Deepavali Special: ಹತ್ತೇ ನಿಮಿಷದಲ್ಲಿ ಹಲ್ವಾ ಮಾಡಿ! ದೀಪಾವಳಿಯ ಖುಷಿ ಹೆಚ್ಚಿಸಿ! - Vistara News

ಆಹಾರ/ಅಡುಗೆ

Deepavali Special: ಹತ್ತೇ ನಿಮಿಷದಲ್ಲಿ ಹಲ್ವಾ ಮಾಡಿ! ದೀಪಾವಳಿಯ ಖುಷಿ ಹೆಚ್ಚಿಸಿ!

ಕಡಿಮೆ ಅವಧಿಯಲ್ಲಿ ಮಾಡಬಹುದಾದ ಸಿಹಿತಿಂಡಿಗಳನ್ನು ಹುಡುಕಿ ಮಾಡುವುದೂ ಕೂಡಾ ಒಂದು ಕಲೆಯೇ. ಬನ್ನಿ, ಮೊದಲು, ಹತ್ತೇ ನಿಮಿಷದಲ್ಲೊಂದು ಹಲ್ವಾ ಮಾಡಿ (making halwa, halwa recipe) ದೀಪಾವಳಿಯ ಖುಷಿಗೆ (deepavali special) ಇನ್ನಷ್ಟು ಖುಷಿಯನ್ನು ಸೇರಿಸೋಣ.

VISTARANEWS.COM


on

halwa
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೀಪಾವಳಿ ಹಬ್ಬದ (deepavali 2023) ಸಂಭ್ರಮ ಕಳೆಗಟ್ಟಲು ಮನೆಯಲ್ಲಿಯೇ ಬಗೆಬಗೆಯ ಭಕ್ಷ್ಯಗಳು (Festival foods) ತಯಾರಾಗಬೇಕು. ಸಿಹಿತಿಂಡಿಗಳು ಬಿಸಿಬಿಸಿಯಾಗಿ ರೆಡಿಯಾಗಿ ದೇವರಿಗೆ ನೈವೇದ್ಯವಾಗಿ, ನಾವು ಖುಷಿಯಿಂದ ತಿಂದು, ಇತರರಿಗೂ ಹಂಚಿದರೆ ಹಬ್ಬದ ಸಾರ್ಥಕ್ಯ (deepavali special) ಮೂಡುತ್ತದೆ ಎಂಬುದು ಸತ್ಯವಾದ ವಿಚಾರ. ಆದರೆ, ಈಗೆಲ್ಲ ಬದಲಾದ ಯುಗದಲ್ಲಿ ಬಹಳಷ್ಟು ಮಂದಿಗೆ ಹಬ್ಬದ ತಯಾರಿ ಮುಂಚಿತವಾಗಿ ಮಾಡಿಕೊಳ್ಳಲಾಗುವುದಿಲ್ಲ. ಬಗೆಬಗೆಯ ತಿಂಡಿಗಳನ್ನು ಮಾಡಲು ಮೊದಲೇ ತಯಾರಿ ಆರಂಭವಾದರಷ್ಟೇ ಹಿಂದಿನ ಕಾಲದಲ್ಲಿ ನಮ್ಮ ಅಜ್ಜಿ, ಅಮ್ಮಂದಿರಂತೆ ಹಬ್ಬದ ದಿನ ಬಗೆಬಗೆಯ ಭಕ್ಷ್ಯಗಳು ತಯಾರಾಗುತ್ತದೆ. ಆದರೆ, ಒಂದೇ ದಿನ ಮ್ಯಾಜಿಕ್‌ ಮಾಡಿ ಹಬ್ಬಕ್ಕೆ ಇಷ್ಟೆಲ್ಲ ರೆಡಿ ಮಾಡುವುದು ಈಗ ಉದ್ಯೋಗದಲ್ಲಿ ಬ್ಯುಸಿಯಾಗಿರುವ ಬಹುತೇಕ ಹೆಣ್ಣುಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಹಾಗಂತ ಹಬ್ಬವನ್ನು ಹಾಗೆಯೇ ಹೋಗಲು ಬಿಡಲೂ ಮನಸ್ಸಾಗುವುದಿಲ್ಲ. ಮಾರುಕಟ್ಟೆಯಿಂದ ತಂದ ಸಿಹಿತಿಂಡಿಗಳು ಮನೆಯಲ್ಲಿ ಮಾಡಿದ ಅಡುಗೆಯ ಭಾವ ಕೊಡುವುದಿಲ್ಲ. ಮನೆಯಲ್ಲೇ ಕೈಲಾದಷ್ಟು ಸಿಹಿ, ಭಕ್ಷ್ಯ ಅಡುಗೆಗಳನ್ನು ಮಾಡಿಕೊಂಡರೆ ಸಂತೃಪ್ತಿಯ ಭಾವ. ನಮ್ಮ ಮುಂದಿನ ಪೀಳಿಗೆಗೂ ಹಬ್ಬದ ಖುಷಿಯನ್ನು ದಾಟಿಸಿದ ನೆಮ್ಮದಿ. ಹಾಗಾದರೆ, ಕಡಿಮೆ ಅವಧಿಯಲ್ಲಿ ಮಾಡಬಹುದಾದ ಸಿಹಿತಿಂಡಿಗಳನ್ನು ಹುಡುಕಿ ಮಾಡುವುದೂ ಕೂಡಾ ಒಂದು ಕಲೆಯೇ. ಹೆಚ್ಚುವರಿ ಒಂದೆರಡು ಗಂಟೆಗಳನ್ನು ದೀಪಾವಳಿಗೆ ಮೀಸಲಿಟ್ಟರೆ ಮನೆಯಲ್ಲೇ ಮೂರ್ನಾಲ್ಕು ಬಗೆಯ ಸಿಹಿತಿಂಡಿಗಳನ್ನು ಮಾಡಬಹುದು. ಆದರೆ, ಮುಂಚಿತವಾಗಿ, ಈ ಬಗ್ಗೆ ಯೋಚಿಸಿ ಇಟ್ಟುಕೊಂಡರೆ ಕಲಸ ಸುಲಭವಾಗುತ್ತದೆ. ಹಾಗಾದರೆ ಬನ್ನಿ, ಮೊದಲು, ಹತ್ತೇ ನಿಮಿಷದಲ್ಲೊಂದು ಹಲ್ವಾ ಮಾಡಿ (making halwa, halwa recipe) ದೀಪಾವಳಿಯ ಖುಷಿಗೆ ಇನ್ನಷ್ಟು ಖುಷಿಯನ್ನು ಸೇರಿಸೋಣ.

ಹಲ್ವಾದಲ್ಲಿ ನಾನಾ ಬಗೆಗಳಿವೆ. ಕೆಲವು ದಿಢೀರ್‌ ಹಲ್ವಾಗಳಾದರೆ, ಇನ್ನೂ ಕೆಲವು ಚಾಕಚಕ್ಯತೆ, ಸಮಯ, ಕೌಶಲ, ತಾಳ್ಮೆ ಎಲ್ಲವನ್ನೂ ಬೇಡುವ ಹಲ್ವಾಗಳು. ಕೆಲವೇ ಕೆಲವು ವಸ್ತುಗಳನ್ನು ಬಳಸಿ ಹಲ್ವಾ ಎಂಬ ಅದ್ಭುತ ಸಿಹಿತಿಂಡಿ ನಿಜವಾಗಿಯೂ ಹಲವು ಬಾರಿ ನಮ್ಮ ಮನೆಗಳಲ್ಲಿ ಹಬ್ಬದ ಸಂಭ್ರಮವನ್ನು ಕಳೆಗಟ್ಟಿಸುತ್ತದೆ. ದಿಢೀರ್‌ ಯಾರೋ ಬಂದರೆ, ಇನ್ನೇನೋ ಖುಷಿಗೆ, ಮತ್ಯಾವುದೋ ಸಂಭ್ರಮಕ್ಕೆ ಈ ಹಲ್ವಾಗಳೆಂಬ ಸಿಹಿ ಇನ್ನಷ್ಟು ನಮ್ಮ ಸಂಭ್ರಮವನ್ನು ಇನ್ನಷ್ಟು ಸಿಹಿಯಾಗಿಸುವುದು ಸುಳ್ಳಲ್ಲ.

೧. ಮೊದಲು ನೀವಿಲ್ಲಿ ನಿರ್ಧಾರ ಮಾಡಬೇಕಿರುವುದು ಯಾವುದರ ಹಲ್ವಾ ಮಾಡಬೇಕು ಎಂಬುದು. ಗೋಧಿ, ದಲಿಯಾ (ಗೋಧಿ ನುಚ್ಚು), ರಾಗಿ (ಪುಡಿ), ರವೆ, ಕ್ಯಾರೆಟ್‌, ಕುಂಬಳಕಾಯಿ ಹೀಗೆ ಇಂತಹ ಹಲವು ಬಗೆಗಳನ್ನು ಸುಲಭವಾಗಿ ಹಲ್ವಾ ಮಾಡಬಹುದು.

೨. ಮೊದಲು, ಮಾಡಬೇಕಿರುವ ಹಲ್ವಾದ ಮುಖ್ಯ ಸಾಮಗ್ರಿ ರೆಡಿ ಮಾಡಿಕೊಳ್ಳುವುದು ಮುಖ್ಯ. ಬಾಣಲೆ ಬಿಸಿಯಾಗಲು ಬಿಟ್ಟು ಸಾಮಗ್ರಿ ಹುಡುಕುವಷ್ಟು ಗಡಿಬಿಡಿ ಮಾಡಬಾರದು. ಅದಕ್ಕಾಗಿ ಮೊದಲೇ ಸಾಮಗ್ರಿಯನ್ನು ರೆಡಿ ಮಾಡಿ ಇಟ್ಟುಕೊಳ್ಳಿ. ಮೊದಲೇ ಹುರಿಯದೇ ಇಟ್ಟಿದ್ದಾದರೆ ಅದನ್ನು ಹದವಾಗಿ ಹುರಿದುಕೊಳ್ಳಿ.

೩. ಸಕ್ಕರೆ ಪುಡಿಯನ್ನು ಬಳಸಿ. ಸಕ್ಕರೆಯನ್ನು ಯಾವಾಗಲೂ ಒಂದು ಡಬ್ಬದಲ್ಲಿ ಪುಡಿ ಮಾಡಿ ಇಟ್ಟುಕೊಂಡಿದ್ದರೆ, ಇಂಥ ದಿಢೀರ್‌ ಅಡುಗೆಗಳ ಸಂದರ್ಭ ಬಹಳ ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಸಕ್ಕರೆ ಪುಡಿಯನ್ನು ರೆಡಿ ಮಾಡಿ. ಸಕ್ಕರೆಯ ಬದಲು ಬೆಲ್ಲ ಬಳಸುತ್ತಿದ್ದರೆ, ಅದನ್ನೂ ಹೀಗೆ ರೆಡಿ ಮಾಡಿಟ್ಟಿರಿ.

೪. ಬಿಸಿ ನೀರು ಅಥವಾ ಬಿಸಿಯಾಗಿರುವ ಹಾಲನ್ನೇ ಸೇರಿಸಿದರೆ, ಬಹುಬೇಗನೆ ಹಲ್ವಾ ರೆಡಿಯಾಗುತ್ತದೆ. ಯಾವ ಹಲ್ವಾ ಎಂಬುದರ ಮೇಲೆ, ಹಾಲು ಅಥವಾ ನೀರನ್ನು ನೀವು ಆಯ್ಕೆ ಮಾಡಿ. ಉದಾಹರಣೆಗೆ ನೀವು ಕ್ಯಾರೆಟ್‌ ಹಲ್ವಾ ಮಾಡುತ್ತಿದ್ದರೆ, ಹಾಲಲ್ಲಿ ಬೇಯಲು ಬಿಟ್ಟ ಕ್ಯಾರೆಟ್‌ಗೆ ತೇವಾಂಶ ಆರಿದ ಮೇಲೆ ಮಿಲ್ಕ್‌ಮೈಯ್ಡ್‌ ಸೇರಿಸಬಹುದು. ಆಗ ಹಲ್ವಾದ ರುಚಿ ಹೆಚ್ಚುತ್ತದೆ. ಕೆಲಸವೂ ಬೇಗನೆ ಆಗುತ್ತದೆ. (ಕ್ಯಾರೆಟ್ ಹಲ್ವಾಕ್ಕೆ ಅರ್ಧ ಗಂಟೆಯಾದರೂ ಬೇಕು. ರವೆ, ಗೋಧಿಪುಡಿ, ರಾಗಿ ಪುಡಿ ಹಲ್ವಾಗಳನ್ನು ಹತ್ತಿಪ್ಪತು ನಿಮಿಷದೊಳಗೆ ಮಾಡಬಹುದು)

೫. ತುಂಬ ದೊಡ್ಡ ಪ್ರಮಾಣದಲ್ಲಿ ಮಾಡುವ ಬದಲು ಸಣ್ಣ ಪ್ರಮಾಣದಲ್ಲಿ ಮಾಡಿ. ಆಯಾ ದಿನವೇ ಮುಗಿದರೂ, ಹಬ್ಬಕ್ಕೆ ಸಿಹಿಯಂತೂ ಆಗುತ್ತದೆ. ಸ್ವಲ್ಪವೇ ಮಾಡಿದರೆ ಬೇಗನೆ ಆಗುತ್ತದೆ. ಅಥವಾ ಬ್ಯಾಚ್‌ಗಳಲ್ಲಿ ಮಾಡಬಹುದು.

ಇದನ್ನೂ ಓದಿ: Diwali sweets | ಹಬ್ಬವೊಂದು ಸಿಹಿ ಹಲವು: ದೀಪಾವಳಿಗೆ ವಿವಿಧ ರಾಜ್ಯಗಳ ಸಿಹಿತಿಂಡಿ ಸ್ಪೆಷಲ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆಹಾರ/ಅಡುಗೆ

Ghee Testing Method: ನಾವು ತಿನ್ನುವ ತುಪ್ಪ ಶುದ್ಧವಾಗಿದೆಯೇ ಎಂದು ಪರೀಕ್ಷಿಸುವುದು ಹೇಗೆ? ಇಲ್ಲಿದೆ ವಿಧಾನ

ತುಪ್ಪದಲ್ಲಿರುವ ಪೋಷಕಾಂಶಗಳ ನಿಜವಾದ ಲಾಭವನ್ನು ಅರಿತುಕೊಂಡು ಅನೇಕರು ಸ್ವಲ್ಪ ತುಪ್ಪವನ್ನು ನಿತ್ಯವೂ ಆಹಾರದಲ್ಲಿ ಬಳಸುವುದನ್ನು ಆರಂಭಿಸಿದ್ದಾರೆ. ಆದರೆ ಅಗ್ಗದ ತುಪ್ಪಗಳು, ಕಲಬೆರಕೆಯ ತುಪ್ಪಗಳು ಮಾರುಕಟ್ಟೆಯನ್ನು ಪ್ರವೇಶಿಸಿ ದೇಸೀ ತುಪ್ಪಕ್ಕೂ ಸೆಡ್ಡು ಹೊಡೆಯುತ್ತಿವೆ. ಹೀಗೆ ಮೋಸ ಹೋಗುವ ಗ್ರಾಹಕರು ಅನೇಕ. ಹಾಗಾದರೆ ಬನ್ನಿ, ಕಲಬೆರಕೆಯಾಗಿಲ್ಲದ, ಒಳ್ಳೆಯ ಶುದ್ಧ ತುಪ್ಪವನ್ನು ಕಂಡು ಹಿಡಿಯುವುದು ಹೇಗೆ (Ghee Testing Method) ಎಂಬುದನ್ನು ನೋಡೋಣ.

VISTARANEWS.COM


on

Ghee Testing Method
Koo

ಭಾರತೀಯ ಅಡುಗೆಮನೆಯಲ್ಲಿ ತುಪ್ಪದ ಸ್ಥಾನ ಬಹುಮುಖ್ಯವಾದುದು. ಪ್ರತಿಯೊಬ್ಬರೂ, ತಮ್ಮ ನಿತ್ಯದ ಆಹಾರದಲ್ಲಿ ತುಪ್ಪವನ್ನು ಒಂದಿಲ್ಲೊಂದು ಬಗೆಯಲ್ಲಿ ಸೇವಿಸುತ್ತಾರೆ. ಭಾರತೀಯ ಶೈಲಿಯ ಸಾಕಷ್ಟು ಅಡುಗೆಗಳಿಗೆ ತುಪ್ಪವನ್ನು ಹಾಕಿದರಷ್ಟೇ ಅದರ ನಿಜವಾದ ರುಚಿ, ಘಮ ಪಡೆಯುತ್ತದೆ. ದೋಸೆಗೆ, ಪರಾಠಾಕ್ಕೆ, ಬಗೆಬಗೆಯ ಖಾದ್ಯಗಳಿಗೆ, ಅನ್ನಕ್ಕೆ ಕಲಸಿಕೊಳ್ಳಲು, ಸಿಹಿತಿಂಡಿಗಳಿಗೆ ಹೀಗೆ ತುಪ್ಪ ಒಂದಿಲ್ಲೊಂದು ಬಗೆಯಲ್ಲಿ ಬಳಕೆಯಾಗುತ್ತಲೇ ಇರುತ್ತದೆ. ತುಪ್ಪದ ಹಿತಮಿತವಾದ ಬಳಕೆ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದನ್ನೂ ಮಾಡುತ್ತದೆ. ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬನ್ನು ಪೂರೈಕೆ ಮಾಡುವ ತುಪ್ಪವನ್ನು ಇತ್ತೀಚೆಗಿನ ದಿನಗಳಲ್ಲಿ ಜನರು ಮತ್ತೆ ಬಳಸುವತ್ತ ಮುಖ ಮಾಡಲು ತೊಡಗಿದ್ದಾರೆ. ತುಪ್ಪದಲ್ಲಿರುವ ಪೋಷಕಾಂಶಗಳ ನಿಜವಾದ ಲಾಭವನ್ನು ಅರಿತುಕೊಂಡು ಅನೇಕರು ಸ್ವಲ್ಪ ತುಪ್ಪವನ್ನು ನಿತ್ಯವೂ ಆಹಾರದಲ್ಲಿ ಬಳಸುವುದನ್ನು ಆರಂಭಿಸಿ ಅದರಿಂದ ಫಲ ಕಂಡವರೂ ಇದ್ದಾರೆ. ಆಯುರ್ವೇದವೂ ಕೂಡಾ ಇದನ್ನು ಪುಷ್ಟೀಕರಿಸುತ್ತದೆ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ನಮ್ಮ ದೇಶದಲ್ಲಷ್ಟೇ ಅಲ್ಲ, ವಿದೇಶಗಳಿಂದಲೂ ಕೂಡಾ ತುಪ್ಪದ ಬೇಡಿಕೆ ಹೆಚ್ಚುತ್ತಲೂ ಇದೆ. ಬೇಡಿಕೆ ಹೆಚ್ಚಾದಂತೆ ಪೂರೈಕೆಯೂ ಹೆಚ್ಚಲೇಬೇಕು. ಅಗ್ಗದ ತುಪ್ಪಗಳು, ಕಲಬೆರಕೆಯ ತುಪ್ಪಗಳು ಮಾರುಕಟ್ಟೆಯನ್ನು ಪ್ರವೇಶಿಸಿ ದೇಸೀ ತುಪ್ಪಕ್ಕೂ ಸೆಡ್ಡು ಹೊಡೆಯುತ್ತಿವೆ. ಖಂಡಿತವಾಗಿ ಕಲಬೆರಕೆಯಾದ ತುಪ್ಪದಿಂದ ಆರೋಗ್ಯದ ಲಾಭಗಳನ್ನು ಪಡೆಯಲು ಸಾಧ್ಯವಿಲ್ಲ. ಹೀಗೆ ಮೋಸ ಹೋಗುವ ಗ್ರಾಹಕರು ಅನೇಕ. ಹಾಗಾದರೆ ಬನ್ನಿ, ಕಲಬೆರಕೆಯಾಗಿಲ್ಲದ, ಒಳ್ಳೆಯ ಶುದ್ಧ ತುಪ್ಪವನ್ನು ಕಂಡು ಹಿಡಿಯುವುದು (Ghee Testing Method) ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Rich in antioxidants ghee is anti-inflammatory Ghee Benefits

ಎಫ್‌ಎಸ್‌ಎಸ್‌ಎಐ ಪ್ರಕಾರ, ಸಾಮಾನ್ಯವಾಗಿ ತುಪ್ಪಕ್ಕೆ ಬೆರೆಸುವ ಕಲಬೆರಕೆ ವಸ್ತುಗಳೆಂದರೆ ವೆಜಿಟೆಬಲ್‌ ಆಯಿಲ್, ಪ್ರಾಣಿಗಳ ಕೊಬ್ಬು, ಖನಿಜಗಳ ಕೊಬ್ಬು, ಹಾಗೂ ಸ್ಟಾರ್ಚ್.‌ ಇಂತಹ ಕೊಬ್ಬುಗಳನ್ನು ತುಪ್ಪಕ್ಕೆ ಸೇರಿಸುವುದರಿಂದ ಬೀಟಾ ಸೈಟೋಸ್ಟೆರಾಲ್‌ ಹಾಗೂ ಕೊಲೆಸ್ಟೆರಾಲ್‌ಗಳ ಮಟ್ಟ ಏರಿಕೆಯಾಗುತ್ತದೆ. ಅಷ್ಟೇ ಅಲ್ಲ, ಇವು ತುಪ್ಪದಿಂದ ಲಭಿಸಬಹುದಾದ ಎಲ್ಲ ಆರೋಗ್ಯಕರ ಲಾಭಗಳನ್ನೂ ಸರ್ವನಾಶ ಮಾಡುತ್ತದೆ. ಇದರಿಂದ ನಮಗೆ ತುಪ್ಪದ ಲಾಭಗಳು ದಕ್ಕುವುದಿಲ್ಲ. ಬದಲಾಗಿ ಆ ಕೊಬ್ಬಿನ ಸೇವನೆಯ ಅಡ್ಡ ಪರಿಣಾಮಗಳು ಆರೋಗ್ಯದ ಮೇಲಾಗುತ್ತದೆ.
ಹಾಗಾದರೆ ಇಂತಹ ತುಪ್ಪ ನಮ್ಮ ಹೊಟ್ಟೆ ಸೇರದಂತೆ ನಾವು ತಡೆಯುವುದು ಸಾಧ್ಯವಿಲ್ಲವೇ? ಮಾರುಕಟ್ಟೆಯಲ್ಲಿ ಕಂಡ ಜಾಹಿರಾತನ್ನು ನಂಬಿ ತಂದ ನಾವು ಮೂರ್ಖರಾದೆವೇ? ಇದರ ಪರೀಕ್ಷೆ ಹೇಗೆ ಏಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಈ ಕೆಳಗಿನ ವಿಧಾನಗಳಿಂದ ತುಪ್ಪದ ಶುದ್ಧತೆಯನ್ನು ನೀವು ಪರೀಕ್ಷಿಸಬಹುದು.

ಮೇಲ್ಮೈ ಪರೀಕ್ಷೆ

ಒಂದು ಚಮಚ ತುಪ್ಪವನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಳ್ಳಿ. ಹಾದನ್ನು ಚೆನ್ನಾಗಿ ಉಜ್ಜಿಕೊಳ್ಳಿ. ತುಪ್ಪ ನಿಮ್ಮ ಅಂಗೈಯಲ್ಲಿ ಕರಗಿದರೆ ಅದು ಶುದ್ಧ ತುಪ್ಪ. ನಿಮ್ಮ ಅಂಗೈಯಲ್ಲಿ ಏನಾದರೂ ಘನ ವಸ್ತು ಹಾಗೆಯೇ ಉಳಿದಿದೆ, ಪೂರ್ತಿಯಾಗಿ ತುಪ್ಪ ಕರಗಿಲ್ಲ ಎಂದರೆ ನೀವು ತಂದ ತುಪ್ಪದಲ್ಲಿ ಕಲಬೆರಕೆಯಿದೆ ಎಂದರ್ಥ.

It is rich in good fats Ghee Benefits

ಉಷ್ಣತೆಯ ಪರೀಕ್ಷೆ

ಒಂದು ಚಮಚ ತುಪ್ಪವನ್ನು ಹಾಗೆಯೇ ಗ್ಯಾಸ್‌ ಸ್ಟವ್‌ ಮೇಲೆ ಹಿಡಿದಾಗ ಅದರ ಮೇಲ್ಮೈಯಲ್ಲಿ ವ್ಯತ್ಯಾಸವಾದರೆ ಹಾಗೂ ಅದು ಹೊಂಬಣ್ಣದಲ್ಲಿ ಕರಗಿದರೆ ಅದು ಶುದ್ಧ ತುಪ್ಪ ಎಂದರ್ಥ. ಬಣ್ಣದಲ್ಲಿ ಅಂಥ ವ್ಯತ್ಯಾಸವಾಗದೆ, ಅದು ತಿಳಿ ಹಳದಿ, ಬಿಳಿ ಬಣ್ಣದಲ್ಲೇ ಇದ್ದರೆ ನೀವು ಅಂಥ ತುಪ್ಪವನ್ನು ಖರೀದಿಸದೇ ಇರುವುದು ಒಳ್ಳೆಯದು.

ಇದನ್ನೂ ಓದಿ: Drinking Water Before Meals: ಊಟಕ್ಕಿಂತ ಎಷ್ಟು ಮೊದಲು ನೀರು ಕುಡಿದರೆ ಒಳ್ಳೆಯದು?

ಬಾಟಲ್‌ ಪರೀಕ್ಷೆ

ತುಪ್ಪವನ್ನು ಒಂದು ಪಾರದರ್ಶಕ ಬಾಟಲಿಗೆ ಹಾಕಿಡಿ. ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ. ಈಗ ಆ ಬಾಟಲಿಯ ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಕೆಂಪು ಬಣ್ಣದ ಗೆರೆಗಳು ಬಾಟಲಿಯ ತಳದಲ್ಲಿ ಕಂಡರೆ ನಿಮ್ಮ ತುಪ್ಪದಲ್ಲಿ ಕಲಬೆರಕೆಯಾಗಿದೆ ಎಂದು ಅರ್ಥ.
ತುಪ್ಪದ ಆರೋಗ್ಯಕರ ಲಾಭಗಳನ್ನು ಪಡೆಯಲು ಶುದ್ಧ ತುಪ್ಪದ ಬಳಕೆ ಅತ್ಯಗತ್ಯ. ನೀವು ಖರೀದಿಸಿ ತರುವ ತುಪ್ಪದ ಶುದ್ಧತೆಯ ಅರಿವು ನಿಮಗಿರಲಿ.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಆಹಾರ ಸುರಕ್ಷತೆಗಾಗಿ ನಿಷೇಧ ಆದೇಶ ಹೊರಡಿಸಿದರೆ ಸಾಕೆ?

1999ರಿಂದ 2016ರವರೆಗೆ ಪ್ಲಾಸ್ಟಿಕ್ ನಿಷೇಧ ಕುರಿತು ಹಲವು ಕಾನೂನುಗಳು ಬಂದಿವೆ. ಆದರೆ, ಸಂಪೂರ್ಣವಾಗಿ ಬಳಕೆ ನಿಲ್ಲಿಸಲು ಸಾಧ್ಯವಾಗಿಲ್ಲ. 2022ರ ಜುಲೈ 1ರಿಂದ ದೇಶದಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದು ಆರೋಗ್ಯದ ಮೇಲೆ ಮಾಡುವ ದುಷ್ಪರಿಣಾಮದ ಜೊತೆಗೆ ಪರಿಸರದ ಮೇಲೆ ಮಾಡುವ ದಾಳಿಯೂ ಇದಕ್ಕೆ ಕಾರಣ. ಆದರೆ ಅದು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಉಳಿದ ನಿಷೇಧಗಳ ಕತೆಯೂ ಇದೇ ಆಗಿದೆ.

VISTARANEWS.COM


on

Food Safety
Koo

ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ (Liquid Nitrogen) ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. ಇತ್ತೀಚೆಗಂತೂ ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಹೆಚ್ಚಾಗುತ್ತಿದೆ. ಜನರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಾಯದ ಬಾಗಿಲು ತಟ್ಟುತ್ತಿದ್ದಾರೆ. ಲಿಕ್ವಿಡ್ ನೈಟ್ರೋಜನ್ ಮೂಲಕ ಸ್ಮೋಕ್‌ ಐಸ್‌ಕ್ರೀಂ, ಸ್ಮೋಕ್‌ ಬಿಸ್ಕತ್ತು, ಬಿಯರ್‌ನಲ್ಲಿ ಬಳಸಲಾಗುತ್ತಿದ್ದು, ಇದು ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಸ್ಮೋಕಿಂಗ್ ಲಿಕ್ವಿಡ್ ನೈಟ್ರೋಜನ್ ಸೇವನೆ ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮುಖ್ಯವಾಗಿ ಲಿಕ್ವಿಡ್‌ ನೈಟ್ರೋಜನ್‌ ಸೇವನೆಯಿಂದ ಕರಳು, ಗಂಟಲುಗಳಲ್ಲಿ ಹುಣ್ಣಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿರ್ಬಂಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ. ಇದು ಸ್ವಾಗತಾರ್ಹ ನಿರ್ಧಾರ.

ಕಲರ್ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿಗೆ ಬಳಸುವ ಬಣ್ಣಗಳನ್ನು ಇತ್ತೀಚೆಗೆ ರಾಜ್ಯದಲ್ಲಿ ನಿಷೇಧಿಸಲಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಪಿಂಕ್ ಕಲರ್ ಬರಲು ರೊಡಮೈನ್ ಬಿ ಬಳಸುತ್ತಾರೆ. ಗೋಬಿ ಮಂಚೂರಿಯಲ್ಲಿ ಟಾರ್ಟ್ರಾಸೈನ್ ಎಂಬ ಕೃತಕ ಬಣ್ಣಕಾರಕವನ್ನು ಬಳಸಲಾಗುತ್ತದೆ. ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಇವುಗಳಲ್ಲಿ ಕೃತಕ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ. ಕಲಬೆರಕೆ ಕಲರ್ ಬಳಕೆ ಮತ್ತು ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಇಂಥ ಆಹಾರ ಈಗ ನಿಷೇಧಿತ. ಇದನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 10 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ.

ರೆಸ್ಟೋರಂಟ್‌ಗಳಲ್ಲಿ , ಬೀದಿ ಬದಿಯ ಸ್ಟಾಲ್‌ಗಳಲ್ಲಿ ಫುಡ್‌ ಪ್ರಿಯರನ್ನು ಆಕರ್ಷಿಸಲೆಂದೇ ಈ ಥರದ ಬಣ್ಣಗಳನ್ನು ಬಳಸುವುದು ರೂಢಿಯಾಗಿಬಿಟ್ಟಿದೆ. ಜನರೂ ಇದರ ಅಪಾಯದ ಅರಿವಿಲ್ಲದೆ ಬಳಸುತ್ತಲೇ ಇರುತ್ತಾರೆ. ಈ ನಡುವೆ ಚಿಕನ್‌ ಕಬಾಬ್‌ನಲ್ಲೂ ಕೆಲವರು ಬಣ್ಣಕಾರಕಗಳನ್ನು ಬಳಸುತ್ತಾರೆ. ಇದು ಕೂಡಾ ಅಪಾಯಕಾರಿ. ಆಹಾರ ಇಲಾಖೆಯ ಕಣ್ಣು ಇದರ ಮೇಲೂ ಬಿದ್ದಿದೆ. ಕಬಾಬ್ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಕಾನೂನುಗಳನ್ನೇನೋ ಮಾಡಬಹುದು. ಆದರೆ ಅನುಷ್ಠಾನದ ಕತೆಯೇನು? ನೋಟೀಸ್ ನೀಡಿ ಬಿಟ್ಟುಬಿಟ್ಟರೆ ಜನ ಬಣ್ಣದ ಬಳಕೆ ಬಿಡುತ್ತಾರೆಯೇ? ಬೀದಿ ಬೀದಿಗಳಲ್ಲಿ ಕಲರ್‌ಫುಲ್ ಕಾಟನ್ ಕ್ಯಾಂಡಿಗಳು ಹಾಗೂ ಗೋಬಿ ಮಂಚೂರಿ ಬಳಕೆ ನಡೆದೇ ಇದೆ. ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ನಿಗಾ ವ್ಯವಸ್ಥೆ ಬೇಡವೇ?

1999ರಿಂದ 2016 ರವರೆಗೆ ಪ್ಲಾಸ್ಟಿಕ್ ನಿಷೇಧ ಕುರಿತು ಹಲವು ಕಾನೂನುಗಳು ಬಂದಿವೆ. ಆದರೆ, ಸಂಪೂರ್ಣವಾಗಿ ಬಳಕೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. 2022ರ ಜುಲೈ 1ರಿಂದ ದೇಶದಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದು ಆರೋಗ್ಯದ ಮೇಲೆ ಮಾಡುವ ದುಷ್ಪರಿಣಾಮದ ಜೊತೆಗೆ ಪರಿಸರದ ಮೇಲೆ ಮಾಡುವ ದಾಳಿಯೂ ಇದಕ್ಕೆ ಕಾರಣ. ಆದರೆ ಅದು ಕಟ್ಟುನಿಟ್ಟಾಗಿ ಜಾರಿಯಾದಂತಿಲ್ಲ. ಏಕಬಳಕೆ ಪ್ಲಾಸ್ಟಿಕ್ ಮುಂದುವರಿದಿರುವುದು ಕಾಣಿಸುತ್ತದೆ.

ಇದೆಲ್ಲದರ ಬಗ್ಗೆ ಕಾನೂನು ಮಾಡಿದರೆ ಸಾಲದು, ದೃಢವಾದ ಜಾರಿ ಮಾಡುವಿಕೆ ಇರಬೇಕು. ಸಾರ್ವಜನಿಕರು ಕೂಡ ಇದನ್ನು ಮನಗಂಡು, ಈ ಹಾನಿಕರ ವಸ್ತುಗಳಿಗೆ ಉತ್ತೇಜನ ನೀಡುವುದು ನಿಲ್ಲಿಸಬೇಕು. ಆಗ ಮಾತ್ರ ತಜ್ಞರ, ಆರೋಗ್ಯ ಇಲಾಖೆಯ ಕಳಕಳಿ ಸಾರ್ಥಕ ಆಗಬಹುದು.

ಇದನ್ನೂ ಓದಿ: Summer Food Tips: ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿರಿಸುವ ಸರಳ ಆಹಾರಗಳಿವು!

Continue Reading

ಬೆಂಗಳೂರು

Liquid Nitrogen : ಕಾಟನ್ ಕ್ಯಾಂಡಿ ಬಳಿಕ ಕರ್ನಾಟಕದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿಷೇಧ

Liquid Nitrogen: ಆರೋಗ್ಯಕ್ಕೆ ಕುತ್ತು ತರುವ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿ ಬ್ಯಾನ್‌ ಬಳಿಕ ಇದೀಗ ಆಹಾರದಲ್ಲಿ ಲಿಕ್ವಿಡ್‌ ನೈಟ್ರೋಜನ್‌ ಬಳಕೆಯನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಆದೇಶವನ್ನು ಹೊರಡಿಸಿದೆ. ಆ ಪ್ರಕಾರ ಯಾರಾದರೂ ಲಿಕ್ವಿಡ್‌ ನೈಟ್ರೋಜನ್‌ ಬಳಸಿದ್ರೆ ಜೀವಾವಧಿ ಶಿಕ್ಷೆಯೊಂದಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

VISTARANEWS.COM


on

By

LIQUID NITROGEN
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ (Liquid Nitrogen) ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. ಲಿಕ್ವಿಡ್ ನೈಟ್ರೋಜನ್‌ನ ಒಂದು ತುತ್ತು ಜೀವಕ್ಕೆ ಕುತ್ತು ತರಬಹುದು. ಹೀಗಾಗಿ ಕಲರ್ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿ ಬಳಿಕ ಇದೀಗ ರಾಜ್ಯದಲ್ಲಿ ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆಯನ್ನು ಬ್ಯಾನ್ ಮಾಡಲಾಗಿದೆ.

ಕೆಲವು ರೆಸ್ಟೋರಂಟ್‌ಗಳಲ್ಲಿ ಫುಡ್‌ ಪ್ರಿಯರನ್ನು ಆಕರ್ಷಿಸಲೆಂದೇ ತರಹೇವಾರಿ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗಂತೂ ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಹೆಚ್ಚಾಗುತ್ತಿದೆ. ಜನರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಾಯದ ಬಾಗಿಲು ತಟ್ಟುತ್ತಿದ್ದಾರೆ. ಲಿಕ್ವಿಡ್ ನೈಟ್ರೋಜನ್ ಮೂಲಕ ಸ್ಮೋಕ್‌ ಐಸ್‌ಕ್ರೀಂ, ಸ್ಮೋಕ್‌ ಬಿಸ್ಕತ್ತು, ಬಿಯರ್‌ನಲ್ಲಿ ಬಳಸಲಾಗುತ್ತಿದ್ದು,ಇದು ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಹೀಗಾಗಿ ಲಿಕ್ವಿಡ್ ನೈಟ್ರೋಜನ್ ಬಳಸಿದ ಆಹಾರ ಸೇವಿಸುವ ಮುನ್ನ ಎಚ್ಚರವಾಗಿರಿ.

ಈ ಸ್ಮೋಕಿಂಗ್ ಲಿಕ್ವಿಡ್ ನೈಟ್ರೋಜನ್ ಸೇವನೆಯಿಂದ ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮುಖ್ಯವಾಗಿ ಲಿಕ್ವಿಡ್‌ ನೈಟ್ರೋಜನ್‌ ಸೇವನೆಯಿಂದ ಕರಳು, ಗಂಟಲುಗಳಲ್ಲಿ ಹುಣ್ಣಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿರ್ಬಂಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ. ಲಿಕ್ವಿಡ್ ನೈಟ್ರೋಜನ್ ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈಗಾಗಲೇ ಪಕ್ಕದ ತಮಿಳುನಾಡಲ್ಲಿ ಬಿಸ್ಕತ್‌ ಮತ್ತು ಐಸ್‌ಕ್ರೀಮ್‌ನಂತಹ ಆಹಾರ ಪದಾರ್ಥಗಳ ಜತೆ ಲಿಕ್ವಿಡ್‌ ನೈಟ್ರೋಜನ್‌ ನೇರ ಬಳಕೆಯನ್ನು ನಿಷೇಧಿಸಿದೆ. ಇದೀಗ ಕರ್ನಾಟಕದಲ್ಲೂ ಲಿಕ್ವಿಡ್‌ ನೈಟ್ರೋಜನ್‌ ಬಳಕೆಯನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Cotton Candy Ban : ರಾಜ್ಯದಲ್ಲಿ ಕಾಟನ್‌ ಕ್ಯಾಂಡಿ ಬ್ಯಾನ್‌, ಗೋಬಿ ಮಂಚೂರಿಗೂ ಡೇಂಜರ್‌

ಈ ಲಿಕ್ವಿಡ್‌ ನೈಟ್ರೋಜನ್‌ ಅಥವಾ ದ್ರವ ಸಾರಜನಕವನ್ನು ಔಷಧ ಮತ್ತು ರಾಸಾಯನಿಕ ಕಂಪನಿಗಳು ತಮ್ಮ ಉತ್ಪನ್ನಗಳನ್ನು 40 ಡಿಗ್ರಿ ಸೆಂಟಿಗ್ರೇಡ್‌ನಷ್ಟು ತಂಪಾಗಿಸಲು ಬಳಸುತ್ತವೆ. ಅಲ್ಲದೆ, ಫ್ರೀಜ್‌ ಮಾಡುವ ಹಲವು ವಿಧಾನಗಳಲ್ಲಿ ಬಳಸುತ್ತಾರೆ. ಈ ಲಿಕ್ವಿಡ್‌ ನೈಟ್ರೋಜನ್‌ ಸುರಿದರೆ ಥಟ್ಟನೆ ಹಿಗ್ಗಿ ಬಿಳಿಯ ಹೊಗೆಯಂತೆ ಆವಿಯಾಗಿ ಬಿಡುತ್ತದೆ.

ಇನ್ನೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006 ಪ್ರಕಾರ ಲಿಕ್ವಿಡ್‌ ನೈಟ್ರೋಜನ್‌ ಆಹಾರದಲ್ಲಿ ಬಳಸಬಾರದು ಎಂಬುದು ಈ ಮೊದಲಿನಿಂದಲೂ ಇದೆ. ಆದರೂ ಕೆಲವರು ಜನರನ್ನು ಆಕರ್ಷಿಸಲು, ಹೊಸ ಮೆನುವಿಗಾಗಿ ಇದನ್ನು ಬಳಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಬಳಸುವವರ ವಿರುದ್ಧ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಆದೇಶದಲ್ಲಿ ಏನಿದೆ?

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮಗಳು 2011ರಡಿ ಲಿಕ್ವಿಡ್‌ ನೈಟ್ರೋಜನ್‌ ಅನ್ನು ಡೈರಿ ಆಧಾರಿತ ಸಿಹಿತಿಂಡಿಗಳು -ಐಸ್ ಕ್ರೀಮ್‌ನಲ್ಲಿ ಘನೀಕರಣ ಮತ್ತು ಕೂಲಿಂಗ್ (Contact Freezing and Cooling Agent en Dairy- based desserts -Ice Cream) ಗಳ ತಯಾರಿಕೆಯ ಸಮಯದಲ್ಲಿ ಮಾತ್ರ ಬಳಸಲು ಅನುಮತಿ ಇದೆ. ಆದರೆ ಸ್ಮೋಕಿಂಗ್‌ ಬಿಸ್ಕತ್‌, ಡೆಸರ್ಟ್‌ ಸೇವನೆಗಾಗಿ ಒದಗಿಸುವ ಸಂದರ್ಭದಲ್ಲಿ ಉಪಯೋಗಿಸಲು ಅನುಮತಿ ಇಲ್ಲ. ಈ ಲಿಕ್ವಿಡ್‌ ನೈಟ್ರೋಜನ್‌ ಬಳಸಿದ ಆಹಾರ ತಿಂದರೆ ಜೀರ್ಣಾಂಗದ ಭಾಗಗಳಿಗೆ ಹಾನಿಯುಂಟಾಗುತ್ತದೆ.

LIQUID-NITROGEN

ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 30(2)(ಎ)ರಡಿ ಲಿಕ್ವಿಡ್‌ ನೈಟ್ರೋಜನ್‌ ಅನ್ನು ತಿನಿಸುಗಳಿಗೆ ಉಪಯೋಗಿಸುವುದನ್ನು ನಿರ್ಬಂಧಿಸಿ ಆದೇಶಿಸಲಾಗಿದೆ. ಉಲ್ಲಂಘನೆಯ ಪ್ರಕರಣಗಳು ಕಂಡು ಬಂದರೆ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ.10 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಕೇಸ್‌ ದಾಖಲಿಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆಹಾರ/ಅಡುಗೆ

Summer Food Tips: ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿರಿಸುವ ಸರಳ ಆಹಾರಗಳಿವು!

ಹೊರಗೆ ಕಾಲಿಟ್ಟರೆ ಸಾಕು, ಸ್ನಾನ ಮಾಡಿದಂತೆ ಬೆವರಿನಿಂದಲೇ ತೊಯ್ದು ಹೋಗುವ ಮಂದಿ ಬಿಸಿಲನ್ನು ನೋಡಿ ಉಸ್ಸಪ್ಪ ಎನ್ನುತ್ತಿದ್ದಾರೆ. ಇಂತಹ ಬಿಸಿಲಿನ ವಿರುದ್ಧ ನಮ್ಮ ದೇಹವನ್ನು ಶಕ್ತವನ್ನಾಗಿ ಮಾಡಲು, ದೇಹವನ್ನು ತಂಪಾಗಿರಿಸಲು ಸೂಕ್ತ ಆಹಾರ ಸೇವನೆಯೂ ಮುಖ್ಯ. ಯಾವೆಲ್ಲ ಸರಳ ಆಹಾರಕ್ರಮ ನಮ್ಮ ದೇಹವನ್ನು ತಂಪಾಗಿರಿಸುತ್ತದೆ ಎಂಬುದನ್ನು ನೋಡೋಣ. ಈ ಆಹಾರ ಸೇವನೆಯಿಂದ ಬೇಸಿಗೆಯಲ್ಲಿ ನೀವು ಅಸಿಡಿಟಿ, ತಲೆಸುತ್ತು, ನಿತ್ರಾಣ, ನಿದ್ರಾಹೀನತೆ, ಹಸಿವಿನ ಕೊರತೆಯಂತಹ (summer food tips) ಸಮಸ್ಯೆಗಳಿಂದಲೂ ಪಾರಾಗಬಹುದು.

VISTARANEWS.COM


on

Summer Food Tips
Koo

ಬಹಳಷ್ಟು ಮಂದಿಯ ಬಾಯಿಯಲ್ಲಿ ಈಗ ಬರುವ ಮಾತು ಒಂದೇ: ಏನು ಸೆಖೆಯಪ್ಪಾ ಈ ಬಾರಿ! ಸೂರ್ಯ ಉದಯಿಸಿದ ಕೆಲವೇ ಗಂಟೆಗಳಲ್ಲಿ ಧಗಧಗಿಸಿ ಉರಿದು ಈ ಬಾರಿಯ ಬಿಸಿಲನ್ನು ಇನ್ನಷ್ಟು ತೀವ್ರಗೊಳಿಸಿದ್ದು ಸುಳ್ಳಲ್ಲ. ಬೆಂಗಳೂರಿಗರೂ ಕೂಡ ಈ ಬಾರಿಯ ಸೆಖೆಯಿಂದ ತತ್ತರಿಸಿ ಹೋಗಿದ್ದಾರೆ. ಹೊರಗೆ ಕಾಲಿಟ್ಟರೆ ಸಾಕು, ಸ್ನಾನ ಮಾಡಿದಂತೆ ಬೆವರಿನಿಂದಲೇ ತೊಯ್ದು ಹೋಗುವ ಮಂದಿ ಬಿಸಿಲನ್ನು ನೋಡಿ ಉಸ್ಸಪ್ಪ ಎನ್ನುತ್ತಿದ್ದಾರೆ. ಇಂತಹ ಬಿಸಿಲಿನ ವಿರುದ್ಧ ನಮ್ಮ ದೇಹವನ್ನು ಶಕ್ತವನ್ನಾಗಿ ಮಾಡಲು, ದೇಹವನ್ನು ತಂಪಾಗಿರಿಸಲು ಸೂಕ್ತ ಆಹಾರ (summer food tips) ಸೇವನೆಯೂ ಕೂಡ ಮುಖ್ಯ. ಹಾಗೆ ನೋಡಿದರೆ ನಾವು ಸಾಂಪ್ರದಾಯಿಕ ಶೈಲಿಯತ್ತ ಮುಖ ಮಾಡಿದರೆ ನಮ್ಮ ಪೂರ್ವಜರು, ಹಿರಿಯರು, ಋತುಮಾನಕ್ಕೆ ಅನುಗುಣವಾಗಿ ಆಹಾರವನ್ನು ತೆಗೆದುಕೊಳ್ಳುವ ಬಗೆಯನ್ನು ನಮಗೆ ದಾಟಿಸಿದ್ದಾರೆ. ಆದರೆ ಬಹಳಷ್ಟು ಬಾರಿ ಅವರ ಅಂತಹ ಸಂದೇಶವನ್ನು ನಾವು ನಿರಾಕರಿಸಿ ನಮ್ಮದೇ ಹಾದಿಯಲ್ಲಿ ಸಾಗಿದ್ದೂ ಕೂಡ ಇಂತಹ ಸಮಸ್ಯೆಗಳಿಗೆ ಕಾರಣವೇನೋ ಅನ್ನಬಹುದು. ನಾವು ಎಸಿ ಸ್ವಿಚ್‌ ಆನ್‌ ಮಾಡಿ ದೇಹವನ್ನು ಹೊರಗಿನಿಂದ ತಂಪಾಗಿಸಬಹುದು ನಿಜವೇ ಆಗಿದ್ದರೂ, ಒಳಗಿನಿಂದ ದೇಹವನ್ನು ತಂಪಾಗಿರಿಸಲು ಕೆಲವು ಆಹಾರ ಸೇವನೆಯ ಮೊರೆ ಹೋಗಲೇಬೇಕು. ಬನ್ನಿ, ಯಾವೆಲ್ಲ ಸರಳ ಆಹಾರಕ್ರಮ ನಮ್ಮ ದೇಹವನ್ನು ತಂಪಾಗಿರಿಸುತ್ತದೆ ಎಂಬುದನ್ನು ನೋಡೋಣ. ಈ ಆಹಾರ ಸೇವನೆಯಿಂದ ಬೇಸಿಗೆಯಲ್ಲಿ ನೀವು ಅಸಿಡಿಟಿ, ತಲೆಸುತ್ತು, ನಿತ್ರಾಣ, ನಿದ್ರಾಹೀನತೆ, ಹಸಿವಿನ ಕೊರತೆಯಂತ ಸಮಸ್ಯೆಗಳ ವಿರುದ್ಧ ಹೋರಾಡಿ ಫಲವನ್ನೂ ಕಾಣಬಹುದು.

Citrus fruits

ಸ್ಥಳೀಯ ಹಣ್ಣುಗಳು

ಬೆಳಗ್ಗಿನ ತಿಂಡಿಯ ನಂತರ ಮಧ್ಯಾಹ್ನದೂಟದ ಮೊದಲು ಏನಾದರೂ ಸ್ನ್ಯಾಕ್ಸ್‌ ತಿನ್ನುವ ಅಭ್ಯಾಸ ನಿಮಗಿದೆ ಎಂದಾದಲ್ಲಿ ಬೇಸಿಗೆಯಲ್ಲಿ ನಿಮ್ಮ ಸ್ಥಳೀಯ ಹಣ್ಣುಗಳನ್ನು ತಿನ್ನಲು ಮರೆಯಬೇಡಿ. ಸ್ಥಳೀಯವಾಗಿ ಸಿಗುವ, ಬೇಸಿಗೆಯಲ್ಲಿ ಮಾತ್ರ ಲಭ್ಯವಿರುವ ಹಣ್ಣುಗಳನ್ನು ಹೊಟ್ಟೆಗಿಳಿಸಿದರೆ ನಿಮ್ಮ ದೇಹ ತಂಪಾಗುತ್ತದೆ. ಬಿಸಿಲಿನಲ್ಲಿ ಓಡಾಡಿದರೂ ದೇಹಕ್ಕೆ ಶಕ್ತಿ ಸಾಮರ್ಥ್ಯ ಬರುತ್ತದೆ. ನಿತ್ರಾಣಗೊಳ್ಳುವ, ತಲೆಸುತ್ತಿ ಬವಳಿ ಬೀಳುವಂಥ ಸಮಸ್ಯೆಗಳು ನಿಮ್ಮನ್ನು ಕಾಡದು. ಉದಾಹರಣೆಗೆ, ತಾಳೆಹಣ್ಣು ಅಥವಾ ತಾಟಿನಿಂಗು, ಕಲ್ಲಂಗಡಿ ಹಣ್ಣು, ಖರ್‌ಬೂಜ, ಸೌತೆಕಾಯಿ ಇತ್ಯಾದಿಗಳ ಸೇವನೆ ಚೈತನ್ಯ ನೀಡುತ್ತದೆ. ಯಾವುದೇ ರಸಭರಿತವಾಗಿರುವ ಹಣ್ಣು ನೀವು ತಿನ್ನಬಹುದು. ಇವು ನಿಮ್ಮ ದೇಹವನ್ನು ಅಷ್ಟೇ ಅಲ್ಲ, ಮನಸ್ಸನ್ನೂ ತಂಪಾಗಿಯೇ ಇರಿಸುತ್ತದೆ. ಯಾವಾಗಲೂ ತಾಜಾ ಆಗಿರಿಸಲು ಸಹಾಯ ಮಾಡುತ್ತದೆ.

Health Benefits Of Curd Rice

ಮೊಸರನ್ನ

ಬಹಳಷ್ಟು ಮಂದಿ ಬೇಸಿಗೆಯಲ್ಲಿ ಹಸಿವನ್ನೇ ಕಳೆದುಕೊಳ್ಳುತ್ತಾರೆ. ಏನಾದರೂ ಕುಡಿದರೆ ಸಾಕು, ತಿನ್ನುವ ಮನಸ್ಸಾಗುವುದೇ ಇಲ್ಲ ಎನ್ನುತ್ತಾರೆ. ಬೇಸಿಗೆಯ ಬಿಸಿಲಿಗೆ ಇದು ಸಹಜ ಕೂಡಾ. ಆದರೆ, ಇಂತಹ ಸಂದರ್ಭ ಬೇಸಿಗೆಯಲ್ಲಿ ನಿಮಗೆ ಒಳ್ಳೆಯದನ್ನೇ ಬಯಸುವ ಅತ್ಯುತ್ತಮ ಮಧ್ಯಾಹ್ನದೂಟ ಎಂದರೆ ಅದು ಮೊಸರನ್ನ. ಮೊಸರನ್ನಕ್ಕೆ ಒಂದಿಷ್ಟು ಉಪ್ಪಿನಕಾಯಿ, ಹಪ್ಪಳ ಸೇರಿಸಿಕೊಂಡು ತಿಂದರೆ ಸ್ವರ್ಗಸುಖ. ಇದಲ್ಲವಾದರೆ ಗಂಜಿ ಉಪ್ಪಿನಕಾಯಿಯ ಊಟವಾದರೂ ಸರಿ, ಒಡನೆಯೇ ದೇಹಕ್ಕೆ ಶಕ್ತಿ ಚೈತನ್ಯವನ್ನು ನೀಡುತ್ತದೆ. ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಮೊಸರನ್ನ ಒಳ್ಳೆಯ ಪ್ರೊಬಯಾಟಿಕ್‌ ಕೂಡಾ ಆಗಿರುವುದರಿಂದ ಇದು ಉತ್ತಮ ಅನುಭವ ನೀಡುತ್ತದೆ. ಹೊಟ್ಟೆಗೆ ಆರಾಮದಾಯಕ ಆಹಾರದ ಅನುಭವ ನೀಡುತ್ತದೆ.

ಇದನ್ನೂ ಓದಿ: Summer Health Tips: ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!

ಗುಲ್ಕಂಡ್‌ ನೀರು

ಬೇಸಿಗೆಯಲ್ಲಿ ಅಸಿಡಿಟಿ, ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಉರಿ ಇತ್ಯಾದಿ ಸಮಸ್ಯೆಗಳು ಕಾಣಿಸುತ್ತಿದ್ದರೆ ಹಾಗೂ ನಿಮ್ಮ ನಿದ್ರೆಯ ಗುಣಮಟ್ಟ, ಕಣ್ಣು ಊದಿದಂತಾಗುವುದು, ಕೈಕಾಲು ಜೋಮು ಹಿಡಿದಂತಾಗುವುದು, ಅಲ್ಲಲ್ಲಿ ನೋವು, ಉರಿಯೂತ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ಒಂದು ಚಮಚ ಗುಲ್ಕಂಡ್‌ ಅನ್ನು ನೀರಿನಲ್ಲಿ ಬೆರೆಸಿ ಮಲಗುವ ಮುನ್ನ ಕುಡಿಯಿರಿ. ಈ ಗುಲಾಬಿಯ ದಳದ ಡ್ರಿಂಕ್‌ ನಿಮ್ಮ ಈ ಸಮಸ್ಯೆಗಳಿಂದ ಬಚಾವು ಮಾಡುವುದಷ್ಟೇ ಅಲ್ಲ, ಒಂದು ರಿಲ್ಯಾಕ್ಸ್‌ ಅನುಭವವನ್ನೂ ನೀಡುತ್ತದೆ.

Continue Reading
Advertisement
chikkaballapur woman murder case
ಕ್ರೈಂ37 mins ago

Murder Case: ಪ್ರಿಯತಮೆ ಎದುರೇ ಮಹಿಳೆಯ ಅತ್ಯಾಚಾರ ಮಾಡಿ ಕೊಂದ ಪಾಪಿ!

Covishield Vaccine
ದೇಶ38 mins ago

Covishield Vaccine: ಕೋವಿಶೀಲ್ಡ್‌ ಲಸಿಕೆ ಹಿಂಪಡೆಯುವುದಾಗಿ ಅಸ್ಟ್ರಾಜೆನೆಕಾ ಘೋಷಣೆ

Aishwarya Arjun Umapathy Ramaiah Wedding Date Venue Revealed
ಸ್ಯಾಂಡಲ್ ವುಡ್44 mins ago

Aishwarya Arjun: ಅರ್ಜುನ್ ಸರ್ಜಾ ಪುತ್ರಿ ಮದುವೆ ಮುಹೂರ್ತ ಫಿಕ್ಸ್!

toilet video shooting in mangalore
ಕ್ರೈಂ1 hour ago

Toilet Video: ಮೆಡಿಕಲ್‌ ಕಾಲೇಜಿನ ಲೇಡಿಸ್‌ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ!

Ranveer Singh Wedding Pics With Deepika Padukone
ಸ್ಯಾಂಡಲ್ ವುಡ್1 hour ago

Ranveer Singh: ಮಗುವಿನ ನಿರೀಕ್ಷೆ ಹೊಸ್ತಿಲಲ್ಲೇ ಮದುವೆ ಫೋಟೊಗಳು ಡಿಲಿಟ್‌! ದೀಪಿಕಾ ಜತೆ ರಣವೀರ್ ಕಿರಿಕ್‌?

EVMs damage
ದೇಶ1 hour ago

EVMs Damage: ಚುನಾವಣಾ ಸಿಬ್ಬಂದಿ ಇದ್ದ ಬಸ್‌ನಲ್ಲಿ ಬೆಂಕಿ ಅವಘಡ; ಮತಯಂತ್ರಗಳು ಡ್ಯಾಮೇಜ್‌

Manali Tour
ಪ್ರವಾಸ2 hours ago

Manali Tour: ಭೂಲೋಕದ ಸ್ವರ್ಗ ಮನಾಲಿಗೆ ಪ್ರವಾಸ ಮಾಡಲು ಯಾವ ಸಮಯ ಸೂಕ್ತ?

Akshaya Tritiya 2024
ಧಾರ್ಮಿಕ2 hours ago

Akshaya Tritiya 2024: ಅಕ್ಷಯ ತೃತೀಯ ಅಂದರೆ ಚಿನ್ನ ಖರೀದಿಯೊಂದೇ ಅಲ್ಲ! ಹೀಗೆ ಮಾಡಿಯೂ ಸಮೃದ್ಧಿ ಹೊಂದಬಹುದು!

Prajwal Revanna Case HD Revanna bail plea to be heard tomorrow Jail or Bela
ಕ್ರೈಂ2 hours ago

Prajwal Revanna Case: ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಜೈಲಾ? ಬೇಲಾ?

woman murder case divya
ಕ್ರೈಂ2 hours ago

Murder Case: ಮಾಜಿ ಪ್ರಿಯಕರನಿಂದ ಮಹಿಳೆಯ ಕೊಲೆ, ಕಾರಣ ನಿಗೂಢ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ13 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ16 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ18 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌