ಆರೋಗ್ಯ
Curry leaves: ಕೂದಲಿಗೂ ಹಾಕಿ ಕರಿಬೇವಿನ ‘ಒಗ್ಗರಣೆ’; ಸಿದ್ಧಪಡಿಸಿಕೊಳ್ಳಿ ಪೇಸ್ಟ್, ಎಣ್ಣೆ!
ಕರಿಬೇವಿನ ಎಲೆಯ ಎಣ್ಣೆಯನ್ನು ನೀವು ತಲೆಗೆ ಮಸಾಜ್ ಮಾಡಿಕೊಳ್ಳಬಹುದು. ಇದಕ್ಕಾಗಿ ತುಂಬ ಕಷ್ಟಪಡಬೇಕಿಲ್ಲ. ಕೊಬ್ಬರಿ ಎಣ್ಣೆಯೊಂದಿಗೆ ಸೇರಿಸಿ, ನೀವೇ ತಯಾರಿಸಿಕೊಳ್ಳಬಹುದು.
ಕರಿಬೇವಿನ ಒಗ್ಗರಣೆ ಬಿದ್ದ ಚಿತ್ರಾನ್ನ, ಸಾಂಬಾರು, ಪಲ್ಯ ಅಥವಾ ಇನ್ಯಾವುದೇ ಅಡುಗೆಯಿರಲಿ, ಅದರ ರುಚಿ ಹೆಚ್ಚು. ಭಾರತೀಯ ಪಾಕ ಪದ್ಧತಿಯಲ್ಲಿ ಕರಿಬೇವನ್ನು (Curry leaves)ಯಥೇಚ್ಛವಾಗಿ ಬಳಸಲಾಗುತ್ತದೆ. ಅದರ ಪರಿಮಳವೇ ಆಹ್ಲಾದವೆನಿಸುತ್ತದೆ. ಅಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬ ಒಳ್ಳೆಯದು. ಇದು ಮಧುಮೇಹಿಗಳಿಗೆ ವರದಾನವಾದ ಎಲೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಉತ್ಕರ್ಷಣ ನಿರೋಧಕವಾಗಿದ್ದು, ಉರಿಯೂತ ತಡೆಯುತ್ತದೆ ಎಂದೆಲ್ಲ ನಮಗೆ ಗೊತ್ತು. ಅದರೊಂದಿಗೆ ಕರಿಬೇವು ಕೂದಲಿನ ಆರೋಗ್ಯಕ್ಕೂ ಅತ್ಯುತ್ತಮ. ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಕೂದಲು ಉದುರುವುದನ್ನೂ ತಡೆಯುತ್ತದೆ. ತಲೆಕೂದಲು ಹೊಳೆಯಲು, ಮೃದುವಾಗಲೂ ಕೂಡ ಇದು ಸಹಾಯ ಮಾಡುತ್ತದೆ.
ಕೂದಲಿನ ಆರೋಗ್ಯಕ್ಕಾಗಿ ಏನೇನೆಲ್ಲ ಕಸರತ್ತು ಮಾಡುವವರು ಈ ಕರಿಬೇವಿನ ಪ್ರಯೋಗವನ್ನೂ ಮಾಡಿಬಿಡಿ. ಅಡುಗೆಗೆ ಕರಿಬೇವಿನ ಒಗ್ಗರಣೆ ಹಾಕಿದಂತೆ, ನಿಮ್ಮ ಕೂದಲಿಗೂ ಈ ಎಲೆಯ ‘ಒಗ್ಗರಣೆ’ ಹಾಕಿಬಿಡಿ..ಇಲ್ಲಿದೆ ನೋಡಿ, ಕರಿಬೇವನ್ನು ಹೇಗೇಗೆಲ್ಲ ಬಳಸಿ, ಕೂದಲನ್ನು ಆರೈಕೆ ಮಾಡಬಹುದು ಎಂಬುದಕ್ಕೆ ಒಂದಷ್ಟು ಟಿಪ್ಸ್..
ಕರಿಬೇವಿನ ಎಣ್ಣೆ ಹಾಕಿ
ಕರಿಬೇವಿನ ಎಲೆಯ ಎಣ್ಣೆಯನ್ನು ನೀವು ತಲೆಗೆ ಮಸಾಜ್ ಮಾಡಿಕೊಳ್ಳಬಹುದು. ಇದಕ್ಕಾಗಿ ತುಂಬ ಕಷ್ಟಪಡಬೇಕಿಲ್ಲ. ಕರಿಬೇವು ತನ್ನಿ, ಕೊಬ್ಬರಿ ಎಣ್ಣೆ ಬಿಸಿ ಮಾಡಲು ಇಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಎಲೆಗಳನ್ನು ಅದಕ್ಕೆ ಹಾಕಿ ಸರಿಯಾಗಿ ಕುದಿಸಿ. ಕರಿಬೇವಿನ ಎಲೆಗಳು ಕಪ್ಪಗಾಗಿ ಚಿರುಟುತ್ತ ಹೋಗುತ್ತವೆ. ಅದರ ಅಂಶವೆಲ್ಲ ಎಣ್ಣೆಯಲ್ಲಿ ಬಿಟ್ಟುಕೊಳ್ಳುತ್ತದೆ. ಆ ಎಣ್ಣೆಯನ್ನು ಸೋಸಿಕೊಳ್ಳಿ. ತಣ್ಣಗಾದ ಮೇಲೆ ನಿಮ್ಮ ಅಂಗೈಯಿಗೆ ತೆಗೆದುಕೊಂಡು ಕೂದಲು ಬುಡದಿಂದ, ಇಡೀ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಒಂದು ತಾಸು ಹಾಗೇ ಬಿಟ್ಟು ನಂತರ ಸ್ನಾನ ಮಾಡಿ.
ಕರಿಬೇವಿನ ಎಲೆಯ ಪೇಸ್ಟ್ನಿಂದ ಹೇರ್ಪ್ಯಾಕ್
ಕರಿಬೇವಿನ ಎಲೆಗಳಿಂದ ಪೇಸ್ಟ್ ತಯಾರಿಸಿ, ಅದನ್ನು ಕೂದಲಿಗೆ ಪ್ಯಾಕ್ ಮಾಡಿಕೊಂಡರೆ ಕೂದಲು ಸೊಂಪಾಗಿ ಬೆಳೆಯುವ ಜತೆ, ಹೊಳಪು ಬರುತ್ತದೆ. ತಾಜಾ ಎಲೆಗಳನ್ನು ಮೊಸರಿನೊಂದಿಗೆ ಸೇರಿಸಿ ಚೆನ್ನಾಗಿ ಪೇಸ್ಟ್ ಮಾಡಿ. ಅದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಪ್ಯಾಕ್ ಮಾಡಿಕೊಂಡು, ಅರ್ಧಗಂಟೆ ಬಿಟ್ಟು ತೊಳೆಯಬಹುದು.
ಕರಿಬೇವು-ನೆಲ್ಲಿ ಎಣ್ಣೆ
ನೆಲ್ಲಿಕಾಯಿ ಕೂಡ ಕೂದಲ ಆರೈಕೆಗೆ ಅತ್ಯುತ್ತಮ ಔಷಧ. ಅಂಥ ನೆಲ್ಲಿಕಾಯಿ ಮತ್ತು ಕರಿಬೇವನ್ನು ಸೇರಿಸಿ ಎಣ್ಣೆ ಮಾಡಿಟ್ಟುಕೊಂಡು ನೀವು ಕೂದಲಿಗೆ ಮಸಾಜ್ ಮಾಡುತ್ತ ಬಂದರೆ ಖಂಡಿತ ಫಲಿತಾಂಶ ಪಡೆಯುತ್ತೀರಿ. ನಿಮಗೆ ಬೇಕಾದಷ್ಟು ಕೊಬ್ಬರಿ ಎಣ್ಣೆಗೆ ನೆಲ್ಲಿಕಾಯಿ ಪೌಡರ್ ಮತ್ತು ಕರಿಬೇವಿನ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಅದು ಆರಿದ ಮೇಲೆ ಹಚ್ಚಿಕೊಳ್ಳಿ. ನೀವಿದನ್ನು ರಾತ್ರಿ ಮಲಗುವ ಮುನ್ನ ನಿಮ್ಮ ಕೂದಲಿಗೆ ಹಚ್ಚಿಕೊಂಡು, ಮರುದಿನ ಸ್ನಾನ ಮಾಡಬೇಕು.
ಮೆಂತೆ-ಕರಿಬೇವಿನ ಪೇಸ್ಟ್ ಪ್ಯಾಕ್
ಮೆಂತೆ ಕೂಡ ಕೂದಲಿನ ಆರೋಗ್ಯಕ್ಕೆ ಉತ್ತಮ. ನೀವು ಕರಿಬೇವಿನ ಎಲೆಗಳು ಮತ್ತು ಮೆಂತೆಯನ್ನು ಸೇರಿಸಿ ಪೇಸ್ಟ್ ಮಾಡಿ, ಅದನ್ನು ತಲೆಗೆ ಪ್ಯಾಕ್ ಹಾಕಿಕೊಳ್ಳಬಹುದು. ಮೆಂತೆಯನ್ನು ರಾತ್ರಿಪೂರ್ತಿ ನೆನೆಸಿ. ಮರುದಿನ ಕರಿಬೇವಿನ ಎಲೆಯೊಂದಿಗೆ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ತಲೆ ಸ್ನಾನ ಮಾಡುವ 30 ನಿಮಿಷ ಮೊದಲು ಚೆನ್ನಾಗಿ ಪ್ಯಾಕ್ ಹಾಕಿಕೊಳ್ಳಿ.
(ನಾವಿಲ್ಲಿ ಕರಿಬೇವಿನಿಂದ ಆಗುವ ಸಾಮಾನ್ಯ ಉಪಯೋಗವನ್ನು ಹೇಳಿದ್ದೇವೆ ಅಷ್ಟೇ. ಕೂದಲಿಗೆ ಏನಾದರೂ ಸಮಸ್ಯೆಯಾಗಿದ್ದರೆ, ಆರೋಗ್ಯ ಸಮಸ್ಯೆಯಿಂದ ಕೂದಲು ಉದುರುತ್ತಿದ್ದರೆ, ವೈದ್ಯರ ಸಲಹೆ ಪಡೆಯಬೇಕು)
ಆರೋಗ್ಯ
Shivamogga News: ವಿನ್ಲೈಫ್ ಟ್ರಸ್ಟ್ ವತಿಯಿಂದ ಏ. 2ರಂದು ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ
Shivamogga News: ಆರೋಗ್ಯ ಉತ್ಸವ ಜನಜಾಗೃತಿ ಸಮಾವೇಶದಲ್ಲಿ ಜೀವ ರಕ್ಷಕ ತರಬೇತಿ, ಕಿರು ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ವಿನ್ಲೈಫ್ ಟ್ರಸ್ಟಿ ಡಾ.ಪೃಥ್ವಿ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ: ವಿನ್ಲೈಫ್ ಟ್ರಸ್ಟ್ (WinLife Trust) ವತಿಯಿಂದ ಕುವೆಂಪು ರಂಗ ಮಂದಿರದಲ್ಲಿ ಏ.2 ರಂದು ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನ್ಲೈಫ್ ಟ್ರಸ್ಟಿ ಡಾ.ಪೃಥ್ವಿ, “ಈ ಸಮಾವೇಶದಲ್ಲಿ ತುರ್ತು ಜೀವ ರಕ್ಷಕ ತರಬೇತಿ ಮತ್ತು ಕಾರ್ಯಾಗಾರ ನಡೆಯಲಿದ್ದು, ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ, ಮಧುಮೇಹ @360 ಈ ವಿಷಯ ಕುರಿತು ಅರಿವು ಮೂಡಿಸಲಾಗುವುದು. ಆರೋಗ್ಯ ಕುರಿತು ಪ್ರಾಯೋಗಿಕ ತರಬೇತಿ, ಕಾರ್ಯಾಗಾರ, ಯೋಗ, ವಸ್ತು ಪ್ರದರ್ಶನ, ಕಿರು ನಾಟಕ ಪ್ರದರ್ಶನ, ಸಮಾಲೋಚನೆ ಹಾಗೂ ಉಪನ್ಯಾಸವನ್ನು ಏರ್ಪಡಿಸಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: Ananya Panday: ತನ್ನನ್ನು ಎಸಿಪಿ ಎಂದು ಕರೆಯದಂತೆ ಮಾಧ್ಯಮಗಳಿಗೆ ವಿನಂತಿಸಿದ ಅನನ್ಯಾ ಪಾಂಡೆ
ಸುದ್ದಿಗೋಷ್ಠಿಯಲ್ಲಿ ವಿನ್ಲೈಫ್ ನಿರ್ದೇಶಕರಾದ ಡಾ.ಶಂಕರ್, ಡಾ.ವಿಜಯ ಕುಮಾರ್, ರೆಹಮತ್ ಹಾಗೂ ಬದ್ರಿನಾಥ್ ಉಪಸ್ಥಿತರಿದ್ದರು.
ಆರೋಗ್ಯ
Import duty exemption : ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧಗಳ ದರ ಇಳಿಕೆ
ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಔಷಧ ಹಾಗೂ ಆಹಾರ ವಸ್ತುವಿನ ಮೇಲೆ ಆಮದು ಸುಂಕ ವಿನಾಯಿತಿಯನ್ನು ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ಅನ್ವಯಿಸುವಂತೆ ನೀಡಿದೆ. (Import duty exemption) ಹೀಗಾಗಿ ಅವುಗಳ ದರ ಇಳಿಕೆಯಾಗಲಿದೆ.
ನವ ದೆಹಲಿ: ಕೇಂದ್ರ ಸರ್ಕಾರವು ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ ಹಾಗೂ ಆಹಾರಗಳ ದರ ಇಳಿಕೆಗೆ ಪೂರಕವಾಗಿ, ಅವುಗಳಿಗೆ ಆಮದು ಸುಂಕದಿಂದ ವಿನಾಯಿತಿ (Import duty exemption) ನೀಡಿದೆ. ಏಪ್ರಿಲ್ 1ರಿಂದ ಈ ಆಮದು ಸುಂಕ ವಿನಾಯಿತಿ ಅನ್ವಯವಾಗಲಿದೆ.
ಅಪರೂಪದ ಕಾಯಿಲೆಗಳ ಕುರಿತ ರಾಷ್ಟ್ರೀಯ ನೀತಿಯ (National policy for rare diseases 2021) ಅಡಿಯಲ್ಲಿ ಎಲ್ಲ ಬಗೆಯ ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ, ಆಹಾರಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯಾವ ಔಷಧಗಳಿಗೆ ಆಮದು ಸುಂಕ ವಿನಾಯಿತಿ:
ಕೇಂದ್ರ ಸರ್ಕಾರ ಹಲವಾರು ಬಗೆಯ ಕ್ಯಾನ್ಸರ್ಗಳ ಚಿಕಿತ್ಸೆಯಲ್ಲಿ ಬಳಸುವ ಔಷಧವಾಗಿರುವ ಕೀಟ್ರುಡಾ (Keytruda) ಮೇಲಿನ ಆಮದು ಸುಂಕವನ್ನು ವಿನಾಯಿತಿಯ ಪಟ್ಟಿಗೆ ಸೇರಿಸಿದೆ. ಬೇಸಿಕ್ ಕಸ್ಟಮ್ಸ್ ಸುಂಕ ಅಥವಾ ಆಮದು ಸುಂಕವು 10% ಇರುತ್ತದೆ. ಲೈಫ್ ಸೇವಿಂಗ್ ಔಷಧ, ಲಸಿಕೆಗಳಿಗೆ 5% ಇರುತ್ತದೆ. ಕೆಲ ಔಷಧಗಳಿಗೆ ವಿನಾಯಿತಿ ನೀಡುತ್ತದೆ.
ವಿಶೇಷ ವೈದ್ಯಕೀಯ ಉದ್ದೇಶಕ್ಕಾಗಿ ನೀಡುವ ಆಹಾರಗಳು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡಬೇಕಾಗುತ್ತದೆ. ಇದು ಅವರ ಆಹಾರ ಪಥ್ಯದ ಭಾಗವಾಗಿರುತ್ತದೆ. ಇಂಥ ಆಹಾರಗಳಿಗೆ ಆಮದು ಸುಂಕ ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಸುಂಕ ವಿನಾಯಿತಿಯನ್ನು ಪಡೆಯಲು ಆಮದುದಾರರು ಕೇಂದ್ರ ಅಥವಾ ರಾಜ್ಯದ ಆಹಾರ ಇಲಾಖೆಯ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ. ಜಿಲ್ಲಾ ವೈದ್ಯಾಧಿಕಾರಿಯ ಸರ್ಟಿಫಿಕೇಟ್ ಕೂಡ ಆಗುತ್ತದೆ. ಆರೋಗ್ಯ ಸಚಿವಾಲಯದ ಪ್ರಕಾರ, 10 ಕೆ.ಜಿ ತೂಕವಿರುವ ಮಗುವಿಗೆ ಅಪರೂಪದ ಕಾಯಿಲೆ ಇದ್ದರೆ, ಚಿಕಿತ್ಸೆಗೆ ವಾರ್ಷಿಕ 10 ಲಕ್ಷ ರೂ.ಗಳಿಂದ 1 ಕೋಟಿ ರೂ. ತನಕ ಖರ್ಚಾಗುತ್ತದೆ. ಹೀಗಾಗಿ ಈ ಆಮದು ಸುಂಕ ಇಳಿಕೆಯ ನಿರ್ಧಾರವು ರೋಗಿಗಳಿಗೆ ರಿಲೀಫ್ ನೀಡಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇತ್ತೀಚೆಗೆ ಕೆಲ ಔಷಧಗಳಿಗೆ ದರ ಮಿತಿಯನ್ನು ವಿಧಿಸಲಾಗಿದೆ. ವಿವರ ಇಲ್ಲಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (National pharmaceutical pricing authority-NPPA) ಸೋಮವಾರ 74 ಔಷಧಗಳ ದರಗಳಿಗೆ ಮಿತಿ ವಿಧಿಸಿದೆ. ಇದರಲ್ಲಿ ಡಯಾಬಿಟಿಸ್, ರಕ್ತದೊತ್ತಡ (ಬಿಪಿ) ಸೇರಿದಂತೆ ನಾನಾ ಕಾಯಿಲೆಗಳಿಗೆ ಬಳಸುವ ಔಷಧಗಳು ಸೇರಿವೆ. 2023ರ ಫೆಬ್ರವರಿ 21ರಂದು ನಡೆದ ಪ್ರಾಧಿಕಾರದ 109ನೇ ಸಭೆಯ ನಿರ್ಣಯದ ಪ್ರಕಾರ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಯಾವ ಔಷಧಗಳು ಅಗ್ಗ?
ಡಪಾಗ್ಲಿಪ್ಲೊಜಿನ್ ಸಿಟಾಗ್ಲಿಪ್ಟಿನ್ (Dapagliflozin Sitagliption) : 27.75 ರೂ.
ಮೆಟ್ಫಾರ್ಮಿನ್ ಹೈಡ್ರೊಕ್ಲೋರೈಡ್ : 27.75 ರೂ.
ಡಪಾಗ್ಲಿಪ್ಲೊಜಿನ್ ಟೆಲ್ಮಿಸರ್ಟಾನ್ ( Dapagliflozin sitagliptin) : 10.92 ರೂ.
ಬಿಸೊಪ್ರೊಲೋಲ್ ಫ್ಯುಮರಾರಾಟ್ (Bisoprolol fumarate) 10.92 ರೂ.
ಸೋಡಿಯಂ ವಾಲ್ಪ್ರೊರೇಟ್: 3.20 ರೂ.
ಆರೋಗ್ಯ
Health Tips: ಬಾರ್ಲಿ ನೀರು: ಬೇಸಿಗೆಗೆ ಬೇಕೇ ಬೇಕು ಈ ಪುರಾತನ ಪೇಯ!
ಬಾರ್ಲಿಯ ಮಹತ್ವ ತಿಳಿದರೂ, ಬೇಸಗೆಯಲ್ಲಿ ಬಾರ್ಲಿ ದೇಹಕ್ಕೆ ತಂಪು ಎಂಬುದು ಗೊತ್ತಿದ್ದರೂ ಇದನ್ನು ಬಳಸುವುದು ಹೇಗೆ ಎಂಬ ಸಂಶಯ ಹಲವರದ್ದು. ಇದಕ್ಕೆ ಉತ್ತರ ಬಾರ್ಲಿ ನೀರು. ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹ ತಂಪಾಗುವುದಲ್ಲದೆ, ಹಲವು ಆರೋಗ್ಯಕರ ಲಾಭಗಳನ್ನೂ ನಾವು ಪಡೆಯಬಹುದು.
ಫ್ಯಾಷನ್ ಇರಬಹುದು, ಆಹಾರ ಇರಬಹುದು ಹಳೆಯದೆಲ್ಲ ಮತ್ತೆ ಹೊಸ ಟ್ರೆಂಡ್ ಆಗಿ ಮರಳಿ ಬರುವುದುಂಟು. ಹಲೆಯ ಕಾಲದ ಪುರಾತನ ಪದ್ಧತಿಗಳು, ಆಹಾರ ಕ್ರಮ ಮತ್ತೆ ಒಳ್ಳೆಯದು ಎಂಬ ಹೆಸರಿನಲ್ಲಿ ಹೊಸ ರೂಪದಿಂದ ಆವರಿಸಿಕೊಳ್ಳುವುದುಂಟು. ಕೆಲವೊಮ್ಮೆ, ಹಳೆಯ ಆಹಾರ ಪದ್ಧತಿಗಳ ನಿಜವಾದ ಮಹತ್ವ ಈಗ ಅರಿವಾಗಿ ನಾವು ಹಿಂದಿನ ಆಹಾರಕ್ರಮಗಳ, ಆರೋಗ್ಯಕರ ಜೀವನ ಪದ್ಧತಿಗಳತ್ತ ಮತ್ತೆ ನಿಧಾನವಾಗಿ ಆಕರ್ಷಿತರಾಗುತ್ತಿದ್ದೇವೆ. ಇಂತಹುಗಳ ಪೈಕಿ ಬಾರ್ಲಿ ಎಂಬ ಧಾನ್ಯವೂ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದೆ.
ಬಾರ್ಲಿಯ ಮಹತ್ವ ತಿಳಿದರೂ, ಬೇಸಗೆಯಲ್ಲಿ ಬಾರ್ಲಿ ದೇಹಕ್ಕೆ ತಂಪು (Summer drink) ಎಂಬುದು ಗೊತ್ತಿದ್ದರೂ ಇದನ್ನು ಬಳಸುವುದು ಹೇಗೆ ಎಂಬ ಸಂಶಯ ಹಲವರದ್ದು. ಇದಕ್ಕೆ ಉತ್ತರ ಬಾರ್ಲಿ ನೀರು (Barley water benefits). ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹ ತಂಪಾಗುವುದಲ್ಲದೆ, ಹಲವು ಆರೋಗ್ಯಕರ ಲಾಭಗಳನ್ನೂ ನಾವು ಪಡೆಯಬಹುದು.
ಬಾರ್ಲಿ ನೀರು ಮಾಡುವುದು ಹೇಗೆ?: ಎರಡು ಲೋಟ ನೀರಿಗೆ ಒಂದು ಚಮಚ ಬಾರ್ಲಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಬಾರ್ಲಿ ಕಾಳುಗಳು ಅನ್ನ ಬೆಂದಾಗ ಉಬ್ಬಿಕೊಳ್ಳುವ ಹಾಗೆ ಚೆನ್ನಾಗಿ ಉಬ್ಬಿಕೊಂಡ ಮೇಲೆ ಅಂದರೆ ಸಣ್ಣ ಉರಿಯಲ್ಲಿ ಸುಮಾರು ಅರ್ಧಗಂಟೆ ಕಾಲ ಕುದಿಸಿ ನಂತರ ಸೋಸಿಕೊಳ್ಳಿ. ಈ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಬಹುದು. ಉಪ್ಪು ಬೇಡವಾಗಿದ್ದರೆ, ನಿಂಬೆಹಣ್ಣು, ಜೇನುತುಪ್ಪವನ್ನೂ ಸೇರಿಸಿ ಕುಡಿಯಬಹುದು. ಸೋಂಪು ಹಾಗೂ ಚಿಟಿಕೆ ದಾಲ್ಚಿನಿ ಪುಡಿ ಸೇರಿಸಿಯೂ ಕುಡಿಯಬಹುದು.
ಹಾಗಾದರೆ, ಇನ್ನು ಉದ್ಭವಿಸುವ ಪ್ರಶ್ನೆ ಎಂದರೆ ದಿನವೂ ಬಾರ್ಲಿ ನೀರು ಕುಡಿಯಬಹುದೇ ಎಂಬುದು. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಬಾರ್ಲಿ ಒಳ್ಳೆಯದು, ತಂಪು ಎಂದುಕೊಂಡು ನಿತ್ಯವೂ ಬಾರ್ಲಿ ನೀರು ಕುಡಿಯುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ವಾರಕ್ಕೆ ಹೆಚ್ಚೆಂದರೆ ಎರಡು ಬಾರಿ ಬಾರ್ಲಿ ನೀರು ಕುಡಿಯಬಹುದು. ಮೂತ್ರನಾಳದ ಇನ್ಫೆಕ್ಷನ್ ಸಮಸ್ಯೆ ಆಗಾಗ ಎದುರಿಸುವ ಮಂದಿಗೆ ಬಾರ್ಲಿ ನೀರು ಅತ್ಯುತ್ತಮ. ಹೆಚ್ಚಿನ ಮಾಹಿತಿಗೆ ನಿಮ್ಮ ವೈದ್ಯರನ್ನೊಮ್ಮೆ ಭೇಟಿ ಮಾಡಿ ಅವರ ಸಲಹೆ ಪಡೆಯುವುದು ಒಳ್ಳೆಯದು.
ಬಾರ್ಲಿಯ ಪ್ರಯೋಜನಗಳು:
1. ಬಾರ್ಲಿಯಲ್ಲಿ ನಾರಿನಂಶ ಹೆಚ್ಚಿದೆ. ಹಾಗಾಗಿ ಇದು ಜೀರ್ಣಕ್ರಿಯೆಯ ಸಮಸ್ಯೆ ಇದರುವ ಮಂದಿಗೆ ಜೀರ್ಣವಾಗಲು ಸಹಾಯ ಮಾಡುತ್ತದೆ. ಬಾರ್ಲಿ ನೀರನ್ನು ಕುಡಿಯುವುದರಿಂದ ಈಂಥ ಸಮಸ್ಯೆಗಳನ್ನು ಸರಳವಾಗಿಸಬಹುದು. ತಲೆತಲಾಂತರಗಳಿಂದ ಬಾರ್ಲಿನೀರನ್ನು ಮನೆಗಳಲ್ಲಿ ಹೊಟ್ಟೆ ಸಂಬಂಧೀ ಸಮಸ್ಯೆಗಳ ಪರಿಹಾರಕ್ಕೆ ಮನೆಮದ್ದಾಗಿ ಬಳಸುತ್ತಿದ್ದರು.
ಇದನ್ನೂ ಓದಿ: Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್ ಡ್ರಿಂಕ್!
2. ನೀವು ತೂಕ ಇಳಿಸಲು ಸನ್ನದ್ಧರಾಗಿದ್ದರೆ, ಬಾರ್ಲಿ ನೀರು ಆರಾಮವಾಗಿ ಕುಡಿಯಬಹುದು. ಬಾರ್ಲಿ ನೀರು ತೂಕ ಇಳಿಸುವ ಮಂದಿಯ ಆಹಾರಕ್ರಮಕ್ಕೆ ಪೂರಕವಾಗಿ ವರ್ತಿಸುತ್ತದೆ. ಇದರಲ್ಲಿ ಕಡಿಮೆ ಕ್ಯಾಲರಿ ಇರುವುದುರಿಂದ ತೂಕ ಹೆಚ್ಚಾಗದೆ, ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ.
3. ಮಧುಮೇಹಿಗಳಿಗೂ ಬಾರ್ಲಿ ನೀರು ಅತ್ಯುತ್ತಮ. ಬಾರ್ಲಿ ನೀರಿನಲ್ಲಿ ದೇಹದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಸಮತೋಲನಗೊಳಿಸುವ ಶಕ್ತಿ ಇರುವುದರಿಂದ ಹಾಗೂ ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಇರುವುದರಿಂದ ಮಧುಮೇಹಿಗಳು ಚಿಂತೆಯಿಲ್ಲದೆ ಇದನ್ನು ಸೇವಿಸಿ ಪ್ರಯೋಜನ ಪಡೆಯಬಹುದು.
4. ಬಾರ್ಲಿ ನೀರು ಅತ್ಯುತ್ತಮ ಡಿಟಾಕ್ಸ್ ಡ್ರಿಂಕ್ ಕೂಡಾ. ಇದು ದೇಹದಿಂದ ಕಶ್ಮಲಗಳನ್ನು ಹೊರಕ್ಕೆ ಕಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
5. ಬಾರ್ಲಿ ನೀರು ಕುಡಿಯುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ.
6. ಬಾರ್ಲಿ ನೀರು ಡೈ ಯುರೇಟಿಕ್ ಆಗಿರುವುದರಿಂದ ಇದು ಮೂತ್ರ ಸಂಬಂಧೀ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು. ಮೂತ್ರನಾಳದ ಇನ್ಫೆಕ್ಷನ್ ಇರುವ ಮಂದಿ, ಉರಿಮೂತ್ರದ ಸಮಸ್ಯೆ ಇದ್ದವರು ಬಾರ್ಲಿ ನೀರನ್ನು ಕುಡಿಯುವ ಮೂಲಕ ಸಮಸ್ಯೆಯಿಂದ ಮುಕ್ತರಾಗಬಹುದು.
ಇದನ್ನೂ ಓದಿ: Health Tips: ನಿಮಗೆ ಈ ಸಮಸ್ಯೆಗಳಿದ್ದರೆ ಕ್ಯಾಲ್ಶಿಯಂ ಕೊರತೆಯಿದೆ ಎಂದರ್ಥ!
ಆರೋಗ್ಯ
Health Tips: ನಿಮಗೆ ಈ ಸಮಸ್ಯೆಗಳಿದ್ದರೆ ಕ್ಯಾಲ್ಶಿಯಂ ಕೊರತೆಯಿದೆ ಎಂದರ್ಥ!
ಕ್ಯಾಲ್ಶಿಯಂನ ಮಟ್ಟದಲ್ಲಿ ಕೊಂಚ ಏರುಪೇರಾದರೂ ದೇಹದ ಆರೋಗ್ಯದಲ್ಲಿ ನಮಗೆ ಏರಿಳಿತ ಕಾಣುತ್ತವೆ. ಹಾಗಾಗಿ, ದೇಹದಲ್ಲಿ ಸಣ್ಣಪುಟ್ಟ ಬದಲಾವಣೆಯಾದರೂ ನಮ್ಮ ಗಮನ ಅತ್ಯಂತ ಅಗತ್ಯ. ನಮ್ಮ ದೇಹಕ್ಕೆ ಕ್ಯಾಲ್ಶಿಯಂನ ಕೊರತೆಯಿದೆ ಎಂದು ನಾವು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ನೋಡೋಣ.
ದೇಹದಲ್ಲಿ ಮೂಳೆ ಗಟ್ಟಿಯಾಗಿರಲು ಕ್ಯಾಲ್ಶಿಯಂ ಬೇಕೇ ಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿಯೇ ನಾವು ಕ್ಯಾಲ್ಶಿಯಂನಿಂದ ಶ್ರೀಮಂತವಾಗಿರುವ ಆಹಾರವನ್ನು ತಿನ್ನುವ ಬಗೆಗೆ ಗಮನ ಹರಿಸುತ್ತೇವೆ. ನಮ್ಮ ಮಕ್ಕಳಿಗೆ ಹಾಲು ಕುಡಿಸುತ್ತೇವೆ. ಕ್ಯಾಲ್ಶಿಯಂ ಕೊರತೆ ಅವರಿಗೆ ಬಾರದಿರಲಿ ಎಂಬುದನ್ನು ನೋಡಿಕೊಳ್ಳುತ್ತೇವೆ. ಆದರೂ, ಬಹಳ ಸಾರಿ ನಮಗೇ ಅರಿವಿಲ್ಲದೆ, ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಪೂರೈಕೆ ಆಗಿರುವುದಿಲ್ಲ. ಇದರಿಂದಾಗಿ ಕೇವಲ ಮೂಳೆಗೆ ಸಂಬಂಧಿಸಿದ್ದಷ್ಟೇ ಅಲ್ಲ, ಬೇರೆ ಸಮಸ್ಯೆಗಳೂ ಬರಬಹುದು. ರಕ್ತದ ಒತ್ತಡ, ಹೃದಯದ ಆರೋಗ್ಯ, ಮಿದುಳಿನ ಆರೋಗ್ಯ, ದೇಹದ ತೂಕ ಇವೆಲ್ಲವಕ್ಕೂ ಕ್ಯಾಲ್ಶಿಯಂನ ಸಮತೋಲನಕ್ಕೂ ಸಂಬಂಧವಿದೆ. ಹಾಗಾಗಿ, ಕ್ಯಾಲ್ಶಿಯಂನ ಮಟ್ಟದಲ್ಲಿ ಕೊಂಚ ಏರುಪೇರಾದರೂ ದೇಹದ ಆರೋಗ್ಯದಲ್ಲಿ ನಮಗೆ ಏರಿಳಿತ ಕಾಣುತ್ತವೆ. ಹಾಗಾಗಿ, ದೇಹದಲ್ಲಿ ಸಣ್ಣಪುಟ್ಟ ಬದಲಾವಣೆಯಾದರೂ ನಮ್ಮ ಗಮನ ಅತ್ಯಂತ ಅಗತ್ಯ. ನಮ್ಮ ದೇಹಕ್ಕೆ ಕ್ಯಾಲ್ಶಿಯಂನ ಕೊರತೆಯಿದೆ ಎಂದು ನಾವು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ನೋಡೋಣ.
೧. ಹಲ್ಲಿನಲ್ಲಿ ಹುಳುಕು: ಕೆಲವು ಖನಿಜಾಂಶಗಳು ದೇಹದ ಕೆಲವು ಭಾಗಗಳು ಸರಿಯಾಗಿ ಕೆಲಸ ಮಾಡಲು ಬೇಕೇ ಬೇಕು. ಕ್ಯಾಲ್ಶಿಯಂ ಹಾಗೂ ಹಲ್ಲಿನ ಸಂಬಂಧ ಅಂಥದ್ದು. ಈ ಕ್ಯಾಲ್ಶಿಯಂ ಎಂಬ ಖನಿಜಾಂಶ ಕೇವಲ ಹಲ್ಲಿನ ಆರೋಗ್ಯ ಕಾಪಾಡುವುದಷ್ಟೇ ಅಲ್ಲ, ಹಲ್ಲಿನ ಗಟ್ಟಿಯಾದ ತಳಪಾಯವನ್ನೇ ಹಾಕುತ್ತದೆ. ಹಾಗಾಗಿ ಹಲ್ಲಿನಲ್ಲಿ ಯಾವುದೇ ಹುಳುಕು, ಕ್ಯಾವಿಟಿಯಂತಹ ತೊಂದರೆಗಳು ಆಗಾಗ ಆಗುತ್ತಲೇ ಇರುತ್ತವೆ ಎಂದಾದಲ್ಲಿ ಅಲ್ಲಿ ನಿಮಗೆ ಕ್ಯಾಲ್ಶಿಯಂ ಕೊರತೆಯಿದೆ ಎಂದೇ ಅರ್ಥ. ನಾವು ಸುಲಭವಾಗಿ ಸಿಹಿತಿಂಡಿಯ ಮೇಲೆ ದೂರಿ, ಅದರಿಂದಾಗಿಯೇ ಹುಳುಕಾಗಿದೆ ಎನ್ನಬಹುದು. ಆದರೆ, ಕ್ಯಾಲ್ಶಿಯಂ ಕೊರತೆಯೂ ಅದಕ್ಕೆ ಕಾರಣವಾಗಿರಬಹುದು ಎಂಬುದನ್ನು ನೆನಪಿನಲ್ಲಿಡಬೇಕು.
೨.ಮಾಂಸಖಂಡಗಳ ಸೆಳೆತ: ಬಹಳ ಸಾರಿ, ಮೂಳೆ ಅಥವಾ ಎಲುಬಿನ ಸಂಬಂಧೀ ಸಮಸ್ಯೆ ಬಂದಾಕ್ಷಣ ಮಾತ್ರ ಅದಕ್ಕೆ ಕ್ಯಾಲ್ಶಿಯಂನ ಸಂಬಂಧ ಹುಡುಕುತ್ತೇವೆ. ಆದರೆ, ಮಾಂಸಖಂಡಗಳಿಗೂ ಕ್ಯಾಲ್ಶಿಯಂಗೂ ಸಂಬಂಧವಿದೆ. ಆಗಾಗ ನಿಮಗೆ ಮಾಂಸಖಂಡಗಳ ಸೆಳೆತ, ಉಳುಕಿನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದರೆ, ನಿಮಗೆ ಕ್ಯಾಲ್ಶಿಯಂ ಕೊರತೆಯಿದೆ ಎಂದೇ ಅರ್ಥ.
೩. ಉಗುರು ಮುರಿಯುವುದು: ನಿಮ್ಮ ಉಗುರು ದುರ್ಬಲವಾಗಿದೆಯೇ? ಆಗಾಗ ಮುರಿಯುತ್ತದೆಯೋ? ಅಥವಾ ಉಗುರಿನ ಸಿಪ್ಪೆ ಏಳುತ್ತಿದೆಯೋ? ಹಾಗಿದ್ದರೆ ನಿಮ್ಮ ಕ್ಯಾಲ್ಶಿಯಂ ಮಟ್ಟ್ವನ್ನು ಪರೀಕ್ಷಿಸಿಕೊಳ್ಳಿ. ಉಗುರಿನ ಆರೋಗ್ಯಕ್ಕೆ ಕ್ಯಾಲ್ಶಿಯಂ ಅತ್ಯಂತ ಅಗತ್ಯ. ಕ್ಯಾಲ್ಶಿಯಂನ ಕೊರತೆಯಿಂದಷ್ಟೇ ಉಗುರು ಮುರಿಯುವಂತಹ, ದುರ್ಬಲತೆಯಂತಹ ಸಮಸ್ಯೆ ಬರಬಹುದು.
೪. ಮೂಳೆ ದುರ್ಬಲತೆ: ಮೂಳೆ ಅಥವಾ ಎಲುಬಿನ ಆರೋಗ್ಯಕ್ಕೆ ಕ್ಯಾಲ್ಶಿಯಂ ಅತ್ಯಂತ ಅಗತ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಶೇ ೯೯ರಷ್ಟು ಕ್ಯಾಲ್ಶಿಯಂ ದೇಹದ ಮೂಳೆಗಳಲ್ಲೇ ಸಂಗ್ರಹವಾಗುತ್ತದೆ. ಹಾಗಾಗಿ, ಸರಿಯಾದ ಮಟ್ಟದಲ್ಲಿ ಕ್ಯಾಲ್ಶಿಯಂ ನಮ್ಮ ದೇಹಕ್ಕೆ ಸೇರದಿದ್ದರೆ, ಖಂಡಿತವಾಗಿಯೂ ಅದರ ಪರಿಣಾಮ ಮೂಳೆಗಳ ಮೇಲೆ ಕಾಣುತ್ತದೆ. ಆಗಾಗ ಮೂಳೆ ಮುರಿತದಂತಹ ಸಮಸ್ಯೆ ಕಂಡರೂ ಇದೂ ಕಾರಣವಿರಬಹುದು. ಕ್ಯಾಲ್ಶಿಯಂ ಕಡಿಮೆಯಾಗಿದ್ದಾಗ ಮೂಳೆ ಸವೆತ, ರಿಕೆಟ್ಸ್ನಂತಹ ಕಾಯಿಲೆಗಳ ಸಂಭವ ಹೆಚ್ಚು.
೫. ನಿದ್ರಾಹೀನತೆ: ನಿದ್ದೆಯ ಸಮಸ್ಯೆ ನಿಮಗಿದೆಯೇ? ಇದಕ್ಕೆ ಬೇರೆ ಕಾರಣಗಳಿರಬಹುದು ಎಂದು ನಿಮಗೆ ಅನಿಸಿರಬಹುದು. ಆದರೆ, ಕ್ಯಾಲ್ಶಿಯಂ ಕೂಡಾ ನಿದ್ದೆಯ ಜೊತೆ ಸಂಬಂಧ ಹೊಂದಿದೆ ಎಂಬ ತಿಳುವಳಿಕೆ ನಿಮಗಿದೆಯೇ? ಹೌದು. ಕ್ಯಾಲ್ಶಿಯಂನ ಕೊರತೆಯೂ ಕೂಡಾ ನಿದ್ರಾಹೀನತೆಗೆ ಕಾರಣವಾಗಬಹುದು. ಇದರರ್ಥ, ಮಲಗುವ ಮೊದಲು ಕ್ಯಾಲ್ಶಿಯಂನಿಂದ ಸಮೃದ್ಧವಾಗಿರುವ ಆಹಾರ ಸೇವಿಸಬೇಕು ಎಂದಲ್ಲ. ಆದರೆ, ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಶಿಯಂ ಕೂಡಾ ಇರಬೇಕು. ಕ್ಯಾಲ್ಶಿಯಂ ಮಟ್ಟ ದೇಹದಲ್ಲಿ ಸಮತೋಲನ ಕಾಯ್ದುಕೊಂಡಿದ್ದರೆ ಸರಿಯಾದ ಸಮಯಕ್ಕೆ ದೇಹಕ್ಕೆ ಸರಿಯಾದ ನಿದ್ದೆ ಬರಲು ಸಹಾಯವಾಗುತ್ತದೆ.
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ6 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ7 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಪ್ರಮುಖ ಸುದ್ದಿ15 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕ್ರಿಕೆಟ್22 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್22 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ19 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್19 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ