Janaushadha| ಜನೌಷಧ ಯೋಜನೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.2, ಗ್ರಾಮೀಣ ಭಾಗಕ್ಕೂ ಮಳಿಗೆ ವಿಸ್ತರಣೆ - Vistara News

ಆರೋಗ್ಯ

Janaushadha| ಜನೌಷಧ ಯೋಜನೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.2, ಗ್ರಾಮೀಣ ಭಾಗಕ್ಕೂ ಮಳಿಗೆ ವಿಸ್ತರಣೆ

ಜನೌಷಧ ಮಳಿಗೆಗಳಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಆರೋಗ್ಯಕ್ಕಾಗಿ ಮಾಡುತ್ತಿರುವ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತಿದೆ. ಮತ್ತಷ್ಟು ಮಳಿಗೆಗಳನ್ನು ತೆರೆದು ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

VISTARANEWS.COM


on

janaushadha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದಲ್ಲಿ ಬಡ, ಹಿಂದುಳಿದ ಮತ್ತು ಮಧ್ಯಮ ವರ್ಗದವರಿಗೆ ರಿಯಾಯಿತಿ ದರದಲ್ಲಿ ಔಷಧಗಳು ಮತ್ತು ಶಸ್ತ್ರಚಿಕಿತ್ಸೆಯ ಪರಿಕರಗಳನ್ನು ಒದಗಿಸುವ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಪರಿಯೋಜನೆ ಅತ್ಯುತ್ತಮವಾಗಿ ಜಾರಿಯಾಗಿದ್ದು, ಈ ವರೆಗೆ 1052 ಜನೌಷಧ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಇಡೀ ದೇಶದಲ್ಲಿ ಉತ್ತರ ಪ್ರದೇಶದ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇರಳ ಮೂರನೇ ಸ್ಥಾನದಲ್ಲಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಳಿಗೆಗಳನ್ನು ತೆರೆಯಲು ಸರ್ಕಾರ ಕಾರ್ಯೋನ್ಮುಖವಾಗಿವೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆ ರಾಜ್ಯದಲ್ಲಿ ಹೊಸದಾಗಿ ಮತ್ತೆ 500 ಮಳಿಗೆಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 40 ಹೊಸ ಮಳಿಗೆಗಳಿಗೆ ಅನುಮತಿ ನೀಡುವಂತೆ ಬಿಪಿಪಿಐಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವರ್ಷದ ಫೆಬ್ರವರಿ ನಂತರ ಸುಮಾರು 300 ಮಳಿಗೆಗಳನ್ನು ತೆರೆಯಲಾಗಿದ್ದು, ಬೇಡಿಕೆಗಳಿಗೆ ಅನುಗುಣವಾಗಿ ಮಳಿಗೆ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಜನೌಷಧ ಮಳಿಗೆಗಳು ಅತ್ತುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ಪ್ರಸ್ತಾವನೆ ಸಲ್ಲಿಸಿರುವುದನ್ನು ಹೊರತುಪಡಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 200 ಔಷಧ ಮಳಿಗೆಗಳಿವೆ. ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದಿಂದಲೂ ಜನೌಷಧ ಮಳಿಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಯಲು ಒತ್ತಡವಿದೆ. ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ ಎಂಬ ಗ್ರಾಮದಲ್ಲೂ ಜನೌಷಧ ಮಳಿಗೆ ತೆರೆದಿರುವುದು ವಿಶೇಷವಾಗಿದ್ದು, ಬೇಡಿಕೆಗೆ ಅನುಗುಣವಾಗಿ ಹೊಸ ಮಳಿಗೆಗಳಿಗೆ ಮಂಜೂರಾತಿ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಜೆನೆರಿಕ್ ಔಷಧಗಳು ಬ್ರಾಂಡೆಡ್ ಆಗಿದ್ದು, ಮಾರುಕಟ್ಟೆಗಿಂತ ಶೇ. 50ರಿಂದ 80ರಷ್ಟು ಅಗ್ಗದ ದರದಲ್ಲಿ ದೊರೆಯುತ್ತಿವೆ. ಎನ್.ಎ.ಬಿ.ಎಲ್ ಪ್ರಯೋಗಾಲಯದಲ್ಲಿ ಜನೌಷಧ ಮಳಿಗೆಗಳನ್ನು ಪರೀಕ್ಷಿಸಿ ಸಾರ್ವಜನಿಕ ಉಪಯೋಗಕ್ಕೆ ಜನೌಷಧ ಕೇಂದ್ರಗಳಲ್ಲಿ ದೊರೆಯುವಂತೆ ಮಾಡಲಾಗುತ್ತಿದೆ. ಒಟ್ಟು 1451 ಔಷಧಗಳು ಮತ್ತು 240 ಶಸ್ತ್ರಚಿಕಿತ್ಸೆ ಪರಿಕರಗಳು, ದುಬಾರಿ ವೆಚ್ಚದ ಕ್ಯಾನ್ಸರ್ ಔಷಧಗಳು ಸಹ ಇಲ್ಲಿ ದೊರೆಯುತ್ತಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರ ಪ್ರಾರಂಭಿಸಲು ಉದ್ದೇಶ ಹೊಂದಿರುವ ಫಾರ್ಮಸಿ ಪದವೀಧರರಿಂದ ಮಳಿಗೆಗಳನ್ನು ತೆರೆಯಲು ಹೆಚ್ಚಿನ ಬೇಡಿಕೆ ಬರುತ್ತಿದೆ. ಸ್ವಾಯತ್ತ ಸಂಸ್ಥೆಗಳಿಗೆ 120 ಚದರ ಅಡಿ ಸ್ಥಳವನ್ನು ಉಚಿತವಾಗಿ ನೀಡಲಾಗುತ್ತಿದೆ. ಬ್ಯೂರೋ ಆಫ್ ಫಾರ್ಮಸಿ ಪಬ್ಲಿಕ್ ಸೆಕ್ಟರ್ ಯೂನಿಟ್ಸ್ ಆಫ್ ಇಂಡಿಯಾ [ಬಿಪಿಪಿಐ] ಪ್ರತಿಯೊಂದು ಜನೌಷಧ ಮಳಿಗೆ ಪ್ರಾರಂಭಿಸಲು ಜನೌಷಧ ಮಳಿಗೆ ತೆರೆಯುವ ಪ್ರತಿ ಮಳಿಗೆಗೆ ಬಿಪಿಪಿಐಯಿಂದ ಮಾಸಿಕ ಖರೀದಿಗಾಗಿ ವಹಿವಾಟಿಗೆ ತಕ್ಕಂತೆ ಮಾಸಿಕ ಶೇ. 15ರಂತೆ ಮಾಸಿಕ 15,000 ರೂ ಗಳನ್ನು ಮೀರದಂತೆ ಒಟ್ಟಾರೆ ರೂ 2.50 ಲಕ್ಷಗಳವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಯಾವ ವರ್ಷ ಎಷ್ಟು ಲೈಸನ್ಸ್‌?
೨೦೧೪-೧೫ರಲ್ಲಿ ಕರ್ನಾಟಕದಲ್ಲಿ ಒಂದೇ ಒಂದು ಜನೌಷಧ ಮಳಿಗೆಗಳು ಇರಲಿಲ್ಲ. ಈಗ ಒಟ್ಟು ೧೦೫೨ ಮಳಿಗೆಗಳಿವೆ. ೨೦೧೫-೧೬ರಲ್ಲಿ ಒಂದು ಮಳಿಗೆ ಸ್ಥಾಪನೆಯಾದರೆ, ೨೦೧೬-೧೭ರಲ್ಲಿ ೨೪, ೨೦೧೭-೧೮ರಲ್ಲಿ ೨೧೯, ೨೦೧೮-೧೯ರಲ್ಲಿ ೧೭೧, ೨೦೧೯-೨೦ರಲ್ಲಿ ೧೬೩, ೨೦೨೦-೨೧ರಲ್ಲಿ ೨೯೩, ೨೦೨೧-೨೨ರಲ್ಲಿ ೯೭, ೨೦೨೨-೨೩ನೇ ಸಾಲಿನಲ್ಲಿ ೮೪ ಮಳಿಗೆಗಳಿಗೆ ಲೈಸೆನ್ಸ್‌ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ | Drugs Database | ಔಷಧ ಮಾರಾಟ, ಉತ್ಪಾದನೆ ನಿಯಂತ್ರಣಕ್ಕೆ ಡೇಟಾಬೇಸ್‌ ರಚಿಸಲು ಕೇಂದ್ರ ತೀರ್ಮಾನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

ವ್ಯಸ್ತ ಬದುಕಿನ ಕಾರಣಕ್ಕೆ ಇನ್‌ಸ್ಟಂಟ್‌ ನೂಡಲ್‌ಗಳು ಸ್ವಸ್ಥ ಆಯ್ಕೆ ಎನ್ನುವಂತಿಲ್ಲ. ಹಲವು ರೀತಿಯ ಆರೋಗ್ಯ ತೊಂದರೆಗಳನ್ನು ಇವು ತಂದಿಡಬಹುದು. ಅಪರೂಪಕ್ಕೆ ತಿಂದರೆ, ಜೀವಕ್ಕೆ ಅಪಾಯವಿಲ್ಲದಿದ್ದರೂ, ಇದೇ ಆಹಾರವಾದರೆ ಮಾತ್ರ ಅಪಾಯ ತಪ್ಪಿದ್ದಲ್ಲ. ಈ ಕುರಿತ ಉಪಯುಕ್ತ ಆಹಾರ ಮತ್ತು ಆರೋಗ್ಯ (Food Tips Kannada) ಮಾಹಿತಿ ಇಲ್ಲಿದೆ.

VISTARANEWS.COM


on

Food Tips Kannada
Koo

ಸಮಯದ ಅಭಾವ ಇರುವಾಗ ಹೊಟ್ಟೆಯ ಗಲಾಟೆಯನ್ನು ತಣಿಸುವುದು ಕಷ್ಟದ ಕೆಲಸ ಎನಿಸುತ್ತದೆ. ಅದರಲ್ಲೂ ಹೊರಗಿನ ಆಹಾರ ಬೇಡ, ಮನೆಯದ್ದೇ ಇರಲಿ ಎನ್ನುವವರಿಗೆ ಹೊಟ್ಟೆ ತಾಳ ಹಾಕುವಾಗ ಬೇಯಿಸಿಕೊಳ್ಳುವುದಕ್ಕೆ ಸಮಯ ಇಲ್ಲದಿದ್ದರೆ ಅವಸ್ಥೆಯೇ ಸರಿ. ಇಂಥ ಹೊತ್ತಿಗೆಂದೇ ತ್ವರಿತವಾಗಿ ಸಿದ್ಧವಾಗುವ ಇನ್‌ಸ್ಟಂಟ್‌ ನೂಡಲ್‌ಗಳು ಅಡುಗೆಮನೆಯ ಕಪಾಟನ್ನು ಅಲಂಕರಿಸಿರುತ್ತವೆ. ಬೇಕಷ್ಟು ಪ್ಯಾಕೆಟ್‌ಗಳನ್ನು ತೆಗೆದು ಬಾಣಲೆಗೆ ಹಾಕಿದರಾಯ್ತು, ಮಸಾಲೆ ಸುರಿದರಾಯ್ತು, ನಿಮಿಷಗಳಲ್ಲಿ ಆಹಾರ ಸಿದ್ಧ. ಯಾವತ್ತೋ ಒಂದಿನ ಇಂಥವನ್ನು ಮಾಡಿದಾಗ ಆರೋಗ್ಯಕ್ಕೇನೂ ವ್ಯತ್ಯಾಸವಾಗದು. ಆದರೆ ಇನ್‌ಸ್ಟಂಟ್‌ ನೂಡಲ್‌ಗಳನ್ನು ಆಗಾಗ ತಿನ್ನುವ ಅಭ್ಯಾಸ ಇದೆ ಎಂದರೆ… ಈ (Food Tips Kannada) ಲೇಖನ ನಿಮಗಾಗಿ! ವ್ಯಸ್ತ ಬದುಕು ಕಾರಣಕ್ಕೆ ಇದನ್ನು ಸ್ವಸ್ಥ ಆಯ್ಕೆ ಎನ್ನುವಂತಿಲ್ಲ. ರೋಲ್‌ ಮಾಡಿದ ಓಟ್‌ಮೀಲ್‌ ಕುಕ್ಕರ್‌ಗೆ ಹಾಕಿದರೆ, ತನ್ನಷ್ಟಕ್ಕೆ ಬೆಂದುಕೊಳ್ಳುತ್ತದೆ. ಅದನ್ನು ತೆಗೆದು ಬೇಕಾದಂತೆ ಹಾಲು, ಹಣ್ಣು, ಜೇನುತುಪ್ಪ ಮುಂತಾದವನ್ನು ಸೇರಿಸಿ ಸೇವಿಸಿದರಾಯ್ತು. ಸ್ವಲ್ಪ ಗಮನ ನೀಡಿದರೆ, ಇಂಥ ಸರಳ ಮತ್ತು ಆರೋಗ್ಯಕರ ಆಯ್ಕೆಗಳು ನಮ್ಮ ಸುತ್ತ ಬಹಳಷ್ಟಿವೆ. ಇದಕ್ಕಾಗಿ ಇನ್‌ಸ್ಟಂಟ್‌ ನೂಡಲ್ಸ್‌ಗೇ ಮೊರೆ ಹೋಗಬೇಕೆಂದಿಲ್ಲ. ಇಂಥ ಸಂಸ್ಕರಿತ ಆಹಾರಗಳು ಆರೋಗ್ಯಕರವಲ್ಲ ಎಂದು ಹೇಳುವುದಕ್ಕೆ ಕಾರಣಗಳು ಒಂದೆರಡಲ್ಲ. ಏನು ಕಾರಣಗಳವು?

Instant noodles. Instant yakisoba

ಸೋಡಿಯಂ ಅಧಿಕ

ಇನ್‌ಸ್ಟಂಟ್‌ ನೂಡಲ್‌ಗಳು ತಮ್ಮಲ್ಲಿರುವ ಸೋಡಿಯಂ ಪ್ರಮಾಣಕ್ಕಾಗಿ ಕುಖ್ಯಾತವಾಗಿವೆ. ಕೆಲವು ನೂಡಲ್‌ಗಳಂತೂ ಒಂದು ಸರ್ವಿಂಗ್‌ನಲ್ಲಿ ಇಡೀ ದಿನಕ್ಕೆ ನಾವು ತಿನ್ನಬಹುದಾದ ಸೋಡಿಯಂನ ಅರ್ಧ ಭಾಗದಷ್ಟನ್ನು ದೇಹಕ್ಕೆ ಸೇರಿಸಿಬಿಡುತ್ತವೆ. ಹೀಗೆ ಅತಿಯಾಗಿ ಸೋಡಿಯಂ ಅಥವಾ ಉಪ್ಪಿನಂಶವನ್ನು ತಿನ್ನುವುದರಿಂದ ರಕ್ತದೊತ್ತಡ ಹೆಚ್ಚುತ್ತದೆ, ಹೃದಯ ರೋಗಗಳು ಅಮರಿಕೊಳ್ಳುತ್ತವೆ, ಪಾರ್ಶ್ವವಾಯು ದಾಳಿ ಮಾಡುತ್ತದೆ. ಹಾಗಾಗಿ ಇನ್‌ಸ್ಟಂಟ್‌ ನೂಡಲ್‌ಗಳನ್ನು ಹೊಟ್ಟೆಗಿಳಿಸುವ ಮುನ್ನ ಈ ವಿಷಯಗಳ ಬಗ್ಗೆ ಗಮನ ಇರಲಿ.

ಸತ್ವಹೀನ

ಹೊಟ್ಟೆ ಹಸಿದಾಗ ಏನು ಸಿಕ್ಕರೂ ತಿನ್ನುವಂತೆನಿಸುವುದು ಸಹಜ. ಆ ಹೊತ್ತಿಗೆ ಇಂಥ ಗುಜರಿ ತಿಂಡಿಗಳು ಸಿಕ್ಕಿಬಿಟ್ಟರೆ ಕೆಲಸ ಕೆಟ್ಟಂತೆ. ಕಾರಣ, ಇನ್‌ಸ್ಟಂಟ್‌ ನೂಡಲ್‌ಗಳು ಕ್ಯಾಲರಿಯನ್ನೇನೋ ನೀಡುತ್ತವೆ; ಆದರೆ ಸತ್ವಗಳು ಇರುವುದಿಲ್ಲ. ಅಂದರೆ ಶರೀರಕ್ಕೆ ಬೇಕಾದಂಥ ಪ್ರೊಟೀನ್‌, ನಾರು, ಖನಿಜಗಳಂಥ ಒಳ್ಳೆಯ ಅಂಶಗಳೇನೂ ಇರುವುದಿಲ್ಲ ಇದರಲ್ಲಿ. ಬದಲಿಗೆ ಕೆಟ್ಟ ಕೊಬ್ಬುಗಳು ಮತ್ತು ಸಂಸ್ಕರಿತ ಪಿಷ್ಟ ಹೊಟ್ಟೆ ಸೇರಿತ್ತದೆ. ಸಾಲದೆಂಬಂತೆ ಕೃತಕ ಬಣ್ಣ, ರುಚಿಗಳೂ ಇದರಲ್ಲಿ ಸೇರಿರುತ್ತವೆ. ಹಾಗಾಗಿ ಇದನ್ನು ಸದಾ ತಿಂದರೆ, ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯಾಗುವುದು ನಿಶ್ಚಿತ.

Man Eats Instant Noodles at Home

ಅನಾರೋಗ್ಯಕರ ಕೊಬ್ಬು

ಟ್ರಾನ್ಸ್‌ ಫ್ಯಾಟ್‌ ಮತ್ತು ಸ್ಯಾಚುರೇಟೆಡ್‌ ಫ್ಯಾಟ್‌ನಂಥ ಅನಾರೋಗ್ಯಕರ ಕೊಬ್ಬುಗಳು ಇದರಲ್ಲಿ ಭರಪೂರ ಇರಬಹುದು. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಜಮೆಯಾಗುವುದು ಸಹ ಅಧಿಕವಾಗುತ್ತದೆ. ಮೊದಲಿಗೆ ಈ ನೂಡಲ್‌ಗಳನ್ನು ಕರಿಯುವ ಸಂದರ್ಭದಲ್ಲಿ ಅಧಿಕ ಪ್ರಮಾಣದ ಎಣ್ಣೆಯನ್ನು ಇವು ಹೀರಿಕೊಂಡಿರುತ್ತವೆ. ನಂತರ ನಮ್ಮ ಅಡುಗೆ ಮನೆಗಳಲ್ಲಿ ನಿಮಿಷಗಳಲ್ಲಿ ಸಿದ್ಧ ಆಗುವಾಗ, ಆ ಕೊಬ್ಬಿನಂಶವೆಲ್ಲ ಸೇರುವುದು ನಮ್ಮ ಹೊಟ್ಟೆಯನ್ನೇ.

ಸಂರಕ್ಷಕಗಳು

ತಯಾರಿಕೆಯ ಹಂತದಲ್ಲೇ ಒಂದಿಷ್ಟು ಕೃತಕ ವಸ್ತುಗಳು ಇದಕ್ಕೆ ಸೇರ್ಪಡೆಯಾಗುತ್ತವೆ. ಕೃತಕವಾದ ಬಣ್ಣ, ರುಚಿ, ಘಮಗಳೆಲ್ಲ ಇದರಲ್ಲಿ ಸೇರಿವೆ. ಮಾತ್ರವಲ್ಲದೆ ಸಂರಕ್ಷಕಗಳೂ ಇದಕ್ಕೆ ಜೊತೆಯಾಗಿರುತ್ತವೆ. ಮಾನೊಸೋಡಿಯಂ ಗ್ಲೂಟಮೇಟ್‌ನಂಥ (ಎಂಎಸ್‌ಜಿ) ರಾಸಾಯನಿಕಗಳನ್ನು ಹೆಚ್ಚಿನ ನೂಡಲ್‌ಗಳಲ್ಲಿ ಸೇರಿಸಲಾಗುತ್ತದೆ. ಇಂಥ ಅಂಶಗಳು ದೇಹದಲ್ಲಿ ಸೇರಿದರೆ ತಲೆನೋವು, ಅಲರ್ಜಿಗಳು, ಜೀರ್ಣಾಂಗಗಳ ತೊಂದರೆಗಳು ಕಟ್ಟಿಟ್ಟಿದ್ದು.

ಜೀವಶೈಲಿಯ ಕಾಯಿಲೆಗಳು

ಸಂಸ್ಕರಿತ ಪಿಷ್ಟ, ಕೆಟ್ಟ ಕೊಬ್ಬು, ಅಧಿಕ ಸೋಡಿಯಂನಂಥ ಅಂಶಗಳು ದೇಹಕ್ಕೆ ಸೇರಿದರೆ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್‌, ಬೊಜ್ಜಿನಂಥ ಜೀವನಶೈಲಿಯ ಖಾಯಿಲೆಗಳು ಬೆನ್ನು ಬೀಳುತ್ತವೆ. ಕಿಬ್ಬೊಟ್ಟೆಯಲ್ಲಿ ಕೊಬ್ಬು ಸೇರಿಕೊಳ್ಳುತ್ತದೆ. ದೇಹದ ಚಯಾಪಚಯವನ್ನೇ ಬುಡಮೇಲು ಮಾಡಿ, ಶರೀರವನ್ನು ರೋಗಗಳ ಗೂಡಾಗಿಸುತ್ತದೆ. ಹಾಗಾಗಿ ಬಾಯಿಗೆ ರುಚಿ ಎನಿಸುವ ಇನ್‌ಸ್ಟಂಟ್‌ ನೂಡಲ್‌ಗಳ ಬಗ್ಗೆ ಈ ಅರಿವು ಹೊಂದುವುದು ಅಗತ್ಯ.

healthy internal organs of human digestive system

ಜೀರ್ಣಾಂಗಗಳ ಸಮಸ್ಯೆ

ನಾರು ಇಲ್ಲದಂಥ ಆಹಾರಗಳು ಜೀರ್ಣಾಂಗಗಳ ಸಂಕಷ್ಟವನ್ನು ಹೆಚ್ಚಿಸುತ್ತವೆ. ಅದರಲ್ಲೂ ಅತಿಯಾಗಿ ಸಂಸ್ಕರಿಸಿದ ತಿನಿಸುಗಳು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳನ್ನೂ ಕೊಲ್ಲುತ್ತವೆ. ಇವೆಲ್ಲವುಗಳ ಫಲವಾಗಿ ಅಜೀರ್ಣ, ಹೊಟ್ಟೆಯುಬ್ಬರ, ಆಸಿಡಿಟಿಯಂಥ ಕಿರಿಕಿರಿಗಳು ಹೆಚ್ಚುತ್ತವೆ. ಮಲಬದ್ಧತೆಯೂ ಕಾಡಬಹುದು. ಇವೆಲ್ಲವುಗಳಿಂದ ಜೀರ್ಣಾಂಗಗಳ ಆರೋಗ್ಯ ಸಂಪೂರ್ಣ ಹಾಳಾಗುತ್ತದೆ. ಇದರ ಬದಲಿಗೆ, ಹಣ್ಣು-ತರಕಾರಿಗಳು, ಇಡೀ ಧಾನ್ಯಗಳು, ಪ್ರೊಬಯಾಟಿಕ್‌ಗಳು ಜೀರ್ಣಾಂಗಗಳ ಆರೋಗ್ಯವನ್ನು ಸುಧಾರಿಸುತ್ತವೆ.

Belly Fat Reduction

ಬೊಜ್ಜು

ಸತ್ವಗಳಿಲ್ಲದ ಖಾಲಿ ಕ್ಯಾಲರಿಗಳು ದೇಹವನ್ನು ನಿತ್ರಾಣದತ್ತ ದೂಡುತ್ತವೆ. ಹಾಗೆಂದು ಆ ವ್ಯಕ್ತಿ ಸಪೂರ ಕಡ್ಡಿಯಂತೇನೂ ಇರುವುದಿಲ್ಲ. ಸ್ಥೂಲಕಾಯವೇ ಇದ್ದರೂ, ನಿತ್ಯದ ಚಟುವಟಿಕೆಗೆ ಬೇಕಾದ ಚೈತನ್ಯ ಇರುವುದಿಲ್ಲ. ಇವೆಲ್ಲ ಕೆಟ್ಟ ಆಹಾರಕ್ರಮದ ಪರಿಣಾಮಗಳು. ಇನ್‌ಸ್ಟಂಟ್‌ ನೂಡಲ್‌ಗಳ ನಿಯಮಿತ ಸೇವನೆಯು ದೇಹದ ತೂಕವನ್ನು ಹೆಚ್ಚಿಸಿ, ದೇಹದಲ್ಲಿ ಬೊಜ್ಜು ತುಂಬಿಸುತ್ತದೆ. ಖಾಲಿ ಕ್ಯಾಲರಿಗಳು ಹಸಿವು ಹೆಚ್ಚಿಸುತ್ತವೆ. ಮತ್ತೆ ಇದನ್ನೇ ತಿನ್ನುತ್ತೀರಿ, ಹಸಿವು ತಣಿಯುವುದೇ ಇಲ್ಲ. ತೂಕ ಏರುತ್ತಲೇ ಹೋಗುತ್ತದೆ.

ಇದನ್ನೂ ಓದಿ: World Brain Tumor Day: ಇಂದು ವಿಶ್ವ ಬ್ರೇನ್‌ ಟ್ಯೂಮರ್‌ ದಿನ; ಮೊದಲೇ ಎಚ್ಚೆತ್ತುಕೊಂಡರೆ ಈ ಕಾಯಿಲೆಯಿಂದ ಪಾರಾಗಬಹುದು

Continue Reading

ಆರೋಗ್ಯ

World Brain Tumor Day: ಇಂದು ವಿಶ್ವ ಬ್ರೇನ್‌ ಟ್ಯೂಮರ್‌ ದಿನ; ಮೊದಲೇ ಎಚ್ಚೆತ್ತುಕೊಂಡರೆ ಈ ಕಾಯಿಲೆಯಿಂದ ಪಾರಾಗಬಹುದು

ತಲೆನೋವು ಬಂದಾಕ್ಷಣ ತಲೆಯೊಳಗೆ ಏನೋ ಆಗಬಾರದ್ದು ಆಗಿದೆಯೆಂದು ಹೆದರುವ ಅಗತ್ಯವಿಲ್ಲ. ಆದರೆ ಬ್ರೇನ್‌ ಟ್ಯೂಮರ್‌ ಲಕ್ಷಣಗಳನ್ನು ತಿಳಿದಿದ್ದರೆ, ಪ್ರಾರಂಭಿಕ ಲಕ್ಷಣಗಳನ್ನು ಪತ್ತೆ ಮಾಡಿ, ರೋಗಿಗೆ ಶಾಶ್ವತ ಹಾನಿ ಆಗದಂತೆ ತಡೆಯಬಹುದು. ವಿಶ್ವ ಬ್ರೇನ್‌ ಟ್ಯೂಮರ್‌ ದಿನದ (World Brain Tumor Day) ಹಿನ್ನೆಲೆಯಲ್ಲಿ ಅರಿವಿನ ಲೇಖನವಿದು.

VISTARANEWS.COM


on

World Brain Tumor Day
Koo

ಪ್ರತಿವರ್ಷ ಜೂನ್‌ ತಿಂಗಳ ಎಂಟನೇ ದಿನವನ್ನು (ಜೂನ್‌ 8) ವಿಶ್ವ ಬ್ರೇನ್‌ ಟ್ಯೂಮರ್‌ ಜಾಗೃತಿ ದಿನ (World Brain Tumor Day) ಎಂದು ಗುರುತಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿಯೇ ಈ ಸಮಸ್ಯೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಮಹತ್ವವನ್ನು ಸಾರುವುದು ಈ ಜಾಗೃತಿ ದಿನದ ಉದ್ದೇಶ. ಎಲ್ಲಾ ವಯೋಮಾನದವರನ್ನೂ ಕಾಡುವ ಮೆದುಳಿನ ಟ್ಯೂಮರ್‌ಗಳು, ಕ್ಯಾನ್ಸರ್‌ಕಾರಕವಾಗದೆಯೂ ಬೆಳೆಯಬಲ್ಲಂಥವು. ಆದರೆ ಇದರ ಸೂಚನೆಗಳನ್ನು ಶೀಘ್ರ ಗುರುತಿಸುವುದು, ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಮುಖ್ಯವಾಗುತ್ತದೆ. ಮಸ್ತಿಷ್ಕದಲ್ಲಿ ಅಷ್ಟಾಗಿ ಸಕ್ರಿಯವಲ್ಲದ ಭಾಗಗಳಲ್ಲಿ ಗಡ್ಡೆಗಳು ಕಾಣಿಸಿಕೊಂಡರೆ, ಹೆಚ್ಚಿನ ಲಕ್ಷಣಗಳು ಕಾಣಿಸುವಷ್ಟರಲ್ಲಿ ಗಡ್ಡೆಗಳು ಬಹಳಷ್ಟು ಬೆಳೆದಿರಬಹುದು. ಆದರೆ ಸಕ್ರಿಯ ಭಾಗಗಳಲ್ಲಿ ಗಂಟುಗಳು ಮೂಡಿದರೆ ಅಥವಾ ಅವು ಕ್ಯಾನ್ಸರ್‌ಕಾರಕ ಆಗಿದ್ದರೆ ಆಗ ಲಕ್ಷಣಗಳು ಶೀಘ್ರವೇ ಗೋಚರಿಸಲು ಸಾಧ್ಯವಿದೆ. ಜೊತೆಗೆ, ಮೆದುಳಿನ ಯಾವ ಭಾಗದಲ್ಲಿ ಟ್ಯೂಮರ್‌ ಉಂಟಾಗಿದೆ ಎಂಬುದರ ಮೇಲೆ ಲಕ್ಷಣಗಳು ಕೊಂಚ ಭಿನ್ನವಾಗುವ ಸಾಧ್ಯತೆಯೂ ಇದೆ. ಒಂದೆಡೆಯಿಂದ ಇನ್ನೊಂದೆಡೆಗೆ ಹರಡುವಂಥ ಮೆಟಾಸ್ಟಾಟಿಕ್‌ ಬ್ರೇನ್‌ ಟ್ಯೂಮರ್‌ ಸಹ ಗಂಟು ಬೀಳಬಹುದು. ಈ ಎಲ್ಲವುಗಳ ಬಗ್ಗೆ ಮಾಹಿತಿ ಇಲ್ಲಿದೆ.

Woman having headache. stressed, Migraine, World Brain Tumor day

ಲಕ್ಷಣಗಳೇನು?

ಯಾವುದೇ ಅಸಹಜ ಬೆಳವಣಿಗೆಗಳು ತಲೆಯೊಳಗೆ ನಡೆದರೆ, ಅಲ್ಲಿ ಒತ್ತಡ ಹೆಚ್ಚುವುದು ಸಾಮಾನ್ಯ. ಹಾಗಾಗಿ ಸಣ್ಣ ಗಂಟಾದರೂ, ಮೊದಲಿಗೆ ಕಾಣಿಸಿಕೊಳ್ಳುವುದು ತಲೆನೋವು. ಇದರರ್ಥ ತಲೆನೋವು ಬಂದಾಕ್ಷಣ ಮೆದುಳಿಗೇನೋ ಆಗಿದೆ ಎಂದಲ್ಲ. ಸೌಮ್ಯವಾಗಿ ಪ್ರಾರಂಭವಾಗುವ ನೋವು ಕ್ರಮೇಣ ತೀಕ್ಷ್ಣವಾಗಬಹುದು. ಜೊತೆಗೆ ಹೊಟ್ಟೆ ತೊಳೆಸುವುದು, ವಾಂತಿ, ತಲೆ ಸುತ್ತುವುದು, ಸ್ಮೃತಿ ತಪ್ಪುವುದು, ಫಿಟ್ಸ್‌ ಬರುವುದು, ತನ್ನಷ್ಟಕ್ಕೇ ಕೈ-ಕಾಲುಗಳಲ್ಲಿ ಚಲನೆ, ದೇಹದ ಸಮತೋಲನ ತಪ್ಪುವುದು ನಡೆಯಲು ಕಷ್ಟವಾಗಿ ಬೀಳುವುದು, ಆಗಾಗ ಎಡವುವುದು ಇಂಥವು ಕಂಡರೆ ನರರೋಗ ತಜ್ಞರನ್ನು ಭೇಟಿ ಮಾಡುವುದು ಅಗತ್ಯ. ಇವು ಮಾತ್ರವಲ್ಲ, ದೃಷ್ಟಿಗೆ ಇದ್ದಕ್ಕಿದ್ದಂತೆ ಬೆಳಕು ಗೋಚರಿಸುವುದು, ಎದುರಿನ ವಸ್ತು ಸರಿಯಾಗಿ ಗೋಚರಿಸದಿರುವುದು ಅಥವಾ ಒಂದಿದ್ದಿದ್ದು ಎರಡಾಗಿ ಕಾಣುವುದು ಸಹ ವೈದ್ಯರನ್ನು ಕಾಣಬೇಕು ಎಂಬುದರ ಸೂಚನೆಗಳು.

ಪರೀಕ್ಷೆಗಳೇನು?

ನರಗಳ ಕಾರ್ಯಚಟುವಟಿಕೆಯನ್ನು ಕುರಿತಂತೆ ವೈದ್ಯರು ಮೊದಲಿಗೆ ವಿವರವಾಗಿ ದೈಹಿಕ ಪರೀಕ್ಷೆ ನಡೆಸುತ್ತಾರೆ. ಕಣ್ಣುಗಳ ಪರೀಕ್ಷೆಯನ್ನೂ ನಡೆಸುತ್ತಾರೆ. ತಲೆಯೊಳಗೆ ಒತ್ತಡ ಹೆಚ್ಚಿದರೆ ಅದು ಕಣ್ಣಿನ ನರಗಳ ಮೇಲೂ ಪರಿಣಾಮ ತೋರಿಸುತ್ತದೆ. ಈ ಪ್ರಾಥಮಿಕ ಪರೀಕ್ಷೆಗಳ ನಂತರ ಅಗತ್ಯ ಎನಿಸಿದರೆ ಹೆಚ್ಚಿನ ಪರೀಕ್ಷೆಗಳಿಗೆ, ಅಂದರೆ ಸ್ಕ್ಯಾನ್‌ ಅಥವಾ ಎಂಆರ್‌ಐಯಂಥ ಪರೀಕ್ಷೆಗಳನ್ನು ವೈದ್ಯರು ಸೂಚಿಸಬಹುದು.

World Brain Tumor Day pic

ಚಿಕಿತ್ಸೆ

ಕೆಲವು ಟ್ಯೂಮರ್‌ಗಳನ್ನು ಗುಣ ಮಾಡಬಹುದು. ಆದರೆ ಈ ಸಮಸ್ಯೆ ಎಷ್ಟು ಬೇಗ ಪತ್ತೆಯಾಗುತ್ತದೊ ಅಷ್ಟು ಪರಿಣಾಮಕಾರಿಯಾಗಿ ಚಿಕಿತ್ಸೆಯನ್ನು ನೀಡಬಹುದು. ಟ್ಯೂಮರ್‌ ಮೆದುಳಿನ ಯಾವ ಭಾಗದಲ್ಲಿದೆ, ಎಂಥಾ ಟ್ಯೂಮರ್‌, ಎಷ್ಟು ದೊಡ್ಡದಿದೆ ಮತ್ತು ಆ ವ್ಯಕ್ತಿಯ ಆರೋಗ್ಯ ಉಳಿದಂತೆ ಹೇಗಿದೆ ಎನ್ನುವುದರ ಮೇಲೆ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ, ಕೀಮೊಥೆರಪಿ, ರೇಡಿಯೇಶನ್‌ ಚಿಕಿತ್ಸೆಗಳು ಬೇಕಾಗುತ್ತವೆ.

ಇದನ್ನೂ ಓದಿ: Health Tips Kannada: ಯಾವ ಬೀಜ ತಿಂದರೆ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನ?

ಹಾನಿ ತಡೆ

ತಲೆಯೊಳಗಿನ ಭಾಗದಲ್ಲಿ ಬೆಳೆಯುವ ಗಂಟುಗಳು ನರವ್ಯೂಹದ ಮೇಲೆ ಅಪಾರ ಪ್ರಮಾಣದ ಒತ್ತಡವನ್ನು ಹಾಕುತ್ತವೆ. ಇದರಿಂದ ಮೆದುಳಿನ ಕೆಲವು ಗುರುತರ ಭಾಗಗಳಿಗೆ ಅಥವಾ ನರಗಳಿಗೆ ಹಾನಿಯಾಗಬಹುದು. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಮೆದುಳಿಗೆ ಶಾಶ್ವತ ಹಾನಿಯಾಗುವ ಭೀತಿ ಇದೆ. ಪಾರ್ಶ್ವವಾಯು, ಮಾತಾಡಲು ಆಗದಿರುವುದು, ಬುದ್ಧಿ ಮಂದವಾಗುವುದು, ದೇಹದ ಸಮತೋಲನ ನಷ್ಟವಾಗುವುದು- ಇಂಥ ದೀರ್ಘಕಾಲೀನ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಪ್ರಾರಂಭಿಕ ಲಕ್ಷಣಗಳು ಗೋಚರಿಸಿದಾಗಲೇ ಜಾಗ್ರತೆ ವಹಿಸುವುದು ಅತಿ ಮುಖ್ಯ.

Continue Reading

ಆರೋಗ್ಯ

Health Tips Kannada: ಯಾವ ಬೀಜ ತಿಂದರೆ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನ?

ವಿಟಮಿನ್‌ಗಳು, ಖನಿಜಾಂಶಗಳು, ಒಳ್ಳೆಯ ಕೊಬ್ಬು, ಪ್ರೊಟೀನ್‌ ಸೇರಿದಂತೆ ಎಲ್ಲವೂ ಇರುವ ಬೀಜಗಳು ತಿನ್ನಲು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಇರುತ್ತವೆ. ಹಲವು ರೋಗಗಳು ಬರದಂತೆ ತಡೆಯುವ, ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಈ ಬೀಜಗಳ ಸೇವನೆಯಿಂದ ನಮ್ಮ ಸೌಂದರ್ಯವೂ ಸೇರಿದಂತೆ ಆರೋಗ್ಯವೂ ವೃದ್ಧಿಯಾಗುತ್ತದೆ. ಯಾವ ಬೀಜ ಸೇವಿಸಿದರೆ ಯಾವ ಲಾಭ ಪಡೆಯಬಹುದು ಎಂಬ ಮಾಹಿತಿ (Health Tips Kannada) ಇಲ್ಲಿದೆ.

VISTARANEWS.COM


on

Health Tips Kannada
Koo

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು (Health Tips Kannada) ಎಂಬ ಹಳೇ ಗಾದೆಯನ್ನು ಈ ಬೀಜಗಳ ವಿಚಾರಕ್ಕೆ ಹೇಳಬಹುದೇನೋ. ಯಾಕೆಂದರೆ ಬೀಜಗಳು ನೋಡಲು ಚಿಕ್ಕದಾದರೂ, ಅದರಲ್ಲಿರುವ ಪೋಷಕಾಂಶಗಳ ವಿಚಾರಕ್ಕೆ ಬಂದರೆ ದೇಹಕ್ಕೆ ಅಗತ್ಯವಾಗಿರುವ ಎಲ್ಲವನ್ನೂ ಒಳಗೊಂಡಿವೆ. ವಿಟಮಿನ್‌ಗಳು, ಖನಿಜಾಂಶಗಳು, ಒಳ್ಳೆಯ ಕೊಬ್ಬು, ಪ್ರೊಟೀನ್‌ ಸೇರಿದಂತೆ ಎಲ್ಲವೂ ಇರುವ ಬೀಜಗಳು ತಿನ್ನಲು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಇರುತ್ತವೆ. ಹಲವು ರೋಗಗಳು ಬರದಂತೆ ತಡೆಯುವ, ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಈ ಬೀಜಗಳ ಸೇವನೆಯಿಂದ ನಮ್ಮ ಸೌಂದರ್ಯವೂ ಸೇರಿದಂತೆ ಆರೋಗ್ಯವೂ ವೃದ್ಧಿಯಾಗುತ್ತದೆ. ಬನ್ನಿ, ಯಾವೆಲ್ಲ ಬೀಜಗಳಿಂದ ಯಾವ ಲಾಭಗಳನ್ನು ನಾವು ಪ್ರಮುಖವಾಗಿ ಪಡೆಯಬಹುದು ಎಂಬುದನ್ನು ನೋಡೋಣ.

Pomegranate seeds

ದಾಳಿಂಬೆ ಬೀಜಗಳು

ಕೆಂಬಣ್ಣದ ದಾಳಿಂಬೆ ಹಣ್ಣಿನ ಬೀಜಗಳನ್ನು ಕವಿಗಳು ಹಲ್ಲುಗಳಿಗೆ ಹೋಲಿಸುತ್ತಾರೆ. ಮುತ್ತಿನಂತ ಹಲ್ಲನ್ನು ಹೊಂದಿದ್ದರೆ ದಾಳಿಂಬೆಯ ಬೀಜದಂತೆ ಮುದ್ದಾಗಿವೆ ಎನ್ನುವುದನ್ನು ನೀವು ನೋಡಿರಬಹುದು. ಈ ದಾಳಿಂಬೆಯ ಕೆಂಬಣ್ಣದ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ, ವಿಟಮಿನ್‌ ಸಿಯೂ ಹೇರಳವಾಗಿವೆ. ಇದು ಕೊಬ್ಬನ್ನು ಕರಗಿಸುವ ಜೊತೆಗೆ ಆಂಟಿ ಏಜಿಂಗ್‌ ಗುಣಗಳನ್ನೂ ಹೊಂದಿದೆ. ಹೀಗಾಗಿ ತೂಕ ಇಳಿಸುವ ಮಂದಿಗೆ ದಾಳಿಂಬೆ ತಿನ್ನುವುದು ಬಹಳ ಒಳ್ಳೆಯದು.

Sunflower seed and flax seed

ಸೂರ್ಯಕಾಂತಿ ಬೀಜ ಹಾಗೂ ಅಗಸೆ ಬೀಜ

ಸೂರ್ಯಕಾಂತಿ ಹೂವಿನ ಬೀಜಗಳ ಸಿಪ್ಪೆ ಸುಲಿದು ಅದರೊಳಗಿನ ಬೀಜವನ್ನು ಸೇವಿಸುವುದರಿಂದ ಸಾಕಷ್ಟು ಲಾಭಗಳಿವೆ. ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್‌ ಬಿ೧, ತಾಮ್ರ, ವಿಟಮಿನ್‌ ಇ, ಆಂಟಿ ಆಕ್ಸಿಡೆಂಟ್‌ಗಳು, ಪ್ರೊಟೀನ್‌ ಹಾಗೂ ನಾರಿನಂಶ ಹೇರಳವಾಗಿವೆ. ಇದು ಮಧುಮೇಹಕ್ಕೆ ಬಹಳ ಒಳ್ಳೆಯದು. ಸೂರ್ಯಕಾಂತಿ ಹಾಗೂ ಅಗಸೆ ಬೀಜಗಳು ಗ್ಲುಕೋಸ್‌ ಮಟ್ಟವನ್ನು ಕೆಳಗಿಳಿಸುವ ಗುಣವನ್ನು ಹೊಂದಿರುವುದರಿಂದ ಇವೆರಡೂ ಕೂಡಾ ಮಧುಮೇಹಕ್ಕೆ ಒಳ್ಳೆಯ ಆಹಾರಗಳು.

Chia Seeds Black Foods

ಚಿಯಾ ಬೀಜಗಳು

ಚಿಯಾ ಬೀಜಗಳು ಆಕಾರದಲ್ಲಿ ಪುಟಾಣಿಯಾದರೂ ಇವುಗಳಲ್ಲಿರುವ ಶಕ್ತಿ ದೊಡ್ಡದು. ಇತ್ತೀಚೆಗಿನ ದಿನಗಳಲ್ಲಿ ಚಿಯಾ ಬೀಜಗಳು ಹೆಚ್ಚು ಪ್ರಸಿದ್ಧಿಗೆ ಬಂದಿದ್ದು, ಸಲಾಡ್‌ಗಳಲ್ಲಿ, ಸ್ಮೂದಿಗಳಲ್ಲಿ ಹಾಗೂ ಡೆಸರ್ಟ್‌ಗಳಲ್ಲಿ ಬಳಕೆಯಾಗುತ್ತಿವೆ. ಕ್ಯಾಲ್ಶಿಯಂ ಹೆಚ್ಚಿರುವ ಚಿಯಾ ಬೀಜಗಳನ್ನು ತಿನ್ನುವುದರಿಂದ ಎಲುಬಿನ ಆರೋಗ್ಯ ವೃದ್ಧಿಯಾಗುತ್ತದೆ. ಎಲುಬು ಗಟ್ಟಿಯಾಗುತ್ತದೆ.

Sweet pumpkin seed

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜಗಳು ಹಸಿರು ಬಣ್ಣದಲ್ಲಿರುವ ಬೀಜಗಳಾಗಿದ್ದು, ಇವುಗಳ ಸೇವನೆಯಿಂದಲೂ ಸಾಕಷ್ಟು ಆರೋಗ್ಯದ ಲಾಭಗಳಿವೆ. ಸಲಾಡ್‌ ಹಾಗೂ ಸಿರಿಯಲ್‌ಗಳ ಜೊತೆಗೆ ಇವನನು ಸೇರಿಸಿ ಬಳಸಲಾಗುತ್ತದೆ. ಕಬ್ಬಿಣಾಂಶ ಅತ್ಯಂತ ಹೆಚ್ಚಿರುವ ಈ ಬೀಜಗಳು ಶಕ್ತಿವರ್ಧಕಗಳು. ನಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ರಕ್ತದಲ್ಲಿ ಹಿಮೋಗ್ಲೋಬಿನ್‌ ಅನ್ನೂ ಇದು ಹೆಚ್ಚಿಸುವಲ್ಲಿ ಪಾತ್ರ ವಹಿಸುತ್ತದೆ. ತೂಕ ಇಳಿಕೆಗೂ ಇದು ಒಳ್ಳೆಯದು.

sesame seeds Sesame Benefits

ಎಳ್ಳು

ಎಳ್ಳಿನ ಬೀಜಗಳೂ ಕೂಡಾ ನೋಡಲು ಚಿಕ್ಕವಾಗಿದ್ದರೂ ತಮ್ಮ ಗುಣದಲ್ಲಿ ಶ್ರೇಷ್ಠತೆಯನ್ನು ಮೆರೆಯುವಂಥವುಗಳು. ಫೈಟೋನ್ಯೂಟ್ರಿಯೆಂಟ್‌ಗಳು, ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್‌ ಹಾಗೂ ನಾರಿನಂಶ ಹೆಚ್ಚಿರುವ ಈ ಬೀಜಗಳಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ ಕೂಡಾ ಹೇರಳವಾಗಿದೆ. ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನೂ ಇದು ಹೆಚ್ಚಿಸುತ್ತದೆ. ಅಮೆರಿಕನ್‌ ಹಾರ್ಟ್‌ ಅಸೋಸಿಯೇಶನ್‌ ವರದಿಯ ಪ್ರಕಾರ, ಎಳ್ಳಿನಲ್ಲಿರುವ ಮೋನೋ ಸ್ಯಾಚುರೇಟೆಡ್‌ ಹಾಗೂ ಪಾಲಿ ಸ್ಯಾಚುರೇಟೆಡ್‌ ಕೊಬ್ಬು ಹಿತಮಿತವಾಗಿ ದೇಹ ಸೇರಿದರೆ, ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಅಷ್ಟೇ ಅಲ್ಲ, ಪಾರ್ಶ್ವವಾಯುವಿನಂಥ ಸಮಸ್ಯೆಗಳನ್ನೂ ದೂರವಿರಿಸುತ್ತದೆ. ಇಂಥ ಅಪಾಯದಿಂದ ನಮ್ಮನ್ನು ದೂರವಿರಿಸುವ ಸಾಮರ್ಥಿವನ್ನು ಹೊಂದಿದೆ ಎಂದು ವರದಿ ಮಾಡಿದೆ.
ಈ ಬೀಜಗಳ ಲಾಭಗಳನ್ನು ನಾವು ಪಡೆಯುವುದಕ್ಕಾಗಿ ನಾವು ಮಾಡಬಹುದಾದ ಬೆಸ್ಟ್‌ ಉಪಾಯಗಳಲ್ಲಿ ಪ್ರಮುಖವಾದುದು, ಸಲಾಡ್‌ಗಳ ಮೇಲೆ ಟಾಪಿಂಗ್‌ನಂತೆ ಹಾಕಿ ಸೇವಿಸುವುದು. ಇಲ್ಲವಾದರೆ, ಸ್ನ್ಯಾಕಿಂಗ್‌ ಸಮಯದಲ್ಲಿ ಸಿಕ್ಕಸಿಕ್ಕ ತಿನಿಸುಗಳನ್ನು ತಿನ್ನುವ ಬದಲು ಇವನ್ನು ಸೇವಿಸುವುದು.

ಇದನ್ನೂ ಓದಿ: Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

Continue Reading

ಆರೋಗ್ಯ

Health Tips: ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಿಕೊಳ್ಳಬೇಕೆ? ಈ ಆಹಾರ ಸೇವಿಸಿ

ಹಿಮೋಗ್ಲೋಬಿನ್ ಕಡಿಮೆಯಾದರೆ ಅದನ್ನು ರಕ್ತಹೀನತೆ ಎನ್ನುತ್ತೇವೆ. ಮೊದಲಿಗೆ ಕೆಲವು ಪೂರಕಗಳನ್ನು ವೈದ್ಯರು ನೀಡಬಹುದು. ಆದರೆ ಇದನ್ನು ಜೀವನವಿಡೀ ಆಹಾರದ ಮೂಲಕವೇ ಸಮತೋಲನದಲ್ಲಿ ಇರಿಸಿಕೊಳ್ಳಬೇಕು. ಯಾವ ಆಹಾರದ ಮೂಲಕ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಗೊತ್ತೇ? ಇಲ್ಲಿದೆ (Health Tips) ಮಾಹಿತಿ.

VISTARANEWS.COM


on

Health Tips
Koo

ಹಿಮೋಗ್ಲೋಬಿನ್‌ ಬಗ್ಗೆ ಎಲ್ಲರೂ ಕೇಳಿರುತ್ತೇವೆ. ಅದರ ಮಟ್ಟ ಕಡಿಮೆಯಾಯಿತೆಂದು ಮಾತ್ರೆ ನುಂಗುವವರನ್ನೂ ಕಂಡಿರುತ್ತೇವೆ. ಆದರೆ ಅದು ಕಡಿಮೆಯಾದರೆ ಸಮಸ್ಯೆಯೇನು ಎಂಬುದು ಗೊತ್ತಿರುವುದಿಲ್ಲ. ಹಿಮೋಗ್ಲೋಬಿನ್‌ ಎಂದರೆ ಕೆಂಪುರಕ್ತ ಕಣಗಳಲ್ಲಿರುವ ಒಂದು ಬಗೆಯ ಪ್ರೊಟೀನ್‌. ಇದರ ಕೆಲಸದ ಬಗ್ಗೆ ಚುಟುಕಾಗಿ ಹೇಳಬೇಕೆಂದರೆ, ದೇಹದಲ್ಲಿ ಆಮ್ಲಜನಕದ ಮೇಲುಸ್ತುವಾರಿ ನೋಡಿಕೊಳ್ಳುವ ವಿಭಾಗ ಇದರದ್ದು. ಈ ವಿಭಾಗದಲ್ಲಿ ಎಡವಟ್ಟಾದರೆ ಉಳಿದೆಲ್ಲ ವಿಭಾಗದಲ್ಲೂ ಏರುಪೇರು ಉಂಟಾಗುತ್ತದೆ. ಹಾಗಾಗಿ ಇದರ ಮಟ್ಟದಲ್ಲಿ ತೀರಾ ಏರುಪೇರು ಆಗುವಂತಿಲ್ಲ. ಹಿಮೋಗ್ಲೋಬಿನ್‌ ಕಡಿಮೆಯಾದರೆ ಅದನ್ನು ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲಾಗುತ್ತದೆ. ಇದನ್ನು ಸರಿತೂಗಿಸುವಂಥ ಆಹಾರಗಳು ಯಾವುವು ಎಂಬುದು (Health Tips) ಗೊತ್ತೇ?

Iron rich foods

ಕಬ್ಬಿಣಯುಕ್ತ ಆಹಾರಗಳು

ಆಹಾರದಲ್ಲಿ ಕಬ್ಬಿಣದಂಶ ಹೆಚ್ಚಿದ್ದರೆ, ರಕ್ತಹೀನತೆಯನ್ನು ನಿವಾರಿಸಲು ನೆರವಾಗುತ್ತದೆ. ಮೀನು, ಕೆಂಪು ಮಾಂಸ, ಚಿಕನ್‌, ಕಾಳುಗಳು, ಬೇಳೇಗಳು, ತೋಫು, ಹಸಿರು ಸೊಪ್ಪು ಮತ್ತು ತರಕಾರಿಗಳು, ಬ್ರೊಕೊಲಿ, ಒಣದ್ರಾಕ್ಷಿ, ಎಪ್ರಿಕಾಟ್‌ನಂಥವು ಆಹಾರದಲ್ಲಿರಲಿ.

Vitamin c

ವಿಟಮಿನ್‌ ಸಿ

ಕಬ್ಬಿಣಯುಕ್ತ ಆಹಾರವನ್ನೇನೋ ತಿನ್ನುತ್ತೀರಿ. ಇದು ಸರಿಯಾಗಿ ಹೀರಲ್ಪಡುವುದಕ್ಕೆ ವಿಟಮಿನ್‌ ಸಿ ಅಂಶ ಅಗತ್ಯ. ಹಾಗಾಗಿ ಸಿಟ್ರಸ್‌ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ನಿಂಬೆಯಂಥವು, ಎಲ್ಲಾ ರೀತಿಯ ಬೆರ್ರಿಗಳು, ಕಿವಿ ಹಣ್ಣು, ಕ್ಯಾಪ್ಸಿಕಂ, ಟೊಮೇಟೊ ಇತ್ಯಾದಿಗಳು ದೈನಂದಿನ ಆಹಾರದಲ್ಲಿ ಬೇಕು.

ಫೋಲೇಟ್‌

ಹಿಮೋಗ್ಲೋಬಿನ್‌ ಉತ್ಪಾದನೆಯಲ್ಲಿ ವಿಟಮಿನ್‌ ಬಿ೯ ಅಥವಾ ಫೋಲೇಟ್‌ ಪ್ರಧಾನ ಕೆಲಸ ಮಾಡುತ್ತದೆ. ಪಾಲಕ್‌ ಸೊಪ್ಪು, ಬ್ರೊಕೊಲಿ, ಅವಕಾಡೊ ಅಥವಾ ಬೆಣ್ಣೆ ಹಣ್ಣು, ಕಿತ್ತಳೆ ಹಣ್ಣಿನಂಥವು ಅಗತ್ಯವಾಗಿ ಬೇಕು.

Beetroot

ಬೀಟ್‌ರೂಟ್‌

ಇದೊಂದು ತರಕಾರಿಯಿಂದ ಹಲವು ರೀತಿಯ ಅನುಕೂಲಗಳು ದೊರೆಯುತ್ತವೆ. ಇದರಲ್ಲಿ ಕಬ್ಬಿಣದಂಶ, ಫಾಲಿಕ್‌ ಆಮ್ಲ ಮತ್ತು ಪೊಟಾಶಿಯಂ ಒಟ್ಟಿಗೇ ದೊರೆಯುತ್ತದೆ. ಇವೆಲ್ಲವೂ ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಇದನ್ನು ಹಸಿಯಾಗಿ, ಬೇಯಿಸಿ… ಹೇಗಾದರೂ ತಿನ್ನಿ, ಅಂತೂ ಸಾಕಷ್ಟು ತಿನ್ನಿ.

Pomegranate

ದಾಳಿಂಬೆ

ಈ ಹಣ್ಣಿನಲ್ಲಿ ಕಬ್ಬಿಣ ಮತ್ತು ವಿಟಮಿನ್‌ ಸಿಗಳೆರಡೂ ಇವೆ. ಈ ಮೂಲಕ ಹಿಮೋಗ್ಲೋಬಿನ್ ಹೆಚ್ಚು ಉತ್ಪಾದನೆ ಆಗುವುದಕ್ಕೆ ನೆರವಾಗುತ್ತದೆ. ದಾಳಿಬೆಯ ಬೀಜಗಳನ್ನು ಮೆಲ್ಲುವುದು ಆಗದಿದ್ದರೆ, ಇದರ ತಾಜಾ ರಸವನ್ನೂ ಕುಡಿಯಬಹುದು.

ನೀರು, ನಿದ್ದೆ

ದಿನಕ್ಕೆ ಎಂಟು ತಾಸು ನಿದ್ದೆ ಮತ್ತು ಎಂಟು ಗ್ಲಾಸ್‌ ನೀರು- ಇದನ್ನು ದಿನದ ಮಂತ್ರವಾಗಿಸಿಕೊಳ್ಳಿ. ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯದಿದ್ದರೆ ಕೆಂಪುರಕ್ತಕಣಗಳ ಉತ್ಪಾದನೆಯಲ್ಲಿ ತೊಡಕಾಗುತ್ತದೆ. ಇದು ಹಿಮೋಗ್ಲೋಬಿನ್‌ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ನೀರಿನ ಕೊರತೆಯಾದರೆ ರಕ್ತದ ಸಾಂದ್ರತೆ ಮತ್ತು ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಈ ಬಗ್ಗೆ ಗಮನ ಬೇಕು.

ಇವು ಬೇಡ

ಕೆಲವು ಆಹಾರಗಳು ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತವೆ. ಉದಾ, ಕಾಫಿ, ಚಹಾದಂಥ ಕೆಫೇನ್‌ಯುಕ್ತ ಪೇಯಗಳು, ಕ್ಯಾಲ್ಶಿಯಂ ಸಾಂದ್ರವಾಗಿರುವ ಆಹಾರಗಳು, ನಾರುಭರಿತ ತಿನಿಸುಗಳನ್ನು ಊಟದ ಸಮಯದಲ್ಲಿ ದೂರ ಮಾಡಿ. ಇದರಿಂದ ಕಬ್ಬಿಣದಂಶ ಚೆನ್ನಾಗಿ ಹೀರಲ್ಪಡುತ್ತದೆ.

ಇದನ್ನೂ ಓದಿ: World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

ದೂರ ಮಾಡಿ

ಆಲ್ಕೋಹಾಲ್‌ ಮತ್ತು ಜಡ ಜೀವನಗಳೆರಡೂ ಹಿಮೋಗ್ಲೋಬಿನ್ನ ಶತ್ರುಗಳು. ಆಲ್ಕೋಹಾಲ್‌ ಸೇವನೆಯಿಂದ ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳುವುದಕ್ಕೆ ಅಡಚಣೆ ಉಂಟಾಗುತ್ತದೆ. ಜಡ ಜೀವನವು ರಕ್ತ ಪರಿಚಲನೆಯ ಶತ್ರು. ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ಕೆಂಪು ರಕ್ತಕಣಗಳ ಉತ್ಪಾದನೆ ಚೆನ್ನಾಗಿ ಆಗಿ, ರಕ್ತದ ಪರಿಚಲನೆಯೂ ಸರಾಗ ಇರುತ್ತದೆ.

Continue Reading
Advertisement
Dina Bhavishya
ಭವಿಷ್ಯ24 mins ago

Dina Bhavishya : ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಇರಲಿ ಎಚ್ಚರಿಕೆ

NED vs RSA
T20 ವಿಶ್ವಕಪ್6 hours ago

NED vs RSA: ಹೋರಾಡಿ ಸೋತ ನೆದರ್ಲೆಂಡ್ಸ್​; ಹರಿಣ ಪಡೆಗೆ ಪ್ರಯಾಸದ ಗೆಲುವು

Karnataka police
ಕರ್ನಾಟಕ7 hours ago

Davanagere News: ದಾವಣಗೆರೆಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ; ನಾಲ್ವರ ಬಂಧನ

French Open Final 2024
ಪ್ರಮುಖ ಸುದ್ದಿ8 hours ago

French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

Govt Employees
ಕರ್ನಾಟಕ8 hours ago

Govt Employees: ಪ್ರತಿ ಸೋಮವಾರ ಕೇಂದ್ರ ಕಚೇರಿಗಳಿಗೆ ಅಧಿಕಾರಿ, ನೌಕರರ ಹಾಜರು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Kisan Samman Nidhi
ಪ್ರಮುಖ ಸುದ್ದಿ8 hours ago

Kisan Samman Nidhi: ರೈತರಿಗೆ ಗುಡ್‌ ನ್ಯೂಸ್;‌ ಕಿಸಾನ್‌ ಸಮ್ಮಾನ್‌ ನಿಧಿ 2 ಸಾವಿರ ರೂ. ಹೆಚ್ಚಳ, ಇನ್ನು ಸಿಗೋದು 8 ಸಾವಿರ ರೂ.!

IND vs PAK
ಕ್ರೀಡೆ8 hours ago

IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯದ ಹವಾಮಾನ ವರದಿ, ಆಡುವ ಬಳಗ ಹೇಗಿದೆ?

World Environment Day Celebration at Kittur Rani Chennamma Residential School
ದಾವಣಗೆರೆ9 hours ago

Davanagere News: ತರಗನಹಳ್ಳಿಯ ಚನ್ನಮ್ಮ ವಸತಿ ಶಾಲೆಯಲ್ಲಿ ಪರಿಸರ ದಿನಾಚರಣೆ

Physical Abuse
ಕರ್ನಾಟಕ9 hours ago

Physical Abuse: 34 ವರ್ಷದ ವಿಚ್ಛೇದಿತ ಮಹಿಳೆ ಜತೆ 25ರ ಯುವಕನ ಲವ್ವಿ ಡವ್ವಿ; ಗರ್ಭಿಣಿ ಮಾಡಿ ಪರಾರಿ!

World Environment Day Celebration at Kamaruru Government higher Primary School
ಶಿವಮೊಗ್ಗ9 hours ago

World Environment Day: ಚಂದ್ರಗುತ್ತಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌