HSRP Number Plate: ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಪಡೆಯೋದು ಹೇಗೆ? ಅಳವಡಿಸದಿದ್ರೆ ಭಾರಿ ದಂಡ! Vistara News
Connect with us

ಆಟೋಮೊಬೈಲ್

HSRP Number Plate: ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಪಡೆಯೋದು ಹೇಗೆ? ಅಳವಡಿಸದಿದ್ರೆ ಭಾರಿ ದಂಡ!

HSRP Number Plate: ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ದ್ವಿಚಕ್ರ, ತ್ರಿಚಕ್ರ ಸೇರಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ. ಎಚ್‌ಎಸ್‌ಆರ್‌ಪಿ ಪಡೆಯುವುದು ಹೇಗೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

VISTARANEWS.COM


on

HSRP Number Plate
Koo

ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಿ ಅಳವಡಿಸಬೇಕು ಎಂದು ಈಗಾಗಲೇ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಾಗಿ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಅವಕಾಶವಿದೆ. ಹೀಗಾಗಿ ಗಡುವಿನೊಳಗೆ ವಾಹನ ಮಾಲೀಕರು ಹೊಸ ಮಾದರಿಯ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಬೇಕು, ಇಲ್ಲದಿದ್ದರೆ 500ರಿಂದ 1000 ರೂ. ದಂಡ ಕಟ್ಟಬೇಕಾಗುತ್ತದೆ.

2019ರ ಏಪ್ರಿಲ್‌ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು (High Security Registration Plate-ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗಸ್ಟ್‌ 17ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದೇ ರೀತಿ ಆ.18ರಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಹೀಗಾಗಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ.

ಅರ್ಜಿ ಸಲ್ಲಿಕೆಗೆ ನವೆಂಬರ್‌ 17 ಕೊನೇ ದಿನ

ಯೋಗೇಶ್ ಎ ಎಂ

ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನ, ಪ್ರಯಾಣಿಕ ಕಾರು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಯೋಗೇಶ್ ಎ.ಎಂ ಅವರು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ಏನಿದು ಎಚ್ಎಸ್ಆರ್‌ಪಿ ನಂಬರ್‌ ಪ್ಲೇಟ್‌?

ಎಚ್‌ಎಸ್‌ಆರ್‌ಪಿ ಎಂದರೆ ಅತಿ ಸುರಕ್ಷಿತ ನೋಂದಣಿ ಫಲಕವಾಗಿದೆ. ಇವುಗಳನ್ನು ಅಲ್ಯೂಮಿನಿಯಂ ಲೋಹದಿಂದ ಮಾಡಿರುತ್ತಾರೆ. ಈ ಪ್ಲೇಟ್‌ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್‌ ಇರುತ್ತದೆ. ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಈ ನಂಬರ್‌ ಪ್ಲೇಟ್‌ಗಳನ್ನು ಎರಡು ಲಾಕ್‌ ಪಿನ್‌ಗಳನ್ನು ಬಳಸಿ ಅಳವಡಿಸುತ್ತಾರೆ. ಇದರಿಂದ ಒರಿಜಿನಲ್‌ ಯಾವುದು, ನಕಲಿ ಯಾವುದು ಎಂದು ಸುಲಭವಾಗಿ ಗುರುತಿಸಬಹುದು.

ಎಚ್ಎಸ್ಆರ್‌ಪಿ ಪಡೆಯುವುದು ಹೇಗೆ?

  1. ಕರ್ನಾಟಕ ಸಾರಿಕೆ ಇಲಾಖೆ ವೆಬ್‌ಸೈಟ್‌ ಅಥವಾ ಸೊಸೈಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮ್ಯಾನುಫ್ಯಾಕ್ಚರರ್ಸ್‌ (ಎಸ್‌ಐಎಎಂ) ವೆಬ್‌ಸೈಟ್‌ ಭೇಟಿ ನೀಡಿ ಮತ್ತು Book HSRP ಅನ್ನು ಕ್ಲಿಕ್‌ ಮಾಡಿ.
  2. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
  3. ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
  4. HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
  5. HSRP ಶುಲ್ಕವನ್ನು ಅನ್‌ಲೈನ್‌ನಲ್ಲಿ ಪಾವತಿಸಿ, ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
  6. ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುವುದು.
  7. ನಿಮ್ಮ ಅನುಕೂಲಕ್ಕೆ ತಕ್ಕಂತಹ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
  8. ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.
  9. ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ.

ಇದನ್ನೂ ಓದಿ | HSRP Number Plate : ಹಳೆ ವಾಹನಗಳಿಗೂ ಇನ್ನು HSRP ನಂಬರ್‌ ಪ್ಲೇಟ್‌ ಕಡ್ಡಾಯ; ನ. 17ರ ನಂತ್ರ ಬೀಳುತ್ತೆ ದಂಡ!

ಪ್ರಮುಖ ಅಂಶಗಳು

  1. ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್‌ ಅಥವಾ ಎಸ್‌ಐಎಎಂ ವೆಬ್‌ಸೈಟ್‌ ಮೂಲಕ HSRP ಅಳವಡಿಕೆಗೆ ಕಾಯ್ದಿರಿಸಿಕೊಳ್ಳಿ.
  2. ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್ / IND ಮಾರ್ಕ್ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP, ಒಂದೇ ರೀತಿಯ ಪ್ಲೇಟ್‌ಗಳು, ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಅವುಗಳು HSRP ಫಲಕಗಳಾಗಿರುವುದಿಲ್ಲ.
  3. HSRP ಅಳವಡಿಸದ ಹೊರತು, ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು, ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳಿಗೆ ಅನುಮತಿಸುವುದಿಲ್ಲ.
  4. ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ HSRP ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿರುವುದಿಲ್ಲ.
  5. HSRP ಅಳವಡಿಕೆಗೆ ನವೆಂಬರ್‌ 17 ಆಗಿದ್ದು, ಕೂಡಲೇ ಅರ್ಜಿ ಸಲ್ಲಿಸಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Nissan Motors : ಕ್ರಿಕೆಟ್​ ವಿಶ್ವ ಕಪ್​ ಹಿನ್ನೆಲೆಯಲ್ಲಿ ಮ್ಯಾಗ್ನೈಟ್​ ಕುರೊ ಆವೃತ್ತಿ ಬಿಡುಗಡೆ

ನಿಸ್ಸಾನ್​ ಮ್ಯಾಗ್ನೈಟ್​​ ಕುರೊ ಅವೃತ್ತಿಯು ಪುರುಷರ ಏಕದಿನ ವಿಶ್ವ ಕಪ್​ ಹಿನ್ನೆಲೆಯಲ್ಲಿ ನಿಸಾನ್ ಮೋಟರ್​​​ (Nissan Motors) ಬಿಡುಗಡೆ ಮಾಡಿದೆ.

VISTARANEWS.COM


on

NIssan KURO
Koo

ಬೆಂಗಳೂರು: ಐಸಿಸಿ ಪುರುಷರ ಕ್ರಿಕೆಟ್ ವಿಶ್ವ ಕಪ್ 2023ನ ಅಧಿಕೃತ ಪಾಲುದಾರಿಕೆ ಪಡೆದಿರುವ ನಿಸಾನ್ (Nissan Motors) ತನ್ನ ಮ್ಯಾಗ್ಹೈಟ್​ ಕಾರಿನ ಕುರೊ (KURO)) ವಿಶೇಷ ಆವೃತ್ತಿಯ ಕಾರನ್ನು ಮಾರುಕಟ್ಟೆಗೆ ಇಳಿಸಿದೆ. ಐಸಿಸಿ ವಿಶ್ವಕಪ್​​ನೊಂದಿಗಿನ ಒಡಂಬಡಿಕೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಗ್ರಾಹಕರಿಗೆ ಪ್ರೀಮಿಯಂ ಆಯ್ಕೆ ಎನಿಸುವ Magnite KURO ಪರಿಚಯಿಸಲಾಗಿದೆ ಎಂದು ನಿಸಾನ್ ಮೋಟರ್ ಇಂಡಿಯಾ (NMIPL) ಹೇಳಿದೆ.

ಸೆಪ್ಟೆಂಬರ್​ 14ರಿಂದ ಈ ವಿಶೇಷ ಆವೃತ್ತಿಯ ಕಾರಿನ ಮುಂಗಡ ಬುಕಿಂಗ್ ಅನ್ನು ಆರಂಭಿಸಲಾಗಿದೆ. ‘ ಕುರೊ ಎಂದರೆ ಜಪಾನಿ ಭಾಷೆಷಯಲ್ಲಿ ಕಪ್ಪು ಎಂದರ್ಥ. ಹೀಗಾಗಿ ಕಪ್ಪು ಬಣ್ಣದ ಕುರೊ ಆವೃತ್ತಿಯಲ್ಲಿ ನಿಸಾನ್​ ಬಿಡುಗಡೆ ಮಾಡಿದೆ. KURO ಥೀಮ್ ಹೊಂದಿರುವ ಎಸ್​​ಯುವಿ ಪ್ರೀಮಿಯಂ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯ ಪ್ರತೀಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ನಿಸಾನ್ ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯು ಈಗಾಗಲೇ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಆರಂಭಿಸಿದೆ. ಈ ಬಹುನಿರೀಕ್ಷಿತ ವಾಹನವನ್ನು ಅಕ್ಟೋಬರ್ 2023 ರಲ್ಲಿ ಅಧಿಕೃತವಾಗಿ ರಸ್ತೆಗಿಳಿಯಲಿದೆ. ಆ ಸಂದರ್ಭದಲ್ಲಿಯೇ ಇದರ ಬೆಲೆಯೂ ಪ್ರಕಟವಾಗಲಿದೆ. ಮ್ಯಾಗ್ನೈಟ್ XV MT, ಮ್ಯಾಗ್ನೈಟ್ ಟರ್ಬೋ XV MT ಮತ್ತು ಮ್ಯಾಗ್ನೈಟ್ ಟರ್ಬೋ XV CVT ಸೇರಿದಂತೆ ಎಲ್ಲಾ ವೇರಿಯೆಂಟ್​ಗಳಿಎ 11,000 ರೂಪಾಯಿ ಪಾವತಿಸಿ ಮುಂಗಡ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.

ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಅವರು ಮಾತನಾಡಿ “ಮೌಲ್ಯ ಮತ್ತು ನಾವೀನ್ಯತೆಯನ್ನು ಬಯಸುವ ವಿವೇಚನಾಶೀಲ ಗ್ರಾಹಕರಿಗಾಗಿ ಈ ಹಬ್ಬದ ಸೀಸನ್ ನಲ್ಲಿ ನಿಸಾನ್ ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಇದು ಅಸಾಧಾರಣ ಚಾಲನಾ ಅನುಭವಕ್ಕಾಗಿ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ. ಪ್ರೀಮಿಯಂ ಫೀಚರ್​ಗಳನ್ನು ನೀಡಲಾಗಿದೆ ಎಂದು ಹೇಳಿದರು.

ಕಪ್ನು ನೋಟ

ನಿಸಾನ್ ಮ್ಯಾಗ್ನೈಟ್ KURO ಆವೃತ್ತಿಯು ಆಕರ್ಷಕ ಆಲ್-ಬ್ಲ್ಯಾಕ್ ಎಕ್ಸ್​ಟೀರಿಯರ್​ ಹಾಗೂ ಇಂಟೀರಿಯರ್​ ಹೊಂದಿದೆ. ಪ್ರೀಮಿಯಂ ಲುಕ್ ಇರುವ ಇದು ಸ್ಟೈಲಿಶ್ ಆಗಿರಲಿದೆ. ಪ್ರಭಾವಶಾಲಿ ಮತ್ತು ಬೋಲ್ಡ್ ವಿನ್ಯಾಸವನ್ನು ಹೊಂದಿರುವ ಕಾರಿನ ಹೊರ ಭಾಗದಲ್ಲಿ ಬ್ಲ್ಯಾಕ್ ಗ್ರಿಲ್, ಸ್ಕಿಡ್ ಪ್ಲೇಟ್, ರೂಫ್ ರೇಲ್ಸ್, ಬ್ಲ್ಯಾಕ್ ಅಲಾಯ್ಸ್, ಬ್ಲ್ಯಾಕ್ ಫಿನಿಶರ್ ಅನ್ನು ಹೊಂದಿರುವ ಹೆಡ್ ಲ್ಯಾಂಪ್​ಗಳಿವೆ ವಿಶಿಷ್ಟವಾದ ಬ್ಯಾಡ್ಜ್ ಕೂಡ ನೀಡಲಾಗಿದೆ.

ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯು ಪ್ರೀಮಿಯಂ ಗ್ಲಾಸ್ ಬ್ಲ್ಯಾಕ್ ಇನ್ ಸ್ಟ್ರುಮೆಂಟ್ ಪ್ಯಾನೆಲ್, ಬ್ಲ್ಯಾಕ್ ಇಂಟೀರಿಯರ್ ಅಸೆಂಟ್ಸ್, ಬ್ಲ್ಯಾಕ್ ಡೋರ್ ಟ್ರಿಮ್ ಇನ್ವರ್ಟ್ಸ್​ಗಳಿವೆ ವಿಶಿಷ್ಟವಾದ ಇಂಟೀರಿಯರ್ ಅನ್ನು ಇದು ಒಳಗೊಂಡಿದೆ. ಈ ವಿಶೇಷ ಆವೃತ್ತಿಯು 360 ಡಿಗ್ರಿ ಅರೌಂಡ್ ವ್ಯೂವ್ ಮಾನಿಟರ್ (AVM), ವಿಶಾಲವಾದ IRVM, ಥೀಮ್ಡ್ ಫ್ಲೋರ್ ಮ್ಯಾಟ್​​ಗಳಿವೆ. ಸೆಂಟರ್ ಕನ್ಸೋಲ್ ಆರ್ಮ್ ರೆಸ್ಟ್ ಮತ್ತು ಹೆಚ್ಚು ಅನುಕೂಲತೆ ಹಾಗೂ ಸ್ಟೈಲ್ ಗಾಗಿ ವೈರ್ ಲೆಸ್ ಚಾರ್ಜರ್ ಸೇರಿದಂತೆ ಅನೇಕ ಫೀಚರ್​ಗಳನ್ನು ಕೊಡಲಾಗಿದೆ.

ಇದನ್ನೂ ಓದಿ : Tata Nexon EV : ಟಾಟಾ ನೆಕ್ಸಾನ್ ಇವಿ ಫೇಸ್​ಲಿಫ್ಟ್ ಭಾರತದಲ್ಲಿ ಬಿಡುಗಡೆ

ನಿಸಾನ್ ಮ್ಯಾಗ್ನೈಟ್ ಅತ್ಯುತ್ತಮ ಸುರಕ್ಷತಾ ಮಾನದಂಡಗಳನ್ನು ಹೊಂದಿದೆ. ಇದು ಗ್ಲೋಬಲ್ NCAP ಯಿಂದ ಸೇಫ್ಟಿ ರೇಟಿಂಗ್ ಫಾರ್ ಅಡಲ್ಟ್ ಆಕ್ಯುಪೆಂಟ್ ಮಾನದಂಡದಲ್ಲಿ 4 ಸ್ಟಾರ್ ಗಳನ್ನು ಪಡೆದುಕೊಂಡಿದೆ. ಇತ್ತೀಚೆಗೆ ನಿಸಾನ್ ಅನ್ನು ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಮೂಲಕ ಮ್ಯಾಗ್ನೈಟ್ ಅನ್ನು ಮೇಲ್ದರ್ಜೆಗೇರಿಸಿದೆ.

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), · ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ (TCS), ಹಿಲ್ ಸ್ಟಾರ್ಟ್ ಅಸಿಸ್ಟ್ (HAS), · ಟೈರ್ ಪ್ರೆಸರ್ ಮಾನಿಟರಿಂಗ್ ಸಿಸ್ಟಂ (TPMS) ಸೇರಿದಂತೆ ಅನೇಕ ಫೀಚರ್​ಗಳಿವೆ.

ಜಪಾನ್ ವಿನ್ಯಾಸ

ಭಾರತದ B-SUV ವಿಭಾಗದಲ್ಲಿ ಮ್ಯಾಗ್ನೈಟ್ ಅತ್ಯುತ್ತಮವಾದ ಆಯ್ಕೆಯಾಗಿ ಪರಿಗಣಿಸಲ್ಪಟ್ಟಿದೆ. ಈ ವಾಹನವನ್ನು ಡಿಸೆಂಬರ್ 2020 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಜಪಾನ್ ನ ವಿನ್ಯಾಸವನ್ನು ಬಳಸಿಕೊಂಡು ಭಾರತದಲ್ಲಿ ಉತ್ಪಾದನೆ ಮಾಡುವುದರೊಂದಿಗೆ `ಮೇಕ್-ಇನ್-ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ತತ್ವವನ್ನು ಅಳವಡಿಸಿಕೊಂಡಿದೆ.

ನಿಸಾನ್ ಇತ್ತೀಚೆಗೆ ನಿಸಾನ್ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದರ ಆರಂಭಿಕ ಬೆಲೆ 7,39,000 (ಎಕ್ಸ್ ಶೋರೂಂ, ದೆಹಲಿ) ರೂಪಾಯಿಗಳಾಗಿತ್ತು. ನಿಸಾನ್ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯು ಸುಧಾರಿತ ಇನ್ಫೋಟೇನ್ಮೆಂಟ್ ಸಿಸ್ಟಂ, ಪವರ್ –ಪ್ಯಾಕ್ಡ್ ಪರ್ಫಾರ್ಮೆನ್ಸ್, ಸುಧಾರಿತ ವೈಶಿಷ್ಟ್ಯತೆಗಳು ಮತ್ತು ಸುರಕ್ಷತಾ ಅಂಶಗಳನ್ನು ಮೇಲ್ದರ್ಜೆಗೇರಿಸಿ ಭಾರತೀಯ ಗ್ರಾಹಕರ ಪ್ರಯಾಣವನ್ನು ಮತ್ತಷ್ಟು ಸುಖಕರವಾಗುವಂತೆ ಮಾಡಿತ್ತು.

Continue Reading

ಆಟೋಮೊಬೈಲ್

Tata Nexon EV : ಟಾಟಾ ನೆಕ್ಸಾನ್ ಇವಿ ಫೇಸ್​ಲಿಫ್ಟ್ ಭಾರತದಲ್ಲಿ ಬಿಡುಗಡೆ

ಟಾಟಾ ಮೋಟಾರ್ಸ್ ಅಪ್​ಡೇಟ್​ ಮಾಡಿರುವ ನೆಕ್ಸಾನ್ ಇವಿ ಫೇಸ್ ಲಿಫ್ಟ್ (Tata Nexon EV) ಅನ್ನು ಹೊಸ ವಿನ್ಯಾಸ, ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಎಲೆಕ್ಟ್ರಿಕ್ ಪವರ್ ಟ್ರೇನ್​ನೊಂದಿಗೆ ಪರಿಚಯಿಸಿದೆ. ಬೆಲೆ 14.74 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ.

VISTARANEWS.COM


on

Tata Nexon
Koo

ಬೆಂಗಳೂರು: ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ (Tata Nexon EV) ಫೇಸ್ ಲಿಫ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ (Ex Showroom) ದರದಂತೆ 14.74 ಲಕ್ಷ ರೂಪಾಯಿಗಳ ಈ ಪರಿಚಯಾತ್ಮಕ ಬೆಲೆಗಳು ಸೀಮಿತ ಅವಧಿಗೆ ಮಾತ್ರ ಇರುತ್ತದೆ. ನಿರ್ದಿಷ್ಟ ಸಂಖ್ಯೆಯ ಬುಕ್ಕಿಂಗ್​ ಆದ ಬಳಿಕ ಬೆಲೆಯೇ ಏರಿಕೆಯಾಗಲಿದೆ ಎಂಬ ಸೂಚನೆಯನ್ನು ಕಂಪನಿ ನೀಡಿದೆ. ಹೊಸ ವಿನ್ಯಾಸ, ಹಲವಾರು ಹೊಸ ಫೀಚರ್​ಗಳೊಂದಿಗೆ ಹೊಸ ನೆಕ್ಸಾನ್​ ಇವಿ ಫೇಸ್​ಲಿಫ್ಟ್​ ಬಂದಿದೆ.

ಟಾಟಾ ನೆಕ್ಸಾನ್ ಭಾರತದ ಮಾರುಕಟ್ಟೆಯ ಜನಪ್ರಿಯ ಕಾಂಪ್ಯಾಕ್ಟ್ ಎಸ್ ಯುವಿ (Compact SUV) . ಇದರ ಎಲೆಕ್ಟ್ರಿಕ್ ರೂಪಾಂತರವು ನವೀಕರಿಸಿದ ವಿನ್ಯಾಸ, ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಎಲೆಕ್ಟ್ರಿಕ್ ಪವರ್ ಟ್ರೇನ್ ಸೇರಿದಂತೆ ಹಲವು ಹೊಸತನಗಳೊಂದಿಗೆ ಬಂದಿದೆ.

ಹೊಸ ವಿನ್ಯಾಸ

ಈ ಎಲೆಕ್ಟ್ರಿಕ್ ಎಸ್ ಯುವಿಯು ಹೊಸ ಬಾಹ್ಯ ವಿನ್ಯಾಸ, ನವೀಕರಿಸಿದ ಒಳಾಂಗಣ ಮತ್ತು ಹೊಸ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿರುವ ಪೂರ್ತಿ ಮೇಕ್ ಓವರ್ ಗೆ ಒಳಗಾಗಿದೆ. ಟಾಟಾ ಮೋಟಾರ್ಸ್ ಈಗಾಗಲೇ ನೆಕ್ಸಾನ್ ಇವಿಯ 53,000ಕ್ಕೂ ಹೆಚ್ಚು ಯುನಿಟ್ ಗಳ ಮಾರಾಟ ಮಾಡಿದೆ. ಹೀಗಾಗಿ ಫೇಸ್ ಲಿಫ್ಟ್ ಮೂಲಕ ಯಶಸ್ಸನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ.

2023ರ ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ ತನ್ನ ಆಂತರಿಕ ದಹನಕಾರಿ ಎಂಜಿನ್ (ಐಸಿಇ ಎಂಜಿನ್​) ಪ್ರತಿರೂಪದೊಂದಿಗೆ ಪಾದಾರ್ಪಣೆ ಮಾಡಿದೆ. ಪೆಟ್ರೋಲ್​ ಕಾರು ಬೆಲೆ 8.10 ಲಕ್ಷಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಐಸಿಇ ಚಾಲಿತ ನೆಕ್ಸಾನ್ ಫೇಸ್ ಲಿಫ್ಟ್ ನಂತೆಯೇ, ಇವಿ ರೂಪಾಂತರವು ಟಾಟಾದ ಕರ್ವ್ ಪರಿಕಲ್ಪನೆಯಿಂದ ವಿನ್ಯಾಸ ಸ್ಫೂರ್ತಿ ಪಡೆದಿದೆ. ಆದಾಗ್ಯೂ, ವಿಭಿನ್ನ ಏರ್ ಡ್ಯಾಮ್ ಮತ್ತು ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್ ಸೇರಿದಂತೆ ವಿಶಿಷ್ಟ ವೈಶಿಷ್ಟ್ಯಗಳಿವೆ. ಇದು ಏಳು ವಿಭಿನ್ನ ಪೇಂಟ್​ ಆಯ್ಕೆಯನ್ನು ನೀಡುತ್ತದೆ: ಎಂಪವರ್ಡ್ ಆಕ್ಸೈಡ್, ಪ್ರಿಸ್ಟೈನ್ ವೈಟ್, ಇಂಟೆನ್ಸಿ ಟೀಲ್, ಫ್ಲೇಮ್ ರೆಡ್, ಡೇಟೋನಾ ಗ್ರೇ, ಫಿಯರ್ಲೆಸ್ ಪರ್ಪಲ್ ಮತ್ತು ಕ್ರಿಯೇಟಿವ್ ಓಷನ್ ಎಂಬ ಬಣ್ಣಗಳಿವೆ.

12. ಇಂಚಿನ ಇನ್ಫೋಟೈನ್​ಮೆಂಟ್​ ಸಿಸ್ಟಮ್​

ನೆಕ್ಸಾನ್ ಇವಿ ಫೇಸ್ ಲಿಫ್ಟ್ ನ ಕ್ಯಾಬಿನ್ ನಲ್ಲಿ, ಹೊಸ ಫೀಚರ್​ಗಳನ್ನು ನೀಡಲಾಗಿದೆ. ವಿಶೇಷವೆಂದರೆ, ಎರಡು ದೊಡ್ಡ ಟಚ್​ಸ್ಕ್ರಿನ್​ ಸಿಸ್ಟಮ್​ಗಳಿವೆ. 12.3-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇದರಲ್ಲಿದೆ. ಇದು ಕ್ಯಾಬಿನ್ ನ ಪ್ರೀಮಿಯಂ ಅನುಭವವನ್ನು ಹೆಚ್ಚಿಸುತ್ತದೆ.

ಹೊಸ ಸ್ಟೀರಿಂಗ್-ಮೌಂಟೆಡ್ ಪ್ಯಾಡಲ್ ಶಿಫ್ಟರ್, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ವೈರ್​​ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ವಾಯ್ಸ್ ಕಮಾಂಡ್ ಫಂಕ್ಷನಾಲಿಟಿ, ಎತ್ತರ-ಸರಿಹೊಂದಿಸಬಹುದಾದ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಏರ್ ಪ್ಯೂರಿಫೈಯರ್, ಸಬ್ ವೂಫರ್ ಹೊಂದಿರುವ ಜೆಬಿಎಲ್ ಆಡಿಯೊ ಸಿಸ್ಟಮ್ ಮತ್ತು ಸನ್ ರೂಫ್ ನೀಡಲಾಗಿದೆ.

ಆರು ಏರ್​ಬ್ಯಾಗ್​ಗಳು

ಸುರಕ್ಷತಾ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ 2023 ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ ಈಗ ಆರು ಏರ್ ಬ್ಯಾಗ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ) ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಹೆಚ್ಚುವರಿಯಾಗಿ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಆರೋಹಣ ಮತ್ತು ಇಳಿಯುವಿಕೆ ನಿಯಂತ್ರಣ, ಜೊತೆಗೆ ಹಿಂಭಾಗದ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ.

ಇದನ್ನೂ ಓದಿ :

ಪವರ್​ಟ್ರೇನ್​ ಹೇಗಿದೆ?

ಪವರ್ ಟ್ರೇನ್ ಗೆ ಹೋಗುವುದಾದರೆ, ಎಲೆಕ್ಟ್ರಿಕ್ ಎಸ್ ಯುವಿ ಈಗ ಹೊಸ ಜೆನ್ 2 ಮೋಟರ್ ಹೊಂದಿದೆ, ಇದು ಅದರ ಹಿಂದಿನದಕ್ಕಿಂತ 20 ಕೆ.ಜಿ ಹಗುರವಾಗಿದೆ. ಈ ನವೀಕರಿಸಿದ ಎಲೆಕ್ಟ್ರಿಕ್ ವಾಹನವು ಒಂದು ಬಾರಿ ಚಾರ್ಜ್ ಮಾಡಿದರೆ 465 ಕಿ.ಮೀ ವರೆಗೆ ರೇಂಜ್​ ನೀಡುತ್ತದೆ. ಲಾಂಗ್ ರೇಂಜ್ ವೇರಿಯೆಂಟ್​ನಲ್ಲಿ ಇವಿ 143 ಬಿಹೆಚ್ ಪಿ ಗರಿಷ್ಠ ಶಕ್ತಿ ಮತ್ತು 215 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪವರ್ ಔಟ್ ಪುಟ್ ಸಣ್ಣ ಹೆಚ್ಚಳವನ್ನು ಕಂಡಿದೆ. ಅದೇ ರೀತಿ ಹೊಸ ಮಾಡೆಲ್​ನಲ್ಲಿ ಟಾರ್ಕ್ ಸ್ವಲ್ಪ ಕಡಿಮೆ ಮಾಡಲಾಗಿದೆ. ಇದು ಕೇವಲ 8.9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಸಿಟಿ, ಇಕೋ ಮತ್ತು ಸ್ಪೋರ್ಟ್ ಎಂಬ ಮೂರು ವಿಭಿನ್ನ ಚಾಲನಾ ಮೋಡ್ ಗಳನ್ನು ನೀಡಲಾಗಿದೆ.

ಕಾರ್ಯಕ್ಷಮತೆ ಹೆಚ್ಚಳ

ನೆಕ್ಸಾನ್ ಇವಿ ಸುಧಾರಿತ ವಾಯುಬಲವಿಜ್ಞಾನವನ್ನು ಪಡೆಯುತ್ತದೆ. ಇದರ ಪರಿಣಾಮವಾಗಿ ವರ್ಧಿತ ಕಾರ್ಯಕ್ಷಮತೆ ಉಂಟಾಗುತ್ತದೆ ಎಂದು ವಾಹನ ತಯಾರಕರು ಪ್ರತಿಪಾದಿಸುತ್ತಾರೆ. ಲಾಂಗ್ ರೇಂಜ್ ಫೇಸ್ ಲಿಫ್ಟ್ ಮಾದರಿಯು ನೆಕ್ಸಾನ್ ಇವಿ ಮ್ಯಾಕ್ಸ್​​ನಂತೆಯೆ 40.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಉಳಿಸಿಕೊಂಡಿದೆ. ಆದರೆ ಇದು ಹಿಂದಿನ 437 ಕಿ.ಮೀ ನಿಂದ ಈಗ 465 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.

ಟಾಟಾ ಹೊಸ ನೆಕ್ಸಾನ್ ಇವಿಯ ಬ್ಯಾಟರಿ ಮತ್ತು ಮೋಟರ್ ಎರಡಕ್ಕೂ ಎಂಟು ವರ್ಷಗಳ ಅಥವಾ 160,000 ಕಿ.ಮೀ ವಾರಂಟಿಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ನೆಕ್ಸಾನ್ ಇವಿ ಫೇಸ್ ಲಿಫ್ಟ್ ವಿ2 ಎಲ್ (ವೆಹಿಕಲ್-ಟು-ಲೋಡ್) ಮತ್ತು ವಿ 2 ವಿ (ವೆಹಿಕಲ್-ಟು-ವೆಹಿಕಲ್) ತಂತ್ರಜ್ಞಾನಗಳನ್ನು ಹೊಂದಿದೆ, ಇದು ವಿದ್ಯುತ್ ಉಪಕರಣಗಳಿಗೆ ಶಕ್ತಿ ನೀಡಲು ಮತ್ತು ಇತರ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಕಾರಿಗೆ ಅನುವು ಮಾಡಿಕೊಡುತ್ತದೆ.

Continue Reading

ಆಟೋಮೊಬೈಲ್

Nitin Gadkari: ಪ್ರಯಾಣಿಕ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯವಲ್ಲ! ಕೇಂದ್ರ ಸಚಿವ ಗಡ್ಕರಿ ಹೇಳಿಕೆ

Nitin Gadkari: ಪ್ರಯಾಣಿಕರ ಕಾರುಗಳಿಗೆ ಸುರಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಅಕ್ಟೋಬರ್ 1ರಿಂದ ಕಾರುಗಳಿಗೆ 6 ಏರ್‌ ಬ್ಯಾಗ್ ಎಂದು ಕಡ್ಡಾಯ ಎಂದು ಕೇಂದ್ರ ಸರ್ಕಾರವು ಈ ಹಿಂದೆ ಹೇಳಿತ್ತು.

VISTARANEWS.COM


on

Edited by

Nitin Gadkari
Koo

ನವದೆಹಲಿ: ಪ್ರಯಾಣಿಕ ಕಾರುಗಳಿಗೆ (Passenger Cars) 6 ಏರ್‌ಬ್ಯಾಗ್ (6 Airbag) ಕಡ್ಡಾಯ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಅವರು ಹೇಳಿದ್ದಾರೆ. ಆರು ತಿಂಗಳ ಹಿಂದೆ ಕೇಂದ್ರ ಸರ್ಕಾರವು, ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ ಮಾಡುವುದಾಗಿ ಘೋಷಿಸಿತ್ತು. ಅಲ್ಲದೇ ಈ ನಿಯಮವು 2023 ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಎಂದು ಹೇಳಿತ್ತು. ಅಂದರೆ, ನಿಯಮ ಜಾರಿಗೆ ಒಂದು ತಿಂಗಳು ಇರುವಾಗಲೇ, ನಿತಿನ್ ಗಡ್ಕರಿ ಅವರು 6 ಏರ್‌ಬ್ಯಾಗ್ ಕಡ್ಡಾಯ ಅಗತ್ಯವಿಲ್ಲ ಎಂದು ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ACMA) ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪಾಲ್ಗೊಂಡು ಮಾತನಾಡಿದರು.

ಈ ಸಭೆಯ ವೇಳೆ, ಆಟೋ ಕಾರ್ ಇಂಡಿಯಾ ಎಡಿಟರ್ ಹೊರ್ಮದ್ ಸೊರಾಬ್ಜಿ ಅವರು, ಪ್ರಯಾಣಿಕ ಕಾರುಗಳಿಗೆ 6 ಏರ್ ಬ್ಯಾಗ್ ಕಡ್ಡಾಯ ಮಾಡಿರುವ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೇ ಪ್ರಶ್ನೆ ಕೇಳಿದರು. ಆಗ ಉತ್ತರಿಸಿದ ನಿತಿನ್ ಗಡ್ಕರಿ ಅವರು, 6 ಏರ್‌ಬ್ಯಾಗ್ ಆರ್ಥಿಕ ಮಾದರಿ ಏನೇ ಇರಲಿ, ಜನರು ಆ ಕಾರನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಹಾಗಾಗಿ, 6 ಏರ್ ಬ್ಯಾಗ್ ಅಳವಡಿಕೆಯು ಮಾರುಕಟ್ಟೆಗೆ ಬಿಟ್ಟಿದ್ದು, ಅವರೇ ನಿರ್ಧರಿಸಬೇಕು. ಸ್ಟಾರ್ ರೇಟಿಂಗ್, ಭಾರತ್ ಎನ್‌ಸಿಎಪಿ ಇದೆ. ಈ ಕುರಿತು ತಯಾರಕರು ಮತ್ತು ಜನರು ನಿರ್ಧರಿಸಬಹುದು. ನಾವು ಅದನ್ನು ಅವರಿಗೆ ಬಿಡುತ್ತೇವೆ ಎಂದು ಹೇಳಿದರು.

6 ಏರ್‌ ಬ್ಯಾಗ್‌ಗಳ ನಿಯಮ ಕಡ್ಡಾಯ ಕುರಿತು ಖಚಿತತೆಯನ್ನು ಪಡೆಯಲು ಸೊರಾಬ್ಜಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೇಳಿದಾಗ, ನಾವು ಅದನ್ನು (6 ಏರ್‌ಬ್ಯಾಗ್) ಕಡ್ಡಾಯಗೊಳಿಸುವ ಅಗತ್ಯವಿಲ್ಲ. ನಾವು ನಿಯಮವನ್ನು ಕಡ್ಡಾಯಗೊಳಿಸಲು ಬಯಸುವುದಿಲ್ಲ. ಸ್ಟಾರ್ ರೇಟಿಂಗ್ ಮತ್ತು ಭಾರತ್ ಎನ್‌ಸಿಎಪಿ ಸಾಕು” ಎಂದು ಹೇಳಿದರು.

ಏನಿದು ಭಾರತ್ ಎನ್‌ಸಿಎಪಿ?

ಭಾರತದಲ್ಲಿಯೇ ಕಾರುಗಳ ಸುರಕ್ಷತೆಯನ್ನು ಅಳೆಯುವ ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್‌ ಪ್ರೋಗ್ರಾಮ್‌ಗೆ (Bharat New Car Assessment Programme or Bharat NCAP) ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಚಾಲನೆ ನೀಡಿದ್ದಾರೆ. ಇದರೊಂದಿಗೆ ಸ್ವಂತ ಎನ್‌ಸಿಪಿ ಹೊಂದಿದ ರಾಷ್ಟ್ರಗಳಾದ ಜಪಾನ್‌, ಆಸ್ಟ್ರೇಲಿಯಾ, ಅಮೆರಿಕ, ಲ್ಯಾಟಿನ್‌ ಅಮೆರಿಕದಂತಹ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಿದೆ. ಭಾರತದ ರಸ್ತೆ ಸುರಕ್ಷತೆ ಹಾಗೂ ಕಾರುಗಳ ಅಪಘಾತ (Crash) ಸುರಕ್ಷತೆಯನ್ನು ಅಳೆಯುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದಂತಾಗಿದೆ.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ಅಡಿಯಲ್ಲಿ ಭಾರತ್‌ ಎನ್‌ಸಿಎಪಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಗರಿಷ್ಠ ಎಂಟು ಪ್ಯಾಸೆಂಜರ್‌ಗಳು ಕುಳಿತುಕೊಳ್ಳಬಹುದಾದ ಅಥವಾ ಗರಿಷ್ಠ 3.5 ಟನ್‌ ತೂಕದ ಕಾರುಗಳ ಸುರಕ್ಷತೆಯ ಸಾಮರ್ಥ್ಯವನ್ನು ಅಳೆಯುತ್ತದೆ. ಅಮೆರಿಕ, ಜಪಾನ್‌ನಂತಹ ಶ್ರೇಣಿಯಲ್ಲಿಯೇ ಭಾರತದ ರಸ್ತೆ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಭಾರತ್‌ ಎನ್‌ಸಿಎಪಿಯನ್ನು ಜಾರಿಗೆ ತರಲಾಗಿದೆ. ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಮೊದಲು ಕಾರಿನ ಮುಂಭಾಗ (Frontal), ಬದಿ (Side), ಪೋಲ್‌ ಸೈಡ್‌ನಲ್ಲಿ ಕ್ರ್ಯಾಶ್‌ ಮಾಡಿಸಿ, ದಕ್ಷತೆ ಆಧಾರದ ಮೇಲೆ ರೇಟಿಂಗ್‌ ನೀಡಲಾಗುತ್ತದೆ.

ಜನರಿಗೆ ಹೇಗೆ ಅನುಕೂಲ?

ಆನ್‌ಲೈನ್‌ನಲ್ಲಿ ಮೊಬೈಲ್‌ ಸೇರಿ ಯಾವುದೇ ಉತ್ಪನ್ನಗಳ ರೇಟಿಂಗ್‌ ಆಧಾರದ ಮೇಲೆ ಖರೀದಿಸುವ ರೀತಿಯಲ್ಲಿಯೇ ಭಾರತ್‌ ಎನ್‌ಸಿಎಪಿ ನೀಡುವ ರೇಟಿಂಗ್‌ ಆಧಾರದ ಮೇಲೆಯೇ ಕಾರುಗಳನ್ನು ಖರೀದಿಸಲು ಜನರಿಗೆ ಅನುಕೂಲವಾಗಲಿದೆ. ಗರಿಷ್ಠ 5 ಸ್ಟಾರ್‌ಗಳವರೆಗೆ ಭಾರತ್‌ ಎನ್‌ಸಿಎಪಿಯು ರೇಟಿಂಗ್‌ ನೀಡಲಿದೆ. ಈ ಸುರಕ್ಷತಾ ರೇಟಿಂಗ್‌ಅನ್ನು ಗಮನಿಸಿಯೇ ಜನ ಕಾರುಗಳನ್ನು ಖರೀದಿಸಬಹುದಾಗಿದೆ.

ಈ ಸುದ್ದಿಯನ್ನೂ ಓದಿ: Airbags | ಕಾರುಗಳಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯಕ್ಕೆ ಗಡುವು 1 ವರ್ಷ ಮುಂದೂಡಿಕೆ

ಭಾರತದಲ್ಲಿಯೇ ಗುಣಮಟ್ಟದ ಕಾರುಗಳ ಉತ್ಪಾದನೆ ಹಾಗೂ ಕಾರಿನ ಬಿಡಿಭಾಗಗಳ ಉತ್ಪಾದನೆಗೆ ಭಾರತ್‌ ಎನ್‌ಸಿಎಪಿಯು ಆರೋಗ್ಯಕರ ಸ್ಪರ್ಧೆ ಏರ್ಪಡಿಸುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ದೇಶದಲ್ಲಿ ರೋಡ್‌ ಟ್ರಾಫಿಕ್‌ನಿಂದ ಸಂಭವಿಸುವ ಅಪಘಾತಗಳಲ್ಲಿ ವಾರ್ಷಿಕ 13 ಲಕ್ಷ ಜನ ಮೃತಪಡುತ್ತಾರೆ. ಹೀಗೆ ರಸ್ತೆ ಹಾಗೂ ಕಾರುಗಳ ಸುರಕ್ಷತೆಯ ಮೂಲಕ ಅಪಘಾತ ಪ್ರಮಾಣವನ್ನು ತಗ್ಗಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಭಾರತ್‌ ಎನ್‌ಸಿಎಪಿಯನ್ನು ಜಾರಿಗೆ ತಂದಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಆಟೋಮೊಬೈಲ್

Increase mileage : ನಿಮ್ಮ ಕಾರಿನಲ್ಲಿ ಜಾಸ್ತಿ ಮೈಲೇಜ್​ ಸಿಗಬೇಕಾ? ಈ ತಂತ್ರಗಳನ್ನು ಬಳಸಿ

ಪೆಟ್ರೋಲ್​ ಬೆಲೆ ಗಗನಕ್ಕೆ ಮುಟ್ಟಿರುವ ಕಾರಣ ಮೈಲೇಜ್​ ಎಂಬುದು ವಾಹನ ಮಾಲೀಕರ ಪಾಲಿಗೆ ಆದ್ಯತೆಯ ವಿಷಯವಾಗಿದೆ. ಅದಕ್ಕಾಗಿ ಉತ್ತಮ ಚಾಲನಾ ಹವ್ಯಾಸಗಳನ್ನು (High Mileage Trick) ಬೆಳೆಸಿಕೊಳ್ಳಬೇಕು.

VISTARANEWS.COM


on

Milage
Koo

ಬೆಂಗಳೂರು: ಪೆಟ್ರೋಲ್​, ಡೀಸೆಲ್ (Fuel Rate)​ ಬೆಲೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ವಾಹನ ಮಾಲೀಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಎಲ್ಲಿಗಾದರೂ ಪ್ರಯಾಣ ಹೊರಟರೆ ಇಂಧನ ದರವೇ ಜಾಸ್ತಿಯಾಗುತ್ತದೆ. ಅದು ಪ್ರಯಾಣದ ಒಟ್ಟು ಸಂತೋಷವನ್ನು ಕಸಿದುಕೊಳ್ಳುತ್ತದೆ. ಹೀಗಾಗಿ ಗಗನಕ್ಕೇರುತ್ತಿರುವ ಇಂಧನ ವೆಚ್ಚವನ್ನು ಸರಿದೂಗಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ನಿಮ್ಮ ವಾಹನದಲ್ಲಿ ಪ್ರತಿ ಲೀಟರ್​ಗೆ ಹೆಚ್ಚು ಮೈಲೇಜ್​ ಪಡೆಯುವುದು. ಅದಕ್ಕೆ ಕೆಲವೊಂದು ಸರಳ ಸೂತ್ರಗಳನ್ನು ಪಾಲಿಸಬೇಕು (Increase mileage). ಅವುಗಳನ್ನು ಇಲ್ಲಿ ವಿವರಿಸಲಾಗಿದೆ.

ನಿಧಾನಕ್ಕೆ ಆಕ್ಸಿಲೇಟರ್ ಕೊಡಿ

ಡ್ರೈವಿಂಗ್ ಮಾಡುವಾಗ ಸಾಧ್ಯವಾದಷ್ಟು ನಿಧಾನಕ್ಕೆ ಆಕ್ಸಿಲೇಟರ್​ ಒತ್ತುವ ಅಭ್ಯಾಸ ಬೆಳೆಸಿ. ನಿಧಾನವಾಗಿ ಹೋಗುವ ವಾಹನದ ವೇಗ ವೃದ್ಧಿಸಲು ಆಕ್ಸಿಲೇಟರ್​ ಒತ್ತಲೇಬೇಕು ನಿಜ. ಆದರೆ ಏಕಾಏಕಿ ಆಕ್ಸಿಲೇಟರ್​ ಒತ್ತುವ ಮೂಲಕ ವೇಗ ಹೆಚ್ಚಿಸಲು ಹೋದರೆ ಇಂಧನ ಏಕಾಏಕಿ ಉರಿದು ಹೊಗೆಯಾಗುತ್ತದೆ. ಈ ರೀತಿ ಇಂಧನ ಹೆಚ್ಚು ಉರಿದು ಹೋಗದಂತೆ ನೋಡಿಕೊಳ್ಳುವುದಕ್ಕೆ ನಯವಾದ ಮತ್ತು ಸ್ಥಿರವಾದ ರೀತಿಯಲ್ಲಿ ವೇಗವನ್ನು ಹೆಚ್ಚಿಸಬೇಕು. ಅದಕ್ಕಾಗಿ ನಿಧಾನವಾಗಿ ಆಕ್ಸಿಲರೇಟರ್ ಒತ್ತಬೇಕು. ಅಗತ್ಯ ಇರುವಷ್ಟು ವೇಗವು ಕೆಟ್ಟದ್ದಲ್ಲ, ಆದರೆ ವೇಗವನ್ನು ನಿಧಾನಕ್ಕೆ ಹೆಚ್ಚಿಸಿದರೆ ಮಾತ್ರ ಉತ್ತಮ ಮೈಲೇಜ್ ಸಿಗುತ್ತದೆ.

ನಿಮ್ಮ ವಾಹನ ಚಲಾಯಿಸುವುದನ್ನು ಮ್ಯಾರಥಾನ್ ಓಟ ಎಂದೇ ಭಾವಿಸಬೇಕು. ಎಷ್ಟು ವೇಗ ಬೇಕು ಸರಾಗವಾಗಿ ಹೋಗುವುದಕ್ಕೆ ಎಷ್ಟು ಸಾಮರ್ಥ್ಯ ಅಗತ್ಯ ಎಂಬುದನ್ನು ಸ್ಪಷ್ಟವಾಗಿದ್ದರೆ ಹೆಚ್ಚು ಮೈಲೇಜ್ ಪಡೆಯಬಹುದು. ಬೇರೆ ವಾಹನದ ಚಾಲಕರ ಜತೆ ಜಿದ್ದಿಗೆ ಬಿದ್ದು ಏಕಾಏಕಿ ವೇಗ ಹೆಚ್ಚಿಸಲು ಯತ್ನಿಸಿದರೆ ಮೈಲೇಜ್​ ಡ್ರಾಪ್​ ಆಗುವುದು ಖಚಿತ.

ಕಾಲಕಾಲಕ್ಕೆ ಸರ್ವಿಸ್​ ಮಾಡಿಸಿ

ಕಾರು ಮಾಲೀಕರು ಮಾಡುವ ಒಂದು ಸಾಮಾನ್ಯ ತಪ್ಪು ಎಂದರೆ ಅದು ಹಣ ಉಳಿಸಲೆಂದು ಸೂಕ್ತ ಕಾಲಕ್ಕೆ ಮೆಂಟೇನೆನ್ಸ್ ಮಾಡದಿರುವುದು ಮತ್ತು ಕಾರು ಕೆಟ್ಟುಹೋದ ನಂತರವೇ ಅದನ್ನು ಸರಿಪಡಿಸುವುದು. ಆದರೆ ಕಾರನ್ನು ಆರೋಗ್ಯಕರವಾಗಿಡಲು ಕಾಲಕಾಲಕ್ಕೆ ಸರ್ವಿಸ್ ಮಾಡಿಸಲೇಬೇಕು. ಕೆಲವೊಂದು ಪಾರ್ಟ್​​ಗಳನ್ನೂ ಬದಲಾಯಿಸಬೇಕು. ಇಲ್ಲದಿದ್ದರೆ ನಿಮ್ಮ ಕಾರು ಸರಿಯಾಗಿ ಮೈಲೇಜ್ ಕೊಡುವುದಕ್ಕೆ ಸಾಧ್ಯವೇ ಇಲ್ಲ.

ಎಂಜಿನ್ ಆಯಿಲ್ ಜೊತೆಗೆ ಏರ್ ಮತ್ತು ಆಯಿಲ್ ಫಿಲ್ಟರ್ ನಂತಹ ಕೆಲವು ಬಿಡಿಭಾಗಗಳನ್ನು ನಿಯಮಿತವಾಗಿ ಬದಲಾಯಿಸಬೇಕಾಗುತ್ತದೆ. ಏರ್ ಫಿಲ್ಟರ್ ಧೂಳು ಎಂಜಿನ್ ಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಆದರೆ ಪರಿಸರದ ಪರಿಸ್ಥಿತಿಗಳಿಂದಾಗಿ ಕೆಲವಷ್ಟು ಸಾವಿರ ಕಿಲೋಮೀಟರ್ ಓಡಿದ ನಂತರ ಪಿಲ್ಟರ್ ಧೂಳಿನಿಂದ ಮುಚ್ಚಿಕೊಳ್ಳುತ್ತದೆ. ಹೀಗಾಗಿ ಎಂಜಿನ್​ಗೆ ಕಡಿಮೆ ಗಾಳಿ ಹೋಗುವ ಕಾರಣ ಒಳಗೆ ದಹ್ಯ ಕ್ರಿಯೆ ಸರಿಯಾಗಿ ನಡೆಯುವುದಿಲ್ಲ. ಇದರಿಂದ ವಾಹನದಲ್ಲಿ ಸಮಸ್ಯೆ ಉಂಟಾಗುತ್ತದೆ.

ಎಂಜಿನ್ ಆಯಿಲ್ ಒಳಗಿರುವ ಭಾಗಗಳನ್ನು ನಯಗೊಳಿಸುತ್ತದೆ. ಈ ಆಯಿಲ್​ ನಿಧಾನವಾಗಿ ತನ್ನ ಸ್ಥಿಗ್ಧತೆ ಕಳೆದುಕೊಳ್ಳುತ್ತದೆ. ಹೀಗಾಗಿ ಆಯಿಲ್​ ಬದಲಾಯಿಸದಿರುವುದು ಎಂಜಿನ್ ಅನ್ನು ಹೆಚ್ಚು ಒತ್ತಡಕ್ಕೆ ಸಿಲುಕಿಸುತ್ತದೆ. ಇದರಿಂದ ಮೈಲೇಜ್ ಕಡಿಮೆಯಾಗುತ್ತದೆ. ಹೀಗಾಗಿ ಕಾಲಕಾಲಕ್ಕೆ ಸರ್ವಿಸ್ ಮಾಡಿಸಿದರೆ ಮಾತ್ರ ಉತ್ತಮ ಮೈಲೇಜ್ ಪಡೆಯುವುದಕ್ಕೆ ಸಾಧ್ಯವಿದೆ.

ಟೈರ್​ನಲ್ಲಿ ಗಾಳಿಯ ಒತ್ತಡ ಸಮರ್ಪಕವಾಗಿರಲಿ

ಟೈರ್​ಗಳಲ್ಲಿ ಸೂಕ್ತ ಪ್ರಮಾಣದ ಗಾಳಿಯ ಒತ್ತಡ ಇರುವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಅದರಿಂದ ಮಾತ್ರ ಉತ್ತಮ ಮೈಲೇಜ್​ ಸಿಗುತ್ತದೆ. ಟೈರ್​ಗಳಲ್ಲಿ ಗಾಳಿ ಕಡಿಮೆ ಇದ್ದರೆ ವಾಹನ ಮತ್ತು ನೆಲಕ್ಕೆ ಹೆಚ್ಚು ಅಂಟಿಕೊಳ್ಳುತ್ತವೆ. ಇದರಿಂದ ತಿರುಗುವುದಕ್ಕೆ ಕಷ್ಟ ವಾಗುತ್ತದೆ (ರೋಲಿಂಗ್ ಪ್ರತಿರೋಧ). ಇಂಥ ಸಂದರ್ಭದಲ್ಲಿ ಎಂಜಿನ್ ನ ಹೆಚ್ಚಿನ ಶಕ್ತಿಯನ್ನು ರೋಲ್ ಮಾಡಲು ಬಳಸಬೇಕಾಗುತ್ತದೆ. ಇದು ಅದರ ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಟೈರ್ ಗಳಲ್ಲಿ ಶಿಫಾರಸು ಮಾಡಿದ ಗಾಳಿಯ ಒತ್ತಡ ಇರಬೇಕು. ವಾರಕ್ಕೊಮ್ಮೆ ಅಥವಾ ಲಾಂಗ್ ಡ್ರೈವ್ ಗೆ ಹೋಗುವ ಮೊದಲು ಟೈರ್ ಒತ್ತಡವನ್ನು ಪರಿಶೀಲಿಸಿಬೇಕು. ಟೈರ್ ಒತ್ತಡದ ಮಾಹಿತಿಯನ್ನು ಸಾಮಾನ್ಯವಾಗಿ ಚಾಲಕನ ಸೈಡ್ ಡೋರ್ ಕೆಳಗೆ ಬರೆದಿರಲಾಗುತ್ತದೆ. ಅವುಗಳನ್ನು ಒಂದು ಬಾರಿ ನೋಡಿಕೊಳ್ಳಬೇಕು.

ಹೊಸ ಮಾಡೆಲ್​ನ ವಾಹನಗಳಲ್ಲಿ ಟೈರ್​ ಪ್ರೆಶರ್​ ಮಾಹಿತಿ ಇನ್​ಸ್ಟ್ರುಮೆಂಟ್​ ಕ್ಲಸ್ಟರ್​ನಲ್ಲಿ ಡಿಸ್​ಪ್ಲೇ ಆಗುತ್ತದೆ. ಅವುಗಳ ಬಗ್ಗೆಯೂ ಗಮನ ಇಟ್ಟುಕೊಳ್ಳಬೇಕು.

ಮುಂದಿರುವ ವಾಹನಗಳ ಅಂತರ ಗಮನಿಸಿ ಓಡಿಸಿ

ಮುಂದಿರುವ ರಸ್ತೆಯನ್ನು ನೋಡಿ ಮತ್ತು ಸಂಚಾರದ ವೇಗವನ್ನು ಸ್ಥಿರವಾಗಿಟ್ಟುಕೊಳ್ಳುವುದು ಮೈಲೇಜ್​ ಪಡೆಯುವ ಮತ್ತೊಂದು ವಿಧಾನ. ಅಂದರೆ ನೀವು ಚಲಾಯಿಸುವ ವಾಹನದ ಮುಂದಿರುವ ವಾಹನ ಹಾಗೂ ನಿಮ್ಮ ವಾಹನಗಳ ನಡುವಿನ ಅಂತರವನ್ನು ಅಂದಾಜು ಮಾಡಿಕೊಂಡು ಚಲಾಯಿಸುವುದು. ಈ ಸ್ಥಿತಿ ಪ್ರಮುಖವಾಗಿ ಎದುರಾಗುವುದು ನಗರದೊಳಗೆ.

ಕೆಲವರು ವೇಗವಾಗಿ ಹೋಗಿ ಮುಂದಿರುವ ವಾಹನ ಸಮೀಪದಲ್ಲಿ ಬ್ರೇಕ್​ ಹಾಕುತ್ತದೆ. ಇದರಿಂದ ಬ್ರೇಕಿಂಗ್ ಶಕ್ತಿ ಹಾಗೂ ಅನಗತ್ಯವಾಗಿ ಗೇರ್ ಬದಲಾಯಿಸಬೇಕಾಗುತ್ತದೆ. ಅಂತರ ಕಾಪಾಡಿಕೊಂಡು ಹೋಗುವ ಮೂಲಕ ಸುಮ್ಮನೆ ಆಕ್ಸಿಲೇಟರ್ ಕೊಡುವುದನ್ನು ಹಾಗೂ ಅನಗತ್ಯ ಬ್ರೇಕ್ ಹಾಕುವುದನ್ನು ತಪ್ಪಿಸಬಹುದು. ಸಿಟಿಯಲ್ಲಾದರೆ ಟ್ರಾಫಿಕ್ ಸಿಗ್ನಲ್ ಗಳನ್ನು ಮುಂಚಿತವಾಗಿ ಗುರುತಿಸಿ ಅನಗತ್ಯ ಬ್ರೇಕ್ ಹಾಕುವುದು ತಪ್ಪಿಸಬಹುದು. ಸ್ಥಿರವಾದ ವೇಗದಲ್ಲಿ ಚಾಲನೆ ಮಾಡುವ ಮೂಲಕ, ನೀವು ಇಂಧನವನ್ನು ಉಳಿಸಬಹುದು ಮತ್ತು ವಾಹನದ ಬ್ರೇಕ್ ಸವೆಯುವುದನ್ನು ಕೂಡ ತಪ್ಪಿಸಬಹುದು.

ಸಿಗ್ನಲ್​ಗಳಲ್ಲಿ ಎಂಜಿನ್ ಆಫ್​ ಮಾಡಿ

ಕೆಲವರು ಎರಡು ನಿಮಿಷಗಳಷ್ಟು ಹೊತ್ತು ಸಿಗ್ನಲ್ ಇದ್ದರೂ ಎಂಜಿನ್​ ಸ್ಟಾರ್ಟ್​ ಮಾಡಿಟ್ಟುಕೊಂಡಿರುತ್ತಾರೆ. ಇದರಿಂದ ಅನಗತ್ಯವಾಗಿ ಇಂಧನ ಖರ್ಚಾಗುತ್ತದೆ. ಹೀಗಾಗಿ ಸಿಗ್ನಲ್​ಗಳಲ್ಲಿ ಎಂಜಿನ್ ಆಫ್​ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಅದೇ ರೀತಿ ಎಲ್ಲಾದರೂ ವಾಹನ ನಿಲ್ಲಿಸಿದಾಗಲೂ ತಕ್ಷಣ ಎಂಜಿನ್ ಆಫ್​ ಮಾಡಿ. ಇದರಿಂದ ಸಾಕಷ್ಟು ಇಂಧನ ಉಳಿಸಬಹುದು.

ಹೊಸ ವಾಹನಗಳಲ್ಲಿ ಸ್ಟಾರ್ಟ್​, ಸ್ಪಾಟ್ ಎಂಬ ಹೊಸ ತಾಂತ್ರಿಕತೆ ಇರುತ್ತದೆ. ಇದು ವಾಹನನ್ನು ತಟಸ್ಥವಾಗಿ ಇಟ್ಟ ತಕ್ಷಣ ಎಂಜಿನ್ ಆಫ್​ ಮಾಡುತ್ತದೆ. ಮತ್ತೆ ಕ್ಲಚ್ ಒತ್ತಿದಾಗ ಎಂಜಿನ್ ಸ್ಟಾರ್ಟ್​ ಆರಂಭವಾಗುತ್ತದೆ. ಈ ಅಭ್ಯಾಸದಿಂದ ಮೈಲೇಜ್ ಜಾಸ್ತಿ ಸಿಗುವ ಜತೆಗೆ ಪರಿಸರಕ್ಕೂ ಪೂರಕವಾಗಿರುತ್ತದೆ.

ಅನಗತ್ಯ ಭಾರ ಹಾಕಬಾರದು

ಎಲ್ಲಾ ತಯಾರಕರು ವಾಹನದ ಸುರಕ್ಷತೆಯ ಮೇಲೆ ಪರಿಣಾಮ ಬೀರದೆ ವಾಹನದ ತೂಕವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ. ಒಟ್ಟಾರೆ ತೂಕವು ಕಡಿಮೆಯಾದಾಗ, ಎಂಜಿನ್ ಮೇಲೆ ಕಡಿಮೆ ಒತ್ತಡ ಸೃಷ್ಟಿಯಾಗುತ್ತದೆ. ಹಗುರವಾದ ವಾಹನವು ಎಂಜಿನ್ ನಿಂದ ಚಾಲಿತ ಭಾರವಾದ ವಾಹನಕ್ಕಿಂತ ಕಡಿಮೆ ಇಂಧನವನ್ನು ಬಳಸುತ್ತದೆ. ಆದ್ದರಿಂದ, ಸಾಧ್ಯವಾದಷ್ಟು ವಾಹನವನ್ನು ಹಗುರವಾಗಿಡುವುದು ಅತ್ಯಗತ್ಯ. ಹೀಗಾಗಿ ನಿಮ್ಮ ವಾಹನದಲ್ಲಿ ಅನಗತ್ಯ ವಸ್ತುಗಳು ಇದ್ದರೆ, ಬೂಟ್​ ಸ್ಪೇಸ್​ನಲ್ಲಿ ಬೇಡದ ವಸ್ತುಗಳನ್ನು ತುಂಬಿದ್ದರೆ ಅವರುಗಳನ್ನು ತೆಗೆದು ಹಾಕುವ ಮೂಲಕ ಮೈಲೇಜ್ ಹೆಚ್ಚಿಸಬಹುದು.

ಇದನ್ನೂ ಓದಿ : Monsoon car care tips : ಮಳೆಗಾಲದಲ್ಲಿ ನಿಮ್ಮ ಕಾರನ್ನು ಈ ರೀತಿ ಮೆಂಟೇನ್ ಮಾಡಿ

ಕಾರು ತಯಾರಕರು ತಮ್ಮ ವಾಹನಗಳನ್ನು ಸಾಧ್ಯವಾದಷ್ಟು ಏರೋಡೈನಾಮಿಕ್ಸ್​ಗೆ ಪೂರಕವಾಗಿ ವಿನ್ಯಾಸಗೊಳಿಸುತ್ತಾರೆ. ಆದಾಗ್ಯೂ, ಕಾರಿನ ರೂಫ್ ರ್ಯಾಕ್ ಗಾಳಿಯ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಕೆಲವು ವಾಹನಗಳ ಟಾಪ್​ ಮೇಲೆಯೂ ಸರಕುಗಳನ್ನು ಇಡುತ್ತಾರೆ. ಇದು ಕೂಡ ಮೈಲೇಜ್​ ಕಡಿಮೆಯಾಗಲು ಕಾರಣವಾಗುತ್ತದೆ.

ಗುಣಮಟ್ಟದ ಇಂಧನ ಹಾಕಿಸಿ

ಕಲಬೆರಕೆ ಇಂಧನವು ಇಂಧನ ದಕ್ಷತೆಯನ್ನು ಕಡಿಮೆ ಮಾಡುವುದಲ್ಲದೆ, ಎಂಜಿನ್ ಗೆ ಹಾನಿ ಮಾಡುತ್ತದೆ. ನಿಮ್ಮ ವಾಹನವನ್ನು ಇಂಧನ ಹಾಕುವ ಮೊದಲು ಇಂಧನದ ಗುಣಮಟ್ಟ ಪರಿಶೀಲಿಸಿ. ಇಂದು, ನೀವು ಯಾವುದೇ ಪಂಪ್ ನಲ್ಲಿ ಮಾರಾಟವಾಗುವ ಇಂಧನದ ಸಾಂದ್ರತೆಯನ್ನು ಪರಿಶೀಲನೆ ಮಾಡಬಹುದು. ಹೆದ್ದಾರಿಯಲ್ಲಿ ಸಂಚರಿಸುವ ವೇಳೆ ಸಣ್ಣಪುಟ್ಟ ಬಂಕ್​ಗಳಲ್ಲಿ ಆಗುವ ಮೋಸದಿಂದ ತಪ್ಪಿಸಿಕೊಳ್ಳಿ. ಉತ್ತಮ ಗುಣಮಟ್ಟದ ಇಂಧನದಿಂದ ಮಾತ್ರ ಮೈಲೇಜ್​ ಹೆಚ್ಚಿಸಲು ಸಾಧ್ಯ.

Continue Reading
Advertisement
Chaitra Gagan kadur and Halashri Swameeji
ಉಡುಪಿ8 mins ago

Chaitra Kundapura : ಚೈತ್ರಾ ಕುಂದಾಪುರ ಗ್ಯಾಂಗ್‌ನಿಂದ ಸೀಜ್‌ ಆಗಿದ್ದು 3.67 ಕೋಟಿ, ಹಾಲಶ್ರೀಯ ಐಷಾರಾಮಿ ಕಾರು ನೋಡಿದ್ರಾ?

Kamal Haasan And Udhayanidhi Stalin
ದೇಶ27 mins ago

Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್‌ ಹಾಸನ್

mandya bundh
ಕರ್ನಾಟಕ41 mins ago

Cauvery Protest: ಕಾವೇರಿ ಕಿಚ್ಚು: ಮಂಡ್ಯ ಬಂದ್‌; ಹೆದ್ದಾರಿಯಲ್ಲಿ ಉರುಳುಸೇವೆ, ರೈತರ ಜತೆ ಸೇರಿದ ಬಿಜೆಪಿ, ಜೆಡಿಎಸ್

Sanjay and Halashri
ಕರ್ನಾಟಕ53 mins ago

Halashri Swameeji : ಹಾಲಶ್ರೀ ಇನ್ನೊಂದು ದೋಖಾ; ಶಿರಹಟ್ಟಿ ಬಿಜೆಪಿ ಟಿಕೆಟ್‌ ಕೊಡಿಸೋದಾಗಿ ಪಿಡಿಒಗೆ ಕೋಟಿ ವಂಚನೆ!

narendra modi justi Trudeau
ದೇಶ1 hour ago

India Canada Row: ನಿಜ್ಜರ್‌ ಹತ್ಯೆ ಕುರಿತು ಭಾರತಕ್ಕೆ ನಂಬಲರ್ಹ ಮಾಹಿತಿ ನೀಡಿದ್ದೇವೆ; ಕೆನಡಾ ಹೊಸ ರಾಗ

Hardeep Singh Nijjar
ದೇಶ2 hours ago

India Canada Row: ನಿಜ್ಜರ್‌ ಧಾರ್ಮಿಕ ನಾಯಕನಲ್ಲ, 200 ಜನರ ಕೊಲೆಗಾರ; ಕೆನಡಾಗೆ ಭಾರತ ಪ್ರತ್ಯುತ್ತರ

holehonnur tension
ಶಿವಮೊಗ್ಗ2 hours ago

Communal Tension: ಗಣಪತಿ ವಿಸರ್ಜನೆ ವೇಳೆ ಮಸೀದಿ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಪ್ರತಿಭಟನೆ

Team india Record
ಕ್ರಿಕೆಟ್2 hours ago

ind vs aus : 21ನೇ ಶತಮಾನದಲ್ಲಿ ಭಾರತ ಕ್ರಿಕೆಟ್​ ತಂಡದ ವಿಶೇಷ ದಾಖಲೆ, ಮೊಹಾಲಿ ಕ್ರೀಡಾಂಗಣವೇ ಸಾಕ್ಷಿ

life tips
ಲೈಫ್‌ಸ್ಟೈಲ್2 hours ago

Life Tips: ಹೇಗೇ ಇದ್ದರೂ ಬದುಕು ಸುಂದರವಾಗಿ ಕಾಣಬೇಕೆಂದರೆ ಇಲ್ಲಿದೆ ಕೀಲಿಕೈ!

Amitabh Bachchan in Paa Movie
ಅಂಕಣ2 hours ago

Raja Marga Column : ಅಪ್ಪಾ ಪಾ!! ಅಮಿತಾಭ್ ಬಚ್ಚನ್ ಬದ್ಧತೆ, ಪ್ರಯೋಗಶೀಲತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina bhavishya
ಪ್ರಮುಖ ಸುದ್ದಿ5 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ5 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ7 days ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ7 days ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ7 days ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

ಟ್ರೆಂಡಿಂಗ್‌