Coriander Benefits For Beauty: ನಿಮ್ಮೆಲ್ಲ ಸೌಂದರ್ಯ ಸಮಸ್ಯೆಗಳಿಗೂ ಕೊತ್ತಂಬರಿ ಸೊಪ್ಪಿನಲ್ಲಿದೆ ಸರಳ ಪರಿಹಾರ! - Vistara News

ಆರೋಗ್ಯ

Coriander Benefits For Beauty: ನಿಮ್ಮೆಲ್ಲ ಸೌಂದರ್ಯ ಸಮಸ್ಯೆಗಳಿಗೂ ಕೊತ್ತಂಬರಿ ಸೊಪ್ಪಿನಲ್ಲಿದೆ ಸರಳ ಪರಿಹಾರ!

Coriander Benefits For beauty: ಕೊತ್ತಂಬರಿ ಸೊಪ್ಪು ಕೇವಲ ನಿಮ್ಮ ನಿತ್ಯದ, ಸಾರು, ಸಾಂಬಾರು ಸಬ್ಜಿಗಳಿಗೆ, ಬಿರಿಯಾನಿ ಪಲಾವುಗಳ ಮೇಲೆ ಕೇವಲ ಅಲಂಕಾರಕ್ಕೆ ಕತ್ತರಿಸಿ ಹಾಕುವ ಸೊಪ್ಪೆಂದು ತಿಳಿದುಕೊಂಡಿರುವುದೇ ಈ ಅವಜ್ಞೆಗೆ ಕಾರಣ. ಇದನ್ನು ಸರಿಯಾಗಿ ಬಳಸಿದಿರೆಂದರೆ, ನಿಮ್ಮ ಎಷ್ಟೋ ನಿತ್ಯದ ಸಮಸ್ಯೆಗಳು ಚಿಟಿಕೆ ಹೊಡೆದಷ್ಟು ಸುಲಭವಾಗಿ ಮಾಯವಾಗಬಹುದು. ಆದರೆ ನಿಯಮಿತವಾಗಿ ಬಳಸುವುದು ಬಹಳ ಮುಖ್ಯ. ಇಲ್ಲಿದೆ ಆ ಕುರಿತ ಮಾಹಿತಿ.

VISTARANEWS.COM


on

Coriander Benefits For Beauty
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಿಮ್ಮ ಮನೆಯ ಫ್ರಿಡ್ಜ್‌ನ ಮೂಲೆಯಲ್ಲಿ ಸದಾ ಒಣಗುತ್ತಾ ಬಿದ್ದಿರುವ ಕೊತ್ತಂಬರಿ ಸೊಪ್ಪಿನ ಬದುಕು ಕೇವಲ ಇಷ್ಟೇ ಎಂದು ನೀವು ತಿಳಿದಿದ್ದರೆ, ನೀವು ಅದರ ಅದ್ಭುತ ಸಾಧ್ಯತೆಗಳನ್ನು ನಿರ್ಲಕ್ಷಿಸಿದ್ದೀರಿ ಎಂದರ್ಥ. ಯಾಕೆಂದರೆ ಕೊತ್ತಂಬರಿ ಸೊಪ್ಪಿನಷ್ಟು ನಿರ್ಲಕ್ಷ್ಯಕ್ಕೆ ಒಳಗಾದ, ನಿತ್ಯೋಪಯೋಗಿ ವಸ್ತು ಇನ್ನೊಂದಿರಲಿಕ್ಕಿಲ್ಲ. ಕೊತ್ತಂಬರಿ ಸೊಪ್ಪು ಕೇವಲ ನಿಮ್ಮ ನಿತ್ಯದ, ಸಾರು, ಸಾಂಬಾರು ಸಬ್ಜಿಗಳಿಗೆ, ಬಿರಿಯಾನಿ ಪಲಾವುಗಳ ಮೇಲೆ ಕೇವಲ ಅಲಂಕಾರಕ್ಕೆ ಕತ್ತರಿಸಿ ಹಾಕುವ ಸೊಪ್ಪೆಂದು ತಿಳಿದುಕೊಂಡಿರುವುದೇ ಈ ಅವಜ್ಞೆಗೆ ಕಾರಣ. ಇದನ್ನು ಸರಿಯಾಗಿ ಬಳಸಿದಿರೆಂದರೆ, ನಿಮ್ಮ ಎಷ್ಟೋ ನಿತ್ಯದ ಸಮಸ್ಯೆಗಳು (Coriander Benefits For beauty) ಚಿಟಿಕೆ ಹೊಡೆದಷ್ಟು ಸುಲಭವಾಗಿ ಮಾಯವಾಗಬಹುದು. ಆದರೆ ನಿಯಮಿತವಾಗಿ ಬಳಸುವುದು ಬಹಳ ಮುಖ್ಯ.

Coriander Benefits

ಸಾಕಷ್ಟು ಪೋಷಕಾಂಶಗಳಿವೆ

ಅತ್ಯಂತ ಗಾಢ ಪರಿಮಳವನ್ನು ಹೊಂದಿರುವ ಕೊತ್ತಂಬರಿ ಸೊಪ್ಪಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ವಿಟಮಿನ್‌ ಎ, ಸಿ ಖನಿಜ ಲವಣಗಳು, ಪ್ರೊಟೀನ್‌ ನಾರಿನಂಶ ಎಲ್ಲವೂ ಇರುವ ಸಮೃದ್ಧವಾದ ಸೊಪ್ಪಿದು. ಹಾಗಾಗಿ ತೂಕ ಇಳಿಕೆಗೆ, ಕಣ್ಣಿನ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಾಗಲು, ಪಚನಶಕ್ತಿ ಚುರುಕಾಗಲು ಹೀಗೆ ನಾನಾ ಆರೋಗ್ಯದ ಲಾಭಗಳಿಗೆ ಇದರಿಂದ ಭರಪೂರ ಉಪಯೋಗಗಳಿವೆ. ಕಬ್ಬಿಣ ಸತ್ವವೂ ಹೇರಳವಾಗಿರುವ ಇದು ರಕ್ತದಲ್ಲಿ ಹಿಮೋಗ್ಲೋಬೊನ್‌ ಹೆಚ್ಚಾಗಲೂ ಸಹಾಯ ಮಾಡುತ್ತದೆ. ಅನೀಮಿಯಾ ಸಮಸ್ಯೆ ಇರುವ ಮಂದಿಗೂ ಇದು ಅತ್ಯುತ್ತಮ ಅಹಾರ.

ಹಸಿ ಎಲೆ ಜಗಿಯಿರಿ

ನಿತ್ಯವೂ ಒಂದೆರಡು ಹಸಿ ಎಲೆಗಳನ್ನು ಬಾಯಲ್ಲಿ ಹಾಕಿ ಜಗಿಯುವ ಅಭ್ಯಾಸ ಇಟ್ಟುಕೊಂಡರೆ ಅದರಿಂದಲೂ ಸಾಕಷ್ಟು ಉಪಯೋಗಗಳನ್ನು ಪಡೆಯಬಹುದು. ಆದರೆ, ಮುಖ್ಯವಾಗಿ ಮಹಿಳೆಯರೂ ಸೇರಿದಂತೆ ಎಲ್ಲರೂ ಅನುಭವಿಸುವ ಚರ್ಮದ ಸಮಸ್ಯೆಗಳಿಗೂ ನಿಮ್ಮ ಫ್ರಿಡ್ಜ್‌ನ ಮೂಲೆಯಲ್ಲಿ ನರಳುತ್ತಿರುವ ಕೊತ್ತಂಬರಿ ಸೊಪ್ಪಿನಿಂದ ಪರಿಹಾರವಿದೆ ಎಂದಾದರೆ, ನೀವು ಖಂಡಿತ ಇನ್ನು ಸೊಪ್ಪನ್ನು ಹಾಗೆ ಮೂಲೆಯಲ್ಲಿ ಒಣಗಲು ಬಿಡುವುದಿಲ್ಲ.
ಚರ್ಮ ತಜ್ಞರು ಹೇಳುವ ಪ್ರಕಾರ, ಕೊತ್ತಂಬರಿ ಸೊಪ್ಪಿನಲ್ಲಿ ಚರ್ಮದ ಆರೋಗ್ಯಕ್ಕೆ ಮ್ಯಾಜಿಕ್‌ನ ರೀತಿಯ ಉತ್ತರವಿದೆ. ನಿಮ್ಮ ಚರ್ಮ ಎಂಥದ್ದೇ ಅಗಿರಬಹುದು, ಅದಕ್ಕೆ ಪೂರಕವಾಗಿರುವ ಸಮಸ್ಯೆಗಳಿಗೆಲ್ಲ ಇದರಲ್ಲಿ ಉತ್ತರವಿದೆಯಂತೆ. ಇದರ ಸೇವನೆ ಉತ್ತಮ ಡಿಟಾಕ್ಸ್‌ ತರಹದಲ್ಲಿ ವರ್ತಿಸುತ್ತದೆ. ಚರ್ಮದ ಎಕ್ಸಿಮಾದಂತಹ ಸಮಸ್ಯೆಗಳಿಗೂ ಇದರ ಬಳಿ ಉತ್ತರವಿದೆ. ಕೊತ್ತಂಬರಿ ಸೊಪ್ಪಿನ ಸೇವನೆಯಿಂದ ಅಸಿಡಿಟಿ ಪರಿಹಾರವಾಗುವ ಕಾರಣ, ಅಸಿಡಿಟಿಯ ಕಾರಣದಿಂದ ಚರ್ಮದಲ್ಲಿ ಉಂಟಾಗುವ ಕೆಂಪಾಗುವಿಕೆ, ಉಬ್ಬುಗಳು ಕಡಿಮೆಯಾಗುತ್ತವೆ. ಆಗಾಗ ಚರ್ಮದ ಮೇಲೆ ಉಂಟಾಗುವ ಇಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಕೊತ್ತಂಬರಿ ಸೊಪ್ಪನ್ನು ಶ್ರೀಗಂಧ, ಚಂದನ ಹಾಗೂ ಓಟ್‌ಮೀಲ್‌ ಜೊತೆ ಸೇರಿಸಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಅಲರ್ಜಿಯಂತಹ ಸಮಸ್ಯೆಯಿಂದ ಉಂಟಾಗುವ ಕಜ್ಜಿ, ಒಣಗುವಿಕೆ ಮತ್ತಿತರ ಸಮಸ್ಯೆಗಳು ಪರಿಹಾರವಾಗುತ್ತದೆ.

coriander leaves

ಕೊತ್ತಂಬರಿ ಸೊಪ್ಪನ್ನು ಬಗೆಬಗೆಯ ಫೇಸ್‌ ಪ್ಯಾಕ್‌ ಮಾಡಿ ಹಚ್ಚಿಕೊಳ್ಳುವುದರಿಂದಲೂ ಅನೇಕ ಚರ್ಮದ ಸಮಸ್ಯೆಗೆ ಪರಿಹಾರ ಪಡೆಯಬಹುದು. ಕೊತ್ತಂಬರಿ ಸೊಪ್ಪಿನೊಂದಿಗೆ ಅಲೊವೆರಾ ಸೇರಿಸಿ ಹಚ್ಚುವುದರಿಂದ ಚರ್ಮ ಸುಕ್ಕಾಗುವಿಕೆಗೆ ಉತ್ತಮ ಫಲ ಕಾಣಬಹುದು. ನಿಂಬೆಹಣ್ಣಿನ ರಸವನ್ನು ಕೊತ್ತಂಬರಿ ಸೊಪ್ಪಿನ ಪೇಸ್ಟ್‌ಗೆ ಸೇರಿಸಿ ಹಚ್ಚುವುದರಿಂದ ಚರ್ಮಕ್ಕೆ ಬೇಕಾದ ಸಿ ವಿಟಮಿನ್‌ ಸಿಗುವುದರಿಂದ ಮೊಡವೆಯ ಕಲೆಗಳು, ಬ್ಲ್ಯಾಕ್‌ಹೆಡ್‌ಗಳು ಮತ್ತಿತರ ಸಮಸ್ಯೆಗೆ ಉತ್ತರ ದೊರೆಯುತ್ತದೆ. ಕೊತ್ತಂಬರಿ ಸೊಪ್ಪು, ಹಾಲು, ಜೇನುತುಪ್ಪ, ನಿಂಬೆ ಹಣ್ಣಿನ ರಸ ಸೇರಿಸಿಯೂ ಹಚ್ಚಬಹುದು. ಇದರಿಂದ ಚರ್ಮ ಆರೋಗ್ಯಪೂರ್ಣವಾಗಿ ಫಳಫಳಿಸಬಹುದು.

ಇದನ್ನೂ ಓದಿ: Cholesterol Management Tips: ಕೊಲೆಸ್ಟ್ರಾಲ್‌ ಹೆಚ್ಚಿದೆಯೇ? ಬೆಳ್ಳುಳ್ಳಿಯ ಈ ಉಪಾಯ ಗೊತ್ತಿರಲಿ!

ಚರ್ಮಕ್ಕೆ ಮಸಾಜ್ ಮಾಡಿ

ಕೊತ್ತಂಬರಿ ಸೊಪ್ಪು, ಅಕ್ಕಿ ಹಿಟ್ಟು ಹಾಗೂ ಮೊಸರು ಸೇರಿಸಿ ಹಚ್ಚು, ನಂತರ ತೊಳೆಯುವಾಗ ಸ್ಕ್ರಬ್‌ ಮಾಡಿಕೊಂಡು ತೊಳೆದರೆ ಚರ್ಮಕ್ಕೆ ಒಳ್ಳೆಯ ಮಸಾಜ್‌ ಸಿಕ್ಕಿ, ಮುಖದ ಚರ್ಮದ ಸ್ನಾಯುಗಳೆಲ್ಲ ರಿಲ್ಯಾಕ್ಸ್‌ ಆಗುತ್ತವೆ. ಚರ್ಮಕ್ಕೆ ರಕ್ತಪೂರಣವಾಗಿ ಚರ್ಮ ಆರೋಗ್ಯದ ಕಳೆಯಿಂದ ನಳನಳಿಸುತ್ತದೆ. ವಾಋಕ್ಕೊಮ್ಮೆ ಹೀಗೆ ಮಾಡುವುದರಿಂದ ಒಳ್ಳೆಯ ಫಲ ಕಾಣಬಹುದು. ತುಟಿಯ ಚರ್ಮ ಕಪ್ಪಾಗಿದ್ದರೆ, ಕೊತ್ತಂಬರಿ ಸೊಪ್ಪಿನ ರಸಕ್ಕೆ ಕೊಂಚ ಅಲೊವೆರಾ ಜೆಲ್‌ ಸೇರಿಸಿ ಹಚ್ಚುವ ಮೂಲಕ ಮತ್ತೆ ಪಿಂಕ್‌ ತುಟಿಗಳನ್ನು ನೀವು ಪಡೆಯಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Belagavi News: ಸ್ವಾತಂತ್ರ್ಯ ದಿ‌ನಾಚರಣೆಯಂದು ಅಂಗಾಂಗ ದಾನಿಗಳ ಕುಟುಂಬಗಳಿಗೆ ಗೌರವ; ದಿ‌ನೇಶ್ ಗುಂಡೂರಾವ್

Belagavi News: ಸಾವಿನ ಅಂಚಿನಲ್ಲಿರುವಾಗ ಇನ್ನೊಬ್ಬರ ಜೀವ ಉಳಿಸಲು ಅಂಗಾಂಗ ದಾನ ಮಾಡುವ ನಿರ್ಣಯ ಕೈಗೊಳ್ಳುವುದು ನಿಜಕ್ಕೂ ಪುಣ್ಯದ ಕೆಲಸ. ಅಂಗಾಂಗಗಳಿಗೆ ಇಂದು ಹೆಚ್ಚು ಬೇಡಿಕೆಯಿದೆ.‌ ಆದರೆ ಬೇಡಿಕೆಗೆ ತಕ್ಕಂತೆ ಅಂಗಾಂಗಗಳ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸುಮಾರು 8500 ರೋಗಿಗಳು ಇಂದು ಅಂಗಾಂಗಗಳಿಗೆ ಕಾಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ನಾವೆಲ್ಲರು ಇಂದು ಪ್ರತಿಜ್ಞೆ ಮಾಡಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

VISTARANEWS.COM


on

Indian Organ Donation Day program inauguration by Minister Dinesh Gundurao at Belagavi
Koo

ಬೆಳಗಾವಿ: ದೇಶದಲ್ಲಿಯೇ ಅಂಗಾಂಗ ದಾನದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ, ದಾನಿಗಳ ಸಂಖ್ಯೆ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Belagavi News) ತಿಳಿಸಿದರು.

ಆರೋಗ್ಯ ಇಲಾಖೆಯ ವತಿಯಿಂದ ಬೆಳಗಾವಿಯಲ್ಲಿ ಇಂದು ಹಮ್ಮಿಕೊಂಡಿದ್ದ ಭಾರತೀಯ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಗಾಂಗ ದಾನಿಗಳ ಕುಟುಂಬಗಳನ್ನು ಸನ್ಮಾನಿಸಿ, ಗೌರವಿಸುವುದರ ಜತೆಗೆ ರಾಜ್ಯ ಸರ್ಕಾರದ ಪ್ರಶಂಸಾ ಪತ್ರ ವಿತರಿಸಿ ಅವರು ಮಾತನಾಡಿದರು.

ಸಾವಿನ ಅಂಚಿನಲ್ಲಿರುವಾಗ ಇನ್ನೊಬ್ಬರ ಜೀವ ಉಳಿಸಲು ಅಂಗಾಂಗ ದಾನ ಮಾಡುವ ನಿರ್ಣಯ ಕೈಗೊಳ್ಳುವುದು ನಿಜಕ್ಕೂ ಪುಣ್ಯದ ಕೆಲಸ. ಅಂಗಾಂಗಗಳಿಗೆ ಇಂದು ಹೆಚ್ಚು ಬೇಡಿಕೆಯಿದೆ.‌ ಆದರೆ ಬೇಡಿಕೆಗೆ ತಕ್ಕಂತೆ ಅಂಗಾಂಗಗಳ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸುಮಾರು 8500 ರೋಗಿಗಳು ಇಂದು ಅಂಗಾಂಗಗಳಿಗೆ ಕಾಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ನಾವೆಲ್ಲರು ಇಂದು ಪ್ರತಿಜ್ಞೆ ಮಾಡಬೇಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇದನ್ನೂ ಓದಿ: 2nd PUC Exam Result 2024: ದ್ವಿತೀಯ ಪಿಯುಸಿ ಪರೀಕ್ಷೆ-1, 2, 3ರಲ್ಲಿ ಒಟ್ಟಾರೆ ಶೇ. 84.87 ವಿದ್ಯಾರ್ಥಿಗಳು ಪಾಸ್; ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ

ಅಂಗಾಂಗ ದಾನವನ್ನು ಪ್ರೇರಿಪಸಲು ಆರೋಗ್ಯ ಇಲಾಖೆ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದೆ.‌ ಅಂಗಾಂಗ ದಾನಿಗಳ ಕುಟುಂಬಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಾಕಿಕೊಂಡಿದ್ದು, ಇನ್ನು ಮುಂದೆ ದಾನಿಗಳ ಮನೆಗಳಿಗೇ ಆರೋಗ್ಯ ಇಲಾಖೆ ಅಧಿಕಾರಿಗಳು ತೆರಳಿ ಸನ್ಮಾನಿಸಲಿದ್ದಾರೆ. ಅಲ್ಲದೇ ವಿಶೇಷವಾಗಿ ಸ್ವಾತಂತ್ರ್ಯ ದಿನಾಚಾರಣೆಯ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಅಂಗಾಂಗ ದಾನಿಗಳನ್ನು ಸನ್ಮಾನಿಸಿ, ಗೌರವಿಸುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಸಚಿವರು ತಿಳಿಸಿದರು.

ಅಂಗಾಂಗ ದಾನಕ್ಕೆ ಯಾವುದೇ ಧರ್ಮದಲ್ಲಿ ಅಡ್ಡಿ ಇಲ್ಲ. ಅಂಗಾಂಗ ದಾನ ಮಾಡಿದರೆ ಪುನರ್ಜನ್ಮಕ್ಕೆ ತೊಂದರೆಯಾಗುತ್ತೆ ಎಂಬ ಕೆಲ ಮೂಢನಂಬಿಕೆಗಳು ಜನರಲ್ಲಿವೆ. ಪುನರ್ಜನ್ಮ ಗ್ಯಾರಂಟಿ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಆದರೆ ನೀವು ಮಾಡುವ ಅಂಗಾಂಗ ದಾನದಿಂದ ಇನ್ನೊಬ್ಬರ ಜೀವ ಉಳಿಯುವುದು ಗ್ಯಾರಂಟಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇದನ್ನೂ ಓದಿ: Moon: ಭೂಮಿಯಿಂದ ದೂರ ಹೊರಟ ಚಂದ್ರ, ಶೀಘ್ರದಲ್ಲೇ ದಿನಕ್ಕೆ 24 ಅಲ್ಲ 25 ಗಂಟೆಗಳು ಇರಲಿವೆ!

ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿ

2023 ನೇ ಸಾಲಿನಲ್ಲಿ 178 ಅಂಗಾಂಗ ದಾನ ನಡೆದಿದ್ದು, ಕರ್ನಾಟಕ ರಾಜ್ಯವು ದೇಶದಲ್ಲಿ 2ನೇ ಸ್ಥಾನದಲ್ಲಿದೆ.‌ ಆದರೆ ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಸಂಖ್ಯೆಗೂ ಅಂಗಾಂಗಗಳ ಪೂರೈಕೆಗೂ ಅಜಗಜಾಂತರ ಅಂತರವಿದೆ. ಅತ್ಯಂತ ಬೇಡಿಕೆಯುಳ್ಳ, ಅಂಗ ಎಂದರೆ ಮೂತ್ರಪಿಂಡ, ಒಟ್ಟಾರೆಯಾಗಿ 8,500 ಕ್ಕೂ ಹೆಚ್ಚು ಜನರು ಅಂಗಾಂಗಳಿಗಾಗಿ ಜೀವಸಾರ್ಥಕತೆಯಲ್ಲಿ ನೋಂದಾಯಿಸಿಕೊಂಡಿರುತ್ತಾರೆ.

ಮೆದುಳು ನಿಷ್ಕ್ರಿಯವಾದ ಒಬ್ಬ ಮಾನವನ ಅಂಗಾಂಗ ದಾನ ಮಾಡುವುದರ ಮೂಲಕ 8 ಜನರ ಜೀವ ಉಳಿಸಬಹುದಾಗಿದೆ. ಚರ್ಮ, ಮೂಳೆ, ಅಸ್ಥಿಮಜ್ಜೆ, ಹೃದಯದ ಕವಾಟಗಳು ಇತ್ಯಾದಿ ಅಂಗಾಂಶಗಳನ್ನು ದಾನ ಮಾಡುವುದರ ಮೂಲಕ 50ಕ್ಕೂ ಹೆಚ್ಚು ರೋಗಿಗಳಿಗೆ ಗುಣಮಟ್ಟದ ಜೀವನ ನೀಡಬಹುದು.

ಅಂಗಾಂಗ ದಾನ ಪ್ರತಿಜ್ಞೆಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯವು ಮೂರನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ 63 ಸಾವಿರಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿರುತ್ತಾರೆ. ಪ್ರತಿಜ್ಞೆ ಮಾಡುವುದರಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. QR code scan ಮಾಡುವ ಮೂಲಕ ಎಲ್ಲಿಂದಲಾದರೂ ನೀವು ಬಯಸಿದ ಅಂಗಾಂಗಗಳು ಮತ್ತು ಅಂಗಾಂಶಗಳ ದಾನಕ್ಕೆ ಪ್ರತಿಜ್ಞೆ ಮಾಡಬಹುದಾಗಿದೆ.

ರಾಜ್ಯದಲ್ಲಿ ಸುಮಾರು 78ಕ್ಕೂ ಹೆಚ್ಚು ಅಂಗಾಂಗ ಕಸಿ ಕೇಂದ್ರ ಜೀವಸಾರ್ಥಕತೆ ಅಡಿಯಲ್ಲಿ ನೋಂದಾಯಿಸಿಕೊಂಡಿರುತ್ತವೆ. ಇದರಲ್ಲಿ ಬೆಳಗಾವಿ ವಿಭಾಗದಲ್ಲಿ ಏಳು ಆಸತ್ರೆಗಳಲ್ಲಿ ಅಂಗಾಂಗ ಕಸಿ ಮಾಡಲಾಗುತ್ತದೆ. ಬೆಳಗಾವಿಯಲ್ಲಿನ ಕೆ.ಎಲ್.ಇ ಆಸತ್ರೆ, ಕಿಡ್ನಿ, ಲಿವರ್, ಹೃದಯ ಅಂಗಾಂಗ ಕಸಿ ಸೌಲಭ್ಯ ಲಭ್ಯವಿದೆ.

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಇದುವರೆಗೂ 27 ಕಿಡ್ನಿ (Kidney) ಅಂಗಾಂಗ ಕಸಿ ಮಾಡಲಾಗಿದೆ.. ಎಲ್ಲಾ ವೈದ್ಯಕೀಯ ಕಾಲೇಜಿನ ಆಸತ್ರೆಗಳನ್ನು ಜಿಲ್ಲಾ ಆಸತ್ರೆಗಳನ್ನು NTHORC-Non Transplant Human Organ Retrieval Centers ಆಗಿ ಸ್ಥಾಪಿಸಲು ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ.

ಈಗಾಗಲೇ 26 NTHORC ಗಳನ್ನು ನೋಂದಾಯಿಸಲಾಗಿದೆ. ಅವುಗಳಲ್ಲಿ ನಿಮಾನ್ಸ್, ಬೆಂಗಳೂರು ವೈದ್ಯಕೀಯ ಕಾಲೇಜಿನ ಟ್ರಾಮಾ ಕೇರ್ ಕೂಡ ಸೇರಿದೆ. Institute Of Nephro Urology (NU) ಮತ್ತು Institute of Gastroenterology Sciences & Organ Transplant (IGOT) ನಡೆಯುತ್ತಿವೆ. ಇಲ್ಲಿಯವರೆಗೆ 281 ಬಿಪಿಎಲ್ ರೋಗಿಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಅಂಗಾಂಗ ಕಸಿ ವೆಚ್ಚ ಭರಿಸಲಾಗಿದೆ.

ಇದನ್ನೂ ಓದಿ: KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

ಯಾವ ಧರ್ಮದಲ್ಲೂ ಅಂಗಾಂಗ ದಾನ ನಿಷಿದ್ಧವಿಲ್ಲ, ಕರ್ನಾಟಕ ರಾಜ್ಯದಲ್ಲೇ ಎಲ್ಲಾ ಧರ್ಮದವರು ಅಂಗಾಂಗ ದಾನ ಮಾಡಿರುವ ನಿದರ್ಶನಗಳಿವೆ. ಕೆ.ಎಲ್.ಇ ಆಸ್ಪತ್ರೆಯ ವೈದ್ಯರುಗಳು ನಡೆಸಿರುವ ವಿಶೇಷ ಅಂಗಾಂಗ ಕಸಿಯಲ್ಲಿ ಯಾವುದೇ ಧರ್ಮದ ತಾರತಮ್ಯವಿಲ್ಲದೆ ಹಿಂದೂ ಹೃದಯ ದಾನಿಯಿಂದ ಪಡೆದ ಅಂಗವನ್ನು ಕ್ರಿಶ್ಚಿಯನ್ ವೈದ್ಯರು ಮುಸ್ಲಿಂ ರೋಗಿಯ ದೇಹಕ್ಕೆ ಕಸಿ ಮಾಡಿ ಭಾವೈಕತೆ ಸಾರಿದ್ದಾರೆ.

Continue Reading

ಆರೋಗ್ಯ

Ginger Benefits: ಮಳೆಗಾಲದ ಸೋಂಕುಗಳಿಗೆ ಬೇಕು ಶುಂಠಿಯೆಂಬ ಮದ್ದು!

Ginger Benefits: ಅಡುಗೆಯನ್ನು ರುಚಿಗಟ್ಟಿಸುವ ಕೆಲಸದ ಜೊತೆಗೆ ಇನ್ನೂ ಎಷ್ಟೋ ರೀತಿಯಲ್ಲಿ ನಮ್ಮ ಸ್ವಾಸ್ಥ್ಯ ರಕ್ಷಣೆಯಲ್ಲಿ ಶುಂಠಿ ಸಹಾಯ ಮಾಡಬಲ್ಲದು. ಮಳೆಗಾಲದಲ್ಲಿ ಆಗಾಗ ಕಾಡುವ ಜ್ವರ-ಶೀತ-ಕೆಮ್ಮಿನಂಥ ಸೋಂಕುಗಳ ಜೊತೆ ಹೋರಾಡುವುದಕ್ಕೆ, ಆಗೀಗ ವಕ್ಕರಿಸಿಕೊಳ್ಳುವ ಅಜೀರ್ಣವನ್ನು ಸರಿಪಡಿಸುವುದಕ್ಕೆ, ಜೀರ್ಣಾಂಗಗಳ ಆರೋಗ್ಯವನ್ನು ಚೆನ್ನಾಗಿರಿಸುವುದಕ್ಕೆ… ನೋಡೋಣ ಇನ್ನೂ ಏನೆಲ್ಲ ಉಪಯೋಗಿ ಗುಣಗಳಿವೆ ಶುಂಠಿಗೆ!

VISTARANEWS.COM


on

ginger
Koo

ಕೆಲವು ಸರಳವಾದ ಅಡುಗೆಮನೆಯ ವಸ್ತುಗಳು ಸೋಂಕು ನಿವಾರಣೆಗೆ, ಆರೋಗ್ಯ ರಕ್ಷಣೆಗೆ ಮತ್ತು ಉರಿಯೂತ ಶಮನದಂಥ ಮಹತ್ವದ ಕೆಲಸಗಳಲ್ಲಿ ನೆರವಾಗಬಲ್ಲವು. ಉದಾ, ಶುಂಠಿಯ ಬೇರನ್ನೇ ತೆಗೆದುಕೊಂಡರೆ, ಅಡುಗೆಯನ್ನು ರುಚಿಗಟ್ಟಿಸುವ ಕೆಲಸದ ಜೊತೆಗೆ ಇನ್ನೂ ಎಷ್ಟೋ ರೀತಿಯಲ್ಲಿ ನಮ್ಮ ಸ್ವಾಸ್ಥ್ಯ ರಕ್ಷಣೆಯಲ್ಲಿ ಇದು ಸಹಾಯ ಮಾಡಬಲ್ಲದು. ಮಳೆಗಾಲದಲ್ಲಿ ಆಗಾಗ ಕಾಡುವ ಜ್ವರ-ಶೀತ-ಕೆಮ್ಮಿನಂಥ ಸೋಂಕುಗಳ ಜೊತೆ ಹೋರಾಡುವುದಕ್ಕೆ, ಆಗೀಗ ವಕ್ಕರಿಸಿಕೊಳ್ಳುವ ಅಜೀರ್ಣವನ್ನು ಸರಿಪಡಿಸುವುದಕ್ಕೆ, ಜೀರ್ಣಾಂಗಗಳ ಆರೋಗ್ಯವನ್ನು ಚೆನ್ನಾಗಿರಿಸುವುದಕ್ಕೆ- ನೋಡಿ, ಎಷ್ಟೊಂದು ಕೆಲಸಗಳಲ್ಲಿ ಶುಂಠಿಯ ಪರಿಚಾರಿಕೆ ನಮ್ಮ ಗಮನಕ್ಕೇ ಬರುವುದಿಲ್ಲ. ಇನ್ನೂ ಏನೆಲ್ಲ ಲಾಭಗಳಿವೆ ಇದನ್ನು ಸೇವಿಸುವಲ್ಲಿ ಮತ್ತು ಹೇಗೆಲ್ಲ ಶುಂಠಿಯನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು (Ginger Benefits) ಎಂಬುದನ್ನು ನೋಡೋಣ.

Antioxidants in it keep immunity strong Benefits Of Mandakki

ಪ್ರತಿರೋಧಕ ಶಕ್ತಿ

ಶುಂಠಿಯಲ್ಲಿರುವ ಜಿಂಜರಾಲ್‌ ಮತ್ತು ಶೋಗಾಲ್‌ನಂಥ ಅಂಶಗಳ ಬಗ್ಗೆ ವಿಸ್ತೃತವಾಗಿ ಅಧ್ಯಯನಗಳು ನಡೆದಿವೆ. ದೇಹದ ರಕ್ಷಣಾ ಕಾಯಗಳನ್ನು ಪ್ರಚೋದಿಸುವ ಇದರ ಶಕ್ತಿಯೇ ಈ ಎಲ್ಲ ಕುತೂಹಲಗಳಿಗೆ ಕಾರಣ. ಸೋಂಕುಗಳಿದ್ದಾಗ ನೆಗಡಿ, ಕೆಮ್ಮು, ಕಫ, ಮೈ-ಕೈ ನೋವು ಮುಂತಾದ ಲಕ್ಷಣಗಳಿರುವಾಗ, ಶುಂಠಿಯ ಚಹ, ಕಷಾಯಗಳ ಸೇವನೆಯಿಂದ ಅನಾರೋಗ್ಯದ ಅವಧಿಯನ್ನು ಮೊಟಕುಗೊಳಿಸಬಹುದು ಎಂಬುದು ಮಹತ್ವದ್ದು. ಹಾಗಾಗಿ ಮಳೆಗಾಲದ ದಿನಗಳಲ್ಲಿ ಒಂದು ಖಡಕ್‌ ಶುಂಠಿ ಕಷಾಯ ದೇಹಕ್ಕೆ ಬಹಳಷ್ಟು ಆರಾಮ ನೀಡಬಲ್ಲದು

Improved Digestion Tea Benefits

ಪಚನಕಾರಿ

ಇದರ ಜಿಂಜರಾಲ್‌ ಅಂಶವು ಜೀರ್ಣಾಂಗಗಳನ್ನು ಚುರುಕು ಮಾಡುತ್ತದೆ. ಜಠರದಲ್ಲಿ ಅಗತ್ಯಕ್ಕಿಂತ ಹೆಚ್ಚು ಸಮಯ ಉಳಿಯಲು ಬಿಡದಂತೆ ಆಹಾರವನ್ನು ಮುಂದೂಡುತ್ತದೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರ, ಮಲಬದ್ಧತೆಯಂಥ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯ. ಕೆಲವು ಸಂದರ್ಭಗಳಲ್ಲಿ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚಿನ ಪರಿಣಾಮ ಕಾಣಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಶುಂಠಿ ಸೇವಿಸುವುದು ಕೆಲವರಿಗೆ ಹೊಂದಿಕೆಯಾಗದಿರುವ ಸಾಧ್ಯತೆಯಿದೆ.

ಉತ್ಕರ್ಷಣ ವಿರೋಧಿ

ಶುಂಠಿಯಲ್ಲಿ ಹಲವು ರೀತಿಯ ಪ್ರಬಲ ಉತ್ಕರ್ಷಣ ನಿರೋಧಕಗಳಿವೆ. ದೇಹದಲ್ಲಿ ಉರಿಯೂತ ನಿವಾರಣೆಗೆ ಉತ್ತಮ ಮದ್ದು ಇದು ಎಂಬುದು ಈಗಾಗಲೇ ತಿಳಿದಿರುವ ವಿಷಯ. ಯಾವುದೇ ಸೋಂಕುಗಳ ಬೆನ್ನಿಗೆ ಉರಿಯೂತ ಭುಗಿಲೇಳುವುದು ಸಾಮಾನ್ಯ. ಇದರಿಂದ ಗಂಟುಗಳಲ್ಲಿ ನೋವು, ಶ್ವಾಸನಾಳದಲ್ಲಿ ಕಫ ಬಿಗಿಯುವುದು ಮುಂತಾದ ಹಲವು ತೊಂದರೆಗಳು ಕಾಣುತ್ತವೆ. ಇಂಥ ದಿನಗಳಲ್ಲಿ ಶುಂಠಿಯ ಬಳಕೆಯನ್ನು ಹೆಚ್ಚಿಸಿದರೆ ಬೇಗನೇ ಆರಾಮ ದೊರೆಯುತ್ತದೆ.

Let go of superstitions about food first eat what the doctor says Losing Weight While Pregnant

ಗರ್ಭಿಣಿಯರಿಗೆ

ಬೆಳಗಿನ ಹೊತ್ತು ವಾಂತಿ, ಓಕರಿಕೆಯಂಥ ಮಾರ್ನಿಂಗ್‌ ಸಿಕ್‌ನೆಸ್‌ನಿಂದ ಒದ್ದಾಡುತ್ತಿರುವ ಗರ್ಭಿಣಿಯರಿಗೆ ಶುಂಠಿ ನೆರವಾಗಬಲ್ಲದು. ಹಸಿ ಶುಂಠಿಯ ರಸ, ಕಷಾಯ ಅಥವಾ ಶುಂಠಿಯನ್ನೇ ಬಾಯಲ್ಲಿರಿಸಿಕೊಂಡರೂ, ಹೊಟ್ಟೆ ತೊಳೆಸುವುದನ್ನು ಕಡೆಯಬಹುದು. ಪರಂಪರಾಗತ ಔಷಧಿಯಲ್ಲಿ ಈ ಸಮಸ್ಯೆಗೆ ಶುಂಠಿಯೇ ಮದ್ದು.

ಮಧುಮೇಹಿಗಳಿಗೆ

ದೇಹದ ಚಯಾಪಚಯ ಹೆಚ್ಚಿಸುವ ಇದರ ಸಾಮರ್ಥ್ಯದಿಂದಾಗಿ ಮಧುಮೇಹಿಗಳು ಇದನ್ನು ತಮ್ಮ ಆಹಾರದ ಭಾಗವಾಗಿಸಿಕೊಳ್ಳಬಹುದು. ಜೀರ್ಣಕ್ರಿಯೆಯನ್ನು ಸರಾಗ ಮಾಡಿ, ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರದಂತೆ ಇದು ತಡೆಯಬಲ್ಲದು. ಜೊತೆಗೆ ರಕ್ತ ಪರಿಚಲನೆಯನ್ನೂ ಇದು ಉತ್ತೇಜಿಸುವುದರಿಂದ, ಅಂಗಾಂಗಗಳ ಯೋಗಕ್ಷೇಮ ಕಾಪಾಡುವಲ್ಲೂ ಶುಂಠಿ ಸಹಕಾರಿ.

ಇದನ್ನೂ ಓದಿ: Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!

ತೂಕ ನಿರ್ವಹಣೆ

ದೇಹದ ಚಯಾಪಚಯ ಹೆಚ್ಚಿಸಿ, ಕೊಬ್ಬು ಕಡಿತ ಮಾಡುವಲ್ಲಿ ಶುಂಠಿ ಅತ್ಯಂತ ಪ್ರಯೋಜನಕಾರಿ. ಅನಗತ್ಯ ಹಸಿವೆಯನ್ನು ನಿರ್ಬಂಧಿಸಿ, ತಿಂದಿದ್ದೆಲ್ಲ ಸೂಕ್ತ ರೀತಿಯಲ್ಲಿ ರಕ್ತ ಸೇರುವಂತೆ ಮಾಡುವುದರಿಂದ, ಆಹಾರ ಸೇವನೆಯ ಸಂತೃಪ್ತಿ ಹೆಚ್ಚುತ್ತದೆ. ಈ ಎಲ್ಲ ಕಾರಣಗಳಿಂದಾಗಿ ತೂಕ ನಿರ್ವಹಣೆಯಲ್ಲಿ ಸವಾಲುಗಳಿದ್ದರೆ, ಶುಂಠಿಯನ್ನು ಆಹಾರದಲ್ಲಿ ಸೇರಿಸಿಕೊಂಡು ಪ್ರಯತ್ನಿಸಬಹುದು. ಆದರೊಂದು, ಬೆಳಗಿನ ಖಾಲಿ ಹೊಟ್ಟೆಯಲ್ಲಿ ಜಿಂಜರ್‌ ಶಾಟ್‌ಗಳನ್ನು ಸೇವಿಸುವ ಮುನ್ನ ಅಥವಾ ಅತಿಯಾಗಿ ಶುಂಠಿಯನ್ನು ಬಳಸುವ ಮುನ್ನ, ಅವರವರ ಆರೋಗ್ಯಕ್ಕೆ ಇದು ಎಷ್ಟು ಒಗ್ಗುತ್ತದೆ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ.

Continue Reading

ಆರೋಗ್ಯ

Red Spinach Benefits: ಕೆಂಪು ಹರಿವೆ; ಇದು ಕೇವಲ ಸೊಪ್ಪಲ್ಲ, ಪೋಷಕಾಂಶಗಳ ಪವರ್‌ಹೌಸ್‌!

Red Spinach Benefits: ಚಳಿಗಾಲ ಬಂದರೆ, ಸೊಪ್ಪಿನದೇ ಸಾಮ್ರಾಜ್ಯ. ಚಳಿಗಾಲವನ್ನು ಹೊರತಾಗಿಯೂ ಎಲ್ಲ ಕಾಲಗಳಲ್ಲೂ ದೊರೆಯುವ ಕೆಲವು ಸೊಪ್ಪುಗಳಿಗೆ ನಿರಂತರವಾಗಿ ಸ್ಥಾನ ಇದ್ದೇ ಇರುತ್ತದೆ. ಅಂತಹ ಸೊಪ್ಪುಗಳ ಪೈಕಿ ಹರಿವೆ ಸೊಪ್ಪೂ ಒಂದು. ಹರಿವೆ ಸೊಪ್ಪಿನಲ್ಲಿ ಹಲವು ಬಗೆಗಳಿದ್ದರೂ ಕೆಂಪು ಹರಿವೆಗೆ ವಿಶೇಷ ಸ್ಥಾನ. ಪೋಷಕಾಂಶದ ವಿಷಯದಲ್ಲೂ ಇದೇ ನಂಬರ್‌ ವನ್‌.

VISTARANEWS.COM


on

Red Spinach Benefits
Koo

ಭಾರತೀಯರ ಮನೆಗಳಲ್ಲಿ ಸೊಪ್ಪಿನಡುಗೆಗೆ ವಿಶೇಷವಾದ ಸ್ಥಾನವಿದೆ. ಚಳಿಗಾಲ ಬಂದರೆ, ಸೊಪ್ಪಿನದೇ ಸಾಮ್ರಾಜ್ಯ. ಚಳಿಗಾಲವನ್ನು ಹೊರತಾಗಿಯೂ ಎಲ್ಲ ಕಾಲಗಳಲ್ಲೂ ದೊರೆಯುವ ಕೆಲವು ಸೊಪ್ಪುಗಳಿಗೆ ನಿರಂತರವಾಗಿ ಸ್ಥಾನ ಇದ್ದೇ ಇರುತ್ತದೆ. ಅಂತಹ ಸೊಪ್ಪುಗಳ ಪೈಕಿ ಹರಿವೆ ಸೊಪ್ಪೂ ಒಂದು. ಹರಿವೆ ಸೊಪ್ಪಿನಲ್ಲಿ ಹಲವು ಬಗೆಗಳಿದ್ದರೂ ಕೆಂಪು ಹರಿವೆಗೆ ವಿಶೇಷ ಸ್ಥಾನ. ಪೋಷಕಾಂಶದ ವಿಷಯದಲ್ಲೂ ಇದೇ ನಂಬರ್‌ ವನ್‌. ಕೆಂಪು ಹರಿವೆ (Red Spinach Benefits) ಕೇವಲ ಬಣ್ಣದಿಂದ ಮಾತ್ರ ಕೆಂಪಲ್ಲ. ಬಣ್ಣದಿಂದ ಯಾವ ಬದಲಾವಣೆಯೂ ಇಲ್ಲ ಎಂದುಕೊಳ್ಳಬೇಡಿ. ಕೆಂಬಣ್ಣದ ಹರಿವೆಯಲ್ಲಿ ಸಾಮಾನ್ಯ ಹರಿವೆಗಿಂತ ಹೆಚ್ಚು ಪೋಷಕಾಂಶಗಳಿವೆ. ಇದು ಆರೋಗ್ಯದ ವಿಚಾರದಲ್ಲಿ ಅಪ್ಪಟ ಚಿನ್ನ. ಇದರಲ್ಲಿ ವಿಟಮಿನ್‌ ಇ, ಸಿ ಮತ್ತು ಕೆ ಹೇರಳವಾಗಿದ್ದು, ಕಬ್ಬಿಣಾಂಶ ಹಾಗೂ ಕ್ಯಾಲ್ಶಿಯಂನಂತಹ ಅತ್ಯಗತ್ಯ ಖನಿಜಾಂಶಗಳೂ ಹೇರಳವಾಗಿವೆ. ಆಂಟಿ ಆಕ್ಸಿಡೆಂಟ್‌ಗಳಿಂದ ಶ್ರೀಮಂತವಾಗಿದ್ದು, ಇದು ಒಟ್ಟು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

Weight Loss Slim Body Healthy Lifestyle Concept Benefits Of Saffron

ತೂಕ ಇಳಿಕೆಗೆ

ಯಾರಾದರೂ, ತೂಕ ಇಳಿಸಬೇಕೆಂಬ ಯೋಚನೆಯಲ್ಲಿದ್ದರೆ ಅಂಥವರಿಗೆ ಇದು ಅತ್ಯಂತ ಉತ್ತಮವಾದ ಆಹಾರ. ಯಾಕೆಂದರೆ, ಇದರಲ್ಲಿ ಕಡಿಮೆ ಕ್ಯಾಲರಿಯಿದ್ದು, ನಾರಿನಂಶವೂ ಹೇರಳವಾಗಿದೆ. ಜೊತೆಗೆ ಬೇಕಾದ ಎಲ್ಲ ಪೋಷಕಾಂಶಗಳೂ ಭರಪೂರ ಇವೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಬೇಕಾದ ಎಲ್ಲವೂ ಇದರಲ್ಲಿದೆ. ಹೆಚ್ಚು ಹೊತ್ತು ಹೊಟ್ಟೆ ಫುಲ್‌ ಆದ ಅನುಭವ ನೀಡುವ ಕಾರಣ ಬೇರೆ ಆಗಾಗ ಏನಾದರೂ ತಿನ್ನಲು ಅನವಶ್ಯಕ ಪ್ರಚೋದನೆಯಾಗದು.

ಮಲಬದ್ಧತೆ ನಿವಾರಣೆಗೆ

ತೂಕದ ವಿಚಾರವನ್ನು ಹೊರತುಪಡಿಸಿದರೆ, ಮಲಬದ್ಧತೆಯ ಸಮಸ್ಯೆಯಿರುವ ಮಂದಿಗೂ ಇದು ಒಳ್ಳೆಯದು. ಜೀರ್ಣಕ್ರಿಯೆಗೆ ಇದು ಅತ್ಯಂತ ಒಳ್ಳೆಯದು. ಇದರಲ್ಲಿರುವ ನಾರಿನಂಶ, ಮಲಬದ್ಧತೆಯ ಸಮಸ್ಯೆಯನ್ನು ದೂರ ಓಡಿಸುತ್ತದೆ. ಇದನ್ನು ಸೇವಿಸಿದರೆ, ಬೆಳಗ್ಗೆ ಎದ್ದ ಕೂಡಲೇ ಖಂಡುತವಾಗಿಯೂ ಆರಾಮವಾಗಿ ಸುಖವಾಗಿ ಶೌಚ ಮುಗಿಸಿಕೊಳ್ಳುವಿರಿ. ಹೊಟ್ಟೆ ಹಗುರವಾಗಿ, ದೇಹ ಚುರುಕಾಗಿ ಇರಲು ಇದು ಅತ್ಯಂತ ಸೂಕ್ತವಾದ ಆಹಾರ. ಯಾವ ಔಷಧಿಗಳ ಸಹಾಯವೂ ಇಲ್ಲದೆ ಮಲಬದ್ಧತೆಯ ವಿರುದ್ಧ ಜಯ ಸಾಧಿಸಬಹುದು. ಈ ಕೆಂಪು ಹರಿವೆ ಸೊಪ್ಪಿನ ಇನ್ನೊಂದು ಪ್ರಮುಖ ಲಾಭವೆಂದರೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಪ್ರೊಟೀನ್‌ ಹಾಗೂ ವಿಟಮಿನ್‌ ಕೆ ಇರುವುದರಿಂದ, ಋತುಮಾನಕ್ಕೆ ಅನುಸಾರವಾಗಿ ಬರುವ ಆರೋಗ್ಯ ಸಮಸ್ಯೆಗಳನ್ನು ದೂರ ಓಡಿಸುತ್ತದೆ. ಅವುಗಳು ಬರದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಭದ್ರ ಕೋಟೆಯನ್ನು ಬೆಳೆಸುತ್ತದೆ.

ಇದನ್ನೂ ಓದಿ: Nutrients For The Human Body: ನಮ್ಮ ದೇಹವೆಂಬ ಕಾರ್ಯಾಲಯದಲ್ಲಿ ಕೆಲಸ ಮಾಡುವ 22 ಪೋಷಕಾಂಶಗಳ ಬಗ್ಗೆ ನಿಮಗೆ ಗೊತ್ತೇ?

ಎಲುಬಿನ ಸದೃಢತೆಗೆ

ಎಲುಬು ಗಟ್ಟಿಯಾಗಬೇಕು ಎಂದರೆ ನೀವು ಖಂಡಿತವಾಗಿಯೂ ಈ ಕೆಂಪು ಹರಿವೆ ಸೊಪ್ಪನ್ನು ಕಂಡಾಗಲೆಲ್ಲ ಖರೀದಿಸಿ ತಂದೇ ತರುವಿರಿ. ಸೊಪ್ಪನ್ನು ಶುಚಿಗೊಳಿಸಿ ಅಡುಗೆ ಮಾಡುವ ಕೆಲಸ ಸ್ವಲ್ಪ ತ್ರಾಸದಾಯಕವಾದರೂ, ಇದರ ಲಾಭ ಕೇಳಿದರೆ, ಅಂತಹ ತೊಂದರೆ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ನಿಮೇ ಅನಿಸುತ್ತದೆ. ಕೆಂಪು ಹರಿವೆಯಲ್ಲಿ ಹೇರಳವಾಗಿ ಕ್ಯಾಲ್ಶಿಯಂ, ಕಬ್ಬಿಣಾಂಶ ಹಾಗೂ ಪ್ರೊಟೀನ್‌ ಇರುವುದರಿಂದ ಮೂಳೆ ಗಟ್ಟಿಯಾಗಲು, ರಕ್ತ ದೇಹದಲ್ಲಿ ತುಂಬಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ. ಕೆಂಪು ಹರಿವೆ ಸೊಪ್ಪನ್ನು ಅಡುಗೆ ಮಾಡಲು ಕಷ್ಟವೇನಿಲ್ಲ. ನೀವು ಮಾಡುವ ದಾಲ್‌ನಲ್ಲಿ ಇದರ ಸೊಪ್ಪನ್ನು ಕತ್ತರಿಸಿ ಹಾಕಬಹುದು. ಅಥವಾ ಸೊಪ್ಪಿನ ಸಾರು ಮಾಡಬಹುದು. ಸೊಪ್ಪು ತುಂಬ ಇದ್ದರೆ ಅದನ್ನು ಪಲ್ಯ ಮಾಡಬಹುದು. ಚಪಾತಿ ಹಿಟ್ಟಿನ ಜೊತೆಗೆ ಕಲಸಿಕೊಂಡು ಸೊಪ್ಪಿನ ಪರಾಠಾ ಮಾಡಬಹುದು. ಅಥವಾ ಇನ್ನೂ ಹಲವಾರು ಆಯ್ಕೆಗಳಿವೆ. ಯಾವುದಾದರೊಂದು ಬಗೆಯ ಅಡುಗೆ ಮೂಲಕ ಆಗಾಗ ಇದನ್ನು ನಮ್ಮ ದೇಹ ಸೇರುವಂತೆ ನೋಡಿಕೊಳ್ಳಬಹುದು. ಹಾಗಾಗಿ, ಮಾರುಕಟ್ಟೆಯಲ್ಲಿ ಹರಿವೆ ಸೊಪ್ಪು ಕಂಡಾಗ ಬಿಟ್ಟು ಬರಬೇಡಿ.

Continue Reading

ಆರೋಗ್ಯ

Mushroom Benefits: ಅಣಬೆ ಎಂಬ ವಿಟಮಿನ್‌ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ!

Mushroom Benefits: ಎಲ್ಲ ಕಾಲದಲ್ಲೂ ಸಿಗುವ ಅಣಬೆಯಲ್ಲಿ ಭರಪೂರ ಪೋಷಕಾಂಶಗಳಿವೆ. ಸೂಪ್‌, ಸಲಾಡ್‌, ಸ್ಟರ್‌ ಫ್ರೈಗಳು ಸೇರಿದಂತೆ ಬಗೆಬಗೆಯ ಸಬ್ಜಿಗಳನ್ನೂ, ತಿನಿಸುಗಳನ್ನೂ ಇದರಿಂದ ಮಾಡಬಹುದು. ಸ್ವಲ್ಪ ಮಾಂಸದಡುಗೆಯ ರುಚಿ ನೀಡುವ ಅಣಬೆಯನ್ನು ಕೆಲವರು ಸಸ್ಯಾಹಾರವೆಂದು ಪರಿಗಣಿಸದೆ ದೂರ ಇಟ್ಟಿರುವುದೂ ಹೌದು. ತೂಕ ಇಳಿಸುವ ಮಂದಿಗೆ ಅಣಬೆಯಷ್ಟು ಉತ್ತಮ ಆಯ್ಕೆ ಇನ್ನೊಂದಿಲ್ಲ. ಕಡಿಮೆ ಕ್ಯಾಲರಿಯ, ವಿಟಮಿನ್‌ ಡಿಯಿಂದ ಸಂಪದ್ಭರಿತವಾದ, ಆರೋಗ್ಯಕರವಾದ ಆಂಟಿ ಆಕ್ಸಿಡೆಂಟ್‌ಗಳಿರುವ ಸಂಪೂರ್ಣ ಆಹಾರವಿದು.

VISTARANEWS.COM


on

Mushroom Benefits
Koo

ಅಣಬೆ (Mushroom Benefits) ಇಂದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎಲ್ಲೆಡೆ ಸಿಗುತ್ತದೆ. ಈಗ ಮಳೆಗಾಲಕ್ಕೇ ಅಂತ ಕಾಯಬೇಕಾದ ಅಗತ್ಯವಿಲ್ಲ. ಎಲ್ಲ ಕಾಲದಲ್ಲೂ ಸಿಗುವ ಅಣಬೆಯಲ್ಲಿ ಭರಪೂರ ಪೋಷಕಾಂಶಗಳಿವೆ. ಸೂಪ್‌, ಸಲಾಡ್‌, ಸ್ಟರ್‌ ಫ್ರೈಗಳು ಸೇರಿದಂತೆ ಬಗೆಬಗೆಯ ಸಬ್ಜಿಗಳನ್ನೂ, ತಿನಿಸುಗಳನ್ನೂ ಇದರಿಂದ ಮಾಡಬಹುದು. ಸ್ವಲ್ಪ ಮಾಂಸದಡುಗೆಯ ರುಚಿ ನೀಡುವ ಅಣಬೆಯನ್ನು ಕೆಲವರು ಸಸ್ಯಾಹಾರವೆಂದು ಪರಿಗಣಿಸದೆ ದೂರ ಇಟ್ಟಿರುವುದೂ ಹೌದು. ತೂಕ ಇಳಿಸುವ ಮಂದಿಗೆ ಅಣಬೆಯಷ್ಟು ಉತ್ತಮ ಆಯ್ಕೆ ಇನ್ನೊಂದಿಲ್ಲ. ಕಡಿಮೆ ಕ್ಯಾಲರಿಯ, ವಿಟಮಿನ್‌ ಡಿಯಿಂದ ಸಂಪದ್ಭರಿತವಾದ, ಆರೋಗ್ಯಕರವಾದ ಆಂಟಿ ಆಕ್ಸಿಡೆಂಟ್‌ಗಳಿರುವ ಸಂಪೂರ್ಣ ಆಹಾರವಿದು. ನಿಯಮಿತವಾಗಿ ಅಣಬೆಯನ್ನು ಸೇವಿಸುತ್ತಿದ್ದರೆ ತೂಕ ಇಳಿಸುವವರಿಗೆ ಸಹಾಯವಾಗುತ್ತದೆ. ಇದರಲ್ಲಿರುವ ಪೊಟಾಶಿಯಂ, ಝಿಂಕ್‌ಗಳುದೇಹದ ಹಲವು ಮುಖ್ಯ ಕೆಲಸಗಳಿಗೆ ಬೇಕೇ ಬೇಕಾಗುವ ಪೋಷಕಾಂಶಗಳು. ಎಲುಬಿನ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಸಿಕೊಳ್ಳಲು ಅಣಬೆ ಉತ್ತಮ ಆಹಾರ. ಬನ್ನಿ, ಅಣಬೆಯನ್ನು ಸೇವಿಸುವುದರಿಂದ ಯಾವೆಲ್ಲ ಲಾಭಗಳಿವೆ ಎಂಬುದನ್ನು ವಿವರವಾಗಿ ನೋಡೋಣ.

Obese male suffering from chest pain high blood pressure cholesterol level Sesame Benefits

ಕೊಲೆಸ್ಟೆರಾಲ್‌ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ

ಅಣಬೆಯಲ್ಲಿ ಪ್ರೊಟೀನ್‌ ಕೂಡಾ ಹೇರಳವಾಗಿದೆ. ಆದರೆ, ಕೊಲೆಸ್ಟೆರಾಲ್‌ ಅಥವಾ ಕೊಬ್ಬು ಬಹಳ ಕಡಿಮೆ ಇದೆ. ಇದರಲ್ಲಿರುವ ನಾರಿನಂಶ ಹಾಗೂ ಕೊಬ್ಬು ಕೊಲೆಸ್ಟೆರಾಲ್‌ ಅನ್ನು ಕರಗಿಸುವಲ್ಲಿಯೂ ನೆರವಾಗುತ್ತದೆ. ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು.

Knee bone mass Bone erosion and deterioration Pumpkin Benefits

ಮೂಳೆಗಳನ್ನು ಗಟ್ಟಿಗೊಳಿಸುತ್ತದೆ

ಅಣಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ. ನಮ್ಮ ಎಲುಬನ್ನು ಸದೃಢಗೊಳಿಸಲು ಕ್ಯಾಲ್ಶಿಯಂ ನಮ್ಮ ದೇಹಕ್ಕೆ ಬೇಕೇ ಬೇಕು. ಅಣಬೆಯನ್ನು ಆಗಾಗ ಸೇವಿಸುವುದರಿಂದ ಮೂಳೆ ಸವೆತ, ಮೂಳೆಗಳ ಸಾಂದ್ರತೆ ಕಡಿಮೆಯಾಗುವುದು, ಮೂಳೆ ಮುರಿತ, ಬಲಹೀನತೆಯಂಥ ಸಮಸ್ಯೆಗಳು ಹತ್ತಿರ ಸುಳಿಯದು.

ರೋಗ ನಿರೋಧಕತೆ ಹೆಚ್ಚಿಸುತ್ತದೆ

ಅಣಬೆಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಹಾಗಾಗಿ ಇದು ದೇಹವನ್ನು ಪ್ರೀ ರ್ಯಾಡಿಕಲ್ಸ್‌ಗಳಿಂದ ಕಾಪಾಡುವಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಹಲವು ಇನ್‌ಫೆಕ್ಷನ್‌ಗಳನ್ನು ದೂರ ಓಡಿಸುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ವಿಟಮಿನ್‌ ಎ, ವಿಟಮಿನ್‌ ಬಿ ಕಾಂಪ್ಲೆಕ್ಸ್‌, ವಿಟಮಿನ್‌ ಸಿ ಎಲ್ಲವೂ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುವಲ್ಲಿ ನೆರವಾಗುತ್ತದೆ.

Improved Digestion Tea Benefits

ಮಧುಮೇಹಿಗಳಿಗೂ ಒಳ್ಳೆಯದು

ಅಣಬೆಯಲ್ಲಿ ಕ್ರೋಮಿಯಂ ಹೇರಳವಾಗಿದ್ದು, ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಇಳಿಸುವಲ್ಲಿ ನೆರವಾಗುತ್ತದೆ. ಅಣಬೆಯಲ್ಲಿ ಕಡಿಮೆ ಕಾರ್ಬೋಹೈಡ್ರೇಟ್‌ ಹಾಗೂ ಕೊಬ್ಬು ಇರುವುದರಿಂದ ಇದು ಮಧುಮೇಹಿಗಳಿಗೆ ಒಳ್ಳೆಯದನ್ನೇ ಮಾಡುತ್ತದೆ.

ಇದನ್ನೂ ಓದಿ: World Lung Cancer Day: ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರತಿವರ್ಷ 16 ಲಕ್ಷ ಮಂದಿ ಬಲಿ; ಇದರಿಂದ ಪಾರಾಗುವುದು ಹೇಗೆ?

ತೂಕ ಇಳಿಸುತ್ತದೆ

ಅಣಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶ ಇರುವುದರಿಂದ ಇದು ಜೀರ್ಣ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಕಾರ್ಬೋಹೈಡ್ರೇಟ್‌ ಕಡಿಮೆಯಿದ್ದು, ಕೊಬ್ಬು ಇಲ್ಲೇ ಇಲ್ಲ ಎನ್ನಬಹುದು. ಉಳಿದಂತೆ, ಪ್ರೊಟೀನ್‌ ಸೇರಿದಂತೆ ಎಲ್ಲ ಪೋಷಕಾಂಶಗಳೂ ಹೆಚ್ಚಿರುವುದರಿಂದ ಇದು ತೂಕ ಹೇಳಿಕೆಗೆ ಹೇಳಿ ಮಾಡಿಸಿದಂಥ ಆಹಾರ.
ಎಲ್ಲರೂ ಅಣಬೆಯನ್ನು ಇಷ್ಟಪಡಲಾರರು. ಆದರೆ, ಆರೋಗ್ಯದ ದೃಷ್ಠಿಯಿಂದ ಅಣಬೆ ಸಂಪೂರ್ಣ ಆಹಾರ. ಕೆಲವು ಅಣಬೆಗಳು ವಿಷಕಾರಿ ಕೂಡಾ. ಮಳೆಗಾಲದಲ್ಲಿ ಬೆಳೆಯುವ ಅಣಬೆಗಳನ್ನು ಸಂಗ್ರಹಿಸಿ ಅಡುಗೆ ಮಾಡುವ ಮುನ್ನ ಅಣಬೆಗಳ ಬಗ್ಗೆ ಸಾಕಷ್ಟು ಜ್ಞಾನ ಇರಬೇಕು. ಇಲ್ಲವಾದರೆ, ವಿಷಕಾಋ ಅಣಬೆಗಳನ್ನು ಸೇವಿಸುವ ಅಪಾಯ ಇದೆ. ಆದರೆ, ಮಾರುಕಟ್ಟೆಯಲ್ಲಿ ಸದಾ ಲಭ್ಯವಿರುವ ಅಣಬೆಗಳಲ್ಲಿ ಈ ಭಯವಿಲ್ಲ. ಆರಾಮವಾಗಿ ಅಡುಗೆ ಮಾಡಿ ತಿನ್ನಬಹುದು.

Continue Reading
Advertisement
Wayanad Landslide
ಕರ್ನಾಟಕ58 mins ago

Wayanad Landslide: ವಯನಾಡು ಸಂತ್ರಸ್ತರಿಗೆ ಮಿಡಿದ ಕರುನಾಡು; ಸರ್ಕಾರದ ಜತೆಗೆ ಜನರಿಂದಲೂ ನೆರವು!

Kavya Maran
ಕ್ರಿಕೆಟ್2 hours ago

Kavya Maran : ಐಪಿಎಲ್​ ಆಟಗಾರರ ಹರಾಜಿನ ನಿಯಮಗಳ ಬಗ್ಗೆ ಕಾವ್ಯಾ ಮಾರನ್ ಇಟ್ಟಿರುವ ಬೇಡಿಕೆಗಳು ಇವು…

Champions Trophy 2025
ಪ್ರಮುಖ ಸುದ್ದಿ2 hours ago

Champions Trophy 2025 : ಚಾಂಪಿಯನ್ಸ್​ ಟ್ರೋಫಿಗಾಗಿ 544 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಐಸಿಸಿ

Viral Video
ವೈರಲ್ ನ್ಯೂಸ್2 hours ago

Viral Video: ಪ್ರವಾಹದಲ್ಲಿ ಸಿಲುಕಿದ ನಾಯಿಗಳಿಗೆ ಡ್ರೋನ್‌ ಮೂಲಕ ಬಿರಿಯಾನಿ ರವಾನೆ; ಮಾನವೀಯತೆ ಅಂದ್ರೆ ಇದು!

Best Teacher Award
ಕರ್ನಾಟಕ2 hours ago

Best Teacher Award: ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

Union Minister Pralhad Joshi latest statement at Mysore Chalo Padayatra
ಕರ್ನಾಟಕ2 hours ago

BJP-JDS Padayatra: ವಾಲ್ಮೀಕಿ ನಿಗಮ, ಮುಡಾ ಹಗರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಶೇರ್ ಹೋಲ್ಡರ್: ಪ್ರಲ್ಹಾದ್‌ ಜೋಶಿ ಆರೋಪ

Farmer dies after falling under power tiller wheel in Moralli village
ಉತ್ತರ ಕನ್ನಡ2 hours ago

Farmer Death: ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ರೈತ ದಾರುಣ ಸಾವು

KHIR City project Launch on August 23 at bengaluru says Minister MB Patil
ಕರ್ನಾಟಕ2 hours ago

KHIR City: ಬೆಂಗಳೂರಿನಲ್ಲಿ ದೇಶದಲ್ಲೇ ಮೊದಲ ‘ನಾಲೆಡ್ಜ್, ಹೆಲ್ತ್, ಇನ್ನೋವೇಶನ್ ಆಂಡ್ ರೀಸರ್ಚ್ ಸಿಟಿ’; ಆ.23ರಂದು ಉದ್ಘಾಟನೆ

IND vs SL ODI
ಪ್ರಮುಖ ಸುದ್ದಿ2 hours ago

IND vs SL ODI : ಶ್ರೀಲಂಕಾ ವಿರುದ್ಧ ಭಾನುವಾರ ಎರಡನೇ ಪಂದ್ಯ; ಮತ್ತೊಂದು ಥ್ರಿಲ್ಲರ್ ನಿರೀಕ್ಷೆ

Indian Organ Donation Day program inauguration by Minister Dinesh Gundurao at Belagavi
ಕರ್ನಾಟಕ3 hours ago

Belagavi News: ಸ್ವಾತಂತ್ರ್ಯ ದಿ‌ನಾಚರಣೆಯಂದು ಅಂಗಾಂಗ ದಾನಿಗಳ ಕುಟುಂಬಗಳಿಗೆ ಗೌರವ; ದಿ‌ನೇಶ್ ಗುಂಡೂರಾವ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ11 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌