Kannada Rajyotsava: ಚೆಲುವ ಕನ್ನಡನಾಡು ಉದಯವಾಗಿದ್ದು ಹೀಗೆ... - Vistara News

ಕನ್ನಡ ರಾಜ್ಯೋತ್ಸವ

Kannada Rajyotsava: ಚೆಲುವ ಕನ್ನಡನಾಡು ಉದಯವಾಗಿದ್ದು ಹೀಗೆ…

13ನೇ ಶತಮಾನದ ಆದಿಯಲ್ಲಿ ಒಡೆದ ನಾಡು ಒಂದು ಭಾಷೆಯ ಅಸ್ಮಿತೆಯಡಿ, ರಾಜಕೀಯವಾಗಿ ಒಂದುಗೂಡುವುದಕ್ಕೆ ಹಲವಾರು ಶತಮಾನಗಳು, ಬಹಳಷ್ಟು ತ್ಯಾಗ, ಹೋರಾಟಗಳು ಬೇಕಾದವು. ಕರ್ನಾಟಕ ರಾಜ್ಯದ (Kannada Rajyotsava) ಹುಟ್ಟಿನ ಸಂಗ್ರಹಯೋಗ್ಯ ಮಾಹಿತಿ ಇಲ್ಲಿದೆ.

VISTARANEWS.COM


on

Kannada Rajyotsava
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಸೊತ್ತಿಗೆಗಳಲ್ಲಿ ರಾಜ್ಯ ವಿಸ್ತರಣೆ ಮತ್ತು ಅಧಿಕಾರದ (Kannada Rajyotsava) ಮಹತ್ವಾಕಾಂಕ್ಷೆಗಳು ಸರ್ವೇಸಾಮಾನ್ಯ ಎನಿಸಿದ್ದ ಕಾಲಘಟ್ಟವದು. ಭಾಷೆ, ನೆಲ, ಜಲ, ಸಂಸ್ಕೃತಿ ಎಂಬಂಥ ಯಾವುದೇ ಭಾವನಾತ್ಮಕ ವಿಷಯಗಳಿಗೆ ಸೊಪ್ಪು ಹಾಕದೆ, ಗಡಿಯನ್ನು ಮಾತ್ರವೇ ವಿಸ್ತರಿಸಿಕೊಳ್ಳುವ ಆಳರಸರ ಮೇಲಾಟದಿಂದ ಪೆಟ್ಟಾಗುತ್ತಿದ್ದುದು ಸಾಮಾನ್ಯರಿಗೆ ಎಂಬುದನ್ನು ಚರಿತ್ರೆಯ ಪುಟಗಳು ಚೀರಿ ಹೇಳುತ್ತವೆ. ಹೊಯ್ಸಳರ ಮತ್ತು ಸೇವುಣರ ಇಂಥದ್ದೇ ರಾಜಕೀಯ ಜಿದ್ದಾಜಿದ್ದಿಯಲ್ಲಿ ವಿಸ್ತಾರವಾಗಿದ್ದ ಕನ್ನಡ ನಾಡು ತುಂಡಾಗಿದ್ದು. ಹೀಗೆ 13ನೇ ಶತಮಾನದ ಆದಿಯಲ್ಲಿ ಒಡೆದ ನಾಡು ಒಂದು ಭಾಷೆಯ ಅಸ್ಮಿತೆಯಡಿ, ರಾಜಕೀಯವಾಗಿ ಒಂದುಗೂಡುವುದಕ್ಕೆ ಹಲವಾರು ಶತಮಾನಗಳು, ಬಹಳಷ್ಟು ತ್ಯಾಗ, ಹೋರಾಟಗಳು ಬೇಕಾದವು.

ಭಾರತದ ಉಳಿದೆಲ್ಲಾ ರಾಜ್ಯಗಳಂತೆಯೇ, ಕರ್ನಾಟಕದ ಗಡಿರೇಖೆ ಸಹ ಎಂದೂ ಸ್ಥಿರವಾಗಿರಲಿಲ್ಲ. ಕದಂಬ, ಗಂಗ ಮತ್ತು ಬಾದಾಮಿ ಚಾಳುಕ್ಯರ ಆಳ್ವಿಕೆಯ ದಿನಗಳಲ್ಲಿ, ಕನ್ನಡ ಸೀಮೆಯು ಗೋದಾವರಿ ನದಿಯನ್ನು ಉತ್ತರ ಗಡಿಯಾಗಿಯೂ ಮತ್ತು ಕಾವೇರಿ ಸಮುದ್ರ ಸೇರುವ ಭಾಗದವರೆಗಿನ ಪ್ರಾಂತ್ಯವನ್ನು ದಕ್ಷಿಣದ ಗಡಿಯಾಗಿಯೂ ಹೊಂದಿತ್ತು. ಇದನ್ನೇ ಶ್ರೀವಿಜಯನು ಕವಿರಾಜ ಮಾರ್ಗದಲ್ಲಿ ಮತ್ತು ನಂಜುಂಡ ಕವಿಯು ರಾಮನಾಥ ಚರಿತೆಯಲ್ಲಿ ಹೇಳಿದ್ದು. ಈಗಿನ ಬಿಜಾಪುರದ ಪಟ್ಟದಕಲ್ಲು, ಕೊಪ್ಪಳ. ಧಾರವಾಡದ ಲಕ್ಷ್ಮೇಶ್ವರ, ಬೆಳಗಾವಿಯ ಒಕ್ಕುಂದ, ಗೋದಾವರಿ ಮತ್ತು ಕೃಷ್ಣಾ ನದಿಗಳು ಹರಿಯುವ ಪ್ರದೇಶಗಳು, ನೀಲಗಿರಿ, ಕೊಯಮತ್ತೂರು ಮತ್ತು ಸೇಲಂನ ಭಾಗಗಳು ಕನ್ನಡ ಭೂಮಿಯಾಗಿತ್ತೆಂದು ಶಾಸನಗಳ ಆಧಾರದ ಮೇಲೆ ಚರಿತ್ರಕಾರರು ಹೇಳಿದ್ದಾರೆ. ಇಷ್ಟು ವಿಶಾಲವಾಗಿ ಹರಡಿದ್ದ ಕನ್ನಡದ ಕಂಪು ಕ್ರಮೇಣ ಸಂಕೋಚಗೊಂಡಿದ್ದೇಕೆ?

karnataka map

ಹಂಚಿಹೋದ ಕನ್ನಡಸೀಮೆ

ಇದರ ಕಾರಣಗಳು ಬಹುತೇಕ ರಾಜಕೀಯ ಸ್ವರೂಪದವು. ವಿಜಯನಗರದ ಆಳ್ವಿಕೆಯು ದಕ್ಷಿಣ ಭಾರತದ ಬಹುದೊಡ್ಡ ಭಾಗದಲ್ಲಿ ವಿಸ್ತರಿಸಿಕೊಂಡಿದ್ದರೂ, ಬೀದರ್‌, ಕಲಬುರ್ಗಿ ಮತ್ತು ರಾಯಚೂರಿನ ಭಾಗಗಳು ಆದಿಲ್‌ ಷಾಹಿಗಳ ಒಡೆತನದಲ್ಲೇ ಇದ್ದವು. ಮುಂದೆ, ಮೈಸೂರು ರಾಜ್ಯವನ್ನು ವಿಸ್ತರಿಸಲು ಹೈದರ್ ಮತ್ತು ಟಿಪ್ಪು ಪ್ರಯತ್ನಿಸಿದರೂ, ವರದಾ ನದಿಯ ಉತ್ತರ ಭಾಗವನ್ನು ಪೇಶ್ವೆಗಳಿಗೂ, ಕೊಡಗು-ಮಲಬಾರ್‌ ಪ್ರಾಂತ್ಯವನ್ನು ಬ್ರಿಟಿಷರಿಗೂ ಬಿಟ್ಟುಕೊಡಬೇಕಾಯಿತು. ನಾಲ್ಕನೇ ಮೈಸೂರು ಯುದ್ಧದ ನಂತರ, ಮೈಸೂರು ಸಂಸ್ಥಾನ ಮಾತ್ರವೇ ಮೈಸೂರು ರಾಜವಂಶಕ್ಕೆ ಉಳಿಯಿತು. ಬೆಳಗಾವಿ, ಬಿಜಾಪುರ, ಧಾರವಾಡ ಮತ್ತು ಉತ್ತರಕನ್ನಡ ಜಿಲ್ಲೆಗಳು ಬ್ರಿಟಿಷರ ಮುಂಬಯಿ ಆಧಿಪತ್ಯಕ್ಕೂ, ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು ಅವರ ಮದರಾಸಿನ ಸಂಸ್ಥಾನಕ್ಕೂ ಸೇರಿದರೆ, ಕೊಡಗು ಬ್ರಿಟಿಷರ ಅಧೀನ ರಾಜ್ಯವಾಗಿ ಉಳಿಯಿತು. ಬೀದರ್‌, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್‌ ನಿಜಾಮರ ಆಳ್ವಿಕೆಗೆ ಸೇರಿದರೆ, ಕೆಲವು ಚಿಕ್ಕ-ಪುಟ್ಟ ಪಾಳಯಪಟ್ಟುಗಳು ಮರಾಠೀ ಸಂಸ್ಥಾನಿಕರ ವಶದಲ್ಲಿ ಉಳಿದವು.

ಹೀಗೆ ಒಂದು ಭಾಷಿಕರು ಹಲವು ಆಡಳಿತಗಳ ವ್ಯಾಪ್ತಿಯಲ್ಲಿ ಛಿದ್ರವಾಗಿ ಹೋದರು. ಇಷ್ಟೂ ಪ್ರಾಂತ್ಯಗಳ ಬಹುಸಂಖ್ಯಾತರಿಗೆ ಕನ್ನಡ ಮನೆಮಾತಾಗಿ ಉಳಿದಿತ್ತು, ನಿಜ. ಆದರೆ ಆಡಳಿತ, ವಹಿವಾಟು, ವ್ಯಾಪಾರ, ಶಿಕ್ಷಣ ಮುಂತಾದ ಎಲ್ಲಾ ಕಡೆಗಳಲ್ಲಿ ಆಳುವವರಿಗೆ ಬೇಕಾದ ಭಾಷೆಯನ್ನು ಅವರ ಮೇಲೆ ಹೇರಲಾಯಿತು. ತಮ್ಮ ಮಾತು ಪ್ರಜೆಗಳಿಗೆ ತಿಳಿಯಬೇಕೆಂಬ ಆಳುವವರ ಕಳಕಳಿಗಿಂತ, ಬದುಕಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಪ್ರಜೆಗಳು ತಮ್ಮದಲ್ಲದ ಭಾಷೆಯನ್ನೂ ಕಲಿಯುವ ಒತ್ತಡಕ್ಕೆ ಸಿಲುಕಿದ್ದರು. ಉದಾಹರಣೆಗೆ, 1826ರಲ್ಲಿ ಮುಂಬಯಿ ಆಧಿಪತ್ಯದ ಸರ್ಕಾರವು ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಮರಾಠಿ ಶಾಲೆಗಳನ್ನು ಆರಂಭಿಸಿತು. ಆಡಳಿತದಲ್ಲಿ ಅದಾಗಲೇ ಮರಾಠಿ ಜಾರಿಗೆ ಬಂದಿದ್ದರಿಂದ ಇಂಥ ಕ್ರಮಗಳಿಗೆ ಪ್ರತಿರೋಧ ಇರಲಿಲ್ಲ. ಆದರೆ ಸರ್‌ ವಾಲ್ಟರ್‌ ಎಲಿಯೆಟ್‌ನಂಥ ಬ್ರಿಟಿಷ್‌ ಅಧಿಕಾರಿಗಳಿಗೆ, ಇಲ್ಲಿನ ಬಹುತೇಕ ಜನರ ತಾಯ್ನುಡಿ ಕನ್ನಡವಾಗಿರುವುದರಿಂದ ಕನ್ನಡವೇ ಆಡಳಿತ ಭಾಷೆಯಾಗುವುದು ಸೂಕ್ತ ಎಂದೆನಿಸಿತ್ತು. ಇದೇ ಕಾರಣದಿಂದ 1830ರಲ್ಲಿ, ಧಾರವಾಡದಲ್ಲಿ ಕನ್ನಡ ಶಾಲೆಯೊಂದನ್ನು ಆತ ಆರಂಭಿಸಿ, ಮುಂದಿನ ಮೂರು ವರ್ಷಗಳ ಕಾಲ ಸ್ವಂತ ಖರ್ಚಿನಲ್ಲಿ ಶಾಲೆ ನಡೆಸಿದರು. ಈ ಕೆಲಸವನ್ನು ಡೆಪ್ಯುಟಿ ಚೆನ್ನಬಸಪ್ಪನವರು ಮುಂದುವರಿಸಿದರು.

ಕನ್ನಡಿಗರ ಸಂಕಷ್ಟ

ಮುಂಬಯಿ ಸಂಸ್ಥಾನದಲ್ಲಿದ್ದ ಕನ್ನಡಿಗರ ಸ್ಥಿತಿ ಹೀಗಾದರೆ, ಹೈದರಾಬಾದ್‌ ಆಳ್ವಿಕೆಯ ಅಡಿಯಲ್ಲಿದ್ದ ಕನ್ನಡಿಗರದ್ದು ಇನ್ನೂ ಶೋಚನೀಯ ಅವಸ್ಥೆ. ಅಲ್ಲಿ ಮರಾಠಿ ಪ್ರಭಾವ ಕಡಿಮೆಯಿರಲಿಲ್ಲ. ಜೊತೆಗೆ ಆಡಳಿತ ಭಾಷೆಯಾಗಿ ಉರ್ದು ಹೇರಲಾಗಿತ್ತು. ಹಾಗಾಗಿ ವ್ಯವಹಾರ ಮತ್ತು ಶಿಕ್ಷಣದಲ್ಲೂ ಉರ್ದು ಪ್ರಭಾವ ಜೋರಾಗಿತ್ತು. ಇರುವುದರಲ್ಲಿ ಮೈಸೂರು ಸಂಸ್ಥಾನದಲ್ಲಿ ಮಾತ್ರ ಕನ್ನಡ ಸುರಕ್ಷಿತವಾಗಿತ್ತು. ಶಿಕ್ಷಣ ಮತ್ತು ಆಡಳಿತದಲ್ಲಿ ಕನ್ನಡ ಬಳಕೆಯಲ್ಲಿತ್ತು. ಕನ್ನಡಿಗರೇ ಅಧಿಕವಾಗಿರುವ ಪ್ರಾಂತ್ಯಗಳ ಹಣೆಬರಹ ಹೀಗಾಗಿದ್ದರಿಂದ, ಕನ್ನಡ ಭಾಷೆಯ ಸುತ್ತ ಹರಡಿದ್ದ ಸಂಸ್ಕೃತಿಯ ಅವಸ್ಥೆ ನಿಜಕ್ಕೂ ಹದಗೆಟ್ಟಿತ್ತು. ಹಾಗಾಗಿ ಕನ್ನಡ ಸೀಮೆಯನ್ನು ರಾಜಕೀಯವಾಗಿ ಒಂದು ಛತ್ರಛಾಯೆಯ ಅಡಿಯಲ್ಲಿ ತರುವ ಅಗತ್ಯವಿತ್ತು. ಇದಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗಿದ್ದು, 1905ರ ಬಂಗಾಲ ವಿಭಜನೆಯ ಸಂದರ್ಭದಲ್ಲಿ.
ಬಂಗಾಲವನ್ನು ಬ್ರಿಟಿಷರು ಒಡೆದ ದಿನ ಆ ಪ್ರಾಂತ್ಯದ ಯಾರ ಮನೆಯಲ್ಲೂ ಒಲೆ ಉರಿಯಲಿಲ್ಲ. ಅಂದಿನ ದಿನವನ್ನು ಸಂತಾಪ ದಿನವನ್ನಾಗಿ ಜನ ಆಚರಿಸಿದರು. ವಿಭಜನೆಯನ್ನು ರದ್ದು ಮಾಡುವಂತೆ ಹೊತ್ತಿದ ಕಿಡಿ, ಬಂಗಾಲದೆಲ್ಲೆಡೆ ತೀವ್ರವಾಗಿ ವ್ಯಾಪಿಸಿ, ೧೯೧೨ರಲ್ಲಿ ವಿಭಜನೆಯನ್ನು ಆಡಳಿತ ರದ್ದು ಮಾಡಿತು. ಇಡೀ ದೇಶಕ್ಕೆ ಇದೊಂದು ಪ್ರಬಲ ಸಂದೇಶವನ್ನು ರವಾನಿಸಿತು. ಭಾಷೆ-ಸಂಸ್ಕೃತಿಯ ಆಧಾರದ ಮೇಲೆ ಒಂದುಗೂಡುವುದು, ಜನಹಿತವನ್ನು ಕಾಯ್ದುಕೊಳ್ಳುವುದಕ್ಕೆ ಭೀಮಬಲ ನೀಡುತ್ತದೆ ಎಂಬುದು ಜನತೆಯ ಮನದಲ್ಲಿ ಅಚ್ಚೊತ್ತತೊಡಗಿತು. ಇದೇ ಹಿನ್ನೆಲೆಯಲ್ಲಿ, ಒರಿಸ್ಸಾ, ಅಸ್ಸಾಂ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಭಾಷೆಯ ಆಧಾರದ ಮೇಲೆ ರಾಜಕೀಯ ಗಡಿಗಳು ರಚನೆಯಾಗಬೇಕೆಂಬ ಕೂಗು ಪ್ರಬಲವಾಯಿತು. ಆದರೆ ಇಷ್ಟರಲ್ಲಾಗಲೇ ಕರ್ನಾಟಕದಲ್ಲಿ ಏಕೀಕರಣದ ಭಾವನೆಗಳು ಹೆಪ್ಪುಗಟ್ಟುತ್ತಿದ್ದವು.

kannada mate

ಏಕೀಕರಣದ ಕನಸು

ಒಂದುಗೂಡುವ ಕನಸು ಕಾಣುತ್ತಿದ್ದ ಕನ್ನಡದ ಮನಸ್ಸುಗಳಲ್ಲಿದ್ದ ಕಿಡಿಗೆ ತಿದಿಯೊತ್ತುವಂಥ ಕೆಲವು ಘಟನೆಗಳು ನಡೆದವು. 1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಗೊಂಡ ನಂತರ, ಮೊದಲಬಾರಿಗೆ ಏಕೀಕರಣದ ಯತ್ನಕ್ಕೆ ಸಾಂಘಿಕ ರೂಪು ದೊರೆಯಿತು. 1903ರಲ್ಲಿ ಧಾರವಾಡದಲ್ಲಿ ಏಕೀಕರಣದ ಕುರಿತಾಗಿ ಬೆನಗಲ್‌ ರಾಮರಾಯರು ಮಾಡಿದ ಭಾಷಣ, 1907ರಲ್ಲಿ ʻವಾಗ್ಭೂಷಣʼ ಪತ್ರಿಕೆಯಲ್ಲಿ ಈ ಕುರಿತಾಗಿ ಆಲೂರು ವೆಂಕಟರಾಯರು ಬರೆದ ಲೇಖನಗಳು ಇಡೀ ಚಳುವಳಿಗೆ ಮೇಲ್ಪಂಕ್ತಿ ಹಾಕಿದವು. ೧೯೦೮ರಲ್ಲಿ, ವಿಕೇಂದ್ರೀಕರಣದ ಬಗ್ಗೆ ನೇಮಕವಾಗಿದ್ದ ರಾಯಲ್‌ ಕಮಿಷನ್‌ ಸಮ್ಮುಖದಲ್ಲಿ ಅಭಿಪ್ರಾಯ ಮಂಡಿಸಿದ್ದ ಬಾಲಗಂಗಾಧರ ತಿಲಕರು, ಭಾಷಾವಾರು ದೃಷ್ಟಿಯಿಂದ ಪ್ರಾಂತ್ಯಗಳನ್ನು ಮರುವಿಂಗಡನೆ ಮಾಡಲೇಬೇಕೆಂದು ಹೇಳಿದ್ದರು. ಕರ್ನಾಟಕದ ಏಕೀಕರಣವನ್ನೇ ಧ್ಯೇಯವಾಗಿ ಹೊಂದಿದ್ದ ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡು, ಇಡೀ ಆಶಯಕ್ಕೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ವರೂಪವೂ ಒದಗಿಬಂತು.

ಕರ್ನಾಟಕದ ರಾಜಕೀಯ ಏಕೀಕರಣದ ಗುರಿಯನ್ನೇ ಹೊಂದಿದ್ದ ಕರ್ನಾಟಕ ಸಭೆ 1917ರಲ್ಲಿ ಸ್ಥಾಪನೆಗೊಂಡಿತು. ಶೀಘ್ರದಲ್ಲೇ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ನಿಕಟ ಸಂಪರ್ಕ ಸಾಧಿಸಿದ ಸಭೆ, ಕಾಂಗ್ರೆಸ್‌ ಅಧಿವೇಶನಗಳಲ್ಲೆಲ್ಲಾ ತನ್ನ ಪ್ರತಿನಿಧಿಗಳ ಮೂಲಕ ಕರ್ನಾಟಕ ನಿರ್ಮಾಣದ ಆಗ್ರಹವನ್ನು ಮುಂದಿಡತೊಡಗಿತು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನಕ್ಕೆ ಮಹಾತ್ಮ ಗಾಂಧಿಯವರು ಅಧ್ಯಕ್ಷರಾಗಿದ್ದರು. ಕರ್ನಾಟಕದ ಏಕೀಕರಣದ ಬೇಡಿಕೆ ಸಹಜ ಮತ್ತು ನ್ಯಾಯಸಮ್ಮತವಾದದ್ದು ಎಂಬುದು ಇತರರಿಗೆ ಮನವರಿಕೆ ಮಾಡಲು ಈ ಅಧಿವೇಶನ ವೇದಿಕೆಯಾಯಿತು. 1928ರಲ್ಲಿ, ಕರ್ನಾಟಕ ಏಕೀಕರಣ ಸಮಿತಿ ಮತ್ತು ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್‌ ಸಮಿತಿ ಜಂಟಿಯಾಗಿ, ನೆಹರೂ ಸಮಿತಿಯ ಮುಂದೆ ಈ ಬೇಡಿಕೆಯನ್ನಿಟ್ಟರು. ಅದೇ ವರ್ಷ ಸೈಮನ್‌ ಸಮಿತಿಯ ಮುಂದೆಯೂ ಈ ಬೇಡಿಕೆಯನ್ನು ಮಂಡಿಸಲಾಯಿತು. ಈ ಎಲ್ಲಾ ಕಡೆಗಳಲ್ಲಿ ಏಕೀಕರಣದ ಬೇಡಿಕೆ ನ್ಯಾಯಸಮ್ಮತ ಎಂಬುದನ್ನು ಮನವರಿಕೆ ಮಾಡಲಾಯಿತು. 1931ರಲ್ಲಿ ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಇದೇ ಪ್ರಸ್ತಾಪವನ್ನು ಬೆನಗಲ್‌ ರಾಮರಾವ್‌, ಬೆನಗಲ್‌ ಶಿವರಾವ್‌, ಮಿರ್ಜಾ ಇಸ್ಮಾಯಿಲ್‌ ಅವರು ಮಾಡಿದರು.

ಮಾಂಟೆಗೊ-ಚೆಲ್ಮ್ಸ್‌ಫರ್ಡ್‌ ಸಮಿತಿ

ಬಂಗಾಲದ ವಿಭಜನೆ ಮತ್ತು ತದನಂತರದ ಬೆಳವಣಿಗೆಗಳು ಬ್ರಿಟಿಷ್‌ ಸರಕಾರದ ಒಡೆದಾಳುವ ನೀತಿಗೆ ಒದಗಿ ಬರಲಿಲ್ಲ. 1918ರಲ್ಲಿ ಸಂವಿಧಾನ ಪರಿಷ್ಕರಣೆಯ ಸಲುವಾಗಿ ಮಾಂಟೆಗೊ-ಚೆಲ್ಮ್ಸ್‌ಫರ್ಡ್‌ ಸಮಿತಿ ನೇಮಕಗೊಂಡಿತು. ಭಾಷಾವಾರು ಪ್ರಾಂತ್ಯಗಳನ್ನು ರಚಿಸಬೇಕೆಂದು ಕೋರಿ ಕರ್ನಾಟಕದಿಂದಲೂ ಸಮಿತಿಗೆ ಮನವಿಗಳನ್ನು ಸಲ್ಲಿಸಲಾಯಿತು. 1919ರಲ್ಲಿ ವರದಿ ಸಲ್ಲಿಸಿದ ಸಮಿತಿ, ಜನತೆಯ ಅಭಿಪ್ರಾಯವನ್ನು ಮಾನ್ಯ ಮಾಡುವುದಕ್ಕೆ ಮಾತ್ರವಲ್ಲ, ಆಡಳಿತ ದೃಷ್ಟಿಯಿಂದಲೂ ಭಾಷಾವಾರು ಪ್ರಾಂತ್ಯ ವಿಂಗಡಣೆ ಒಳಿತು ಎಂದು ಹೇಳಿತು. ಪ್ರಾಂತೀಯ ಕಾಂಗ್ರೆಸ್‌ ಸಮಿತಿಗಳು ರಚನೆಗೊಳ್ಳುವುದಕ್ಕೆ ಇದೂ ಒಂದು ಹಿನ್ನೆಲೆ.

ಆಡಳಿತಾತ್ಮಕ ಸ್ತರಗಳಲ್ಲಿ ನಡೆಯುತ್ತಿದ್ದ ಈ ಬೆಳವಣಿಗೆಗಳ ಬೆನ್ನಲ್ಲೇ ಜನಮಾನಸದಲ್ಲೂ ಈ ಬಗ್ಗೆ ಬಹಳಷ್ಟು ಜಾಗೃತಿ ಮೂಡುತ್ತಿತ್ತು. ಹುಯಿಲಗೋಳ ನಾರಾಯಣರಾಯರು, ಬಿ.ಎಂ.ಶ್ರೀ, ಪಂಜೆ ಮಂಗೇಶರಾಯರು, ಮಂಜೇಶ್ವರ ಗೋವಿಂದ ಪೈ, ಕುವೆಂಪು ಅವರಂಥ ಅನೇಕರು ರಚಿಸಿದ ಕವಿತೆಗಳಲ್ಲಿ ಏಕೀಕೃತ ಕರುನಾಡಿನ ಭವ್ಯ ಬಿಂಬ ಜನಮಾನಸದಲ್ಲಿ ಅಚ್ಚಾಗುತ್ತಿತ್ತು. ಈ ಹಂತದಲ್ಲಿ ಹಲವಾರು ಪತ್ರಿಕೆಗಳು ಜನದನಿಯಾಗಿ ಪ್ರೇರಣೆ ನೀಡಿದವು. ಸ್ವತಂತ್ರ ಕರ್ನಾಟಕ, ಕರ್ನಾಟಕ ಧನಂಜಯ, ಜಯ ಕರ್ನಾಟಕ, ಕನ್ನಡಿಗ, ಸಂಯುಕ್ತ ಕರ್ನಾಟಕದಂಥ ಹೆಸರುಗಳೇ ಜನರ ಕಣ್ಣುಗಳಲ್ಲಿ ಕನ್ನಡನಾಡಿನ ಕನಸು ಬಿತ್ತುತ್ತಿದ್ದವು. ಆದರೆ ದೇಶ ಸ್ವಾಯತ್ತವಾಗದ ಹೊರತು, ಕನ್ನಡ ಸೀಮೆಯನ್ನು ಒಂದು ಆಡಳಿತಕ್ಕೆ ತರುವುದು ಸಾಧ್ಯವಿಲ್ಲ ಎಂಬುದು ಇಷ್ಟರಲ್ಲಾಗಲೇ ಖಾತ್ರಿಯಾಗಿತ್ತು. ಇದೇ ಕಾಲದಲ್ಲಿ ದೇಶದೆಲ್ಲೆಡೆ ಸ್ವಾತಂತ್ರ್ಯ ಚಳುವಳಿ ತೀವ್ರಗೊಂಡಿತ್ತು.

ಕರ್ನಾಟಕ ಏಕೀಕರಣ ಪರಿಷತ್ತುಗಳು

ಕನ್ನಡ ಸೀಮೆಯನ್ನು ಒಂದುಗೂಡಿಸುವುದನ್ನೇ ಧ್ಯೇಯವಾಗಿ ಇಟ್ಟುಕೊಂಡು, 1924ರಿಂದ 1946ರವರೆಗೆ ಕರ್ನಾಟಕ ಏಕೀಕರಣದ 10 ಪರಿಷತ್ತುಗಳು ನಡೆದವು. ಬೇರೆ ಬೇರೆ ಸ್ಥಳಗಳಲ್ಲಿ ನಡೆದ ಈ ಪರಿಷತ್ತುಗಳು ಏಕೀರಣವನ್ನು ಬಿಟ್ಟು ಬೇರೆ ವಿಚಾರದ ಪ್ರಸ್ತಾಪವೇ ಆದಂತೆ ತೋರುವುದಿಲ್ಲ. ಹತ್ತನೇ ಪರಿಷತ್ತಿನ ಉದ್ಘಾಟಕರಾಗಿದ್ದ ಸರ್ದಾರ್‌ ವಲ್ಲಭಬಾಯಿ ಪಟೇಲರು, ಭಾಷಾವಾರು ಪ್ರಾಂತ್ಯಗಳ ರಚನೆ ಆಗಲಿದೆ ಮತ್ತು ಅದರಲ್ಲಿ ಕರ್ನಾಟಕದ ರಚನೆಯೂ ಆಗಲಿದೆ ಎಂದು ತಿಳಿಸಿದ್ದರು. ಭಾರತಕ್ಕೆ ಸ್ವಾತಂತ್ರ ಬರುವ ದಿನಗಳು ಇನ್ನು ದೂರವಿಲ್ಲ ಎಂಬುದು ಜನಮಾನಸಕ್ಕೆ ಸ್ಪಷ್ಟವಾಗುತ್ತಿತ್ತು.

1946ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ಮಹಾಸಮ್ಮೇಳನದಲ್ಲಿ ಗಂಭೀರ ಸಮಸ್ಯೆಯೊಂದು ಎದುರಾಗಿತ್ತು. ರಾಜಪ್ರಭುತ್ವದಲ್ಲಿದ್ದ ಮೈಸೂರು ಸಂಸ್ಥಾನವನ್ನು ಹೊರತುಪಡಿಸಿ, ಬ್ರಿಟಿಷ್‌ ಆಡಳಿತದಲ್ಲಿದ್ದ ಎಲ್ಲಾ ಕನ್ನಡ ಸೀಮೆಗಳನ್ನು ಒಂದುಗೂಡಿಸಿ ಕರ್ನಾಟಕ ನಿರ್ಮಾಣವಾಗಲಿ ಎಂಬ ಒಡಕು ತಲೆದೋರಿತ್ತು. ಮೈಸೂರನ್ನು ಬಿಟ್ಟು ಕರ್ನಾಟಕ ನಿರ್ಮಾಣ ಸಾಧ್ಯವಿಲ್ಲ, ಸಾಧುವಲ್ಲ ಎಂಬುದು ಮೈಸೂರು ಜನತೆಯ ವಾದವಾಗಿತ್ತು. ಬ್ರಿಟಿಷ್‌ ಕರ್ನಾಟಕ ಮತ್ತು ಸಂಸ್ಥಾನ ಕರ್ನಾಟಕವೆಂಬ ಭಿನ್ನತೆ ಬೇಡ ಎಂಬ ಬೇಡಿಕೆಗೆ ಪೂರಕವಾಗಿ, ಸ್ವಾತಂತ್ರ್ಯ ಬರುವ ಮುನ್ನವೇ, ಭಾರತ ಒಕ್ಕೂಟಕ್ಕೆ ಸೇರುವ ಒಪ್ಪಂದಕ್ಕೆ ಮೈಸೂರು ಅರಸರು ಅಂಕಿತ ಹಾಕಿದ್ದರು. ಹಾಗಾಗಿ ಸ್ವಾತಂತ್ರ್ಯ ಬಂದ ಮೇಲೆ, ಜವಾಬ್ದಾರಿಯ ಸರಕಾರ ಮೈಸೂರಿನಲ್ಲಿ ಅಸ್ತಿತ್ವಕ್ಕೆ ಬಂತು. ಕೆ.ಸಿ. ರೆಡ್ಡಿ ಅವರು ಮೊದಲ ಮುಖ್ಯಮಂತ್ರಿಯಾದರು. ಮಾತ್ರವಲ್ಲ, ಕರ್ನಾಟಕ ರಚನೆಗೆ ಮೈಸೂರು ರಾಜ್ಯವು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಭಾಷಾವಾರು ಪ್ರಾಂತ್ಯಗಳ ರಚನೆಗೆ ಇನ್ನಷ್ಟೇ ಅಡಿಪಾಯ ರೂಪುಗೊಳ್ಳಬೇಕಿತ್ತು. ಈ ಕುರಿತು ವಿಸ್ತೃತ ವರದಿ ನೀಡುವಂತೆ, ಅಲಹಾಬಾದ್‌ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಎಸ್‌.ಕೆ. ಧರ್‌ ಅವರ ನೇತೃತ್ವದಲ್ಲಿ ಆಯೋಗವೊಂದು ನೇಮಕಗೊಂಡಿತು. ಆಂಧ್ರ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಭಾಷಾ ಪ್ರಾಂತ್ಯ ನಿರ್ಮಾಣಗಳ ಸಾಧಕ-ಬಾಧಕಗಳು ಮತ್ತು ಗಡಿಯನ್ನು ನಿರ್ಧರಿಸುವ ಗುರುತರ ಅಧ್ಯಯನದ ಹೊಣೆ ಈ ಸಮಿತಿಯ ಮೇಲಿತ್ತು. ಹಲವಾರು ತಿಂಗಳುಗಳ ಕಾಲ ಈ ಪ್ರದೇಶಗಳಲ್ಲಿ ಸಂಚರಿಸಿ ಜನಾಭಿಪ್ರಾಯ ಸಂಗ್ರಹಿಸಿದ ಸಮಿತಿಯು, ಭಾಷಾ ಸಂಸ್ಥಾನಗಳ ವಿಂಗಡಣೆ ಮತ್ತು ವಿಲೀನಕ್ಕೆ ಸರ್ಕಾರವಾಗಲೀ ಜನರಾಗಲೀ ಸಿದ್ಧರಿಲ್ಲ. ಹಾಗಾಗಿ ಇದನ್ನು ತಡೆ ಹಿಡಿಯಬೇಕು ಎಂದು ವರದಿ ನೀಡಿತು. ಧರ್‌ ಸಮಿತಿಯ ಇಂಥ ವರದಿಯಿಂದ ದೇಶದ ಹಲವೆಡೆಗಳಲ್ಲಿ ಅಸಮಾಧಾನ ತೀವ್ರವಾಗತೊಡಗಿತ್ತು. ಇದನ್ನು ಶಮನಗೊಳಿಸುವ ಸಲುವಾಗಿ ಜವಹರಲಾಲ್‌ ನೆಹರೂ, ಸರ್ದಾರ್‌ ಪಟೇಲ್‌ ಮತ್ತು ಪಟ್ಟಾಭಿ ಸೀತಾರಾಮಯ್ಯ ಅವರ (ಜೆ.ವಿ.ಪಿ ಸಮಿತಿ) ಸಮಿತಿಯನ್ನು ರಚಿಸಲಾಯಿತು. ಆದರೆ ಧರ್‌ ವರದಿಯನ್ನು ಜೆ.ವಿ.ಪಿ ಸಮಿತಿ ಅನುಮೋದಿಸಿದ್ದು, ಸಮಸ್ಯೆ ಮತ್ತಷ್ಟು ಬೆಳೆಯಿತು. ಭಾಷೆಗಳ ಆಧಾರದ ಮೇಲೆ ಪ್ರಾಂತ್ಯಗಳನ್ನು ನಿರ್ಮಿಸಬೇಕೆಂಬ ಕೂಗು ದೇಶದ ಹಲವೆಡೆಯಲ್ಲಿ ಬಲವಾಗಿತ್ತು.

Mysore Palace

ಮೈಸೂರು ಸಂಸ್ಥಾನದೊಂದಿಗೆ ಕರ್ನಾಟಕ

ಕರ್ನಾಟಕ ಏಕೀಕರಣ ಸಮ್ಮೇಳನದಲ್ಲಿ ಈ ಕುರಿತು ಕೆಲವು ಮಹತ್ವದ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಮೈಸೂರನ್ನೊಳಗೊಂಡು ಕರ್ನಾಟಕ ಸ್ಥಾಪನೆಯಾಗಬೇಕು ಮತ್ತು ಮೈಸೂರು ಮಹಾರಾಜರೇ ಮುಖ್ಯಸ್ಥರಾಗಬೇಕು ಎಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು. 1951ರಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ಬೆಂಗಳೂರಿಗೆ ಬಂದಿದ್ದಾಗ, ಕರ್ನಾಟಕ ಏಕೀಕರಣದ ಬಗ್ಗೆ ಮನವಿಯನ್ನೂ ಸಲ್ಲಿಸಲಾಯಿತು. 1952ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ, ಕಾಂಗ್ರೆಸ್‌ ಬಹುಮತ ಸಾಧಿಸಿತ್ತು. ಆದರೆ ಭಾಷಾ ಪ್ರಾಂತ್ಯಗಳ ನಿರ್ಮಾಣ ಸದ್ಯಕ್ಕೆ ಆದ್ಯತೆಯಲ್ಲ ಎಂಬ ಕಾಂಗ್ರೆಸ್‌ ಅಧಿವೇಶನದ ನಿರ್ಣಯ ಜನರಲ್ಲಿ ತೀವ್ರ ಅಸಮಾಧಾನ ಕೆರಳಿಸಿತು. 1953ರಲ್ಲಿ, ಎಸ್.‌ ಫಜಲ್‌ ಅಲಿ, ಎಚ್.‌ ಎನ್.‌ ಕುಂಜ್ರು ಮತ್ತು ಕೆ.ಎಂ. ಫಣಿಕ್ಕರ್‌ ಅವರ ಸಮಿತಿಯನ್ನು ನೇಮಿಸಲಾಯಿತು. ಈ ಕುರಿತು ವಿಸ್ತೃತ ಅಧ್ಯಯನ ನಡೆಸಿದ ಸಮಿತಿ, ಕರ್ನಾಟಕ ರಾಜ್ಯ ನಿರ್ಮಾಣ ಆಗಬೇಕೆಂದು ಸಲಹೆ ನೀಡಿತು. ನೂತನ ರಾಜ್ಯಕ್ಕೆ ಕರ್ನಾಟಕ ಎಂದೇ ಹೆಸರಿಡಬೇಕೆಂದು ಶಿಫಾರಸು ಮಾಡಿತು. ರಾಜ್ಯದ ಗಡಿಯ ಕುರಿತಾಗಿಯೂ ಕೆಲವು ನಿಶ್ಚಿತ ಸಲಹೆಗಳನ್ನು ನೀಡಿತ್ತು. ಭಾರತದಲ್ಲಿ ಒಟ್ಟು 15 ರಾಜ್ಯಗಳನ್ನೂ 7 ಕೇಂದ್ರಾಡಳಿತ ಪ್ರದೇಶಗಳನ್ನೂ ರಚಿಸಲು ಸಮಿತಿ ಶಿಫಾರಸು ಮಾಡಿತ್ತು. ಈ ಸಮಿತಿಯ ಸಲಹೆಗಳ ಬಗ್ಗೆ ಕರ್ನಾಟಕದ ಜನ ಬಹುಪಾಲು ಸಂತೋಷ ವ್ಯಕ್ತಪಡಿಸಿದ್ದರೂ, ಕಾಸರಗೋಡನ್ನು ಕೇರಳಕ್ಕೆ ಸೇರಿಸುವ ಮತ್ತು ಬಳ್ಳಾರಿಯ ಕೆಲ ಭಾಗಗಳನ್ನು ಆಂಧ್ರಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ವಿರೋಧಿಸಿದ್ದರು.

1956ರ ಜನವರಿ 16ರಂದು, ರಾಜ್ಯಗಳ ಪುನರ್ನಿರ್ಮಾಣ ಕುರಿತ ವಿಧೇಯಕವನ್ನು ಸಿದ್ಧಪಡಿಸಿದ ಕೇಂದ್ರ ಸರಕಾರ, ಮಾರ್ಚ್‌ 16ರಂದು ಅದನ್ನು ಲೋಕಸಭೆ ಮತ್ತು ರಾಜ್ಯಸಭೆಗಳ ಮುಂದಿಟ್ಟಿತು. ಲೋಕಸಭೆ 1956ರ ಜೂನ್‌ 10ರಂದು ಇದನ್ನು ಅಂಗೀಕರಿಸಿದರೆ, ರಾಜ್ಯಸಭೆಯಲ್ಲಿ ಆಗಸ್ಟ್‌ ೨೫ರಂದು ಅಂಗೀಕರಿಸಲಾಯಿತು. ಆಗಸ್ಟ್‌ ೩೧ರಂದು ರಾಷ್ಟ್ರಪತಿಗಳ ಅಂಕಿತವೂ ಆಗಿ, ಕಾಯಿದೆಯಾಗಿ ಜಾರಿಯಾಯಿತು. ಅದೇ ವರ್ಷ ನವೆಂಬರ್‌ 1ರಂದು ಅಸ್ತಿತ್ವಕ್ಕೆ ಬಂದ ʻವಿಶಾಲ ಮೈಸೂರುʼ ರಾಜ್ಯಕ್ಕೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ಶುಭ ಕೋರಿದರು. ಏಕೀಕೃತ ಕನ್ನಡನಾಡಿನ ಪ್ರಥಮ ರಾಜ್ಯಪಾಲರಾಗಿ ಜಯಚಾಮರಾಜ ಒಡೆಯರ್‌ ಮತ್ತು ಮೊದಲ ಮುಖ್ಯಮಂತ್ರಿಯಾಗಿ ಎಸ್‌. ನಿಜಲಿಂಗಪ್ಪನವರು ಅಧಿಕಾರ ವಹಿಸಿಕೊಂಡರು. 1973ರ ನವೆಂಬರ್‌ 1ರಂದು ವಿಶಾಲ ಮೈಸೂರು ರಾಜ್ಯವು ಕರ್ನಾಟಕವಾಗಿ ಬದಲಾಯಿತು.

ಇದನ್ನೂ ಓದಿ: Kannada Rajyotsava : ಕನ್ನಡ ರಾಜ್ಯೋತ್ಸವ ದಿನ ಪಂಚ ಗೀತೆಗಳ ಗಾಯನ ಕಡ್ಡಾಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Kannada Pride: ಇನ್ನು ಕನ್ನಡದಲ್ಲೇ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಎಕ್ಸಾಮ್!

Kannada Pride: ಕೇಂದ್ರ ಸಶಸ್ತ್ರ ಮೀಸಲು ಪಡೆಗಳ ನೇಮಕಾತಿಯ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ 13 ಪ್ರಾದೇಿಕ ಭಾಷೆಗಳಲ್ಲಿ ನಡೆಸಲು ಕೇಂದ್ರ ಗೃಹ ಇಲಾಖೆಯು ಕಳೆದ ವರ್ಷವೇ ನಿರ್ಧರಿಸಿತ್ತು.

VISTARANEWS.COM


on

Karnataka Candidate can write CRPF, BSF, CIS Constable Exam in Kannada, Kannada Pride
Koo

ನವದೆಹಲಿ: ಸಿಆರ್‌ಪಿಎಫ್(CRPF), ಬಿಎಸ್‌ಎಫ್ (BSF) ಮತ್ತು ಸಿಐಎಸ್ಎಫ್‌ನಂಥ (CISF) ಅರೆ ಸೇನಾ ಪಡೆಗಳ ಕಾನ್ಸ್‌ಟೇಬ್ ನೇಮಕಾತಿ ಪರೀಕ್ಷೆಯನ್ನು (Constable Exam) ಇಂಗ್ಲಿಷ್ ಮತ್ತು ಹಿಂದಿ ಮಾತ್ರವಲ್ಲದೇ, ಕನ್ನಡವೂ (Kannada Pride) ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯವು ಭಾನುವಾರ ಹೇಳಿದೆ.

ದೇಶಾದ್ಯಂತ 128 ನಗರಗಳಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಸುಮಾರು 48 ಲಕ್ಷ ಅಭ್ಯರ್ಥಿಗಳು ಎಕ್ಸಾಮ್ ಬರೆಯಲಿದ್ದಾರೆ. ಈ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲು ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ಮತ್ತು ಕೇಂದ್ರ ಸಶಸ್ತ್ರ ಮೀಸಲು ಪಡೆಯಲ್ಲಿ ಸ್ಥಳೀಯ ಯುವಕರು ಪಾಲ್ಗೊಳ್ಳುವುದನ್ನು ಹೆಚ್ಚಿುವುದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೇ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಸೇರಿದಂತೆ 13 ಸ್ಥಳೀಯ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸ್ಟಾಫ್ ಸೆಲಕ್ಷನ್ ಕಮಿಷನ್(SSC) ಈ ಕಾನ್‌ಸ್ಟೇಬಲ್(ಸಾಮಾನ್ಯ ಕರ್ತವ್ಯ) ಪರೀಕ್ಷೆಯನ್ನು ಕೈಗೊಳ್ಳುತ್ತಿದೆ. ಈ ಮೂಲಕ ಕೇಂದ್ರ ಸಶಸ್ತ್ರ ಪಡೆಗಳಿಗೆ ಲಕ್ಷಾಂತರ ಯುವಕರನ್ನು ಆಕರ್ಷಿಸಲಾಗುತ್ತಿದೆ. ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸಲು ಎಸ್ಎಸ್‌ಸಿ ಮತ್ತು ಕೇಂದ್ರ ಗೃಹ ಸಚಿವಾಲಯವು ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಸುದ್ದಿಯನ್ನೂ ಓದಿ: ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ; ಕನ್ನಡ ಸೇರಿ 15 ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ, ಯಾವ ಹುದ್ದೆಗೆ ಅನ್ವಯ?

Continue Reading

ಕನ್ನಡ ರಾಜ್ಯೋತ್ಸವ

Kannada Koota Luxembourg: ಲಕ್ಸಂಬರ್ಗ್ ಕನ್ನಡ ಕೂಟದಿಂದ ಅದ್ಧೂರಿ ಕನ್ನಡೋತ್ಸವ-2023

Kannada Koota Luxembourg: ಯುರೋಪ್ ಖಂಡದ ಚಿಕ್ಕ ದೇಶದಲ್ಲಿ ಲಕ್ಸಂಬರ್ಗ್ ಕನ್ನಡ ಕೂಟ, ಕರುನಾಡು ಸಂಸ್ಕೃತಿಯ ಅನಾವರಣ ಮಾಡಿದೆ.

VISTARANEWS.COM


on

Kannada Koota Luxembourg
Koo

ಲಕ್ಸಂಬರ್ಗ್: ಕನ್ನಡದ ಕಂಪನ್ನು ಪಸರಿಸುವ ಮತ್ತು ಕನ್ನಡದ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕನ್ನಡ ಕೂಟ ಲಕ್ಸಂಬರ್ಗ್ (ಕೆಕೆಎಲ್) (Kannada Koota Luxembourg) ಅದ್ಧೂರಿಯಾಗಿ `ಕನ್ನಡೋತ್ಸವ -2023’ ನಡೆಸುವ ಮೂಲಕ ಯುರೋಪ್ ಖಂಡದ ಚಿಕ್ಕ ದೇಶದಲ್ಲಿ ಕರುನಾಡು ಸಂಸ್ಕೃತಿಯ ಅನಾವರಣ ಮಾಡಿದೆ.

ಲಕ್ಸಂಬರ್ಗ್‌ನ ಬೆಗ್ಗೆನ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಪಾಲ್ಗೊಂಡು ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದರು. ಈ ಮೂಲಕ ಕನ್ನಡಿಗರೆಲ್ಲರೂ ಒಂದೆಡೆ ಸೇರಿ ಕನ್ನಡ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಬೆಂಗಳೂರು ನಗರ ಜಿಲ್ಲೆಯಷ್ಟು ದೊಡ್ಡದಿರುವ ಲಕ್ಸಂಬರ್ಗ್‌ನಲ್ಲಿ ಸುಮಾರು 6 ಲಕ್ಷ ಜನಸಂಖ್ಯೆ ಇದೆ. ಚಿಕ್ಕದಾದರೂ ಇಲ್ಲಿ ವೈವಿಧ್ಯಮಯ ಸಂಸ್ಕೃತಿ ಶ್ರೀಮಂತವಾಗಿದೆ. ಈ ಬಹುಸಾಂಸ್ಕೃತಿಕ ಪ್ರದೇಶದಲ್ಲಿ ಭಾರತೀಯರು ಅದರಲ್ಲೂ ವಿಶೇಷವಾಗಿ ಕನ್ನಡಿಗರು ಗಮನಾರ್ಹವಾದ ರೀತಿಯಲ್ಲಿ ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪಸರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಲ್ಲಿ 100ಕ್ಕೂ ಹೆಚ್ಚು ಕನ್ನಡಿಗ ಕುಟುಂಬಗಳು ವಾಸ ಮಾಡುತ್ತಿದ್ದು, 2022ರ ಅಂತ್ಯದಲ್ಲಿ ಆರಂಭವಾದ ಕನ್ನಡ ಕೂಟ ಲಕ್ಸಂಬರ್ಗ್ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳು ಹಾಗೂ ಹಬ್ಬಗಳ ಮೂಲಕ ಕನ್ನಡಿಗರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಇದನ್ನೂ ಓದಿ | ದಶಮುಖ ಅಂಕಣ: ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ!

ಕೆಕೆಎಲ್ ಕನ್ನಡೋತ್ಸವ 2023 ಎರಡನೇ ಕರ್ನಾಟಕ ರಾಜ್ಯೋತ್ಸವವನ್ನು ಆಯೋಜಿಸಿದ್ದು, ಇದರಲ್ಲಿ 120ಕ್ಕೂ ಹೆಚ್ಚು ಕನ್ನಡದ ಮನಸುಗಳು ಪಾಲ್ಗೊಂಡಿದ್ದವು. ಇದರ ವಿಶೇಷವೆಂದರೆ ದೊಡ್ಡ ಮಟ್ಟದಲ್ಲಿ ಭಾರತೀಯರು ಮತ್ತು ಕೆಲವು ಯೂರೋಪಿಯನ್ನರೂ ಪಾಲ್ಗೊಂಡಿದ್ದರು. ಕನ್ನಡದ ಶ್ರೀಮಂತ ಪರಂಪರೆಯನ್ನು ಬಿಂಬಿಸುವ ಹಾಗೂ ಸಾಂಸ್ಕೃತಿಕ ಸಂಪ್ರದಾಯವನ್ನು ಬಿಂಬಿಸುವ ರೀತಿಯಲ್ಲಿ ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಮತ್ತು ನಾಡಗೀತೆಯನ್ನು ಹಾಡಲಾಯಿತು.

ಕನ್ನಡಿಗ ಸಮುದಾಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ ವನಜಾಕ್ಷಿ ಜಗದೀಶ್ ಮತ್ತು ಡಾ.ಪುನೀತ್ ಜುಬ್ಬ ಹೊನ್ನಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶರಣ್ಯ ಮತ್ತು ಪ್ರಮೋದ್ ಈಶ್ವರ್ ಅವರು ಈ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಶಾಸ್ತ್ರೀಯ ಸಂಗೀತ, ಸಿನಿಮಾ ಹಾಡುಗಳ ಗಾಯನ, ನೃತ್ಯ ಮತ್ತು ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ವಿಶೇಷವೆಂದರೆ ಈ ಕಾರ್ಯಕ್ರಮಗಳ ಅರ್ಧದಷ್ಟು ಕಾರ್ಯಕ್ರಮಗಳನ್ನು ಮಕ್ಕಳೇ ನಡೆಸಿಕೊಟ್ಟರು. ಈ ಮೂಲಕ ಮಕ್ಕಳು ಕನ್ನಡದ ಸಂಸ್ಕೃತಿಯನ್ನು ಬಿಂಬಿಸಿದರು. ಇದೇ ವೇಳೆ, ಆದರ್ಶ ದಂಪತಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು. ಈ ಪೈಕಿ 5 ಅತ್ಯುತ್ತಮ ಜೋಡಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ಕನ್ನಡಿಗರಾದ ಅಚಲ್ ಮೂರ್ತಿ ಮತ್ತು ಲಕ್ಸಂಬರ್ಗ್ ಮೂಲದ ಬ್ಯಾಂಡ್ `ಅಹ್ಮದ್ ರಾದ್ವಾನ್ & ಲೆಸ್ ಹಿರೋಂಡೆಲ್ಸ್’ ನ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು. ಅಲ್ಲದೇ, ಇಲ್ಲಿ ಆಯೋಜಿಸಲಾಗಿದ್ದ ವಿವಿಧ ಖಾದ್ಯಗಳ ಪ್ರದರ್ಶನ ತಿಂಡಿ ಪ್ರಿಯರಿಗೆ ಆಹ್ಲಾದವನ್ನು ಉಂಟು ಮಾಡಿತು.

ಕೆಕೆಎಲ್ ಅಧ್ಯಕ್ಷರಾದ ಭವಾನಿ ಶಂಕರ್ ಅವರು ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
“ಲಕ್ಸಂಬರ್ಗ್ ಮತ್ತು ಕರ್ನಾಟಕದ ಕನ್ನಡಿಗರ ನಡುವಿನ ಬಾಂಧವ್ಯ ಬಲವರ್ಧನೆಗೆ ಈ ಕಾರ್ಯಕ್ರಮ ನಾಂದಿ ಹಾಡಿದೆ. ಈ ಕನ್ನಡೋತ್ಸವ 2023 ಕೇವಲ ನಮ್ಮ ನಡುವಿನ ಪ್ರತಿಭೆಗಳನ್ನು ಹೊರ ಜಗತ್ತಿಗೆ ಅನಾವರಣ ಮಾಡಲಷ್ಟೇ ಕಾರಣವಾಗಿಲ್ಲ. ಇದರೊಂದಿಗೆ ಒಗ್ಗಟ್ಟು ಮತ್ತು ಪ್ರೀತಿ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಹೊರ ಜಗತ್ತಿಗೆ ತೋರಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ’’ ಎಂದರು.

ಸಂಧ್ಯಾ ಸುರೇಶ್, ಪುನೀತಾ ರೆಡ್ಡಿ, ಕಾರ್ತೀಕ್ ರಾಮಮೂರ್ತಿ, ನರಸಿಂಹ ಹೆಬ್ಬಾರ್, ಮಂಜುನಾಥ್ ಪ್ರಸಾದ್, ನಿರಂಜನ್ ವಿಶ್ವಮೂರ್ತಿ, ಹಿತೇಶ್ ಚಿಡ್ಗಲ್, ಪ್ರಶಾಂತ್ ಅಳವಂಡಿ, ರಮೇಶ್ ಪಾಂಡುರಂಗ ಸೇರಿದಂತೆ ಇನ್ನಿತರ ಆಡಳಿತ ಮಂಡಳಿ ಸದಸ್ಯರು ನೇತೃತ್ವದಲ್ಲಿ ಹಾಗೂ ಸ್ವಯಂಸೇವಕರ ಶ್ರಮದ ಫಲವಾಗಿ ಈ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ನಡೆಯಲು ಕಾರಣವಾಗಿದೆ.

ಇದನ್ನೂ ಓದಿ | Cultural Events : ಡಿ.13-14ರಂದು ನೃತ್ಯ ವೈಭವದ ತ್ಯಾಗರಾಜ ಹೃತ್ಸದನ

ಈ ಕನ್ನಡೋತ್ಸವ 2023 ಕನ್ನಡದ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸುವುದರೊಂದಿಗೆ ಕನ್ನಡೇತರರು ಮತ್ತು ಸ್ಥಳೀಯ ನಾಗರಿಕರೊಂದಿಗೆ ಸಂಬಂಧ ಬೆಳೆಸುವುದು ಮತ್ತು ಸಂಸ್ಕೃತಿ ವಿನಿಮಯಕ್ಕೆ ಒಂದು ಉತ್ತಮವಾದ ವೇದಿಕೆಯನ್ನು ಒದಗಿಸಿಕೊಟ್ಟಿತು.

Continue Reading

ಕನ್ನಡ ರಾಜ್ಯೋತ್ಸವ

RK Balachandra: ʼಕರ್ನಾಟಕ ಸಾಧಕ ರತ್ನʼ ಪ್ರಶಸ್ತಿಗೆ ಕುಶಾಲನಗರದ ಆರ್.ಕೆ. ಬಾಲಚಂದ್ರ ಆಯ್ಕೆ

R. K. Balachandra: ಬಳ್ಳಾರಿಯ ಸ್ಮಿಯಾಕ ಚಾರಿಟಬಲ್ ಟ್ರಸ್ಟ್‌ನಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ʼಕರ್ನಾಟಕ ಸಾಧಕ ರತ್ನʼ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.

VISTARANEWS.COM


on

RK Balachandra
Koo

ಮಡಿಕೇರಿ: 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಳ್ಳಾರಿಯ ಸ್ಮಿಯಾಕ ಚಾರಿಟಬಲ್ ಟ್ರಸ್ಟ್‌ನಿಂದ ನೀಡುವ ʼಕರ್ನಾಟಕ ಸಾಧಕ ರತ್ನʼ ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಕುಶಾಲನಗರದ ಆರ್.ಕೆ. ಬಾಲಚಂದ್ರ (RK Balachandra) ಅವರು ಆಯ್ಕೆಯಾಗಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುಮುಖ್ಯವಾಗಿ ಅನ್ಯ ರಾಜ್ಯದ ಕನ್ನಡೇತರರಿಗೆ ಕನ್ನಡ ಕಲಿಸುವಿಕೆ ಹಾಗೂ ರಾಜ್ಯಾದಂತ ಉಚಿತವಾಗಿ ಬ್ಯಾಂಕಿಂಗ್ ಹಾಗೂ ಇತರೆ ಸ್ಪರ್ಧಾತ್ಮಗಳ ಪರೀಕ್ಷೆ ತರಬೇತಿಯ ಸೇವೆಯನ್ನು ಗುರುತಿಸಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಇವರಿಗೆ ʼಕರ್ನಾಟಕ ಸಾಧಕ ರತ್ನʼ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ರಾಮಾಯಣ, ಮಹಾಭಾರತ ಕಲಿಕೆ ಶಿಫಾರಸು ಸ್ವಾಗತಾರ್ಹ

ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್‌ 26ರಂದು ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್.ಕೆ. ಬಾಲಚಂದ್ರ ಸೇರಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕನ್ನಡ ರಾಜ್ಯೋತ್ಸವ

Karnataka Sambhrama 50: ಹೋರಾಟ, ತ್ಯಾಗ-ಬಲಿದಾನದಿಂದ ಕನ್ನಡ ನಾಡು ಉದಯ: ಸಿದ್ದರಾಮಯ್ಯ

Karnataka Sambhrama 50: ಗದಗದಲ್ಲಿ ಆಯೋಜಿಸಿದ್ದ ʼಕರ್ನಾಟಕ ಸಂಭ್ರಮ-50ʼ ರಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

VISTARANEWS.COM


on

CM Siddaramaiah
Koo

ಗದಗ: ಹೋರಾಟ, ತ್ಯಾಗ-ಬಲಿದಾನಗಳಿಂದ ಕನ್ನಡ ನಾಡು (Karnataka Sambhrama 50) ಉದಯವಾಗಿದೆ. ಈ ನಾಡಲ್ಲಿ ಕನ್ನಡತ್ವ ಮತ್ತಷ್ಟು ಆಳವಾಗಿ ಬೇರೂರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಆಯೋಜಿಸಿದ್ದ ʼಕರ್ನಾಟಕ ಸಂಭ್ರಮ-50ʼ ಅದ್ಧೂರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ನಾಮಕರಣ ಆಗಲು ಶ್ರಮಿಸಿ ಹೋರಾಡಿದ ಕೆ.ಎಚ್. ಪಾಟೀಲ್ ಮತ್ತು ಎಲ್ಲಾ ಹೋರಾಟದ ಸಂಗತಿಗಳನ್ನು ಇಂದು ನಾನು ಸ್ಮರಿಸುತ್ತೇನೆ. ಅವತ್ತು ಕೆ.ಎಚ್.ಪಾಟೀಲ್, ಇಂದು ಎಚ್.ಕೆ.ಪಾಟೀಲ್, ಅವತ್ತು ದೇವರಾಜ ಅರಸು ಕುಳಿತಿದ್ದ ಮುಖ್ಯಮಂತ್ರಿ ಕುರ್ಚಿಯಲ್ಲಿ ಇವತ್ತು ನಾನು ಕುಳಿತಿದ್ದೇನೆ. ಇದೇನು ಕಾಕತಾಳೀಯ ಅಲ್ಲ ಎಂದರು.

ಇಂಗ್ಲಿಷ್‌ನಲ್ಲಿ ಶೇಕ್ಸ್ ಪಿಯರ್ ಸಾಹಿತ್ಯ ರಚಿಸುವುದಕ್ಕೂ 500 ವರ್ಷಗಳ ಮೊದಲೇ ಕನ್ನಡದಲ್ಲಿ ವಿಶ್ವ ಮಟ್ಟದ ಅತ್ಯುನ್ನತ ಸಾಹಿತ್ಯ ರಚನೆಯಾಗಿತ್ತು. ಪಂಪನಿಂದ ಹಿಡಿದು ವಚನಕಾರರನ್ನೂ ಸೇರಿಸಿ ಹಲವರು ಅತ್ಯುನ್ನತ ಸಾಹಿತ್ಯ ರಚಿಸಿದ್ದರು ಎಂದು ಕನ್ನಡ ಭಾಷಾ ಹಿರಿಮೆಯನ್ನು ಉದಾಹರಿಸಿದರು.

ಇದನ್ನೂ ಓದಿ | Karnataka Drought : 324 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಕನ್ನಡ ಕಲಿಯದೆಯೂ ಕರ್ನಾಟಕದಲ್ಲಿ ವ್ಯವಹರಿಸಬಹುದು ಎನ್ನುವ ವಾತಾವರಣ ಬದಲಾಗಬೇಕು. ಕನ್ನಡದ ಸಂಸ್ಕೃತಿ ಜತೆಗೆ ನಮ್ಮೆಲ್ಲರಲ್ಲಿ ಕನ್ನಡತನ ಬೇರೂರಬೇಕು. ಆಗ ಮಾತ್ರ ಕನ್ನಡದ ವಾತಾವರಣ ಇಡಿ ನಾಡಿನಲ್ಲಿ ಪಸರಿಸುತ್ತದೆ ಎಂದರು.

CM Siddaramaiah talks in Karnataka sambhrama at Gadag

ಕನ್ನಡ ಸಂಸ್ಕೃತಿ ಎಂದಾಗ ಬಸವಾದಿ ಶರಣರ ಕಾಯಕ ಸಂಸ್ಕೃತಿಯೂ ಸೇರಿದೆ. ಬಸವಣ್ಣನವರ ಆಶಯದಂತೆ ವರ್ಗರಹಿತ, ಜಾತಿರಹಿತ ಸಮಾಜದ ನಿರ್ಮಾಣ ಮತ್ತು ಅಭಿವೃದ್ಧಿ ನಮ್ಮ ಗುರಿಯಾಗಿದೆ. ಆ ಕಾರಣಕ್ಕೇ ಸರ್ವ ಜಾತಿ-ಧರ್ಮದವರ ಬದುಕನ್ನು ಎತ್ತರಿಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ ಎಂದರು.

ಈ ಹಿಂದೆ ಕೆ.ಎಚ್.ಪಾಟೀಲರು ಇಡೀ ಜಿಲ್ಲೆಗೆ ಕುಡಿಯುವ ನೀರು ಕೊಟ್ಟರು. ಅವರ ಪುತ್ರ ಎಚ್.ಕೆ.ಪಾಟೀಲರೂ ಇಡೀ ರಾಜ್ಯಕ್ಕೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೀಗಾಗಿ ನಾಮಪತ್ರ ಸಲ್ಲಿಸಿದರೆ ಸಾಕು, ನೀವೆಲ್ಲಾ ಎಚ್.ಕೆ.ಪಾಟೀಲರನ್ನು ಗೆಲ್ಲಿಸಬೇಕು. ಇಡೀ ರಾಜ್ಯಕ್ಕೆ ಅಷ್ಟೊಂದು ಕೆಲಸ ಮಾಡಿರುವ ಎಚ್.ಕೆ.ಪಾಟೀಲರು ಮತ ಕೇಳಬಾರದು. ನೀವೆಲ್ಲಾ ಅವರನ್ನೂ ಹಾಗೇ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಅವಳಿ ನಗರಕ್ಕೆ 61 ಕೋಟಿ ಕೊಟ್ಟಿದ್ದೇವೆ

ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕಗೊಳಿಸಲು ಈಗಾಗಲೇ 61 ಕೋಟಿ ರೂ. ನೀಡಿದ್ದೇವೆ. ಅಗತ್ಯಬಿದ್ದರೆ ಮತ್ತಷ್ಟು ಹಣ ಕೊಡಲು ನಮ್ಮ ಸರ್ಕಾರ ಸಿದ್ದವಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಚಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾಡಳಿತ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರವಾಸೋದ್ಯಮ ಸಚಿವರೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಎಚ್.ಕೆ.ಪಾಟೀಲ್ ಅವರು ವಹಿಸಿದ್ದರು.

ಇದನ್ನೂ ಓದಿ | Cauvery Dispute : ರಾಜ್ಯಕ್ಕೆ ಮತ್ತೆ ಕಾವೇರಿ ಜಲಾಘಾತ; ಇನ್ನು 20 ದಿನ ನಿರಂತರ ನೀರು ಹರಿಸಲು ಪ್ರಾಧಿಕಾರ ಸೂಚನೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವರಾದ ಕೆ.ಎಚ್.ಮುನಿಯಪ್ಪ, ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಬೈರತಿ ಸುರೇಶ್, ಮಂಕಾಳ ವೈದ್ಯ, ಶರಣ ಪ್ರಕಾಶ್ ಪಾಟೀಲ್, ಶಿವಾನಂದ ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಸೇರಿ ಹಲವಾರು ಶಾಸಕರು, ಇಲಾಖಾ ಕಾರ್ಯದರ್ಶಿಗಳು-ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading
Advertisement
Terrorist attack
ದೇಶ38 seconds ago

Terrorist Attack: ಪೂಂಚ್​​ನಲ್ಲಿ ಭಯೋತ್ಪಾದಕರ ದಾಳಿ; ಓರ್ವ ಯೋಧ ಹುತಾತ್ಮ, ಐವರ ಸ್ಥಿತಿ ಗಂಭೀರ

HD Revanna
ಕರ್ನಾಟಕ8 mins ago

HD Revanna: ತಡರಾತ್ರಿವರೆಗೂ ರೇವಣ್ಣರನ್ನು ವಿಚಾರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು

Prawal Revanna Case
ಕರ್ನಾಟಕ41 mins ago

Prajwal Revanna Case: ಕುಮಾರಸ್ವಾಮಿಯನ್ನು ಭೇಟಿಯಾಗಲು ಒಪ್ಪದ ಅಮಿತ್ ಶಾ; ಹೋಟೆಲ್‌ಗೆ ಬಂದು ವಾಪಸ್ ಹೋದ ಎಚ್ ಡಿ ಕೆ

Summer Health Tips
ಆರೋಗ್ಯ1 hour ago

Summer Health Tips: ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!

karnataka Weather Forecast
ಮಳೆ2 hours ago

Karnataka Weather : ಮುಕ್ಕಾಲು ಕರ್ನಾಟಕಕ್ಕೆ ಸುಡು ಬಿಸಿಲು; ಉಳಿದೆಡೆ ಗುಡುಗು ಸಹಿತ ಮಳೆ

Vistara Editorial
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ, ನಿಷ್ಪಕ್ಷಪಾತ ತನಿಖೆಯಾಗಲಿ

Drinking Water Before Meals
ಆರೋಗ್ಯ2 hours ago

Drinking Water Before Meals: ಊಟಕ್ಕಿಂತ ಎಷ್ಟು ಮೊದಲು ನೀರು ಕುಡಿದರೆ ಒಳ್ಳೆಯದು?

World Laughter Day
ಆರೋಗ್ಯ3 hours ago

World Laughter Day 2024: ಇಂದು ವಿಶ್ವ ನಗುವಿನ ದಿನ; ನಗುನಗುತ ಬಾಳೋಣ

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

HD Revanna
ಕರ್ನಾಟಕ8 hours ago

HD Revanna: ಛೇ, ಎಂಥ ಸ್ಥಿತಿ ಬಂತಪ್ಪ; ಎಸ್‌ಐಟಿ ಸೆಲ್‌ನಲ್ಲಿ ಗಳಗಳನೆ ಅತ್ತ ಎಚ್‌.ಡಿ.ರೇವಣ್ಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌