Viral video | ಕಳಶಕ್ಕಿಟ್ಟ ತೆಂಗಿನಕಾಯಿಯಂತಿರುವ ಇದು ಸಿಹಿತಿಂಡಿಯೋ, ಕಲಾಕೃತಿಯೋ? - Vistara News

ಆಹಾರ/ಅಡುಗೆ

Viral video | ಕಳಶಕ್ಕಿಟ್ಟ ತೆಂಗಿನಕಾಯಿಯಂತಿರುವ ಇದು ಸಿಹಿತಿಂಡಿಯೋ, ಕಲಾಕೃತಿಯೋ?

ಥರಹೇವಾರಿ ನಮೂನೆಯ ಕೇಕ್‌ ಹಾಗೂ ಪೇಸ್ಟ್ರಿಗಳನ್ನು ಮಾಡಿ ಜಗತ್ತಿನ ಮುಂದಿಟ್ಟು ದಂಗುಬಡಿಸುವ ಪೇಸ್ಟ್ರಿ ಕಲಾವಿದ ಗುಯ್ಚಾನ್‌ ಈಗ ಹೊಸತೊಂದು ಸಿಹಿಯ ಜೊತೆಗೆ ಬಂದಿದ್ದಾರೆ. ಈ ಬಾರಿ ಮಾಡಿದ ಸಿಹಿತಿಂಡಿ ನಿಜವಾದ ತೆಂಗಿನಕಾಯಿಯನ್ನು ಹೋಲುತ್ತಿದೆ.

VISTARANEWS.COM


on

pastry art
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಫಕ್ಕನೆ ನೋಡಿದರೆ, ಹಬ್ಬಕ್ಕೆ ರೆಡಿ ಮಾಡಿದ ಕಳಶದ ತೆಂಗಿನಕಾಯಿ ಎಂದು ಕನ್ಫ್ಯೂಸ್‌ ಆದರೆ ಅಚ್ಚರಿಯಿಲ್ಲ. ಯಾಕೆಂದರೆ ಅಮೌರಿ ಗುಯ್ಚಾನ್‌ ಎಂಬ ಪೇಸ್ಟ್ರಿ ಕಲಾವಿದ ಮಾಡುವ ಸಿಹಿತಿಂಡಿ, ಕೇಕ್‌, ಪೇಸ್ಟ್ರಿಗಳೆಲ್ಲವೂ ಹಾಗೆಯೇ. ನೈಜ ವಸ್ತುವಿಗೂ ಸೆಡ್ಡು ಹೊಡೆಯುವಂಥ ವಿನ್ಯಾಸದಿಂದ ನೋಡುಗರನ್ನು ಅಚ್ಚರಿಗೆ ನೂಕುತ್ತದೆ.

ಥರಹೇವಾರಿ ನಮೂನೆಯ ಕೇಕ್‌ ಹಾಗೂ ಪೇಸ್ಟ್ರಿಗಳನ್ನು ಮಾಡಿ ಜಗತ್ತಿನ ಮುಂದಿಟ್ಟು ದಂಗುಬಡಿಸುವ ಪೇಸ್ಟ್ರಿ ಕಲಾವಿದ ಗುಯ್ಚಾನ್‌ ಈಗ ಹೊಸತೊಂದು ಸಿಹಿಯ ಜೊತೆಗೆ ಬಂದಿದ್ದಾರೆ. ಈ ಬಾರಿ ಮಾಡಿದ ಸಿಹಿತಿಂಡಿ ನಿಜವಾದ ತೆಂಗಿನಕಾಯಿಯನ್ನು ಹೋಲುತ್ತಿದ್ದು ಅದನ್ನು ಒಡೆದು ನೋಡಿದರೆ, ಥೇಟ್‌ ತೆಂಗಿನಕಾಯಿಯ ರಚನೆಯಂತೆಯೇ ಇರುವುದು ಈ ಕೇಕ್‌ ಕಲಾವಿದನ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿದೆ.

ಈಗ ಆಹಾರವೆಂದರೆ ಕೇವಲ ಹೊಟ್ಟೆತುಂಬಿಸುವ ಭಾವವಷ್ಟೇ ಅಲ್ಲ. ಅಲ್ಲೂ ಕಲೆಯಿದೆ. ಅಡುಗೆ ಮಾಡುವುದೇ ಒಂದು ಕಲೆ ಎಂಬುದು ಒಪ್ಪಿಕೊಂಡ ಸತ್ಯವೇ ಆಗಿದ್ದರೂ, ಅಡುಗೆಯನ್ನು ಕಲೆಯಂತೆಯೇ ಪರಿಗಣಿಸಿ ನಿಜಾರ್ಥದಲ್ಲಿ ಕಲಾಕೃತಿಯಂಥದ್ದೇ ತಿನಿಸುಗಳನ್ನೇ ಮಾಡಿ, ತಿನ್ನಲೂ ಹಿಂದೆ ಮುಂದೆ ನೋಡುವಷ್ಟು ನೈಜವಾಗಿ ಕಾಣುವಂಥ ತಿನಿಸುಗಳನ್ನು ಲೋಕದ ಮುಂದಿಡುವ ಗುಯ್‌ಚಾನ್‌ನ ಕೇಕ್‌, ಪೇಸ್ಟ್ರೀ ಕಲೆಗೆ ಮರುಳಾಗದವರಿಲ್ಲ.

ಈಗ ಗುಯ್ಚಾನ್‌ ತನ್ನ ಇನ್ಸ್‌ಟಾ ಖಾತೆಯಲ್ಲಿ ಸಿಹಿತಿಂಡಿಯೊಂದನ್ನು ಮಾಡಿದ್ದು, ಮಾಡುವ ವಿಧಾನದ ವಿಡಿಯೋದೊಂದಿಗೆ ಪೋಸ್ಟ್‌ ಮಾಡಿದ್ದಾರೆ. ಇದನ್ನು ನಡಿದವರು ಖಂಡಿತವಾಗಿ ಕಳಶಕ್ಕಿಟ್ಟ ತೆಂಗಿನಕಾಯಿ ಎಂದು ಭಾವಿಸಿಯಾರು. ಅಷ್ಟು ನೈಜವಾಗಿ ತೆಂಗಿನಕಾಯಿಯನ್ನೇ ಹೋಲುವ ಈ ಸಿಹಿತಿಂಡಿಯ ಮೇಲ್ಭಾವನ್ನು ಕತ್ತರಿಸಿ ಒಡೆದ ತೆಂಗಿನಕಾಯಿಯ ಲುಕ್‌ ನೀಡಿದ್ದಾರೆ. ಮೇಲಿನಿಂದ ಎಲೆಯ ಅಲಂಕಾರವೂ ಮಾಡಿರುವುದರಿಂದ ಶುಭ ಸಂದರ್ಭಗಳಲ್ಲಿ ಕಳಶದ ಮೇಲಿರುವ ತೆಂಗಿನಕಾಯಿಯಂತೆ ಕಾಣುತ್ತದೆ.‌

ಇದನ್ನೂ ಓದಿ | Bengaluru Belly | ಬೆಂಗಳೂರು ಬೆಲ್ಲಿ ರೆಸ್ಟೋರೆಂಟ್‌ನಲ್ಲಿ ಏನುಂಟು ಏನಿಲ್ಲ!

ಈತ ಅದೆಷ್ಟು ಪ್ರೀತಿಯಿಂದ ಈ ಸಿಹಿತಿಂಡಿಯನ್ನು ಮಾಡುತ್ತಾರೆಂದು ಆತನ ವಿಡಿಯೋದಲ್ಲೇ ನೋಡಬೇಕು. ಪ್ರತಿಯೊಂದು ಸಣ್ಣ ಸಣ್ಣ ವಿವರಗಳೂ ಈ ವಿಡಿಯೋದಲ್ಲಿ ದಾಖಲಾಗುತ್ತದೆ. ಹೂರಣದಿಂದ ಹಿಡಿದು ತೆಂಗಿನಕಾಯಿಯ ಹೊರಕವಚದವರೆಗೆ ಏನೆಲ್ಲ ವಸ್ತುಗಳನ್ನು ಇದರಲ್ಲಿ ಬಳಸಲಾಗಿದೆ ಎಂಬ ವಿವರಗಳನ್ನು ಈತನ ವಿಡಿಯೋದಲ್ಲಿ ಕಣ್ಣಾರೆ ಕಾಣಬಹುದು. ಇದೆಲ್ಲವನ್ನು ಆತ ಹೇಗೆ ಮಾಡುತ್ತಾನೆಂಬ ಆತನ ಕೈಚಳಕವನ್ನೂ ನೋಡಬಹುದು. ಈ ವಿಡಿಯೋದಲ್ಲಿ ತೋರಿಸಿದ ಹಾಗೆ ತೆಂಗಿನಕಾಯಿ ಆಕಾರದ ಸಿಹಿತಿಂಡಿಯೊಳಗೆ ಬಳಸಿದ ಹೂರಣ ಮಾವಿನಹಣ್ಣು ಹಾಗೂ ಅನಾನಾಸು. ಇದಾದ ಮೇಲೆ ತೆಂಗಿನ ಕಾಯಿಯ ಬಿಳಿಯ ಭಾಗವನ್ನೂ ನೈಜವಾಗಿ ಬರುವಂತೆ ಮಾಡಿದ್ದು ಕೊನೆಯಲ್ಲಿ ಚಾಕೋಲೇಟ್‌ನಿಂದ ಡಿಪ್‌ ಮಾಡಿ ಅದಕ್ಕೆ ತೆಂಗಿನಕಾಯಿಯ ಒರಟು ಲುಕ್‌ ಬರುವಂತೆ ಮಾಡಲಾಗಿದೆ. ಮೇಲಿನ ಭಾಗವನ್ನು ಒಡೆದು, ಅದರಲ್ಲಿ ಎಲೆಯಂತಹ ಅಲಂಕಾರವನ್ನು ಮಾಡಲಾಗಿದೆ. ಈ ಇಡೀ ಸಿಹಿ ತಿನಿಸನ್ನು ಮಾವಿನಹಣ್ಣು, ಅನಾನಾಸು, ಪ್ಯಾಷನ್‌ ಫ್ರುಟ್‌, ತೆಂಗಿನಕಾಯಿ, ವೆನಿಲ್ಲಾ ಹಾಗೂ ರಮ್‌ ಬಳಸಿ ಮಾಡಲಾಗಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ, ಸಾಮಾಜಿಕ ಜಾಲತಾಣದಲ್ಲಿ ಇದು ಮಿಲಿಯಗಟ್ಟಲೆ ವೀಕ್ಷಣೆ ಪಡೆದಿದ್ದು, ಈತನ ಕೈಚಳಕಕ್ಕೆ ಹಾಗೂ ಕ್ರಿಯಾತ್ಮಕ ಆಲೋಚನೆಗಳಿಗೆ ಜನರು ಫಿದಾ ಆಗಿದ್ದಾರೆ. ಈತನೊಬ್ಬ ಕಲಾಕಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಡುಗೆಯೂ ಒಂದು ಕಲೆ ಎಂದು ಪ್ರತಿನಿತ್ಯವೂ ಸಾಬೀತುಪಡಿಸುವ ಈತನ ಕಲಾನೈಪುಣ್ಯಕ್ಕೆ ಈತನ ಕಲಾಕೃತಿಗಳೇ ಸಾಕ್ಷಿ ಎಂದು ಮೆಚ್ಚಿ ಕಾಮೆಂಟ್‌ ಮಾಡಿದ್ದಾರೆ.

ನೀವು ಯಾವ ಟೈಟಲ್‌ ಕೊಡುತ್ತೀರಿ ಎಂಬುದನ್ನೂ ನೋಡದೆ, ನಿಮ್ಮ ವಿಡಿಯೋವನ್ನು ಅದನ್ನು ಮಾಡುವ ಬಗೆಯನ್ನು ಪ್ರತಿ ಬಾರಿಯೂ ಕೌತುಕದಿಂದ ವೀಕ್ಷಿಸುತ್ತೇನೆ. ಅದ್ಭುತ ಕಲಾಕೃತಿಯಿದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬಾತ, ನೀವೊಬ್ಬ ಕ್ರಿಯೇಟಿವ್‌ ಜೀನಿಯಸ್‌. ಈದನ್ನು ನೋಡಿದರೆ, ತಿಂದು ರುಚಿ ನೋಡಬೇಕೆಂಬ ಆಸೆ ಹೆಚ್ಚಾಗುತ್ತಿದೆ ಎಂದು ಕಾಮೆಂಟಿಸಿದ್ದಾರೆ.

ಇದನ್ನೂ ಓದಿ | Viral video | ಮನಸೆಳೆದ ಈ ಪಿಂಟಾರಾ ಕೇಕ್‌ ಮಾಡಲು ಐದು ದಿನ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Curry Leaves: ಇದರ ಮಹತ್ವ ತಿಳಿದರೆ ನೀವು ಇನ್ನೆಂದೂ ಕರಿ ಬೇವಿನ ಎಲೆಯನ್ನು ಪಕ್ಕಕ್ಕೆ ಎತ್ತಿಡುವುದಿಲ್ಲ!

Curry Leaves: ಕರಿಬೇವನ್ನು ಒಗ್ಗರಣೆಗೆ ಬಳಸಿ ಬಿಸಾಡುತ್ತೇವೆ. ಆದರೆ ಈ ಕರಿಬೇವಿನಲ್ಲಿರುವ ಅಂಶಗಳು ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುವಲ್ಲಿ ತುಂಬಾ ಸಹಾಯಕಾರಿಯಾಗಿದೆ. ಇದರಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದ್ದು, ಇದನ್ನು ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.ಇನ್ಮುಂದೆ ಊಟದಲ್ಲಿ ತಟ್ಟೆಯಲ್ಲಿ ಸಿಕ್ಕ ಕರಿಬೇವನ್ನು ಬಿಸಾಡುವ ಮೊದಲು ಯೋಚಿಸಿ.

VISTARANEWS.COM


on

Curry Leaves
Koo


ಕರಿಬೇವಿನ ಎಲೆಗಳನ್ನು ಅಡುಗೆಯಲ್ಲಿ ಹೆಚ್ಚು ಬಳಸುತ್ತಾರೆ. ಕಾರಣ, ಇದು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲದೆ ಇದು ಪೋಷಕಾಂಶಗಳ ನಿಧಿಯಾಗಿದೆ. ಇದರಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದ್ದು, ಇದನ್ನು ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಕರಿಬೇವಿನ ಎಲೆಗಳನ್ನು ಅಡುಗೆಯಲ್ಲಿ ಬಳಸುವ ಮೂಲದ ಇಲ್ಲವಾದರೆ ಹಸಿಯಾಗಿ ಜಗಿಯುವುದು ಅಥವಾ ಅವುಗಳ ರಸವನ್ನು ಕುಡಿಯುವುದರಿಂದ ಕೂಡ ನಮ್ಮ ಆರೋಗ್ಯವನ್ನು(Curry Leaves) ವೃದ್ಧಿಸಿಕೊಳ್ಳಬಹುದು.

Curry Leaves
Curry Leaves

ಕೂದಲಿನ ಬೆಳವಣಿಗೆಗೆ ಸಹಾಯಕಾರಿ

ಕರಿಬೇವಿನ ಎಲೆಗಳನ್ನು ಜಗಿಯುವುದು ಅಥವಾ ಅವುಗಳ ರಸವನ್ನು ಕುಡಿಯುವುದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.

Curry Leaves
Curry Leaves

ಚರ್ಮಕ್ಕೆ ವರದಾನ

ಕರಿಬೇವಿನ ಎಲೆಗಳು ಚರ್ಮಕ್ಕೆ ವರದಾನವಾಗಿದ್ದು, ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ, ಮೊಡವೆಗಳು, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

Curry Leaves
Curry Leaves

ತೂಕ ಕಡಿಮೆ ಮಾಡುವಲ್ಲಿ ಸಹಾಯಕ

ಬೆಳಗ್ಗೆ ಕರಿಬೇವಿನ ಎಲೆಗಳು ಅಥವಾ ಅವುಗಳ ರಸವನ್ನು ಸೇವಿಸುವುದರಿಂದ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹ ನಿರ್ವಿಷಗೊಳ್ಳುತ್ತದೆ ಮತ್ತು ಇದು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ರಕ್ತಹೀನತೆ ನಿವಾರಣೆ

ಕರಿಬೇವಿನಲ್ಲಿ ಕಬ್ಬಿಣದ ಸತ್ವಗಳು ಸಮೃದ್ಧವಾಗಿದೆ. ಕರಿಬೇವಿನ ಎಲೆಗಳು ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ರಕ್ತಹೀನತೆ ಮತ್ತು ಅದಕ್ಕೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ.

Curry Leaves
Curry Leaves

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ

ಕರಿಬೇವಿನ ಎಲೆಯ ರಸವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಕಡಿಮೆ ರಕ್ತದಲ್ಲಿ ಸಕ್ಕರೆಯಂಶ ಕಡಿಮೆ ಇರುವ ವ್ಯಕ್ತಿಗಳು ಕರಿಬೇವಿನ ಎಲೆಯ ರಸವನ್ನು ಸೇವಿಸುವುದನ್ನು ತಪ್ಪಿಸಬೇಕು.

Curry Leaves
Curry Leaves

ಒತ್ತಡ, ಆತಂಕ ನಿವಾರಣೆ

ಇದಲ್ಲದೇ ಕರಿಬೇವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ವಾಕರಿಕೆಯನ್ನು ನಿವಾರಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಗಾಗಿ ಪ್ರತಿದಿನ ಬೆಳಗ್ಗೆ 5-6 ತಾಜಾ ಕರಿಬೇವಿನ ಎಲೆಗಳನ್ನು ಜಗಿಯಿರಿ. ಅಥವಾ ಕರಿಬೇವಿನ ಎಲೆಯ ರಸ 1 ಚಮಚದಷ್ಟು ನೀರಿನೊಂದಿಗೆ ಬೆರೆಸಿ ಕುಡಿಯಿರಿ. ನಿಮ್ಮ ಊಟಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸಿ.

ಇದನ್ನೂ ಓದಿ: ಬೀದಿ ನಾಯಿ ದಾಳಿಯಿಂದ ಮಗುವನ್ನು ರಕ್ಷಿಸಿದ ಸಾಕು ನಾಯಿ! ಅಪರೂಪದ ವಿಡಿಯೊ

ಆದರೆ ನೀವು ನಿಮ್ಮ ಆಹಾರದಲ್ಲಿ ಕರಿಬೇವನ್ನು ಬಳಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಯಾಕೆಂದರೆ ಕೆಲವೊಂದು ಆರೋಗ್ಯಕರ ವಸ್ತುಗಳು ದೇಹಕ್ಕೆ ಅನುಕೂಲಕರವಾಗಿದ್ದರೂ ಕೆಲವೊಮ್ಮೆ ಅಡ್ಡಪರಿಣಾಮಗಳನ್ನುಂಟುಮಾಡುವ ಸಂಭವವಿದೆ. ಹಾಗಾಗಿ ವೈದ್ಯರ ಸಲಹೆಯಂತೆ ಸೇವಿಸಿ.

Continue Reading

ಆರೋಗ್ಯ

Monsoon Healthy Cooking Tips: ಮಳೆಗಾಲದಲ್ಲಿ ಸೊಪ್ಪಿನ ಅಡುಗೆ ಮಾಡುವ ಮುನ್ನ ಈ ಎಚ್ಚರಿಕೆಗಳನ್ನು ವಹಿಸಿ

Monsoon Healthy Cooking Tips: ಎಲ್ಲೆಲ್ಲೂ ವೈರಲ್‌ ಜ್ವರಗಳು, ಇನ್‌ಫೆಕ್ಷನ್‌ ಸಮಸ್ಯೆಗಳು, ಮಳೆಗಾಲದಲ್ಲಿ ಕಾಡುವ ಶೀತ, ನೆಗಡಿ, ಕೆಮ್ಮು, ಕಫಗಳೂ ಹೆಚ್ಚಾಗಿವೆ. ಮಳೆಗಾಲದ ಸಂಭ್ರಮದ ಜೊತೆ ಈ ಎಲ್ಲ ಸಮಸ್ಯೆಗಳೂ ನಮ್ಮನ್ನು ಒಮ್ಮೆಯಾದರೂ ಕಾಡದೆ ಹೋಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಕೆಲವು ಆಹಾರಗಳನ್ನು ನಾವು ಕಡಿಮೆ ಮಾಡಬಹುದು. ಅವುಗಳಲ್ಲಿ ಮುಖ್ಯವಾದುದು ಹಸಿರು ಸೊಪ್ಪು.

VISTARANEWS.COM


on

Monsoon Healthy Cooking Tips
Koo

ಮಳೆಗಾಲ (Monsoon) ಜೋರಾಗಿದೆ. ಹಾಗಾಗಿ ವೈರಸ್‌, ಬ್ಯಾಕ್ಟೀರಿಯಾಗಳ ಸದ್ದೂ ಜೋರಾಗಿದೆ. ಎಲ್ಲೆಲ್ಲೂ ವೈರಲ್‌ ಜ್ವರಗಳು, ಇನ್‌ಫೆಕ್ಷನ್‌ ಸಮಸ್ಯೆಗಳು, ಮಳೆಗಾಲದಲ್ಲಿ ಕಾಡುವ ಶೀತ, ನೆಗಡಿ, ಕೆಮ್ಮು, ಕಫಗಳೂ ಹೆಚ್ಚಾಗಿವೆ. ಮಳೆಗಾಲದ ಸಂಭ್ರಮದ ಜೊತೆ ಈ ಎಲ್ಲ ಸಮಸ್ಯೆಗಳೂ ನಮ್ಮನ್ನು ಒಮ್ಮೆಯಾದರೂ ಕಾಡದೆ ಹೋಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಕೆಲವು ಆಹಾರಗಳನ್ನು ನಾವು ಕಡಿಮೆ ಮಾಡಬಹುದು. ಅವುಗಳಲ್ಲಿ ಮುಖ್ಯವಾದುದು ಹಸಿರು ಸೊಪ್ಪು. ಸೊಪ್ಪಿನ ಅಡುಗೆ ಮಾಡುವ ಮುನ್ನ ಮಳೆಗಾಲದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹಾಗಂತ ಮಳೆಗಾಲದಲ್ಲಿ ಇವನ್ನು ತಿನ್ನಲೇಬಾರದು ಎಂದಲ್ಲ. ಎಚ್ಚರಿಕೆ ಖಂಡಿತ ಬೇಕು. ಮಳೆಗಾಲದಲ್ಲಿ ಸೊಪ್ಪಿನ ಮೇಲೆ ಸಾಕಷ್ಟು ಬ್ಯಾಕ್ಟೀರಿಯಾ, ವೈರಸ್‌ ದಾಳಿಯಾಗಿರುತ್ತದೆ. ಹುಳು ಹುಪ್ಪಟೆಗಳೂ ಸಾಮಾನ್ಯ. ಆದ್ದರಿಂದ ಇವುಗಳು ನಮ್ಮ ದೇಹಕ್ಕೆ ಪ್ರವೇಶಿಸುವ ಮಾರ್ಗ ಸುಲಭವಾಗಿ ಬಿಡುತ್ತದೆ. ನಾವು ಅವುಗಳನ್ನು ಸರಿಯಾಗಿ ತೊಳೆದು ಬಳಸದಿದ್ದರೆ ಹೊಟ್ಟೆ ಕೆಡುವ ಸಮಸ್ಯೆ, ಬೇದಿ, ವಾಂತಿ ಇತ್ಯಾದಿಗಳೂ ಬರಬಹುದು. ಹಾಗಾಗಿ, ಮಳೆಗಾಲದಲ್ಲಿ ಸೊಪ್ಪು ಸದೆಗಳನ್ನು ಅಡುಗೆ ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಿ ಎನ್ನುತ್ತಾರೆ ತಜ್ಞರು. ಬನ್ನಿ, ಸೊಪ್ಪು ಸೇವಿಸುವ ಮುನ್ನ ಯಾವ ಎಚ್ಚರಿಕೆಗಳು (Monsoon Healthy Cooking Tips) ಮುಖ್ಯ ಎಂಬುದನ್ನು ನೋಡೋಣ. ಮಳೆಗಾಲದಲ್ಲಿ, ಸಹಜವಾಗಿ ಕೆಲವು ಸೊಪ್ಪುಗಳು ತರಕಾರಿ ಮಾರುಕಟ್ಟೆಯಲ್ಲಿ ಕಾಣೆಯಾಗುತ್ತದೆ. ಬಹಳ ಸೂಕ್ಷ್ಮವಾಗಿರುವ ಪಾಲಕ್‌ನಂತಹ ಸೊಪ್ಪುಗಳು ಮಳೆಗಾಲದಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕಿ ಹರಿದು ಛಿದ್ರವಾಗುವುದರಿಂದ ಮಾರುಕಟ್ಟೆಗೆ ಬರುವುದೇ ಇಲ್ಲ. ಮೆಂತ್ಯ ಸೊಪ್ಪೂ ಕೂಡಾ ಅಷ್ಟೇ, ಮಳೆಗಾಲದಲ್ಲಿ ಮಾರುಕಟ್ಟೆಯಲ್ಲಿರುವುದಿಲ್ಲ. ಕೆಲವು ಸೊಪ್ಪುಗಳು ಮಳೆಗಾಲಕ್ಕೆ ಸರಿಯಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಆದರೆ, ಮಳೆಗಾಲವಾದ್ದರಿಂದ ಸೊಪ್ಪು ಹರದಿರುವುದು, ಬೇರುಗಳೆಲ್ಲ ಕೆಸರಾಗಿರುವುದು, ಹುಳು ಹುಪ್ಪಟೆಗಳು ಎಲೆಯನ್ನು ಕಚ್ಚಿ ಹರಿದಿರುವುದು, ಎಲೆಯ ಅಡುಭಾಗದಲ್ಲಿ ಹುಳಗಳು ಹರಿದುಹೋಗಿರುವ ಗುರುತು ಇವೆಲ್ಲವೂ ಸಾಮಾನ್ಯವಾಗಿರುತ್ತದೆ. ಹಾಗಾಗಿಯೇ ಸೊಪ್ಪಿನ ಅಡುಗೆ ಮಾಡುವಾಗ ಎಚ್ಚರಿಕೆ ಬಹಳ ಅಗತ್ಯ.

Healthy Cooking Tips

ಸೊಪ್ಪಿನ ಅಡುಗೆ ಮಳೆಗಾಲದಲ್ಲಿ ಮಾಡುವ ಮೊದಲು ಸೊಪ್ಪನ್ನು ಮೊದಲು ಬಿಡಿಸಿ. ನೀರಲ್ಲಿ ಹಾಕಿಟ್ಟು ತೊಳೆಯಿರಿ. ಹುಳ ಹುಪ್ಪಟೆಗಳಿರುವ ಎಲೆಗಳನ್ನು ಬಳಸದಿರಿ. ಸರಿಯಾಗಿರುವ, ಆರೋಗ್ಯವಾಗಿ ಕಾಣುವ ಎಲೆಗಳನ್ನು ಆರಿಸಿಕೊಂಡು ಪ್ರತ್ಯೇಕವಾಗಿಟ್ಟು, ಉಳಿದವನ್ನು ಎಸೆಯಿರಿ. ಪ್ರತಿಯೊಂದು ಎಲೆಯನ್ನೂ ಸೂಕ್ಷ್ಮವಾಗಿ ಗಮನಿಸಿ. ಸರಿಯಾಗಿರುವ ಎಲೆಯನ್ನು ಮಾತ್ರ ಚೆನ್ನಾಗಿ ಎರಡೆರಡು ಬಾರಿ ತೊಳೆದುಕೊಂಡು ಅದರ ಕಾಂಡಗಳನ್ನು ಕತ್ತರಿಸಿ ಎಸೆಯಿರಿ.

ಹರಿಯುವ ನೀರಿಗೆ ಹಿಡಿದು ತೊಳೆಯಿರಿ. ಮಾರುಕಟ್ಟೆಯಿಂದ ತಂದ ಕೃತಕ ತೊಳೆಯುವ ಲಿಕ್ವಿಡ್‌ಗಳಲ್ಲಿ ಹಾಕಿಟ್ಟು ತೊಳೆಯುವುದರಿಂದ ಎಲೆ ಮತ್ತಷ್ಟು ಹಾಳಾಗಬಹುದು. ಅದಕ್ಕಾಗಿ, ನಳ್ಳಿಯ ಅಡಿಯಲ್ಲಿ ಹಿಡಿದು ಹರಿಯುವ ನೀರಿನಲ್ಲಿ ತೊಳೆಯಿರಿ.

Hand Washing Leafy Greens

ತೊಳೆದ ಎಲೆಗಳನ್ನು ಆರಲು ಬಿಡುವುದು ಬಹಳ ಮುಖ್ಯ. ಒಣ ಟವೆಲ್‌ ಮೇಲೆ ತೊಳೆದ ಎಲೆಗಳನ್ನು ಹರವಿಟ್ಟು ಮೃದುವಾಗಿ ಒರೆಸಬಹುದು. ಅಥವಾ ಹಾಗೆಯೇ ಸ್ವಲ್ಪ ಹೊತ್ತು ಬಿಟ್ಟು ಹೆಚ್ಚಿನ ನೀರಿನಂಶ ಆರಲು ಬಿಡಬಹುದು.

ಎಲೆಗಳನ್ನು ತೊಳೆದುಕೊಂಡ ಮೇಳೆ ಒಂದೆರಡು ನಿಮಿಷಗಳ ಕಾಲ ಐಸ್‌ ನೀರಿನಲ್ಲಿ ಹಾಕಿಟ್ಟುಕೊಂಡು ನಂತರ ತೆಗೆಯಬಹುದು. ಹೀಗೆ ಮಾಡುವುದರಿಂದ ಎಲೆಯ ತಾಜಾತನ ಹಾಗೆಯೇ ಉಳಿದುಕೊಳ್ಳುತ್ತದೆ.

ಇದನ್ನೂ ಓದಿ: Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

ಹಸಿ ಎಲೆಗಳಿಂದ ಮಾಡುವ ಅಡುಗೆಯನ್ನು ಮಳೆಗಾಲದಲ್ಲಿ ಮಾಡಬೇಡಿ. ಬಾಣಲೆಯಲ್ಲಿ ಎಲೆಯನ್ನು ಬಾಡಿಸಿಕೊಂಡು, ಬಿಸಿ ಮಾಡುವ ಮೂಲಕ ಮಾಡುವ ಅಡುಗೆಯನ್ನೇ ಮಾಡಿ. ಮಳೆಗಾಲದಲ್ಲಿ ಹಸಿ ಸೊಪ್ಪು ತರಕಾರಿಗಳನ್ನು ಹಾಗೆಯೇ ಹಸಿಯಾಗಿ ಬಳಸಬೇಡಿ.

Continue Reading

ಧಾರ್ಮಿಕ

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

Shravan 2024: ಶ್ರಾವಣ ಮಾಸದಲ್ಲಿ (Shravan Month 2024) ಹೆಚ್ಚಾಗಿ ದೇವರ ಭಕ್ತಿ, ಪ್ರಾರ್ಥನೆಯಲ್ಲಿ ತೊಡಗುವುದರಿಂದ ಆಹಾರ ನಿಯಮಗಳನ್ನು ಕಠಿಣವಾಗಿ ಅನುಸರಿಸಲಾಗುತ್ತದೆ. ಉಪವಾಸ ಇರುವವರು ಈ ಸಂದರ್ಭದಲ್ಲಿ ಆಹಾರದ ಮಾರ್ಗಸೂಚಿಗಳನ್ನು ಅನುಸರಿಸಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಧ್ಯಾತ್ಮಿಕ ಗಮನವನ್ನು ಕೇಂದ್ರೀಕರಿಸಬಹುದು.

VISTARANEWS.COM


on

By

Shravan Month 2024
Koo

ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ (da.ra. bendre) ಕವನದ ಸಾಲುಗಳು ಶ್ರಾವಣ ಮಾಸದ (Shravan 2024) ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು (Shravan Month) ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ.

ಈ ಬಾರಿ ಆಗಸ್ಟ್ 4ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಈ ಮಂಗಳಕರ ಅವಧಿಯಲ್ಲಿ ವಿಶೇಷ ಪ್ರಾರ್ಥನೆ, ಆಚರಣೆ ಮತ್ತು ಆಹಾರದ ನಿರ್ಬಂಧ ಇರುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ನಿರ್ದಿಷ್ಟ ಆಹಾರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಈ ಪವಿತ್ರ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ತಪ್ಪಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು

Shravan Month 2024
Shravan Month 2024


ತಾಜಾ ಹಣ್ಣುಗಳು: ಶ್ರಾವಣ ಮಾಸದಲ್ಲಿ ತಾಜಾ ಹಣ್ಣುಗಳು ಆಹಾರದ ಅತ್ಯಗತ್ಯ ಭಾಗವಾಗಿದೆ. ಅವುಗಳನ್ನು ಶುದ್ಧ ಮತ್ತು ಜೀರ್ಣಿಸಿಕೊಳ್ಳಲು ಸುಲಭವೆಂದು ಪರಿಗಣಿಸಲಾಗುತ್ತದೆ. ಅಗತ್ಯವಾದ ಪೋಷಕಾಂಶಗಳು ಮತ್ತು ಜಲಸಂಚಯನವನ್ನು ಒದಗಿಸುತ್ತದೆ.ಇದರಲ್ಲಿ ಬಾಳೆಹಣ್ಣು, ಸೇಬು, ದಾಳಿಂಬೆ ಮತ್ತು ಕಲ್ಲಂಗಡಿಗಳು ಸೇರಿವೆ.

ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ.

ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ ವಡಾ ಶ್ರಾವಣ ಮಾಸದ ಮುಖ್ಯವಾದ ಆಹಾರವಾಗಿದೆ. ಸಾಬುದಾನವು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು ದಿನವಿಡೀ ಶಕ್ತಿಯನ್ನು ನೀಡುತ್ತದೆ.

ಹುರುಳಿಕಾಳಿನ ಹಿಟ್ಟು: ಪೂರಿ, ಚಪಾತಿ ಅಥವಾ ಪ್ಯಾನ್ ಕೇಕ್‌ಗಳನ್ನು ತಯಾರಿಸಲು ಹುರುಳಿಕಾಳಿನ ಹಿಟ್ಟನ್ನು ಬಳಸಲಾಗುತ್ತದೆ. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ ಮತ್ತು ಉಪವಾಸಕ್ಕೆ ಸೂಕ್ತವಾಗಿದೆ.

ಚೆಸ್ ನೆಟ್ ಹಿಟ್ಟು: ಹುರುಳಿ ಹಿಟ್ಟಿನಂತೆಯೇ ಇದು ಪೂರಿ ಮತ್ತು ಹಲ್ವಾದಂತಹ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಮತ್ತೊಂದು ಉಪವಾಸ ಸ್ನೇಹಿ ಹಿಟ್ಟಾಗಿದೆ.

ಆಲೂಗಡ್ಡೆಗಳು ಮತ್ತು ಸಿಹಿ ಆಲೂಗಡ್ಡೆಗಳು: ಇದನ್ನು ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು. ಇದರಿಂದ ಉಪವಾಸದಲ್ಲಿರುವವರು ಅಗತ್ಯ ಶಕ್ತಿಯನ್ನು ತುಂಬುತ್ತಾರೆ ಮತ್ತು ಒದಗಿಸುತ್ತಾರೆ.

ಬೀಜಗಳು ಮತ್ತು ಒಣ ಹಣ್ಣುಗಳು: ಬಾದಾಮಿ, ವಾಲ್ ನಾಟ್, ಒಣದ್ರಾಕ್ಷಿ ಮತ್ತು ಇತರ ಒಣ ಹಣ್ಣುಗಳು ಲಘು ಆಹಾರಕ್ಕಾಗಿ ಮತ್ತು ಹೆಚ್ಚುವರಿ ಪೌಷ್ಟಿಕಾಂಶ ಮತ್ತು ಶಕ್ತಿಗಾಗಿ ಭಕ್ಷ್ಯಗಳಿಗೆ ಸೇರಿಸಲು ಉತ್ತಮವಾಗಿದೆ.

ತೆಂಗಿನಕಾಯಿ: ಶ್ರಾವಣ ಮಾಸದಲ್ಲಿ ತಾಜಾ ತೆಂಗಿನಕಾಯಿ, ತೆಂಗಿನ ನೀರು ಮತ್ತು ತೆಂಗಿನ ಹಾಲು ಸಾಮಾನ್ಯವಾಗಿ ಸೇವಿಸಲಾಗುತ್ತದೆ.

Shravan Month 2024
Shravan Month 2024


ಶ್ರಾವಣ ಮಾಸದಲ್ಲಿ ತಪ್ಪಿಸಬೇಕಾದ ಆಹಾರಗಳು

ಮಾಂಸಾಹಾರ: ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಶ್ರಾವಣ ಮಾಸದಲ್ಲಿ ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ಶುದ್ಧತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಸ್ಯಾಹಾರಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ: ಇವುಗಳು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಅವುಗಳನ್ನು ತಪ್ಪಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಧಾನ್ಯಗಳು ಮತ್ತು ಬೇಳೆಕಾಳುಗಳು: ಗೋಧಿ, ಅಕ್ಕಿ, ಧಾನ್ಯ ಮತ್ತು ಬೇಳೆಕಾಳುಗಳನ್ನು ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಳಸಲಾಗುವುದಿಲ್ಲ. ಇದರ ಬದಲು ಹುರುಳಿ ಕಾಳು, ಚೆಸ್ಟ್ ಹಿಟ್ಟನ್ನು ಬಳಸಲಾಗುತ್ತದೆ.

ಮದ್ಯ ಮತ್ತು ತಂಬಾಕು: ಶ್ರಾವಣ ಮಾಸ ಪವಿತ್ರ ತಿಂಗಳಾಗಿರುವುದರಿಂದ ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳು: ಆರೋಗ್ಯಕರ ಮತ್ತು ನೈಸರ್ಗಿಕ ಆಹಾರಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಚಿಪ್ಸ್, ಪ್ಯಾಕೆಟ್ ತಿಂಡಿಗಳು ಮತ್ತು ಇತರ ಸಂಸ್ಕರಿಸಿದ ಆಹಾರಗಳನ್ನು ಸೇವಿಸಲಾಗುವುದಿಲ್ಲ.

ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳು: ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ ಏಕೆಂದರೆ ಅವು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು ಮತ್ತು ಉಪವಾಸಕ್ಕೆ ತೊಂದರೆ ಉಂಟು ಮಾಡುವುದು.

Continue Reading

ಆಹಾರ/ಅಡುಗೆ

Shawarma Recipe: ಬೀದಿಬದಿಯ ಶವರ್ಮಾ ಏಕೆ? ಮನೆಯಲ್ಲೇ ರುಚಿಯಾದ ಶವರ್ಮಾವನ್ನು ಹೀಗೆ ಮಾಡಿ!

Shawarma recipe: ಗೋಬಿ ಮಂಚೂರಿ, ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಪತ್ತೆಯೂ ಆಯಿತು. ಇದೀಗ ಶವರ್ಮಾ ಸರದಿ. ಮಾಂಸಾಹಾರ ಇಷ್ಟಪಡುವ ಮಂದಿ, ಅದರಲ್ಲೂ, ಶವರ್ಮಾ ಇಷ್ಟಪಡುವ ಮಂದಿಗೆ, ಅದು ರಾಜ್ಯದಲ್ಲಿ ರದ್ದಾಗುವ ಸುದ್ದಿ ಕೇಳಿ ಆಘಾತವಾಗಿದೆ. ಬಾಯಿ ಚಪ್ಪರಿಸಿಕೊಂಡು ಶವರ್ಮಾ ತಿನ್ನುತ್ತಿದ್ದ ಮಂದಿ ಇದೀಗ ತಮ್ಮ ಮೆಚ್ಚಿನ ತಿನಿಸು ರದ್ದಾದರೆ ಬಾಯಿ ಚಪಲಕ್ಕೇನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದಾರೆ. ಬನ್ನಿ, ಸಿಂಪಲ್‌ ಆಗಿ, ಹೊಟೇಲ್‌ಗಿಂತ ಇನ್ನೂ ರುಚಿಕಟ್ಟಾಗಿ, ಅಷ್ಟೇ ಆರೋಗ್ಯಕರವಾಗಿ ಶವರ್ಮಾ ಮಾಡುವ ವಿಧಾನ ಇಲ್ಲಿದೆ.

VISTARANEWS.COM


on

Shawarma Recipe
Koo

ಇದೀಗ ಆಹಾರದ ಗುಣಮಟ್ಟವೇ ಸಮಸ್ಯೆ. ಹೊರಗೆ ತಿನ್ನುವ ಎಲ್ಲರೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ್ದೇ. ಯಾಕೆಂದರೆ ಒಂಟಿಯಾಗಿ ಬದುಕುವ, ಮನೆಯಿಂದ ದೂರವಿರುವ, ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿರುವ ಮಂದಿ ಹೊರಗಿನ ತಿಂಡಿಗಳನ್ನು ಅವಲಂಬಿಸುವುದೇ ಹೆಚ್ಚು. ಬೀದಿಬದಿಯ ತಿನಿಸುಗಳು, ಚಾಟ್‌ಗಳು, ಕಡಿಮೆ ದರದಲ್ಲಿ ಲಭ್ಯವಾಗುವ ತಿನಿಸುಗಳು ಇತ್ಯಾದಿಗಳು ಸುಲಭವಾಗಿ ಆಕರ್ಷಿಸುತ್ತವೆ ನಿಜವಾದರೂ, ಕೆಲವೊಮ್ಮೆ ಇಂತಹ ಆಹಾರಗಳೇ ಅನಾರೋಗ್ಯವನ್ನೂ ತರುತ್ತವೆ. ಮಳೆಗಾಲದಲ್ಲಿ ಈ ಸಂಭವ ಇನ್ನೂ ಹೆಚ್ಚು. ಕಲುಷಿತ ನೀರು, ಕಲುಷಿತ ಆಹಾರ, ಹೆಚ್ಚು ಕಾಲ ಶೇಖರಿಟ್ಟ ಆಹಾರಗಳಿಂದ ತಯಾರಿಸುವ ತಿಂಡಿ ತಿನಿಸುಗಳು, ವಾತಾವರಣದ ತೇವಾಂಶಕ್ಕೆ ಹಾಳಾಗಿ, ಹೊಟ್ಟೆ ಕೆಡುತ್ತದೆ. ಕೆಲವೊಮ್ಮೆ ದೊಡ್ಡ ಸಮಸ್ಯೆಯನ್ನೂ ಹುಟ್ಟುಹಾಕಿ, ಪ್ರಾಣಕ್ಕೂ ಸಂಚಕಾರ ಬರಬಹುದು. ಇತ್ತೀಚೆಗೆ, ಎಫ್‌ಎಸ್‌ಎಸ್‌ಎಐ ನಿಯಮಿತವಾಗಿ ಭಾರತದ ಹಲವು ಆಹಾರಗಳ ಪರೀಕ್ಷೆ ನಡೆಸುತ್ತಿದ್ದು, ಎಚ್ಚರಿಕೆಯನ್ನು ನೀಡುತ್ತಲೇ ಇದೆ. ಬಣ್ಣಬಣ್ಣದ ಕಾಟನ್‌ ಕ್ಯಾಂಡಿ ರದ್ದಾಯಿತು. ಗೋಬಿ ಮಂಚೂರಿ, ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಪತ್ತೆಯೂ ಆಯಿತು. ಇದೀಗ ಶವರ್ಮಾ ಸರದಿ. ಮಾಂಸಾಹಾರ ಇಷ್ಟಪಡುವ ಮಂದಿ, ಅದರಲ್ಲೂ, ಶವರ್ಮಾ ಇಷ್ಟಪಡುವ ಮಂದಿಗೆ, ಅದು ರಾಜ್ಯದಲ್ಲಿ ರದ್ದಾಗುವ ಸುದ್ದಿ ಕೇಳಿ ಆಘಾತವಾಗಿದೆ. ಬಾಯಿ ಚಪ್ಪರಿಸಿಕೊಂಡು ಶವರ್ಮಾ ತಿನ್ನುತ್ತಿದ್ದ ಮಂದಿ ಇದೀಗ ತಮ್ಮ ಮೆಚ್ಚಿನ ತಿನಿಸು ರದ್ದಾದರೆ ಬಾಯಿ ಚಪಲಕ್ಕೇನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದಾರೆ. ಬನ್ನಿ, ಸಿಂಪಲ್‌ ಆಗಿ, ಹೊಟೇಲ್‌ಗಿಂತ ಇನ್ನೂ ರುಚಿಕಟ್ಟಾಗಿ, ಅಷ್ಟೇ ಆರೋಗ್ಯಕರವಾಗಿ ಶವರ್ಮಾ ಮನೆಯಲ್ಲೇ (shawarma recipe) ನೀವು ಹೇಗೆ ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.

Shawarma

ಹೆಚ್ಚು ಕಷ್ಟವೇನಿಲ್ಲ

ಶವರ್ಮಾ ಮಾಡಲು ಹೆಚ್ಚು ಕಷ್ಟವೇನಿಲ್ಲ. ಶವರ್ಮಾದ ಮಸಾಲೆ ಮಿಕ್ಸ್‌ ನೀವೊಮ್ಮೆ ರೆಡಿ ಮಾಡಿಟ್ಟುಕೊಂಡರೆ ನಿಮ್ಮ ಕೆಲಸ ಅರ್ಧ ಆದಂತೆ. ಈ ಮಸಾಲೆಯ ಮಿಕ್ಸ್‌ ಹೇಗೆ ಮಾಡೋದು ಎಂದು ತಿಳಿಯೋಣ ಬನ್ನಿ.

ಇದನ್ನೂ ಓದಿ: How To Cook With Garlic: ಅಡುಗೆಗೆ ಬೆಳ್ಳುಳ್ಳಿ ಬಳಸುವಾಗ ಈ 5 ಟಿಪ್ಸ್‌‌ಗಳನ್ನು ಮರೆಯಲೇಬೇಡಿ!

ಶವರ್ಮಾ ಮಸಾಲೆ

ಕಾಶ್ಮೀರಿ ಕೆಂಪು ಮೆಣಸಿನಕಾಯಿಯನ್ನು ಹುರಿದಿಡಿ. ನಂತರ ಏಲಕ್ಕಿ, ಕರಿಮೆಣಸು, ಸೋಂಪು, ಜೀರಿಗೆ, ಕೊತ್ತಂಬರಿ ಇವೆಲ್ಲವನ್ನೂ ಒಂದೊಂದಾಗಿ ಹುರಿಯಿರಿ. ಇವೆಲ್ಲವೂ ತಣಿದ ಕೂಡಲೇ ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿ. ಈಗ ಶವರ್ಮಾ ಮಸಾಲೆ ರೆಡಿ. ಒಂದು ಗಾಳಿಯಾಡದ ಡಬ್ಬದಲ್ಲಿ ಈ ಮಸಾಲೆ ಪುಡಿಯನ್ನು ಕೆಲಕಾಲ ಫ್ರಿಡ್ಜ್‌ನಲ್ಲಿ ಶೇಖರಿಸಿಯೂ ಇಡಬಹುದು. ಇನ್ನು ರುಚಿಯಾದ, ಅಷ್ಟೇ ಆರೋಗ್ಯಕರವಾದ ಶವರ್ಮಾ ಮಾಡುವುದು ಹೇಗೆಂದು ತಿಳಿಯೋಣ. ಒಂದು ಬೇಕಿಂಗ್ ಪಾತ್ರೆಯಲ್ಲಿ ಕಾಲು ಕಪ್‌ ಮಾಲ್ಟ್‌ ವಿನೆಗರ್‌, ಕಾಲು ಕಪ್‌ ಮೊಸರು, ಒಂದು ಚಮಚ ಎಣ್ಣೆ, ಶವರ್ಮಾ ಮಸಾಲೆ ಪುಡಿ, ರುಚಿಗೆ ಉಪ್ಪು ಇವಿಷ್ಟನ್ನು ಮಿಕ್ಸ್‌ ಮಾಡಿ ಇದರ ಮೇಲೆ ಫ್ರೆಶ್‌ ಚಿಕನ್‌ ತೊಡೆ ಮಾಂಸವನ್ನು ಹಾಕಿ ಮಿಕ್ಸ್‌ ಮಾಡಿ ಚೆನ್ನಾಗಿ ಎಲ್ಲ ಬದಿಯೂ ಕೋಟಿಂಗ್‌ ಆಗುವಂತೆ ನೋಡಿಕೊಂಡು ಇದನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಚೆನ್ನಾಗಿ ಮಾರಿನೇಟ್‌ ಆಗುವಂತೆ ಬಿಡಿ.
ನಂತರ 350 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಅವನ್‌ ಅನ್ನು ಪ್ರಿಹೀಟ್‌ ಮಾಡಿಕೊಳ್ಳಿ. ಸಣ್ಣ ಬೌಲ್‌ನಲ್ಲಿ ತಾಹಿನಿ, ಕಾಲು ಕಪ್‌ ಮೊಸರು, ಬೆಳ್ಳುಳ್ಳಿ, ನಿಂಬೆ ರಸ, ಆಲಿವ್‌ ಆಯಿಲ್‌ ಹಾಗೂ ಪಾರ್ಸ್ಲೇ ತೆಗೆದುಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸು ಹಾಕಿ ರೆಫ್ರಿಜರೇಟ್‌ ಮಾಡಿ. ಇದನ್ನು ಚಿಕನ್‌ಗೆ ಕವರ್‌ ಮಾಡಿ. ೩೦ ನಿಮಿಷಗಳ ಕಾಲ ಅವನ್‌ನಲ್ಲಿ ಬೇಕ್‌ ಮಾಡಿ. ಒಮ್ಮೆ ನೋಡಿಕೊಂಡು ಚಿಕನ್‌ ಕಂದು ಬಣ್ಣಕ್ಕೆ ತಿರುಗದಿದ್ದರೆ ಮತ್ತೆ ೧೦ ನಿಮಿಷ ಬೇಕ್‌ ಮಾಡಿ. ಹೊರತೆಗೆದು ಆಕಾರಕ್ಕೆ ಕತ್ತರಿಸಿಕೊಳ್ಳಿ. ಟೊಮೆಟೋ, ಈರುಳ್ಳಿ, ಕ್ಯಾಬೇಜ್‌ ತುರಿಯಿಂದ ಅಲಂಕರಿಸಿ. ರೋಲ್‌ ಮಾಡಿ ತಾಹಿನಿ ಸಾಸ್‌ ಜೊತೆ ತಿನ್ನಿ. ಇಂತಹ ಪರ್ಫೆಕ್ಟ್‌ ರುಚಿಯನ್ನು ನೀವು ರೆಸ್ಟೋರೆಂಟ್‌ನಲ್ಲೂ ಅಪರೂಪಕ್ಕಷ್ಟೇ ಕಂಡಿರಬಹುದು. ಈಗ ಯಾವ ಭಯವೂ ಇಲ್ಲದೆ, ಶವರ್ಮಾ ತಿನ್ನಬಹುದು. ಮಳೆಗಾಲಕ್ಕೆ ಪರ್ಫೆಕ್ಟ್‌ ರುಚಿಯಾದ ಖಾದ್ಯವಿದು.

Continue Reading
Advertisement
Rashid Khan
ಕ್ರಿಕೆಟ್3 mins ago

Rashid Khan: ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಬಾರಿಸಿದ ರಶೀದ್​ ಖಾನ್; ವಿಡಿಯೊ ವೈರಲ್​

Adivi Sesh Goodachari Turns 6 unveils six stunning looks
ಟಾಲಿವುಡ್26 mins ago

Adivi Sesh: ʻಗೂಢಚಾರಿʼಗೆ ಆರು ವರ್ಷದ ಸಂಭ್ರಮ; ನಟ ಅಡಿವಿ ಶೇಷ್ ಹೇಳಿದ್ದೇನು?

Yadagiri News
ಯಾದಗಿರಿ34 mins ago

Yadagiri News: ಆದಾಯಕ್ಕಿಂತ‌ ಅಧಿಕ ಆಸ್ತಿ ಹೊಂದಿರುವ ಆರೋಪ; ಯಾದಗಿರಿ ಡಿಎಚ್ಒ ಅಮಾನತು

IND vs SL 2nd ODI:
ಕ್ರೀಡೆ40 mins ago

IND vs SL 2nd ODI: ಇಂದು ಭಾರತ-ಲಂಕಾ ದ್ವಿತೀಯ ಏಕದಿನ ಮುಖಾಮುಖಿ; ಪಂದ್ಯಕ್ಕೆ ಮಳೆ ಭೀತಿ

BSF Chief
ದೇಶ54 mins ago

BSF Chief: ಬಿಎಸ್‌ಎಫ್‌ ನೂತನ ಮುಖ್ಯಸ್ಥರಾಗಿ ದಲ್ಜಿತ್‌ ಸಿಂಗ್‌ ಚೌಧರಿ ನೇಮಕ

Amitabh Bachchan-Sridevi Movies
Latest57 mins ago

Amitabh Bachchan-Sridevi Movies: ಅಮಿತಾಭ್ ಬಚ್ಚನ್ – ಶ್ರೀದೇವಿ ಜೊತೆಯಾಗಿ ನಟಿಸಿದ 5 ಸೂಪರ್ ಹಿಟ್ ಚಿತ್ರಗಳಿವು

Health Tips
ಆರೋಗ್ಯ57 mins ago

Health Tips: ಏನ್ ನಿಂಗೆ ಕೊಬ್ಬಾ ಅನ್ನಬೇಡಿ ಕೊಬ್ಬೂ ಇರಬೇಕು!

Robbery Case
ಕ್ರೈಂ1 hour ago

Robbery Case: ಬೆಂಗಳೂರಿನಲ್ಲಿ ಮಿತಿ ಮೀರಿದ ಕಳ್ಳರ ಹಾವಳಿ; ಆನ್‌ಲೈನ್‌ ಡೆಲಿವರಿ ಬಾಯ್‌ಗಳೇ ಇವರ ಟಾರ್ಗೆಟ್‌: Video ಇಲ್ಲಿದೆ

Paris Olympics
ಕ್ರೀಡೆ1 hour ago

Paris Olympics: ಗ್ರೇಟ್​ ಬ್ರಿಟನ್ ಮಣಿಸಿ ಸೆಮಿಫೈನಲ್​ ಪ್ರವೇಶಿಸಲಿ ಭಾರತ ಹಾಕಿ ತಂಡ

Duniya Vijay Bheema Official Trailer Out
ಸ್ಯಾಂಡಲ್ ವುಡ್1 hour ago

Duniya Vijay: ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ ಚಿತ್ರದ  ಟ್ರೈಲರ್‌ ಔಟ್‌; ಕ್ರೇಜ್‌ ಹೆಚ್ಚಿಸಿದ ʻಸಲಗʼ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ21 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ6 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌