Haircare Tips: ಕೂದಲು ಉದುರುತ್ತಿದೆಯೇ?: ಕಾರಣ ಇದಾಗಿರಬಹುದು, ಗಮನಿಸಿ - Vistara News

ಆರೋಗ್ಯ

Haircare Tips: ಕೂದಲು ಉದುರುತ್ತಿದೆಯೇ?: ಕಾರಣ ಇದಾಗಿರಬಹುದು, ಗಮನಿಸಿ

ಕೂದಲು ಉದುರುವುದು (Haircare Tips) ಈಗ ಸಮಸ್ಯೆಯ ಬದಲಿಗೆ ಎಲ್ಲರ ಪಾಲಿನ ನಿತ್ಯಸತ್ಯವಾಗಿ ಪರಿಣಮಿಸಿದೆ. ಆದರೆ ಯಾವಾಗ ಹಣೆ ದೊಡ್ಡದಾಗುತ್ತಾ ಕೂದಲಿನ ಹಣೆಬರಹ ಸಣ್ಣದಾಗಲು ಪ್ರಾರಂಭಿಸುತ್ತದೊ ಆಗ ಆತಂಕವೂ ಶುರುವಾಗುತ್ತದೆ. ಈ ಸಮಸ್ಯೆಗೆ ಏನು ಕಾರಣ? ಈ ಲೇಖನ ಓದಿ.

VISTARANEWS.COM


on

Haircare Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಯಸ್ಸಾದಂತೆ ಹಣೆ ಅಗಲವಾಗುತ್ತಾ ಹೋಗುವುದು ಸಾಮಾನ್ಯ ಸಂಗತಿ. ಇದು ವಂಶವಾಹಿಗಳಿಂದಲೂ ಬರುವುದಕ್ಕೆ ಸಾಧ್ಯ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಬೊಕ್ಕತಲೆಯ (Haircare Tips) ಸಮಸ್ಯೆ ಕಾಣುತ್ತದೆ. ಆದರೆ ಕಿರಿಯ ವಯಸ್ಸಿನಲ್ಲೇ ಹಣೆ ಅಗಲವಾಗಿ, ಕೂದಲ ಗಾತ್ರ ಕಿರಿದಾಗುವುದು (receding hairline) ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ.

Woman Suffering from Baldness on Grey Background, Closeup

ಕೂದಲು ಉದುರುವುದು ಈಗ ಸಮಸ್ಯೆಯ ಬದಲಿಗೆ ಎಲ್ಲರ ಪಾಲಿನ ನಿತ್ಯಸತ್ಯವಾಗಿ ಪರಿಣಮಿಸಿದೆ. ಆದರೆ ಯಾವಾಗ ಹಣೆ ದೊಡ್ಡದಾಗುತ್ತಾ ಕೂದಲಿನ ಹಣೆಬರಹ ಸಣ್ಣದಾಗಲು ಪ್ರಾರಂಭಿಸುತ್ತದೊ ಆಗ ಆತಂಕವೂ ಶುರುವಾಗುತ್ತದೆ. ʻಛೇ! ಕೂದಲು ಉದುರುತ್ತಿದೆʼ ಎಂದು ಎದುರಿಗೆ ದೇಶಾವರಿ ಸಂತಾಪ ಸೂಚಿಸುವ ಜನ, ಬೆನ್ನ ಹಿಂದೆ ಬೊಕ್ಕ ತಲೆಯವರಿಗೆ ನಾನಾ ಹೆಸರಿಡುತ್ತಾರೆ ಎಂಬುದು ರಹಸ್ಯವೇನಲ್ಲ. ಹೇಳುವವರು ಏನೇ ಹೇಳಲಿ, ಆದರೆ ಕೂದಲು ಉದುರಿ ತಲೆ ಬೋಳಾಗುವುದು (haircare tips) ಸಂತೋಷದ ವಿಷಯವಂತೂ ಖಂಡಿತಾ ಅಲ್ಲ.

ವಯಸ್ಸಾದಂತೆ ಹಣೆ ಅಗಲವಾಗುತ್ತಾ ಹೋಗುವುದು ಸಾಮಾನ್ಯ ಸಂಗತಿ. ಇದು ವಂಶವಾಹಿಗಳಿಂದಲೂ ಬರುವುದಕ್ಕೆ ಸಾಧ್ಯ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಬೊಕ್ಕತಲೆಯ ಸಮಸ್ಯೆ ಕಾಣುತ್ತದೆ. ಆದರೆ ಕಿರಿಯ ವಯಸ್ಸಿನಲ್ಲೇ ಹಣೆ ಅಗಲವಾಗಿ, ಕೂದಲ ಗಾತ್ರ ಕಿರಿದಾಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಒಮ್ಮೆ ಕೂದಲ ಅಂಚುಗಳು ಹಿಂದೆ ಸರಿದು, ಹಣೆ ಅಗಲವಾಗುತ್ತಾ ಹೋದರೆ ಅದನ್ನು ನಿಲ್ಲಿಸುವುದು ಕಷ್ಟ. ಹೆಚ್ಚಿನ ಸಾರಿ ಇದಕ್ಕೆ ಪರಿಹಾರ ಹುಡುಕುವ ಭರದಲ್ಲಿ (haircare tips) ಇನ್ನಷ್ಟು ಹಾನಿಯನ್ನೇ ಮಾಡಿಕೊಳ್ಳುವ ಸಂದರ್ಭಗಳು ಹೆಚ್ಚು. ಆದರೆ ಹೀಗೇಕಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ

Woman with Hair Loss Problem at Home

ಹಾನಿ ಹೆಚ್ಚುವುದು ಹೀಗೆ!

ಕೂದಲು ಉದುರುತ್ತಿರುವ ಕಾರಣವನ್ನು ಅರ್ಥ ಮಾಡಿಕೊಳ್ಳದೇ ನಮ್ಮಿಷ್ಟದಂತೆ ಮನೆಮದ್ದು ಮಾಡಿಕೊಳ್ಳುವುದರಿಂದ ಸಮಸ್ಯೆ ಬಿಗಡಾಯಿಸಬಹುದು. ಕೂದಲು ಉದುರುವುದಕ್ಕೆ ಕಾರಣಗಳು ನಾನಾ ರೀತಿಯಲ್ಲಿ ಇರುತ್ತವೆ. ಅತಿಯಾದ ಒತ್ತಡ, ನಿದ್ದೆಗೆಡುವುದು ಕಾರಣವಾಗಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳಿ. ಸಮತೋಲನವಿಲ್ಲದ ಆಹಾರ ಪದ್ಧತಿ ನಿಮ್ಮದಾಗಿದ್ದರೆ, ಪೌಷ್ಟಿಕಾಂಶ ಕೂದಲಿಗೆ ಮಾತ್ರವಲ್ಲ, ಇಡೀ ದೇಹಕ್ಕೇ ಬೇಕಾಗುತ್ತದೆ. ಹಾರ್ಮೋನುಗಳ ತೊಂದರೆಯಿಂದಲೂ ಈ ಸಮಸ್ಯೆ ಕಾಣಬಹುದು. ಸೂಕ್ಷ್ಮ ಪೋಷಕಾಂಶಗಳ ಕೊರತೆ ಇದ್ದರೆ ಅದರ ಅಡ್ಡ ಪರಿಣಾಮ ಕೂದಲಿನ ಮೇಲಾಗುವ ಸಾಧ್ಯತೆಯಿದೆ. ಇಂಥ ಸಮಸ್ಯೆಗಳ ಪರಿಹಾರಕ್ಕೆ ವೈದ್ಯರನ್ನೇ ಸಂಪರ್ಕಿಸಬೇಕಾಗುತ್ತದೆ. ಇನ್ನು ವಂಶವಾಹಿಗಳು ಕಾರಣವಾಗಿದ್ದಲ್ಲಿ ಏನು ಮಾಡಿದರೂ ಪರಿಣಾಮ ಕಾಣುವುದು ಅನುಮಾನ.

Hair loss

ರಾಸಾಯನಿಕಗಳು

ಕೂದಲನ್ನು ಸೊಂಪಾಗಿಸುವ, ಉದುರುವುದನ್ನು ನಿಲ್ಲಿಸುವಂಥ ಜಾಹೀರಾತುಗಳನ್ನು ನೋಡಿ ಮರುಳಾದವರ ಸಂಖ್ಯೆ ಲೆಕ್ಕವಿಲ್ಲ. ಈ ಜಾಹೀರಾತುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದವರಾರು? ಕಠೋರವಾದ ಶಾಂಪೂಗಳು, ಅತಿಯಾದ ಕಂಡೀಶನರ್‌ ಬಳಕೆ, ಹೊಟ್ಟು ನಿವಾರಣೆಗೆ ಯದ್ವಾತದ್ವಾ ಚಿಕಿತ್ಸೆಗಳು, ಪ್ರತಿದಿನ ತಲೆಸ್ನಾನ ಮಾಡುವುದು, ಸಿಕ್ಕಾಪಟ್ಟೆ ಬಿಸಿನೀರು ಸ್ನಾನ ಮಾಡುವುದು ಇಂಥವೆಲ್ಲಾ ಕೂದಲಿಗೆ ನಿಶ್ಚಿತವಾಗಿ ಹಾನಿಯನ್ನು ಉಂಟುಮಾಡುತ್ತವೆ.

ಕೂದಲನ್ನು ಬಿಸಿ ಮಾಡಿ, ನೇರವೊ ಸುರುಳಿಯೊ ಮಾಡುವಂಥ ಉಪಕರಣಗಳನ್ನು ಅತಿಯಾಗಿ ಬಳಸುವುದು ಹಾನಿ ಮಾಡಬಹುದು. ಕೂದಲ ವಿನ್ಯಾಸಗಳಿಗಾಗಿ ಉಪಯೋಗಿಸುವ ಯಾವುದೇ ರಾಸಾಯನಿಕಗಳು ಮತ್ತು ಉಪಕರಣಗಳು ಒಂದಿಲ್ಲೊಂದು ಪರಿಣಾಮವನ್ನು ತಲೆಯ ಚರ್ಮ ಮತ್ತು ನೆತ್ತಿಯ ಮೇಲೆ ಉಂಟುಮಾಡುತ್ತವೆ. ಕೂದಲನ್ನು ಅತಿಯಾಗಿ ಬಾಚುವುದು ಮತ್ತು ತೀರಾ ಬಾಚದಿರುವುದು- ಈ ಎರಡೂ ಸಮಸ್ಯೆಗಳನ್ನು ತರಬಲ್ಲವು. ಕೂದಲನ್ನು ಸದಾಕಾಲ ಬಿಗಿಯಾಗಿ ಕಟ್ಟುವುದು, ಹಿಮ್ಮುಖವಾಗಿ ಎಳೆದು ಬಾಚುವುದರಿಂದಲೂ ಹಣೆ ಕ್ರಮೇಣ ಅಗಲವಾಗತೊಡಗುತ್ತದೆ. ನೆತ್ತಿಯ ಮೇಲೆ ಬಿಗಿಯಾಗಿ ಹೇರ್‌ಬ್ಯಾಂಡ್‌ ಧರಿಸುವುದು, ಸದಾ ಕ್ಯಾಪ್‌ ಹಾಕಿಕೊಳ್ಳುವುದು ಸಹ ಸಮಸ್ಯೆಗೆ ಕಾರಣವಾಗಬಲ್ಲವು.

Beauty Hair Care. Beautiful Woman Combing Long Natural Hair

ಕಾಳಜಿ ಹೀಗಿರಲಿ

ಮೊದಲಿಗೆ ಸೇವಿಸುವ ಆಹಾರದ ಬಗ್ಗೆ ನಿಗಾ ವಹಿಸಿ. ಕಬ್ಬಿಣ, ಜಿಂಕ್‌, ಬಯೋಟಿನ್‌, ವಿಟಮಿನ್‌ ಎ, ಇ ಮತ್ತು ಡಿ ಆಹಾರಗಳು ಹಾಗೂ ಸಾಕಷ್ಟು ಪ್ರೊಟೀನ್‌ ನಿಮ್ಮ ಆಹಾರದಲ್ಲಿರಲಿ. ಇದಕ್ಕಾಗಿ ಹಣ್ಣು, ತರಕಾರಿ, ಮೀನು, ಮೊಟ್ಟೆ, ಬೀಜಗಳು, ಸೊಪ್ಪು ಮತ್ತು ಮೊಳಕೆ ಕಾಳುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಚೆನ್ನಾಗಿ ನೀರು ಕುಡಿಯಿರಿ.

ದಿನಕ್ಕೆ ಎಂಟು ತಾಸುಗಳ ನಿದ್ದೆ ಅಗತ್ಯವಾಗಿ ಬೇಕು. ಇದರಿಂದ ದೇಹದ ರಿಪೇರಿ ಮಾತ್ರವಲ್ಲ, ಮನಸ್ಸಿನ ಒತ್ತಡ ನಿವಾರಣೆಗೂ ಅನುಕೂಲವಾಗುತ್ತದೆ. ವ್ಯಾಯಾಮ, ಆಸಕ್ತಿಯ ಹವ್ಯಾಸಗಳು, ಧ್ಯಾನ, ಪ್ರಾಣಾಯಾಮಗಳು ಕೂದಲು ಸೇರಿದಂತೆ ದೇಹದ ಎಲ್ಲಾ ಅಂಗಗಳ ಮೇಲೂ ಧನಾತ್ಮಕ ಪರಿಣಾಮ ಬೀರುತ್ತವೆ.

ಮೃದುವಾದ ಶಾಂಪೂಗಳನ್ನು ಬಳಸಿ. ಉಗುರು ಬಿಸಿ ನೀರೇ ಸಾಕಾಗುತ್ತದೆ ತಲೆಸ್ನಾನಕ್ಕೆ. ಕೂದಲ ಬುಡವನ್ನು ಶಕ್ತಿ ಹಾಕಿ ಉಜ್ಜುವಂಥದ್ದು ಏನೂ ಇರುವುದಿಲ್ಲ. ವಾರಕ್ಕೆರಡು ಬಾರಿ ನಿಯಮಿತವಾಗಿ ತಲೆಸ್ನಾನ ಮಾಡಿದರೆ, ಕೂದಲ ಕೊಳೆ ತೆಗೆಯುವುದಕ್ಕೆ ಸಾಕಾಗುತ್ತದೆ. ತಲೆಸ್ನಾನಕ್ಕೆ ಬಳಸುವ ನೀರು ತುಂಬಾ ಗಡುಸಾಗಿದ್ದರೂ ಸಮಸ್ಯೆಗೆ ನಾಂದಿಯಾಗಬಹುದು.

Do not use these products on hair

ಇವು ಬೇಡ

ಕೂದಲು ಉದುರುವುದಕ್ಕೆ ಪ್ರಾರಂಭವಾದ ಮೇಲೆ, ಅತಿಯಾದ ರಾಸಾಯನಿಕಗಳ ಬಳಕೆಯು ಸಮಸ್ಯೆಯ ತೀಕ್ಷ್ಣತೆಯನ್ನು ಹೆಚ್ಚಿಸುತ್ತದೆ. ಜೆಲ್‌, ವ್ಯಾಕ್ಸ್‌ ಅಥವಾ ಸ್ಪ್ರೇಗಳು ಈ ಸಾಲಿಗೆ ಸೇರುತ್ತವೆ. ಬದಲಿಗೆ, ಆಗಾಗ ಶುದ್ಧ ತೆಂಗಿನ ಎಣ್ಣೆಯಿಂದ ಕೂದಲ ಬುಡವನ್ನು ಲಘುವಾಗಿ ಮಸಾಜ್‌ ಮಾಡಿ. ಇದರಿಂದ ತಲೆಗೆ ರಕ್ತ ಸಂಚಾರ ಹೆಚ್ಚಿ, ಹೊಸ ಕೂದಲುಗಳ ಬೆಳವಣಿಗೆಗೆ ಸಹಾಯವಾಗುತ್ತದೆ.

ಕೂದಲುಗಳನ್ನು ಎಳೆದು ಬಿಗಿಯಾಗಿ ಹಿಮ್ಮುಖವಾಗಿ ಬಾಚಬೇಡಿ. ಅತಿ ಒರಟಾಗಿ ಬಾಚುವುದು ಸಹ ಸಲ್ಲದು. ಕೂದಲಿನ ಮೇಲೆ ಯಾವುದೇ ರೀತಿಯ ಬಲಪ್ರಯೋಗದಿಂದಲೂ ಬುಡ ಸಡಿಲವಾಗಿ, ಕೂದಲು ಬಲಹೀನವಾಗುತ್ತದೆ. ಆಮೇಲೆ ಉದುರುವುದೇ, ಇನ್ನೇನು!

ಡ್ರೈಯರ್‌ಗಳು, ಸುರುಳಿ ಅಥವಾ ನೇರ ಮಾಡುವಂಥ ಹೀಟಿಂಗ್‌ ಉಪಕರಣಗಳು ಬೇಡ. ತೀರಾ ಅಗತ್ಯ ಸಂದರ್ಭಗಳನ್ನು ಬಿಟ್ಟರೆ, ಉಳಿದಂತೆ ಪರ್ಮಿಂಗ್‌, ಬಣ್ಣ ಹಾಕುವಂಥ ಪ್ರಯೋಗಗಳು ಕೂದಲಿನ ಮೇಲೆ ಬೇಡ. ಒದ್ದೆ ಕೂದಲನ್ನು ಬಾಚುವ ಸಾಹಸ ಬೇಡ. ಇದರಿಂದ ಉದುರುವುದು ಇನ್ನಷ್ಟು ಹೆಚ್ಚುತ್ತದೆ.

ಇದನ್ನೂ ಓದಿ: Health Tips: ಚಹಾದ ಜೊತೆಗೆ ಈ ಬಗೆಯ ಆಹಾರಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಗೊತ್ತೇ?!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್‌ಗೆ ಚಾಲನೆ

Bengaluru News: ಬೆಂಗಳೂರಿನ ಜೆಪಿ ನಗರದಲ್ಲಿ ನೂತನ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್‌ನ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ಆಯುರಾಶ್ರಮದ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಹಾಗೂ ಮಾಜಿ ಕಾರ್ಪೊರೇಟರ್ ನಾಗರತ್ನ ರಾಮಮೂರ್ತಿ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

VISTARANEWS.COM


on

Inauguration of Pushpam Ayurveda Wellness Center in Bengaluru
Koo

ಬೆಂಗಳೂರು: ನಗರದ ಜೆಪಿ ನಗರದಲ್ಲಿ ನೂತನ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್‌ನ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ಆಯುರಾಶ್ರಮದ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಹಾಗೂ ಮಾಜಿ ಕಾರ್ಪೊರೇಟರ್ ನಾಗರತ್ನ ರಾಮಮೂರ್ತಿ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ (Bengaluru News) ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿ ಡಾ. ಮೊಹಮ್ಮದ್ ರಫಿ ಹಕೀಂ, ಬೆಂಗಳೂರು ಡಿಎಒ ಡಾ. ಶಹಾಬುದ್ದಿನ್, ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ. ಬಲ್ಲಾಳ ಕೆ.ಸಿ., ಡಾ. ಗಿರಿಧರ್ ಕಜೆ ಮತ್ತು ಇತರ ವೈದ್ಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Samsung: ಕ್ಯೂಎಲ್ಇಡಿ 4ಕೆ ಪ್ರೀಮಿಯಂ ಟಿವಿ ಸರಣಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಸ್ವಾಮಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಪ್ರೈವೇಟ್ ಲಿಮಿಟೆಡ್‌ನ ಘಟಕ ಇದಾಗಿದ್ದು, ಜೆಪಿ ನಗರದ 9ನೇ ಕ್ರಾಸ್ ರಸ್ತೆಯ ತಿರುಮಲಗಿರಿ ದೇವಸ್ಥಾನದ ಮುಂಭಾಗದಲ್ಲಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್ ಅನ್ನು ಆರಂಭಿಸಲಾಗಿದೆ.

ಭಾರತೀಯ ಪಾರಂಪರಿಕ ವಿಧಾನಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಡಾ. ರಾಜಶೇಖರ ಭೂಸನೂರಮಠ ಮತ್ತು ಡಾ. ಮಹತಿ ಸಾಹುಕರ್ ಅವರು, ಈ ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: Shira News: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಸಕ ಟಿ.ಬಿ.ಜಯಚಂದ್ರ

ಈ ಆಯುರ್ವೇದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕರ್ನಾಟಕದಲ್ಲಿ ವಿಶೇಷವಾದ ಆಸ್ಪತ್ರೆಯಿದಾಗಿದ್ದು, ತ್ವಚೆ ಆರೈಕೆ, ಗಾಯದ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಸ್ತ್ರೀರೋಗ, ಡಿಟಾಕ್ಸ್, ಮಾನಸಿಕ, ವಿಶೇಷ ಚಿಕಿತ್ಸೆಗಳು ಮತ್ತು ಸಾಮಾನ್ಯ ಚಿಕಿತ್ಸೆಗಳನ್ನು ನಡೆಸುವ ವಿವಿಧ ವಿಭಾಗಗಳನ್ನು ಹೊಂದಿದೆ. ಜನರು ಆರೋಗ್ಯದ ಉತ್ತಮ ಲಾಭಗಳನ್ನು ಪಡೆಯಲು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಡಾ. ಭೂಸನೂರಮಠ ತಿಳಿಸಿದ್ದಾರೆ.

Continue Reading

ಆರೋಗ್ಯ

Health Benefits of Mango Leaves: ಮಾವಿನೆಲೆಗಳು ತೋರಣ ಕಟ್ಟಲಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು!

ಮಾವಿನೆಲೆ ಎನ್ನುತ್ತಿದ್ದಂತೆ ತೋರಣಗಳೇ ನೆನಪಾಗುತ್ತವೆ ನಮಗೆ. ಮನೆಯಲ್ಲಿ ಯಾವುದೇ ಶುಭಕಾರ್ಯವಿದ್ದರೆ ಹಬ್ಬವಾಗಲೀ ಹರಿದಿನವಾಗಲಿ, ಮಾವಿನ ತೋರಣವಿದ್ದರೆ ಶೋಭೆ. ಕಳಶಗಳಿಗೆ ಮಾವಿನೆಲೆ ಬೇಕು. ಒಳ್ಳೆಯ ಕೆಲಸಗಳು ಏನೇ ಇದ್ದರೂ ಅದಕ್ಕೆ ಮಾವಿನೆಲೆ ಇಲ್ಲದಿದ್ದರಾಗದು. ಇದಕ್ಕಿಂತ ಹೆಚ್ಚಿನ ಉಪಯೋಗಗಳು (Health Benefits of Mango Leaves) ಮಾವಿನೆಲೆಗಳಿಗೆ ಏನಿವೆ?

VISTARANEWS.COM


on

Health Benefits of Mango Leaves
Koo

ಇದು ಮಾವಿನ ಕಾಲ. ಹಾಗೆನ್ನುತ್ತಿದ್ದಂತೆ ಮಾವಿನ ಹಣ್ಣಿನ ಘಮ್ಮೆನ್ನುವ ಪರಿಮಳ, ರುಚಿಯೆಲ್ಲ ನೆನಪಾಗಿ ಬಾಯಲ್ಲಿ ನೀರೂರುತ್ತದೆ. ಮಾವಿನ ಹಣ್ಣಿಗಾದರೆ ಇದೊಂದೇ ಋತುವಿಗೆ ಕಾಯಬೇಕು. ಆದರೆ ಮಾವಿನ ಎಲೆಗಳ ಉಪಯೋಗಕ್ಕೆ ವರ್ಷವಿಡೀ ಒಳ್ಳೆಯ ಕಾಲ. ಆದರೆ ಹಣ್ಣಿಗಿರುವ ಉಪಯೋಗ ಮಾವಿನ ಎಲೆಗಳಿಗೆ ಇಲ್ಲವಲ್ಲ. ಹಾಗಿರುವಾಗ ವರ್ಷವಿಡೀ ಎಲೆ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಯೋಚಿಸಬೇಡಿ. ಮಾವಿನ ಎಲೆಗಳಲ್ಲಿ ಉಪ್ಪಿನಕಾಯಿ ಹಾಕುವುದೋ ಸೀಕರಣೆ ಮಾಡುವುದೋ ಆಗದಿದ್ದರೂ, ಅದಕ್ಕೂ ತನ್ನದೇ ಆದ ಉಪಯೋಗಗಳಿವೆ. ಏನವು Health (Benefits of Mango Leaves) ಎಂಬುದನ್ನು ಗಮನಿಸೋಣ. ಮಾವಿನೆಲೆ ಎನ್ನುತ್ತಿದ್ದಂತೆ ತೋರಣಗಳೇ ನೆನಪಾಗುತ್ತವೆ ನಮಗೆ. ಮನೆಯಲ್ಲಿ ಯಾವುದೇ ಶುಭಕಾರ್ಯವಿದ್ದರೂ ಒಂದು ಮಾವಿನ ತೋರಣ, ಹಸಿರು ಚಪ್ಪರ ಆಗಲೇ ಬೇಕು. ಹಬ್ಬವಾಗಲೀ ಹರಿದಿನವಾಗಲಿ, ಮಾವಿನ ತೋರಣವಿದ್ದರೆ ಶೋಭೆ. ಕಳಶಗಳಿಗೆ ಮಾವಿನೆಲೆ ಬೇಕು. ಯಾವುದೋ ದೇವರ ಪ್ರತಿಷ್ಠಾಪನೆ, ಪೂಜೆ ಇದ್ದರೆ ಅದಕ್ಕೂ ಮಾವಿನೆಲೆ ಅಗತ್ಯ. ಒಳ್ಳೆಯ ಕೆಲಸಗಳು ಏನೇ ಇದ್ದರೂ ಅದಕ್ಕೆ ಮಾವಿನೆಲೆ ಇಲ್ಲದಿದ್ದರಾಗದು. ಹೀಗೆ ಧರ್ಮ, ಸಂಪ್ರದಾಯ, ಸಂಸ್ಕೃತಿಯ ಉತ್ಸವಗಳಿಗೆ ಮಾವಿನೆಲೆ ಅಲಂಕಾರಕ್ಕೂ ಬೇಕು, ಅಗತ್ಯಕ್ಕೂ ಸೈ. ಇದಕ್ಕಿಂತ ಹೆಚ್ಚು ಇನ್ನೇನು?
ಕೆಲವು ಬಗೆಯ ಸಾಂಪ್ರದಾಯಿಕ ಔಷಧಿಗಳಿಗೆ ಮಾವಿನೆಲೆ ಅಗತ್ಯ. ಬೆಳಗ್ಗೆ ಏಳುತ್ತಿದ್ದಂತೆ, ಮಾವಿನೆಲೆಯನ್ನು ಹಲ್ಲುಜ್ಜುವುದಕ್ಕೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದರು. ಚಿಗುರೆಲೆಗಳನ್ನು ಕಷಾಯ ಮಾಡಿ, ಅದನ್ನು ಹಲವು ಸಮಸ್ಯೆಗಳಿಗೆ ಮದ್ದಾಗಿ ಉಪಯೋಗಿಸುತ್ತಿದ್ದರು. ಜೀರ್ಣಾಂಗಗಳ ಸಮಸ್ಯೆ ಇದ್ದರೆ, ಮಧುಮೇಹ ನಿಯಂತ್ರಣಕ್ಕೆ, ಕೆಲವು ಬಗೆಯ ಶ್ವಾಸಕೋಶದ ತೊಂದರೆಗಳಿಗೆಲ್ಲ ಮಾವಿನೆಲೆ ಕಷಾಯವನ್ನು ಔಷಧಿಯಾಗಿ ಬಳಸುತ್ತಿದ್ದರು. ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಈ ಎಲೆಗಳು ಒಟ್ಟಾರೆ ದೇಹಸ್ವಾಸ್ಥ್ಯಕ್ಕೆ ಅನುಕೂಲ ಒದಗಿಸುತ್ತವೆ.

Obese male suffering from chest pain high blood pressure cholesterol level Sesame Benefits

ಕೊಲೆಸ್ಟ್ರಾಲ್‌ ಕಡಿತ

ಮಾವಿನೆಲೆಯನ್ನು ಗ್ರೀನ್‌ ಟೀ ರೀತಿಯಲ್ಲಿ ಅಥವಾ ಕಷಾಯದ ರೀತಿಯಲ್ಲಿ ಔಷಧಿಗಾಗಿ ಉಪಯೋಗಿಸುವ ವಾಡಿಕೆಯಿದೆ. ಇದನ್ನು ಕೊಲೆಸ್ಟ್ರಾಲ್‌ ಕಡಿಮೆ ಮಾಡುವುದಕ್ಕೆ ಬಳಸಲಾಗುತ್ತದೆ. ಇದರಲ್ಲಿರುವ ಮ್ಯಾಗ್ನಿಫೆರಿನ್‌ ಮತ್ತು ಕ್ವೆರ್ಸೆಟಿನ್‌ ಎಂಬ ಸಂಯುಕ್ತಗಳು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವನ್ನು ಹೊಂದಿವೆ. ಜೀರ್ಣಾಂಗಗಳಲ್ಲಿ ಕೊಲೆಸ್ಟ್ರಾಲ್‌ ಹೀರಲ್ಪಡದೆ ಇರುವಂತೆ, ಈ ಕೊಬ್ಬು ದೇಹದಿಂದ ಹೊರ ಹೋಗುವಂತೆ ಮಾಡುತ್ತವೆ. ಈ ಮೂಲಕ ಹೃದಯದ ಆರೋಗ್ಯ ಚೆನ್ನಾಗಿರುವಂತೆ ಮಾಡುತ್ತವೆ.

Diabetes management Daruharidra Benefits

ಮಧುಮೇಹ ನಿಯಂತ್ರಣ

ಮಾವಿನೆಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವು ರೋಗ ನಿಯಂತ್ರಣದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದರಲ್ಲಿರುವ ಮ್ಯಾಗ್ನಿಫೆರಿನ್‌ ಅಂಶವು ಮಧುಮೇಹ ನಿಯಂತ್ರಣಕ್ಕೆ ನೆರವಾಗಬಲ್ಲವು. ಇದು ದೇಹದಲ್ಲಿ ನೈಸರ್ಗಿಕವಾಗಿ ಇನ್‌ಸುಲಿನ್‌ ಉತ್ಪಾದನೆಯನ್ನು ಹೆಚ್ಚಿಸಲು ಯತ್ನಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗುತ್ತದೆ.

healthy internal organs of human digestive system

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ಪಚನಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧ್ಯತೆ ಈ ಎಲೆಗಳಿಗಿದೆ. ಡಯರಿಯಾದಂಥ ತೊಂದರೆಗಳಿದ್ದಾಗ ಇದನ್ನು ಮದ್ದಾಗಿ ಬಳಸುವ ಅಭ್ಯಾಸ ಕೆಲವೆಡೆಗಳಲ್ಲಿದೆ. ಜೊತೆಗೆ ದೇಹದ ಚಯಾಪಚಯ ಹೆಚ್ಚು ಮಾಡುವ ಗುಣವಿದೆ ಇದಕ್ಕೆ. ಹಾಗಾಗಿ ಅಜೀರ್ಣದಂಥ ತೊಂದರೆಗಳು ಬಗೆಹರಿಯಬಹುದು. ಜೊತೆಗೆ, ತೂಕ ಇಳಿಕೆಗೆ ಸ್ವಲ್ಪ ನೆರವೂ ನೀಡಬಹುದು.

Doctor listens to the human lungs

ಶ್ವಾಸಕೋಶ ಸಬಲ

ಕಫ, ಕೆಮ್ಮು, ದಮ್ಮಿನಂಥ ತೊಂದರೆಗಳ ನಿವಾರಣೆಗೆ ಮಾವಿನೆಲೆ ಉಪಯುಕ್ತ. ಶ್ವಾಸನಾಳದಲ್ಲಿ ಬಿಗಿದಿರುವ ಕಫವನ್ನು ಸಡಿಲಿಸಿ, ಕೆಮ್ಮು ಕಡಿಮೆ ಮಾಡುವ ಗುಣಗಳು ಇದಕ್ಕಿವೆ. ಕಫ ಹೆಚ್ಚಾಗಿದ್ದರಿಂದ ಕಾಡುವ ದಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ಈ ಮೂಲಕ ಮಾವಿನೆಲೆಗಳು ಕಡಿಮೆ ಮಾಡುತ್ತವೆ.

ಇದನ್ನೂ ಓದಿ: Shikakai For Hair: ತಲೆ ಕೂದಲಿಗೆ ಶ್ಯಾಂಪೂ ಒಳ್ಳೆಯದೋ ಸೀಗೆಕಾಯಿ ಸೂಕ್ತವೋ?

ಉತ್ಕರ್ಷಣ ನಿರೋಧಕಗಳು

ಇದರಲ್ಲಿ ಫ್ಲೆವನಾಯ್ಡ್‌ಗಳು, ಫೆನಾಲ್‌ಗಳು ಮತ್ತು ಆಸ್ಕಾರ್ಬಿಕ್‌ ಆಮ್ಲ (ವಿಟಮಿನ್‌ ಸಿ)ಯಂಥ ಉರಿಯೂತ ಶಾಮಕಗಳು ಹೇರಳವಾಗಿವೆ. ಇದರಿಂದ ಶರೀರದಲ್ಲಿ ಅಂಡಲೆಯುವ ಮುಕ್ತ ಕಣಗಳನ್ನು ಹಿಡಿತಕ್ಕೆ ತರಬಹುದು. ಜೊತೆಗೆ ಹೃದಯ ತೊಂದರೆಗಳು, ಮಧುಮೇಹ ಮತ್ತು ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ದೂರ ಇರಿಸಬಹುದು.

Continue Reading

ಆರೋಗ್ಯ

Shikakai For Hair: ತಲೆ ಕೂದಲಿಗೆ ಶ್ಯಾಂಪೂ ಒಳ್ಳೆಯದೋ ಸೀಗೆಕಾಯಿ ಸೂಕ್ತವೋ?

ʻಎಣ್ಣೆ-ಸೀಗೆಕಾಯಿ ಸಂಬಂಧʼ ಎಂಬ ನುಡಿಗಟ್ಟೇ ಸಾಕು ಸ್ವಚ್ಛತೆಯಲ್ಲಿ ಸೀಗೆಕಾಯಿಯ ಸಾಮರ್ಥ್ಯ ಎಷ್ಟು ಎನ್ನುವುದನ್ನು ತಿಳಿಯುವುದಕ್ಕೆ. ಕೂದಲಿನ ಆರೈಕೆಯಲ್ಲಿ ಶತಮಾನಗಳಿಂದ ಇದು ಪ್ರಮಾಣೀಕೃತಗೊಂಡಿದೆ. ಆದರೆ ಕೂದಲಿಗೆ ಬೇಕಾದಂಥ ಒಳ್ಳೆಯ ಸತ್ವಗಳು ಏನಿವೆ ಸೀಗೆಕಾಯಿಯಲ್ಲಿ? ಈ ಕುರಿತ ಉಪಯುಕ್ತ (Shikakai For Hair) ಮಾಹಿತಿ ಇಲ್ಲಿದೆ.

VISTARANEWS.COM


on

Shikakai For Hair
Koo

ಹಳೆಯ ಕಾಲದಿಂದಲೂ ತಲೆಗೂದಲ ಆರೈಕೆಗೆ ಸೀಗೆಕಾಯಿ ಅಥವಾ ಶಿಕಾಕಾಯಿ ಬಳಕೆಯಲ್ಲಿದೆ. ಈಗಿನಂತೆ ಕಡಿಮೆ ಜಿಡ್ಡಿನ ಎಣ್ಣೆಗಳು ಇಲ್ಲದ ಕಾಲದಲ್ಲಿ, ದಿನವೂ ಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಲೇಪಿಸುತ್ತಿದ್ದ ಕಾಲದಲ್ಲಿ ತಲೆಯ ಸ್ವಚ್ಛತೆಯ ಹೊಣೆಯನ್ನು ಶತಮಾನಗಳ ಕಾಲ ನಿರ್ವಹಿಸಿದ್ದು ಸೀಗೆಕಾಯಿಯೆ. ಯಾವುದೇ ಜಾಹೀರಾತುಗಳ ಪ್ರಚಾರವಿಲ್ಲದೆ, ಬಣ್ಣದ ಪ್ಯಾಕಿಂಗ್‌ಗಳ ಅಬ್ಬರವಿಲ್ಲದೆ ಅಜ್ಜಿ-ಅಮ್ಮಂದಿರು ತುಂಬಿಡುತ್ತಿದ್ದ ಡಬ್ಬಿಗಳಿಂದ ನೇರವಾಗಿ ತರಳೆಯರ ಹೆರಳನ್ನು ಶುಚಿ ಮಾಡಿ, ಕೇಶರಾಶಿಯನ್ನು ಆರೋಗ್ಯವಾಗಿ ಇರಿಸುತ್ತಿತ್ತು. ಬ್ಯಾಕ್ಟೀರಿಯ ವಿರೋಧಿ, ಫಂಗಸ್‌ ನಿರೋಧಕ ಸಾಮರ್ಥ್ಯವಿರುವ ಇದು ಉರಿಯೂತ ಶಾಮಕ ಗುಣವನ್ನು ಸಹ ಹೊಂದಿಗೆ. ಹಾಗಾಗಿ ತಲೆಯ ಚರ್ಮವನ್ನು ತುರಿಕೆ, ಹೊಟ್ಟು, ಸೋಂಕುಗಳಿಂದ ಮುಕ್ತವಾಗಿರಿಸುವುದಕ್ಕೆ ಸೀಗೆಕಾಯಿಗೆ ಸಾಧ್ಯ. ಇನ್ನೂ ಏನೆಲ್ಲಾ ಗುಣಗಳಿವೆ ಇದರಲ್ಲಿ (Shikakai For Hair) ಕೇಶಗಳ ಆರೈಕೆಗೆ ಬೇಕಾಗುವಂಥದ್ದು.

Shikakai

ಸ್ವಚ್ಛತೆಯಲ್ಲಿ ಮುಂದೆ

ʻಎಣ್ಣೆ ಸೀಗೆಕಾಯಿ ಸಂಬಂಧʼ ಎಂಬ ನುಡಿಗಟ್ಟೇ ನಮಗೆ ಇದರ ಸ್ವಚ್ಛತೆಯ ಸಾಮರ್ಥ್ಯಕ್ಕೆ ನೀಡಿದ ಪ್ರಮಾಣಪತ್ರದಂತಿದೆ. ವಾತಾವರಣದ ಧೂಳು, ಮಣ್ಣು, ಹೊಗೆಯಂಥ ಕೊಳೆಗಳನ್ನು ನಾಜೂಕಾಗಿಯೇ ಸ್ವಚ್ಛಗೊಳಿಸುವ ಕ್ಷಮತೆ ಇದರದ್ದು. ತಲೆಯ ಚರ್ಮದ ನೈಸರ್ಗಿಕ ತೈಲದಂಶವನ್ನು ತೆಗೆಯದಂತೆ, ಕೊಳೆಯನ್ನಷ್ಟೇ ತೆಗೆದು ಕೂದಲಿಗೆ ಸ್ವಚ್ಛ ಮತ್ತು ತಾಜಾ ಅನುಭವ ನೀಡುತ್ತದೆ.

Hair Growth Tips

ಕೇಶವರ್ಧನೆ

ಕೂದಲಿನ ಬೆಳವಣಿಗೆಗೆ ಸೀಗೆಕಾಯಿ ನೆರವು ನೀಡುತ್ತದೆ. ವಿಟಮಿನ್‌ ಎ, ಸಿ ಮತ್ತು ಕೆ ಜೀವಸತ್ವದ ಅಂಶಗಳು ಇದರಲ್ಲಿವೆ. ಇವುಗಳು ಕೂದಲಿನ ಬುಡವನ್ನು ಬಿಗಿ ಮಾಡಿ, ಕೂದಲೆಳೆಗಳನ್ನು ಸುದೃಢಗೊಳಿಸುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ, ಬೆಳವಣಿಗೆ ಹೆಚ್ಚುತ್ತದೆ. ಜಾಹೀರಾತುಗಳಲ್ಲಿ ತೋರಿಸಿದಷ್ಟು ಅಲ್ಲದಿದ್ದರೂ, ಆರೋಗ್ಯಕರವಾದ ಉದ್ದ ಕೂದಲನ್ನಂತೂ ಹೊಂದಬಹುದು.

dandruff

ಹೊಟ್ಟು ನಿವಾರಣೆ

ಒಮ್ಮೆ ತಲೆ ಹೊಟ್ಟಿನ ಸಮಸ್ಯೆ ಪ್ರಾರಂಭವಾದರೆ, ಅದರಿಂದ ಪಾರಾಗುವುದಕ್ಕೆ ಏನೇನೋ ಒದ್ದಾಟಗಳನ್ನು ಮಾಡಬೇಕಾಗುತ್ತದೆ. ಹೊಟ್ಟು ಹೋಗಿಸುವಂಥ ಹತ್ತಾರು ಶಾಂಪೂಗಳನ್ನು ಬಳಸುತ್ತೇವೆ. ಕೆಲವೊಮ್ಮೆ ವೈದ್ಯರ ಬಳಿ ಔಷಧಿಯನ್ನೂ ತೆಗೆದುಕೊಳ್ಳುವ ಪ್ರಮೇಯ ಬರುತ್ತದೆ. ಇಷ್ಟಾಗಿ ಹೊಟ್ಟು ದೂರ ಮಾಡಲು ಆಗದೇ ಇರಬಹುದು. ಆದರೆ ಫಂಗಸ್‌ ವಿರೋಧಿ ಗುಣವನ್ನು ಹೊಂದಿರುವ ಸೀಗೆಕಾಯಿಯ ನಿಯಮಿತವಾದ ಬಳಕೆಯಿಂದ ಹೊಟ್ಟು ಕ್ರಮೇಣ ಮಾಯವಾಗುತ್ತದೆ.

ಕಂಡೀಶನರ್

ಸೀಗೆಕಾಯಿಯಲ್ಲಿರುವ ಸಪೋನಿನ್‌ ಎಂಬ ಅಂಶವು ಕೂದಲಿನ ಕಂಡೀಶನರ್‌ ರೀತಿಯಲ್ಲಿ ಕೆಲಸ ಮಾಡುತ್ತದೆ. ಕೂದಲುಗಳ ಪಿಎಚ್‌ ಸಹ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಯಾವುದೇ ರಾಸಾಯನಿಕವಿಲ್ಲದ ಈ ನೈಸರ್ಗಿಕ ಕಂಡೀಶನರ್‌ ಬಳಕೆಯಿಂದ ಕೂದಲಿನ ಹೊಳಪು ಹೆಚ್ಚಿ, ಮೃದುವಾಗುತ್ತದೆ. ಇದರಿಂದ ಕೂದಲು ಒರಟಾಗಿ ಬಾಚುವಾಗ ತುಂಡಾಗುವುದನ್ನು ತಪ್ಪಿಸಬಹುದು.

Shikakai photo

ತುದಿ ಕವಲಿಲ್ಲ

ಕೂದಲಿಗೆ ಅಗತ್ಯ ಪೋಷಣೆ ದೊರೆಯದಿದ್ದರೆ, ಕೇಶಗಳ ತುದಿ ಕವಲಾಗಬಹುದು. ಇದರಿಂದ ಕೂದಲು ನಿರ್ಜೀವವಾದಂತಾಗಿ, ತುಂಡಾಗುತ್ತವೆ. ಸೀಗೆಕಾಯಿಯ ಬಳಕೆಯಿಂದ ಕೂದಲಿಗೆ ಸೂಕ್ತ ಆರೈಕೆ ದೊರೆತು, ತುದಿ ಸೀಳಿದಂತಾಗಿ ಕೂದಲು ತುಂಡಾಗುವುದು ಕಡಿಮೆಯಾಗುತ್ತದೆ. ಜೊತೆಗೆ ಕೂದಲೆಳೆಗಳು ದಪ್ಪವಾಗಿಯೂ ಬೆಳೆದು, ಕೂದಲಿನ ಒಟ್ಟಾರೆ ಗಾತ್ರ ಹೆಚ್ಚುತ್ತದೆ.

ಎಲ್ಲರಿಗೂ ಸೂಕ್ತ

ರಾಸಾಯನಿಕ ಭರಿತ ಶಾಂಪೂ ಮತ್ತು ಕಂಡೀಶನರ್‌ಗಳು ಎಲ್ಲ ರೀತಿಯ ಚರ್ಮ ಮತ್ತು ಕೂದಲುಗಳಿಗೆ ಹೊಂದುವಂಥವಲ್ಲ. ಸೂಕ್ಷ್ಮ ಕೂದಲಿನವರು ಯಾವ ಶಾಂಪೂ ತಮಗೆ ಹೊಂದುತ್ತದೆ ಎಂಬ ಪ್ರಯೋಗದಲ್ಲಿಯೇ ಕೂದಲು ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಸೌಮ್ಯ ಮತ್ತು ನೈಸರ್ಗಿಕವಾದ ಸೀಗೇಕಾಯಿ ಬಳಕೆಯಿಂದ ಇಂಥ ಸಮಸ್ಯೆಗಳಿಗೆ ಅವಕಾಶವಿಲ್ಲ.

ಇದನ್ನೂ ಓದಿ: 5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

ಪರಿಸರ ಸ್ನೇಹಿ ಆಯ್ಕೆ

ಯಾವುದೇ ರಾಸಾಯನಿಕ, ಪ್ಲಾಸ್ಟಿಕ್‌ಗಳ ಹಾವಳಿಯಿಲ್ಲ ಸೀಗೆಕಾಯಿಯ ಬಳಕೆಯಲ್ಲಿ. ಪರಿಸರಕ್ಕೆ ಮಾರುಕವಾಗುವಂಥ ಯಾವುದೇ ಅಂಶ ಇದರಲ್ಲಿ ಇಲ್ಲ. ಇದನ್ನು ಬಳಸಿನ ನಂತರ ಉಳಿವಂಥ ಶೇಷವೆಲ್ಲ ವಾತಾವರಣದಲ್ಲಿ ಕರಗುವಂಥವು. ಹಾಗಾಗಿ ಕೂದಲಿನ ಸ್ವಚ್ಛತೆಗೆ ಅತ್ಯಂತ ಸೂಕ್ತವಾದ ಆಯ್ಕೆಯೆಂದರೆ ಸೀಗೆಕಾಯಿ.

Continue Reading

ಆರೋಗ್ಯ

Health Tips Kannada: ಉಪ್ಪು ತಿನ್ನುವುದು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಮುಖ್ಯ!

ನಾವು ಉಪ್ಪನ್ನೇಕೆ ತಿನ್ನುತ್ತೇವೆ? ಆಹಾರದ ರುಚಿ ಹೆಚ್ಚಿಸುವುದಕ್ಕೆ ಎಂದು ಸುಲಭವಾಗಿ ಹೇಳಬಹುದು. ಆದರೆ ಅದಷ್ಟಕ್ಕೆ ಮಾತ್ರ ಉಪ್ಪು ಬೇಕೆ ನಮಗೆ? ಉಪ್ಪು ಇಲ್ಲದಿದ್ದರೆ ಕಷ್ಟವಾಗುವ ಹಾಗೆ, ಉಪ್ಪು ಹೆಚ್ಚಾದರೂ ತಿನ್ನಲಾಗದು ತಾನೇ? ಆದರೆ ಎಷ್ಟು ಉಪ್ಪು ತಿಂದರೆ ಹೆಚ್ಚು ಅಥವಾ ಕಡಿಮೆ ಎನ್ನುವುದು ಹೇಗೆ ತಿಳಿಯಬೇಕು ನಾವು? ಈ ಬಗ್ಗೆ (Health Tips Kannada) ಇಲ್ಲಿದೆ ಮಾಹಿತಿ.

VISTARANEWS.COM


on

Health Tips Kannada
Koo

ʻರುಚಿಗೆ ತಕ್ಕಷ್ಟು ಉಪ್ಪುʼ ಎಂದು (Health Tips Kannada) ಹೇಳುವುದು ಹೌದಾದರೂ ಉಪ್ಪು ಬಾಯಿಯ ರುಚಿಗೆ ಮಾತ್ರವಲ್ಲ, ದೇಹದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತದೆ. ಹಾಗೆಂದು ಅದನ್ನು ಸಿಕ್ಕಾಪಟ್ಟೆ ತಿನ್ನುವಂತಿಲ್ಲ. ಆದರೆ ನಾವು ತಿನ್ನುತ್ತಿರುವ ಉಪ್ಪಿನ ಪ್ರಮಾಣ ಮಿತಿಮೀರುತ್ತಿಲ್ಲ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ.
ನಾವು ಉಪ್ಪನ್ನೇಕೆ ತಿನ್ನುತ್ತೇವೆ? ಆಹಾರದ ರುಚಿ ಹೆಚ್ಚಿಸುವುದಕ್ಕೆ ಎಂದು ಸುಲಭವಾಗಿ ಹೇಳಬಹುದು. ಆದರೆ ಅದಷ್ಟಕ್ಕೆ ಮಾತ್ರ ಉಪ್ಪು ಬೇಕೆ ನಮಗೆ? ಉಪ್ಪು ಇಲ್ಲದಿದ್ದರೆ ಕಷ್ಟವಾಗುವ ಹಾಗೆ, ಉಪ್ಪು ಹೆಚ್ಚಾದರೂ ತಿನ್ನಲಾಗದು ತಾನೇ? ಆದರೆ ಎಷ್ಟು ಉಪ್ಪು ತಿಂದರೆ ಹೆಚ್ಚು ಅಥವಾ ಕಡಿಮೆ ಎನ್ನುವುದು ಹೇಗೆ ತಿಳಿಯಬೇಕು ನಾವು? ಬಾಯಿ ರುಚಿಯ ಮೂಲಕ ಮಾತ್ರವೇ? ಕೆಲವು ಪಾಕಗಳಲ್ಲಿ ಉಪ್ಪಿನ ರುಚಿ ಹೆಚ್ಚಿಲ್ಲದಿದ್ದರೂ, ಸೋಡಿಯಂ ಅಂಶ ಹೆಚ್ಚಿದೆ ಎನ್ನುತ್ತಾರಲ್ಲ, ಇದನ್ನು ಹೇಗೆ ತಿಳಿಯಬೇಕು? ಎಷ್ಟು ಉಪ್ಪು ತಿಂದರೆ ಹೆಚ್ಚು ಎನ್ನುವುದಕ್ಕೆ ಏನಾದರೂ ಸೂಚನೆಗಳಿವೆಯೇ?

ಉಪ್ಪೇಕೆ ಬೇಕು?

ಮೊದಲಿಗೆ ಉಪ್ಪು ಎಂದರೆ ರುಚಿಗೆ ಮಾತ್ರವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಉಪ್ಪು ಅಥವಾ ಸೋಡಿಯಂಗೆ ನಮ್ಮ ದೇಹದಲ್ಲಿ ಹೆಚ್ಚಿನ ಕೆಲಸವಿದೆ. ನಮ್ಮ ಶರೀರದ ಕೋಶಗಳಲ್ಲಿರುವ ನೀರಿನಂಶದ ನಿರ್ವಹಣೆಗೆ, ಸ್ನಾಯುಗಳ ಸಂಚಲನಕ್ಕೆ, ನರಗಳ ಕ್ಷಮತೆಗೆ, ಸಣ್ಣ ಕರುಳಿನಲ್ಲಿ ಕೆಲವು ಸತ್ವಗಳು ಹೀರಲ್ಪಡುವುದಕ್ಕೆ, ರಕ್ತದೊತ್ತಡ ನಿರ್ವಹಣೆಗೆ- ಹೀಗೆ ಬಹಳಷ್ಟು ಕೆಲಸಗಳಿಗೆ ಸೋಡಿಯಂ ಆವಶ್ಯಕ. ಇವೆಲ್ಲ ನಮಗೆ ದೊರೆಯುವ ಮುಖ್ಯ ಮೂಲವೆಂದರೆ ಉಪ್ಪು. ಆದರೆ ಅದನ್ನಾದರೂ ತಿನ್ನುವುದು ಹೆಚ್ಚಾಗಬಾರದು. ತಿನ್ನುತ್ತಿರುವ ಉಪ್ಪಿನ ಪ್ರಮಾಣ ಹೆಚ್ಚು ಎಂಬುದಕ್ಕೆ ದೇಹ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಏನು ಆ ಲಕ್ಷಣಗಳು?

Blood Pressure

ರಕ್ತದೊತ್ತಡ

ಬಿಪಿ ಅಥವಾ ರಕ್ತದೊತ್ತಡ ಹೆಚ್ಚಿದೆಯೇ? ಉಪ್ಪು ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ತಿನ್ನುತ್ತಿರುವ ಪ್ರಮಾಣ ಹೆಚ್ಚಿದೆಯೇ ಎಂಬುದನ್ನು ಗಮನಿಸಿ. ಹೆಚ್ಚು ಉಪ್ಪಿನಕಾಯಿ, ಚಿಪ್ಸ್‌, ಬೇಕರಿ ತಿಂಡಿಗಳು ಹೊಟ್ಟೆ ಸೇರುತ್ತಿವೆಯೇ? ಹೌದೆಂದಾದರೆ, ರಕ್ತದೊತ್ತಡ ಹೆಚ್ಚುವುದಕ್ಕೆ ಅದೂ ಕಾರಣವಾಗಿರಬಹುದು.

ಊದಿಕೊಳ್ಳುವುದು

ಕೈಬೆರಳುಗಳು, ಪಾದ, ಕಾಲುಗಳು, ಕಿಬ್ಬೊಟ್ಟೆಯಲ್ಲಿ ಊತ ಕಾಣುತ್ತಿದೆಯೇ? ಇದು ದೇಹದಲ್ಲಿ ದೇಹದಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶ ಉಳಿಯುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ದೇಹಕ್ಕೆ ಹೆಚ್ಚಿನ ಪ್ರಮಾಣದ ಉಪ್ಪಿನಂಶ ದೊರೆತಾಗ, ಹೆಚ್ಚು ನೀರಿನಂಶ ಶರೀರದಲ್ಲಿ ಉಳಿಯುವುದು ಸಾಮಾನ್ಯ. ಹಾಗಾಗಿ ಉಪ್ಪು ಎಷ್ಟು ತಿನ್ನುತ್ತಿದ್ದೀರಿ ಎಂಬುದನ್ನು ಪರಿಶೀಲಿಸಲು ಇದು ಸಕಾಲ.

drinking water

ಬಾಯಾರಿಕೆ

ಉಪ್ಪು ತಿಂದವ ನೀರು ಕುಡಿಯಲೇ ಬೇಕೆಂಬ ಗಾದೆ ಸುಳ್ಳಲ್ಲ. ಅತಿಯಾಗಿ ಉಪ್ಪು ತಿಂದರೆ ಬಾಯಾರಿಕೆ ತಪ್ಪಿದ್ದಲ್ಲ. ಅತಿಯಾಗಿ ದಾಹ ಕಾಡುತ್ತಿದೆ ಎಂದಾದರೆ ಉಪ್ಪೆಷ್ಟು ತಿನ್ನುತ್ತಿದ್ದೀರಿ ಎಂಬುದನ್ನು ಗಮನಿಸುವುದು ಅಗತ್ಯ. ರಕ್ತದಲ್ಲಿರುವ ಅಧಿಕ ಸೋಡಿಯಂ ಅಂಶವನ್ನು ತೆಗೆಯುವ ಭರದಲ್ಲಿ ಕೋಶಗಳಲ್ಲಿರುವ ನೀರಿನಂಶವೆಲ್ಲ ಕೆಲವೊಮ್ಮೆ ಖಾಲಿಯಾಗಿಬಿಡುತ್ತದೆ. ಆಗ ಬಾಯಾರಿಕೆ ಹೆಚ್ಚುತ್ತದೆ.

Heart Health Fish Benefits

ಹೃದಯದ ಬಡಿತ ಏರುಪೇರು

ಸೋಡಿಯಂ ಮತ್ತು ಪೊಟಾಶಿಯಂನಂಥ ಖನಿಜಗಳ ಸಮತೋಲನ ವ್ಯತ್ಯಾಸವಾಗಬಹುದು ಅಧಿಕ ಉಪ್ಪು ತಿನ್ನುವುದರಿಂದ. ಇದರಿಂದ ಹೃದಯದ ಬಡಿತದಲ್ಲೂ ಏರುಪೇರು ಉಂಟಾಗಬಹುದು. ಅದರಲ್ಲೂ ಹೃದಯದ ಸಮಸ್ಯೆಗಳು ಇರುವವರಲ್ಲಿ ಈ ತೊಂದರೆ ಇನ್ನೂ ಹೆಚ್ಚಬಹುದು.

Unexplained frequent headaches Excessive Use Of Electronic Gadgets

ತಲೆನೋವು

ಯಾವುದೇ ಕಾರಣಕ್ಕೂ ತಲೆನೋವು ಬರುವುದು ಸಾಮಾನ್ಯವಾದರೂ, ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಬರುವುದು ಹೆಚ್ಚು. ಉಪ್ಪು ತಿನ್ನುವುದು ಹೆಚ್ಚಿದರೆ, ದೇಹದಲ್ಲಿ ನೀರಿನಂಶ ಕಡಿಮೆಯಾಗುವ ಸಾಧ್ಯತೆಯೂ ಇರುವುದರಿಂದ, ಪದೇಪದೆ ನಿರ್ಜಲೀಕರಣದಿಂದ ತಲೆನೋವು ಬರುತ್ತಿದೆ ಎಂದಾದರೆ, ತಿನ್ನುತ್ತಿರುವ ಉಪ್ಪಿನ ಪ್ರಮಾಣವೆಷ್ಟು ಎಂಬುದನ್ನು ಪರಿಶೀಲಿಸುವುದು ಮುಖ್ಯ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಕಿಡ್ನಿ ಸಮಸ್ಯೆ

ದೇಹಕ್ಕೆ ಅನಗತ್ಯ ಎನಿಸಿದ ಬಹಳಷ್ಟನ್ನು ವಿಸರ್ಜಿಸಲು ಮೂತ್ರಪಿಂಡಗಳು ಹಗಲಿರುಳು ಶ್ರಮಿಸುತ್ತಲೇ ಇರುತ್ತವೆ. ಉಪ್ಪಿನಂಶ ಹೆಚ್ಚು ಉಳಿಯುತ್ತಿದೆ ದೇಹದಲ್ಲಿ ಎಂದಾದರೆ ಅದನ್ನು ವಿಸರ್ಜಿಸಲು ಸಹ ಕಿಡ್ನಿಗಳು ಹೆಚ್ಚುವರಿ ಕೆಲಸ ಮಾಡಬೇಕು. ಹೀಗೆ ಅತಿಯಾಗಿ ಕೆಲಸ ಮಾಡುವುದರಿಂದ ಕ್ರಮೇಣ ಮೂತ್ರಪಿಂಡಗಳು ಸೋತು, ರೋಗಗಳಿಗೆ ಈಡಾಗಬಹುದು.

Continue Reading
Advertisement
Yuva Rajkumar
ಪ್ರಮುಖ ಸುದ್ದಿ38 mins ago

Yuva Rajkumar: ಹಲ್ಲು ಉಜ್ಜಲ್ಲ, ಸ್ನಾನ ಮಾಡಲ್ಲ, ಫಿಟ್ ಇಲ್ಲ ಎಂದು ಕಿರುಕುಳ ಕೊಡುತ್ತಿದ್ದ ಯುವ ಪತ್ನಿ!: ವಕೀಲರ ಆರೋಪ

Minister Dinesh Gundurao instructed to prepare for the disaster management that may occur on the coast during rainy season.
ದಕ್ಷಿಣ ಕನ್ನಡ55 mins ago

Mangalore News: ಸಿಡಿಲ ಅಪಾಯ ಇರುವ ಸ್ಥಳಗಳಲ್ಲಿ ಮಿಂಚು ಪ್ರತಿಬಂಧಕ ವ್ಯವಸ್ಥೆ; ಸರ್ಕಾರದ ನಿರ್ಧಾರ

Inauguration of Pushpam Ayurveda Wellness Center in Bengaluru
ಬೆಂಗಳೂರು1 hour ago

Bengaluru News: ಬೆಂಗಳೂರಿನಲ್ಲಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್‌ಗೆ ಚಾಲನೆ

Kalki 2898 AD Trailer Released on Vyjayanthi Movies YouTube Channel
ಕರ್ನಾಟಕ1 hour ago

Kalki 2898 AD: ಮೈನವಿರೇಳಿಸುವ ‘ಕಲ್ಕಿ 2898 AD’ ಚಿತ್ರದ ಟ್ರೇಲರ್‌ ರಿಲೀಸ್‌!

Mohan Bhagwat
ದೇಶ2 hours ago

Mohan Bhagwat: ಮಣಿಪುರ ಹಿಂಸೆ ನಿಲ್ಲಿಸಿ; ಅಧಿಕಾರ ಹಿಡಿದ ಮೋದಿಗೆ ಟಾಸ್ಕ್‌ ಕೊಟ್ಟ ಮೋಹನ್‌ ಭಾಗವತ್!

Stabbing Case
ಕರ್ನಾಟಕ2 hours ago

Stabbing Case: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಐವರು ಆರೋಪಿಗಳ ಬಂಧನ

Yuva Rajkumar
ಕರ್ನಾಟಕ3 hours ago

Yuva Rajkumar: ಶ್ರೀದೇವಿ ಭೈರಪ್ಪಗೆ ಅಕ್ರಮ ಸಂಬಂಧ; ಯುವ ರಾಜ್‌ಕುಮಾರ್ ಪರ ವಕೀಲ ಸ್ಫೋಟಕ ಹೇಳಿಕೆ

Modi 3.0 Cabinet
ದೇಶ4 hours ago

Modi 3.0 Cabinet: ಮೋದಿಗೆ ಬಾಹ್ಯಾಕಾಶ, ಅಮಿತ್‌ ಶಾಗೆ ಗೃಹ ಖಾತೆ; ಇಲ್ಲಿದೆ 72 ಸಚಿವರು ಹಾಗೂ ಖಾತೆಗಳ ಪಟ್ಟಿ

ಕರ್ನಾಟಕ4 hours ago

Modi 3.0 Cabinet: ಜೋಶಿಗೆ ಆಹಾರ, ಎಚ್‌ಡಿಕೆಗೆ ಬೃಹತ್ ಕೈಗಾರಿಕೆ‌, ನಿರ್ಮಲಾಗೆ ವಿತ್ತ, ಸೋಮಣ್ಣಗೆ ಡಬಲ್‌ ಖುಷಿ, ಶೋಭಾಗೆ MSME

Sowing seed distribution in Shira by MLA TB Jayachandra
ತುಮಕೂರು4 hours ago

Shira News: ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಶಾಸಕ ಟಿ.ಬಿ.ಜಯಚಂದ್ರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ7 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ7 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

ಟ್ರೆಂಡಿಂಗ್‌