Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ? - Vistara News

ಆರೋಗ್ಯ

Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?

ಹುಣಸೆ ಮರದ ದೆವ್ವಗಳ ಕಥೆ ಕೇಳಿದ ಮೇಲೂ ಹುಣಸೆ ಹಣ್ಣಿನ ಆಸೆ ಬಿಟ್ಟವರುಂಟೆ! ಕಾಯಿದ್ದಾಗ ಹುಚ್ಚು ಹುಳಿ, ಹಣ್ಣಾದ ಮೇಲೆ ಸ್ವಲ್ಪ ಸಿಹಿ-ಉಳಿದಷ್ಟೂ ಹುಳಿ ರುಚಿಯ ಈ ಹಣ್ಣು ತಿನ್ನುವುದಕ್ಕೆ ಆಸೆ ಪಡದವರೆ ವಿರಳ ಎನ್ನಬಹುದು. ಏನಿದರ (benefits of tamarind) ಉಪಯೋಗಗಳು?

VISTARANEWS.COM


on

Benefits Of Tamarind
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮರದಲ್ಲಿ ಗೆಜ್ಜೆಯಂತೆ ತೂಗುತ್ತಿರುವ ಹುಣಸೆಹಣ್ಣನ್ನು ನೋಡಿ ಬಾಯಲ್ಲಿ ನೀರೂರಿಸಿಕೊಂಡವರೆಷ್ಟು ಮಂದಿಯಿಲ್ಲ? ಮರದ ಗೆಲ್ಲು ಬಗ್ಗಿಸಿ ಜೋತಾಡಿದವರು, ಕೈಗೆಟುಕದೇ ಇದ್ದಿದ್ದಕ್ಕೆ ಕಲ್ಲು ಬೀರಿದವರು, ಕೋಲು ಬೀಸಿದವರು- ಹುಣಸೆ ಹಣ್ಣಿನ ಆಸೆಗಾಗಿ ಮರ ಹತ್ತಿ ಕೊಯ್ದವರು, ಬಿದ್ದು ಕಾಲು ಮುರಿದುಕೊಂಡವರು- ಎಂಥೆಂಥವರಿಲ್ಲ! ಹುಣಸೆ ಮರದ ದೆವ್ವಗಳ ಕಥೆ ಕೇಳಿದ ಮೇಲೂ ಹುಣಸೆ ಹಣ್ಣಿನ ಆಸೆ ಬಿಟ್ಟವರುಂಟೆ? ಕಾಯಿದ್ದಾಗ ಹುಚ್ಚು ಹುಳಿ, ಹಣ್ಣಾದ ಮೇಲೆ ಸ್ವಲ್ಪ ಸಿಹಿ ಉಳಿದಷ್ಟೂ ಹುಳಿ ರುಚಿಯ ಈ ಹಣ್ಣು ತಿನ್ನುವುದಕ್ಕೆ ಆಸೆ ಪಡದವರೆ ವಿರಳ ಎನ್ನಬಹುದು. ಇದು ಬರೀ ಬಾಯಿ ರುಚಿಗೆ ತಿನ್ನುವ ಮಾತಲ್ಲ, (benefits of tamarind) ಹೆಚ್ಚಿನ ಉಪಯೋಗಗಳಿವೆ.

Sweet tamarind

ಭಾರತೀಯ ಅಡುಗೆ ಮನೆಗಳಲ್ಲಿ ಇರಲೇಬೇಕಾದ ವ್ಯಂಜನಗಳ ಪೈಕಿ ಹುಣಸೆ ಹಣ್ಣು ಸಹ ಒಂದು. ಅದರಲ್ಲೂ ದಕ್ಷಿಣ ಭಾರತೀಯ ಅಡುಗೆಗಳಲ್ಲಿ ತಿಳಿಸಾರು, ಹುಳಿ, ಗೊಜ್ಜು, ಚಟ್ನಿ, ಪುಳಿಯೋಗರೆಗಳಿಂದ ಹಿಡಿದು ಬಹಳಷ್ಟು ಅಡುಗೆಗಳನ್ನು ರುಚಿಗಟ್ಟಿಸುವುದಕ್ಕೆ ಹುಣಸೆಹುಳಿ ಬೇಕೆಬೇಕು. ಇವೆಲ್ಲ ರುಚಿಯ ಮಾತಾಯಿತು. ಇಷ್ಟೊಂದು ವ್ಯಾಪಕವಾಗಿ ಬಳಕೆಯಲ್ಲಿರುವ ಈ ಹಣ್ಣಿಗೆ ಆರೋಗ್ಯದ ದೃಷ್ಟಿಯಿಂದ ಒಂದಿಷ್ಟು ಸದ್ಗುಣಗಳು ಇರಲೇಬೇಕಲ್ಲವೇ? ದೊಡ್ಡ ಮಟ್ಟದಲ್ಲಿ ಇದನ್ನು ಬೆಳೆಯಲಾಗುತ್ತಿದೆ ಎಂದಾದರೆ ಅಷ್ಟು ಉಪಯೋಗವೂ ಇರಬೇಕು. ಪರಂಪರಾಗತ ಔಷಧಿಯಲ್ಲಿ ಹುಣಸೆಹಣ್ಣು ಮಾತ್ರವಲ್ಲ, ಇಡೀ ಮರವೇ ಬಳಕೆಯಲ್ಲಿದೆ. ಏನೀ ಹಣ್ಣಿನ (benefits of tamarind) ಪ್ರಯೋಜನಗಳು?

ರೋಗ ನಿರೋಧಕತೆ

ಇದರಲ್ಲಿರುವ ಹುಳಿ ರುಚಿಯ ಟಾರ್ಟಾರಿಕ್‌ ಆಮ್ಲವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಉತ್ಕರ್ಷಣ ನಿರೋಧಕ ಗುಣವೂ ಇದ್ದು, ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.

Aids in weight loss

ತೂಕ ಇಳಿಕೆಗೆ ನೆರವು

ಇದರಲ್ಲಿ ನಾರಿನಂಶ ಹೇರಳವಾಗಿದೆ. ಹಾಗಾಗಿ ಜೀರ್ಣಾಂಗವನ್ನು ಸ್ವಚ್ಛಗೊಳಿಸಿ, ಪಚನದ ಕೆಲಸವನ್ನು ಸರಿ ಮಾಡುತ್ತದೆ. ಜೊತೆಗೆ, ಇದರಲ್ಲಿರುವ ಫ್ಲೆವನಾಯ್ಡ್‌ ಮತ್ತು ಪಾಲಿಫೆನಾಲ್‌ಗಳು ದೇಹದ ತೂಕ ಇಳಿಸುವುದಕ್ಕೂ ನೆರವಾಗುತ್ತವೆ. ಇದರಲ್ಲಿರುವ ಹೈಡ್ರಾಕ್ಸಿ ಸಿಟ್ರಿಕ್‌ ಆಮ್ಲವು ಹಸಿವೆಯನ್ನು ಕಡಿಮೆ ಮಾಡುತ್ತದೆ.

ಪೆಪ್ಟಿಕ್‌ ಅಲ್ಸರ್‌ ದೂರ

ಜಠರ ಮತ್ತು ಸಣ್ಣ ಕರುಳಿನ ಒಳಗಿನ ಭಾಗದಲ್ಲಿ ಕಾಣಿಸಿಕೊಳ್ಳುವ ಈ ಹುಣ್ಣುಗಳು ವಿಪರೀತ ನೋವುಂಟು ಮಾಡುತ್ತವೆ. ಹುಣಸೆ ಹಣ್ಣಿನಲ್ಲಿರುವ ಪಾಲಿಫೆನಾಲ್‌ ಅಂಶಗಳು ಜೀರ್ಣಾಂಗದಲ್ಲಿ ಪೆಪ್ಟಿಕ್‌ ಅಲ್ಸರ್‌ ಆಗದಂತೆ ತಡೆಯುವ ಸಾಧ್ಯತೆಯನ್ನು ಹೊಂದಿವೆ.

Diabetes control

ಮಧುಮೇಹ ನಿಯಂತ್ರಣ

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಸಕ್ಕರೆಯ ಮಟ್ಟ ಧಿಡೀರ್‌ ಏರುಪೇರಾಗದಂತೆ ತಡೆಯುತ್ತವೆ. ಮೇದೋಜೀರಕಾಂಗದ ಆರೋಗ್ಯ ಸುಧಾರಣೆಗೂ ಹುಣಸೆಹಣ್ಣು ಉಪಯುಕ್ತವಾಗಿದೆ. ಇದರಲ್ಲಿರುವ ಅಲ್ಫಾ ಅಮೈಲೇಸ್‌ ಎಂಬ ವಸ್ತುವು ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.

ಪಚನಕಾರಿ

ಇದರಲ್ಲಿರುವ ಟಾರ್ಟಾರಿಕ್ ಮತ್ತು ಮ್ಯಾಲಿಕ್‌ ಆಮ್ಲಗಳಿಗೆ ವಿರೇಚಕ ಗುಣವಿದೆ. ಇದು ಹೊಟ್ಟೆಯ ಸ್ನಾಯುಗಳನ್ನು ವಿಕಸನಗೊಳಿಸುತ್ತದೆ. ಇದರ ಹಣ್ಣನ್ನು ಮಲಬದ್ಧತೆ ನಿವಾರಣೆಗೆ ಉಪಯೋಗಿಸಿದರೆ, ಇದರ ಎಲೆಯನ್ನು ಅತಿಸಾರ ಕಡಿಮೆ ಮಾಡುವುದಕ್ಕೆ ಬಳಸಲಾಗುತ್ತದೆ. ಇದರ ಕಾಂಡ ಮತ್ತು ಬೇರನ್ನು ತೇಯ್ದು ಹೊಟ್ಟೆ ನೋವಿನ ನಿವಾರಣೆಗೆ ಉಪಯೋಗಿಸಲಾಗುತ್ತದೆ.

Good for the heart

ಹೃದಯಕ್ಕೆ ಅನುಕೂಲ

ಇದರಲ್ಲಿ ಮೆಗ್ನೀಶಿಯಂ ಅಂಶ ಹೇರಳವಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಮಾತ್ರವಲ್ಲ, ಇದರ ಫ್ಲೆವನಾಯ್ಡ್‌ಗಳು ಎಲ್‌ಡಿಎಲ್‌ ಹೆಚ್ಚದಂತೆ ಕಾಪಾಡಿಕೊಂಡು, ದೇಹದಲ್ಲಿ ಕೆಟ್ಟ ಕೊಬ್ಬು ಜಮೆಯಾಗದಂತೆ ಮಾಡಲು ನೆರವಾಗುತ್ತವೆ. ಹಾಗಾಗಿ ಹೃದಯದ ಕ್ಷೇಮ ಕಾಪಾಡುವಲ್ಲಿ ಇದು ಸಹಕಾರಿ.

ಯಕೃತ್‌ನ ಕಾಳಜಿ

ಅತಿಯಾದ ಕ್ಯಾಲರಿ ಇರುವಂಥ ಆಹಾರಗಳು ಯಕೃತ್‌ನಲ್ಲಿ ಕೊಬ್ಬು ತುಂಬಿ ಫ್ಯಾಟಿ ಲಿವರ್‌ನಂಥ ಸಮಸ್ಯೆಗಳಿಗೆ ನಾಂದಿ ಹಾಡುತ್ತವೆ. ಕೊಬ್ಬಿಲ್ಲದೆ ಅನುಕೂಲಗಳನ್ನು ತರುವ ಹುಣಸೆ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಯಕೃತ್‌ನ ಕಾಳಜಿಯನ್ನೂ ಮಾಡುತ್ತವೆ. ನಿಯಮಿತವಾಗಿ ಇದರ ಮಿತ ಸೇವನೆ ದೇಹಕ್ಕೆ ಹಲವು ರೀತಿಯ ಅನುಕೂಲಗಳನ್ನು ತರಬಲ್ಲದು.

ಅಲರ್ಜಿ ನಿಯಂತ್ರಣ

ಹಿಸ್ಟಮಿನ್‌ಗಳನ್ನು ಕಡಿಮೆ ಮಾಡುವಂಥ ಗುಣ ಹುಣಸೆ ಹಣ್ಣಿಗಿದೆ. ಜೊತೆಗೆ ವಿಟಮಿನ್‌ ಸಿ ಅಂಶವೂ ಇದರಲ್ಲಿ ಇರುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಹಾಗಾಗಿ ನೆಗಡಿ, ಕೆಮ್ಮು, ಅಸ್ತಮಾದಂಥ ಅಲರ್ಜಿ ಸಮಸ್ಯೆಗಳನ್ನು ಹತೋಟಿಗೆ ತರಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: Nails Health Tips: ಆರೋಗ್ಯದ ಗುಟ್ಟು ರಟ್ಟಾಗಬೇಕಿದ್ದರೆ ಉಗುರುಗಳನ್ನು ನೋಡಿ!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Speech Fasting: ಸದಾ ವಟವಟ ಮಾತಾಡ್ತಾ ಇರ್ತೀರಾ? ʼಮೌನವ್ರತʼ ಮಾಡಿ, ಆರೋಗ್ಯ ಸುಧಾರಣೆ ನೋಡಿ!

ಮೌನವ್ರತವೆಂದರೆ ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾಗುತ್ತದೆ. ಆದರೆ ಮೌನಕ್ಕೂ ಚಿಕಿತ್ಸಕ ಗುಣವಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಇದು ಗುಣವಾಗುವುದಕ್ಕೆ ನೆರವಾಗುತ್ತದೆ. ಹಾಗಾಗಿ ಸದಾ ವಟವಟ ಮಾಡುವವರು ನೀವಾದರೆ, ಆಗೀಗ ಮೌನವ್ರತ ಇರಿಸಿಕೊಳ್ಳಿ (Speech Fasting), ಒಳ್ಳೆಯದು!

VISTARANEWS.COM


on

Speech Fasting
Koo

ಇಡೀ ಜಗತ್ತು ಸಂವಹನದ ಸೂತ್ರದಿಂದ ಬಂಧಿಸಲ್ಪಟ್ಟಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇರಲಿ, ಮುಖಾಮುಖಿ ಭೇಟಿ ಇರಲಿ, ಅಂತೂ ಸಂವಹನ ನಡೆಯುತ್ತಲೇ ಇರಬೇಕು. ಅದರಲ್ಲೂ ಮಾತಿಗೆ ಕೂತರೆ ಸಾಮಾನ್ಯಕ್ಕೆ ನಿಲ್ಲಿಸುವುದಿಲ್ಲ ನಾವು. ಧ್ವನಿಪೆಟ್ಟಿಗೆಯನ್ನು ಶೋಷಿಸುತ್ತಲೇ ಇರುತ್ತೇವೆ. ನಮ್ಮ ದೇಹದ ಉಳಿದೆಲ್ಲ ಭಾಗಗಳಂತೆ ಧ್ವನಿ ಪೆಟ್ಟಿಗೆಗೂ ವಿಶ್ರಾಂತಿ ಬೇಕಾಗುತ್ತದೆ. ಅವಿಶ್ರಾಂತವಾಗಿ ಅದನ್ನು ದುಡಿಸುತ್ತಿದ್ದರೆ ಧ್ವನಿಪೆಟ್ಟಿಗೆಗೂ ಕಷ್ಟ ತಪ್ಪಿದ್ದಲ್ಲ. ಹಾಗಾಗಿಯೇ ಹಳೆಯ ಜನಗಳು ಹಲವಾರು ವ್ರತಗಳ ಜೊತೆಗೆ ʻಮೌನವ್ರತʼವನ್ನೂ ಆಗೀಗ ಇರಿಸಿಕೊಳ್ಳುತ್ತಿದ್ದರು. ಮೌನವ್ರತ ಎಂಬುದು ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾದರೂ, ಇದರಿಂದ ಆರೋಗ್ಯಕ್ಕೆ ಲಾಭಗಳಿರುವುದು ಹೌದು. ಏನು ಪ್ರಯೋಜನ (Speech Fasting) ಮೌನದಿಂದ?

young woman covering closed mouth with hands.

ಏನು ಹಾಗೆಂದರೆ?

ಯಾವುದೇ ಧಾರ್ಮಿಕ ಆಚರಣೆಯ ಸಲುವಾಗಿ ಮಾಡುವಂಥ ವ್ರತವಲ್ಲ ಇದು. ಇದನ್ನು ʻವೋಕಲ್‌ ರೆಸ್ಟ್‌ʼ ಅಥವಾ ಧ್ವನಿಪೆಟ್ಟಿಗೆಗೆ ನೀಡುವ ವಿಶ್ರಾಂತಿ ಎಂದು ಕರೆಯಲಾಗುತ್ತದೆ. ನಿಗದಿತ ಸಮಯದಲ್ಲಿ ಮಾತನಾಡದೆ, ಧ್ವನಿಪೆಟ್ಟಿಗೆಯನ್ನು ಯಾವುದಕ್ಕೂ ಬಳಸದೆ ಇರುವುದು ಎಂದು ಅರ್ಥ. ಇದರಿಂದ ಧ್ವನಿಪೆಟ್ಟಿಗೆಯ ಸುಸ್ತು, ಆಯಾಸವೆಲ್ಲ ಕಡಿಮೆಯಾಗಿ, ದುರಸ್ತಿಯಾಗಲು ಅನುಕೂಲವಾಗುತ್ತದೆ. ಹಾಡುಗಾರರು, ನಟರು, ಪ್ರವಚನ ನೀಡುವವರು, ಉಪನ್ಯಾಸಕರು ಇತ್ಯಾದಿ ಧ್ವನಿಯನ್ನೇ ಪ್ರಧಾನವಾಗಿ ಬಳಸುವವರು ಈ ತಂತ್ರಗಳನ್ನು ಅಳವಡಿಸಿಕೊಂಡರೆ ಅನುಕೂಲವಾದೀತು. ಹಾಡು, ಮಾತು, ಪಿಸುಮಾತಿಗೂ ಸದಾ ಕಾಲ ಕಂಪಿಸುತ್ತಲೇ ಇರುವ ಧ್ವನಿಪೆಟ್ಟಿಗೆಗೆ ಸುಸ್ತಾಗುತ್ತದೆ. ಇದರಿಂದ ಧ್ವನಿ ಬೀಳುವುದು, ಗಂಟಲು ಉಬ್ಬಿದಂತಾಗಿ ನೋವು ಕಾಣುವುದು ಸಾಮಾನ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಹಾನಿಯಾಗುತ್ತದೆ. ಅದನ್ನು ವಿಶ್ರಾಂತಿಗೆ ದೂಡಿದಾಗ ಆಗುವ ಅನುಕೂಲಗಳು ಬಹಳಷ್ಟು.

Children speech therapy concept.

ಆರೋಗ್ಯ ಮರಳಿಸುತ್ತದೆ

ದೇಹದ ಯಾವುದೇ ಭಾಗಕ್ಕೂ ಅತಿ ಬಳಕೆಯಿಂದ ಆಯಾಸವಾದರೆ ವಿಶ್ರಾಂತಿ ಅಗತ್ಯವಾಗುತ್ತದೆ. ಹೀಗೆ ಮಾತಿನ ಉಪವಾಸದ ಮೂಲಕ ವಿಶ್ರಾಂತಿ ನೀಡುವುದರಿಂದ ಕಳೆದು ಹೋದ ಆರೋಗ್ಯ ಮರಳು ದೊರೆಯುವುದಕ್ಕೆ ಸಾಧ್ಯ. ಇದು ಧ್ವನಿಪೆಟ್ಟಿಗೆಯ ವಿಷಯದಲ್ಲೂ ಹೌದು. ಧ್ವನಿ ಪೆಟ್ಟಿಗೆಯಲ್ಲಿನ ಊತ, ಕಿರಿಕಿರಿ ಮುಂತಾದವುಗಳನ್ನು ಗುಣಪಡಿಸಬಹುದು.

ಗುಣಮಟ್ಟ ಸುಧಾರಣೆ

ಪದೇಪದೆ ಧ್ವನಿ ಬೀಳುತ್ತಿದ್ದರೆ, ಧ್ವನಿಯ ಗುಣಮಟ್ಟ ಹಾಳಾಗಿದ್ದರೆ, ಶೃತಿಯ ಸಮಸ್ಯೆಯಿದ್ದರೆ, ಸ್ಪಷ್ಟತೆ ಕಡಿಮೆಯಿದ್ದರೆ- ಇಂಥ ಎಲ್ಲ ಸಮಸ್ಯೆಗಳಿಗೆ ಮೌನ ಅಥವಾ ಧ್ವನಿಪೆಟ್ಟಿಗೆಯ ವಿಶ್ರಾಂತಿ ಮದ್ದಾಗಬಲ್ಲದು. ಧ್ವನಿ ಚಿಕಿತ್ಸೆಯಲ್ಲಿ ಮೌನವನ್ನೂ ಒಂದು ಸಾಧನವಾಗಿ ಬಳಸಲಾಗುತ್ತದೆ. ಇದರಿಂದ ಧ್ವನಿಯ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸಲು ಸಾಧ್ಯವಿದೆ.

ಹಾನಿ ಕಡಿಮೆ

ಧ್ವನಿಪೆಟ್ಟಿಗೆಯನ್ನು ಅತಿಯಾಗಿ ಮತ್ತು ಸತತ ಬಳಸುವುದರಿಂದ ಧ್ವನಿಪೆಟ್ಟಿಗೆಯಲ್ಲಿ ನಾಡ್ಯೂಲ್‌ ಅಥವಾ ಪಾಲಿಪ್‌ಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಧ್ವನಿಪೆಟ್ಟಿಗೆಗೆ ಹಾನಿ ಆಗುವ ಸಂಭವ ಇರುತ್ತದೆ. ಹಾಗಾಗಿ ಚಿಕಿತ್ಸಕ ಉದ್ದೇಶದಿಂದ ಮೌನ ವಹಿಸುವುದರಿಂದ ಇಂಥ ಹಾನಿಯನ್ನು ಕಡಿಮೆ ಮಾಡಲು ಸಾಧ್ಯವಿದೆ.

Mood Enhancement Dark Chocolate Benefits

ಮಾನಸಿಕ ನೆಮ್ಮದಿ

ಹೊರಗಿನ ವ್ಯವಹಾರವನ್ನು ಕೊಂಚ ನಿಲ್ಲಿಸಿದರೆ, ಒಳಗಿನ ಮನೋವ್ಯಾಪಾರಕ್ಕೆ ತೆರೆದುಕೊಳ್ಳುವುದಕ್ಕೆ ಸಾಧ್ಯ. ನಮ್ಮ ಬಗ್ಗೆ ನಮಗೆ ತಿಳಿಯುವುದಕ್ಕೆ, ನಾವೇನು ಮಾಡುತ್ತಿದ್ದೇವೆ, ಅದನ್ನು ಯಾಕಾಗಿ ಮಾಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೌನ ಸಾಧನವಾಗಬಲ್ಲದು. ಮಾನಸಿಕ ನೋವುಗಳನ್ನು ದೂರಮಾಡಿ, ಸಾಂತ್ವನಕ್ಕೆ ನಮ್ಮೊಳಗೇ ಜಾಗ ಮಾಡಿಕೊಡುತ್ತದೆ.

ಇದನ್ನೂ ಓದಿ: Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಹೇಗೆ ಮಾಡಬೇಕು?

ಧ್ವನಿಗೆ ಎಷ್ಟು ಸಮಸ್ಯೆಯಾಗಿದೆ ಎಂಬುದರ ಮೇಲೆ ಎಷ್ಟು ಹೊತ್ತು ವಿಶ್ರಾಂತಿ ನೀಡಬೇಕು ಎಂಬುದನ್ನು ನಿರ್ಧರಿಸಬಹುದು. ದಿನದ ಒಂದಿಷ್ಟು ತಾಸು, ಇಡೀ ದಿನ, ವಾರದಲ್ಲಿ ಪ್ರತಿದಿನದ ಒಂದಿಷ್ಟು ಹೊತ್ತು- ಹೀಗೆ. ಮಾತಾಡುವುದಿಲ್ಲ ಎಂದರೆ ಗುನುಗಬಹುದು, ಪಿಸು ಮಾತಾಡಬಹುದು ಎಂದು ಅರ್ಥವಲ್ಲ, ಧ್ವನಿಪೆಟ್ಟಿಗೆಗೆ ಸಂಪೂರ್ಣ ವಿಶ್ರಾಂತಿ ನೀಡಬೇಕು. ಮೌನ ಮುರಿದ ಹೊತ್ತಿನಲ್ಲೂ ಸಿಕ್ಕಾಪಟ್ಟೆ ಕೂಗುವುದು, ಕಿರುಚುವುದು ಸಲ್ಲದು. ದಿನಕ್ಕೆ 3-4 ಲೀಟರ್‌ ನೀರು ಕುಡಿಯುವುದು ಅಗತ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಬೇಕಾದ ತೇವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಮ್ಮುವುದು, ಕ್ಯಾಕರಿಸುವುದು ಇತ್ಯಾದಿಗಳನ್ನು ಮಾಡುವ ಅಗತ್ಯವಿದ್ದರೆ, ನೆಗಡಿಯ ಸಮಸ್ಯೆಯಿದ್ದರೆ, ಬೆಚ್ಚಗಿನ ಉಪ್ಪು ನೀರಿನಿಂದ ಗಂಟಲನ್ನು ಚೆನ್ನಾಗಿ ಗಾರ್ಗಲ್‌ ಮಾಡುವುದು ಒಳ್ಳೆಯದು.

Continue Reading

ಆರೋಗ್ಯ

Life Expectancy: ಕೊರೊನಾದಿಂದ ನಮ್ಮ ಆಯುಷ್ಯದಲ್ಲಿ 2 ವರ್ಷ ಕಡಿತ; WHO ಭೀಕರ ವರದಿ

Life Expectancy: ಕೊರೊನಾ ಸೋಂಕಿನ ಪರಿಣಾಮವು ಜಗತ್ತಿನಾದ್ಯಂತ ಒಂದೇ ರೀತಿಯಾಗಿ ಪರಿಣಾಮ ಬೀರಿಲ್ಲ. ಆಯಾ ದೇಶ, ಖಂಡಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರಿದೆ. ಅಮೆರಿಕ ಹಾಗೂ ಆಗ್ನೇಯ ಏಷ್ಯಾದ ಜನರ ಸರಾಸರಿ ಜೀವಿತಾವಧಿಯು 3 ವರ್ಷ ಕಡಿಮೆಯಾಗಿದೆ. ಆರೋಗ್ಯಯುತ ಜೀವನವು ಎರಡೂವರೆ ವರ್ಷ ಕಡಿಮೆಯಾಗಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು ವರದಿ ನೀಡಿದೆ.

VISTARANEWS.COM


on

Life Expectancy
Koo

ನ್ಯೂಯಾರ್ಕ್‌: ಚೀನಾದಲ್ಲಿ ಹರಡಿ, ಜಗತ್ತಿನಾದ್ಯಂತ ಪಸರಿಸಿ, ಕೋಟ್ಯಂತರ ಜನರ ಸಾವಿಗೆ ಕಾರಣವಾದ ಕೊರೊನಾ (Covid 19) ಮಹಾಮಾರಿಯ ಹಾವಳಿ ಕಡಿಮೆಯಾದರೂ ಅದು ಜನರ ಜೀವನದ ಮೇಲೆ ಬೀರುವ ಪರಿಣಾಮವು ಇನ್ನೂ ನಿಂತಿಲ್ಲ. ಕೊರೊನಾ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ, ರೆಮ್ಡಿಸಿವಿರ್‌ ಪಡೆದವರು, ಐಸಿಯುಗೆ ದಾಖಲಾಗಿ ಜೀವಂತವಾಗಿ ಹೊರಬಂದವರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಬೆನ್ನಲ್ಲೇ, ವಿಶ್ವ ಆರೋಗ್ಯ ಸಂಸ್ಥೆಯು (WHO) ಭೀಕರ ವರದಿ ಬಿಡುಗಡೆ ಮಾಡಿದ್ದು, ಕೊರೊನಾದಿಂದ ಜಾಗತಿಕವಾಗಿ ಜನರ ಜೀವಿತಾವಧಿಯು (Life Expectancy) 2 ವರ್ಷ ಕಡಿಮೆಯಾಗಿದೆ ಎಂದು ತಿಳಿಸಿದೆ.

“2019ರಿಂದ 2021ರ ಅವಧಿಯಲ್ಲಿ ಕೊರೊನಾ ಮಹಾಮಾರಿಯು ಜಗತ್ತಿನಾದ್ಯಂತ ಭೀಕರ ಪರಿಣಾಮ ಉಂಟುಮಾಡಿತು. ಇದರಿಂದಾಗಿ 2019-21ರ ಅವಧಿಯಲ್ಲಿ ಜಗತ್ತಿನಾದ್ಯಂತ ಮನುಷ್ಯರ ಸರಾಸರಿ ಜೀವಿತಾವಧಿಯು 71.4 ವರ್ಷಕ್ಕೆ ಇಳಿದಿದೆ. ಜನರ ಸರಾಸರಿ ಜೀವಿತಾವಧಿಯು 1.8 ವರ್ಷ ಕಡಿಮೆಯಾಗಿದೆ. ಅಷ್ಟೇ ಅಲ್ಲ, ಇದೇ ಅವಧಿಯಲ್ಲಿ ಜನರ ಆರೋಗ್ಯಯುತ ಜೀವನ ಪ್ರಮಾಣದಲ್ಲೂ 1.5 ವರ್ಷ ಕಡಿಮೆಯಾಗಿದ್ದು, 61.9 ವರ್ಷಕ್ಕೆ ಕುಸಿದಿದೆ” ಎಂಬುದಾಗಿ ಡಬ್ಲ್ಯೂಎಚ್‌ಒ ವರದಿಯಿಂದ ತಿಳಿದುಬಂದಿದೆ.

ಏಷ್ಯಾ ಭಾಗಕ್ಕೇ ತೀವ್ರ ಪರಿಣಾಮ

“ಕೊರೊನಾ ಸೋಂಕಿನ ಪರಿಣಾಮವು ಜಗತ್ತಿನಾದ್ಯಂತ ಒಂದೇ ರೀತಿಯಾಗಿ ಪರಿಣಾಮ ಬೀರಿಲ್ಲ. ಆಯಾ ದೇಶ, ಖಂಡಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರಿದೆ. ಅಮೆರಿಕ ಹಾಗೂ ಆಗ್ನೇಯ ಏಷ್ಯಾದ ಜನರ ಸರಾಸರಿ ಜೀವಿತಾವಧಿಯು 3 ವರ್ಷ ಕಡಿಮೆಯಾಗಿದೆ. ಆರೋಗ್ಯಯುತ ಜೀವನವು ಎರಡೂವರೆ ವರ್ಷ ಕಡಿಮೆಯಾಗಿದೆ. ಇದು ಜಗತ್ತಿನಲ್ಲೇ ಕೊರೊನಾದಿಂದ ಅತಿ ಹೆಚ್ಚು ಪರಿಣಾಮ ಬೀರಿದ ಭಾಗಗಳಾಗಿವೆ. ವೆಸ್ಟರ್ನ್‌ ಪೆಸಿಫಿಕ್‌ ರೀಜನ್‌ನಲ್ಲಿ ಅತಿ ಕಡಿಮೆ ಪರಿಣಾಮ ಬೀರಿದೆ. ಈ ಭಾಗದಲ್ಲಿ ಜನರ ಸರಾಸರಿ ಜೀವಿತಾವಧಿಯು ಶೇ.0.1ರಷ್ಟು ಕಡಿಮೆಯಾಗಿದೆ” ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.

ಮತ್ತೊಂದು ಸೋಂಕು ಸೃಷ್ಟಿಸಿದ ಚೀನಾ

ಕೊರೊನಾ ಮೂಲಕ ಕೋಟ್ಯಂತರ ಜನರ ಪ್ರಾಣಕ್ಕೆ ಕುತ್ತು ತಂದ ಚೀನಾ ಈಗ ಮತ್ತೊಂದು ಜೈವಿಕ ಯುದ್ಧಕ್ಕೆ ಮುಂದಾಗಿದೆ. ಮಾರಣಾಂತಿಕ ಎಬೋಲಾ ರೂಪಾಂತರಿ ಸೋಂಕನ್ನು (Ebola Mutant Virus) ಚೀನಾದ ವಿಜ್ಞಾನಿಗಳು ಸೃಷ್ಟಿಸಿದ್ದು, ಇದರಿಂದ ಜಗತ್ತಿಗೇ ಆತಂಕ ಎದುರಾಗಿದೆ. ಹೆಬೈ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ವಿಜ್ಞಾನಿಗಳು ಎಬೋಲಾ ರೂಪಾಂತರಿ ವೈರಸ್‌ಅನ್ನು ಸೃಷ್ಟಿಸಿದ್ದಾರೆ. ಹ್ಯಾಮ್‌ಸ್ಟರ್‌ಗಳಿಗೆ (ಕಿರುಕಡಿಗ-ಇಲಿಯಂತ ಚಿಕ್ಕ ಪ್ರಾಣಿ) ವೈರಸ್‌ ಇಂಜೆಕ್ಟ್‌ ಮಾಡಿದರೆ, ಮೂರೇ ದಿನಗಳಲ್ಲಿ ಅವರು ಸಾಯುತ್ತವೆ ಎಂದು ಸೈನ್ಸ್‌ ಡೈರೆಕ್ಟ್‌ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ.

ಇದನ್ನೂ ಓದಿ: Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

Continue Reading

ಆರೋಗ್ಯ

Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಬಹಳಷ್ಟು ಮನೆಗಳಲ್ಲಿ ನಿತ್ಯದ ಬೆಳಗಿನ ಆಹಾರವಾಗಿ ಮೊಟ್ಟೆ ಸೇವನೆ ರೂಢಿಯಲ್ಲಿದೆ. ಬೆಳಗ್ಗೆದ್ದ ಕೂಡಲೇ ಉಪಹಾರಕ್ಕೆ ಮೊಟ್ಟೆಯ ಆಮ್ಲೆಟ್‌ ಬಹಳ ಸರಳವೂ ಸುಲಭವೂ ಆಗಿ ಮಾಡಿಕೊಳ್ಳಬಹುದಾದ್ದರಿಂದ ಅನೇಕರು ಇದನ್ನು ಅವಲಂಬಿಸಿರುತ್ತಾರೆ. ಹೆಚ್ಚು ಶ್ರಮ ಬೇಡದ, ಪೌಷ್ಟಿಕಾಂಶವೂ ಇರುವ ಆಹಾರ ಇದಾದ್ದರಿಂದ ಯಾವ ಯೋಚನೆಯೂ ಇಲ್ಲದೆ, ಮೊಟ್ಟೆಯ (Egg Benefits) ಬಗೆಬಗೆಯ ಆಹಾರಗಳನ್ನು ನಿತ್ಯವೂ ತಯಾರಿಸುತ್ತಾರೆ. ಆದರೆ…

VISTARANEWS.COM


on

Egg Benefits
Koo

ಮೊಟ್ಟೆ ಅತ್ಯಂತ ಪೌಷ್ಟಿಕವಾದ ಆಹಾರಗಳಲ್ಲಿ ಒಂದು ಎಂಬುದರ ಬಗ್ಗೆ ಯಾವ ಅನುಮಾನಗಳೂ ಇಲ್ಲ. ಇದರಲ್ಲಿ ದೇಹಕ್ಕೆ ಅಗತ್ಯವಾದ ಸಾಕಷ್ಟು ಒಳ್ಳೆಯ ಪೋಷಕಾಂಶಗಳು ಇರುವ ಹಾಗೆಯೇ ಕೊಬ್ಬೂ ಇವೆ. ಬಹಳಷ್ಟು ಮನೆಗಳಲ್ಲಿ ನಿತ್ಯದ ಬೆಳಗಿನ ಆಹಾರವಾಗಿ ಮೊಟ್ಟೆ ಸೇವನೆ ರೂಢಿಯಲ್ಲಿದೆ. ಬೆಳಗ್ಗೆದ್ದ ಕೂಡಲೇ ಉಪಹಾರಕ್ಕೆ ಮೊಟ್ಟೆಯ ಆಮ್ಲೆಟ್‌ ಬಹಳ ಸರಳವೂ ಸುಲಭವೂ ಆಗಿ ಮಾಡಿಕೊಳ್ಳಬಹುದಾದ್ದರಿಂದ ಅನೇಕರು ಇದನ್ನು ಅವಲಂಬಿಸಿರುತ್ತಾರೆ. ಹೆಚ್ಚು ಶ್ರಮ ಬೇಡದ, ಪೌಷ್ಟಿಕಾಂಶವೂ ಇರುವ ಆಹಾರ ಇದಾದ್ದರಿಂದ ಯಾವ ಯೋಚನೆಯೂ ಇಲ್ಲದೆ, ಮೊಟ್ಟೆಯ ಬಗೆಬಗೆಯ ಆಹಾರಗಳನ್ನು ನಿತ್ಯವೂ ತಯಾರಿಸುತ್ತಾರೆ. ತೂಕ ಇಳಿಸುವ ಮಂದಿ, ದೇಹದಾರ್ಢ್ಯ ಬಲಪಡಿಸುವ ಮಂದಿ, ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುವ ಮಂದಿ ಎಲ್ಲರಿಗೂ ಮೊಟ್ಟೆಯೇ ಆರಾಧ್ಯ ದೈವ. ಧಾವಂತದ ಬದುಕಿಗೆ ಹೇಳಿ ಮಾಡಿಸಿದ ಆಹಾರ ಇದಾದರೂ, ಮೊಟ್ಟೆಯನ್ನು ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಬಗ್ಗೆ ಹೆಚ್ಚು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಮೊಟ್ಟೆ ಒಳ್ಳೆಯದೆಂದು ಕೇವಲ ಮೊಟ್ಟೆಯೊಂದನ್ನೇ ತಿಂದರೆ ಅದರಿಂದ ಖಂಡಿತ ಅಡ್ಡ ಪರಿಣಾಮಗಳೂ ಆದೀತು ಎಂಬುದನ್ನು ಪ್ರತಿಯೊಬ್ಬರೂ ನೆನಪಿಡಬೇಕು. ಯಾಕೆಂದರೆ ಮೊಟ್ಟೆಯಲ್ಲಿ ಪ್ರೊಟೀನ್‌ ಇರುವಂತೆಯೇ, ನಮ್ಮ ದೇಹದಲ್ಲಿ ಕೊಲೆಸ್ಟೆರಾಲ್‌ ಕೂಡಾ ಹೆಚ್ಚಿಸುವ ಅಪಾಯವಿದೆ. ಹಾಗಾಗಿ ಮೊಟ್ಟೆ ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಅರಿವು (Egg Benefits) ಅತ್ಯಂತ ಅಗತ್ಯ.

the egg

ಮೊಟ್ಟೆಯಲ್ಲಿ ಏನೇನಿವೆ?

ಪ್ರೊಟೀನ್‌ನ ಜೊತೆಜೊತೆಗೇ, ಪೊಟಾಶಿಯಂ, ನಿಯಾಸಿನ್‌, ರೈಬೋ ಫ್ಲೇವಿನ್‌, ಮೆಗ್ನೀಷಿಯಂ, ಸೋಡಿಯಂ, ಫಾಸ್ಪರಸ್‌, ಕಬ್ಬಿಣಾಂಶ, ಝಿಂಕ್ ಮತ್ತಿತರ ಖನಿಜಾಂಶಗಳೂ, ವಿಟಮಿನ್‌ ಎ, ವಿಟಮಿನ್‌ ಡಿ, ವಿಟಮಿನ್‌ ಬಿ6, ಬಿ12, ಫೋಲಿಕ್‌ ಆಸಿಡ್‌, ಪ್ಯಾಂಟೋಥೆನಿಕ್‌ ಆಸಿಡ್‌, ಥೈಮೀನ್‌ ಇತ್ಯಾದಿಗಳೆಲ್ಲವೂ ಇವೆ. ಇವೆಲ್ಲವುಗಳ ಜೊತೆಗೆ, ಒಂದು ಮೊಟ್ಟೆಯಲ್ಲಿ 180ರಿಂದ 300 ಮಿಲಿಗ್ರಾಂಗಳಷ್ಟು ಕೊಲೆಸ್ಟೆರಾಲ್‌ ಇವೆ. ಇದು ಮೊಟ್ಟೆಯ ಹಳದಿ ಭಾಗವಾದ ಯೋಕ್‌ನಲ್ಲಿರುವುದರಿಂದ ಮೊಟ್ಟೆ ತಿನ್ನುವಾಗ ಇದನ್ನು ನೆನಪಿನಲ್ಲಿಟ್ಟಿರಬೇಕು. ಪ್ರತಿ ದಿನಕ್ಕೆ 300 ಎಂಜಿಗಿಂತ ಹೆಚ್ಚು ಕೊಲೆಸ್ಟೆರಾಲ್‌ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲವೆಂದು ತಜ್ಞರ ಲೆಕ್ಕಾಚಾರ. ಮೊಟ್ಟೆಯ ಬಿಳಿಲೋಳೆಯಲ್ಲಿ ಯಾವ ಕೊಲೆಸ್ಟೆರಾಲ್‌ ಕೂಡಾ ಇರುವುದರಿಂದ ಇದನ್ನು ಸೇವಿಸುವುದರಿಂದ ತೊಂದರೆಯಿಲ್ಲ. ಆದರೆ ಹಳದಿ ಭಾಗವನ್ನು ಸೇರಿಸಿಕೊಂಡು ನಿತ್ಯವೂ ಆಮ್ಲೆಟ್‌ ಮಾಡಿ ಸೇವಿಸುತ್ತಿದ್ದರೆ ಯೋಚನೆ ಮಾಡಲೇಬೇಕು. ಹೆಚ್ಚು ತಿನ್ನುವುದರಿಂದ ಕೊಲೆಸ್ಟೆರಾಲ್‌ ಅಗತ್ಯಕ್ಕಿಂತ ಹೆಚ್ಚು ದೇಹ ಸೇರಿ, ಹೃದಯದ ಸಮಸ್ಯೆ, ರಕ್ತದೊತ್ತಡ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳು ಬರುವ ಅಪಾಯವೂ ಇವೆ.

Eggs with protein and micronutrients are also healthy for eyes Ophthalmia

ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು?

ಆರೋಗ್ಯಕರ ಆಹಾರ ಆಭ್ಯಾಸದ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೊಂದು ಮೊಟ್ಟೆಯಂತೆ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ತಿನ್ನಬಹುದು. ಅಂದರೆ ವಾರಕ್ಕೆ ಹೆಚ್ಚೆಂದರೆ ನಾಲ್ಕು ಮೊಟ್ಟೆ ಸೇವನೆ ಆರೋಗ್ಯಕರ. ಮಕ್ಕಳು ದಿನಕ್ಕೊಂದರಂತೆ ಮೊಟ್ಟೆ ಸೇವಿಸಬಹುದು. ಹೃದ್ರೋಗ, ಅತಿಯಾದ ಕೊಲೆಸ್ಟೆರಾಲ್‌ ಇರುವ ಮಂದಿ ವಾರಕ್ಕೆ ಮೂರಕ್ಕಿಂತ ಹೆಚ್ಚು ಮೊಟ್ಟೆ ತಿನ್ನುವುದು ಒಳ್ಳೆಯದಲ್ಲ. ಆದರೆ ಮೊಟ್ಟೆಯ ಹಳದಿ ಭಾಗವನ್ನು ತೆಗೆದು ಕೇವಲ ಬಿಳಿ ಭಾಗವನ್ನು ಮಾತ್ರ ನೀವು ತಿನ್ನುವುದಾದರೆ ಈ ಸಂಖ್ಯೆಯನ್ನು ಅನುಸರಿಸಬೇಕಾಗಿಲ್ಲ.

ಇದನ್ನೂ ಓದಿ: Health Benefits Of Okra: ಬೆಂಡೆಕಾಯಿ ತಿನ್ನುತ್ತೀರಿ ನಿಜ; ಅದರಿಂದಾಗುವ ಪ್ರಯೋಜನಗಳೇನು ಗೊತ್ತಿದೆಯಾ?

Continue Reading

ಆರೋಗ್ಯ

World Thyroid Day: ಇಂದು ವಿಶ್ವ ಥೈರಾಯ್ಡ್‌ ದಿನ; ‘ಗಂಟಲ ಚಿಟ್ಟೆ’ಯ ಬಗ್ಗೆ ಈ ಸಂಗತಿ ನಿಮಗೆ ಗೊತ್ತೆ?

ಥೈರಾಯ್ಡ್‌ ಚೋದಕದ ಅಸಮತೋಲನದ ಸಮಸ್ಯೆ ವಿಶ್ವದೆಲ್ಲೆಡೆ ಯದ್ವಾತದ್ವಾ ಹೆಚ್ಚಿದೆ. ಹಾಗಾಗಿ ಥೈರಾಯ್ಡ್‌ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ, ಮೇ 25ರಂದು ವಿಶ್ವ ಥೈರಾಯ್ಡ್‌ ದಿನವನ್ನು (World Thyroid Day) ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಥೈರಾಯ್ಡ್ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

World Thyroid Day
Koo

ಗಂಟಲ ಮುಂಭಾಗದಲ್ಲಿ ಸಣ್ಣ ಚಿಟ್ಟೆಯಂಥ ಗ್ರಂಥಿಯದು- ಹೆಸರು ಥೈರಾಯ್ಡ್‌ ಗ್ರಂಥಿ. ಗ್ರಂಥಿ ಚಿಕ್ಕದಾದರೂ ಅದರ ಕೆಲಸ ದೊಡ್ಡದು. ದೇಹದ ಚಯಾಪಚಯ ನಿರ್ವಹಿಸುವುದು, ಶಕ್ತಿ ಸಂಚಯನ, ಎಲ್ಲ ಚೋದಕಗಳ ಸಮತೋಲನ- ಹೀಗೆ ಒಂದಿಷ್ಟು ಮುಖ್ಯವಾದ ಕಾರ್ಯಗಳನ್ನಿದು ನೋಡಿಕೊಳ್ಳುತ್ತದೆ. ಬೇರೆಯ ಚೋದಕಗಳ ಮೇಲುಸ್ತುವಾರಿ ನೋಡಿಕೊಳ್ಳುವ ಹಾರ್ಮೋನಿನ ಸಮತೋಲನವೇ ತಪ್ಪಬಾರದಲ್ಲ. ಒಂದೊಮ್ಮೆ ತಪ್ಪಿದರೂ, ಅದರಿಂದ ದೇಹದ ಮೇಲಾಗುವ ಲಕ್ಷಣ ಮತ್ತು ಪರಿಣಾಮಗಳನ್ನು ಅರಿತುಕೊಂಡರೆ, ತ್ವರಿತವಾಗಿ ಚಿಕಿತ್ಸೆ ತೆಗೆದುಕೊಳ್ಳುವುದು ಸಾಧ್ಯ.
ಈ ನಿಟ್ಟಿನಲ್ಲಿ, ಥೈರಾಯ್ಡ್‌ ಕುರಿತಾಗಿ ಜನರಲ್ಲಿ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಮೇ ತಿಂಗಳ 25ನೇ ದಿನವನ್ನು ವಿಶ್ವ ಥೈರಾಯ್ಡ್‌ ದಿನವೆಂದು (World Thyroid Day) ಗುರುತಿಸಲಾಗಿದೆ. ಎಂಥ ಲಕ್ಷಣಗಳ ಬಗ್ಗೆ ಜಾಗ್ರತೆ ವಹಿಸಬೇಕು? ಯಾವೆಲ್ಲ ಸಮಸ್ಯೆಗಳು ತಲೆದೋರಿದರೆ ಥೈರಾಯ್ಡ್‌ ಕ್ಷಮತೆಯ ಬಗ್ಗೆ ವೈದ್ಯರಲ್ಲಿ ಸಮಾಲೋಚನೆ ಅಗತ್ಯವಾಗುತ್ತದೆ? ಆರಂಭದಲ್ಲೇ ಈ ಸಮಸ್ಯೆಯನ್ನು ಪತ್ತೆ ಮಾಡಿ, ಚಿಕಿತ್ಸೆ ಪಡೆಯುವುದರ ಲಾಭಗಳೇನು ಎಂಬಿತ್ಯಾದಿ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

Weight Loss Tips

ತೂಕದಲ್ಲಿ ವ್ಯತ್ಯಾಸ

ಯಾವುದೇ ಸರಿಯಾದ ಕಾರಣವಿಲ್ಲದಂತೆ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದಾದರೆ ಎಚ್ಚರ ಅಗತ್ಯ. ಅಂದರೆ, ಆಹಾರ ಅಥವಾ ವ್ಯಾಯಾಮದಲ್ಲಿ ಯಾವುದೇ ವ್ಯತ್ಯಯವಾಗಿಲ್ಲದಿದ್ದರೂ ತೂಕ ಹೆಚ್ಚಿದೆ ಎಂದಾದರೆ ಹೈಪೋಥೈರಾಯ್ಡ್‌ (ಅಂದರೆ ಕಡಿಮೆ ಇಲ್ಲವೇ ಅಸಮರ್ಪಕ ಥೈರಾಯ್ಡ್‌ ಹಾರ್ಮೋನುಗಳು) ಇಲ್ಲವೆಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ವ್ಯಾಯಾಮ ಹೆಚ್ಚಿಸಿಲ್ಲ, ತಿನ್ನುವುದನ್ನೂ ಕಡಿಮೆ ಮಾಡಿಲ್ಲ ಎಂದಾದರೂ ತೂಕ ಇಳಿಯುತ್ತಿದೆ ಎಂದಾದರೆ ಹೈಪರ್‌ (ಹೆಚ್ಚಿನ) ಥೈರಾಯ್ಡ್‌ ಇದೆಯೇ ಪರೀಕ್ಷಿಸಿಕೊಳ್ಳಿ.

Image Of Mental Health

ಸುಸ್ತು, ಆಯಾಸ

ರಾತ್ರಿಯಿಡೀ ಸರಿಯಾಗಿ ನಿದ್ದೆ ಮಾಡಿದ್ದರೂ ಬೆಳಗ್ಗೆ ಏಳುವಾಗ ಆಯಾಸ ಎನಿಸುತ್ತಿದೆ. ಊಟ-ಉಪಚಾರಗಳು ಸರಿಯಾಗಿಯೇ ಇದ್ದರೂ ಸುಸ್ತು ಬಿಡುತ್ತಿಲ್ಲ ಎಂದಾದರೆ ಥೈರಾಯ್ಡ್‌ ಪರೀಕ್ಷಿಸಿಕೊಳ್ಳುವುದು ಸೂಕ್ತ. ದೇಹದ ಚಯಾಪಚಯದಲ್ಲಿ ಏರಿಳಿತ ಆಗಿದ್ದಕ್ಕಾಗಿ ಕಾಡುವ ಸುಸ್ತು, ಆಯಾಸಗಳಿವು. ಥೈರಾಯ್ಡ್‌ ಏರಿಳಿತದ ಮುಖ್ಯ ಲಕ್ಷಣಗಳಲ್ಲಿ ಇದೂ ಒಂದು.

ಮೂಡ್‌ ಬದಲಾವಣೆ

ಥೈರಾಯ್ಡ್‌ ಅಸಮತೋಲನದಿಂದ ಮಾನಸಿನ ಆರೋಗ್ಯದಲ್ಲೂ ವ್ಯತ್ಯಾಸ ಕಾಣುವುದು ಸಹಜ. ಥೈರಾಯ್ಡ್‌ ಚೋದಕದ ಉತ್ಪಾದನೆ ಕಡಿಮೆಯಾದರೆ ಬೇಸರ, ಖಿನ್ನತೆ, ಶಕ್ತಿ ಸೋರಿದ ಭಾವಗಳು ಕಾಡುತ್ತವೆ. ಥೈರಾಯ್ಡ್‌ ಚೋದಕದ ಉತ್ಪಾದನೆ ಹೆಚ್ಚಾದರೆ, ಆತಂಕ, ಒತ್ತಡ, ಕಿರಿಕಿರಿ, ಕೋಪಗೊಳ್ಳುವ ಕ್ರಿಯೆಗಳು ಹೆಚ್ಚುತ್ತವೆ. ದೈನಂದಿನ ಚಟುವಟಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಮೂಡ್‌ ಮಾತ್ರ ಬದಲಾಗುತ್ತಿದೆ ಎಂದಾದರೆ ವೈದ್ಯರಲ್ಲಿ ಸಮಾಲೋಚನೆ ಅಗತ್ಯ.

Heart Health Tea Benefits

ಹೃದಯ ಬಡಿತ ಏರುಪೇರು

ಥೈರಾಯ್ಡ್‌ ಏರುಪೇರಾಗುವುದು ನೇರವಾಗಿ ಹೃದಯದ ಬಡಿತದ ಮೇಲೂ ಪರಿಣಾಮ ಬೀರುತ್ತದೆ. ಹೈಪೊ ಥೈರಾಯ್ಡ್‌ ಸಂದರ್ಭದಲ್ಲಿ ಬಡಿತ ನಿಧಾನವಾದರೆ, ಹೈಪರ್‌ ಥೈರಾಯ್ಡ್‌ ಇದ್ದಾಗ ಬಡಿತ ತೀವ್ರವಾಗುತ್ತದೆ. ಇವುಗಳನ್ನು ವೈದ್ಯರ ಮಾಮೂಲಿ ದೈಹಿಕ ತಪಾಸಣೆಯಲ್ಲೂ ಪತ್ತೆ ಮಾಡಬಹುದು. ಬಡಿತ ಜೋರಾಗಿದ್ದು ಅನುಭವಕ್ಕೂ ಬರಬಹುದು. ಹಾಗಾಗನಿ ನಿಯಮಿತವಾಗಿ ವೈದ್ಯರ ತಪಾಸಣೆ ಅಗತ್ಯ.

Hyperthyroidism

ಕುತ್ತಿಗೆ ದಪ್ಪ

ಥೈರಾಯ್ಡ್‌ ಸಮಸ್ಯೆ ಇದ್ದಾಗ ಕುತ್ತಿಗೆಯ ಭಾಗ ಊದಿಕೊಂಡಂತೆ ಕಾಣಬಹುದು. ಅಯೋಡಿನ್‌ ಕೊರತೆಯಾದಾಗ (ಗೊಯಿಟ್ರ್ ರೋಗ), ಥೈರಾಯ್ಡ್‌ ಹಿಗ್ಗಿದಾಗ ಅಥವಾ ಥೈರಾಯ್ಡ್‌ನಲ್ಲಿ ಟ್ಯೂಮರ್‌ಗಳಿದ್ದಾಗ ಕುತ್ತಿಗೆಯ ಭಾಗ ಊದಿಕೊಂಡಂತೆ ಅಥವಾ ದಪ್ಪವಾದಂತೆ ಕಾಣುತ್ತದೆ. ಹೀಗೆ ಕಂಡಾಗಲೂ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ.

ಬಿಸಿ-ತಣ್ಣ ಹೆಚ್ಚು

ಈ ಎರಡೂ ಹೆಚ್ಚಾಗುತ್ತದೆ. ಚಯಾಪಚಯ ಹೆಚ್ಚಿದಾಗ ಅಥವಾ ಕಡಿಮೆಯಾದಾಗ ಉಷ್ಣತೆ ಮತ್ತು ಚಳಿ ಎರಡನ್ನೂ ಸಹಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ವಾತಾವರಣದ ಉಷ್ಣತೆಗೆ ವಿರುದ್ಧವಾಗಿ ಚಳಿ ಅಥವಾ ಸೆಕೆಯ ಅನುಭವ ಆಗುತ್ತಿದ್ದರೆ, ಅತಿಯಾಗಿ ಬೆವರುತ್ತಿದ್ದರೆ, ಸೆಕೆ ಅಸಹನೀಯ ಎನಿಸಿದರೆ ಥೈರಾಯ್ಡ್‌ ಪರೀಕ್ಷಿಸಿಕೊಳ್ಳುವುದಕ್ಕೆ ಸಕಾಲ.

ಇದನ್ನೂ ಓದಿ: Fruit Juice Side Effects: ಹಣ್ಣು ತಿಂದರೆ ಒಳ್ಳೆಯದೋ, ಹಣ್ಣಿನ ಜ್ಯೂಸ್‌ ಕುಡಿದರೆ ಒಳ್ಳೆಯದೋ?

ಕೂದಲು, ಚರ್ಮ

ಇವುಗಳಲ್ಲೂ ವ್ಯತ್ಯಾಸ ಕಾಣುತ್ತದೆ. ಹೈಪೊ ಥೈರಾಯ್ಡ್‌ ಇದ್ದಾಗ ಕೂದಲು ಮತ್ತು ಚರ್ಮ ಒಣಗಿ ಒರಟಾಗುತ್ತವೆ. ಕೂದಲು ಉದುರುವುದು ಸಾಮಾನ್ಯ. ಹೈಪರ್‌ ಥೈರಾಯ್ಡ್‌ ಇದ್ದರೆ ಕೂದಲು ಉದುರಿ, ಸಪೂರವಾಗುತ್ತದೆ. ಕೂದಲು ಮತ್ತು ಚರ್ಮದ ಆರೋಗ್ಯ ಸರಿಯಾಗಿರುವುದಕ್ಕೂ ಥೈರಾಯ್ಡ್‌ ಚೋದಕಗಳು ಅಗತ್ಯವಾಗಿ ಬೇಕು.

Continue Reading
Advertisement
West Bengal
ಪ್ರಮುಖ ಸುದ್ದಿ27 seconds ago

West Bengal: ಬಂಗಾಳದಲ್ಲಿ ಮತದಾನದ ವೇಳೆ ಹಿಂಸೆ; ಕಲ್ಲುತೂರಾಟಕ್ಕೆ ಹೆದರಿ ಓಡಿದ ಬಿಜೆಪಿ ಅಭ್ಯರ್ಥಿ, Video ಇದೆ

CM Siddaramaiah defends FIR against Harish Poonja
ರಾಜಕೀಯ5 mins ago

Harish Poonja: ಪೊಲೀಸರಿಗೆ ಧಮ್ಕಿ ಕೇಸ್‌; ಹರೀಶ್ ಪೂಂಜಾ ಶಾಸಕರೆಂದ ಮಾತ್ರಕ್ಕೆ ಆರೋಪ ಸುಳ್ಳಾ: FIR ಸಮರ್ಥಿಸಿಕೊಂಡ ಸಿಎಂ

Saree Fashion
ಫ್ಯಾಷನ್2 hours ago

Saree Fashion: ಮಹಿಳೆಯರ ಮನಗೆದ್ದ ಕಟ್‌ ವರ್ಕ್ ಬಾರ್ಡರ್‌ ಪಾರ್ಟಿ ಸೀರೆ

Hardik Pandya
ಕ್ರೀಡೆ2 hours ago

Hardik Pandya: ಪ್ರೇಯಸಿಯ ದೋಖಾದ ಸುಳಿವು ಮೊದಲೇ ಇತ್ತಾ? ಬಹುತೇಕ ಆಸ್ತಿಯನ್ನು ಪೋಷಕರ ಹೆಸರಲ್ಲಿಟ್ಟ ಚಾಲಾಕಿ ಹಾರ್ದಿಕ್!

ಕರ್ನಾಟಕ2 hours ago

Lockup Death: ಲಾಕಪ್‌ ಡೆತ್‌ ಅಲ್ಲ ಎಂದಿದ್ದ ಮೃತ ಯುವಕನ ತಂದೆ ಮತ್ತೆ ಉಲ್ಟಾ!

Actor Kiran Raj Ronny Movie Reels with Fans Song
ಸ್ಯಾಂಡಲ್ ವುಡ್2 hours ago

Actor Kiran Raj: ʻರಾನಿʼ ಸಿನಿಮಾ ಸಾಂಗ್‌ ಔಟ್‌; ಇದೇ ಭಾನುವಾರ ಕಿರಣ್ ರಾಜ್‌ ʻರೀಲ್ಸ್ with ಫ್ಯಾನ್ಸ್ʼ!

Speech Fasting
ಆರೋಗ್ಯ2 hours ago

Speech Fasting: ಸದಾ ವಟವಟ ಮಾತಾಡ್ತಾ ಇರ್ತೀರಾ? ʼಮೌನವ್ರತʼ ಮಾಡಿ, ಆರೋಗ್ಯ ಸುಧಾರಣೆ ನೋಡಿ!

Jawa Yezdi
ಆಟೋಮೊಬೈಲ್2 hours ago

Jawa Yezdi : ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ನ ಜಾವಾ 42 ಬಾಬರ್ ರೆಡ್ ಶೀನ್‌ ಬಿಡುಗಡೆ

road Accident
ಕಲಬುರಗಿ3 hours ago

Road Accident : ಅಯೋಧ್ಯೆಯಲ್ಲಿ ಭೀಕರ ಅಪಘಾತ; ಕಲಬುರಗಿ ಮೂಲದ ಮೂವರು ದುರ್ಮರಣ, 19 ಮಂದಿಗೆ ಗಾಯ

KKR vs SRH Final 2024
ಕ್ರೀಡೆ3 hours ago

KKR vs SRH Final 2024: ನಾಳೆ ಕೆಕೆಆರ್​-ಹೈದರಾಬಾದ್​ ಫೈನಲ್​ ಕಾದಾಟ; ಯಾರಿಗೆ ಒಲಿಯಲಿದೆ ಐಪಿಎಲ್​ ಕಿರೀಟ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌