Hair Falling Remedy: ಕೂದಲುದುರುವಿಕೆ ಕಡಿಮೆ ಮಾಡಲು ಈ ಎಲ್ಲ ಒಣಹಣ್ಣುಗಳು ಹಾಗೂ ಬೀಜಗಳನ್ನು ತಿನ್ನಿ! - Vistara News

ಆರೋಗ್ಯ

Hair Falling Remedy: ಕೂದಲುದುರುವಿಕೆ ಕಡಿಮೆ ಮಾಡಲು ಈ ಎಲ್ಲ ಒಣಹಣ್ಣುಗಳು ಹಾಗೂ ಬೀಜಗಳನ್ನು ತಿನ್ನಿ!

ಕೂದಲ ಬುಡದಲ್ಲಿರುವ ಶಕ್ತಿಯನ್ನು ವೃದ್ಧಿ ಮಾಡುವ ಆಹಾರಗಳನ್ನು ಸೇವನೆ ಮಾಡುವ ಮೂಲಕ, ಕೂದಲ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳನ್ನು ಸೇವನೆ ಮಾಡಬಹುದು. ಬನ್ನಿ, ಯಾವೆಲ್ಲ ಬೀಜಗಳ ಸೇವನೆಯ ಮೂಲಕ ಕೂದಲುದುರುವಿಕೆಯನ್ನು ಹೇಗೆ ತಡೆಗಟ್ಟಬಹುದು (Hair Falling Remedy) ಎಂಬುದನ್ನು ನೋಡೋಣ.

VISTARANEWS.COM


on

hair falling remedy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೂದಲ ಆರೋಗ್ಯದ (hair care) ವಿಚಾರಕ್ಕೆ ಬಂದಾಗ ಬಹುತೇಕರನ್ನು ಕಾಡುವುದು ತಲೆಕೂದಲು ಉದುರುವ ಸಮಸ್ಯೆ (Hair Falling problem). ಸಿಕ್ಕ ಸಿಕ್ಕ ಎಣ್ಣೆಗಳು, ಹೇರ್‌ ಪ್ಯಾಕ್‌ಗಳು, ಮಸಾಜ್‌ಗಳು, ಶಾಂಪೂ ಕಂಡೀಷನರ್‌ಗಳನ್ನೆಲ್ಲ ಟ್ರೈ ಮಾಡಿ ಮಾಡಿ ಬೇಸತ್ತು, ಕೂದಲುದುರುವಿಕೆ ಸಮಸ್ಯೆ ಮಾತ್ರ ಕಡಿಮೆಯೇ ಆಗದು ಎಂದಾದಾಗ ಕೈಚೆಲ್ಲುವ ಮಂದಿ ಅನೇಕ. ಬಹುಶಃ ಒಂದು ದಿನ ತನ್ನ ತಲೆಯ ಕೂದಲೆಲ್ಲ ಉದುರಿಹೋಗಿ ಬೊಕ್ಕತಲೆಯಾಗುತ್ತದೆ ಎಂದು ಅಂದುಕೊಳ್ಳುವವರೇ ಹೆಚ್ಚು. ಆದರೆ, ವಿಚಿತ್ರವೆಂದರೆ, ಕೂದಲ ಹೊರಗಿನ ಪೋಷಣೆಗೆಕೊಟ್ಟ ಗಮನದಷ್ಟೇ ಒಳಗಿನ ಪೋಷಣೆಯತ್ತಲೂ ಗಮನ ಕೊಟ್ಟರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಸತ್ಯವನ್ನು ನಾವು ಮೊದಲು ಮನಗಾಣಬೇಕು. ಕೂದಲ ಬುಡದಲ್ಲಿರುವ ಶಕ್ತಿಯನ್ನು ವೃದ್ಧಿ ಮಾಡುವ ಆಹಾರಗಳನ್ನು ಸೇವನೆ ಮಾಡುವ ಮೂಲಕ, ಕೂದಲ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳನ್ನು ಸೇವನೆ ಮಾಡಬಹುದು. ಬನ್ನಿ, ಯಾವೆಲ್ಲ ಬೀಜಗಳ ಸೇವನೆಯ ಮೂಲಕ ಕೂದಲುದುರುವಿಕೆಯನ್ನು ಹೇಗೆ ತಡೆಗಟ್ಟಬಹುದು (Hair Falling Remedy) ಎಂಬುದನ್ನು ನೋಡೋಣ.

1. ಬಾದಾಮಿ: ಬಾದಾಮಿಯಲ್ಲಿ ವಿಟಮಿನ್‌ ಇ, ಫ್ಯಾಟಿ ಆಸಿಡ್‌ಗಳು ಹಾಗೂ ಬಯೋಟಿನ್‌ ಹೇರಳವಾಗಿರುವುದರಿಂದ ಇದು ಕೂದಲ ಬುಡವನ್ನು ಶಕ್ತಿಯುತವನ್ನಾಗಿ ಮಾಡುವುದಷ್ಟೇ ಅಲ್ಲ, ಕೂದಲಿಗೂ ಶಕ್ತಿಯನ್ನು ತುಂಬಿ, ಕೂದಲು ಉದುರದಂತೆ ಕಾಪಾಡುತ್ತದೆ. ಕೂದಲ ಆರೋಗ್ಯವನ್ನು ಹೆಚ್ಚಿಸುತ್ತದೆ.

almond

2. ವಾಲ್ನಟ್‌: ವಾಲ್ನಟ್‌ನಲ್ಲಿ ಬಯೋಟಿನ್‌ ಅತ್ಯಂತ ಹೆಚ್ಚು ಪ್ರಮಾಣದಲ್ಲಿರುವುದರಿಂದ ಇದು ಚರ್ಮದ ಕಾಂತಿಗೆ ಹಾಗೂ ಕೂದಲ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಕೂದಲನ್ನು ಬಲಯುತವಾಗಿಸಿ, ಸಂರಕ್ಷಿಸುವುದಷ್ಟೇ ಅಲ್ಲ, ಆರೋಗ್ಯಯುತವಾಗಿ ಉದ್ದ ಬೆಳೆಯುವಂತೆ ಮಾಡುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ. ನಿತ್ಯವೂ ಒಂದೋ ಎರಡೋ ವಾಲ್ನಟ್‌ ತಿನ್ನುವ ಮೂಲಕ ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಹೆಚ್ಚಿಸಬಹುದು.

walnut benefits

3. ಬ್ರೆಜಿಲ್‌ ನಟ್:‌ ಬ್ರೆಜಿಲ್‌ ನಟ್‌ನಲ್ಲಿ ಸೆಲೆನಿಯಮ್‌ ಎಂಬ ಖನಿಜಾಂಶವು ಹೇರಳವಾಗಿರುವುದರಿಂದ ಇದು, ಕೂದಲ ಬುಡದ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದಾಗಿರುವುದರಿಂದ ಇದರ ಸೇವನೆ ಕೂದಲಿಗೆ ಮತ್ತಷ್ಟು ಶಕ್ತಿಯನ್ನು ನೀಡುತ್ತದೆ.

4. ಗೋಡಂಬಿ: ಗೋಡಂಬಿಯಲ್ಲಿ ಝಿಂಕ್‌ ಹೇರಳವಾಗಿದ್ದು, ಇದು, ಕೂದಲ ಬುಡದ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಹೀಗಾಗಿ ದಿನವೂ ಒಂದೆರಡು ಗೋಡಂಬಿಯ ಸೇವನೆ ಮಾಡುತ್ತಾ ಬಂದಲ್ಲಿ ಕೂದಲು ಶಕ್ತಿಯುತವಾಗುತ್ತದೆ.

cashews In bowl

ಇದನ್ನೂ ಓದಿ: Health Tips: ಈ ಎಲ್ಲ ಸಾಮಾನ್ಯ ಆಹಾರಗಳನ್ನು ಜೊತೆಯಾಗಿ ತಿನ್ನುವುದು ಒಳ್ಳೆಯದಲ್ಲ ಗೊತ್ತೇ?

5. ಪಿಸ್ತಾ: ಪಿಸ್ತಾ ಕೂಡಾ ಕೂದಲ ಆರೋಗ್ಯದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಬಯೋಟಿನ್‌, ಫ್ಯಾಟಿ ಆಸಿಡ್‌ಗಳು ಹಾಗೂ ವಿಟಮಿನ್‌ ಇ ಇರುವುದರಿಂದ ಇವು ಕೂದಲನ್ನು ಗಟ್ಟಿಗೊಳಿಸಿ ಆರೋಗ್ಯವಾಗಿಡುತ್ತದೆ.

6. ಕಪ್ಪು ಒಣ ದ್ರಾಕ್ಷಿ: ಕಪ್ಪು ಒಣ ದ್ರಾಕ್ಷಿಯಲ್ಲಿ ನೈಸರ್ಗಿಕ ಕಬ್ಬಿಣಾಂಶವು ಹೇರಳವಾಗಿರುವುದರಿಂದ ಇದು ಕೂದಲ ಬುಡದಲ್ಲಿ ಸರಿಯಾದ ರಕ್ತ ಸಂಚಾರವಾಗುವಂತೆ ಮಾಡಿ, ಕೂದಲನ್ನು ಶಕ್ತಿಯುತಗೊಳಿಸುತ್ತದೆ.

dates

7. ಖರ್ಜೂರ: ಖರ್ಜೂರದಲ್ಲೂ ಕಬ್ಬಿಣಾಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದು ಒಟ್ಟು ದೇಹಾರೋಗ್ಯವನ್ನು ಕಾಪಾಡಿ, ಸಾಮರ್ಥ್ಯವನ್ನು ಹೆಚ್ಚು ಮಾಡುವುದಷ್ಟೇ ಅಲ್ಲದೆ, ಕೂದಲ ಬುಡದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತದೆ.ಇದರಿಂದ ಸಹಜವಾಗಿಯೇ ಕೂದಲು ಬಲಗೊಳ್ಳುತ್ತದೆ. ಉದುರುವಿಕೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: Health Tips: ಈ ಎಲ್ಲ ಸಾಮಾನ್ಯ ಆಹಾರಗಳನ್ನು ಜೊತೆಯಾಗಿ ತಿನ್ನುವುದು ಒಳ್ಳೆಯದಲ್ಲ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Dengue Fever: ಇನ್ನೂ ಏರಲಿದೆ ಡೆಂಗ್ಯು ಕೇಸ್‌ ಎಂದ ಆರೋಗ್ಯ ಸಚಿವರು; ಇದುವರೆಗೆ 6 ಸಾವು

Dengue Fever: ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗ್ಯು ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ.

VISTARANEWS.COM


on

dengue fever Dinesh Gundu Rao
Koo

ಬೆಂಗಳೂರು: ಇದುವರೆಗೆ ರಾಜ್ಯದಲ್ಲಿ ಡೆಂಗ್ಯು ಜ್ವರದಿಂದಾಗಿ (Dengue Fever) 6 ಜನ ಸತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಡೆಂಗ್ಯು ಜ್ವರ ಪ್ರಕರಣಗಳು (Dengue Positive) ಇನ್ನೂ ಏರಬಹುದು ಎಂದು ಆರೋಗ್ಯ ಸಚಿವ (Health Minister) ದಿನೇಶ್‌ ಗುಂಡೂರಾವ್‌ (dinesh Gundu Rao) ಎಚ್ಚರಿಸಿದ್ದಾರೆ.

ಡೆಂಗ್ಯು ಹರಡುವಿಕೆ ನಿಯಂತ್ರಣದ ಬಗ್ಗೆ ವಿವಿಧ ಇಲಾಖೆಗಳ ಜೊತೆ ಸಭೆ ಮಾಡಿದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿದರು. ಡೆಂಗ್ಯು ಕಳೆದ ವರ್ಷಕ್ಕಿಂತ ಈ ಬಾರಿ ದುಪ್ಪಟ್ಟಾಗಿದೆ. ಇಲ್ಲಿಯವರೆಗೂ ರಾಜ್ಯದಲ್ಲಿ 6187 ಪ್ರಕರಣ ದಾಖಲಾಗಿದೆ. 6 ಜನ ಸತ್ತಿದ್ದಾರೆ. ಇದರಲ್ಲಿ ಕೋಮಾರ್ಬಿಡಿಟೀಸ್‌ (ಬಿಪಿ, ಮಧುಮೇಹ, ಹೃದಯ ಕಾಯಿಲೆ) ಇದ್ದ ಮೂವರೂ ಸೇರಿದ್ದಾರೆ ಎಂದು ಸಚಿವರು ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗ್ಯು ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ. ಸದಾ ಮಳೆ ಬರುತ್ತಿದ್ದರೆ ಡೆಂಗ್ಯು ಸೊಳ್ಳೆ ಬರುವುದಿಲ್ಲ. ಮಳೆ ಬಿಟ್ಟು ಬಿಟ್ಟು ಬರುವ ಹಿನ್ನೆಲೆಯಲ್ಲಿ ಡೆಂಗ್ಯುವಿಗೆ ಅನುಕೂಲ ವಾತಾವರಣ ಇದೆ. ನಿಂತು ಬೀಳುವ ಮಳೆಯಿಂದಾಗಿ ಸೊಳ್ಳೆ ಹರಡುವಿಕೆ ಹೆಚ್ಚಾಗುತ್ತದೆ. ಇದು ಅನುಕೂಲ ಮಾಡಿಕೊಡುತ್ತದೆ. ಹವಾಮಾನ ಬದಲಾವಣೆಯಿಂದ ರೋಗ ಉಲ್ಬಣಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 6187 ಪ್ರಕರಣಗಳು ಇವೆ. 3463 ಪ್ರಕರಣ ನಗರ ಪ್ರದೇಶಗಳಲ್ಲಿ ಕಂಡು ಬಂದಿವೆ. 56% ನಗರ ಪ್ರದೇಶದಲ್ಲಿ, 44% ಗ್ರಾಮೀಣ ಪ್ರದೇಶದಲ್ಲಿ ಪೊಸಿಟಿವ್‌ ಬಂದಿವೆ. ಒಂದು ವರ್ಷದ ಒಳಗಿನ 123 ಮಕ್ಕಳಿಗೆ, 1-18 ವರ್ಷದ 2301 ಮಂದಿಗೆ, 19- 60 ವರ್ಷದ 3313 ಮಂದಿಗೆ, 61 ವರ್ಷ ಮೇಲಿನ 450 ಮಂದಿಗೆ ಪಾಸಿಟಿವ್‌ ಬಂದಿದೆ ಎಂದು ಮಾಹಿತಿ ನೀಡಿದರು.

ಡೆಂಗ್ಯು ಜ್ವರ ಇನ್ನಷ್ಟು ಹೆಚ್ಚಾಗಬಹುದು. ಸೆಪ್ಟಂಬರ್‌ನಲ್ಲಿ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳು ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದಾರೆ. ಟೆಸ್ಟಿಂಗ್ ಕಿಟ್ ಹೆಚ್ಚುವರಿ ಇರಿಸಲಾಗಿದೆ. ಪ್ಲೇಟ್‌ಲೆಟ್ಸ್‌ ಕೊಡುವುದಕ್ಕೆ ತಿಳಿಸಿದ್ದೇವೆ. ಡೆಂಗ್ಯುವಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಪ್ಲೇಟ್ ಲೆಟ್ಸ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಬ್ಲಡ್ ಯೂನಿಟ್‌ಗಳ ಜತೆ ಮಾತುಕತೆ ಮಾಡಲಾಗಿದೆ. ಐವಿ ಫ್ಲೂವಿಡ್‌ಗಳನ್ನು ಕೊಡಲಾಗುತ್ತದೆ. ಇದು ನಮ್ಮ ಬಳಿ ಸಾಕಷ್ಟು ಇದೆ. ಆರಂಭದಲ್ಲಿ ಪ್ಯಾರಸಿಟಮಲ್ ಕೊಟ್ಟರೆ ಸಾಕಾಗುತ್ತದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ನಮ್ಮ ವೆಬ್‌ಸೈಟಿನಲ್ಲಿ ಡೆಂಗ್ಯು ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಪ್ರತಿ ದಿನ ಎಷ್ಟು ಕೇಸ್ ಬಂದಿದೆ ಎನ್ನುವ ಮಾಹಿತಿ ಹಾಕುತ್ತೇವೆ. ದಿನ ನಿತ್ಯ ಡೆಂಗ್ಯು ಬುಲೆಟಿನ್ ಕೊಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಎಲ್ಲಾ ಮನೆಗಳ ಸರ್ವೆ ಮಾಡುತ್ತಿದೆ. ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲ ಎಲ್ಲಾ ಮನೆಗಳ ಸರ್ವೆ ನಡೆಸಲು ನಾನು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಮನೆ ಮನೆಗೆ ಭೇಟಿ ಕೊಡಲು ಸೂಚಿಸಿದ್ದೇನೆ. ರಾಜ್ಯಾದ್ಯಂತ ಡೆಂಗ್ಯು ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚನೆ ಕೊಡಲಾಗಿದೆ. ಪ್ರತಿ ಶುಕ್ರವಾರ ಡೆಂಗ್ಯು ವಿಚಾರದಲ್ಲಿ ಫೀಲ್ಡ್‌ನಲ್ಲಿ ಇದ್ದು, ಮಾನಿಟರ್ ಮಾಡಲು ಸೂಚಿಸಿದ್ದೇನೆ. ಪ್ರತಿ ಶುಕ್ರವಾರ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಪಾಸಿಟಿವ್ ಕೇಸ್ ಬರುತ್ತದೆಯೋ ಅಲ್ಲಿ ತೀವ್ರ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಲಾರ್ವ ನಾಶ, ಫಾಗಿಂಗ್ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. RWA, ಕ್ರೆಡೈ ಸೇರಿ ಕಟ್ಟಡ ಮಾಲೀಕರು ಸೇರಿ ಅವರನ್ನು ಒಳಗೊಂಡು ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಮೆಡಿಕಲ್ ಆಫೀಸರ್, MOH, ಸೈನ್ಸ್ ಟೀಚರ್ಸ್‌ಗೆ ಡೆಂಗ್ಯು ವಿಚಾರದಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಡೆಂಗ್ಯು ಕುರಿತು ತಿಳಿವಳಿಕೆ ನೀಡಲಾಗಿದೆ. ಡಿಪೋಗಳಲ್ಲಿ ಟಯರ್‌ಗಳಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತಿರುವುದು ಕಂಡು ಬಂದಿದೆ. ಡಿಪೋಗಳಿಂದ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಹೆಚ್ಚು ಸಕ್ರಿಯ ಪ್ರಕರಣಗಳು ಕಂಡು ಬರ್ತಿದೆ. ಹೀಗಾಗಿ ಎಚ್ಚರಿಕೆ ವಹಿಸಲು ಸಾರಿಗೆ ಇಲಾಖೆಗೆ ಸೂಚಿಸಿದ್ದೇವೆ. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಜನರಿಗೆ ಅರಿವು ಮೂಡಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Dengue fever: ಮಾರಕ ಡೆಂಗ್ಯು ಜ್ವರಕ್ಕೆ ಬಾಲಕಿ ಬಲಿ

Continue Reading

ಆರೋಗ್ಯ

Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

sour curd: ನಿತ್ಯವೂ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವುದು ಬಹುತೇಕರಿಗೆ ಅಭ್ಯಾಸ. ಅಷ್ಟೇ ಅಲ್ಲ, ಅನೇಕ ಬಗೆಯಲ್ಲಿ ಮೊಸರಿನ ಬಳಗೆ ನಮ್ಮ ಮನೆಗಳಲ್ಲಿ ನಿತ್ಯವೂ ಇದೆ. ಬೇಸಿಗೆಯಲ್ಲಿ ಮಜ್ಜಿಗೆ ಮಾಡಿ ಕುಡಿಯಲು, ತಂಪಾದ ಲಸ್ಸಿ ಹೊಟ್ಟೆಗಿಳಿಸಲು ಮೊಸರು ಬೇಕೇ ಬೇಕು. ಇಂತಹ ಮೊಸರಿನಲ್ಲಿರುವ ಪ್ರೊಬಯಾಟಿಕ್‌ ಗುಣಗಳಿರುವುದರಿಂದ, ಈ ಒಳ್ಳೆಯ ಬ್ಯಾಕ್ಟೀರಿಯಾಗಳು ಹೊಟ್ಟೆಯನ್ನು, ಪಚನಕ್ರಿಯೆಯನ್ನು ಆರೋಗ್ಯವಾಗಿಡುತ್ತದೆ. ಆದರೆ, ಮೊಸರು ಬಹುಬೇಗನೆ ಹುಳಿ ಬರುತ್ತದೆ. ಹೀಗೆ ಹೆಚ್ಚು ಹುಳಿ ಬಂದ ಮೊಸರನ್ನು ಸೇವಿಸಬಹುದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Sour Curd
Koo

ಮೊಸರು ಭಾರತೀಯರ ಅಡುಗೆ ಮನೆಯ ಆರಾಧ್ಯ ದೈವ. ಅದರಲ್ಲೂ ದಕ್ಷಿಣ ಭಾರತೀಯರಿಗೆ ಮೊಸರಿಲ್ಲದೆ ಜೀವನ ಬಲು ದುಸ್ತರ. ನಿತ್ಯವೂ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವುದು ಬಹುತೇಕರಿಗೆ ಅಭ್ಯಾಸ. ಅಷ್ಟೇ ಅಲ್ಲ, ಅನೇಕ ಬಗೆಯಲ್ಲಿ ಮೊಸರಿನ ಬಳಗೆ ನಮ್ಮ ಮನೆಗಳಲ್ಲಿ ನಿತ್ಯವೂ ಇದೆ. ಬೇಸಿಗೆಯಲ್ಲಿ ಮಜ್ಜಿಗೆ ಮಾಡಿ ಕುಡಿಯಲು, ತಂಪಾದ ಲಸ್ಸಿ ಹೊಟ್ಟೆಗಿಳಿಸಲು ಮೊಸರು ಬೇಕೇ ಬೇಕು. ಇಂತಹ ಮೊಸರಿನಲ್ಲಿರುವ ಪ್ರೊಬಯಾಟಿಕ್‌ ಗುಣಗಳಿರುವುದರಿಂದ, ಈ ಒಳ್ಳೆಯ ಬ್ಯಾಕ್ಟೀರಿಯಾಗಳು ಹೊಟ್ಟೆಯನ್ನು, ಪಚನಕ್ರಿಯೆಯನ್ನು ಆರೋಗ್ಯವಾಗಿಡುತ್ತದೆ. ಆದರೆ, ಮೊಸರು ಬೇಸಿಗೆಯಲ್ಲಿ ಬಹುಬೇಗನೆ ಹುಳಿ ಬರುತ್ತದೆ. ಹೆಚ್ಚು ಕಾಲ ಹೊರಗೇ ಇಟ್ಟರೆ, ಹುಳಿಯಾಗುತ್ತದೆ. ಕೆಲವೊಮ್ಮೆ ಇದು ಅತಿ ಹುಳಿಯಾಗಿ ತನ್ನ ವಾಸನೆಯನ್ನೂ, ರುಚಿಯನ್ನೂ ಬದಲಾಯಿಸಿಬಿಡುತ್ತದೆ. ಹೀಗೆ ಹುಳಿಯಾದ ಮೊಸರೂ ಕೂಡಾ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೋ ಎಂಬ ಗೊಂದಲ ಕೆಲವರಲ್ಲಿ ಇರಬಹುದು. ಬನ್ನಿ, ಈ ಬಗ್ಗೆ (sour curd) ತಿಳಿಯೋಣ.

homemade curd in a clay pot Stomach Bloating Relief

ಆರೋಗ್ಯಕ್ಕೆ ಹಾನಿಯೇ?

ಹುಳಿ ಮೊಸರಿನ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಇದು ತೀರಾ ರುಚಿ ಕೆಡದೇ ಇದ್ದರೆ ಹಾಗೂ ಹಾಳಾಗದಿದ್ದರೆ, ಇದನ್ನು ಸೇವಿಸಬಹುದು. ಇದರಲ್ಲಿರುವ ಅಸಿಡಿಟಿ ಮಟ್ಟ ಹೆಚ್ಚಾದಷ್ಟು ಇದರಲ್ಲಿರುವ ಪ್ರೊಬಯಾಟಿಕ್‌ ಗುಣ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೂ, ಇಂಥ ಮೊಸರನ್ನು ಸೇವಿಸುವ ಮುನ್ನ ಕೆಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬನ್ನಿ ಅವು ಯಾವುವು ನೋಡೋಣ.

curd in bowl
  • ಹುಳಿ ಬಂದ ಮೊಸರನ್ನು ಫ್ರಿಡ್ಜ್‌ನಲ್ಲಿಟ್ಟಿರಬೇಕು ಹಾಗೂ ಅದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಇಟ್ಟಿರಬೇಕು. ಇಲ್ಲವಾದರೆ, ಇದರಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳೂ ಬೆಳೆಯುವ ಸಂಭವ ಹೆಚ್ಚು.
  • ಮೊಸರಿನ ರೂಪ ಹಾಗೂ ಅದರ ಪರಿಮಳದಲ್ಲಿ ವ್ಯತ್ಯಾಸವಾಗಿದ್ದರೆ, ವಾಸನೆ ಬೀರುತ್ತಿದ್ದರೆ ಸೇವನೆ ಒಳ್ಳೆಯದಲ್ಲ. ಅಥವಾ ಹಳದಿ ಬಣ್ಣಕ್ಕೆ ತಿರುಗಿದ್ದರೂ ಕೂಡಾ ಇದನ್ನು ಸೇವಿಸಬಾರದು.
  • ಲ್ಯಾಕ್ಟೋಸ್‌ಗೆ ಬ್ಯಾಕ್ಟೀರಿಯಾ ಸೇರಿ ಹುದುಗು ಬಂದು ಲ್ಯಾಕ್ಟಿಕ್‌ ಆಸಿಡ್‌ ಆದಾಗ ಮೊಸರು ಹುಳಿ ಬರುತ್ತದೆ. ಇದು ನೈಸರ್ಗಿಕವಾದ, ಸಹಜವಾದ ಪ್ರಕ್ರಿಯೆ. ಇದಕ್ಕೆ ಕಾಲಾವಕಾಶ ಬೇಕು. ಎಷ್ಟು ಹೊತ್ತು ಹುಳಿಬರುವಿಕೆಯಲ್ಲಿ ತೆಗೆದುಕೊಂಡಿದೆ ಎಂಬುದರ ಮೇಲೆ ಮೊಸರಿನ ಹುಳಿ ನಿರ್ಧರಿತವಾಗುತ್ತದೆ.
  • ಹುಳಿ ಬರಲು ಆರಂಭವಾದ ಮೊಸರನ್ನು ಫ್ರಿಡ್ಜ್‌ನಲ್ಲಿಡುವ ಮೂಲಕ ಹುಳಿ ಬರುವಿಕೆಯ ಹಂತವನ್ನು ನಿಧಾನವಾಗಿಸಬಹುದು. ಹೆಚ್ಚು ಹೊತ್ತು ಹೊರಗೇ ಇಟ್ಟರೆ ಮತ್ತೆ ಹೆಚ್ಚು ಹುಳಿ ಬಂದು ಸೇವಿಸಲು ಅಯೋಗ್ಯವಾಗುತ್ತದೆ.
  • ಮೊಸರನ್ನು ತೆಗೆಯಲು ಬಳಸುವ ಸೌಟು ಯಾವಾಗಲೂ ಶುದ್ಧವಾಗಿರಲಿ. ಮೊಸರು ಬಹುಬೇಗನೆ ಬೇರೆ ವಸ್ತುಗಳ ಮೂಲಕ ಕಲುಷಿತಗೊಂಡು ಹಾಳಾಗುವ ಸಂಭವವಿದೆ.
  • ಹುಳಿ ಮೊಸರನ್ನು ತಿಂದು ಅಭ್ಯಾಸವಿಲ್ಲದಿದ್ದರೆ ಒಮ್ಮೆಲೆ ಹೆಚ್ಚು ಸೇವಿಸಬೇಡಿ. ಸ್ವಲ್ಪ ಸ್ವಲ್ಪವೇ ನಿಮ್ಮ ಆಹಾರದಲ್ಲಿ ಸೇರಿಸಿ.
  • ಹುಳಿ ಮೊಸರನ್ನು ಹಾಗೆಯೇ ತಿನ್ನಲು ಸಾಧ್ಯವಾಗದಿದ್ದರೆ, ಬೇರೆ ಆಹಾರಗಳ ಜೊತೆಗೆ ಸೇವಿಸಿ. ಆಗ ಅದರ ಪರಿಣಾಮ ಕಡಿಮೆಯಾಗುತ್ತದೆ.
  • ಎಲ್ಲಕ್ಕಿಂತ ಮುಖ್ಯವಾಗಿ ಹುಳಿ ಮೊಸರನ್ನು ಹಗಲಿನಲ್ಲಿ ಸೇವಿಸಿ. ರಾತ್ರಿಯ ಸಮಯ ಆದಷ್ಟೂ ಸೇವಿಸದೆ ಇರುವುದು ಒಳ್ಳೆಯದು. ನೀವು ಹೆಚ್ಚು ಆಕ್ಟಿವ್‌ ಆಗಿದ್ದಾಗ ಹಗಲು ಹೊತ್ತಿನಲ್ಲಿ ಅಥವಾ ಮಧ್ಯಾಹ್ನದೂಟದ ಜೊತೆಗೆ ಸೇವಿಸಬಹುದು.
  • ನಿಮ್ಮ ದೇಹಕ್ಕೆ ಹುಳಿ ಮೊಸರಿನಿಂದ ಏನಾದರೂ ತೊಂದರೆಯಾಗುತ್ತದೆಯೋ ಗಮನಿಸಿ. ಏನಾದರೂ ಸಮಸ್ಯೆಯಾದರೆ, ದಯವಿಟ್ಟು ಸೇವಿಸಬೇಡಿ. ನಿಮ್ಮ ದೇಹಕ್ಕೆ ಹೊಂದುತ್ತಿಲ್ಲ ಎಂದೇ ಅರ್ಥ.

ಇದನ್ನೂ ಓದಿ: Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

Continue Reading

ಆರೋಗ್ಯ

Pancreatitis: ಏನಿದು ಪ್ಯಾಂಕ್ರಿಯಾಟೈಟಿಸ್‌ನಿಂದ ಉಂಟಾಗುವ ಉರಿಯೂತ? ಇದಕ್ಕೇನು ಪರಿಹಾರ?

Pancreatitis: ಹೊಟ್ಟೆಯಲ್ಲಿರುವ ಪ್ರಮುಖ ಅಂಗಗಳಲ್ಲಿ ಮೇದೋಜ್ಜೀರಕ ಗ್ರಂಥಿ (Pancreas)ಯೂ ಒಂದು. ಮೇದೋಜ್ಜೀರಕ ಗ್ರಂಥಿಯು ಹೊಟ್ಟೆಯ ಹಿಂದೆ ಮತ್ತು ಸಣ್ಣ ಕರುಳಿನ ಬಳಿ ಇರುವ ಉದ್ದವಾದ ಗ್ರಂಥಿ ಆಗಿದೆ. ಪ್ಯಾಂಕ್ರಿಯಾಟೈಟಿಸ್‌ ಅಂದರೆ ಮೇದೋಜ್ಜೀರಕ ಗ್ರಂಥಿಯ ಉರಿಯೂತದ ಕಾಯಿಲೆ ಎಂದರ್ಥ. ಇದಕ್ಕೆ ಏನು ಕಾರಣ? ಪರಿಹಾರ ಏನು? ಈ ಕುರಿತು ಪರಿಣತ ವೈದ್ಯರು ನೀಡಿರುವ ಸಲಹೆ ಇಲ್ಲಿದೆ.

VISTARANEWS.COM


on

Pancreatitis
Koo

-ಡಾ. ಕಿಶೋರ್ ಜಿಎಸ್‌ಬಿ, ಹಿರಿಯ ಸಲಹೆಗಾರ ಮತ್ತು ಕ್ಲಿನಿಕಲ್ ಲೀಡ್
ಡಾ. ಪಿಯೂಷ್ ಕುಮಾರ್ ಸಿನ್ಹಾ, ಹಿರಿಯ ಸಲಹೆಗಾರ, ಎಚ್‌ಪಿಬಿ ಸರ್ಜರಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗ, ಫೋರ್ಟಿಸ್‌ ಆಸ್ಪತ್ರೆ

ಹೊಟ್ಟೆಯಲ್ಲಿರುವ ಪ್ರಮುಖ ಅಂಗಗಳಲ್ಲಿ ಮೇದೋಜ್ಜೀರಕ ಗ್ರಂಥಿ (Pancreatitis)ಯೂ ಒಂದು. ಮೇದೋಜ್ಜೀರಕ ಗ್ರಂಥಿಯು ಹೊಟ್ಟೆಯ ಹಿಂದೆ ಮತ್ತು ಸಣ್ಣ ಕರುಳಿನ ಬಳಿ ಇರುವ ಉದ್ದವಾದ ಗ್ರಂಥಿ ಆಗಿದೆ. ಪ್ಯಾಂಕ್ರಿಯಾಟೈಟಿಸ್‌ ಅಂದರೆ ಮೇದೋಜ್ಜೀರಕ ಗ್ರಂಥಿಯ ಉರಿಯೂತದ ಕಾಯಿಲೆ ಎಂದರ್ಥ.

Pancreatitis

ಮೇದೋಜ್ಜೀರಕ ಗ್ರಂಥಿಯ ಪ್ರಮುಖ ಕೆಲಸಗಳು

ಕಿಣ್ವ ಉತ್ಪಾದನೆ

ಇದು ನಿಮ್ಮ ಸಣ್ಣ ಕರುಳಿನಲ್ಲಿರುವ ಪ್ರೋಟೀನ್‌, ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬನ್ನು ಒಡೆಯುವ ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸುತ್ತದೆ. ಈ ಕಿಣ್ವಗಳು ಸರಿಯಾದ ಪೋಷಕಾಂಶಗಳ ಹೀರಿಕೊಳ್ಳಲಿದೆ.

ಹಾರ್ಮೋನ್ ನಿಯಂತ್ರಣ

ಇದು ಇನ್ಸುಲಿನ್ ಮತ್ತು ಗ್ಲುಕಗನ್‌ನಂತಹ ಹಾರ್ಮೋನ್‌ಗಳನ್ನು ಸಹ ಉತ್ಪಾದಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ಉರಿಯೂತಕ್ಕೆ ಕಾರಣಗಳು

ಮೇದೋಜ್ಜೀರಕ ಗ್ರಂಥಿಯು ಉರಿಯೂತವಾದಾಗ ತೀವ್ರವಾದ ಪ್ಯಾಂಕ್ರಿಯಾಟೈಟಿಸ್ ಸಂಭವಿಸುತ್ತದೆ. ಈ ಉರಿಯೂತವು ಅದರ ಸಾಮಾನ್ಯ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತದೆ, ಜೀರ್ಣಕಾರಿ ಕಿಣ್ವಗಳು ಮೇದೋಜ್ಜೀರಕ ಗ್ರಂಥಿಯೊಳಗೆ ಗೊತ್ತಿಲ್ದೇ ಸಕ್ರಿಯವಾಗಲು ಕಾರಣವಾಗುತ್ತದೆ. ಅಂದರೆ, ಸ್ವಯಂ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ. ಉರಿಯೂತದ ತೀವ್ರತೆಯು ರೋಗದ ಕೋರ್ಸ್ ಅನ್ನು ನಿರ್ಧರಿಸುತ್ತದೆ.

Pancreatitis photo

ಈ ಅಂಶಗಳು ಉರಿಯೂತವನ್ನು ಪ್ರಚೋದಿಸಬಹುದು

ಪಿತ್ತಗಲ್ಲುಗಳು

ಪಿತ್ತಗಲ್ಲು ಸಾಮಾನ್ಯ ಪಿತ್ತರಸ ನಾಳದಲ್ಲಿ ನೆಲೆಸಬಹುದು, ಪಿತ್ತರಸ ಮತ್ತು ಪ್ಯಾಂಕ್ರಿಯಾಟಿಕ್ ಕಿಣ್ವಗಳ ಹರಿವನ್ನು ತಡೆಯುತ್ತದೆ. ಈ ಬ್ಯಾಕಪ್ ಮೇದೋಜ್ಜೀರಕ ಗ್ರಂಥಿಯನ್ನು ಉರಿಯುವಂತೆ ಮಾಡುತ್ತದೆ.

Alcohol and cigarette Snoring Solution

ಆಲ್ಕೋಹಾಲ್ ಸೇವನೆ

ಕಾಲಾನಂತರದಲ್ಲಿ ಅತಿಯಾದ ಆಲ್ಕೊಹಾಲ್ ಸೇವನೆಯು ಮೇದೋಜ್ಜೀರಕ ಗ್ರಂಥಿಯನ್ನು ಹಾನಿಗೊಳಿಸಿ, ಉರಿಯುತ್ತಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಒಂದು ಪಾನೀಯವು ತೀವ್ರವಾದ ಪ್ಯಾಂಕ್ರಿಯಾಟೈಟಿಸ್ನ ಸಂಚಿಕೆಯನ್ನು ಪ್ರಚೋದಿಸಬಹುದು.

ಇತರ ಕಾರಣಗಳು

ಅತಿಯಾದ ಔಷಧಿಗಳ ಸೇವನೆ, ದೇಹಕದಲ್ಲಿ ಕಾಣಿಸಿಕೊಳ್ಳುವ ಸೋಂಕುಗಳು (ಮಂಪ್ಸ್), ಅಧಿಕ ರಕ್ತದ ಟ್ರೈಗ್ಲಿಸರೈಡ್ ಮಟ್ಟ ಮತ್ತು ಕೆಲವು ಶಸ್ತ್ರಚಿಕಿತ್ಸಾ ವಿಧಾನಗಳು ಕಾರಣವಾಗಬಹುದು.

ತೀವ್ರವಾದ ಪ್ಯಾಂಕ್ರಿಯಾಟೈಟಿಸ್‌ನ ರೋಗಲಕ್ಷಣ

  • ಹೊಟ್ಟೆಯ ಮೇಲ್ಭಾಗದಲ್ಲಿ ತೀವ್ರವಾದ ನೋವು, ಈ ನೋವು ಬೆನ್ನಿನ ಕಡೆಗೂ ಹರಡಬಹುದು,
  • ವಾಕರಿಕೆ ಮತ್ತು ವಾಂತಿ
  • ಹಸಿವು ಆಗದೇ ಇರುವುದು
  • ಜ್ವರ
  • ಹೃದಯ ಬಡಿತ ಹೆಚ್ಚಳ
  • ಅಸ್ವಸ್ಥತೆ ಅಥವಾ ಆಯಾಸ
  • ಕಿಬ್ಬೊಟ್ಟೆಯ ಊತ
  • ಪರೀಕ್ಷೆ ಅಗತ್ಯ

ರಕ್ತ ಪರೀಕ್ಷೆ: ನಿಮ್ಮ ರಕ್ತದಲ್ಲಿನ ಪ್ಯಾಂಕ್ರಿಯಾಟಿಕ್ ಕಿಣ್ವಗಳ (ಅಮೈಲೇಸ್ ಮತ್ತು ಲಿಪೇಸ್) ಮಟ್ಟ (ಸಾಮಾನ್ಯ ಮೇಲಿನ ಮಿತಿಗಿಂತ ಮೂರು ಪಟ್ಟು ಹೆಚ್ಚು) ಹೆಚ್ಚಳವಾಗುತ್ತಿರುವ ಪರೀಕ್ಷೆ ಮಾಡಿಸಿಕೊಳ್ಳುವುದು

ಅಲ್ಟ್ರಾಸೌಂಡ್, CT ಸ್ಕ್ಯಾನ್, ಅಥವಾ MRI ಸ್ಕ್ಯಾನ್‌ನ ಮೂಲಕ ಮೇದೋಜ್ಜೀರಕ ಗ್ರಂಥಿಯನ್ನು ದೃಶ್ಯೀಕರಿಸಿ ಪಿತ್ತಗಲ್ಲು, ಉರಿಯೂತ ಅಥವಾ ತೊಡಕುಗಳನ್ನು ಗುರುತಿಸುವುದು

Pancreatitis image

ಚಿಕಿತ್ಸೆಗಳೇನು?

ನೋವು ನಿವಾರಣೆ: ಮೇದೋಜ್ಜೀರಕದಲ್ಲಿ ಉಂಟಾದ ನೋವನ್ನು ನಿವಾರಿಸಲು ವೈದ್ಯರು ಸೂಕ್ತ ಔಷಧ ನೀಡುತ್ತಾರೆ. ಔಷಧಗಳು ಮತ್ತು ನೋವು ನಿರ್ವಹಣೆ ತಂತ್ರಗಳು ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮೇದೋಜ್ಜೀರಕ ಗ್ರಂಥಿಯನ್ನು ಶಾಂತಿಗೊಳಿಸುವುದು: ಅತಿಯಾದ ಉರಿಯೂತವಿದ್ದ ಸಂದರ್ಭದಲ್ಲಿ ವೈದ್ಯರು, ಮೊದಲು ಮೇದೋಜ್ಜೀರಕ ಗ್ರಂಥಿ ಶಾಂತಿಗೊಳಿಸಲು ಊಟ ಹಾಗೂ ನೀರು ಸೇವಿಸುವುದನ್ನು ನಿಲ್ಲಿಸಲು ಸೂಚಿಸುತ್ತಾರೆ. ಇದಕ್ಕೆ ಪರ್ಯಾಯವಾಗಿ ನಿಮ್ಮನ್ನು ಹೈಡ್ರೀಕರಿಸಲು ದ್ರವಗಳನ್ನು ಅಭಿದಮನಿ ಮೂಲಕ ಒದಗಿಸಲಾಗುತ್ತದೆ.

ಔಷಧಿಗಳು: ವಾಕರಿಕೆ ಮತ್ತು ವಾಂತಿಯನ್ನು ನಿಯಂತ್ರಿಸಲು ಔಷಧಿಗಳನ್ನು ನೀಡಬಹುದು.

ಪ್ರಕರಣದ ತೀವ್ರತೆ ಆಧಾರದ ಮೇಲೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ.

ಇದನ್ನೂ ಓದಿ: Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

ತಡೆಗಟ್ಟುವ ಕ್ರಮಗಳೇನು?

  • ಧೂಮಪಾನವನ್ನು ತ್ಯಜಿಸಿ – ಧೂಮಪಾನವು ಮಾರಕವಾಗಬಹುದು. ಆದ್ದರಿಂದ, ಧೂಮಪಾನವನ್ನು ನಿಲ್ಲಿಸಿ. ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ವೈದ್ಯರಿಂದ ಸಹಾಯ ಪಡೆಯಿರಿ.
  • ಆಲ್ಕೋಹಾಲ್ ಸೇವನೆಯನ್ನು ನಿಲ್ಲಿಸಿ – ಮೇದೋಜ್ಜೀರಕ ಗ್ರಂಥಿಯ ಉರಿಯೂತದೊಂದಿಗೆ ಆಲ್ಕೊಹಾಲ್ ಕುಡಿಯುವುದು ಜೀವಕ್ಕೆ ಅಪಾಯಕಾರಿ.
  • ನಿಮ್ಮನ್ನು ಹೈಡ್ರೀಕರಿಸಿಟ್ಟುಕೊಳ್ಳಿ – ನಿಮ್ಮನ್ನು ಹೈಡ್ರೀಕರಿಸಲು ಸಾಕಷ್ಟು ನೀರು ಮತ್ತು ಇತರ ದ್ರವಗಳನ್ನು ಕುಡಿಯಿರಿ.
  • ಕಡಿಮೆ ಕೊಬ್ಬಿನ ಆಹಾರವನ್ನು ಸೇವಿಸಿ – ಧಾನ್ಯಗಳು, ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಸೀಸದ ಪ್ರೋಟೀನ್‌ಗಳನ್ನು ಒಳಗೊಂಡಿರುವ ಕಡಿಮೆ-ಕೊಬ್ಬಿನ ಆಹಾರವನ್ನು ಅನುಸರಿಸಿ.
Continue Reading

ಆರೋಗ್ಯ

Food for Concentration: ಈ ಆಹಾರಗಳ ಸೇವನೆಯಿಂದ ನಿಮ್ಮ ಏಕಾಗ್ರತೆ ಶಕ್ತಿಯೇ ಕುಂಠಿತವಾಗಬಹುದು!

Food for Concentration: ಕೆಲವು ಆಹಾರಗಳು ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡು ಮಿದುಳಿನ ಆರೋಗ್ಯದ ಕಾಳಜಿ ವಹಿಸುತ್ತವೆ. ಮೀನು, ಮೊಟ್ಟೆ, ಡಾರ್ಕ್‌ ಚಾಕೋಲೇಟ್‌, ಬೆರ್ರಿಗಳು, ಒಣ ಬೀಜಗಳು, ಧಾನ್ಯಗಳು, ಬೇಳೆ ಕಾಳುಗಳು ಮಿದುಳಿನ ಆರೋಗ್ಯಕ್ಕೆ ಅತ್ಯಂತ ಸೂಕ್ತ. ಇವನ್ನು ತಿನ್ನುವುದರಿಂದ ಮಿದುಳಿನ ಆರೋಗ್ಯ ಹೆಚ್ಚುತ್ತದೆ. ಆದರೆ, ಕೆಲವು ಆಹಾರ ಸೇವನೆಯಿಂದ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳೂ ಆಗುತ್ತವೆ. ಅವು ಏಕಾಗ್ರತೆಯನ್ನೂ ಕ್ಷೀಣಿಸುವಂತೆ ಮಾಡಬಲ್ಲವು.

VISTARANEWS.COM


on

Food for Concentration
Koo

ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ (Food for Concentration) ಗುಟ್ಟಿರುವುದು ನಾವೇನು ಆಹಾರ ಸೇವಿಸುತ್ತೇವೆ ಎಂಬುದರ ಮೇಲೆ. ಈಗಾಗಲೇ ಅನೇಕ ಸಂಶೋಧನೆಗಳು ನಾವು ತಿನ್ನುವ ಆಹಾರಕ್ಕೂ ನಮ್ಮ ಮಾನಸಿಕ ಆರೋಗ್ಯಕ್ಕೂ ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸಿವೆ. ಕೆಲವು ಆಹಾರಗಳು ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡು ಮಿದುಳಿನ ಆರೋಗ್ಯದ ಕಾಳಜಿ ವಹಿಸುತ್ತವೆ. ಮೀನು, ಮೊಟ್ಟೆ, ಡಾರ್ಕ್‌ ಚಾಕೋಲೇಟ್‌, ಬೆರ್ರಿಗಳು, ಒಣ ಬೀಜಗಳು, ಧಾನ್ಯಗಳು, ಬೇಳೆ ಕಾಳುಗಳು ಮಿದುಳಿನ ಆರೋಗ್ಯಕ್ಕೆ ಅತ್ಯಂತ ಸೂಕ್ತ. ಇವನ್ನು ತಿನ್ನುವುದರಿಂದ ಮಿದುಳಿನ ಆರೋಗ್ಯ ಹೆಚ್ಚುತ್ತದೆ. ಆದರೆ, ಕೆಲವು ಆಹಾರ ಸೇವನೆಯಿಂದ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳೂ ಆಗುತ್ತವೆ. ಅವು ಏಕಾಗ್ರತೆಯನ್ನೂ ಕ್ಷೀಣಿಸುವಂತೆ ಮಾಡಬಲ್ಲವು. ಬನ್ನಿ, ಯಾವೆಲ್ಲ ಆಹಾರಗಳು ಏಕಾಗ್ರತಾ ಶಕ್ತಿಯನ್ನೇ ಮೊಡಕುಗೊಳಿಸುತ್ತವೆ ಎಂಬುದನ್ನು ನೋಡೋಣ.

Cakes, Muffins

ಇವು ಅತಿಯಾದರೆ ಒಳ್ಳೆಯದಲ್ಲ

ಪೇಸ್ಟ್ರಿ, ಕೇಕ್‌, ವೈಟ್‌ ಬ್ರೆಡ್‌: ಕೇಕ್‌, ಪೇಸ್ಟ್ರಿಗಳು ಹಾಗೂ ಬ್ರೆಡ್‌ನಿಂದ ಮಾಡಿದ ಸ್ಯಾಂಡ್‌ವಿಚ್‌, ಬರ್ಗರ್‌, ಡೋನಟ್‌ ಇತ್ಯಾದಿಗಳೆಲ್ಲವೂ ಬಾಯಲ್ಲಿ ನೀರೂರುಸಬಹುದು. ನಿಮ್ಮ ಸಂಭ್ರಮವನ್ನು ಹೆಚ್ಚಿಸಬಹುದು. ಮಕ್ಕಳು ಇವಿದ್ದರೆ ಊಟ ಬಿಡಬಹುದು. ಆದರೆ, ಇವು ಅತಿಯಾದರೆ ಒಳ್ಳೆಯದಲ್ಲ. ಇವು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಏರುಪೇರುಗೊಳಿಸುವ ಜೊತೆಗೆ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು.

French Fries Closeup

ಹೆಚ್ಚು ಉಪ್ಪಿರುವ ತಿನಿಸುಗಳು

ಹೆಚ್ಚು ಉಪು ಒಳ್ಳೆಯದಲ್ಲ. ಹೆಚ್ಚು ಉಪ್ಪಿನ ಸೇವನೆಯಿಂದ ಮಿದುಳಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ. ಹೆಚ್ಚು ಉಪ್ಪಿನಿಂದ ಕೆಲವೊಮ್ಮೆ ಮಿದುಳಿನಲ್ಲಿ ಉರಿಯೂತವೂ ಆಗಬಹುದು. ಸ್ಮರಣಶಕ್ತಿ ಕುಂಠಿತಗೊಳ್ಳುವುದು, ಏಕಾಗ್ರತೆಗೆ ಧಕ್ಕೆಯುಂಟಾಗುವುದು ಇತ್ಯಾದಿಗಳೂ ಆಗುವ ಸಂಭವ ಹೆಚ್ಚು.

Selection of Colorful Sweets

ಸೋಡಾ ಹಾಗೂ ಸಕ್ಕರೆಯುಕ್ತ ಆಹಾರ

ಹೆಚ್ಚಿನ ಮಂದಿಗೆ ತಂಪಾದ ಸೋಢಾ, ಹಾಗೂ ಕಾರ್ಬೋನೇಟೆಡ್‌ ಡ್ರಿಂಕ್‌ಗಳನ್ನು ಸೇವಿಸುವುದರಿಂದ ಖುಷಿ, ಉಲ್ಲಾಸ ಸಿಗುತ್ತದೆ. ಆದರೆ, ಇವುಗಳ ಸೇವನೆಯಿಂದ ದಿಢೀರ್‌ ಸಕ್ಕರೆಯ ಅಂಶ ದೇಹದಲ್ಲಿ ಹೆಚ್ಚುತ್ತದೆ. ಸಿಹಿತಿನಿಸು, ಹಾಗೂ ಸಿಹಿಯಾದ ಡ್ರಿಂಕ್‌ಗಳನ್ನು ಕುಡಿಯುವುದರಿಂದಲೂ ಇದೇ ಆಗಬಹುದು. ಇಂತಹ ಸಿಹಿಯಿಂದ ಸಿಗುವ ಖುಷಿಗೆ ಒಗ್ಗಿಕೊಂಡ ಮನಸ್ಸು ದೇಹ ಹಲವು ಅಡ್ಡ ಪರಿಣಾಮಗಳನ್ನೂ ಕಾಣುತ್ತದೆ. ಮಾನಸಿಕವಾಗಿ ಒತ್ತಡ, ಖಿನ್ನತೆ, ಪಾರ್ಶ್ವವಾಯು, ಏಕಾಗ್ರತೆಯಲ್ಲಿ ಸಮಸ್ಯೆ ಇತ್ಯಾದಿಗಳಿಗೂ ಕಾರಣವಾಗಬಹುದು.

Image Of Coffee Side Effects

ಕಾಫಿ

ಕಾಫಿ ಕುಡಿಯುವುದರಿಂದ ಅದರಲ್ಲಿರುವ ಕೆಫಿನ್‌ನಿಂದಾಗಿ ನಿಮಗೆ ಶಕ್ತಿ ಇಮ್ಮಡಿಯಾಗಿ ಕೆಲಸದಲ್ಲಿ ಚುರುಕುತನ ಕಾಣಬಹುದು. ಆದರೆ, ಇದು ತಾತ್ಕಾಲಿಕ. ಆದರೆ ಇವು ಉದ್ವೇಗವನ್ನೂ ಹೆಚ್ಚು ಮಾಡುತ್ತದೆ. ಕೆಲವು ಮಂದಿಗೆ ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ನಿದ್ದೆಯ ಸಮಸ್ಯೆ, ಒಂದೆಡೆ ಕೂರಲು ಸಾಧ್ಯವಾಗದಿರುವಂಥ ಏಕಾಗ್ರತೆಯ ಕೊರತೆ ಇತ್ಯಾದಿಗಳೂ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಶಕ್ತಿವರ್ಧಕ ಪೇಯಗಳು

ಬಹಳ ಮಂದಿ ನಿದ್ದೆಯನ್ನು ಮುಂದೂಡಲು ಕೆಲವು ಕೆಫಿನ್‌ ಇರುವ ಪೇಯಗಳು, ಶಕ್ತಿವರ್ಧಕ ಪೇಯಗಳನ್ನು ಕುಡಿಯುತ್ತಾರೆ. ಅದು ಆ ಕ್ಷಣಕ್ಕೆ ನಿದ್ದೆಯನ್ನು ಮುಂದೂಡಬಹುದು ನಿಜವಾದರೂ, ಭವಿಷ್ಯದಲ್ಲಿ ಒಳ್ಳೆಯದನ್ನು ಮಾಡಲಾರದು. ನಿರ್ಜಲೀಕರಣ, ಮೂತ್ರಶಂಕೆ ಅತಿಯಾಗುವುದು, ಮೂಡ್‌ ಏರುಪೇರು, ಉದ್ವೇಗ, ಏಕಾಗ್ರತೆಯ ಸಮಸ್ಯೆ ಇತ್ಯಾದಿ ಸಮಸ್ಯೆಗಳನ್ನು ತಂದೊಡ್ಡಬಹುದು.

Continue Reading
Advertisement
Kangana Ranaut
ದೇಶ4 mins ago

Kangana Ranaut: ಕಂಗನಾಗೆ ಕಪಾಳಮೋಕ್ಷ ಮಾಡಿದ್ದ ಕಾನ್‌ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

Samrat Choudhary
ಪ್ರಮುಖ ಸುದ್ದಿ7 mins ago

Samrat Choudhary: ಅಯೋಧ್ಯೆಯಲ್ಲಿ ತಲೆ ಬೋಳಿಸಿಕೊಂಡು ರಾಮನಿಗೆ ಪೇಟ ಅರ್ಪಿಸಿದ ಬಿಹಾರ ಡಿಸಿಎಂ! ಇದಕ್ಕಿದೆ ವಿಶೇಷ ಕಾರಣ!

Viral Video
Latest17 mins ago

Viral Video: ರಜೆಯಲ್ಲೂ ಮಗುವಿನ ಹೋಮ್‌ ವರ್ಕ್ ನೋಡಿ ಸಿಟ್ಟಾದ ತಾಯಿ ಮಾಡಿದ್ದೇನು? ವಿಡಿಯೊ ನೋಡಿ!

Ram charan the Indian House on set
ಟಾಲಿವುಡ್23 mins ago

Ram Charan: ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ ಸಿನಿಮಾ!

Family drama Kannada movie song
ಕರ್ನಾಟಕ25 mins ago

Kannada New Movie: ಸಿನಿಪ್ರಿಯರ ಗಮನ ಸೆಳೆಯುತ್ತಿದೆ ‘ಫ್ಯಾಮಿಲಿ ಡ್ರಾಮ’ ಸಿನಿಮಾದ ಸಾಂಗ್!

Suraj Revanna Case
ಕರ್ನಾಟಕ27 mins ago

Suraj Revanna Case: ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ

Sexual Harassment
Latest28 mins ago

Sexual Harassment: ಎಲ್ಲಾ ತಂದೆಯರೂ ಹೀಗೇ ಮಾಡುತ್ತಾರೆ ಎನ್ನುತ್ತ ಮಗಳನ್ನೇ ಗರ್ಭಿಣಿ ಮಾಡಿದ್ದ ನೀಚ ತಂದೆಗೆ 101 ವರ್ಷ ಶಿಕ್ಷೆ!

Koo Shut Down
ಕರ್ನಾಟಕ38 mins ago

Koo Shut Down: ‘ಕೂ’ಗು ನಿಲ್ಲಿಸಿದ ಕನ್ನಡಿಗನೇ ಕಟ್ಟಿದ ಆ್ಯಪ್‌; ದೇಶೀಯ ಟ್ವಿಟರ್‌ ಇನ್ನು ನೆನಪು ಮಾತ್ರ!

Ananth Ambani
Latest47 mins ago

Ananth Ambani: ಸಾಮೂಹಿಕ ವಿವಾಹದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಅಂಬಾನಿ ಕುಟುಂಬ

kanaganahalli mid day meal
ಕಲಬುರಗಿ49 mins ago

Mid Day Meal: ಕಲಬುರಗಿಯಲ್ಲಿ ಬಿಸಿಯೂಟ ಉಂಡ 33 ವಿದ್ಯಾರ್ಥಿಗಳು ಅಸ್ವಸ್ಥ; 3 ದಿನಗಳಲ್ಲಿ ಎರಡನೇ ಘಟನೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ21 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌