Janhvi Kapoor | ನೂಲಿನಂತೆ ಸೀರೆ! ಶ್ರೀದೇವಿ ಮಗಳು ಜಾಹ್ನವಿಯ ಬ್ಯೂಟಿ ಕಹಾನಿ - Vistara News

ಲೈಫ್‌ಸ್ಟೈಲ್

Janhvi Kapoor | ನೂಲಿನಂತೆ ಸೀರೆ! ಶ್ರೀದೇವಿ ಮಗಳು ಜಾಹ್ನವಿಯ ಬ್ಯೂಟಿ ಕಹಾನಿ

ಹುಟ್ಟು ಸೌಂದರ್ಯವನ್ನು ಜಾಹ್ನವಿ ಪಡೆದಿರುವುದು ನಿಜವೇ ಆದರೂ, ತನ್ನ ಸೌಂದರ್ಯದ ಕೆಲವು ಸೀಕ್ರೆಟ್‌ಗಳನ್ನು ಜಾಹ್ನವಿ ತಮ್ಮ ಬಾಲ್ಯದ ದಿನಗಳಿಂದಲೂ ನೆನಪಿಸಿಕೊಳ್ಳುತ್ತಾರೆ. ಅದರಲ್ಲಿ ಅಮ್ಮ ಶ್ರೀದೇವಿಯ ಕೊಡುಗೆಯೂ ಇದೆ.

VISTARANEWS.COM


on

janhvi kapoor
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಲಿವುಡ್‌ನಲ್ಲಿ ಸ್ಟಾರ್‌ ಕಿಡ್‌ಗಳು ಹೊಸತೇನಲ್ಲ. ಬಹಳಷ್ಟು ಮಂದಿ ತಮ್ಮ ಅಪ್ಪ ಅಮ್ಮಂದಿರ ಹಾದಿಯನ್ನೇ ಹಿಡಿದು ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟವರು ಅನೇಕ. ಕೆಲವರಿಗೆ ಯಶಸ್ಸೂ ಸಿಕ್ಕಿದೆ. ಅಂತಹ ʻಸ್ಟಾರ್‌ ಕಿಡ್‌ʼಗಳ ಪೈಕಿ ಸದಾ ಟ್ರೆಂಡ್‌ನಲ್ಲಿರುವ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಲೇ ಇರುವ ಹೊಸಬರ ಪೈಕಿ ಜಾಹ್ನವಿ ಕಪೂರ್‌ ಕೂಡಾ ಒಬ್ಬರು. ಒಂದು ಕಾಲದಲ್ಲಿ ಮನೆಮಾತಾಗಿದ್ದ ನಟಿ ಶ್ರೀದೇವಿಯ ಮಗಳು ಜಾಹ್ನವಿ ಇಂದು ತನ್ನ ಹೊಳೆಯುವ ಗ್ಲಾಸ್‌ ಸ್ಕಿನ್‌, ಸದಾ ಗ್ಲಾಮರಸ್‌ ಲುಕ್‌ ಹಾಗೂ ಸಹಜವಾದ ಕೂದಲರಾಶಿಯಿಂದ ಈಗಿನ ಯುವಜನತೆಯ ಮನಸ್ಸಿಗೆ ಲಗ್ಗೆಯಿಟ್ಟಿದ್ದಾರೆ. ಯಾವಾಗಲೂ ಹೊಸ ಬಗೆಯ ಫ್ಯಾಷನ್‌ಗಳಿಂದಲೂ, ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಟಿವ್‌ ಆಗಿರುವ ಮೂಲಕ ಟ್ರೆಂಡ್‌ ಸೆಟ್ಟರ್‌ ಆಗಿಯೂ ಮಿಂಚುತ್ತಿರುವುದು ಸತ್ಯವೇ.

ಹುಟ್ಟು ಸೌಂದರ್ಯವನ್ನು ಜಾಹ್ನವಿ ಪಡೆದಿರುವುದು ನಿಜವೇ ಆದರೂ, ತನ್ನ ಸೌಂದರ್ಯದ ಕೆಲವು ಸೀಕ್ರೆಟ್‌ಗಳನ್ನು ಜಾಹ್ನವಿ ತಮ್ಮ ಬಾಲ್ಯದ ದಿನಗಳಿಂದಲೂ ನೆನಪಿಸಿಕೊಳ್ಳುತ್ತಾರೆ. ಅಮ್ಮ ಶ್ರೀದೇವಿ ಮಕ್ಕಳ ಚರ್ಮ ಹಾಗೂ ಕೂದಲ ಸೌಂದರ್ಯಕ್ಕಾಗಿ ಏನೆಲ್ಲ ಮಾಡುತ್ತಿದ್ದರು ಎಂಬುದನ್ನು ಆಕೆ ಎಳೆಎಳೆಯಾಗಿ ಬಿಚ್ಚಿಡುತ್ತಾರೆ. ಮನೆಯಲ್ಲಿಯೇ ಇರುವ ವಸ್ತುಗಳನ್ನು ಸೌಂದರ್ಯಕ್ಕೆ ಬಳಸುವ ಕಲೆ ತಿಳಿದಿದ್ದು ಅಮ್ಮನಿಂದಲೇ ಎಂದು ಆಕೆ ಹೇಳುತ್ತಾರೆ.

ನಾವು ಯಾವಾಗಲೂ ಬಾಯಿಗೆ ರುಚಿಯಿರುವ ಹೊಟ್ಟೆ ತುಂಬಬಹುದಾದ ಆಹಾರಗಳನ್ನೇ ತಿನ್ನುತ್ತೇವೆ. ಕೆಲವೊಮ್ಮೆ ಸೌಂದರ್ಯಕ್ಕೆ ಬೇಕಾದನ್ನೂ ಮಾಡುವುದನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಜಾಹ್ನವಿ. ಆಕೆ ಹೇಳುವಂತೆ, ಮನೆಯಲ್ಲಿ ಅಮ್ಮ ನಾವೆಲ್ಲ ಸಣ್ಣವರಿದ್ದಾಗ ಸಾಕಷ್ಟು ತಿನ್ನುವ ವಸ್ತುಗಳನ್ನು ಮುಖಕ್ಕೆ, ಕೂದಲಿಗೆ ಹಚ್ಚುತ್ತಿದ್ದರು. ನಮಗೂ ಹಚ್ಚುತ್ತಿದ್ದರು. ಕೂದಲಿಗೆ ಬೀಯರ್‌, ಮೊಟ್ಟೆ ಹಾಗೂ ಮೆಂತ್ಯ ಕಾಳುಗಳ ಪೇಸ್ಟ್‌ ಇವೆಲ್ಲ ಹಚ್ಚುತ್ತಿದ್ದರು ಎನ್ನುತ್ತಾರೆ. ಅಮ್ಮ ಬೆಳಗ್ಗೆ ತಿನ್ನಲು ಕೊಟ್ಟ ಹಣ್ಣು ಹಂಪಲುಗಳಲ್ಲಿ ಉಳಿದದ್ದನೆಲ್ಲ ಮುಖಕ್ಕೆ ಹಚ್ಚಲು ಬಳಸುತ್ತಿದ್ದರಂತೆ. ಬಾಳೆಹಣ್ಣು, ಮಾವಿನಹಣ್ಣು, ಸ್ಟ್ರಾಬೆರಿ ಹೀಗೆ ಎಲ್ಲವೂ ಮಕ್ಕಳ ಮುಖಕ್ಕೂ ಹಚ್ಚುತ್ತಿದ್ದರಂತೆ.

ಇದನ್ನೂ ಓದಿ | Jahnavi Kapoor | ನೀಲಿ ಬಣ್ಣದ ಉಡುಪಿನಲ್ಲಿ ಜಾನ್ವಿ ಕಪೂರ್ ಆಕರ್ಷಕ ಫೋಟೊಗಳು

ಶ್ರೀದೇವಿ ಅವರು, ತನ್ನ ಮಕ್ಕಳಿಬ್ಬರಿಗೂ ಪ್ರತಿ ಮೂರು ದಿನಕ್ಕೊಮ್ಮೆ ತಲೆಗೆ ಎಣ್ಣೆ ಮಸಾಜ್‌ ಮಾಡುತ್ತಿದ್ದರಂತೆ. ಹಾಗಾಗಿ ಜಾಹ್ನವಿಗೆ ಎಣ್ಣೆಯೂ ಬಹಳ ಮುಖ್ಯ. ಆಕೆ ಹೇಳುವಂತೆ, ಇದೇ ಅಭ್ಯಾಸ ಅಮ್ಮನಿಂದ ನನಗೂ ದಾಟಿಕೊಂಡು ಬಂದಿದೆ. ಕೂದಲಿನ ಆರೈಕೆಗೂ ಬಹಳ ಗಮನ ಕೊಡಬೇಕು. ಮೆಂತ್ಯದ ಪ್ಯಾಕ್‌ ಹಚ್ಚುವ ಮೂಲಕ ತಲೆಹೊಟ್ಟು, ಕೂದಲುದುರುವುದು ಮುಂತಾದ ಸಮಸ್ಯೆಗಳಿಂದ ಪರಿಹಾರ ಕಾಣಬಹುದು. ಬೀಯರ್‌ ಕೂದಲನ್ನು ನುಣುಪಾಯಿಯೂ ಹೊಳೆಯುವಂತೆಯೂ ಮಾಡುತ್ತದೆ. ಮೊಟ್ಟೆಯ ಬಳಕೆಯಿಂದಲೂ ಕೂದಲು ನುಣುಪಾಗಿ ಹೊಳೆಯುವುದಲ್ಲದೆ ಕೂದಲನ್ನು ಗಟ್ಟಿಮುಟ್ಟಾಗಿಸುತ್ತದೆ ಎನ್ನುತ್ತಾರೆ. ಅಷ್ಟೇ ಅಲ್ಲ, ಕೂದಲ ಆರೈಕೆಗೆ ಅಮ್ಮ ಮನೆಯಲ್ಲೇ ಎಣ್ಣೆಯನ್ನೂ ಮಾಡಿಡುತ್ತಿದ್ದಳು. ನೆಲ್ಲಿಕಾಯಿ, ಒಣ ಹೂವುಗಳನ್ನು ಹಾಕಿ ಮಾಡಿದ ಎಣ್ಣೆಯಿಂದಲೇ ತಮಗೆ ತಲೆಗೆ ಮಸಾಜ್‌ ಮಾಡುತ್ತಿದ್ದಳು ಎಂದು ನೆನಪಿಸಿಕೊಳ್ಳುತ್ತಾರೆ ಜಾಹ್ನವಿ.

ಹಾಗಾದರೆ ಜಾಹ್ನವಿಯ ಸೌಂದರ್ಯದ ಕುರಿಯಾದ ದಿನಚರಿ ಏನು ಎಂದು ಕೇಳಿದರೆ ಆಕೆ, ʻಅಂಥದ್ದೇವಿಲ್ಲ, ಬಹಳ ಸರಳವಾದ ದಿನಚರಿ ನನ್ನದು. ನಾನು ಹೆಚ್ಚು ಪ್ರಾಡಕ್ಟ್‌ಗಳನ್ನು ಬಳಸುವುದಿಲ್ಲ. ನನ್ನ ವೃತ್ತಿ ನಟನೆಯಾದ್ದರಿಂದ ಸದಾ ಚರ್ಮ ಕೂದಲುಗಳ ಮೇಲೆ ಸಾಕಷ್ಟು ಬಿಸಿಲು, ಹಾಗೂ ರಾಸಾಯನಿಕಗಳ ಪರಿಣಾಮ ಬೀಳುವುದರಿಂದ ಮನೆಯಲ್ಲಿದ್ದಷ್ಟೂ ಸಮಯ ನಾನು ಸರಳವಾಗಿ ಸಹಜವಾಗಿ ಇರಲು ಬಯಸುತ್ತೇನೆ. ಹೆಚ್ಚು ನೀರು ಕುಡಿಯುತ್ತೇನೆ. ಬೆಳಗ್ಗೆ ಎದ್ದ ಕೂಡಲೇ ಮುಖ ತೊಳೆದುಕೊಂಡು ಸೀರಂ ಹಚ್ಚಿ ಕೊಳ್ಳುತ್ತೇವೆ. ಶೂಟಿಂಗ್‌ನಲ್ಲಿದ್ದ ಸಂದರ್ಭ ಆಯಿಲ್‌ ಕಂಟ್ರೋಲ್‌ ಅಷ್ಟೇ ಮುಖ್ಯ ಟಾಸ್ಕ್‌. ಹೆಚ್ಚು ಕೆಲಸದ ನಿಮಿತ್ತ ಹೊರಗೇ ಇರಬೇಕಾಗುವುದರಿಂದ ಏನೂ ಮಾಡಿಕೊಳ್ಳಲು ಸಮಯ ಸಾಲುವುದಿಲ್ಲ. ಆದರೆ, ಮನೆಯಲ್ಲಿದ್ದಾಗ ಆದಷ್ಟೂ ಮನೆಮದ್ದುಗಳನ್ನೇ ಟ್ರೈ ಮಾಡುತ್ತೇನೆ. ಹೇರ್‌ ಪ್ಯಾಕ್‌ ಮಾಡಿಕೊಂಡು ತಲೆಗೆ ಹಚ್ಚಿ ಕೂರುತ್ತೇನೆ. ಅದು ನನಗಿಷ್ಟʼ ಎನ್ನುತ್ತಾರೆ ಜಾಹ್ನವಿ.

ಇದನ್ನೂ ಓದಿ | Wedding Season Trend: ಮದುಮಗಳ ಸೌಂದರ್ಯಕ್ಕೂ ಬಂತು ಬ್ರೈಡಲ್‌ ಪ್ಯಾಕೇಜ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

ICW 2024: ಮುಂಬರುವ ವೆಡ್ಡಿಂಗ್‌ ಸೀಸನ್‌ ಮೆನ್ಸ್ ವೇರ್‌ ಅನಾವರಣಗೊಳಿಸಿದ ಇಂಡಿಯಾ ಕೌಚರ್‌ ವೀಕ್‌ 2024

ICW 2024: ದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಕೌಚರ್‌ ವೀಕ್‌ನ 3ನೇ ದಿನದಂದು ಮುಂಬರುವ ವೆಡ್ಡಿಂಗ್‌ ಸೀಸನ್‌ಗೆ ಪೂರಕವಾಗುವಂತಹ ನಾನಾ ವೆರೈಟಿ ಮೆನ್ಸ್ ವೇರ್‌ಗಳು ಅನಾವರಣಗೊಂಡವು. ನಟ ಆದಿತ್ಯಾ ರಾಯ್‌ ಕಪೂರ್‌ ಹಾಗೂ ರಾಹುಲ್‌ ಖನ್ನಾ ಶೋ ಸ್ಟಾಪರ್‌ಗಳಾಗಿ ಕಾಣಿಸಿಕೊಂಡರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

ICW 2024
ಚಿತ್ರಗಳು: ಇಂಡಿಯಾ ಕೌಚರ್‌ 2024 ಯ 3 ನೇ ದಿನ ಹೈಲೈಟಾದ ಮೆನ್ಸ್ ವೆಡ್ಡಿಂಗ್‌ ವೇರ್ಸ್, ಚಿತ್ರಕೃಪೆ: FDCI official
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಡಿಯಾ ಕೌಚರ್‌ ವೀಕ್‌ನ 3 ನೇ ದಿನದಂದು ಯುವತಿಯರ ಲಕ್ಷುರಿ ಡಿಸೈನರ್‌ವೇರ್‌ಗಳ ನಡುವೆಯೇ ಗ್ರ್ಯಾಂಡ್‌ ಮೆನ್ಸ್ ವೇರ್‌ಗಳು ಫ್ಯಾಷನ್‌ ಪ್ರಿಯರ ಮನಗೆದ್ದವು.
ಇದುವರೆಗೂ ಕೇವಲ ಯುವತಿಯರ ಹಾಗೂ ಬ್ರೈಡಲ್‌ ಲುಕ್‌ ನೀಡುವಂತಹ ಹೆವಿ ಹಾಗೂ ಜಗಮಗಿಸುವ ಡಿಸೈನರ್‌ವೇರ್‌ಗಳು ಎಲ್ಲರ ಮನಸೂರೆಗೊಂಡಿದ್ದವು. ಆದರೆ, ಮೂರನೇ ದಿನದಂದು ನಡೆದ ಶೋನಲ್ಲಿ ಇವೆಲ್ಲಕ್ಕಿಂತ ಹೆಚ್ಚಾಗಿ, ಮುಂಬರುವ ವೆಡ್ಡಿಂಗ್‌ ಸೀಸನ್‌ಗೆ ಪೂರಕವಾಗುವಂತಹ ನಾನಾ ವೆರೈಟಿ ಮೆನ್ಸ್ ವೇರ್‌ ಡಿಸೈನರ್‌ವೇರ್‌ಗಳು ಅನಾವರಣಗೊಂಡವು. ಪುರುಷರೂ ಹೀಗೆಲ್ಲಾ ಕಾಣಿಸಿಕೊಳ್ಳಬಹುದೇ ! ಎಂಬ ಇಮ್ಯಾಜೀನೇಷನ್‌ಗೆ ಪೂರಕವಾಗವಂತಹ ಡಿಸೈನರ್‌ವೇರ್‌ಗಳೂ ಕೂಡ ಈ ಫ್ಯಾಷನ್‌ ಶೋನಲ್ಲಿ (ICW 2024) ಪ್ರದರ್ಶನಗೊಂಡವು.

ICW 2024

ಮಿರ ಮಿರ ಮಿನುಗಿದ ಆದಿತ್ಯಾ ರಾಯ್‌ ಕಪೂರ್‌

ಸೆಲೆಬ್ರೆಟಿ ಡಿಸೈನರ್‌ ಕುನಾಲ್‌ ರಾವಲ್‌ ಅವರ ಮೆನ್ಸ್ ಕಲೆಕ್ಷನ್‌ನ ನೆವ್ವಿ ಬ್ಲ್ಯೂ ಎಂಬಾಲಿಶ್ಡ್ ಸಿಕ್ವೀನ್ಸ್‌ನಿಂದ ಮಿರ ಮಿರ ಮಿನುಗುತ್ತಿದ್ದ ಶೆರ್ವಾನಿ ಹಾಗೂ ದೊಗಲೆ ಧೋತಿಯಲ್ಲಿ ಬಾಲಿವುಡ್‌ ನಟ ಆದಿತ್ಯಾ ರಾಯ್‌ ಕಪೂರ್‌ ಆಕರ್ಷಕವಾಗಿ ಕಾಣಿಸಿಕೊಂಡರು.

ICW 2024

ಮಲೈಕಾಗಿಂತ ಹೆಚ್ಚು ಹೈಲೈಟಾದ ನಟ ರಾಹುಲ್‌ ಖನ್ನಾ

ಡಿಸೈನರ್‌ ಸಿದ್ಧಾರ್ಥ್‌ ಟೈಟ್ಲರ್‌ ಅವರ ಬ್ಲ್ಯಾಕ್‌ ಕಟೌಟ್‌ ಡಿಸೈನರ್‌ ಬ್ಲೌಸ್‌ –ಲೆಹೆಂಗಾ ಧರಿಸಿ ನಟಿ ಮಲೈಕಾ ಅರೋರಾ ಕಾಣಿಸಿಕೊಂಡರು. ಇದೇ ಡಿಸೈನರ್‌ನ ವಿಶೇಷ ಮೆನ್ಸ್‌ವೇರ್‌ ಕಲೆಕ್ಷನ್‌ ಭಾಗವಾಗಿದ್ದ ಬ್ಲ್ಯಾಕ್‌ ಸಾಲಿಡ್‌ ಶೇಡ್‌ನ ಜಿಪ್‌ ಇರುವಂತಹ ಬಾಟಮ್‌ ಗೋಲ್ಡ್ ಎಂಬ್ರಾಯ್ಡರಿ ಶೆರ್ವಾನಿಯಲ್ಲಿ ನಟ ರಾಹುಲ್‌ ಖನ್ನಾ ರ್ಯಾಂಪ್‌ ವಾಕ್‌ ಮಾಡಿದರು.

ICW 2024

ಪುರುಷರ ಮನ ಗೆದ್ದ ಜಿಪ್‌ ಶೆರ್ವಾನಿ

ಬಟನ್‌ ಇಲ್ಲದೆಯೂ ಶೆರ್ವಾನಿ ಡಿಸೈನ್‌ ಅತ್ಯಾಕರ್ಷಕವಾಗಿ ಕಾಣಿಸುತ್ತದೆ ಎಂಬುದು ರಾಹುಲ್‌ ಖನ್ನಾ ಅವರು ಧರಿಸಿದ ವಿನೂತನ ಕಾನ್ಸೆಪ್ಟ್‌ನ ಶೆರ್ವಾನಿ ವಿನ್ಯಾಸ ಪ್ರೂವ್‌ ಮಾಡಿತು. ಸಿಂಪಲ್‌ ಹಾಗೂ ಎಲಿಗೆಂಟ್‌ ಲುಕ್‌ ಬಯಸುವ ಪುರುಷರು ಇವುಗಳನ್ನು ಧರಿಸಿ ಸ್ಮಾರ್ಟಾಗಿ ಕಾಣಿಸಬಹುದು ಎಂಬುದನ್ನು ತೋರಿಸಿಕೊಟ್ಟಿತು.

ಇದನ್ನೂ ಓದಿ: Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

ಲೇಡಿ ಮಾಡೆಲ್‌ಗಳ ಮೆನ್ಸ್ ವೇರ್‌

ಇನ್ನು, ಈ ದಿನದ ಫ್ಯಾಷನ್‌ ಇವೆಂಟ್‌ನಲ್ಲಿ ಕೇವಲ ಮೆನ್ಸ್ ಮಾಡೆಲ್‌ಗಳು ಮಾತ್ರವಲ್ಲ, ಕೆಲವು ಹುಡುಗಿಯರು ಕೂಡ ಮೆನ್ಸ್ವೇರ್‌ ಧರಿಸಿ, ವಾಕ್‌ ಮಾಡಿದ್ದು, ಹೊಸತನ ಮೂಡಿಸಿತು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಆರೋಗ್ಯ

Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

Ways to Prevent Gray Hair: ಮೂವತ್ತು ವರ್ಷವಾಗುವ ಮೊದಲೇ ಅಲ್ಲಲ್ಲಿ ಇಣುಕುವ ಬಿಳಿಕೂದಲು, ಮೂವತ್ತು ದಾಟುತ್ತಿದ್ದಂತೆಯೇ ದುಪ್ಪಟ್ಟಾಗುತ್ತದೆ. ನಾಲ್ಕೈದು ವರ್ಷಗಳೊಳಗಾಗಿ, ತಲೆಯ ಅರ್ಧಕ್ಕಿಂತ ಹೆಚ್ಚು ಕೂದಲು ಬೆಳ್ಳಗಾಗಿರುತ್ತದೆ. ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್‌ ಎಂದು ಹೇಳಿಕೊಂಡು ಟ್ರೆಂಡ್‌ ಜೊತೆ ಫ್ಯಾಷನ್‌ ಹೆಸರಿನಲ್ಲಿ ಸುತ್ತಾಡಿದರೂ, ಆತ್ಮವಿಶ್ವಾಸಕ್ಕೆ ಅಲ್ಲಿ ಸಣ್ಣ ಪೆಟ್ಟು ಬಿದ್ದಿರುತ್ತದೆ. ಇದ್ಕಕೇನು ಪರಿಹಾರ? ಈ ಲೇಖನ ಓದಿ.

VISTARANEWS.COM


on

The woman shows gray hair on her head. Hair with fragments of gray hair, hair roots requiring dyeing
Koo

ಸದ್ಯದ ಯುವಜನರನ್ನು ಕಾಡುವ ಬಹುದೊಡ್ಡ ಸಮಸ್ಯೆ ಎಂದರೆ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಹಣ್ಣಾಗುವುದು. ಮೂವತ್ತು ವರ್ಷವಾಗುವ ಮೊದಲೇ ಅಲ್ಲಲ್ಲಿ ಇಣುಕುವ ಬಿಳಿಕೂದಲು, ಮೂವತ್ತು ದಾಟುತ್ತಿದ್ದಂತೆಯೇ ದುಪ್ಪಟ್ಟಾಗುತ್ತದೆ. ನಾಲ್ಕೈದು ವರ್ಷಗಳೊಳಗಾಗಿ, ತಲೆಯ ಅರ್ಧಕ್ಕಿಂತ ಹೆಚ್ಚು ಕೂದಲು ಬೆಳ್ಳಗಾಗಿರುತ್ತದೆ. ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್‌ ಎಂದು ಹೇಳಿಕೊಂಡು ಟ್ರೆಂಡ್‌ ಜೊತೆ ಫ್ಯಾಷನ್‌ ಹೆಸರಿನಲ್ಲಿ ಸುತ್ತಾಡಿದರೂ, ಆತ್ಮವಿಶ್ವಾಸಕ್ಕೆ ಅಲ್ಲಿ ಸಣ್ಣ ಪೆಟ್ಟು ಬಿದ್ದಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಬಣ್ಣಗಳ ಸಹಾಯದಿಂದ ಕಾಲಕ್ಕೆ ತಕ್ಕಂತೆ ಕೂದಲ ಶೃಂಗಾರ ಮಾಡಿಸಿಕೊಂಡರೂ, ಕೃತಕ ರಸಾಯನಿಕಗಳನ್ನು ಪದೇ ಪದೇ ಕೂದಲಿಗೆ ಸೋಕಿಸಿಕೊಳ್ಲೂವ ಕಾರಣದಿಂದಲೋ, ಆಗಾಗ ಪಾರ್ಲರಿಗೆ ಎಡತಾಕಿ ಕೂದಲ ಮೇಲೆ ವಿಪರೀತ ರಾಸಾಯನಿಕಗಳ ಬಳಕೆಯಿಂದಲೋ, ಕೂದಲು (Ways to Prevent Gray Hair) ಇನ್ನಷ್ಟು ಹದಗೆಡುತ್ತದೆ. ಸಮಸ್ಯೆ ವಿಕೋಪಕ್ಕೆ ಹೋಗುತ್ತದೆ.

Ways to Prevent Gray Hair

ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ

ಪ್ರಕೃತಿಯಲ್ಲಿ ನಮ್ಮ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಆದರೆ, ಅವನ್ನು ನಿಯಮಿತವಾಗಿ ಬಳಸುವ ತಾಳ್ಮೆ ನಮಗೆ ಇರಬೇಕು ಅಷ್ಟೇ. ಜೊತೆಗೆ ಪ್ರಕೃತಿಗೆ ವಿರುದ್ಧವಾಗಿ ಹೋಗದೆ, ಪ್ರಕೃತಿದತ್ತ ವಿಧಾನಗಳನ್ನು ಅಪ್ಪಿಕೊಂಡರೆ ಸಮಸ್ಯೆಗಳು, ಅಡ್ಡ ಪರಿಣಾಮಗಳು ಇರದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದರಿಂದ ಪಾರಾಗಬಹುದು ಎಂಬುದನ್ನು ನೋಡೋಣ.

The vitamin C content in it strengthens the immune system Gooseberry Benefits

ನೆಲ್ಲಿಕಾಯಿ

ನೆಲ್ಲಿಕಾಯಿಯ ಆರೋಗ್ಯದ ಲಾಭಗಳು ನಮಗೆಲ್ಲರಿಗೂ ಗೊತ್ತು. ಹೆಚ್ಚು ಸಿ ವಿಟಮಿನ್‌ ಇರುವ ಆಹಾರಗಳ ಪೈಕಿ ನೆಲ್ಲಿಕಾಯಿಗೆ ಅಗ್ರಸ್ಥಾನ. ನೆಲ್ಲಿಕಾಯಿಯ ಸೇವನೆಯಿಂದ ನಮ್ಮ ಕೂದಲ ಆರೋಗ್ಯಕ್ಕೂ ಲಾಭಗಳಿವೆ. ಕೂದಲ ನೈಸರ್ಗಿಕ ಪಿಗ್‌ಮೆಂಟ್‌ಗಳನ್ನು ಹಾಗೆಯೇ ಇರಿಸಲು ಸಹಾಯ ಮಾಡುವ ಆಹಾರವಿದು. ಬೆಳಗ್ಗೆ ನಿತ್ಯವೂ 15 ಎಂಎಲ್‌ನಷ್ಟು ನೆಲ್ಲಿಕಾಯಿ ಜ್ಯೂಸ್‌ ಕುಡಿಯುವುದರಿಂದ ಕೂದಲ ಆರೋಗ್ಯದಲ್ಲಿ ಗಣನೀಯ ಲಾಭ ಕಾಣಬಹುದು.

ಕಾಲೊಂಜಿ ಬೀಜಗಳು

ಕಪ್ಪನೆಯ ಕಾಲೊಂಜಿ ಬೀಜಗಳಿಂದ ಕೂದಲ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಇದು ಕೂದಲ ಬುಡದಲ್ಲಿ ರಕ್ತ ಪರಿಚಲನೆಯನ್ನು ಉದ್ದೀಪಿಸುತ್ತದೆ. ಅಷ್ಟೇ ಅಲ್ಲ, ಕೂದಲು ಬೆಳ್ಳಗಾಗುವುದನ್ನೂ ಮುಂದೂಡುತ್ತದೆ. ವಾರಕ್ಕೆರಡು ಬಾರಿ ಕಾಲೊಂಜಿ ಬೀಜಗಳ ಮಾಸ್ಕ್‌ ಮಾಡಿ ಕೂದಲಿಗೆ ಹಚ್ಚುವ ಮೂಲಕ ಉತ್ತಮ ಲಾಭ ಪಡೆಯಬಹುದು.

Neem Leaves Medicinal Leaves

ಕರಿಬೇವು

ಕರಿಬೇವು ಕೂದಲಲ್ಲಿ ಮೆಲನಿನ್‌ ಉತ್ಪಾದನೆಯನ್ನು ಪ್ರಚೋದಿಸುವ ಕಾರಣ ಕೂದಲು ಕಪ್ಪಾಗಿಡುವಲ್ಲಿ ಸಹಾಯ ಮಾಡುತ್ತದೆ. ಬಾಲನೆರೆಯಂತಹ ಸಮಸ್ಯೆಯಿದ್ದರೆ ಖಂಡಿತವಾಗಿಯೂ ಕರಿಬೇವು ರಾಮಬಾಣ. ಇದು ಬಹುಬೇಗನೆ ಕೂದಲು ಬೆಳ್ಳಗಾಗುವುದನ್ನೂ ತಡೆಯುತ್ತದೆ. ಇದರ ಸೇವನೆ, ಕರಿಬೇವಿನ ಎಣ್ಣೆಯಿಂದಲೂ ಲಾಭ ಪಡೆಯಬಹುದು. ನಿತ್ಯವೂ ಮೂರ್ನಾಲ್ಕು ಕರಿಬೇವನ್ನು ಹಾಗೆಯೇ ಸೇಔಇಸುವ ಮೂಲಕವೂ ಲಾಭ ಪಡೆಯಬಹುದು.

ಗೋಧಿಹುಲ್ಲು

ಕೂದಲಿಗೆ ಗೋಧಿ ಹುಲ್ಲೂ ಅತ್ಯಂತ ಒಳ್ಳೆಯದು. ಇದು ಕೂದಲ ಬುಡಕ್ಕೆ ಪೋಷಣೆ ನೀಡುತ್ತದೆ. ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತದೆ. ಬೆಳಗ್ಗೆದ್ದ ಕೂಡಲೇ ಗೋಧಿಹುಲ್ಲಿನ ಜ್ಯೂಸ್‌ ಕುಡಿಯುವ ಮೂಲಕ ಇದರ ಲಾಭ ಪಡೆಯಬಹುದು.

Black Sesame Seeds Black Foods

ಕರಿಎಳ್ಳು

ಕೂದಲ ಆರೋಗ್ಯಕ್ಕೆ ಕರಿಎಳ್ಳು ಉತ್ತಮ ಆಹಾರ. ಎಳ್ಳಿನ ಸೇವನೆಯಿಂದ ಕೂದಲು ಬೆಳ್ಳಾಗುಗುವುದು ನಿಧಾನವಾಗುತ್ತದೆ. ನಿತ್ಯವೂ ಒಂದು ಚಮಚ ಕರಿಎಳ್ಳು ಸೇವನೆ ಮಾಡುವುದರಿಂದ ಹಾಗೂ ಆಗಾಗ ಎಳ್ಳೆಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್‌ ಮಾಡುವ ಮೂಲಕ ಇದರ ಲಾಭ ಪಡೆಯಬಹುದು.

Continue Reading

ಫ್ಯಾಷನ್

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Paris Olympics 2024: ಪ್ಯಾರಿಸ್‌ ಒಲಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ಕೋಡ್‌ ಸಿದ್ಧಪಡಿಸಿದ್ದ ಡಿಸೈನರ್‌ ತರುಣ್‌ ತಹಿಲಿಯಾನಿಯವರ ವಿನ್ಯಾಸಕ್ಕೆ ಒಂದೆಡೆ ಮೆಚ್ಚುಗೆ ದೊರೆತರೆ, ಮತ್ತೊಂದೆಡೆ ಮಹಿಳೆಯೊಬ್ಬರು ಕಮೆಂಟ್‌ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ. ಯಾಕಾಗಿ ಈ ಟೀಕೆ? ಡ್ರೆಸ್‌ಕೋಡ್‌ ಕಾನ್ಸೆಪ್ಟ್ ಏನಿತ್ತು? ಎಂಬುದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Paris Olympics 2024
ಚಿತ್ರಗಳು: ವೀ ಆರ್‌ ಟೀಮ್‌ ಇಂಡಿಯಾ ಇನ್‌ಸ್ಟಾ ಖಾತೆ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್‌ ಒಲಿಂಪಿಕ್ಸ್ ಕ್ರೀಡಾಪಟುಗಳ (Paris Olympics 2024) ಡ್ರೆಸ್‌ಕೋಡ್‌ ಡಿಸೈನ್‌ ಮಾಡಿದ ಬಾಲಿವುಡ್‌ ಡಿಸೈನರ್‌ ತರುಣ್‌ ತಹಿಲಿಯಾನಿಗೆ ಪ್ರಶಂಸೆಯ ಜೊತೆಜೊತೆಗೆ ತೀವ್ರ ಟೀಕೆಯ ಸುರಿಮಳೆಯೂ ಆಗಿದೆ. ಹೌದು, ಕೆಲವರು ಕ್ರೀಡಾಪಟುಗಳ ತಿರಂಗಾ ಕಾನ್ಸೆಪ್ಟ್ ಹೊಂದಿದ ಡ್ರೆಸ್‌ಕೋಡ್‌ ಆಕರ್ಷಕವಾಗಿದೆ. ರಾಷ್ಟ್ರದ ಸಂಸ್ಕೃತಿ ಬಿಂಬಿಸಿದೆ ಎಂದರೇ, ಇನ್ನು ಕೆಲವರು, ಕಳಪೆ ಡಿಸೈನ್‌ ಹೊಂದಿದೆ ಎಂದೆಲ್ಲಾ ತೀವ್ರವಾಗಿ ಟೀಕಿಸಿದ್ದಾರೆ.

paris olympics 20Paris Olympics 2024
paris olympics 20Paris Olympics 2024

ಡಿಸೈನರ್‌ ತರುಣ್‌ ತಹಿಲಿಯಾನಿ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡ ಅಥ್ಲಿಟ್ಸ್

ಅಂದಹಾಗೆ, ಪ್ಯಾರಿಸ್‌ ಒಲಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ, ಅಥ್ಲೀಟ್ಸ್ ಡ್ರೆಸ್‌ ಕೋಡ್‌ಗಳನ್ನು ಬಾಲಿವುಡ್‌ನ ಖ್ಯಾತ ಡಿಸೈನರ್‌ ತರುಣ್‌ ತಹಿಲಿಯಾನಿ ಡಿಸೈನ್‌ ಮಾಡಿದ್ದು, ಈಗಾಗಲೇ ಈ ಉಡುಪಿನಲ್ಲಿ ಕಾಣಿಸಿಕೊಂಡ ಅಥ್ಲಿಟ್‌ ಫೋಟೋಗಳು ಕೂಡ ಜಗಜ್ಹಾಹಿರಾಗಿವೆ. ಕ್ರೀಡಾಪಟುಗಳು ಕೂಡ ಈ ತಿರಂಗಾ ಕಾನ್ಸೆಪ್ಟ್‌ನ ಔಟ್‌ಫಿಟ್ಸ್ ಧರಿಸಿ ಖುಷಿಖುಷಿಯಾಗಿ ಪೋಸ್‌ ಕೂಡ ನೀಡಿ, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ, ಇವನ್ನು ನೋಡಿದ ಕೆಲವರು ಮಾತ್ರ, ಈ ಡ್ರೆಸ್‌ಕೋಡ್‌ ಕಾನ್ಸೆಪ್ಟ್ ಚೆನ್ನಾಗಿದೆ ಎಂದಿದ್ದಾರೆ, ಮತ್ತೆ ಕೆಲವರು ಕಳಪೆ ಡಿಸೈನ್‌ ಎಂದೆಲ್ಲಾ ಖಾರವಾಗಿ ಕಾಮೆಟ್‌ ಮಾಡಿದ್ದಾರೆ.

ತೀವ್ರವಾಗಿ ಟೀಕೆ ಮಾಡಿದ ಮಹಿಳೆ

ಅದರಲ್ಲೂ ಮಹಿಳೆಯೊಬ್ಬರು, ಹಲೋ ತರುಣ್‌ ತಹಿಲಿಯಾನಿಯವರೇ., ನೀವು ಡಿಸೈನ್‌ ಮಾಡಿರುವ ಸೀರೆ ಮುಂಬಯಿಯ ಸ್ಟ್ರೀಟ್‌ಗಳಲ್ಲಿ, ಕಡಿಮೆ ಬೆಲೆಯ 200 ರೂ.ಗಳ ಸೀರೆಗಳಂತಿವೆ. ಪಾಲಿಸ್ಟರ್‌ ಹಾಗೂ ಇಕ್ಕಟ್‌ ಡಿಸೈನ್‌ಗಳು ತೀರಾ ಸಾಮಾನ್ಯವಾಗಿದೆ. ಇಂತಹ ಡಿಸೈನ್‌ಗಳನ್ನೇನಾದರೂ ನೀವು ಇಂಟರ್ನ್‌ಗಳಿಂದ ಮಾಡಿಸಿದ್ದೀರಾ ಹೇಗೆ? ನಮ್ಮ ರಾಷ್ಟ್ರದ ಸಂಸ್ಕೃತಿ ಬಿಂಬಿಸಲು ಇವು ಸೂಕ್ತವಾಗಿಲ್ಲ! ಎಂಬುದಾಗಿ ಟ್ವೀಟ್‌ ( X ) ಮಾಡುವ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಮಂದಿ ಶೇರ್‌ ಮಾಡುವ ಮೂಲಕ ಹಾಗೂ ಇನ್ನೊಂದಿಷ್ಟು ತೆಗಳುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಡಿಸೈನರ್‌ ತರುಣ್‌ ತಹಿಲಿಯಾನಿ ಅವರು ಮಾತ್ರ, ಈ ಡಿಸೈನ್ಸ್ ನಮ್ಮ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಪೂರಕವಾಗುವಂತೆ ವಿನ್ಯಾಸ ಮಾಡಲಾಗಿದೆ ಎಂದು ಮಾಧ್ಯಮವೊಂದಕ್ಕೆ ಕೂಲಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ರೀಡಾಪಟುಗಳ ಸೀರೆ & ಕುರ್ತಾ ಡಿಸೈನ್ಸ್

ಮಹಿಳಾ ಅಥ್ಲಿಟ್‌ಗಳಿಗೆ ಇಕ್ಕಟ್‌ ಪ್ರಿಂಟ್ಸ್‌ನಿಂದ ಸ್ಪೂರ್ತಿಗೊಂಡ ತಿರಂಗಾ ಶೇಡ್‌ನಲ್ಲಿ ಬಾರ್ಡರ್‌ ವಿನ್ಯಾಸಗೊಳಿಸಲಾಗಿತ್ತು. ನ್ಯಾಚುರಲ್‌ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿದ ಶ್ವೇತ ವರ್ಣದ ಕುರ್ತಾಗೆ ಹೊಂದುವಂತಹ ಬಂಡಿ ಜಾಕೆಟ್‌ನಲ್ಲಿ ಮೆನ್ಸ್ ಟೀಮ್‌ ಕಾಣಿಸಿಕೊಂಡಿತ್ತು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಆರೋಗ್ಯ

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Vaccin for Hiv: ಪ್ರಯೋಗದಲ್ಲಿರುವ ಚುಚ್ಚುಮದ್ದೊಂದು ಎಚ್‌ಐವಿ ಸೋಂಕು ಅಂಟದಂತೆ ತಡೆಯುವಲ್ಲಿ ಶೇ. ನೂರರಷ್ಟು ಸಾಮರ್ಥ್ಯವನ್ನು ತೋರಿಸಿದ್ದು, ಈ ಮಾರಕ ರೋಗವನ್ನು ತಡೆಯುವಲ್ಲಿ ಹೊಸ ಆಶಾಕಿರಣವೊಂದು ಮೂಡಿದೆ. ಎಲ್ಲಿ, ಯಾರ ಮೇಲೆ ನಡೆದ ಪ್ರಯೋಗಗಳಿವು? ಏನೀ ಅಧ್ಯಯನದ ವಿವರಗಳು? ಇಲ್ಲಿದೆ ಮಾಹಿತಿ.

VISTARANEWS.COM


on

Vaccin for Hiv
Koo

ಎಚ್‌ಐವಿ ಸೋಂಕು ಬಾರದಂತೆ (Vaccine for HIV) ತಡೆಯುವಲ್ಲಿ ಹೊಸ ಆಶಾಕಿರಣವೊಂದು ಕಂಡು ಬಂದಿದ್ದು, ವರ್ಷಕ್ಕೆ ಎರಡು ಡೋಸ್‌ನಂತೆ ನೀಡಲಾಗುತ್ತಿರುವ ಚುಚ್ಚುಮದ್ದೊಂದು ಕಿಶೋರಿಯರು ಮತ್ತು ಯುವತಿಯರಲ್ಲಿ ಸೋಂಕುಗಳನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟುವ ಭರವಸೆಯನ್ನು ಮೂಡಿಸಿದೆ. ಈಗಾಗಲೇ ಮೂರನೇ ಹಂತದ ಪ್ರಯೋಗದಲ್ಲಿರುವ ಲೇನಕಾಪವಿರ್‌ (lenacapavir) ಎನ್ನುವ ಚುಚ್ಚುಮದ್ದಿನ ಬಗೆಗೆ ಆಫ್ರಿಕಾದಲ್ಲಿ ನಡೆಸಲಾದ ಪ್ರಯೋಗದ ದತ್ತಾಂಶಗಳು ಈ ಹೊಸ ಭರವಸೆಯನ್ನು ಮೂಡಿಸಿವೆ. ಈ ಚುಚ್ಚುಮದ್ದನ್ನು ಎಚ್‌ಐವಿ ಸೋಂಕು ಇಲ್ಲದಿರುವ ಸುಮಾರು 5000 ಯುವತಿಯರು ಮತ್ತು ಹದಿಹರೆಯದ ಹುಡುಗಿಯರಿಗೆ ನೀಡಲಾಗಿತ್ತು. ಈ ಅಧ್ಯಯನ ನಡೆಯುತ್ತಿರುವಾಗ ಇವರಾರಿಗೂ ಎಚ್‌ಐವಿ ಸೋಂಕು ಹೊಸದಾಗಿ ಅಂಟಿಲ್ಲ ಎನ್ನುವುದು, ಈ ಸೋಂಕನ್ನು ಶೇ. ನೂರರಷ್ಟು ತಡೆಯಲು ಸಾಧ್ಯವಾಗುವ ಆಸೆಯನ್ನು ಹುಟ್ಟಿಸಿದೆ. ಎಚ್‌ಐವಿ ಸೋಂಕುಗಳನ್ನು ತಡೆಗಟ್ಟಲು ಟ್ರುವಾಡದಂಥ ಮಾತ್ರೆಗಳು ಈಗಾಗಲೇ ಬಳಕೆಯಲ್ಲಿವೆ. ಈ ಭೀತಿಯನ್ನು ಕಡಿಮೆ ಮಾಡುವ ಇಂಜೆಕ್ಷನ್‌ಗಳು ಸಹ ಈಗಾಗಲೇ ಚಾಲ್ತಿಯಲ್ಲಿವೆ.

HIV vaccine

ಏನಿದರ ಪ್ರಾಮುಖ್ಯತೆ?

ಈ ಸೂಜಿಮದ್ದಿನ ಪ್ರಾಮುಖ್ಯತೆಯನ್ನು ಅರಿಯುವುದಕ್ಕೆ ಪ್ರಯೋಗದ ವಿವರಗಳನ್ನು ಚುಟುಕಾಗಿಯಾದರೂ ತಿಳಿದುಕೊಳ್ಳಬೇಕು. ದಕ್ಷಿಣ ಆಫ್ರಿಕಾ ಮತ್ತು ಉಗಾಂಡ ದೇಶಗಳ ಯುವತಿಯರು ಮತ್ತು ಕಿಶೋರಿಯರನ್ನು ಒಳಗೊಂಡು ಈ ಪ್ರಯೋಗ ನಡೆಸಲಾಗಿದೆ. ಈ ಪ್ರದೇಶಗಳಲ್ಲಿ ಎಚ್‌ಐವಿ ಸೋಂಕು ತೀರಾ ವ್ಯಾಪಕವಾಗಿದ್ದು, ಅರಿವು ಮತ್ತು ಮುನ್ನೆಚ್ಚರಿಕೆಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು. 26 ವಾರಗಳ ಅವಧಿಯಲ್ಲಿ ಒಂದು ಬಾರಿಯಂತೆ ಲೇನಕಾಪವಿರ್‌ ಇಂಜೆಕ್ಷನ್‌ ನೀಡಿದ ಒಂದು ಗುಂಪು, ಖಾಲಿ ಇಂಜೆಕ್ಷನ್‌ ನೀಡಿದ ಇನ್ನೊಂದು ಗುಂಪು, ನಿತ್ಯವೂ ಎಚ್‌ಐವಿ ನಿರೋಧಕ ಮಾತ್ರೆ ತೆಗೆದುಕೊಳ್ಳುವ ಮತ್ತೊಂದು ಗುಂಪುಗಳು ಅಧ್ಯಯನಕ್ಕೆ ಒಳಪಟ್ಟಿದ್ದವು.

ಪ್ರಯೋಗ ಯಶಸ್ವಿ

26 ವಾರಗಳ ನಂತರ ಈ ಗುಂಪುಗಳನ್ನು ಪರಿಶೀಲಿಸಿದಾಗ 55 ಮಂದಿಗೆ ಸೋಂಕು ಉಂಟಾಗಿತ್ತು. ಅದರಲ್ಲಿ ಲೇನಕಾಪವಿರ್‌ ತೆಗೆದುಕೊಂಡಿದ್ದ ಗುಂಪಿನಲ್ಲಿ ಮಾತ್ರ ಯಾರೊಬ್ಬರಿಗೂ ಸೋಂಕು ತಾಗಿರಲಿಲ್ಲ. ಉಳಿದ ಗುಂಪುಗಳಲ್ಲಿ- ಒಂದರಲ್ಲಿ 39 ಮಂದಿಗೆ, ಇನ್ನೊಂದರಲ್ಲಿ 16 ಮಂದಿಗೆ ಸೋಂಕು ಅಂಟಿತ್ತು. ಹಾಗಾಗಿ ಎಚ್‌ಐವಿ ಹೊಸದಾಗಿ ಅಂಟದಂತೆ ತಡೆಯುವಲ್ಲಿ ಈ ಔಷಧಿ ಶೇ. ನೂರರಷ್ಟು ಪರಿಣಾಮ ಬೀರಬಹುದು ಎಂಬ ಭರವಸೆ ಇಡೀ ಜಗತ್ತಿನ ಸಂಶೋಧಕರ ಪಾಲಿಗೆ ಮಹತ್ವದ್ದೆನಿಸಿದೆ.
ಯುವತಿಯರಲ್ಲಿ ಮಾತ್ರವೇ ಈ ಔಷಧಿ ಕೆಲಸ ಮಾಡುತ್ತದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಇದನ್ನು ಪುರುಷರಿಗೆ ನೀಡಿ ನಡೆಸಲಾಗುತ್ತಿರುವ ಅಧ್ಯಯನ ಇನ್ನೂ ಚಾಲ್ತಿಯಲ್ಲಿದೆ. ಅಲ್ಲಿಂದ ಹೊರಹೊಮ್ಮುವ ದತ್ತಾಂಶಗಳ ಬಗೆಗೂ ಸಂಶೋಧಕರು ಕುತೂಹಲ ಹೊಂದಿದ್ದಾರೆ. ಮುಂದಿನ ಹಂತದ ಪ್ರಯೋಗಗಳಲ್ಲಿ ಪುರುಷರು, ಲಿಂಗ ಬದಲಾಯಿಸಿಕೊಂಡಿರುವ ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನೂ ಒಳಗೊಳ್ಳಲಾಗಿದೆ. ಅರ್ಜೆಂಟೀನಾ, ಬ್ರೆಜಿಲ್, ಮೆಕ್ಸಿಕೊ, ಪೆರು, ಥಾಯ್ಲೆಂಡ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿದೆ.

ಚುಚ್ಚು ಮದ್ದಿನಿಂದ ರಕ್ಷಣೆ

ಈಗಾಗಲೇ ಪರಿಣಾಮಕಾರಿ ಎನಿಸಿಕೊಂಡಿರುವ Pre-exposure prophylaxis (or PrEP) ಮಾತ್ರೆಗಳ ಜೊತೆಗೆ, ಈ ಚುಚ್ಚುಮದ್ದು ಸಹ ಹೆಚ್ಚಿನ ರಕ್ಷಣೆಯನ್ನು ನೀಡಲಿದೆ. PrEP ಮಾತ್ರೆಗಳನ್ನು ಪ್ರತಿದಿನ ಅಥವಾ ವೈದ್ಯರು ಸೂಚಿಸಿದ ರೀತಿಯಲ್ಲೇ ತೆಗೆದುಕೊಳ್ಳುವುದು ಅಗತ್ಯ. ಆದರೆ ಈ ಹೊಸ ಭರವಸೆಯನ್ನು ಆರು ತಿಂಗಳಿಗೊಮ್ಮೆ ಮಾತ್ರವೇ ತೆಗೆದುಕೊಂಡರೆ ಸಾಕು ಎನ್ನುವುದು, ಬಳಕೆಯನ್ನು ಇನ್ನಷ್ಟು ಸರಳಗೊಳಿಸುವ ಮತ್ತು ಪರಿಣಾಮಕಾರಿ ಫಲಿತಾಂಶವನ್ನು ಪಡೆಯುವ ನಿಟ್ಟಿನಲ್ಲಿ ಮಹತ್ವದ್ದು ಎನಿಸಿದೆ.

ಇದನ್ನೂ ಓದಿ: Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

ಈಗ ಪ್ರಯೋಗದಲ್ಲಿರುವ ಲೇನಕಾಪವಿರ್‌ ಚುಚ್ಚುಮದ್ದು ವಿಶ್ವದಲ್ಲಿ ಎಲ್ಲಿಯೂ ಎಚ್‌ಐವಿ ತಡೆಯುವ ಔಷಧಿಯೆಂದು ಮಾನ್ಯತೆ ಪಡೆದಿಲ್ಲ. ಆದರೆ ಇನ್ನೂ ಕೆಲವು ಔಷಧಿಗಳ ಜೊತೆಯಲ್ಲಿ ಇದನ್ನೂ ನೀಡುವುದಕ್ಕೆ ಅಮೆರಿಕದಲ್ಲಿ ಪರವಾನಗಿ ಇದೆ. ಇದಕ್ಕೆ ವರ್ಷಕ್ಕೆ ಸುಮಾರು 40,000 ಡಾಲರ್‌ ವೆಚ್ಚ ಈಗಾಗಲೇ ತಗುಲುತ್ತಿದೆ. ಒಂದೊಮ್ಮೆ ಎಚ್‌ಐವಿ ಸೋಂಕು ಬಾರದಂತೆ ತಡೆಯುವಲ್ಲಿ ಇದು ಸಂಪೂರ್ಣ ಯಶಸ್ವಿ ಎಂದಾದರೆ, ಈ ವೆಚ್ಚವನ್ನು ತಗ್ಗಿಸದಿದ್ದರೆ ಬಳಕೆದಾರರಿಗೆ ಪ್ರಯೋಜನ ಆಗದಿರಬಹುದು ಎನ್ನುತ್ತಾರೆ ಅಧ್ಯಯನಕಾರರು.

Continue Reading
Advertisement
Delhi Floods
ಪ್ರಮುಖ ಸುದ್ದಿ2 hours ago

Delhi Floods: ದೆಹಲಿಯಲ್ಲಿ ಭಾರಿ ಮಳೆ; ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವು!

Paris Olympics 2024
ಕ್ರೀಡೆ2 hours ago

Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

Pervez Musharraf
ದೇಶ2 hours ago

Pervez Musharraf: ಭಾರತ ವಿರೋಧಿ ಪರ್ವೇಜ್‌ ಮುಷರ‍್ರಫ್‌ಗೆ ಕೇರಳ ಬ್ಯಾಂಕ್‌ ಗೌರವ; ಭುಗಿಲೆದ್ದ ವಿವಾದ

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಷಟ್ಲರ್​ಗಳ ಪರಾಕ್ರಮ ಆರಂಭ; ಸಿಂಗಲ್ಸ್​ನಲ್ಲಿ ಲಕ್ಷ್ಯ ಸೇನ್​, ಡಬಲ್ಸ್​ನಲ್ಲಿ ಸಾತ್ವಿಕ್​- ಚಿರಾಗ್ ಜೋಡಿಗೆ ಗೆಲುವು

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಭಾರತ ಹಾಕಿ ತಂಡದ ಶುಭಾರಂಭ; ನ್ಯೂಜಿಲ್ಯಾಂಡ್ ವಿರುದ್ಧ 3-2 ಗೋಲ್​ಗಳ ಗೆಲುವು

Tihar Jail
ದೇಶ3 hours ago

Tihar Jail: ತಿಹಾರ ಜೈಲಿನ 125 ಕೈದಿಗಳಿಗೆ ಎಚ್‌ಐವಿ ಪಾಸಿಟಿವ್‌; ಇವರು ‘ಬೇಲಿ’ ಹಾರಿದ್ದು ಎಲ್ಲಿ?

IND vs SL
ಪ್ರಮುಖ ಸುದ್ದಿ3 hours ago

IND vs SL : ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ 43 ರನ್​ ಭರ್ಜರಿ ಜಯ

Rishabh Pant
ಪ್ರಮುಖ ಸುದ್ದಿ3 hours ago

Rishabh Pant : ಧೋನಿಯಂತೆ ಭರ್ಜರಿ ಹೆಲಿಕಾಪ್ಟರ್​ ಶಾಟ್​​ ಮೂಲಕ ಸಿಕ್ಸರ್ ಬಾರಿಸಿದ ರಿಷಭ್ ಪಂತ್​

Puneeth Kerehalli
ಕರ್ನಾಟಕ3 hours ago

Puneeth Kerehalli: ಪುನೀತ್‌ ಕೆರೆಹಳ್ಳಿಗೆ ನ್ಯಾಯಾಂಗ ಬಂಧನ; 14 ದಿನ ಪರಪ್ಪನ ಅಗ್ರಹಾರವೇ ಗತಿ!

Mumbai Girl
ದೇಶ4 hours ago

ಬಾರೆ ಸಖಿ ಎಂದು 20 ವರ್ಷದ ಯುವತಿಯನ್ನು ಕರೆದುಕೊಂಡು ಹೋದ, ಕೊಂದು ಪೊದೆಯಲ್ಲಿ ಬಿಸಾಡಿದ; ಕೃತ್ಯಕ್ಕೆ ಕಾರಣವೇನು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ7 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ12 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ13 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌