Intermittent Fasting: ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಮಾಡುವವರೇ ಹುಷಾರ್! ಈ ಸಂಗತಿ ಗೊತ್ತಿರಲಿ - Vistara News

ಆರೋಗ್ಯ

Intermittent Fasting: ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಮಾಡುವವರೇ ಹುಷಾರ್! ಈ ಸಂಗತಿ ಗೊತ್ತಿರಲಿ

Intermittent Fasting: ಸದ್ಯದಲ್ಲಿ ಟ್ರೆಂಡ್‌ನಲ್ಲಿರುವ ಒಂದು ಪದ್ಧತಿ ಎಂದರೆ ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌. ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌ ಕೂಡಾ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಬಹುದು. ದೈಹಿಕ, ಮಾನಸಿಕ ಜೊತೆಗೆ ಸಾಮಾಜಿಕ ಬದಲಾವಣೆಗಳನ್ನು ತರುವುದರಿಂದ ಇವು ಸಮಸ್ಯೆಯಾಗಿಯೂ ಪರಿಣಮಿಸಬಹುದು. ಬನ್ನಿ, ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌ನಿಂದ ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Intermittent Fasting
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇತ್ತೀಚೆಗಿನ ದಿನಗಳಲ್ಲಿ ಥರಹೇವಾರಿ ಡಯಟ್‌ ಪದ್ಧತಿಗಳನ್ನು ಜನರು ಅನುಸರಿಸುವುದು ಸಾಮಾನ್ಯವಾಗಿದೆ. ಬಗೆಬಗೆಯ ಡಯಟ್‌ ಚಾಲ್ತಿಯಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ನೂರಾರು ವಿಡಿಯೋಗಳಿಂದ ಟ್ರೆಂಡ್‌ಗಳಿಂದ ಪ್ರೇರಣೆಗೊಂಡು ವಯಸ್ಸಿನ ಹಂಗಿಲ್ಲದೆ ಎಲ್ಲರೂ ಬಗೆಬಗೆಯ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಆದರೆ, ಇದರಿಂದ ಲಾಭಗಳು ಮೇಲ್ನೋಟಕ್ಕೆ ಕಂಡರೂ ಅನೇಕ ಬಾರಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಇದು ಹೊತ್ತು ತರಬಹುದು. ಸದ್ಯದಲ್ಲಿ ಟ್ರೆಂಡ್‌ನಲ್ಲಿರುವ ಒಂದು ಪದ್ಧತಿ ಎಂದರೆ ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌. ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌ ಕೂಡಾ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಬಹುದು. ದೈಹಿಕ, ಮಾನಸಿಕ ಜೊತೆಗೆ ಸಾಮಾಜಿಕ ಬದಲಾವಣೆಗಳನ್ನು ತರುವುದರಿಂದ ಇವು ಸಮಸ್ಯೆಯಾಗಿಯೂ ಪರಿಣಮಿಸಬಹುದು. ಬನ್ನಿ, ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌ನಿಂದ (Intermittent Fasting) ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು ಎಂಬುದನ್ನು ನೋಡೋಣ.

Concept of Healthy Intermittent Fasting
Concept of Healthy Intermittent Fasting
  • ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಪದ್ಧತಿಯಲ್ಲಿ ಸೀಮಿತ ಅವಧಿಯಲ್ಲಿ ಮಾತ್ರ ಆಹಾರ ಸೇವನೆ ಮಾಡುವ ಕಾರಣದಿಂದ ಬಹಳ ಸಾರಿ ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ಪೋಷಕಾಂಶಗಳ ಪೂರೈಕೆ ಸಾಧ್ಯವಾಗಲಿಕ್ಕಿಲ್ಲ. ಮುಖ್ಯವಾಗಿ ಕ್ಯಾಲ್ಶಿಯಂ, ಕಬ್ಬಿಣಾಂಶ, ವಿಟಮಿನ್‌ ಡಿ ಇತ್ಯಾದಿಗಳು ದೇಹಕ್ಕೆ ಅಗತ್ಯವಿದ್ದಷ್ಟು ಬೇಕೇ ಬೇಕು. ಈ ಪದ್ಧತಿಯಲ್ಲಿ ಇಂತಹ ಮುಖ್ಯ ಪೋಷಕಾಂಶಗಳೇ ದೇಹಕ್ಕೆ ಸರಿಯಾಗಿ ಪೂರೈಕೆಯಾಗದೆ, ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು.
  • ಹಸಿವು ಹಾಗೂ ಬಯಕೆ ಹೆಚ್ಚಾಗಬಹುದು. ಹೆಚ್ಚು ಹೊತ್ತು ಉಪವಾಸದಲ್ಲಿರುವುದರಿಂದ ಹಸಿವೂ ಹೆಚ್ಚಾಗಬಹುದು. ಇದರಿಂದ ಅತಿಯಾಗಿ ತಿನ್ನುವ ಸಾಧ್ಯತೆಗಳಿವೆ. ಇದು ಅನಾರೋಗ್ಯಕರ ಆಹಾರಾಭ್ಯಾಸಗಳನ್ನೂ, ಜಂಕ್‌ ಆಹಾರದ ಆಯ್ಕೆಯನ್ನೂ ಮಾಡಲು ಪ್ರೇರಣೆಯಾಗಬಹುದು. ಹಸಿವಿನಿಂದಾಗಿ ಏಕಾಗ್ರತೆಯ ಕೊರೆತೂ ಆಗಬಹುದು.
  • ದೇಹದ ಒಟ್ಟು ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡಬಹುದು. ಕ್ಯಾಲರಿ ಇದ್ದಕ್ಕಿದ್ದಂತೆ ಕಡಿಮೆಯಾದಾಗ ದೇಹ ಬಳಲಬಹುದು. ಇದರಿಂದ ತೂಕ ಇಳಿಕೆಯಾದರೂ, ಹೆಚ್ಚು ಕಾಲ ನಿಲ್ಲದಿರಬಹುದು.
  • ಉಪವಾಸದ ಸಂದರ್ಭ ದೇಹದಲ್ಲಿ ಮಾಂಸಖಂಡಗಳ ನಷ್ಟವಾಗುತ್ತದೆ. ಇದರಿಂದ ಶಕ್ತಿ, ಸಾಮರ್ಥ್ಯ ಕುಂಠಿತವಾಗುತ್ತದೆ. ಇದು ನಮ್ಮ ಕೆಲಸ ಕಾರ್ಯಗಳ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ.
  • ಎಲ್ಲಕ್ಕಿಂತ ಮುಖ್ಯವಾಗಿ ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಉದ್ವೇಗವನ್ನು ಹುಟ್ಟುಹಾಕಬಹುದು. ಊಟದ ಸಮಸ್ಯೆಯನ್ನು ಹೊಂದಿದ ಮಂದಿಗೆ ಇದು ಇನ್ನಷ್ಟು ಮಾನಸಿಕವಾಗಿ ಪರಿಣಾಮ ಬೀರಬಹುದು. ಕೆಟ್ಟ ನಡತೆಗಳಿಗೂ ಕಾರಣವಾಗಬಹುದು.
  • ರಕ್ತದಲ್ಲಿರುವ ಸಕ್ಕರೆಯ ಮಟ್ಟದಲ್ಲಿ ಏರುಪೇರಾಗಬಹುದು. ಮಧುಮೇಹ ಹಾಗೂ ಹೈಪೋಗ್ಲಿಸೇಮಿಯಾದಂತಹ ಸಮಸ್ಯೆ ಇರುವ ಮಂದಿಗೆ ಇದು ಇನ್ನಷ್ಟು ಮಾರಕವಾಗಬಹುದು. ತಲೆಸುತ್ತು, ಸುಸ್ತು ಸೇರಿದಂತೆ ಅನೇಖ ಸಮಸ್ಯೆಗಳು ತಲೆದೋರಬಹುದು. ಹೊತ್ತು ಹೊತ್ತಿಗೆ ಸರಿಯಾಗಿ ಉಣ್ಣುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು.
  • ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ಮೇಲೂ ಪರಿಣಾಮ ಬೀರಬಹುದು. ಭಾರತದಂತಹ ಕೌಟುಂಬಿಕ ವ್ಯವಸ್ತೆ ಗಟ್ಟಿ ಇರುವ, ಬಗೆಬಗೆಯ ಧರ್ಮಗಳ ಬಗೆಬಗೆಯ ಹಬ್ಬಗಳ ಆಚರಣೆಯ ನಾಡಲ್ಲಿ ಇಂತಹುಗಳು ಕೆಲವೊಮ್ಮೆ ಸೈದ್ಧಾಂತಿಕ ಸಮಸ್ಯೆಗಳನ್ನೂ ಈಡು ಮಾಡಿ ಇದು ಮಾನಸಿಕ ಪರಿಣಾಮ ಬೀರಬಹುದು.
  • ದೀರ್ಘಕಾಲಿಕವಾಗಿ ನೋಡಿದರೆ, ಈ ಬಗೆಯ ಆಹಾರ ಪದ್ಧತಿಯನ್ನು ಮುಂದುವರಿಸುವುದು ಬಹಳ ಕಷ್ಟ. ಕೆಲಕಾಲ ಆಡಿದರೂ ಕ್ರಮೇಣ ಪಾಲಿಸಲಾಗ ಪದ್ಧತಿ ಇದು. ಹಾಗಾಗಿ, ಪರಿಣಾಮವೂ ದೀರ್ಘಕಾಲಿಕವಾಗಿಲ್ಲದಿರಬಹುದು.

ಇದನ್ನೂ ಓದಿ: Ceramic Cookware: ಪಿಂಗಾಣಿ ಪಾತ್ರೆಗಳನ್ನು ಅಡುಗೆಗೆ ಬಳಸಿದರೆ ಏನಾಗುತ್ತದೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Ceramic Cookware: ಪಿಂಗಾಣಿ ಪಾತ್ರೆಗಳನ್ನು ಅಡುಗೆಗೆ ಬಳಸಿದರೆ ಏನಾಗುತ್ತದೆ?

Ceramic Cookware: ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಪಿಂಗಾಣಿ ಪಾತ್ರೆಗಳು ಈಗಲೂ ತಮ್ಮ ಹೊಳಪು ಕಳೆದುಕೊಂಡಿಲ್ಲ! ಆದರೆ ಅವು ಆರೋಗ್ಯಕ್ಕೆ ಸುರಕ್ಷಿತವೇ? ಅವುಗಳನ್ನು ಸುರಕ್ಷಿತವಾಗಿ ಬಳಸುವ ವಿಧಾನ ಎಂಬುದು ಇದೆಯೇ? ಎಲ್ಲ ಪಿಂಗಾಣಿ ಪಾತ್ರೆಗಳನ್ನೂ ಅಡುಗೆಗೆ ಬಳಸಬಹುದೇ? ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಈ ಲೇಖನದಲ್ಲಿದೆ ಉತ್ತರ.

VISTARANEWS.COM


on

Ceramic Cookware
Koo

ಸೆರಾಮಿಕ್‌ ವಸ್ತುಗಳ ಬಳಕೆ (Ceramic Cookware) ಇಂದು ನಿನ್ನೆಯದಲ್ಲ. ಇದಕ್ಕೆ ಕ್ರಿಸ್ತ ಪೂರ್ವದ ದಿನಗಳ ಇತಿಹಾಸವಿದೆ. ಈ ವಸ್ತುಗಳನ್ನು ಅಡುಗೆ ಮಾಡುವುದಕ್ಕೂ ಬಳಸುತ್ತಿದ್ದ ಇತಿಹಾಸವಿದೆ. ಈಗಿನ ಅಡುಗೆ ಮನೆಗಳಲ್ಲಿ ಸ್ಟೀಲ್‌ ಮತ್ತು ನಾನ್‌ಸ್ಟಿಕ್‌ ಪಾತ್ರೆಗಳದ್ದೇ ದರ್ಬಾರು. ಹಳೆಯ ಕಾಲದ ಮಣ್ಣಿನ ಮತ್ತು ಪಿಂಗಾಣಿ ಪಾತ್ರೆಗಳ ವೈಭವ ನಿಧಾನಕ್ಕೆ ಮರುಕಳಿಸೀತೆ ಎನ್ನುವುದನ್ನು ಕಾದು ನೋಡಬೇಕಷ್ಟೆ. ಸ್ಟೀಲ್‌ ಪಾತ್ರೆಗಳು ಎಲ್ಲ ರೀತಿಯಿಂದಲೂ ಸುರಕ್ಷಿತ. ಆದರೆ ನಾನ್‌ಸ್ಟಿಕ್‌ ಪಾತ್ರೆಗಳ ಬಗ್ಗೆ ಸಾಕಷ್ಟು ಅಪಸ್ವರಗಳಿವೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದೇ ಹೇಳಲಾಗುತ್ತದೆ. ಗಾಜಿನ ಪಾತ್ರೆಗಳು ಸುರಕ್ಷಿತ ಹೌದಾದರೂ ಒಡೆಯುವ ಅಪಾಯವನ್ನು ಜೊತೆಗಿಟ್ಟುಕೊಂಡೇ ಬಳಸಬೇಕು. ಮಣ್ಣಿನ ಪಾತ್ರೆಗಳು ಆರೋಗ್ಯಕ್ಕೆ ಒಳ್ಳೆಯವಾದರೂ ನಿರ್ವಹಣೆಗೆ ತೊಡಕಾಗಬಹುದು. ಕಬ್ಬಿಣದ ಕಡಾಯಿಗಳು ಭಾರ ಹೆಚ್ಚು. ತಾಮ್ರ, ಕಂಚಿನವು ಈಗ ದೊರೆಯುವುದೇ ಕಡಿಮೆ. ಈಗ ಸೆರಾಮಿಕ್‌ ಪಾತ್ರೆಗಳ ವಿಷಯಕ್ಕೆ ಬಂದರೆ, ಅವುಗಳ ಬಳಕೆ ಸುರಕ್ಷಿತವೇ? ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲವೇ?

Female shopping ceramic cookware at workshop
Female shopping ceramic cookware at workshop

ಸೆರಾಮಿಕ್‌ ಸುರಕ್ಷಿತವೇ?

ಉನ್ನತ ಗುಣಮಟ್ಟದ ಸೆರಾಮಿಕ್‌ಗಳು ಸಾಮಾನ್ಯವಾಗಿ ಆರೋಗ್ಯಕ್ಕೆ ಸುರಕ್ಷಿತವೇ, ಅನುಮಾನವಿಲ್ಲ. ಇವುಗಳಲ್ಲಿ PTFE (polytetrafluoroethylene) ಮತ್ತು PFOA (perfluorooctanoic acid) ಇರುವುದಿಲ್ಲ. (ಈ ರಾಸಾಯನಿಕಗಳು ಸಾಮಾನ್ಯವಾಗಿ ನಾನ್‌ಸ್ಟಿಕ್‌ನಂಥ ಪಾತ್ರೆಗಳಲ್ಲಿ ಕಾಣುವಂಥವು) ಸೀಸ್‌, ಕ್ಯಾಡ್ಮಿಯಂ ಮುಂತಾದ ಹಾನಿಕಾರ ಲೋಹಗಳೂ ಸೆರಾಮಿಕ್‌ನಲ್ಲಿ ಇರಬಾರದು. ಇದರಲ್ಲಿರುವ ಸಿಲಿಕಾದಂಥ ವಸ್ತುಗಳಿಂದ ಆರೋಗ್ಯಕ್ಕೆ ಸಮಸ್ಯೆಗಳಿಲ್ಲ. ಆದರೂ ಕೆಲವೊಂದು ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಅಗತ್ಯ.
ಸುಂದರವಾಗಿ ಕಾಣಲೆಂದು ಕೆಲವು ಸೆರಾಮಿಕ್‌ ಪಾತ್ರೆಗಳ ಮೇಲ್ಮೈಗೆ ಸೀಸ, ಕ್ಯಾಡ್ಮಿಯಂ, ಬ್ಯಾರಿಯಂ ಮುಂತಾದ ಹಾನಿಕಾರಕ ಲೋಹಗಳನ್ನು ಹಾಕಲಾಗುತ್ತದೆ. ಹಾಗಾಗಿ ಸೆರಾಮಿಕ್‌ ಗುಣಮಟ್ಟದ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಅಗತ್ಯ. ಕಡಿಮೆ ಬೆಲೆಯಲ್ಲಿ, ಯಾವ್ಯಾವುದೋ ಅಂಗಡಿಗಳಲ್ಲಿ ದೊರೆಯುವ ಸೆರಾಮಿಕ್‌ಗಳನ್ನು ಖರೀದಿಸಿ ಬಳಸುವ ಬದಲು, ಗುಣಮಟ್ಟಕ್ಕೆ ಬೆಲೆ ನೀಡಿ. ಅಲಂಕಾರಕ್ಕೆಂದು ಹಳದಿ, ಕೆಂಪು, ನೀಲಿ ಮುಂತಾದ ಕಡು ಬಣ್ಣಗಳನ್ನು ಉಪಯೋಗಿಸಿದ ಪಾತ್ರೆಗಳಲ್ಲಿ ಲೆಡ್‌ ಮತ್ತು ಕಟು ಲೋಹಗಳೂ ಇರಬಹುದು, ಜಾಗ್ರತೆ.

ಇದನ್ನೂ ಓದಿ: High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

ಸೆರಾಮಿಕ್‌ ಬಳಕೆ

ಇವುಗಳನ್ನು ಬಳಸುವಾಗ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ. ಅವುಗಳನ್ನು ಉಪಯೋಗಿಸುವಾಗ ಕುಕ್ಕಿ, ಕೆರೆದು, ಪರಚುವಂತಿಲ್ಲ. ಇವುಗಳ ಮೇಲ್ಮೈ ಹಾಳಾದರೆ ಬಳಕೆಗೆ ಸುರಕ್ಷಿತ ಅಲ್ಲ ಎಂದೇ ಭಾವಿಸಬೇಕು. ಹಾಗಾಗಿ ಚೂಪಾದ ವಸ್ತುಗಳನ್ನು ಅಡುಗೆ ಮಾಡುವಾಗ ಬಳಸಬಾರದು. ಇವುಗಳು ಕ್ರಮೇಣ ಬಿಸಿ ಮಾಡಿ. ಒಮ್ಮೆಲೇ ಅತಿ ಹೆಚ್ಚು ಬಿಸಿಗೆ ಒಡ್ಡಬೇಡಿ. ಅಲ್ಲದಿದ್ದರೂ, ಮಧ್ಯಮ ಉರಿಗಿಂತ ಹೆಚ್ಚಿನ ಉರಿಯನ್ನು ಸೋಕಿಸಬೇಡಿ. ಬೇಕಿಂಗ್‌ ವಸ್ತುಗಳಾದರೆ 180 ಡಿ. ಗಿಂತ ಹೆಚ್ಚು ತಾಪಮಾನಕ್ಕೆ ಅವು ಯೋಗ್ಯವೇ ಎಂಬುದನ್ನು ಆಯಾ ವಸ್ತುವಿನ ಮ್ಯಾನುವಲ್‌ನಲ್ಲಿ ಪರಿಶೀಲಿಸಿ. ಎಲ್ಲ ಪಿಂಗಾಣಿಗಳೂ ಒಲೆ ಮೇಲೆ ಇರಿಸಲು ಬರುವುದಿಲ್ಲ. ʻಸೇಫ್‌ ಫಾರ್‌ ಸ್ಟೋವ್‌ ಟಾಪ್‌ʼ ಎಂಬ ಒಕ್ಕಣೆ ಅದರ ಪ್ಯಾಕಿಂಗ್‌ ಮೇಲಿಗೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಕೆಲವೊಮ್ಮೆ ಬಿಸಿ ಆಹಾರಗಳನ್ನು ಸರ್ವ್‌ ಮಾಡಲು ಮಾತ್ರವೇ ಬಳಸುವಂಥದ್ದಾಇರುತ್ತದೆ. ಬಿಸಿಯಾದ ಪಾತ್ರೆಗೆ ತಣ್ಣನೆಯ ನೀರು ಸುರಿಯಬೇಡಿ. ಇದರಿಂದ ಮೇಲ್ಮೈಗೆ ಹಾನಿಯಾಗುತ್ತದೆ. ಸ್ವಚ್ಛ ಮಾಡುವಾಗ ಸೌಮ್ಯವಾದ ಸೋಪಿನ ಜೊತೆಗೆ ಸ್ಪಾಂಜ್‌ ಬಳಸಿ. ಕಠೋರವಾದ ಡಿಟರ್ಜೆಂಟ್‌ಗಳು ಇದಕ್ಕೆ ಹೇಳಿಸಿದ್ದಲ್ಲ. ಡಿಶ್‌ವಾಷರ್‌ಗೆ ಹಾಕುವ ಮುನ್ನ, ಅದನ್ನು ಹಾಗೆ ಮಾಡಬಹುದೇ ಎಂಬ ಸೂಚನೆಯನ್ನು ಮೊದಲು ಗಮನಿಸಿ. ಸೆರಾಮಿಕ್‌ ಮೇಲೆ ಕೆಲವೊಮ್ಮೆ ನಾನ್‌ಸ್ಟಿಕ್‌ ಮೇಲ್ಮೈ ಸಹ ಇರಬಹುದು. ಉಳಿದ ನಾನ್‌ಸ್ಟಿಕ್‌ಗಳಂತೆ ಇವು ವಾತಾವರಣಕ್ಕೆ ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುವುದಿಲ್ಲ. ಆದರೆ ಇದನ್ನೂ ಸಹ ಅತಿಯಾಗಿ ಬಿಸಿ ಮಾಡದೆ, ಮೇಲ್ಮೈ ಹಾಳಾಗದಂತೆ ಜಾಗ್ರತೆಯಿಂದ ಬಳಸಬೇಕು. ಸ್ವಚ್ಛಗೊಳಿಸುವಾಗಲೂ ನಾಜೂಕಾಗಿಯೇ ಆಗಬೇಕೇ ಹೊರತು, ಒರಟಾದ ವಸ್ತುಗಳಿಂದ ಉಜ್ಜುವಂತಿಲ್ಲ. ಇವುಗಳನ್ನು ಸ್ಟೋರ್‌ ಮಾಡುವಾಗಲೂ ಸ್ವಚ್ಛವಾಗಿ ಒರೆಸಿಯೇ ಕಪಾಟಿನೊಳಗಿಡಿ.

Continue Reading

ಆರೋಗ್ಯ

Whiten Your Yellow Teeth: ಈ ಆಹಾರಗಳು ನಿಮ್ಮ ಹಲ್ಲುಗಳ ಬಣ್ಣಗೆಡಿಸುತ್ತವೆ ಎನ್ನುವುದು ಗೊತ್ತಿದೆಯೆ?

Whiten Your Yellow Teeth: ನಾವು ತಿನ್ನುವ ಆಹಾರಗಳು, ಕುಡಿಯುವ ಪೇಯಗಳು, ಬಾಯಿ ಸ್ವಚ್ಛಗೊಳಿಸುವ, ಗೊಳಿಸದಿರುವ ನಮ್ಮ ಅಭ್ಯಾಸಗಳು, ಕೆಲವೊಂದು ಔಷಧಗಳು- ಹೀಗೆ ಹಲವು ಕಾರಣಗಳಿಂದಾಗಿ ನಮ್ಮ ದಂತಪಂಕ್ತಿಯ ಬಣ್ಣ ಬದಲಾಗಬಹುದು. ಈ ಬಣ್ಣಗೇಡು ಹಲ್ಲುಗಳೊಂದಿಗೆ ನಗುವುದಕ್ಕೆ ಮುಜುಗರವಾಗಿ ಹೇಗ್ಹೇಗೋ ನಗುವವರು ಬಹಳ ಮಂದಿಯಿದ್ದಾರೆ. ಈ ಹಳದಿ ಹಲ್ಲುಗಳಿಗೆ ಆಹಾರಗಳ ಮೂಲಕ ಪರಿಹಾರ ಇದೆಯೇ?

VISTARANEWS.COM


on

Whiten Your Yellow Teeth
Koo

ಹೀಗೊಂದು ಸನ್ನಿವೇಶವನ್ನು (Whiten Your Yellow Teeth) ಊಹಿಸಿಕೊಳ್ಳಿ- ಅದೊಂದು ಸುಂದರವಾದ ನಗು. ಆದರೆ ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವಂಥ ಅವಸ್ಥೆ. ಅಂದರೆ ಬಾಯಿ ಮುಚ್ಚಿಕೊಂಡಾಗ ಸುಂದರವಾಗಿ ಕಾಣುವ ನಗು, ಬಾಯಿ ಬಿಟ್ಟಾಕ್ಷಣ ಹಳದಿ ಬಣ್ಣದ ಹಲ್ಲುಗಳೊಂದಿಗೆ ರಾರಾಜಿಸುತ್ತದೆ! ಈ ಬಣ್ಣಗೇಡು ಹಲ್ಲುಗಳೊಂದಿಗೆ ನಗುವುದಕ್ಕೆ ಮುಜುಗರವಾಗಿ ಹೇಗ್ಹೇಗೋ ನಗುವವರು ಬಹಳ ಮಂದಿಯಿದ್ದಾರೆ. ಹೌದು, ಮನಸ್ಸು ನಿರ್ಮಲವಾಗಿದ್ದರೆ, ನಗುವೂ ಸ್ವಚ್ಛವೇ. ಆದರೆ ʻಹಲ್ಲು ಬಿಟ್ಟರೆ ಸಂತೋಷ, ಬಿಡದಿದ್ದರೆ ಇನ್ನೂ ಸಂತೋಷʼ ಎನ್ನುವ ಅವಸ್ಥೆಯಲ್ಲಿ ಫೋಟೋಗೆ ನಿಲ್ಲುವುದಾದರೂ ಹೇಗೆ? ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ಹಾಕಿದಾಗ ಒಬ್ಬರಲ್ಲ ಒಬ್ಬರು ಈ ಬಗ್ಗೆ ಕಮೆಂಟಿಸಿಬಿಟ್ಟರೆ, ಶೋಕದ ಮಹಾಪೂರವೇ ಹರಿಯುವುದಿಲ್ಲವೇ? ಹಳದಿ ಹಲ್ಲುಗಳಿಗೆ ಏನು ಪರಿಹಾರ? ನಾವು ತಿನ್ನುವ ಆಹಾರಗಳು, ಕುಡಿಯುವ ಪೇಯಗಳು, ಬಾಯಿ ಸ್ವಚ್ಛಗೊಳಿಸುವ/ ಗೊಳಿಸದಿರುವ ನಮ್ಮ ಅಭ್ಯಾಸಗಳು, ಕೆಲವೊಂದು ಔಷಧಗಳು- ಹೀಗೆ ಹಲವು ಕಾರಣಗಳಿಂದಾಗಿ ನಮ್ಮ ದಂತಪಂಕ್ತಿಯ ಬಣ್ಣ ಬದಲಾಗಬಹುದು. ಇದಕ್ಕೆ ಸುಲಭದ ಪರಿಹಾರವೆಂದರೆ ದಂತವೈದ್ಯರನ್ನು ಕಾಣುವುದು ಮತ್ತು ಹಲ್ಲುಗಳನ್ನು ಬಿಳಿ ಮಾಡಿಸಿಕೊಳ್ಳುವುದು. ಅನತಿ ಸಮಯದಲ್ಲಿ, ಬೇಗನೇ ದೊರೆಯುವ ಪರಿಹಾರವಿದು. ಆದರೆ ಇದು ದೂರಗಾಮಿ ಪರಿಹಾರವಲ್ಲ. ಕೆಲವು ದಿನಗಳ ನಂತರ ದಂತಪಂಕ್ತಿ ಮತ್ತೆ ಬಣ್ಣಗೆಡಬಹುದು. ಎಷ್ಟು ಬಾರಿ ದಂತ ವೈದ್ಯರ ಬಳಿ ಹೋಗಿ ದುಬಾರಿ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಲು ಸಾಧ್ಯ? ಇದಕ್ಕೆ ದೀರ್ಘಾವಧಿ ಪರಿಹಾರವಿಲ್ಲವೇ ಎಂಬುದೀಗ ವಿಷಯ. ಮಾತ್ರವಲ್ಲ, ಆಹಾರಗಳಿಂದ ಇದನ್ನು ನಿರ್ವಹಿಸಲು ಸಾಧ್ಯವಿಲ್ಲವೇ?
ಕೆಲವು ಆಹಾರಗಳು ನಮ್ಮ ಹಲ್ಲುಗಳ ಮೇಲೆ ದೀರ್ಘಕಾಲ ಉಳಿದು ಎನಾಮಲ್‌ ಕವಚಕ್ಕೆ ಹಾನಿ ತರುವುದು ಮಾತ್ರವಲ್ಲ, ಬಿಳಿಯ ಬಣ್ಣವನ್ನೂ ಹಾಳು ಮಾಡಬಲ್ಲವು. ಅಂಥ ಕೆಲವು ಆಹಾರಗಳ ಬಗ್ಗೆ ಜಾಗ್ರತೆ ಬೇಕು. ಇದಲ್ಲದೆ, ಇನ್ನು ಕೆಲವು ಆಹಾರಗಳು ದಂತಗಳ ಸ್ವಾಸ್ಥ್ಯವನ್ನು ಹೆಚ್ಚಿಸಬಲ್ಲವು. ಅಂಥವುಗಳನ್ನು ಮರೆಯದೇ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆಗ ಹೆಚ್ಚಿನ ರಾಸಾಯನಿಕಗಳ ಗೊಡವೆ ಇಲ್ಲದೆಯೇ ಸುಂದರ, ಸ್ವಚ್ಛ ನಗುವನ್ನು ನಿಮ್ಮದಾಗಿಸಿಕೊಳ್ಳಬಹುದು. ಎಂಥ ಆಹಾರಗಳು ಹಲ್ಲುಗಳಿಗೆ ಸೂಕ್ತವಲ್ಲ?

Selection of Colorful Sweets
Fruits and Vegetables Spilling from Paper Bag

ಸಕ್ಕರೆ ಮಾರಿಗಳು

ಅಂಟಾದ ಶುಗರ್‌ ಕ್ಯಾಂಡಿಗಳು, ಸೋಡಾ, ಫ್ರೂಟ್‌ ಜ್ಯೂಸ್‌ಗಳು ಈ ಸಾಲಿನಲ್ಲಿ ಮುಂಚೂಣಿಯಲ್ಲಿವೆ. ಇವುಗಳಲ್ಲಿರುವ ಸಕ್ಕರೆಯಂಶ ಹಲ್ಲಿನ ಮೇಲೆ ದೀರ್ಘ ಕಾಲ ಅಂಟಿಕೂತು ಬ್ಯಾಕ್ಟೀರಿಯಗಳನ್ನು ಕೂಗಿ ಕರೆಯುತ್ತದೆ. ಸೋಡಾಗಳಲ್ಲಿರುವ ಕಾರ್ಬನ್‌ ಅಂಶವು ಎನಾಮಲ್‌ ದುರ್ಬಲ ಮಾಡುವುದರಲ್ಲಿ ಸದಾ ಮುಂದು. ಇದರ ಫಲವಾಗಿ ಹಲ್ಲುಗಳ ಬಣ್ಣವೂ ಹಾಳಾಗುತ್ತದೆ.

ಸಿಟ್ರಸ್‌ ಹಣ್ಣುಗಳು

ದ್ರಾಕ್ಷಿ, ಕಿತ್ತಳೆ, ನಿಂಬೆಯಂಥ ಹುಳಿ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯವೆ. ಹಾಗೆ ನೋಡಿದರೆ ಹಲ್ಲುಗಳ ಆರೋಗ್ಯಕ್ಕೆ ಇವೇನೂ ಹಾಳಲ್ಲ. ಹೊಳಪಿಗೂ ಸಮಸ್ಯೆ ತರುವಂಥವಲ್ಲ. ಆದರೆ ಇವುಗಳನ್ನು ತಿಂದ ಮೇಲೆ ನೆನಪಿನಿಂದ ಬಾಯಿ ಸ್ವಚ್ಛ ಮಾಡಿಕೊಳ್ಳಲೇಬೇಕು. ಅದಿಲ್ಲದಿದ್ದರೆ ಇದರಲ್ಲಿರುವ ಆಮ್ಲೀಯ ಅಂಶಗಳು ದಂತಪಂಕ್ತಿಗಳಿಗೆ ಹಾನಿ ಮಾಡಬಹುದು.

tea cooffee

ಕಾಫಿ, ಚಹಾ

ಹಲ್ಲುಗಳನ್ನು ಬಣ್ಣಗೇಡು ಮಾಡುವುದರಲ್ಲಿ ಇವುಗಳದ್ದು ಎತ್ತಿದ ಕೈ. ದಂತಗಳ ಬಿಳಿಯ ಬಣ್ಣ ಹಾಳು ಮಾಡುವ ಗುಣ ಇವುಗಳಿಗೆ ಇದ್ದೇ ಇದೆ. ಜೊತೆಗೆ, ಇವನ್ನು ಕುಡಿದ ಮೇಲೆ ಬಾಯಿ ತೊಳೆಯುವ ಅಭ್ಯಾಸ ಹೆಚ್ಚಿನವರಿಗೆ ಇರುವುದಿಲ್ಲ. ಹಾಗಾಗಿ ಸಮಸ್ಯೆ ಹೆಚ್ಚುತ್ತದೆ. ಕೆಫೇನ್‌ ಮಿತವಾಗಿದ್ದರೆ ಹಲ್ಲುಗಳಿಗೂ ಒಳ್ಳೆಯದು.

ಒಳ್ಳೆಯದಾವುದು?

ಚೀಸ್‌, ಯೋಗರ್ಟ್‌ನಂಥವು ದಂತಸ್ವಾಸ್ಥ್ಯಕ್ಕೆ ಪೂರಕವಾದವು. ಕ್ಯಾಲ್ಶಿಯಂ, ಫಾಸ್ಫೇಟ್‌ ಮತ್ತು ಪ್ರೊಬಯಾಟಿಕ್ಸ್‌ ಹೊಂದಿರುವ ಈ ಆಹಾರಗಳು ಹಲ್ಲುಗಳ ಎನಾಮಲ್‌ ಬಲಪಡಿಸುತ್ತವೆ. ಬಾಯಲ್ಲಿ ಜೊಲ್ಲು ರಸದ ಉತ್ಪಾದನೆಗೆ ಪ್ರೋತ್ಸಾಹ ನೀಡಿ, ಹಲ್ಲಿನ ಮೇಲ್ಮೈಯಲ್ಲಿ ಅಂಟಿ ಕೂರುವ ಬ್ಯಾಕ್ಟೀರಿಯಗಳನ್ನು ಕಡಿಮೆ ಮಾಡುತ್ತವೆ. ಈ ಮೂಲಕ ಹಲ್ಲಿನ ಹೊಳಪಿಗೆ ಕಾರಣವಾಗುತ್ತವೆ.

Fruits and Vegetables Spilling from Paper Bag

ತರಕಾರಿಗಳು

ಕ್ಯಾರೆಟ್‌, ಹಸಿರು ಸೊಪ್ಪು-ತರಕಾರಿಗಳು ಹಲ್ಲುಗಳ ಆರೋಗ್ಯಕ್ಕೆ ಬೇಕಾದಂಥವು. ಕರುಂಕುರುಂ ತಿನ್ನಬಹುದಾದ ಕ್ಯಾರೆಟ್‌, ಸೆಲೆರಿಯಂಥವು ಹಲ್ಲುಗಳಿಗೆ ನೈಸರ್ಗಿಕ ಬ್ರಷ್‌ನಂತೆ ಕೆಲಸ ಮಾಡುತ್ತವೆ. ಜೊತೆಗೆ ಕ್ಯಾಲ್ಶಿಯಂನಂಥ ಖನಿಜಗಳು ಮತ್ತು ಫಾಲಿಕ್‌ ಆಮ್ಲಗಳನ್ನು ಹೇರಳವಾಗಿ ಹೊಂದಿರುವ ಹಸಿರು ಸೊಪ್ಪುಗಳಿಗೆ ಹಲ್ಲುಗಳು ಎಲ್ಲ ರೀತಿಯಲ್ಲೂ ನಳನಳಿಸುತ್ತವೆ.

ಇದನ್ನೂ ಓದಿ: Almonds Benefits: ಈ 9 ಕಾರಣಗಳಿಗಾಗಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸಬೇಕು!

ಹಣ್ಣುಗಳು

ಈ ಸಾಲಿನಲ್ಲಿ ಮುಂದೆ ನಿಲ್ಲುವುದು ಸ್ಟ್ರಾಬೆರಿ. ನೈಸರ್ಗಿಕವಾಗಿಯೇ ಹಲ್ಲುಗಳನ್ನು ಬೆಳ್ಳಗೆ ಮಾಡುವ ಸಾಮರ್ಥ್ಯ ಇವುಗಳಿಗೆ ಇದೆ. ಜೊತೆಗೆ ಸೇಬು, ಬಾಳೆಯ ಹಣ್ಣುಗಳಲ್ಲೂ ಹಲ್ಲುಗಳ ಹೊಳಪು ಕಾಪಾಡುವ ಗುಣವಿದೆ. ಇವುಗಳಲ್ಲಿ ಇರುವ ಅಧಿಕ ನೀರಿನಂಶ ಲಾಲಾ ರಸದ ಉತ್ಪಾದನೆಗೆ ನೆರವಾಗುತ್ತದೆ. ಹಾಗಾಗಿ ಬಾಯಿಯ ಆರೋಗ್ಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದು ಮಹತ್ವದ್ದು.

Continue Reading

ಆರೋಗ್ಯ

Ghee For Health: ನಾವು ಆರೋಗ್ಯವಾಗಿರಲು ದಿನಕ್ಕೆಷ್ಟು ತುಪ್ಪ ತಿನ್ನಬೇಕು?

Ghee For Health: ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು ಎಂಬುದಕ್ಕೆ ನಿಖರವಾದ ಉತ್ತರವನ್ನು ನೀಡುವ ಮುನ್ನ, ನಮ್ಮ ಉಳಿದ ಜೀವನಶೈಲಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅಂದರೆ ಜಡ ಜೀವನವನ್ನು ಹೊಂದಿದ ವ್ಯಕ್ತಿಗೆ ಒಬ್ಬ ಅಥ್ಲೀಟ್‌ನಷ್ಟು ತುಪ್ಪ ಬೇಕಾಗುವುದಿಲ್ಲ, ಅಷ್ಟು ತಿನ್ನಬಾರದು!

VISTARANEWS.COM


on

Ghee benefits
Koo

ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತಿದೆ. ತುತ್ತು ಎತ್ತುವುದಕ್ಕೆ ತುಪ್ಪ ಬೇಕು ಎಂದವರೂ ಇದ್ದಾರೆ. ಇಂಥ ಮಾತುಗಳು ತುಪ್ಪ ನಮಗೆಷ್ಟು ಆವಶ್ಯಕ ಎನ್ನುವುದನ್ನು ತೋರಿಸುವಂತಿದೆ. ನಮ್ಮ ಆರೋಗ್ಯದ ಮೇಲೆ ತುಪ್ಪವು ಹಲವು ರೀತಿಯಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರಬಲ್ಲದು ಎಂಬುದು ನಿಸ್ಸಂಶಯ. ಹಾಗೆಂದು ತಿನ್ನುವುದಕ್ಕೆಲ್ಲ ತುಪ್ಪ ಸುರಿದುಕೊಳ್ಳಬಹುದೇ? ಅಷ್ಟೊಂದು ಜಿಡ್ಡಿನ ಪದಾರ್ಥವನ್ನು ಒಳ್ಳೆಯದೆಂದು ತಿನ್ನುತ್ತಾ ಹೋದರೆ ಆರೋಗ್ಯದ ಗತಿ ಏನು? ಸಾಲ ಮಾಡಿ ತಿನ್ನುವಷ್ಟು ತುಪ್ಪ ನಮಗೆ ಬೇಕೆ! ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು? ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು ಎಂಬುದಕ್ಕೆ ನಿಖರವಾದ ಉತ್ತರವನ್ನು ನೀಡುವ ಮುನ್ನ, ನಮ್ಮ ಉಳಿದ ಜೀವನಶೈಲಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅಂದರೆ ಜಡ ಜೀವನವನ್ನು ಹೊಂದಿದ ವ್ಯಕ್ತಿಗೆ ಒಬ್ಬ ಅಥ್ಲೀಟ್‌ನಷ್ಟು ತುಪ್ಪ ಬೇಕಾಗುವುದಿಲ್ಲ, ಅಷ್ಟು ತಿನ್ನಬಾರದು. ಹಾಗಾಗಿ ನಮ್ಮ ವಯಸ್ಸು, ಆರೋಗ್ಯ, ತೂಕ ಇತ್ಯಾದಿಗಳ ಮೇಲೆ, ದಿನಕ್ಕೆಷ್ಟು ತುಪ್ಪ ಬೇಕು ಮತ್ತು ಸಾಕು ಎನ್ನುವುದನ್ನು ನಿರ್ಧರಿಸಬಹುದು. ಈಗಾಗಲೇ ಸಾಕಷ್ಟು ಎಣ್ಣೆ ಮತ್ತು ಜಿಡ್ಡಿನಂಶ ನಮ್ಮ ಆಹಾರದಲ್ಲಿದ್ದರೆ, ಅದಕ್ಕೆ ತುಪ್ಪವನ್ನೂ ಹೆಚ್ಚುವರಿಯಾಗಿ ಸೇರಿಸಬೇಕಿಲ್ಲ. ಬದಲಿಗೆ, ಈಗಾಗಲೇ ಇರುವ ಕೆಲವು ಜಿಡ್ಡಿನ ವಸ್ತುಗಳನ್ನು ಕಡಿಮೆ ಮಾಡಿ, ಅದರ ಬದಲಿಗೆ ತುಪ್ಪವನ್ನು (Ghee For Health) ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ghee Nutrients
Improves body metabolism Ghee Health Benefits

ಎಷ್ಟು ಬೇಕು?

ಸಾಮಾನ್ಯ ಅಂದಾಜಿಗೆ ಹೇಳುವುದಾದರೆ, ವಯಸ್ಕರಿಗೆ ದಿನಕ್ಕೆ 2-4 ಚಮಚ ತುಪ್ಪ ದಿನಕ್ಕೆ ಸಾಕಾಗುತ್ತದೆ. ಸಾಮಾನ್ಯವಾಗಿ ಬೆಳಗಿನ ಹೊತ್ತು ತುಪ್ಪವನ್ನು ತಿನ್ನುವುದು, ಅದರಲ್ಲೂ ಬೆಚ್ಚಗಿನ ತುಪ್ಪದ ಸೇವನೆ ಒಳ್ಳೆಯದು ಎನ್ನುತ್ತಾರೆ ಪೋಷಕಾಂಶ ತಜ್ಞರು. ಆದರೆ ಅವರ ಆರೋಗ್ಯ ಮತ್ತು ಜೀವನಶೈಲಿಯನ್ನು ಗಮನಿಸಿಕೊಳ್ಳಬೇಕು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ತುಪ್ಪ ಅಗತ್ಯವಾಗಿ ಬೇಕು. ಅದೇ ಹೃದ್ರೋಗಿಗಳಿಗಾದರೆ ವೈದ್ಯರಲ್ಲಿ ಮಾತಾಡಿಯೇ ನಿರ್ಧರಿಸಬೇಕು. ಜೀರ್ಣಾಂಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಗಳನ್ನು ಹೆಚ್ಚಿಸುವುದರಿಂದ ತೊಡಗಿ, ಶಕ್ತಿ ಸಂಚಯಿಸುವ, ಉರಿಯೂತ ಕಡಿಮೆ ಮಾಡುವವರೆಗೆ ಬಹಳಷ್ಟು ರೀತಿಯಲ್ಲಿ ದೇಹಕ್ಕೆ ನೆರವಾಗಬಲ್ಲವು.

It is rich in good fats Ghee Benefits

ಚಯಾಪಚಯ ಚುರುಕು

ತುಪ್ಪದಲ್ಲಿ ಕಿರುಕೊಂಡಿಗಳ ಕೊಬ್ಬಿನಾಮ್ಲ (SCFAs) ಇರುತ್ತದೆ. ಇವು ಸುಲಭವಾಗಿ ದೇಹಕ್ಕೆ ಹೀರಲ್ಪಡುತ್ತವೆ. ಇದರಿಂದ ಉತ್ಪತ್ತಿಯಾಗುವ ಶಾಖವು ದೇಹದಲ್ಲಿನ ಹೆಚ್ಚುವರಿ ಕೊಬ್ಬು ಕರಗಿಸಲು ನೆರವಾಗುತ್ತದೆ. ಅಂದರೆ, ಇದರಿಂದ ಚುರುಕಾಗುವ ಚಯಾಪಚಯ ಕ್ರಿಯೆಯಿಂದ ಹೆಚ್ಚಿನ ಕ್ಯಾಲರಿಗಳು ಕರಗಿ, ಕೊಬ್ಬೂ ಕಡಿಮೆಯಾಗುತ್ತದೆ

Improved Digestion Tea Benefits

ಜೀರ್ಣಾಂಗಗಳ ಆರೋಗ್ಯ ಸುಧಾರಣೆ

ಖಾಲಿ ಹೊಟ್ಟೆಗೆ ಬೀಳುವ ಬೆಚ್ಚನೆಯ ತುಪ್ಪವು ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ. ಇದರಲ್ಲಿರುವ ಬಟೈರೇಟ್‌ ಅಂಶವು ಜಠರ ಮತ್ತು ಕರುಳಿನ ಒಳಪದರಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಜೀರ್ಣ, ಆಸಿಡಿಟಿಯಂಥವು ಕಡಿಮೆಯಾಗುತ್ತವೆ. ಹೊಟ್ಟೆಯ ಆರೋಗ್ಯಕ್ಕೆ ಅಗತ್ಯವಾದ ಉತ್ತಮ ಬ್ಯಾಕ್ಟೀರಿಯಗಳ ಸಂಖೆಯನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ಸುಧಾರಿಸಿ, ಆಹಾರದಲ್ಲಿನ ಪೋಷಕಾಂಶಗಳು ಚೆನ್ನಾಗಿ ಹೀರಲ್ಪಡುತ್ತವೆ.

Improves body metabolism Ghee Health Benefits

ತಿನ್ನುವ ಬಯಕೆಗೆ ಕಡಿವಾಣ

ಬೆಳಗಿನ ಸಮಯದಲ್ಲಿ ದೇಹಕ್ಕೆ ದೊರೆಯುವ ಆರೋಗ್ಯಕರ ಕೊಬ್ಬಿನಿಂದ ದಿನವಿಡೀ ಹೆಚ್ಚು ತಿನ್ನಬೇಕೆಂಬ ಬಯಕೆಗೆ ಕಡಿವಾಣ ಹಾಕುವುದು ಸುಲಭವಾಗುತ್ತದೆ. ಇದರಿಂದ ಕಳ್ಳ ಹಸಿವಿಗೆ ಏನಾದರೂ ಬಾಯಾಡಬೇಕೆಂಬ ಚಟ ನಿಂತು, ದೇಹಕ್ಕೆ ಆರೋಗ್ಯಕರ ತೂಕವನ್ನು ಕಲ್ಪಿಸುವುದಕ್ಕೆ ಸಹಾಯವಾಗುತ್ತದೆ. ಹೊಟ್ಟೆ ತುಂಬಿದ ಭಾವವನ್ನು ಪ್ರಚೋದಿಸುವ ಚೋದಕಗಳ ಬಿಡುಗಡೆಗೂ ಇದು ನೆರವಾಗುತ್ತದೆ. ತಿಳಿದು ತಿಂದರೆ ತುಪ್ಪದಿಂದ ತೂಕವನ್ನು ಇಳಿಸಲೂ ಬಹುದು.

ಶಕ್ತಿ ಸಂಚಯನ

ಇದರ ಕೊಬ್ಬಿನ ಸ್ವರೂಪವು ಹೇಗಿದೆಯೆಂದರೆ ದೀರ್ಘಕಾಲದವರೆಗೆ ದೇಹಕ್ಕೆ ಸುಸ್ಥಿರವಾಗಿ ಶಕ್ತಿಯನ್ನು ನೀಡುತ್ತಲೇ ಇರುವಂತೆ ರೂಪಿತವಾಗಿದೆ. ತ್ವರಿತವಾಗಿ ಶಕ್ತಿಯ ಸ್ವರೂಪ ಪಡೆದು, ದೇಹಕ್ಕೆ ಬೇಕಾದ ಇಂಧನವನ್ನು ಒದಗಿಸುವುದು ತುಪ್ಪದಲ್ಲಿರುವ ಕೊಬ್ಬಿಗೆ ಸಾಧ್ಯ.

ಇದನ್ನೂ ಓದಿ: Oats or Quinoa: ಓಟ್ಸ್‌, ಕಿನೊವಾ- ಇವೆರೆಡರಲ್ಲಿ ಯಾವುದು ಬೆಸ್ಟ್?

ಹೃದಯದ ಆರೋಗ್ಯಕ್ಕೂ ಪೂರಕ

ತುಪ್ಪದಲ್ಲಿ ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕ ಸತ್ವಗಳಿವೆ. ಇದು ಶರೀರದಲ್ಲಿ ಆಗಬಹುದಾದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿ, ಮಾರಕ ರೋಗಗಳನ್ನು ದೂರ ಇರಿಸುತ್ತವೆ. ಉತ್ತಮ ಕೊಬ್ಬನ್ನು ದೇಹಕ್ಕೆ ನೀಡುತ್ತಾ ಕೊಲೆಸ್ಟ್ರಾಲ್‌ನಂಥ ಬೇಡದ ಕೊಬ್ಬನ್ನು ಕಡಿಮೆ ಮಾಡಬಹುದು. ಆದರೆ ನೆನಪಿಡಿ, ಅತಿಯಾದರೆ ಅಮೃತವೂ ವಿಷ! ತುಪ್ಪ ಒಳ್ಳೆಯದು ಎಂಬ ಕಾರಣಕ್ಕಾಗಿ ಹೆಚ್ಚು ತಿನ್ನುವಂತಿಲ್ಲ. ಅದೇ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಿತವಾಗಿಯೇ ಬೆಳಗಿನ ತಿಂಡಿಯ ಜೊತೆಗೆ ಸೇರಿಸಿಕೊಂಡರೆ, ಹಲವು ರೀತಿಯ ಲಾಭಗಳನ್ನು ಪಡೆಯಬಹುದು.

Continue Reading

ಆರೋಗ್ಯ

Sweet Potato Benefits: ಸವಿದವರೇ ಬಲ್ಲರು ಗೆಣಸಿನ ಸೊಗಸು! ಹಲವು ಆರೋಗ್ಯ ಸಮಸ್ಯೆಗೂ ಪರಿಹಾರ

Sweet Potato Benefits: ಗೆಣಸನ್ನು ಸುಮ್ಮನೆ ಬೇಯಿಸಿ ತಿನ್ನುವುದರಿಂದ ಹಿಡಿದು ಪಲ್ಯ, ಭಾಜಿಗಳ ರೀತಿಯಲ್ಲಿ ಅಡುಗೆಗೆ ಬಳಸಬಹುದು, ಸಲಾಡ್‌ಗೆ, ಚಾಟ್‌ಗಳಿಗೆ ಹಾಕಿ ರುಚಿ ಹೆಚ್ಚಿಸಬಹುದು. ಪೋಡಿ, ಬಜ್ಜಿಗಳ ರೀತಿಯಲ್ಲಿ ಸವಿಯುವವರಿಗೂ ಬರವಿಲ್ಲ. ಇಂಥ ಗಡ್ಡೆಯನ್ನು ತಿನ್ನುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ.

VISTARANEWS.COM


on

Blood Pressure
Koo

ಗಡ್ಡೆ-ಗೆಣಸುಗಳು ಪೂರ್ವಿಕರ ಕಾಲದಿಂದಲೇ ನಮ್ಮ ಆಹಾರವಾಗಿ ಬಳಕೆಯಾಗುತ್ತಿದೆ. ಅದರಲ್ಲೂ ಮರಗೆಣಸಿಗಿಂತಲೂ ಸಿಹಿ ಗೆಣಸು ಎಲ್ಲರಿಗೂ ಇಷ್ಟವಾಗುವಂಥ ಗಡ್ಡೆ. ತಿಳಿಗುಲಾಬಿ, ಕಂದು, ತಿಳಿ ಹಳದಿ, ನೇರಳೆ ಮುಂತಾಗಿ ಒಂದಕ್ಕಿಂತ ಹೆಚ್ಚು ಬಣ್ಣಗಳಲ್ಲಿರುವ ಈ ಗೆಣಸಿನ ಎಲ್ಲ ಬಣ್ಣಗಳೂ ಆರೋಗ್ಯಕ್ಕೆ ಒಳ್ಳೆಯವೆ. ಇದರ ಬಣ್ಣ ಗಾಢವಾದಷ್ಟೂ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು ಎಂದು ತಿಳಿಯಬಹುದು. ಸುಮ್ಮನೆ ಬೇಯಿಸಿ ತಿನ್ನುವುದರಿಂದ ಹಿಡಿದು, ಪಲ್ಯ, ಭಾಜಿಗಳ ರೀತಿಯಲ್ಲಿ ಅಡುಗೆಗೆ ಬಳಸಬಹುದು, ಸಲಾಡ್‌ಗೆ, ಚಾಟ್‌ಗಳಿಗೆ ಹಾಕಿ ರುಚಿ ಹೆಚ್ಚಿಸಬಹುದು. ಪೋಡಿ, ಬಜ್ಜಿಗಳ ರೀತಿಯಲ್ಲಿ ಸವಿಯುವವರಿಗೂ ಬರವಿಲ್ಲ. ಇಂಥ ಗಡ್ಡೆಯನ್ನು ತಿನ್ನುವುದರಿಂದ (Sweet Potato Benefits) ಆಗುವ ಲಾಭಗಳೇನು?

Sweet potatoes have the ability to control diabetes and prevent cancer

ನಾರಿನಂಶ ಹೇರಳ

ಗೆಣಸಿನಲ್ಲಿ ನಾರಿನ ಅಂಶ ವಿಫುಲವಾಗಿದೆ. ಹೆಚ್ಚು ನಾರು ಇರುವಂಥ ಆಹಾರಗಳು ನಮಗೆ ಹಲವು ರೀತಿಯಲ್ಲಿ ಉಪಕಾರವನ್ನು ಮಾಡಬಲ್ಲವು. ಅದರಲ್ಲೂ ಕಳ್ಳ ಹಸಿವನ್ನು ಮಟ್ಟ ಹಾಕುವಲ್ಲಿ ಇದರ ನೆರವು ಅಗತ್ಯವಾಗಿ ಬೇಕಾಗುತ್ತದೆ. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಭಾವವನ್ನು ನೀಡುವ ಇವು, ತಿಂದ ತೃಪ್ತಿಯನ್ನು ಹೆಚ್ಚಿಸುತ್ತವೆ. ಕರಗಬಲ್ಲ ನಾರುಗಳು ದೇಹದಲ್ಲಿ ಅಡಗಿರುವ ಕೊಬ್ಬಿನಂಶವನ್ನು ಕರಗಿಸಿದರೆ, ಕರಗದಿರುವ ನಾರು ಮಲಬದ್ಧತೆಯನ್ನು ನಿವಾರಿಸುತ್ತದೆ.

ಗ್ಲೈಸೆಮಿಕ್‌ ಸೂಚಿ

ಇದರ ರುಚಿ ಸಿಹಿಯೇ ಆದರೂ ಗ್ಲೈಸೆಮಿಕ್‌ ಸೂಚಿ ತೀರಾ ಹೆಚ್ಚೇನಿಲ್ಲ. ಹಾಗಾಗಿ ಜಿಐ ಹೆಚ್ಚಿರುವ ಆಹಾರಗಳಿಗೆ ಹೋಲಿಸಿದಲ್ಲಿ, ರಕ್ತದಲ್ಲಿ ಸಕ್ಕರೆಯಂಶ ದಿಢೀರ್‌ ಏರಿಕೆಯಾಗದಂತೆ ಇದು ನಿರ್ವಹಿಸುತ್ತದೆ. ಇದರಿಂದ ರಕ್ತದಲ್ಲಿ ಇನ್‌ಸುಲಿನ್‌ ಮಟ್ಟವನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ. ಇದರಿಂದ ತಿನ್ನುವ ಬಯಕೆಯನ್ನು ನಿಯಂತ್ರಿಸಬಹುದು. ಈ ಮೂಲಕ ಚಯಾಪಚಯ ಕೆಡದಂತೆ ಕಾಪಾಡಿಕೊಂಡು, ಹೊಟ್ಟೆಯಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆಯಬಹುದು.

Sweet Potatoes Vegetarian foods for stamina

ಸತ್ವಯುತ

ಇದರಲ್ಲಿ ಪಿಷ್ಟ ಮತ್ತು ನಾರಿನ ಹೊರತಾಗಿ ವಿಟಮಿನ್‌ ಎ, ಸಿ ಮತ್ತು ಬಿ೬ ವಿಫುಲವಾಗಿವೆ. ಜೊತೆಗೆ ಪೊಟಾಶಿಯಂ, ಮ್ಯಾಂಗನೀಸ್‌ನಂಥ ಖನಿಜಗಳು ತುಂಬಿವೆ. ಇವುಗಳೊಂದಿಗೆ ಉತ್ಕರ್ಷಣ ನಿರೋಧಕಗಳು ಸೇರಿಕೊಂಡು ಸತ್ವಯುತ ಆಹಾರವೊಂದು ನಮ್ಮೆದುರಿಗೆ ತೆರೆದುಕೊಳ್ಳುತ್ತದೆ. ಚರ್ಮದ ಹೊಳಪಿಗೆ, ದೃಷ್ಟಿಯ ಪೋಷಣೆಗೆ ಅಗತ್ಯವಾದ ಸತ್ವಗಳು ಇದರಲ್ಲಿವೆ. ಗೆಣಸು ತಿನ್ನುವಾಗ ಅದರ ಸಿಪ್ಪೆ ಸಮೇತ ತಿನ್ನಿ. ಇದರಿಂದ ವಿಟಮಿನ್‌ ಎ ಅಂಶ ಸಮೃದ್ಧವಾಗಿ ದೇಹಕ್ಕೆ ದೊರೆಯುತ್ತದೆ. ಕಡಿಮೆ ಕ್ಯಾಲರಿಯಲ್ಲಿ, ರುಚಿಕಟ್ಟಾದ ಸತ್ವಯುತ ಆಹಾರ ದೊರೆತರೆ ಬೇಡ ಎನ್ನುವವರಾರು?

Weight Loss Tips kannada
Weight Loss Tips kannada

ತೂಕ ಇಳಿಕೆ

ಇದರಲ್ಲಿರುವ ಪೊಟಾಶಿಯಂ ಅಂಶವು ಡೈಯುರೇಟಿಕ್‌ನಂತೆ ಕೆಲಸ ಮಾಡುತ್ತದೆ. ಅಂದರೆ ಹೆಚ್ಚುವರಿ ನೀರಿನಂಶ ದೇಹದಲ್ಲಿ ಉಳಿಯದಂತೆ, ಹೊಟ್ಟೆ ಉಬ್ಬರಿಸದಂತೆಯೂ ಪರಿಣಾಮ ಬೀರುತ್ತದೆ. ತೂಕ ಇಳಿಸುವವರಿಗೆ ಇದು ಇಂಥ ಹಲವು ವಿಷಯಗಳಲ್ಲಿ ಉಪಯುಕ್ತ ಎನಿಸಬಹುದು. ಅಂದರೆ, ನಾರಿನಂಶ ಹೆಚ್ಚಿರುವುದರಿಂದ ಬೇಗ ಹಸಿವಾಗುವುದಿಲ್ಲ. ಆಗಾಗ ತಿನ್ನು ಬೇಡಿಕೆಯನ್ನು ಮಟ್ಟ ಹಾಕಬಹುದು ಜೊತೆಗೆ ದೇಹದಲ್ಲಿನ ಹೆಚ್ಚುವರಿ ನೀರನ್ನು ತೆಗೆದು ಹೊಟ್ಟೆಯೆಲ್ಲ ಸಪೂರ ಆದಂತೆ ಕಾಣಿಸುತ್ತದೆ.

ಇದನ್ನೂ ಓದಿ: Hair Oil Tips: ನಮ್ಮ ತಲೆಗೂದಲಿಗೆ ಬೇಕಾದ ತೈಲವನ್ನು ಆಯ್ದುಕೊಳ್ಳುವುದು ಹೇಗೆ?

ಎಲ್ಲದಕ್ಕೂ ಹೊಂದುತ್ತದೆ

ಯಾವುದೇ ರೀತಿಯ ಅಡುಗೆಗಳಿಗೆ ಇದನ್ನು ಕಷ್ಟವಿಲ್ಲದೆ ಹೊಂದಿಕೊಳ್ಳಬಹುದು. ಚಪಾತಿಯೊಂದಿಗೆ ಗೆಣಸಿನ ಭಾಜಿ ಮಾಡಿದರೆ ರುಚಿ ಹೆಚ್ಚು. ಊಟಕ್ಕೆ ಜೊತೆಯಾಗಿ ಪಲ್ಯ ಮಾಡಿದರೆ ಒಲ್ಲೆ ಎನ್ನುವವರಿಲ್ಲ. ಬರೀ ಸಲಾಡ್‌ ಮಾಡುವ ಯೋಚನೆಯಿದ್ದರೆ ಗೆಣಸನ್ನು ಬೇಯಿಸಿ ಸೇರಿಸಿಕೊಳ್ಳಬಹುದು. ಸೂಪ್‌ ಜೊತೆಗೆ ಬೇಯಿಸಿದ ಗೆಣಸು ಬೇಗ ಹೊಟ್ಟೆ ತುಂಬಿಸಿ, ನಿಮ್ಮ ಡಯೆಟ್‌ ಯೋಜನೆಯನ್ನು ಕಾಪಾಡುತ್ತದೆ. ಪಾಸ್ತಾ ಮಾಡುವ ಯೋಚನೆಯಿದ್ದರೆ, ಯಾವುದಾದರೂ ಒಂದಿಷ್ಟು ನಟ್‌ಗಳನ್ನು ನೆನೆಸಿ, ಬೇಯಿಸಿದ ಗೆಣಸಿನೊಂಸಿಗೆ ಪೇಸ್ಟ್‌ ಮಾಡಿ ಸಾಸ್‌ ಮಾಡಿದರೆ ಮಕ್ಕಳು ಚಪ್ಪರಿಸಿಕೊಂಡು ತಿನ್ನುತ್ತವೆ. ಮಳೆಗಾಲದಲ್ಲಿ, ಚಳಿಗಾಲದಲ್ಲಿ ಸುಮ್ಮನೆ ಕೆಂಡದಲ್ಲಿ ಸುಟ್ಟು ಅಥವಾ ಬೇಯಿಸಿಕೊಂಡು ಸಿಪ್ಪೆ ಸಮೇತ ತಿಂದರೆ, ಬೇರೆ ಸ್ವರ್ಗವೇ ಬೇಡ!

Continue Reading
Advertisement
Self harming
ಕರ್ನಾಟಕ2 mins ago

Self harming : ಶಿವಮೊಗ್ಗದಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Patanjali ads
ದೇಶ8 mins ago

Patanjali Ayurved Ads: ನ್ಯಾಯಾಂಗ ನಿಂದನೆ ಪ್ರಕರಣ ರದ್ದು; ಬಾಬಾ ರಾಮದೇವ್‌ಗೆ ಬಿಗ್‌ ರಿಲೀಫ್

Gold Rate Today
ಚಿನ್ನದ ದರ16 mins ago

Gold Rate Today: ಮತ್ತೆ ಕೈ ಸುಡುತ್ತಿದೆ ಚಿನ್ನ; ಬಂಗಾರ ದರದಲ್ಲಿ ಇಂದು ಭಾರಿ ಏರಿಕೆ

ಬೆಂಗಳೂರು19 mins ago

Assault Case: ಪಾರ್ಕಿಂಗ್‌ ವಿಚಾರಕ್ಕೆ ಡಿಶುಂ ಡಿಶುಂ; ಮಹಿಳೆಗೆ ಕಪಾಳಮೋಕ್ಷ!

Muda Scam
ಕರ್ನಾಟಕ28 mins ago

Muda Scam: ಸಿಎಂ ವಿರುದ್ಧದ ಅರ್ಜಿ ವಿಚಾರಣೆಗೆ ಸ್ವೀಕರಿಸದಂತೆ ಕೋರ್ಟ್‌ಗೆ ಅರ್ಜಿ

Tungabhadra Dam
ಪ್ರಮುಖ ಸುದ್ದಿ39 mins ago

Tungabhadra Dam: ಗೇಟ್‌ ರಿಪೇರಿಗಾಗಿ 60 ಟಿಎಂಸಿ ನೀರು ಖಾಲಿ, 8 ಜಿಲ್ಲೆಗಳ ರೈತರಿಗೆ ನೀರಿಲ್ಲ!

Naga Chaitanya
ಸಿನಿಮಾ41 mins ago

Naga Chaitanya: ನಾಗ ಚೈತನ್ಯ-ಶೋಭಿತಾ ನಿಶ್ಚಿತಾರ್ಥದ ಫೋಟೊ ಹಂಚಿಕೊಂಡ ಸಮಂತಾ

Paris Paralympic 2024
ಕ್ರೀಡೆ51 mins ago

Paris Paralympic 2024: ಪ್ಯಾರಾಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ಹಾಲಿ ಚಾಂಪಿಯನ್‌ ಪ್ರಮೋದ್ ಭಗತ್‌ಗೆ ಅಮಾನತು ಶಿಕ್ಷೆ

kolkata doctor murder case
ದೇಶ51 mins ago

Kolkata Doctor Murder Case: ನೋ ಸೇಫ್ಟಿ…ನೋ ಡ್ಯೂಟಿ- ವೈದ್ಯೆ ಕೊಲೆ ಖಂಡಿಸಿ ದೇಶವ್ಯಾಪಿ ಭಾರೀ ಪ್ರತಿಭಟನೆ

borewell water More than 40 people suffer from vomiting after drinking borewell water
ಬೆಳಗಾವಿ56 mins ago

Borewell water : ಬೋರ್‌ವೆಲ್ ನೀರು ಕುಡಿದು 40ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ5 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು7 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ7 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌