Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ! - Vistara News

ಆರೋಗ್ಯ

Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಕನ್ನಡಕ ಧರಿಸುವುದೋ ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವುದೋ? ಈ ಪ್ರಶ್ನೆ ದೃಷ್ಟಿದೋಷ ಇರುವಂಥ ಹಲವರನ್ನು ಕಾಡಿರಬಹುದು. ಇವೆರಡಕ್ಕೂ ಅದರದ್ದೇ ಆದ ಇತಿ-ಮಿತಿಗಳಿವೆ. ನಿಮ್ಮ ಆದ್ಯತೆ ಯಾವುದು ಎನ್ನುವುದನ್ನು ನಿರ್ಧರಿಸುವುದಕ್ಕೆ ಬೇಕಾದ ಮಾಹಿತಿಗಳು (Glasses or Lenses) ಇಲ್ಲಿವೆ.

VISTARANEWS.COM


on

Glasses or Lenses
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಣ್ಣಿಗೆ ಪವರ್‌ ಇದ್ದರೆ ಆಗಾಗ ಕಾಡುವ ಪ್ರಶ್ನೆ- ಕನ್ನಡಕ ಹಾಕಬೇಕೆ ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ ಹಾಕಬೇಕೆ? ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ದೃಷ್ಟಿದೋಪ ಸರಿಪಡಿಸುವುದು ಇದರ ಪ್ರಧಾನ ಉದ್ದೇಶವೆಂಬುದು ನಿಜ. ಆದರೆ ಜೊತೆಗೊಂದಿಷ್ಟು ಇದೆಯಲ್ಲ… ಕೊಸರು! ಇವೆರಡಕ್ಕೂ ಅವುಗಳದ್ದೇ ಆದ ಇತಿ-ಮಿತಿಗಳಿವೆ. ಅದರಲ್ಲೂ ಜೇಬಿಗೆಷ್ಟು ಭಾರ, ಯಾವುದು ಆರಾಮದಾಯಕ, ಧರಿಸುವವರ ಆದ್ಯತೆಗಳೇನು, ಜೀವನಶೈಲಿಗೆ ಹೊಂದುತ್ತದೆಯೇ ಎಂಬ ಹಲವು ವಿಷಯಗಳನ್ನು ಆಧರಿಸಿಯೇ ಆಯ್ಕೆ ಮಾಡುವುದಲ್ಲವೇ? ಇವೆಲ್ಲವುಗಳ ಜೊತೆಗೆ, ಕಣ್ಣಿನ ಆರೋಗ್ಯಕ್ಕೆ ಯಾವುದು ಹಿತ ಎನ್ನುವ ಪ್ರಶ್ನೆ ಮಹತ್ವದ್ದಾಗುತ್ತದೆ. ಯಾವುದು ಹಿತ ಈ (Glasses or Lenses) ಎರಡರೊಳಗೆ?

Glasses

ಕನ್ನಡಕ

ಶತಮಾನಗಳಿಂದ ಎಲ್ಲರ ದೃಷ್ಟಿದೋಷವನ್ನು ಸರಿಪಡಿಸುತ್ತ ಬಂದಿರುವ ಕನ್ನಡಕಗಳು ಯಾವುದೇ ತಲೆಬಿಸಿ ನೀಡದಂಥವು. ನಿಯಮಿತವಾಗಿ ನೇತ್ರವೈದ್ಯರಲ್ಲಿ ಹೋಗಿ ತಪಾಸಣೆ ಮಾಡಿಸಿಕೊಂಡು, ಕಣ್ಣಿನ ಪವರ್‌ ಎಷ್ಟಿದೆ ಎಂಬುದನ್ನು ನೋಡಿಕೊಂಡರಾಯಿತು. ಇರುವ ಕನ್ನಡಕವನ್ನು ಬದಲಾಯಿಸಬೇಕು ಎಂದಿದ್ದರೆ ವೈದ್ಯರೇ ಅದನ್ನು ಸೂಚಿಸುತ್ತಾರೆ. ಅದರಂತೆ ಕನ್ನಡದ ಬದಲಾಯಿಸಿದರೆ, ಮತ್ತಿನ್ನೇನೂ ಮಾಡಬೇಕಿಲ್ಲ. ಕನ್ನಡದ ಗಾಜನ್ನು ಒರೆಸಿ ಸ್ವಚ್ಛ ಮಾಡುವುದಕ್ಕಿಂತ ಹೆಚ್ಚಿನ ನಿರ್ವಹಣೆಯನ್ನು ಅದು ಬೇಡುವುದಿಲ್ಲ. ಇದು ದೃಷ್ಟಿ ದೋಷಕ್ಕೆ ಮದ್ದಷ್ಟೇ ಅಲ್ಲ, ಧೂಳು, ಬಿಸಿಲು, ಹಾನಿಕಾರಕ ಕಿರಣಗಳಿಂದಲೂ ರಕ್ಷಣೆಯನ್ನು ನೀಡಬಲ್ಲದು. ಅದರಲ್ಲೂ ಕೆಲವು ಸುಧಾರಿತ ಫೋಟೋಕ್ರೋಮಿಕ್‌ ಕನ್ನಡಕಗಳು ನೂರು ಪ್ರತಿಶತ ಅತಿನೇರಳೆ ಕಿರಣಗಳನ್ನು ತಡೆಗಟ್ಟಬಲ್ಲವು. ಈ ಕೆಲಸವನ್ನು ಯಾವುದೇ ಲೆನ್ಸ್‌ಗಳೂ ಮಾಡಲಾರವು. ಅವರವರ ಮುಖಮಂಡಲಕ್ಕೆ ಕಳೆಗಟ್ಟಿಸುವಂಥ ಸುಂದರ ಫ್ರೇಮ್‌ಗಳನ್ನು ಆಯ್ದುಕೊಂಡರೆ, ಕನ್ನಡಕವೂ ಫ್ಯಾಷನ್‌ ಘೋಷಣೆಯನ್ನು ಹೊರಡಿಸಬಲ್ಲದು. ಆದರೊಂದು, ಕನ್ನಡಕವನ್ನು ಹಾಕುವುದು ಅನಿವಾರ್ಯ ಎಂದಾಗ, ಕೆಲವೊಮ್ಮೆ ಅದು ಸಮಸ್ಯೆಯನ್ನೂ ಸೃಷ್ಟಿಸಬಲ್ಲದು. ಉದಾ, ಆಡುವುದು, ಓಡುವುದು ಮುಂತಾದ ದೈಹಿಕ ಚಟುವಟಿಕೆಗಳು ಮುಖ್ಯವಾಗಿದ್ದಾಗ ಕನ್ನಡಕ ತೊಡಕೆನಿಸುತ್ತದೆ. ನೃತ್ಯ, ನಟನೆಯಂಥ ಕಲೆಗಳಲ್ಲಿ ಕನ್ನಡಕ ಅಡಚಣೆ ಕೊಡುತ್ತದೆ. ಹೀಗೆ ಬಳಕೆದಾರರ ಮಿತ್ರ ಎನಿಸುವ ಕನ್ನಡಕವೂ ಕೆಲವೊಮ್ಮೆ ಕಣ್‌ ಕಣ್‌ ಬಿಡಿಸುತ್ತದೆ.

 Lenses

ಕಾಂಟ್ಯಾಕ್ಟ್‌ ಲೆನ್ಸ್‌

ಶತಮಾನಗಳ ಇತಿಹಾಸವಿಲ್ಲದ ಇದು, ಆಧುನಿಕ ಕಾಲದ್ದು. ಇಂದಿನ ಹಲವು ರೀತಿಯ ಅಗತ್ಯಗಳು ಮತ್ತು ಬದಲಾವಣೆಗಳಿಗೆ ಹೇಳಿ ಮಾಡಿಸಿದಂತದ್ದು. ಕನ್ನಡಕದ ಭಾರದಿಂದ ಮುಕ್ತಿ ನೀಡುವ ಇದು, ಮುಖದ ಸೌಂದರ್ಯವನ್ನು ಇದ್ದಂತೆಯೇ ಉಳಿಸುತ್ತದೆ. ಮದುವೆ, ನಾಮಕರಣದಂಥ ಸಾಮಾಜಿಕ ಕಾರ್ಯಕ್ರಮಗಳಿರಲಿ, ಆಟ, ಓಟದಂಥ ದೈಹಿಕ ಚಟುವಟಿಕೆಗಳಿರಲಿ, ನೃತ್ಯ-ನಟನೆಯಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ- ಸಂದರ್ಭ ಯಾವುದೇ ಆದರೂ ಕಾಂಟ್ಯಾಕ್ಟ್‌ ಲೆನ್ಸ್‌ ಬಳಕೆ ಸೂಕ್ತವಾದದ್ದು. ವಾತಾವರಣದಲ್ಲಿ ತೇವ ಹೆಚ್ಚಿದ್ದಾಗ ಅಥವಾ ಮಾಸ್ಕ್‌ ಧರಿಸಿದಾಗ ಕನ್ನಡಕದ ಗಾಜಿನಂತೆ ಲೆನ್ಸ್‌ ಮಸುಕಾಗುವುದಿಲ್ಲ. ಹಾಗಾಗಿ ಕ್ರಿಯಾತ್ಮಕ ದೃಷ್ಟಿಯಿಂದಲೂ ಇದು ಕನ್ನಡಕಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುತ್ತದೆ. ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವುದರಲ್ಲಿ ಇನ್ನೂ ಕೆಲವು ಲಾಭಗಳಿವೆ. ದೃಷ್ಟಿಯ ವ್ಯಾಪ್ತಿ ಕನ್ನಡಕ ಹಾಕಿದ ಸಂದರ್ಭಕ್ಕಿಂತ ಹೆಚ್ಚು ವಿಶಾಲವಾಗಿರುತ್ತದೆ ಲೆನ್ಸ್‌ನಲ್ಲಿ. ಜೊತೆಗೆ ನಿಖರತೆ ಮತ್ತು ಸ್ಪಷ್ಟತೆಯೂ ಅಧಿಕ. ಅದರಲ್ಲೂ ತೀವ್ರ ಅಸ್ಟಿಗ್ಮ್ಯಾಟಿಸಂ ಇರುವವರಲ್ಲಿ ದೃಷ್ಟಿಯ ನಿಖರತೆಯನ್ನು ಕನ್ನಡಕಕ್ಕಿಂತ ಸಾಕಷ್ಟು ಹೆಚ್ಚಿಸಬಲ್ಲದು ಕಾಂಟ್ಯಾಕ್ಟ್‌ ಲೆನ್ಸ್‌. ಎಲ್ಲಕ್ಕಿಂತ ಮುಖ್ಯವಾಗಿ ದೃಷ್ಟಿ ದೋಷ ಇರುವುದನ್ನು ಜಗಜ್ಜಾಹೀರು ಮಾಡದೆಯೇ, ಇದನ್ನು ಬಳಸಬಹುದು.

ಇದನ್ನೂ ಓದಿ: Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

ಜಾಗ್ರತೆ ಅಗತ್ಯ

ಕಾಂಟ್ಯಾಕ್ಟ್‌ ಲೆನ್ಸ್‌ಗಳು ತುಟ್ಟಿ. ಕನ್ನಡಕಗಳಂತೆ ಕಿಸೆಗೆ ಹಗುರವಲ್ಲ ಇವು. ಜೊತೆಗೆ ಇವುಗಳನ್ನು ಸದಾ ಬಳಸುತಿದ್ದರೆ ಕಣ್ಣುಗಳು ತೇವ ಕಳೆದುಕೊಂಡು ಶುಷ್ಕವಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಬಳಸುವಾಗ ಕೈಗಳ ಸ್ವಚ್ಛತೆಯ ಬಗ್ಗೆ ಜಾಗ್ರತೆ ಅಗತ್ಯ. ಹಾಗಿಲ್ಲದಿದ್ದರೆ ಕಣ್ಣಿಗೆ ಸೋಂಕು ಉಂಟಾಗಬಹುದು. ಈ ಕಾರಣದಿಂದಲೇ ಕನ್ನಡಕಗಳಿಗೆ ಹೋಲಿಸಿದರೆ, ಲೆನ್ಸ್‌ ಬಳಕೆದಾರರಲ್ಲಿ ಸೋಂಕಿನ ಪ್ರಮಾಣ ಹೆಚ್ಚು. ಲೆನ್ಸ್‌ಗಳು ಮತ್ತು ಅವುಗಳ ಡ್ರಾಪ್ಸ್‌ ವ್ಯಾಲಿಡಿಟಿಯನ್ನು ಆಗಾಗ ಪರಿಶೀಲಿಸುವುದು ಬಹುಮುಖ್ಯ. ಲೆನ್ಸ್‌ ಧರಿಸಿ ಈಜುವುದು, ರಾತ್ರಿ ನಿದ್ದೆ ಮಾಡುವುದು ಮುಂತಾದವು ಸಲ್ಲದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Migraine Problem: ಮೈಗ್ರೇನ್‌ ಉಪಶಮನಕ್ಕೆ ರೋಸ್‌ಮೆರಿ ಸುಗಂಧ ತೈಲ ಮದ್ದು!

Migraine Problem: ಮೈಗ್ರೇನ್‌ ತಲೆನೋವು ಹೈರಾಣಾಗಿಸುವುದು ನಿಜ. ಅರೆತಲೆಶೂಲೆ ಎಂದೂ ಕರೆಯಲಾಗುವ ಮೈಗ್ರೇನ್‌ ತಲೆನೋವು ನೀಡುವ ಹಿಂಸೆ ಅಷ್ಟಿಷ್ಟೇ ಅಲ್ಲ. ಒಮ್ಮೆ ಮೈಗ್ರೇನ್‌ ಆರಂಭವಾದರೆ, ಹಲವಾರು ಗಂಟೆಗಳು ಅಥವಾ ಒಂದೆರಡು ದಿನಗಳವರೆಗೆ ನಿತ್ಯದ ಕೆಲಸವನ್ನೂ ಮಾಡಲಿಕ್ಕಾಗದಷ್ಟು ಅವಸ್ಥೆ ಹದಗೆಡುತ್ತದೆ. ಆದರೆ ಕೆಲವು ಸರಳ ಮನೆಮದ್ದುಗಳು ಇದಕ್ಕೆ ಉಪಶಮನ ನೀಡಬಲ್ಲವು. ಅವುಗಳಲ್ಲಿ ಒಂದು ರೋಸ್‌ಮೆರಿ ತೈಲದ ಬಳಕೆ. ಅರೆತಲೆಶೂಲೆಯ ಉಪಶಮನಕ್ಕೆ ರೋಸ್‌ಮೆರಿ ಬಳಕೆ ಹೇಗೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Woman having headache. stressed, Migraine, World Brain Tumor day
Koo

ತಲೆಯನ್ನು ಕುಟ್ಟಿ ಪುಡಿಮಾಡುವಂಥ ನೋವು, ಕೆಲವೊಮ್ಮೆ ತಲೆಯ ಒಂದೇ ಭಾಗಕ್ಕೆ ನೋವು, ಹೊಟ್ಟೆ ತೊಳೆಸಿದಂತಾಗಿ ವಾಂತಿ, ಬೆಳಕು ಮತ್ತು ಶಬ್ದಕ್ಕೆ ತೊಂದರೆ ಹೆಚ್ಚಾಗುವುದು, ಕಣ್ಣಲ್ಲಿ ಬಣ್ಣ ಕಾಣುವುದು, ದೃಷ್ಟಿ ಮಂಜಾಗುವುದು… ಇಂಥವೆಲ್ಲಾ ಮೈಗ್ರೇನ್‌ ಲಕ್ಷಣಗಳು. ಅರೆತಲೆಶೂಲೆ ಎಂದೂ ಕರೆಯಲಾಗುವ ಮೈಗ್ರೇನ್‌ ತಲೆನೋವು ನೀಡುವ ಹಿಂಸೆ ಅಷ್ಟಿಷ್ಟೇ ಅಲ್ಲ. ಒಮ್ಮೆ ಮೈಗ್ರೇನ್‌ ಆರಂಭವಾದರೆ, ಹಲವಾರು ಗಂಟೆಗಳು ಅಥವಾ ಒಂದೆರಡು ದಿನಗಳವರೆಗೆ ನಿತ್ಯದ ಕೆಲಸವನ್ನೂ ಮಾಡಲಿಕ್ಕಾಗದಷ್ಟು ಅವಸ್ಥೆ ಹದಗೆಡುತ್ತದೆ. ವೈದ್ಯರ ಸಲಹೆಯ ಜೊತೆಗೆ, ಕೆಲವು ಹೆಚ್ಚುವರಿ ಪ್ರಯತ್ನಗಳಿಂದ ಜೀವನಶೈಲಿಯಲ್ಲಿ, ಆಹಾರಕ್ರಮಗಳಲ್ಲಿ ಕೆಲವು ಬದಲಾವಣೆ ಮತ್ತು ಬೆರಳೆಣಿಕೆಯ ಮನೆಮದ್ದುಗಳ ನೆರವಿನಿಂದ ಈ ತಲೆಶೂಲೆಯನ್ನು ನಿಯಂತ್ರಣದಲ್ಲಿಡಲು ಸಾಧ್ಯ. ಅವುಗಳಲ್ಲಿ ನೈಸರ್ಗಿಕ ಸುಗಂಧ ತೈಲಗಳ ಬಳಕೆಯೂ ಒಂದು ಕ್ರಮ. ಉದಾ, ರೋಸ್‌ಮೆರಿ, ಲ್ಯಾವೆಂಡರ್‌ ಅಥವಾ ಪೆಪ್ಪರ್‌ಮಿಂಟ್‌ ತೈಲಗಳನ್ನು ಮೈಗ್ರೇನ್‌ ಹತೋಟಿಗೆಂದು ಬಳಸಲಾಗುತ್ತದೆ. ಅವುಗಳಲ್ಲಿ ರೋಸ್‌ಮೆರಿ ತೈಲದ ಬಳಕೆ ಹೇಗೆ ಎಂಬುದನ್ನು (Migraine Problem) ನೋಡೋಣ.

Migraine

ಹೇಗೆ ಉಪಯುಕ್ತ?

ರೋಸ್‌ಮೆರಿ ತೈಲವನ್ನು ಶತಮಾನಗಳಿಂದ ಸಾಂಪ್ರದಾಯಿಕ ಔಷಧಗಳಲ್ಲಿ ಬಳಸಲಾಗುತ್ತದೆ. ಭಾರತಕ್ಕೆ ಇದು ಇತ್ತೀಚೆಗೆ ಪರಿಚಯಗೊಂಡರೂ ಪಶ್ಚಿಮ ದೇಶಗಳಲ್ಲಿ ಇದನ್ನು ಅಡುಗೆಗೂ ಬಳಸಲಾಗುತ್ತದೆ. ಮನೆಮದ್ದಿಗೂ ಇದು ಬಳಕೆಯಲ್ಲಿದೆ. ಅದರಲ್ಲೂ ಮೈಗ್ರೇನ್‌ನಂಥ ಸಮಸ್ಯೆಗಳಿಗೆ ಕೆಲವು ರೀತಿಯ ಸುವಾಸನೆಗಳು ಪರಿಣಾಮಕಾರಿ ಉಪಶಮನವನ್ನು ಒದಗಿಸುವ ಹಿನ್ನೆಲೆಯಲ್ಲಿ, ರೋಸ್‌ಮೆರಿಯಂಥ ನೈಸರ್ಗಿಕ ಸುಗಂಧದ್ರವ್ಯಗಳು ವ್ಯಾಪಕವಾಗಿ ಬಳಕೆಯಲ್ಲಿವೆ.

Rosemary Anti Infective Foods

ಲೇಪನ

ರೋಸ್‌ಮೆರಿ ತೈಲದ ಒಂದೆರಡು ಹನಿಯನ್ನು ಕೊಬ್ಬರಿ ಎಣ್ಣೆ ಇಲ್ಲವೇ ಬಾದಾಮಿ ಎಣ್ಣೆಯಂಥ ಇನ್ನೊಂದು ಎಣ್ಣೆಯೊಂದಿಗೆ ಬೆರೆಸಿಕೊಳ್ಳಿ. ಇದನ್ನು ಹಣೆ, ಹುಬ್ಬಿನ ಅಕ್ಕಪಕ್ಕದಲ್ಲೆಲ್ಲ ಲೇಪಿಸಬೇಕು. ಕುತ್ತಿಗೆಯ ಹಿಂಭಾಗಕ್ಕೂ ಧಾರಾಳವಾಗಿ ಲೇಪಿಸಬಹುದು. ಇದರಿಂದ ಹೊರಹೊಮ್ಮುವ ಆಹ್ಲಾದಕರ ಪರಿಮಳವು ಮನಸ್ಸಿನ ಒತ್ತಡ ಕಡಿಮೆ ಮಾಡಿ, ನರಗಳನ್ನು ಶಾಂತಗೊಳಿಸುತ್ತದೆ. ಮನಸ್ಸಿಗೆ ಶಾಂತ ಭಾವ ಬರುತ್ತಿದ್ದಂತೆ ಮೈಗ್ರೇನ್‌ ತೀವ್ರತೆ ಕಡಿಮೆಯಾಗುತ್ತದೆ.

ಅರೋಮಾಥೆರಪಿ

ಇದೂ ಸಹ ಪರಿಮಳವನ್ನು ಆಘ್ರಾಣಿಸುವ ಚಿಕಿತ್ಸೆಯೇ. ಇದಕ್ಕಾಗಿ ಮೀಸಲಾಗಿರುವ ಸಣ್ಣ ಸ್ಟೀಮರ್‌ನಲ್ಲಿ ಒಂದೆರಡು ಹನಿ ರೋಸ್‌ಮೆರಿ ತೈಲವನ್ನು ಹಾಕಿ, ಸ್ಟೀಮರ್‌ಗೆ ಚಾಲನೆ ನೀಡಿ. ಇದರಿಂದ ಹೊರಹೊಮ್ಮುವ ಸುಗಂಧಪೂರಿತ ಆವಿಯನ್ನು ಆಘ್ರಾಣಿಸಿ. ಇಂಥ ಸ್ಟೀಮರ್‌ಗಳು ಇಲ್ಲದಿದ್ದರೆ, ಬಿಸಿ ನೀರಿಗೆ ಒಂದೆರಡು ಹನಿ ರೋಸ್‌ಮೆರಿ ತೈಲ ಹಾಕಿ. ಟವೆಲ್‌ ಮುಚ್ಚಿಕೊಂಡು, ಇದರ ಆವಿಗೆ ಮುಖವೊಡ್ಡಿ ದೀರ್ಘವಾಗಿ ಉಸಿರೆಳೆದುಕೊಳ್ಳಿ.

ಇದನ್ನೂ ಓದಿ: Migraine Control: ಮೈಗ್ರೇನ್‌ನಿಂದ ಪಾರಾಗುವುದು ಹೇಗೆ?

ಕಂಪ್ರೆಸ್‌

ಇದೊಂದು ರೀತಿಯಲ್ಲಿ ಸುಗಂಧತೈಲದ ಶಾಖ ಎನ್ನಬಹುದು. ಬಿಸಿ ನೀರಿಗೆ ಒಂದೆರಡು ಹನಿ ರೋಸ್‌ಮೆರಿ ತೈಲ ಸೇರಿಸಿ. ಈ ನೀರಿನಲ್ಲಿ ಸ್ವಚ್ಛ ಟವೊಲ್‌ ಅದ್ದಿ ಹಿಂಡಿ. ಈ ಬಿಸಿ ಬಟ್ಟೆಯಲ್ಲಿ ಹಣೆ ಮತ್ತು ಕುತ್ತಿಗೆಯ ಹಿಂಭಾಗಗಳಿಗೆ ಶಾಖ ಕೊಡಿ. ಇದನ್ನೇ ಹತ್ತಾರು ಬಾರಿ ಪುನರಾವರ್ತಿಸಬೇಕು. ಒಂದೊಮ್ಮೆ ಬಿಸಿ ಅನುಭವದಿಂದ ಸಮಸ್ಯೆ ಹೆಚ್ಚಾಗುತ್ತದೆ ಎನಿಸಿದರೆ, ಸುಗಂಧ ತೈಲವನ್ನು ಬಿಸಿ ನೀರಿನ ಬದಲು ತಣ್ಣೀರಿಗೆ ಹಾಕಿ, ಕೋಲ್ಡ್‌ ಪ್ಯಾಕ್‌ ಕೊಡಬಹುದು.
ಇವೆಲ್ಲವುಗಳ ಜೊತೆಗೆ ಧಾರಾಳವಾಗಿ ನೀರು ಕುಡಿಯಿರಿ. ದಾಕ್ಷಿಣ್ಯ ಬಿಟ್ಟು ನಿದ್ದೆ ಮಾಡಿ. ಸಾಕಷ್ಟು ವಿಶ್ರಾಂತಿಯನ್ನು ಮನಸ್ಸು ಮತ್ತು ದೇಹಕ್ಕೆ ನೀಡುವುದು ಮೈಗ್ರೇನ್‌ ಹತೋಟಿಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಮಾತ್ರವಲ್ಲ, ಯೋಗ, ಧಾನ್ಯ, ಪ್ರಾಣಾಯಾಮದಂಥ ಒತ್ತಡ ಶಮನ ಮಾರ್ಗಗಳು ಬದುಕಿನ ಭಾಗವಾಗಿರಲಿ.
ರೋಸ್‌ಮೆರಿ ತೈಲ ಸಾಮಾನ್ಯವಾಗಿ ಎಲ್ಲ ರೀತಿಯ ಚರ್ಮಕ್ಕೂ ಹೊಂದಿಕೆ ಆಗುವಂಥದ್ದು. ಆದರೂ ಮೊದಲ ಬಾರಿಗೆ ಉಪಯೋಗಿಸುವ ಮುನ್ನ ಪ್ಯಾಚ್‌ ಟೆಸ್ಟ್‌ ಮಾಡುವುದು ಒಳಿತು. ಈ ತೈಲವನ್ನು ನೇರವಾಗಿ ಚರ್ಮದ ಮೇಲೆ ಪ್ರಯೋಗಿಸಬೇಡಿ. ಇದನ್ನು ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿಯೇ ಹಚ್ಚಿಕೊಳ್ಳಿ. ಇದರಿಂದ ಅಲರ್ಜಿ ಆಗುವ ಸಾಧ್ಯತೆ ಕಡಿಮೆ.

Continue Reading

ಆರೋಗ್ಯ

How Much Salt Is Too Much: ಉಪ್ಪು ಅತಿಯಾಗದಿರಲಿ; ದಿನಕ್ಕೆ ನಾವೆಷ್ಟು ಉಪ್ಪು ತಿನ್ನುತ್ತಿದ್ದೇವೆ ಗೊತ್ತಿರಲಿ

How Much Salt Is Too Much ಉಪ್ಪು ಇಂದು ಅನೇಕ ಇತರ ಆಹಾರಗಳ ಮೂಲಕವೂ ನಮ್ಮ ದೇಹ ಸೇರುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ನಾವು ಉಪ್ಪನ್ನು ನಮ್ಮ ದೇಹಕ್ಕೆ ನೀಡುತ್ತಿದ್ದೇವೆ. ಹೊರಗೆ ಪ್ಯಾಕೆಟ್ಟುಗಳಲ್ಲಿ ದೊರಕುವ ಕುರುಕಲು ಸೇರಿದಂತೆ ನಾನಾ ಆಹಾರ ವಸ್ತುಗಳಲ್ಲಿ ಇಂದು ಅಗತ್ಯಕ್ಕಿಂತ ಹೆಚ್ಚೇ ಉಪ್ಪು ಇರುತ್ತದೆ. ಹೀಗಾಗಿ ನಮ್ಮ ಬದಲಾದ ಆಹಾರ ಶೈಲಿಯ ಪರಿಣಾಮವಾಗಿ ಇಂದು ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚೇ ಉಪ್ಪು ಸೇರುವ ಮೂಲಕ ಇದರ ವ್ಯತಿರಿಕ್ತ ಪರಿಣಾಮಗಳನ್ನೂ ನಾವು ಎದುರಿಸುತ್ತಿದ್ದೇವೆ.

VISTARANEWS.COM


on

How Much Salt Is Too Much
Koo

ಉಪ್ಪು ಎಂಬ ವಸ್ತು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಉಪ್ಪಿಲ್ಲದೆ ಒಂದು ದಿನವನ್ನು ದೂಡುವುದು ಕೂಡಾ ಕಷ್ಟವೇ ಸರಿ. ಉಪ್ಪಿಗಿಂತ ಬೇರೆ ರುಚಿಯೇ ಇಲ್ಲ ಎಂದು ಹಿರಿಯರು ಹೇಳಿದ್ದು ಇದಕ್ಕಾಗಿಯೇ. ಉಪ್ಪಿನ ರುಚಿ, ಉಪ್ಪು ಹಾಕಿದ ಆಹಾರದ ಜೊತೆಗಿದ್ದರೆ ತಿಳಿದೀತು. ಉಪ್ಪಿಲ್ಲದ ಊಟ ನೀರಸವಾಗಿ, ಬದುಕೇ ವ್ಯರ್ಥವಾಗಿ ಕಂಡೀತು. ಇಂತಹ ಉಪ್ಪು ನಮಗೆ ನಿತ್ಯ ಜೀವನದಲ್ಲಿ ಕೇವಲ ಊಟಕ್ಕೆ, ಆಹಾರಕ್ಕೆ ಮಾತ್ರವೇ ಅಲ್ಲ, ಹಲವಾರು ಕೆಲಸಗಳಿಗೂ ಸಹಾಯ ಮಾಡುತ್ತದೆ. ವಸ್ತುಗಳನ್ನು ಶುದ್ಧವಾಗಿ ತೊಳೆಯಲು ಉಪ್ಪು ಕೆಲಸಕ್ಕೆ ಬರುತ್ತದೆ. ಆಹಾರವನ್ನು ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸಿಡುವಲ್ಲಿಯೂ ಉಪ್ಪು ಬಹುಮುಖ್ಯ ಪಾತ್ರ ವಹಿಸುತ್ತದೆ. ಉಪ್ಪಿನಲ್ಲಿರುವ ಸೋಡಿಯಂ ಹಾಗೂ ಇತರ ಖನಿಜಾಂಶಗಳು ನಮ್ಮ ದೇಹಕ್ಕೆ ಪೋಷಣೆಯನ್ನು ಒದಗಿಸುತ್ತದೆ. ಇಂತಹ ಉಪ್ಪು ಇಂದು ಅನೇಕ ಇತರ ಆಹಾರಗಳ ಮೂಲಕವೂ ನಮ್ಮ ದೇಹ ಸೇರುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ನಾವು ಉಪ್ಪನ್ನು ನಮ್ಮ ದೇಹಕ್ಕೆ ನೀಡುತ್ತಿದ್ದೇವೆ. ಹೊರಗೆ ಪ್ಯಾಕೆಟ್ಟುಗಳಲ್ಲಿ ದೊರಕುವ ಕುರುಕಲು ಸೇರಿದಂತೆ ನಾನಾ ಆಹಾರ ವಸ್ತುಗಳಲ್ಲಿ ಇಂದು ಅಗತ್ಯಕ್ಕಿಂತ ಹೆಚ್ಚೇ ಉಪ್ಪು ಇರುತ್ತದೆ. ಹೀಗಾಗಿ ನಮ್ಮ ಬದಲಾದ ಆಹಾರ ಶೈಲಿಯ ಪರಿಣಾಮವಾಗಿ ಇಂದು ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚೇ ಉಪ್ಪು ಸೇರುವ ಮೂಲಕ ಇದರ ವ್ಯತಿರಿಕ್ತ ಪರಿಣಾಮಗಳನ್ನೂ ನಾವು ಎದುರಿಸುತ್ತಿದ್ದೇವೆ. ಹೃದ್ರೋಗ, ಹೈಪರ್‌ಟೆನ್ಶನ್‌ ಸೇರಿದಂತೆ ಹಲವು ಸಮಸ್ಯೆಗಳು ಸಣ್ಣ ವಯಸ್ಸಿನಲ್ಲೇ ಎಡತಾಕುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಒಬ್ಬ ಆರೋಗ್ಯವಂತ ದಿನಕ್ಕೆ ೫ ಗ್ರಾಂಗಿಂತ ಹೆಚ್ಚು ಸೋಡಿಯಂ ಸೇವಿಸಬಾರದು. ಐಸಿಎಂಆರ್‌ ಹೇಳುವಂತೆ ಒಬ್ಬನಿಗೆ ಪ್ರತಿನಿತ್ಯ ೧.೧ರಿಂದ ೩.೩ ಗ್ರಾಂ ಸೋಡಿಯಂ ಅಥವಾ ೨.೮ರಿಂದ ೮.೩ ಗ್ರಾಂ ಸೋಡಿಯಂ ಕ್ಲೋರೈಡ್‌ ಅಗತ್ಯವಿದೆ. ಆದರೆ, ಸದ್ಯ ನಾವೆಲ್ಲರೂ ನಮ್ಮ ದೇಹಕ್ಕೆ ನೀಡುತ್ತಿರುವ ಸೋಡಿಂ ಇದರ ದುಪ್ಪಟ್ಟಿದೆ. ಆಧುನೀಕರಣ, ಆಧುನಿಕ ಆಹಾರ ಶೈಲಿಯ ಪರಿಣಾಮದಿಂದ ನಾವು ನಮ್ಮ ದೇಹಕ್ಕೆ ಅಗತ್ಯವಿರುವ ಸೋಡಿಯಂಗಿಂತ ಹೆಚ್ಚೇ ಸೋಡಿಯಂ ತಿನ್ನುವ ಕಾರಣ ಈ ಬಗ್ಗೆ ನಾವು ಗಂಭೀರವಾಗಿ ಯೋಚನೆ ಮಾಡಬೇಕಿದೆ.
ಹಾಗಾದರೆ, ಸೋಡಿಯಂ ನಮ್ಮ ದೇಹಕ್ಕೆ ಅನಗತ್ಯವಾಗಿ ಸೇರದಂತೆ ಮಾಡಲು ನಾವು ಯಾವ ಕ್ರಮ ಕೈಗೊಳ್ಳಬಹುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಈ ಕೆಲವು ಕ್ರಮಗಳನ್ನು ನೀವು ಗಂಭೀರವಾಗಿ (How Much Salt Is Too Much) ಪರಿಗಣಿಸಬಹುದು.

Salt Effect On Body
  • ಬೇಳೆಕಾಳುಗಳಲ್ಲಿ ಸೋಡಿಯಂ ಅತ್ಯಂತ ಕಡಿಮೆ ಇದೆ. ಇವುಗಳಲ್ಲಿ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಪ್ರೊಟೀನ್‌, ಪೊಟಾಶಿಯಂ, ಪಾಸ್ಪರಸ್‌ ಹಾಗೂ ನಾರಿನಂಶವಿದೆ. ಹಾಗಾಗಿ, ಬೇಳೆ ಕಾಳುಗಳ ಸೇವನೆಯನ್ನು ಹೆಚ್ಚು ಮಾಡಿ. ಮಾಂಸ ಸೇವಿಸುವವರಾಗಿದ್ದರೆ, ಸಂಸ್ಕರಿಸಿದ ಮಾಂಸಕ್ಕೆ ಬದಲಾಗಿ ತಾಜಾ ಮಾಂಸವನ್ನೇ ಬಳಸಿ.
  • ತಾಜಾ ಹಾಲು, ಪನೀರ್‌, ಮೊಸರು ಇವುಗಳಲ್ಲಿ ಕಡಿಮೆ ಸೋಡಿಯಂ ಇರುತ್ತದೆ. ಸಂಸ್ಕರಿಸಿದ ಚೀಸ್‌ನಲ್ಲಿ ಹೆಚ್ಚು ಸೋಡಿಯಂ ಇರುತ್ತದೆ.
  • ಹಣ್ಣುಗಳು ಹಾಗೂ ತರಕಾರಿಗಳ ಪೈಕಿ, ಆಯಾ ಕಾಲಕ್ಕೆ ದೊರೆಯುವುದನ್ನೇ ಹೆಚ್ಚು ಬಳಸಿ. ಋತುಮಾನಕ್ಕೆ ಅನುಗುಣವಾಗಿ ದೊರೆಯುವ ತರಕಾರಿ ಹಣ್ಣುಗಳನ್ನು ಸೇವನೆ ಮಾಡಿ. ತಾಜಾ ಆಹಾರಗಳಲ್ಲಿ ಸೋಡಿಯಂ ಕಡಿಮೆ ಇರುತ್ತದೆ. ಸೋಡಿಯಂ ಕಡಿಮೆ ಇರುವ ಆಹಾರಗಳಲ್ಲಿ ಸಹಜವಾಗಿಯೇ ಪೊಟಾಶಿಯಂ ಹೆಚ್ಚು ಇರುತ್ತದೆ. ಪೊಟಾಶಿಯಂ ಹೈಪರ್‌ ಟೆನ್ಶನ್‌ ಸೇರಿದಂತೆ ಹಲವು ಸಮಸ್ಯೆಗೆ ಆರೋಗ್ಯಕರವಾದ ಪೋಷಕಾಂಶವಾಗಿದೆ. ಒಣಹಣ್ಣುಗಳನ್ನೂ ತಿನ್ನಬಹುದು. ಆದರೆ, ಒಣಹಣ್ಣುಗಳನ್ನು ಸಂಸ್ಕರಿಸಿ ಮಾಡಿದ ಆರೋಗ್ಯಕರದ ಹೆಸರಿನಲ್ಲಿ ಉಪ್ಪು ಸಕ್ಕರೆ ಸೇರಿಸಿದ ಪ್ಯಾಕೆಟ್ಟುಗಳ ಆಹಾರಗಳನ್ನು ಕಡಿಮೆ ಮಾಡಿ. ತಾಜಾ ಒಣಹಣ್ಣುಗಳಾಗಿದ್ದರೆ ಒಳ್ಳೆಯದೇ. ಟೊಮೆಟೋ ಕೆಚಪ್‌ಗಳು, ಸಾಸ್‌ಗಳು, ಡಿಪ್‌ಗಳು ಇತ್ಯಾದಿಗಳ ಬಳಕೆ ಆದಷ್ಟು ಕಡಿಮೆ ಮಾಡಿ.
  • ಪುಡಿ ಉಪ್ಪಾದರೂ ಸರಿ, ಹಿಮಾಲಯನ್‌ ಕಲ್ಲುಪ್ಪಾದರೂ ಸರಿ, ಉಪ್ಪು ಉಪ್ಪೇ. ಅದು ಅತಿಯಾಗಬಾರದು. ಹೀಗಾಗಿ, ಬಹುಮುಖ್ಯವಾಗಿ ನಿಯಂತ್ರಣ ಸಾಧಿಸಬೇಕಾದ ಆಹಾರ ಎಂದರೆ ಅದು ಕುರುಕಲು ತಿಂಡಿಗಳು. ಹೊರಗೆ ದೊರೆಯುವ ಚಿಪ್ಸ್‌ ಸೇರಿದಂತೆ ನಾನಾ ಬಗೆಯ ಆಕರ್ಷಕ ಕುರುಕಲು ತಿಂಡಿಗಳ ಬಳಕೆ ಆದಷ್ಟೂ ಕಡಿಮೆ ಮಾಡಿ. ಇದನ್ನು ನಿಯಂತ್ರಿಸಿದರೆ ನಿಮ್ಮ ದೇಹಕ್ಕೆ ಅಧಿಕವಾಗ ಸೇರುವ ಉಪ್ಪಿನ ಪ್ರಮಾಣ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬರುತ್ತದೆ. ಹಾಗಂತ ಯಾವುದಕ್ಕೂ ಉಪ್ಪು ಹಾಕದೆ ತಿನ್ನಬೇಕಾಗಿಲ್ಲ. ಅಗತ್ಯ ಪ್ರಮಾಣದ ಉಪ್ಪು ದೇಹಕ್ಕೆ ಬೇಕೇ ಬೇಕು ಎಂಬುದೂ ನೆನಪಿನಲ್ಲಿರಲಿ.
Continue Reading

ಆರೋಗ್ಯ

Beer Side Effect: ಬಿಯರ್‌ ಕುಡಿದರೆ ತೂಕ ಹೆಚ್ಚುತ್ತದೆ ಎನ್ನುವುದು ನಿಜವೇ?

ಬೇಸಿಗೆಗೆ ತಂಪಾಗುವುದಕ್ಕೆ, ಮಳೆಗಾಲಕ್ಕೆ ಬೆಚ್ಚಗಿರುವುದಕ್ಕೆ, ಚಳಿಗಾಲದ ಶೀತ ಓಡಿಸುವುದಕ್ಕೆ… ಹೀಗೆ ಯಾವುದೇ ಕಾರಣಕ್ಕಾದರೂ ಬಿಯರ್‌ ಹಿಡಿದು ʻಚಿಯರ್ಸ್‌ʼ ಹೇಳುವವರಿದ್ದಾರೆ. ಆದರೆ ಬೇಡವೆಂದರೂ ಹೊರಗಿಣುಕಿ ಎಲ್ಲರೆದುರು ಮರ್ಯಾದೆಯನ್ನು ಹರಾಜು ಹಾಕುವ ʻಬಿಯರ್‌ ಬೆಲ್ಲಿʼಗಳಿಗೆ ಏನು ಮದ್ದು ಮಾಡುವುದು? ಇಷ್ಟಕ್ಕೂ ಬಿಯರ್‌ ಕುಡಿಯುವುದರಿಂದ ತೂಕ ಹೆಚ್ಚುವುದು ನಿಜವೇ? ಈ (Beer Side Effect) ಬರಹ ಓದಿ.

VISTARANEWS.COM


on

Beer Side Effect
Koo

ಬಿಯರ್‌ ಕೈಯಲ್ಲಿ ಹಿಡಿದು ʻಚಿಯರ್ಸ್‌ʼ ಹೇಳುವವರ ಸಂಖ್ಯೆ ಆಗಸದಲ್ಲಿನ ಚುಕ್ಕಿಗಳಂತೆ… ಎಣಿಸಲಾಗದು. ಮನದಲ್ಲಿರುವ ಭಾವ ಯಾವುದೇ ಇರಲಿ, ಅವೆಲ್ಲಕ್ಕೂ ಕೈಯಲ್ಲಿರುವ ಗ್ಲಾಸೇ ಮದ್ದು ಎಂದು ನಂಬಿದವರಿದ್ದಾರೆ. ಅಂದರೆ ಬೇಸರ, ಖುಷಿ, ಶೋಕ, ಉತ್ಸಾಹ, ಮುರಿದೋದ ಮನಸ್ಸು, ಆಫೀಸಿನ ಪ್ರಮೋಶನ್ನು ಮುಂತಾದ ಎಲ್ಲವಕ್ಕೂ ಇದೊಂದೇ ಪಥ್ಯ. ಬಿಯರನ್ನು ʻನಂಬಿ ಕೆಟ್ಟವರಿಲ್ಲʼ ಎಂಬುದು ಇವರ ನಿಷ್ಠೆಗೆ ಸಾಕ್ಷಿ. ಆದರೂ ತಂತಮ್ಮ ʻಹೊಟ್ಟೆಪಾಡನ್ನುʼ ನೋಡಿಕೊಳ್ಳಬೇಡವೇ? ಬೇಡವೆಂದರೂ ಹೊರಗಿಣುಕಿ ಎಲ್ಲರೆದುರು ಮರ್ಯಾದೆಯನ್ನು ಹರಾಜಾಕುವ ʻಬಿಯರ್‌ ಬೆಲ್ಲಿʼಗಳಿಗೆ ಏನು ಮದ್ದು ಮಾಡುವುದು? ಇಷ್ಟಕ್ಕೂ ಬಿಯರ್‌ ಕುಡಿಯುವುದರಿಂದ (Beer Side Effect) ತೂಕ ಹೆಚ್ಚುವುದು ನಿಜವೇ?

beer

ಏನಿದು ಬಿಯರ್‌?

ಬಿಯರ್‌ ಎಂದರೆ ಆಲ್ಕೋಹಾಲ್‌ ಅಲ್ಲವೇ ಅಲ್ಲ ಎಂದು ಯಾರಾದರೂ ನಂಬಿಸಲು ಯತ್ನಿಸಿದರೆ, ಯಾವುದಕ್ಕೂ ಇರಲಿ ಈ ವಿಷಯ ನಿಮ್ಮಲ್ಲಿ! ಗೋದಿ, ಬಾರ್ಲಿ ಮುಂತಾದ ಧಾನ್ಯಗಳಿಂದ ಸಿದ್ಧವಾಗುವ ಆಲ್ಕೋಹಾಲ್‌ ಇರುವಂಥ ಪೇಯವಿದು. ಮೊದಲಿಗೆ ಈ ಧಾನ್ಯಗಳನ್ನು ಹುರಿದು ಒಡೆದುಕೊಳ್ಳಲಾಗುತ್ತದೆ. ಅದನ್ನು ನೀರಿನಲ್ಲಿ ನೆನೆಸಿಟ್ಟು, ಅದರ ನೈಸರ್ಗಿಕ ಸಕ್ಕರೆಯಂಶವನ್ನು ಬೇರ್ಪಡಿಸಿ, ಸಂಸ್ಕರಿಸಿ, ಯೀಸ್ಟ್‌ ಸೇರಿಸಿ ಬಿಯರ್‌ ಸಿದ್ಧ ಮಾಡಲಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಆಲ್ಕೋಹಾಲ್‌ ಎಲ್ಲಿದೆ? ಯೀಸ್ಟ್‌ ಸೇರಿಸಿದ ನಂತರ ಇದರಲ್ಲಿ ಆಲ್ಕೋಹಾಲ್‌ ಮತ್ತು ಇಂಗಾಲದ ಡೈಆಕ್ಸೈಡ್‌ ಬಿಡುಗಡೆ ಆಗುತ್ತದೆ. ಸಾಮಾನ್ಯವಾಗಿ ಬಿಯರ್‌ನಲ್ಲಿ 4-6 ಶೇ. ಆಲ್ಕೋಹಾಲ್‌ ಇರುತ್ತದೆ. ಆದರೆ ಪಾನಪ್ರಿಯರ ಪಾಲಿಗೆ ಇದು ಏನೂ ಅಲ್ಲ! ಹಾಗಾಗಿ ಸ್ಟ್ರಾಂಗ್‌ ಬಿಯರ್‌ಗಳಿಗೆ ಬೇಡಿಕೆ ಹೆಚ್ಚು. ಇನ್ನು, ಶೇ. ೪೦ರಷ್ಟು ಆಲ್ಕೋಹಾಲ್‌ ಹೊಂದಿರುವ ಕಠೋರ ಬಿಯರ್‌ಗಳೂ ಲಭ್ಯವಿವೆ. ಇದರಲ್ಲಿ ಬಳಸುವ ಧಾನ್ಯ, ಆಲ್ಕೋಹಾಲ್‌ ಪ್ರಮಾಣ ವ್ಯತ್ಯಾಸವಾದಂತೆ ಬಿಯರ್‌ನ ರುಚಿ, ಬಣ್ಣಗಳೂ ಭಿನ್ನವಾಗುತ್ತವೆ. ಇದಿಷ್ಟು ಬಿಯರ್‌ನ ಪ್ರವರ. ಇದನ್ನು ಕುಡಿದರೆ ಡೊಳ್ಳು ಹೊಟ್ಟೆ ಗುಂಡಂದಿರಾಗುವುದು ಹೌದೇ? ಅರೆ! ಇದೇನು ಸುಮ್ಮನೆ ಹೇಳುವುದಲ್ಲ… ಕುಡಿದು ತಲೆ ಬೆಳ್ಳಗಾದವರ ಅನುಭವದ ಮಾತುಗಳಿವು. ಆಲ್ಕೋಹಾಲ್‌ ಪೇಯಗಳ ಕ್ಯಾಲರಿಗಳು ಹೆಚ್ಚು. ಅವೆಲ್ಲ ಶರೀರಕ್ಕೆ ಬೇಕಾಗುವಂಥ ಸತ್ವಗಳಲ್ಲದೆ, ಖಾಲಿ ಕ್ಯಾಲರಿಗಳು. ಇದರ ಸಮಸ್ಯೆಯೆಂದರೆ ಹೊಟ್ಟೆ ತುಂಬುವುದಿಲ್ಲ. ಅಂದರೆ ದೇಹಕ್ಕೆ ಕ್ಯಾಲರಿಗಳು ಹೋಗಿದ್ದು ಹೌದು, ಆದರೆ ಹೊಟ್ಟೆ ಹಸಿದೇ ಇರುತ್ತದೆ. ಹಾಗಾಗಿ ಈಗ ಕುಡಿದಿದ್ದು ಸಾಲದೆಂಬಂತೆ ಮತ್ತಷ್ಟು ತಿನ್ನುವುದು ಅನಿವಾರ್ಯ. ಜೊತೆಗೆ, ಈ ಪೇಯಗಳ ಜೊತೆಗೆ ತಿನ್ನುವುದೆಲ್ಲ, ಜಿಡ್ಡು ಮತ್ತು ಉಪ್ಪಿನ ತಿನಿಸುಗಳು. ಇವೆಲ್ಲವುಗಳ ಪರಿಣಾಮವೆಂದರೆ, ಅಗತ್ಯಕ್ಕಿಂತ ಅತಿ ಹೆಚ್ಚಿನ ಕ್ಯಾಲರಿ ಒಳಗೆ ಹೋಗುವುದು. ಜೊತೆಗೆ, ದೇಹದಲ್ಲಿ ಕೊಬ್ಬು ಕರಗಿಸುವ ಪ್ರಯತ್ನದಲ್ಲಿ ಇದ್ದವರಿಗೆ ಹಿನ್ನಡೆಯಾಗುವುದು. ನೋಡಿ, ಪಾನಪ್ರಿಯರ ಜೀವನಾನುಭವ ಸುಳ್ಳೇನಲ್ಲವಲ್ಲ!

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಫೈಟೊಈಸ್ಟ್ರೋಜೆನ್‌

ಬಿಯರ್‌ನ ರುಚಿ ಹೆಚ್ಚಿಸುವುದಕ್ಕೆ ಹಾಪ್‌ ಗಿಡದ ಹೂವುಗಳನ್ನು ಬಳಸಲಾಗುತ್ತದೆ. ಈ ಹೂವುಗಳಿಗೆ ವಿಭಿನ್ನ ಕಹಿ ರುಚಿಯೊಂದಿದ್ದು, ಬಿಯರ್‌ನ ರುಚಿ ಹತ್ತಿಸುವ ಕಹಿಗೆ ಇದೇ ಕಾರಣ. ಇದರ ರುಚಿ ಹೆಚ್ಚಿಸಲು ಸಾಕಷ್ಟು ಸಿಹಿಯನ್ನು ಸೇರಿಸುವುದರಿಂದ, ಈ ಕಹಿ ರುಚಿಯನ್ನೂ ಇದಕ್ಕೆ ಸೇರಿಸಲಾಗುತ್ತದೆ. ಈ ಹಾಪ್‌ ಹೂವುಗಳಲ್ಲಿ ಫೈಟೊ ಈಸ್ಟ್ರೋಜೆನ್‌ಗಳು ಹೇರಳವಾಗಿವೆ. ಅಂದರೆ, ಸ್ತ್ರೀ ಹಾರ್ಮೋನುಗಳಾದ ಈಸ್ಟ್ರೋಜೆನ್‌ಗಳಂತೆ ವರ್ತಿಸುವ, ಆದರೆ ಅದಲ್ಲದ, ಅಂಶಗಳಿವು. ಇದರಲ್ಲಿರುವ ಗಮ್ಮತ್ತೇನೆಂದರೆ, ಪುರುಷರ ಹಾರ್ಮೋನುಗಳನ್ನು ಏರುಪೇರು ಮಾಡುವ ಈ ಫೈಟೊ ಈಸ್ಟ್ರೋಜೆನ್‌ಗಳು, ಹೊಟ್ಟೆಯ ಸುತ್ತಳತೆಯನ್ನು ಹಿಗ್ಗಿಸುತ್ತಾ ಹೋಗುತ್ತವೆ. ಅಲ್ಲಿಗೆ ತಪ್ಪು ಕುಡಿಯುವವರದ್ದಲ್ಲ, ಫೈಟೊಈಸ್ಟ್ರೋಜೆನ್‌ದು! ಹಾಗಾಗಿ, ಬಿಯರ್‌ ಕುಡಿಯುವುದು ಕೇವಲ ಹೊಟ್ಟೆಯ ಸುತ್ತಳತೆಯನ್ನು ಹೆಚ್ಚಿಸುವುದಷ್ಟೇ ಅಲ್ಲ, ದೇಹದ ಒಟ್ಟಾರೆ ತೂಕವನ್ನೂ ಏರಿಸುತ್ತದೆ. ಇದರಿಂದ ಹೃದಯದ ತೊಂದರೆಗಳು, ಯಕೃತ್ತಿನ ಸಮಸ್ಯೆಗಳು, ರಕ್ತದೊತ್ತಡ, ಮಧುಮೇಹ, ಟ್ರೈಗ್ಲಿಸರೈಡ್‌ ಹೆಚ್ಚಳ ಮುಂತಾದ ಹತ್ತಾರು ಸಮಸ್ಯೆಗಳು ಅಮರಿಕೊಳ್ಳುತ್ತವೆ. ಪಾನಪ್ರಿಯರಿಗೆ ಯಾವ ರೋಗ ಆದೀತು ಎಂಬುದನ್ನು ಆಯ್ದುಕೊಳ್ಳುವುದಕ್ಕೂ ದಾರಿಯಿಲ್ಲ. ಇರುವ ದಾರಿಯೆಂದರೆ, ಇಂಥವನ್ನೆಲ್ಲ ಮಿತಗೊಳಿಸುವುದು.

Continue Reading

Latest

Health Tips Kannada: ನೆನಪಿಡಿ, ನಾಲಿಗೆ ಬಯಸುವ ಆಹಾರಗಳನ್ನೆಲ್ಲ ನಿಮ್ಮ ಮಿದುಳು ಬಯಸದು!

Health Tips Kannada: ಆಧುನಿಕ ಜೀವನಶೈಲಿಯೂ ಒಂದಿಲ್ಲೊಂದು ಬಗೆಯ ತಿನಿಸುಗಳನ್ನು ವಾರಕ್ಕೆರಡು ಬಾರಿಯಾದರೂ ತಿನ್ನುವಂತೆ ಮಾಡುತ್ತದೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಇವನ್ನು ನೋಡಿದಾಗ, ನೆನೆಸಿಕೊಂಡಾಗ ಬಾಯಲ್ಲಿ ನೀರೂರುವಂತೆ ಮಾಡುತ್ತವೆ. ಈ ಎಲ್ಲ ಆಹಾರಗಳು ನಮಗೆ ಆಯಾ ಕ್ಷಣಕ್ಕೆ ಸಂತೋಷವನ್ನು ನೀಡಬಲ್ಲವಾದರೂ, ನಿಜಕ್ಕೂ ನಮ್ಮ ಮಿದುಳಿಗೆ ಸಂತೋಷ ನೀಡಬಲ್ಲವೇ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Health Tips Kannada
Koo

ಬಗೆಬಗೆಯ (Health Tips Kannada) ಐಸ್‌ಕ್ರೀಂ, ಚಾಕೋಲೇಟ್‌, ಬ್ರೌನಿ ಡೋನಟ್‌ಗಳು, ಕೇಕ್‌-ಪೇಸ್ಟ್ರಿಗಳು, ಪಿಜ್ಜಾ ಬರ್ಗರ್‌ಗಳು ಬಾಯಲ್ಲಿ ನೀರೂರಿಸುವ ತಿನಿಸುಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ಇವೆಲ್ಲ ನಮಗಿಷ್ಟವಿಲ್ಲ ಎಂದು ಹೇಳುವ ಮಂದಿ ಸಿಗುವುದು ಬಹಳ ಕಷ್ಟ. ಪುಟಾಣಿ ಮಕ್ಕಳಿಂದ ಹಿಡಿದು, ಮುದುಕರವರೆಗೆ ಎಲ್ಲರೂ ಇಂತಹ ಆಹಾರದ ಹೆಸರು ಕೇಳುತ್ತಲೇ ಬಾಯಿ ಚಪ್ಪರಿಸುವವರೇ. ಗೆಳೆಯರೆಲ್ಲ ಜೊತೆ ಸೇರಿದಾಗ, ಯಾಕೋ ಬೇಸರವೆನಿಸಿದಾಗ, ಬೇಸಿಗೆಯ ಬಿಸಿಲಿಗೆ, ಮಳೆಗಾಲದ ಚಳಿಗೆ ಅಥವಾ ʻಯಾರು ಅಡುಗೆ ಮಾಡುತ್ತಾರೆʼ ಎಂದೆನಿಸುವ ಉದಾಸೀನದ ಸಂಜೆಗಳಲ್ಲಿ ಈ ಎಲ್ಲ ತಿನಿಸುಗಳೂ ನಮ್ಮನ್ನು ತಮ್ಮ ಬಳಿಗೆ ಕರೆಯುತ್ತವೆ. ಆಧುನಿಕ ಜೀವನಶೈಲಿಯೂ ಕೂಡಾ ಇಂತಹ ಒಂದಿಲ್ಲೊಂದು ಬಗೆಯ ತಿನಿಸುಗಳನ್ನು ವಾರಕ್ಕೆರಡು ಬಾರಿಯಾದರೂ ತಿನ್ನುವಂತೆ ಮಾಡುತ್ತವೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಇವನ್ನು ನೋಡಿದಾಗ,, ನೆನೆಸಿಕೊಂಡಾಗ ಬಾಯಲ್ಲಿ ನೀರೂರುವಂತೆ ಮಾಡುತ್ತವೆ. ಈ ಎಲ್ಲ ಆಹಾರಗಳು ನಮಗೆ ಆಯಾ ಕ್ಷಣಕ್ಕೆ ಸಂತೋಷವನ್ನು ನೀಡಬಲ್ಲವಾದರೂ, ನಿಜಕ್ಕೂ ನಮ್ಮ ಮಿದುಳಿಗೆ ಸಂತೋಷ ನೀಡಬಲ್ಲವೇ?

Health Tips Kannada

ಖಿನ್ನತೆಗೆ ದೂಡಬಹುದು:

ಖಂಡಿತಾ ಇಲ್ಲ. ಇವಾವುವೂ ನಿಮ್ಮ ಮಿದುಳಿಗೆ ಸಂತೋಷ ನೀಡುವ ಆಹಾರಗಳಲ್ಲ. ಬದಲಾಗಿ ನಿಮ್ಮ ದುಃಖವನ್ನು, ಬೇಸರವನ್ನು, ಏಕತಾನತೆಯ ಭಾವವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಹೌದು. ಆ ಕ್ಷಣದಲ್ಲಿ, ಸಂತೋಷ ಸಿಕ್ಕರೂ, ಖುಷಿಯೆನಿಸದರೂ, ಇಂತಹ ಆಹಾರಗಳಿಗೆ ನಮ್ಮನ್ನು ಬೇಸರಕ್ಕೆ ತಳ್ಳುವ ಗುಣವಿದೆ. ಇನ್ನಷ್ಟು ಮತ್ತಷ್ಟು ಇಂತಹ ಆಹಾರವನ್ನು ಬಯಸುವ ನಮ್ಮ ಮನಸ್ಸು ನಮ್ಮನ್ನು ಮತ್ತಷ್ಟು ಖಿನ್ನತೆಗೆ ದೂಡುತ್ತದೆ.

ಒಂದು ಅಧ್ಯಯನದ ಪ್ರಕಾರ, ಇಂತಹ ಆಹಾರಗಳನ್ನು ಅಥವಾ, ಪೋಷಕಾಂಶಗಳ ಕೊರತೆಯಿರುವ ಆಹಾರವನ್ನೇ ತಿಂದ ಮಂದಿಯ ಮಿದುಳಿನ ಆರೋಗ್ಯ ದಿನೇದಿನೇ ಹದಗೆಟ್ಟಿವೆ. ಅಷ್ಟೇ ಅಲ್ಲ, ಕಾಲಕ್ರಮೇಣ ಇಂತಹ ಆಹಾರ ತಿಂದವರು ಬಹುಬೇಗನೆ ಖಿನ್ನತೆ ಹಾಗೂ ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಒಳಗಾಗಿರುವುದು ಅದ್ಯಯನಗಳಿಂದ ತಿಳಿದುಬಂದಿದೆ.

ನಮಗೆ ಖುಷಿಯೆನಿಸುವ ಆಹಾರ ನಮ್ಮ ಮಿದುಳಿಗೆ ಖುಷಿಕೊಡಬೇಕೆಂದೇನಿಲ್ಲ. ಮಿದುಳಿಗೆ ಖುಷಿ ಕೊಡುವ ಆಹಾರಗಳೇ ಬೇರೆ. ತಾಜಾ ಹಣ್ಣುಗಳು ಹಾಗೂ ತರಕಾರಿಗಳು, ಬೇಳೆ ಕಾಳುಗಳು, ಹಿತಮಿತವಾಗಿ ಎಣ್ಣೆ (ಒಳ್ಳೆಯ ಎಣ್ಣೆ), ಮೊಳಕೆ ಕಾಳುಗಳು, ಮೀನು, ಒಣ ಬೀಜಗಳು, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಮೊಟ್ಟೆ, ಕೋಳಿ ಇತ್ಯಾದಿ ನಮ್ಮ ಮಿದುಳನ್ನೂ ಆರೋಗ್ಯವಾಗಿ ಖಷಿಯಾಗಿ ಇಡುವಂತಹ ಆಹಾರಗಳು ಎಂದು ಅದ್ಯಯನ ಹೇಳುತ್ತದೆ.

Health Tips Kannada

ಮಿದುಳಿನ ಮೇಲೆ ಪರಿಣಾಮ:

ಈ ಎಲ್ಲ ಆಹಾರಗಳೂ ನಮ್ಮ ಮಿದುಳನ್ನು ಇದ್ದಕ್ಕಿದ್ದಂತೆ ಉಲ್ಲಾಸದಾಯಕವನ್ನಾಗಿ ಮಾಡಲಾಗದಿದ್ದರೂ, ಇವು ದೀರ್ಘಕಾಲಿಕವಾಗಿ ಮಿದುಳಿನ ಮೇಲೆ ಉತ್ತಮ ಪರಿಣಾಮ ಬೀರುವ ಸಾಮರ್ಥ್ಯ ಉಳ್ಳವಾಗಿವೆ. ಸಂಸ್ಕರಿಸಿದ ಆಹಾರಗಳು ಹಾಗೂ ಫಟಾಫಟ್‌ ಆಧುನಿಕ ತಿನಿಸುಗಳು ನಮ್ಮನ್ನು ದಿಢೀರ್‌ ಸೆಳೆವ ಹಾಗೂ ಉಲ್ಲಾಸದಾಯಕವನ್ನಾಗಿ ಮಾಡುವ ಗೂಣ ಹೊಂದಿದ್ದರೂ ನಮ್ಮ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತೆಯೇ ಮಿದುಳಿನ ಮೇಲೆಯೂ ಕೆಟ್ಟ ಪರಿಣಾಮ ಬೀರಬಲ್ಲವು.

ಇದನ್ನೂ ಓದಿ:Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

ಮಾನಸಿಕವಾಗಿ ಖಿನ್ನತೆ ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುವ ಮಂದಿಯ ಆಹಾರಕ್ರಮ ಗಮನಿಸಿದರೂ ಇದಕ್ಕೆ ಪುಷ್ಟಿ ದೊರೆಯುತ್ತದೆ. ನಿಮ್ಮ ನಾಲಿಗೆ ಬಯಸುವ ಆಹಾರಗಳನ್ನು ನಿಮ್ಮ ಮಿದುಳು ಬಯಸದು ಎಂಬುದನ್ನು ನೆನಪಿನಲ್ಲಿಡಿ. ಪ್ಯಾಕೇಜ್ಡ್‌ ಸ್ನ್ಯಾಕ್‌ಗಳು, ಆಲ್ಕೋಹಾಲ್‌, ಸೋಡಾ ಹಾಗೂ ಮಾರುಕಟ್ಟೆಯ ಇತರ ಪ್ಯಾಕೇಜ್ಡ್‌ ಡ್ರಿಂಕ್‌ಗಳು, ಪ್ರೆಂಚ್‌ ಫ್ರೈಗಳು, ಡೋನಟ್‌, ವೈಟ್‌ ಬ್ರೆಡ್‌, ಸಂಸ್ಕರಿಸಿದ ಮಾಂಸ, ಬೆಣ್ಣೆ ಹಾಗೂ ಫುಲ್‌ ಕೊಬ್ಬಿರುವ ಚೀಸ್‌, ಕೆಚಪ್‌, ಸಿರಪ್‌, ಡಿಪ್‌ ಹಾಗೂ ಡ್ರೆಸ್ಸಿಂಗ್‌ಗಳು ಎಲ್ಲವೂ ಮಿದುಳಿಗೆ ನಿಜಕ್ಕೂ ಖುಷಿ ಕೊಡದ ಆಹಾರಗಳು ಎಂಬುದನ್ನು ನೆನಪಿಡಿ.

Continue Reading
Advertisement
Kuwait Fire
ಕರ್ನಾಟಕ4 mins ago

Kuwait Fire: ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ ವಿಜಯಕುಮಾರ್ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಟ್ಟ ಸಿಎಂ

Karnataka Weather Forecast
ಮಳೆ16 mins ago

Karnataka Weather : ಗುಡುಗು, ಸಿಡಿಲಿನ ಮಳೆಗೆ ಮನೆಯ ಗೋಡೆ ಕುಸಿತ; ನಾಳೆಗೂ ಇದೆ ಅಲರ್ಟ್‌

Narendra Modi
ದೇಶ29 mins ago

Narendra Modi: 3ನೇ ಸಲ ಗೆಲ್ಲಿಸಿದ ವಾರಾಣಸಿ ಜನತೆಗೆ ಧನ್ಯವಾದ ಎಂದ ಮೋದಿ; ಗೆದ್ದ ಬಳಿಕ ಮೊದಲ ಭೇಟಿ!

Electric Shock
ವಿಜಯಪುರ43 mins ago

Electric shock : ಮೀನು ಹಿಡಿಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಬಾಲಕರಿಬ್ಬರು ಮೃತ್ಯು; ಕುಟುಂಬಸ್ಥರ ಆಕ್ರಂದನ

Woman having headache. stressed, Migraine, World Brain Tumor day
ಆರೋಗ್ಯ49 mins ago

Migraine Problem: ಮೈಗ್ರೇನ್‌ ಉಪಶಮನಕ್ಕೆ ರೋಸ್‌ಮೆರಿ ಸುಗಂಧ ತೈಲ ಮದ್ದು!

Indian Women
ವಿದೇಶ1 hour ago

ಭಾರತದಿಂದ ಅಮೆರಿಕಕ್ಕೆ ತೆರಳಿ, 29 ವರ್ಷದ ಯುವತಿಯನ್ನು ಕೊಂದ ಪಂಜಾಬ್‌ ವ್ಯಕ್ತಿ; ಇಷ್ಟೇಕೆ ಸೇಡು?

Pavithra Gowda
ಪ್ರಮುಖ ಸುದ್ದಿ1 hour ago

Pavithra Gowda: ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಅಸ್ವಸ್ಥ; ಆಸ್ಪತ್ರೆಗೆ ಶಿಫ್ಟ್‌

International Yoga Day 2024
ಫ್ಯಾಷನ್1 hour ago

International Yoga Day 2024: ಯುವತಿಯರ ಯೋಗಾಭ್ಯಾಸಕ್ಕೆ ಸಾಥ್‌ ನೀಡುವ 3 ಶೈಲಿಯ ಫ್ಯಾಷನ್‌ವೇರ್ಸ್

wild animals Attack
ಕೊಡಗು1 hour ago

Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

Viral Video
ಕ್ರಿಕೆಟ್2 hours ago

Viral Video: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ಪಾಕ್​ ವೇಗಿ; ತಡೆದು ನಿಲ್ಲಿಸಿದ ಪತ್ನಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌