Vistara News Launch | ವಿಸ್ತಾರ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ: ವಿರೂಪಾಕ್ಷಪ್ಪ ಬಳ್ಳಾರಿ - Vistara News

ವಿಸ್ತಾರ ಅನಾವರಣ

Vistara News Launch | ವಿಸ್ತಾರ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ: ವಿರೂಪಾಕ್ಷಪ್ಪ ಬಳ್ಳಾರಿ

Vistara News Launch | ನಿಖರ-ಜನಪರ ಘೋಷವಾಕ್ಯದೊಂದಿಗೆ ಆರಂಭವಾಗಿರುವ ವಿಸ್ತಾರ ನ್ಯೂಸ್‌ ಚಾನೆಲ್‌ ವತಿಯಿಂದ ಬ್ಯಾಡಗಿಯಲ್ಲಿ ಏರ್ಪಡಿಸಿದ್ದ ವಿಸ್ತಾರ ಕನ್ನಡ ಸಂಭ್ರಮಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಚಾಲನೆ ನೀಡಿದರು.

VISTARANEWS.COM


on

Vistara News Launch
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾವೇರಿ: ಜಿಲ್ಲೆಯ ಬ್ಯಾಡಗಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ವಿಸ್ತಾರ ಕನ್ನಡ ಸಂಭ್ರಮ(Vistara News Launch) ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಗಿಡಕ್ಕೆ ನಿರೇರೆಯುವ ಮೂಲಕ ಕಾರ್ಯಕ್ರಮವನ್ನು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಉದ್ಘಾಟಿಸಿದರು.

ನಂತರ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ರಾಜ್ಯದಲ್ಲಿ ಹಲವು ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಅನೇಕ ಸಂಗತಿಗಳು ಮರೆಮಾಚುತ್ತಿರುವ ವೇಳೆಯಲ್ಲಿ ವಿಸ್ತಾರ ಸುದ್ದಿ ವಾಹಿನಿ ಆರಂಭವಾಗಿದೆ. ವಿಸ್ತಾರ ಸುದ್ದಿವಾಹಿನಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಶುಭ ಕೋರಿದರು.

ಇದನ್ನೂ ಓದಿ | Vistara News Launch | ವಿಸ್ತಾರ ನ್ಯೂಸ್‌ ಜನರ ಧ್ವನಿಯಾಗಿ ಕೆಲಸ ಮಾಡಲಿ: ಅಭಿನವ ಚನ್ನಬಸವ ಸ್ವಾಮೀಜಿ

ಮಾಜಿ ಸಚಿವ ಬಸವರಾಜ್ ಶಿವಣ್ಣನವರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ವಸ್ತುನಿಷ್ಠ ವರದಿ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ. ಹೊಸದಾಗಿ ಆರಂಭವಾಗಿರುವ ವಿಸ್ತಾರ ನ್ಯೂಸ್‌ ಕೂಡ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿ ಎಂದು ಶುಭಕೋರಿದರು.

ಮಾಜಿ ಶಾಸಕ ಸುರೇಶ ಗೌಡ ಪಾಟೀಲ್ ಮಾತನಾಡಿ, ವಿಸ್ತಾರ ಒಂದು ಒಳ್ಳೆಯ ಹೆಸರು, ರಾಜ್ಯದಲ್ಲಿ ಈ ಮೂಲಕ ಮತ್ತೊಂದು ವಾಹಿನಿ ಆರಂಭವಾಗಿರುವುದು ಶ್ಲಾಘನೀಯ ಎಂದು ಶುಭಕೋರಿದರು.

ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಆರ್.ಪಾಟೀಲ್ ಮಾತನಾಡಿ, ಒಂದು ಕಾಲದಲ್ಲಿ ದೂರವಾಣಿಯಲ್ಲಿ ಮಾತನಾಡಲು ತುಂಬಾ ದಿನಗಳು ಬೇಕಾಗುತ್ತಿತ್ತು. ಇವತ್ತು ಘಟನೆ ನಡೆದ ತಕ್ಷಣವೇ ವರದಿಗಳನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ. ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ವಿಸ್ತಾರ ವಾಹಿನಿ ಶ್ರಮಿಸಲಿ, ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಸಮಾಜ ಸೇವಕ ಬಿಜೆಪಿ ಯುವ ಮುಖಂಡ ಎಂ.ಎಸ್.ಪಾಟೀಲ್ ಮಾತನಾಡಿ, ಕಳೆದ ಮೂರ್ನಾಲ್ಕು ತಿಂಗಳಿನಿಂದ ವಿಸ್ತಾರ ನ್ಯೂಸ್ ಡಿಜಿಟಲ್ ಮಾಧ್ಯಮವಾಗಿ ಆರಂಭವಾಗಿ ಸುದ್ದಿ ನೀಡುತ್ತಿತ್ತು. ಇದೀಗ ನ್ಯೂಸ್‌ ಚಾನೆಲ್‌ ಆರಂಭವಾಗಿದ್ದು, ನಿಖರ ಜನಪರ ಸುದ್ದಿಗಳನ್ನು ನೀಡಲಿ ಎಂದು ಶುಭಕೋರಿದರು.

ಕಾರ್ಯಕ್ರಮದಲ್ಲಿ ಬ್ಯಾಡಗಿ ಪುರಸಭೆ ಅಧ್ಯಕ್ಷೆ ಪಕ್ಕೀರಮ್ಮ ಚಲವಾದಿ, ಹೊನ್ನುರಪ್ಪ ಕಾಡಸಾಲಿ, ಸಂಜೀವ ಮಡಿವಾಳರ ಉಪಸ್ಥಿತರಿದ್ದರು.

ಇದನ್ನೂ ಓದಿ | Vistara News Launch | ಜನರ ಅಗತ್ಯಕ್ಕೆ ತಕ್ಕಂತೆ ವಿಸ್ತಾರ ಕೆಲಸ: ಸಿರುಗುಪ್ಪದ ಬಸವಭೂಷಣ ಸ್ವಾಮೀಜಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Vistara Awards : 48 ಸಾಧಕ ಉದ್ಯಮಿಗಳಿಗೆ ʻವಿಸ್ತಾರ ಬ್ಯುಸಿನೆಸ್‌ ಎಕ್ಸಲೆನ್ಸ್‌ ಅವಾರ್ಡ್‌ʼ

Vistara Awards : ವಿಸ್ತಾರ ನ್ಯೂಸ್‌ ಸಾಧಕ ಉದ್ಯಮಿಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ವಿಸ್ತಾರ ಬ್ಯುಸಿನೆಸ್‌ ಎಕ್ಸಲೆನ್ಸ್‌ ಅವಾರ್ಡ್ಸ್‌ ನೀಡುತ್ತಿದ್ದು, ಇದರ ಎರಡನೇ ಆವೃತ್ತಿಯ ಕಾರ್ಯಕ್ರಮ ಶುಕ್ರವಾರ ನಡೆಯಿತು. ಖ್ಯಾತ ಬಾಲಿವುಡ್‌ ನಟ ಸೋನು ಸೂದ್‌ ಮತ್ತು ನಟಿ ಸಪ್ತಮಿ ಗೌಡ ಪ್ರಶಸ್ತಿ ಪ್ರದಾನ ಮಾಡಿದರು.

VISTARANEWS.COM


on

Vistara Awards Vistara Business Excellence Award for 48 accomplished entrepreneurs
Koo

ಬೆಂಗಳೂರು: ಉದ್ಯಮ ಲೋಕದಲ್ಲಿ ಸಾಧನೆ ಮಾಡಿದ ಯಶಸ್ವಿ ಉದ್ಯಮಿಗಳನ್ನು ಮತ್ತು ಹೊಸ ಆವಿಷ್ಕಾರಗಳ ಮೂಲಕ ಪ್ರೇರಕ ಶಕ್ತಿಗಳಾಗಿರುವ ಉದ್ಯಮಿಗಳನ್ನು ಗೌರವಿಸುವ ಉದ್ದೇಶದಿಂದ ʻವಿಸ್ತಾರ ನ್ಯೂಸ್‌ʼ ಆರಂಭಿಸಿದ ʻವಿಸ್ತಾರ ಬ್ಯುಸಿನೆಸ್‌ ಎಕ್ಸಲೆನ್ಸ್‌ ಅವಾರ್ಡ್ಸ್‌ʼನ (Vistara Business Excellence Awards) ಎರಡನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ಶುಕ್ರವಾರ ನಡೆಯಿತು.

Vistara Awards Vistara Business Excellence Award for 48 accomplished entrepreneurs
Vistara Awards Vistara Business Excellence Award for 48 accomplished entrepreneurs

ಬೆಂಗಳೂರು ಮತ್ತು ರಾಜ್ಯದ ನಾನಾ ಜಿಲ್ಲೆಗಳ 48 ಮಂದಿ ಸಾಧಕ ಉದ್ಯಮಿಗಳನ್ನು ಪಂಚತಾರಾ ಹೋಟೆಲೊಂದರಲ್ಲಿ ನಡೆದ ಆಕರ್ಷಕ ಕಾರ್ಯಕ್ರಮದಲ್ಲಿ ʻವಿಸ್ತಾರ ಬ್ಯುಸಿನೆಸ್‌ ಎಕ್ಸಲೆನ್ಸ್‌ ಪ್ರಶಸ್ತಿ-2024ʼ (Vistara Awards) ನೀಡಿ ಗೌರವಿಸಲಾಯಿತು. ಖ್ಯಾತ ಬಾಲಿವುಡ್‌ ನಟ, ನಿರ್ಮಾಪಕ, ಸಮಾಜ ಸೇವಕ ಸೋನು ಸೂದ್‌ (Sonu Sood) ಮತ್ತು ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟಿ ಸಪ್ತಮಿ ಗೌಡ (Saptami Gowda) ಪ್ರಶಸ್ತಿ ಪ್ರದಾನ ಮಾಡಿದರು.

Vistara Awards Vistara Business Excellence Award for 48 accomplished entrepreneurs
Vistara Awards Vistara Business Excellence Award for 48 accomplished entrepreneurs

ಅಲ್ಪ ಅವಧಿಯಲ್ಲಿಯೇ ನಾಡಿನ ಮನೆ ಮಾತಾಗಿ, ರಾಜ್ಯದ ಪ್ರಭಾವಶಾಲಿ ಸುದ್ದಿವಾಹಿನಿ ಎನಿಸಿಕೊಂಡಿರುವ ʻವಿಸ್ತಾರ ನ್ಯೂಸ್‌ʼ, ಸುದ್ದಿ ಪ್ರಸಾರದ ಜತೆ ಜತೆಯಲ್ಲಿಯೇ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಇದೀಗ ವೈದ್ಯಕೀಯ, ಸಾರಿಗೆ, ಶಿಕ್ಷಣ, ಹೋಟೆಲ್‌ ಇಂಡಸ್ಟ್ರಿ, ಸಮಾಜಸೇವೆ, ರಿಯಲ್‌ ಎಸ್ಟೇಟ್‌, ಆಹಾರ ಉದ್ಯಮ, ಕಟ್ಟಡ ನಿರ್ಮಾಣ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಛಲದಿಂದ ಸಾಧನೆ ಮಾಡಿ ತಮ್ಮ ಹೆಗ್ಗುರುತುಗಳನ್ನು ಮೂಡಿಸಿರುವ ಸಾಧಕರನ್ನು ʻವಿಸ್ತಾರ ಬ್ಯುಸಿನೆಸ್‌ ಎಕ್ಸಲೆನ್ಸ್‌ ಪ್ರಶಸ್ತಿ-2024ʼ (Vistara Business Excellence Awards-2024) ನೀಡಿ ಗೌರವಿಸಿದೆ. ಈ ಕಾರ್ಯಕ್ರಮಕ್ಕೆ ʻಅಮೃತ್‌ನೋಣಿʼ, ʻಆದಿತ್ಯ ಬಿರ್ಲಾ – ಗ್ರಾಸಿಮ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ʼ, ʻಎಸ್‌ಎನ್‌ಎನ್‌ʼ, ʻಡಿಎಸ್‌ಮ್ಯಾಕ್ಸ್‌ʼ, ಧರ್ಮಸ್ಥಳದ ʻಸಿರಿʼ ಮತ್ತು ʻಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿʼ (ಕೆಎಂಎಫ್‌) ಸಹಕಾರ ನೀಡಿದ್ದವು.

Vistara Awards Vistara Business Excellence Award for 48 accomplished entrepreneurs
Vistara Awards Vistara Business Excellence Award for 48 accomplished entrepreneurs

ಪ್ರಶಸ್ತಿ ನೀಡಲು ಹೆಮ್ಮೆಯಾಗುತ್ತಿದೆ ಎಂದ ಸೂದ್‌

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಖ್ಯಾತ ನಟ ಸೋನು ಸೂದ್‌, ʻʻಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವುದಕ್ಕೆ ಇಲ್ಲಿಯ ಉದ್ಯಮಿಗಳೇ ಕಾರಣ. ಇವರಿಗೆ ಪ್ರೋತ್ಸಾಹ ನೀಡಲು ʻವಿಸ್ತಾರ ನ್ಯೂಸ್‌ʼ ಈ ಪ್ರಶಸ್ತಿ ನೀಡುತ್ತಿರುವುದು ಪ್ರಶಂಸನೀಯʼʼ ಎಂದರಲ್ಲದೆ, ಇಂದು ಪ್ರಶಸ್ತಿ ಸ್ವೀಕರಿಸಿದ ಪ್ರತಿಯೊಬ್ಬರೂ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಕೊಡುಗೆ ಅಪಾರ. ಹೀಗಾಗಿಯೇ ಈ ಪ್ರಶಸ್ತಿ ಪ್ರದಾನ ಮಾಡಲು ತಮಗೆ ಹೆಮ್ಮೆ ಎನಿಸುತ್ತದೆ ಎಂದರು.

Vistara Awards Vistara Business Excellence Award for 48 accomplished entrepreneurs
Vistara Awards Vistara Business Excellence Award for 48 accomplished entrepreneurs

ಸ್ಟಾರ್‌ ನಟಿ ಸಪ್ತಮಿ ಗೌಡ ಮಾತನಾಡಿ, ನಮ್ಮ ನಡುವಿನ ಸಾಧಕರನ್ನು ಈ ರೀತಿ ಗೌರವಿಸುತ್ತಿರುವುದು ಪ್ರಶಂಸನೀಯ ಕಾರ್ಯ. ʻವಿಸ್ತಾರ ನ್ಯೂಸ್‌ʼ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Vistara Awards Vistara Business Excellence Award for 48 accomplished entrepreneurs
Vistara Awards Vistara Business Excellence Award for 48 accomplished entrepreneurs

ವರ್ಣರಂಜಿತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ನಟ ಸೋನು ಸೂದ್‌ ಮತ್ತು ನಟಿ ಸಪ್ತಮಿ ಗೌಡ ಅವರನ್ನು ʻವಿಸ್ತಾರ ನ್ಯೂಸ್‌ʼನ ಪರವಾಗಿ ಗೌರವಿಸಲಾಯಿತು. ವಿಸ್ತಾರ ನ್ಯೂಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಚ್.‌ವಿ. ಧರ್ಮೇಶ್‌ ಹಾಗೂ ಎಕ್ಸಿಕ್ಯುಟಿವ್‌ ಡೈರೆಕ್ಟರ್‌ ಕಿರಣ್‌ ಕುಮಾರ್‌ ಡಿ.ಕೆ. ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್‌ ರಾಘವೇಂದ್ರ ಆಚಾರ್ಯ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಖ್ಯಾತ ರೇಡಿಯೊ ಜಾಕಿ ಆರ್.ಜೆ ನೇತ್ರಾ ಕಾರ್ಯಕ್ರಮವನ್ನು ನಿರೂಪಿಸಿದರು.

Vistara Awards Vistara Business Excellence Award for 48 accomplished entrepreneurs
Vistara Awards Vistara Business Excellence Award for 48 accomplished entrepreneurs

ನಮ್ಮ ಮತ ನಮ್ಮ ಹಕ್ಕು ಎಂದು ಕನ್ನಡದಲ್ಲೇ ಸಾರಿದ ಸೂದ್

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ʻವಿಸ್ತಾರ ಬ್ಯುಸಿನೆಸ್‌ ಎಕ್ಸಲೆನ್ಸ್‌ ಪ್ರಶಸ್ತಿ-2024ʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು. ʻʻರಜೆ ಇದೆ ಎಂದು ಮನೆಯಲ್ಲಿಯೇ ಇರಬೇಡಿ, ಹೋಗಿ ಮತದಾನ ಮಾಡಿ, ಸೂಕ್ತ ನಾಯಕನನ್ನು ಆಯ್ಕೆ ಮಾಡಿʼʼ ಎಂದು ಮನವಿ ಮಾಡಿದ ನಟ ಸೋನು ಸೂದ್‌, ʻʻಬದುಕಲು ನಮ್ಮ ದೇಶ ಅತ್ಯುತ್ತಮ ತಾಣವಾಗಬೇಕಾದರೆ ನಾವೆಲ್ಲರೂ ಮತದಾನ ಮಾಡಲೇಬೇಕುʼʼ ಎಂದರು.

Vistara Awards Vistara Business Excellence Award for 48 accomplished entrepreneurs
Vistara Awards Vistara Business Excellence Award for 48 accomplished entrepreneurs

ಇದನ್ನೂ ಓದಿ: Vistara Awards : ಬೆಸ್ಟ್‌ ಟೀಚರ್‌ ಪ್ರಶಸ್ತಿ ನೀಡಿದ ವಿಸ್ತಾರವೇ ಬೆಸ್ಟ್‌; ಮನದುಂಬಿ ಹಾರೈಸಿದ ಹೊರಟ್ಟಿ

ʻʻನಮ್ಮ ಈ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಇಂಪಾರ್ಟೆಂಟ್‌. ಇದು ನಮಗೆ ಈ ದೇಶವೇ ಕೊಟ್ಟ ಹಕ್ಕು ಈ ಹಕ್ಕನ್ನು ಚಲಾಯಿಸೋಣʼʼ ಎಂದ ನಟಿ ಸಪ್ತಮಿ ಗೌಡ, ಈಗ ಮತದಾನ ಮಾಡುವುದು ಸುಲಭವಾಗಿದೆ. ನಮ್ಮ ಮತ ಎಲ್ಲಿದೆ, ಯಾವ ಬೂತ್‌ ಎಂಬ ಮಾಹಿತಿ ಬೆರಳ ತುದಿಯಲ್ಲಿಯೇ ಸಿಗುತ್ತದೆ. ನಾವೆಲ್ಲರೂ ಮತದಾನ ಮಾಡಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ ಎಂದರು.

Vistara Awards Vistara Business Excellence Award for 48 accomplished entrepreneurs
Vistara Awards Vistara Business Excellence Award for 48 accomplished entrepreneurs

ನಟ ಸೋನು ಸೂದ್‌, ʻನಮ್ಮ ಮತ, ನಮ್ಮ ಹಕ್ಕುʼ ಎಂದು ಕನ್ನಡದಲ್ಲಿಯೇ ಸ್ಪಷ್ಟವಾಗಿ ಹೇಳುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು.

Continue Reading

ಕರ್ನಾಟಕ

National Youth Day : ಯುವಜನರು ಗೆದ್ರೆ ದೇಶ ಗೆದ್ದಂತೆ: ಸಂಚಲನ ಮೂಡಿಸಿದ ವಿಸ್ತಾರ ನ್ಯೂಸ್‌ನ ವಿವೇಕ ವಂದನೆ

National youth day : ವಿಸ್ತಾರ ನ್ಯೂಸ್‌ ಮತ್ತು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅದ್ಧೂರಿಯಾಗಿ ನಡೆಯಿತು.

VISTARANEWS.COM


on

Vistara News vivekananda Janmadina Pavagada japananda swameeji
ವಿಸ್ತಾರ ನ್ಯೂಸ್‌ ಮತ್ತು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅದ್ಧೂರಿಯಾಗಿ ನಡೆಯಿತು.
Koo

ಪಾವಗಡ: ನೀವೇ ಭವಿಷ್ಯದ ಭಾರತ, ಭಾರತ ಉಳಿಯುವುದು ಬೆಳೆಯುವುದು ಏನಿದ್ದರೂ ನಿಮ್ಮಿಂದ: ಹೀಗೆಂದು ಯುವಜನರಿಗೆ ಸ್ಫೂರ್ತಿ ತುಂಬುವ ಜತೆಗೆ ಜವಾಬ್ದಾರಿಯ ಅರಿವು ಮೂಡಿಸಿದರು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ (Pavagada SrI Ramakrishna Sevashrama) ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್ (Swamee Japanandajee Maharaj).

ಸ್ವಾಮಿ ವಿವೇಕಾನಂದ ಅವರ 160ನೇ ಜನ್ಮ ದಿನಾಚರಣೆಯ (Swami Vivekananda Birthday) ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ (Vistara News) ಶ್ರೀ ರಾಮಕೃಷ್ಣ ಸೇವಾಶ್ರಮದ ಸಹಯೋಗದಲ್ಲಿ ಪಾವಗಡದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ (National Youth Day) ಅವರು ಮಾತನಾಡಿದರು. ಪಾವಗಡದ ಎಸ್‌ಎಸ್‌ಕೆ ಬಯಲು ರಂಗ ಮಂದಿರದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಿದರು.

ಈ ದೇಶದ ನಿಜವಾದ ಭವಿಷ್ಯ ಇರುವುದು ಯುವಜನರಲ್ಲಿ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದ ಯುವಜನರಲ್ಲಿ. ಅವರ ಶಕ್ತಿಯೇ ಭಾರತದ ನಿಜವಾದ ಶಕ್ತಿ ಎಂದು ಹೇಳಿದ ಜಪಾನಂದ ಸ್ವಾಮೀಜಿ ಅವರು, ವಿಸ್ತಾರ ನ್ಯೂಸ್‌ ಗ್ರಾಮೀಣ ಭಾಗದಲ್ಲಿ ಇಂಥಹುದೊಂದು ಅದ್ಭುತ ಕಾರ್ಯಕ್ರಮದ ಮೂಲಕ ಯುವಜನರನ್ನು ಬಡಿದೆಬ್ಬಿಸಿದ್ದು ಶ್ಲಾಘನೀಯ ಕಾರ್ಯ ಎಂದು ಬೆನ್ನು ತಟ್ಟಿದರು.

ಎರಡನೇ ವರ್ಷದ ಅಪೂರ್ವ ಕಾರ್ಯಕ್ರಮ

2022ರ ನವೆಂಬರ್‌ 6ರಂದು ಲೋಕಾರ್ಪಣೆಗೊಂಡ ವಿಸ್ತಾರ ನ್ಯೂಸ್‌ ಚಾನೆಲ್‌ ಈಗಾಗಲೇ ಎರಡು ಬಾರಿ ವಿವೇಕಾನಂದ ಜನ್ಮದಿನೋತ್ಸವವನ್ನು ಆಯೋಜಿಸಿದೆ. ಮೊದಲ ಬಾರಿ 2023ರ ಜನವರಿ 12ರಂದು ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ರಾಜ್ಯ ಮಟ್ಟದ ಅದ್ಧೂರಿ ಕಾರ್ಯಕ್ರಮವನ್ನು ನಡೆಸಿದ್ದ ವಿಸ್ತಾರ ನ್ಯೂಸ್‌, ಎರಡನೇ ವರ್ಷದ ಕಾರ್ಯಕ್ರಮವನ್ನು ತಾಲೂಕು ಕೇಂದ್ರವಾದ ಪಾವಗಡದಲ್ಲಿ ನಡೆಸುವ ಮೂಲಕ ತಾನೆಷ್ಟು ಭಿನ್ನ ಎಂಬುದನ್ನು ಜಗತ್ತಿಗೆ ತೋರಿಸಿತು.

ಕಾರ್ಯಕ್ರಮದಲ್ಲಿ ವಿಸ್ತಾರ ಸಂಸ್ಥೆಯ ಈ ವಿಶೇಷತೆಯನ್ನು ಎತ್ತಿ ಹೇಳಿದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಕಿರಣ್‌ ಕುಮಾರ್‌ ಡಿ.ಕೆ. ಅವರು, ಚಾನೆಲ್‌ ಆರಂಭವಾಗಿ ಒಂದೇ ವರ್ಷದಲ್ಲಿ ಅದು ಜನರನ್ನು ಮನಸ್ಸನ್ನು ಮುಟ್ಟಿದ ರೀತಿಯನ್ನು ಹೆಮ್ಮೆಯಿಂದ ಸ್ಮರಿಸಿದರು. ವಿಸ್ತಾರ ನ್ಯೂಸ್‌ನ ವೈವಿಧ್ಯಮಯ ಕಾರ್ಯಕ್ರಮಗಳು, ಅದು ಮಾಡಿದ ಅದ್ಭುತ ಪರಿಣಾಮಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ತಾವು ಏನಾಗಬೇಕು ಎಂದು ಮೊದಲು ಕ್ಲಿಯರ್‌ ಮಾಡಿಕೊಂಡು ಮುಂದಡಿ ಇಡಿ ಎಂದು ಅವರು ಕಿವಿ ಮಾತು ಹೇಳಿದರು.

ಪ್ರದೀಪ್‌‌ ಈಶ್ವರ್‌ ಪ್ರತಿ ಮಾತಿಗೆ ಕುಣಿದಾಡಿದ ಯುವಜನ

ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದವರು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್‌ ಈಶ್ವರ್‌ ಅವರು. ತಮ್ಮ ವಿಭಿನ್ನ ಶೈಲಿಯ ಸ್ಫೂರ್ತಿದಾಯಕ ಭಾಷಣಕ್ಕೆ ಹೆಸರಾದ ಪ್ರದೀಪ್‌ ಈಶ್ವರ್‌ ಅವರ ಒಂದೊಂದು ಮಾತಿಗೂ ಚಪ್ಪಾಳೆಗಳ ಸುರಿಮಳೆಯೇ ಸುರಿಯಿತು.

ʻಸುಮ್‌ ಸುಮ್ನೆ ಗೆದ್ದರೆ ವಿಕ್ಟರಿ.. ಕಷ್ಟಪಟ್ಟು ಗೆದ್ರೆ ಹಿಸ್ಟರಿʼ, ʻʻನಮಗೆ ಅಷ್ಟು ಜನ ಫಾಲೋವರ್ಸ್‌ ಇದಾರೆ ಎಂದು ಬೀಗಬೇಡಿ, ಕಷ್ಟ ಬಂದಾಗ ಯಾವ ಫಾಲೋವರ್‌ ಕೂಡಾ ಬರಲ್ಲ, ನಮ್ಮ ತಂದೆ ತಾಯಿನೇ ಬರೋದುʼʼ ಎಂಬ ಡೈಲಾಗ್‌ಗಳ ಮೂಲಕ ಅವರು ಯುವಜನರ ಮನ ಗೆದ್ದರು.

ʻʻಕಷ್ಟಪಟ್ಟು ಓದಿ, ಇಷ್ಟಪಟ್ಟು ಓದಿ.. ಪರೀಕ್ಷೆಯಲ್ಲಿ ಫೇಲಾಗೋದು ತಪ್ಪಲ್ಲ, ಬದುಕಲ್ಲಿ ಫೇಲಾಗದಂತೆ ನೋಡಿಕೊಳ್ಳಿʼ, ನೀವು ಚೆನ್ನಾಗಿ ಕಲಿತು ಅಮೆರಿಕಕ್ಕೆ ಹೋಗಿ ಕೆಲಸ ಮಾಡ್ತೀನಿ ಅಂದ್ಕೊಬೇಡಿ. ಅಮೆರಿಕದ ಹುಡುಗರು ನಮ್ಮೂರಿನ ಗಲ್ಲಿಗೆ ಬಂದು ಕೆಲಸ ಮಾಡೋ ಹಾಗೆ ಮಾಡಿʼ, ಮಗನೇ ನೀನು ಹೇಗೆ ಓದ್ಬೇಕು ಅಂದರೆ ಇಡೀ ಕರ್ನಾಟಕಾನೇ ನಾಳೆ ನಿನ್ನ ಬಗ್ಗೆ ಓದ್ಬೇಕುʼ ಎಂದು ಹೇಳುವ ಮೂಲಕ ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹಾಗೂ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಸಹ ಸಂಸ್ಥೆಗಳ ಸಲಹಾ ಸಮಿತಿ ಅಧ್ಯಕ್ಷ ಎಚ್. ಬಿಲ್ಲಪ್ಪ, ಪಾವಗಡ ಶಾಸಕ ಎಚ್.ವಿ. ವೆಂಕಟೇಶ್, ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಆನಂದ ರಾವ್‌, ಪಾವಗಡ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಮ್ಮ ಅವರು ಭಾಗವಹಿಸಿದ್ದರು.

ವಿವೇಕಾನಂದ ಜಯಂತಿ ಸಂದರ್ಭದಲ್ಲಿ ಹೈಸ್ಕೂಲ್‌ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಭಾಷಣ‌ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಟ್ರೋಫಿ ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಿಆರ್‌ಪಿ ಆಗಿರುವ ಸಾದಿಕ್‌ ಉಲ್ಲಾ ಷರೀಫ್‌ ಮತ್ತು ಶಿಕ್ಷಕಿ ದುರ್ಗಮ್ಮ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

vivekananda janmadina pavagada
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

ವೈವಿ‌ಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಬೆಳಗ್ಗೆ ಶ್ರೀ ರಾಮಕೃಷ್ಣ ಸೇವಾಶ್ರಮದ ವೃಂದದವರಿಂದ ಸ್ವಾಮಿ ವಿವೇಕಾನಂದರ ಸ್ಫೂರ್ತಿ ವಾಣಿ ಕಾರ್ಯಕ್ರಮ (ಸ್ವಾಮಿ ವಿವೇಕಾನಂದರು ಹಾಗೂ ಯುವ ಜನತೆಗಾಗಿ ಸ್ಫೂರ್ತಿಭರಿತ ಗೀತೆಗಳು) ನಡೆಯಿತು. ಸ್ವತಃ ರಾಮಕೃಷ್ಣ ಸೇವಾಶ್ರಮ ಸ್ವಾಮಿ ಜಪಾನಂದ ಮಹಾರಾಜ್‌ ಅವರೇ ಪ್ರಮುಖ ಗಾಯಕರಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

ಪಾವಗಡದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದ ವಿದ್ಯಾರ್ಥಿನಿಯರು ಮತ್ತು ಶ್ರೀಶಾಲಾ ಇಂಟರ್‌ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

vivekananda janmadina pavagada
vivekananda janmadina pavagada

ಪಾವಗಡ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಿ.ಬಸವಲಿಂಗಪ್ಪ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಮಾರಪ್ಪ, ಶಾಂತಿ ಎಸ್.ಎಸ್.ಕೆ. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವಿನಯ್ ಬಾಬು, ಶಾಂತಿ ಎಸ್.ಎಸ್.ಕೆ. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಜಿ.ಮನೋಜ್ ಕುಮಾರ್, ಸ್ವಾಮಿ ವಿವೇಕಾನಂದ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗೇಂದ್ರ ಅವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಜನ ಮೆಚ್ಚಿದ ಕಾರ್ಯಕ್ರಮ; ಪಾವಗಡ ಫುಲ್‌ ಖುಷ್‌

vivekananda janmadina pavagada
vivekananda janmadina pavagada

ಎಸ್‌ಎಸ್‌ಕೆ ಸಂಘದ ಬಯಲು ರಂಗ ಮಂದಿರ ತುಂಬಿ ತುಳುಕಿದ ಕಾರ್ಯಕ್ರಮ ಇಡೀ ಪಾವಗಡದಲ್ಲಿ ಸಂಚಲನ ಸೃಷ್ಟಿಸಿತು. ವಿಸ್ತಾರ ನ್ಯೂಸ್‌ನ ಪಾವಗಡ ವರದಿಗಾರ ಇಮ್ರಾನ್‌ ಉಲ್ಲಾ ಅವರು ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರು. ತಲ್ಲಂ ಲಕ್ಷ್ಮೀ ಬಾಬು ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ವಿಸ್ತಾರ ನ್ಯೂಸ್‌ ಆಯೋಜಿಸುವ ಇಂಥ ಸಮಾಜಮುಖಿ, ಪರಿವರ್ತನಶೀಲ ಕಾರ್ಯಕ್ರಮಕ್ಕೆ ಪಾವಗಡದ ಜನರ ಬೆಂಬಲ ಸದಾ ಇದೆ ಎಂದು ಅಲ್ಲಿನ ಜನಪ್ರತಿನಿಧಿಗಳು, ಪ್ರಮುಖರು ಭರವಸೆ ನೀಡಿದರು.

Continue Reading

ಕರ್ನಾಟಕ

Vistara News Awards: ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್-‌2023 ಶುಕ್ರವಾರ ಪ್ರದಾನ

Vistara News Awards : ನಾಡಿಗೆ ಶ್ರೇಷ್ಠ ವ್ಯಕ್ತಿಗಳನ್ನು ಸಮರ್ಪಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುವ ಶಿಕ್ಷಕ ಸಮುದಾಯವನ್ನು ಗೌರವಿಸುವುದು ವಿಸ್ತಾರ ನ್ಯೂಸ್‌ನ ಧ್ಯೇಯ. ಅದರ ಒಂದು ಭಾಗವೇ ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌-2023.

VISTARANEWS.COM


on

Best teachers Vistaranews awards
Koo

ಬೆಂಗಳೂರು: ಅಲ್ಪಾವಧಿಯಲ್ಲೇ ರಾಜ್ಯಾದ್ಯಂತ ಮನೆ ಮಾತಾಗಿ, ರಾಜ್ಯದ ಪ್ರಭಾವಶಾಲಿ ಸುದ್ದಿ ಮಾಧ್ಯಮ ಎನಿಸಿಕೊಂಡಿರುವ ವಿಸ್ತಾರ ನ್ಯೂಸ್‌ (Vistara News private Ltd) ನಾಡಿನ ಬೆಳಕಾಗಿರುವ ಶ್ರೇಷ್ಠ ಶಿಕ್ಷಕರನ್ನು ಗುರುತಿಸಿ ಗೌರವಿಸುವ (Vistara News Awards) ಉದ್ದೇಶದಿಂದ ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್ಸ್‌ -2023 (Vistara News Best teacher award-2023) ಯನ್ನು ನೀಡುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು (District level awards) ಅತ್ಯುತ್ತಮ ಶಿಕ್ಷಕರಿಗೆ ನೀಡಲಾಗುತ್ತಿದ್ದು, ಬೆಂಗಳೂರು ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ (Award function) ಡಿಸೆಂಬರ್‌ 22ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ತಮ್ಮ ಅನುಭವ, ಶಿಸ್ತು ಮತ್ತು ಸಾಮರ್ಥ್ಯಗಳನ್ನು ಧಾರೆ ಎರೆದು ವಿದ್ಯಾರ್ಥಿಗಳನ್ನು ಶ್ರೇಷ್ಠ ವ್ಯಕ್ತಿಗಳಾಗಿ, ಸಮಾಜದಲ್ಲಿ ಗಣ್ಯ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಅಡಿಗಲ್ಲಿಡುವ ಶಿಕ್ಷಕರು ತಾವು ಮಾತ್ರ ಎಲೆಮರೆ ಕಾಯಿಗಳಾಗಿಯೇ ಉಳಿಯುತ್ತಾರೆ. ಅಂಥ ಶಿಕ್ಷಕರನ್ನು ಗುರುತಿಸಿ ಪುರಸ್ಕರಿಸುವ ಮೂಲಕ ಶಿಕ್ಷಕ ಸಮುದಾಯವನ್ನು ಗೌರವಿಸುವ ಉದಾತ್ತ ಆಶಯದೊಂದಿಗೆ ವಿಸ್ತಾರ ನ್ಯೂಸ್‌ ಈ ಪ್ರಶಸ್ತಿಯನ್ನು ಆರಂಭಿಸಿದೆ.

Vistara News Best teachers award

ಎಲ್ಲರ ಬಾಳನ್ನು ಬೆಳಗಿಸುವ ಶಿಕ್ಷಕರನ್ನು ಪ್ರಶಸ್ತಿಯ ಕಿರೀಟ ತೊಡಿಸಿ ಅವರ ಸಂತೃಪ್ತಿಯಲ್ಲಿ ಸಂಭ್ರಮಿಸಬೇಕು ಎನ್ನುವುದು ವಿಸ್ತಾರ ನ್ಯೂಸ್‌ನ ಆಶಯ. ಅದರ ಜತೆಗೆ ಇದು ಇನ್ನಷ್ಟು ಶಿಕ್ಷಕರಿಗೆ ಪ್ರೋತ್ಸಾಹ ನೀಡಿದಂತಾಗಬೇಕು ಎನ್ನುವುದು ನಮ್ಮ ಕನಸು ಎನ್ನುತ್ತಾರೆ ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು.

ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರನ್ನು ಮತ್ತು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದ್ದು, ಈಗಾಗಲೇ ಬಳ್ಳಾರಿ, ಬೀದರ್‌, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳು ನಡೆದಿದೆ. ಈಗ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಗಣ್ಯರು, ಸಾಧಕರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು ಜಿಲ್ಲಾ ಮಟ್ಟದ ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌-2023 ಪ್ರದಾನ ಕಾರ್ಯಕ್ರಮ ಡಿಸೆಂಬರ್‌ 22ರ ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಎಫ್‌ಕೆಸಿಸಿಐಗೆ ಸೇರಿದ ಸರ್‌ ಎಂವಿ ಸಭಾಂಗಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿಗಳಾದ ಶಿಕ್ಷಣ ತಜ್ಞ ಬಸವರಾಜ ಹೊರಟ್ಟಿ ಅವರು ಉದ್ಘಾಟಿಸಲಿದ್ದಾರೆ. ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಅವರು ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನಸಭೆ ವಿಪಕ್ಷ ನಾಯಕರಾದ ಆರ್‌. ಅಶೋಕ್‌, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರು ಮತ್ತು ಪರಿಶ್ರಮ ನೀಟ್‌ ಅಕಾಡೆಮಿಯ ಸಂಸ್ಥಾಪಕರಾದ ಪ್ರದೀಪ್‌ ಈಶ್ವರ್‌, ಖ್ಯಾತ ಚಿತ್ರ ನಟಿ ತಾರಾ ಅನುರಾಧಾ ಅವರು ಭಾಗವಹಿಸಲಿದ್ದಾರೆ.

Best teachers award Invitation

ಶಿಕ್ಷಣ ಕ್ಷೇತ್ರದ ಪ್ರಯೋಗಶೀಲರ ಘನ ಉಪಸ್ಥಿತಿ

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆದ ಹಲವು ಸಾಧಕ ವ್ಯಕ್ತಿಗಳು, ಚಿಂತಕರು, ಶಿಕ್ಷಣ ತಜ್ಞರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

  1. ವಲ್ಲೀಶ್‌ ಹೇರೂರ್‌, ಮ್ಯಾನೇಜಿಂಗ್‌ ಟ್ರಸ್ಟಿ, ಪ್ರಯೋಗ ಇನ್ಸ್‌ಟಿಟ್ಯೂಟ್‌ ಆಫ್‌ ಎಜುಕೇಶನ್‌ ರಿಸರ್ಚ್‌
  2. ಡಿ. ಶಶಿಕುಮಾರ್‌, ಶಿಕ್ಷಣ ತಜ್ಞರು ಮತ್ತು ನಿರ್ದೇಶಕರು, ಬ್ರೈನ್‌ ಸೆಂಟರ್‌, ಶಿಕ್ಷಣ ಸಂಶೋಧನಾ ಕೇಂದ್ರ
  3. ಡಾ. ಕೆ.ಆರ್‌. ಪರಮಹಂಸ, ಅಧ್ಯಕ್ಷರು ಎಎಂಸಿ ಸಮೂಹ ಶಿಕ್ಷಣ ಸಂಸ್ಥೆಗಳು
  4. ಡಾ. ಟಿ ವೇಣುಗೋಪಾಲ್‌, ಅಧ್ಯಕ್ಷರು, ನ್ಯೂ ಬಾಲ್ಡ್‌ವಿನ್‌ ಸಮೂಹ ಶಿಕ್ಷಣ ಸಂಸ್ಥೆಗಳು
  5. ಡಾ. ಡಿ.ಕೆ. ಮೋಹನ್‌, ಅಧ್ಯಕ್ಷರು, ಕೇಂಬ್ರಿಡ್ಜ್‌ ಸಮೂಹ ಶಿಕ್ಷಣ ಸಂಸ್ಥೆಗಳು

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕುಮಾರಿ ನೇಹಾ ಅವರಿಂದ ಭರತನಾಟ್ಯವಿದೆ.

ಗುರುಗಳನ್ನು ಗೌರವಿಸುವ ನಮ್ಮ ದೇಶದ ಪರಂಪರೆಯನ್ನು ಮುಂದುವರಿಸುವ ವಿಸ್ತಾರ ನ್ಯೂಸ್‌ನ ಈ ಹೆಮ್ಮೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ವಿಸ್ತಾರ ನ್ಯೂಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಚ್‌.ವಿ. ಧರ್ಮೇಶ್‌, ಎಕ್ಸಿಕ್ಯೂಟಿವ್‌ ಚೇರ್ಮನ್‌ ಡಾ.ಎಚ್‌.ಎಸ್‌. ಶೆಟ್ಟಿ, ನಿರ್ದೇಶಕರಾದ ಶ್ರೀನಿವಾಸ್‌ ಹೆಬ್ಬಾರ್‌, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಂಪಾದಕ – ಸ್ಪೆಷಲ್‌ ಆಪರೇಷನ್ಸ್‌ ಕಿರಣ್‌ ಕುಮಾರ್‌ ಡಿ.ಕೆ. ಅವರು ವಿನಂತಿಸಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಕನ್ನಡ ಶಾಲೆಗಳಿಗೆ ವಿಸ್ತಾರ ನ್ಯೂಸ್‌ ಅಪೂರ್ವ ಕೊಡುಗೆ

ವಿಸ್ತಾರ ನ್ಯೂಸ್‌ ಸುದ್ದಿ ಪ್ರಸಾರದ ಜತೆಗೇ ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅದರಲ್ಲೂ ಮುಖ್ಯವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟಿದೆ. ಸವಲತ್ತುಗಳಿಲ್ಲದ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ಊರಿನ ನಾಗರಿಕರು, ದಾನಿಗಳ ಸಹಯೋಗ ಮತ್ತು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆ ಈಗಾಗಲೇ ನಾಡಿನೆಲ್ಲೆಡೆ ಮನೆಮಾತಾಗಿದೆ. ʼನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼ ಅಭಿಯಾನದಡಿ ಕಳೆದ ಒಂದು ವರ್ಷದ ಅವಧಿಯಲ್ಲಿ 300ಕ್ಕೂ ಹೆಚ್ಚು ಶಾಲೆಗಳು ದಾನಿಗಳ ನೆರವಿನಿಂದ ಮೂಲ ಸೌಕರ್ಯಗಳನ್ನು ಪಡೆದಿದೆ. ಹಲವಾರು ಗಣ್ಯರು‌ ಇದರಲ್ಲಿ ಕೈಜೋಡಿಸಿದ್ದಾರೆ.

ಇದನ್ನೂ ಓದಿ: Vistara Best Teacher Award: ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌ ಕಾರ್ಯಕ್ರಮಕ್ಕೆ ಚಾಲನೆ

ಇದೇ ವೇಳೆ ಶಾಲೆಗಳಿಗೆ ಅತ್ಯುತ್ತಮ ಕೊಡುಗೆ ನೀಡುತ್ತಿರುವ ಶಿಕ್ಷಕರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕಾರ್ಯ ಕೂಡ ಮಾಡಲಾಗುತ್ತಿದೆ. ಅತ್ಯುತ್ತಮ ಶಾಲೆಗಳನ್ನು ಗುರುತಿಸಿ ಪರಿಚಯ ಮಾಡಲಾಗುತ್ತಿದೆ. ವಿಸ್ತಾರ ನ್ಯೂಸ್‌ನಲ್ಲಿ ಪ್ರತಿದಿನವೂ ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಕನ್ನಡ ಶಾಲೆಗಳ ಅಭಿವೃದ್ಧಿಯ ಹೊಸ ಶಕೆಯೇ ಆರಂಭಗೊಂಡಿದೆ.

ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್-‌2023 ಪ್ರದಾನ ಸಮಾರಂಭದ ಆಹ್ವಾನ

ಹಲವು ಸಂಘ ಸಂಸ್ಥೆಗಳ ಬೆಂಬಲ

ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌ ಪ್ರದಾನ ಕಾರ್ಯಕ್ರಮವನ್ನು ಬೆಂಬಲಿಸಿ ಹಲವು ಶಿಕ್ಷಣ ಸಂಸ್ಥೆಗಳು ವಿಸ್ತಾರ ನ್ಯೂಸ್‌ ಬೆಂಗಾವಲಿಗೆ ನಿಂತಿವೆ. ರಾಮಯ್ಯ ಯುನಿವರ್ಸಿಟಿ ಆಪ್‌ ಅಪ್ಲೈಡ್‌ ಸೈನ್ಸಸ್‌, ನ್ಯೂ ಬಾಲ್ಡ್‌ ವಿನ್‌ ಗ್ರೂಪ್‌ ಆಫ್‌ ಇನ್ಸ್‌ಟಿಟ್ಯೂಟ್ಸ್‌, ಕೇಂಬ್ರಿಜ್‌ ಗ್ರೂಪ್‌ ಆಫ್‌ ಇನ್ಸ್‌ಟಿಟ್ಯೂಟ್ಸ್‌, ಎಎಂಸಿ ಎಜುಕೇಶನ್‌ ಮತ್ತು ಎಸ್‌ಡಿಪಿಇಟಿ ಶಿಕ್ಷಣ ಸಂಸ್ಥೆಗಳು ವಿಸ್ತಾರ ನ್ಯೂಸ್‌ನ ಉದಾತ್ತ ಆಶಯವನ್ನು ಬೆಂಬಲಿಸಿವೆ.

Continue Reading

ಬೆಂಗಳೂರು

Sharath MS: ವಿಸ್ತಾರ ನ್ಯೂಸ್‌ನ ಶರತ್ ಎಂ.ಎಸ್‌ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ

Sharath MS:: ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ಸಂಪಾದಕ ಶರತ್‌ ಎಂ.ಎಸ್ ಅವರಿಗೆ ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆಯಿಂದ ʼಮಾಧ್ಯಮ ರತ್ನ ಪ್ರಶಸ್ತಿʼ ನೀಡಿ ಗೌರವಿಸಲಾಗಿದೆ.

VISTARANEWS.COM


on

Sharath MS
Koo

ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆ ವತಿಯಿಂದ ನಗರದ ವೈಯಾಲಿಕಾವಲ್ ಬಳಿಯ ತೆಲುಗು ವಿಜ್ಞಾನ ಸಮಿತಿ ಸಭಾಂಗಣದಲ್ಲಿ ಬುಧವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ಸಂಪಾದಕ ಶರತ್ ಎಂ.ಎಸ್ (Sharath MS) ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿವಿಧ ಸಾಧಕರಿಗೆ ಮಾಜಿ ಸಚಿವ ಸಿ.ಎನ್ ಅಶ್ವತ್ಥ್ ನಾರಾಯಣ್ ಸೇರಿ ಹಲವು ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಆದರ್ಶ ರತ್ನ, ದ್ರೋಣ ರತ್ನ, ಕನ್ನಡ ರತ್ನ, ಸಾಧನೆ ರತ್ನ, ದಂತ ರತ್ನ ಸೇರಿ ಹಲವು ಪ್ರಶಸ್ತಿಗಳನ್ನು ನೀಡಲಾಯಿತು.

ರಾಷ್ಟ್ರ ಪ್ರಶಸ್ತಿ, ಮುಖ್ಯಮಂತ್ರಿ ಪದಕ ಪುರಸ್ಕೃತ ದಕ್ಷ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜ ಸೇವಕರನ್ನು, ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪರೀಕ್ಷೆ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ಸಂಪಾದಕ ಶರತ್ ಎಂ.ಎಸ್ ಅವರು ಮಾತ್ರವಲ್ಲದೆ ಪತ್ರಕರ್ತರಾದ ಟಿವಿ 5 ವಾಹಿನಿಯ ಅರ್ಚನ ಶರ್ಮ, ಸುವರ್ಣ ನ್ಯೂಸ್‌ನ ಸುಗುಣ ಶ್ರೀನಿವಾಸ್‌, ಕರ್ನಾಟಕ ಡಿಜಿಟಲ್‌ ಟಿವಿಯ ಶಿವು ಬೆಸಗರಹಳ್ಳಿ, ಟಿವಿ 9 ಮಾಲತೇಶ್‌ ಜಗ್ಗೀನ್‌, ಪವರ್‌ ಟಿವಿಯ ಲೋಕೇಶ್‌ ಗೌಡ, ನ್ಯೂಸ್‌ 18 ವಾಹಿನಿಯ ಭೈರಹನುಮಯ್ಯ, ಝೀ ಕನ್ನಡ ವಾಹಿನಿಯ ಪ್ರಕಾಶ್‌ ಎಚ್.ಟಿ. ಅವರು ಸಹ ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ | ವಿದ್ವಾನ್ ರಂಗನಾಥ ಶರ್ಮ ಪ್ರಶಸ್ತಿಗೆ ಡಾ. ಸುಮಾ ಶಿವಾನಂದ ದೇಸಾಯಿ ಆಯ್ಕೆ

ಜನ್ಮ ಭೂಮಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೃಷ್ಣಪ್ಪ ಅವರು ಮಾತನಾಡಿ, ನಮ್ಮ ಸಂಘದಿಂದ ರಾಜ್ಯದಲ್ಲಿ ನಾಡು ನುಡಿಗಾಗಿ ಶ್ರಮಿಸಿದ ಸಾಧಕರಿಗೆ ಕಳೆದ ಹಲವು ವರ್ಷಗಳಿಂದ ಸನ್ಮಾನಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಿಕೊಂಡು ಬಂದಿದ್ದು, ವಿವಿಧ ರಂಗದಲ್ಲಿ ಸಾಮಾಜಿಕ ಏಳಿಗೆಗಾಗಿ ದುಡಿದ ಸಾಧಕರನ್ನು ಈ ಬಾರಿಯೂ ಗುರುತಿಸಲಾಗಿದೆ ಎಂದು ತಿಳಿಸಿದರು.

ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
UGCET 2024 seat allotment process begins Only a few days left for the option to enter
ಬೆಂಗಳೂರು2 mins ago

UGCET 2024 : ಯುಜಿಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ; ಆಪ್ಶನ್ ಎಂಟ್ರಿ ಮಾಡಲು ಕೆಲವೇ ದಿನಗಳು ಬಾಕಿ!

Actor Darshan Lata Jaiprakash says that since Darshan is a devotee of God,
ಸಿನಿಮಾ16 mins ago

Actor Darshan: ದರ್ಶನ್ ದೈವ ಭಕ್ತ, ಜೈಲಿಗೆ ಸೇರಿದ್ದಾಗಿನಿಂದ ವಿಜಯಲಕ್ಷ್ಮಿ ಅತ್ತಿಗೆ ಹೋರಾಟ ಜಾಸ್ತಿ ಆಗಿದೆ ಎಂದ ಲತಾ ಜೈಪ್ರಕಾಶ್!

Paris Olympics
ಕ್ರೀಡೆ20 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆ; ಜೂಡೊಪಟು ತಾತ್ಕಾಲಿಕ ಅಮಾನತು

illicit relationship raichur siravara
ಕ್ರೈಂ30 mins ago

Illicit Relationship: ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

Gold Rate Today
ಚಿನ್ನದ ದರ30 mins ago

Gold Rate Today: ಬಜೆಟ್‌ ಬಳಿಕ ಇದೇ ಮೊದಲ ಬಾರಿ ಏರಿಕೆ ಕಂಡ ಚಿನ್ನದ ದರ; ಇಂದು ಇಷ್ಟು ದುಬಾರಿ

Actor Darshan Astrologer Chanda Pandey Said Facing Problems Because Of His vig
ಕ್ರೈಂ50 mins ago

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Encounter in Kupwara
ದೇಶ1 hour ago

Encounter in Kupwara: ಕುಪ್ವಾರಾದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೈನಿಕರಿಗೆ ಗಾಯ; ಓರ್ವ ಉಗ್ರ ಹತ

Champions Trophy 2025
ಕ್ರೀಡೆ1 hour ago

Champions Trophy 2025: ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ; ಟೀಮ್ ಇಂಡಿಯಾಗೆ ಪಾಕ್​ ಆಟಗಾರನ ಮನವಿ

Murder in PG Case
ಕ್ರೈಂ1 hour ago

Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

kaveri aarti
ಪ್ರಮುಖ ಸುದ್ದಿ2 hours ago

Kaveri Aarti: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ; ದಸರಾ ಹೊತ್ತಿಗೆ ರೆಡಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ16 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ18 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ18 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ19 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌