Microwave Oven: ಮೈಕ್ರೋವೇವ್‌ ಒವನ್‌ನಲ್ಲಿ ಅಡುಗೆ, ಆಹಾರ ಸುರಕ್ಷಿತವೇ? - Vistara News

ಆರೋಗ್ಯ

Microwave Oven: ಮೈಕ್ರೋವೇವ್‌ ಒವನ್‌ನಲ್ಲಿ ಅಡುಗೆ, ಆಹಾರ ಸುರಕ್ಷಿತವೇ?

ಮೈಕ್ರೋವೇವ್‌ ಒವನ್ (microwave oven) ಸಾಂಪ್ರದಾಯಿಕ ಎಲೆಕ್ಟ್ರಿಕ್‌ ಕಾಯಿಲ್‌ಗಳ ಬದಲು ಮೈಕ್ರೋವೇವ್‌ಗಳನ್ನು ಬಳಸಿ ಶಾಖ ಹೊರಸೂಸುತ್ತದೆ. ಆದರೆ ಈ ವಿಧಾನ ಸುರಕ್ಷಿತವೇ? ಇಲ್ಲಿದೆ ಮಾಹಿತಿ.

VISTARANEWS.COM


on

Microwave Oven
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಧುನಿಕ ಜೀವನದಲ್ಲಿ ಅನುಕೂಲಕ್ಕಾಗಿ ಹಲವಾರು ಉಪಕರಣಗಳನ್ನು ಅವಲಂಬಿಸುವುದು ಅನಿವಾರ್ಯ. ಅದರಲ್ಲೂ, ಹಿಂದಿನವರಂತೆ ದಿನಂಪ್ರತಿ ತಾಸುಗಟ್ಟಲೆ ಅಡುಗೆ ಮನೆಯಲ್ಲೇ ಕಳೆಯುವ ಸಮಯ ಮತ್ತು ವ್ಯವಧಾನ ಕಡಿಮೆ ಇರುವುದರಿಂದ ಚುರುಕಾಗಿ ಅಡುಗೆ ಮುಗಿಸುವ ಧಾವಂತ ಕೂಡ ಇಂದಿನ ಬದುಕಿಗೆ ಸಹಜವೇ. ಅಡುಗೆ ಮಾಡುವುದು ನಾವೇ ಆದರೂ ಅದನ್ನೇ ಕ್ಷಿಪ್ರಗತಿಯಲ್ಲಿ ಮಾಡುವುದಕ್ಕೇನು ಬೇಕು ಎಂಬುದನ್ನು ಹುಡುಕುತ್ತೇವೆ. ಅಂಥ ಉಪಕರಣಗಳಲ್ಲಿ ಮೈಕ್ರೋವೇವ್‌ ಒವನ್‌ (Microwave Oven) ಸಹ ಒಂದು. ಇದು ಸಾಂಪ್ರದಾಯಿಕ ಒವನ್‌ಗಳಂತೆ ಎಲೆಕ್ಟ್ರಿಕ್‌ ಕಾಯಿಲ್‌ಗಳ ಬದಲು ಮೈಕ್ರೋವೇವ್‌ಗಳನ್ನು ಬಳಸಿ ಅಡುಗೆ ಮಾಡುವ ತ್ವರಿತ ವಿಧಾನ. ಆದರೆ ಈ ವಿಧಾನ ಸುರಕ್ಷಿತವೇ?

ಇದೀಗಾಗಲೇ ಬಹು ಚರ್ಚಿತ ವಿಷಯ. ಮೈಕ್ರೋವೇವ್‌ ಒವನ್‌ (Microwave Oven) ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುವವರದ್ದೊಂದು ಗುಂಪಾದರೆ, ಅದನ್ನು ತಿಂದರೆ ಕ್ಯಾನ್ಸರ್‌ ಬಂದು ಸಾಯುವುದು ಖಚಿತ ಎನ್ನುವವರದ್ದು ಇನ್ನೊಂದು ಗುಂಪು. ಹಾಗಾದರೆ ಸತ್ಯವೇನು? ಈ ರೀತಿಯಲ್ಲಿ ಅಡುಗೆ ಬೇಯಿಸುವುದು ಆರೋಗ್ಯಕ್ಕೆ ಕ್ಷೇಮವೇ? ಕ್ಯಾನ್ಸರ್‌ ಅಮರಿಕೊಳ್ಳುತ್ತದೆಯೇ? ಈ ಎಲ್ಲಾ ಪ್ರಶ್ನೆಗಳ ಬಗ್ಗೆ ಒಂದಿಷ್ಟು ಮಾಹಿತಿಯಿದು.

ಸರಳವಾಗಿ ಹೇಳಬೇಕೆಂದರೆ, ವಿದ್ಯುದಯಸ್ಕಾಂತೀಯ ತರಂಗಗಳನ್ನೇ ಉಪಯೋಗಿಸಿಕೊಂಡು ನಮ್ಮ ಅಡುಗೆಯನ್ನು ಬೇಯಿಸುವ ತಂತ್ರಜ್ಞಾನವಿದು. ನಮ್ಮ ಮೊಬೈಲು ಮತ್ತು ಕಂಪ್ಯೂಟರ್‌ ಮಾದರಿಯಲ್ಲೇ ಹೊರಸೂಸುವ ಈ ಕಿರುತರಂಗಗಳು, ಆಹಾರದಲ್ಲಿರುವ ನೀರಿನ ಕಣಗಳನ್ನು ಬಳಸಿಕೊಂಡು ಆಹಾರವನ್ನು ಬಿಸಿ ಮಾಡುತ್ತವೆ ಅಥವಾ ಬೇಯಿಸುತ್ತವೆ. ಈ ಕಣಗಳು ಕಂಪಿಸಿ, ಒಂದಕ್ಕೊಂದು ಉಜ್ಜಿದಾಗ ಉಂಟಾಗುವ ಶಾಖವೇ ಈ ಅಡುಗೆ ಅಟ್ಟುವ ಮೂಲ ತಂತ್ರಜ್ಞಾನ. ಕೆಲವೊಮ್ಮೆ ಈ ತರಂಗಗಳು ಆಹಾರದಲ್ಲಿರುವ ಕೊಬ್ಬು ಮತ್ತು ಸಕ್ಕರೆಯ ಕಣಗಳನ್ನೂ ಬಿಸಿ ಮಾಡುತ್ತವೆ.

Microwave Oven

ಇದು ಸುರಕ್ಷಿತವೇ?

ಈ ರೀತಿಯಲ್ಲಿ ಅಡುಗೆ ಮಾಡುವುದು ಸುರಕ್ಷಿತವೇ ಎಂಬುದೀಗ ಪ್ರಶ್ನೆ. ಯಾವುದೇ ರೀತಿಯಲ್ಲಿ ಆಹಾರವನ್ನು ಬೇಯಿಸಿದಾಗಲೂ ಒಂದಿಷ್ಟು ಪೋಷಕಾಂಶಗಳು ನಷ್ಟವಾಗುವುದು ಸಿದ್ಧ. ಅದರಲ್ಲೂ ವಿಟಮಿನ್‌ ಸಿ ಯಂಥ ಜೀವಸತ್ವಗಳು ಎಲ್ಲಕ್ಕಿಂತ ಮೊದಲು ನಷ್ಟವಾಗುತ್ತವೆ. ಹಾಗಾಗಿ ಅಡುಗೆ ಮಾಡುವ ವಿಧಾನದಲ್ಲಿ ಕಡಿಮೆ ಶಾಖ ಮತ್ತು ಸಮಯ ಬಳಸುವುದು ಮುಖ್ಯ. ಜೊತೆಗೆ ಬೇಯಿಸಿದ ಆಹಾರದಿಂದ ನೀರು ಹೊರಹೋಗುವಂತಿಲ್ಲ. ಹಾಗಾಗಿಯೇ ಕರಿಯುವುದಕ್ಕಿಂತ ಹುರಿಯುವುದು ಒಳಿತು; ನೀರಲ್ಲಿ ಬೇಯಿಸುವುದಕ್ಕಿಂತ ಹಬೆಯಲ್ಲಿ ಬೇಯಿಸುವುದು ಸೂಕ್ತ. ಇದು ಸಾಮಾನ್ಯ ಅಡುಗೆ ಪದ್ಧತಿಯಲ್ಲಾಯಿತು, ಮೈಕ್ರೋವೇವ್‌ ಒವನ್ನಲ್ಲಿನ ಅಡುಗೆಯ ಹಣೆಬರಹವೇನು?

ಮೈಕ್ರೋವೇವ್‌ ಒವನ್‌ನಲ್ಲಿ (Microwave Oven) ಬಳಕೆಯಾಗುವ ಶಾಖ ಮತ್ತು ಸಮಯ ಎರಡೂ ಕಡಿಮೆ. ಇದರಿಂದಾಗಿ ಹೆಚ್ಚು ಬೆಂದು ಹೋಗದಂಥ ಆಹಾರದಲ್ಲಿ ಪೋಷಕಾಂಶಗಳು ಉಳಿಯುತ್ತದೆ ಎಂಬುದು ಪರಿಣಿತರ ವಾದ. ಪ್ರೆಷರ್‌ ಕುಕ್ಕರ್‌ನಲ್ಲಿ ಬೇಯಿಸುವುದಕ್ಕಿಂತ ಮೈಕ್ರೋವೇವ್‌ ಒವನ್‌ನಲ್ಲಿ ಬೇಯಿಸುವುದು ಹೆಚ್ಚಿನ ಸತ್ವಗಳನ್ನು ಉಳಿಸುತ್ತದೆ ಎನ್ನುವ ಅಧ್ಯಯನಗಳೂ ಇವೆ. ಸಾಮಾನ್ಯವಾಗಿ ಮೈಕ್ರೋವೇವ್‌ ಒವನ್‌ನಲ್ಲಿ 100 ಡಿಗ್ರಿ ಸೆ. ಗಿಂತ (ಕುದಿಯುವ ಬಿಂದು) ಹೆಚ್ಚಿನ ಶಾಖ ಅಗತ್ಯವಾಗುವುದಿಲ್ಲ. ಆದರೆ ಅಡುಗೆಯಲ್ಲಿ ಉಪಯೋಗಿಸುತ್ತಿರುವ ಆಹಾರಗಳು ಯಾವುವು ಎಂಬುದೂ ಮುಖ್ಯವಾದ ಅಂಶ. ಕೆಲವು ಆಹಾರಗಳನ್ನು ಮೈಕ್ರೋವೇವ್‌ ಒವನ್‌ನ್ನಲ್ಲಿ ಆದರೂ ಅತಿಯಾಗಿ ಬೇಯಿಸುವುದು ಸಮಸ್ಯೆಗಳನ್ನು ತಂದೊಡ್ಡಿದೆ.

Microwave Oven

ಕೆಲವು ಸಮಸ್ಯೆಗಳಿವೆ

ಮೈಕ್ರೋವೇವ್‌ ಒವನ್ (Microwave Oven) ಬಳಕೆಯಲ್ಲಿರುವ ದೊಡ್ಡ ಸಮಸ್ಯೆಯೆಂದರೆ ಇದಕ್ಕೆಂದು ನಾವು ಉಪಯೋಗಿಸುವ ಪಾತ್ರೆಗಳು. ಹೆಚ್ಚಿನ ಜನ ಪ್ಲಾಸ್ಟಿಕ್‌ ಪಾತ್ರೆಗಳನ್ನು ಉಪಯೋಗಿಸುವುದು ಆಹಾರವನ್ನು ಕಲುಷಿತಗೊಳಿಸುತ್ತವೆ. ಪ್ಲಾಸ್ಟಿಕ್‌ನ ಬಳಕೆಯಿಂದಾಗಿ ಕ್ಯಾನ್ಸರ್‌ನಿಂದ ಹಿಡಿದು, ಹಾರ್ಮೋನ್‌ ಅಸಮತೋಲನದವರೆಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತರುತ್ತವೆ. ಮೈಕ್ರೋವೇವ್‌ ಒವನ್‌ನಲ್ಲಿ ಬಳಕೆಗೆ ಸುರಕ್ಷಿತ ಎಂಬ ಹಣೆಪಟ್ಟಿ ಹೊತ್ತು ಪ್ಲಾಸ್ಟಿಕ್‌ಗಳೂ ಕೆಲವೊಮ್ಮೆ ಕಳಪೆ ಗುಣಮಟ್ಟದಲ್ಲಿರುವುದು ಅಪರೂಪವಲ್ಲ. ಹಾಗಾಗಿ ಪಿಂಗಾಣಿ ಅಥವಾ ಗಾಜಿನಂಥ ಪಾತ್ರೆಗಳು ಮೈಕ್ರೋವೇವ್‌ ಒವನ್ ಬಳಕೆಗೆ ಸುರಕ್ಷಿತ.

ಇನ್ನೊಂದು ಸಮಸ್ಯೆಯೆಂದರೆ, ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿದ ಆಹಾರದಲ್ಲಿ ಸೃಷ್ಟಿಯಾಗುವ ಹಾಟ್‌ಸ್ಪಾಟ್‌ ಅಥವಾ ಬಿಸಿ-ಬಿಂದುಗಳು. ಅಂದರೆ ಪಾತ್ರೆಯಲ್ಲಿರುವ ಆಹಾರದ ಎಲ್ಲಾ ಭಾಗಗಳೂ ಒಂದೇ ಸಮನಾಗಿ ಬಿಸಿಯಾಗುವುದಿಲ್ಲ. ಅದಕ್ಕಾಗಿ ಆಹಾರವನ್ನು ಆಗಾಗ ಮಗುಚಬೇಕಾಗುತ್ತದೆ. ಇದರಲ್ಲಿಯೂ ಅದೇ ಸಮಸ್ಯೆಯಿದೆ. ಮೈಕ್ರೋವೇವ್‌ ಒವನ್‌ನಿಂದ (Microwave Oven) ತೆಗೆದ ಆಹಾರವನ್ನು ಮಗುಚದೇ, ನೇರವಾಗಿ ಬಾಯಿಗಿಟ್ಟುಕೊಂಡು, ಸುಟ್ಟಗಾಯಗಳಾದ ಘಟನೆಗಳು ಬಹಳಷ್ಟಿವೆ.

ಮೈಕ್ರೋವೇವ್‌ ಒವನ್ (Microwave Oven) ಚಾಲ್ತಿಯಲ್ಲಿರುವಾಗ ಅದಕ್ಕೆ ಅಂಟಿಕೊಂಡಂತೆ ನಿಲ್ಲಬೇಡಿ ಎನ್ನುವ ಕಿವಿಮಾತನ್ನೂ ಹಲವು ತಜ್ಞರು ನೀಡುತ್ತಾರೆ. ಕಾರಣ, ಒವನ್‌ನ ಉಳಿದೆಲ್ಲಾ ಕಡೆಗಳಲ್ಲಿ ತರಂಗಗಳು ಹೊರ ಹೋಗದಂತೆ ಲೋಹದ ಕವಚವಿದ್ದರೂ, ಅದರ ಬಾಗಿಲು ಗಾಜಿನದ್ದು. ಈ ಬಾಗಿಲ ಎಡೆಗಳಿಂದ ರೇಡಿಯೇಶನ್‌ ಹೊರಚೆಲ್ಲುವ ಸಾಧ್ಯತೆಗಳಿವೆ. ಹಾಗಾಗಿ ಮೈಕ್ರೋವೇವ್‌ ಒವನ್ ನಿಂದ ಎರಡಡಿ ದೂರದಲ್ಲಿ ನಿಲ್ಲಿ. ಮಾತ್ರವಲ್ಲ, ಸರಿಯಾಗಿ ಕೆಲಸ ಮಾಡದ ಒವನ್‌ ಸಹ ಆಹಾರವನ್ನು ಹಾಳುಗೆಡವುತ್ತದೆ

ಇದನ್ನೂ ಓದಿ: Health Tips: ಬಾಯಿಹುಣ್ಣು ಬೇಗ ಗುಣವಾಗಬೇಕೇ? ಈ ಆಹಾರಗಳನ್ನು ಬಿಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿಕ್ಕಮಗಳೂರು

Dengue Fever : ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

Dengue Fever : ಪ್ರಸಕ್ತ ವರ್ಷ ರಾಜ್ಯದಲ್ಲಿ ಡೆಂಗ್ಯೂ ಜ್ವರಕ್ಕೆ ಐವರು ಬಲಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಬಾಲಕಿಯೊಬ್ಬಳು ಮಹಾಮಾರಿಗೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

VISTARANEWS.COM


on

By

Dengue Fever
Koo

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ (Dengue Fever) ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಸಾನಿಯಾ (6) ಮೃತ ದುರ್ದೈವಿ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಘಟನೆ ನಡೆದಿದೆ.

ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾನಿಯಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ. ರಾಜ್ಯ ಸರ್ಕಾರದ ವಿರುದ್ಧ ಮೃತ ಬಾಲಕಿ ತಂದೆ ಆಸಿಫ್‌ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡೆಂಗ್ಯೂ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸ ಸಿಗುತ್ತಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕು. ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಆಗುವುದು ಬೇಡ ಎಂದು ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷಕ್ಕೆ ಹಾಗೂ ಸರ್ಕಾರಕ್ಕೆ ಛೀಮಾರಿ ಹಾಕಿದರು.

4 ಸಾವಿರ ಗಡಿ ದಾಟಿದ ಡೆಂಗ್ಯೂ; ಐವರು ಸಾವು

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜೂನ್‌) 93,012 ಶಂಕಿತವಾಗಿದ್ದು, ಇದರಲ್ಲಿ 40,918 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 4364 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಬಾಗಲಕೋಟೆ, ಗದಗದಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Dengue Prevention: ರಾಜ್ಯದಲ್ಲಿ 6000ಕ್ಕೂ ಡೆಂಗ್ಯೂ ಪ್ರಕರಣ; ಇದರಿಂದ ಪಾರಾಗಲು ಹೀಗೆ ಮಾಡಿ

ಡೆತ್‌ ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಏರಿಕೆ ಆಗಿವೆ. ಬೆಂಗಳೂರಲ್ಲಿ ಜನವರಿಯಿಂದ ಈವರೆಗೆ 1,385 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ. ಆದರೆ ಇಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಶಂಕೆ ಇದ್ದು, ಸಾವಿಗೆ ಕಾರಣ ತಿಳಿಯುವ ಸಲುವಾಗಿ ಡೆತ್ ಆಡಿಟ್‌ಗೆ ಬಿಬಿಎಂಪಿ ಮುಂದಾಗಿದೆ.

ಇನ್ನೂ 3,470 ಲಾರ್ವಾ ಉತ್ಪತ್ತಿ ತಾಣ ಪತ್ತೆಯಾಗಿದ್ದು, ಇದರಲ್ಲಿ 2,004 ತಾಣಗಳ ನಾಶ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಪಾಲಿಕೆಯ ಆರೋಗ್ಯ ಸಿಬ್ಬಂದಿ ನಿನ್ನೆವರೆಗೂ 17,877 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಆಡಿಟ್ ಬಳಿಕ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನೆ ಮಾಡಲಾಗುತ್ತದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Orange Peel Benefits: ಕಿತ್ತಳೆ ಸಿಪ್ಪೆ ಎಸೆಯಬೇಡಿ; ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು!

Orange Peel Benefits: ಸಿಪ್ಪೆ ಸುಲಿದು ರಸಭರಿತ ಕಿತ್ತಳೆಯನ್ನು ಬಾಯಿಗಿಟ್ಟರೆ, ಅಥವಾ ಜ್ಯೂಸ್‌ ಕುಡಿದರೆ, ಎಂಥಾ ಸೆಖೆಯಲ್ಲೂ ತಂಪಿನ, ಎಂಥಾ ಬಾಯಾರಿಕೆಯ ಸುಸ್ತಿನಲ್ಲೂ ಉಲ್ಲಾಸವನ್ನೂ ಶಕ್ತಿಯನ್ನೂ ಮತ್ತೆ ಜಿನುಗಿಸುವ ಶಕ್ತಿ ಇದೆ. ಆದರೆ, ಘಮಘಮಿಸುವ ಕಿತ್ತಳೆಯ ಸಿಪ್ಪೆಯನ್ನು ಮಾತ್ರ ನಾವು ಯಾವುದೇ ಯೋಚನೆ ಮಾಡದೆ ಎಸೆದು ಬಿಡುತ್ತೇವೆ. ನೀವು ವೇಸ್ಟ್‌ ಎಂದುಕೊಳ್ಳುವ ಈ ಸಿಪ್ಪೆಯಲ್ಲೂ ಬೇಕಾದಷ್ಟು ವಿಟಮಿನ್‌ ಸಿ, ನಾರಿನಂಶ ಹಾಗೂ ಪಾಲಿ ಫಿನಾಳ್‌ಗಳು ಇವೆ ಎಂದರೆ ನಂಬುತ್ತೀರಾ?

VISTARANEWS.COM


on

Orange Peel Benefits
Koo

ಕಿತ್ತಳೆ ಹಣ್ಣು ಹುಳಿಯನ್ನೂ ಸಿಹಿಯನ್ನೂ ಸಮಪ್ರಮಾಣದಲ್ಲಿ ಹೊಂದಿರುವ ದೇಹಕ್ಕೆ ಒಳ್ಳೆಯದನ್ನೇ ಬಯಸುವ ಹಣ್ಣು. ಇದರ ಘಮಕ್ಕೆ ಎಂಥ ಸಮಯದಲ್ಲೂ ನಮ್ಮನ್ನು ಬಡಿದೆಚ್ಚರಿಸುವ, ಉಲ್ಲಾಸವನ್ನು ತರುವ ಗುಣವಿದೆ. ಸಿಪ್ಪೆ ಸುಲಿದು ರಸಭರಿತ ಕಿತ್ತಳೆಯನ್ನು ಬಾಯಿಗಿಟ್ಟರೆ, ಅಥವಾ ಜ್ಯೂಸ್‌ ಕುಡಿದರೆ, ಎಂಥಾ ಸೆಖೆಯಲ್ಲೂ ತಂಪಿನ, ಎಂಥಾ ಬಾಯಾರಿಕೆಯ ಸುಸ್ತಿನಲ್ಲೂ ಉಲ್ಲಾಸವನ್ನೂ ಶಕ್ತಿಯನ್ನೂ ಮತ್ತೆ ಜಿನುಗಿಸುವ ಶಕ್ತಿ ಇದೆ. ಆದರೆ, ಘಮಘಮಿಸುವ ಕಿತ್ತಳೆಯ ಸಿಪ್ಪೆಯನ್ನು ಮಾತ್ರ ನಾವು ಯಾವುದೇ ಯೋಚನೆ ಮಾಡದೆ ಎಸೆದು ಬಿಡುತ್ತೇವೆ. ನೀವು ವೇಸ್ಟ್‌ ಎಂದುಕೊಳ್ಳುವ ಈ ಸಿಪ್ಪೆಯಲ್ಲೂ (Orange Peel Benefits) ಬೇಕಾದಷ್ಟು ವಿಟಮಿನ್‌ ಸಿ, ನಾರಿನಂಶ ಹಾಗೂ ಪಾಲಿ ಫಿನಾಳ್‌ಗಳು ಇವೆ ಎಂದರೆ ನಂಬುತ್ತೀರಾ?

Orange Peel

ಹೌದು. ಒಂದು ಚಮಚದಷ್ಟು ಕಿತ್ತಳೆ ಸಿಪ್ಪೆಯ ಪುಡಿಯಲ್ಲಿ ನಮ್ಮ ದೇಹಕ್ಕೆ ನಿತ್ಯವೂ ಬೇಕಾಗುವ ವಿಟಮಿನ್‌ ಸಿಯ ಶೇ.14ರಷ್ಟಿದೆಯಂತೆ. ಅಂದರೆ ಅದು ಒಳಗಿರುವ ಕಿತ್ತಳೆ ಹಣ್ಣಿನ ಮೂರು ಪಟ್ಟು ಹೆಚ್ಚು! ಕಿತ್ತಳೆ ಸಿಪ್ಪೆಯಲ್ಲಿ ಒಳಗಿನ ಹಣ್ಣಿಗಿಂತ ನಾಲ್ಕು ಪಟ್ಟು ಹೆಚ್ಚು ನಾರಿನಂಶವಿದೆಯಂತೆ. ಫ್ಲಾರಿಡಾ ವಿಶ್ವವಿದ್ಯಾಲಯವು ಕಿತ್ತಳೆ ಸಿಪ್ಪೆಯ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ ಎಂದು ತನ್ನ ಸಂಶೋಧನಾ ವರದಿಯಲ್ಲಿ ಹೇಳಿದೆ. ನಮ್ಮ ದೇಹದಲ್ಲಿರುವ ಕೆಲವೊಂದು ಬ್ಯಾಕ್ಟೀರಿಯಾಗಳು ಹೃದಯದ ಕಾಯಿಲೆಯನ್ನು ಉಲ್ಬಣಗೊಳಿಸುವ ತಾಕತ್ತನ್ನು ಹೊಂದಿದೆಯಂತೆ. ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವ ಶಕ್ತಿ ಈ ಕಿತ್ತಳೆ ಸಿಪ್ಪೆಯಲ್ಲಿದೆಯಂತೆ. ಕಿತ್ತಳೆ ಸಿಪ್ಪೆಯಲ್ಲಿರುವ ಫೈಟೋ ಕೆಮಿಕಲ್‌ಗಳು ಹೃದಯದ ಕಾಯಿಲೆಗೆ ಪೂರಕವಾದ ಟ್ರೈಮೀಥೈಲಾಮೈನ್‌ ಉತ್ಪಾದನೆಯನ್ನು ತಗ್ಗಿಸುವ ಮೂಲಕ ಹೃದಯಸ್ನೇಹಿಯಾಗಿ ವರ್ತಿಸುತ್ತದೆ.

ನಿತ್ಯ ಸೇವಿಸಬೇಕಿಲ್ಲ

ಹಾಗಂತ ಕಿತ್ತಳೆ ಹಣ್ಣಿಸ ಸಿಪ್ಪೆ ಒಳ್ಳೆಯದು ಎಂದು ಅದನ್ನು ನಿತ್ಯವೂ ಸೇವಿಸಬಹುದು ಎಂದಲ್ಲ. ಹಾಗೆ ಸೇವಿಸುವುದೂ ಕೂಡಾ ಒಳ್ಳೆಯದಲ್ಲ. ಕಿತ್ತಳೆಯ ಸಿಪ್ಪೆ ಕಹಿ ರುಚಿಯನ್ನು ಹೊಂದಿರುತ್ತದೆ ಹಾಗೂ ಇದನ್ನು ಹಾಗೆಯೇ ತಿನ್ನಲಾಗುವುದಿಲ್ಲ ಎಂಬುದೂ ನಿಮಗೆ ಗೊತ್ತು. ಅಷ್ಟೇ ಅಲ್ಲ. ಕಿತ್ತಳೆಯ ಸಿಪ್ಪೆಯಲ್ಲಿ ಅದನ್ನು ಬೆಳೆಸುವ ಸಂದರ್ಭ ಸಿಂಪಡಿಸಿದ ರಾಜಾಯನಿಕಗಳೂ, ಕೀಟನಾಶಕಗಳೂ ಇರುವ ಸಂಭವ ಹೆಚ್ಚು. ಹೀಗಾಗಿ ಅದನ್ನು ಸರಿಯಾಘಿ, ಸರಿಯಾದ ಕ್ರಮದಲ್ಲಿ ತೊಳೆದುಕೊಂಡು ಕೆಲವು ಆಹಾರ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದು.

ಕ್ಯಾಂಡಿ

ಕಿತ್ತಳೆ ಸಿಪ್ಪೆಯನ್ನು ಸಕ್ಕರೆ ಪಾಕದಲ್ಲಿ ಹಾಕಿ ಮಕ್ಕಳಿಗಾಗಿ ಸಿಹಿ ಕ್ಯಾಂಡಿಗಳನ್ನು ಮಾಡಬಹುದು. ಸಿಪ್ಪೆಯನ್ನು 15 ನಿಮಿಷ ನೀರಿನಲ್ಲಿ ಹಾಕಿಟ್ಟು ನಂತರ ಚೆನ್ನಾಗಿ ತೊಳೆದು, ಅದನ್ನು ನೀರಿನಲ್ಲಿ ೧೫ ನಿಮಿಷ ಕುದಿಸಿ, ಸಿಪ್ಪೆಯನ್ನು ಸಕ್ಕರೆ ಪಾಕಕ್ಕೆ ಹಾಕಿ ಒಣಗಿಸುವ ಮೂಲಕ ಒಳ್ಳೆಯ ನೈಸರ್ಗಿಕ ಕ್ಯಾಂಡಿ ಮಾಡಬಹುದು.

ಸ್ಮೂದಿ

ಸಣ್ಣ ಸಣ್ಣ ತುಂಡುಗಳನ್ನು ನೀವು ಮಾಡುವ ಸ್ಮೂದಿಗೆ ಹಾಕಬಹುದು.

ಕಿತ್ತಳೆ ಕೇಕ್‌

ಕಿತ್ತಳೆ ಕೇಕ್‌ಗಳನ್ನು ಮಾಡುವಾಗ ಕಿತ್ತಳೆಯ ಸಿಪ್ಪೆಯನ್ನು ತುರಿದು ಒಂದೆರಡು ಚಮಚದಷ್ಟು ಪೇಸ್ಟ್‌ ತಯಾರಿಸಿ ಹಾಕಿದರೆ, ಯಾವುದೇ ಕೃತಕ ಘಮದ ಅವಶ್ಯಕತೆಯೇ ಇಲ್ಲ.

ಕಿತ್ತಳೆ ಸಿಪ್ಪೆಯ ಚಹಾ

ಕಿತ್ತಳೆ ಸಿಪ್ಪೆಯ ಚಹಾ ಮಾಡಿ ಕುಡಿಯಬಹುದು. ನಿತ್ಯವೂ ಅಲ್ಲದಿದ್ದರೂ, ಯಾವಾಗಲಾದರೊಮ್ಮೆ ಕುಡಿಯುವ ಮೂಲಕ ಇದರ ಲಾಭ ಪಡೆಯಬಹುದು.

ಇದನ್ನೂ ಓದಿ: Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ, ನೀವು ಮನೆಯಲ್ಲೇ ಮಾಡುವ ಫೇಸ್‌ಪ್ಯಾಕ್‌ಗಳಿಗೆ ಇವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಮುಖದ ಮೇಲಿನ ಕಲೆಗಳು, ಸುಕ್ಕು ನಿರಿಗೆಗಳಿಗೆ ಇದು ಬಹಳ ಒಳ್ಳೆಯದು. ಇದರ ನಿಯಮಿತ ಬಳಕೆಯಿಂದ ಮುಖ ತಾಜಾತನದಿಂದ ಹೊಳೆಯುತ್ತದೆ.

Continue Reading

ಆರೋಗ್ಯ

Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

ಅಲರ್ಜಿ ತೊಂದರೆಗಳು ಈಗ ಎಲ್ಲರಲ್ಲೂ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ. ಆದರೆ ಅದು ಹೇಗೆ ಬಂತು, ಕಡಿಮೆ ಮಾಡುವುದು ಹೇಗೆ ಎನ್ನುವುದಕ್ಕೆ ನಮ್ಮಲ್ಲಿ ಉತ್ತರವಿರುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ಒಂದೆರಡು ದಿನ ಔಷಧ ಪಡೆದು ಸುಮ್ಮನಾಗುತ್ತೇವೆ. ಇದು ಮತ್ತೊಮ್ಮೆ , ಮಗದೊಮ್ಮೆ ಉಂಟಾಗುತ್ತಲೇ ಇರುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಲರ್ಜಿಯನ್ನು ನಾವು ಸಣ್ಣ ವಯಸ್ಸಿನಲ್ಲೇ ದೂರ ಮಾಡಬಹುದು. ಅದು ಹೇಗೆ ಎಂಬುದನ್ನು ಸದ್ಗುರು (Sadhguru Jaggi Vasudev) ಹೇಳಿರುವುದು ಹೀಗೆ.

VISTARANEWS.COM


on

By

Sadhguru Jaggi Vasudev
Koo

ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳು (children’s) ಅಲರ್ಜಿ (allergies ) ತೊಂದರೆಯಿಂದ ಬಳಲುತ್ತಿರುತ್ತಾರೆ. ಎಷ್ಟೇ ಆರೈಕೆ ಮಾಡಿದರೂ ಸಂಪೂರ್ಣ ಗುಣಮುಖರಾಗುವುದಿಲ್ಲ. ಎಷ್ಟೋ ಬಾರಿ ಪೋಷಕರು (parents) ತಮ್ಮ ಮಕ್ಕಳಿಗೆ ಏಕೆ ಈ ತೊಂದರೆ ಕಾಣಿಸಿಕೊಂಡಿತು ಎಂದು ತಮ್ಮನ್ನು ತಾವು ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ ಅವರಿಗೆ ಇದಕ್ಕೆ ಉತ್ತರವೇ ಸಿಗುವುದಿಲ್ಲ. ಪ್ರಸಿದ್ಧ ಆಧ್ಯಾತ್ಮಿಕ ಮಾರ್ಗದರ್ಶಿ ಮತ್ತು ಆರೋಗ್ಯ ತಜ್ಞ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಇದೀಗ ಮಕ್ಕಳಲ್ಲಿ ಉಂಟಾಗುವ ಅಲರ್ಜಿ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರವನ್ನು ಹೇಳಿದ್ದಾರೆ.

ಅಲರ್ಜಿ ತೊಂದರೆಗಳು ಈಗ ಎಲ್ಲರಲ್ಲೂ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ. ಆದರೆ ಅದು ಹೇಗೆ ಬಂತು, ಕಡಿಮೆ ಮಾಡುವುದು ಹೇಗೆ ಎನ್ನುವುದಕ್ಕೆ ನಮ್ಮಲ್ಲಿ ಉತ್ತರವಿರುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ಒಂದೆರಡು ದಿನ ಔಷಧ ಪಡೆದು ಸುಮ್ಮನಾಗುತ್ತೇವೆ. ಇದು ಮತ್ತೊಮ್ಮೆ , ಮಗದೊಮ್ಮೆ ಉಂಟಾಗುತ್ತಲೇ ಇರುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಲರ್ಜಿಯನ್ನು ನಾವು ಸಣ್ಣ ವಯಸ್ಸಿನಲ್ಲೇ ದೂರ ಮಾಡಬಹುದು ಎಂದಿದ್ದಾರೆ ಅವರು.

ಮಗುವು ಅಲರ್ಜಿಯೊಂದಿಗೆ ಹೋರಾಡುವುದನ್ನು ನೋಡುವುದು ಪ್ರತಿಯೊಬ್ಬ ಪೋಷಕರಿಗೂ ಸಂಕಟ ಮತ್ತು ಅಸಮಾಧಾನವನ್ನು ಉಂಟುಮಾಡುತ್ತದೆ. ಎಷ್ಟೇ ಔಷಧ ಮಾಡಿದರೂ ಇದು ಗುಣವಾಗದೇ ಇರುವುದು ನಮ್ಮನ್ನು ಚಿಂತೆಗೆ ಈಡಾಗುವಂತೆ ಮಾಡುತ್ತದೆ. ಎಷ್ಟೋ ಬಾರಿ ಇದು ಪುಟ್ಟ ಮಕ್ಕಳಿಗೆ ತಮ್ಮ ಬದುಕಿನಲ್ಲಿ ಬೇಸರ, ನಿರಾಸೆಯನ್ನು ಉಂಟು ಮಾಡಬಹುದು. ಆದರೂ ಮಕ್ಕಳ ಈ ಅಲರ್ಜಿ ಸಮಸ್ಯೆಗಳನ್ನು ನೈಸರ್ಗಿಕವಾಗಿ ಪರಿಹರಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು, ಆಧ್ಯಾತ್ಮಿಕ ಚಿಂತಕರಾದ ಜಗ್ಗಿ ವಾಸುದೇವ್.

ಮಕ್ಕಳಲ್ಲಿ ಅಲರ್ಜಿಯನ್ನು ನಿರ್ವಹಿಸುವ ಕುರಿತು ಅವರು ತಮ್ಮ ಸಲಹೆಯನ್ನು ನೀಡಿದ್ದಾರೆ. ಸುಲಭವಾದ ಜೀವನಶೈಲಿ ಹೊಂದಾಣಿಕೆಯಿಂದ ಶಕ್ತಿಯುತವಾದ ಮನೆ ಚಿಕಿತ್ಸೆಗಳವರೆಗೆ ಎಲ್ಲವೂ ಅಲರ್ಜಿಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಮಕ್ಕಳ ಸಾಮಾನ್ಯ ಆರೋಗ್ಯವನ್ನು ಹೆಚ್ಚಿಸಲು ಪ್ರೇರಣೆಯಾಗುತ್ತದೆ ಎನ್ನುತ್ತಾರೆ ಅವರು.
ಇತ್ತೀಚಿಗೆ ಅವರು ಅಲರ್ಜಿಯ ಪ್ರಮುಖ ವಿಷಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಲರ್ಜಿಯನ್ನು ಜಯಿಸಲು ಪ್ರಮುಖ ಮಾರ್ಗಗಳನ್ನು ಸೂಚಿಸಿದ್ದಾರೆ.

ಇದನ್ನೂ ಓದಿ: Priyanka Chopra: ಬೆಳ್ಳುಳ್ಳಿ ಎಸಳು ಪಾದಗಳಿಗೆ ಉಜ್ಜುವುದರಿಂದ ಏನು ಪ್ರಯೋಜನ? ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ಮಕ್ಕಳ ಬಗ್ಗೆ ಮಾತನಾಡಿದ ಅವರು, ಅಲರ್ಜಿಯಿಂದ ಪರಿಹಾರ ಪಡೆಯಲು ಹಲವು ದಾರಿಗಳಿವೆ. ಆರೋಗ್ಯಕರ ಜೀವಿಗಳಿಗೆ ಆಹಾರ ಸೇವನೆಯಲ್ಲಿ ಕೆಲವು ಬದಲಾವಣೆಗಳನ್ನು ಸಲಹೆ ನೀಡಿದ್ದಾರೆ.

ಮಕ್ಕಳಿಗೆ ಅಲರ್ಜಿಗಳು ಹೋಗಬೇಕಾದರೆ ಹಾಲು ಮತ್ತು ಮಾಂಸದ ಉತ್ಪನ್ನಗಳಿಂದ ಅವರನ್ನು ದೂರವಿರಿಸಿ. ಇವು ತುಂಬಾ ಕೆಟ್ಟದಾಗಿ ಅಲರ್ಜಿ ಉಂಟು ಮಾಡಬಲ್ಲದು. ಸ್ವಲ್ಪ ಅಲರ್ಜಿ ಕಾಣಿಸಿ ಕೊಂಡರೆ ಪರವಾಗಿಲ್ಲ. ತುಂಬಾ ಕೆಟ್ಟದಾಗಿ ಅಲರ್ಜಿಯಾಗಿದ್ದರೆ ಮಾಂಸ ಉತ್ಪನ್ನಗಳನ್ನು ತ್ಯಜಿಸಿ ಸಾಕಷ್ಟು ತರಕಾರಿ, ತಾಜಾ ಹಣ್ಣು ಮತ್ತು ವಸ್ತುಗಳನ್ನೇ ಅವರಿಗೆ ಸೇವಿಸಲು ಕೊಡಿ. ಇದರಿಂದ ಅವರು ಬಹುಬೇಗನೆ ಅಲರ್ಜಿ ತೊಂದರೆಯಿಂದ ಗುಣಮುಖರಾಗುತ್ತಾರೆ ಎಂದು ಸದ್ಗುರು ತಿಳಿಸಿದ್ದಾರೆ.

Continue Reading

ಕರ್ನಾಟಕ

Run4Research: ಬೆಂಗಳೂರಿನಲ್ಲಿ ಜೂ.30ರಂದು ʼರನ್4ರೀಸರ್ಚ್ʼ ಓಟ

Run4Research: ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ (ಐ.ಎಸ್.ಸಿ.ಆರ್.) ವತಿಯಿಂದ ಜೂ.30ರಂದು ಭಾನುವಾರ ಬೆಳಿಗ್ಗೆ 5 ರಿಂದ 9 ರವರೆಗೆ ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ʼರನ್4ರೀಸರ್ಚ್ʼ ಕ್ಲಿನಿಕಲ್ ರೀಸರ್ಚ್ ಕುರಿತು ಅರಿವನ್ನು ಮೂಡಿಸಲು ಸವಾಲಿನ ಓಟ ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Run4Research programme on June 30 in Bengaluru
Koo

ಬೆಂಗಳೂರು: ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ (ಐ.ಎಸ್.ಸಿ.ಆರ್.) ವತಿಯಿಂದ ಜೂ.30 ರಂದು ಭಾನುವಾರ ಬೆಳಿಗ್ಗೆ 5 ಗಂಟೆಯಿಂದ 9 ರವರೆಗೆ ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ʼರನ್4ರೀಸರ್ಚ್ʼ (Run4Research) ಕ್ಲಿನಿಕಲ್ ರೀಸರ್ಚ್ ಕುರಿತು ಅರಿವನ್ನು ಮೂಡಿಸಲು ಸವಾಲಿನ ಓಟ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಸವಾಲಿನ ಓಟವು ಭಾರತದ ಉಜ್ವಲ ಕ್ಲಿನಿಕಲ್ ರೀಸರ್ಚ್ ಸಮುದಾಯಕ್ಕೆ ಅರಿವನ್ನು ಉತ್ತೇಜಿಸುವ ಗುರಿ ಹೊಂದಿದೆ. ಅನುಷ್ಠಾನದ ಪಾಲುದಾರ ಸೆಲ್ಲುಲಾದೊಂದಿಗೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ 3ಕೆ, 5ಕೆ ಮತ್ತು 10ಕೆ ವಿಭಾಗಗಳಿದ್ದು, ಎಲ್ಲ ಫಿಟ್ನೆಸ್ ಹಂತಗಳ ಭಾಗವಹಿಸುವವರಿಗೆ ಅವಕಾಶ ನೀಡುತ್ತದೆ. ಐ.ಸಿ.ಎಸ್.ಆರ್. ಕ್ಲಿನಿಕಲ್ ರೀಸರ್ಚ್ ಕ್ಷೇತ್ರದಲ್ಲಿ ತೊಡಗಿಕೊಂಡ ಮತ್ತು ಆರೋಗ್ಯದ ಉತ್ಸಾಹಿಗಳನ್ನು ಈ ಉತ್ಸಾಹಕರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದೆ.

ಇದನ್ನೂ ಓದಿ: Post Office: ಪೋಸ್ಟ್‌ ಆಫೀಸ್‌ ಉಳಿತಾಯ ಯೋಜನೆಗಳ ಬಡ್ಡಿದರ ಬದಲಾವಣೆ ಇಲ್ಲ; ಬಡ್ಡಿಯ ಪಟ್ಟಿ ಇಲ್ಲಿದೆ

ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ (ಐ.ಎಸ್.ಸಿ.ಆರ್.) ಭಾರತದಲ್ಲಿ ನೈತಿಕ ಮತ್ತು ಉನ್ನತ ಗುಣಮಟ್ಟದ ಕ್ಲಿನಿಕಲ್ ರೀಸರ್ಚ್ ಉತ್ತೇಜಿಸಲು ಬದ್ಧವಾದ ವೃತ್ತಿಪರ ಸಂಸ್ಥೆಯಾಗಿದೆ. ಐ.ಸಿ.ಎಸ್.ಆರ್.ನ ಉದ್ದೇಶ ಪಾಲುದಾರರೊಂದಿಗೆ ಸಹಯೋಗ ರೂಪಿಸುವುದು ಮತ್ತು ಆರೋಗ್ಯಸೇವಾ ಫಲಿತಾಂಶಗಳನ್ನು ಸುಧಾರಿಸಲು ಕ್ಲಿನಿಕಲ್ ರೀಸರ್ಚ್ ಸುಧಾರಣೆಯನ್ನು ಪ್ರತಿಪಾದಿಸುವುದು. ಹಲವಾರು ಉಪಕ್ರಮಗಳ ಮೂಲಕ ಐ.ಸಿ.ಎಸ್.ಆರ್. ದೇಶದಲ್ಲಿ ಕ್ಲಿನಿಕಲ್ ಟ್ರಯಲ್‌ಗಳ ವೈಜ್ಞಾನಿಕ, ನೈತಿಕ ಮತ್ತು ಕಾರ್ಯಾಚರಣೆಯ ಆಯಾಮಗಳನ್ನು ಹೆಚ್ಚಿಸಲು ಶ್ರಮಿಸುತ್ತದೆ.

ಇದನ್ನೂ ಓದಿ: Bengaluru Power Cut: ಬೆಂಗಳೂರು ನಿವಾಸಿಗಳೇ ಗಮನಿಸಿ; ಜೂ.29ರಂದು ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ ಅಧ್ಯಕ್ಷ ಡಾ. ಸನಿಶ್ ಡೇವಿಸ್ ಈ ಕಾರ್ಯಕ್ರಮದ ಕುರಿತು ಮಾತನಾಡಿ, ಕ್ಲಿನಿಕಲ್ ರೀಸರ್ಚ್ ರೋಗಿಗಳಿಗೆ ಹೊಸ ಚಿಕಿತ್ಸೆಗಳನ್ನು ತರುವಲ್ಲಿ ಅತ್ಯಂತ ಮುಖ್ಯವಾಗಿದೆ. ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಕಠಿಣ ಪರೀಕ್ಷೆಗಳಿಲ್ಲದೆ ಹೊಸ ಔಷಧಗಳು, ಲಸಿಕೆಗಳು ಮತ್ತು ವೈದ್ಯಕೀಯ ಸಾಧನಗಳನ್ನು ಬಳಕೆಗೆ ಅನುಮೋದಿಸಲು ಸಾಧ್ಯವಿಲ್ಲ. ಈ ಕಾರ್ಯಕ್ರಮವು ರೋಗಿಗಳಿಗೆ ಕ್ಲಿನಿಕಲ್ ಟ್ರಯಲ್‌ಗಳ ಪ್ರಾಮುಖ್ಯತೆ ಕುರಿತು ಮತ್ತು ಹೇಗೆ ಅವರ ಭಾಗವಹಿಸುವಿಕೆಯು ಅವರಿಗೆ ಮತ್ತು ಭವಿಷ್ಯದ ತಲೆಮಾರುಗಳಿಗೆ ಪ್ರಯೋಜನವಾಗಬಲ್ಲದು ಎಂದು ಅರಿವನ್ನು ಮೂಡಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

Continue Reading
Advertisement
Dengue Fever
ಚಿಕ್ಕಮಗಳೂರು11 mins ago

Dengue Fever : ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

Aiden Markram
ಕ್ರೀಡೆ21 mins ago

Aiden Markram: ಧೋನಿಯಂತೆ ಮಾರ್ಕ್ರಮ್​ ಕೂಡ ಲಕ್ಕಿ ಕ್ಯಾಪ್ಟನ್​; ಸಾಧನೆ ಹೀಗಿದೆ

Fahadh Faasil in trouble faces Human Rights Commission action
ಮಾಲಿವುಡ್26 mins ago

Fahadh Faasil: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು

Viral Video
ವೈರಲ್ ನ್ಯೂಸ್28 mins ago

Viral Video: ಖೈದಿ ಜೊತೆಗೆ ಮಹಿಳಾ ಪೊಲೀಸ್‌ ಅಧಿಕಾರಿ ಲೈಂಗಿಕ ಕ್ರಿಯೆ; ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ

5 Soldiers Killed
ದೇಶ31 mins ago

5 Soldiers Killed: ಲಡಾಕ್‌ನ ನದಿಯಲ್ಲಿ ಸೇನಾ ವಾಹನ ಮಗುಚಿ ಭೀಕರ ದುರಂತ; ಐವರು ಯೋಧರು ಹುತಾತ್ಮ

DK Shivakumar
ಕರ್ನಾಟಕ42 mins ago

DK Shivakumar: ಸಿಎಂ, ಡಿಸಿಎಂ ಚರ್ಚೆ ಇಲ್ಲ, ಬಾಯಿಗೆ ಬೀಗ ಹಾಕಿಕೊಂಡಿರಿ; ಡಿಕೆಶಿ ಖಡಕ್‌ ಎಚ್ಚರಿಕೆ

Actor Darshan Suffering From Sade Sati
ಸ್ಯಾಂಡಲ್ ವುಡ್52 mins ago

Actor Darshan: 2024 ಡೇಂಜರಸ್ ಇಯರ್ ಫಾರ್ ಮಿ ಅನ್ನೋದು `ಡೆವಿಲ್‌’ಗೆ ಮೊದಲೇ ಗೊತ್ತಿತ್ತಾ?

deepika padukone
Latest52 mins ago

Deepika Padukone: ‘ಕಲ್ಕಿ 2898 ಎಡಿ’ ಚಿತ್ರದ ದೀಪಿಕಾ ಪಡುಕೋಣೆ ನಗ್ನ ಚಿತ್ರ ಸೋರಿಕೆ; ನೆಟ್ಟಿಗರು ಹೇಳಿದ್ದೇನು?

attika babu
ಬೆಂಗಳೂರು ಗ್ರಾಮಾಂತರ53 mins ago

Attica Babu: ಕಳ್ಳರಿಂದ ಚಿನ್ನ ಖರೀದಿ; ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕ ಮತ್ತೊಮ್ಮೆ ಬಂಧನ

Shah Rukh Khan
ಪ್ರಮುಖ ಸುದ್ದಿ54 mins ago

Shah Rukh Khan: ನಟ ಶಾರುಖ್ ಖಾನ್ ಬಗ್ಗೆ ಶಾಕಿಂಗ್ ಸುದ್ದಿ ಕೊಟ್ಟ ನಟ ಗೋವಿಂದ್ ನಾಮದೇವ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ18 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಟ್ರೆಂಡಿಂಗ್‌