Hair Oil Tips: ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಲಾಭವೋ ನಷ್ಟವೋ? - Vistara News

ಆರೋಗ್ಯ

Hair Oil Tips: ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಲಾಭವೋ ನಷ್ಟವೋ?

Hair Oil Tips: ಮಕ್ಕಳ ಕೂದಲಿಗೆ ಎಣ್ಣೆ ಹಾಕುವ ಅಥವಾ ಪ್ರೀತಿ ಪಾತ್ರರ ತಲೆಗೆ ಎಣ್ಣೆ ತಟ್ಟುವ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ. ಹಾಗೆಂದು ದಿನವೂ ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ, ಬೆಳಗ್ಗೆ ತಲೆಸ್ನಾನ ಮಾಡುವುದು ಸರಿಯೇ? ಇದರಿಂದ ಲಾಭ ಹೆಚ್ಚೋ ನಷ್ಟವೋ? ಇಲ್ಲಿದೆ ತುಂಬಾ ಜನರನ್ನು ಕಾಡುವ ಪ್ರಶ್ನೆಗೆ ಉತ್ತರ.

VISTARANEWS.COM


on

Hair Oil Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೂದಲಿಗೆ ಎಣ್ಣೆ (Hair Oil Tips) ಹಾಕುವ ಬಗ್ಗೆ ನಾನಾ ಅಭಿಪ್ರಾಯಗಳಿವೆ. ಹಾಕುವುದೇ ಇಲ್ಲ ಎನ್ನುವವರಿಂದ ಹಿಡಿದು, ಹಾಕಿದ ಎಣ್ಣೆ ತೆಗೆಯುವುದೇ ಇಲ್ಲ ಎನ್ನುವವರೆಗೆ, ದೇಶದ ಉದ್ದಗಲಕ್ಕೆ ಹಲವು ಮಾತುಗಳು ಕೇಳಬರುತ್ತವೆ. ಅದರಲ್ಲೂ ಮಕ್ಕಳ ಕೂದಲಿಗೆ ಎಣ್ಣೆ ಹಾಕುವ ಅಥವಾ ಪ್ರೀತಿ ಪಾತ್ರರ ತಲೆಗೆ ಎಣ್ಣೆ ತಟ್ಟುವ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ. ಹೀಗಿರುವಾಗ ದಿನವೂ ರಾತ್ರಿ ಎಣ್ಣೆ ಹಾಕಿ (ಅಂದರೆ… ತಲೆಗೆ!) ಬೆಳಗ್ಗೆ ಕೂದಲು ಸ್ವಚ್ಛ ಮಾಡುವುದು ಸರಿಯೇ? ಇದರಿಂದ ಲಾಭ ಹೆಚ್ಚೋ ನಷ್ಟವೋ ಎಂಬ ಅನುಮಾನ ಹಲವರಲ್ಲಿ ಇರಬಹುದು. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Lady Sitting on the Couch Gives Herself a Scalp Massage Gooseberry Benefits

ಲಾಭಗಳೇನು?

ಕೂದಲಿಗೆ ಸರಿಯಾದ ತೇವವನ್ನು ನೀಡುವದು ಮುಖ್ಯವಾದ ಕೆಲಸ. ರಾತ್ರಿಡಿ ತೈಲದಂಶವನ್ನು ಕೂದಲಲ್ಲೇ ಉಳಿಸಿದರೆ, ಬೆಳಗಿನವರೆಗೆ ಆಳವಾಗಿ ಕಂಡೀಶನಿಂಗ್‌ ಮಾಡುವುದಕ್ಕೆ ಸಾಧ್ಯವಿದೆ. ಕೂದಲಿನ ಬುಡ ಮತ್ತು ತಲೆಯ ಚರ್ಮವನ್ನು ಚೆನ್ನಾಗಿ ಕಂಡೀಶನಿಂಗ್‌ ಮಾಡಿ, ತೇವವನ್ನು ಸರಿಯಾಗಿ ಹೀರಿಕೊಳ್ಳುವುದಕ್ಕೆ ಸಾಕಷ್ಟು ಸಮಯಾವಕಾಶ ದೊರೆಯುತ್ತದೆ. ತಲೆಗೆ ಎಣ್ಣೆ ಮಸಾಜ್‌ ಮಾಡಿದ ಕೆಲವೇ ತಾಸುಗಳಲ್ಲಿ ತಲೆಸ್ನಾನ ಮಾಡಿದಾಗ, ಈ ಕೆಲಸ ಪೂರ್ಣ ಆಗಿರುವವ ಸಂಭವ ಕಡಿಮೆ.

ಸುರುಳಿ ಕೂದಲಿಗೆ ಲಾಭ

ನೇರವಾದ, ನಯವಾದ ಕೂದಲುಗಳಿಗಿಂತ, ಒರಟಾದ, ಗುಂಗುರಾದ ಕೂದಲುಗಳಿಗೆ ಅಹೋರಾತ್ರಿ ತೈಲದಲ್ಲಿ ನೆನೆಸುವುದು ಹೆಚ್ಚು ಲಾಭದಾಯಕ. ಇದರಿಂದ ಕೂದಲಿನ ಒರಟುತನ ಕಡಿಮೆಯಾಗಿ, ತೇವ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಕೂದಲಿನ ನೈಸರ್ಗಿಕ ತೈಲದಂಶವನ್ನು ಉಳಿಸಿಕೊಂಡು, ಕೂದಲಿಗೆ ಹೆಚ್ಚಿನ ಆರೈಕೆ ಒದಗಿಸಲು ಅನುಕೂಲ.

Young Woman Takes Care of Her Hair Using Natural Oils and Conditioners for Hair Care

ಚರ್ಮದ ಆರೋಗ್ಯ

ತಲೆಯ ಚರ್ಮ ಕಣ್ಣಿಗೆ ಕಾಣುವುದಿಲ್ಲ, ಆದರೆ ಸೂಕ್ಷ್ಮವಾದ ಪ್ರಕೃತಿಯದ್ದು. ತಲೆಯ ಚರ್ಮ ಶುಷ್ಕವಾದರೆ ಹೊಟ್ಟು, ತುರಿಕೆ ಗಂಟು ಬೀಳುತ್ತದೆ. ಇದನ್ನೆಲ್ಲ ನಿವಾರಿಸಿಕೊಳ್ಳಲು ಇರುವ ಸರಳವಾದ ನೈಸರ್ಗಿಕವಾದ ಉಪಾಯವೆಂದರೆ ರಾತ್ರಿಯ ಸಮಯದಲ್ಲಿ ತಲೆಯ ಚರ್ಮಕ್ಕೆ ಲಘುವಾಗಿ ಎಣ್ಣೆ ಮಸಾಜ್‌ ಮಾಡುವುದು. ಇದರಿಂದ ತಲೆಯ ಭಾಗಕ್ಕೆ ರಕ್ತ ಸಂಚಾರ ಹೆಚ್ಚಿ, ಕೂದಲು ಸೊಂಪಾಗಿ ಬೆಳೆಯುವುದಕ್ಕೆ ಸಹಾಯವಾಗುತ್ತದೆ.

ರಕ್ಷಣೆ

ತೈಲದಂಶವು ಕೂದಲು ಮತ್ತು ತಲೆಯ ಚರ್ಮದ ಮೇಲೆ ತೆಳುವಾದ ರಕ್ಷಣಾ ಕವಚವನ್ನು ನಿರ್ಮಿಸಬಲ್ಲದು. ಈ ಕವಚವು ವಾತಾವರಣದ ಮಾಲಿನ್ಯ, ದೂಳು, ಹೊಗೆ ಮುಂತಾದವುಗಳಿಂದ ರಕ್ಷಣೆಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ತಲೆಗೆ ಉಪಯೋಗಿಸುವ ಹಲವು ರೀತಿಯ ಜೆಲ್‌, ಬಣ್ಣದಂಥ ರಾಸಾಯನಿಕಗಳು ಮತ್ತು ಹೀಟ್‌ ಸ್ಟೈಲಿಂಗ್‌ ನಿಂದ ಆಗಬಹುದಾದ ಹಾನಿಯನ್ನೂ ತಗ್ಗಿಸುತ್ತದೆ.

Curry Leaves and Coconut Oil Hair Pack Discover the Best Herbal Hair Pack for Hair Growth

ತೊಂದರೆಗಳೂ ಇವೆ

ಹಾಗೆಂದು ಕೂದಲಿಗೆ ತೈಲ ಹಾಕುವುದರಿಂದ ಎಲ್ಲವೂ ಸರಾಗ ಎಂದು ಭಾವಿಸುವಂತಿಲ್ಲ. ಅಹೋರಾತ್ರಿ ತೈಲದಲ್ಲಿ ಕೂದಲು ನೆನೆಸುವುದರಿಂದ ತಲೆಯ ಚರ್ಮದ ಸೂಕ್ಷ್ಮ ರಂಧ್ರಗಳು ಕಟ್ಟಿಕೊಳ್ಳಬಹುದು. ಇದರಿಂದ ತ್ವಚೆಯ ಆ ಭಾಗ ಸೋಂಕುಗಳಿಗೆ ಸುಲಭ ತುತ್ತಾಗುತ್ತದೆ. ಹಾಗಾಗಿ ಮಾರನೇ ದಿನ ತಲೆಸ್ನಾನ ಮಾಡುವಾಗ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

ಕೊಳೆ

ತಲೆಯಲ್ಲಿ ದೀರ್ಘ ಕಾಲ ಎಣ್ಣೆ ಉಳಿಯಿತು ಎಂದಾದರೆ, ಕೂದಲು ಬೇಗನೇ ಕೊಳೆಯಾಗುತ್ತವೆ. ತಲೆಯಲ್ಲಿ ಹೊಟ್ಟು, ತುರಿಕೆಗಳು ಪ್ರಾರಂಭವಾಗುತ್ತವೆ. ಹೊಳೆಯುವ ಸ್ವಚ್ಛವಾದ ಕೂದಲಿಗೂ ಜಿಡ್ಡುಜಿಡ್ಡಾದ ಮೆತ್ತಿಕೊಂಡು ಮುದ್ದೆಯಂತಾದ ಕೂದಲಿಗೂ ಎಲ್ಲಿಂದೆಲ್ಲಿಯ ಹೋಲಿಕೆ! ಹಾಗಾಗಿ ಎಣ್ಣೆಯಂಶ ಅತಿಯಾಗಿ ಉಳಿಯದಂತೆ ಸ್ವಚ್ಛ ಮಾಡುವುದು ಮುಖ್ಯ. ಹಾಗೆಂದು ತಲೆ ಚರ್ಮದ ನೈಸರ್ಗಿಕ ತೈಲವೂ ತೊಳೆದು ಹೋಗುವಂತೆ ಶಾಂಪೂ ಹಾಕಿ ಉಜ್ಜುವುದು ಬೇಡ.

ಇದನ್ನೂ ಓದಿ: Health Tips: ಮಧ್ಯಾಹ್ನದ ನಂತರ ಏನಾದರು ಸಿಹಿತಿನಿಸು ತಿನ್ನಬೇಕು ಅನಿಸುತ್ತಿದೆಯೆ? ಇದಕ್ಕೂ ಇದೆ ಕಾರಣ

ಯಾವ ಎಣ್ಣೆ?

ತಲೆಗೆ ಹಾಕುವುದಕ್ಕೆಂದೇ ಮಾರುಕಟ್ಟೆಯಲ್ಲಿ ಲೆಕ್ಕವಿಲ್ಲದಷ್ಟು ತೈಲಗಳು ಲಭ್ಯವಿವೆ. ಇವುಗಳಲ್ಲಿ ಯಾವುದನ್ನು ಹಾಕುವುದು? ಅಸಂಖ್ಯಾತ ಗಿಡಮೂಲಿಕೆಗಳನ್ನು ಸೇರಿಸಿದ, ಚಿತ್ರವಿಚಿತ್ರ ಬಣ್ಣದ ಎಣ್ಣೆಗಳಿಗಿಂತ ಸರಳವಾದ ಕೊಬ್ಬರಿ ಎಣ್ಣೆ ಉತ್ತಮ ಆಯ್ಕೆ. ನಿಮ್ಮ ಎಣ್ಣೆಯನ್ನು ನೀವೇ ತಯಾರಿಸಿಕೊಳ್ಳುವವರಾದರೆ ಆ ಮಾತು ಬೇರೆ. ಹಾಗಲ್ಲದಿದ್ದರೆ, ಶುದ್ಧವಾದ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯಂಥವು ಕೂದಲಿಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತವೆ.
ಕೂದಲಿಗೆ ಎಣ್ಣೆ ಹಾಕುವ ಭರದಲ್ಲಿ ತಲೆ ನೆನೆಯುವಂತೆ ಎಣ್ಣೆ ಮೆತ್ತಿಕೊಳ್ಳಬೇಡಿ. ಇದರಿಂದ ಹಾಸಿಗೆ ದಿಂಬುಗಳೂ ಹಾಳಾಗಿ ಹೋಗುತ್ತವೆ. ಎಷ್ಟು ಎಣ್ಣೆ ನಿಮ್ಮ ತಲೆಗೆ ಬೇಕು ಎನ್ನುವುದು ನಿಮ್ಮ ಕೂದಲಿನ ಉದ್ದ, ದಪ್ಪಗಳನ್ನು ಅವಲಂಬಿಸಿದೆ. ತಲೆಯ ಬುಡವನ್ನು ಲಘುವಾಗಿ ಮಸಾಜ್‌ ಮಾಡಿ, ಉಜ್ಜುವ ಭರದಲ್ಲಿ ಕೂದಲು ಕಿತ್ತುಕೊಳ್ಳಬೇಡಿ. ತೀರಾ ಅಂಟಾದ ಎಣ್ಣೆಯೂ ಸೂಕ್ತವಲ್ಲ. ಹಗುರವಾದ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Food Tips: ಈ ಕೆಲವು ಆಹಾರಗಳ ಸೇವನೆಯಿಂದ ಬಾಯಾರಿ, ಗಂಟಲೊಣಗಿ ನೀರು ಬೇಕೆನಿಸುತ್ತದೆ!

Health Food Tips: ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಗಾದೆಯೇ ಇದೆ. ಕೆಟ್ಟ ಕೆಲಸ ಮಾಡಿದವನು ಅದರ ಫಲ ಅನುಭವಿಸಲೇ ಬೇಕು ಎಂಬುದು ಇದರ ಒಳಾರ್ಥವಾದರೂ, ಉಪ್ಪಿನಂಶ ದೇಹಕ್ಕೆ ಹೆಚ್ಚು ಹೋದರೆ, ಸಹಜವಾಗಿಯೇ ನೀರು ಕುಡಿಯಲೇಬೇಕಾಗುತ್ತದೆ ಎಂಬುದು ಶಬ್ದಾರ್ಥವೂ ಹೌದು. ಇದು ನಿಜ ಕೂಡಾ. ಬನ್ನಿ, ಯಾವೆಲ್ಲ ಆಹಾರಗಳು ನಿಮ್ಮ ದೇಹದ ನೀರಿನಂಶವನ್ನು ಕ್ಷಣಮಾತ್ರದಲ್ಲಿ ಬಸಿದುಬಿಡುತ್ತದೆ ಎಂಬುದನ್ನು ನೋಡೋಣ ಬನ್ನಿ.

VISTARANEWS.COM


on

Health Food Tips
Koo

ಕೆಲವು ಆಹಾರಗಳೇ ಹಾಗೆ (Health Food Tips). ತಿಂದು ಸ್ವಲ್ಪ ಹೊತ್ತಿನಲ್ಲಿ ಬಾಯಾರುತ್ತದೆ. ಗಂಟಲು ಒಣಗುತ್ತದೆ. ದೇಹದ ನೀರೆಲ್ಲ ಬಸಿದು ಹೋದಂಥ ಅನುಭವ. ಮತ್ತೆ ಮತ್ತೆ ನೀರು ಕುಡಿಯಬೇಕೆನಿಸುತ್ತದೆ. ಎಷ್ಟು ನೀರು ಕುಡಿದರೂ, ಹೊಟ್ಟೆಯಲ್ಲಿ ನೀರು ಸದ್ದು ಮಾಡುವಷ್ಟರವರೆಗೆ ನೀರು ತುಂಬಿಸಿಕೊಂಡರೂ ಯಾಕೋ ತೃಪ್ತಿಯಿಲ್ಲದ ಅನುಭವ. ಪದೇ ಪದೇ ಗಂಟಲೊಣಗುವುದು, ಬಾತ್‌ರೂಂಗೆ ಹೋಗಬೇಕೆನಿಸುವುದು ಇತ್ಯಾದಿ ಸಾಮಾನ್ಯ. ಬೇಸಗೆಯಲ್ಲಂತೂ ಈ ಸಮಸ್ಯೆ ಹೇಳತೀರದು. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಗಾದೆಯೇ ಇದೆ. ಕೆಟ್ಟ ಕೆಲಸ ಮಾಡಿದವನು ಅದರ ಫಲ ಅನುಭವಿಸಲೇ ಬೇಕು ಎಂಬುದು ಇದರ ಒಳಾರ್ಥವಾದರೂ, ಉಪ್ಪಿನಂಶ ದೇಹಕ್ಕೆ ಹೆಚ್ಚು ಹೋದರೆ, ಸಹಜವಾಗಿಯೇ ನೀರು ಕುಡಿಯಲೇಬೇಕಾಗುತ್ತದೆ ಎಂಬುದು ಶಬ್ದಾರ್ಥವೂ ಹೌದು. ಇದು ನಿಜ ಕೂಡಾ. ಬನ್ನಿ, ಯಾವೆಲ್ಲ ಆಹಾರಗಳು ನಿಮ್ಮ ದೇಹದ ನೀರಿನಂಶವನ್ನು ಕ್ಷಣಮಾತ್ರದಲ್ಲಿ ಬಸಿದುಬಿಡುತ್ತದೆ ಎಂಬುದನ್ನು ನೋಡೋಣ ಬನ್ನಿ.

Salt is predominant in processed foods Keep this away Foods To Avoid For Blood Pressure

ಅತಿಯಾಗಿ ಸಂಸ್ಕರಿಸಿದ ಆಹಾರಗಳು

ಅತಿಯಾಗಿ ಸಂಸ್ಕರಿಸಿದ ಆಹಾರಗಳಾದ ಆಲೂಗಡ್ಡೆ ಚಿಪ್ಸ್‌, ಫ್ರೋಜನ್‌ ಪ್ಯಾಕೇಜ್ಡ್‌ ಆಹಾರಗಳು, ನಿಮ್ಮಿಷ್ಟದ ಕ್ಯಾಂಡಿ ಬಾರ್‌ ಇತ್ಯಾದಿಗಳಿಂದ ದೇಹದಲ್ಲಿ ನಿರ್ಜಲೀಕರಣದ ಸ್ಥಿತಿ ಅಂದರೆ ಡಿಹೈಡ್ರೇಶನ್‌ ಉಂಟಾಗುತ್ತದೆ. ಬಾಯಿ ಬಹುಬೇಗನೆ ಒಣಗಿದಂತಾಗುತ್ತದೆ. ನೀರು ಬೇಕೆನಿಸುತದೆ. ಈ ಆಹಾರಗಳಲ್ಲಿ ಸೋಡಿಯಂ ಹಾಗೂ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ದೇಹಕ್ಕೆ ಈ ಸ್ಥಿತಿ ಬರುತ್ತದೆ.

Kerala Inji Curry Ginger Pickle Most Famous Indian Pickles And Their Origin Place

ಉಪ್ಪಿನಕಾಯಿ

ಉಪ್ಪಿನಕಾಯಿ ಇದ್ದರೆ ಊಟ ರುಚಿ ಹೌದು. ಆದರೆ, ಉಪ್ಪಿನಕಾಯಿಯಲ್ಲಿ ಉಪ್ಪು ಹೆಚ್ಚಿರುವುದರಿಂದ ಬಾಯಾರುವುದು ಹೆಚ್ಚು. ಈಗೆಲ್ಲ ಉಪ್ಪು ಕಡಿಮೆ ಇರುವ ಥರಥರದ ಉಪ್ಪಿನಕಾಯಿಗಳನ್ನೂ ಮಾಡಬಹುದಾದ್ದರಿಂದ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಉಪ್ಪಿನಕಾಯಿ ತಿನ್ನುವ ಆಸೆಯ ಮಂದಿ ತಮ್ಮ ಆಸೆಗೆ ಎಳ್ಳುನೀರು ಬಿಡಬೇಕಾಗಿಲ್ಲ.

Soy sauce

ಸೋಯಾ ಸಾಸ್‌

ಯಾವುದೇ ಚೈನೀಸ್‌ ಅಡುಗೆ ಮಾಡುವುದಿದ್ದರೂ ಸೋಯಾ ಸಾಸ್‌ ಬಹುಮುಖ್ಯವಾದ ಪದಾರ್ಥ. ಆದರೆ ಇದರಲ್ಲೂ ಅಧಿಕ ಸೋಡಿಯಂ ಹಾಗೂ ಬ್ರಿಮ್‌ ಇರುವುದರಿಂದ ಇದು ಡಿಹೈಡ್ರೇಶನ್‌ಗೆ ದೂಡುತ್ತದೆ. ಇದರಲ್ಲೂ ಈಗ ಮಾರುಕಟ್ಟೆಯಲ್ಲಿ ಕಡಿಮೆ ಸೋಡಿಯಂ ಇರುವ ವೆರೈಟಿಗಳು ಲಭ್ಯವಿವೆ. ಹಾಗಾಗಿ ಅಂಥವುಗಳ ಆಯ್ಕೆಯನ್ನೂ ಮಾಡಬಹುದು.

Heavy or Rich Desserts Healthy Foods That Are Harmful To Consume At Night

ಸಿಹಿತಿನಿಸುಗಳು/ಡೆಸರ್ಟ್‌ಗಳು

ಸಿಹಿತಿನಿಸಿನಲ್ಲಿ ಹಾಗೂ ಯಾವುದೇ ಡೆಸರ್ಟ್‌ ವಿಚಾರಕ್ಕೆ ಬಂದರೆ ಅದರಲ್ಲಿ ಸಕ್ಕರೆಯಂಶ ಹೆಚ್ಚೇ. ಕೃತಕ ಸಿಹಿಗಳು ಇಂದು ಎಲ್ಲದರಲ್ಲೂ ಇರುವುದರಿಂದ ಕೇಕ್, ಕುಕ್ಕೀಸ್‌, ಐಸ್‌ಕ್ರೀಂ ಸೇರಿದಂತೆ ಯಾವುದೇ ಡೆಸರ್ಟ್‌ ತಿಂದರೆ ನೀವು ನೀರು ಹೆಚ್ಚು ಕುಡಿಯಲೇಬೇಕು. ಗಂಟಲೊಣಗಿ, ಬಾಯಾರುವುದು ನಿಶ್ಚಿತ. ಅದಕ್ಕೇ, ಮದುವೆ ಮನೆ, ಪಾರ್ಟಿ, ಸಮಾರಂಭಗಳ ಊಟ ಉಂಡು ಬಂದ ಮೇಲೆ ಹೆಚ್ಚು ಸುಸ್ತೂ, ಬಾಯಾರಿಕೆಯೂ ಆಗುತ್ತದೆ.

Beetroot

ಬೀಟ್‌ರೂಟ್‌

ತರಕಾರಿಗಳ ವಿಚಾರಕ್ಕೆ ಬಂದರೆ ಬೀಟ್‌ರೂಟ್‌ ಡಿಹೈಡ್ರೇಶನ್‌ಗೆ ದೂಡುವ ತರಕಾರಿ. ಬೀಟ್‌ರೂಟಿನಲ್ಲಿ ಪೊಟಾಶಿಯಂ ಹೇರಳವಾಗಿದೆ. ಹೀಗಾಗಿ ಇದು ದೇಹದಿಂದ ನೀರಿನಂಶವನ್ನು ಹೊರಕ್ಕೆ ದೂಡುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿಯೇ ಬೀಟ್‌ರೂಟ್‌ ಜ್ಯೂಸ್‌ ಕುಡಿದರೆ ಹೆಚ್ಚು ಬಾತ್‌ರೂಂಗೆ ಹೋಗಬೇಕೆನಿಸುತ್ತದೆ.
ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತಾ ಇದೆ. ಇಷ್ಟದ ತಿನಿಸನ್ನು ಈ ಕಾರಣಕ್ಕೆ ಬಿಡಬೇಕಾಗಿಲ್ಲ. ಆದರೆ, ಅತಿಯಾಗಿ ತಿನ್ನದಿರಿ. ಇಂತಹ ಆಹಾರ ಹಿತಮಿತವಾಗಿರಲಿ. ಈ ಸಂದರ್ಭ ಹಣ್ಣು ಹಂಪಲು, ತರಕಾರಿಗಳೂ ಜೊತೆಯಲ್ಲೇ ಹೊಟ್ಟೆ ಸೇರಲಿ. ಇವನ್ನು ತಿಂದ ಮೇಲೆ ಬಾಯಾರಿದರೆ, ಕಾಫಿ, ಚಹಾದಂತಹ ಕೆಫಿನ್‌ಯುಕ್ತ ಪದಾರ್ಥಗಳ ಮೊರೆ ಹೋಗದಿರಿ. ಆದಷ್ಟೂ ನೀರನ್ನೇ ಕುಡಿಯಿರಿ. ಆರೋಗ್ಯಕರ ಆಹಾರ ಸೇವನೆ ನಿಮ್ಮ ಮಂತ್ರವಾಗಲಿ.

ಇದನ್ನೂ ಓದಿ: Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Continue Reading

ಲೈಫ್‌ಸ್ಟೈಲ್

Toothbrush Using Tips: ನಿಮ್ಮ ಬ್ರಷ್‌ ಬದಲಿಸಿದ್ದು ಯಾವಾಗ ನೆನಪಿದೆಯಾ?

Toothbrush Using Tips: ಬಾಯಿಯ ಆರೋಗ್ಯದ ವಿಷಯ ಬಂದಾಗ ನಾವೆಷ್ಟು ಜಾಗ್ರತೆ ವಹಿಸುತ್ತೇವೆ? ನಮ್ಮ ಬ್ರಷ್‌ಗಳನ್ನು ಯಾವಾಗ ಬದಲಿಸುತ್ತೇವೆ? ನಮಗೆ ಹೊಂದುವಂಥ ಬ್ರಷ್‌ ಖರೀದಿಸುವುದು ನಮಗೆ ತಿಳಿದಿದೆಯೇ? ಇನ್ನಷ್ಟು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Toothbrush Using Tips
Koo

ನಮ್ಮ ವೈಯಕ್ತಿಕ ಶುಚಿತ್ವದ ವಿಷಯ ಬಂದಾಗ ನಾವೆಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಉದಾ, ನಮ್ಮ ಬಾಚಣಿಕೆ ಅಥವಾ ನಮ್ಮ ಹಲ್ಲುಜ್ಜುವ ಬ್ರಷ್‌ಗಳ ಬಗ್ಗೆ (Toothbrush Using Tips) ನಾವೆಷ್ಟು ಗಮನ ನೀಡುತ್ತೇವೆ? ಬಾಚಣಿಕೆಯನ್ನು ಯಾವಾಗ ಶುಚಿ ಮಾಡುತ್ತೇವೆ? ಹಲ್ಲುಜ್ಜುವ ಬ್ರಷ್ ಎಷ್ಟು ತಿಂಗಳಿಗೊಮ್ಮೆ ಬದಲಾಯಿಸುತ್ತೇವೆ? ಇಂಥ ವಿಷಯಗಳು ಸಣ್ಣದಾದರೂ ಬಾಯಿಯ ಆರೋಗ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ನಿರ್ಧರಿಸುತ್ತವೆ. ಈ ಕುರಿತಾದ ಇನ್ನಷ್ಟು ವಿವರಗಳು ಇಲ್ಲಿವೆ. ಯಾವ ವಸ್ತುವನ್ನು ಶುಚಿ ಮಾಡುವುದಕ್ಕೆ ಬಳಸುತ್ತೇವೋ ಅದನ್ನು ಮೊದಲು ಸ್ವಚ್ಛ ಮಾಡಿಕೊಳ್ಳಬೇಕಾದ್ದು ಅಗತ್ಯ. ಅದರಲ್ಲೂ ಬಾಯಿಯ ಆರೋಗ್ಯ ರಕ್ಷಣೆಗೆ ಉಪಯೋಗವಾಗುವ ಬ್ರಷ್‌ಗಳೇ ಕೊಳೆಯಾಗಿದ್ದರೆ ಹಲ್ಲು, ಒಸಡುಗಳ ಸ್ಥಿತಿ ಎನು? ಆದರೆ ಎಷ್ಟು ಜನ ಈ ಬಗ್ಗೆ ಲಕ್ಷ್ಯ ವಹಿಸುತ್ತಾರೆ? ಕಾಲಕಾಲಕ್ಕೆ ಅದನ್ನು ಬದಲಾಯಿಸುತ್ತಾರೆ? ಯಾವಾಗ ಬದಲಾಯಿಸಬೇಕು ಎನ್ನುವ ಮಾಹಿತಿ ಎಷ್ಟು ಜನರಲ್ಲಿ ಇರುತ್ತದೆ? ಅದನ್ನೆಲ್ಲ ಯಾಕಾಗಿ ತಿಳಿದುಕೊಳ್ಳಬೇಕು?

Toothbrush

ಬ್ರಷ್‌ ಹೇಗಿರಬೇಕು?

ಈ ಪ್ರಶ್ನೆಗೆ ಉತ್ತರ ಅವರವರ ಆಯ್ಕೆಗೆ ಬಿಟ್ಟಿದ್ದು. ಆದರೆ ಯಾವುದನ್ನೇ ತೆಗೆದುಕೊಂಡರು, ಅದರ ಬಳಕೆಯ ತುದಿ ಒರಟಾಗಿರಬಾರದು. ಹಾಗಿದ್ದರೆ ಹಲ್ಲು ಮತ್ತು ಒಸಡುಗಳಿಗೆ ಹಾನಿ. ಬದಲಿಗೆ, ಮೃದುವಾಗಿರುವ ಬ್ರಿಸಲ್‌ಗಳು ಇರುವುದನ್ನು ಆಯ್ದುಕೊಳ್ಳಿ. ಅವುಗಳಲ್ಲಿ ಹಾರ್ಡ್‌, ಮೀಡಿಯಂ, ಸಾಫ್ಟ್‌, ಅಲ್ಟ್ರಾ ಸಾಫ್ಟ್‌ ಎಂಬ ನಾಲ್ಕು ವಿಧಗಳಿವೆ.
ಸಾಫ್ಟ್‌ ಮತ್ತು ಅಲ್ಟ್ರಾ ಸಾಫ್ಟ್‌ ಬ್ರಷ್‌ಗಳು ಹಲ್ಲುಗಳು ಸುಂದರವಾಗಿ ಒಂದೇ ಸಾಲಿನಲ್ಲಿದ್ದು, ಹುಳುಕು-ಕಲೆಗಳು ಇಲ್ಲದವರಿಗೆ ಸೂಕ್ತವಾದದ್ದು. ಆದರೆ ಹಲ್ಲುಗಳು ಸಾಲಿನಲ್ಲಿದ್ದೆ ಸೊಟ್ಟವಾಗಿದ್ದರೆ, ಮೀಡಿಯಂ ಬೇಕಾಗಬಹುದು. ತೀರಾ ಅಡ್ಡಾದಿಡ್ಡಿಯಾಗಿದ್ದು, ಕಲೆಗಳೂ ಇದ್ದರೆ ಒರಟಾದವು ಅಗತ್ಯವಾಗಬಹುದು. ಆದರೆ ಯಾವುದನ್ನೇ ತೆಗೆದುಕೊಂಡರೂ, ಅದು ಬಾಯಿಯ ಎಲ್ಲಾ ದಿಕ್ಕಿಗೂ ಸುಲಭಕ್ಕೆ ಹೋಗಿ ಸ್ವಚ್ಛ ಮಾಡುವಂತಿರಬೇಕು.

ಯಾವಾಗ ಬದಲಿಸಬೇಕು?

ಪ್ರತಿ 3-4 ತಿಂಗಳಿಗೆ ಬ್ರಷ್‌ ಬದಲಿಸಬೇಕು ಎಂಬುದು ದಂತಾರೋಗ್ಯ ತಜ್ಞರ ಅಭಿಮತ. ಕೆಲವೊಮ್ಮೆ ಅದಕ್ಕೂ ಮುನ್ನವೇ ಬದಲಿಸುವುದು ಬೇಕಾಗಲೂಬಹುದು. ಬ್ರಷ್‌ ತುದಿಯ ಕೂದಲು ಆಕಾರಗೆಟ್ಟಿದ್ದರೆ, ಸೊಟ್ಟಗಾಗಿ ತನ್ನ ಕೆಲಸ ಮಾಡಲು ಅಸಮರ್ಥವಾಗಿದ್ದರೆ ಅದನ್ನು ಬದಲಾಯಿಸಬೇಕು. ಅದಿಲ್ಲದಿದ್ದರೆ, ಹಲ್ಲಿನ ಎನಾಮಲ್‌ ಕವಚಕ್ಕೆ ಹಾನಿಯಾಗಬಹುದು; ಒಸಡುಗಳು ಗಾಯವಾಗಿ ರಕ್ತ ಸೋರಬಹುದು; ಸೂಕ್ಷ್ಮ ಸಂವೇದನೆಗಳು ಹೆಚ್ಚಬಹುದು.
ಯಾವುದಾದರೂ ಸೋಂಕು ತಗುಲಿದ್ದರೆ ಬ್ರಷ್‌ ಬದಲಾವಣೆ ಅಗತ್ಯ. ಅಂದರೆ ಜ್ವರ, ಗಂಟಲುನೋವು, ಕೆಮ್ಮು, ಶ್ವಾಸಕೋಶದ ಸೋಂಕುಗಳು- ಇಂಥವು ಬಂದರೆ, ಸೋಂಕು ಗುಣವಾದ ಬಳಿಕ ಬ್ರಷ್‌ ಬದಲಿಸಿ. ಇದು ಬಾಯಿಯ ಆರೋಗ್ಯದ ದೃಷ್ಟಿಯಿಂದ ಅಗತ್ಯವಾದದ್ದು. ಒಂದೊಮ್ಮೆ ಸೋಂಕಿತರ ಆರೈಕೆಯನ್ನು ಯಾರಾದರೂ ಮಾಡುತ್ತಿದ್ದರೆ, ಅವರೂ ಬ್ರಷ್‌ ಬದಲಿಸುವುದು ಒಳ್ಳೆಯದು.

ಇದನ್ನೂ ಓದಿ: Saffron For Baby: ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆಯೇ?

ತಂತ್ರಗಳು

ಬ್ರಷ್‌ ಮಾಡುವ ತಂತ್ರಗಳನ್ನು ಸರಿಯಾಗಿ ರೂಢಿಸಿಕೊಳ್ಳಿ. ಅದಿಲ್ಲದಿದ್ದರೆ ಹಲ್ಲುಗಳ ಮೇಲೆ ಪ್ಲೇಕ್‌ನಂತೆ ಕೂರುವುದು, ಬಣ್ಣಗೆಡುವುದು, ಹುಳುಕಾಗುವುದು ಹೆಚ್ಚುತ್ತದೆ. ಒರಟಾಗಿ ಉಜ್ಜಿದರೆ ಎನಾಮಲ್‌ ಹಾಳಾಗಿಬಿಡುತ್ತದೆ. ಹಾಗಾಗಿ ಬಾಯಿಯ ಆರೋಗ್ಯ ರಕ್ಷಣೆಯಲ್ಲಿ ಈ ಎಲ್ಲ ಅಂಶಗಳೂ ಮುಖ್ಯವಾಗಿವೆ.
ಬ್ರಷ್‌ಗಳನ್ನು ಹೇಗೆ, ಎಲ್ಲಿ ಇರಿಸಿಕೊಳ್ಳುತ್ತೀರಿ ಎಂಬುದನ್ನು ಎಂದಾದರೂ ಗಮನಿಸಿದ್ದೀರಾ? ಒಂದೇ ಕಡೆ ಹತ್ತಾರು ಬ್ರಷ್‌ಗಳನ್ನು ತುರುಕಿದಂತೆ ಇರಿಸಿಕೊಳ್ಳುವವರು ನೀವಾಗಿದ್ದರೆ, ಈ ಮೂಲಕವೂ ಸೋಂಕುಗಳು ಬರಬಹುದು ಎನ್ನುವುದು ತಿಳಿದಿರಲಿ. ಹಾಗಾಗಿ ಬ್ರಷ್‌ ಮೂಲಕ ಬ್ಯಾಕ್ಟೀರಿಯ ಬರಬಾರದೆಂದರೆ, ಅದಕ್ಕೊಂದು ಸರಿಯಾದ ಕೇಸ್‌ ಹಾಕಿ ಇರಿಸಿಕೊಳ್ಳಿ.

Continue Reading

ಪ್ರಮುಖ ಸುದ್ದಿ

Dengue Fever: ಡೆಂಗ್ಯುಗೆ ಕೋವಿಡ್‌ ಮಾದರಿ ಉಚಿತ ಚಿಕಿತ್ಸೆ ಕೊಡಿ, ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ: ಡಾ. ಮಂಜುನಾಥ್

Dengue Fever: ಡೆಂಗ್ಯು ತಡೆಗಟ್ಟದಿದ್ರೆ ಚಿಕನ್ ಗುನ್ಯ, ಜೀಕಾ ವೈರಸ್ ಬರಬಹುದು. ಕೋವಿಡ್ ಪ್ಯಾಂಡಮಿಕ್ ಅಂದೆವು. ಡೆಂಗ್ಯು ಎಂಡಮಿಕ್ ಆಗಿದೆ. ಎಂಡೆಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು ಎಂದು ಮಂಜುನಾಥ್‌ ಹೇಳಿದ್ದಾರೆ.

VISTARANEWS.COM


on

DR CN Manjunath dengue fever
Koo

ಬೆಂಗಳೂರು: ಡೆಂಗ್ಯು ಜ್ವರಕ್ಕೆ (Dengue Fever) ಅಡ್ಮಿಟ್ ಆದವರಿಗೆ, ಕೋವಿಡ್ (Covid 19) ಸಂದರ್ಭದಲ್ಲಿ ಯಾವ ರೀತಿ ಉಚಿತ ಚಿಕಿತ್ಸೆ ನೀಡಲಾಯಿತೋ ಅದೇ ರೀತಿ ಕನಿಷ್ಠ ಮಾನದಂಡದಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ (Bangalore Rural) ಸಂಸದ ಡಾ. ಸಿಎನ್‌ ಮಂಜುನಾಥ್‌ (Dr CN Manjunath) ಹೇಳಿದ್ದಾರೆ.

ಇದು ಸರ್ಕಾರಕ್ಕೆ ನನ್ನ ಸಲಹೆ. ಡೆಂಗ್ಯೂ ಫಿವರ್‌ ನಿಯಂತ್ರಣ ಅಂದರೆ ಸೊಳ್ಳೆ ನಿಯಂತ್ರಣ. ಸೊಳ್ಳೆ ನಿಯಂತ್ರಣ ಆದರೆ ಮಾತ್ರ ಡೆಂಗ್ಯು ನಿಯಂತ್ರಣ ಆಗಲಿದೆ. ಮಳೆಗಾಲ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆ ಬರುತ್ತದೆ. ಡೆಂಗ್ಯು ತಡೆಗಟ್ಟದಿದ್ರೆ ಚಿಕನ್ ಗುನ್ಯ, ಜೀಕಾ ವೈರಸ್ ಬರಬಹುದು. ಕೋವಿಡ್ ಪ್ಯಾಂಡಮಿಕ್ ಅಂದೆವು. ಡೆಂಗ್ಯು ಎಂಡಮಿಕ್ ಆಗಿದೆ. ಎಂಡೆಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು ಎಂದು ಮಂಜುನಾಥ್‌ ಹೇಳಿದ್ದಾರೆ.

ಸರಕಾರ ಡೆಂಗ್ಯುಗೆ ದರ ನಿಗದಿ ಮಾಡಿದೆ. ಡಯೋಗ್ನಾಸಿಸ್‌ಗಳು ಹೆಚ್ಚು ವಸೂಲಿ ಮಾಡಿದರೆ,‌ ಅವುಗಳ ಬಾಗಿಲು ಮುಚ್ಚಿಸಬೇಕು. ಡೆಂಗ್ಯು ಹರಡಲು ಕಾರಣ ಮಳೆಗಾಲದಲ್ಲಿ ನೀರು ನಿಲ್ಲೋದರಿಂದ. ಹಲವೆಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಈಡಿಸ್ ಈಜಿಪ್ಟೈ ಸೊಳ್ಳೆಯಿಂದ ಕಾಯಿಲೆ‌ ಹರಡುತ್ತಿದೆ. ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಆಗಬೇಕು. ಪ್ರತ್ಯೇಕ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಮಳೆಗಾಲ ಆರಂಭವಾದ ಮೇಲೆ ಎಚ್ಚೆತ್ತುಕೊಂಡಿದ್ದಾರೆ. ಈಗ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರದ್ದೂ ಜವಾಬ್ದಾರಿ ಇದೆ ಎಂದು ಡಾ. ಮಂಜುನಾಥ್‌ ಎಚ್ಚರಿಸಿದ್ದಾರೆ.

ಡೆಂಗ್ಯು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರ್ತಿದೆ. ಶಾಲೆಗಳಿಗೆ ಸರ್ಕ್ಯೂಲರ್ ಹೊರಡಿಸಬೇಕು. ಮಕ್ಕಳಲ್ಲಿ ಆರೋಗ್ಯ ಹದಗೆಟ್ಟಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಏಳೆಂಟು ಜನ ಸಾವನ್ನಪ್ಪಿದ್ದಾರೆ. ಸೊಳ್ಳೆ ನಿಯಂತ್ರಣ ಮಾಡೋದ್ರಲ್ಲಿ ಸರ್ಕಾರ ಎಡವಿದೆ. ಏನೇನೋ ಫ್ರೀ ಕೊಡ್ತೀವಿ, ಯಾವುದನ್ನೋ ಉಚಿತ ಕೊಡ್ತಿದ್ದಾರೆ. ಅದರ ಜೊತೆಗೆ ಸ್ಲಂಗಳಲ್ಲಿ, ವಠಾರದಲ್ಲಿ ವಾಸವಾಗಿದ್ದವರ ಮನೆಗೆ ಸೊಳ್ಳೆಪರದೆಯನ್ನು ಉಚಿತವಾಗಿ ನೀಡಬೇಕು. ಇದರಿಂದ ಬಹಳಷ್ಟು ರೋಗ ನಿಯಂತ್ರಣ ಆಗಲಿದೆ ಎಂದು ಮಂಜುನಾಥ್ ಸೂಚಿಸಿದ್ದಾರೆ. ‌

ಡೆಂಗ್ಯು ಬಂದು ಮತ್ತೆ ಹುಷಾರಾಗುವಾಗ ಪ್ಲೇಟ್ ಲೆಟ್ಸ್ ಕಡಿಮೆ ಆಗುತ್ತೆ. ಜೊತೆಗೆ ದೇಹದಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರ‌ ಗಮನಕ್ಕೂ ನಾನು ತರಲಿದ್ದೇನೆ. ಅವಶ್ಯಕತೆ ಇರುವವರಿಗೆ ಮೊದಲೇ ಚಿಕಿತ್ಸೆ ನೀಡಬೇಕು. ಡೆಂಗ್ಯೂ ಕಾಯಿಲೆಗೆ ಬೇಕಾದ ಮಾತ್ರೆಗಳ ಕೊರತೆ ಕೂಡ ಎದುರಾಗಿದೆ. ವಾರ್ ರೂಮ್ ಮೂಲಕ ಮಾನಿಟರ್ ಮಾಡಬೇಕು. ಮುಂದುವರೆದ ದೇಶಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕಾಯಿಲೆ ತಡೆದಿದ್ದಾರೆ. ಮಸ್ಕ್ಯೂಟೋ ರೆಪೆಲೆಂಟ್ಸ್ ಅಂತ ಸ್ಟಿಕರ್ ಬರುತ್ತಿದ್ದು. ಅದನ್ನ ಇಲ್ಲೂ ಹಾಕಬೇಕು. ಇದರಿಂದ ಮಕ್ಕಳಿಗೆ ಸೊಳ್ಳೆ ಕಡಿತ ತಪ್ಪಿಸಬಹುದು ಎಂದು ಅವರು ಹೇಳಿದರು.

ಜಪಾನ್, ಸಿಂಗಾಪುರ್, ಅಮೇರಿಕಾದಲ್ಲಿ ಡೆಂಗ್ಯೂ ಕಾಯಿಲೆಗೆ ಬೇಕಾದ ಮೆಡಿಸಿನ್ ಇದೆ. ಅವುಗಳನ್ನು ರಾಜ್ಯ ಸರ್ಕಾರ ತರಿಸಿಕೊಳ್ಳಬೇಕು. ಇಲ್ಲ ಅಲ್ಲಿ ನೀರು ನಿಲ್ಲೋದನ್ನ ತಡೆಗಟ್ಟಬೇಕು. ಸೊಳ್ಳೆ ನಿಯಂತ್ರಣ ಮಾಡಲು ಸ್ಪ್ರೇ ಮಾಡುವವರು ಕಾಣುತ್ತಿಲ್ಲ. ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Dengue Fever: ಸಿಲಿಕಾನ್‌ ಸಿಟಿಯಲ್ಲಿ ಡೆಂಗ್ಯು ಜ್ವರಕ್ಕೆ ಬಾಲಕ ಬಲಿ, ರಾಜಧಾನಿಯಲ್ಲಿ 2ನೇ ಸಾವು

Continue Reading

ಶಿವಮೊಗ್ಗ

Zika Virus : ಡೆಂಗ್ಯೂ ಬೆನ್ನಲ್ಲೇ ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ ವೃದ್ಧ ಬಲಿ

Dengue Fever : ಡೆಂಗ್ಯೂ ಜ್ವರ ಎಲ್ಲೆಡೆ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಜತೆಗೆ ಝಿಕಾ ವೈರಸ್‌ ಭೀತಿಯು (Zika Virus ) ಹೆಚ್ಚಾಗಿದೆ. ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ.

VISTARANEWS.COM


on

By

Zika Virus
ಸಾಂದರ್ಭಿಕ ಚಿತ್ರ
Koo

ಶಿವಮೊಗ್ಗ: ರಾಜ್ಯದಲ್ಲಿ ಝಿಕಾ ವೈರಸ್ (Zika Virus) ಆತಂಕ ಹೆಚ್ಚಾಗಿದ್ದು, ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ 74 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಝಿಕಾ ವೈರಸ್ ಜತೆಗೆ ಬಹು ಅಂಗಾಂಗ ವೈಫಲ್ಯಗಳಿಂದ ವೃದ್ಧ ಬಳಲುತ್ತಿದ್ದರು ಎನ್ನಲಾಗಿದೆ.

ಕಳೆದ ಹತ್ತು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೇವಲ ಝಿಕಾ ವೈರಸ್‌ಗೆ ವ್ಯಕ್ತಿ ಸಾಯಲು ಸಾಧ್ಯವಿಲ್ಲ. ಅವರು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು ಎಂದು ಸಾವಿನ ಬಗ್ಗೆ ಶಿವಮೊಗ್ಗ ಡಿಎಚ್‌ಒ ಡಾ.ನಟರಾಜ್ ಸ್ಪಷ್ಟನೆ ಪಡಿಸಿದ್ದಾರೆ.

ಯುವಕನಲ್ಲೂ ಝಿಕಾ ವೈರಸ್‌ ಪತ್ತೆ

ಶಿವಮೊಗ್ಗದ ಸಾಗರ ಮೂಲದ 24 ವರ್ಷದ ಯುವಕನಲ್ಲೂ ಝಿಕಾ ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ. ಯುವಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಝಿಕಾ ರೋಗದ ಲಕ್ಷಣಗಳೇನು?

  • ಕಣ್ಣು ಕೆಂಪಾಗುವಿಕೆ, ತಲೆ ನೋವು, ಜ್ವರ, ಕೀಲುಗಳಲ್ಲಿ ನೋವು, ಗಂಧೆಗಳು, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಜನರು ಯಾವ ನಿಯಮ ಪಾಲಿಸಬೇಕು?

ರೋಗದ ಲಕ್ಷಣ ಕಂಡು ಬಂದರೆ ಕೂಡಲೇ ಜನರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಈ ಮೂಲಕ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳಬಾರದು ಎಂಬ ಸಲಹೆಯನ್ನು ಆರೋಗ್ಯ ಇಲಾಖೆ ನೀಡಿದೆ.

ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ/ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: Death by Shock: ಮೊಬೈಲ್‌ ಚಾರ್ಜರ್‌ನಿಂದ ಶಾಕ್‌ ಹೊಡೆದು ವಿದ್ಯಾರ್ಥಿ ಸಾವು

ಝಿಕಾ ವೈರಸ್ ತಡೆಗಟ್ಟಲು ಜನಸಾಮಾನ್ಯರ ಜವಾಬ್ದಾರಿ ಏನು?

  • -ನೀರು ಶೇಖರಣಾ ಪರಿಕರಗಳನ್ನು (ಟ್ಯಾಂಕ್‌, ಟಬ್‌ ಇತ್ಯಾದಿ) ಮುಚ್ಚಿಡಬೇಕು. ಅಲ್ಲದೆ, ವಾರಕ್ಕೊಮ್ಮೆ ಅವುಗಳನ್ನು ಸ್ವಚ್ಛಗೊಳಿಸಬೇಕು.
  • -ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಜತೆಗೆ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
  • -ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ಧರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು.
  • -ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು.
  • -ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Urfi Javed Drunk Struggles To Walk
ಬಾಲಿವುಡ್15 mins ago

Urfi Javed: ಉರ್ಫಿ ಜಾವೇದ್‌ ಫುಲ್‌ ಟೈಟ್‌; ಸ್ನೇಹಿತೆ ಪಟ್ಟ ಹರಸಾಹಸ ಅಷ್ಟಿಷ್ಟಲ್ಲ!

Pavithra Gowda was a challenge for Darshan
ಕ್ರೈಂ48 mins ago

Actor Darshan: ಪವಿತ್ರಾಗೌಡ ಮುನಿಸು ಶಮನ‌‌ ಮಾಡೋದೇ ಚಾಲೆಂಜ್‌ ಆಗಿತ್ತು ದರ್ಶನ್‌ಗೆ!

Vinesh Phogat
ಕ್ರೀಡೆ58 mins ago

Vinesh Phogat: ಕೊನೆಯ ಕ್ಷಣದಲ್ಲಿ ವೀಸಾ ಪಡೆದು ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಟೂರ್ನಿಯಲ್ಲಿ ಚಿನ್ನ ಗೆದ್ದ ವಿನೇಶ್ ಫೋಗಟ್

Road Accident
ಬೆಂಗಳೂರು1 hour ago

Road Accident: ರಾಜಕಾಲುವೆಗೆ ಬಿದ್ದ ಬೈಕ್‌ ಸವಾರನ ಮೃತದೇಹ ಪತ್ತೆ

MS Dhoni Birthday
ಕ್ರೀಡೆ2 hours ago

MS Dhoni Birthday: ಧೋನಿ ನಾಯಕರಾಗಿದ್ದಾಗ ಬಳಸಿದ ಮಹತ್ವದ ಗೆಲುವಿನ ತಂತ್ರಗಳು ಇಲ್ಲಿವೆ

Road Accident
ಕ್ರೈಂ2 hours ago

Road Accident: ಲಾರಿಗೆ ಬೈಕ್‌ ಡಿಕ್ಕಿ ಹೊಡೆದು ಪತ್ರಕರ್ತ ಸಾವು: ಇಬ್ಬರನ್ನು ಬಲಿ ಪಡೆದ ಅಪರಿಚಿತ ಕಾರು

actor darshan wife vijayalakshmi conducted a special pooja at bande mahakali last year goes viral
ಸ್ಯಾಂಡಲ್ ವುಡ್2 hours ago

Actor Darshan: ದರ್ಶನ್‌ಗಾಗಿ ವಿಶೇಷ ಪೂಜೆ ಮಾಡಿಸಿದ್ರಾ ವಿಜಯಲಕ್ಷ್ಮಿ? ಅಸಲಿ ಕಥೆ ಬೇರೆಯೇ ಇದೆ!

MS Dhoni Birthday
ಕ್ರಿಕೆಟ್2 hours ago

MS Dhoni Birthday: ಸಲ್ಮಾನ್​ ಖಾನ್​ ಜತೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಧೋನಿ

Building Collapse
ದೇಶ2 hours ago

Building Collapse: ಐದು ಅಂತಸ್ತಿನ ಕಟ್ಟಡ ಧರಾಶಾಹಿ- ಏಳು ಜನ ದಾರುಣ ಸಾವು

Kannada New Movie Not Out Trailer out
ಸ್ಯಾಂಡಲ್ ವುಡ್2 hours ago

Kannada New Movie: ಕುತೂಹಲ ಮೂಡಿಸಿದೆ ʻನಾಟ್ ಔಟ್ʼ ಚಿತ್ರದ ಟ್ರೈಲರ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ5 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ16 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ19 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ20 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು22 hours ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ24 hours ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ2 days ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 days ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಟ್ರೆಂಡಿಂಗ್‌