ಕರ್ನಾಟಕ
Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್ಗೆ ಈಗ ಖಾದ್ರಿ ಸಂಕಟ!
ಸಿಎಂ ಬೊಮ್ಮಾಯಿ ಅವರನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ರೂಪಿಸಿರುವ ಪ್ಲ್ಯಾನ್ ತಿರುಗುಬಾಣವಾಗುವ ಅಪಾಯವಿದೆ. ಅಜ್ಜಂಪೀರ್ ಖಾದ್ರಿ ಅವರೇ ಇಲ್ಲೀಗ ನಿರ್ಣಾಯಕ
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಮತ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗಳಿಂದ ಗೆಲ್ಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರಿಗೆ ಚಮಕ್ ನೀಡಲು ಮುಂದಾಗಿರುವ ಪ್ಲ್ಯಾನ್ ಈಗ ಕಾಂಗ್ರೆಸ್ಗೇ ತಿರುಗುಬಾಣವಾಗುವ ಪರಿಸ್ಥಿತಿ ಎದುರಾಗಿದೆ.
ಶಿಗ್ಗಾಂವಿಯಲ್ಲಿ ಖಡಾಖಡಿ ಹೋರಾಟವನ್ನು ನೀಡುವ ಮೂಲಕ ಬೊಮ್ಮಾಯಿ ಅವರನ್ನು ಅವರ ಕ್ಷೇತ್ರದಿಂದ ಹೊರಬರದಂತೆ ಕಟ್ಟಿಹಾಕುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ. ಬೊಮ್ಮಾಯಿಗೆ ಕಠಿಣ ಸ್ಪರ್ಧೆ ನೀಡಲು ಮಾಜಿ ಸಚಿವ ವಿನಯ ಕುಲಕರ್ಣಿ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿರುವ ನಾಯಕರು ಅವರನ್ನು ಹೇಗೋ ಮನವೊಲಿಸಿ ಒಪ್ಪಿಸಿದ್ದಾರೆ. ಆದರೆ, ಈಗ ಶಿಗ್ಗಾಂವಿಯಲ್ಲಿ ಇದುವರೆಗೂ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು ತಿರುಗಿಬಿದ್ದಿದ್ದಾರೆ. ತನಗೆ ಟಿಕೆಟ್ ನೀಡದೆ ಹೋದರೆ ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಖಾದ್ರಿ ಹೇಳಿರುವುದು ಕಾಂಗ್ರೆಸ್ಗೆ ಬಿಸಿ ತುಪ್ಪವಾದಂತಾಗಿದೆ.
ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೇಸ್ ಟಿಕೆಟ್ ಬಯಸಿ 14 ಜನರು ಅರ್ಜಿ ಸಲ್ಲಿಕೆ ಮಾಡಿದ್ದರು. ಅಲ್ಪಸಂಖ್ಯಾತ ಕೋಟಾದಡಿ ಸತತ ಮೂರು ಸಲ ಟಿಕೆಟ್ ಪಡೆದು ಬೊಮ್ಮಾಯಿ ವಿರುದ್ಧ ಸೋತಿದ್ದ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಈ ಸಲವೂ ಟಿಕೆಟ್ಗಾಗಿ ಕಸರತ್ತು ನಡೆಸಿದ್ದಾರೆ.
ಆದರೆ, ಈ ಬಾರಿ ಅಲ್ಪಸಂಖ್ಯಾತ ಅಸ್ತ್ರದ ಬದಲು ಪಂಚಮಸಾಲಿ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್ ಮುಂದಾಗಿದೆ. ಅಲ್ಪಸಂಖ್ಯಾತರು ಹೇಗಿದ್ದರೂ ಕಾಂಗ್ರೆಸ್ಗೆ ಮತ ಹಾಕುತ್ತಾರೆ. ಅವರ ಜತೆ ಪಂಚಮಸಾಲಿಗಳ ಮತವೂ ಸೇರಿದರೆ ಬೊಮ್ಮಾಯಿ ಅವರನ್ನು ಸೋಲಿಸಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕ ವಿನಯ ಕುಲಕರ್ಣಿ ಅವರನ್ನು ಶಿಗ್ಗಾಂವಿ ಕ್ಷೇತ್ರದಿಂದ ಕಣಕ್ಕಿಳಿಸಲು ಮನವಿ ಒಲಿಸಿದೆ. ಕೆಲವು ದಿನಗಲ ಹಿಂದೆ ದೆಹಲಿಯಲ್ಲಿ ನಡೆದ ಸಭೆಯಲ್ಲಿಯ ವಿನಯ ಕುಲಕರ್ನಿ ಜೊತೆ ಕೈ ನಾಯಕರು ಮಾತುಕತೆ ನಡೆಸಿದ್ದರು.
ವಿನಯ ಕುಲಕರ್ಣಿ ಅವರ ಹೆಸರು ಮುನ್ನಲೆಗೆ ಬರುತ್ತಿದ್ದಂತೆ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಕೈ ನಾಯಕರಿಗೆ ಶಾಕ್ ನೀಡಿದ್ದಾರೆ. ಶಿಗ್ಗಾಂವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಈ ನಡುವೆ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ತಡರಾತ್ರಿಯವರೆಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸಭೆ ನಡೆಸಿ ಮನ ಒಲಿಸಲು ಕಸರತ್ತು ನಡೆಸಿದರಾದರೂ ಅದರಲ್ಲಿ ಸಫಲರಾಗಿಲ್ಲ. ಖಾದ್ರಿ ಅವರು ಸಿದ್ದರಾಮಯ್ಯ ಬೆಂಬಲಿಗರಾಗಿರುವುದರಿಂದ ಜಮೀರ್ ಅಹ್ಮದ್ ಅವರಿಗೆ ಮನವೊಲಿಕೆ ಜವಾಬ್ದಾರಿಯನ್ನು ನೀಡಲಾಗಿದೆ.
ಖಾದ್ರಿ ಅವರು ಕಳೆದ ಮೂರು ಚುನಾವಣೆಗಳಲ್ಲಿ ಬೊಮ್ಮಾಯಿ ವಿರುದ್ಧ ಸೋಲು ಕಾಣುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ ಗೆದ್ದಿದ್ದು 1994ರಲ್ಲಿ. ಮಂಜುನಾಥ ಕೊನ್ನೂರು ಅವರು ಆಗ ಶಾಸಕರಾಗಿದ್ದರು.
ಖಾದ್ರಿ ಅವರು 1998ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಗೆದ್ದಿದ್ದರು. 2004ರಲ್ಲಿ ಸಿಂಧೂರ ರಾಜಶೇಖರ್ ಇಲ್ಲಿಗೆ ಪಕ್ಷೇತರರಾಗಿ ಗೆಲುವು ಪಡೆದಿದ್ದರು. ಬಳಿಕ ಗೆದ್ದಿದ್ದೆಲ್ಲ ಬೊಮ್ಮಾಯಿ ಅವರೇ.
ಇಲ್ಲಿನ ಒಟ್ಟಾರೆ ಲೆಕ್ಕಾಚಾರ ಗಮನಿಸಿದರೆ ಕಾಂಗ್ರೆಸ್ ಕೇವಲ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡರೆ ಗೆಲ್ಲುವುದು ಕಷ್ಟ. ಹಾಗಾಗಿ ಅದು ಬೇರೆ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ. ಆದರೆ, ಮುಸ್ಲಿಂ ಮತಗಳನ್ನು ಬಿಟ್ಟರೂ ಗೆಲುವು ಸುಲಭವಲ್ಲ. ಹೀಗಾಗಿ ಖಾದ್ರಿ ಅವರು ಪಕ್ಷೇತರರಾಗಿ ನಿಂತರೆ ಮುಸ್ಲಿಂ ಮತಗಳು ಒಡೆಯುವುದು ನಿಶ್ಚಿತ. ಹೀಗಾಗಿ ಅತ್ಯಂತ ಜಾಗರೂಕತೆಯಿಂದ ಪರಿಸ್ಥಿತಿ ನಿಭಾಯಿಸಬೇಕಾದ ಅಗತ್ಯ ಕಾಂಗ್ರೆಸ್ಗಿದೆ. ಖಾದ್ರಿ ಅವರು ಕಾಂಗ್ರೆಸ್ ಮನವೊಲಿಕೆಗೆ ಒಲಿಯುತ್ತಾರಾ ಎಂದು ಕಾದು ನೋಡಬೇಕು.
ಇದನ್ನೂ ಓದಿ : Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ
ಕರ್ನಾಟಕ
ವಿಸ್ತಾರ TOP 10 NEWS: ಸ್ತ್ರೀಯರಿಗೆ ಭಾನುವಾರದಿಂದ ಫ್ರೀ ʼಶಕ್ತಿʼ, ಡಿಜಿಟಲ್ ಪಾವತಿಯಲ್ಲಿ ಭಾರತದ ಕೀರ್ತಿ ಹಾಗೂ ಇನ್ನಿತರೆ ಪ್ರಮುಖ ಸುದ್ದಿಗಳಿವು
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
1. Free Bus: ನಾಳೆ ಮಹಿಳೆಯರಲ್ಲಿ ‘ಶಕ್ತಿ’ ಸಂಚಾರ! ಉಚಿತ ಪ್ರಯಾಣಕ್ಕೆ ಇರಲಿ ಈ ದಾಖಲೆ, ಸ್ಮಾರ್ಟ್ಕಾರ್ಡ್ ಸಿಗೋದು ಯಾವಾಗ?
ರಾಜ್ಯದ ಎಲ್ಲ ಮಹಿಳೆಯರಿಗೂ ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಯಂತೆ ಉಚಿತ ಬಸ್ (Free Bus) ಪ್ರಯಾಣವುಳ್ಳ ಶಕ್ತಿ ಯೋಜನೆಗೆ ಭಾನುವಾರ (ಜೂನ್ 11) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಚಾಲನೆ ನೀಡಲಿದ್ದಾರೆ. ಈ ಉಚಿತ ಪ್ರಯಾಣಕ್ಕೆ ಏಳು ಕಂಡೀಷನ್ ಅನ್ನು ಈಗಾಗಲೇ ಹಾಕಲಾಗಿದೆ. ಯಾವ ಬಸ್ಗಳಲ್ಲಿ ಮಾತ್ರ ಉಚಿತ ಪ್ರಯಾಣ, ಸ್ಮಾರ್ಟ್ ಕಾರ್ಡ್ ಪಡೆಯುವುದು ಎಲ್ಲಿ? ಅದಕ್ಕೆ ಏನೇನು ಬೇಕು? ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಕ್ರಿಯೆ ಯಾವಾಗ? ಅಲ್ಲಿಯವರೆಗೆ ಏನು ಬೇಕು? ಎಂಬ ಬಗ್ಗೆ ಇಲ್ಲಿದೆ ವಿವರ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. H.D. Kumaraswamy: ಇದು 40+5 ಪರ್ಸೆಂಟ್ ಕಮಿಷನ್ ಸರ್ಕಾರ: ಕಾಂಗ್ರೆಸ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್!
ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್ ಸರ್ಕಾರ ಎಂದು ಬ್ರ್ಯಾಂಡ್ ಮಾಡಿದ್ದ ಕಾಂಗ್ರೆಸ್ ಪಕ್ಷದ ಈಗಿನ ಸರ್ಕಾರವನ್ನು 40+5 ಪರ್ಸೆಂಟ್ ಸರ್ಕಾರ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗೇಲಿ ಮಾಡಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Loksabha 2024) ನರೇಂದ್ರ ಮೋದಿ ಸೋಲಲಿದ್ದು, ಆಗ ರಸಗೊಬ್ಬರ, ಎಲ್ಪಿಜಿ ಸಿಲಿಂಡರ್ ದರವನ್ನು ಕಡಿಮೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವರುಣ ಕ್ಷೇತ್ರಕ್ಕೆ ತೆರಳಿದ ಸಿದ್ದರಾಮಯ್ಯ, ಬಿಳಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕೃತಜ್ನತಾ ಸಮಾವೇಶದಲ್ಲಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Moral Policing: ಆ್ಯಂಟಿ ಕಮ್ಯುನಲ್ ವಿಂಗ್ಗೆ ಬಿಜೆಪಿ ಠಕ್ಕರ್: ಹೆಲ್ಪ್ಲೈನ್ಗೆ ಕಾಲ್ ಮಾಡಿದ್ರೆ ಬರ್ತಾರೆ 100 ಲಾಯರ್!
ರಾಜ್ಯದ ವಿವಿಧೆಡೆ ನೈತಿಕ ಪೊಲೀಸ್ಗಿರಿಯನ್ನು ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುವುದಾಗಿ ರಾಜ್ಯ ಸರ್ಕಾರ ಈಗಾಗಲೆ ಹೇಳಿರುವ ಹಿನ್ನೆಲೆಯಲ್ಲಿ, ತನ್ನ ಕಾರ್ಯಕರ್ತರ ಸಹಾಯಕ್ಕೆ ಬಿಜೆಪಿ ಹೆಲ್ಪ್ಲೈನ್ ಆರಂಭಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Fraud Case: ಡೇಟಿಂಗ್ ಆ್ಯಪ್ನಲ್ಲಿ ಅನಿರುದ್ಧ್ ಆಗಿ ಬದಲಾದ ಮುದಾಸಿರ್; ಎಲ್ಲವನ್ನೂ ಮುಗಿಸಿ ಕಾಸೂ ಪಡೆದ!
ಡೇಟಿಂಗ್ ಆ್ಯಪ್ನಲ್ಲಿ (Dating App)ನಯವಾಗಿ ಮಾತಾಡಿ ವಂಚಿಸುವವರು (Fraud Case) ಹೆಚ್ಚಾಗಿದ್ದಾರೆ. ಹಿಂದೂ ಯುವಕನ ಹೆಸರಲ್ಲಿ ಡೇಟಿಂಗ್ ಆ್ಯಪ್ನಲ್ಲಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಯುವತಿಗೆ ಲಕ್ಷಾಂತರ ರೂ. ವಂಚಿಸಿದವನ ಬಂಧನವಾಗಿದೆ. ಮುದಾಸಿರ್ ಅಲಿಯಸ್ ಅನಿರುದ್ಧ್ ಬಂಧಿತ ಆರೋಪಿಯಾಗಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Weather Report: ಕರ್ನಾಟಕಕ್ಕೆ ಕಾಲಿಟ್ಟ ಮುಂಗಾರು; ಕರಾವಳಿಯಲ್ಲಿ ಮಳೆ ಜೋರು
ಕರ್ನಾಟಕಕ್ಕೆ ನೈರುತ್ಯ ಮುಂಗಾರು (Southwest Monsoon) ಕಾಲಿಟ್ಟಿದ್ದು, ಕಾರವಾರ ಮತ್ತು ಮಡಿಕೇರಿಯನ್ನು ಪ್ರವೇಶಿಸಿದೆ. ಇನ್ನೆರಡು ದಿನಗಳಲ್ಲಿ ಕೆಲವು ಭಾಗಗಳಲ್ಲಿ ಆವರಿಸಲಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕರಾವಳಿಯಲ್ಲಿ ಭಾರಿ ಮಳೆಯಾಗುವ (Rain news) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather Report) ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Digital Payments: ಡಿಜಿಟಲ್ ಪಾವತಿ, ಇಂಡಿಯಾದ್ದೇ ಕೀರ್ತಿ! ಎಲ್ಲ ದೇಶಗಳನ್ನು ಹಿಂದಿಕ್ಕಿ ನಂ.1 ಆದ ಭಾರತ
ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತಿದೆ(digital revolution in india). ಇದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. 2022ರ ಅಂಕಿ ಅಂಶಗಳ ಪ್ರಕಾರ, ಡಿಜಿಟಲ್ ಪೇಮೆಂಟ್ಸ್ನಲ್ಲಿ (Digital Payments) ಭಾರತವು (India) ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದೆ. 2022ರಲ್ಲಿ 8.95 ಕೋಟಿ ಡಿಜಿಟಲ್ ಪಾವತಿಗಳಾಗಿವೆ ಎಂದು ಮೈಗೌವ್ಇಂಡಿಯಾ (MyGovIndia) ಅಂಕಿ ಅಂಶಗಳಿಂದ ಗೊತ್ತಾಗಿದೆ. ಅಂದರೆ, ಜಾಗತಿಕವಾಗಿ (World) ನಡೆಯುವ ರಿಯಲ್ಟೈಮ್ ಡಿಜಿಟಲ್ ಪೇಮೆಂಟ್ಗಳಿಗೆ ಭಾರತದ ಕೊಡುಗೆಯೇ ಶೇ.46ರಷ್ಟಾಗುತ್ತದೆ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. NCP: ಸುಪ್ರಿಯಾ ಸುಳೆ, ಪಟೇಲ್ ಎನ್ಸಿಪಿ ಕಾರ್ಯಾಧ್ಯಕ್ಷರು! ಸಹೋದರನ ಪುತ್ರ ಅಜಿತ್ಗೆ ಕೈ ಕೊಟ್ರಾ ಶರದ ಪವಾರ್?
ತಮ್ಮ ಪುತ್ರಿ ಸುಪ್ರಿಯಾ ಸುಳೆ (Supriya Sule) ಮತ್ತು ಹಿರಿಯ ನಾಯಕ ಪ್ರಫುಲ್ ಪಟೇಲ್ (Praful Patel) ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (NCP)ಯ ಕಾರ್ಯಾಧ್ಯಕ್ಷರನ್ನಾಗಿ (Working President) ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ನೇಮಕ ಮಾಡಿದ್ದಾರೆ. ಪಕ್ಷದ ಸಂಸ್ಥಾಪನೆಯ 25 ವರ್ಷ ಆಚರಣೆ ವೇಳೆ ಈ ಘೋಷಣೆಯನ್ನು ಪವಾರ್ ಅವರ ಮಾಡಿದರು. 1999ರಲ್ಲಿ ಶರದ್ ಪವಾರ್ (Sharad Pawar) ಅವರು ಪಿಎ ಸಂಗ್ಮಾ ಜತೆಗೂಡಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿದರು. ಆದರೆ, ಪಕ್ಷದ ಮತ್ತೊಬ್ಬ ಪ್ರಮುಖ ನಾಯಕನಾಗಿರುವ ಅಜಿತ್ ಪವಾರ್ (Ajit Pawar) ಅವರಿಗೆ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ. ವಿಶೇಷ ಎಂದರೆ, ಕಾರ್ಯಾಧ್ಯಕ್ಷರ ಘೋಷಣೆಯನ್ನು ಪವಾರ್ ಅವರು, ಅಜಿತ್ ಅವರ ಸಮ್ಮುಖದಲ್ಲಿ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. WTC Final 2023: 44 ವರ್ಷಗಳ ಹಳೆಯ ದಾಖಲೆ ಪುಡಿಗಟ್ಟಿದ ರವೀಂದ್ರ ಜಡೇಜಾ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final 2023) ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja) ಪ್ರಮುಖ 2 ವಿಕೆಟ್ ಪಡೆಯುವ ಮೂಲಕ 44 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. ದ್ವಿತೀಯ ಇನಿಂಗ್ಸ್ನಲ್ಲಿ ಆಸೀಸ್ ಪ್ರಮುಖ ಬ್ಯಾಟರ್ಗಳಾದ ಸ್ಟೀವನ್ ಸ್ಮಿತ್(Steven Smith) ಹಾಗೂ ಟ್ರಾವಿಸ್ ಹೆಡ್(Travis Head) ಅವರ ವಿಕೆಟ್ ಪಡೆಯುವಯುವ ಮೂಲಕ ಭಾರತದ ಮಾಜಿ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿಯವರ ದಾಖಲೆಯನ್ನು ಮರಿದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Miyazaki Mango: ಇದು ಜಗತ್ತಿನ ಅತ್ಯಂತ ಕಾಸ್ಟ್ಲೀ ಮಾವು! ಆ ರೊಕ್ಕದಲ್ಲಿ ಸೆಕೆಂಡ್ ಹ್ಯಾಂಡ್ ಕಾರೇ ಖರೀದಿಸಬಹುದು!
ಪಶ್ಚಿಮ ಬಂಗಾಳದ (West Bengal) ಸಿಲಿಗುರಿಯಲ್ಲಿ 7ನೇ ಮ್ಯಾಂಗೋ ಫೆಸ್ಟಿವಲ್ ಆಯೋಜಿಸಲಾಗಿದ್ದು, ಜಗತ್ತಿನ ಅತ್ಯಂತ ದುಬಾರಿ ಮಾವು ಮಿಯಾಜಾಕಿ (Miyazaki) ಪ್ರದರ್ಶನಕ್ಕೀಡಲಾಗಿದೆ. ಜೂನ್ 9ರಿಂದ ಆರಂಭವಾಗಿರುವ ಮಾವು ಮೇಳವು (Mango) ಮೂರು ದಿನಗಳ ಕಾಲ ನಡೆಯಲಿದೆ. ಸಾಮಾನ್ಯವಾಗಿ ಸಂತೆಯಲ್ಲಿ ನಾವು ಖರೀದಿಸುವ ಮಾವು ಕೆಜಿಗೆ ಎಷ್ಟಿದ್ದಿತ್ತು? ಅಬ್ಬಬ್ಬಾ ಎಂದರೆ, 200 ರೂ. 300 ರೂ. 500 ರೂ. ಸಾವಿರ ರೂಪಾಯಿ ಅಲ್ಲವೇ? ಆದರೆ, ಈ ಮಾವು ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿರುವ ಮಿಯಾಜಾಕಿ ಮಾವು ಬೆಲೆಯನ್ನು ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ. ಈ ಮಾವು ಪ್ರತಿ ಕೆಜಿಗೆ 2.75 ಲಕ್ಷ ರೂಪಾಯಿ! ಒಂದು ಕೆಜಿ ಮಾವು ಖರೀದಿಸುವ ಮೊತ್ತದಲ್ಲಿ ಸೆಕೆಂಡ್ ಹ್ಯಾಂಡ್ ಅಲ್ಟೋ ಕಾರ್ (Car) ಖರೀದಿಸಬಹುದು! ಈ ದುಡ್ಡಿನಲ್ಲಿ ಮತ್ತೆ ಏನೇನು ಖರೀದಿಸಬಹುದು ನೋಡಿ(viral News). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ
Fraud Case: ಚೆನ್ನವೀರ ಸ್ವಾಮೀಜಿಯ ಅಸಲಿ ಮುಖ ಬಯಲು ಮಾಡೋ ಮತ್ತೊಂದು ಆಡಿಯೊ ಲೀಕ್!
Fraud Case: ಕಂಬಾಳು ಮಠದ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿಗೆ 35 ಲಕ್ಷ ವಂಚನೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇದೀಗ ಸ್ವಾಮೀಜಿ ಬಗ್ಗೆ ಎ2 ಹಾಗೂ ಎ3 ಆರೋಪಿಗಳು ಮಾತನಾಡಿರುವ ಮತ್ತೊಂದು ಆಡಿಯೊ ಕ್ಲಿಪ್ ಲೀಕ್ ಆಗಿದೆ.
ಬೆಂಗಳೂರು: ಕಂಬಾಳು ಮಠದ ಚೆನ್ನವೀರ ಶಿವಾಚಾರ್ಯ ಸ್ವಾಮಿಗೆ ವಂಚನೆ ಪ್ರಕರಣದಲ್ಲಿ ದಿನೇ ದಿನೇ ಸ್ಫೋಟಕ ರಹಸ್ಯಗಳು ಬೆಳಕಿಗೆ ಬರುತ್ತಿವೆ. ಮೊನ್ನೆ ಪ್ರಕರಣದ ಎರಡನೇ ಆರೋಪಿ ಮೊದಲ ಆರೋಪಿಯಾಗಿ ಹೇಗೆ ಬದಲಾದಲು ಎಂಬ ಆಡಿಯೋ ಲೀಕ್ ಆಗಿದ್ದರೆ, ಅದರ ಮುಂದುವರಿದ ಭಾಗದ ಆಡಿಯೊದಲ್ಲಿ ಸ್ವಾಮೀಜಿ ನಿಜ ಪುರಾಣ ಏನು ಎಂಬುವುದು ಬಯಲಾಗಿದೆ.
ನೆಲಮಂಗಲ ಸಮೀಪದ ಕಂಬಾಳು ಮಠದ ಚೆನ್ನವೀರ ಸ್ವಾಮೀಜಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ವಾಮೀಜಿ ಹಾಗೂ ಪ್ರಕರಣದ ಮೊದಲ ಆರೋಪಿ ವರ್ಷಾಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪೊಲೀಸರು ಎರಡನೇ ಆರೋಪಿಯನ್ನೇ ಮೊದಲ ಆರೋಪಿಯನ್ನಾಗಿ ಮಾಡಿದ್ದಾರೆ ಎನ್ನಲಾಗಿದೆ. ಆ ಸಂಬಂಧ ಲೀಕ್ ಆದ ಆಡಿಯೊ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೊಲೀಸರ ಮೇಲೆ ಕೇಳಿ ಬಂದಿರುವ ಗಂಭಿರ ಆರೋಪದ ಮೇಲೆ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮೊನ್ನೆ ರಿಲೀಸ್ ಆದ ಆಡಿಯೊದಲ್ಲಿ ಬೆಳಕಿಗೆ ಬಂದ ಸ್ಫೋಟಕ ಸತ್ಯಕ್ಕೆ ಪುಷ್ಟಿ ನೀಡುವ ಹಾಗೂ ಸ್ವಾಮೀಜಿಯ ನಿಜ ಪುರಾಣ ಎಂತದುದೆಂದು ಎಂದು ಅನುಮಾನ ಮೂಡಿಸುವ ಮತ್ತೊಂದು ಆಡಿಯೊ ಲೀಕ್ ಆಗಿದೆ.
ಇದನ್ನೂ ಓದಿ | ಕಾಣೆಯಾಗಿದ್ದ ಮಹಿಳೆ ಶವ ನೀರಿನ ಟ್ಯಾಂಕ್ನಲ್ಲಿ ಪತ್ತೆ; ಯಾರನ್ನು ಹುಡುಕಿ ಹೋಗಿದ್ದಳೋ ಅವನಿಂದಲೇ ಹತ್ಯೆ
ಮೊದಲ ಆಡಿಯೊದಲ್ಲಿ ನಡೆದಿರುವಂತೆ ಪ್ರಕರಣದ ಎರಡನೇ ಆರೋಪಿ ಮಂಜುಳಾ ಹಾಗೂ ಮೂರನೇ ಆರೋಪಿ ಅವನಿಕಾ ಮಾತನಾಡಿರುವ ಈ ಆಡಿಯೊ ಕ್ಲಿಪ್ನಲ್ಲಿ ಸ್ವಾಮೀಜಿ ಹಾಗೂ ವರ್ಷಾ ನಡುವೆ ಸಂಬಂಧ ಎಂತಹದ್ದು, ಎಷ್ಟು ವರ್ಷಗಳಿಂದ ನಡೆಯುತ್ತಿತ್ತು ಅನ್ನೋ ಅಂಶಗಳು ಬೆಳಕಿಗೆ ಬಂದಿವೆ. ಎರಡನೇ ಆರೋಪಿ ಮಂಜುಳಾ ಹೇಳಿರುವಂತೆಯೇ ಈ ಪ್ರಕರಣದಲ್ಲಿ ವರ್ಷಾ ಅನ್ನೋ ಲೇಡಿ ಇರುವುದು ಕನ್ಫರ್ಮ್. 2018 ರಿಂದಲೇ ವರ್ಷಾ ಜತೆ ಚೆನ್ನವೀರ ಸ್ವಾಮೀಜಿ ಸಂಪರ್ಕ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಆದರೆ, ಸ್ವಾಮೀಜಿಯ ಋಣ ತೀರಿಸಲು ಹಾಗೂ ಮರ್ಯಾದೆ ಉಳಿಸಲು ನಾನೆ ವರ್ಷಾ ಎಂದಿರುವ ಮಂಜುಳಾ, ನಿಜವಾದ ವರ್ಷಾ ಹೊರಗೆ ಬಂದರೆ ಸ್ವಾಮೀಜಿ ಜೈಲು ಸೇರೋದು ಪಕ್ಕಾ ಅನ್ನೋದು ಉಲ್ಲೇಖಿಸಿದ್ದಾಳೆ.
ಸತ್ಯ ಬಾಯ್ಬಿಟ್ರೆ ಸ್ವಾಮೀಜಿ ಬೀದಿಗೆ ಬರೋದು ಪಕ್ಕಾ ಎಂದ ಮಹಿಳೆ
ಮತ್ತೊಂದೆಡೆ ಪ್ರಕರಣದ ತನಿಖೆ ನಡೆಸುತ್ತಿರುವ ದಾಬಸ್ ಪೇಟೆ ಪೊಲೀಸರಿಗೂ ವರ್ಷಾ ಹೊರಬರುವುದು ಇಷ್ಟವಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸರು ಸ್ವಾಮೀಜಿ ಸೂಚನೆಯಂತೆ ಮಂಜುಳಾಳನ್ನೇ ವರ್ಷಾ ಅಂತ ಹೇಳಿಕೆ ಪಡೆದು ದಾಖಲಿಸಿಕೊಂಡಿದ್ದಾರೆ. ಆದರೆ, ಹೇಳಿಕೆ ನೀಡಿದ ಬಳಿಕ ಮಂಜುಳಾಗೆ ಮತ್ತೆ ಸಂಕಷ್ಟ ಎದುರಾಗಿದೆ.
ಸಂಸಾರ ಆಳಾಗುತ್ತಿದೆ, ನನ್ನ ಮಗನಿಗೆ ಸಹಾಯ ಮಾಡಿದರು ಅಂತ ಸ್ವಾಮೀಜಿಯನ್ನು ಉಳಿಸಲು ಮುಂದಾದೆ ಎಂದಿರುವ ಮಂಜುಳಾ, ಸ್ವಾಮೀಜಿ ಹಾಗೂ ವರ್ಷಾ ನಡುವೆ ಏನೆಲ್ಲಾ ನಡೆಯುತ್ತಿತ್ತು, ಸ್ವಾಮೀಜಿ ಎಷ್ಟು ವರ್ಷಗಳಿಂದ ಯಾವ ಬ್ಯಾಂಕ್ ಖಾತೆಯಿಂದ ವರ್ಷಾಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂಬ ಇಂಚಿಂಚು ಮಾಹಿತಿಯನ್ನು ಮೂರನೇ ಆರೋಪಿ ಬಳಿ ಹಂಚಿಕೊಂಡಿದ್ದು, ಆ ಆಡಿಯೊ ವಿಸ್ತಾರ ನ್ಯೂಸ್ಗೆ ಲಭ್ಯವಾಗಿದೆ.
ಇದನ್ನೂ ಓದಿ | Fraud Case: ಡೇಟಿಂಗ್ ಆ್ಯಪ್ನಲ್ಲಿ ಅನಿರುದ್ಧ್ ಆಗಿ ಬದಲಾದ ಮುದಾಸಿರ್; ಎಲ್ಲವನ್ನೂ ಮುಗಿಸಿ ಕಾಸೂ ಪಡೆದ!
ಮತ್ತೊಂದೆಡೆ ಸ್ವಾಮೀಜಿಗಳು ನನ್ನನ್ನು ತಂಗಿ ಅಂತ ಕರೆದಿದ್ದಾರೆ. ಸದ್ಯ ನಾನು ವರ್ಷಾ ಅಂತ ಒಪ್ಪಿಕೊಂಡಿರುವುದಕ್ಕಾದರೂ ಅವರು ಋಣಿಯಾಗಿರಬೇಕು. ನಾನು ಏನಾದರೂ ಸತ್ಯ ಬಾಯ್ಬಿಟ್ರೆ ಸ್ವಾಮೀಜಿ ಬೀದಿಗೆ ಬರೋದು ಪಕ್ಕಾ ಅಂತ ಸ್ವಾಮೀಜಿಯ ಕರಾಳ ಮುಖದ ಕೆಲ ಸಂಗತಿಗಳನ್ನು ಅವನಿಕಾ ಬಳಿ ವಿವರಿಸಿ ಮಂಜುಳಾ ಕಣ್ಣೀರಾಕಿದ್ದಾಳೆ. ಸದ್ಯ ಈ ಆಡಿಯೊ ಕ್ಲಿಪ್ನಿಂದಾಗಿ ತನಿಖೆ ಮತ್ಯಾವ ತಿರುವು ಪಡೆಯುತ್ತದೆ ಎಂಬುವುದು ನೋಡಬೇಕಿದೆ.
ಕರ್ನಾಟಕ
Poisoned Food: ಇಲಿ ಪಾಷಾಣ ಬೆರೆಸಿದ ಹಣ್ಣು ತಿಂದು ಯುವತಿ ಮೃತ್ಯು
Poisoned Food: ಮನೆಯಲ್ಲಿ ಇಲಿ ಕಾಟವೆಂದು ಇಲಿ ಸಾಯಿಸಲು ಹಣ್ಣಿಗೆ ಪಾಷಾಣ ಹಾಕಿ ಇಡಲಾಗಿತ್ತು. ಆದರೆ ಇದರ ಅರಿವು ಇರದ ಯುವತಿಯೊಬ್ಬಳು ಪಾಷಾಣ ಹಾಕಿದ್ದ ಹಣ್ಣು ಸೇವಿಸಿ ಮೃತಪಟ್ಟಿರುವ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ: ಇಲ್ಲಿನ ನ್ಯಾಮತಿ ತಾಲೂಕಿನಲ್ಲಿ ಇಲಿ ಸಾಯಿಸಲೆಂದು ಪಾಷಾಣ (Rat Poison) ಬೆರಸಿಟ್ಟಿದ್ದ ಹಣ್ಣು ತಿಂದು (Poisoned Food) ಯುವತಿ ಮೃತ್ಯುವಾಗಿದ್ದಾಳೆ. ನ್ಯಾಮತಿ ಪಟ್ಟಣದ ನಿವಾಸಿ ಐಶ್ವರ್ಯ (21) ಮೃತ ದುರ್ದೈವಿ.
ನ್ಯಾಮತಿಯ ಸರ್ಕಾರಿ ಕಾಲೇಜಿನಲ್ಲಿ ಬಿಎ ಓದುತ್ತಿದ್ದ ಐಶ್ವರ್ಯ ಮನೆಯಲ್ಲಿ ಇಲಿಗಳು ಉಪಟಳ ನೀಡುತ್ತಿದ್ದವು. ಹೀಗಾಗಿ ಐಶ್ವರ್ಯ ಕುಟುಂಬಸ್ಥರು ಇಲಿ ಕಾಟದಿಂದ ರೋಸಿ ಹೋಗಿದ್ದರು. ಕಾಟ ಕೊಡುವ ಇಲಿಗಳಿಗೆ ಮುಕ್ತಿ ನೀಡಲು ಪಾಷಾಣ ತಂದಿಟ್ಟಿದ್ದರು. ಪಾಷಾಣವನ್ನು ಹಣ್ಣಿಗೆ ಸವರಿ ಇಟ್ಟಿದ್ದರು. ಆದರೆ ವಿಷ ಸವರಿದ್ದಾರೆ ಎಂಬುದು ತಿಳಿಯದ ಐಶ್ವರ್ಯ ಹಣ್ಣು ತಿಂದು ಬಿಟ್ಟಿದ್ದಾಳೆ.
ಇದನ್ನೂ ಓದಿ: Bellary News: ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು
ಹಣ್ಣು ತಿನ್ನುತ್ತಿದ್ದಂತೆ ಐಶ್ವರ್ಯಗೆ ಹೊಟ್ಟೆ ನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಪೋಷಕರು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾದರೆ ಮೃತಪಟ್ಟಿದ್ದಾಳೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
ರಾಜಾಪುರ ಬ್ಯಾರೇಜ್ನಿಂದ 1500 ಕ್ಯುಸೆಕ್ ನೀರು ಬಿಡುಗಡೆ; ಕೃಷ್ಣಾ ನದಿಗೆ ಮತ್ತೆ ಜೀವಕಳೆ
Krishna river: ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಅಭಾವದ ಹಿನ್ನೆಲೆಯಲ್ಲಿ ಕೃಷ್ಣಾನದಿಗೆ 5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಮಾಡಿದ್ದ ಮನವಿಗೆ ಮಹಾ ಸರ್ಕಾರ ಸ್ಪಂದಿಸಿದೆ.
ಬೆಳಗಾವಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾ ನದಿಗೆ 1500 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಪಕ್ಷಾತೀತವಾಗಿ ಮಹಾ ಸರ್ಕಾರಕ್ಕೆ ನೀರು ಬಿಡುವಂತೆ ಮನವಿ ರಾಜ್ಯದ ಜನಪ್ರತಿನಿಧಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ನೀರು ಬಿಡುಗಡೆಯಾಗಿದೆ. ಇದರಿಂದ ಬತ್ತುವ ಹಂತ ತಲುಪಿದ್ದ ಕೃಷ್ಣಾ ನದಿಗೆ ಮತ್ತೆ ಜೀವಕಳೆ ಬಂದಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರು ಕುಡಿಯುವ ನೀರಿಲ್ಲದೆ ಹೈರಾಣಾಗಿದ್ದರು. ಹೀಗಾಗಿ ಕೃಷ್ಣಾನದಿಗೆ 5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಮೇ 31ರಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಏಕನಾಥ್ ಶಿಂಧೆ ಸರ್ಕಾರವು, ರಾಜಾಪುರ ಬ್ಯಾರೇಜ್ನಿಂದ 1500 ಕ್ಯುಸೆಕ್ ನೀರು ಬಿಡುಗಡೆ ಮಾಡಿದೆ.
ಮಹಾರಾಷ್ಟ್ರದಿಂದ ಕೃಷ್ಣೆಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ನೀರಿಲ್ಲದೆ ಹೈರಾಣಾಗಿದ್ದ ಬೆಳಗಾವಿ ಭಾಗದ ನದಿ ತೀರದ ಜನರು ನಿರಾಳರಾಗಿದ್ದಾರೆ.
ಇದನ್ನೂ ಓದಿ | Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ
Viral news: ಮಳೆ ಬರದ ಊರಿನಲ್ಲಿ ಒಲ್ಲದ ವಧು- ವರನಿಗೆ ಕಂಕಣಯೋಗ!
ಬೆಳಗಾವಿ: ಮುಂಗಾರು ತಡವಾಗಿರುವುದರಿಂದ ಉತ್ತರ ಕರ್ನಾಟಕ ನೀರಿಗಾಗಿ ಪರಿತಪಿಸುತ್ತಿದೆ. ಹೀಗಾಗಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದವರು ಮಳೆ ಬರಲಿ ಎಂದು ಕತ್ತೆಗಳಿಗೆ ಮದುವೆ (donkey marriage) ಮಾಡಿಸಿದ್ದು, ವೈರಲ್ (Viral news) ಆಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಮಳೆಯಾಗದೇ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಬರಗಾಲದ ಆತಂಕವೂ ಮೂಡಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ವರುಣನ ಆಗಮನಕ್ಕೆ ಪ್ರಾರ್ಥಿಸಿ ಶಾಸ್ತ್ರೋಕ್ತವಾಗಿ ಕತ್ತೆಗಳಿಗೆ ಮದುವೆ ಮಾಡಿಸಲಾಯಿತು.
ಇದನ್ನೂ ಓದಿ | Free Bus: ನಾಳೆ ಮಹಿಳೆಯರಲ್ಲಿ ‘ಶಕ್ತಿ’ ಸಂಚಾರ! ಉಚಿತ ಪ್ರಯಾಣಕ್ಕೆ ಇರಲಿ ಈ ದಾಖಲೆ, ಸ್ಮಾರ್ಟ್ಕಾರ್ಡ್ ಸಿಗೋದು ಯಾವಾಗ?
ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತೆ ಎಂಬ ನಂಬಿಕೆ ಈ ಭಾಗದ ರೈತಾಪಿ ಜನರಲ್ಲಿದೆ. ಈ ಹಿಂದೆ ಹೀಗೆ ಮಾಡಿದಾಗ ಮಳೆ ಬಂದ ನಿದರ್ಶನಗಳನ್ನು ಜನ ನೆನೆಯುತ್ತಾರೆ. ಈ ಹಿನ್ನೆಲೆಯಲ್ಲಿ, ಕತ್ತೆಗಳಿಗೆ ಮದುವೆ ಮಾಡಿಸಿ ದೇವರಲ್ಲಿ ಪ್ರಾರ್ಥನೆ ಜನ ಮಾಡಿದ್ದಾರೆ. ಕತ್ತೆಗಳಿಗೆ ಬಿಳಿ ಪಂಚೆ, ಸೀರೆ ತೊಡಿಸಿ ತಿಲಕವಿಟ್ಟು ತಾಳಿ ಕಟ್ಟಿಸಿ ವಾದ್ಯಮೇಳದೊಂದಿಗೆ ಮದುವೆ ಗ್ರಾಮಸ್ಥರು ಮಾಡಿದರು. ಕತ್ತೆಗಳು ನಾಚಿಕೊಂಡು ನಿಂತಿದ್ದವು!
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ15 hours ago
Horoscope Today: ಈ ರಾಶಿಯವರು ಸಾಲ ಕೊಟ್ಟಿದ್ದರೆ ಇಂದು ಹಣ ಹಿಂದಿರುಗುತ್ತದೆ!
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಠ್ಯ ಪುಸ್ತಕ ಪರಿಷ್ಕರಣೆ ಆಟ, ವಿದ್ಯಾರ್ಥಿಗಳಿಗೆ ಸಂಕಟ
-
ಕರ್ನಾಟಕ21 hours ago
Bellary News: ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು
-
ಅಂಕಣ14 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ದೇಶ22 hours ago
ಒಡಿಶಾ ರೈಲು ದುರಂತದ ಶವಗಳನ್ನು ಇರಿಸಿದ್ದ ಶಾಲೆಗೆ ಬರಲು ಹೆದರಿದ ಮಕ್ಕಳು; ಕಟ್ಟಡ ನೆಲಸಮ
-
ಕ್ರಿಕೆಟ್11 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕರ್ನಾಟಕ22 hours ago
300ರಿಂದ 1800 ರೂ.ಗೆ ಜಂಪ್; ಕರೆಂಟ್ ಬಿಲ್ ಕಟ್ಟೋದಿಲ್ಲ, ಏನಾದ್ರೂ ಆಗ್ಲಿ ಎಂದ ಮಹಿಳೆಯರು!