Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ! - Vistara News

ಆರೋಗ್ಯ

Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!

ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಕೆಲವು ಪ್ರಕೃತಿದತ್ತ ಆಹಾರಾಭ್ಯಾಸಗಳಿಂದ ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

VISTARANEWS.COM


on

eye care foods
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಣ್ಣಿನಷ್ಟು ದೊಡ್ಡ ಉಡುಗೊರೆ ನಮ್ಮ ಜೀವನದಲ್ಲಿ ಇನ್ನೊಂದಿಲ್ಲ. ಜಗತ್ತನ್ನು ನೋಡಲು ನಮಗಿರುವ ಎರಡು ಕಣ್ಣುಗಳು ಕಾಣಿಕೆಯೇ ಸಿ. ಆದರೆ ಇತ್ತೀಚೆಗಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಅತಿಯಾದ ಗ್ಯಾಜೆಟ್‌ ಬಳಕೆಗಳಿಂದ ಕಣ್ಣಿನ ಆರೋಗ್ಯ ಎಲ್ಲರಲ್ಲೂ ಕ್ಷೀಣಿಸುತ್ತಿದೆ. ಆದರೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಕೆಲವು ಪ್ರಕೃತಿದತ್ತ ಆಹಾರಾಭ್ಯಾಸಗಳಿಂದ ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಯಾವೆಲ್ಲ ಆಹಾರಗಳು ಕಣ್ಣಿನ ಆರೋಗ್ಯಕ್ಕೆ ಸಹಕಾರಿ ಎಂಬುದನ್ನು ನೋಡೋಣ.

೧. ಕ್ಯಾರೆಟ್‌: ಕ್ಯಾರೆಟ್‌ ಎ ಮಿಟಮಿನ್‌ನ ಸಮೃದ್ಧ ಆಕರ. ಹಾಗಾಗಿ ಕಣ್ಣಿಗೆ ಬಹಳ ಒಳ್ಳೆಯದು. ಕ್ಯಾರೆಟ್‌ ತಿನ್ನುವುದರಿಂದ ರಾತ್ರಿಯ ಮಂದದೃಷ್ಠಿ ತೊಂದರೆಯಿದ್ದವರು ಪರಿಹಾರ ಪಡೆಯಬಹುದು. ಕಣ್ಣಿನ ಇತರ ಹಲವು ತೊಂದರೆಗಳಿಗೂ ಕ್ಯಾರೆಟ್‌ ಮುಖ್ಯವಾದ ನೈಸರ್ಗಿಕ ಉಪಾಯ.ಕ್ಯಾರೆಟ್‌ನ ಹಲವು ಬಗೆಯ ಅಡುಗೆಗಳ ಮೂಲಕ ನಿತ್ಯ ಕ್ಯಾರೆಟ್‌ ಸೇವನೆ ಅಭ್ಯಾಸ ಮಾಡಿಕೊಳ್ಳಬಹುದು. ಕ್ಯಾರೆಟ್‌ ಸೂಪ್‌, ಕ್ಯಾರೆಟ್‌ ಚಟ್ನಿ, ಕ್ಯಾರೆಟ್‌ ಸಬ್ಜಿ, ಸಾಂಬಾರು ಇತ್ಯಾದಿಗಳಲ್ಲೂ ಕ್ಯಾರೆಟ್‌ ನಿತ್ಯ ಬಳಸಬಹುದು. ಅಷ್ಟೇ ಅಲ್ಲದೆ, ಹಸಿ ಕ್ಯಾರೆಟ್ಟನ್ನು ತಿನ್ನುವುದರಿಂದ ಈ ಎಲ್ಲಕ್ಕಿಂತ ಹೆಚ್ಚು ಉಪಯೋಗ ಪಡೆಯಬಹುದು.

carrot

೨. ಮೀನು: ಮೀನು ಕಣ್ಣಿಗೆ ಒಳ್ಳೆಯದು. ಇದರಲ್ಲಿರುವ ಒಮೆಗಾ ೩ ಕಣ್ಣಿನ ಹಲವು ತೊಂದರೆಗಳಿಗೆ ರಾಮಬಾಣ. ಮೀನನ್ನು ತಿನ್ನುವುದರಿಂದ ಕಣ್ಣು ಹಾಗೂ ಮಿದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ, ಕಣ್ಣಿನ ದೃಷ್ಠಿಯಿಂದ ರೋಗನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಬೇಕಿದ್ದರೆ ಮೀನು ತಿನ್ನಬಹುದು.

೩. ಬಸಳೆ: ಬಸಳೆಯಲ್ಲಿ ವಿಟಮಿನ್‌ ಇ ಹೇರಳವಾಗಿದೆ. ಇದರಲ್ಲಿರುವ ಕೆರಾಟಿನಾಯ್ಡ್‌ಗಳು ಆಂಟಿ ಆಕ್ಸಿಡೆಂಟ್‌ ಹಾಗೂ ಆಂಟಿ ಇನ್‌ಫ್ಲಾಮೇಟರಿ ಗುಣಗಳ್ನು ಹೊಂದಿದೆ. ಹೀಗಾಗಿ ಇದು ನಿಧಾನವಾಗಿ ಮಾಂಸಖಂಡಗಳು ಕರಗುತ್ತಾ ಹೋಗುವುದುದ ಹಾಗೂ ಕಣ್ಣಿನ ಪೊರೆ (ಕ್ಯಾಟರ್ಯಾಕ್ಟ್‌) ಬರದಂತೆ ತಡೆಯುತ್ತದೆ. ಹಣ್ಣಿನ ಸ್ಮೂದಿಗಳು, ದಾಲ್‌ ಮತ್ತಿತರ ಆಹಾರಗಳಲ್ಲಿ ಬಸಳೆ ಸೊಪ್ಪನ್ನು ಸೇರಿಸುವ ಮೂಲಕ ಹೆಚ್ಚು ಬಸಳೆಯನ್ನು ನಿತ್ಯಾಹಾರದಲ್ಲಿ ಬಳಸಬಹುದು.

spinach

೪. ಮೊಟ್ಟೆ: ಮೊಟ್ಟೆಯ ಹಳದಿ ಭಾಗ ಒಳ್ಳೆಯದಲ್ಲ ಎಂದು ಬಿಸಾಕಿ ಬಿಡುವ ಮಂದಿಗೆ ಇದು ಕಿವಿಮಾತು. ಇದರಲ್ಲಿರುವ ಹಲವಾರು ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಅಗತ್ಯ ಎಂಬುದನ್ನು ನೆನಪಿಡಿ.

೫. ಹಾಲಿನ ಉತ್ಪನ್ನಗಳು: ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್‌ ಎ ಹೇರಳವಾಗಿರುವುದರಿಂದ ಇದು ಕಣ್ಣಿಗೆ ಒಳ್ಳೆಯದು. ವಿಟಮಿನ್‌ ಎ ಕಣ್ಣಿನ ಕಾರ್ನಿಯಾವನ್ನು ರಕ್ಷಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಇದರಲ್ಲಿರುವ ಝಿಂಕ್‌ ರಾತ್ರಿಯ ಕಣ್ಣಿನ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.

೬. ಓಯ್‌ಸ್ಟರ್‌: ಓಯ್‌ಸ್ಟರ್‌ಗಳಲ್ಲಿ ವಿಟಮಿನ್‌ ಎ ಹೇರಳವಾಗಿರುವುದರಿಂದ ಇದು ಕಣ್ಣಿಗೆ ಒಳ್ಳೆಯದು.

ಇದನ್ನೂ ಓದಿ | Eye Care | ದೃಷ್ಟಿ ವರ್ಧನೆಗೆ ಪೂರಕವಾದ ಹಣ್ಣುಗಳು ಯಾವವು ಗೊತ್ತೇ?

೭. ಬ್ರೊಕೋಲಿ: ಬ್ರೊಕೋಲಿ ಎಂಬ ಹಸಿರು ತರಕಾರಿಯಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿ ವಿಟಮಿನ್‌ ಎ, ಇ, ಸಿ ಹಾಗೂ ಲ್ಯುಟೀನ್‌ ಇದ್ದು ಇದು ಕಣ್ಣಿಗೆ ಬಹಳ ಉತ್ತಮ ಆಹಾರ.

orange fruit benefits

೮. ಸಿಟ್ರಸ್‌ ಹಣ್ಣುಗಳು: ವಿಟಮಿನ್‌ ಸಿ ಹೇರಳವಾಗಿರುವ ನಿಂಬೆಹಣ್ಣು, ಮುಸಂಬಿ, ಕಿತ್ತಳೆ, ಕಿವಿಗಳು ಕಣ್ಣಿಗೆ ಹಾನಿಯಾಗದಂತೆ ರಕ್ಷಿಸುತ್ತವೆ. ಕಣ್ಣಿನ ರಕ್ತನಾಳಗಳನ್ನು ಆರೋಗ್ಯವಾಗಿಡುವಲ್ಲಿ ಇವುಗಳ ಪಾತ್ರ ದೊಡ್ಡದು.

೯. ಸಿಹಿಗೆಣಸು: ಸಿಹಿಗೆಣಸು ಕಣ್ಣನ್ನು ಚುರುಕಾಗಿಸುವ ಸಾಮರ್ಥ್ಯ ಪಡೆದಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳ ಕಣ್ಣಿನಲ್ಲಿರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕುವಂತೆ ಮಾಡುತ್ತದೆ.

೧೦. ಸೂರ್ಯಕಾಂತಿ ಬೀಜ: ಸೂರ್ಯಕಾಂತಿ ಬೀಜ ಕೇವಲ ಕಣ್ಣಷ್ಟೇ ಅಲದೆ ನಮ್ಮ ದೇಹದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯ ಬೀಜಗಳಲ್ಲಿ ಒಂದು. ಇದರಲ್ಲಿ ವಿಟಮಿನ್‌ ಇ ಹೇರಳವಾಗಿದ್ದು, ಪ್ರೊಟೀನ್‌ ಹಾಗೂ ಆರೋಗ್ಯಕರ ಕೊಬ್ಬು ಇದೆ. ಕಣ್ಣಿನಲ್ಲಿ ಊತವನ್ನು ಕಡಿಮೆ ಮಾಡುವ ಗುಣವನ್ನು ಇದು ಹೊಂದಿದ್ದು, ವಿಷಕಾರಿ ಕಣಗಳನ್ನು ಹೊಡೆದೋಡಿಸುತ್ತದೆ. ಕೇವಲ ಸೂರ್ಯಕಾಂತಿ ಬೀಜವಲ್ಲದೆ, ಎಲ್ಲ ಬೀಜಗಳೂ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದೇ.

ಇದನ್ನೂ ಓದಿ | Eye care | ನಮ್ಮ ನಿತ್ಯದ ಅಭ್ಯಾಸಗಳೇ ಕಣ್ಣಿನ ತೊಂದರೆಗೆ ಕಾರಣವಾಗುತ್ತಿದೆಯೇ?!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Tooth Decay: ನಮ್ಮ ಈ ದುರಭ್ಯಾಸಗಳು ಹಲ್ಲಿನ ಹುಳುಕಿಗೆ ಕಾರಣವಾಗುತ್ತವೆ

ಎಲ್ಲರನ್ನೂ ಒಂದಲ್ಲ ಒಂದು ದಿನ ಕಾಡುವ ಸಾರ್ವಕಾಲಿಕ ತೊಂದರೆಯೆಂದರೆ ಅದು ಹಲ್ಲು ನೋವು. ಇದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ನಿತ್ಯವೂ ಬಾಯಿಯ ಸ್ವಚ್ಛತೆ ಬಗ್ಗೆ ಹಾಗೂ ನಮ್ಮ ಜೀವನಶೈಲಿಯ ಬಗ್ಗೆ ಗಮನ ಹರಿಸಿದರೆ ಹಲ್ಲಿನ ಆರೋಗ್ಯ ಚೆನ್ನಾಗಿ ಇಡಬಹುದು. ನಮ್ಮ ಯಾವ ಯಾವ ನಿರ್ಲಕ್ಷ್ಯಗಳಿಂದ ಹಲ್ಲಿನ ಹುಳುಕಿಗೆ ಕಾರಣವಾಗುತ್ತದೆ ಹಾಗೂ ನಾವು ಇದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಇಲ್ಲಿದೆ (tooth decay) ಮಾಹಿತಿ.

VISTARANEWS.COM


on

Tooth Decay
Koo

ಹಲ್ಲು ಹುಳುಕಾಗುವುದು ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಸಾಮಾನ್ಯ ತೊಂದರೆ. ವಯಸ್ಸಿನ ಭೇದವಿಲ್ಲದೆ, ಬಡವ ಶ್ರೀಮಂತನೆಂಬ ಹಂಗಿಲ್ಲದೆ, ಎಲ್ಲರನ್ನೂ ಒಂದಲ್ಲ ಒಂದು ದಿನ ಕಾಡುವ ಸಾರ್ವಕಾಲಿಕ ತೊಂದರೆಯಿದು. ಆದರೆ, ಅಷ್ಟೇ ನಿರ್ಲಕ್ಷ ವಹಿಸುವ ಆರೋಗ್ಯವೂ ಕೂಡಾ ಇದೇ. ಆದರೆ, ನಿತ್ಯವೂ ಬಾಯಿಯ ಸ್ವಚ್ಛತೆ ಹಾಗೂ ಆಹಾರದ ಬಗ್ಗೆ, ನಮ್ಮ ಜೀವನಶೈಲಿಯ ಬಗ್ಗೆ ಗಮನ ಹರಿಸಿದರೆ ಹಲ್ಲಿನ ಆರೋಗ್ಯ ಚೆನ್ನಾಗಿಟ್ಟಿರಬಹುದು. ಬನ್ನಿ, ನಮ್ಮ ಯಾವ ಯಾವ ನಿರ್ಲಕ್ಷ್ಯಗಳಿಂದ ಹಲ್ಲಿನ ಹುಳುಕಿಗೆ ಕಾರಣವಾಗುತ್ತದೆ ಹಾಗೂ ನಾವು ಇದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು (tooth decay) ಎಂಬುದನ್ನು ನೋಡೋಣ.

Young Man Suffering from Acute Toothache and Touching Cheek with Grimace of Pain

ಬಾಯಿಯ ಆರೋಗ್ಯದ ಕಾಳಜಿ ಸರಿಯಾಗಿ ಮಾಡದೇ ಇರುವುದು

ದಿನಕ್ಕೆ ಎರಡು ಬಾರಿ ಅಂದರೆ ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದು ಮಾಡದೆ ಇದ್ದರೆ, ಸರಿಯಾಗಿ ಕಾಳಜಿ ವಹಿಸದಿದ್ದರೆ, ಹಲ್ಲಿನ ಸಮಸ್ಯೆಗಳು ಬಹುಬೇಗನೆ ಬರುತ್ತವೆ. ಹಲ್ಲು ಹುಳುಕಾಗಲು ಇರುವ ಪ್ರಮುಖ ಕಾರಣಗಳಲ್ಲಿ ಇದೂ ಒಂದು.

Selection of Colorful Sweets

ಸಕ್ಕರೆಯುಕ್ತ ಆಹಾರ ಅಥವಾ ಸಿಹಿತಿಂಡಿಗಳ ಅತಿಯಾದ ಸೇವನೆ

ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವುದರಿಂದ ಹಲ್ಲು ಬಹುಬೇಗನೆ ಹುಳುಕಾಗುತ್ತದೆ. ಸಕ್ಕರೆಯುಕ್ತ ಆಹಾರಗಳಿಂದ ಬಾಯಿಯಲ್ಲಿ ಬಹಳ ಹೊತ್ತಿನವರೆಗೆ ಬ್ಯಾಕ್ಟೀರಿಯಾ ಇರುವುದರಿಂದ ಹಲ್ಲು ಹುಳುಕಿಗೆ ಕಾರಣವಾಗುತ್ತದೆ.

ಆಗಾಗ ದಂತವೈದ್ಯರನ್ನು ಭೇಟಿಯಾಗದೆ ಇರುವುದು

ಆಗಾಗ ದಂತವೈದ್ಯರನ್ನು ಸಂಪರ್ಕಿಸಿ ಹಲ್ಲಿನ ಆರೋಗ್ಯದ ಕಾಳಜಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಹಲ್ಲಿನ ಕ್ಲೀನಿಂಗ್‌ ಇರಬಹುದು, ಸಣ್ಣ ಹುಳುಕಾದಾಗ ಫಿಲ್ಲಿಂಗ್‌ ಇರಬಹುದು ಅಥವಾ ಆಯಾ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ಆಗಾಗ ಕಂಡುಕೊಳ್ಳುವುದರಿಂದ ಮುಂದಿನ ಪರಿಣಾಮ ಘೋರವಾಗಿರುವುದಿಲ್ಲ. ಕ್ಲೀನಿಂಗ್‌ ಆಗಾಗ ಮಾಡಿಸಿಕೊಳ್ಳುವುದು, ಹಲ್ಲಿನ ಸಂದುಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಆಹಾರದ ಸಣ್ಣ ತುಣುಕುಗಳನ್ನು ತೆಗೆದು ಕ್ಲೀನ್‌ ಮಾಡುವುದು ಬಹಳ ಮುಖ್ಯ. ಇದರಿಂದ ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ. ಹುಳುಕು ಹತ್ತಿರ ಸುಳಿಯುವುದಿಲ್ಲ.

Smoking Heart Attack Causes

ಧೂಮಪಾನ ಹಾಗೂ ತಂಬಾಕಿನ ಸೇವನೆ

ಧೂಮಪಾನಕ್ಕೂ ಹಲ್ಲು ಹುಳುಕಿಗೂ ಏನು ಸಂಬಂಧ ಎಂದು ಯೋಚಿಸಬೇಡಿ. ಹಲ್ಲು ಹುಳುಕಾಗುವುದಕ್ಕೆ ಇನ್ನೊಂದು ಮುಖ್ಯ ಕಾರಣ ಎಂದರೆ ಧೂಮಪಾನ ಹಾಗೂ ತಂಬಾಕಿನ ಬಳಕೆ. ತಂಬಾಕಿನ ಯಾವುದೇ ವಸ್ತುಗಳನ್ನು ಬಳಸಿದರೂ ಕೂಡಾ, ಹಲ್ಲಿನ ಆರೋಗ್ಯ ಹದಗೆಡುತ್ತದೆ. ಹಲ್ಲು, ಸವಡು ಸೇರಿದಂತೆ ಬಾಯಿಯ ಆರೋಗ್ಯ ಹಾಳಾಗುತ್ತದೆ.

Drunk Man Drinking Alcohol and Smoking Cigarette Stomach Bloating Relief

ಆಲ್ಕೋಹಾಲ್‌ ಸೇವನೆ

ಮದ್ಯಪಾನ ಮಾಡುವುದರಿಂದಲೂ ಹಲ್ಲಿನ ಆರೋಗ್ಯ ಹಾಳಾಗುತ್ತದೆ. ಹೆಚ್ಚು ಆಲ್ಕೋಹಾಲ್‌ ಕುಡಿಯುವುದರಿಂದ ಬಾಯಿ ಒಣಗಿದಂತಾಗಿ, ಬಾಯಿಯ ಜೊಲ್ಲಿನ ಉತ್ಪತ್ತಿ ಕಡಿಮೆಯಾಗುತ್ತದೆ. ಕಡಿಮೆ ಸಲೈವಾ ಉತ್ಪತ್ತಿಯಾದಾಗ ಸಹಜವಾಗಿಯೇ ಹಲ್ಲಿನ ಹುಳುಕು ಹೆಚ್ಚುತ್ತದೆ.

ಹಲ್ಲನ್ನು ಉಪಕರಣವಾಗಿ ಬಳಸುವುದರಿಂದ

ಹಲ್ಲು ಗಟ್ಟಿಯಾಗಿದೆ ಎಂದುಕೊಂಡು ಗಟ್ಟಿ ಕವಚವಿರುವ ಬೀಜಗಳನ್ನು ಒಡೆಯಲು, ಯಾವುದಾದರೂ ಪ್ಯಾಕೆಟ್ಟನ್ನು ಬಿಡಿಸಲು ಹಲ್ಲಿನಿಂದ ಕಚ್ಚುವ ಮೂಲಕ ಹಲ್ಲಿನ ಸಹಾಯವನ್ನು ತೆಗೆದುಕೊಳ್ಳುತ್ತೇವೆ. ಇದರಿಂದಲೂ ಹಲ್ಲಿನ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಹಲ್ಲಿನ ಆರೋಗ್ಯ ಹೆಚ್ಚಿಸಲು ಏನು ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.

Tooth brushing

ದಿನಕ್ಕೆ ಎರಡು ಬಾರಿ ಹಲ್ಲಿಜ್ಜಿ

ಇದು ಹಲ್ಲು ಹುಳುಕಾಗಿಸುವುದನ್ನು ತಪ್ಪಿಸುತ್ತದೆ. ಹಲ್ಲಿನ ಸಂದಿನಲ್ಲಿ ಸೇರಿದ ಕೊಳೆ ಹೊರಟು ಹೋಗಿ, ಹಲ್ಲು ಆರೋಗ್ಯಪೂರ್ಣವಾಗಿ ಇರುತ್ತದೆ. ಹಲ್ಲುಜ್ಜಲು ಯಾವಾಗಲೂ ಫ್ಲೋರೈಡ್‌ ಟೂತ್‌ಪೇಸ್ಟ್‌ ಹಾಗೂ ಮೆತ್ತಗಿನ ಬ್ರಷ್‌ ಅನ್ನು ಬಳಸುವುದು ಒಳ್ಳೆಯದು.

ಹಲ್ಲನ್ನು ಆಗಾಗ ಫ್ಲಾಸ್‌ ಮಾಡುವುದು ಒಳ್ಳೆಯದು

ಟೂತ್‌ ಬ್ರಷ್‌ನಿಂದ ತೆಗೆಯಲು ಸಾಧ್ಯವಾಗದ, ಹಲ್ಲಿನ ಸಂದಿಯಲ್ಲಿ ಸೇರಿಕೊಂಡಿರುವ ಆಹಾರ ಹಳೆಯ ತುಣುಕುಗಳುಫ್ಲಾಸ್‌ ಮಾಡುವ ಮೂಲಕ ಮಾತ್ರ ತೆಗೆಯಬಹುದು.

Sweet CANDAY

ಅಸಿಡಿಕ್‌ ಹಾಗೂ ಸಕ್ಕರೆಯುಕ್ತ ಆಹಾರಗಳ ಸೇವನೆ ಕಡಿಮೆ ಮಾಡಿ

ಸೋಡಾಗಳು, ಹಣ್ಣಿನ ಜ್ಯೂಸ್‌ಗಳು, ಕ್ಯಾಂಡಿ ಇತ್ಯಾದಿಗಳನ್ನು ತಿಂದಾಗ ಅಥವಾ ಕುಡಿದಾಗ ಬಾಯಿಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.

ಆಗಾಗ ಏನಾದರೊಂದು ಜಗಿಯುತ್ತಿರುವ ಅಭ್ಯಾಸವಿದ್ದರೆ ಬಿಡಿ

ಆಗಾಗ ಏನಾದರೂ ತಿನ್ನುವುದರಿಂದ ಬಾಯಿಯಲ್ಲಿ ಆಹಾರಗಳು ಹಾಗೆಯೇ ಉಳಿದುಹೋಗುತ್ತವೆ. ಈ ತುಣುಕುಗಳು ಹಲ್ಲಿನ ಆರೋಗ್ಯವನ್ನು ಹಾಳುಗೆಡವುತ್ತದೆ.

Chewing gum

ಚ್ಯೂಯಿಂಗ್‌ ಗಮ್‌ ತಿನ್ನುವ ಮೂಲಕ ಬಾಯಿಯನ್ನು ಫ್ರೆಶ್‌ ಆಗಿರಿಸಬಹುದು

ಆದರೆ, ಸಿಹಿಯಾದ ಚ್ಯೂಯಿಂಗ್‌ಗಮ್‌ ಒಳ್ಳೆಯದಲ್ಲ. ಪುದಿನಯುಕ್ತ ಸಕ್ಕರೆ ರಹಿತ ಚ್ಯೂಯಿಂಗ್‌ ಗಮ್‌ ಯಾವಾಗಲಾದರೊಮ್ಮೆ ಅಗತ್ಯ ಬಿದ್ದಾಗ ಬಳಸಬಹುದು.

ಆಗಾಗ ದಂತ ವೈದ್ಯರನ್ನು ಭೇಟಿಯಾಗಿ

ಹಲ್ಲಿನ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಿ. ಅಗತ್ಯ ಬಿದ್ದಾಗ ಕ್ಲೀನಿಂಗ್‌ ಮಾಡಿಸಿಕೊಳ್ಳಿ.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

Continue Reading

ದೇಶ

Vitamin D: ಎಚ್ಚರ..ಎಚ್ಚರ! ಕ್ಯಾನ್ಸರ್‌ಗೂ ಕಾರಣವಾಗುತ್ತೆ ವಿಟಮಿನ್‌ ಡಿ ಕೊರತೆ

Vitamin D:ವಿಟಮಿನ್‌ ಡಿ ಕೊರತೆ ಕ್ಯಾನ್ಸರ್‌ಗೆ ಕಾರಣವಾಗಲಿದೆ ಎಂಬ ಶಾಕಿಂಗ್‌ ವರದಿಯೊಂದು ಹೊರ ಬಿದ್ದಿದೆ. ವಿವಿಧ ಅಧ್ಯಯನಗಳ ವರದಿ ಪ್ರಕಾರ ವಿಟಮಿನ್‌ ಡಿ ಕೊರತೆಯಿಂದ ಓವರಿಯನ್‌, ಸ್ತನ ಸೇರಿದಂತೆ ವಿವಿಧ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ.

VISTARANEWS.COM


on

Foods rich in vitamin D
Koo

ನವದೆಹಲಿ:ವಿಟಮಿನ್‌ ಡಿ(Vitamin D) ಕೊರತೆ ಎಂಬುದು ಪ್ರಪಂಚಾದ್ಯಂತ ಹೆಚ್ಚಿನ ಜನರಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಪೌಷ್ಟಿಕಾಂಶ ಕೊರತೆ(Nutrient shortages)ಯಾಗಿದೆ. ಇದು ಸಾಮಾನ್ಯವಾಗಿ 65 ವರ್ಷ ಮೇಲ್ಪಟ್ಟ ಜನರಲ್ಲಿ ಕಂಡು ಬರುವ ಪೌಷ್ಠಿಕಾಂಶ ಕೊರತೆ. ಪ್ರಪಂಚದ ಶೇ.13ರಷ್ಟು ಜನರಲ್ಲಿ ವಿಟಮಿನ್‌ ಡಿ ಕೊರತೆ ಕಂಡು ಬರುತ್ತದೆ. ವಿಟಮಿನ್‌ ಡಿ ಕೊರತೆಯಿಂದ ಎಲುಬು, ಗಂಟು ನೋವು, ಸಂಧು ನೋವು, ಮೂಡ್‌ ಚೇಂಜ್‌ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದರೆ ಇದೀಗ ವಿಟಮಿನ್‌ ಡಿ ಕೊರತೆ ಕ್ಯಾನ್ಸರ್‌(Cancer)ಗೆ ಕಾರಣವಾಗಲಿದೆ ಎಂಬ ಶಾಕಿಂಗ್‌ ವರದಿಯೊಂದು ಹೊರ ಬಿದ್ದಿದೆ. ವಿವಿಧ ಅಧ್ಯಯನಗಳ ವರದಿ ಪ್ರಕಾರ ವಿಟಮಿನ್‌ ಡಿ ಕೊರತೆಯಿಂದ ಓವರಿಯನ್‌, ಸ್ತನ ಸೇರಿದಂತೆ ವಿವಿಧ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ.

ವಿಟಮಿನ್‌ ಡಿ ಕೊರತೆ ಹೇಗೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ?

ವಿಟಮಿನ್‌ ಡಿ 3 ಮತ್ತು ಕ್ಯಾಲ್ಸಿಯಂ ಮಾತ್ರೆ ಸೇವನೆಯಿಂದ ಕ್ಯಾನ್ಸರ್‌ ತಡೆಯಲು ಸಾಧ್ಯವಿಲ್ಲ ಎಂದು ಅಧ್ಯಯನ ವರದಿ ಹೇಳಿದೆ. ವಿಟಮಿನ್‌ ಡಿ ಕ್ಯಾನ್ಸರ್‌ ಸೆಲ್‌ಗಳ ವಿಡಿಜನ್‌ ಮತ್ತು ಅವುಗಳ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ . ಅದರ ಕೊರತೆ ಆದಲ್ಲಿ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್‌ಗೆ ತುತ್ತಾಗು ಸಾಧ್ಯತೆ ಹೆಚ್ಚಿರುತ್ತದೆ. ವೈದ್ಯರ ಹೇಳುವ ಪ್ರಕಾರ ವಿಟಮಿನ್‌ ಡಿ ಮನುಷ್ಯನ ಎಲುಬುಗಳ ಆರೋಗ್ಯ ಕಾಪಾಡುವುದು ಮಾತ್ರವಲ್ಲದೇ ದೇಹದಲ್ಲಿರುವ ದೋಷಯುಕ್ತ ಜೀನ್‌ಗಳನ್ನು ಸರಿಪಡಿಸುವ ಪ್ರಕ್ರಿಯೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರಕ್ರಿಯೆಗೆ MMR ಎಂದು ಕರೆಯಲಾಗಿದ್ದು, ಇದಕ್ಕೆ ವಿಟಮಿನ್‌ ಡಿ ಅಗತ್ಯ ಹೆಚ್ಚಾಗಿದೆ. ಇನ್ನು ವಿಟಮಿನ್‌ ಡಿ ಕೊರತೆ ಕ್ಯಾನ್ಸರ್‌ ಗೆ ಕಾರಣವಾಗುತ್ತದೇಯೇ ಎಂಬ ವಿಷಯದ ಬಗ್ಗೆ ಮತ್ತಷ್ಟು ಅಧ್ಯಯನ ಮುಂದುವರೆದಿದೆ.

ವಿಟಮಿನ್ ಡಿ ಕೊರತೆ ಉಂಟಾಗದಿರಲು ಏನು ಮಾಡಬೇಕು?

1. ವಿಟಮಿನ್ ಡಿ ಕೊರತೆಗೆ ಪ್ರಮುಖ ಮದ್ದು ಎಂದರೆ ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲುವುದು. ತ್ವಚೆಯ ಮೇಲೆ ಯುವಿ-ಬಿ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್ ವಿಟಮಿನ್ ಡಿ ಆಗಿ ಪರಿವರ್ತನೆ ಆಗುವುದು. ನಿಮ್ಮ ತ್ವಚೆಯ ಬಣ್ಣದ ಮೇಲೆ ನೀವು ಬಿಸಿಲಿನಲ್ಲಿ ನಿಲ್ಲುವ ಸಮಯಲ್ಲಿ ವ್ಯತ್ಯಾಸವಿರುತ್ತದೆ. ಕಪ್ಪು ಬಣ್ಣದ ತ್ವಚೆಯವರು ಬಿಳಿ ಬಣ್ಣದ ತ್ವಚೆಯವರಿಗಿಂತ ಹೆಚ್ಚು ಹೊತ್ತು ಬಿಸಿಲಿನಲ್ಲಿ ನಿಲ್ಲಬೇಕು. ಇನ್ನು ವಯಸ್ಸು ಹೆಚ್ಚಾದಂತೆ ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಂತರೆ ಒಳ್ಳೆಯದು.

ಇದನ್ನೂ ಓದಿ:IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

2. ಮೀನು ಹಾಗೂ ಸಮುದ್ರ ಆಹಾರಗಳಲ್ಲಿ ವಿಟಮಿನ್ ಡಿ ಇರುತ್ತದೆ. ಬೂತಾಯಿ, ಮೃದ್ವಂಗಿಗಳು, ಸಿಗಡಿ, ಬಂಗುಡೆ ಈ ಮೀನುಗಳಲ್ಲಿ ವಿಟಮಿನ್ ಡಿ ಅಂಶವಿರುತ್ತದೆ.

3. ಬೆಳಸುವ ಅಣಬೆಗಳಿಗಿಂತ ನೈಸರ್ಗಿಕವಾಗಿ ಸಿಗುವ ಅಣಬೆಗಳಲ್ಲಿ ವಿಟಮಿನ್ ಡಿ ಅಧಿಕವಿರುತ್ತದೆ.

4. ಮೀನು ತಿನ್ನದವರು ಮೊಟ್ಟೆಯನ್ನು ತಿಂದರೆ ಅದರಲ್ಲಿ ಸ್ವಲ್ಪ ಪ್ರಮಾಣದ ವಿಟಮಿನ್ ಡಿ ದೊರೆಯುವುದು. ಮೊಟ್ಟೆಯ ಬಿಳಿ ಜತೆಗೆ ಅರಿಶಿಣ ಕೂಡ ತಿನ್ನಿ.

5. ಇನ್ನು ದನದ ಹಾಲು ಕುಡಿಯುವುದು, ಸೋಯಾ ಹಾಲು, ಕಿತ್ತಳೆ ಜ್ಯೂಸ್‌ ಇವುಗಳನ್ನು ಕೂಡ ಡಯಟ್‌ನಲ್ಲಿ ಸೇರಿಸಿ.
ಓಟ್‌ಮೀಲ್ ಹಾಗೂ ಧಾನ್ಯಗಳಲ್ಲಿ ಕೂಡ ಸ್ವಲ್ಪ ಪ್ರಮಾಣದಲ್ಲಿ ವಿಟಮಿನ್ ಡಿ ಇರುತ್ತದೆ.

Continue Reading

ಆರೋಗ್ಯ

Outdoor Exercise: ಹೊರಾಂಗಣ ವ್ಯಾಯಾಮ ಖಿನ್ನತೆಯನ್ನು ದೂರ ಮಾಡುವುದೇ?

Outdoor Exercise: ಆರೋಗ್ಯವಾಗಿರಲು ವ್ಯಾಯಾಮ ಬಹು ಮುಖ್ಯ. ವ್ಯಾಯಾಮ ಮಾಡುವ ಪ್ರತಿಯೊಂದು ವಿಧಾನಗಳು ಮಾನಸಿಕ ಆರೋಗ್ಯ ಕಾಪಾಡಲು ನಮಗೆ ಸಹಕಾರಿಯಾಗುತ್ತದೆ. ಆದರಲ್ಲೂ ಹೊರಗಣ ವ್ಯಾಯಾಮ ಮಾಡುವುದರಿಂದ ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಅದು ಹೇಗೆ ಗೊತ್ತೇ? ಈ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Outdoor Exercise
Koo

ಆರೋಗ್ಯವಾಗಿರಲು (healthy) ವ್ಯಾಯಾಮ (exercise) ಬಹುಮುಖ್ಯ. ಪ್ರತಿಯೊಂದು ರೀತಿಯ ವ್ಯಾಯಾಮವೂ ದೇಹ, ಮನಸ್ಸಿನ ಆರೋಗ್ಯಕ್ಕೆ ತನ್ನದೇ ಆದ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದರಲ್ಲೂ ಹೊರಾಂಗಣ ವ್ಯಾಯಾಮ ದೇಹಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೆ (mental health) ಬಹು ಪ್ರಯೋಜನಕಾರಿಯಾಗಿದೆ.

ಹೊರಾಂಗಣದಲ್ಲಿ ವ್ಯಾಯಾಮ (Outdoor Exercise) ಖಿನ್ನತೆಯ (depression) ಅಪಾಯವನ್ನು ಕಡಿಮೆ ಮಾಡುವುದು ಮಾತ್ರವಲ್ಲ ವಿವಿಧ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ತಜ್ಞರು. ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದರಿಂದ ಭಾವನಾತ್ಮಕ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹೊರಾಂಗಣ ವ್ಯಾಯಾಮ ಮಾಡುವುದರಿಂದ ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಅಂಶಗಳು.

ಇದನ್ನೂ ಓದಿ: Vampire Facial: ಹೆಣ್ಣುಮಕ್ಕಳೇ ಎಚ್ಚರ; ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ!


ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು

ಸೂರ್ಯನ ಬೆಳಕು ನಮ್ಮ ದೇಹದ ಸಿರೊಟೋನಿನ್ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನರಗಳ ಯೋಗಕ್ಷೇಮ ಮತ್ತು ಸಂತೋಷದ ಭಾವನೆಗಳಿಗೆ ಸೂರ್ಯನ ಬೆಳಕು ಸಾಕಷ್ಟು ಕೊಡುಗೆ ನೀಡುತ್ತದೆ. ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (ಎಸ್‌ಎಡಿ) ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಸಾಮಾನ್ಯವಾಗಿ ಮನಸ್ಥಿತಿಯನ್ನು ಸುಧಾರಿಸುತ್ತದೆ.

ವಿಟಮಿನ್ ಡಿ ಉತ್ಪಾದನೆ

ಸೂರ್ಯನ ಬೆಳಕಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಅನ್ನು ಉತ್ಪಾದಿಸಲು ಚರ್ಮಕ್ಕೆ ಉತ್ತೇಜಿನ ಸಿಕ್ಕಂತಾಗುತ್ತದೆ. ಮೆದುಳಿನ ಕಾರ್ಯವನ್ನು ಒಳಗೊಂಡಂತೆ ಒಟ್ಟಾರೆ ಆರೋಗ್ಯಕ್ಕೆ ನಿರ್ಣಾಯಕವಾಗಿದೆ. ಕಡಿಮೆ ಮಟ್ಟದ ವಿಟಮಿನ್ ಡಿ ಖಿನ್ನತೆ ಮತ್ತು ಇತರ ಮಾನಸಿಕ ಅಸ್ವಸ್ಥತೆಗಳನ್ನು ದೂರ ಮಾಡುತ್ತದೆ.

ದೈಹಿಕ ಚಟುವಟಿಕೆ

ವ್ಯಾಯಾಮ ಎಂಡಾರ್ಫಿನ್ ಗಳನ್ನು ಬಿಡುಗಡೆ ಮಾಡುತ್ತದೆ. ಮೆದುಳಿನಲ್ಲಿ ನೈಸರ್ಗಿಕ ನೋವು ನಿವಾರಕಗಳು ಮತ್ತು ಮೂಡ್ ಎಲಿವೇಟರ್ ಗಳಾಗಿ ಇದು ಕಾರ್ಯನಿರ್ವಹಿಸುವ ರಾಸಾಯನಿಕಗಳು. ಹೊರಾಂಗಣ ವ್ಯಾಯಾಮವು ಚಲನೆ ಮತ್ತು ದೈಹಿಕ ಪರಿಶ್ರಮವನ್ನು ಉತ್ತೇಜಿಸುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಸಾಮಾಜಿಕ ಸಂವಹನ

ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದು ಸಾಮಾನ್ಯವಾಗಿ ನಡಿಗೆ, ಜಾಗಿಂಗ್ ಅಥವಾ ತಂಡದ ಕ್ರೀಡೆಗಳಂತಹ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಇದನ್ನು ಇತರರೊಂದಿಗೆ ಮಾಡಬಹುದಾಗಿದೆ. ಮಾನಸಿಕ ಆರೋಗ್ಯಕ್ಕೆ ಸಾಮಾಜಿಕ ಸಂವಹನವು ಅತ್ಯಗತ್ಯ. ಏಕೆಂದರೆ ಇದು ಒಂಟಿತನದ ಭಾವನೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ.


ಪ್ರಕೃತಿಯೊಂದಿಗೆ ಸಂಪರ್ಕ

ಪರಿಸರದ ಮಧ್ಯೆ ಇರುವುದು ಮನಸ್ಸನ್ನು ಶಾಂತಗೊಳಿಸುತ್ತದೆ. ಹೊರಾಂಗಣ ವ್ಯಾಯಾಮವನ್ನು ಉದ್ಯಾನವನ, ಅರಣ್ಯ ಅಥವಾ ಕಡಲತೀರದಲ್ಲಿ ಅಥವಾ ಮನೆಯ ಬಾಲ್ಕನಿಯಲ್ಲಿ ಮಾಡುವುದರಿಂದ ಪ್ರಕೃತಿಯ ದೃಶ್ಯಗಳು, ಶಬ್ದಗಳು ಮತ್ತು ವಾಸನೆಗಳು ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಒತ್ತಡ ಕಡಿಮೆ ಮಾಡುವುದು

ಹೊರಾಂಗಣ ವ್ಯಾಯಾಮವು ಮನಸ್ಸಿಗೆ ಸಾವಧಾನತೆಯನ್ನು ಒದಗಿಸುತ್ತದೆ. ಯಾಕೆಂದರೆ ಇದು ನಮ್ಮ ಸುತ್ತಮುತ್ತಲಿನ ಮತ್ತು ದೈಹಿಕ ಸಂವೇದನೆಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಸಾವಧಾನತೆಯು ಒತ್ತಡ ಮಟ್ಟವನ್ನು ಕಡಿಮೆ ಮಾಡಲು ಮತ್ತು ಮನಸ್ಸಿನ ಶಾಂತಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ.

ಹೊಸ ಅನುಭವ

ಹೊರಾಂಗಣದಲ್ಲಿ ವ್ಯಾಯಾಮವು ದೃಶ್ಯಾವಳಿಗಳ ಬದಲಾವಣೆ ಹೊಸ ಅನುಭವಗಳನ್ನು ನೀಡುತ್ತದೆ. ಇದು ಒಳಾಂಗಣ ಜೀವನಕ್ರಮಗಳ ಏಕತಾನತೆಯನ್ನು ಹೋಗಲಾಡಿಸುತ್ತದೆ. ವ್ಯಾಯಾಮದ ದಿನಚರಿಗಳಲ್ಲಿನ ವೈವಿಧ್ಯತೆಯು ಬೇಸರವನ್ನು ದೂರ ಮಾಡುತ್ತದೆ ಮತ್ತು ಹೆಚ್ಚಿನ ಪ್ರೇರಣೆಯನ್ನು ನೀಡುತ್ತದೆ.


ಉತ್ತಮ ನಿದ್ರೆ

ನಿಯಮಿತ ವ್ಯಾಯಾಮವನ್ನು ವಿಶೇಷವಾಗಿ ಹೊರಾಂಗಣದಲ್ಲಿ ಮಾಡಿದಾಗ ಉತ್ತಮ ನಿದ್ರೆ ಆವರಿಸುವುದು. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು. ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಅತ್ಯಗತ್ಯ, ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸ್ವಾಭಿಮಾನವನ್ನು ಹೆಚ್ಚಿಸುತ್ತದೆ

ಹೊರಾಂಗಣ ವ್ಯಾಯಾಮದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತದೆ. ಇದರಿಂದ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಸಾಧನೆ ಮತ್ತು ಸಮರ್ಥ ಭಾವನೆಯು ಖಿನ್ನತೆಗೆ ಸಂಬಂಧಿಸಿದ ನಿಷ್ಪ್ರಯೋಜಕತೆ ಅಥವಾ ಅಸಮರ್ಪಕತೆಯ ಭಾವನೆಗಳನ್ನು ಹೋಗಲಾಡಿಸುತ್ತದೆ.

ನಕಾರಾತ್ಮಕ ಆಲೋಚನೆಗಳಿಂದ ಮುಕ್ತಿ

ಹೊರಾಂಗಣ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ಖಿನ್ನತೆಗೆ ಕಾರಣವಾಗುವ ಒತ್ತಡಗಳು ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಾಗಬಹುದು. ದೈಹಿಕ ಚಟುವಟಿಕೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವುದರಿಂದ ಮನಸ್ಸು ನಕಾರಾತ್ಮಕ ಯೋಚನೆಗಳನ್ನು ಮಾಡುವುದನ್ನು ಬಿಡುತ್ತದೆ.

Continue Reading

ಆರೋಗ್ಯ

Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಸುಡು ಬೇಸಿಗೆ ಸಹಿಸಲಸಾಧ್ಯ ಎಂಬಂತಾಗಿದೆ. ಏನೂ ತಿನ್ನುವುದೇ ಬೇಡ, ತಂಪಾಗಿ ಕುಡಿಯುವುದಕ್ಕೆ ಇದ್ದರೆ ಸಾಕು ಎನ್ನುವ ಈ ದಿನಗಳಲ್ಲಿ ದೇಹ ಬಳಲದಂತೆ ಕಾಪಾಡುವುದು ಹೇಗೆ? ಇಲ್ಲಿವೆ ಹಲವು ರೀತಿಯ ಆರೋಗ್ಯಕರ ಪೇಯಗಳು. ಇವು ಬೇಸಿಗೆಯ (Drinks for Summer) ದಾಹ ನೀಗಿಸುತ್ತವೆ. ಮಾತ್ರವಲ್ಲ, ಆರೋಗ್ಯಕ್ಕೂ ಹಿತಕರ.

VISTARANEWS.COM


on

Drinks for Summer
Koo

ʻಅಯ್ಯೋ, ಊಟವೂ ಬೇಡ, ತಿಂಡಿಯೂ ಬೇಡʼ ಎಂದು ಈ ದಿನಗಳಲ್ಲಿ ಯಾರಾದರೂ ಹೇಳಿದರೆ, ಅವರು ಉಪವಾಸದಲ್ಲಿದ್ದಾರೆ ಎಂದು ಭಾವಿಸುವ ಅಗತ್ಯವಿಲ್ಲ. ಈ ಉರಿ ಸೆಕೆಯಲ್ಲಿ ತಿನ್ನುವುದಕ್ಕೇನೂ ಬೇಡ, ತಂಪಾಗಿಡುವಂಥ ಪೇಯಗಳು ಮಾತ್ರವೇ ಸಾಕು ಎಂಬುದು ಅವರ ಭಾವವಾಗಿರುತ್ತದೆ. ಸುಳ್ಳೇನಲ್ಲ, ಈ ಸುಡುವ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡುವಂಥ ಪೇಯಗಳು ಇದ್ದಷ್ಟಕ್ಕೂ ಬೇಕೆನಿಸುತ್ತದೆ. ಹಾಗೆಂದು ಸದಾ ಕಾಲ ನೀರು ಕುಡಿಯಲೂ ಸಾಧ್ಯವಿಲ್ಲ. ದೇಹಕ್ಕೆ ಪೋಷಣೆಯನ್ನೂ ನೀಡಿ, ನೀರಡಿಕೆಯನ್ನೂ ಹೋಗಲಾಡಿಸುವಂಥ ಒಂದಿಷ್ಟು ಪೇಯಗಳು (Drinks for Summer) ಇಲ್ಲಿವೆ. ನಿಮಗೆ ಯಾವುದಿಷ್ಟ?

Drinking warm water with a little lemon juice on an empty stomach in the morning is beneficial for health Benefits Of Lemon Water

ನಿಂಬೆ ಪಾನಕ

ವಿಟಮಿನ್‌ ಸಿ ಹೇರಳವಾಗಿರುವ ಈ ಪಾನಕಕ್ಕೆ ಸಿಹಿಯನ್ನು ಬೆರೆಸದೆಯೇ ಸೇವಿಸಲೂಬಹುದು. ಬೆಲ್ಲ, ಏಲಕ್ಕಿಯಂಥವನ್ನು ಸ್ವಲ್ಪ ಸೇರಿಸಿಕೊಂಡರೆ, ಈ ಚೇತೋಹಾರಿಯಾದ ಪಾನಕ ದೇಹವನ್ನು ತಂಪಾಗಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ, ರೋಗನಿರೋಧಕ ಶಕ್ತಿಗೆ ಇಂಬು ದೊರೆಯುತ್ತದೆ.

ಇನ್ಫ್ಯೂಸ್ಡ್‌ ವಾಟರ್

ಹೆಸರು ನೋಡಿ ಏನೋ ಎಂದುಕೊಳ್ಳಬೇಕಿಲ್ಲ. ಅನಾನಸ್‌, ಸೌತೇಕಾಯಿ, ಪುದೀನಾ, ನಿಂಬೆಹುಲ್ಲು, ದ್ರಾಕ್ಷಿ ಮುಂತಾದ ನಿಮ್ಮಿಷ್ಟದ ಯಾವುದನ್ನಾದರೂ ಒಂದು ದೊಡ್ಡ ಕಪ್‌ನಷ್ಟು ತೆಗೆದುಕೊಂಡು ಮೂರು ಲೀಟರ್‌ ನೀರಿನ ಪಾತ್ರೆಗೆ ಬೆರೆಸಿ, ಕೆಲಕಾಲ ಇಡಿ. ವಿಭಿನ್ನ ರುಚಿ ಮತ್ತು ಘಮ ಹೊಂದಿರುವ ಈ ನೀರನ್ನು ದಿನವಿಡೀ ಕುಡಿಯಿರಿ. ಯಾವುದನ್ನೆಲ್ಲ ನೀರಿಗೆ ಬೆರೆಸುತ್ತೀರಿ ಎಂಬುದರ ಮೇಲೆ ಆ ನೀರಿನ ಸತ್ವವೇನು ಎಂಬುದು ನಿರ್ಧಾರವಾಗುತ್ತದೆ.

Coconut water Foods For Fight Against Dengue Fever

ಎಳನೀರು

ಇದಂತೂ ಬೇಸಿಗೆಯಲ್ಲಿ ಅಮೃತ ಸಮಾನ. ದೇಹಕ್ಕೆ ಬೇಕಾದ ಎಲೆಕ್ಟ್ರೊಲೈಟ್‌ಗಳನ್ನೆಲ್ಲ ನೈಸರ್ಗಿಕವಾಗಿ ಒದಗಿಸುವ ಅದ್ಭುತ ಪೇಯವಿದು. ಅದರಲ್ಲೂ ವ್ಯಾಯಾಮ ಮಾಡಿದ ನಂತರ, ಬಿಸಿಲಿನಲ್ಲಿ ತಿರುಗಾಡುವಾಗ, ಆಯಾಸವಾಗಿದ್ದಲ್ಲಿ ಒಂದು ಎಳನೀರು ಹೊಟ್ಟೆಗೆ ಬಿದ್ದರೂ, ದೇಹ ಚೇತರಿಸಿಕೊಳ್ಳುತ್ತದೆ. ಬೇಸಿಗೆ ತಣಿಯುವವರೆಗೂ ದಿನಕ್ಕೊಂದು ಎಳನೀರು ಖಂಡಿತ ಕುಡಿಯಬಹುದು.

ಎಳ್ಳಿನ ಪಾನಕ

ಒಂದು ದೊಡ್ಡ ಚಮಚ ಎಳ್ಳನ್ನು ಕೆಲಕಾಲ ನೆನೆಸಿ, ಏಲಕ್ಕಿಯೊಂದಿಗೆ ರುಬ್ಬಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ತಂಪಾದ ಹಾಲು, ಬೆಲ್ಲ ಬೆರೆಸಿ. ದೇಹ ತಣಿಯುವಷ್ಟು ಸೇವಿಸಿ. ಹೆಸರು ಕಾಳನ್ನೂ ಹೀಗೆಯೇ ನೆನೆಸಿ, ರುಬ್ಬಿ, ಪೇಯ ಮಾಡಿಕೊಂಡು ಸೇವಿಸಬಹುದು.

ragi drink

ರಾಗಿ ತಿಳಿ

ಯಾವುದೇ ಧಾನ್ಯಗಳ ತಿಳಿಗಳು ದೇಹಕ್ಕೆ ತಂಪೆರೆಯುತ್ತವೆ. ಕೇವಲ ರಾಗಿಯೆಂದಲ್ಲ, ಅಕ್ಕಿ, ಗೋದಿ ಮುಂತಾದ ನಿಮ್ಮಿಷ್ಟದ ಯಾವುದೇ ಧಾನ್ಯಗಳ ತಿಳಿಯನ್ನು ಈ ದಿನಗಳಲ್ಲಿ ಸೇವಿಸುವುದರಿಂದ ದಾಹವೂ ನೀಗುತ್ತದೆ, ದೇಹಕ್ಕೆ ಬೇಕಾದ ಪೋಷಣೆಯೂ ಲಭಿಸುತ್ತದೆ. ತಿನ್ನುವುದೇ ಬೇಡ ಎನ್ನುವ ಈ ದಿನಗಳಲ್ಲಿ ದೇಹ ಬಳಲದಂತೆ ಈ ಮೂಲಕ ಕಾಪಾಡಿಕೊಳ್ಳಬಹುದು.

ಬೂದುಗುಂಬಳದ ರಸ

ನೈಸರ್ಗಿಕವಾಗಿಯೇ ರಸಭರಿತವಾದಂಥ ತರಕಾರಿಯಿದು. ಇದನ್ನು ಕತ್ತರಿಸಿ ರುಬ್ಬಿ ರಸ ತೆಗೆದುಕೊಳ್ಳಿ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಮಾತ್ರವೇ ಅಲ್ಲ, ದಿನದ ಯಾವುದೇ ಹೊತ್ತಿನಲ್ಲಿ ಬೂದುಗುಂಬಳದ ರಸ ಸೇವಿಸುವುದರಿಂದ ದೇಹವನ್ನು ತಂಪಾಗಿಸಿಕೊಳ್ಳಬಹುದು. ಹಲವು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳನ್ನು ಶರೀರಕ್ಕೆ ಒದಗಿಸಬಹುದು.

ಹಣ್ಣಿನ ರಸಗಳು

ಕಲ್ಲಂಗಡಿಯಿಂದ ಹಿಡಿದು, ಅನಾನಸ್‌, ಕಿತ್ತಳೆ, ದ್ರಾಕ್ಷಿ ಮುಂತಾದ ಯಾವುದೇ ರಸಭರಿತ ಹಣ್ಣುಗಳನ್ನು ಜ್ಯೂಸರ್‌ಗೆ ಹಾಕಿದರೆ ಶುದ್ಧ ಹಣ್ಣಿನ ರಸ ಲಭ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಯಾವುದೇ ಕೃತಕ ಬಣ್ಣ, ಪರಿಮಳದ ಜ್ಯೂಸ್‌ ಖರೀದಿಸುವ ಬದಲು, ಇಂಥ ಶುದ್ಧ ಹಣ್ಣಿನ ರಸಗಳು ಆರೋಗ್ಯಕ್ಕೆ ಬೇಕಾದ ಆರೈಕೆಯನ್ನು ನೀಡುತ್ತವೆ.

buttermilk Drinks That Control Blood pressure

ಮಜ್ಜಿಗೆ

ತಂಪಾದ ಮಜ್ಜಿಗೆಯನ್ನಂತೂ ಹೇಗೆ ಬೇಕೆಂದರೆ ಹಾಗೆ ಒಗ್ಗಿಸಿಕೊಳ್ಳಬಹುದು. ಇಂಗು, ಜೀರಿಗೆ, ಉಪ್ಪು, ಕೊತ್ತಂಬರಿ ಸೊಪ್ಪು, ಹಸಿಶುಂಠಿ, ಹಸಿಮೆಣಸು… ಹೀಗೆ ತರಹೇವಾರಿ ಘಮಗಳೊಂದಿಗೆ ನೀರು-ಮಜ್ಜಿಗೆಯನ್ನು ಕುಡಿಯುವ ಕ್ರಮ ಹೆಚ್ಚಿನ ಕಡೆಗಳಲ್ಲಿ ರಾಮನವಮಿಗೆ ಮುನ್ನವೇ ಆರಂಭವಾಗಿರುತ್ತದೆ. ಹೊಟ್ಟೆಯ ಆರೋಗ್ಯವನ್ನೂ ಜೋಪಾನ ಮಾಡುವ ಮಜ್ಜಿಗೆ ದೇಹಕ್ಕೆ ಅಗತ್ಯ ಸತ್ವವನ್ನೂ ಒದಗಿಸುತ್ತದೆ.

ಬೀಜಗಳು

ಕಾಮಕಸ್ತೂರಿ, ಚಿಯಾ ಮುಂತಾದ ಸಣ್ಣ ಬೀಜಗಳನ್ನು ನೀರಲ್ಲಿ ನೆನೆಸಿ, ಒಂದೆರಡು ಗಂಟೆಗಳ ಕಾಲ ಬಿಡಿ. ಇದನ್ನು ಬೇಕಾದಷ್ಟು ಪ್ರಮಾಣದ ನೀರಿಗೆ ಹಾಗೆಯೇ ಬೆರೆಸಿ ಕುಡಿಯಬಹುದು ಅಥವಾ ಹಾಲಿನೊಂದಿಗೂ ಬೆರೆಸಿಕೊಳ್ಳಬಹುದು. ಇವು ದೇಹಕ್ಕೆ ಬೇಕಾದಂಥ ಮಹತ್ವದ ಸತ್ವಗಳನ್ನು ಒದಗಿಸಿ, ಸುಡು ಬೇಸಿಗೆಯಲ್ಲಿ ದೇಹ ತಂಪಾಗಿರುವಂತೆ ಮಾಡುತ್ತದೆ.

ಇದನ್ನೂ ಓದಿ: ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

Continue Reading
Advertisement
Tooth Decay
ಆರೋಗ್ಯ2 mins ago

Tooth Decay: ನಮ್ಮ ಈ ದುರಭ್ಯಾಸಗಳು ಹಲ್ಲಿನ ಹುಳುಕಿಗೆ ಕಾರಣವಾಗುತ್ತವೆ

dina bhavishya read your daily horoscope predictions for April 29 2024
ಭವಿಷ್ಯ1 hour ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

love jihad
ಕರ್ನಾಟಕ6 hours ago

Love Jihad Case: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್; ಬಾಲಕಿಯನ್ನು ಪುಸಲಾಯಿಸಿ ಕರೆತಂದ ಅನ್ಯಕೋಮಿನ ಯುವಕ!

BUS
ಕರ್ನಾಟಕ6 hours ago

ಚಿಕ್ಕಮಗಳೂರಿನ ದತ್ತಪೀಠದಲ್ಲಿ 100 ಅಡಿ ಆಳಕ್ಕೆ ಬಿದ್ದ ಪ್ರವಾಸಿ ಬಸ್;‌ ಬಾಲಕ ಸಾವು, 29 ಮಂದಿಗೆ ಗಾಯ

ತುಮಕೂರು6 hours ago

Sira News: ಬಿಸಿಲ ಬೇಗೆಗೆ ಮತ್ಸ್ಯಗಳ ಮಾರಣಹೋಮ; ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳ ಸಾವು

CSK vs SRH
ಕ್ರೀಡೆ7 hours ago

CSK vs SRH: ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ ಚೆನ್ನೈ; ಹೈದರಾಬಾದ್​ ವಿರುದ್ಧ 78 ರನ್​ ಅಮೋಘ ಜಯ

Notes
ಕರ್ನಾಟಕ7 hours ago

ಬೆಂಗಳೂರಿನಲ್ಲಿ ಆರ್‌ಬಿಐ ನಿಯಮ ಉಲ್ಲಂಘಿಸಿ ನೋಟು ನಗದೀಕರಣ; ಇಬ್ಬರಿಗೆ 4 ವರ್ಷ ಜೈಲು!

Narendra Modi
Lok Sabha Election 20247 hours ago

Narendra Modi: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಪ್ರಭಾವ ಸ್ಪಷ್ಟ; ಪುನರುಚ್ಚರಿಸಿದ ಮೋದಿ

cet exam karnataka exam authority
ಕರ್ನಾಟಕ7 hours ago

CET 2024: ಸಿಇಟಿ ಔಟ್ ಆಫ್ ಸಿಲಬಸ್ ಪ್ರಶ್ನೆ ಕೈ ಬಿಡಲು ನಿರ್ಧಾರ, ಮರು ಪರೀಕ್ಷೆ ಇಲ್ಲ; ಅಂಕ ಪರಿಗಣನೆ ಹೇಗೆ?

PM Narendra Modi
ಕರ್ನಾಟಕ7 hours ago

PM Narendra Modi: ನಾಳೆ ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಅಬ್ಬರದ ಪ್ರಚಾರಕ್ಕೆ ಸಿದ್ಧತೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 29 2024
ಭವಿಷ್ಯ1 hour ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202413 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202416 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202417 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202418 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ21 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

ಟ್ರೆಂಡಿಂಗ್‌