ಕ್ಯಾನ್ಸರ್‌ ನಂತರದ ಬದುಕು | ಆಹಾರ ಹೇಗಿರಬೇಕು? ಛವಿ ಹೇಳ್ತಾರೆ ಕೇಳಿ - Vistara News

ಆರೋಗ್ಯ

ಕ್ಯಾನ್ಸರ್‌ ನಂತರದ ಬದುಕು | ಆಹಾರ ಹೇಗಿರಬೇಕು? ಛವಿ ಹೇಳ್ತಾರೆ ಕೇಳಿ

ಕ್ಯಾನ್ಸರ್‌ನಿಂದ ಪೀಡಿತರಾದ ಬಾಲಿವುಡ್‌ ನಟಿ ಛವಿ ಮಿತ್ತಲ್.‌ ಕ್ಯಾನ್ಸರ್‌ ಪೀಡಿತರಲ್ಲದೆ ಇತರರೂ ಆಹಾರ ಪದ್ಧತಿಯಲ್ಲಿ ಅನುಸರಿಸಬೇಕಾದ ಆರೋಗ್ಯ ಸೂತ್ರವನ್ನು ಒತ್ತಿ ಹೇಳುತ್ತಾರೆ.

VISTARANEWS.COM


on

chhavi mittal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇತ್ತೀಚಿನ ಬದುಕಿನಲ್ಲಿ ಯಾರೆಂದರವರಿಗೆ ಧುತ್ತನೆ ಎದುರಾಗುತ್ತಿರುವ ಕಂಟಕ ಕ್ಯಾನ್ಸರ್.‌ ಆದರೆ ಈ ಮಾರಿಯನ್ನು ಮಣಿಸಿ, ಬದುಕಿನತ್ತ ನಡೆದವರ ಸಂಖ್ಯೆಯೂ ದೊಡ್ಡದು. ನಟಿ, ನಿರ್ಮಾಪಕಿ ಛವಿ ಮಿತ್ತಲ್‌ ಸಹ ಇದೇ ಸಾಲಿಗೆ ಸೇರಿದವರು. ಸ್ತನ ಕ್ಯಾನ್ಸರ್‌ನಿಂದ ಮುಕ್ತರಾಗಿ, ಬದುಕಿನ ಎಂದಿನ ಲಯಕ್ಕೆ ಮರಳಿರುವ ಅವರು, ತಮ್ಮ ಆಹಾರಪದ್ಧತಿಯಲ್ಲಿ ಮಾಡಿಕೊಂಡಿರುವ ಆರೋಗ್ಯಪೂರ್ಣ ಬದಲಾವಣೆಗಳ ಬಗ್ಗೆ ಎಲ್ಲರ ಗಮನ ಸೆಳೆಯಲು ಯತ್ನಿಸಿದ್ದಾರೆ. ಕ್ಯಾನ್ಸರ್‌ ಮಣಿಸಿದವರಿಗೆ ಮಾತ್ರವಲ್ಲದೆ, ಆರೋಗ್ಯಪೂರ್ಣ ಬದುಕು ಬಯಸುವ ಯಾರಿಗೂ ಮಾರ್ಗದರ್ಶನ ನೀಡುವಂಥ ಸೂತ್ರಗಳಿವು.

ʻನನ್ನ ಆಹಾರಸೂತ್ರ ಸರಳವಾಗಿದೆ. ಹೆಚ್ಚಾಗಿ ಸಸ್ಯಾಹಾರಕ್ಕೆ ನನ್ನ ಆದ್ಯತೆ. ಹುಳಿಯ ರುಚಿ ಹೆಚ್ಚಾಗಿರುವ ಅಥವಾ ಆಸಿಡಿಟಿ ತರಿಸುವಂಥ ಆಹಾರಗಳಿಂದ ದೂರವಿದ್ದೇನೆ. ಸಕ್ಕರೆ ಮತ್ತು ಸಂಸ್ಕರಿತ ಆಹಾರವನ್ನು ಸಂಪೂರ್ಣವಾಗಿ ವರ್ಜಿಸಿದ್ದೇನೆ. ಹಳೆಯ, ಉಳಿಕೆಯ ಆಹಾರದ ಬದಲಿಗೆ ತಾಜಾ ಆಹಾರಗಳಿಗೆ ನನ್ನ ಆದ್ಯತೆ. ಪ್ರಯಾಣಿಸುವಾಗ ಮನೆಯ ಆಹಾರ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ. ಆಗದಿದ್ದರೆ, ಸ್ವಚ್ಛ ರೆಸ್ಟೋರೆಂಟ್‌ಗಳಲ್ಲಿ ಮಾತ್ರವೇ ಆಹಾರ ಸೇವಿಸುತ್ತೇನೆ. ನಮ್ಮ ಹಾಗಿನ ಆರೋಗ್ಯದವರು ತರಕಾರಿ ಮತ್ತು ಹಣ್ಣುಗಳನ್ನು ಹಸಿಯಾಗಿ ತಿನ್ನುವುದು ಕೆಲವೊಮ್ಮೆ ಸೋಂಕುಗಳಿಗೆ ಕಾರಣವಾಗಬಹುದು. ಅದಕ್ಕಾಗಿ ಅವುಗಳನ್ನು ಸ್ವಲ್ಪವಾದರೂ ಬಿಸಿ ಮಾಡಿಯೇ ತಿನ್ನುತ್ತೇನೆ. ನಡುವೆ ಸ್ವಲ್ಪ ಉಪವಾಸಕ್ಕೂ ನನ್ನ ಆಹಾರದಲ್ಲಿ ಜಾಗವಿದೆ. ಇದು ಸ್ತನ ಕ್ಯಾನ್ಸರ್‌ನಿಂದ ಮುಕ್ತರಾದವರಿಗೆ ಮಧ್ಯಂತರದ ಉಪವಾಸ ಒಳ್ಳೆಯದು ಎಂದು ಅಧ್ಯಯನಗಳು ಹೇಳುತ್ತವೆʼ ಎಂದು ತಮ್ಮ ಆಹಾರದ ಬಗ್ಗೆ ಹೇಳುತ್ತಾರೆ ಮಿತ್ತಲ್.‌

ಇದನ್ನೂ ಓದಿ | ರಾತ್ರಿ ಬೆಳಗಾಗೋದರೊಳಗೆ ಬದುಕೇ ಬದಲಾಗಬಹುದು| ಸ್ತನ ಕ್ಯಾನ್ಸರ್‌ ಅನುಭವ ಬಿಚ್ಚಿಟ್ಟ ಛವಿ ಮಿತ್ತಲ್‌

ಕೀಮೊ ತೆಗೆದುಕೊಳ್ಳುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುವ ಅವರು, ಸರಿಯಾದ ಆಹಾರದಿಂದ ಈ ಚಿಕಿತ್ಸೆಯ ಕ್ರೂರ ಅಡ್ಡ ಪರಿಣಾಮಗಳಿಂದ ಸುಧಾರಿಸಿಕೊಳ್ಳಲು ಸಾಧ್ಯ. ಈ ಸಂದರ್ಭದಲ್ಲಿ ಆಹಾರವೇ ನಮ್ಮ ಸಂಜೀವಿನಿ. ಆ ದಿನಗಳಲ್ಲಿ ಆರೋಗ್ಯಪೂರ್ಣ ಕೊಬ್ಬಿನ ಆಹಾರ, ಪ್ರೊಟೀನ್‌ ಮತ್ತು ನಾರಿನಂಶ ಹೆಚ್ಚಿರುವ ಆಹಾರಗಳಿಗೆ ಆದ್ಯತೆ ನೀಡಬೇಕಿತ್ತು. ಕೆಲವೊಮ್ಮೆ ಬಾಯಲ್ಲೆಲ್ಲಾ ಹುಣ್ಣಾಗಿ, ಹೊಟ್ಟೆ ತೊಳೆಸಿ ವಾಂತಿಯಾಗುವ ಹಾಗಾಗುತ್ತಿತ್ತು. ಆಗೆಲ್ಲಾ ಕೋಕಮ್‌ ನನ್ನ ನೆರವಿಗೆ ಬರುತ್ತಿತ್ತು. ಆಸಿಡಿಟಿ ಶಮನ ಮಾಡುವ ಅದನ್ನು ಈಗಲೂ ಉಪಯೋಗಿಸುತ್ತೇನೆ ಎನ್ನುತ್ತಾರೆ ಅವರು.

ಪ್ರೊಟೀನ್‌ಗಾಗಿ ಸ್ವಾಭಾವಿಕ ಆಹಾರಮೂಲಗಳೇ ಉತ್ತಮ ಎನ್ನುವುದು ಛವಿ ಅಂಬೋಣ. ʻಖರ್ಜೂರ, ನಟ್‌ಗಳು, ಅಗಸೆ ಬೀಜ, ಎಳ್ಳು ಮುಂತಾದವುಗಳನ್ನು ಉಪಯೋಗಿಸುತ್ತೇನೆ. ಇದಲ್ಲದೆ, ಗ್ರೀಕ್‌ ಯೋಗರ್ಟ್‌, ಬೇಯಿಸಿದ ಮೊಟ್ಟೆ, ಪನೀರ್‌, ಬ್ರೊಕೊಲಿ, ಮೀನು ಸಹ ಬಳಸುತ್ತೇನೆ. ಇಡೀ ಧಾನ್ಯಗಳು ಮತ್ತು ನಾನಾ ರೀತಿಯ ದ್ವಿದಳ ಧಾನ್ಯಗಳನ್ನು ಮೊಳಕೆ ಬರಿಸಿ, ಬೇಯಿಸಿ ತಿನ್ನುತ್ತೇನೆ. ನಮ್ಮ ರೋಗ ನಿರೋಧಕತೆಯನ್ನು ಹೆಚ್ಚಿಸಲೂ ಇವು ಸಹಕಾರಿʼ ಎಂಬುದು ಆಕೆಯ ವಿವರಣೆ. ಹಸುವಿನ ಹಾಲಿನ ಬಳಕೆಯನ್ನು ಆಕೆ ವರ್ಜಿಸಿದ್ದಾರಂತೆ. ಹಾಲಿಗಾಗಿ ನಾನಾ ರೀತಿಯ ಔಷಧಿ, ರಾಸಾಯನಿಕಗಳನ್ನು ಹಸುಗಳ ಮೇಲೆ ಪ್ರಯೋಗಿಸುವುದರಿಂದ, ಅವು ಉಪಯೋಗಿಸುವವರ ದೇಹವನ್ನೂ ಸೇರುತ್ತವೆ ಎಂಬ ಕಾರಣಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಇದಲ್ಲದೆ, ಅವು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದೂ ಕಾರಣವಂತೆ. ಇನ್ನೊಂದು ಮುಖ್ಯವಾದ ಅಂಶವೆಂದರೆ, ಹಸಿವಾಗದೆ ಅವರೆಂದೂ ತಿನ್ನುವುದಿಲ್ಲ. ಅತಿಯಾಗಿ ತಿನ್ನುವುದೂ ಆರೋಗ್ಯಕ್ಕೆ ಹಾನಿಕರ ಎಂಬ ಅಂಶವನ್ನವರು ಮನಗಂಡಿದ್ದಾರೆ.

ಇದನ್ನೂ ಓದಿ | ಛವಿ ಮಿತ್ತಲ್ ಗೆ ಬ್ರೆಸ್ಟ್‌ ಕ್ಯಾನ್ಸರ್‌: ಪಾಸಿಟಿವ್‌ ಪೋಸ್ಟ್‌ ಹಂಚಿಕೊಂಡ ನಟಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Brain Tumour In Kids: ಮಕ್ಕಳ ಜೀವ ಹಿಂಡುವ ಮೆದುಳಿನ ಟ್ಯೂಮರ್‌ನ ಲಕ್ಷಣಗಳಿವು

ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಮೆದುಳಿನ ಗಡ್ಡೆಯ ಪ್ರಕರಣಗಳು ವಿಶ್ವದೆಲ್ಲೆಡೆ ಹೆಚ್ಚುತ್ತಿದ್ದು, ಆತಂಕ ಮೂಡಿಸುತ್ತಿದೆ. ಮೆದುಳಿನ ಸುತ್ತಲಿನ ಕೋಶಗಳ ಅಸಹಜ ಬೆಳವಣಿಗೆಯನ್ನು ಟ್ಯೂಮರ್‌ ಎಂದು ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟ್ಯೂಮರ್‌ ಇರುವಾಗಿನ ಕೆಲವು ಲಕ್ಷಣಗಳನ್ನು ಗುರುತಿಸಿ ಜಾಗ್ರತೆ ಮಾಡುವುದರ ಕುರಿತಾಗಿ ಒಂದಿಷ್ಟು ವಿವರಗಳು (Brain Tumour In Kids) ಇಲ್ಲಿವೆ.

VISTARANEWS.COM


on

Brain Tumour In Kids
Koo

ಮೆದುಳಿನ ಸುತ್ತಲಿನ ಕೋಶಗಳ ಅಸಹಜ ಬೆಳವಣಿಗೆಯನ್ನು ಟ್ಯೂಮರ್‌ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯನ್ನು ಎದುರಿಸುವವರು ಬಹಳಷ್ಟು ಆರೋಗ್ಯದ ಸಮಸ್ಯೆಗಳಿಗೂ ತುತ್ತಾಗುವಂತಾಗುತ್ತದೆ. ಹಲವಾರು ಪ್ರಕರಣಗಳಲ್ಲಿ ಶರೀರದ ಅಂಗಾಂಗಗಳ ಕ್ಷಮತೆಯೂ ಕುಸಿಯುವಂತಾಗುತ್ತದೆ. ಮಕ್ಕಳಲ್ಲಿ ಇಂಥ ಪ್ರಕರಣಗಳು ಎದುರಾದಾಗ, ವಯಸ್ಕರಲ್ಲಿ ಕಾಣುವ ಲಕ್ಷಣಗಳು ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೀತಿ ಭಿನ್ನವಾಗಿಯೇ ಇರುತ್ತದೆ. ಮೆದುಳಿನ ಯಾವ ಭಾಗದಲ್ಲಿ ಟ್ಯೂಮರ್‌ ಕಾಣಿಸಿಕೊಂಡಿದೆ, ಗಡ್ಡೆ ಎಷ್ಟು ದೊಡ್ಡದಿದೆ ಮುಂತಾದವುಗಳ ಮೇಲೆ ಗೋಚರಿಸುವ ಲಕ್ಷಣಗಳು ವ್ಯತ್ಯಾಸವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಮೆದುಳಿನ ಗಡ್ಡೆಯ ಪ್ರಕರಣಗಳು ವಿಶ್ವದೆಲ್ಲೆಡೆ ಹೆಚ್ಚುತ್ತಿದ್ದು, ಆತಂಕ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಟ್ಯೂಮರ್‌ ಇರುವಾಗಿನ ಕೆಲವು ಲಕ್ಷಣಗಳನ್ನು ಗುರುತಿಸಿ ಜಾಗ್ರತೆ ಮಾಡುವುದಕ್ಕೆ ಬೇಕಾಗಿ, ಒಂದಿಷ್ಟು (Brain Tumour In Kids) ವಿವರಗಳು ಇಲ್ಲಿವೆ.

child headache

ತಲೆನೋವು

ಇದರರ್ಥ ತಲೆ ನೋವು ಬಂದಾಗಲೆಲ್ಲ ಮೆದುಳಿನಲ್ಲಿ ಗಡ್ಡೆಯಿದೆ ಎಂದಲ್ಲ. ತಲೆನೋವು ತರಹೇವಾರಿ ಕಾರಣಗಳಿಗೆ ಬರಬಹುದು. ಆದರೆ ಟ್ಯೂಮರ್‌ ಇರುವಂಥ ಸಂದರ್ಭದಲ್ಲಿ ತಲೆನೋವಿಗೊಂದು ಪ್ರತ್ಯೇಕ ಸ್ವರೂಪವಿರುತ್ತದೆ. ಮೈಗ್ರೇನ್‌, ಆಸಿಡಿಟಿ ಮುಂತಾದ ಸಂದರ್ಭಗಳಲ್ಲಿ ಬರುವ ತಲೆನೋವಿಗಿಂತ ಇದು ಬೇರೆಯಾಗಿರುತ್ತದೆ. ಅಂದರೆ, ಬೆಳಗ್ಗೆ ಏಳುತ್ತಿದ್ದಂತೆ ತಲೆನೋವು ಪ್ರಾರಂಭವಾಗುವುದು, ರಾತ್ರಿ ಮಲಗಿದಾಗ ತಲೆನೋವು ಹೆಚ್ಚುವುದು- ಇಂಥ ಲಕ್ಷಣಗಳು ಗೋಚರಿಸಿದರೆ, ವೈದ್ಯರಲ್ಲಿ ಹೋಗಲೇಬೇಕು.

Close-up human eye, lens, cornea and brown iris.

ದೃಷ್ಟಿ ಮಂದವಾಗುವುದು

ಹಲವು ರೀತಿಯ ಟ್ಯೂಮರ್‌ಗಳು ದೃಷ್ಟಿಯನ್ನು ಮಂದವಾಗಿಸುತ್ತವೆ. ಗೆಜೆಟ್‌ಗಳ ಭರಾಟೆಯಲ್ಲಿ ಮಕ್ಕಳ ದೃಷ್ಟಿ ಕ್ಷೀಣಿಸುವುದು ಅಸಹಜ ಅಲ್ಲ ಎನ್ನುವುದು ಹೌದಾದರೂ, ನೇತ್ರ ತಜ್ಞರಲ್ಲಿ ಸಮಾಲೋಚನೆ ಅಗತ್ಯವಿದೆ. ಬೆಳಕಿಗೆ ಕಣ್ಣು ಬಿಡಲಾಗದಿರುವುದು, ಯಾವುದನ್ನೂ ಕೇಂದ್ರೀಕರಿಸಲು ದೃಷ್ಟಿ ಸಹಕರಿಸದಿರುವುದು- ಇವೆಲ್ಲ ಟ್ಯೂಮರ್‌ನಿಂದಾಗಿ ದೃಷ್ಟಿ ನರದ ಮೇಲೆ ಬೀಳುತ್ತಿರುವ ಒತ್ತಡದ ಲಕ್ಷಣಗಳಾಗಿರಬಹುದು.

ವಾಂತಿ, ಹೊಟ್ಟೆ ತೊಳೆಸುವುದು

ಫ್ಲೂ ಮಾದರಿಯ ಲಕ್ಷಣಗಳ ಜೊತೆಗೆ ಅತೀವ ತಲೆನೋವಿದೆ ಎಂದರೆ- ಎಚ್ಚರ ಅಗತ್ಯ. ಸಿಕ್ಕಾಪಟ್ಟೆ ಹೊಟ್ಟೆ ತೊಳೆಸುವುದು, ವಾಂತಿ ಕಂಡುಬರಬಹುದು. ಮೆದುಳಿನ ಒಂದು ನಿಗದಿತ ಜಾಗದಲ್ಲಿ ಟ್ಯೂಮರ್‌ ಬೆಳೆದು ದೊಡ್ಡದಾಗುತ್ತಿದ್ದರೆ ಇಂಥ ಲಕ್ಷಣಗಳು ಕಾಣುವುದು ಸಾಮಾನ್ಯ.

Little Boy Suffering from Ear Pain on Color Green Background

ಕಿವಿ ಕೇಳದಿರುವುದು

ಅತಿಯಾಗಿ ಇಯರ್‌ಫೋನ್‌ ಬಳಕೆಯ ಪ್ರಭಾವ ಎಂದು ಭಾವಿಸಿ, ಕಿವಿ ಕೇಳದ ಸಮಸ್ಯೆಯನ್ನು ನಿರ್ಲಕ್ಷಿಸುವ ಸಾಧ್ಯತೆ ಇಲ್ಲದಿಲ್ಲ. ಆದರೆ ಶ್ರವಣ ನರಗಳ ಮೇಲಿನ ಅತೀವ ಒತ್ತಡದಿಂದ ತೀವ್ರ ಕಿವಿನೋವು, ಕಿವಿ ಕೇಳುವುದು ಕಡಿಮೆಯಾದಂತೆ ಅನಿಸುವುದು ಸಾಮಾನ್ಯ. ಒಳಗಿವಿಯಿಂದ ಮೆದುಳಿಗೆ ಸಂದೇಶ ರವಾನಿಸುವ ಈ ನರಗಳು ಶ್ರವಣ ಸಾಮರ್ಥ್ಯ ಸರಿಯಾಗಿರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂಥ ಸಂದರ್ಭದಲ್ಲೂ ಮೆದುಳಿನ ಟ್ಯೂಮರ್‌ ಇಲ್ಲ ಎಂಬುದನ್ನು ವೈದ್ಯರಿಂದ ಖಾತ್ರಿ ಪಡಿಸಿಕೊಳ್ಳಬೇಕು.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

ಅಪಸ್ಮಾರ

ಇದು ಸಹ ಅತ್ಯಂತ ಸಾಮಾನ್ಯವಾದ ಲಕ್ಷಣ. ಮೆದುಳಿನ ಟ್ಯೂಮರ್‌ ಇರುವವರಲ್ಲಿ ಶೇ. 40ರಷ್ಟು ಜನರಿಗೆ ಒಮ್ಮೆಯಾದರೂ ಅಪಸ್ಮಾರ ಕಾಣುವುದು ಸಹಜ ಎನ್ನುತ್ತಾರೆ ನರರೋಗ ತಜ್ಞರು. ಕೆಲವೊಮ್ಮೆ ಇದನ್ನು ಟ್ಯೂಮರ್‌ನ ಪ್ರಾಥಮಿಕ ಲಕ್ಷಣವೆಂದು ಗ್ರಹಿಸಲಾಗುತ್ತದೆ. ಹಾಗಾಗಿ ಈ ಬಗ್ಗೆ ನರರೋಗ ತಜ್ಞರಲ್ಲಿ ಸಮಾಲೋಚನೆ ಅಗತ್ಯ.
ಇಂಥ ಯಾವುದೇ ಸೂಚನೆಗಳು ಕಂಡುಬಂದಲ್ಲಿ ವೈದ್ಯರಲ್ಲಿ ತುರ್ತು ಸಮಾಲೋಚನೆ ಅಗತ್ಯ. ಇದಕ್ಕೆ ಹಲವಾರು ಸುತ್ತಿನ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಸ್ಕ್ಯಾನಿಂಗ್‌ನಿಂದ ಹಿಡಿದು ಬಯಾಪ್ಸಿಯವರೆಗೂ ಪರೀಕ್ಷೆಗಳ ಅಗತ್ಯ ಬರಬಹುದು. ಆದರೆ ಆರಂಭಿಕ ಹಂತದಲ್ಲಿ ಈ ರೋಗ ಪತ್ತೆಯಾದರೆ ಶರೀರಕ್ಕೆ ಹೆಚ್ಚಿನ ಹಾನಿಯಾಗದಂತೆ ಚಿಕಿತ್ಸೆ ನೀಡುವ ಸಾಧ್ಯತೆ ಹೆಚ್ಚುತ್ತದೆ.

Continue Reading

ಆರೋಗ್ಯ

Health Benefits Of Okra: ಬೆಂಡೆಕಾಯಿ ತಿನ್ನುತ್ತೀರಿ ನಿಜ; ಅದರಿಂದಾಗುವ ಪ್ರಯೋಜನಗಳೇನು ಗೊತ್ತಿದೆಯಾ?

ಉತ್ಕರ್ಷಣ ನಿರೋಧಕಗಳು, ನಾರು, ಪಿಷ್ಟ, ಖನಿಜಗಳು, ವಿಟಮಿನ್‌ಗಳು ಬೆಂಡೆಕಾಯಿಯಲ್ಲಿವೆ. ಟೈಪ್‌ 2 ಮಧುಮೇಹದಿಂದ ಹಿಡಿದು, ಜೀರ್ಣಾಂಗಗಳ ತೊಂದರೆಯನ್ನು ಸುಧಾರಿಸುವವರೆಗೆ, ಹೃದಯ ರೋಗಗಳಿಂದ ಹಿಡಿದು ಕೆಲವು ಕ್ಯಾನ್ಸರ್‌ಗಳನ್ನು ದೂರ ಮಾಡುವವರೆಗೆ ಬೆಂಡೆಕಾಯಿ ಆರೋಗ್ಯಕ್ಕೆ (Health Benefits Of Okra) ಬಹೂಪಯೋಗಿ ಎನಿಸಿದೆ.

VISTARANEWS.COM


on

Health Benefits Of Okra
Koo

ಬೆಂಡೆಕಾಯಿಯನ್ನು ಇಷ್ಟಪಟ್ಟು ತಿನ್ನುವವರು ಎಷ್ಟು ಮಂದಿ ಇದ್ದಾರೋ, ಕಷ್ಟಪಟ್ಟು ತಿನ್ನುವವರೂ ಅಷ್ಟೇ ಮಂದಿ ಇದ್ದಾರೆ. ಇದನ್ನು ಬಳಸಿ ರುಚಿಕಟ್ಟಾಗಿ ಅಡುಗೆ ಮಾಡುವವರು ಇರುವಂತೆಯೇ, ಲೋಳೆಯ ಮುದ್ದೆ ಮಾಡಿಕೊಂಡು ಒದ್ದಾಡುವವರೂ ಇದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಾವಿಂದು ಹೇಳುವುದಕ್ಕೆ ಹೊರಟಿದ್ದು ಬೆಂಡೆಕಾಯಿಯೆಂಬ ಲೋಳೆ ಕೊಳವೆಯ ಆರೋಗ್ಯಕಾರಿ ಗುಣಗಳ ಬಗ್ಗೆ. ಇದರ ಪ್ರಯೋಜನಗಳನ್ನು ತಿಳಿದಾಗ, ಇಂಥದ್ದೊಂದು ತರಕಾರಿ ನಮ್ಮ ಪಾಲಿಗೆ ಇದೆಯಲ್ಲ ತಿನ್ನುವುದಕ್ಕೆ ಎಂದು ಸಂತೋಷವಾಗದಿದ್ದರೆ, ಮತ್ತೆ ಕೇಳಿ! ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಹೇರಳವಾದ ನಾರು, ಪಿಷ್ಟ, ಖನಿಜಗಳು ಮತ್ತು ವಿಟಮಿನ್‌ಗಳು ಬೆಂಡೆಕಾಯಿಯಲ್ಲಿವೆ. ಹಾಗಾಗಿಯೇ ಟೈಪ್‌ 2 ಮಧುಮೇಹದಿಂದ ಹಿಡಿದು, ಜೀರ್ಣಾಂಗಗಳ ತೊಂದರೆಯನ್ನು ಸುಧಾರಿಸುವವರೆಗೆ, ಹೃದಯ ರೋಗಗಳಿಂದ ಹಿಡಿದು ಕೆಲವು ಕ್ಯಾನ್ಸರ್‌ಗಳನ್ನು ದೂರ ಮಾಡುವವರೆಗೆ ಬೆಂಡೆಕಾಯಿ ಆರೋಗ್ಯಕ್ಕೆ ಬಹೂಪಯೋಗಿ ಎನಿಸಿದೆ. ಹಾಗಾದರೆ ಏನೆಲ್ಲ ಲಾಭಗಳಿವೆ (Health Benefits Of Okra) ಬೆಂಡೆಕಾಯಿ ತಿನ್ನುವುದರಲ್ಲಿ?

Health Tips in Kannada lady finger okra benefits

ನಾರು ಹೇರಳ

ಬೆಂಡೆಕಾಯಿಯಲ್ಲಿರುವ ಕರಗಬಲ್ಲ ನಾರುಗಳು ಎಲ್‌ಡಿಎಲ್‌ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ ಅಂಶವನ್ನು ಕರಗಿಸುವಲ್ಲಿ ನೆರವಾಗುತ್ತವೆ. ಹಾಗಾಗಿ ಕೊಲೆಸ್ಟ್ರಾಲ್‌ ತೊಂದರೆಯಿಂದ ಬಳಲುತ್ತಿರುವವರು ಬೆಂಡೆಕಾಯಿಯ ಸೇವನೆಯನ್ನು ಹೆಚ್ಚಿಸಬಹುದು. ಇದರಲ್ಲಿರುವ ಕರಗದಂಥ ನಾರುಗಳು ಜೀರ್ಣಾಂಗದ ಆರೋಗ್ಯ ಏರುಪೇರಾಗದಂತೆ ನೋಡಿಕೊಳ್ಳುತ್ತವೆ. ಮಲಬದ್ಧತೆಯಿಂದ ಮುಕ್ತಿ ನೀಡುತ್ತವೆ.

ಸಕ್ಕರೆಯಂಶ ಸ್ಥಿರ

ಇದರಲ್ಲಿರುವ ನಾರಿನಂಶದಿಂದಾಗಿ ರಕ್ತದಲ್ಲಿರುವ ಸಕ್ಕರೆಯಂಶವನ್ನು ಸ್ಥಿರವಾಗಿ ಇರಿಸಲು ಅನುಕೂಲ. ಪರಂಪರಾಗತವಾಗಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿರಿಸಲು ಇದನ್ನು ಬಳಸಲಾಗುತ್ತದೆ. ಆಹಾರ ಗ್ಲೂಕೋಸ್‌ ಆಗಿ ಪರಿವರ್ತನೆಯಾಗುವುದನ್ನು ನಿಧಾನವಾಗಿಸಿ, ಸಕ್ಕರೆಯಂಶ ಏರಿಳಿತ ಆಗದಂತೆ ತಡೆಯುವ ಸಾಧ್ಯತೆ ಇದಕ್ಕಿದೆ.

Close-up human eye, lens, cornea and brown iris.

ಕಣ್ಣಿಗೆ ಕ್ಷೇಮ

ಇದಲ್ಲಿರುವ ವಿಟಮಿನ್‌ ಎ ಅಂಶವು ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಒಳ್ಳೆಯ ನೆರವು ನೀಡುತ್ತದೆ. ಕಾರ್ನಿಯ ರಕ್ಷಣೆಗೆ ಬೇಕಾದ ಅಂಶಗಳು ಬೆಂಡೆಕಾಯಿಯಲ್ಲಿವೆ. ಇದಲ್ಲದೆ, ಕಣ್ಣಿನ ಸೋಂಕುಗಳನ್ನು ದೂರ ಮಾಡುವಂಥ ಸಾಧ್ಯತೆಯೂ ಈ ತರಕಾರಿಗಿದೆ.

Young brown haired woman is touching softly owne hair Hair care Egg Benefits For Hair

ಕೇಶ, ಚರ್ಮ ಕಾಂತಿಯುತ

ಚರ್ಮದ ಕಾಂತಿ ಹೆಚ್ಚಳಕ್ಕೂ ಇದು ಕೊಡುಗೆಯನ್ನು ನೀಡುತ್ತದೆ. ಕೂದಲಿನ ಬೆಳವಣಿಗೆಗೆ ಬೇಕಾದಂಥ ಖನಿಜಗಳು ಮತ್ತು ವಿಟಮಿನ್‌ಗಳು ಇದರಲ್ಲಿ ವಿಫುಲವಾಗಿವೆ. ಜೊತೆಗೆ, ವಿಟಮಿನ್‌ ಸಿ ಅಧಿಕವಾಗಿದ್ದು, ಕೊಲಾಜಿನ್‌ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಇದರಿಂದ ಚರ್ಮದ ಸುಕ್ಕು ನಿವಾರಣೆಯಾಗಿ, ವಯಸ್ಸಾದಂತೆ ಕಾಣುವುದನ್ನು ಮುಂದೂಡಬಹುದು.

Antioxidants in it keep immunity strong Benefits Of Mandakki

ಪ್ರತಿರೋಧಕತೆ ಹೆಚ್ಚಳ

ಬೆಂಡೆಕಾಯಿಯಲ್ಲಿ ವಿಟಮಿನ್‌ ಸಿ ವಿಫುಲವಾಗಿದೆ. ಇದು ಬಿಳಿರಕ್ತಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಈ ಬಿಳಿ ರಕ್ತ ಕಣಗಳು ವಿಫುಲವಾಗಿ ಇದ್ದಷ್ಟೂ ಸೋಂಕುಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಅನುಕೂಲವಾಗುತ್ತದೆ. ಜೊತೆಗೆ, ಬೆಂಡೆಕಾಯಿಯನ್ನು ಪ್ರಿಬಯಾಟಿಕ್‌ ಎಂದೇ ಪರಿಗಣಿಸಲಾಗಿದೆ. ಅಂದರೆ, ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಸಹಾಯವಾಗುತ್ತದೆ ಎನ್ನುತ್ತವೆ ಅಧ್ಯಯನಗಳು.

ಫೋಲೇಟ್‌

ಕೆಂಪು ರಕ್ತ ಕಣಗಳ ಹೆಚ್ಚಳಕ್ಕೆ ಅಗತ್ಯವಾದ ಅಂಶವೆಂದು ಫೋಲೇಟನ್ನು ಪರಿಗಣಿಸಲಾಗಿದೆ. ಇದರಿಂದ ರಕ್ತಹೀನತೆಯನ್ನು ನಿವಾರಿಸಬಹುದು. ಇದಲ್ಲದೆ, ಹೊಟ್ಟೆಯಲ್ಲಿರುವ ಭ್ರೂಣದ ಬೆಳವಣಿಗೆಗೆ ಫೋಲೇಟ್‌ ಅತಿ ಮುಖ್ಯ. ಈ ಅಂಶ ಬೆಂಡೆಕಾಯಿಯಲ್ಲಿ ದೊರೆಯುತ್ತದೆ.

Bone Health In Winter

ಮೂಳೆ ಗಟ್ಟಿ

ಇದರಲ್ಲಿ ವಿಟಮಿನ್‌ ಕೆ ಮತ್ತು ಕ್ಯಾಲ್ಶಿಯಂ ಅಂಶವಿದೆ. ಇದರಿಂದ ಮೂಳೆಗಳ ಬಲವರ್ಧನೆಗೆ ಅನುಕೂಲ ದೊರೆಯುತ್ತದೆ. ಜೊತೆಗೆ ಪೊಟಾಶಿಯಂ, ಮೆಗ್ನೀಶಿಯಂನಂಥ ಖನಿಜಗಳೂ ಇರುವುದರಿಂದ ಮೂಳೆಗಳು ಟೊಳ್ಳಾಗದಂತೆ, ಸಾಂದ್ರತೆ ಕಡಿಮೆಯಾಗದಂತೆ ಕಾಪಾಡುವುದು ಸುಲಭವಾಗುತ್ತದೆ.

ಇದನ್ನೂ ಓದಿ: Health Tips Kannada: ಸನ್‌ಸ್ಕ್ರೀನ್‌ ಕುರಿತು ನಿಮಗೆಷ್ಟು ಗೊತ್ತು?

ಕರುಳಿನ ಸೋಂಕು ನಿವಾರಣೆ

ಎಳೆಯ ಬೆಂಡೆಕಾಯಿಗಳಲ್ಲಿರುವ ಪಾಲಿಸ್ಯಾಕರೈಡ್‌ಗಳು ಜೀರ್ಣಾಂಗಗಳಲ್ಲಿರುವ ಸೋಂಕುಗಳ ನಿವಾರಣೆಗೆ ಉಪಯುಕ್ತ. ಕರುಳಿನ ಗೋಡೆಗೆ ಅಂಟಿಕೊಳ್ಳುವಂಥ ಹಾನಿಕಾರಕ ಬ್ಯಾಕ್ಟೀರಿಯಗಳ ಅಂಟಿನಂಶವನ್ನು ಲುಪ್ತಗೊಳಿಸುವ ಸಾಮರ್ಥ್ಯ ಇವುಗಳಿಗಿವೆ.

Continue Reading

ಆರೋಗ್ಯ

Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

ಈಗ ಎಲ್ಲೆಲ್ಲೂ ರಸ್ತೆ ಬದಿಗಳಲ್ಲೆಲ್ಲ ಹಲಸು ಮಾವಿನದೇ ಕಾರುಬಾರು. ಮಾವಿನ ಹಣ್ಣಿನಷ್ಟು ಹಲಸಿನಹಣ್ಣಿಗೆ ಮರ್ಯಾದೆ ಸಿಗದಿದ್ದರೂ ಹಲಸಿನ ಹಣ್ಣಿಗೂ ಅದರದ್ದೇ ಆದ ಸ್ಥಾನವಿದೆ. ಹೊಟ್ಟೆ ತುಂಬಿಸಬಲ್ಲ, ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ, ಸಿಹಿಯಾಗಿ ರುಚಿಯಾಗಿರುವ ಹಲಸಿನ ಹಣ್ಣನ್ನು ತಂದು ತಿಂದು ಅದರ ಬೀಜವನ್ನು ಎಸೆಯುತ್ತೀರಾದರೆ, ಸ್ವಲ್ಪ ತಡೆಯಿರಿ. ಹಲಸಿನ ಹಣ್ಣಿನಲ್ಲಿರುವಂತೆಯೇ ಬೀಜದಲ್ಲೂ (Jackfruit seed) ಸಾಕಷ್ಟು ಪೋಷಕಾಂಶಗಳಿವೆ.

VISTARANEWS.COM


on

Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!
Koo

ಬೇಸಿಗೆ ಬಂದ ತಕ್ಷಣ ಸಂತಸ ತರುವ ವಿಚಾರಗಳ ಪೈಕಿ ಹಲಸು, ಮಾವುಗಳಿಗೂ ಕ್ರೆಡಿಟ್‌ ಸಲ್ಲಬೇಕು. ಯಾಕೆಂದರೆ, ಹಲಸಿನ ಹಣ್ಣಿಗೂ ಮಾವಿನ ಹಣ್ಣಿಗೂ ಕಾಯಬೇಕೆಂದರೆ ನಾವು ಬೇಸಿಗೆಗೆ ಕಾಯಲೇಬೇಕು. ಈಗ ಎಲ್ಲೆಲ್ಲೂ ರಸ್ತೆ ಬದಿಗಳಲ್ಲೆಲ್ಲ ಹಲಸು ಮಾವಿನದೇ ಕಾರುಬಾರು. ಮಾವಿನ ಹಣ್ಣಿನಷ್ಟು ಹಲಸಿನಹಣ್ಣಿಗೆ ಮರ್ಯಾದೆ ಸಿಗದಿದ್ದರೂ ಹಲಸಿನ ಹಣ್ಣಿಗೂ ಅದರದ್ದೇ ಆದ ಸ್ಥಾನವಿದೆ. ಹೊಟ್ಟೆ ತುಂಬಿಸಬಲ್ಲ, ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ, ಸಿಹಿಯಾಗಿ ರುಚಿಯಾಗಿರುವ ಹಲಸಿನ ಹಣ್ಣನ್ನು ತಂದು ತಿಂದು ಅದರ ಬೀಜವನ್ನು ಎಸೆಯುತ್ತೀರಾದರೆ, ಸ್ವಲ್ಪ ತಡೆಯಿರಿ. ಹಲಸಿನ ಹಣ್ಣಿನಲ್ಲಿರುವಂತೆಯೇ ಬೀಜದಲ್ಲೂ ಸಾಕಷ್ಟು ಪೋಷಕಾಂಶಗಳಿವೆ. ಆರೋಗ್ಯದ ಲಾಭಗಳಿವೆ. ಹಲಸಿನ ಹಣ್ಣು ವಿಟಮಿನ್‌ ಬಿ ಹಾಗೂ ಪೊಟಾಶಿಯಂನಿಂದ ಸಮೃದ್ಧವಾಗಿದ್ದರೆ, ಅದರ ಬೀಜಗಳಲ್ಲಿ ಥೈಮೀನ್‌, ರೈಬೋಫ್ಲೇವಿನ್‌ ಕಣ್ಣು, ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಬಹಳ ಉತ್ತಮ. ಬೀಜಗಳಲ್ಲಿ ಝಿಂಕ್‌, ಕಬ್ಬಿಣಾಂಶ, ಕ್ಯಾಲ್ಶಿಯಂ, ತಾಮ್ರ, ಪೊಟಾಶಿಯಂ ಹಾಗೂ ಮೆಗ್ನೀಶಿಯಂ ಮತ್ತಿತರ ಖನಿಜ ಲವಣಗಳಿಂದ ಸಮೃದ್ಧವಾಗಿದೆ. ಇವು ಬ್ಯಾಕ್ಟೀರಿಯಾಗಳಿಂದಾಗುವ ಸಮಸ್ಯೆಗಳಿಗೆ ಉತ್ತಮ ಆಹಾರವಾಗಿದ್ದು, ಇವುಗಳಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವ ತಾಕತ್ತನ್ನು ಹೊಂದಿದೆ. ಬನ್ನಿ, ಹಲಸಿನ ಹಣ್ಣಿನ ಬೀಜದಿಂದ ಯಾವೆಲ್ಲ ಆರೋಗ್ಯದ ಲಾಭಗಳಿವೆ (Jackfruit seed) ಎಂಬುದನ್ನು ನೋಡೋಣ.

Skin Care

ಚರ್ಮದ ಸುಕ್ಕಿಗೆ

ಚರ್ಮದಲ್ಲಿ ಸುಕ್ಕಿನ ಸಮಸ್ಯೆಯೇ. ಸಣ್ಣ ವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ ಈ ಸಮಸ್ಯೆ ನಿಮಗಿದೆ ಎಂದಾದಲ್ಲಿ ಈ ಬೀಜಕ್ಕೆ ಸ್ವಲ್ಪ ಹಾಲು ಸೇರಿಸಿ ನುಣುಪಾಗಿ ಅರೆದು ಅದರ ಪೇಸ್ಟನ್ನು ಮುಖದ ಚರ್ಮದ ಮೇಲೆ ಹಚ್ಚುವುದರಿಂದ ಚರ್ಮ ನುಣುಪಾಗುತ್ತದೆ. ಚರ್ಮಕ್ಕೆ ಹೊಸ ಕಾಂತಿ ಬರುತ್ತದೆ. ನಿರಿಗೆಗಳು ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಮಾಡುವುದರಿಂದ ಒಳ್ಲೆಯ ಫಲಿತಾಂಶ ಕಾಣಬಹುದು.

Stress Reduction Tea Benefits

ಮಾನಸಿಕ ಒತ್ತಡಕ್ಕೆ

ಹಲಸಿನ ಹಣ್ಣಿನ ಬೀಜದಲ್ಲಿ ಸಾಕಷ್ಟು ಪ್ರೊಟೀನ್‌ ಹಾಗೂ ಮೈಕ್ರೋ ನ್ಯೂಟ್ರಿಯೆಂಟ್‌ಗಳು ಇರುವುದರಿಂದ ಇವು ಮಾನಸಿಕ ಒತ್ತಡ ಹಾಗೂ ಸಾಕಷ್ಟು ಚರ್ಮದ ಸಮಸ್ಯೆಗಳನ್ನು ವಾಸಿ ಮಾಡುವಲ್ಲಿ ನೆರವಾಗುತ್ತದೆ. ಹಲಸಿನ ಬೀಜಗಳನ್ನು ಬೇಯಿಸಿ ಅಥವಾ ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದ ಈ ಉಪಯೋಗ ಪಡೆಯಬಹುದು.

Woman anemia image Coriander Benefits

ಅನೀಮಿಯಾಕ್ಕೆ

ಹಲಸಿನ ಹಣ್ಣಿನ ಬೀಜವನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಕಬ್ಬಿಣಾಂಶ ದೊರೆತು, ಅನೀಮಿಯಾದಂತಹ ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ. ದೇಹದಲ್ಲಿ ರಕ್ತ ತುಂಬಿಕೊಳ್ಳುತ್ತದೆ. ಕಬ್ಬಿನಾಂಶವು ಹಿಮೋಗ್ಲೋಬಿನ್‌ ಹೆಚ್ಚಳಕ್ಕೆ ಬೇಕಾದ ಪ್ರಮುಖ ಪೋಷಕಾಂಶವಾಗಿರುವುದರಿಂದ ದೇಹಕ್ಕೆ ಶಕ್ತಿ ಸಾಮರ್ಥ್ಯವನ್ನು ನೀಡುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ.

Close-up human eye, lens, cornea and brown iris.

ಕಣ್ಣಿನ ಆರೋಗ್ಯಕ್ಕೆ ಹಾಗೂ ಕೂದಲ ಪೋಷಣೆಗೆ

ಹಲಸಿನ ಬೀಜದಲ್ಲಿ ವಿಟಮಿನ್‌ ಎ ಸಮೃದ್ಧವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ಅತ್ಯುತ್ತಮ ಆಹಾರ. ಅಷ್ಟೇ ಅಲ್ಲ, ಕೂದಲಿಗೂ ಇದು ಅತ್ಯುತ್ತಮ ಪೋಷಣೆ ನೀಡುತ್ತದೆ.

healthy internal organs of human digestive system

ಜೀರ್ಣಕ್ರಿಯೆ ಸಮಸ್ಯೆಗೆ

ತಿಂದದನ್ನು ಸರಿಯಾಗಿ ಜೀರ್ಣವಾಗದೆ ಸಮಸ್ಯೆಯಾಗುತ್ತಿದೆ ಎಂದಾದಲ್ಲಿ ಹಲಸಿನ ಹಣ್ಣಿನ ಬೀಜದ ಪುಡಿಯನ್ನು ಸೇವಿಸಿದರೆ ತಕ್ಷಣವೇ ಪರಿಹಾರ ಸಿಗುತ್ತದೆ. ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಇಂಥ ಸಂದರ್ಭಗಳಲ್ಲಿ ಬಳಸಬಹುದು. ಅಥವಾ ಮಲಬದ್ಧತೆಯ ಸಮಸ್ಯೆಯಿದ್ದರೆ, ಹಲಸಿನ ಬೀಜವನ್ನು ಬೇಯಿಸಿ ತಿನ್ನುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಮಾಂಸಖಂಡಗಳ ಬಲವರ್ಧನೆಗೆ

ಹಲಸಿನ ಹಣ್ಣಿನ ಬೀಜದಲ್ಲಿ ಅಧಿಕ ಗುಣಮಟ್ಟದ ಪ್ರೊಟೀನ್‌ ಇರುವುದರಿಂದ ಇದು ಮಾಂಸಖಂಡಗಳ ಬಲವರ್ಧನೆಗೆ ಅತ್ಯಂತ ಒಳ್ಳೆಯದು. ಇದರಲ್ಲಿರುವ ಪ್ರೊಟೀನ್‌ ಕೊಲೆಸ್ಟೆರಾಲ್‌ ರಹಿತವಾಗಿರುವುದರಿಂದ ಜಿಮ್‌ಗೆ ಹೋಗಿ ದೇಹದಾರ್ಢ್ಯತೆ ಬೆಳೆಸುವ ಮಂದಿಗೂ, ಫಿಟ್‌ನೆಸ್‌ ಪ್ರಿಯರಿಗೂ ಇದು ಒಳ್ಳೆಯ ಆಹಾರ.

Continue Reading

Latest

Diabetes Management Tips: ಈ ಏಳು ಪಾನೀಯಗಳನ್ನು ಸೇವಿಸಿ, ಮಧುಮೇಹ ನಿಯಂತ್ರಿಸಿ

ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಆಯುರ್ವೇದ ಸೂಚಿಸುವ ಏಳು ಗಿಡಮೂಲಿಕೆ ಪಾನೀಯಗಳು ಇವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹವನ್ನು (Diabetes Management Tips) ನಿಯಂತ್ರಿಸಬಹುದು.

VISTARANEWS.COM


on

By

Diabetes Management Tips
Koo

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಕಾಡುವ ಕಾಯಿಲೆ ರಕ್ತದೊತ್ತಡ (blood pressure) ಮತ್ತು ಮಧುಮೇಹ (diabetes). ರಕ್ತದೊತ್ತಡವಾದರೆ ಬಹುಬೇಗನೆ ತನ್ನ ಇರುವಿಕೆಯನ್ನು ಸೂಚಿಸುತ್ತದೆ. ಆದರೆ ಮಧುಮೇಹ ಹೆಚ್ಚಿನವರಿಗೆ ಗೊತ್ತೇ ಆಗುವುದಿಲ್ಲ. ಮಧುಮೇಹದಿಂದ ಬಳಲುತ್ತಿರುವವರು ನೀವಾಗಿದ್ದರೆ ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ (insulin) ಉತ್ಪಾದನೆಯನ್ನು ಹೆಚ್ಚಿಸುವ ಹಲವು ಆಯುರ್ವೇದ ಗಿಡಮೂಲಿಕೆಯ (Ayurvedic herbal) ಪಾನೀಯಗಳಿವೆ.

ಮಧುಮೇಹವು ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆರೋಗ್ಯಕರ ಜೀವನ ನಡೆಸಲು ಮಧುಮೇಹದ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಪುರಾತನ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದವು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ನೈಸರ್ಗಿಕ ಚಿಕಿತ್ಸೆಗಳನ್ನು ಶಿಫಾರಸು ಮಾಡುತ್ತದೆ. ಮಧುಮೇಹದ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುವ ಏಳು ಪ್ರಸಿದ್ಧ ಆಯುರ್ವೇದ ಪಾನೀಯಗಳಿವೆ.

ಆಯುರ್ವೇದವು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ನೈಸರ್ಗಿಕ ಪದಾರ್ಥಗಳ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಆಯುರ್ವೇದದ ಪಾನೀಯಗಳು ಔಷಧೀಯ ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಹಣ್ಣುಗಳನ್ನು ದೈನಂದಿನ ಜೀವನದಲ್ಲಿ ಸೇರಿಸಲು ನೆಚ್ಚಿನ ವಿಧಾನವಾಗಿದೆ. ಇದು ಕೇವಲ ರುಚಿಕರವಲ್ಲ ಆದರೆ ಸುಧಾರಿತ ಸೇರಿದಂತೆ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ.


ದಾಲ್ಚಿನ್ನಿ ಮತ್ತು ಮೆಂತ್ಯ

ದಾಲ್ಚಿನ್ನಿ ಮತ್ತು ಮೆಂತ್ಯ ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ದಾಲ್ಚಿನ್ನಿ ಮತ್ತು ಮೆಂತ್ಯಯೊಂದಿಗೆ ಒಂದು ಕಪ್ ಚಹಾ ಮಾಡಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಹೆಚ್ಚಿಸುತ್ತದೆ. ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಈ ಪದಾರ್ಥಗಳು ಮಧುಮೇಹ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಹಾಗಲಕಾಯಿ

ಹಾಗಲಕಾಯಿಯನ್ನು ಆಯುರ್ವೇದದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಪರಿಣಾಮಕ್ಕಾಗಿ ಪ್ರಶಂಸಿಸಲಾಗುತ್ತದೆ. ಇದರ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನಗೊಳಿಸಬಹುದು. ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಬಹುದು.


ನೆಲ್ಲಿಕಾಯಿ

ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಆಮ್ಲಾ ಜ್ಯೂಸ್ ಮಧುಮೇಹವನ್ನು ನಿರ್ವಹಿಸಲು ಪ್ರಸಿದ್ಧವಾದ ಆಯುರ್ವೇದ ಟಾನಿಕ್ ಆಗಿದೆ. ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಮ್ಲಾವು ಮೇದೋಜ್ಜೀರಕ ಗ್ರಂಥಿಯ ಕಾರ್ಯಗಳನ್ನು ಮತ್ತು ಇನ್ಸುಲಿನ್ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ. ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅರಿಶಿನ

ಅರಿಶಿನವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲನ್ನು ಕುಡಿಯುವುದು ಉರಿಯೂತವನ್ನು ಕಡಿಮೆ ಮಾಡುತ್ತದೆ, ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಅರಿಶಿನದಲ್ಲಿರುವ ಅಗತ್ಯ ಸಂಯುಕ್ತವಾದ ಕರ್ಕ್ಯುಮಿನ್ ಸ್ವಾಭಾವಿಕವಾಗಿ ಮಧುಮೇಹದ ಲಕ್ಷಣಗಳನ್ನು ನಿರ್ವಹಿಸಬಲ್ಲದು.

ಬೇವಿನ ಎಲೆ

ಔಷಧೀಯ ಗುಣಗಳು ಸಮೃದ್ಧವಾಗಿರುವ ಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಸ್ವಲ್ಪ ಕಹಿಯಾಗಿದ್ದರೂ, ಬೇವಿನ ಎಲೆಯ ಚಹಾವು ಪರಿಣಾಮಕಾರಿ ಆಯುರ್ವೇದ ಪಾನೀಯವಾಗಿದ್ದು ಅದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.


ನಿಂಬೆ ಮತ್ತು ಶುಂಠಿ

ನಿಂಬೆ ಮತ್ತು ಶುಂಠಿ ಆರೋಗ್ಯದ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಶುಂಠಿ ಮತ್ತು ನಿಂಬೆಯ ಬೆಚ್ಚಗಿನ ಪಾನೀಯವು ದೇಹವನ್ನು ನಿರ್ವಿಷಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದು ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತದೆ.

ಇದನ್ನೂ ಓದಿ: FSSAI Warning: ನೀವು ತಿನ್ನುವ ಮಾವಿನ ಹಣ್ಣು ಸುರಕ್ಷಿತವಾಗಿದೆಯೇ?

ತ್ರಿಫಲ

ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣವು ಮೂರು ಹಣ್ಣುಗಳನ್ನು ಒಳಗೊಂಡಿದೆ: ಆಮ್ಲಾ, ಬಿಭಿಟಕಿ ಮತ್ತು ಹರಿತಕಿ. ತ್ರಿಫಲಾ ಚಹಾವು ಒಟ್ಟಾರೆ ಆರೋಗ್ಯ ಮತ್ತು ಜೀರ್ಣಕಾರಿ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

Continue Reading
Advertisement
RCB Funny Memes
ಕ್ರೀಡೆ7 mins ago

RCB Funny Memes: ಕೊನೆಗೊಂಡ ಆರ್​ಸಿಬಿಯ ಹೊಸ ಅಧ್ಯಾಯ; ಟ್ರೋಲ್​, ಮೀಮ್ಸ್​ಗಳ ಮೂಲಕವೇ ತಿರುಗೇಟು ಕೊಟ್ಟ ಚೆನ್ನೈ ಅಭಿಮಾನಿಗಳು

Hamas Terrorists
ವಿದೇಶ9 mins ago

ಎಲ್ಲೆ ಮೀರಿದ ಹಮಾಸ್‌ ಉಗ್ರರ ಅಟ್ಟಹಾಸ; ಗಾಯಗೊಂಡ ಇಸ್ರೇಲಿ ಮಹಿಳಾ ಸೈನಿಕರ ಮೇಲೆ ಲೈಂಗಿಕ ದೌರ್ಜನ್ಯ: ಭಯಾನಕ ವಿಡಿಯೊ ಇಲ್ಲಿದೆ

PM Narendra Modi
Lok Sabha Election 202418 mins ago

PM Narendra Modi: ಪ್ರಧಾನಿ ಮೋದಿ ರ್‍ಯಾಲಿಯಲ್ಲಿ ಜನವೋ…ಜನ! ಅದ್ಬುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ-ವಿಡಿಯೋ ವೈರಲ್‌

Murder Case
ಬೆಳಗಾವಿ19 mins ago

Murder case : ಮಕ್ಕಳ ಎದುರೇ ಪತ್ನಿಗೆ ಸಲಾಕೆಯಿಂದ ಹೊಡೆದು ಕೊಂದು ಪರಾರಿಯಾದ ಪತಿ

gold rate today kiara
ಚಿನ್ನದ ದರ36 mins ago

Gold Rate Today: ಚಿನ್ನ ಕೊಳ್ಳಲು ಇಂದೇ ಸುದಿನ, ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ!

hotel oterra bomb hoax
ಕ್ರೈಂ55 mins ago

bomb Hoax: ಶಾಲೆ, ದೇವಸ್ಥಾನದ ಬಳಿಕ ರಾಜಧಾನಿಯ ಪ್ರತಿಷ್ಠಿತ ಹೋಟೆಲ್‌ಗೂ ಬಾಂಬ್‌ ಬೆದರಿಕೆ

T20 World Cup 2024
ಕ್ರೀಡೆ56 mins ago

T20 World Cup 2024: ಇನ್ನೆರಡು ದಿನದಲ್ಲಿ ಮಿನಿ ವಿಶ್ವಕಪ್​ ಸಮರಕ್ಕೆ ರೋಹಿತ್​, ಕೊಹ್ಲಿ ಸೇರಿ ಮೊದಲ ಬ್ಯಾಚ್​ ನ್ಯೂಯಾರ್ಕ್​ಗೆ ಪ್ರಯಾಣ

physical abuse & murder
ಕ್ರೈಂ1 hour ago

Physical Abuse & Murder: ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ; ದೃಶ್ಯಂ ಸಿನಿಮಾ ರೀತಿಯಲ್ಲಿ ಎಸ್ಕೇಪ್‌ಗೆ ಯತ್ನ

cylinder blast in Tumkur
ತುಮಕೂರು1 hour ago

Cylinder Blast: ಗ್ಯಾಸ್‌ ಸಿಲಿಂಡರ್ ಸ್ಫೋಟ; 7 ದಿನ ನರಳಾಡಿ ಪ್ರಾಣಬಿಟ್ಟ ಇಬ್ಬರು ಗಾಯಾಳುಗಳು

Kalki 2898 AD
ಸಿನಿಮಾ1 hour ago

Kalki 2898 AD: ʼಕಲ್ಕಿʼ ಚಿತ್ರದ ನಾಯಕ ಭೈರವನ ಆಪ್ತ ಗೆಳೆಯ ಬುಜ್ಜಿ ಯಾರು? ಈ ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ7 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌