Kannada Rajyotsava: ಪ್ರಾಚೀನ ಕವಿಗಳ ಕಾವ್ಯಕುಂಚದಲ್ಲಿ ಮೂಡಿದ ಕನ್ನಡ, ಕರ್ನಾಟಕದ ಬಿಂಬಗಳು - Vistara News

ಕನ್ನಡ ರಾಜ್ಯೋತ್ಸವ

Kannada Rajyotsava: ಪ್ರಾಚೀನ ಕವಿಗಳ ಕಾವ್ಯಕುಂಚದಲ್ಲಿ ಮೂಡಿದ ಕನ್ನಡ, ಕರ್ನಾಟಕದ ಬಿಂಬಗಳು

ಕರ್ನಾಟಕದ ಪೆಂಪಿನ ಬಗ್ಗೆ, ಕನ್ನಡದ ಕಂಪಿನ ಬಗ್ಗೆ, ನಿಸರ್ಗದ ಸೊಂಪಿನ ಬಗ್ಗೆ, ಜನ-ಜಲ-ಕಲೆಯ ಬಗ್ಗೆ ಕನ್ನಡ ಕಾವ್ಯಗಳು ಬಹಳಷ್ಟು ವರ್ಣಿಸಿವೆ. ಈ ಬಗ್ಗೆ ಒಂದು (Kannada Rajyotsava) ಅವಲೋಕನ ಇಲ್ಲಿದೆ.

VISTARANEWS.COM


on

kannada maha kavigalu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಂಸ್ಕೃತಿಯೆಂಬುದು (Kannada Rajyotsava) ವಿರಾಟ್‌ ಅರ್ಥಗಳನ್ನು ಹೊಮ್ಮಿಸುವ ಶಬ್ದ. ಅತ್ಯಂತ ಸೀಮಿತ, ಸಂಕುಚಿತ ದೃಷ್ಟಿಯಲ್ಲಿ ಅದೀಗ ಬಳಕೆಯಾಗುತ್ತಿರುವುದು ವಿಪರ್ಯಾಸವಾದರೂ, ನಾಡೊಂದರ ಸಂಸ್ಕೃತಿಯನ್ನು ಅರ್ಥವಿಸಿಕೊಳ್ಳಲು ಬಹುಶಿಸ್ತೀಯ ಅಧ್ಯಯನಗಳು ಬೇಕಾಗುತ್ತವೆ. ಉದಾ, ಕನ್ನಡ ನಾಡಿನ ಸಂಸ್ಕೃತಿಯನ್ನು ಅರಿಯಬೇಕಿದ್ದರೆ, ಅಲ್ಲಿನ ಜನಪದ, ಭಾಷೆ, ಹಬ್ಬಗಳು, ಕಲಾಪ್ರಕಾರಗಳು, ಸಾಹಿತ್ಯ ಮುಂತಾದ ಹಲವು ಮಗ್ಗುಲುಗಳನ್ನು ತಿಳಿಯಬೇಕು. ಆಗ ಮಾತ್ರವೇ ಕನ್ನಡ ಸೀಮೆಯ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯ.
ನಾಗರಿಕತೆಯೊಂದರ ಒಳಹೊರಗು ತಿಳಿಯುವುದಕ್ಕೆ ಆ ಪ್ರದೇಶದಲ್ಲಿ ಲಭ್ಯವಿರುವ ಶಿಲ್ಪಕಲೆ, ಪ್ರಾಚೀನ ಗ್ರಂಥಗಳು, ಕಾವ್ಯಗಳು ಸೇರಿದಂತೆ ಯಾವುದೇ ರೂಪದ ಸಾಹಿತ್ಯ ಆಕರವಾಗಬಲ್ಲದು. ಒಂದಾನೊಂದು ಕಾಲದಲ್ಲಿ ಕನ್ನಡ ನಾಡಿನ ವಿಸ್ತೀರ್ಣ ಎಷ್ಟಿತ್ತು ಎನ್ನುವುದನ್ನು ವರ್ಣಿಸುವಂಥ ಪ್ರಾಚೀನ ದಾಖಲೆಗಳು ಇಲ್ಲದಿದ್ದರೂ, ಕವಿಕಾವ್ಯಗಳಲ್ಲಿ ವರ್ಣಿಸಲಾದ ವಿವರಗಳ ಬಗ್ಗೆ ಈವರೆಗೆ ಸಾಕಷ್ಟು ಅಧ್ಯಯನ ನಡೆದು, ವಿವರಗಳನ್ನು ಖಚಿತಪಡಿಸಿಕೊಳ್ಳಲಾಗಿದೆ. ಇದು ನಾಡಿನ ವ್ಯಾಪ್ತಿಗೆ ಮಾತ್ರವಲ್ಲ, ನಾಡಿನ ಸಮೃದ್ಧಿ, ಸೌಂದರ್ಯ, ಜನರ ರೀತಿ-ನೀತಿ ಮುಂತಾದ ಬಹಳಷ್ಟು ವಿಷಯಗಳ ಬಗ್ಗೆ ಹಿಂದಿನಿಂದ ಹಿಡಿದು ಇಂದಿನ ವರೆಗಿನ ಕವಿಗಳು ವರ್ಣಿಸಿದಾರೆ. ಕವಿಗಳಿಗೆ ಕನ್ನಡ ನಾಡು ಕಂಡಿದ್ದು ಹೇಗೆ ಎನ್ನುವ ಲಹರಿಯಿದು.

ಗಡಿರೇಖೆ ಎಳೆದವರು!

ಕನ್ನಡ ನಾಡಿನ ಒಂದು ಕಾಲದ ಗಡಿಯನ್ನು ತಿಳಿಸಿಕೊಡುವ ಮೊದಲ ಆಕರವೆಂದರೆ ಶ್ರೀವಿಜಯನ ಕವಿರಾಜಮಾರ್ಗ. ʻಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್‌ʼ ಎಂದು ಕವಿರಾಜಮಾರ್ಗಕಾರ ಸ್ಪಷ್ಟಪಡಿಸಿದ್ದಾನೆ. ಈ ಗ್ರಂಥ 9ನೇ ಶತಮಾನದ ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಕಾಲದ್ದು. ಆ ಕಾಲದ ಜನರೆಂದರೆ ಸುಮ್ಮನಲ್ಲ, ಕುರಿತೋದದೆಯೂ ಕಾವ್ಯ ಪ್ರಯೋಗ ಪರಿಣತಮತಿಗಳು, ಸುಭಟರು, ಕವಿಗಳು, ಚೆಲ್ವರು, ಶ್ರೇಷ್ಠರು, ಗುಣಿಗಳು, ಅಭಿಮಾನಿಗಳು, ವಿವೇಕಿಗಳು. ಜನರೇ ಇಷ್ಟಾದ ಮೇಲೆ ಆಳುವವರು ಸಾಮಾನ್ಯರೇ? ಅವರು ಸುಪ್ರಭುಗಳು ಎಂದೆಲ್ಲಾ ಪ್ರೀತಿಯಿಂದ ವರ್ಣಿಸಿದ್ದಾನೆ ಕವಿ. ರವಿ ಕಾಣದ್ದನ್ನು ಕವಿ ಕಂಡಿದ್ದು ಹೌದಾಗಿರಬಹುದು.

ಕನ್ನಡ ಸೀಮೆಯ ಒಂದಿಷ್ಟು ಊರುಗಳು ರಾಮಾಯಣ- ಮಹಾಭಾರತ ಮಹಾಕಾವ್ಯಗಳಲ್ಲೂ ಉಲ್ಲೇಖಗೊಂಡಿವೆ. ರಾಮಾಯಣದ ದಂಡಕಾರಣ್ಯ, ಕೃಷ್ಣವೇಣಿ, ಕಾವೇರಿ, ತಾಮ್ರಪರ್ಣಿಯಂಥ ಹೆಸರುಗಳು ನಮ್ಮದೇ ಪ್ರದೇಶಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಉದಾ, ಕಿಷ್ಕೆಂಧೆಯನ್ನು ಹಂಪೆಯ ಸಮೀಪದ ಆನೆಗೊಂದಿ ಎನ್ನಲಾಗುತ್ತದೆ. ಕೊಂಕಣ ಪ್ರದೇಶವು ಪರಶುರಾಮನ ಕ್ಷೇತ್ರವಾಗಿದ್ದರೆ, ಮಹಾಭಾರತದ ವಿರಾಟನಗರವು ಧಾರವಾಡದ ಹಾನಗಲ್ಲೆಂದೂ ಪ್ರತೀತಿಯಿದೆ. ಇವಿಷ್ಟೇ ಅಲ್ಲ, ಗೋಕರ್ಣ, ಚಂದ್ರಗುತ್ತಿ, ಶೃಂಗೇರಿ, ಬನವಾಸಿ, ರಾಮನಾಥಪುರ, ಮುಳಕುಂಟೆ ಮುಂತಾದ ಸ್ಥಳಗಳು ರಾಮಾಯಣದೊಂದಿಗೆ ಜೋಡಿಸಲ್ಪಟ್ಟಿವೆ. ಚಿತ್ರದುರ್ಗ, ಬಳ್ಳಿಗಾವಿ, ಹರಿಹರ, ಕೈವಾರ ಮುಂತಾದ ಊರುಗಳು ಮಹಾಭಾರತದೊಂದಿಗೆ ಹೆಣೆದುಕೊಂಡಿವೆ. ಈ ಮಹಾಕಾವ್ಯಗಳ ಯಾವ್ಯಾವುದೋ ಕಥಾಸಂದರ್ಭಗಳೊಂದಿಗೆ ಸಂಬಂಧವುಳ್ಳ ಈ ಊರುಗಳಲ್ಲಿ ಐತಿಹ್ಯಗಳು, ಸ್ಥಳಪುರಾಣಗಳು, ಜನಪದ ಸಾಹಿತ್ಯಗಳು ಈ ಕಾವ್ಯಗಳೊಂದಿಗೆ ಬೆಸೆದಿವೆ. ಪೌರಾಣಿಕ ಘಟನೆಗಳನ್ನು ಲೌಕಿಕ ಸ್ಥಳಗಳಲ್ಲಿ ಹುಡುಕುವುದು ನೀರಲ್ಲಿ ಮೀನಿನ ಹೆಜ್ಜೆ ಹುಡುಕಿದಷ್ಟೇ ಕಷ್ಟ ಎಂಬಲ್ಲಿಗೆ, ಸಂಸ್ಕೃತಿಯ ಸ್ವರೂಪಗಳನ್ನು ತಿಳಿಯುವುದಕ್ಕೆ ಎಷ್ಟೊಂದು ಅಧ್ಯಯನ, ತಾಳ್ಮೆ ಬೇಕಲ್ಲವೇ? ಕನ್ನಡಿಗರ ಗುಣಗಳ ಬಗ್ಗೆ ಕವಿರಾಜಮಾರ್ಗಕಾರನಿಂದ ಸುಮ್ಮನೆ ಹೊಗಳಿಸಿಕೊಂಡಂಗಲ್ಲ!
ಇನ್ನು ʻಕಬ್ಬಿಗರ ಕಾವ್ಯʼದಲ್ಲಿ ಕವಿ ಆಂಡಯ್ಯ ಕನ್ನಡ ನಾಡಿನ ಸೊಬಗನ್ನು ಪರಿಪರಿಯಾಗಿ ವರ್ಣಿಸಿದ್ದಾನೆ. “ಪಲವುಂ ನಾಲಗೆಯುಳ್ಳವಂ ಬಗೆವೊಡೆಂದುಂ…” ಪದ್ಯದ ವಿವರಣೆಯನ್ನು ನೋಡಿದರೆ- ಮಂದವಾಗಿ ಬೀಸುವ ಮಲಯಾನಿಲ, ಕೊಳಗಳಲ್ಲಿ ಅರಳಿ ನಿಂತ ತಾವರೆ, ತುಂಬಿ ಸೂಸಿವ ಕಾಲುವೆಗಳು, ಹಚ್ಚಹಸುರಿನ ಹೊಲಗಳು, ನೋಡುವ ಕಣ್ಣಿಗೆ ಸಂತೋಷ ಸಾಗರ. ಕನ್ನಡ ನಾಡಿನ ಆ ಸೌಂದರ್ಯವನ್ನು ಬಣ್ಣಿಸಲು ಸಹಸ್ರ ನಾಲಗೆಯ ಶೇಷನಿಗೂ ಸಾಧ್ಯವಿಲ್ಲ. ಇನ್ನು ಉಳಿದ ಮಾನವರ ಪಾಡೇನು? ಅವರ ನಾಲಗೆಗಳು ನಿಶ್ಶಕ್ತ! ಎಂದು ಕವಿ ಚೋದ್ಯವಾಗಿ, ಹೃದ್ಯವಾಗಿ ಬಣ್ಣಿಸಿದ್ದಾನೆ.

pampa
ಕನ್ನಡದ ಆದಿ ಕವಿ ಪಂಪ

ನೆನೆವುದೆನ್ನ ಮನಂ…

ಕನ್ನಡದ ಆದಿ ಕವಿ ಪಂಪನ ಕಾವ್ಯಗಳ ಕಂಪಿಲ್ಲದೆ ಕರುನಾಡಿನ ವರ್ಣನೆ ಪೂರ್ಣ ಆಗುವುದಾದರೂ ಹೇಗೆ? ಪಂಪನಿಗಂತೂ ಕನ್ನಡ ನಾಡಿನ ಮರಿದುಂಬಿ, ಕೋಗಿಲೆ, ಮಲ್ಲಿಗೆಯಿಂದ ಹಿಡಿದು ಪ್ರತಿಯೊಂದೂ ಪ್ರಿಯವೇ. ನಂದನದಂಥ ನಾಡಿನ ಪ್ರಕೃತಿ ಸೌಂದರ್ಯ, ಕನ್ನಡಿಗರ ರಸಿಕತೆ, ಅವರ ತ್ಯಾಗ-ಭೋಗ ಮತ್ತು ಸಮನ್ವಯದ ಸ್ವಭಾವದಿಂದ ತೊಡಗಿ ಪ್ರತಿಯೊಂದು ಸೂಕ್ಷ್ಮ ವಿವರಗಳನ್ನೂ ತನ್ನ ಕಾವ್ಯ ಕುಂಚದಲ್ಲಿ ಕವಿ ದಾಖಲಿಸಿದ್ದಾನೆ. “ನಂದನಂಗಳೊಳೆ ಸುಳಿವ ಬಿರಯಿಯಿಂ| ಕಂಪು ತಣ್ಮಲೆಯೆ ಪೂತ ಸುರಯಿಯಿಂ| ಸುತ್ತಲುಂ ಪರಿವ ಜರಿವೊನಲ್ಗಳಿಂ| ದೆತ್ತಲು ನಲಿವ ಪೊಸ ನವಿಲ್ಗಳಿಂ| ಬೆಳೆದು ಮಗಮಗಿಪ ಗಂಧಶಾಳಿಯಿಂ| ದಲ್ಲಿ ಸುಳಿವ ಗಿಳಿವಿಂಡಿನೋಳಿಯಿಂ…” ನೋಡಿ, ಕನ್ನಡ ನಾಡಿನಲ್ಲಿರುವುದೆಲ್ಲದರ ಮೇಲಿನ ಪ್ರೀತಿ ಪಂಪನಿಗೆ ಎಷ್ಟಿದೆಯೆಂದರೆ- ನಂದನದೊಳಗೆ ಸುಳಿದಾಡುವ ವಿರಹಿಗಳು (ಅವರೂ ಇಷ್ಟ!), ಹೂತ ಸುರಗಿಯ ಕಂಪಿನಿಂದ ಆವೃತವಾದ ಮಲೆಗಳು, ಸುತ್ತಲೂ ಹರಿವ ಝರಿ, ಹೊನಲುಗಳು, ಎಲ್ಲೆಲ್ಲೂ ನಲಿವ ಹೊಸ ನವಿಲುಗಳು, ಬೆಳೆದು ಘಮಘಮಿಸುತ್ತಿರುವ ಗಂಧಶಾಳಿ ಭತ್ತಕ್ಕಾಗಿ ಸುಳಿವ ಗಿಳಿವಿಂಡುಗಳು… ಇಷ್ಟೆಲ್ಲಾ ಇದ್ದ ನಾಡಿನ ಬಗ್ಗೆ ʻಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂʼ ಎಂದು ಬನವಾಸಿಯನ್ನು, ಈ ಮೂಲಕ ಕನ್ನಡ ಸೀಮೆಯನ್ನು ಕವಿ ಕೊಂಡಾಡಿದ್ದರಲ್ಲಿ ಅಚ್ಚರಿಯಿಲ್ಲ.

ʻಕಾವೇರಿಯಿಂದ ಗೋದಾವರಿವರಗಮಿರ್ಪಾ ವಸುಧಾತಳ ವಳಯʼ ಎಂದು ಕನ್ನಡ ಸೀಮೆಗೆ ಗಡಿಹಾಕಿದ ಇನ್ನೊಬ್ಬಾತ ನಂಜುಂಡ ಕವಿ. ಆತನ ʻರಾಮನಾಥ ಚರಿತʼದಲ್ಲಿ ಬರುವ ಕರ್ನಾಟಕದ ವರ್ಣನೆ ಹೃದ್ಯಂಗಮವಾಗಿದೆ. ದೇವಲೋಕವನ್ನೇ ಅಣಕಿಸುವಂಥ ಸಮೃದ್ಧಿಯಿರುವ ಕನ್ನಡ ನಾಡಿನಲ್ಲಿ “ಫಲವಿಲ್ಲದ ಮಾವು ಮಾವಿಲ್ಲದ ಮಲ್ಲಿಗೆ ಮಲ್ಲಿಕಾಲತಿಕೆ ಇಲ್ಲದ ವನ ವನವಿಲ್ಲದ ಭೋಗಿಗಳಿಲ್ಲ ದೇಶದೆಡೆಯೊಳ್| ಅಳಿ ಇಲ್ಲದ ಅಂಬುಜ ಅಂಬುಜಮಿಲ್ಲದ ಕೊಳ ಕೊಳನಿಲ್ಲದಾರಾಮ ವಿಳಸಿತಾರಾಮವಿಲ್ಲದ ಕಾಲೂರ್ಗಳಿಲ್ಲ ಎಲ್ಲೆಲ್ಲಿ ನೋಡಿದರೂ” ಎಂಬಂತ ಅದ್ಭುತ ವರ್ಣನೆಗಳು ಕಾಣಸಿಗುತ್ತವೆ.

ರನ್ನ, ಹರಿಹರ, ರಾಘವಾಂಕ, ಸ್ವಯಂಭೂ, ಶಾಂತಿನಾಥ ಕವಿ, ಚಾಮರಸ, ಪುರಂದರದಾಸರು, ಕನಕದಾಸರು ಮುಂತಾದ ಬಹಳಷ್ಟು ಕವಿಗಳು ಕನ್ನಡದ ನೆಲ,ಜಲ, ಜನ, ಭಾಷೆಯ ಬಗ್ಗೆ ಬಣ್ಣಿಸಿದ್ದಾರೆ. ನದಿಗಳ ಹೊರತಾಗಿ ನಾಡಿಲ್ಲವಾದ್ದರಿಂದ ಕೃಷ್ಣಾ, ಕಾವೇರಿ, ತುಂಗಭದ್ರಾ, ಭೀಮಾ ಮುಂತಾದ ಜೀವಸುಧೆಯರ ಬಗ್ಗೆಯೂ ಹೇಳಿ ಮುಗಿಸಲಾರದಷ್ಟು ವರ್ಣನೆಯಿದೆ. ತುಂಗಭದ್ರೆಯನ್ನು ನೆನೆದರೆ ಭವದ ಪಾತಕವೆಲ್ಲ ದೂರವೆಂದು ರಾಘವಾಂಕ ಹೇಳಿದರೆ, ʻತುಂಗೆಮಂಗಳ ತರಂಗೆ… ಹರಿಸರ್ವಾಂಗೆʼ ಎಂದು ಪುರಂದರದಾಸರು ಹಾಡಿದ್ದಾರೆ. ʻತುಂಗೆ ಇರಲಿಕ್ಕೆ ಬಾವಿ ಕೆರೆಯೇಕೆʼ ಎಂದು ಕನಕದಾಸರು ಹೊಗಳಿದ್ದಾರೆ. ಈ ಎಲ್ಲಾ ವರ್ಣನೆಗಳ ನಡುವಿಗೊಂದು ಚೋದ್ಯವಿದೆ. ಹಿಂದೆಯೂ ಕಾವೇರಿಗಾಗಿ ಕನ್ನಡಿಗರು-ತಮಿಳರು ಗುದ್ದಾಡುತ್ತಿದ್ದರೇ? ಶಬ್ದಮಣಿದರ್ಪಣದ ಒಂದು ಸಾಲು ಹೀಗಿದೆ- ʻಕಾವೇರಿಯ ಕಾಲನಾ ತಿಗುಳನೇಂ ಕಡಂಗೊಂಡನೋ ಬಡ್ಡಿಗೊಂಡನೋ!ʼ (ಕಾವೇರಿಯ ಕಾಲುವೆಯನ್ನು ತಮಿಳನು ಏನು ಕಡಕ್ಕೆ ತೆಗೆದುಕೊಂಡನೋ ಅಥವಾ ಬಡ್ಡಿಯಲ್ಲಿ ಭೋಗ್ಯಕ್ಕೆ ಹಾಕಿಕೊಂಡನೋ!) ಚರಿತ್ರೆ ಮರುಕಳಿಸುವುದೆಂದರೆ ಹೀಗೂ ಇರಬಹುದು!

ಹೊಸಗನ್ನಡ ಕಾಲದ ಕನ್ನಡ ಪ್ರಜ್ಞೆ

ಇವೆಲ್ಲ ಹಳೆಗನ್ನಡ ಮತ್ತು ನಡುಗನ್ನಡ ಕಾವ್ಯಗಳಲ್ಲಾಯಿತು. ಹೊಸಗನ್ನಡ ಸಾಹಿತ್ಯದಲ್ಲೂ ನಮ್ಮ ನಾಡು-ನುಡಿ-ಜನ-ಜಲದಂಥ ವಿಷಯಗಳು ಪಡಿಮೂಡಿವೆ. ನವೋದಯ, ನವ್ಯ, ಬಂಡಾಯ ಮುಂತಾದ ಎಲ್ಲ ರೀತಿಯ ಕಾವ್ಯಗಳಲ್ಲೂ ಕರ್ನಾಟಕವೆಂಬ ಪ್ರಜ್ಞೆ ಎದ್ದುನಿಂತಿದೆ. ಅದರಲ್ಲೂ ಏಕೀಕರಣ-ಪೂರ್ವದ ದಿನಗಳಲ್ಲಿ, ನಾಡಿನ ವರ್ಣನೆಗಿಂತ ಹೆಚ್ಚಾಗಿ ಕನ್ನಡ ಪ್ರಜ್ಞೆಯ ಬಗ್ಗೆ ಹೇಳಿ ತೀರದಷ್ಟು ಕವನಗಳು ಬಂದಿವೆ. ಹುಯಿಲಗೋಳ ನಾರಾಯಣರಾಯರು, ಮಂಜೇಶ್ವರ ಗೋವಿಂದ ಪೈ, ಬಿ. ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರರು, ಸಿದ್ಧಯ್ಯ ಪುರಾಣಿಕರು, ವಿ. ಸೀತಾರಾಮಯ್ಯ, ಡಿ.ಎಸ್‌. ಕರ್ಕಿ, ಪು.ತಿ.ನ, ಚೆನ್ನವೀರ ಕಣವಿ, ಕೆ.ಎಸ್.‌ ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗರು ಮುಂತಾದವರೆಲ್ಲರ ಕವನಗಳಲ್ಲೂ ಕನ್ನಡಪ್ರಜ್ಞೆ, ಏಕೀಕರಣದ ಕುರಿತಾದ ಕಳಕಳಿಯ ನೋವು ವ್ಯಕ್ತವಾಗಿದೆ. ʻಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುʼ, ʻತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆʼ, ʻಹಚ್ಚೇವು ಕನ್ನಡದ ದೀಪʼ ಮುಂತಾದ ಗೀತೆಗಳು ಇಂದಿಗೂ ಅನುರಣಿಸುತ್ತಿವೆ.

ಏಕೀಕರಣದ ಸಂದರ್ಭದಲ್ಲಿನ ಕೆಲವು ಪ್ರಮುಖ ಕವಿಗಳ ಸಾಲುಗಳನ್ನು ಗಮನಿಸಿದರೆ

ಕರ್ನಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ?/ ಮಂತ್ರಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ! ಬೆಂಕಿ ಕಣಾ! ಸಿಡಿಲು ಕಣಾ!… ಕುವೆಂಪು ಅವರ ಮಿಂಚಿನಂಥ ಸಾಲುಗಳಿವು.

ಭಾರತಿಯ ಮನೆಯಲ್ಲಿ ಲಕ್ಷದೀಪಗಳಿಂದು ನಕ್ಷತ್ರಗಳ ತೆರದಿ ಹೊಳೆಯುತಿಹವು… ಮೂಲೆಗಳು ಬೆಳಗಿದರು ನಡುಮನೆಯು ಕತ್ತಲೆಯು ಕನ್ನಡದ ದೀಪವದು ಕಾಣದಿಹುದು!… ಸಿದ್ಧಯ್ಯ ಪುರಾಣಿಕರ ಕಳವಳವಿದು.
ಹಾ ನನ್ನ ಸೋದರರೆ ಬನ್ನಿ ಒಂದಾಗಿ/ ಜಯವಧುವ ನಿಮ್ಮ ತೋಳಿನೊಳಿಟ್ಟು ತೂಗಿ… ಎಂಬುದು ಮಾಸ್ತಿಯವರ ಕರೆ.
ಇಂದು ಕೂಡ ಆಗದೆ/ ಕನ್ನಡವೊಂದಾಗದೆ?/ ಭೇದದ ಹುಳಿ ನೀಗದೆ/ ಕಾಯಿಮನ ಮಾಗದೆ… ಗೋಪಾಲಕೃಷ್ಣ ಅಡಿಗರು ನೊಂದು ಕೇಳುವ ಸಾಲುಗಳಿವು.

ಕನ್ನಡ ಸೀಮೆ ಎಂಬುದು ಒಂದಾದ ಮೇಲಿನ ಸಂಭ್ರಮ ದ. ರಾ. ಬೇಂದ್ರೆಯವರ ಸಾಲುಗಳಲ್ಲಿ ಹೀಗೆ ಕಾಣಿಸಿದೆ- “ಬಡಗಣ ತೆಂಕಣ ಪಡುವಣ ಮೂಡಣ ನಡುವಣ ಕನ್ನಡ ಪಂಚಶಿಖ/ ಪರಮೇಶ್ವರನೊಲು ಪ್ರಪಂಚ ಪ್ರಕಟಿಸಿ ಮೈದೋರಿತು ಇಗೊ ಪಂಚಮುಖ”. ವಿ.ಕೃ. ಗೋಕಾಕರು ಕವನದಲ್ಲಿ, “ಕನ್ನಡದ ಅಮೃತ ಬಿಂದುಗಳ ಮಾಲೆ/ ಹೊಳೆದಿರಲಿ ಭೂವ್ಯೋಮ ಪಟದ ಮೇಲೆ” ಎಂದು ಹಾರೈಸುತ್ತಾರೆ. ದೊಡ್ಡದೊಂದು ಮಹಾಸಂಪುಟವನ್ನೇ ಮಾಡುವಷ್ಟು ಅಗಾಧವಾಗಿದೆ ಕವಿಗಳ ಕಲ್ಪನೆಯಲ್ಲಿ ಕನ್ನಡ ನಾಡು-ನುಡಿಯ ಚಿತ್ರ. ಅವುಗಳ ಮೇಲೊಂದು ಬೆಳಕಿಂಡಿಯನ್ನಷ್ಟೇ ಇಲ್ಲಿ ತೋರುವುದಕ್ಕೆ ಸಾಧ್ಯ.

ಕರ್ನಾಟಕ, ಕನ್ನಡವೆಂಬುದು ಕವಿ-ಕಾವ್ಯಗಳ ಅಂತಃಸತ್ವವಾಗಿ ಲಾಗಾಯ್ತಿನಿಂದ ಹರಿಯುತ್ತಿದೆ. ಮೊದಲೇ ಹೇಳಿದಂತೆ, ಸಂಸ್ಕೃತಿಯೊಂದನ್ನು ಶೋಧಿಸುವುದಕ್ಕೆ ಹಲವು ಆಯಾಮಗಳಿವೆ. ನದಿಯಂತೆಯೇ ನಿಲ್ಲದೆ ಪ್ರವಹಿಸುವ ಕಾವ್ಯಧಾರೆಯೂ ಆ ಮಣ್ಣಿನ ಸತ್ವವನ್ನು ಹೀರಿ, ಜನಮನದ ಪ್ರಜ್ಞೆಯನ್ನು ಒಡಲೊಳಗೆ ಬಿತ್ತಿ ಸಂಸ್ಕೃತಿಯೆಂಬ ಫಸಲನ್ನು ಭರಿಸುತ್ತದೆ. ಹಾಗಾಗಿ ಬೇರು ಗಟ್ಟಿಯಿದ್ದರಷ್ಟೇ ಫಸಲು ಎಂಬ ತತ್ವವನ್ನು ನಾವು ಮರೆಯಬಾರದಷ್ಟೆ.

ಇದನ್ನೂ ಓದಿ: Kannada Rajyotsava: ಕನ್ನಡ ನಾಡು ʻಕರ್ನಾಟಕʼ ಆಗಿದ್ದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Kannada Pride: ಇನ್ನು ಕನ್ನಡದಲ್ಲೇ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಎಕ್ಸಾಮ್!

Kannada Pride: ಕೇಂದ್ರ ಸಶಸ್ತ್ರ ಮೀಸಲು ಪಡೆಗಳ ನೇಮಕಾತಿಯ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ 13 ಪ್ರಾದೇಿಕ ಭಾಷೆಗಳಲ್ಲಿ ನಡೆಸಲು ಕೇಂದ್ರ ಗೃಹ ಇಲಾಖೆಯು ಕಳೆದ ವರ್ಷವೇ ನಿರ್ಧರಿಸಿತ್ತು.

VISTARANEWS.COM


on

Karnataka Candidate can write CRPF, BSF, CIS Constable Exam in Kannada, Kannada Pride
Koo

ನವದೆಹಲಿ: ಸಿಆರ್‌ಪಿಎಫ್(CRPF), ಬಿಎಸ್‌ಎಫ್ (BSF) ಮತ್ತು ಸಿಐಎಸ್ಎಫ್‌ನಂಥ (CISF) ಅರೆ ಸೇನಾ ಪಡೆಗಳ ಕಾನ್ಸ್‌ಟೇಬ್ ನೇಮಕಾತಿ ಪರೀಕ್ಷೆಯನ್ನು (Constable Exam) ಇಂಗ್ಲಿಷ್ ಮತ್ತು ಹಿಂದಿ ಮಾತ್ರವಲ್ಲದೇ, ಕನ್ನಡವೂ (Kannada Pride) ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯವು ಭಾನುವಾರ ಹೇಳಿದೆ.

ದೇಶಾದ್ಯಂತ 128 ನಗರಗಳಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಸುಮಾರು 48 ಲಕ್ಷ ಅಭ್ಯರ್ಥಿಗಳು ಎಕ್ಸಾಮ್ ಬರೆಯಲಿದ್ದಾರೆ. ಈ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲು ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ಮತ್ತು ಕೇಂದ್ರ ಸಶಸ್ತ್ರ ಮೀಸಲು ಪಡೆಯಲ್ಲಿ ಸ್ಥಳೀಯ ಯುವಕರು ಪಾಲ್ಗೊಳ್ಳುವುದನ್ನು ಹೆಚ್ಚಿುವುದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೇ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಸೇರಿದಂತೆ 13 ಸ್ಥಳೀಯ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸ್ಟಾಫ್ ಸೆಲಕ್ಷನ್ ಕಮಿಷನ್(SSC) ಈ ಕಾನ್‌ಸ್ಟೇಬಲ್(ಸಾಮಾನ್ಯ ಕರ್ತವ್ಯ) ಪರೀಕ್ಷೆಯನ್ನು ಕೈಗೊಳ್ಳುತ್ತಿದೆ. ಈ ಮೂಲಕ ಕೇಂದ್ರ ಸಶಸ್ತ್ರ ಪಡೆಗಳಿಗೆ ಲಕ್ಷಾಂತರ ಯುವಕರನ್ನು ಆಕರ್ಷಿಸಲಾಗುತ್ತಿದೆ. ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸಲು ಎಸ್ಎಸ್‌ಸಿ ಮತ್ತು ಕೇಂದ್ರ ಗೃಹ ಸಚಿವಾಲಯವು ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಸುದ್ದಿಯನ್ನೂ ಓದಿ: ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ; ಕನ್ನಡ ಸೇರಿ 15 ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ, ಯಾವ ಹುದ್ದೆಗೆ ಅನ್ವಯ?

Continue Reading

ಕನ್ನಡ ರಾಜ್ಯೋತ್ಸವ

Kannada Koota Luxembourg: ಲಕ್ಸಂಬರ್ಗ್ ಕನ್ನಡ ಕೂಟದಿಂದ ಅದ್ಧೂರಿ ಕನ್ನಡೋತ್ಸವ-2023

Kannada Koota Luxembourg: ಯುರೋಪ್ ಖಂಡದ ಚಿಕ್ಕ ದೇಶದಲ್ಲಿ ಲಕ್ಸಂಬರ್ಗ್ ಕನ್ನಡ ಕೂಟ, ಕರುನಾಡು ಸಂಸ್ಕೃತಿಯ ಅನಾವರಣ ಮಾಡಿದೆ.

VISTARANEWS.COM


on

Kannada Koota Luxembourg
Koo

ಲಕ್ಸಂಬರ್ಗ್: ಕನ್ನಡದ ಕಂಪನ್ನು ಪಸರಿಸುವ ಮತ್ತು ಕನ್ನಡದ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕನ್ನಡ ಕೂಟ ಲಕ್ಸಂಬರ್ಗ್ (ಕೆಕೆಎಲ್) (Kannada Koota Luxembourg) ಅದ್ಧೂರಿಯಾಗಿ `ಕನ್ನಡೋತ್ಸವ -2023’ ನಡೆಸುವ ಮೂಲಕ ಯುರೋಪ್ ಖಂಡದ ಚಿಕ್ಕ ದೇಶದಲ್ಲಿ ಕರುನಾಡು ಸಂಸ್ಕೃತಿಯ ಅನಾವರಣ ಮಾಡಿದೆ.

ಲಕ್ಸಂಬರ್ಗ್‌ನ ಬೆಗ್ಗೆನ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಪಾಲ್ಗೊಂಡು ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದರು. ಈ ಮೂಲಕ ಕನ್ನಡಿಗರೆಲ್ಲರೂ ಒಂದೆಡೆ ಸೇರಿ ಕನ್ನಡ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಬೆಂಗಳೂರು ನಗರ ಜಿಲ್ಲೆಯಷ್ಟು ದೊಡ್ಡದಿರುವ ಲಕ್ಸಂಬರ್ಗ್‌ನಲ್ಲಿ ಸುಮಾರು 6 ಲಕ್ಷ ಜನಸಂಖ್ಯೆ ಇದೆ. ಚಿಕ್ಕದಾದರೂ ಇಲ್ಲಿ ವೈವಿಧ್ಯಮಯ ಸಂಸ್ಕೃತಿ ಶ್ರೀಮಂತವಾಗಿದೆ. ಈ ಬಹುಸಾಂಸ್ಕೃತಿಕ ಪ್ರದೇಶದಲ್ಲಿ ಭಾರತೀಯರು ಅದರಲ್ಲೂ ವಿಶೇಷವಾಗಿ ಕನ್ನಡಿಗರು ಗಮನಾರ್ಹವಾದ ರೀತಿಯಲ್ಲಿ ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪಸರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಲ್ಲಿ 100ಕ್ಕೂ ಹೆಚ್ಚು ಕನ್ನಡಿಗ ಕುಟುಂಬಗಳು ವಾಸ ಮಾಡುತ್ತಿದ್ದು, 2022ರ ಅಂತ್ಯದಲ್ಲಿ ಆರಂಭವಾದ ಕನ್ನಡ ಕೂಟ ಲಕ್ಸಂಬರ್ಗ್ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳು ಹಾಗೂ ಹಬ್ಬಗಳ ಮೂಲಕ ಕನ್ನಡಿಗರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಇದನ್ನೂ ಓದಿ | ದಶಮುಖ ಅಂಕಣ: ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ!

ಕೆಕೆಎಲ್ ಕನ್ನಡೋತ್ಸವ 2023 ಎರಡನೇ ಕರ್ನಾಟಕ ರಾಜ್ಯೋತ್ಸವವನ್ನು ಆಯೋಜಿಸಿದ್ದು, ಇದರಲ್ಲಿ 120ಕ್ಕೂ ಹೆಚ್ಚು ಕನ್ನಡದ ಮನಸುಗಳು ಪಾಲ್ಗೊಂಡಿದ್ದವು. ಇದರ ವಿಶೇಷವೆಂದರೆ ದೊಡ್ಡ ಮಟ್ಟದಲ್ಲಿ ಭಾರತೀಯರು ಮತ್ತು ಕೆಲವು ಯೂರೋಪಿಯನ್ನರೂ ಪಾಲ್ಗೊಂಡಿದ್ದರು. ಕನ್ನಡದ ಶ್ರೀಮಂತ ಪರಂಪರೆಯನ್ನು ಬಿಂಬಿಸುವ ಹಾಗೂ ಸಾಂಸ್ಕೃತಿಕ ಸಂಪ್ರದಾಯವನ್ನು ಬಿಂಬಿಸುವ ರೀತಿಯಲ್ಲಿ ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಮತ್ತು ನಾಡಗೀತೆಯನ್ನು ಹಾಡಲಾಯಿತು.

ಕನ್ನಡಿಗ ಸಮುದಾಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ ವನಜಾಕ್ಷಿ ಜಗದೀಶ್ ಮತ್ತು ಡಾ.ಪುನೀತ್ ಜುಬ್ಬ ಹೊನ್ನಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶರಣ್ಯ ಮತ್ತು ಪ್ರಮೋದ್ ಈಶ್ವರ್ ಅವರು ಈ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಶಾಸ್ತ್ರೀಯ ಸಂಗೀತ, ಸಿನಿಮಾ ಹಾಡುಗಳ ಗಾಯನ, ನೃತ್ಯ ಮತ್ತು ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ವಿಶೇಷವೆಂದರೆ ಈ ಕಾರ್ಯಕ್ರಮಗಳ ಅರ್ಧದಷ್ಟು ಕಾರ್ಯಕ್ರಮಗಳನ್ನು ಮಕ್ಕಳೇ ನಡೆಸಿಕೊಟ್ಟರು. ಈ ಮೂಲಕ ಮಕ್ಕಳು ಕನ್ನಡದ ಸಂಸ್ಕೃತಿಯನ್ನು ಬಿಂಬಿಸಿದರು. ಇದೇ ವೇಳೆ, ಆದರ್ಶ ದಂಪತಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು. ಈ ಪೈಕಿ 5 ಅತ್ಯುತ್ತಮ ಜೋಡಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ಕನ್ನಡಿಗರಾದ ಅಚಲ್ ಮೂರ್ತಿ ಮತ್ತು ಲಕ್ಸಂಬರ್ಗ್ ಮೂಲದ ಬ್ಯಾಂಡ್ `ಅಹ್ಮದ್ ರಾದ್ವಾನ್ & ಲೆಸ್ ಹಿರೋಂಡೆಲ್ಸ್’ ನ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು. ಅಲ್ಲದೇ, ಇಲ್ಲಿ ಆಯೋಜಿಸಲಾಗಿದ್ದ ವಿವಿಧ ಖಾದ್ಯಗಳ ಪ್ರದರ್ಶನ ತಿಂಡಿ ಪ್ರಿಯರಿಗೆ ಆಹ್ಲಾದವನ್ನು ಉಂಟು ಮಾಡಿತು.

ಕೆಕೆಎಲ್ ಅಧ್ಯಕ್ಷರಾದ ಭವಾನಿ ಶಂಕರ್ ಅವರು ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
“ಲಕ್ಸಂಬರ್ಗ್ ಮತ್ತು ಕರ್ನಾಟಕದ ಕನ್ನಡಿಗರ ನಡುವಿನ ಬಾಂಧವ್ಯ ಬಲವರ್ಧನೆಗೆ ಈ ಕಾರ್ಯಕ್ರಮ ನಾಂದಿ ಹಾಡಿದೆ. ಈ ಕನ್ನಡೋತ್ಸವ 2023 ಕೇವಲ ನಮ್ಮ ನಡುವಿನ ಪ್ರತಿಭೆಗಳನ್ನು ಹೊರ ಜಗತ್ತಿಗೆ ಅನಾವರಣ ಮಾಡಲಷ್ಟೇ ಕಾರಣವಾಗಿಲ್ಲ. ಇದರೊಂದಿಗೆ ಒಗ್ಗಟ್ಟು ಮತ್ತು ಪ್ರೀತಿ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಹೊರ ಜಗತ್ತಿಗೆ ತೋರಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ’’ ಎಂದರು.

ಸಂಧ್ಯಾ ಸುರೇಶ್, ಪುನೀತಾ ರೆಡ್ಡಿ, ಕಾರ್ತೀಕ್ ರಾಮಮೂರ್ತಿ, ನರಸಿಂಹ ಹೆಬ್ಬಾರ್, ಮಂಜುನಾಥ್ ಪ್ರಸಾದ್, ನಿರಂಜನ್ ವಿಶ್ವಮೂರ್ತಿ, ಹಿತೇಶ್ ಚಿಡ್ಗಲ್, ಪ್ರಶಾಂತ್ ಅಳವಂಡಿ, ರಮೇಶ್ ಪಾಂಡುರಂಗ ಸೇರಿದಂತೆ ಇನ್ನಿತರ ಆಡಳಿತ ಮಂಡಳಿ ಸದಸ್ಯರು ನೇತೃತ್ವದಲ್ಲಿ ಹಾಗೂ ಸ್ವಯಂಸೇವಕರ ಶ್ರಮದ ಫಲವಾಗಿ ಈ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ನಡೆಯಲು ಕಾರಣವಾಗಿದೆ.

ಇದನ್ನೂ ಓದಿ | Cultural Events : ಡಿ.13-14ರಂದು ನೃತ್ಯ ವೈಭವದ ತ್ಯಾಗರಾಜ ಹೃತ್ಸದನ

ಈ ಕನ್ನಡೋತ್ಸವ 2023 ಕನ್ನಡದ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸುವುದರೊಂದಿಗೆ ಕನ್ನಡೇತರರು ಮತ್ತು ಸ್ಥಳೀಯ ನಾಗರಿಕರೊಂದಿಗೆ ಸಂಬಂಧ ಬೆಳೆಸುವುದು ಮತ್ತು ಸಂಸ್ಕೃತಿ ವಿನಿಮಯಕ್ಕೆ ಒಂದು ಉತ್ತಮವಾದ ವೇದಿಕೆಯನ್ನು ಒದಗಿಸಿಕೊಟ್ಟಿತು.

Continue Reading

ಕನ್ನಡ ರಾಜ್ಯೋತ್ಸವ

RK Balachandra: ʼಕರ್ನಾಟಕ ಸಾಧಕ ರತ್ನʼ ಪ್ರಶಸ್ತಿಗೆ ಕುಶಾಲನಗರದ ಆರ್.ಕೆ. ಬಾಲಚಂದ್ರ ಆಯ್ಕೆ

R. K. Balachandra: ಬಳ್ಳಾರಿಯ ಸ್ಮಿಯಾಕ ಚಾರಿಟಬಲ್ ಟ್ರಸ್ಟ್‌ನಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ʼಕರ್ನಾಟಕ ಸಾಧಕ ರತ್ನʼ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.

VISTARANEWS.COM


on

RK Balachandra
Koo

ಮಡಿಕೇರಿ: 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಳ್ಳಾರಿಯ ಸ್ಮಿಯಾಕ ಚಾರಿಟಬಲ್ ಟ್ರಸ್ಟ್‌ನಿಂದ ನೀಡುವ ʼಕರ್ನಾಟಕ ಸಾಧಕ ರತ್ನʼ ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಕುಶಾಲನಗರದ ಆರ್.ಕೆ. ಬಾಲಚಂದ್ರ (RK Balachandra) ಅವರು ಆಯ್ಕೆಯಾಗಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುಮುಖ್ಯವಾಗಿ ಅನ್ಯ ರಾಜ್ಯದ ಕನ್ನಡೇತರರಿಗೆ ಕನ್ನಡ ಕಲಿಸುವಿಕೆ ಹಾಗೂ ರಾಜ್ಯಾದಂತ ಉಚಿತವಾಗಿ ಬ್ಯಾಂಕಿಂಗ್ ಹಾಗೂ ಇತರೆ ಸ್ಪರ್ಧಾತ್ಮಗಳ ಪರೀಕ್ಷೆ ತರಬೇತಿಯ ಸೇವೆಯನ್ನು ಗುರುತಿಸಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಇವರಿಗೆ ʼಕರ್ನಾಟಕ ಸಾಧಕ ರತ್ನʼ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ರಾಮಾಯಣ, ಮಹಾಭಾರತ ಕಲಿಕೆ ಶಿಫಾರಸು ಸ್ವಾಗತಾರ್ಹ

ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್‌ 26ರಂದು ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್.ಕೆ. ಬಾಲಚಂದ್ರ ಸೇರಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕನ್ನಡ ರಾಜ್ಯೋತ್ಸವ

Karnataka Sambhrama 50: ಹೋರಾಟ, ತ್ಯಾಗ-ಬಲಿದಾನದಿಂದ ಕನ್ನಡ ನಾಡು ಉದಯ: ಸಿದ್ದರಾಮಯ್ಯ

Karnataka Sambhrama 50: ಗದಗದಲ್ಲಿ ಆಯೋಜಿಸಿದ್ದ ʼಕರ್ನಾಟಕ ಸಂಭ್ರಮ-50ʼ ರಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

VISTARANEWS.COM


on

CM Siddaramaiah
Koo

ಗದಗ: ಹೋರಾಟ, ತ್ಯಾಗ-ಬಲಿದಾನಗಳಿಂದ ಕನ್ನಡ ನಾಡು (Karnataka Sambhrama 50) ಉದಯವಾಗಿದೆ. ಈ ನಾಡಲ್ಲಿ ಕನ್ನಡತ್ವ ಮತ್ತಷ್ಟು ಆಳವಾಗಿ ಬೇರೂರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಆಯೋಜಿಸಿದ್ದ ʼಕರ್ನಾಟಕ ಸಂಭ್ರಮ-50ʼ ಅದ್ಧೂರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ನಾಮಕರಣ ಆಗಲು ಶ್ರಮಿಸಿ ಹೋರಾಡಿದ ಕೆ.ಎಚ್. ಪಾಟೀಲ್ ಮತ್ತು ಎಲ್ಲಾ ಹೋರಾಟದ ಸಂಗತಿಗಳನ್ನು ಇಂದು ನಾನು ಸ್ಮರಿಸುತ್ತೇನೆ. ಅವತ್ತು ಕೆ.ಎಚ್.ಪಾಟೀಲ್, ಇಂದು ಎಚ್.ಕೆ.ಪಾಟೀಲ್, ಅವತ್ತು ದೇವರಾಜ ಅರಸು ಕುಳಿತಿದ್ದ ಮುಖ್ಯಮಂತ್ರಿ ಕುರ್ಚಿಯಲ್ಲಿ ಇವತ್ತು ನಾನು ಕುಳಿತಿದ್ದೇನೆ. ಇದೇನು ಕಾಕತಾಳೀಯ ಅಲ್ಲ ಎಂದರು.

ಇಂಗ್ಲಿಷ್‌ನಲ್ಲಿ ಶೇಕ್ಸ್ ಪಿಯರ್ ಸಾಹಿತ್ಯ ರಚಿಸುವುದಕ್ಕೂ 500 ವರ್ಷಗಳ ಮೊದಲೇ ಕನ್ನಡದಲ್ಲಿ ವಿಶ್ವ ಮಟ್ಟದ ಅತ್ಯುನ್ನತ ಸಾಹಿತ್ಯ ರಚನೆಯಾಗಿತ್ತು. ಪಂಪನಿಂದ ಹಿಡಿದು ವಚನಕಾರರನ್ನೂ ಸೇರಿಸಿ ಹಲವರು ಅತ್ಯುನ್ನತ ಸಾಹಿತ್ಯ ರಚಿಸಿದ್ದರು ಎಂದು ಕನ್ನಡ ಭಾಷಾ ಹಿರಿಮೆಯನ್ನು ಉದಾಹರಿಸಿದರು.

ಇದನ್ನೂ ಓದಿ | Karnataka Drought : 324 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಕನ್ನಡ ಕಲಿಯದೆಯೂ ಕರ್ನಾಟಕದಲ್ಲಿ ವ್ಯವಹರಿಸಬಹುದು ಎನ್ನುವ ವಾತಾವರಣ ಬದಲಾಗಬೇಕು. ಕನ್ನಡದ ಸಂಸ್ಕೃತಿ ಜತೆಗೆ ನಮ್ಮೆಲ್ಲರಲ್ಲಿ ಕನ್ನಡತನ ಬೇರೂರಬೇಕು. ಆಗ ಮಾತ್ರ ಕನ್ನಡದ ವಾತಾವರಣ ಇಡಿ ನಾಡಿನಲ್ಲಿ ಪಸರಿಸುತ್ತದೆ ಎಂದರು.

CM Siddaramaiah talks in Karnataka sambhrama at Gadag

ಕನ್ನಡ ಸಂಸ್ಕೃತಿ ಎಂದಾಗ ಬಸವಾದಿ ಶರಣರ ಕಾಯಕ ಸಂಸ್ಕೃತಿಯೂ ಸೇರಿದೆ. ಬಸವಣ್ಣನವರ ಆಶಯದಂತೆ ವರ್ಗರಹಿತ, ಜಾತಿರಹಿತ ಸಮಾಜದ ನಿರ್ಮಾಣ ಮತ್ತು ಅಭಿವೃದ್ಧಿ ನಮ್ಮ ಗುರಿಯಾಗಿದೆ. ಆ ಕಾರಣಕ್ಕೇ ಸರ್ವ ಜಾತಿ-ಧರ್ಮದವರ ಬದುಕನ್ನು ಎತ್ತರಿಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ ಎಂದರು.

ಈ ಹಿಂದೆ ಕೆ.ಎಚ್.ಪಾಟೀಲರು ಇಡೀ ಜಿಲ್ಲೆಗೆ ಕುಡಿಯುವ ನೀರು ಕೊಟ್ಟರು. ಅವರ ಪುತ್ರ ಎಚ್.ಕೆ.ಪಾಟೀಲರೂ ಇಡೀ ರಾಜ್ಯಕ್ಕೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೀಗಾಗಿ ನಾಮಪತ್ರ ಸಲ್ಲಿಸಿದರೆ ಸಾಕು, ನೀವೆಲ್ಲಾ ಎಚ್.ಕೆ.ಪಾಟೀಲರನ್ನು ಗೆಲ್ಲಿಸಬೇಕು. ಇಡೀ ರಾಜ್ಯಕ್ಕೆ ಅಷ್ಟೊಂದು ಕೆಲಸ ಮಾಡಿರುವ ಎಚ್.ಕೆ.ಪಾಟೀಲರು ಮತ ಕೇಳಬಾರದು. ನೀವೆಲ್ಲಾ ಅವರನ್ನೂ ಹಾಗೇ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಅವಳಿ ನಗರಕ್ಕೆ 61 ಕೋಟಿ ಕೊಟ್ಟಿದ್ದೇವೆ

ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕಗೊಳಿಸಲು ಈಗಾಗಲೇ 61 ಕೋಟಿ ರೂ. ನೀಡಿದ್ದೇವೆ. ಅಗತ್ಯಬಿದ್ದರೆ ಮತ್ತಷ್ಟು ಹಣ ಕೊಡಲು ನಮ್ಮ ಸರ್ಕಾರ ಸಿದ್ದವಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಚಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾಡಳಿತ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರವಾಸೋದ್ಯಮ ಸಚಿವರೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಎಚ್.ಕೆ.ಪಾಟೀಲ್ ಅವರು ವಹಿಸಿದ್ದರು.

ಇದನ್ನೂ ಓದಿ | Cauvery Dispute : ರಾಜ್ಯಕ್ಕೆ ಮತ್ತೆ ಕಾವೇರಿ ಜಲಾಘಾತ; ಇನ್ನು 20 ದಿನ ನಿರಂತರ ನೀರು ಹರಿಸಲು ಪ್ರಾಧಿಕಾರ ಸೂಚನೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವರಾದ ಕೆ.ಎಚ್.ಮುನಿಯಪ್ಪ, ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಬೈರತಿ ಸುರೇಶ್, ಮಂಕಾಳ ವೈದ್ಯ, ಶರಣ ಪ್ರಕಾಶ್ ಪಾಟೀಲ್, ಶಿವಾನಂದ ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಸೇರಿ ಹಲವಾರು ಶಾಸಕರು, ಇಲಾಖಾ ಕಾರ್ಯದರ್ಶಿಗಳು-ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading
Advertisement
FIFA World Cup qualifiers
ಕ್ರೀಡೆ14 seconds ago

FIFA World Cup qualifiers: ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ; ಬಲಿಷ್ಠ ಸಂಭಾವ್ಯ ತಂಡ ಪ್ರಕಟಿಸಿದ ಭಾರತ

Prajwal Revanna Case HD Revanna mobile phone seized SIT to collect technical evidence
ಕ್ರೈಂ6 mins ago

Prajwal Revanna Case: ಎಚ್.ಡಿ. ರೇವಣ್ಣ ಮೊಬೈಲ್‌ ವಶಕ್ಕೆ? ಟೆಕ್ನಿಕಲ್‌ ಎವಿಡೆನ್ಸ್‌ ಕಲೆ ಹಾಕಲು ಮುಂದಾದ ಎಸ್‌ಐಟಿ!

Prajwal Revanna Case reaction by Harshika Poonacha
ಸಿನಿಮಾ21 mins ago

Prajwal Revanna Case: ವೈರಲ್ ಆಗುತ್ತಿರುವ 2976 ವಿಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ ಎಂದ ಹರ್ಷಿಕಾ ಪೂಣಚ್ಚ!

Prajwal Revanna Case Women officers say face morphed in video
ಕ್ರೈಂ22 mins ago

Prajwal Revanna Case: ಪ್ರಜ್ವಲ್‌ ವಿಡಿಯೊ ಕೇಸ್‌; ವಿಡಿಯೊದಲ್ಲಿರುವ ಮಹಿಳಾ ಅಧಿಕಾರಿಗಳಿಗೆ SIT ನೋಟಿಸ್‌: ‘ನಾನವಳಲ್ಲ’ ಎಂದು ಹೇಳಿಕೆ!

arrest
ದೇಶ31 mins ago

ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೌಲ್ವಿಯ ಬಂಧನ

108 ambulance
ಬೆಂಗಳೂರು34 mins ago

108 Ambulance : 3 ತಿಂಗಳ ವೇತನ ಬಾಕಿ; ನಾಳೆ ರಾತ್ರಿಯಿಂದಲೇ 108 ಆಂಬ್ಯುಲೆನ್ಸ್‌ ಸೇವೆ ಬಂದ್‌!

Viral Video
ವೈರಲ್ ನ್ಯೂಸ್34 mins ago

Viral Video: ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದೇ ಬಿಟ್ಟ ಜನ; ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case Prajwal likely to arrive in Bengaluru today SIT decides to arrest him at airport
ಕ್ರೈಂ42 mins ago

Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್‌ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!

viral news
ಕ್ರೀಡೆ58 mins ago

Viral News: ಎಐ ತಂತ್ರಜ್ಞಾನದ ಮೂಲಕ ತಂಡ ಆಯ್ಕೆ ಮಾಡಿ ಟಿ20 ಸರಣಿ ಗೆದ್ದ ಇಂಗ್ಲೆಂಡ್​ ಮಹಿಳಾ ತಂಡ

Kareena Kapoor appointed Unicef India National Ambassador
ಸಿನಿಮಾ59 mins ago

Kareena Kapoor: ʻಯುನಿಸೆಫ್ ಇಂಡಿಯಾʼಗೆ ರಾಯಭಾರಿಯಾದ ಕರೀನಾ ಕಪೂರ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌