Hair care | ಫಳಫಳಿಸುವ ತಲೆಕೂದಲಿಗೆ ಸತ್ವಯುತ ಆಹಾರವೇ ಮೂಲ - Vistara News

ಆರೋಗ್ಯ

Hair care | ಫಳಫಳಿಸುವ ತಲೆಕೂದಲಿಗೆ ಸತ್ವಯುತ ಆಹಾರವೇ ಮೂಲ

ಗಾಳಿ, ನೀರು, ಆಹಾರ ಎಲ್ಲವುಗಳಿಂದಲೂ ನಮ್ಮ ತಲೆಕೂದಲು ಪುಷ್ಟಿ ಪಡೆಯುತ್ತದೆ ಅಥವಾ ಹಾಳಾಗುತ್ತದೆ. ಹೀಗಾಗಿ ಆರೋಗ್ಯಕರ ಆಹಾರವೇ ನಳನಳಿಸುವ ತಲೆಕೂದಲಿಗೆ ಮದ್ದು.

VISTARANEWS.COM


on

Hair care
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆ ಕಾಲವೊಂದಿತ್ತು, ನೀರೆಯರೆಂದರೆ ನೀಳವೇಣಿಯರು ಎಂಬ ಭಾವ ತಾನಾಗಿತ್ತು. ಕೂದಲು ಎಂಥೆಂಥ ಕೆಲಸಕ್ಕೆಲ್ಲಾ ಸಂಗಾತಿ… ಚಂದ ಕಾಣಲು, ವಯ್ಯಾರ ಮಾಡಲು, ನಾಚಿಕೆ ತೋರಲು, ಬೇಸರ ಕಳೆಯಲು, ಹೊತ್ತು ಹಾಳುಮಾಡಲು, ಹೆರಳು ಹಾಕುವ ನೆವದಲ್ಲಿ ಹರಟೆ ಹೊಡೆಯಲು, ಕೋಪ ತೋರಲು, ಜಗಳ ಕಾಯಲು… ಒಂದೇ ಎರಡೇ. ಈಗಿನವರಿಗೆ ಉದ್ದ ಕೂದಲೇ ಅಪರೂಪ, ಹಾಗಾದರೆ ಈ ಭಾವಗಳನ್ನೆಲ್ಲಾ ತೋರಿಸುವುದಿಲ್ಲವೇ ಎಂದರೆ, ಹಾಗಲ್ಲ. ಸಿರಿಮುಡಿಯ ಝಳಪಿಲ್ಲದೆಯೇ ಇದಿಷ್ಟೂ ಭಾವಗಳನ್ನು ಪ್ರಕಟಿಸುವುದು ಅನಿವಾರ್ಯ. ಉಪ್ಪಿನಕಾಯಿ ಇಲ್ಲದಿದ್ದರೇನು, ಊಟ ಮಾಡುವುದಿಲ್ಲವೇ? ಹಾಗೆಯೆ. ಆದರೆ ಉದ್ದ ಕೂದಲು ಇದ್ದವರ ಸಂಖ್ಯೆ ಕಡಿಮೆಯಾಗಿರುವುದಂತೂ ಹೌದು. ಯಾರನ್ನು ಕೇಳಿದರೂ, ʻಕೂದಲು ತುಂಬಾ ಉದುರುತ್ತಿದೆʼ ಎಂದೇ ದೂರು ಹೇಳುತ್ತಾರೆ. ಈಗಿನ ಗಾಳಿ, ನೀರು, ಆಹಾರ ಎಲ್ಲದರಲ್ಲೂ ಸಮಸ್ಯೆ ಇರುವಾಗ ಇದು ಸಹಜವೇ. ಮಾತ್ರವಲ್ಲ, ನಮ್ಮ ವಂಶವಾಹಿಗಳು, ವಯಸ್ಸು, ಆರೋಗ್ಯ, ತೆಗೆದುಕೊಳ್ಳುವ ಔಷಧ, ಆಹಾರ ಸಹ ನಮ್ಮ ಕೂದಲ ಮೇಲೆ ಪರಿಣಾಮ ಬೀರುತ್ತದೆ.

ವಯಸ್ಸು ಮತ್ತು ವಂಶವಾಹಿಗಳು ನಮ್ಮ ನಿಯಂತ್ರಣದಲ್ಲಿ ಇಲ್ಲದ ವಿಷಯಗಳು. ಔಷಧಗಳ ಬಳಕೆ ಕೆಲವೊಮ್ಮೆ ಅಗತ್ಯವಾದರೂ ಆಹಾರ ಸೇವನೆ ನಮ್ಮ ಹತೋಟಿಯಲ್ಲಿರುವುದು ಹೌದಲ್ಲ. ಸಮತೋಲಿತ ಆಹಾರದ ಸೇವನೆಯಿಂದ ಕೂದಲುಗಳ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅಪೌಷ್ಟಿಕ ಆಹಾರದಿಂದ ಕೂದಲು ಉದುರುವುದನ್ನು ತಡೆಗಟ್ಟಲಾಗದು. ಕೂದಲುಗಳ ಸಮೃದ್ಧಿಗೆ ವಿಟಮಿನ್‌ ಡಿ, ಬಿ೧೨, ಕಬ್ಬಿಣ, ಬಯೋಟಿನ್‌, ರೈಬೋಫ್ಲೇವಿನ್‌ ಮತ್ತು ಕೆಲವು ಸೂಕ್ಷ್ಮ ಪೋಷಕಾಂಶಗಳು ಅಗತ್ಯವಾಗಿ ಬೇಕು. ಇವೆಲ್ಲವಕ್ಕೂ ಪೂರಕವಾದ ಆಹಾರಗಳ ಪಟ್ಟಿ ಇಲ್ಲಿದೆ.

ಮೊಟ್ಟೆ: ಕೂದಲುಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪ್ರೊಟೀನ್‌ ಮತ್ತು ಬಯೋಟಿನ್‌ಗಳು ಮೊಟ್ಟೆಯಲ್ಲಿ ಸಮೃದ್ಧವಾಗಿವೆ. ಕೂದಲು ಉದುರುವುದು ದೇಹದಲ್ಲಿ ಪ್ರೊಟೀನ್‌ ಕೊರತೆಯ ಸಂಕೇತವೂ ಆಗಿರಬಹುದು. ಕೂದಲ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಕೆರಾಟಿನ್‌ ಎಂಬ ಪ್ರೊಟೀನ್‌ ಉತ್ಪತ್ತಿ ಮಾಡಲು ಬಯೋಟಿನ್‌ ಅವಶ್ಯಕ. ಮೊಟ್ಟೆಯಲ್ಲಿ ಜಿಂಕ್‌, ಸೆಲೆನಿಯಂ ಮುಂತಾದ ಹಲವು ಬಗೆಯ ಅಗತ್ಯ ಪೋಷಕಾಂಶಗಳಿದ್ದು, ದೇಹಾರೋಗ್ಯ ಉತ್ತಮಗೊಳ್ಳಲು ನೆರವಾಗುತ್ತವೆ.

ಇದನ್ನೂ ಓದಿ | National Nutrition week | ಹೊಟ್ಟೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟಿನ ಮೊಟ್ಟೆ

ಬೆರಿಗಳು: ಋತುಮಾನದಲ್ಲಿ ದೊರೆಯುವ ಹಲವು ರೀತಿಯ ಕಾಡು ಹಣ್ಣುಗಳು ಸಹ ಸೂಕ್ಷ್ಮ ಪೌಷ್ಟಿಕಾಂಶಗಳು ಮತ್ತು ವಿಟಮಿನ್‌ ಸಿಗಳ ಆಗರ. ಬೆಟ್ಟದ ನೆಲ್ಲಿ ಕಾಯಿ, ನೇರಳೆ, ಅಮಟೆ, ಬಿಂಬಲದಂಥ ಹಲವು ಕಾಡು ಫಲಗಳು ಎ ಮತ್ತು ಸಿ ವಿಟಮಿನ್‌ ಹೇರಳವಾಗಿ ಹೊಂದಿವೆ. ಇದಲ್ಲದೆ, ಚೆರ್ರಿ, ಸ್ಟ್ರಾಬೆರಿಯಂಥ ಹಣ್ಣುಗಳೂ ಸಹ ವಿಟಮಿನ್‌ ಸಿ ಜೀವಸತ್ವದ ಖನಿಗಳು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದೇ ಅಲ್ಲದೆ, ಕೂದಲ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಕೊಲಾಜಿನ್‌ ಉತ್ಪತ್ತಿಗೆ ಮತ್ತು ಕಬ್ಬಿಣದ ಅಂಶವನ್ನು ಹೀರಿಕೊಳ್ಳುವುದಕ್ಕೆ ಸಹಾಯಕವಾಗಿತ್ತದೆ.

ಸೊಪ್ಪು: ಪಾಲಕ್‌, ಮೆಂತೆ, ಸಬ್ಬಸಿಗೆ ಮುಂತಾದ ಸೊಪ್ಪುಗಳು ಕಬ್ಬಿಣ, ವಿಟಮಿನ್‌ಗಳು ಮತ್ತು ಫೋಲೇಟ್‌ಗಳನ್ನು ಹೊಂದಿರುವಂಥವು. ಈ ಆಹಾರಗಳು ಮಾತ್ರವೇ ಅಲ್ಲ, ಬೀಟಾ ಕ್ಯಾರೋಟಿನ್‌ ಸಾಕಷ್ಟು ಪ್ರಮಾಣದಲ್ಲಿರುವ ಬೀಟ್‌ರೂಟ್‌, ಸಿಹಿ ಗೆಣಸು ಮುಂತಾದ ತರಕಾರಿಗಳು ಸಹ ಕೂದಲ ಆರೋಗ್ಯ ವೃದ್ಧಿಗೆ ನೆರವಾಗುತ್ತವೆ.

ಎಣ್ಣೆ ಬೀಜಗಳು: ಒಮೇಗಾ ೩ ಮತ್ತು ವಿಟಮಿನ್‌ ಇ ವಿಫುಲವಾಗಿರುವ ಬಾದಾಮಿ, ಸೂರ್ಯಕಾಂತಿ ಬೀಜ, ಚಿಯಾ ಮತ್ತು ಅಗಸೆ ಬೀಜ ಮುಂತಾದವು ನಮ್ಮ ಆಹಾರದ ಅಗತ್ಯ ಭಾಗ ಆಗಿರಲೇ ಬೇಕಾದಂಥವು. ಜಿಂಕ್‌ ಸೆಲೆನಿಯಂನಂಥ ಇನ್ನಿತರ ಪೌಷ್ಟಿಕಾಂಶಗಳನ್ನೂ ಹೊಂದಿರುವ ಈ ಎಣ್ಣೆ ಬೀಜಗಳು, ನಮ್ಮ ದೇಹಕ್ಕೆ ಹೆಚ್ಚುವರಿ ಕ್ಯಾಲರಿಗಳನ್ನು ಅಷ್ಟಾಗಿ ಸೇರಿಸದೆಯೇ ಉಪಕಾರ ಮಾಡುತ್ತವೆ.

ನಾವೇನು ತಿನ್ನುತ್ತೇವೆ ಎಂಬುದು ನಮ್ಮ ಆರೋಗ್ಯದ ಮೂಲಕ ಪ್ರತಿಫಲಿಸುತ್ತದೆ. ನಳನಳಿಸುವ ಆರೋಗ್ಯ ಬೇಕೆ? ಸತ್ವಯುತ ಆಹಾರ ತಿನ್ನುವುದೊಂದೇ ಮಾರ್ಗ. ಇದಕ್ಕೆ ಕಳ್ಳದಾರಿಗಳಿಲ್ಲ!

ಇದನ್ನೂ ಓದಿ | National nutrition week | ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರ ನಿಮ್ಮ ಕಣ್ಣಿಗೆ ಬೀಳಲಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

ಸಮಾಜದಲ್ಲಿ ಎಲ್ಲರೂ ಒಪ್ಪುವಂಥ, ಮೆಚ್ಚುವಂಥ ದೇಹವನ್ನು ಹೊಂದಬೇಕೆಂಬ (No Diet Day 2024) ಆಸೆ ಜನರಿಗೆ ಇರುತ್ತದೆ. ಹಾಗಾಗಿ, ಹೇಗೆಹೇಗೋ ಡಯೆಟ್‌ ಮಾಡುತ್ತಾ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇದನ್ನು ತಡೆದು ದೇಹದ ಬಗ್ಗೆ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲೆಂದು ʻಡಯೆಟ್‌ ರಹಿತ ದಿನʼ ಆಚರಿಸಲಾಗುತ್ತದೆ. ʻನೊ ಡಯೆಟ್‌ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದು ಗ್ರಹಿಸುವುದಲ್ಲ. ಧನಾತ್ಮಕವಾಗಿ ದೇಹವನ್ನು ಗ್ರಹಿಸುವ ಮತ್ತು ಸೌಂದರ್ಯದ ಭ್ರಮೆಯಲ್ಲಿ ಶರೀರದ ಮೇಲೆ ಹುಚ್ಚು ಡಯೆಟ್‌ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂಬ ಸಂದೇಶವನ್ನು ಸಾರುವ ದಿನವಿದು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

No Diet Day 2024
Koo

ಪ್ರತಿಯೊಬ್ಬರಿಗೂ ಲೋಕದ ಅತಿ ಸುಂದರ (No Diet Day 2024) ಕಾಯವನ್ನೇ ಹೊಂದಬೇಕೆಂಬ ಅಭಿಲಾಷೆ ಇದ್ದರೆ, ಅದೇನು ಅತಿಯಲ್ಲ. ಫ್ಯಾಷನ್‌ ನಿಯತಕಾಲಿಕಗಳಲ್ಲಿ ಫೋಟೋಶಾಪ್‌ ಮಾಡಿದ ತಾರೆಗಳ ಚಿತ್ರಗಳು ಇದಕ್ಕೆ ಇನ್ನಷ್ಟು ಪ್ರೇರಣೆ ನೀಡುತ್ತವೆ. ಹುಡುಗಿಯರಿಗೆ ಬೆನ್ನು-ಹೊಟ್ಟೆ ಒಂದಾಗಿರುವಂತೆ, ಬಳುಕುವ ದೇಹ ಹೊಂದುವ ಮಹದಾಸೆಯಿದ್ದರೆ, ಹುಡುಗರಿಗೆ ದೇಹದ ನರ-ನರಗಳೆಲ್ಲ ಎದ್ದುಬರುವಂತೆ ಸ್ನಾಯುಗಳನ್ನು ಬೆಳೆಸಬೇಕೆಂಬ ಬಯಕೆ ಇರುತ್ತದೆ. ಇವುಗಳ ಹಿಂದೆ ಫಿಟ್‌ನೆಸ್‌ ಉದ್ದೇಶ ಇದ್ದರೆ ಒಂದು ಲೆಕ್ಕ. ಹೆಚ್ಚಿನ ಬಾರಿ ಹಾಗಾಗುವುದೇ ಇಲ್ಲ. ಬದಲಿಗೆ, ಸಮಾಜದಲ್ಲಿ ಎಲ್ಲರೂ ಒಪ್ಪುವಂಥ ಮೆಚ್ಚುವಂಥ ದೇಹವನ್ನು ಹೊಂದಬೇಕೆಂಬ ಆಸೆ ಇದರ ಹಿಂದಿರುತ್ತದೆ. ಹಾಗಾಗಿ, ಹುಕಿಗೆ ಬಿದ್ದವರಂತೆ ಏನಕ್ಕೇನೋ ಡಯೆಟ್‌ ಮಾಡುತ್ತಾ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಅಥವಾ ಜೀವವನ್ನೇ ಕಳೆದುಕೊಳ್ಳುತ್ತಾರೆ. ಇಂಥ ಅನಾರೋಗ್ಯಕರ ಪ್ರವೃತ್ತಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ʻಅಂತಾರಾಷ್ಟ್ರೀಯ ಡಯೆಟ್‌ ರಹಿತ ದಿನʼವನ್ನಾಗಿ ಮೇ ತಿಂಗಳ 6ನೇ ದಿನವನ್ನು ಗುರುತಿಸಲಾಗಿದೆ.

Girl having a cheat day

ಏನಿದರರ್ಥ?

ʻನೊ ಡಯೆಟ್‌ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದು ಗ್ರಹಿಸುವುದಲ್ಲ. ನಮ್ಮ ದೇಹದ ಬಗೆಗಿನ ಕೀಳರಿಮೆಯನ್ನು ಬಿಟ್ಟು, ಧನಾತ್ಮಕವಾಗಿ ದೇಹವನ್ನು ಗ್ರಹಿಸುವ ಮತ್ತು ಸೌಂದರ್ಯದ ಭ್ರಮೆಯಲ್ಲಿ ಶರೀರದ ಮೇಲೆ ಹುಚ್ಚು ಡಯೆಟ್‌ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂಬ ಸಂದೇಶವನ್ನು ಸಾರುವ ದಿನವಿದು. ನಾವಿದ್ದಂತೆಯೇ ನಮ್ಮನ್ನು ಒಪ್ಪಿಕೊಳ್ಳುವುದು ಸಕಾರಾತ್ಮಕ ಜೀವನಕ್ಕೆ ಎಷ್ಟು ಮುಖ್ಯ ಎಂಬ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಸೌಂರ್ಯದ ಹೆಸರಿನಲ್ಲಿ ಎಲ್ಲರೂ ಒಂದೇ ಮಾನದಂಡಕ್ಕೆ ಒಳಪಡುವುದು ಸಾಧ್ಯವಿಲ್ಲ. ಬದಲಿಗೆ, ವಿವಿಧತೆಯೇ ಸೌಂದರ್ಯ ಎಂಬ ಸರಳ ಸೂತ್ರ ಇದರ ಹಿಂದಿದೆ.

ಯಾಕೆ ಬಂತು ಈ ದಿನ?

ಇದು ಪ್ರಾರಂಭವಾಗಿದ್ದು ಬ್ರಿಟನ್‌ನಲ್ಲಿ 1992ರಲ್ಲಿ. ಅಲ್ಲಿನ ಮೇರಿ ಇವಾನ್ಸ್‌ ಯಂಗ್‌ ಈ ದಿನವನ್ನು ಮೊದಲಿಗೆ ಉದ್ದೇಶಿಸಿದ್ದು. ತನ್ನ ದೇಹ ಇರುವ ರೀತಿಯನ್ನು ಒಪ್ಪಿಕೊಳ್ಳಲಾರದೆ, ಆಹಾರ ಕ್ರಮವನ್ನು ಸಿಕ್ಕಾಪಟ್ಟೆ ಏರುಪೇರಾಗಿಸಿಕೊಂಡು, ಅದರಿಂದ ಅನೊರೆಕ್ಸಿಯ ರೋಗಕ್ಕೆ ಆಕೆ ತುತ್ತಾಗಿದ್ದರು. ಇದರಿಂದ ಚೇತರಿಸಿಕೊಂಡ ನಂತರ, ಸೌಂದರ್ಯದ ಹೆಸರಿನಲ್ಲಿ ಅವೈಜ್ಞಾನಿಕ ಡಯೆಟ್‌ಗಳನ್ನು ಪಾಲಿಸುವ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ, ಲಂಡನ್‌ನ ಹೈಡ್‌ ಪಾರ್ಕ್‌ನಲ್ಲಿ ಇದನ್ನು ಪ್ರಾರಂಭಿಸಿದರು. ಅದೊಂದು, ಹತ್ತಿಪ್ಪತ್ತು ಮಂದಿ ಮಹಿಳೆಯರು ಭಾಗವಹಿಸಿದ್ದ, ಸಣ್ಣ ಪಿಕ್‌ನಿಕ್‌ ರೂಪದಲ್ಲಿ ಮೊದಲಾಯಿತು. ಡಯೆಟ್‌ ಹೆಸರಿನಲ್ಲಿ ತಲೆಬುಡವಿಲ್ಲದ ಆಹಾರ ಕ್ರಮಗಳಿಂದ ದೇಹ-ಮನಸ್ಸುಗಳ ಮೇಲೆ ಆಗುವ ವಿಪರೀತ ಪರಿಣಾಮಗಳನ್ನು ತಿಳಿಸುವುದು ಅಂದಿನ ಉದ್ದೇಶವಾಗಿತ್ತು. ತೂಕದ ವಿಷಯಕ್ಕೆ ಅತಿ ಮಹತ್ವ ನೀಡುವುದು, ಯಾವುದೋ ಒಪ್ಪಿತ ಅಳತೆಗಳಿಗೆ ಒಗ್ಗದವರತ್ತ ತಾರತಮ್ಯ ಮಾಡುವುದು ಇಂಥವನ್ನೆಲ್ಲ ಬಿಟ್ಟು, ಆಹಾರದೊಂದಿಗೆ ಆರೋಗ್ಯಕರ ನಂಟು ಬೆಳೆಸಿಕೊಳ್ಳುವುದು ಅಗತ್ಯ. ಇದನ್ನೇ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೆ ಡಯೆಟ್‌ ಮಾಡಬಾರದೆಂದರೆ ಏನೆಂಬುದನ್ನು ಇನ್ನಷ್ಟು ನಿಖರವಾಗಿ ಸ್ಪಷ್ಟಪಡಿಸುವ ಅಗತ್ಯವಿದೆ. ಹಾಗಲ್ಲದಿದ್ರೆ ತಪ್ಪು ಕಲ್ಪನೆಗಳಿಗೆ ಎಡೆಯಾಗಬಹುದು.

Woman dieting and eating a salad

ಏನು ಮಾಡಬೇಕು?

ಮನಸ್ಸಿಗೆ ಬಂದಿದ್ದೆಲ್ಲ ತಿನ್ನುವುದನ್ನು ಪ್ರಚಾರ ಮಾಡುವ ದಿನವಲ್ಲ ಇದು. ಬದಲಿಗೆ ಆರೋಗ್ಯಕರ ಆಹಾರ ಕ್ರಮವನ್ನು ರೂಢಿಸಿಕೊಳ್ಳಲು ಅಂದು ಪ್ರೋತ್ಸಾಹ ನೀಡುವುದು ಮಹತ್ವದ್ದು. ದೇಹ-ಮನಸ್ಸಿಗೆ ಚೈತನ್ಯ ನೀಡುವಂಥ ಸಮತೋಲಿತ ಆಹಾರವನ್ನು ಸೇವಿಸುವುದಕ್ಕಿಂತ ದೇಹದ ತೂಕ, ಸಪೂರ ಕಾಣುವುದು ಮುಖ್ಯವಲ್ಲ. ದೇಹದ ತೂಕ ಕೆಲವೊಮ್ಮೆ ಆನುವಂಶಿಕವಾಗಿ ಬರಬಹುದು, ಹಾರ್ಮೋನುಗಳ ಏರುಪೇರಿನಿಂದ ಬರಬಹುದು, ಔಷಧಿಗಳ ಅಡ್ಡ ಪರಿಣಾಮಗಳಾಗಿರಬಹುದು. ಹಾಗಾಗಿ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಹಾಕದೆ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವತ್ತ ಗಮನ ಕೊಡಿ. ಯಾರದ್ದೋ ಫೋಟೋಶಾಪ್‌ ಮಾಡಿದ ದೇಹಗಳಂತೆ ತಮ್ಮದಿಲ್ಲ ಎಂದು ಕೊರಗಬೇಡಿ. ಒತ್ತಡ ರಹಿತವಾಗಿ ಬದುಕುವತ್ತ ಗಮನ ನೀಡಿ. ಧನಾತ್ಮಕ ಸಿಂತನೆಗಳನ್ನು ಬೆಳೆಸಿಕೊಳ್ಳಿ. ಆರೋಗ್ಯವಂತ ದೇಹದ ಸುಂದರ ನಗುವಿಗಿಂತ ಸುಂದರವಾಗಿದ್ದು ಲೋಕದಲ್ಲಿ ಇನ್ನಾವುದೂ ಇಲ್ಲ.

ಇದನ್ನೂ ಓದಿ: Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

Continue Reading

ಆರೋಗ್ಯ

Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

ನಿತ್ಯವೂ ಮನೆಗಳಲ್ಲಿ ಅಡುಗೆಗೆ ಒಳ್ಳೆಯ ಎಣ್ಣೆಯನ್ನು ನಾವು ಬಳಕೆ ಮಾಡುತ್ತೇವೆ ಎಂದುಕೊಂಡರೂ, ಹೊರಗಿನಿಂದ ತರುವ ಕುರುಕಲು ತಿಂಡಿಗಳು, ಹೊರಗೆ ತಿನ್ನುವ ಆಹಾರ ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವುದು ಸುಲಭವಾಗಿ ಸಿಗುವ ಎಣ್ಣೆಗಳೇ ಆಗಿವೆ. ಹೀಗಾಗಿ, ಒಂದಲ್ಲ ಒಂದು ಬಗೆಯಲ್ಲಿ ಅನಾರೋಗ್ಯಕರ ಎಣ್ಣೆ ನಾವು ಬೇಡವೆಂದರೂ ನಮ್ಮ ಹೊಟ್ಟೆ ಸೇರುತ್ತವೆ. ಈ ಕುರಿತ (Cooking oils) ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Cooking Oils
Koo

ಎಣ್ಣೆಯ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿರುವ ಸತ್ಯವೇ ಆದರೂ, ಸಾಕಷ್ಟು ಆಹಾರಗಳಲ್ಲಿ ಇಂದು ವ್ಯಾಪಕವಾಗಿ ಎಣ್ಣೆಯ ಬಳಕೆಯಾಗುತ್ತದೆ. ಅದರಲ್ಲೂ ಕೆಲವು ಅಗ್ಗದ ಎಣ್ಣೆಗಳು ಇಂದು ಸಂಸ್ಕರಿಸಿದ ಆಹಾರಗಳ ಮೂಲಕ ನಮ್ಮ ಹೊಟ್ಟೆ ಸೇರುವುದು ನಮಗೆ ಗೊತ್ತೇ ಆಗುವುದಿಲ್ಲ. ನಿತ್ಯವೂ ಮನೆಗಳಲ್ಲಿ ಅಡುಗೆಗೆ ಒಳ್ಳೆಯ ಎಣ್ಣೆಯನ್ನು ನಾವು ಬಳಕೆ ಮಾಡುತ್ತೇವೆ ಎಂದು ನಾವು ಅಂದುಕೊಂಡರೂ, ಹೊರಗಿನಿಂದ ತರುವ ಕುರುಕಲು ತಿಂಡಿಗಳು, ಹೊರಗೆ ತಿನ್ನುವ ಆಹಾರಗಳು ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವುದು ಸುಲಭವಾಗಿ ಸಿಗು ಎಣ್ಣೆಗಳೇ ಆಗಿವೆ. ಹೀಗಾಗಿ, ಒಂದಲ್ಲ ಒಂದು ಬಗೆಯಲ್ಲಿ ಅನಾರೋಗ್ಯಕರ ಎಣ್ಣೆ ನಾವು ಬೇಡವೆಂದರೂ ನಮ್ಮ ಹೊಟ್ಟೆ ಸೇರುತ್ತವೆ. ಬನ್ನಿ, ಯಾವೆಲ್ಲ ಎಣ್ಣೆಗಳನ್ನು ನಾವು ನಮ್ಮ ಆಹಾರದಲ್ಲಿ ನಿತ್ಯವೂ ಬಳಸಬಾರದು (Cooking oils) ಎಂಬುದನ್ನು ನೋಡೋಣ.

Palm oil

ಪಾಮ್‌ ಎಣ್ಣೆ

ಇಂದು ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಸಂಸ್ಕರಿಸಿದ ಆಹಾರಗಳಲ್ಲಿ, ಪ್ಯಾಕೇಟ್‌ಗಳಲ್ಲಿ ಬಳಸುವ ಎಣ್ಣೆ ಬಹುಪಾಲು ಪಾಮ್‌ ಎಣ್ಣೆ ಎಂಬುದು ನಿಜವಾದರೂ, ಇದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುವ ಎಣ್ಣೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಕಡಿಮೆ ದರ ಹಾಗೂ ಸುಲಭವಾಗಿ ದೊರೆಯಬಲ್ಲ ಅಗ್ಗದ ಎಣ್ಣೆ ಇದಾಗಿರಿವುದರಿಂದ ಇದನ್ನು ಇಂದು ಆಹಾರ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ಇದರಲ್ಲಿ ಅತ್ಯಂತ ಹೆಚ್ಚು ಸ್ಯಾಚುರೇಟೆಡ್‌ ಫ್ಯಾಟ್‌ ಇರುವುದರಿಂದ ಇದು ಎಲ್‌ಡಿಎಲ್‌ ಕೊಲೆಸ್ಟೆರಾಲ್‌ ಮಟ್ಟವನ್ನು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಇದು ಅತ್ಯಂತ ಕೆಟ್ಟದ್ದು.

Soybean oil

ಸೋಯಾಬೀನ್‌ ಎಣ್ಣೆ

ಕಡಿಮೆ ವಾಸನೆಯುಳ್ಳ ಹಾಗೂ ಅತ್ಯಂತ ಕಡಿಮೆ ಬೆಲೆಗೆ ವ್ಯಾಪಕವಾಗಿ ದೊರೆಯುವ ಸೋಯಾಬೀನ್‌ ಎಣ್ಣೆಯಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆ. ಒಮೆಗಾ 3 ಫ್ಯಾಟಿ ಆಸಿಡ್‌ನ ಅದೇ ಗುಣಗಳನ್ನು ಇದೂ ಹೊಂದಿರುವುದರಿಂದ ಹಾಗೂ ಉರಿಯೂತವನ್ನು ಹೆಚ್ಚಿಸುವ ಸಂಭವ ಇದರಲ್ಲಿ ಹೆಚ್ಚಿರುವುದರಿಂದ ಈ ಎಣ್ಣೆಯ ಬಳಕೆ ಅತಿಯಾಗಬಾರದು. ಒಮೆಗಾ 3 ಫ್ಯಾಟಿ ಆಸಿಡ್‌ನ ಮೂಲಗಳ ಜೊತೆಗೆ ಸಮತೋಲನದಲ್ಲಿ ಇದನ್ನು ಸೇಔಇಸುವುದು ಉತ್ತಮ. ಇದರ ಅತಿಯಾದ ಬಳಕೆ ಸಲ್ಲದು.

Cottonseed oil

ಹತ್ತಿಬೀಜದ ಎಣ್ಣೆ

ಹತ್ತಿಯನ್ನು ತೆಗೆದ ಮೇಳೆ ಅದರ ಬೀಜದಿಂದ ಮಾಡುವ ಎಣ್ಣೆಯಾದ ಕಾಟನ್‌ ಸೀಡ್‌ ಆಯಿಲ್‌ ಅಥವಾ ಹತ್ತಿಬೀಜದ ಎಣ್ಣೆ ಬಹಳಷ್ಟು ಸಂಸ್ಕರಿಸಿದ ಆಹಾರಗಳಲ್ಲಿ ವ್ಯಾಪಕವಾಗಿ ಇಂದು ಬಳಕೆಯಾಗುತ್ತಿದೆ. ಇದರಲ್ಲಿಯೂ ಒಮೆಗಾ 6 ಫ್ಯಾಟಿ ಆಸಿಡ್‌ ಹೇರಳವಾಗಿದೆ. ಹಾಗಾಗಿ ಇದನ್ನು ಅತಿಯಾಗಿ ಬಳಸುವುದರಿಂದ ಉರಿಯೂತ ಹಾಗೂ ಇತರ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

ವೆಜಿಟೆಬಲ್‌ ಆಯಿಲ್

ಈ ಸಾಮಾನ್ಯೀಕರಿಸಿದ ಹೆಸರಿಂದ ಬಹುತೇಕರು ಮೋಸಕ್ಕೆ ಒಳಗಾಗುವುದೇ ಹೆಚ್ಚು. ವೆಜಿಟೆಬಲ್‌ ಆಯಿಲ್‌ ಅಂದಾಕ್ಷಣ, ಆರೋಗ್ಯಕ್ಕೆ ಸಮಸ್ಯೆಯೇನಿಲ್ಲ ಎಂದು ಅಂದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದರೂ, ಈ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋಳ, ಸೋಯಾಬೀನ್‌ ಹಾಗೂ ಸೂರ್ಯಕಾಂತಿ ಎಣ್ಣೆ ಬಳಕೆಯಾಗುತ್ತದೆ. ತೀರಾ ಕೆಟ್ಟದ್ದೇನೂ ಅಲ್ಲದಿದ್ದರೂ, ರಿಫೈನ್ಡ್‌ ಎಣ್ಣೆ ಇದಾಗಿರುವುದರಿಂದ ಹಾಗೂ ಸಾಕಷ್ಟು ರಾಸಾಯನಿಕಗಳು ಈ ಸಂದರ್ಭ ಬಳಕೆಯಾಗಿರುವುದರಿಂದ, ಒಮೆಗಾ 6 ಫ್ಯಾಟಿ ಆಸಿಡ್‌ ಹೆಚ್ಚಿರುವುದರಿಂದ ಈ ಎಣ್ಣೆಯೂ ಹೆಚ್ಚು ಬಳಕೆ ಮಾಡುವುದು ಒಳ್ಳೆಯದಲ್ಲ. ನಿತ್ಯದ ಉಪಯೋಗಕ್ಕೆ ಈ ಎಣ್ಣೆ ಅಷ್ಟು ಯೋಗ್ಯವಲ್ಲ.

Hydrogenated oils

ಹೈಡ್ರೋಜಿನೇಟೆಡ್‌ ಆಯಿಲ್‌ಗಳು

ಹೈಡ್ರೋಜಿನೇಷನ್‌ ಎಂಬ ಪ್ರಕ್ರಿಯೆಗೆ ಒಳಪಡಿಸುವ ಎಣ್ಣೆಗಳು ಇದಾಗಿದ್ದು, ಇದರಲ್ಲಿ ದ್ರವರೂಪದ ಎಣ್ಣೆಯನ್ನು ಘನರೂಪಕ್ಕೆ ಪರಿವರ್ತಿಸಲಾಗುತ್ತದೆ. ಇಂತಹ ಎಣ್ಣೆಗಳಲ್ಲಿ ಟ್ರಾನ್ಸ್‌ ಫ್ಯಾಟ್‌ ಅಧಿಕವಾಗಿರುವುದಲ್ಲದೆ, ಎಲ್‌ಡಿಎಲ್‌ ಕೊಲೆಸ್ಟೆರಾಲ್‌ ಮಟ್ಟವನ್ನು ಇದು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

Continue Reading

ಆರೋಗ್ಯ

Pain Relievers: ಸೈಡ್‌ ಎಫೆಕ್ಟ್‌ ಇಲ್ಲದ ಪ್ರಕೃತಿದತ್ತ ನೋವು ನಿವಾರಕಗಳಿವು

ಸಣ್ಣ ಪುಟ್ಟ ಸಮಸ್ಯೆಗಳಿಗೆ ಪ್ರಕೃತಿ ಆಸರೆಯಾಗುವ ಪರಿಯೇ ಅದ್ಭುತ. ನೋವು, ಊದಿಕೊಂಡ ಗಾಯಗಳಿಂದಾದ ನೋವು ಇತ್ಯಾದಿ ಸಮಸ್ಯೆಗಳಿಗೆ ಕೆಲವು ಸರಳ ಮನೆಮದ್ದುಗಳ ಸಹಾಯವೂ ಕೂಡ ನಮ್ಮ ದೇಹದ ನೋವುಗಳನ್ನು ಸಾಕಷ್ಟು ಶಮನಗೊಳಿಸುವ ತಾಕತ್ತನ್ನು ಹೊಂದಿವೆ. ಮಾನವನು ಕಂಡು ಹಿಡಿದ ನೋವು ನಿವಾರಕ ಮಾತ್ರೆಗಳಿಂದ ತಕ್ಷಣದ ಪರಿಹಾರ ದಕ್ಕಿದರೂ, ಅದರಿಂದ ಸಾಕಷ್ಟು ಅಡ್ಡಪರಿಣಾಮಗಳೂ ಇವೆ. ಈ ಕುರಿತ (Pain relievers) ಮಾಹಿತಿ ಇಲ್ಲಿದೆ.

VISTARANEWS.COM


on

Pain relievers
Koo

ಪ್ರಕೃತಿಯಲ್ಲಿ ನಮ್ಮ ನೋವುಗಳಿಗೆಲ್ಲವೂ ಮದ್ದಿವೆ. ಪ್ರಕೃತಿಯ ಸಾನಿಧ್ಯ ನಮಗೆ ಮಾನಸಿಕ ನೆಮ್ಮದಿಯನ್ನು ನೀಡುವ ಜೊತೆಗೆ ದೇಹಕ್ಕೆ ಆದ ನೋವನ್ನೂ ಕಡಿಮೆ ಮಾಡಲು ಮೂಲಿಕೆಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಮನುಷ್ಯ ತನ್ನ ಆರೋಗ್ಯದ ಸಮಸ್ಯೆಗಳಿಗೆ ವೈದ್ಯ ಜಗತ್ತಿನಲ್ಲಿ ಸಾಕಷ್ಟು ಮುಂದುವರಿದಿದ್ದರೂ, ಕೆಲವು ಸರಳವಾದ ಪ್ರಾಕೃತಿಕ ಆಹಾರಗಳು ಅವನ ಕೈಯನ್ನು ಬಿಡುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಪ್ರಕೃತಿ ಆಸರೆಯಾಗುವ ಪರಿಯೇ ಅದ್ಭುತ. ನೋವು, ಊದಿಕೊಂಡ ಗಾಯಗಳಿಂದಾದ ನೋವು ಇತ್ಯಾದಿ ಸಮಸ್ಯೆಗಳಿಗೆ ಕೆಲವು ಸರಳ ಮನೆಮದ್ದುಗಳ ಸಹಾಯವೂ ಕೂಡ ನಮ್ಮ ದೇಹದ ನೋವುಗಳನ್ನು ಸಾಕಷ್ಟು ಶಮನಗೊಳಿಸುವ ತಾಕತ್ತನ್ನು ಹೊಂದಿವೆ. ಮಾನವನು ಕಂಡು ಹಿಡಿದ ನೋವು ನಿವಾರಕ ಮಾತ್ರೆಗಳಿಂದ ತಕ್ಷಣದ ಪರಿಹಾರ ದಕ್ಕಿದರೂ, ಅದರಿಂದ ಸಾಕಷ್ಟು ಅಡ್ಡಪರಿಣಾಮಗಳೂ ಇವೆ. ಹಾಗಾಗಿ, ಪ್ರಕೃತಿಯೇ ನಮಗೆ ನೀಡಿದ ಕೆಲವು ನೋವು ನಿವಾರಕಗಳೂ ಕೂಡ ಸಾಕಷ್ಟು ನೋವುಗಳನ್ನು ಕಡಿಮೆ ಮಾಡುವಲ್ಲಿ ಸಫಲವಾಗುತ್ತದೆ. ಬನ್ನಿ, ಪ್ರಕೃತಿದತ್ತ ನೋವು ನಿವಾರಕವಾಗಿ ಯಾವೆಲ್ಲ ಆಹಾರಗಳು ಕೆಲಸ ಮಾಡುತ್ತವೆ (Pain relievers) ಎಂಬುದನ್ನು ನೋಡೋಣ.

ginger

ಶುಂಠಿ

ಪ್ರಕೃತಿದತ್ತ ಆಂಟಿ ಇನ್‌ಫ್ಲಮೇಟರಿ ಗುಣಗಳುಳ್ಳ ಆಹಾರಗಳ ಪೈಕಿ ಶುಂಠಿ ಪ್ರಮುಖವಾದದ್ದು. ಇದರಲ್ಲಿ ಅತ್ಯಂತ ಶಕ್ತಿಯುತವಾದ ನೋವು ನಿವಾರಕ ಗುಣಗಳಿದ್ದು ಮಾಂಸಖಂಡಗಳ ಸೆಳೆತ, ಉರಿಯೂತ, ನೋವುಗಳನ್ನು ಇದು ಶಮನಗೊಳಿಸುವಲ್ಲಿ ನೆರವಾಗುತ್ತದೆ. ನೋವುಗಳಿದ್ದಾಗ ರಾತ್ರಿ ಮಲಗುವ ಮೊದಲು ಶುಂಠಿಯ ಚಹಾ ಕುಡಿಯುವ ಮೂಲಕ ಒಳ್ಲೆಯ ನಿದ್ರೆ ಹಾಗೂ ನೋವಿನಿಂದ ಕೊಂಚ ಆರಾಮ ಪಡೆಯಬಹುದು.

Anti-Inflammatory Properties Health Benefits Of Raw Turmeric

ಹಸಿ ಅರಿಶಿನ

ಮಸಾಲೆಯಾಗಿ ನಾವು ನಿತ್ಯ ಅರಿಶಿನವನ್ನು ಉಪಯೋಗಿಸಿದರೂ ಇದರಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ನೋವುಗಳಿಗೆ ಒಳ್ಳೆಯ ಔಷಧಿ. ಇದರಲ್ಲಿ ಆಂಟಿಬಯಾಟಿಕ್‌ ಹಾಗೂ ಆಂಟಿಸೆಪ್ಟಿಕ್‌ ಗುಣಗಳು ಹೇರಳವಾಗಿವೆ. ಈ ಗುಣಗಳು ನೋವುನಿವಾರಕಗಳಂತೆ ಕೆಲಸ ಮಾಡುವ ಮೂಲಕ ನೋವನ್ನು ಕಡಿಮೆ ಮಾಡುವಲ್ಲಿ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ಅರಿಶಿನ ಹಾಕಿದ ಹಾಲನ್ನು ಕುಡಿಯುವ ಮೂಲಕ ಅರಿಶಿನದ ಲಾಭವನ್ನು ಪಡೆಯಬಹುದು.

Anise

ಸೋಂಪು

ಹೊಟ್ಟೆಯುಬ್ಬರಕ್ಕೆ ಹೇಳಿ ಮಾಡಿಸಿದಂಥ ಸೋಂಪು ಅಸಿಡಿಟಿ ಹಾಗೂ ಗ್ಯಾಸ್‌ನ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು. ಹೊಟ್ಟೆಯ ಸಮಸ್ಯೆಗಳು, ಗ್ಯಾಸ್‌ನಿಂದಾಗುವ ನೋವು, ಮಾಂಸಖಂಡಗಳ ಸೆಳೆತ ಇತ್ಯಾದಿ ನೋವುಗಳಿಗೆ ಸೋಂಪು ಅತ್ಯುತ್ತಮ ನೋವು ನಿವಾರಕವಾಗಿ, ಗ್ಯಾಸ್‌ನಿಂದ ಮುಕ್ತಿ ನೀಡುವ ಮನೆಮದ್ದಾಗಿ ಕೆಲಸ ಮಾಡುತ್ತದೆ. ಸೋಂಪನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿಯುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅತಿಯಾಗಿ ಊಟ ಮಾಡಿದಾಗ, ಹೊರಗೆ ತಿಂದು ಬಂದಾಗ, ಸಮಾರಂಭಗಳಲ್ಲಿ ಊಟ ಮಾಡಿದಾಗ ಆಗುವ ಹೊಟ್ಟೆಯುಬ್ಬರಕ್ಕೆ ತಕ್ಷಣವೇ ಹೀಗೆ ಮಾಡುವ ಮೂಲಕ ಸಮಾಧಾನ ಸಿಗಬಹುದು.

ಇದನ್ನೂ ಓದಿ: Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

ಸಣ್ಣ ಪುಟ್ಟ ನೋವುಗಳಿಗೆ, ಯಾವಾಗಲೂ ಪ್ರಕೃತಿದತ್ತ ಇಂತಹ ನೋವು ನಿವಾರಕಗಳು, ಆಂಟಿಸೆಪ್ಟಿಕ್‌ ಗುಣಗಳ ಆಹಾರಗಳನ್ನು ನಮ್ಮ ನಿತ್ಯಾಹಾರದಲ್ಲಿ ಅಳವಡಿಸುವ ಮೂಲಕ ಪರಿಹಾರ ಕಂಡುಕೊಳ್ಳುವುದು ಯಾವಾಗಲೂ ಒಳ್ಳೆಯದು. ಅತಿಯಾದ ಮಾತ್ರೆಗಳ ದಾಸರಾಗುವುದು, ಅಥವಾ ಸಣ್ಣ ಪುಟ್ಟ ನೋವುಗಳಿಗೂ ಮಾತ್ರೆಗಳ ಸಹಾಯ ಪಡೆಯುವುದರಿಂದ ಅಡ್ಡ ಪರಿಣಾಮಗಳನ್ನು ನಾವು ಅನುಭವಿಸಲೇ ಬೇಕಾಗುತ್ತದೆ. ಆದಷ್ಟೂ ಪ್ರಕೃತಿಯ ಕೊಡುಗೆಗಳನ್ನು ಸಮರ್ಪಕವಾಗಿ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸುವುದನ್ನು ನಾವು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಎಂಬುದನ್ನು ಹಿರಿಯರಾದಿಯಾಗಿ ವೈದ್ಯಜಗತ್ತೂ ಕೂಡ ಒಪ್ಪಿಕೊಂಡ ಸತ್ಯ.

Continue Reading

ದೇಶ

Covishield Vaccine: ಮಗಳ ಸಾವಿಗೆ ಕೋವಿಶೀಲ್ಡ್ ಲಸಿಕೆ ಕಾರಣ: ಆಸ್ಟ್ರಾಜೆನಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ತಂದೆ

Covishield Vaccine: ಕೊರೊನಾ ಎದುರಿಸಲು ನೀಡಲಾದ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮವನ್ನು ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿ ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ತಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿ, ಆಸ್ಟ್ರಾಜೆನಿಕಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ವೇಣುಗೋಪಾಲನ್‌ ಗೋವಿಂದನ್‌ ಅವರಿಗೆ ತಮ್ಮ ಮಗಳ ಹಠಾತ್‌ ಸಾವಿಗೆ ಲಸಿಕೆಯೇ ಕಾರಣ ಎಂದು ಹೇಳಿ ನ್ಯಾಯಾಲಯದ ಮೊರೆ ಹೋಗಲು ನಿರ್ಧಿಸಿದ್ದಾರೆ.

VISTARANEWS.COM


on

Covishield Vaccine
Koo

ನವದೆಹಲಿ: ಕೊರೊನಾ (Covid 19) ಎದುರಿಸಲು ನೀಡಲಾದ ಕೋವಿಶೀಲ್ಡ್‌ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿ ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ತಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿ, ಆಸ್ಟ್ರಾಜೆನಿಕಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.

ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟು ಮಾಡಬಹುದು ಎಂದು ಲಸಿಕೆ ತಯಾರಕರು ಇಂಗ್ಲೆಂಡ್‌ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರ ವೇಣುಗೋಪಾಲನ್‌ ಗೋವಿಂದನ್‌ ಅವರಿಗೆ ತಮ್ಮ ಮಗಳ ಹಠಾತ್‌ ಸಾವಿಗೆ ಲಸಿಕೆಯೇ ಕಾರಣ ಇರಬಹುದು ಎಂಬ ಅನುಮಾನ ಕಾಡಿದ್ದು, ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧಿಸಿದ್ದಾರೆ.

ವೇಣುಗೋಪಾಲನ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 2021ರಲ್ಲಿ ಇವರ ಪುತ್ರಿ 20 ವರ್ಷದ ಕಾರುಣ್ಯ ಕೋವಿಶೀಲ್ಡ್ ಪಡೆದ ಬಳಿಕ ಸಾವನ್ನಪ್ಪಿದ್ದರು. ಆಸ್ಟ್ರಾಜೆನಿಕಾ ಸಂಸ್ಥೆ ಬಹಳ ತಡವಾಗಿ ಅಂದರೆ ಹಲವರು ಜೀವ ಕಳೆದುಕೊಂಡ ನಂತರ ತನ್ನ ಲಸಿಕೆಯ ಲೋಪದೋಷಗಳನ್ನು ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿ ದೇಶದಲ್ಲಿ ವ್ಯಾಪಕವಾಗಿ ಹಂಚಿತ್ತು.

ರಕ್ತ ಹೆಪ್ಪುಗಟ್ಟುವಿಕೆಯ ಕಾರಣ ನೀಡಿ 15 ಯುರೋಪಿಯನ್ ದೇಶಗಳು ಕೋವಿಶೀಲ್ಡ್‌ ಬಳಕೆಗೆ ನಿಷೇಧ ಹೇರಿದ ಬಳಿಕವಾದರೂ ಸೆರಂ ಇನ್‌ಸ್ಟಿಟ್ಯೂಟ್‌ ಈ ಲಸಿಕೆಯ ಪೂರೈಕೆಯನ್ನು ಸ್ಥಗಿತಗೊಳಿಸಬೇಕಿತ್ತು. ಆದರೆ ಇದರಿಂದ ತೊಂದರೆಗೊಳಗಾಗಿ ತಮ್ಮವರನ್ನು ಕಳೆದುಕೊಂಡ ಅನೇಕ ಪೋಷಕರು ನ್ಯಾಯಾಲಯಗಳಲ್ಲಿ ಹೋರಾಟ ಮಾಡಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ವೇಣುಗೋಪಾಲನ್ ಹೇಳಿದ್ದಾರೆ. ಈಗಾಗಲೇ ಈ ಲಸಿಕೆಯಿಂದ ಜೀವ ಕಳೆದುಕೊಂಡ ಸಂತ್ರಸ್ತರ 8 ಕುಟುಂಬಗಳು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಸೆರಮ್ ಇಸ್ಟಿಟ್ಯೂಟ್‌ನ ಪೂನಾವಾಲಾ ಅವರು ತಾವು ಮಾಡಿದ ಪಾಪಗಳಿಗೆ ಉತ್ತರ ನೀಡಬೇಕು. ಅವರ ತಪ್ಪಿನಿಂದ ಬಲಿಯಾದ ಜೀವಗಳಿಗೆ ಉತ್ತರ ನೀಡಬೇಕು ಎಂದು ಗೋವಿಂದನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಈ ಲಸಿಕೆಗೆ ಅನುಮೋದನೆ ನೀಡಿದ ಸರ್ಕಾರಿ ಅಧಿಕಾರಿಗಳ ಬಗ್ಗೆಯೂ ಅವರು ಕಿಡಿ ಕಾರಿದ್ದಾರೆ. ಹಾಗೆಯೇ 2021ರಲ್ಲಿ ರಚನಾ ಗಂಗು ಎಂಬವರು ಕೂಡ ತಮ್ಮ 18 ವರ್ಷದ ಮಗಳು ರಿತೈಕಾಳನ್ನು ಕಳೆದು ಕೊಂಡಿದ್ದು, ಇದಕ್ಕೂ ಕೋವಿಶೀಲ್ಡ್‌ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಈ ಹಿಂದೆಯೂ ಅನುಮಾನ ಮೂಡಿಸಿದ್ದವು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆಯು ಈ ವಿವಾದದ ಕುರಿತು ಇನ್ನೂ ಹೇಳಿಕೆ ನೀಡಿಲ್ಲ.

Continue Reading
Advertisement
assault case in bengaluru
ಬೆಂಗಳೂರು1 hour ago

Assault Case : ವಿಕೋಪಕ್ಕೆ ತಿರುಗಿದ ಜಗಳ; ಕಪಾಳಮೋಕ್ಷಕ್ಕೆ ವ್ಯಕ್ತಿ ಬಲಿ

Prajwal Revanna Case site inspection by SIT team in HD Revanna Basavanagudi residence
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ಅತ್ಯಾಚಾರ ಕೇಸ್‌; ಎಚ್‌.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ವಕೀಲರ ಅಸಮಾಧಾನ

No Diet Day 2024
ಆರೋಗ್ಯ2 hours ago

No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

pakistan team
ಕ್ರೀಡೆ2 hours ago

Pakistan Cricket: ಟಿ20 ವಿಶ್ವಕಪ್​ ಗೆದ್ದರೆ ಪಾಕ್​ ಆಟಗಾರರಿಗೆ ಸಿಗಲಿದೆ ಭಾರೀ ಬಹುಮಾನ ಮೊತ್ತ

Gold Rate Today
ಕರ್ನಾಟಕ2 hours ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಚಿನ್ನದ ಬೆಲೆ ಇಂದು ಹೀಗಿವೆ; ತುಸುವೇ ಏರಿಕೆ

Puttakkana makkalu sahana dead
ಕಿರುತೆರೆ2 hours ago

Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ

Rekha Jhunjhunwala
ವಾಣಿಜ್ಯ2 hours ago

Rekha Jhunjhunwala: ಷೇರು ಮಾರುಕಟ್ಟೆಯಲ್ಲಿ ರೇಖಾ ಜುಂಜುನ್‌ವಾಲಾಗೆ 805 ಕೋಟಿ ರೂ. ನಷ್ಟ; ಕಾರಣವೇನು?

viral news
ಕ್ರಿಕೆಟ್2 hours ago

Viral News: ಕ್ರಿಕೆಟ್‌ ಆಡುವಾಗ ಖಾಸಗಿ ಭಾಗಕ್ಕೆ ಚೆಂಡು ಬಡಿದು ಬಾಲಕ ದಾರುಣ ಸಾವು; ವಿಡಿಯೊ ಇದೆ

Sunita Williams
ವಿದೇಶ2 hours ago

Sunita Williams: 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸುನೀತಾ ವಿಲಿಯಮ್ಸ್‌ ಸಜ್ಜು

Namma Metro
ಬೆಂಗಳೂರು3 hours ago

Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ21 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ22 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ22 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌