Collagen foods | ಚರ್ಮದ ಆರೋಗ್ಯದ ಕೀಲಿಕೈ ಕೊಲಾಜೆನ್‌: ಈ ಐದು ಆಹಾರಗಳಲ್ಲಿದೆ ನೋಡಿ - Vistara News

ಆರೋಗ್ಯ

Collagen foods | ಚರ್ಮದ ಆರೋಗ್ಯದ ಕೀಲಿಕೈ ಕೊಲಾಜೆನ್‌: ಈ ಐದು ಆಹಾರಗಳಲ್ಲಿದೆ ನೋಡಿ

ಕೊಲಾಜೆನ್‌ ಚರ್ಮದ ರಕ್ಷಣೆಯ ಅತೀ ಅಗತ್ಯವಾದ ಪೋಷಕಾಂಶಗಳಲ್ಲೊಂದು. ಹಾಗಾದರೆ, ಕೊಲಾಜೆನ್‌ ಉತ್ಪಾದನೆಗೆ ಸಹಾಯ ಮಾಡುವ ಯಾವ ಆಹಾರಗಳನ್ನು ಸೇವಿಸುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

VISTARANEWS.COM


on

Collagen foods
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚರ್ಮದ ವಿಚಾರಕ್ಕೆ ಬಂದರೆ ಬಹುತೇಕ ಎಲ್ಲರೂ ಹೆಚ್ಚು ಆಸ್ಥೆ, ಕಾಳಜಿ ವಹಿಸುತ್ತಾರೆ. ಅದರಲ್ಲೂ ಮುಖದ ಚರ್ಮಕ್ಕೆ ಎಲ್ಲಕ್ಕಿಂತ ಹೆಚ್ಚು ಆದ್ಯತೆ. ಮುಖದ ಚರ್ಮಕ್ಕೆ ಏನೂ ಆಗದಿರಲಿ ಎಂದು ಅದರ ಕಾಳಜಿ ಎಲ್ಲರೂ ಮಾಡುವುದುದ ಸಹಜ. ನೀರು ಕುಡಿಯುವುದರಿಂದ ಹಿಡಿಡದು, ಮುಖಕ್ಕೆ ಹಚ್ಚುವ ಕ್ರೀಮು ಸೀರಮ್ಮುಗಳವರೆಗೆ ಎಲ್ಲವೂ ಮುಖದ ಒಳಿತಿಗಾಗಿಯೇ ಎಂಬುದು ಎಲ್ಲರಿಗೂ ಗೊತ್ತಿರುವ ಸೀಕ್ರೆಟ್ಟು. ಹೀಗೆ ಮುಖದ ಚರ್ಮದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಗೂ ತಿಳಿದಿರುವಂತೆ, ಕೊಲಾಜೆನ್‌ ಚರ್ಮದ ರಕ್ಷಣೆಯ ಅತೀ ಅಗತ್ಯವಾದ ಪೋಷಕಾಂಶಗಳಲ್ಲೊಂದು. ಎಲುಬು, ಕೀಲು, ಮಾಂಸಖಂಡಗಳು, ಕಾರ್ಟಿಲೇಜ್‌ಗಳಲ್ಲಿ ಕೊಲಾಜೆನ್‌ ಎಂಬ ಪ್ರೊಟೀನು ಇದ್ದೇ ಇರುತ್ತದೆ. ಷರ್ಮದ ಹೊಳಪು ಹಾಗೂ ಆರೋಗ್ಯದ ಹಿಂದಿರುವ ಗುಟ್ಟೂ ಕೂಡಾ ಇದೇ ಕೊಲಾಜೆನ್.‌ ಇಂಥ ಕೊಲಾಜೆನ್‌ ವಯಸ್ಸಾದಂತೆ ಉತ್ಪತ್ತಿಯಾಗುವುದು ಕಡಿಮೆಯಾಗುವುದರಿಂದ ಚರ್ಮಕ್ಕೆ ಇದರ ಅಗತ್ಯತೆಯನ್ನು ಪೂರೈಸುವುದೂ ಕೂಡಾ ಅತ್ಯಂತ ಅಗತ್ಯದ ಸಂಗತಿಗಳಲ್ಲೊಂದು.

ದೇಹದಲ್ಲಿ ಕೊಲಾಜೆನ್‌ ಉತ್ಪತ್ತಿಯಾಗಲು ಇತರ ಪೋಷಕಾಂಶಗಳ ಅಗತ್ಯವೂ ಇದೆ. ಅಮಿನೋ ಆಸಿಡ್‌, ಝಿಂಕ್‌, ವಿಟಮಿನ್‌ ಸಿ, ಮ್ಯಾಂಗನೀಸ್‌ ಹಾಗೂ ಕಾಪರ್‌ ಇರುವ ಆಹಾರಗಳು ಕೊಲಾಜೆನ್‌ ಉತ್ಪಾದನೆಗೆ ಹೆಚ್ಚು ಸೂಕ್ತ. ಹೀಗಾಗಿ ಇವುಗಳಿರುವ ಆಹಾರಗಳನ್ನು ನಾವು ಆಯ್ಕೆ ಮಾಡುತ್ತಾ ಬಂದಲ್ಲಿ, ನಮ್ಮ ಚರ್ಮ ಕೊಲಾಜೆನ್‌ ಅಂಶವನ್ನು ತನ್ನಲ್ಲಿ ಹೆಚ್ಚಿಸಿಕೊಂಡು ಆರೋಗ್ಯಕರವೂ, ಸುಂದರವಾಗಿಯೂ ನಳನಳಿಸುತ್ತದೆ.

ಹಾಗಾದರೆ, ಕೊಲಾಜೆನ್‌ ಉತ್ಪಾದನೆಗೆ ಸಹಾಯ ಮಾಡುವ ಯಾವ ಆಹಾರಗಳನ್ನು ಸೇವಿಸುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

೧. ಚಿಕನ್:‌ ಅತ್ಯಂತ ಹೆಚ್ಚು ಕೊಲಾಜೆನ್‌ ಇರುವ ಆಹಾರಗಳಲ್ಲಿ ಚಿಕನ್‌ ಕೂಡಾ ಒಂದು. ಇಡಿಯ ಚಿಕನ್‌ನಲ್ಲಿ ಅತ್ಯಂತ ಉತ್ತಮ ಪ್ರಮಾಣದಲ್ಲಿ ಕನೆಕ್ಟಿವ್‌ ಟಿಶ್ಯೂ ಇರುವುದರಿಂದ ಇದರ ಮೂಲಕ ಕೊಲಾಜೆನ್‌ ನಮ್ಮ ದೇಹಕ್ಕೆ ಸಿಗುತ್ತದೆ. ಹಾಗಾಗಿ, ಚರ್ಮ ನಳನಳಿಸಿ ಪಳಪಳ ಹೊಳೆಯಬೇಕೆಂದಿದ್ದರೆ ಚಿಕನ್‌ ತಿನ್ನಬಹುದು.

೨. ನೆಲ್ಲಿಕಾಯಿ: ನೆಲ್ಲಿಕಾಯಿ ಕೇವಲ ಚರ್ಮದ ಆರೋಗ್ಯ ಮಾತ್ರವಲ್ಲ. ದೇಹದ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಸೂಪರ್‌ ಫುಡ್‌. ಇದರಲ್ಲಿರುವ ವಿಟಮಿನ್‌ ಸಿಯಿಂದ ಸಾಕಷ್ಟು ಪ್ರಯೋಜನಗಳಿದ್ದು ಚರ್ಮದ ಅರೋಗ್ಯಕ್ಕೂ ಅಗತ್ಯ ಆಹಾರ. ಇದು ಪಚನಕ್ರಿಯೆಯನ್ನೂ ವೇಗವಾಗಿಸುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ | Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!

೩. ಮೀನು: ಕೊಲಾಜೆನ್‌ನ ಅತ್ಯಂತ ಶ್ರೀಮಂತ ಮೂಲ ಎಂದರೆ ಅದು ಮೀನು. ಮೀನಿನಲ್ಲಿರುವಷ್ಟು ಕೊಲಾಜೆನ್‌ ಬೇರೆ ಯಾವ ಆಹಾರದ ಮೂಲಕವೂ ನಮ್ಮ ದೇಹಕ್ಕೆ ಸಿಗುವುದಿಲ್ಲ. ಇದರಲ್ಲಿರುವ ಅಮೈನೋ ಆಸಿಡ್‌ ಕೊಲಾಜೆನ್‌ ಉತ್ಪತ್ತಿಗೆ ಪ್ರೇರಣೆಯನ್ನೂ ನೀಡುವ ಮೂಲಕ ಚರ್ಮದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

೪. ಹಾಲು ಹಾಗೂ ಹಾಲಿನ ಉತ್ಪನ್ನಗಳು: ಭಾರತದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಚೀಸ್‌, ಪನೀರ್‌, ಖೋವಾ,ಬೆಣ್ಣೆ ಸೇರಿದಂತೆ ಹಲವುಗಳ ಉಪಯೋಗ ಹೆಚ್ಚಿರುವುದರಿಂದ ಇದು ಎಲ್ಲರಿಗೂ ಸುಲಭವಾಗಿ ಸಿಗಬಹುದಾದ ಕೊಲಾಜೆನ್‌ ಮೂಲ. ಇದರಲ್ಲಿರುವ ಝಿಂಕ್‌ ಹಾಗೂ ಖನಿಜಾಂಶಗಳು ಕೊಲಾಜೆನ್‌ ಉತ್ಪತ್ತಿಗೆ ಸಹಾಯ ಮಾಡುತ್ತವೆ.

೫. ಬೇಳೆಕಾಳುಗಳು: ಬಾರತೀಯ ಅಡುಗೆಯಲ್ಲಿ ಅತ್ಯಂತ ಸಾಮಾನ್ಯವಿರುವ ಆಹಾರವೆಂದರೆ ಬೇಳೆ ಕಾಳುಗಳು. ಸಾಮಾನ್ಯರಿಗೆ ಸುಲಭವಾಗಿ ಕೈಗೆಟಕುವ ಈ ಬೇಳೆಕಾಳುಗಳ ನಿತ್ಯ ಬಳಕೆ ಇಲ್ಲಿದೆ. ಹಾಗಾಗಿ, ಕೇವಲ ಕೊಲಾಜೆನ್‌ ಮಾತ್ರವಲ್ಲದೆ, ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಿಗೆ ಬೇಳೆಕಾಳುಗಳೇ ಮೂಲ. ಪ್ರೊಟೀನ್‌ ಹಾಗೂ ಇತರ ಬಹುತೇಕ ಎಲ್ಲ ಪೋಷಕಾಂಶಗಳೂ ಬೇಳೆಕಾಳುಗಳಿಂದ ಪಡೆಯಬಹುದು.

ಇದನ್ನೂ ಓದಿ | Food Habit | ಹಸಿದ ಹೊಟ್ಟೆಗೆ ಈ ಆಹಾರಗಳು ಬೇಡವೇ ಬೇಡ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

FSSAI Warning: ಎದೆಹಾಲು ಮಾರಾಟ ಮಾಡುವಂತಿಲ್ಲ: ಎಫ್‌ಎಸ್‌ಎಸ್‌ಎಐ ಖಡಕ್ ಎಚ್ಚರಿಕೆ

ಮಾನವ ಹಾಲು ಮತ್ತು ಅದರ ಉತ್ಪನ್ನಗಳ ಬಗ್ಗೆ ವಾಣಿಜ್ಯ ಉದ್ದೇಶಗಳಿಗಾಗಿ ವಿವಿಧ ಸಮಾಜದ ನಾಗರಿಕರನ್ನು ಸಂಪರ್ಕಿಸಲಾಗಿದೆ ಎನ್ನುವ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಮಾಹಿತಿ ಬಂದಿದ್ದು, ಎಫ್‌ಎಸ್‌ಎಸ್‌ಎಐ ಯು (FSSAI Warning) ಇಂತಹ ಯಾವುದೇ ಅಭ್ಯಾಸಗಳಲ್ಲಿ ತೊಡಗಿರುವ ಘಟಕಗಳಿಗೆ ಯಾವುದೇ ರೀತಿಯ ಪರವಾನಗಿಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಪರವಾನಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

VISTARANEWS.COM


on

By

FSSAI Warning
Koo

ವಾಣಿಜ್ಯ ಉದ್ದೇಶಗಳಿಗಾಗಿ ಮನುಷ್ಯರ ಎದೆಹಾಲು (Breast Milk ) ಮತ್ತು ಅದರಿಂದ ಪಡೆದ ಉತ್ಪನ್ನಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆಹಾರ ವ್ಯಾಪಾರ ನಿರ್ವಾಹಕರಿಗೆ (FBO) ಎಚ್ಚರಿಕೆಯನ್ನು (FSSAI Warning) ನೀಡಿದೆ. 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (FSS) ಕಾಯಿದೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳ ಅಡಿಯಲ್ಲಿ ಇಂತಹ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರಾಟಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಆಹಾರ ಸುರಕ್ಷತಾ ನಿಯಂತ್ರಕ ಶುಕ್ರವಾರ ನೀಡಿದ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪರವಾನಗಿ ನೀಡುವುದಿಲ್ಲ

ಮಾನವ ಹಾಲು ಮತ್ತು ಅದರ ಉತ್ಪನ್ನಗಳ ಬಗ್ಗೆ ವಾಣಿಜ್ಯ ಉದ್ದೇಶಗಳಿಗಾಗಿ ವಿವಿಧ ಸಮಾಜದ ನಾಗರಿಕರನ್ನು ಸಂಪರ್ಕಿಸಲಾಗಿದೆ ಎನ್ನುವ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಮಾಹಿತಿ ಬಂದಿದ್ದು, ಎಫ್‌ಎಸ್‌ಎಸ್‌ಎಐ ಯು ಇಂತಹ ಯಾವುದೇ ಅಭ್ಯಾಸಗಳಲ್ಲಿ ತೊಡಗಿರುವ ಘಟಕಗಳಿಗೆ ಯಾವುದೇ ರೀತಿಯ ಪರವಾನಗಿಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಪರವಾನಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಮಾನವ ಹಾಲು ಅಥವಾ ಅದರ ಉತ್ಪನ್ನಗಳ ವಾಣಿಜ್ಯೀಕರಣದಲ್ಲಿ ತೊಡಗಿರುವ ಯಾವುದೇ ಆಹಾರ ವ್ಯಾಪಾರ ನಿರ್ವಾಹಕರು ಭಾರಿ ದಂಡವನ್ನು ತೆರಬೇಕಾಗುವುದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಚ್ಚರಿಸಿದೆ.

ಎಚ್ಚರಿಕೆ ಏನು?

ಮಾನವನ ಎದೆ ಹಾಲು ಮಾರಾಟಕ್ಕೆ ಸಂಬಂಧಿಸಿ ಯಾವುದೇ ಉಲ್ಲಂಘನೆಯ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಚ್ಚರಿಕೆಯನ್ನು ನೀಡಿದೆ. ಮಾನವ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಲಹೆ ನೀಡಲಾಗಿದೆ.

ಇದರ ಯಾವುದೇ ಉಲ್ಲಂಘನೆಯನ್ನು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳಿಗೆ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ: Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಪ್ರೊಟೀನ್‌ ಪುಡಿಗಳಿಂದ ದೂರವಿರಿ: ಎಚ್ಚರಿಕೆ

ಬಹಳಷ್ಟು ಮಂದಿಗೆ ನಿತ್ಯವೂ ಪ್ರೊಟೀನ್‌ ಪುಡಿಗಳಿಂದ ಮಾಡಿದ ಶೇಕ್‌ಗಳನ್ನು ಕುಡಿಯುವ ಅಭ್ಯಾಸವಿರಬಹುದು. ಜಿಮ್‌ಗೆ ಹೋಗುವ, ವ್ಯಾಯಾಮ ಮಾಡುವ, ತೂಕ ಇಳಿಸುವ ಪ್ರಯತ್ನದಲ್ಲಿರುವ ಎಲ್ಲ ಮಂದಿಯೂ ಈಗ ಯಾವ ವೈದ್ಯರ ಸಲಹೆಯನ್ನೂ ಕೇಳದೆ ನೇರವಾಗಿ ಪ್ರೊಟೀನ್‌ ಪೌಡರ್‌ಗಳು ಸಿಗುವ ಔಟ್‌ಲೆಟ್‌ಗಳಿಂದ ಪೌಡರನ್ನು ಕೊಂಡು ತಂದು ಸೇವಿಸಲು ಆರಂಭಿಸುತ್ತಾರೆ.

ಮಾಂಸಖಂಡಗಳ ಬಲವರ್ಧನೆಗೆ, ಪ್ರೊಟೀನ್‌ ಡಯಟ್‌ನಲ್ಲಿರುವ ಮಂದಿ, ಅಥ್ಲೀಟ್‌ಗಳು ಸೇರಿದಂತೆ ಎಲ್ಲರೂ ಇತ್ತೀಚೆಗೆ ಪ್ರೊಟೀನ್‌ ಪೌಡರ್‌ ಶೇಕ್‌ ಮಾಡಿ ಕುಡಿಯುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆಯೋ ಅಥವಾ ಇದರಿಂದ ಅಡ್ಡ ಪರಿಣಾಮಗಳೇನಾದರೂ ಇವೆಯೇ ಎಂಬ ಯೋಚನೆಯನ್ನೂ ಮಾಡುವುದಿಲ್ಲ.

ಇತ್ತೀಚೆಗೆ ಹೆಚ್ಚುತ್ತಿರುವ ಈ ಟ್ರೆಂಡ್‌ಗೆ ಉತ್ತರವಾಗಿ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಚ್‌- ನ್ಯಾಷನಲ್‌ ಆಫ್‌ ನ್ಯೂಟ್ರಿಷನ್‌ ಇದೀಗ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದ್ದು ಪ್ರೊಟೀನ್‌ ಪೌಡರುಗಳ ಕುರಿತಾದ ಆಘಾತಕಾರಿ ಸತ್ಯವನ್ನು ವಿವರಿಸಿದೆ. ಇದರ ಅಧಿಕ ಸೇವನೆಯಿಂದ ಯಾವೆಲ್ಲ ಪರಿಣಾಮಗಳನ್ನು ಎದುರಿಸಬೇಕಾದೀತು ಎಂಬ ಎಚ್ಚರವನ್ನೂ ನೀಡಿದೆ.

ಅಥ್ಲೀಟ್‌ಗಳೂ ಸೇರಿದಂತೆ, ಕ್ರೀಡಾಳುಗಳಿಗೆ ನಿತ್ಯವೂ ಆಹಾರ ಮೂಲಗಳಿಂದಲೇ ಪ್ರೊಟೀನ್‌ ನಮ್ಮ ದೇಹಕ್ಕೆ ಸೇರುವಂತೆ ಮಾಡಬೇಕು ಎಂಬ ನಿಯಮಾವಳಿ ಇದೆ. ಸಪ್ಲಿಮೆಂಟ್‌ಗಳ ಮೂಲಕ ಪ್ರೊಟೀನ್‌ ಅಥವಾ ಪೋಷಕಾಂಶಗಳು ದೇಹಕ್ಕೆ ಸೇರುವಂತೆ ಮಾಡುವುದು ಉತ್ತಮ ವಿಧಾನವಲ್ಲ ಎಂದು ಹೇಳಿದೆ.

ನಿತ್ಯವೂ ಹೀಗೆ ಪ್ರೊಟೀನ್‌ ಪುಡಿಗಳು ಹಾಗೂ ಇತರ ಸಪ್ಲಿಮೆಂಟ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುತ್ತಲೇ ಇದ್ದರೆ ಎಲುಬಿನಲ್ಲಿ ಖನಿಜಾಂಶಗಳ ನಷ್ಟ ಸೇರಿದಂತೆ ಕಿಡ್ನಿಯ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚು ಎಂದು ಎಚ್ಚರಿಕೆ ನೀಡಿದೆ.

Continue Reading

ಆರೋಗ್ಯ

Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಪುದಿನಾದಲ್ಲಿರುವ ರಿಫ್ರೆಶಿಂಗ್‌ ಗುಣ ಬೇಸಿಗೆಯಲ್ಲಿ ತಂಪಾದ ಅನುಭೂತಿ ನೀಡುತ್ತದೆ. ಪುದಿನದಿಂದ ನಮಗೆ ಆರೋಗ್ಯದ ಉಪಯೋಗಗಳೂ ಬೇಕಾದಷ್ಟಿದೆ. ಚರ್ಮದ ಆರೋಗ್ಯ, ರೋಗನಿರೋಧಕತೆ, ಜೀರ್ಣಕ್ರಿಯೆ, ದಂತಕಾಂತಿ ಸೇರಿದಂತೆ ಅನೇಕ ಉಪಯೋಗಗಳು ನಮಗೆಲ್ಲಾ ಗೊತ್ತಿದೆ. ಆದರೆ, ಪುದಿನವನ್ನು ನಿತ್ಯವೂ ಉಪಯೋಗಿಸುವುದು ಹೇಗೆ ಎಂಬ ಗೊಂದಲ ಅನೇಕರಲ್ಲಿ ಇರಬಹುದು. ಈ ಕುರಿತ (Mint leaf water) ವಿವರಣೆ ಇಲ್ಲಿದೆ.

VISTARANEWS.COM


on

Mint Leaf Water
Koo

ಬೇಸಿಗೆ ಕಾಲಕ್ಕೂ ಪುದಿನಕ್ಕೂ ಚಂದನೆಯ ಬಾಂಧವ್ಯವಿದೆ. ಇದರಲ್ಲಿರುವ ರಿಫ್ರೆಶಿಂಗ್‌ ಗುಣ ಬೇಸಿಗೆಯಲ್ಲಿ ತಂಪಾದ ಅನುಭೂತಿ ನೀಡುತ್ತದೆ. ಪುದಿನವನ್ನು ಚಟ್ನಿ, ಸಲಾಡ್‌, ಕರಿ, ಪೇಯಗಳಲ್ಲಿ ಬಳಸಿದರೆ ಸಾಕು, ತನ್ನಲ್ಲಿರುವ ಅಪರೂಪದ ಘಮವನ್ನು ಅದು ಈ ಎಲ್ಲ ಆಹಾರಕ್ಕೆ ನೀಡಿ ಬೇರೆಯದೇ ಬಗೆಯ ಫೀಲ್‌ ನೀಡುತ್ತದೆ. ಇಂಥ ಪುದಿನದಿಂದ ನಮಗೆ ಆರೋಗ್ಯದ ಉಪಯೋಗಗಳೂ ಬೇಕಾದಷ್ಟಿದೆ. ಚರ್ಮದ ಆರೋಗ್ಯ, ರೋಗನಿರೋಧಕತೆ, ಜೀರ್ಣಕ್ರಿಯೆ, ದಂತಕಾಂತಿ ಸೇರಿದಂತೆ ಅನೇಕ ಉಪಯೋಗಗಳು ನಮಗೆಲ್ಲಾ ಗೊತ್ತಿದೆ. ಆದರೆ, ಪುದಿನವನ್ನು ನಿತ್ಯವೂ ಉಪಯೋಗಿಸುವುದು ಹೇಗೆ ಎಂಬ ಗೊಂದಲ ಅನೇಕರಲ್ಲಿರುಬಹುದು. ಕೇವಲ ಒಂದು ಪುದಿನ ಇನ್‌ಫ್ಯೂಸ್ಡ್‌ ವಾಟರ್‌ನಿಂದ ಪುದಿನದ ಲಾಭಗಳನ್ನು ಪಡೆಯಬಹುದು. ಅಧವಾ ಪುದಿನ ಹಾಗೂ ನಿಂಬೆಹಣ್ಣಿನ ರಸವನ್ನು ಸೇರಿಸಿದ ನೀರನ್ನು, ನೀರಿನ ಬದಲಾಗಿಯೂ ದಿನಕ್ಕೊಮ್ಮೆ ಕುಡಿಯಬಹುದು. ಬನ್ನಿ, ಪುದಿನ ನೀರನ್ನು ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ (Mint leaf water) ಎಂಬುದನ್ನು ನೋಡೋಣ.

drink water

ದೇಹಕ್ಕೆ ನೀರು ಅಗತ್ಯ

ಬೇಸಿಗೆಯಲ್ಲಿ ದೇಹಕ್ಕೆ ನೀರು ಎಲ್ಲಕ್ಕಿಂತ ಹೆಚ್ಚು ಅಗತ್ಯ. ಹೈಡ್ರೇಟೆಡ್‌ ಆಗಿರುವುದು ಆರೋಗ್ಯಕ್ಕೆ ಮೂಲ. ಆದರೆ ಇಡೀ ದಿನ ಇಷ್ಟು ನೀರು ಕುಡಿಯಬೇಕು ಎಂಬ ಒತ್ತಡಕ್ಕೆ ಬಿದ್ದು ಖಾಲಿ ನೀರು ಕುಡಿಯುವುದು ಹೇಗೆ ಎಂಬ ಸಮಸ್ಯೆ ಎದುರಿಸುವ ಮಂದಿಗೆ ಪುದಿನ ನೀರು ಒಳ್ಳೆಯದು. ಪುದಿನವನ್ನು ಕೈಯಲ್ಲಿ ಕೊಂಚ ರಸ ಬಿಡುವ ಹಾಗೆ ಹಿಸುಕಿ ನೀರಿಗೆ ಹಾಕಿಟ್ಟು ಆಗಾಗ ಅವಶ್ಯಕತೆ ಬಿದ್ದಾಗ ಹೀರುತ್ತಿರಬಹುದು. ಇದರಿಂದ ಪುದಿನದ ಸತ್ವಗಳೂ ದೇಹಕ್ಕೆ ಸೇರಿ, ಬೇಸಿಗೆಯಲ್ಲಿ ರಿಫ್ರೆಶಿಂಗ್‌ ಅನುಭವ ನೀಡುತ್ತದೆ.

ealthy internal organs of human digestive system / highlighted blue organs

ಜೀರ್ಣಕ್ರಿಯೆಗೆ ಪುದಿನ ಒಳ್ಳೆಯದು

ಜೀರ್ಣಕ್ರಿಯೆಗೆ ಪುದಿನ ಬಹಳ ಒಳ್ಳೆಯದು. ಪುದಿನದಲ್ಲಿ ಮೆಂಥಾಲ್‌ ಇರುವುದರಿಂದ ಇದು ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳಿಗೆ ಅನುಕೂಲಕರ ವಾತಾವರಣ ಇದು ನಿರ್ಮಿಸುವುದರಿಂದ ಸಹಜವಾಗಿ, ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆಯ ಎಲ್ಲ ಬಗೆಯ ಸಮಸ್ಯೆಗಳಿಗೆ ಪುದಿನದಲ್ಲಿ ಉತ್ತರವಿದೆ. ಹೊಟ್ಟೆ ಉಬ್ಬರಿಸಿದಂತಾಗುವುದು, ಗ್ಯಾಸ್‌, ಹೊಟ್ಟಿಯಲ್ಲಿ ಕಿಚ್ಚು ಹೊತ್ತಿಸಿದಂತಃ ಅನುಭವ, ಅಸಿಡಿಟಿ ಈ ಎಲ್ಲ ಸಮಸ್ಯೆಗಳಿಗೆ ಪುದಿನ ಸಮಾಧಾನಕರ ಉತ್ತರ ನೀಡುತ್ತದೆ.

weight loss

ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ

ತೂಕ ಇಳಿಸುವಲ್ಲಿ ಪುದಿನದ ಪಾತ್ರ ದೊಡ್ಡದು. ಪುದಿನದ ಎಲೆ ಜೀರ್ಣಕ್ರಿಯೆಯ ಕಿಣ್ವಗಳಿಗೆ ಸೂಕ್ತ ವಾತಾವರಣ ನಿರ್ಮಾಣ ಮಾಡಿಕೊಡುವುದರಿಂದ ಜೀರ್ಣಕ್ರಿಯೆ ಸಹಜವಾಗಿ ಆಗುತ್ತದೆ. ಜೊತೆಗೆ ತೂಕ ಇಳಿಕೆಗೆ ನೆರವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆರೋಗ್ಯಕರವಾದ ರೀತಿಯಲ್ಲಿ ಆದರೆ ತೂಕ ಇಳಿಕೆಯೂ ಆಗುತ್ತದೆ. ಸರಿಯಾದ ಆಹಾರದ ಜೊತೆಜೊತೆಗೇ, ಪುದಿನ ನೀರನ್ನು ಆಗಾಗ ಕುಡಿಯುವುದರಿಂದ ತೂಕ ಇಳಿಕೆಯ ಪ್ರಯತ್ನವನ್ನು ಮಾಡಬಹುದು.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ರೋಗ ನಿರೋಧಕ ಶಕ್ತಿ

ಪುದಿನದಲ್ಲಿರುವ ಇನ್ನೊಂದು ಅತ್ಯಂತ ಅಮೂಲ್ಯವಾದ ಶಕ್ತಿ ಎಂದರೆ ಅದರಲ್ಲಿರುವ ರೋಗ ನಿರೋಧಕ ಶಕ್ತಿ. ಪುದಿನ ನೀರನ್ನು ಆಗಾಗ ಕುಡಿಯುತ್ತಿರುವುದರಿಂದ ನಾವು ಸೇವಿಸುವ ಆಹಾರದಲ್ಲಿರುವ ಎಲ್ಲ ಪೋಷಕಾಂಶಗಳೂ ದೇಹದಲ್ಲಿ ಹೀರಲ್ಪಟ್ಟು ದೇಹದ ಆರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ಪುದಿನದಲ್ಲಿ ಆಂಟಿ ಇನ್ಫ್ಲಮೇಟರಿ ಗುಣಗಳು ಇರುವುದರಿಂದ ದೇಹಕ್ಕೆ ಎಲ್ಲ ವಿಧದಲ್ಲೂ ಇದು ಸಹಾಯ ಮಾಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ.

Skin Care

ಚರ್ಮದ ಆರೋಗ್ಯಕ್ಕೆ ಒಳ್ಳೆಯದು

ಪುದಿನ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಚರ್ಮದ ರಂಧ್ರಗಳನ್ನು ಬಿಗಿಯಾಗಿಸಲು, ಚರ್ಮಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಪೂರೈಸಲು, ಪುದಿನ ಬಹಳ ಒಳ್ಳೆಯದು. ಪುದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಚರ್ಮದ ಯಾವುದೇ ಸಮಸ್ಯೆಗಳಿದ್ದರೂ ಉತ್ತರ ನೀಡುತ್ತದೆ. ಮೊಡವೆ, ಕಜ್ಜಿಗಳು, ಬೆವರು ಸಾಲೆ, ಚರ್ಮದ ಸುಕ್ಕು, ನಿರಿಗೆಗಳು, ಒಣಕಕಲು ಚರ್ಮ, ಎಣ್ಣೆಯುಕ್ತ ಚರ್ಮ, ಕಪ್ಪು ಕಲೆ ಇತ್ಯಾದಿ ಇತ್ಯಾದಿ ಮುಖದ ಚರ್ಮದ ಸಮಸ್ಯೆಗಳೂ ಕೂಡಾ ಪುದಿನ ನೀರು ಕುಡಿಯುವುದರಿಂದ ಪರಿಹಾರ ಪಡೆಯುತ್ತದೆ.

Continue Reading

ಆರೋಗ್ಯ

Protein Powder: ಫಿಟ್‌ನೆಸ್‌ಗಾಗಿ ಪ್ರೊಟೀನ್‌ ಪುಡಿಗಳ ಸೇವನೆ ಮಾಡುತ್ತೀರಾ? ಹಾಗಿದ್ದರೆ ಎಚ್ಚರ!

ಜಿಮ್‌ಗೆ ಹೋಗುವ, ವ್ಯಾಯಾಮ ಮಾಡುವ, ತೂಕ ಇಳಿಸುವ ಪ್ರಯತ್ನದಲ್ಲಿರುವ ಎಲ್ಲ ಮಂದಿಯೂ ಈಗ ಯಾವ ವೈದ್ಯರ ಸಲಹೆಯನ್ನೂ ಕೇಳದೆ ನೇರವಾಗಿ ಔಟ್‌ಲೆಟ್‌ಗಳಿಂದ ಪ್ರೊಟೀನ್‌ ಪೌಡರನ್ನು ತಂದು ಸೇವಿಸಲು ಆರಂಭಿಸುತ್ತಾರೆ. ಮಾಂಸಖಂಡಗಳ ಬಲವರ್ಧನೆಗೆ, ಪ್ರೊಟೀನ್‌ ಡಯಟ್‌ನಲ್ಲಿರುವ ಮಂದಿ, ಅಥ್ಲೀಟ್‌ಗಳು ಸೇರಿದಂತೆ ಎಲ್ಲರೂ ಇತ್ತೀಚೆಗೆ ಪ್ರೊಟೀನ್‌ ಪೌಡರ್‌ ಶೇಕ್‌ ಮಾಡಿ ಕುಡಿಯುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ? ಈ ಬಗ್ಗೆ (Protein Powder) ಇಲ್ಲಿದೆ ಮಾಹಿತಿ.

VISTARANEWS.COM


on

Protein Powder
Koo

ಬಹಳಷ್ಟು ಮಂದಿಗೆ ನಿತ್ಯವೂ ಪ್ರೊಟೀನ್‌ ಪುಡಿಗಳಿಂದ (Protein Powder) ಮಾಡಿದ ಶೇಕ್‌ಗಳನ್ನು ಕುಡಿಯುವ ಅಭ್ಯಾಸವಿರಬಹುದು. ಜಿಮ್‌ಗೆ ಹೋಗುವ, ವ್ಯಾಯಾಮ ಮಾಡುವ, ತೂಕ ಇಳಿಸುವ ಪ್ರಯತ್ನದಲ್ಲಿರುವ ಎಲ್ಲ ಮಂದಿಯೂ ಈಗ ಯಾವ ವೈದ್ಯರ ಸಲಹೆಯನ್ನೂ ಕೇಳದೆ ನೇರವಾಗಿ ಪ್ರೊಟೀನ್‌ ಪೌಡರ್‌ಗಳು ಸಿಗುವ ಔಟ್‌ಲೆಟ್‌ಗಳಿಂದ ಪೌಡರನ್ನು ಕೊಂಡು ತಂದು ಸೇವಿಸಲು ಆರಂಭಿಸುತ್ತಾರೆ. ಮಾಂಸಖಂಡಗಳ ಬಲವರ್ಧನೆಗೆ, ಪ್ರೊಟೀನ್‌ ಡಯಟ್‌ನಲ್ಲಿರುವ ಮಂದಿ, ಅಥ್ಲೀಟ್‌ಗಳು ಸೇರಿದಂತೆ ಎಲ್ಲರೂ ಇತ್ತೀಚೆಗೆ ಪ್ರೊಟೀನ್‌ ಪೌಡರ್‌ ಶೇಕ್‌ ಮಾಡಿ ಕುಡಿಯುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆಯೋ ಅಥವಾ ಇದರಿಂದ ಅಡ್ಡ ಪರಿಣಾಮಗಳೇನಾದರೂ ಇವೆಯೇ ಎಂಬ ಯೋಚನೆಯನ್ನೂ ಮಾಡುವುದಿಲ್ಲ. ಇತ್ತೀಚೆಗೆ ಹೆಚ್ಚುತ್ತಿರುವ ಈ ಟ್ರೆಂಡ್‌ಗೆ ಉತ್ತರವಾಗಿ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಚ್‌- ನ್ಯಾಷನಲ್‌ ಆಫ್‌ ನ್ಯೂಟ್ರಿಷನ್‌ ಇದೀಗ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದ್ದು ಪ್ರೊಟೀನ್‌ ಪೌಡರುಗಳ ಕುರಿತಾದ ಆಘಾತಕಾರಿ ಸತ್ಯವನ್ನು ವಿವರಿಸಿದ್ದು, ಇದರ ಅಧಿಕ ಸೇವನೆಯಿಂದ ಯಾವೆಲ್ಲ ಪರಿಣಾಮಗಳನ್ನು ಎದುರಿಸಬೇಕಾದೀತು ಎಂಬ ಎಚ್ಚರವನ್ನೂ ನೀಡಿದೆ. ಅಥ್ಲೀಟ್‌ಗಳೂ ಸೇರಿದಂತೆ, ಕ್ರೀಡಾಳುಗಳಿಗೆ ನಿತ್ಯವೂ ಆಹಾರ ಮೂಲಗಳಿಂದಲೇ ಪ್ರೊಟೀನ್‌ ನಮ್ಮ ದೇಹಕ್ಕೆ ಸೇರುವಂತೆ ಮಾಡಬೇಕು ಎಂಬ ನಿಯಮಾವಳಿ ಇದೆ. ಸಪ್ಲಿಮೆಂಟ್‌ಗಳ ಮೂಲಕ ಪ್ರೊಟೀನ್‌ ಅಥವಾ ಪೋಷಕಾಂಶಗಳು ದೇಹಕ್ಕೆ ಸೇರುವಂತೆ ಮಾಡುವುದು ಉತ್ತಮ ವಿಧಾನವಲ್ಲ ಎಂದು ಇದು ಹೇಳಿದೆ. ನಿತ್ಯವೂ ಹೀಗೆ ಪ್ರೊಟೀನ್‌ ಪುಡಿಗಳು ಹಾಗೂ ಇತರ ಸಪ್ಲಿಮೆಂಟ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುತ್ತಲೇ ಇದ್ದರೆ, ಎಲುಬಿನಲ್ಲಿ ಖನಿಜಾಂಶಗಳ ನಷ್ಟ ಸೇರಿದಂತೆ ಕಿಡ್ನಿಯ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚು ಎಂದು ಇದು (Protein Powder) ಎಚ್ಚರಿಕೆ ನೀಡಿದೆ.

Shaking protein powder

ಝೀರೋ ಫಿಗರ್‌ ಆಸೆ

ಇದೀಗ ಮುಖ್ಯವಾಗಿ ಸಣ್ಣ ವಯಸ್ಸಿನ ಯುವಕ ಯುವತಿಯರು ದೇಹವನ್ನು ಝೀರೋ ಫಿಗರ್‌ ಮಾಡುವ ಆಸೆಯಿಂದ, ಬಳುಕುವ ಬಳ್ಳಿಯಂತಾಗಲು, ಮಾಂಸಖಂಡಗಳ ಬಲವರ್ಧನೆಗೆ ಪ್ರೊಟೀನ್‌ ಪುಡಿಗಳ ಸೇವನೆ ನಿತ್ಯವೂ ಮಾಡುವುದು ಹೆಚ್ಚಾಗುತ್ತಿದೆ. ಸುಲಭವಾಗಿ ಸಿಗುವ, ಯಾವುದೇ ಕಷ್ಟವಿಲ್ಲದೆ ದುಡ್ಡು ಕೊಟ್ಟರೆ ಸಿಗುವ ಈ ದುಬಾರಿ ಪುಡಿಗಳ ಸೇವನೆಯಿಂದ ಬಹುಬೇಗನೆ ತಾವಂದುಕೊಂಡ ದೇಹವನ್ನು ಪಡೆಯುವುದು ಸಾಧ್ಯವಾಗುತ್ತದೆ ಎಂಬುದೇ ಇದರ ಹಿಂದಿನ ಈ ಮಟ್ಟಿನ ಆಕರ್ಷಣೆ. ಆದರೆ, ಇಂತಹ ಸಂಸ್ಕರಿಸಿ ಪ್ರೊಟೀನ್‌ ಪುಡಿಗಳು ಎಷ್ಟೇ ನೈಸರ್ಗಿಕ ಮೂಲಗಳಿಂದ ತಯಾರಿಸಿದ್ದು ಎಂಬ ಸ್ಪಷ್ಟಣೆ ನೀಡಿದರೂ ಅದರಿಂದ ಅಡ್ಡ ಪರಿಣಾಮಗಳಿದ್ದೇ ಇವೆ ಎಂದಿದೆ. ಭಾರತದಲ್ಲಿ ಈ ಟ್ರೆಂಡ್‌ ದಿನೇ ದಿನೇ ಹೆಚ್ಚಾಗುತ್ತಿದ್ದು, 2023ರಲ್ಲಿ ಪ್ರೊಟೀನ್‌ ಪೌಡರ್‌ ಮಾರುಕಟ್ಟೆ 33000 ಕೋಟಿ ವಹಿವಾಟು ನಡೆಸಿದ್ದು, ಪ್ರತೀ ವರ್ಷ ಇದು ಶೇ.15.8 ರಷ್ಟು ವೃದ್ಧಿ ಕಾಣುತ್ತಿದೆ. 2037ರ ವೇಳೆಗೆ ಇದು 1.28 ಕೋಟಿ ವಹಿವಾಟು ನಡೆಸುವ ಕ್ಷೇತ್ರವಾಗಿ ಇದು ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: World Thyroid Day: ಇಂದು ವಿಶ್ವ ಥೈರಾಯ್ಡ್‌ ದಿನ; ‘ಗಂಟಲ ಚಿಟ್ಟೆ’ಯ ಬಗ್ಗೆ ಈ ಸಂಗತಿ ನಿಮಗೆ ಗೊತ್ತೆ?

ವಿಷಕಾರಿ ಅಂಶಗಳು ಪತ್ತೆ

ಭಾರತದಲ್ಲಿರುವ ಪ್ರೊಟೀನ್‌ ಪೌಡರ್‌ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರಾಂಡ್‌ಗಳ ಪೈಕಿ ಶೇ.70ರಷ್ಟು ಬ್ರ್ಯಾಂಡ್‌ಗಳು ತಪ್ಪಾಗಿ ತಮ್ಮನ್ನು ಲೇಬಲ್‌ ಮಾಡಿಕೊಂಡಿದ್ದು ಜನರನ್ನು ಹಾದಿ ತಪ್ಪಿಸುತ್ತಿವೆ. ಶೇ.14ರಷ್ಟು ಬ್ರ್ಯಾಂಡ್‌ಗಳಲ್ಲಿ ವಿಷಕಾರಿ ಅಂಶಗಳಿದ್ದು, ಶೇ.8ರಷ್ಟು ಬ್ರ್ಯಾಂಡ್‌ಗಳಲ್ಲಿ ಕ್ರಿಮಿನಾಶಕಗಳ ಅಂಶಗಳೂ ಇದ್ದಿರುವುದು ಪತ್ತೆಯಾಗಿವೆ. ಹರ್ಬಲ್‌ ಪ್ರೊಟೀನ್‌ಗಳೆಂಬ ಹೆಸರಿನಲ್ಲಿರುವ ಪುಡಿಗಳ ಪರೀಕ್ಷೆ ಸರಿಯಾಗಿ ನಡೆಯದೆ, ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಹೀಗಾಗಿ, ಇವೆಲ್ಲವುಗಳ ಸೇವನೆಯಿಂದ ಆರೋಗ್ಯ ವೃದ್ಧಿಯಾಗುವುದಕ್ಕಿಂತ ಹೆಚ್ಚು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವೇ ಬೀರುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಆಘಾತಕಾರಿ ಸುದ್ದಿ ಎಂದರೆ, ಆಕ್ಟಿವ್‌ ಆಗಿ ಚುರುಕಾಗಿರುವ ಆರೋಗ್ಯವಂತ ಮಂದಿಯೂ ಇಂದು ವೈದ್ಯರ ಸಲಹೆ ಪಡೆಯದೆ ನೇರವಾಗಿ ಪ್ರೊಟೀನ್‌ ಪುಡಿಗಳ ಸೇವನೆ ಮಾಡುವ ಮೂಲಕ ದೇಹದ ಆರೋಗ್ಯವನ್ನು ಕೈಯಾರೆ ಹಾಳು ಮಾಡುತ್ತಿದ್ದಾರೆ. ಇಂತಹ ಹಲವು ಪುಡಿಗಳಲ್ಲಿ ಸ್ಟೀರಾಯ್ಡ್‌ ಕೂಡಾ ಇರುವ ಸಂಭವಗಳಿರುವುದರಿಂದ ವೃಥಾ ದೇಹವನ್ನು ಕೆಟ್ಟ ಪರಿಸ್ಥಿತಿಗೆ ದೂಡುತ್ತಿರುವುದು ನಿಜಕ್ಕೂ ಆಘಾತಕಾರಿ ಎಂದು ವರದಿ ನೀಡಿರುವ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Continue Reading

ಆರೋಗ್ಯ

Speech Fasting: ಸದಾ ವಟವಟ ಮಾತಾಡ್ತಾ ಇರ್ತೀರಾ? ʼಮೌನವ್ರತʼ ಮಾಡಿ, ಆರೋಗ್ಯ ಸುಧಾರಣೆ ನೋಡಿ!

ಮೌನವ್ರತವೆಂದರೆ ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾಗುತ್ತದೆ. ಆದರೆ ಮೌನಕ್ಕೂ ಚಿಕಿತ್ಸಕ ಗುಣವಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಇದು ಗುಣವಾಗುವುದಕ್ಕೆ ನೆರವಾಗುತ್ತದೆ. ಹಾಗಾಗಿ ಸದಾ ವಟವಟ ಮಾಡುವವರು ನೀವಾದರೆ, ಆಗೀಗ ಮೌನವ್ರತ ಇರಿಸಿಕೊಳ್ಳಿ (Speech Fasting), ಒಳ್ಳೆಯದು!

VISTARANEWS.COM


on

Speech Fasting
Koo

ಇಡೀ ಜಗತ್ತು ಸಂವಹನದ ಸೂತ್ರದಿಂದ ಬಂಧಿಸಲ್ಪಟ್ಟಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇರಲಿ, ಮುಖಾಮುಖಿ ಭೇಟಿ ಇರಲಿ, ಅಂತೂ ಸಂವಹನ ನಡೆಯುತ್ತಲೇ ಇರಬೇಕು. ಅದರಲ್ಲೂ ಮಾತಿಗೆ ಕೂತರೆ ಸಾಮಾನ್ಯಕ್ಕೆ ನಿಲ್ಲಿಸುವುದಿಲ್ಲ ನಾವು. ಧ್ವನಿಪೆಟ್ಟಿಗೆಯನ್ನು ಶೋಷಿಸುತ್ತಲೇ ಇರುತ್ತೇವೆ. ನಮ್ಮ ದೇಹದ ಉಳಿದೆಲ್ಲ ಭಾಗಗಳಂತೆ ಧ್ವನಿ ಪೆಟ್ಟಿಗೆಗೂ ವಿಶ್ರಾಂತಿ ಬೇಕಾಗುತ್ತದೆ. ಅವಿಶ್ರಾಂತವಾಗಿ ಅದನ್ನು ದುಡಿಸುತ್ತಿದ್ದರೆ ಧ್ವನಿಪೆಟ್ಟಿಗೆಗೂ ಕಷ್ಟ ತಪ್ಪಿದ್ದಲ್ಲ. ಹಾಗಾಗಿಯೇ ಹಳೆಯ ಜನಗಳು ಹಲವಾರು ವ್ರತಗಳ ಜೊತೆಗೆ ʻಮೌನವ್ರತʼವನ್ನೂ ಆಗೀಗ ಇರಿಸಿಕೊಳ್ಳುತ್ತಿದ್ದರು. ಮೌನವ್ರತ ಎಂಬುದು ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾದರೂ, ಇದರಿಂದ ಆರೋಗ್ಯಕ್ಕೆ ಲಾಭಗಳಿರುವುದು ಹೌದು. ಏನು ಪ್ರಯೋಜನ (Speech Fasting) ಮೌನದಿಂದ?

young woman covering closed mouth with hands.

ಏನು ಹಾಗೆಂದರೆ?

ಯಾವುದೇ ಧಾರ್ಮಿಕ ಆಚರಣೆಯ ಸಲುವಾಗಿ ಮಾಡುವಂಥ ವ್ರತವಲ್ಲ ಇದು. ಇದನ್ನು ʻವೋಕಲ್‌ ರೆಸ್ಟ್‌ʼ ಅಥವಾ ಧ್ವನಿಪೆಟ್ಟಿಗೆಗೆ ನೀಡುವ ವಿಶ್ರಾಂತಿ ಎಂದು ಕರೆಯಲಾಗುತ್ತದೆ. ನಿಗದಿತ ಸಮಯದಲ್ಲಿ ಮಾತನಾಡದೆ, ಧ್ವನಿಪೆಟ್ಟಿಗೆಯನ್ನು ಯಾವುದಕ್ಕೂ ಬಳಸದೆ ಇರುವುದು ಎಂದು ಅರ್ಥ. ಇದರಿಂದ ಧ್ವನಿಪೆಟ್ಟಿಗೆಯ ಸುಸ್ತು, ಆಯಾಸವೆಲ್ಲ ಕಡಿಮೆಯಾಗಿ, ದುರಸ್ತಿಯಾಗಲು ಅನುಕೂಲವಾಗುತ್ತದೆ. ಹಾಡುಗಾರರು, ನಟರು, ಪ್ರವಚನ ನೀಡುವವರು, ಉಪನ್ಯಾಸಕರು ಇತ್ಯಾದಿ ಧ್ವನಿಯನ್ನೇ ಪ್ರಧಾನವಾಗಿ ಬಳಸುವವರು ಈ ತಂತ್ರಗಳನ್ನು ಅಳವಡಿಸಿಕೊಂಡರೆ ಅನುಕೂಲವಾದೀತು. ಹಾಡು, ಮಾತು, ಪಿಸುಮಾತಿಗೂ ಸದಾ ಕಾಲ ಕಂಪಿಸುತ್ತಲೇ ಇರುವ ಧ್ವನಿಪೆಟ್ಟಿಗೆಗೆ ಸುಸ್ತಾಗುತ್ತದೆ. ಇದರಿಂದ ಧ್ವನಿ ಬೀಳುವುದು, ಗಂಟಲು ಉಬ್ಬಿದಂತಾಗಿ ನೋವು ಕಾಣುವುದು ಸಾಮಾನ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಹಾನಿಯಾಗುತ್ತದೆ. ಅದನ್ನು ವಿಶ್ರಾಂತಿಗೆ ದೂಡಿದಾಗ ಆಗುವ ಅನುಕೂಲಗಳು ಬಹಳಷ್ಟು.

Children speech therapy concept.

ಆರೋಗ್ಯ ಮರಳಿಸುತ್ತದೆ

ದೇಹದ ಯಾವುದೇ ಭಾಗಕ್ಕೂ ಅತಿ ಬಳಕೆಯಿಂದ ಆಯಾಸವಾದರೆ ವಿಶ್ರಾಂತಿ ಅಗತ್ಯವಾಗುತ್ತದೆ. ಹೀಗೆ ಮಾತಿನ ಉಪವಾಸದ ಮೂಲಕ ವಿಶ್ರಾಂತಿ ನೀಡುವುದರಿಂದ ಕಳೆದು ಹೋದ ಆರೋಗ್ಯ ಮರಳು ದೊರೆಯುವುದಕ್ಕೆ ಸಾಧ್ಯ. ಇದು ಧ್ವನಿಪೆಟ್ಟಿಗೆಯ ವಿಷಯದಲ್ಲೂ ಹೌದು. ಧ್ವನಿ ಪೆಟ್ಟಿಗೆಯಲ್ಲಿನ ಊತ, ಕಿರಿಕಿರಿ ಮುಂತಾದವುಗಳನ್ನು ಗುಣಪಡಿಸಬಹುದು.

ಗುಣಮಟ್ಟ ಸುಧಾರಣೆ

ಪದೇಪದೆ ಧ್ವನಿ ಬೀಳುತ್ತಿದ್ದರೆ, ಧ್ವನಿಯ ಗುಣಮಟ್ಟ ಹಾಳಾಗಿದ್ದರೆ, ಶೃತಿಯ ಸಮಸ್ಯೆಯಿದ್ದರೆ, ಸ್ಪಷ್ಟತೆ ಕಡಿಮೆಯಿದ್ದರೆ- ಇಂಥ ಎಲ್ಲ ಸಮಸ್ಯೆಗಳಿಗೆ ಮೌನ ಅಥವಾ ಧ್ವನಿಪೆಟ್ಟಿಗೆಯ ವಿಶ್ರಾಂತಿ ಮದ್ದಾಗಬಲ್ಲದು. ಧ್ವನಿ ಚಿಕಿತ್ಸೆಯಲ್ಲಿ ಮೌನವನ್ನೂ ಒಂದು ಸಾಧನವಾಗಿ ಬಳಸಲಾಗುತ್ತದೆ. ಇದರಿಂದ ಧ್ವನಿಯ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸಲು ಸಾಧ್ಯವಿದೆ.

ಹಾನಿ ಕಡಿಮೆ

ಧ್ವನಿಪೆಟ್ಟಿಗೆಯನ್ನು ಅತಿಯಾಗಿ ಮತ್ತು ಸತತ ಬಳಸುವುದರಿಂದ ಧ್ವನಿಪೆಟ್ಟಿಗೆಯಲ್ಲಿ ನಾಡ್ಯೂಲ್‌ ಅಥವಾ ಪಾಲಿಪ್‌ಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಧ್ವನಿಪೆಟ್ಟಿಗೆಗೆ ಹಾನಿ ಆಗುವ ಸಂಭವ ಇರುತ್ತದೆ. ಹಾಗಾಗಿ ಚಿಕಿತ್ಸಕ ಉದ್ದೇಶದಿಂದ ಮೌನ ವಹಿಸುವುದರಿಂದ ಇಂಥ ಹಾನಿಯನ್ನು ಕಡಿಮೆ ಮಾಡಲು ಸಾಧ್ಯವಿದೆ.

Mood Enhancement Dark Chocolate Benefits

ಮಾನಸಿಕ ನೆಮ್ಮದಿ

ಹೊರಗಿನ ವ್ಯವಹಾರವನ್ನು ಕೊಂಚ ನಿಲ್ಲಿಸಿದರೆ, ಒಳಗಿನ ಮನೋವ್ಯಾಪಾರಕ್ಕೆ ತೆರೆದುಕೊಳ್ಳುವುದಕ್ಕೆ ಸಾಧ್ಯ. ನಮ್ಮ ಬಗ್ಗೆ ನಮಗೆ ತಿಳಿಯುವುದಕ್ಕೆ, ನಾವೇನು ಮಾಡುತ್ತಿದ್ದೇವೆ, ಅದನ್ನು ಯಾಕಾಗಿ ಮಾಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೌನ ಸಾಧನವಾಗಬಲ್ಲದು. ಮಾನಸಿಕ ನೋವುಗಳನ್ನು ದೂರಮಾಡಿ, ಸಾಂತ್ವನಕ್ಕೆ ನಮ್ಮೊಳಗೇ ಜಾಗ ಮಾಡಿಕೊಡುತ್ತದೆ.

ಇದನ್ನೂ ಓದಿ: Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಹೇಗೆ ಮಾಡಬೇಕು?

ಧ್ವನಿಗೆ ಎಷ್ಟು ಸಮಸ್ಯೆಯಾಗಿದೆ ಎಂಬುದರ ಮೇಲೆ ಎಷ್ಟು ಹೊತ್ತು ವಿಶ್ರಾಂತಿ ನೀಡಬೇಕು ಎಂಬುದನ್ನು ನಿರ್ಧರಿಸಬಹುದು. ದಿನದ ಒಂದಿಷ್ಟು ತಾಸು, ಇಡೀ ದಿನ, ವಾರದಲ್ಲಿ ಪ್ರತಿದಿನದ ಒಂದಿಷ್ಟು ಹೊತ್ತು- ಹೀಗೆ. ಮಾತಾಡುವುದಿಲ್ಲ ಎಂದರೆ ಗುನುಗಬಹುದು, ಪಿಸು ಮಾತಾಡಬಹುದು ಎಂದು ಅರ್ಥವಲ್ಲ, ಧ್ವನಿಪೆಟ್ಟಿಗೆಗೆ ಸಂಪೂರ್ಣ ವಿಶ್ರಾಂತಿ ನೀಡಬೇಕು. ಮೌನ ಮುರಿದ ಹೊತ್ತಿನಲ್ಲೂ ಸಿಕ್ಕಾಪಟ್ಟೆ ಕೂಗುವುದು, ಕಿರುಚುವುದು ಸಲ್ಲದು. ದಿನಕ್ಕೆ 3-4 ಲೀಟರ್‌ ನೀರು ಕುಡಿಯುವುದು ಅಗತ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಬೇಕಾದ ತೇವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಮ್ಮುವುದು, ಕ್ಯಾಕರಿಸುವುದು ಇತ್ಯಾದಿಗಳನ್ನು ಮಾಡುವ ಅಗತ್ಯವಿದ್ದರೆ, ನೆಗಡಿಯ ಸಮಸ್ಯೆಯಿದ್ದರೆ, ಬೆಚ್ಚಗಿನ ಉಪ್ಪು ನೀರಿನಿಂದ ಗಂಟಲನ್ನು ಚೆನ್ನಾಗಿ ಗಾರ್ಗಲ್‌ ಮಾಡುವುದು ಒಳ್ಳೆಯದು.

Continue Reading
Advertisement
Snake
ಕರ್ನಾಟಕ1 hour ago

Snake: ಸ್ಟ್ಯಾಂಡ್‌ನಲ್ಲಿಟ್ಟಿದ್ದ ಚಪ್ಪಲಿಯೊಳಗೆ ಕೂತಿದ್ದ ಬುಸ್‌ ಬುಸ್‌ ನಾಗಪ್ಪ; ಸ್ವಲ್ಪ ಹುಷಾರಾಗಿರ‍್ರಪ್ಪ! Video ಇಲ್ಲಿದೆ

Varanasi
ದೇಶ2 hours ago

Varanasi: ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಏನಂತಾರೆ? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್‌ ರಿಪೋರ್ಟ್!

Virat kohli
ಕ್ರೀಡೆ2 hours ago

Virat Kohli : ಐಪಿಎಲ್​ 2024ರ ಆರೆಂಜ್ ಕ್ಯಾಪ್ ಗೆದ್ದು ಹೊಸ ದಾಖಲೆ ಬರೆದ ವಿರಾಟ್​ ಕೊಹ್ಲಿ

IPL 2024 Final
ಪ್ರಮುಖ ಸುದ್ದಿ3 hours ago

IPL 2024 Final : 3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್​​; ಹೈದರಾಬಾದ್​ಗೆ ನಿರಾಸೆ

The Kapil Sharma Show
ದೇಶ3 hours ago

Physical Abuse: ಕಪಿಲ್‌ ಶರ್ಮಾ ಶೋನಲ್ಲಿ ಪಾತ್ರ ಕೊಡುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ

IPL 2024
ಕ್ರೀಡೆ3 hours ago

IPL 2024 Final : ಐಪಿಎಲ್ ಫೈನಲ್​​ನಲ್ಲಿ ಕಡಿಮೆ ಸ್ಕೋರ್​ನ ಕಳಪೆ ದಾಖಲೆ ಬರೆದ ಸನ್​ರೈಸರ್ಸ್​ ಹೈದರಾಬಾದ್​​

Hardik Pandya
ಕ್ರೀಡೆ4 hours ago

Hardik Pandya : ಡೈವೋರ್ಸ್​ ಗಾಸಿಪ್​ ನಡುವೆ ಹಾರ್ದಿಕ್ ಪಾಂಡ್ಯ ನಾಪತ್ತೆ!

Rain News
ಕರ್ನಾಟಕ4 hours ago

Rain News: ಮಳೆ ಅವಾಂತರ; ಮನೆಯ ಶೀಟ್‌ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು

Phalody Satta Bazar
ದೇಶ4 hours ago

Phalodi Satta Bazar: ಮೋದಿಗೆ 330 ಸೀಟು ಖಚಿತ ಎಂದ ಸಟ್ಟಾ ಬಜಾರ್‌ ಸಮೀಕ್ಷೆ; ರಾಜ್ಯವಾರು ವರದಿ ಇಲ್ಲಿದೆ

Shivamogga News
ಕರ್ನಾಟಕ5 hours ago

Shivamogga News: ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಹುಚ್ಚಾಟ ಮೆರೆದ ಯುವಕ; ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು8 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌