Health Tips: ನಿಮಗೆ ಈ ಸಮಸ್ಯೆಗಳಿದ್ದರೆ ಕ್ಯಾಲ್ಶಿಯಂ ಕೊರತೆಯಿದೆ ಎಂದರ್ಥ! - Vistara News

ಆರೋಗ್ಯ

Health Tips: ನಿಮಗೆ ಈ ಸಮಸ್ಯೆಗಳಿದ್ದರೆ ಕ್ಯಾಲ್ಶಿಯಂ ಕೊರತೆಯಿದೆ ಎಂದರ್ಥ!

ಕ್ಯಾಲ್ಶಿಯಂನ ಮಟ್ಟದಲ್ಲಿ ಕೊಂಚ ಏರುಪೇರಾದರೂ ದೇಹದ ಆರೋಗ್ಯದಲ್ಲಿ ನಮಗೆ ಏರಿಳಿತ ಕಾಣುತ್ತವೆ. ಹಾಗಾಗಿ, ದೇಹದಲ್ಲಿ ಸಣ್ಣಪುಟ್ಟ ಬದಲಾವಣೆಯಾದರೂ ನಮ್ಮ ಗಮನ ಅತ್ಯಂತ ಅಗತ್ಯ. ನಮ್ಮ ದೇಹಕ್ಕೆ ಕ್ಯಾಲ್ಶಿಯಂನ ಕೊರತೆಯಿದೆ ಎಂದು ನಾವು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ನೋಡೋಣ.

VISTARANEWS.COM


on

calcium problem
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೇಹದಲ್ಲಿ ಮೂಳೆ ಗಟ್ಟಿಯಾಗಿರಲು ಕ್ಯಾಲ್ಶಿಯಂ ಬೇಕೇ ಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿಯೇ ನಾವು ಕ್ಯಾಲ್ಶಿಯಂನಿಂದ ಶ್ರೀಮಂತವಾಗಿರುವ ಆಹಾರವನ್ನು ತಿನ್ನುವ ಬಗೆಗೆ ಗಮನ ಹರಿಸುತ್ತೇವೆ. ನಮ್ಮ ಮಕ್ಕಳಿಗೆ ಹಾಲು ಕುಡಿಸುತ್ತೇವೆ. ಕ್ಯಾಲ್ಶಿಯಂ ಕೊರತೆ ಅವರಿಗೆ ಬಾರದಿರಲಿ ಎಂಬುದನ್ನು ನೋಡಿಕೊಳ್ಳುತ್ತೇವೆ. ಆದರೂ, ಬಹಳ ಸಾರಿ ನಮಗೇ ಅರಿವಿಲ್ಲದೆ, ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಪೂರೈಕೆ ಆಗಿರುವುದಿಲ್ಲ. ಇದರಿಂದಾಗಿ ಕೇವಲ ಮೂಳೆಗೆ ಸಂಬಂಧಿಸಿದ್ದಷ್ಟೇ ಅಲ್ಲ, ಬೇರೆ ಸಮಸ್ಯೆಗಳೂ ಬರಬಹುದು. ರಕ್ತದ ಒತ್ತಡ, ಹೃದಯದ ಆರೋಗ್ಯ, ಮಿದುಳಿನ ಆರೋಗ್ಯ, ದೇಹದ ತೂಕ ಇವೆಲ್ಲವಕ್ಕೂ ಕ್ಯಾಲ್ಶಿಯಂನ ಸಮತೋಲನಕ್ಕೂ ಸಂಬಂಧವಿದೆ. ಹಾಗಾಗಿ, ಕ್ಯಾಲ್ಶಿಯಂನ ಮಟ್ಟದಲ್ಲಿ ಕೊಂಚ ಏರುಪೇರಾದರೂ ದೇಹದ ಆರೋಗ್ಯದಲ್ಲಿ ನಮಗೆ ಏರಿಳಿತ ಕಾಣುತ್ತವೆ. ಹಾಗಾಗಿ, ದೇಹದಲ್ಲಿ ಸಣ್ಣಪುಟ್ಟ ಬದಲಾವಣೆಯಾದರೂ ನಮ್ಮ ಗಮನ ಅತ್ಯಂತ ಅಗತ್ಯ. ನಮ್ಮ ದೇಹಕ್ಕೆ ಕ್ಯಾಲ್ಶಿಯಂನ ಕೊರತೆಯಿದೆ ಎಂದು ನಾವು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ನೋಡೋಣ.

೧. ಹಲ್ಲಿನಲ್ಲಿ ಹುಳುಕು: ಕೆಲವು ಖನಿಜಾಂಶಗಳು ದೇಹದ ಕೆಲವು ಭಾಗಗಳು ಸರಿಯಾಗಿ ಕೆಲಸ ಮಾಡಲು ಬೇಕೇ ಬೇಕು. ಕ್ಯಾಲ್ಶಿಯಂ ಹಾಗೂ ಹಲ್ಲಿನ ಸಂಬಂಧ ಅಂಥದ್ದು. ಈ ಕ್ಯಾಲ್ಶಿಯಂ ಎಂಬ ಖನಿಜಾಂಶ ಕೇವಲ ಹಲ್ಲಿನ ಆರೋಗ್ಯ ಕಾಪಾಡುವುದಷ್ಟೇ ಅಲ್ಲ, ಹಲ್ಲಿನ ಗಟ್ಟಿಯಾದ ತಳಪಾಯವನ್ನೇ ಹಾಕುತ್ತದೆ. ಹಾಗಾಗಿ ಹಲ್ಲಿನಲ್ಲಿ ಯಾವುದೇ ಹುಳುಕು, ಕ್ಯಾವಿಟಿಯಂತಹ ತೊಂದರೆಗಳು ಆಗಾಗ ಆಗುತ್ತಲೇ ಇರುತ್ತವೆ ಎಂದಾದಲ್ಲಿ ಅಲ್ಲಿ ನಿಮಗೆ ಕ್ಯಾಲ್ಶಿಯಂ ಕೊರತೆಯಿದೆ ಎಂದೇ ಅರ್ಥ. ನಾವು ಸುಲಭವಾಗಿ ಸಿಹಿತಿಂಡಿಯ ಮೇಲೆ ದೂರಿ, ಅದರಿಂದಾಗಿಯೇ ಹುಳುಕಾಗಿದೆ ಎನ್ನಬಹುದು. ಆದರೆ, ಕ್ಯಾಲ್ಶಿಯಂ ಕೊರತೆಯೂ ಅದಕ್ಕೆ ಕಾರಣವಾಗಿರಬಹುದು ಎಂಬುದನ್ನು ನೆನಪಿನಲ್ಲಿಡಬೇಕು.

೨.ಮಾಂಸಖಂಡಗಳ ಸೆಳೆತ: ಬಹಳ ಸಾರಿ, ಮೂಳೆ ಅಥವಾ ಎಲುಬಿನ ಸಂಬಂಧೀ ಸಮಸ್ಯೆ ಬಂದಾಕ್ಷಣ ಮಾತ್ರ ಅದಕ್ಕೆ ಕ್ಯಾಲ್ಶಿಯಂನ ಸಂಬಂಧ ಹುಡುಕುತ್ತೇವೆ. ಆದರೆ, ಮಾಂಸಖಂಡಗಳಿಗೂ ಕ್ಯಾಲ್ಶಿಯಂಗೂ ಸಂಬಂಧವಿದೆ. ಆಗಾಗ ನಿಮಗೆ ಮಾಂಸಖಂಡಗಳ ಸೆಳೆತ, ಉಳುಕಿನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದರೆ, ನಿಮಗೆ ಕ್ಯಾಲ್ಶಿಯಂ ಕೊರತೆಯಿದೆ ಎಂದೇ ಅರ್ಥ.

೩. ಉಗುರು ಮುರಿಯುವುದು: ನಿಮ್ಮ ಉಗುರು ದುರ್ಬಲವಾಗಿದೆಯೇ? ಆಗಾಗ ಮುರಿಯುತ್ತದೆಯೋ? ಅಥವಾ ಉಗುರಿನ ಸಿಪ್ಪೆ ಏಳುತ್ತಿದೆಯೋ? ಹಾಗಿದ್ದರೆ ನಿಮ್ಮ ಕ್ಯಾಲ್ಶಿಯಂ ಮಟ್ಟ್ವನ್ನು ಪರೀಕ್ಷಿಸಿಕೊಳ್ಳಿ. ಉಗುರಿನ ಆರೋಗ್ಯಕ್ಕೆ ಕ್ಯಾಲ್ಶಿಯಂ ಅತ್ಯಂತ ಅಗತ್ಯ. ಕ್ಯಾಲ್ಶಿಯಂನ ಕೊರತೆಯಿಂದಷ್ಟೇ ಉಗುರು ಮುರಿಯುವಂತಹ, ದುರ್ಬಲತೆಯಂತಹ ಸಮಸ್ಯೆ ಬರಬಹುದು.

Symptoms Of Calcium Deficiency

೪. ಮೂಳೆ ದುರ್ಬಲತೆ: ಮೂಳೆ ಅಥವಾ ಎಲುಬಿನ ಆರೋಗ್ಯಕ್ಕೆ ಕ್ಯಾಲ್ಶಿಯಂ ಅತ್ಯಂತ ಅಗತ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಶೇ ೯೯ರಷ್ಟು ಕ್ಯಾಲ್ಶಿಯಂ ದೇಹದ ಮೂಳೆಗಳಲ್ಲೇ ಸಂಗ್ರಹವಾಗುತ್ತದೆ. ಹಾಗಾಗಿ, ಸರಿಯಾದ ಮಟ್ಟದಲ್ಲಿ ಕ್ಯಾಲ್ಶಿಯಂ ನಮ್ಮ ದೇಹಕ್ಕೆ ಸೇರದಿದ್ದರೆ, ಖಂಡಿತವಾಗಿಯೂ ಅದರ ಪರಿಣಾಮ ಮೂಳೆಗಳ ಮೇಲೆ ಕಾಣುತ್ತದೆ. ಆಗಾಗ ಮೂಳೆ ಮುರಿತದಂತಹ ಸಮಸ್ಯೆ ಕಂಡರೂ ಇದೂ ಕಾರಣವಿರಬಹುದು. ಕ್ಯಾಲ್ಶಿಯಂ ಕಡಿಮೆಯಾಗಿದ್ದಾಗ ಮೂಳೆ ಸವೆತ, ರಿಕೆಟ್ಸ್‌ನಂತಹ ಕಾಯಿಲೆಗಳ ಸಂಭವ ಹೆಚ್ಚು.

೫. ನಿದ್ರಾಹೀನತೆ: ನಿದ್ದೆಯ ಸಮಸ್ಯೆ ನಿಮಗಿದೆಯೇ? ಇದಕ್ಕೆ ಬೇರೆ ಕಾರಣಗಳಿರಬಹುದು ಎಂದು ನಿಮಗೆ ಅನಿಸಿರಬಹುದು. ಆದರೆ, ಕ್ಯಾಲ್ಶಿಯಂ ಕೂಡಾ ನಿದ್ದೆಯ ಜೊತೆ ಸಂಬಂಧ ಹೊಂದಿದೆ ಎಂಬ ತಿಳುವಳಿಕೆ ನಿಮಗಿದೆಯೇ? ಹೌದು. ಕ್ಯಾಲ್ಶಿಯಂನ ಕೊರತೆಯೂ ಕೂಡಾ ನಿದ್ರಾಹೀನತೆಗೆ ಕಾರಣವಾಗಬಹುದು. ಇದರರ್ಥ, ಮಲಗುವ ಮೊದಲು ಕ್ಯಾಲ್ಶಿಯಂನಿಂದ ಸಮೃದ್ಧವಾಗಿರುವ ಆಹಾರ ಸೇವಿಸಬೇಕು ಎಂದಲ್ಲ. ಆದರೆ, ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಶಿಯಂ ಕೂಡಾ ಇರಬೇಕು. ಕ್ಯಾಲ್ಶಿಯಂ ಮಟ್ಟ ದೇಹದಲ್ಲಿ ಸಮತೋಲನ ಕಾಯ್ದುಕೊಂಡಿದ್ದರೆ ಸರಿಯಾದ ಸಮಯಕ್ಕೆ ದೇಹಕ್ಕೆ ಸರಿಯಾದ ನಿದ್ದೆ ಬರಲು ಸಹಾಯವಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Health Tips : ಬೇಸಿಗೆಯಲ್ಲಿ ಲೈಫ್‌ಸ್ಟೈಲ್‌ ಹೇಗಿರಬೇಕು? ಆರೋಗ್ಯ ಇಲಾಖೆಯಿಂದ ಸರಳ ಸೂತ್ರ

Summer Hot : ಬೆಂಗಳೂರು ಸೇರಿ ಕರ್ನಾಟಕವೇ ಕಾದ ಕಾವಲಿಯಂತಾಗಿದೆ. ಬಿಸಿಲ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅತಿಯಾದ ತಾಪಮಾನದಿಂದ ಅನಾರೋಗ್ಯ ಸಮಸ್ಯೆಗಳು ಸಂಭವಿಸಬಹುದು. ಹೀಗಾಗಿ ಆರೋಗ್ಯ ಇಲಾಖೆಯು ಸಲಹೆ-ಸೂಚನೆಯ ಮಾರ್ಗಸೂಚಿಯನ್ನು (Health Tips) ಪ್ರಕಟಿಸಿದೆ.

VISTARANEWS.COM


on

By

Health Tips
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಸೂರ್ಯನ ತಾಪವು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಬೇವರಿಸುವ ಸೂರ್ಯನ ಶಾಖವು ಜನರು ಆರೋಗ್ಯದ ಮೇಲೂ ಪರಿಣಾಮ (Health Tips) ಬೀರುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆಯು (Health Department) ಕೆಲವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಏನು ಮಾಡಬೇಕು ಏನು ಮಾಡಬಾರದು ಎಂಬ ಸಲಹೆಗಳನ್ನೂ ನೀಡಲಾಗಿದೆ. ಜತೆಗೆ ಮಾಲೀಕರು ಹಾಗೂ ಕೆಲಸಗಾರರಿಗೂ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು (Health Tips) ಕೈಗೊಳ್ಳಲಾಗಿದೆ.

ತಾಪಮಾನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು?

ಸಾಮಾನ್ಯವಾಗಿ ದೇಹದ ಉಷ್ಣತೆಯು 36.4 ಡಿ.ಸೆ ನಿಂದ 37.2 ಡಿ.ಸೆ ಇರಲಿದೆ. ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸಾಧಾರಣದಿಂದ ತೀವ್ರ ಜ್ವರ, ಗಂಧೆಗಳು (prickly heat), ಊತಗಳು ( ಕೈ-ಕಾಲುಗಳು ಹಾಗೂ ಮೊಣಕಾಲು), ಉಷ್ಣತೆಯಿಂದ ಸೆಳೆತ (ಸ್ನಾಯುಗಳ ಸೆಳೆತ), ಪ್ರಜ್ಞೆ ತಪ್ಪುವುದು, ಸುಸ್ತಾಗುವುದು ಹಾಗೂ ಪಾಶ್ವವಾಯು ಉಂಟಾಗಲಿದೆ. ಕೆಲವೊಮ್ಮೆ ಅತಿಯಾದ ಉಷ್ಣತೆಯಿಂದಾಗಿ ಹೃದ್ರೋಗ, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತದೆ. ಅತಿಯಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿಯಾಗುವುದು, ತಲೆನೋವು ಹಾಗೂ ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ಏರು ಗತಿಯ ಉಸಿರಾಟ ಹಾಗೂ ಹೃದಯದ ಬಡಿತ ಹೆಚ್ಚಾಗಲಿದೆ.

ಏನು ಮಾಡಬೇಕು?
-ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ಮತ್ತು ದ್ರವಾಹಾರವನ್ನು ಸೇವಿಸಿ. ನೀರಿನ ಸೇವನೆ ಅತ್ಯುತ್ತಮ.
-ಹೆಚ್ಚು ನೀರು ಕುಡಿಯುವುದು. ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಸೇವಿಸಿ. ಜತೆಗೆ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ, ಲಸ್ಸಿ ಹಾಗು ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.
-ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಲೆಟೂಸ್, ಎಳನೀರುಗಳನ್ನು ಹೆಚ್ಚಾಗಿ ಸೇವಿಸಬೇಕು.
-ತಿಳಿ ಬಣ್ಣದ, ಅಳಕವಾದ (loose fitting) ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ.
-ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ/ಹ್ಯಾಟ್, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ ಬಿಸಿಲಿನಿಂದ ರಕ್ಷಣೆ ಪಡೆಯಿರಿ.
-ಬಿಸಿಲಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ / ಚಪ್ಪಲಿ ಅಥವಾ ಶೂಸ್‌ಗಳನ್ನು ಧರಿಸಬೇಕು.
-ಸಾಧ್ಯವಾದಷ್ಟು ಒಳಾಂಗಣದಲ್ಲಿದ್ದು, ಉತ್ತಮ ಗಾಳಿ ಬೀಸುವ ಹಾಗೂ ತಣ್ಣಗಿರುವ ಪ್ರದೇಶದಲ್ಲಿರಿ. ನೇರವಾಗಿ ಸೂರ್ಯನ ಬೆಳಕು ಹಾಗೂ ಬಿಸಿ ಗಾಳಿಯು ಮನೆಯ ಒಳಗೆ ಬರದಂತೆ ತಡೆಯಲು ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಪರದೆಗಳಿಂದ ಮುಚ್ಚಿ.

ಇದನ್ನೂ ಓದಿ: Side Effects Of Pillow: ಎತ್ತರದ ದಿಂಬು ಬಳಸುತ್ತೀರಾ? ಸಮಸ್ಯೆ ತಪ್ಪಿದ್ದಲ್ಲ!

ಈ ಕೆಲಸವನ್ನು ಮಾಡಬಾರದು

-ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹೊರಹೋಗುವುದನ್ನು ತಪ್ಪಿಸಿ.
-ಮಧ್ಯಾಹ್ನದ ಸಮಯದಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಚಪ್ಪಲಿ ಧರಿಸದೆ ಹೊರಹೋಗುವ ಅಭ್ಯಾಸವನ್ನು ತಪ್ಪಿಸಿ.
-ಮಧ್ಯಾಹ್ನ ಅಡುಗೆ ಮಾಡುವುದು ತಪ್ಪಿಸಿ. ಅಡುಗೆ ಸಿದ್ಧಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡಿ.
-ಮಧ್ಯಪಾನ, ಟೀ, ಕಾಫಿ ಮತ್ತು ಕಾರ್ಬೋನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ. ಇಂತಹ ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ ಅಥವಾ ಹೊಟ್ಟೆ ನೋವನ್ನು ಉಂಟುಮಾಡುತ್ತವೆ.
-ಹೆಚ್ಚು ಪ್ರೊಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
-ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬೇಡಿ. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನಾಪಮಾನವು ಅಪಾಯಕಾರಿಯಾಗಬಹುದು.
-ಕೆಲಸದ ಸ್ಥಳದಲ್ಲಿ ಕೆಲಸಗಾರರಿಗೆ ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ ಮಾಡಬೇಕು. 20 ನಿಮಿಷಗಳಿಗೊಮ್ಮೆ ಒಂದು ಗ್ಲಾಸ್‌ ಅಥವಾ ಅದಕ್ಕಿಂತ ಹೆಚ್ಚಿನ ನೀರು ಕುಡಿಬೇಕು

Heat wave

ಅಗ್ನಿ ಅವಘಡದ ಕುರಿತು ಎಚ್ಚರಿಕೆ ವಹಿಸಿ

ಬೇಸಿಗೆ ಸಮಯದಲ್ಲಿ ಅತಿಯಾದ ತಾಪಮಾನದಿಂದ ಆರೋಗ್ಯ ಕೇಂದ್ರಗಳಲ್ಲಿ ಅಗ್ನಿ ಅನಾಹುತಗಳಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತೆಯನ್ನು ವಹಿಸುವಂತೆ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್‌ ಎಲ್ಲಾ ಆಸ್ಪತ್ರೆಗಳಿಗೂ ಸೂಚನೆ ನೀಡಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ ಎಲ್ಲಾ ಹಂತದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ, ಬೆಂಕಿ ನಂದಿಸುವ ಉಪಕರಣಗಳ ಲಭ್ಯತೆ ಇರಬೇಕು. ಅಗ್ನಿಶಾಮಕ ದಳದಿಂದ No Objection Certificate ಅನ್ನು ಹೊಂದಿರಬೇಕು. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಂಡು ಆರೋಗ್ಯ ಸಂಸ್ಥೆಗಳಲ್ಲಿ ಅಗ್ನಿ ಅವಘಡಗಳನ್ನು ತಡೆಗಟ್ಟುವಂತೆ ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Side Effects Of Pillow: ಎತ್ತರದ ದಿಂಬು ಬಳಸುತ್ತೀರಾ? ಸಮಸ್ಯೆ ತಪ್ಪಿದ್ದಲ್ಲ!

ಹೊಸದರಲ್ಲಿ ಮೆತ್ತಗಿದ್ದ ದಿಂಬುಗಳು (Side effects of pillow) ಕ್ರಮೇಣ ಗಟ್ಟಿಯಾಗಿ ಒತ್ತಲಾರಂಭಿಸಿದರೆ, ಅದರ ಮೇಲೆ ಇನ್ನೊಂದು ದಿಂಬು ಹಾಕಿಕೊಳ್ಳಬಹುದು. ಅಥವಾ ಹೊಸದಾದ ಇನ್ನೂ ಎತ್ತರದ ದಿಂಬು ಖರೀದಿಸುವ ಯೋಚನೆಯೂ ಬಂದೀತು. ಹೀಗೆ ಎತ್ತರದ ದಿಂಬುಗಳ ಬಳಕೆಯಿಂದ ಬರುವ ಸಮಸ್ಯೆಗಳೇನು? ಇಲ್ಲಿದೆ ಮಾಹಿತಿ.

VISTARANEWS.COM


on

Side Effects Of Pillow
Koo

ಮೆತ್ತನೆಯ ದಿಂಬಿಗೆ ತಲೆ ಕೊಟ್ಟರೆ (Side effects of pillow) ನಿದ್ದೆ ಸದ್ದಿಲ್ಲದೆಯೆ ಆವರಿಸುತ್ತದೆ ಎಂಬ ಭಾವ ಬಹಳಷ್ಟು ಜನರಲ್ಲಿದೆ. ವಿಷಯ ಹೌದು, ಆರಾಮದಾಯಕ ಹಾಸಿಗೆ-ದಿಂಬುಗಳು ಗಾಢ ನಿದ್ದೆಗೆ ಪೂರಕವೇ. ಮುಖ್ಯವಾಗಿ ಕುತ್ತಿಗೆ ಮತ್ತು ಬೆನ್ನಿಗೆ ಸುಖ ನೀಡುವಂಥ ದಿಂಬು ಮಾತ್ರವೇ ಚೆನ್ನಾದ ನಿದ್ದೆಯನ್ನು ನೀಡಬಲ್ಲದು. ಆದರೆ ದಿಂಬುಗಳೇನು ಶಾಶ್ವತವಾಗಿ ಇರುವಂತೆ ಸಿದ್ಧಗೊಂಡವಲ್ಲ. ಹೊಸದರಲ್ಲಿ ಸುಖ ನೀಡುತ್ತಿದ್ದ ಮೆತ್ತೆಗಳು ಕೆಲಕಾಲದ ನಂತರ ಗಂಟುಗಂಟಾಗಿ ಮಲಗಿದವರ ಮೈಗೆ ಒತ್ತಲಾರಂಭಿಸುತ್ತವೆ. ಹೊಸದರಲ್ಲಿ ಮೆತ್ತಗಿದ್ದ ದಿಂಬುಗಳು ಕ್ರಮೇಣ ಗಟ್ಟಿಯಾಗಿ ಒತ್ತಲಾರಂಭಿಸಿದರೆ, ಅದರ ಮೇಲೆ ಇನ್ನೊಂದು ದಿಂಬು ಹಾಕಿಕೊಳ್ಳಬಹುದು. ಅಥವಾ ಹೊಸದಾದ ಇನ್ನೂ ಎತ್ತರದ ದಿಂಬು ಖರೀದಿಸುವ ಯೋಚನೆಯೂ ಬಂದೀತು. ಕ್ರಮೇಣ ತನ್ನ ಮೃದುತ್ವವನ್ನು ಕಳೆದುಕೊಂಡು, ತಗ್ಗಿ ಗಟ್ಟಿಯಾಗುವ ದಿಂಬುಗಳ ಗುಣದಿಂದ, ಈ ಯೋಚನೆ ಬಂದಿದ್ದರೆ ಅದು ಸಹಜ. ಆದರೆ ಹಾಗೆ ಎತ್ತರದ ದಿಂಬುಗಳನ್ನು ಬಳಸಿದರೆ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಅಥವಾ ಒಂದಕ್ಕಿಂತ ಹೆಚ್ಚು ದಿಂಬುಗಳನ್ನು ತಲೆ, ಕುತ್ತಿಗೆ, ಬೆನ್ನು ಎಂದು ಎಲ್ಲೆಂದರಲ್ಲಿ ಒತ್ತರಿಸಿಕೊಂಡರೂ ತೊಂದರೆ ತಪ್ಪಿದ್ದಲ್ಲ. ಎತ್ತರದ ದಿಂಬುಗಳ ಬಳಕೆಯಿಂದ ಬರುವ ಸಮಸ್ಯೆಗಳೇನು?

Sleeping

ಭಂಗಿ ಹಾಳಾಗುತ್ತದೆ

ಮಲಗುವುದಕ್ಕೆ ಆರಾಮದಾಯಕ ಭಂಗಿಯನ್ನು ಅನುಸರಿಸುವುದು ಮುಖ್ಯ. ಎತ್ತರದ ದಿಂಬನ್ನು ಹಾಕಿಕೊಳ್ಳುವುದರಿಂದ ಕುತ್ತಿಗೆ ಮತ್ತು ಬೆನ್ನಿನ ಭಂಗಿಗಳು ಹಾಳಾಗುತ್ತವೆ. ತೀರಾ ಎತ್ತರದ ದಿಂಬುಗಳು ಬೆನ್ನು ಹುರಿಯನ್ನು ಅತಿಯಾಗಿ ಬಾಗಿಸಿ, ಕುತ್ತಿಗೆಯ ಮೇಲಿನ ಒತ್ತಡವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಭುಜ, ಕುತ್ತಿಗೆ, ಬೆನ್ನಿನ ಮೇಲ್ಭಾಗಗಳಲ್ಲಿ ನೋವು, ಒತ್ತಡ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ.

ಸ್ನಾಯುಗಳ ಮೇಲೆ ಒತ್ತಡ

ಯಾವುದೇ ಒಂದು ಭಂಗಿಯಲ್ಲಿ ಸ್ವಲ್ಪ ಕಾಲ ಇದ್ದಾಗಲೇ ನಮಗೆ ಕಿರಿಕಿರಿ ಉಂಟಾಗುತ್ತದೆ. ಉದಾ, ಒಂಟಿ ಕಾಲಲ್ಲಿ ಎರಡು ನಿಮಿಷ ನಿಲ್ಲುವುದೇ ಕಷ್ಟ, ನಿಂತರೂ ಕಾಲು ನೋವು ಅನುಭವಕ್ಕೆ ಬರುತ್ತದೆ. ಹಾಗಿರುವಾಗ ಆರಾಮವಲ್ಲದ ಮತ್ತು ಸೂಕ್ತವಲ್ಲದ ಭಂಗಿಯಲ್ಲಿ ಇಡೀ ರಾತ್ರಿ ಮಲಗಿದರೆ ಸ್ನಾಯುಗಳ ಮೇಲೆ ಬೀಳುವಂಥ ಒತ್ತಡವನ್ನು ನಾವು ಅರ್ಥಮಾಡಿಕೊಳ್ಳಬೇಕು. ಬೆಳಗ್ಗೆ ಏಳುವಾಗಲೇ ಸುಸ್ತಾಗಿ, ತಲೆ, ಕುತ್ತಿಗೆಯೆಲ್ಲಾಭಾರವಾದ ಅನುಭವವನ್ನು ನೀಡುತ್ತದೆ.

Breathing problem

ಉಸಿರಾಟದ ತೊಂದರೆ

ನೆಗಡಿಯಾದಾಗ ದಿಂಬು ಎತ್ತರಿಸಿಕೊಂಡು ಮಲಗುವುದು ಬಹಳಷ್ಟು ಜನರ ರೂಢಿ. ಇದರಿಂದ ಮೂಗು ಕಟ್ಟಿದ ತೊಂದರೆಯಿಂದ ಕೊಂಚ ಆರಾಮ ದೊರೆಯುತ್ತದೆ. ಹಾಗೆಂದು ಸದಾಕಾಲ ಅದೇ ಭಂಗಿಯಲ್ಲಿ ಮಲಗುವುದು ಸೂಕ್ತವಲ್ಲ. ಇದರಿಂದ ಶ್ವಾಸನಾಳಗಳ ಮೇಲೆ ಅನಗತ್ಯ ಒತ್ತಡ ಸೃಷ್ಟಿಯಾಗುತ್ತದೆ. ಸಶಬ್ದ ಉಸಿರಾಟ, ಉಬ್ಬಸದಂಥ ತೊಂದರೆಗಳು ಗಂಟು ಬೀಳಬಹುದು. ದೀರ್ಘವಾಗಿ ಉಸಿರಾಡಲು ಆಗುವುದಿಲ್ಲ ಎಂಬ ಭಾವನೆ ಬರಬಹುದು.

ealthy internal organs of human digestive system / highlighted blue organs

ಜೀರ್ಣಾಂಗಗಳ ತೊಂದರೆ

ದಿಂಬಿಗೂ ಜೀರ್ಣಾಂಗಗಳಿಗೂ ಏನು ಸಂಬಂಧ? ಎತ್ತಣ ಮಾಮರ, ಎತ್ತಣ ಕೋಗಿಲೆ ಎಂದು ಯೋಚಿಸಬಹುದು. ತಲೆ, ಕುತ್ತಿಗೆಯ ಭಾಗಗಳು ಒಂದೇ ಪಂಕ್ತಿಯಲ್ಲಿ ಸರಿಯಾಗಿ ಜೋಡಿಸಿಕೊಂಡು ಇರದಿದ್ದರೆ ಎದೆಯುರಿ, ಹುಳಿತೇಗಿನಂಥ ತೊಂದರೆಗಳಿಗೆ ದಾರಿ ಮಾಡಬಹುದು. ಅದರಲ್ಲೂ ಊಟ ಆದ ತಕ್ಷಣ ಹೀಗೆ ಕುತ್ತಿಗೆ, ತಲೆಗಳನ್ನು ಎತ್ತರಿಸಿ ಮಲಗಿಕೊಳ್ಳುವುದು ಸರಿಯಲ್ಲ.

ಪರಿಚಲನೆಗೆ ಅಡಚಣೆ

ಭುಜ, ತೋಳು ಮತ್ತು ಬೆನ್ನಿನ ಮೇಲ್ಭಾಗಗಳಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುವುದಕ್ಕೆ ಎತ್ತರದ ದಿಂಬುಗಳು ಅಡಚಣೆ ಮಾಡುತ್ತವೆ. ಇದರಿಂದ ತೋಳು, ಬೆರಳುಗಳಲ್ಲಿ ಚುಚ್ಚಿದ ಅನುಭವ, ಮರಗಟ್ಟಿದಂತಾಗುವುದು, ಜೋಮು ಹಿಡಿಯುವುದು ಸಾಮಾನ್ಯ. ಆದರೆ ದೀರ್ಘಕಾಲದವರೆಗೆ ಇದೇ ಭಂಗಿಯಲ್ಲಿ ಮಲಗುವುದನ್ನು ರೂಢಿಸಿಕೊಂಡರೆ ನರಸಂಬಂಧಿ ತೊಂದರೆಗಳು ಕಾಣಬಹುದು.

Winter Headache

ತಲೆನೋವು

ಬೆಳಗ್ಗೆ ಏಳುತ್ತಿದ್ದಂತೆಯೇ ತಲೆನೋವಿನ ಅನುಭವವೇ? ಕುತ್ತಿಗೆ, ಭುಜವೆಲ್ಲ ನೋಯುತ್ತಿರುವ ಇಲ್ಲವೇ ಮರಗಟ್ಟಿದ ಹಾಗಿದೆಯೇ? ನಿಮ್ಮ ದಿಂಬಿನ ದೋಷವೇ ಇರಬಹುದು. ಮಲಗಿದ ಭಂಗಿಯ ತೊಂದರೆಯಿಂದಾಗಿ ದಿನವೂ ನಿದ್ರೆ ಸರಿಯಾಗುತ್ತಿಲ್ಲ ಎಂದಾದರೆ, ಮೈಗ್ರೇನ್‌ ಅಥವಾ ಅರೆತಲೆಶೂಲೆ ಅಂಟಿಕೊಳ್ಳುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Tips To Prevent Acne: ಮೊಡವೆ ಬರದಂತೆ ತಡೆಯಬೇಕೆ? ಇಲ್ಲಿದೆ ಪರಿಹಾರ!

Continue Reading

ಆರೋಗ್ಯ

Tips To Drink More Water: ನಾವು ಕುಡಿಯುವ ನೀರಿನ ಪ್ರಮಾಣವನ್ನು ಹೀಗೆ ಹೆಚ್ಚಿಸಬಹುದು!

ಸುಲಭವಾಗಿ ಮಾಡುವಂಥ ಕೆಲಸಗಳಿಗೂ ಕಷ್ಟ ಪಡುತ್ತೇವೆ ಎಂಬುದಕ್ಕೆ ನಾವು ಸಾಕಷ್ಟು ನೀರು ಕುಡಿಯದಿರುವುದೇ ಸಾಕ್ಷಿ. ಬರೀ ನೀರು ಕುಡಿಯಲಾರೆ, ಮರೆತೇಹೋಯ್ತು, ದಾಹವೇ ತಿಳಿಯುವುದಿಲ್ಲ… ಇಂಥ ಏನೇನೋ ಕಾರಣಗಳನ್ನು ನೀಡುತ್ತೇವೆಯೇ ಹೊರತು ನೀರು ಕುಡಿಯುವುದಿಲ್ಲ. ದೇಹಕ್ಕೆ ಹೆಚ್ಚು ನೀರುಣಿಸುವುದಕ್ಕೆ ನಾವೇನು ಮಾಡಬಹುದು? ಇಲ್ಲಿವೆ (tips to drink more water) ಸರಳ ಉಪಾಯಗಳು.

VISTARANEWS.COM


on

Water Bottle
Koo

ಸುಲಭವಾದ ಯಾವುದಾದರೂ ಕೆಲಸಕ್ಕೆ, ʻನೀರು ಕುಡಿದಷ್ಟು ಸುಲಭವಾಗಿ ಮಾಡಬಹುದುʼ ಎನ್ನುತ್ತೇವೆ. ʻಎದುರಾಳಿಗೆ ನೀರು ಕುಡಿಸಿದರುʼ ಎನ್ನುವಾಗ ಸುಲಭವಾಗಿ ಸೋಲಿಸಿದರು ಎಂದು ಭಾವಿಸುತ್ತೇವೆ. ಅಂತೂ ನೀರು ಕುಡಿಯುವುದೆಂದರೆ ಸುಲಭವಾದ ಕೆಲಸ ಎಂಬ ಭಾವ ನಮ್ಮದು. ಹಾಗಾದರೆ, ಈ ಬೇಸಿಗೆಯ ದಿನಗಳಲ್ಲಿ ನೀರು ಕುಡಿಯುವುದಕ್ಕೆ ಯಾಕಿಷ್ಟು ಕಷ್ಟ ಪಡುತ್ತೇವೆ ನಾವು? ದೇಹಕ್ಕೆ ನೀರು ಸಾಕಾಗದಿದ್ದರೆ ಹಲವು ರೀತಿಯಲ್ಲಿ ತೊಂದರೆಗಳು ವಕ್ಕರಿಸಿಕೊಳ್ಳುತ್ತವೆ ಎಂಬುದನ್ನು ತಿಳಿದಿದ್ದರೂ, ನೀರು ಕುಡಿಯುವುದನ್ನು ಮುಂದೂಡುತ್ತೇವೆ.
ದೇಹದ ಜೀರ್ಣಾಂಗಗಳು ಸರಿಯಾಗಿ ಕೆಲಸ ಮಾಡುವುದಕ್ಕೆ, ಮಲಬದ್ಧತೆ ನಿವಾರಣೆಗೆ, ಕಿಡ್ನಿ ಕ್ಷಮತೆ ಹೆಚ್ಚಿಸಲು, ಕೀಲು ಮತ್ತು ಸ್ನಾಯುಗಳು ಸ್ವಸ್ಥವಾಗಿರಲು, ಚರ್ಮ ನಳನಳಿಸಲು, ದೇಹದ ಉಷ್ಣತೆ ಸರಿಯಾಗಿರಲು… ಇಂಥ ಬಹಳಷ್ಟು ಕೆಲಸಗಳು ನಡೆಯುವುದಕ್ಕೆ ನಮಗೆ ನೀರು ಬೇಕು. ಇವೆಲ್ಲ ನಮಗೆ ಹೊಸ ವಿಷಯಗಳು ಅಲ್ಲದಿದ್ದರೂ, ನಿತ್ಯದ ಕೆಲಸಗಳ ಒತ್ತಡದಲ್ಲಿ ನೀರು ಕುಡಿಯುವುದನ್ನು ಮಾತ್ರ ಮರೆಯುತ್ತೇವೆ. ನಿರ್ಜಲೀಕರಣಕ್ಕೆ ಈಡಾಗಿ, ತಲೆನೋವು, ಚರ್ಮ ಒಣಗುವಂಥ ಹಲವು ಸಮಸ್ಯೆಗಳಿಂದ ಒದ್ದಾಡುತ್ತೇವೆ. ಹಾಗಾದರೆ ನೀರು ಹೆಚ್ಚು ಕುಡಿಯುವಂತೆ ನಮಗೆ ನಾವು ಹೇಗೆ (tips to drink more water) ಸ್ಫೂರ್ತಿ ತುಂಬಬಹುದು?

Woman drinking water.

ಬರೀ ನೀರಲ್ಲ

ನೀರಿಗೆ ಇನ್ನೇನಾದರೂ ಇಷ್ಟವಾಗುವಂಥದ್ದನ್ನು ಸೇರಿಸಿ ನೋಡಿ. ಇದರರ್ಥ ಸಕ್ಕರೆ, ಬೆಲ್ಲ, ಸೋಡಾಗಳನ್ನೆಲ್ಲ ಸೇರಿಸುವುದಲ್ಲ. ನಾಲ್ಕೆಂಟು ಪುದೀನಾ ಅಥವಾ ಬೆಸಿಲ್‌ ಎಲೆಗಳು, ಸ್ಟ್ರಾಬೆರಿ, ಕಿತ್ತಳೆ ಅಥವಾ ಅನಾನಸ್ ಹೋಳುಗಳು, ಒಂದು ಚಮಚ ಚಿಯಾ ಬೀಜ, ಸೌತೇಕಾಯಿ ತುಂಡುಗಳು… ಹೀಗೆ ನಿಮ್ಮಿಷ್ಟದ ಏನನ್ನಾದರೂ ಸೇರಿಸಿ. ಆದರೆ ಇದಕ್ಕೆ ಕೃತಕ ಸಿಹಿಯನ್ನು ಸೇರಿಸುವಂತಿಲ್ಲ. ಈ ರೀತಿಯಿಂದ ದಿನಕ್ಕೆ 8-10 ಗ್ಲಾಸ್‌ ನೀರು ಕುಡಿಯುವ ಗುರಿಯನ್ನು ತಲುಪಲು ಸಾಧ್ಯವಾದೀತು.

Alarm

ಅಲರಾಂ ಇಡಿ

ಪ್ರತಿ ಗಂಟೆಗೊಮ್ಮೆ ಇರುವ ಸ್ಥಳದಿಂದ ಎದ್ದು ಹೋಗಿ ನೀರು ಕುಡಿಯಬೇಕು ಎಂಬುದನ್ನು ನೆನಪಿಸಲು ತಾಸಿಗೊಮ್ಮೆ ಅಲರಾಂ ಇಟ್ಟುಕೊಳ್ಳಬಹುದು. ಒಂದೊಮ್ಮೆ ಇದು ಹಳೆಯ ಕಾಲದ್ದಾಯಿತು ಎನಿಸಿದರೆ, ವಾಟರ್‌ ರಿಮೈಂಡರ್‌ ಇರುವ ಆಪ್‌ಗಳನ್ನು ಬಳಸಬಹುದು. ಇದರಿಂದ ಆಯಾ ದಿನಕ್ಕೆ ಎಷ್ಟು ಬಾರಿ ನೀರು ಕುಡಿದಿದ್ದೀರಿ ಎಂಬುದನ್ನು ಲೆಕ್ಕ ಹಾಕುವುದಕ್ಕೂ ಸುಲಭವಾಗುತ್ತದೆ.

ಸೆಕ್ಸಿ ವಾಟರ್‌!

ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಇದರದ್ದೇ ಗಾಳಿ ಬೀಸುತ್ತಿದೆ. ವಿಷಯ ಮತ್ತೇನಲ್ಲ, ಕುಡಿಯುವ ನೀರಿಗೆ ನಿಮ್ಮಿಷ್ಟದ ಆರೋಗ್ಯಕರ ವಸ್ತುಗಳನ್ನು ಸೇರಿಸಿ, ನೋಡುವುದಕ್ಕೆ ಸಿಕ್ಕಾಪಟ್ಟೆ ಸುಂದರವಾಗಿರುವ ಕಪ್‌, ಬಾಟಲಿಗಳಲ್ಲಿ ಅವುಗಳನ್ನು ತುಂಬಿಸಿ, ಅದಕ್ಕೊಂದು ಫ್ಯಾನ್ಸಿ ಸ್ಟ್ರಾ ಸಿಕ್ಕಿಸಿದರೆ- ಸೆಕ್ಸಿ ವಾಟರ್‌ ಸಿದ್ಧ. ಇದನ್ನು ಹೇಗೆಲ್ಲಾ ಕುಡಿದು ಮುಗಿಸುತ್ತೀರಿ ಎನ್ನುವುದನ್ನೂ ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ನೀವು ಬಿತ್ತರಿಸಬಹುದು.

Boy Drinking Water from Glass

ನೀರು ಕುಡಿಯುವ ಆಟ

ನಿಮ್ಮ ಕುಟುಂಬ ಅಥವಾ ಮಿತ್ರರೊಂದಿಗೆ ನೀರು ಕುಡಿಯುವ ಆಟ ಆಡಬಹುದು. ನಿಂನಿಮ್ಮ ಗುಂಪಿನಲ್ಲಿ ಪ್ರತಿ ದಿನದ ನೀರಿನ ಸವಾಲು ಮುಂದಿಟ್ಟು, ಯಾರೆಲ್ಲ ಅದನ್ನು ಪೂರ್ಣಗೊಳಿಸುತ್ತಾರೆ ಎಂಬುದನ್ನು ನೋಡಬಹುದು. ದಿನದ ವಿಜೇತರಿಗೆ ಏನಾದರೂ ಬಿರುದಾವಳಿಗಳನ್ನು ನೀಡಿ ಮಜಾ ಮಾಡಬಹುದು. ತಿಂಗಳಿಗೊಮ್ಮೆ ಎಲ್ಲರೂ ಸೇರಿ ನೀರಿಗಾಗಿ ಆರೋಗ್ಯಕರ ಪಾರ್ಟಿ ಮಾಡಬಹುದು.

ವಿನೂತನ ಬಾಟಲ್‌ಗಳು

ನೀರಿನ ಅಳತೆಯ ಗುರುತು ಮಾತ್ರವಲ್ಲ, ಸಮಯದ ಗುರುತನ್ನೂ ಹೊಂದಿರುವ ಸುಂದರ ನೀರಿನ ಬಾಟಲಿಗಳು, ಮುದ್ದಾದ ಕಪ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಒಮ್ಮೆ ತುಂಬಿಸಿದರೆ ಎಷ್ಟು ತಾಸಿಗೆ ಎಷ್ಟು ನೀರು ಕುಡಿದಿರಿ ಎನ್ನುವ ಲೆಕ್ಕವನ್ನೂ ಈ ಬಾಟಲಿಗಳು ಸುಲಭವಾಗಿ ಹೇಳಿಬಿಡುತ್ತವೆ. ನೋಡಿ, ನೀರು ಕುಡಿಸುವುದಕ್ಕೆ ಮಾರುಕಟ್ಟೆಯ ಮಂದಿ ಎಷ್ಟೊಂದು ಉತ್ಸುಕರಾಗಿದ್ದಾರೆ! ನಾವು ಕುಡಿಯಬೇಕಷ್ಟೆ.

Green tea, black coffee

ಗ್ರೀನ್‌ ಟೀ, ಬ್ಲಾಕ್‌ ಕಾಫಿ

ನಿತ್ಯದ ಜ್ಯೂಸ್‌, ಸೋಡಾದ ಸರ್ವಿಂಗ್‌ ಇದ್ದರೆ ಅದನ್ನು ಗ್ರೀನ್‌ ಟೀ ಅಥವಾ ಬ್ಲಾಕ್‌ ಕಾಫಿಗೆ ಬದಲಾಯಿಸಬಹುದು. ಅಂಥವು ಯಾವುದೂ ಬೇಡ ಎನಿಸಿದರೆ ಕೋಕಂ, ನೆಲ್ಲಿಕಾಯಿ, ಬೇಲದಹಣ್ಣು ಮುಂತಾದವುಗಳ ಪಾನಕ ಸೇವಿಸಬಹುದು. ಇದರಿಂದ ಬೇಸಿಗೆಯಲ್ಲಿ ಶರೀರ ತಂಪಾಗಿಯೂ ಇರುತ್ತದೆ, ನೀರೂ ಹೆಚ್ಚಿಗೆ ದೊರೆತಂತೆ ಆಗುತ್ತದೆ.

Fasting Fruits image

ರಸಭರಿತ ಹಣ್ಣುಗಳು

ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಸೌತೇಕಾಯಿಯಂಥ ರಸಭರಿತ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ಶರೀರ ಬಳಲದಂತೆ ಕಾಪಾಡಿಕೊಳ್ಳುವುದರ ಜೊತೆಗೆ ಅಗತ್ಯವಾದ ನೀರಿನ ಪ್ರಮಾಣವನ್ನೂ ಹೆಚ್ಚಿಸಬಹುದು. ಜೊತೆಗೆ ಕಬ್ಬಿನಹಾಲು, ಎಳನೀರಿನಂಥ ನೈಸರ್ಗಿಕ ಪೇಯಗಳು ಬೇಸಿಗೆಯ ದಾಹ ತಣಿಸುವುದರ ಜೊತೆಗೆ, ಶರೀರಕ್ಕೆ ಭರಪೂರ ಖನಿಜಗಳನ್ನೂ ಒದಗಿಸುತ್ತವೆ.

Continue Reading

ಆರೋಗ್ಯ

Healthy Foods For Kidney: ಕಿಡ್ನಿಯ ಆರೋಗ್ಯವರ್ಧನೆಗೆ ಈ ಕೆಳಗಿನ ಆಹಾರಶೈಲಿಯ ಬಗೆಗೆ ಗೊತ್ತಿರಲಿ!

ಸೋಡಿಯಂ, ಪೊಟಾಶಿಯಂ, ಪಾಸ್ಪರಸ್‌ ಮತ್ತಿತರ ಖನಿಜಾಂಶಗಳನ್ನು ಅತಿಯಾಗಿಸದೆ ಕಿಡ್ನಿಯ ಮೇಲೆ ಒತ್ತಡ ಬೀಳದಂತೆ ನೋಡಿಕೊಂಡರೆ ಕಿಡ್ನಿಯ ತೊಂದರೆಗಳನ್ನು ತಪ್ಪಿಸಬಹುದು. ಕಿಡ್ನಿ ಆರೋಗ್ಯ ಕುರಿತ (healthy foods for kidney) ಮತ್ತಷ್ಟು ಮಾಹಿತಿ ಇಲ್ಲಿದೆ.

VISTARANEWS.COM


on

Healthy Foods For Kidney
Koo

ಕಿಡ್ನಿಯ ಆರೋಗ್ಯ ಸಮತೋಲನದಲ್ಲಿ ಇಟ್ಟುಕೊಳ್ಳಲು ಯಾವಾಗಲೂ ಸಮತೋಲಿತ ಆಹಾರ ಬಹಳ ಮುಖ್ಯ. ಆಹಾರದ ವಿಚಾರದಲ್ಲಿ ಎಚ್ಚರಿಕೆ ಇಲ್ಲದೆ ಹೋದರೆ, ಕಿಡ್ನಿಯ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ ಎಂದೇ ಅರ್ಥ. ಯಾಕೆಂದರೆ, ಕಿಡ್ನಿಗೆ ಅತಿಯಾದ ಕೆಲಸ, ಒತ್ತಡ ನೀಡುವ ಮೂಲಕವೇ ನಾವು ಕಿಡ್ನಿಯ ಆರೋಗ್ಯವನ್ನು ಹದಗೆಡಿಸಲು ಕಾರಣ. ಸೋಡಿಯಂ, ಪೊಟಾಶಿಯಂ, ಪಾಸ್ಪರಸ್‌ ಮತ್ತಿತರ ಖನಿಜಾಂಶಗಳನ್ನು ಅತಿಯಾಗಿಸದೆ, ಕಿಡ್ನಿಯ ಮೇಲೆ ಒತ್ತಡ ಬೀಳದಂತೆ ನೋಡಿಕೊಂಡರೆ, ಕಿಡ್ನಿಯ ತೊಂದರೆಗಳನ್ನು ತಪ್ಪಿಸಬಹುದು. ಹಾಗಾಗಿ ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಹಂಪಲುಗಳ ಸೇವನೆ, ತರಕಾರಿ, ಧಾನ್ಯಗಳು, ಬೇಳೆಕಾಳುಗಳು ಇತ್ಯಾದಿಗಳ ಸೇವನೆ ಬಹಳ ಮುಖ್ಯ. ಪ್ರೊಟೀನ್‌ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳೂ ಇರುವ ಸಮೃದ್ಧ ಆಹಾರದ ಸೇವನೆ ಅತೀ ಅಗತ್ಯ. ಹಾಗಾದರೆ ಬನ್ನಿ, ಕಿಡ್ನಿಗೆ ಒತ್ತಡ ಬೀಳದಂತೆ ಕಿಡ್ನಿಯ ಆರೋಗ್ಯವನ್ನು ಹೆಚ್ಚಿಸುವ ಯಾವ ಬಗೆಯ ಆಹಾರ ಕ್ರಮವನ್ನು (healthy foods for kidney) ನಾವು ಅನುಸರಿಸಬಹುದು ಎಂಬುದನ್ನು ನೋಡೋಣ.

Pear, apple, papaya and pineapple

ಹಣ್ಣು ಹಂಪಲುಗಳನ್ನು ಮರೆಯಲೇಬಾರದು

ಆರೋಗ್ಯಕರ ಕಿಡ್ನಿಗಳ ವಿಚಾರಕ್ಕೆ ಬಂದಾಗ ಹಣ್ಣು ಹಂಪಲುಗಳನ್ನು ಮರೆಯಲೇಬಾರದು. ಪೇರಳೆ, ಸೇಬು, ಪೀಯರ್‌, ಪಪ್ಪಾಯಿ ಹಾಗೂ ಅನನಾಸು ಈ ಐದು ಹಣ್ಣುಗಳು ಕಿಡ್ನಿ ಸ್ನೇಹಿ. ಇವು ಕಿಡ್ನಿಗೆ ಹಾನಿಯಾಗುವುದನ್ನು ತಪ್ಪಿಸಿ, ಕಿಡ್ನಿಯನ್ನು ಆರೋಗ್ಯವಾಗಿಸುತ್ತವೆ.

Iron rich foods

ಕಬ್ಬಿಣಾಂಶ ಇರುವ ಆಹಾರಗಳು

ವಿಟಮಿನ್‌ ಕೆ ಹಾಗೂ ಕಬ್ಬಿಣಾಂಶ ಇರುವ ಆಹಾರಗಳು ಯಾವಾಗಲೂ ಕಿಡ್ನಿಗೆ ಒಳ್ಳೆಯದನ್ನೇ ಮಾಡುತ್ತವೆ. ಹೀಗಾಗಿ ಈ ಪೋಷಕಾಂಶಗಳು ಹೆಚ್ಚಿರುವ ತರಕಾರಿಗಳನ್ನು ಸೇವನೆ ಮಾಡಿ. ಹಸಿರು ತರಕಾರಿಗಳಲ್ಲಿ ಇವು ಹೆಚ್ಚಿದ್ದು, ಬಸಳೆ, ಕಾಳೆ, ಬ್ರೊಕೋಲಿ, ಕ್ಯಾಬೇಜ್‌ ಇತ್ಯಾದಿಗಳನ್ನು ಸೇವಿಸಬಹುದು. ಆದರೆ ಹಿತಮಿತವಾಗಿರಲಿ.

ಪ್ರೊಟೀನ್‌ ಆಹಾರ ಸೂಕ್ತ

ಮೀನು ಹಾಗೂ ಟೋಫು ಸೇರಿದಂತೆ, ಪ್ರೊಟೀನ್‌ ಹೆಚ್ಚಿರುವ ಆಹಾರಗಳು ಕಿಡ್ನಿಗೆ ಅತ್ಯಂತ ಒಳ್ಳೆಯದು. ಈ ಆಹಾರಗಳು ಕಿಡ್ನಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ.

The seeds

ಧಾನ್ಯಗಳ ಸೇವನೆ

ಧಾನ್ಯಗಳ ಸೇವನೆ ಕಿಡ್ನಿಗೆ ಅತ್ಯಂತ ಅಗತ್ಯ. ಕುಚ್ಚಲಕ್ಕಿ, ಕ್ವಿನೋವಾ, ಇವೆರಡೂ ಆಹಾರಗಳು ಕಿಡ್ನಿಯ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನೂ ಸಮತೋಲನದಲ್ಲಿಡಲು ನೆರವಾಗುತ್ತದೆ.
ಆಹಾರ ಸೇವನೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರದತ್ತ ಗಮನ ಹರಿಸಿದರೆ, ಕಿಡ್ನಿ ಸಂಬಂಧಿತ ಸಮಸ್ಯೆಗಳು ಬಾರದು. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು, ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ಕಿಡ್ನಿಯ ಆರೋಗ್ಯಕ್ಕೆ ಬಹಳ ಮುಖ್ಯ. ಡಯಟ್‌ ಅಥವಾ ಇನ್ಯಾವುದೋ ಹೆಸರಿನಲ್ಲಿ ಇದ್ದಕ್ಕಿದ್ದಂತೆ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಇತ್ಯಾದಿಗಳಿಂದ ಕಿಡ್ನಿಯ ಮೇಲೆ ಒತ್ತಡ ಬೀಳುತ್ತದೆ.

ಕೆಲವು ಆಹಾರಗಳಿಂದ ದೂರ ಇರಬೇಕು

ಕಿಡ್ನಿಯ ತೊಂದರೆ, ಸಮಸ್ಯೆ ಇದ್ದವರು, ಕೆಲವು ಆಹಾರಗಳನ್ನು ದೂರವಿಡುವುದನ್ನು ಮರೆಯಬಾರದು. ಬ್ರೆಡ್‌ ಮತ್ತಿತರ ಸಂಸ್ಕರಿಸಿದ ಆಹಾರಗಳು, ಕ್ಯಾನ್‌ನಲ್ಲಿ ಸಂರಕ್ಷಿಸಲ್ಪಟ್ಟ ಆಹಾರಗಳು, ಬೆಣ್ಣೆಹಣ್ಣು, ಬಾಳೆಹಣ್ಣು, ಕಿತ್ತಳೆ, ಕೆಲವು ಒಣ ಹಣ್ಣುಗಳು, ಟೊಮೆಟೋ, ಸಂಸ್ಕರಿಸಿದ ಮಾಂಸ, ಉಪ್ಪಿನಕಾಯಿ, ಆಲೂಗಡ್ಡೆ ಇತ್ಯಾದಿಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಏನೇ ಕಿಡ್ನಿಯ ಸಮಸ್ಯೆ ಇದ್ದರೂ ವೈದ್ಯರ ಸಲಹೆಯ ಪ್ರಕಾರ ಆಹಾರಕ್ರಮವನ್ನು ರೂಢಿಸಿಕೊಳ್ಳುವುದು ಒಳ್ಳೆಯದು.

Continue Reading
Advertisement
Viral News: Holi at delhi metro
ದೇಶ13 mins ago

Viral News : ವೈರಲ್​ ವಿಡಿಯೊಗಾಗಿ ಅಸಭ್ಯವಾಗಿ ವರ್ತಿಸಿದ ಡೆಲ್ಲಿ ಯುವತಿಯರು ಅರೆಸ್ಟ್​!

Water Crisis
ಪ್ರಮುಖ ಸುದ್ದಿ24 mins ago

ವಿಸ್ತಾರ ಸಂಪಾದಕೀಯ: ನೀರಿನ ಸಮಸ್ಯೆಗೆ ಜನರೇ ಉತ್ತರ ಕಂಡುಕೊಳ್ಳಬೇಕು

IPL 2024- Riyan Parag
ಪ್ರಮುಖ ಸುದ್ದಿ39 mins ago

IPL 2024 : ರಾಯಲ್ಸ್​ಗೆ 2ನೇ ವಿಜಯ , ಡೆಲ್ಲಿಗೆ ಸತತ ಎರಡನೇ ಸೋಲು

Dolly Chaiwala
ವೈರಲ್ ನ್ಯೂಸ್1 hour ago

Dolly Chaiwala: ಅಬ್ಬಬ್ಬಾ ಲಾಟರಿ: ಬಿಲ್ ಗೇಟ್ಸ್ ಭೇಟಿ ಆಯ್ತು; ಈಗ ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್‌ವಾಲಾ ಮಿಂಚು

Mukthar Ansari
ಪ್ರಮುಖ ಸುದ್ದಿ1 hour ago

Mukhtar Ansari : ಗ್ಯಾಂಗ್​ಸ್ಟರ್​ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ

Former DCM Govinda Karajola pressmeet
ಬೆಂಗಳೂರು2 hours ago

Bengaluru News: ದೇಶದ ಸರ್ವಾಂಗೀಣ ಅಭಿವೃದ್ಧಿ ಆಗಿದ್ದೇ ಮೋದಿಯಿಂದ: ಗೋವಿಂದ ಕಾರಜೋಳ

crime news
ಕ್ರೈಂ2 hours ago

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಂದ ಪಾಪಿ; ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು

Women Slapped
ಪ್ರಮುಖ ಸುದ್ದಿ2 hours ago

Women Slapped : ಪಿಟಿಐ ಪತ್ರಕರ್ತೆಯ ಕಪಾಳಕ್ಕೆ ಬಾರಿಸಿದ ಎಎನ್​ಐ ವರದಿಗಾರ; ಇಲ್ಲಿದೆ ಆತಂಕಕಾರಿ ವಿಡಿಯೊ

Tata Ace vehicle overturned Two persons dead five seriously injured
ಕರ್ನಾಟಕ2 hours ago

Road Accident: ಟಾಟಾ ಏಸ್ ವಾಹನ ಪಲ್ಟಿ; ಇಬ್ಬರ ಸಾವು, ಐವರಿಗೆ ಗಂಭೀರ ಗಾಯ

Xiaomi Car in China
ಪ್ರಮುಖ ಸುದ್ದಿ3 hours ago

Xiaomi Car: ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಿದ ಮೊಬೈಲ್ ಕಂಪನಿ ರೆಡ್​ಮಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202410 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202412 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ19 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌