆ, ಅನಿರುದ್ಧ್‌, ಶಶಾಂಕ್‌, ಶ್ರೀನಿವಾಸ್‌ ಪ್ರಭು, ಸುಜನ್‌ ಹಾಗೂ ಅರುಣ ಅವರ ಚಂಡೆ ಮದ್ದಳೆಯ ಜೇಂಕಾರದಲ್ಲಿ ʼರಾಜಾ ತ್ರೀʼ ಪ್ರದರ್ಶನ ಮೂಡಿಬರಲಿದೆ.

ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ ಪ್ರಸಂಗದಲ್ಲಿ ತಾಮ್ರಧ್ವಜನಾಗಿ ವಿದ್ಯಾಧರ್‌ ಜಲವಳ್ಳಿ, ಮಯೂರಧ್ವಜನಾಗಿ ಮಂಕಿ ಈಶ್ವರ್‌ ನಾಯ್ಕ, ಕೃಷ್ಣನಾಗಿ ನಿಲ್ಕೋಡು ಶಂಕರ ಹೆಗಡೆ, ಅರ್ಜುನನಾಗಿ ಹೆನ್ನಾಬೈಲ್‌ ವಿಶ್ವನಾಥ್‌, ಹಾಸ್ಯ ಪಾತ್ರಗಳಲ್ಲಿ ರಮೇಶ್‌ ಭಂಡಾರಿ, ಸಿತಾರಾಮ ಕುಮಾರ್‌ ಅಭಿನಯಿಸಲಿದ್ದಾರೆ.

ಇದನ್ನೂ ಓದಿ | ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!

ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನʼ ಪ್ರದರ್ಶನದಲ್ಲಿ ಕಂಸನಾಗಿ ತೀರ್ಥಹಳ್ಳಿ ಗೋಪಾಲಾಚಾರ್‌, ಉಗ್ರಸೇನಾ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ್‌, ರುಚಿಮತಿಯಾಗಿ ಸಂತೋಷ್‌ ಹಿಲಿಯಾಣ, ದೂತನಾಗಿ ಸೀತಾರಾಮ್‌ ಕುಮಾರ್‌, ಬ್ರಾಹ್ಮಣನಾಗಿ ಶ್ರೀಧರ್‌ ಕಾಸರಕೋಡು, ಮಾಗಧ ಆಗಿ ನಾಗರಾಜ ಭಂಡಾರಿ, ಆಸ್ತೀಯಾಗಿ ಉದಯ ಕಡಬಾಳ್‌, ಪಾಸ್ತಿಯಾಗಿ ಹರೀಶ್‌ ಜಪ್ತಿ, ದೃಮಿಳ ಆಗಿ ಕಾರ್ತಿಕ್‌ ಕಣ್ಣಿ ಬಣ್ಣ ಹಚ್ಚಲಿದ್ದಾರೆ.

ಅಜ್ಞಾತ ಕವಿ ವಿರಚಿತ ʼʼರಾಜಾ ಉರಗಕೇತನʼ ಯಕ್ಷಗಾನದಲ್ಲಿ ರಾಜೇಶ್‌ ಭಂಡಾರಿ, ಪ್ರಕಾಶ್‌ ಕಿರಾಡಿ, ವಿಶ್ವನಾಥ್‌ ಹೆನ್ನಾಬೈಲ್‌ ಅವರು (ಕೌರವ, ಭೀಮ, ಕೃಷ್ಣ ಪಾತ್ರದಲ್ಲಿ), ವಿನಾಯಕ ಗುಂಡುಬಾಳ, ಕಾರ್ತಿಕ್‌ ಹೆಗಡೆ, ಶ್ರೀಕಾಂತ್‌ ರಟ್ಟಾಡಿ, ನಾಗರಾಜ್‌ ದೇವಲ್ಕುಂದ ಪ್ರಮುಖ ಪಾತ್ರಗಳಲ್ಲಿ ರಂಜಿಸಲಿದ್ದಾರೆ.

ಪ್ರವೇಶ ದರ ಇರಲಿದ್ದು, ಮುಂಗಡ ಟಿಕೆಟ್‌ ಬುಕಿಂಗ್‌ಗಾಗಿ ರಾಜ್‌ ಭಟ್‌ ಮೊ.9019776411 ಸಂಪರ್ಕಿಸಿ.

ರಾಜ್‌ ಭಟ್‌ ಜಕ್ಕೂರು ಅವರು ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರಿಗೆ ಯಕ್ಷನೂಪುರ ರಾಜಾ ತ್ರೀ ಪ್ರದರ್ಶನ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನ ನೀಡಿದರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Shirshendu Mukhopadhyay: ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಶೀರ್ಷೇಂಧು ಮುಖ್ಯೋಪಾಧ್ಯಾಯ ಆಯ್ಕೆ

Shirshendu Mukhopadhyay: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ನೀಡುವ 2023ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಬಂಗಾಳಿಯ ಸುಪ್ರಸಿದ್ಧ ಬರಹಗಾರ ಶೀರ್ಷೇಂಧು ಮುಖ್ಯೋಪಾಧ್ಯಾಯ ಆಯ್ಕೆಯಾಗಿದ್ದಾರೆ.

VISTARANEWS.COM


on

Shirshendu Mukhopadhyay
Koo

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ನೀಡುವ ʼಕುವೆಂಪು ರಾಷ್ಟ್ರೀಯ ಪುರಸ್ಕಾರ-2023ʼ ಕ್ಕೆ ಬಂಗಾಳಿ ಭಾಷೆಯ ಸುಪ್ರಸಿದ್ಧ ಬರಹಗಾರರಾದ ಶೀರ್ಷೇಂಧು ಮುಖ್ಯೋಪಾಧ್ಯಾಯ (Shirshendu Mukhopadhyay) ಆಯ್ಕೆ ಆಗಿದ್ದಾರೆ. ನವೆಂಬರ್ 17ರಂದು ಬೆಂಗಳೂರಿನಲ್ಲಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿ ಸಭೆಯಲ್ಲಿ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಪ್ರತಿಷ್ಠಾನದ ಸಹಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸಂಚಾಲಕರಾಗಿದ್ದ ಆಯ್ಕೆ ಸಮಿತಿಯಲ್ಲಿ ನಿರ್ಮಲ್ ಕಾಂತಿ ಭಟ್ಟಾಚಾರ್ಯ, ಗೀತಾ ವಿಜಯಕುಮಾರ್ ಹಾಗೂ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿಗಳಾದ ಅಗ್ರಹಾರ ಕೃಷ್ಣಮೂರ್ತಿಯವರು ತೀರ್ಪುಗಾರರಾಗಿದ್ದರು.

ಬಂಗಾಳಿ ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ ಮಹತ್ವದ ಕೃತಿಗಳ ಮೂಲಕ ಹೆಚ್ಚಿಸಿದ, ವರ್ತಮಾನದ ಬಹು ಮಹತ್ವದ ಮತ್ತು ಜನಪ್ರಿಯ ಲೇಖಕರಾದ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರನ್ನು 2023ರ “ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇದನ್ನೂ ಓದಿ | Raja Marga Column: ಇವರು ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ; 511 ಪುಸ್ತಕ, 19 ಮಹಾಕಾವ್ಯ!

ಜನಪ್ರಿಯ ಬರಹಗಾರರಾಗಿರುವ ಶೀರ್ಷೇಂಧು ಅವರು ತಮ್ಮ ಹೊಸತನದ ಬರವಣಿಗೆಗಳಿಂದ ಬಂಗಾಳಿ ಭಾಷಾ ಸಾಹಿತ್ಯವನ್ನೂ, ತನ್ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಥೆ, ಕಾದಂಬರಿ, ಪ್ರವಾಸಕಥನ. ಮಕ್ಕಳ ಪುಸ್ತಕಗಳು ಸೇರಿ ಸುಮಾರು 90 ಕೃತಿಗಳು ಇದುವರೆಗೆ ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನವೂ ಸೇರಿದಂತೆ ಹಲವಾರು ಪುರಸ್ಕಾರಗಳು ಶೀರ್ಷೇಂಧು ಅವರಿಗೆ ದೊರೆತಿವೆ.

ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನವಾದ ಡಿಸೆಂಬರ್‌ 29ರಂದು ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ’ವನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಐದು ಲಕ್ಷ ರೂಪಾಯಿ ಮತ್ತು ಬೆಳ್ಳಿ ಪದಕಗಳನ್ನು ಒಳಗೊಂಡಿರುತ್ತದೆ.

ಶೀರ್ಷೇಂಧು ಮುಖ್ಯೋಪಾಧ್ಯಾಯ ಪರಿಚಯ

ಬಂಗಾಳಿ ಭಾಷೆಯ ಮಹತ್ವದ ಕಥೆಗಾರರಾದ ಶೀರ್ಷೇಂದು ಮುಖ್ಯೋಪಾಧ್ಯಾಯ ಅವರು, ಬ್ರಿಟಿಷ್ ಇಂಡಿಯಾದ (ಪ್ರಸ್ತುತ ಬಾಂಗ್ಲಾದೇಶದ) ಮೈಮೆನ್ಸಿಂಗ್ ಎಂಬಲ್ಲಿ 1935ರ ನವೆಂಬರ್ 9ರಂದು ಜನಿಸಿದರು. ಭಾರತ ವಿಭಜನೆಯ ಸಂದರ್ಭದಲ್ಲಿ ಅವರ ಕುಟುಂಬ ಕೋಲ್ಕತ್ತಾಗೆ ವಲಸೆ ಬಂದಿತ್ತು. ಆಗ ಶೀರ್ಷೇಂಧು 2 ವರ್ಷದ ಬಾಲಕ. ಅವರ ತಂದೆ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರಿಂದ, ಶೀರ್ಷೇಂಧು ಅವರ ಬಾಲ್ಯ ಮತ್ತು ಪ್ರಾರಂಭದ ಶಿಕ್ಷಣ ಅವಿಭಜಿತ ಬಂಗಾಳ, ಅಸ್ಸಾಂ ಮತ್ತು ಬಿಹಾರದಲ್ಲಿ ಕಳೆಯಿತು. ಕೂಚ್‌ಬಿಹಾರ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ ಇಂಟರ್‌ಮಿಡಿಯೇಟ್ ಪಾಸಾದ ಅವರು, ಕೋಲ್ಕೊತಾ ವಿಶ್ವವಿದ್ಯಾಲಯದಿಂದ ಬಂಗಾಳಿ ಭಾಷೆಯಲ್ಲಿ ಸ್ನಾತಕ ಪದವಿ ಪಡೆದರು.

ಶಾಲಾಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಶೀರ್ಷೇಂಧು ಅವರು, ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. ‘ದೇಶ್’ ಎಂಬ ಬಂಗಾಳಿ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಈಗಲೂ ಆನಂದ ಬಜಾರ್ ಪತ್ರಿಕೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. 1959ರಲ್ಲಿ ಶೀರ್ಷೇಂಧು ಅವರ ಮೊದಲ ಕಥೆ ‘ದೇಶ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅವರ ಮೊದಲ ಕಾದಂಬರಿ ಘುನ್ಫೋಕ (Ghunpoka) 1967ರಲ್ಲಿ ದೇಶ್ ಪತ್ರಿಕೆಯ ‘ಪೂಜಾ’ ವಾರ್ಷಿಕ ಸಂಪುಟದಲ್ಲಿ ಪ್ರಕಟವಾಗಿತ್ತು. ಮೊದಲ ಮಕ್ಕಳ ಪುಸ್ತಕ ಮನೋಜ್‌ದೇರ್ ಅದ್ಭುತ್ ಬಾರಿ (Manojader Adbhut Bari) 1978ರಲ್ಲಿ ಪ್ರಕಟವಾಯಿತು. ಬರಹಗಾರರಾಗಿ ಜನಪ್ರಿಯರಾಗಿರುವ ಶೀರ್ಷೇಂಧು ಅವರು, ಇಲ್ಲಿಯವರೆಗೆ 90ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 50 ಕೃತಿಗಳು ಮಕ್ಕಳಿಗಾಗಿ ಬರೆದ ಪುಸ್ತಕಗಳೇ ಆಗಿರುವುದು ವಿಶೇಷ.

ಇವರ ಹಲವಾರು ಕತೆಗಳು, ಮಕ್ಕಳಿಗಾಗಿ ಕಾಮಿಕ್ ರೂಪದಲ್ಲಿ ಪ್ರಕಟವಾಗಿವೆ. ಜೊತೆಗೆ, ಹೊಸತಲೆಮಾರಿನ ಓದುಗರಿಗೆ ಸುಲಭವಾಗಿ ಲಭ್ಯವಾಗುವಂತೆ ಇವರ ಹಲವಾರು ಕತೆ ಕಾದಂಬರಿಗಳು ಈ ಪುಸ್ತಕಗಳಾಗಿಯೂ ಆನ್‌ಲೈನ್‌ನಲ್ಲಿ ಲಭ್ಯವಿವೆ. ಆದ್ದರಿಂದ ಬಂಗಾಳಿಯಲ್ಲಿ ಶೀರ್ಷೇಂದು ಅವರು ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಚಿರಪರಿಚಿತರಾಗಿರುವ ಅತ್ಯಂತ ಜನಪ್ರಿಯ ಲೇಖಕ ಎನ್ನಬಹುದು.

ಪಾರ್ತಿಬೊ (Parthibo), ನಯನ್‌ ಶ್ಯಾಮ್ (Nayan Shyama), ಪರಪರ್ (Parapar), ದುರ್ಬೀನ್ (Durbin), ಏಕಾದಶಿ ಓ ಭೂತ್ (Ekadashi O Bhoot) ಮೊದಲಾದ ಕೃತಿಗಳು ಅವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟಿವೆ. ಭ್ರಮಣ್ ಸಮಗ್ರ (BHRAMAN SAMAGRA) ಅವರ ಪ್ರವಾಸ ಕಥನ, ಬಂಗಾಳಿಯಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಕೃತಿಯೂ ಹೌದು.

ಇವರ ಕತೆಗಳ ಗಟ್ಟಿತನದಿಂದಾಗಿ, ಸಿನಿಮಾ ಕ್ಷೇತ್ರದ ಸಂಪರ್ಕವೂ ಅನಾಯಾಸವಾಗಿ ದೊರೆತಿರುತ್ತದೆ. 1992ರಲ್ಲಿ ರಿತುಪರ್ಣೋ ಅವರ ನಿರ್ದೇಶನದಲ್ಲಿ ತಯಾರಾಗಿ ಬಿಡುಗಡೆಯಾದ, ಶೀರ್ಷೇಂಧು ಅವರ ಹೈರೇರ್ ಅಂಗ್ತಿ (Hirer Angti ) ಕಥೆಯಾಧಾರಿತ, ಅದೇ ಹೆಸರಿನ ಸಿನಿಮಾದಿಂದ ಪ್ರಾರಂಭಿಸಿ, ಇದುವರೆಗೆ 17 ಸಿನಿಮಾಗಳು ಇವರ ಕಥೆ-ಕಾದಂಬರಿಯನ್ನು ಆಧರಿಸಿ ಬಂದಿವೆ. ಬಹುತೇಕ ಬಂಗಾಳಿಯ ಎಲ್ಲ ಪ್ರಮುಖ ಸಿನಿಮಾ ನಿರ್ದೇಶಕರೂ ಇವರ ಕಥೆ ಕಾದಂಬರಿಗಳನ್ನು ಆಧರಿಸಿ ಸಿನಿಮಾ ಮಾಡಿರುವುದು ವಿಶೇಷ.

ಇದನ್ನೂ ಓದಿ | Mallepuram G Venkatesh: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಆತ್ಮಕಥನ ʼದಿಟದ ದೀವಟಿಗೆʼ ಲೋಕಾರ್ಪಣೆ

ಜನಪ್ರಿಯ ಕತೆಗಾರರಾಗಿರುವ ಶೀರ್ಷೇಂಧು ಅವರನ್ನು ಸಹಜವಾಗಿ ಹಲವಾರು ಸಾಹಿತ್ಯ ಪುರಸ್ಕಾರಗಳೂ ಹುಡುಕಿಕೊಂಡು ಬಂದಿವೆ. ಮುಖ್ಯವಾಗಿ, ಮಕ್ಕಳ ಸಾಹಿತ್ಯಕ್ಕಾಗಿ ವಿದ್ಯಾಸಾಗರ ಪುರಸ್ಕಾರ (1985), ಎರಡು ಬಾರಿ ಆನಂದ ಪುರಸ್ಕಾರ (1973 ಮತ್ತು 1990), ಮನಬ್ಜಮಿನ್ (Manahjamin) ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿ ಬಹುಮಾನ (19689), ಬಂಗಬಿಭೂಷಣ್ ಪ್ರಶಸ್ತಿ (2012), ಎ.ಬಿ.ಪಿ. ಆನಂದ ಸೆರ ಬಂಗಾಳಿ ಪ್ರಶಸ್ತಿ ಮೊದಲಾದವು ಸೇರಿವೆ. ಇದಲ್ಲದೆ. 2021ರಲ್ಲಿ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಕೂಡಾ ದೊರೆತಿರುತ್ತದೆ. ಅಶೋಕ್ ವಿಶ್ವನಾಥನ್‌ ಎಂಬುವವರು, ಸಾಹಿತ್ಯ ಅಕಾಡೆಮಿಗಾಗಿ ಶೀರ್ಷೇಂದು ಮುಖ್ಯೋಪಾಧ್ಯಾಯ್ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ.

Continue Reading

ಕಲೆ/ಸಾಹಿತ್ಯ

Mallepuram G Venkatesh: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಆತ್ಮಕಥನ ʼದಿಟದ ದೀವಟಿಗೆʼ ಲೋಕಾರ್ಪಣೆ

Mallepuram G Venkatesh: ಬೆಂಗಳೂರಿನ ಗಾಂಧಿಭವನದ ಸಭಾಂಗಣದಲ್ಲಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಅವರ ಆತ್ಮಕಥನ ʼದಿಟದ ದೀವಟಿಗೆʼ ಕೃತಿಯನ್ನು ಬಿಡುಗಡೆ ಮಾಡಲಾಯಿತು.

VISTARANEWS.COM


on

Mallepuram g venkateshs autobiography
Koo

ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ (Mallepuram G Venkatesh) ಅವರ ಆತ್ಮಕಥನ ʼದಿಟದ ದೀವಟಿಗೆʼ ಗ್ರಂಥ ಭಾನುವಾರ ಲೋಕಾರ್ಪಣೆಗೊಂಡಿತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಅಂಕಿತ ಪುಸ್ತಕ ಸಹಯೋಗದಲ್ಲಿ ಗಾಂಧಿಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಅವರು ʼದಿಟದ ದೀವಟಿಗೆʼ ಕೃತಿಯನ್ನು ಬಿಡುಗಡೆ ಮಾಡಿದರು.

ಈ ವೇಳೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಅವರು ಮಾತನಾಡಿ, ಆತ್ಮಕಥೆ ಎನ್ನುವುದು ಇತಿಹಾಸ, ಪ್ರವಾಸಕಥನವಾದರೆ ಅಲ್ಲಿ ವ್ಯಕ್ತಿ ಮರೆಯಾಗುತ್ತಾನೆ. ಸಾಹಿತ್ಯದ ಗದ್ಯ ಕೃತಿಯಾದರೆ ಅದು ಕಲ್ಪನಾ ಲೋಕದ ಗದ್ಯ ಕೃತಿಯಾಗಲಿದೆ. ಆದ್ದರಿಂದ ಆತ್ಮಕಥೆಗಳು ನೈಜತೆಯಿಂದ ಕೂಡಿರಬೇಕು. ಬಹಳಷ್ಟು ಜನ ಆತ್ಮಕಥೆಯ ಹೆಸರಿನಲ್ಲಿ ಸ್ವಗತವನ್ನು ಬರೆಯುತ್ತಾರೆ. ಆತ್ಮಕಥೆಯಲ್ಲಿ ಸ್ವ ಮತ್ತು ಅಹಂ ಇದ್ದರೆ ಅದು ಅಹಂಕಥನವಾಗುತ್ತದೆ. ಆತ್ಮಕಥೆ ಬರೆಯಬೇಕಾದರೆ ಮೊದಲು ಆ ವ್ಯಕ್ತಿಯೇ ಅದಕ್ಕೆ ಸಾಕ್ಷಿಯಾಗಬೇಕು. ಏಕೆಂದರೆ ತಾನು ಲೇಖಕನಾಗಿ ತನ್ನನ್ನು ತಾನು ಕಾಣದೇ ಒಬ್ಬ ಸಾಕ್ಷಿಯಾಗಿ ತನ್ನ ಜೀವನವನ್ನು ನೋಡಬೇಕಾಗುತ್ತದೆ. ಇಂತಹ ವಿಚಾರವನ್ನು ನಾನು ಮಲ್ಲೇಪುರಂ ಅವರ ಆತ್ಮಕಥೆಯಲ್ಲಿ ಕಂಡಿದ್ದೇನೆ ಎಂದರು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

ವಿಶ್ರಾಂತ ಕುಲಪತಿ, ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಅವರು ಮಾತನಾಡಿ, ʼದಿಟದ ದೀವಟಿಗೆ’ ಆತ್ಮಕಥೆಯಲ್ಲಿ ಎಲ್ಲೂ ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ಬರೆದಿಲ್ಲ. ನನ್ನ ಜೀವನದಲ್ಲಿ ಮೂರ್ನಾಲ್ಕು ಮಂದಿ ಬಹಳಷ್ಟು, ನೋವು, ಸಂಕಷ್ಟಗಳನ್ನು ಕೊಟ್ಟಿದ್ದರು. ಹೀಗಾಗಿ ಈ ಜೀವನವೇ ಬೇಡ ಅನಿಸಿದ್ದೂ ಇದೆ. ಆದರೆ ಅದ್ಯಾವುದನ್ನು ಕೂಡ ಆತ್ಮಕಥೆಯಲ್ಲಿ ಬರೆದುಕೊಂಡಿಲ್ಲ. ಗುರುಬಲ ಮತ್ತು ಮಿತ್ರ ಬಲದಿಂದ ಎಲ್ಲ ಸಂಕಷ್ಟಗಳನ್ನು ಗೆದ್ದಿದ್ದೇನೆ’ ಎಂದರು.

ನನ್ನ ಎಲ್ಲಾ ಸಾಹಿತ್ಯ ಸೇವೆಯಲ್ಲಿಯೂ ಹಲವಾರು ಸಾಹಿತ್ಯಕ ಗೆಳೆಯರ ಬೆಂಬಲವಿದೆ. ‘ದಿಟದ ದೀವಟಿಗೆ’ ಆತ್ಮಕಥನವನ್ನು ಹೊರತರಲು ಬಹಳಷ್ಟು ಮಂದಿ ಪ್ರೋತ್ಸಾಹವನ್ನು ನೀಡಿದ್ದಾರೆ. ಅನಾದಿಕಾಲದ ಗುರುಗಳಿಂದ ಹಿಡಿದು ಇತ್ತೀಚಿನ ಬರಹಗಾರರು ನನಗೆ ಪ್ರೀತಿಯನ್ನು ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಅವರೆಲ್ಲರಿಗೂ ನಾನು ಕೃತಜ್ಞತೆ ತಿಳಿಸುತ್ತೇನೆ ಎಂದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವೂಡೇ ಪಿ. ಕೃಷ್ಣ ಅವರು, ಮಾತನಾಡಿ. ತಮ್ಮ ಜತೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಮನಸ್ಥಿತಿ ಮಲ್ಲೇಪುರಂ ಅವರದ್ದು. ತಾನು ಬೆಳೆಯುದರ ಜತೆಗೆ ಇತರರನ್ನು ಬೆಳೆಸುವ ಪ್ರವೃತ್ತಿಯನ್ನು ಅವರು ಹೊಂದಿದ್ದಾರೆ. ಇಂದಿನ ಈ ಕಾರ್ಯಕ್ರಮವು ರಾಜ್ಯಮಟ್ಟದ ಕಾರ್ಯಕ್ರಮವಾಗಿ ಹೊರಮ್ಮುತ್ತಿದ್ದು, ಬಹಳಷ್ಟು ಖುಷಿ ತಂದಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ವಿದ್ವಾಂಸ ಎ.ವಿ. ಪ್ರಸನ್ನ, ಕಾದಂಬರಿಕಾರ ಕು. ವೀರಭದ್ರಪ್ಪ, ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಮುಂತಾದವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ | Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್, ಅಖಿಲ ಕರ್ನಾಟಕ ಕೊರಮ ಸಂಘದ ಅಧ್ಯಕ್ಷ ಜಿ. ಮಾದೇಶ, ವಿಸ್ತಾರ ನ್ಯೂಸ್‌ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿರಣ್‌ಕುಮಾರ್ ಡಿ.ಕೆ ಮತ್ತಿತರರು ಉಪಸ್ಥಿತರಿದ್ದರು.

Continue Reading

ಅಂಕಣ

Raja Marga Column: ಇವರು ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ; 511 ಪುಸ್ತಕ, 19 ಮಹಾಕಾವ್ಯ!

Raja Marga Column: ಅವರೊಬ್ಬ ಆಯುರ್ವೇದಿಕ್‌ ಡಾಕ್ಟರ್‌. ಅವರು ಬರೆದಿದ್ದು 511 ಪುಸ್ತಕ, 19 ಮಹಾಕಾವ್ಯ ಬರೆದಿದ್ದಾರೆ. ಅವರು ಇಷ್ಟೊಂದು ಹೇಗೆ ಬರೆದರು ಎಂಬ ಕುತೂಹಲವೇ? ಇಲ್ಲಿದೆ ಪೂರ್ಣ ವಿವರ.

VISTARANEWS.COM


on

Dr Pradeep Kumar Hebri Raja Marga Column
Koo
RAJAMARGA Rajendra Bhat

ಕನ್ನಡದ ಒಬ್ಬ ಲೇಖಕ -511 ಪುಸ್ತಕಗಳು -19 ಮಹಾಕಾವ್ಯಗಳನ್ನು ಬರೆದಿದ್ದಾರೆ (He written 511 Books, 19 Mahakavyas!) ಎಂದರೆ ನಂಬತ್ತೀರಾ? ನಾನು ಖಂಡಿತವಾಗಿಯೂ ಹೇಳಬಲ್ಲೆ. ಇಷ್ಟೊಂದು ವಿಸ್ತಾರವಾಗಿ ಭಾರತದ ಯಾವ ಲೇಖಕನೂ ಬರೆದ ನಿದರ್ಶನ ಇಲ್ಲ! ಜಾಗತಿಕವಾಗಿ, ನನಗೆ ಗೊತ್ತಿಲ್ಲ. ಅವರೇ ಈಗ ಮಂಡ್ಯದಲ್ಲಿ ಇರುವ ಡಾ. ಪ್ರದೀಪ್ ಕುಮಾರ್ ಹೆಬ್ರಿ (Dr. Pradeep Kumar Hebri). ಹೌದು, ಮೂಲತಃ ಕಾರ್ಕಳದ ಹೆಬ್ರಿಯ (ಈಗ ಅದು ಪ್ರತ್ಯೇಕ ತಾಲೂಕು ಆಗಿದೆ) ಒಬ್ಬ ಆಯುರ್ವೇದ ವೈದ್ಯರು (Arurvedic Doctor) ಕಳೆದ 36 ವರ್ಷಗಳಲ್ಲಿ ಬರೆದು ಮುಗಿಸಿದ್ದು ಬರೋಬ್ಬರಿ 511 ಪುಸ್ತಕಗಳನ್ನು! ಅದರಲ್ಲಿಯೂ ಅವರ ಆಸಕ್ತಿಯ ಹರವು ತುಂಬಾ ವಿಸ್ತಾರ ಆದದ್ದು. ಕವನ ಸಂಕಲನ, ಶಿಶು ಸಾಹಿತ್ಯ, ಆರೋಗ್ಯ, ಲಲಿತ ಪ್ರಬಂಧ, ವಚನ ಸಾಹಿತ್ಯ, ವಿಜ್ಞಾನ, ಅಂಕಣ, ಸಣ್ಣ ಕತೆಗಳು, ಕಾದಂಬರಿಗಳು, ಧಾರ್ಮಿಕ, ಆಧ್ಯಾತ್ಮ, ಜೀವನ ಚರಿತ್ರೆ, ಪ್ರವಾಸ ಕಥನ, ವ್ಯಕ್ತಿತ್ವ ವಿಕಸನ ಹೀಗೆ ಈ ಪಟ್ಟಿ ಮುಗಿಯುವುದೇ ಇಲ್ಲ! ಅವರು ಬರೆದ ಎಲ್ಲ ಪುಸ್ತಕಗಳು ಕೂಡ ಪ್ರಿಂಟ್ ಆಗಿ ಪಬ್ಲಿಷ್ ಆಗಿವೆ ಮತ್ತು ಓದುಗರ ಮಡಿಲು ಸೇರಿವೆ ಎಂದರೆ ಅದು ಅದ್ಭುತ (Raja Marga Column)!

1989ರಿಂದಲೂ ನಿರಂತರ ಅವರು ಬರೆಯುತ್ತಲೇ ಇದ್ದಾರೆ!

ಕಾರ್ಕಳ ತಾಲೂಕಿನ ಹೆಬ್ರಿಯಲ್ಲಿ (ಈಗ ಪ್ರತ್ಯೇಕ ತಾಲೂಕು ಆಗಿದೆ) ಜನಿಸಿದ ಪ್ರದೀಪ್ ಕುಮಾರ್ ಅವರು ಹೆಚ್ಚು ಓದಿದ್ದು ಸರಕಾರಿ ಶಾಲೆಗಳಲ್ಲಿ. ಆಯುರ್ವೇದ ಪದವಿ ಪಡೆದದ್ದು ಉದ್ಯಾವರದ ಎಸ್‌ಡಿಎಂ ಆಯುರ್ವೇದಿಕ್ ಕಾಲೇಜಿನಲ್ಲಿ. ಮುಂದೆ ಅವರು ಮಂಡ್ಯ ಜಿಲ್ಲೆಯನ್ನು ತನ್ನ ಕರ್ಮಭೂಮಿ ಮಾಡಿಕೊಂಡರು. ಆಯುರ್ವೇದ ಪ್ರಾಕ್ಟೀಸ್ ಮಾಡುತ್ತ ಬಿಡುವಿನ ಸಮಯದಲ್ಲಿ ಸಾಹಿತ್ಯ ಅಧ್ಯಯನ ಮಾಡುತ್ತ ಬರೆಯಲು ಆರಂಭ ಮಾಡಿದರು.

1989ರಲ್ಲಿ ಪ್ರಕಟ ಆದ ‘ಈ ಬಾಳ ಪಯಣ’ ಅವರ ಮೊದಲ ಪುಸ್ತಕ. ಮುಂದೆ ಬರೆಯುವ ಆಸಕ್ತಿ ಹೆಚ್ಚಾಯಿತು. ಅದಕ್ಕಾಗಿ ತನ್ನ ವೈದ್ಯಕೀಯ ಪ್ರಾಕ್ಟೀಸ್ ಸೀಮಿತ ಮಾಡಿದರು. ಮುಂದೆ ಅವರು ನಿರಂತರವಾಗಿ ಓದಿದರು, ದಣಿವು ಅರಿಯದೇ ಬರೆದರು. ವರ್ಷಕ್ಕೆ ಸರಾಸರಿ 18-20 ಪುಸ್ತಕಗಳನ್ನು ಬರೆದರು! ಅದರ ಜೊತೆಗೆ ವರ್ಷಕ್ಕೆ ಸರಾಸರಿ 100 ಬೇರೆಯವರ ಪುಸ್ತಕಗಳನ್ನು ಪೂರ್ಣವಾಗಿ ಓದಿ ಮುನ್ನುಡಿ ಬರೆದುಕೊಟ್ಟಿದ್ದಾರೆ. ಪುಸ್ತಕಗಳ ಪರಿಚಯಗಳನ್ನು ಪತ್ರಿಕೆಗೆ ಬರೆದು ಎಳೆಯರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಕರ್ನಾಟಕದ ಯಾವ ಸ್ಟಾರ್ ಲೇಖಕನೂ ಕೂಡ ನೂರಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದ ಉದಾಹರಣೆ ದೊರೆಯುವುದಿಲ್ಲ! ಅಂತಹದ್ದರಲ್ಲಿ ನಮ್ಮ ಹೆಬ್ರಿಯ ಪ್ರದೀಪ್ ಕುಮಾರ್ ಅವರು 511 ಪುಸ್ತಕಗಳನ್ನು ಬರೆದು ಪಬ್ಲಿಷ್ ಮಾಡಿದರು ಅಂದರೆ ಅದು ಖಂಡಿತವಾಗಿ ವಿಸ್ಮಯ ಎಂದೇ ಹೇಳಬಹುದು. ಅದನ್ನು ಡಾಕ್ಟರ್ ಪ್ರದೀಪ್ ಕುಮಾರ್ ಹೆಬ್ರಿ ಸಾಧ್ಯ ಮಾಡಿ ತೋರಿಸಿದ್ದಾರೆ. ಇದು ಖಂಡಿತವಾಗಿ ಜಾಗತಿಕ ದಾಖಲೆ!

19 ಮಹಾಕಾವ್ಯಗಳನ್ನು ಅವರು ಬರೆದಿದ್ದಾರೆ!

ಅವರ ಇತರ 500 ಪುಸ್ತಕಗಳ ತೂಕ ಒಂದೆಡೆ ಆದರೆ ಅವರು ಬರೆದ 19 ಮಹಾಕಾವ್ಯಗಳದ್ದು ಇನ್ನೊಂದು ತೂಕ! ಇಷ್ಟೊಂದು ಕಾವ್ಯಗಳನ್ನು ಬರೆದವರು ಭಾರತದಲ್ಲಿ ಖಂಡಿತವಾಗಿ ಇಲ್ಲ! ಅದೊಂದು ತಪಸ್ಸು. ಅದರಲ್ಲಿಯೂ ಅವರು ಬರೆದ ‘ಯುಗಾವತಾರಿ’ ಮಹಾಕಾವ್ಯ ಆರು ಸಂಪುಟಗಳಲ್ಲಿ ಹೊರಬಂದಿದ್ದು 6000 ಪುಟಗಳನ್ನು ಹೊಂದಿದೆ! ಇದು ಜಗತ್ತಿನ ಅತೀ ದೊಡ್ಡದಾದ ಮಹಾ ಕಾವ್ಯ ಅನ್ನುವುದು ಕನ್ನಡದ ಹೆಮ್ಮೆ.

ಇಡೀ ಮಹಾಭಾರತವನ್ನು ‘ಜಯ ಭಾರತ’ ಎಂಬ ಶೀರ್ಷಿಕೆಯಲ್ಲಿ ಅವರು ಕಾವ್ಯಕ್ಕೆ ಇಳಿಸಿದ್ದು ಅದರ ಪುಟಗಳ ಸಂಖ್ಯೆಯೇ 1800! ಅದೂ ನಾಲ್ಕು ಸಂಪುಟಗಳನ್ನು ಹೊಂದಿದೆ. ಮಧ್ವಾಚಾರ್ಯರ ಬಗ್ಗೆ ಬರೆದ ಪೂರ್ಣಪ್ರಜ್ಞ, ಅಕ್ಕ ನಾಗಲಾಂಬಿಕೆ ಬಗ್ಗೆ ಬರೆದ ಶರಣ ಮಾತೆ, ಮಂತ್ರಾಲಯದ ರಾಘವೇಂದ್ರ ಸ್ವಾಮಿ ಬಗ್ಗೆ ಬರೆದ ಕಲ್ಪತರು, ಅಕ್ಕ ಮಹಾದೇವಿಯ ಬಗ್ಗೆ ಬರೆದ ಉಡುತಡಿಯ ಕಿಡಿ, ಪ್ರಭು ರಾಮಚಂದ್ರರ ಬಗ್ಗೆ ಬರೆದ ರಘು ಕುಲೋತ್ತಮ, ರಾಮಾನುಜರ ಬಗ್ಗೆ ಬರೆದ ದಿಗ್ವಿಚೇತ, ಡಾಕ್ಟರ್ ಬಾಲಗಂಗಾಧರನಾಥ ಸ್ವಾಮೀಜಿ ಬಗ್ಗೆ ಬರೆದ ದಿವ್ಯ ದಿನಕರ, ಕಾವೇರಿ ಹೋರಾಟಗಾರ ಮಾದೇಗೌಡ ಬಗ್ಗೆ ಬರೆದ ಕಾವೇರಿ ಪುತ್ರ ಇವೆಲ್ಲವೂ ಜನಪ್ರಿಯ ಆಗಿವೆ. ಅವರ ಇಪ್ಪತ್ತನೇ ಮಹಾಕಾವ್ಯ ಸುತ್ತೂರು ಸ್ವಾಮಿಗಳ ಬಗ್ಗೆ ಬರೆದ ‘ರಾಜಗುರು ತಿಲಕ’ ಮುಂದಿನ ತಿಂಗಳು ಲೋಕಾರ್ಪಣೆ ಆಗಲಿದೆ.

Dr Pradeep Kumar Hebri Raja Marga Column Raja Guru tilaka

ಕನ್ನಡದ ಆದಿಕವಿಗಳು ಬರೆದ ಭಾಮಿನಿ ಮೊದಲಾದ ಸಿದ್ಧ ಷಟ್ಪದಿಗಳ ಜೊತೆಗೆ ಮಹಾಭಾಮಿನಿ, ಶ್ರೀ ಗುರು, ಪದವರ್ಧಿನಿ ಮೊದಲಾದ ಷಟ್ಪದಿಗಳ ಆವಿಷ್ಕಾರ ಮಾಡಿ ಬೆಳೆಸಿದ ಕೀರ್ತಿಯೂ ಅವರಿಗೆ ಸಿಗಬೇಕು.

‘ಬರವಣಿಗೆಯ ವೈಭವ’ ಅವರು

ಇಷ್ಟೊಂದು ಹೇಗೆ ಬರೆಯಲು ಸಾಧ್ಯವಾಯಿತು? ಎಂದವರನ್ನು ಕೇಳಿದಾಗ ಅವರು ಹೇಳಿದ ಮಾತು ತುಂಬಾನೆ ಇಷ್ಟ ಆಯಿತು.

“ಬರವಣಿಗೆ ಒಂದು ತಪಸ್ಸು. ನಾನು ಕಳೆದ 36 ವರ್ಷಗಳಿಂದ ನಿರಂತರ ಬರೆಯುತ್ತಿದ್ದೇನೆ. ಹಗಲು ನನಗೆ ಉಪನ್ಯಾಸಗಳು, ಪ್ರಯಾಣ, ಹೊಟ್ಟೆಪಾಡು ಇರುತ್ತವೆ. ನಾನು ರಾತ್ರಿ ಏಳೂವರೆ ಘಂಟೆಗೆ ಬರೆಯಲು ಆರಂಭ ಮಾಡಿದರೆ ಮುಗಿಸುವುದು ರಾತ್ರಿ ಮೂರೂವರೆ ಘಂಟೆಗೆ! ನಾನು ಬರೇ ಪೆನ್ನು, ಪುಸ್ತಕ ಹಿಡಿದು ಬರೆಯುವವನು. ಆಧುನಿಕ ತಂತ್ರಜ್ಞಾನ ನನಗೆ ಒಗ್ಗುವುದಿಲ್ಲ. ಮುನ್ನುಡಿಗಳನ್ನು ಬರೆಯಲು ವರ್ಷಕ್ಕೆ ನೂರಾರು ಪುಸ್ತಕಗಳು ಬರುತ್ತವೆ. ಅವುಗಳನ್ನು ಪೂರ್ತಿಯಾಗಿ ಓದಬೇಕು. ನಿರಂತರ ಓದುವಿಕೆ, ಆಸಕ್ತಿ ಮತ್ತು ಅಧ್ಯಯನ ಇವುಗಳಿಂದ ನನಗೆ ಬರೆಯಲು ಸಾಧ್ಯವಾಗುತ್ತದೆ. ನನ್ನ ಪುಸ್ತಕಗಳ ಬಗ್ಗೆ ಎಂಟು ಜನ ಲೇಖಕರು ಬರೆದು ಪಿ.ಎಚ್.ಡಿ ಪೂರ್ತಿ ಮಾಡಿದ್ದಾರೆ! 22 ಮಂದಿ ನನ್ನ ಬಗ್ಗೆ, ನನ್ನ ಕೃತಿಗಳ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಮಂಡ್ಯದ ಜನತೆ ತುಂಬಾ ಪ್ರೀತಿಯಿಂದ ‘ರಾಜ ದೀಪ’ ಮತ್ತು ‘ಕಾವ್ಯ ತಪಸ್ವೀ ‘ಎಂಬ ಎರಡು ಬೃಹತ್ ಅಭಿನಂದನಾ ಗ್ರಂಥಗಳನ್ನು ಸಮರ್ಪಣೆ ಮಾಡಿ ನನ್ನನ್ನು ಸನ್ಮಾನ ಮಾಡಿದ್ದಾರೆ. ಜನರು ಪ್ರೀತಿಯಿಂದ ಉಪನ್ಯಾಸಕ್ಕೆ, ಗಮಕ ವಾಚನ, ವ್ಯಾಖ್ಯಾನಕ್ಕೆ ಕರೆಯುತ್ತಾರೆ. ಅದಕ್ಕೂ ಸಮಯ ಕೊಡಬೇಕು. ಆದರೆ ಬರವಣಿಗೆ, ಅದರಲ್ಲಿಯೂ ಕಾವ್ಯರಚನೆ ನನ್ನ ಆದ್ಯತೆ. ಅದು ನಿಲ್ಲಬಾರದು. ನನ್ನ ಕೊನೆಯ ಉಸಿರಿನತನಕವೂ ಬರೆಯುತ್ತ ಇರಬೇಕು ಎಂದು ನನ್ನ ಆಸೆ ಇದೆ” ಎನ್ನುತ್ತಾರೆ.

Dr Pradeep Kumar Hebri Raja Marga

ಅವರಿಗೆ ಸಿಕ್ಕಿದ ಸನ್ಮಾನ, ಪ್ರಶಸ್ತಿಗಳ ಬಗ್ಗೆ ಒಂದು ಬೃಹತ್ ಪುಸ್ತಕವನ್ನೇ ಬರೆಯಬಹುದು! ಅವರ ಕೃತಿಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಹತ್ತಾರು ಪ್ರಶಸ್ತಿಗಳು ಲಭಿಸಿವೆ. ಅವರ ಇಬ್ಬರು ಅಭಿಮಾನಿಗಳು ‘ಆರವತ್ತಾರಕ್ಕಾರತಿ’ ಮತ್ತು ‘ಹೆಬ್ರಿ ಸವಿನುಡಿ’ ಎಂಬ ಪುಸ್ತಕಗಳನ್ನು ಅವರ ಬಗ್ಗೆ ಬರೆದು ಗುರುವಂದನೆ ಮಾಡಿದ್ದಾರೆ. ಅವರ ಲೇಖನ ಮತ್ತು ಕವಿತೆಗಳು ಹಲವಾರು ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆದಿವೆ. ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಅವರ ಅಂಕಣಗಳು, ಲೇಖನಗಳು ಬಂದಿವೆ. ಏಳು ತಾಲೂಕು ಮತ್ತು ಒಂದು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆಯ ಪಟ್ಟವು ಅವರಿಗೆ ದೊರೆತಿವೆ. ಶರಣ ಸಾಹಿತ್ಯದ ಬಗ್ಗೆ ಅವರು ಬರೆದಷ್ಟು ಮತ್ತು ಭಾಷಣ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ ಅನ್ನುವುದು ಕನ್ನಡದ ಹೆಮ್ಮೆ. ಅದರ ಜೊತೆಗೆ ಅಧ್ಯಯನ ಮಾಡಿ ಕಾನೂನು ಪದವಿ, ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ ಫಿಲ್ ಪೂರ್ತಿ ಮಾಡಿದ್ದಾರೆ. ಕರ್ನಾಟಕ ಸಂಗೀತ, ತಬಲಾ, ನಾಟಕ, ಯಕ್ಷಗಾನ ಕೂಡ ಕಲಿತಿದ್ದಾರೆ. ಅವರ ಧರ್ಮಪತ್ನಿ ಶ್ರೀಮತಿ ಎಂ ಎನ್ ರಾಜಲಕ್ಷ್ಮಿ ಅವರ ಬೆಂಬಲವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಇದನ್ನೂ ಓದಿ: Raja Marga Column : ಯೋಧರ ಕುಟುಂಬದ ವೀರಗಾಥೆಗಳು; ‌ಬೇಕಿರುವುದು ಸಾಂತ್ವನ ಅಲ್ಲ, ಸೆಲ್ಯೂಟ್!

ಭರತವಾಕ್ಯ

ಡಾಕ್ಟರ್ ಪ್ರದೀಪ್ ಕುಮಾರ್ ಹೆಬ್ರಿ ಅವರು ಕನ್ನಡದ ಮುಕುಟಮಣಿ ಅನ್ನೋದೇ ಭರತವಾಕ್ಯ. ಅವರು ಈ ರವಿವಾರ ಕಾರ್ಕಳದ ಶ್ರೇಷ್ಟ ‘ಜ್ಞಾನ ಸುಧಾ’ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಕಾರ್ಕಳ ತಾ.ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಶಿಖರೋಪನ್ಯಾಸ ಮಾಡಲಿದ್ದಾರೆ ಅನ್ನುವುದು ನಮ್ಮೆಲ್ಲರ ಭಾಗ್ಯ. ಆರವತ್ತಾರರ ಅವರಿಗೆ ಶುಭವಾಗಲಿ.

Continue Reading

ಕಲೆ/ಸಾಹಿತ್ಯ

Kannada Pustaka Habba: ಡಿ. 3ರಂದು ರಾಷ್ಟ್ರೋತ್ಥಾನ ಸಾಹಿತ್ಯದ ʼಕನ್ನಡ ಪುಸ್ತಕ ಹಬ್ಬʼ ಸಮಾರೋಪ

Kannada Pustaka Habba: ರಾಷ್ಟ್ರೋತ್ಥಾನ ಸಾಹಿತ್ಯದ ‘ಕನ್ನಡ ಪುಸ್ತಕ ಹಬ್ಬ – 2023’ ಸಮಾರೋಪದ ಸಮಾರಂಭವು ಡಿ.3ರಂದು ಬೆಂಗಳೂರಿನ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್‌ ಆವರಣದಲ್ಲಿ ನಡೆಯಲಿದೆ.

VISTARANEWS.COM


on

Kannada Pustaka Habba
Koo

ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ (Rashtrotthana Sahitya) ವತಿಯಿಂದ ಆಯೋಜಿಸಿರುವ 3ನೇ ʼಕನ್ನಡ ಪುಸ್ತಕ ಹಬ್ಬ – 2023ʼರ ಸಮಾರೋಪ ಸಮಾರಂಭವನ್ನು (Kannada Pustaka Habba-2023) ಡಿಸೆಂಬರ್‌ 3 ರಂದು ಸಂಜೆ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್‌ ಆವರಣದ ಕೇಶವಶಿಲ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೂವತ್ತಮೂರು ದಿನಗಳ ಈ ಪುಸ್ತಕ ಹಬ್ಬದಲ್ಲಿ (ನ.1 ರಿಂದ ಡಿ.3) ಈಗಾಗಲೇ ಇಪ್ಪತ್ತೇಳು ದಿನಗಳು ಕಳೆದಿದ್ದು, ಭಾನುವಾರ ಸಾಯಂಕಾಲ ಪುಸ್ತಕ ಹಬ್ಬ ಮುಕ್ತಾಯಗೊಳ್ಳಲಿದೆ.

ಸಮಾರೋಪಕ್ಕೂ ಮುನ್ನ ಡಿಸೆಂಬರ್ 2ರಂದು ‘ನವೋತ್ಥಾನದ ಅಧ್ವರ್ಯು: ಸ್ವಾಮಿ ದಯಾನಂದ ಸರಸ್ವತಿ’ ವಿಷಯವಾಗಿ ಡಾ. ರೋಹಿಣಾಕ್ಷ ಶಿರ್ಲಾಲು ಅವರು ಮಾತನಾಡಲಿದ್ದಾರೆ. ಅದೇ ದಿನ ‘ಹೊಸಕಾಲದ ಮಾಧ್ಯಮಗಳು : ಸಾಧ್ಯತೆ-ಸವಾಲುಗಳು’ ವಿಷಯವಾಗಿ ಡಿ. ಎಂ. ಘನಶ್ಯಾಮ ಮತ್ತು ರಮೇಶ ದೊಡ್ಡಪುರ ಅವರು ಸಂವಾದ ನಡೆಸಲಿದ್ದಾರೆ.

ಡಿಸೆಂಬರ್ 3ರಂದು ಬೆಳಗ್ಗೆ, ‘ಸನಾತನ ಧರ್ಮ ಮತ್ತು ವಚನ ಸಾಹಿತ್ಯ’ ವಿಷಯವಾಗಿ ಡಾ. ಜ್ಯೋತಿ ಶಂಕರ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದದ ಅಧ್ಯಕ್ಷತೆಯನ್ನು ರಾಷ್ಟೋತ್ಥಾನ ಪರಿಷತ್ ಅಧ್ಯಕ್ಷ ಎಂ. ಪಿ. ಕುಮಾರ್ ಅವರು ವಹಿಸಲಿದ್ದು, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವಿ. ಪರಶಿವಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಇದನ್ನೂ ಓದಿ | Raja Marga Column : ಕನ್ನಡ ಶಾಲೆಗಳೆಂಬ ಭೂಲೋಕದ ಸ್ವರ್ಗಗಳು!

ಸ್ಪರ್ಧೆಗಳ ವಿಜೇತರಿಗೆ ಬಹುಮಾನ

ಕಾರ್ಯಕ್ರಮದಲ್ಲಿ, ದಾವಣಗೆರೆಯ ಸಾಹಿತ್ಯ ಪರಿಚಾರಕರಾದ ಉಮೇಶ ಅವರನ್ನು ಗೌರವಿಸಲಾಗುತ್ತದೆ. ಕನ್ನಡ ಪುಸ್ತಕ ಹಬ್ಬದ ನಿಮಿತ್ತ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು, ಆಯ್ದ ಶಾಲೆಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುವುದು.

ನವೆಂಬರ್ 1ರಿಂದ ‘ಕನ್ನಡ ಪುಸ್ತಕ ಹಬ್ಬ’ದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ಸಾವಿರಾರು ಜನ ಪುಸ್ತಕಪ್ರಿಯರು ಆಗಮಿಸಿ, ತಮ್ಮ ಆಯ್ಕೆಯ-ಆಸಕ್ತಿಯ ಪುಸ್ತಕಗಳನ್ನು ಖರೀದಿಸಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪುಸ್ತಕ ಹಬ್ಬಕ್ಕೆ ಭೇಟಿ ನೀಡಿ, ಬೆರಗು ಕಂಗಳಿಂದ ಪುಸ್ತಕಗಳನ್ನು ನೋಡಿ, ತಮ್ಮ ಆಯ್ಕೆಯ ಪುಸ್ತಕವನ್ನು ಖರೀದಿಸಿ ಎದೆಗವಚಿಕೊಂಡು ಸಂಭ್ರಮಿಸಿದ್ದು ವಿಶೇಷವಷ್ಟೇ ಅಲ್ಲ, ಪುಸ್ತಕಪ್ರಪಂಚದಲ್ಲಿ ಆಶಾದಾಯಕ ಸಂಗತಿ.

ವಿವಿಧ ಕಾರ್ಯಕ್ರಮಗಳು ಸಂಪನ್ನ

ಕಳೆದ ನಾಲ್ಕು ವಾರಗಳಲ್ಲಿ ಪುಸ್ತಕ ಹಬ್ಬದಲ್ಲಿ ವಿವಿಧ ರೀತಿಯ ಚಟುವಟಿಕೆಗಳು ನಡೆದಿವೆ. ನವೆಂಬರ್ 1ರಂದು ಪ್ರಸಿದ್ಧ ನಟ, ಕಲಾವಿದ ಸುಚೇಂದ್ರ ಪ್ರಸಾದ್ ಅವರು ಪುಸ್ತಕ ಹಬ್ಬವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ‘ವಿಜಯ ಕರ್ನಾಟಕ’ದ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಮತ್ತು ‘ಪ್ರಜ್ಞಾಪ್ರವಾಹ’ದ ರಾಷ್ಟ್ರೀಯ ಸಹ- ಸಂಯೋಜಕರಾದ ರಘುನಂದನ್ ಅವರು ಆಗಮಿಸಿದ್ದರು. ಅಂದು ಸಂಜೆಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ ಅವರು ‘ಸಂಸ್ಕೃತಿ’ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ‘ಕನ್ನಡಪ್ರಭ’ ಮತ್ತು ‘ಸುವರ್ಣ ಸುದ್ದಿವಾಹಿನಿ’ಯ ಪ್ರಧಾನ ಸಂಪಾದಕರಾದ ರವಿ ಹೆಗಡೆಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಇನ್ನು ಶನಿವಾರ ಭಾನುವಾರಗಳಂದು ಸಾಹಿತ್ಯ-ಸಂಸ್ಕೃತಿ-ರಾಷ್ಟ್ರೀಯತೆ-ಮಾಧ್ಯಮ ಮೊದಲಾದ ವಿಷಯಗಳನ್ನು ಕುರಿತು ಕಾರ್ಯಕ್ರಮಗಳು ನಡೆದಿದ್ದು, ನವೆಂಬರ್ 4 ರಂದು ‘ಕನ್ನಡ ರಂಗಭೂಮಿ ಮತ್ತು ರಾಷ್ಟ್ರೀಯತೆ’ ವಿಷಯವಾಗಿ ಅಡ್ಡಂಡ ಕಾರ್ಯಪ್ಪ, ‘ಭಾರತೀಯತೆಯ ಸತ್ತ್ವ ‘ ಕುರಿತು ಡಾ. ಅಜಕ್ಕಳ ಗಿರೀಶ್ ಭಟ್ ಮಾತನಾಡಿದರು. ನವೆಂಬರ್ 5ರಂದು ನಿವೃತ್ತ ಭೂವಿಜ್ಞಾನಿ, ಪ್ರಸಿದ್ಧ ವಿಜ್ಞಾನಲೇಖಕರಾದ ಡಾ. ಟಿ. ಆರ್. ಅನಂತರಾಮು ಅವರೊಂದಿಗೆ ಮತ್ತು ಸಂಸ್ಕೃತಿ ಚಿಂತರು, ಅಂಕಣಕಾರರೂ ಆದ ಡಾ. ಆರತಿ ವಿ. ಬಿ. ಅವರೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆದವು.

ನವೆಂಬರ್ 11ರಂದು ಅಜಿತ್ ಹನಮಕ್ಕನವರ್ ಅವರು ‘ಪುಟ್ಟ ಇಸ್ರೇಲ್ ಕಲಿಸುವ ದಿಟ್ಟತನದ ಪಾಠಗಳು’ ವಿಷಯವಾಗಿ ಮಾತನಾಡಿದರೆ, ಐವರು ಯುವ ಮಿತ್ರರು (ಪ್ರೊ. ಚೇತನ್, ಸುದೀಪ್, ಸ್ಫೂರ್ತಿ ಮುರಳೀಧರ್, ಚಂದನಾ ವೆಂಕಟೇಶ್, ಕಿರಣಕುಮಾರ್ ವಿವೇಕವಂಶಿ) ‘ನಾನೇಕೆ ಓದುತ್ತೇನೆ?’ ಎಂಬ ಕುರಿತು ಚರ್ಚೆಯನ್ನು ನಡೆಸಿಕೊಟ್ಟರು.

ನವೆಂಬರ್ 12ರಂದು ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂ. ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್ ಅವರು ‘ಸಾಹಿತ್ಯ ಸಾನ್ನಿಹಿತ್ಯ’ ಪುಸ್ತಕ ಲೋಕಾರ್ಪಣೆ ಮಾಡಿದರು; ದಿವಾಕರ ಹೆಗಡೆ ಅವರು ಪುಸ್ತಕವನ್ನು ಪರಿಚಯಿಸಿದರು. ಅಂದು ಸಾಯಂಕಾಲ ‘ಕನ್ನಡ ಕವಿಗಳು ಕಂಡ ಭಾರತ’ ವಿಷಯವಾಗಿ ಡಾ. ಬಿ. ವಿ. ವಸಂತಕುಮಾರ್ ವಿಶೇಷ ಉಪನ್ಯಾಸ ನೀಡಿದರು, ವಿಜಯವಾಣಿ ಪತ್ರಿಕೆಯ ಸಂಪಾದಕರಾದ ಕೆ. ಎನ್. ಚನ್ನೇಗೌಡರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನವೆಂಬರ್ 18 ರಂದು ‘ಏಕರೂಪ ನಾಗರಿಕ ಸಂಹಿತೆ: ಸಾಧ್ಯತೆ-ಸವಾಲುಗಳು’ ವಿಷಯವಾಗಿ ಪ್ರೊ ಎ. ಷಣ್ಮುಖ ಅವರು ವಿಶೇಷ ಉಪನ್ಯಾಸ ನೀಡಿದರು. ಬಹುಶ್ರುತ ವಿದ್ವಾಂಸರಾದ ಡಾ. ಶತಾವಧಾನಿ ಆರ್. ಗಣೇಶ್ ಅವರೊಂದಿಗೆ ‘ವ್ಯಾಸಂಗದ ಹವ್ಯಾಸ’ ವಿಷಯವಾಗಿ ಸಂವಾದ ನಡೆಯಿತು. ನವೆಂಬರ್ 19ರಂದು ‘ಕನ್ನಡ ಚಳವಳಿ: ನಡೆದುಬಂದ ದಾರಿ’ ವಿಷಯವಾಗಿ ಚಲುವಾದಿ ಜಗನ್ನಾಥ ಅವರಿಂದ ವಿಶೇಷ ಉಪನ್ಯಾಸ ನಡೆಯಿತು.

ನವೆಂಬರ್ 24, 25 ಎರಡು ದಿಗಳ ಕಾಲ ನಾಲ್ಕು ವಿಶೇಷ ಉಪನ್ಯಾಸಗಳು ನಡೆದಿದ್ದು, ಪೂಜ್ಯ ಸಿದ್ದೇಶ್ವರ ಸ್ವಾಮಿಗಳನ್ನು ಕುರಿತು ಸಂಗಮೇಶ್ ಪೂಜಾರ್, ಸ್ವ, ರಂಗಾ ಹರಿ ಅವರನ್ನು ಕುರಿತು ವಿ. ನಾಗರಾಜ್, ‘ಕನ್ನಡದ ವಿಶಿಷ್ಟ ಕೃತಿ – ಶಾಸನ ಪದ್ಯಮಂಜರಿ’ ಕುರಿತು ಡಾ. ಕೆ. ಆರ್. ಗಣೇಶ್, ‘ಕುವೆಂಪು ಕನ್ನಡಕ್ಕೆ ಒಲಿದು ಒಂದು ಶತಮಾನ’ ಕುರಿತು ಡಾ. ಜಿ. ಬಿ. ಹರೀಶ್ ಮಾತನಾಡಿದರು.

(ಈ ಎಲ್ಲ ಉಪನ್ಯಾಸಗಳೂ ಈಗ ರಾಷ್ಟೋತ್ಥಾನ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯ ಇವೆ)

ವಾರದ ದಿನಗಳಲ್ಲಿ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿದ್ದು, ಬೆಂಗಳೂರಿನಲ್ಲಿರುವ ಮೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ವಿದ್ಯಾರ್ಥಿಗಳು ಮತ್ತು ರಾಷ್ಟ್ರೋತ್ಥಾನ ಸಂಗೀತ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕೆಂಪೇಗೌಡ ನಗರದಲ್ಲಿರುವ ಸದ್ಗುರು ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದಲೂ ‘ದಾಸರಪದ ಗಾಯನ’ ಕಾರ್ಯಕ್ರಮ ನಡೆದಿದೆ.

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಪುಸ್ತಕಗಳ ಮಾರಾಟದ ದೃಷ್ಟಿಯಿಂದಲೂ ಓದುಗರಿಂದ ಉತ್ತಮ ಸ್ಪಂದನೆ ದೊರೆತಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟನೆಗಳಲ್ಲದೆ ಡಿವಿಜಿ, ಎಸ್. ಎಲ್. ಭೈರಪ್ಪ, ಶಿವರಾಮ ಕಾರಂತ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಅನಕೃ, ದೇವುಡು, ತರಾಸು, ಕೆ. ಎನ್. ಗಣೇಶಯ್ಯ, ಜೋಗಿ, ವಸುಧೇಂದ್ರ, ಕೆ. ಎಸ್. ನಾರಾಯಣಾಚಾರ್ಯ, ಸುಧಾ ಮೂರ್ತಿ ಸೇರಿದಂತೆ ಹಲವರು ಪ್ರಸಿದ್ಧ ಲೇಖಕರ ಪುಸ್ತಕಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳಲ್ಲದೆ, ಬೇರೆ ಬೇರೆ ಪ್ರಕಾಶಕರ – ಲೇಖಕರ ಪುಸ್ತಕಗಳಿಗೂ ವಿಶೇಷ ರಿಯಾಯಿತಿ ನೀಡುತ್ತಿರುವುದಕ್ಕೆ ಓದುಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತೂ, ‘ಮೂಲ ಪ್ರಕಾಶಕರೂ ನೀಡದ ರಿಯಾಯಿತಿ ನೀಡುತ್ತಿದ್ದೀರಿ’ ಎಂದು ನಮ್ಮ ಬೆನ್ನು ತಟ್ಟಿದ್ದಾರೆ.

ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳಿವೆ. ‘ಭಾರತ-ಭಾರತಿ ಪುಸ್ತಕ ಸಂಪದ’ದ ಎಂಟುನೂರಕ್ಕೂ ಹೆಚ್ಚು ಪುಸ್ತಕಗಳಲ್ಲದೆ, ಬೇರೆ ಬೇರೆ ಪ್ರಕಾಶಕರ ನೂರಾರು ವೈವಿಧ್ಯಮಯ ಪುಸ್ತಕಗಳನ್ನು ಪ್ರದರ್ಶಿಸಲಾಗಿದೆ. ಅಲ್ಲಿಯ ವೈವಿಧ್ಯವನ್ನು ಕಂಡು ಮಕ್ಕಳೂ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ | Yellapur News: ಯಲ್ಲಾಪುರದಲ್ಲಿ ಡಿ. 9, 10 ರಂದು ಜಿಲ್ಲಾ ಮಟ್ಟದ ಸಾಹಿತ್ಯ ಮತ್ತು ಗಮಕ ಅಧಿವೇಶನ

ಪ್ರತಿದಿನ ಪುಸ್ತಕ ಹಬ್ಬಕ್ಕೆ ಭೇಟಿ ನೀಡುವವರಿಗಾಗಿ ‘ಲಕ್ಕಿ ಡ್ರಾ’ದ ವ್ಯವಸ್ಥೆ ಮಾಡಿದ್ದು, ವಿಜೇತರಿಗೆ ‘ಪುಸ್ತಕ ಬಹುಮಾನ’ ನೀಡಲಾಗುತ್ತಿದೆ. ಪುಸ್ತಕ ಹಬ್ಬದ ಪ್ರಯುಕ್ತ ಮಕ್ಕಳಿಗೆ ಗಾಯನ ಸ್ಪರ್ಧೆಯನ್ನೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ನಡೆಸಲಾಗಿದೆ

Continue Reading
Advertisement
cm siddaramaih respect captain pranjal
ಕರ್ನಾಟಕ8 mins ago

CM Siddaramaiah: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ. ಪರಿಹಾರ

Canara Bank Ammembala Subbarao Pai
ಅಂಕಣ16 mins ago

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

CBSE Board Exam 2024 and many more changes proposed implemented in this year
ದೇಶ17 mins ago

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

Saurav Gangly
ಕ್ರಿಕೆಟ್47 mins ago

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Physical Education Teacher
ಉದ್ಯೋಗ47 mins ago

Teachers Recruitment : ಪ್ರಾಥಮಿಕ ಶಾಲೆಯಲ್ಲಿ 2120 ದೈಹಿಕ ಶಿಕ್ಷಕರ ಹುದ್ದೆ ಭರ್ತಿಗೆ ತೀರ್ಮಾನ

sufi
ಅಂಕಣ47 mins ago

ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

Rain in Karnataka woman listening to music with an umbrella
ಕರ್ನಾಟಕ1 hour ago

Karnataka Weather : ಇಂದು – ನಾಳೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಭಾರಿ ಮಳೆ; ಇದು ಮಿಚುಂಗ್ ಎಫೆಕ್ಟ್‌

Congress party directed kamal nath to resign Madhya Pradesh Congress president post
ದೇಶ1 hour ago

ಎಂಪಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಮಲ್ ನಾಥ್‌ಗೆ ಸೂಚನೆ!

Dasara Elephant Arjuna
ಕರ್ನಾಟಕ2 hours ago

ವಿಸ್ತಾರ ಸಂಪಾದಕೀಯ: ದಸರಾ ಹೀರೊ ‘ಅರ್ಜುನ’ ದಾರುಣ ಸಾವು, ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ

Foods To Avoid Eating With Bananas
ಆರೋಗ್ಯ2 hours ago

Foods To Avoid Eating With Bananas: ತಿಳಿದಿರಲಿ, ಬಾಳೆಹಣ್ಣಿನ ಜೊತೆಗೆ ಈ ಆಹಾರಗಳನ್ನು ಸೇರಿಸಿ ತಿನ್ನಬಾರದು!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ3 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌