Fenugreek Seeds For Diabetes: ಮಧುಮೇಹಿಗಳೇ ಬಿಡಿ ಚಿಂತೆ, ಇಷ್ಟು ತಿಂದರೆ ಸಾಕು ಮೆಂತೆ - Vistara News

ಆರೋಗ್ಯ

Fenugreek Seeds For Diabetes: ಮಧುಮೇಹಿಗಳೇ ಬಿಡಿ ಚಿಂತೆ, ಇಷ್ಟು ತಿಂದರೆ ಸಾಕು ಮೆಂತೆ

ಮಧುಮೇಹಿಗಳು ಮೆಂತೆ ತಿನ್ನಬೇಕು ಎನ್ನುವುದು ಸರಿ, (fenugreek seeds for diabetes) ಆದರೆ ಎಷ್ಟು ತಿನ್ನಬೇಕು ಎಂಬುದೀಗ ಪ್ರಶ್ನೆ. ಮದ್ದು ಹೋಗಿ ಮದ್ದಿನ ಮರವನ್ನೇ ತಿನ್ನಬಾರದಲ್ಲ!

VISTARANEWS.COM


on

Fenugreek Seeds For Diabetes
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತೀಯ ಅಡುಗೆಮನೆಗಳು ಕೆಲವೊಮ್ಮೆ ದೇಸೀ ಮದ್ದುಗಳ (fenugreek seeds for diabetes) ಉಗ್ರಾಣದಂತೆ ಕೆಲಸ ಮಾಡುತ್ತವೆ. ಸುಲಭವಾಗಿ ದೊರೆಯುವ ಒಗ್ಗರಣೆ ಪರಿಕರಗಳನ್ನೇ ಗಮನಿಸಿದರೂ, ಎಣ್ಣೆಯಿಂದ ಆರಂಭವಾಗಿ, ಸಾಸಿವೆಕಾಳು, ಉದ್ದಿನ ಬೇಳೆ, ಕಡಲೆ ಬೇಳೆ, ಇಂಗು, ಮೆಂತೆ, ಕರಿಬೇವಿನ ಸೊಪ್ಪು- ಹೀಗೆ ವ್ಯಂಜನದ ರುಚಿ ಹೆಚ್ಚಿಸುವ, ತಿಂದವರ ಆರೋಗ್ಯ ವೃದ್ಧಿಸುವ ಮತ್ತು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುವ ಗುಣಗಳು ಈ ವಸ್ತುಗಳಿಗಿವೆ. ಉದಾಹರಣೆಗೆ ಮೆಂತೆಯನ್ನೇ ಹೇಳುವುದಾದರೆ, ಒಗ್ಗರಣೆಯಲ್ಲಿ ಅದರ ಘಮವೇ ಮೂಗಿನ ಹೊರಳೆಗಳನ್ನು ಅರಳಿಸೀತು. ಮೆಂತೆ ಬೀಜಗಳನ್ನು ನೆನೆಸಿ, ಅರೆದು, ಕೂದಲಿಗೆ ಹಚ್ಚಿದರೆ ಕೇಶ ಸೌಂದರ್ಯ ಹೆಚ್ಚಾದೀತು, ತೂಕ ಇಳಿಸುವವರು ಮತ್ತು ಮಧುಮೇಹಿಗಳ ಪಾಲಿಗೆ ಪ್ರಮುಖ ಆರೋಗ್ಯವರ್ಧಕವೂ ಹೌದು. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಮೆಂತೆಯನ್ನು ದಿನವೂ ಬಳಸಿದರೆ- ಸಮಸ್ಯೆ ಖತಂ!

Fenugreek Seeds For Diabetes

ಆದರೆ ಕೆಲವೊಮ್ಮೆ ನಾವು ಎಡವುವುದು ಇಲ್ಲಿಯೇ! ಮೆಂತೆ ಬೀಜಗಳನ್ನು ತಿನ್ನುವುದು ಮಧುಮೇಹಿಗಳ ಪಾಲಿಗೆ ಅನುಕೂಲಕರ ಎಂಬುದು ನಿಜ. ಆದರೆ ಎಷ್ಟು ತಿನ್ನಬೇಕು ಅಥವಾ ಹೇಗೆ ತಿನ್ನಬೇಕು ಎಂಬ ಸ್ಪಷ್ಟತೆ ಇರಬೇಡವೇ? ಮದ್ದು ಹೋಗಿ ಮದ್ದಿನ ಮರವನ್ನೇ ತಿನ್ನಬಾರದಲ್ಲ. ಹೆಚ್ಚಿನ ಪ್ರಮಾಣದಲ್ಲಿ ಮೆಂತೆ ಬೀಜಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕುಸಿಯುವ ಅಪಾಯವೂ ಇದೆ. ಹಾಗಾಗಿ ಮಧುಮೇಹಿಗಳು ಮೆಂತೆ ತಿನ್ನಬೇಕು ಎನ್ನುವುದು ಸರಿ, ಆದರೆ ಎಷ್ಟು ತಿನ್ನಬೇಕು ಎಂಬುದೀಗ ಪ್ರಶ್ನೆ (fenugreek seeds for diabetes).

ತಿಂದ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವಲ್ಲಿನ ಚಯಾಪಚಯ ದೋಷವೇ ಮಧುಮೇಹ ಅಮರಿಕೊಳ್ಳುವುದಕ್ಕೆ ಕಾರಣ. ಪಚನ ಕ್ರಿಯೆಯನ್ನು ಮೊದಲಿನಿಂದ ಆರಂಭಿಸುವುದಾದರೆ, ಹೊಟ್ಟೆ ಸೇರಿದ ಆಹಾರವನ್ನು ಗ್ಲೂಕೋಸ್‌ ಆಗಿ ಪರಿವರ್ತಿಸಿ, ರಕ್ತಕ್ಕೆ ಬಿಡುಗಡೆ ಮಾಡುತ್ತದೆ ನಮ್ಮ ದೇಹ. ಇದರ ಪರಿಣಾಮವಾಗಿ, ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆಯಾಗಿ ಇನ್ಸುಲಿನ್‌ ಬಿಡುಗಡೆ ಮಾಡುವಂತೆ ಯಕೃತ್ತಿಗೆ ಸಂದೇಶ ಹೋಗುತ್ತದೆ. ಆನಂತರ ಬಿಡುಗಡೆಯಾದ ಶಕ್ತಿಯನ್ನು ದೇಶದ ಕೋಶಗಳು ಹೀರಿಕೊಂಡು, ಬೇಕಾದಂತೆ ಬಳಸಿಕೊಳ್ಳುತ್ತವೆ. ಹಾಗಾದರೆ ಈ ಇಡೀ ಪ್ರಕ್ರಿಯೆಯಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಮೆಂತೆ ಬೀಜ ಹೇಗೆ ನಿಯಂತ್ರಿಸುತ್ತದೆ ಎಂಬುದು ಮುಂದಿನ ಕುತೂಹಲ.

Fenugreek Seeds For Diabetes

ಮೆಂತೆ ತಿಂದರೆ ಏನಾಗುತ್ತದೆ?

ಜರ್ನಲ್‌ ಆಫ್‌ ರಿಸರ್ಚ್‌ ಇನ್‌ ಆಯುರ್ವೇದ ಪತ್ರಿಕೆಯಲ್ಲಿ ಇರುವ ವಿವರಗಳನ್ನು ನೋಡುವುದಾದರೆ, ಮೆಂತೆಯಲ್ಲಿರುವ ಕರಗಬಲ್ಲ ನಾರುಗಳು ಸಕ್ಕರೆ ಅಂಶವನ್ನು ದೇಹ ಹೀರಿಕೊಳ್ಳುವ ಸಮಯವನ್ನು ದೀರ್ಘ ಮಾಡುತ್ತವೆ. ಇದಕ್ಕೆ ಪೂರಕವಾಗಿ ಮೆಂತೆಯಲ್ಲಿರುವ ಆಲ್ಕಲಾಯ್ಡ್‌ಗಳೂ ಕೆಲಸ ಮಾಡುತ್ತವೆ (fenugreek seeds for diabetes). ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ಅಥವಾ ಇನ್ಸುಲಿನ್‌ಗೆ ಪ್ರತಿರೋಧ ತೋರುವುದು ಕಡಿಮೆಯಾಗುತ್ತದೆ. ಹಾಗಾಗಿ ಫಾಸ್ಟಿಂಗ್‌ ಶುಗರ್ (ಉಪವಾಸದಲ್ಲಿನ ಸಕ್ಕರೆ ಮಟ್ಟ)‌ ಮತ್ತು (HbA1c) ಎಚ್‌ಬಿಎ೧ಸಿ ಅಥವಾ ಮೂರು ತಿಂಗಳಿನ ಸರಾಸರಿ ಸಕ್ಕರೆ ಮಟ್ಟದಲ್ಲಿಯೂ ಸುಧಾರಣೆ ಕಂಡುಬರುತ್ತದೆ.

ಎಷ್ಟು ತಿನ್ನಬೇಕು?

ಇದಕ್ಕೂ ರೀತಿ-ನೀತಿಯಿದೆ. ಸಾಧಾರಣವಾಗಿ ದೇಹ ತೂಕ ಹೆಚ್ಚಿರುವವರು ಮಧುಮೇಹಿಗಳಾಗಿದ್ದರೆ, ಅವರು ಮೆಂತೆ ತಿನ್ನುವುದರಿಂದ ಹೆಚ್ಚಿನ ಪ್ರಯೋಜನ ಸಾಧಿಸಬಹುದು. ಕಾರಣ, ತೂಕ ಇಳಿಕೆಗೂ ಮೆಂತೆ ಸಹಕಾರಿ. ಮೆಂತೆಯನ್ನು ಪುಡಿ ಮಾಡಿಕೊಂಡು, ಅದನ್ನು ಬಿಸಿ ನೀರಿಗೆ ಹಾಕಿ ಕುಡಿಯಬಹುದು. ಅದಲ್ಲದಿದ್ದರೆ, ರಾತ್ರಿ ನೆನೆಸಿಟ್ಟು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಅದರ ನೀರಿನೊಂದಿಗೆ ಸೇವಿಸಬಹುದು- ಅಂದಾಜು, ಒಂದು ಚಮಚದಷ್ಟು ಮೆಂತೆಯನ್ನು. ಜರ್ನಲ್‌ ಆಫ್‌ ಡಯಾಬಿಟಿಸ್‌ ಎಂಡ್‌ ಮೆಟಬಾಲಿಕ್‌ ಡಿಸಾರ್ಡರ್‌ನಲ್ಲಿ ತಜ್ಞರು ಹೇಳುವುದು, ದಿನಕ್ಕೆ ಅತಿ ಹೆಚ್ಚೆಂದರೆ ೧೦ ಗ್ರಾಂ ಮೆಂತೆ ಸೇವಿಸಬಹುದು. ಅತಿಯಾಗಿ ಮೆಂತೆ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕುಸಿದು ಅಪಾಯವಾಗಬಹುದು.

Fenugreek Seeds For Diabetes

ಆದರೆ ಮೆಂತೆ ಸೇವನೆಯಿಂದ ಸಕ್ಕರೆ ಮಟ್ಟದಲ್ಲಿ ವ್ಯತ್ಯಾಸ ದಾಖಲಾಗುವುದನ್ನು ಕಾಣಲು ಕೆಲವು ವಾರಗಳು, ಕೆಲವೊಮ್ಮೆ ತಿಂಗಳೂ ಬೇಕಾಗಬಹುದು. ಕಾರಣ, ಕೇವಲ ಮೆಂತೆಯೊಂದನ್ನೇ ತಿನ್ನುವುದರಿಂದ ಇದನ್ನು ಸಾಧಿಸಬಹುದು ಎಂಬುದೂ ಸತ್ಯವಲ್ಲ. ಉಳಿದಂತೆ ಆಹಾರಕ್ರಮ ಸರಿಯಾಗಿರಬೇಕು ಮತ್ತು ವ್ಯಾಯಾಮವನ್ನೂ ಕಡ್ಡಾಯವಾಗಿ ಮಾಡಬೇಕು. ಇಷ್ಟಾಗಿ, ಮಧುಮೇಹಕ್ಕೆ ಔಷಧಿ ತೆಗೆದುಕೊಳ್ಳುವವರು ಮೆಂತೆ ಬೀಜ ಅಥವಾ ಇನ್ನಾವುದೇ ರೀತಿಯ ಮನೆಮದ್ದು ತಿನ್ನುವುದನ್ನು ತಮ್ಮ ವೈದ್ಯರಿಗೆ ಹೇಳಬೇಕಾಗುತ್ತದೆ.

ಯಾಕೆ ಹೇಳಬೇಕು?

ಯಾವುದೇ ಔಷಧವನ್ನು ನಿಯಮಿತವಾಗಿ ತೆಗೆದುಕೊಳ್ಳುವವರು ತಮ್ಮನ್ನು ಆಗಾಗ ತಪಾಸಣೆಗೆ ಒಳಪಡಿಸಿಕೊಳ್ಳುವುದು ಅಗತ್ಯ. ಇದರಲ್ಲೂ ಹಾಗೆಯೇ. ಸಕ್ಕರೆ ಮಟ್ಟವನ್ನು ಆಗಾಗ ತಪಾಸಣೆ ಮಾಡಿಸಿಕೊಂಡು, ವೈದ್ಯರೊಂದಿಗೆ ಚರ್ಚಿಸುವುದು ಅಗತ್ಯ. ಅತಿಯಾಗಿ ಮೆಂತೆ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕುಸಿದು ಅಪಾಯವಾಗಬಹುದು. ಸಕ್ಕರೆ ಪ್ರಮಾಣ ಹೆಚ್ಚಾದರೆ ಹೇಗೆ ಅಪಾಯವೋ, ಕಡಿಮೆಯಾದರೂ ಅಷ್ಟೇ ಅಪಾಯ. ಹಾಗಾಗಿ ಮಧುಮೇಹಿಯ ಆಹಾರ ಮತ್ತು ಆರೋಗ್ಯಕ್ಕೆ ಸರಿಯಾಗಿ ಔಷಧವನ್ನೂ ವೈದ್ಯರು ನಿಗದಿ ಮಾಡುತ್ತಾರೆ.

ಇದನ್ನೂ ಓದಿ: Bone Health: ಮೂಳೆಗಳ ಬಲವರ್ಧನೆಗೆ ಏನು ಮಾಡಬೇಕು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

World No Tobacco Day: ಇಂದು ವಿಶ್ವ ತಂಬಾಕು ರಹಿತ ದಿನ; ತಂಬಾಕು ಸೇವನೆಯಿಂದ ವರ್ಷಕ್ಕೆ 60 ಲಕ್ಷ ಜನರ ಸಾವು!

ಈಗಾಗಲೇ ವರ್ಷಕ್ಕೆ 60 ಲಕ್ಷ ಜನ ತಂಬಾಕಿನ ಬಳಕೆಯಿಂದ ವಾರ್ಷಿಕವಾಗಿ ಮೃತಪಡುತ್ತಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 80 ಲಕ್ಷ ದಾಟುವ ಅಂದಾಜಿದೆ. ಸಂಖ್ಯೆಗಳನ್ನು ಕಾಣುವ ಈ ಹೆಚ್ಚಳವನ್ನೂ ಪ್ರಗತಿಯ ಸಾಲಿಗೆ ಸೇರಿಸಬಹುದೇ? ಇದು ಕೇವಲ ನೇರವಾಗಿ ಬಳಸುವವರ ಸಂಖ್ಯೆ. ಪರೋಕ್ಷವಾಗಿ ಇದರ ಪರಿಣಾಮಗಳಿಂದ ಮೃತಪಡುವವರ ಸಂಖ್ಯೆಯನ್ನೂ ಸೇರಿಸಿದರೆ, ತಂಬಾಕಿನ ಘೋರ ಪರಿಣಾಮದ ಅಂದಾಜಾದೀತು ನಮಗೆ. ಈ ಹಿನ್ನೆಲೆಯಲ್ಲಿ, ತಂಬಾಕು ರಹಿತವಾದ ವಿಶ್ವದ ಅಗತ್ಯವನ್ನು ಜಗತ್ತಿನ ಮನಗಾಣಿಸುವ ಉದ್ದೇಶದಿಂದ ಮೇ ತಿಂಗಳ ಕಡೆಯ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ (World No Tobacco Day) ಆಚರಿಸಲಾಗುತ್ತದೆ.

VISTARANEWS.COM


on

World No Tobacco Day
Koo

ಭವಿಷ್ಯದ ಪೀಳಿಗೆಯನ್ನು ತಂಬಾಕಿನ ಜಾಲದಿಂದ ರಕ್ಷಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಹೊರಡಿಸಿದೆ. ಇಂದು ಮಕ್ಕಳು, ವಯಸ್ಕರಾದಿಯಾಗಿ ಜಗತ್ತಿನಲ್ಲಿ ಕೋಟಿಗಟ್ಟಲೆ ಜನ ತಂಬಾಕಿನ ಚಟಕ್ಕೆ ಜೀವ ತೆರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 31ನೇ ದಿನವನ್ನು ವಿಶ್ವದೆಲ್ಲೆಡೆ ಅರಿವಿನ ದಿನವನ್ನಾಗಿ ಆಚರಿಸಲಾಗುತ್ತಿದೆ.
ಪ್ರಗತಿಯನ್ನು ಸಂಖ್ಯೆಗಳಿಂದ ಅಳೆಯುತ್ತೇವೆ ಎಷ್ಟೋ ಸಾರಿ. ಈ ವರ್ಷಕ್ಕೆ ಇಷ್ಟಿರುವ ಸಂಖ್ಯೆ, 2030ಕ್ಕೆ ಎಷ್ಟು ಹೆಚ್ಚುತ್ತದೆ ಎನ್ನುವುದು ಪ್ರಗತಿಯ ಸಂಕೇತವಾಗಿ ತೋರುತ್ತದೆ ನಮಗೆ. ಈಗಾಗಲೇ ವರ್ಷಕ್ಕೆ 60 ಲಕ್ಷದಷ್ಟು ಜನ ತಂಬಾಕಿನ ಬಳಕೆಯಿಂದ ವಾರ್ಷಿಕವಾಗಿ ಮೃತಪಡುತ್ತಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 80 ಲಕ್ಷ ದಾಟುವ ಅಂದಾಜಿದೆ. ಸಂಖ್ಯೆಗಳನ್ನು ಕಾಣುವ ಈ ಹೆಚ್ಚಳವನ್ನೂ ಪ್ರಗತಿಯ ಸಾಲಿಗೆ ಸೇರಿಸಬಹುದೇ? ಇದು ಕೇವಲ ನೇರವಾಗಿ ಬಳಸುವವರ ಸಂಖ್ಯೆ. ಪರೋಕ್ಷವಾಗಿ ಇದರ ಪರಿಣಾಮಗಳಿಂದ ಮೃತಪಡುವವರ ಸಂಖ್ಯೆಯನ್ನೂ ಸೇರಿಸಿದರೆ, ತಂಬಾಕಿನ ಘೋರ ಪರಿಣಾಮದ ಅಂದಾಜಾದೀತು ನಮಗೆ. ಈ ಹಿನ್ನೆಲೆಯಲ್ಲಿ, ತಂಬಾಕು ರಹಿತವಾದ ವಿಶ್ವದ ಅಗತ್ಯವನ್ನು ಜಗತ್ತಿನ ಮನಗಾಣಿಸುವ ಉದ್ದೇಶದಿಂದ ಮೇ ತಿಂಗಳ ಕಡೆಯ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ (World No Tobacco Day) ಆಚರಿಸಲಾಗುತ್ತದೆ. ಈ ವರ್ಷ, ಅಂದರೆ 2024ರ ಸಾಲಿನ ಘೋಷ ವಾಕ್ಯ- ತಂಬಾಕು ಉದ್ದಿಮೆಯ ಹಸ್ತಕ್ಷೇಪದಿಂದ ಮಕ್ಕಳನ್ನು ಕಾಪಾಡುವುದು. ಅಪ್ರಾಪ್ತ ವಯಸ್ಕರು ಮತ್ತು ಯುವಜನತೆಯನ್ನೇ ಗುರಿಯಾಗಿಸಿಕೊಂಡು ತಂಬಾಕು ಮಾರಾಟ ವಿಸ್ತರಣೆಗೆ ಉದ್ದಿಮೆ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಈ ಘೋಷವಾಕ್ಯ ಮಹತ್ವವನ್ನು ಪಡೆದಿದೆ. ವಿಶ್ವದಾದ್ಯಂತ 13ರಿಂದ 15 ವರ್ಷ ವಯಸ್ಸಿನ 37 ದಶಲಕ್ಷ ಮಕ್ಕಳು ಒಂದಿಲ್ಲೊಂದು ರೀತಿಯಲ್ಲಿ ತಂಬಾಕು ಬಳಸುತ್ತಿದ್ದಾರೆ. ಇವರಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚಿದ್ದಾರೆ.

No Tobacco Day

ಹಿನ್ನೆಲೆ ಏನು?

ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ 1987ರಿಂದ ಈ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. ನಿಕೋಟಿನ್‌ ವ್ಯಸನಕ್ಕೆ ಬಿದ್ದು, ಜೀವ ಕಳೆದುಕೊಳ್ಳುವ ಲಕ್ಷಾಂತರ ಮಂದಿಯ ದಾರುಣ ಕಥೆಗಳು ಎದುರಿಗಿದ್ದರೂ, ಮತ್ತೆ ತಂಬಾಕಿನ ಚಟಕ್ಕೆ ಅಂಟಿಕೊಳ್ಳುವವರನ್ನು ಇದರಿಂದ ಹೊರ ತರುವ ಅಗತ್ಯವನ್ನು ಮನಗಂಡು, ಈ ಅರಿವಿನ ದಿನವನ್ನು ಅಚರಿಸಲಾಗುತ್ತಿದೆ. ಈ ಕುರಿತಾದ ಅಂಕಿ-ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದು, ಹೆಚ್ಚಿನವು ಗಾಬರಿ ಹುಟ್ಟಿಸುವಂತಿವೆ.

ಸಂಖ್ಯೆಗಳು ಏನೆನ್ನುತ್ತವೆ?

20ನೇ ಶತಮಾನದಲ್ಲಿ ಸುಮಾರು 10 ಕೋಟಿ ಮಂದಿ ಧೂಮಪಾನದ ಚಟಕ್ಕೆ ಬಲಿಯಾಗಿದ್ದಾರೆ. ಇಡೀ ವಿಶ್ವದ ಒಟ್ಟಾರೆ ಮೃತ್ಯುಗಳಲ್ಲಿ ಶೇ. 15ರಷ್ಟು ಸಾವುಗಳು ಸಂಭವಿಸಿದ್ದು ತಂಬಾಕಿನ ಚಟದಿಂದ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಜನ ಸಿಗರೇಟ್‌ಗೆ ಬಲಿಯಾಗುವುದಕ್ಕೆ ಕಾರಣವೆಂದರೆ ಜಗತ್ತಿನ ಐವರು ವಯಸ್ಕರ ಪೈಕಿ ಒಬ್ಬರಿಗೆ ಧೂಮಪಾನದ ಚಟವಿರುವುದು. ಜೊತೆಗೆ, 12 ಲಕ್ಷ ಮಂದಿ ಇನ್ನೊಬ್ಬರು ಸೇದುವ ಸಿಗರೇಟ್‌ ಹೊಗೆಗೆ ಬಲಿಯಾಗುತ್ತಿದ್ದಾರೆ. ಇವರಲ್ಲಿ ಶೇ. 28ರಷ್ಟು ಮಕ್ಕಳಿದ್ದಾರೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲೇಬೇಕಾದ ಅಗತ್ಯವಿದೆ. ತಂಬಾಕು ಉಪಯೋಗಿಸುವವರಲ್ಲಿ ಶೇ. 80ರಷ್ಟು ಮಂದಿ ಅಭಿವೃದ್ಧಿಶೀಲ ದೇಶಗಳಿಗೆ ಸೇರಿದವರು. ಈ ನಿಟ್ಟಿನಲ್ಲಿ ಬಡತನ ನಿವಾರಣೆಗೂ ತಂಬಾಕು ಉಪಯೋಗ ಕಡಿಮೆಯಾಗುವುದಕ್ಕೂ ನೇರ ಸಂಬಂಧವಿದೆ ಎಂದು ಹೇಳಬಹುದು.

ಇದನ್ನೂ ಓದಿ: Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು

ಮಕ್ಕಳೇ ಏಕೆ?

ಅಪ್ರಾಪ್ತ ವಯಸ್ಕರನ್ನೇ ತಂಬಾಕು ಉದ್ದಿಮೆ ಗುರಿಯಾಗಿಸಿಕೊಂಡಿರುವುದೇಕೆ? ಪ್ರತಿ ವರ್ಷ ತಂಬಾಕಿಗೆ ಜೀವ ಕಳೆದುಕೊಳ್ಳುವ ಮತ್ತು ಚಟದಿಂದ ದೂರವಾಗುವ ಲಕ್ಷಗಟ್ಟಲೆ ಜನಕ್ಕೆ ಬದಲಿಯಾಗಿ ಗ್ರಾಹಕರನ್ನು ತಂಬಾಕು ಉದ್ದಿಮೆ ಹುಡುಕುತ್ತಲೇ ಇರುತ್ತದೆ. ವಯಸ್ಕರಿಗೆ ಈ ಚಟವನ್ನು ಹೊಸದಾಗಿ ಅಂಟಿಸುವುದು ಸುಲಭವಲ್ಲ. ಆದರೆ ಇನ್ನೂ ಅರಿವು ಮೂಡದ ಮಕ್ಕಳನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವುದು ಮಾರಾಟಗಾರರಿಗೆ ಸುಲಭ. ಇದಿಷ್ಟೇ ಅಲ್ಲ, ವಯಸ್ಕರಲ್ಲಿ ತಂಬಾಕಿನಿಂದ ದೂರವಾಗುವ ಅಥವಾ ಚಟದಿಂದ ಬಿಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅದೇ ಮಕ್ಕಳಲ್ಲಾದರೆ ಒಮ್ಮೆ ಅಂಟಿಸಿದರೆ ದೀರ್ಘ ಕಾಲ ಅವರನ್ನು ತಮ್ಮ ಗ್ರಾಹಕರನ್ನಾಗಿ ಇರಿಸಿಕೊಳ್ಳಬಹುದು ಎಂಬುದು ಉದ್ದಿಮೆಗೆ ತಿಳಿದಿದೆ. ಈ ಎಲ್ಲ ಕಾರಣಗಳಿಗಾಗಿ ಮಕ್ಕಳನ್ನು ತಂಬಾಕಿನ ಜಾಲದಿಂದ ರಕ್ಷಿಸಬೇಕೆಂಬ ಘೋಷಣೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮುಂದಿರಿಸಿದೆ.

Continue Reading

ಆರೋಗ್ಯ

Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು

ಗರ್ಭಕೊರಳಿನ ಕ್ಯಾನ್ಸರ್‌ (Cervical Cancer) ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದಾದರೂ, 30ರ ನಂತರದ ಮಹಿಳೆಯನ್ನು ಬಾಧಿಸುವುದು ಹೆಚ್ಚು. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೆ, ಗರ್ಭಕೊರಳಿನ ಕ್ಯಾನ್ಸರ್‌ ಬಾರದಂತೆ ತಡೆಯುವುದಕ್ಕೆ ಸಾಧ್ಯವಿದೆ. ಇಲ್ಲಿವೆ ವಿವರಗಳು.

VISTARANEWS.COM


on

Cervical Cancer
Koo

ನಮ್ಮ ಆರೋಗ್ಯ ರಕ್ಷಣೆಯಲ್ಲಿ ಹಲವು ವಿಷಯಗಳಿವೆ. ಒಂದು, ಸರಿಯಾದ ಸತ್ವಯುತ ಆಹಾರವನ್ನು ತೆಗೆದುಕೊಳ್ಳುವುದು, ತಪ್ಪದೆ ವ್ಯಾಯಾಮ ಮಾಡಿ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ತಪಾಸಣೆಗಳಿಗೆ ಒಳಗಾಗುವುದು- ಈ ಮೂರು ವಿಷಯಗಳನ್ನು ಪಾಲಿಸುವುದು ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದರಿಂದ ಮುಂದೆ ಬರಬಹುದಾದ ಬಹಳಷ್ಟು ತೊಂದರೆಗಳನ್ನು ಬುಡದಲ್ಲೇ ಕತ್ತರಿಸಬಹುದು. ನಿಯಮಿತ ತಪಾಸಣೆಯಿಂದ ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ಪ್ರಾರಂಭಿಕ ಹಂತದಲ್ಲಿ ಅಥವಾ ಪ್ರಾರಂಭವಾಗುವ ಮುನ್ನವೇ ಪತ್ತೆ ಮಾಡಬಹುದು. ಉದಾ, ಸರ್ವೈಕಲ್‌ ಕ್ಯಾನ್ಸರ್‌ ಅಥವಾ ಗರ್ಭಕೊರಳಿನ ಕ್ಯಾನ್ಸರ್‌ (Cervical Cancer). ಇದು ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದಾದರೂ, ೩೦ರ ನಂತರದ ಮಹಿಳೆಯನ್ನು ಬಾಧಿಸುವುದು ಹೆಚ್ಚು. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೆ, ಗರ್ಭಕೊರಳಿನ ಕ್ಯಾನ್ಸರ್‌ ಬಾರದಂತೆ ತಡೆಯುವುದಕ್ಕೆ ಸಾಧ್ಯವಿದೆ. ಇಲ್ಲಿವೆ ವಿವರಗಳು.

Ovarian and Cervical Cancer. Woman Touching on Lower Abdomen in

ವೈರಸ್‌ ಕಾರಣ

ಹ್ಯೂಮನ್‌ ಪ್ಯಾಪಿಲೋಮ ವೈರಸ್‌ ಅಥವಾ ಎಚ್‌ಪಿವಿ ಎಂದು ಕರೆಯಲಾಗುವ ವೈರಸ್‌ನಿಂದ ಗರ್ಭಕಂಠದ ಕ್ಯಾನ್ಸರ್‌ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಲೈಂಗಿಕವಾಗಿ ಸಕ್ರಿಯರಾಗಿರುವವರಲ್ಲಿ ಈ ವೈರಸ್‌ ಹರಡುತ್ತದೆ. ಒಮ್ಮೆ ವೈರಸ್‌ ಬಂದ ಮೇಲೆ ಹಲವಾರು ವರ್ಷಗಳ ನಂತರ ಗರ್ಭಕೋಶದ ಕಂಠದಲ್ಲಿ ಕ್ಯಾನ್ಸರ್‌ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಏಷ್ಯಾ ಖಂಡದಲ್ಲಿ ಮಹಿಳೆಯರು ತುತ್ತಾಗುತ್ತಿರುವ ಕ್ಯಾನ್ಸರ್‌ಗಳ ಪೈಕಿ ಮುಂಚೂಣಿಯಲ್ಲಿ ಸರ್ವೈಕಲ್‌ ಕ್ಯಾನ್ಸರ್‌ ಸಹ ಒಂದು. ಗ್ರಾಮೀಣ ಮತ್ತು ನಗರ ಭಾಗಗಳೆಂಬ ವ್ಯತ್ಯಾಸವಿಲ್ಲದಂತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಲಕ್ಷಣಗಳೇನು?

ಪ್ರಾರಂಭದಲ್ಲಿ ಈ ಕ್ಯಾನ್ಸರ್‌ ಯಾವುದೇ ಲಕ್ಷಣಗಳನ್ನು ತೋರುವುದಿಲ್ಲ ಎನ್ನುವುದು ಸಮಸ್ಯೆಯನ್ನು ಹೆಚ್ಚಿಸುತ್ತದೆ. ರೋಗ ಮುಂದುವರಿದಂತೆ, ಋತುಚಕ್ರಗಳ ನಡುವಿನ ಅವಧಿಯಲ್ಲಿ ರಕ್ತಸ್ರಾವ ಆಗುವುದು, ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನೋವು ಅಥವಾ ರಕ್ತಸ್ರಾವ, ಮೂತ್ರದಲ್ಲಿನ ರಕ್ತ, ರಜೋನಿವೃತ್ತಿಯ ನಂತರ ರಕ್ತಸ್ರಾವ, ಕಿಬ್ಬೊಟ್ಟೆಯಲ್ಲಿ ನೋವು, ಬೆನ್ನಿನ ಕೆಳಭಾಗದಲ್ಲಿ ನೋವು- ಇಂಥ ಲಕ್ಷಣಗಳು ಕಾಣುತ್ತವೆ. ಆಗ ತುರ್ತಾಗಿ ಸ್ತ್ರೀರೋಗ ತಜ್ಞರನ್ನು ಕಾಣಬೇಕಾಗುತ್ತದೆ.

Vaccine

ಲಸಿಕೆ ಇದೆ

ಎಚ್‌ಪಿವಿ ರೋಗಾಣುವಿನಿಂದ ಬರುವ ಗರ್ಭಕೊರಳಿನ ಕ್ಯಾನ್ಸರ್‌ ತಡೆಯಲು ಸಾಧ್ಯವಿದೆ. ಇದಕ್ಕಾಗಿ ಪರಿಣಾಮಕಾರಿ ಲಸಿಕೆ ಲಭ್ಯವಿದ್ದು, 9-14 ವರ್ಷ ವಯೋಮಾನದ ಹೆಣ್ಣು ಮಕ್ಕಳಿಗೆ ಇದನ್ನು ನೀಡಿದರೆ, ಅತಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸಿದೆ. ಆನಂತರ 26 ವರ್ಷ ವಯಸ್ಸಿನವರೆಗೂ ಮಹಿಳೆಯರು ಇದನ್ನು ಪಡೆಯಬಹುದಾಗಿದ್ದು, ಯಶಸ್ಸಿನ ಪ್ರಮಾಣ ಸಮಾಧಾನಕರವಾಗಿದೆ. ಆನಂತರ 45 ವರ್ಷಗಳವರೆಗೂ ಮಹಿಳೆಯರು ಇದನ್ನು ಪಡೆಯಬಹುದಾಗಿದ್ದರೂ ವಯಸ್ಸು ಹೆಚ್ಚಿದಂತೆಲ್ಲಾ ಲಸಿಕೆಯ ಯಶಸ್ಸಿನ ಪ್ರಮಾಣ ಕಡಿಮೆಯಾಗುತ್ತದೆ.

ಏನು ಪರೀಕ್ಷೆ?

ಗರ್ಭ ಕಂಠದ ಕೆಲವು ಅಂಗಾಂಶಗಳನ್ನು ತೆಗೆಯುವ ವೈದ್ಯರು, ಅದನ್ನು ಪರೀಕ್ಷೆ ಮಾಡಿಸುತ್ತಾರೆ. ಅದರಲ್ಲಿ ಯಾವುದಾದರೂ ಅಸ್ವಾಭಾವಿಕ ಬೆಳವಣಿಗೆಗಳು ಇವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈಗಾಗಲೇ ಕ್ಯಾನ್ಸರ್‌ ಬಂದಿರುವುದು ಮಾತ್ರವಲ್ಲ, ಮುಂದಿನ ನಾಲ್ಕಾರು ವರ್ಷಗಳಲ್ಲಿ ಈ ಕೋಶಗಳಲ್ಲಿ ಅನಿಯಂತ್ರಿತ ಬೆಳವಣಿಗೆ ಆಗಬಹುದೇ ಎಂಬುದನ್ನೂ ಈ ಪರೀಕ್ಷೆಯಲ್ಲಿ ಪತ್ತೆ ಮಾಡಬಹುದು. ಹಾಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ಯಾಪ್‌ ಸ್ಮೇರ್‌ ಪರೀಕ್ಷೆಯನ್ನು ಮಹಿಳೆಯರು ತಪ್ಪದೆ ಮಾಡಿಸುವುದು ಸೂಕ್ತ. ಈ ಪರೀಕ್ಷೆಯಲ್ಲಿ ಕ್ಯಾನ್ಸರ್‌ ಸಂಭಾವ್ಯತೆಯನ್ನು ಉದ್ಭವಾವಸ್ಥೆಯಲ್ಲೇ ಪತ್ತೆ ಮಾಡಬಹುದು.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಬದಲಾವಣೆಗಳು

ಬದುಕಿನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ನಮ್ಮನ್ನು ಇಂಥ ರೋಗಗಳಿಂದ ದೂರ ಇರಿಸುತ್ತವೆ. ಸುರಕ್ಷಿತ ಲೈಂಗಿಕ ಅ‍ಭ್ಯಾಸಗಳು ಬದುಕಿನಲ್ಲಿ ಅತ್ಯಂತ ಮಹತ್ವವನ್ನು ಹೊಂದಿವೆ. ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದುವುದು ಮತ್ತು ಕಾಂಡೊಮ್‌ ಬಳಸದೆ ಇರುವುದು ಹಲವು ರೋಗಗಳನ್ನು ತರಬಹುದು. ಅತಿ ಸಣ್ಣ ಪ್ರಾಯದಲ್ಲಿ ಲೈಂಗಿಕವಾಗಿ ಸಕ್ರಿಯರಾಗುವುದು ಸಹ ಕ್ಯಾನ್ಸರ್‌ ಸಹಿತ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಮತೋಲನದಿಂದ ಕೂಡಿದ ತಾಜಾ ಆಹಾರಗಳ ಸೇವನೆ, ಸಿಗರೇಟ್‌ ಮತ್ತು ಮದ್ಯಗಳನ್ನು ದೂರ ಮಾಡುವುದು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳು. ನಿಯಮಿತವಾದ ವ್ಯಾಯಾಮ ಮತ್ತು ಒತ್ತಡ ನಿವಾರಣೆಯ ಕ್ರಮಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

Continue Reading

ಆರೋಗ್ಯ

ICMR Guidelines: ಶಿಶು ಆಹಾರ ಹೇಗಿರಬೇಕು? ಐಸಿಎಂಆರ್‌ ಮಾರ್ಗಸೂಚಿ ಹೀಗಿದೆ

ಘನ ಆಹಾರ ಪ್ರಾರಂಭ ಮಾಡಿದ ತಕ್ಷಣ ಅತ್ಯಂತ ತೆಳುವಾದ ಹದದಲ್ಲಿರುವ ಅಕ್ಕಿ ಗಂಜಿ, ಬೇಳೆ-ತರಕಾರಿಯ ನೀರು ಮುಂತಾದವನ್ನು ಶಿಶುಗಳಿಗೆ ನೀಡಲಾಗುತ್ತದೆ. ಪ್ರಾರಂಭದಲ್ಲಿ ಇದು ಸೂಕ್ತವಾದರೂ, ಕ್ರಮೇಣ ಶಿಶುಗಳ ಆಹಾರದ ಹದವನ್ನು ಮಂದಗೊಳಿಸಿ ಎನ್ನುವುದು ಐಸಿಎಂಆರ್‌ ಸಲಹೆ. ಈ ಕುರಿತ ಉಪಯುಕ್ತ (ICMR guidelines) ಮಾಹಿತಿ ಇಲ್ಲಿದೆ.

VISTARANEWS.COM


on

ICMR Guidelines
Koo

ಎಳೆ ಮಕ್ಕಳಿಗೆ ಆರು ತಿಂಗಳು ತುಂಬುತ್ತಿದ್ದಂತೆ, ಅವುಗಳ ಬೆಳವಣಿಗೆಗೆ ಸೂಕ್ತವಾದ ಆಹಾರವನ್ನು ನೀಡಬೇಕಾಗುತ್ತದೆ. ಅಲ್ಲಿಯವರೆಗೆ ತಾಯಿಯ ಹಾಲು ಮಾತ್ರವೇ ಶಿಶುವಿಗೆ ಸಾಕಾದರೂ, ನಂತರ ತಾಯಿಯ ಹಾಲಿನ ಜೊತೆಗೆ ಹೆಚ್ಚುವರಿ ಆಹಾರಗಳ ಅಗತ್ಯ ಬಂದೇಬರುತ್ತದೆ. 6-12 ತಿಂಗಳವರೆಗೆ ಮತ್ತು ಒಂದು ವರ್ಷದ ನಂತರ ಆಹಾರ ಕ್ರಮವನ್ನು ಬದಲಿಸಬೇಕಾಗುತ್ತದೆ. ಈ ಕುರಿತಾಗಿ ಹಲವಾರು ವಿವರಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಇತ್ತೀಚೆಗೆ ಪ್ರಕಟಿಸಿದೆ. ತಾಯಿ ಹಾಲಿನ ಜೊತೆಗೆ, ಹೊರಗಿನಿಂದ ಆಹಾರ ಪ್ರಾರಂಭ ಮಾಡಿದ ತಕ್ಷಣ ಅತ್ಯಂತ ತೆಳುವಾದ ಹದದಲ್ಲಿರುವ ಅಕ್ಕಿ ಗಂಜಿ, ಬೇಳೆ-ತರಕಾರಿಯ ನೀರು ಮುಂತಾದವನ್ನು ಶಿಶುಗಳಿಗೆ ನೀಡಲಾಗುತ್ತದೆ. “ಪ್ರಾರಂಭದಲ್ಲಿ ಇದು ಸೂಕ್ತವಾದರೂ, ಕ್ರಮೇಣ ಶಿಶುಗಳ ಆಹಾರದ ಹದವನ್ನು ಮಂದಗೊಳಿಸಿ” ಎನ್ನುವುದು ಐಸಿಎಂಆರ್‌ ಸಲಹೆ (ICMR guidelines). ಅಂದರೆ ಬೇಳೆ-ತರಕಾರಿಯ ನೀರಿಗೇ ಶಿಶುಗಳ ಆಹಾರವನ್ನು ಸ್ಥಗಿತಗೊಳಿಸುವುದು ಸರಿಯಲ್ಲ. ಬದಲಿಗೆ, ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತೆಳುವಾದ ಪೇಸ್ಟ್‌ನಂತೆ ಮಾಡುವುದು, ಬೇಳೆಯ ಮಂದ ಕಟ್ಟು ಉಣಿಸುವುದು ಶಿಶುಗಳಿಗೆ ಹೆಚ್ಚು ಪೂರಕ. ಘನ ಆಹಾರ ನೀಡುವುದಕ್ಕೆ ಪ್ರಾರಂಭಿಸಿದಾಗ ಕೂಸುಗಳು ಉಗಿಯುವುದು, ಕಟವಾಯಲ್ಲಿ ಹರಿಸುವುದು ಸಾಮಾನ್ಯ. ಕಾರಣ ಅವುಗಳಿಗೆ ಘನ ಆಹಾರವನ್ನು ನುಂಗುವುದು ಅಭ್ಯಾಸವಾಗುವುದಕ್ಕೆ ಸಮಯ ಬೇಕು. ನಾಲಿಗೆಯಲ್ಲಿ ಅದನ್ನು ಒಳಗೆ ತಳ್ಳುವ ಪ್ರಯತ್ನದಲ್ಲಿ, ಹೆಚ್ಚಿನ ಆಹಾರವನ್ನು ಅವು ಬಾಯಿಂದ ಹೊರಗೆ ತಳ್ಳುವುದೇ ಹೆಚ್ಚು. ಇದೇ ನೆವದಿಂದ ತೀರಾ ನೀರಾದ ಆಹಾರವನ್ನು ಅವುಗಳಿಗೆ ಉಣಿಸುವ ಅಗತ್ಯವಿಲ್ಲ ಅಥವಾ ಆ ಆಹಾರಗಳನ್ನು ಕೂಸುಗಳು ಇಷ್ಟಪಡುವುದಿಲ್ಲ ಎಂದೂ ಅರ್ಥವಲ್ಲ. ಪ್ರಾರಂಭದಲ್ಲಿ ತೆಳುವಾದ ಹದದಲ್ಲಿ ಇದ್ದರೂ, ಕ್ರಮೇಣ ಇದನ್ನು ಮಂದವಾದ ಹದಕ್ಕೆ (ಇಡ್ಲಿ ಹಿಟ್ಟಿನ ಹದಕ್ಕೆ) ತರುವುದು ಅಗತ್ಯ ಎಂದು ತನ್ನ ವಿವರವಾದ ನಿರ್ದೇಶನಗಳಲ್ಲಿ ಸಂಸ್ಥೆ ಹೇಳಿದೆ.

Mother Feeding Baby⁠

ಪೂರಕ ಆಹಾರಗಳೆಂದರೆ…?

ಇದನ್ನು ಪಾಲಕರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. 6 ತಿಂಗಳವರೆಗಿನ ಬೆಳವಣಿಗೆಗೆ ತಾಯಿಯ ಹಾಲು ಸಾಕಾಗುತ್ತದೆ. ಇದರಿಂದ ದಿನಕ್ಕೆ ಅಂದಾಜು 5 ಗ್ರಾಂ ಪ್ರೊಟೀನ್‌ ಮತ್ತು 500 ಕ್ಯಾಲರಿ ಶಕ್ತಿ ಮಗುವಿಗೆ ದೊರೆಯುತ್ತದೆ. 6 ತಿಂಗಳ ನಂತರ, ತನ್ನ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳುವ ಮಗುವಿಗೆ ಈ ಪ್ರಮಾಣ ಸಾಕಾಗುವುದಿಲ್ಲ. ದಿನಕ್ಕೆ 9-10 ಗ್ರಾಂ ಪ್ರೊಟೀನ್‌ ಮತ್ತು650ರಿಂದ720 ಕ್ಯಾಲರಿಗಳವರೆಗೆ ಶಕ್ತಿ ಬೇಕಾಗುತ್ತದೆ. ಈ ಕೊರತೆಯನ್ನು ತುಂಬುವುದಕ್ಕೆ ಪೂರಕವಾದ ಘನ ಆಹಾರಗಳನ್ನು ಮಗುವಿಗೆ ನೀಡಬೇಕಾಗುತ್ತದೆ.

ಏನು ಕೊಡಬೇಕು?

ಈ ದಿನಗಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಅಗತ್ಯ ಶಿಶುಗಳಿಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ, ಧಾನ್ಯಗಳ ಜೊತೆಗೆ ಎಣ್ಣೆ ಬೀಜಗಳು, ಹಾಲು, ತರಕಾರಿಗಳು ಮತ್ತು ಹಣ್ಣುಗಳನ್ನು ನೀಡಬೇಕು. ಮಾತ್ರವಲ್ಲ, ತರಹೇವಾರಿ ಬೇಳೆಗಳು, ನಾನಾ ರೀತಿಯ ಕಾಳುಗಳೆಲ್ಲ ಪುಟ್ಟ ಮಕ್ಕಳ ಪ್ರೊಟೀನ್‌ ಅಗತ್ಯವನ್ನು ಪೂರೈಸುತ್ತವೆ. ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಅಷ್ಟಷ್ಟಾಗಿ ಅಭ್ಯಾಸ ಮಾಡಿಸಬಹುದು.
ಬೇಯಿಸಿದ ಕ್ಯಾರೆಟ್‌, ಕುಂಬಳಕಾಯಿ, ಪಾಲಕ್‌, ಗೆಣಸು ಮುಂತಾದ ಸೊಪ್ಪು-ತರಕಾರಿಗಳ ಪೇಸ್ಟ್‌ ಮಕ್ಕಳಿಗೆ ಉಣಿಸಬಹುದು. ಸೇಬುಹಣ್ಣನ್ನೂ ಇದೇ ರೀತಿಯಲ್ಲಿ ನೀಡಬಹುದು. ಮೊದಲಿಗೆ ತರಕಾರಿ, ಹಣ್ಣುಗಳನ್ನು ಒಂದೊಂದಾಗಿ ನೀಡಿ, ಅದರಿಂದ ಶಿಶುಗಳ ಆರೋಗ್ಯದಲ್ಲಿ ವ್ಯತ್ಯಾಸವಾಗುವುದಿಲ್ಲ ಎಂದು ಖಾತ್ರಿಯಾದ ಮೇಲೆ, ಮಿಶ್ರ ತರಕಾರಿ ಮತ್ತು ಬೇಳೆಗಳನ್ನು ಉಣಿಸಬಹುದು. ಒಂದು ವರ್ಷದ ನಂತರ ಮೃದುವಾಗಿ ಬೇಯಿಸಿದ ಧಾನ್ಯದ ಉಪ್ಪಿಟ್ಟುಗಳು, ಬೇಳೆ ಹಾಕಿದ ಕಿಚಡಿಗಳು, ಬೇಯಿಸಿದ ಮೊಟ್ಟೆ, ಮೀನುಗಳನ್ನು ರೂಢಿಸಬಹುದು.

ಇದನ್ನೂ ಓದಿ: Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

ಯಾವುದು ಬೇಡ?

ಪುಟ್ಟ ಮಕ್ಕಳು ಉಪ್ಪಾದ ಚಿಪ್ಸ್‌, ಸಿಹಿ ಕ್ಯಾಂಡಿಗಳೆಲ್ಲ ಇಷ್ಟಪಟ್ಟು ನೆಕ್ಕುತ್ತವೆ. ಆದರೆ ಅವುಗಳನ್ನು ನೀಡುವುದು ಸಲ್ಲದು. ಆಹಾರಕ್ಕೆ ಸಕ್ಕರೆಯಂಥ ಕೃತಕ ಸಿಹಿಗಳು, ಫ್ರೂಟ್‌ ಜ್ಯೂಸ್‌ಗಳನ್ನು ಮಿಶ್ರ ಮಾಡುವುದಕ್ಕೂ ಐಸಿಎಂಆರ್‌ಗೆ ಸಹಮತವಿಲ್ಲ. ಬದಲಿಗೆ ನೈಸರ್ಗಿಕವಾದ ಹಣ್ಣುಗಳನ್ನೇ ಸೀರಿಯಲ್‌ಗೆ ಮಿಶ್ರ ಮಾಡುವುದು ಆರೋಗ್ಯಕರ. ಪೂರಕ ಆಹಾರಗಳಿಗೆ ಉಪ್ಪು-ಸಿಹಿಗಳನ್ನೆಲ್ಲಾ ಸೇರಿಸಿಯೇ ತಿನ್ನಿಸುವ ಅಭ್ಯಾಸ ಸರಿಯಲ್ಲ ಎಂದು ನಿರ್ದೇಶನದಲ್ಲಿ ಹೇಳಲಾಗಿದೆ.

Continue Reading

ಮನಿ-ಗೈಡ್

Health Insurance: ಕ್ಯಾಶ್​ಲೆಸ್​ ಕ್ಲೈಮ್‌ ಗಳಿಗೆ ಆಸ್ಪತ್ರೆಯಲ್ಲಿ ಇನ್ನು ಹೆಚ್ಚು ಹೊತ್ತು ಕಾಯಬೇಕಿಲ್ಲ; ಇಲ್ಲಿದೆ ಹೊಸ ನಿಯಮ

ಮೂರು ಗಂಟೆಗಳ ಒಳಗೆ ಆಸ್ಪತ್ರಗಳಲ್ಲಿ ನಗದು ರಹಿತ ಆರೋಗ್ಯ ವಿಮಾ (Health Insurance) ಕ್ಲೈಮ್ ಗಳನ್ನು ಸಲ್ಲಿಸಬೇಕು ಎಂದು ಐಆರ್ ಡಿಐಎ ಸೂಚಿಸಿದೆ. ಹಿಂದಿನ 55 ಆದೇಶಗಳನ್ನು ರದ್ದುಗೊಳಿಸಿ ಒಂದು ಸಮಗ್ರ ಆದೇಶವನ್ನು ಹೊರಡಿಸಲಾಗಿದೆ. ಇದರಲ್ಲಿ ಮಾಡಿರುವ ಬದಲಾವಣೆಗಳು ಇಂತಿವೆ.

VISTARANEWS.COM


on

By

Health Insurance
Koo

ಬೆಂಗಳೂರು: ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ಆರೋಗ್ಯ ವಿಮಾ ಪಾಲಿಸಿಗಳ (Health Insurance) ಮಾನದಂಡಗಳಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. 55 ಸುತ್ತೋಲೆಗಳನ್ನು ರದ್ದುಗೊಳಿಸಿ ಆರೋಗ್ಯ ವಿಮಾ ಉತ್ಪನ್ನಗಳ ಕುರಿತು ಸಮಗ್ರವಾಗಿ ಒಂದು ಸುತ್ತೋಲೆ ಪ್ರಕಟಿಸಿದೆ. ಪ್ರಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ (hospital discharge) ವಿನಂತಿ ಸ್ವೀಕರಿಸಿದ ಕ್ಯಾಶ್​ಲೆಸ್​ ಕ್ಲೈಮ್ ಗಳನ್ನು ಮೂರು ಗಂಟೆಗಳ ಒಳಗೆ ಇತ್ಯರ್ಥಗೊಳಿಸಬೇಕು ಐಆರ್ ಡಿಎಐ ಸೂಚಿಸಿದೆ.

ಯಾವುದೇ ಸಂದರ್ಭದಲ್ಲಿ ಪಾಲಿಸಿದಾರರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹೆಚ್ಚು ಕಾಯುವಂತೆ ಮಾಡಬಾರದು. ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಆಸ್ಪತ್ರೆಯಿಂದ ವಿಧಿಸಲಾದ ಹೆಚ್ಚುವರಿ ಮೊತ್ತವನ್ನು ವಿಮಾದಾರರು ಭರಿಸಬೇಕಾಗುತ್ತೆ ಎಂದು ಕಂಪನಿ ತಿಳಿಸಿದೆ. ತುರ್ತು ಸಂದರ್ಭಗಳಲ್ಲಿ ಬರುವ ನಗದು ರಹಿತ ವಿನಂತಿಯನ್ನು ವಿಮಾದಾರರು ತಕ್ಷಣವೇ ನಿರ್ಧರಿಸಬೇಕು ಎಂದು ಐಆರ್ ಡಿ ಎಐ ಹೇಳಿದೆ.

2024ರ ಜುಲೈ 31ರೊಳಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ವಿಮಾದಾರರಿಗೆ ಆದೇಶಿಸಿರುವ ಐಆರ್ ಡಿಎಐ ನಗದು ಕ್ಯಾಶ್​ಲೆಸ್​​ ವಿನಂತಿಗಳನ್ನು ಸ್ವೀಕರಿಸಲು ವಿಮಾದಾರರು ಆಸ್ಪತ್ರೆಯಲ್ಲಿ ಹೆಲ್ಪ್​ ಡೆಸ್ಕ್‌ಗಳನ್ನು ಸಹ ವ್ಯವಸ್ಥೆಗೊಳಿಸಬಹುದು ಎಂದು ಹೇಳಿದೆ.


ಇತರ ಕೆಲವು ಬದಲಾವಣೆಗಳು ?

ಲಭ್ಯವಿರುವ ಉತ್ಪನ್ನಗಳ ಮೂಲಕ ಪಾಲಿಸಿದಾರರಿಗೆ ವಿಮಾ ಕಂಪನಿಗಳು ವ್ಯಾಪಕ ಆಯ್ಕೆಗಳನ್ನು ಒದಗಿಸಬೇಕು ಎಂದು ಐಆರ್ ಡಿಎಐ ಹೇಳಿದೆ. ಅದೇ ಉದ್ದೇಶವನ್ನು ಪೂರೈಸಲು, ವಿಮಾದಾರರು ಎಲ್ಲಾ ವಯಸ್ಸಿನವರು, ಪ್ರದೇಶಗಳು, ಔದ್ಯೋಗಿಕ ವಿಭಾಗಗಳು, ವೈದ್ಯಕೀಯ ಪರಿಸ್ಥಿತಿಗಳು/ ಚಿಕಿತ್ಸೆಗಳು, ಎಲ್ಲಾ ರೀತಿಯ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆ ಒದಗಿಸುವವರಿಗೆ ವೈವಿಧ್ಯಮಯ ವಿಮಾ ಉತ್ಪನ್ನಗಳನ್ನು ಒದಗಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: Health Insurance Benefits : ಉದ್ಯೋಗಿಗಳ ಆರೋಗ್ಯ ವಿಮೆ ಏಕೆ ಮಹತ್ವಪೂರ್ಣ? ಇಲ್ಲಿದೆ ಡಿಟೇಲ್ಸ್

ಹಲವು ಆರೋಗ್ಯ ವಿಮಾ ಪಾಲಿಸಿಗಳನ್ನು ಹೊಂದಿರುವ ಪಾಲಿಸಿದಾರನು ಸ್ವೀಕಾರಾರ್ಹ ಕ್ಲೈಮ್ ಮೊತ್ತವನ್ನು ಪಡೆಯುವ ಪಾಲಿಸಿ ಆಯ್ಕೆಯನ್ನು ಹೊಸ ಸುತ್ತೋಲೆಯಲ್ಲಿ ಪಡೆಯುತ್ತಾನೆ. ವಿಮಾದಾರರು ಪ್ರತಿ ಪಾಲಿಸಿ ಡಾಕ್ಯುಮೆಂಟ್ ಜೊತೆಗೆ ಗ್ರಾಹಕರ ಮಾಹಿತಿ ಶೀಟ್​​ (CIS) ಒದಗಿಸಬೇಕಾಗುತ್ತದೆ. ಪಾಲಿಸಿ ಅವಧಿಯಲ್ಲಿ ಯಾವುದೇ ಕ್ಲೈಮ್‌ಗಳು ಮಾಡದಿದ್ದರೆ ವಿಮಾ ಮೊತ್ತವನ್ನು ಹೆಚ್ಚಿಸುವ ಅಥವಾ ಪ್ರೀಮಿಯಂ ಮೊತ್ತವನ್ನು ರಿಯಾಯಿತಿ ಮಾಡಬೇಕಾಗುತ್ತದೆ.

ಒಂದು ವೇಳೆ ಪಾಲಿಸಿದಾರರು, ಚಾಲ್ತಿಯಲ್ಲಿರು ಪಾಲಿಸಿಯನ್ನು ಯಾವುದೇ ಸಮಯದಲ್ಲಿ ರದ್ದುಮಾಡಲು ಬಯಸಿದರೆ ಅವಧಿ ಪ್ರೀಮಿಯಂ/ ಅನುಪಾತದ ಪ್ರೀಮಿಯಂನ ಮರುಪಾವತಿ ಮಾಡಬೇಕಾಗುತ್ತದೆ.

ರೋಗಿಯನ್ನು ದಾಖಲಿಸುವ ಮೊದಲು ವಿಮಾ ಕಂಪನಿಯು ಆಸ್ಪತ್ರೆಯ ಟಿಪಿಎ ಡೆಸ್ಕ್‌ಗೆ ಪೂರ್ವ-ಅನುಮೋದನೆಯನ್ನು ಒದಗಿಸಿದ ಮೇಲೂ ಶೇ.43ರಷ್ಟು ವಿಮಾ ಪಾಲಿಸಿದಾರರು ತಮ್ಮ “ಆರೋಗ್ಯ ವಿಮೆ” ಕ್ಲೈಮ್‌ಗಳನ್ನು ಪಡೆಯಲು ತೊಂದರೆಗಳನ್ನು ಎದುರಿಸಿದ್ದಾರೆ ಎಂದು ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ. ಕೆಲವು ಪ್ರಕರಣಗಳಲ್ಲಿ, ರೋಗಿಯು ಡಿಸ್ಚಾರ್ಜ್‌ಗೆ ಸಿದ್ಧವಾದ ಅನಂತರ 10- 12 ಗಂಟೆಗಳ ಬಳಿಕ ಕ್ಲೇಮ್​ ನೀಡಲಾಗಿದೆ.

Continue Reading
Advertisement
Prajwal Revanna
ಪ್ರಮುಖ ಸುದ್ದಿ6 mins ago

Prajwal Revanna : ಸೆಕ್ಸ್​ ಸ್ಕ್ಯಾಂಡಲ್​ ಆರೋಪಿ ಪ್ರಜ್ವಲ್​ ನೋಡಲು ನೂಕುನುಗ್ಗಲು!

Prajwal Revanna Case
ಕರ್ನಾಟಕ8 mins ago

Prajwal Revanna Case: ಪ್ರಜ್ವಲ್‌ಗೆ ಎಸ್‌ಐಟಿ ಕಸ್ಟಡಿ ಖಚಿತ; ಆರೋಪಿ ಪರ-ವಿರೋಧ ವಾದ ಹೀಗಿತ್ತು

Road Accident
ಕ್ರೈಂ12 mins ago

Road Accident : ಸ್ಕೂಟರ್‌ ಪಲ್ಟಿಯಾಗಿ ದಂಪತಿ ನರಳಾಟ; ನೆರವಿಗೆ ಧಾವಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

Bomb threat
ದೇಶ14 mins ago

Bomb Threat: ನಿಲ್ಲುತ್ತಲೇ ಇಲ್ಲ ಹುಸಿಬಾಂಬ್‌ ಕರೆ ಹಾವಳಿ; ಮತ್ತೆ ಬೆದರಿಕೆ-ವಿಮಾನ ತುರ್ತು ಭೂಸ್ಪರ್ಶ

MS Dhoni's last-ball Heroics
ಕ್ರಿಕೆಟ್28 mins ago

MS Dhoni’s last-ball Heroics: ಧೋನಿ ಮಿಂಚಿನ ವೇಗದ ರನೌಟ್​; ಭಾರತಕ್ಕೆ 1 ರನ್‌ ರೋಚಕ ಜಯ; ಇದು ಮರೆಯಲಾಗದ ನೆನಪು

Bujji and Bhairava Prabhas animated show raises
ಒಟಿಟಿ32 mins ago

Bujji and Bhairava: ಅಮೆಜಾನ್​ಗೆ ಬಂದ ‘ಕಲ್ಕಿ’ಯ ಬುಜ್ಜಿ-ಭೈರವ; ಹೆಚ್ಚಾಯ್ತು ‘ಕಲ್ಕಿ 2898 ಎಡಿ’ ನಿರೀಕ್ಷೆ!

Self harming
ಬೆಂಗಳೂರು37 mins ago

Self Harming : ವೆಗಾ ಸಿಟಿ ಮಾಲ್‌ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ

Prajwal Revanna Case
ಕರ್ನಾಟಕ38 mins ago

Prajwal Revanna Case: ಅನ್ನ-ಸಾಂಬಾರ್‌ ತಿಂದು ಜಡ್ಜ್‌ ಎದುರು ಕೈಕಟ್ಟಿ ನಿಂತ ಪ್ರಜ್ವಲ್‌ ರೇವಣ್ಣ; ಎಂಥ ಸ್ಥಿತಿ!

Heat Wave
ದೇಶ42 mins ago

Heat Wave: ಬಿಸಿಗಾಳಿ ಶಾಖಕ್ಕೆ ಉತ್ತರ ಭಾರತ ಸಂಪೂರ್ಣ ತತ್ತರ; ಎಮರ್ಜೆನ್ಸಿ ಘೋಷಣೆ ಆಗುತ್ತಾ?

Rooftop collapse in bagalakota
ಬಾಗಲಕೋಟೆ57 mins ago

Rooftop collapse : ಕುಸಿದು ಬಿದ್ದ ಮನೆಯ ಚಾವಣಿ; ಮಣ್ಣಿನಡಿ ಸಿಲುಕಿ ಮಕ್ಕಳಿಬ್ಬರು ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ1 day ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌