Momos craze | ನೀವು ಮೋಮೋಸ್‌ ಪ್ರಿಯರೇ? ಹಾಗಾದರೆ ತಿನ್ನುವ ಮೊದಲು ಇದನ್ನೋದಿ! - Vistara News

ಆರೋಗ್ಯ

Momos craze | ನೀವು ಮೋಮೋಸ್‌ ಪ್ರಿಯರೇ? ಹಾಗಾದರೆ ತಿನ್ನುವ ಮೊದಲು ಇದನ್ನೋದಿ!

ಯುಎಸ್‌ನ ಕೃಷಿ, ಆರೋಗ್ಯ ಹಾಗೂ ಮಾನವ ಸೇವೆಗಳ ವಿಭಾಗವು ನಡೆಸಿದ ಅಧ್ಯಯನವೊಂದು, ಹೆಚ್ಚುತ್ತಿರುವ ಮೋಮೋ ಪ್ರೇಮದ ಕುರಿತು ಕೆಲ ಆಘಾತಕಾರಿ ಅಂಶಗಳನ್ನು ಬಯಲು ಮಾಡಿದೆ. ಮೋಮೋಸ್‌ನಲ್ಲಿ ವ್ಯಾಪಕವಾಗಿ ಮೈದಾ ಬಳಕೆಯಿದೆ.

VISTARANEWS.COM


on

momos craze
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೀವು ಮೋಮೋಸ್‌ ಪ್ರಿಯರಾ? ದಿನವೂ ಎಲ್ಲಾದರೂ ಬೀದಿಬದಿಯಲ್ಲಿ ಹೋಗಿ ಮೋಮೋಸ್‌ ತಿನ್ನದಿದ್ದರೆ ಕಣ್ಣಿಗೆ ಸೊಂಪಾಗಿ ನಿದ್ದೆ ಹತ್ತುವುದಿಲ್ಲ ಎಂಬ ಪರಿಸ್ಥಿತಿ ತಲುಪಿದ್ದೀರಾ? ಅಥವಾ ವಾರದಲ್ಲಿ ಮೂರ್ನಾಲ್ಕು ಬಾರಿಯಾದರೂ ಸಂಜೆ ಕಚೇರಿ ಮುಗಿಸಿ ಮನೆಗೆ ಮರಳುವ ಸಮಯ ಒಂದು ಪ್ಲೇಟ್‌ ಮೋಮೋಸ್‌ ಸ್ವಾಹಾ ಮಾಡುತ್ತೀರೋ? ಮೋಮೋಸ್‌ ರುಚಿಯನ್ನು ಮನಸ್ಸಿಗೂ ಹೃದಯಕ್ಕೂ ಹೀಗೆ ಹಚ್ಚಿಕೊಂಡವರು ನೀವಾಗಿದ್ದರೆ, ಖಂಡಿತ ಒಂದಲ್ಲ, ಎರಡು ಮೂರು ಬಾರಿ ಯೋಚಿಸಿ. ಇದು ಪಿಜ್ಜಾ ಬರ್ಗರ್‌ನಂತೆ ಕೆಟ್ಟದ್ದಲ್ಲ ಎಂದು ಯೋಚಿಸುವವರಿಗೊಂದು ಶಾಕಿಂಗ್‌ ಸುದ್ದಿಯಿದೆ!

ಯುವ ಜನತೆಯನ್ನು ಮೋಡಿ ಮಾಡಿರುವ ಮೋಮೋಸ್‌ ಈಗ ಭಾರೀ ಟ್ರೆಂಡ್‌ನಲ್ಲಿರುವ ಸ್ಟ್ರೀಟ್‌ ಫುಡ್‌. ಹಬೆಯಲ್ಲಿ ಬೇಯಿಸಿದ, ಅಥವಾ ತಂದೂರಿ ಮಾಡಿದ ನಾನಾ ಬಗೆಯ ಮೋಮೋಸ್‌ ಅಥವಾ ಡಂಪ್ಲಿಂಗ್‌ಗಳು ಇಂದು ರುಚಿರುಚಿಯಾಗಿ ಸವಿಯಲು ಬೀದಿಬದಿಯಲ್ಲೇ ಸಾಕಷ್ಟು ಕಡಿಮೆ ಬೆಲೆಯಲ್ಲೇ ಲಭ್ಯವಿವೆ. ಇಂಥ ಮೋಮೋಗಳು ಹಾಗೂ ಡಂಪ್ಲಿಂಗ್‌ಗಳನ್ನು ದಿನವೂ ಸವಿದು ಹೊಟ್ಟೆ ತುಂಬಿಸಿಕೊಳ್ಳುವುದು ಬಹಳಷ್ಟು ಮಂದಿಗೆ ಇಂದು ಚಟವೂ ಆಗಿದೆ. ಇಂದು ರಾಜ್ಯ, ಭಾಷೆಗಳ ಹಂಗಿಲ್ಲದೆ ಎಲ್ಲಡೆ ದೊರೆಯುವ ಈ ಟಿಬೆಟಿಯನ್‌ ಸ್ಟ್ರೀಟ್‌ ಫುಡ್‌, ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದಾ? ಅಥವಾ ಎಲ್ಲ ಜಂಕ್‌ಗಳಂತೆ ಇದೂ ಕೂಡಾ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವ ಆಹಾರ ಸಾಲಿನಲ್ಲಿ ನಿಲ್ಲುತ್ತದೆಯೋ ಅಂತ ಒಮ್ಮೆಯಾದರೂ ಯೋಚಿಸಿದ್ದೀರಾ?

ಚಿಕನ್‌, ಫಿಶ್‌, ಪೋರ್ಕ್‌ ಹೀಗೆ ವೆಜ್‌ ಹಾಗೂ ನಾನ್‌ವೆಜ್‌ ವೆರೈಟಿಗಳಲ್ಲಿ ಸಿಗುವ ಹೀಗೆ ಮೋಮೋಸ್‌ಗಳು ಬಗೆಬಗೆಯ ಫ್ಲೇವರ್‌ಗಳಲ್ಲಿ ಇಂದು ಸವಿಯಲು ಸಿಗುತ್ತದೆ. ಟೊಮೇಟೋ ಹಾಗೂ ಮೆಣಸು ಹಾಕಿ ಮಾಡಲಾದ ಸ್ಪೈಸೀ ಡಿಪ್‌ಗಳ ಜೊತೆಗೆ ಮುಳುಗಿಸಿ ಮುಳುಗಿಸಿ ಆಹಾ ಎಂದು ಸವಿದು ತಿನ್ನಬಹುದಾದ ಈ ಮೋಮೋಸ್‌ ಎಂಬ ಸಮಕಾಲೀನ ಆಹಾರಕ್ಕೆ ಸಾಟಿಯೆಲ್ಲಿದೆ ಎಂದು ವಾದ ಮಂಡಿಸುವ ಮಂದಿಯೂ ಇಲ್ಲದಿಲ್ಲ. ಅಷ್ಟು ಜನಪ್ರಿಯವಾಗಿರುವ ಈ ಟಿಬೆಟಿಯನ್‌ ಡಿಶ್‌ ಅತಿಯಾದರೆ ಖಂಡಿತವಾಗಿಯೂ ನಾನಾ ಬಗೆಯ ತೊಂದರೆ ತಪ್ಪಿದ್ದಲ್ಲ. ಅಷ್ಟಕ್ಕೂ, ಬೀದಿಬದಿಯ ಬಹುತೇಕ ಮೋಮೋಸ್‌ ತಯಾರಾಗುವುದು ಮೈದಾದಿಂದಲೇ. ದಿನವೂ ಸಂಜೆ ಹೊತ್ತು, ಯಾವ ಪೋಷಕಾಂಶವೂ ಇಲ್ಲದ ಮೈದಾ ನಮ್ಮ ಹೊಟ್ಟೆ ಸೇರಿದರೆ, ಆಗುವ ಪರಿಣಾಮ ಖಂಡಿತ ಸಣ್ಣದಲ್ಲ.

ಹೌದು. ಒಳಗೆ, ಬಗೆಬಗೆಯ ತರಕಾರಿಗಳೋ, ಮೀನೋ, ಚಿಕನ್ನೋ ಹಾಕಿ ಇರುವ ಮೋಮೋಸ್‌ ಒಳ್ಳೆಯದೇ ತಾನೇ ಎಂಬ ವಾದ ಮಂಡಿಸುವ ಮಂದಿಯೂ ಇಲ್ಲದಿಲ್ಲ. ಆದರೆ, ಪ್ರತಿನಿತ್ಯ ಈ ತರಕಾರಿಯ ಜೊತೆಗೆ ಹೊಟ್ಟೆ ಸೇರುವ ಮೈದಾದಿಂದ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದೆ ಇರದು ಎನ್ನುತ್ತಾರೆ ಆರೋಗ್ಯ ತಜ್ಞರು. ಯುಎಸ್‌ನ ಕೃಷಿ, ಆರೋಗ್ಯ ಹಾಗೂ ಮಾನವ ಸೇವೆಗಳ ವಿಭಾಗವು ನಡೆಸಿದ ಅಧ್ಯಯನವೊಂದು, ಹೆಚ್ಚುತ್ತಿರುವ ಮೋಮೋ ಪ್ರೇಮದ ಕುರಿತು ಈ ಆಘಾತಕಾರಿ ಅಂಶಗಳನ್ನು ಬಯಲು ಮಾಡಿದೆ.

ಇದನ್ನೂ ಓದಿ | Avocado benefits | ಹಲವು ಕ್ಯಾನ್ಸರ್‌ಗಳಿಗೆ ಮದ್ದು ಈ ಬೆಣ್ಣೆ ಹಣ್ಣು

ಮೋಮೋಸ್‌ಗಳನ್ನು ಮಾಡಲು ವ್ಯಾಪಕವಾಗಿ ಬಳಕೆಯಾಗುವುದು ಮೈದಾ. ಇಂದು ಆಹಾರಗಳಲ್ಲಿ ಯಥೇಚ್ಛವಾಗಿ ಮೈದಾ ಬಳಕೆಯಾಗುತ್ತಿದ್ದು, ಯಾವುದೇ ಪೋಷಕಾಂಶಗಳಿಲ್ಲದೆ ಇರುವ ಈ ಮೈದಾ ಆರೋಗ್ಯಕ್ಕೆ ಬಹಳಷ್ಟು ಹಾನಿಯನ್ನು ಉಂಟು ಮಾಡುತ್ತದೆ ಎಂದು ಈ ಸಂಶೋಧನಾ ವರದಿ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಬೀದಿಬದಿಯ ತಿಂಡಿಗಳು ನಮ್ಮ ಇನನಿತ್ಯದ ಆಹಾರ ಪದ್ಧತಿಯೊಂದಿಗೆ ಸೇರಿಕೊಂಡಿದೆ. ಇವುಗಳ ಪೈಕಿ ಮೋಮೋಸ್‌ ಕೂಡಾ ಒಂದು. ಮೋಮೋಸ್‌ನಲ್ಲೂ ವ್ಯಾಪಕವಾಗಿ ಮೈದಾ ಬಳಕೆಯಿದ್ದು, ರಸ್ತೆಬದಿಯ ಮೋಮೋ ಸ್ಟಾಲ್‌ಗಳು, ಯಾವ ರೀತಿಯಲ್ಲೂ, ಸ್ವಚ್ಛತೆ ಹಾಗೂ, ಪೋಷಕಾಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಹೀಗಾಗಿ ಹೊಟ್ಟೆಗೆ ಮೈದಾವಷ್ಟೇ ಸೇರುತ್ತಿದೆ ಎಂದು ಅದು ಹೇಳಿದೆ.

ಅತಿಯಾದ ಮೈದಾ ಬಳಕೆಯಿಂದ ದೇಹಕ್ಕೆ ಪಿಷ್ಟದ ಅಂಶ ಹೆಚ್ಚು ಸೇರುತ್ತಿದ್ದು, ನಾರಿನಂಶದ ಕೊರತೆಯಾಗುತ್ತಿದೆ. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚು ಮಾಡಲು ಇದು ಪ್ರೇರಣೆ ನೀಡುತ್ತಿದ್ದು, ಸಣ್ಣ ವಯಸ್ಸಿನಲ್ಲಿಯೇ ಮಧುಮೇಹದಂತಹ ಆರೋಗ್ಯ ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಹೃದಯ ಸಂಬಂಧೀ ಕಾಯಿಲೆಗಳಿಗೂ ಬುನಾದಿ ಹಾಕುತ್ತದೆ ಎಂದು ವರದಿ ಹೇಳಿದೆ.

ಮೈದಾ ತಯಾರು ಮಾಡುವ ಸಂದರ್ಭ ಗೋಧಿಯಲ್ಲಿರುವ ಎಲ್ಲ ಒಳ್ಳೆಯ ಪೋಷಕಾಂಶಗಳೂ ನಷ್ಟವಾಗುತ್ತಿದ್ದು, ವಿಟಮಿನ್‌, ಬಿ, ಇ, ಕಬ್ಬಿಣಾಂಶ, ಮೆಗ್ನೀಶಿಯಂ, ನಾರಿನಂಶ ಯಾವುದೂ ಇದರಲ್ಲಿಲ್ಲ. ಹಾಗಾಗಿ, ತೂಕದಲ್ಲಿ ಏರಿಕೆ, ಬೊಜ್ಜು, ಅಧಿಕ ರಕ್ತದೊತ್ತಡ ಹಾಗೂ ಕ್ಯಾನ್ಸರ್‌ನಂತಹ ತೊಂದರೆಗಳಿಗೂ ಆಹ್ವಾನ ನೀಡುತ್ತವೆ ಎನ್ನಲಾಗಿದೆ.

ಇದನ್ನೂ ಓದಿ | Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Uttara Kannada News: ಸಾಂಕ್ರಾಮಿಕ ರೋಗಗಳ ಜಾಗೃತಿ ಮೂಡಿಸಲು ಯಲ್ಲಾಪುರ ತಹಸೀಲ್ದಾರ್ ಸೂಚನೆ

Uttara Kannada News: ಮಳೆಗಾಲ ಪ್ರಾರಂಭವಾಗುತ್ತಿದ್ದು, ಕಲುಷಿತ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಯಲ್ಲಾಪುರ ತಹಸೀಲ್ದಾರ್ ತನುಜಾ ಟಿ. ಸವದತ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Yallapur Tehsildar Tanuja T savadatti instructed to create awareness about infectious diseases
Koo

ಯಲ್ಲಾಪುರ: ಮಳೆಗಾಲ ಪ್ರಾರಂಭವಾಗುತ್ತಿದ್ದು, ಕಲುಷಿತ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ (infectious diseases) ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಹಸೀಲ್ದಾರ್ ತನುಜಾ ಟಿ ಸವದತ್ತಿ (Uttara Kannada News) ಹೇಳಿದರು.

ಶುಕ್ರವಾರ ಮಿನಿ ವಿಧಾನಸೌಧದಲ್ಲಿ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕುರಿತು ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ನಿರ್ವಹಣೆ ತುರ್ತು ಅವಶ್ಯಕತೆಯಾಗಿದೆ. ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಬ್ಲೀಚಿಂಗ್ ಪೌಂಡರ್ ಬಳಸಿ ಸ್ವಚ್ಛಗೊಳಿಸುವುದು, ಕುಡಿಯುವ ನೀರು ಕಲುಷಿತವಾಗದಂತೆ ಪೂರೈಕೆ ವ್ಯವಸ್ಥೆಯಲ್ಲಿ ಸೋರುವಿಕೆಗಳನ್ನು ಗುರುತಿಸಿ ತಕ್ಷಣ ದುರಸ್ತಿಗೊಳಿಸಬೇಕು. ಡೆಂಗ್ಯೂ, ಚಿಕುನ್‌ಗುನ್ಯ, ಮಲೇರಿಯಾ, ಆನೆಕಾಲುರೋಗ, ಮೆದುಳು ಜ್ವರಗಳ ಬಗ್ಗೆ ಕ್ಷೇತ್ರ ಮಟ್ಟದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: Indian 2: ಜು.12ಕ್ಕೆ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರ ರಿಲೀಸ್‌

ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, ಕಲುಷಿತ ನೀರಿನಿಂದ ವಾಂತಿ, ಭೇದಿ, ಅತಿಸಾರ ಭೇದಿ, ಕಾಲರಾ, ಕರುಳು ಬೇನೆ, ಕಾಮಾಲೆ ರೋಗಗಳು ಕಾಣಿಸಿಕೊಳ್ಳುವ ಸಂಭವ ಇರುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಾಯಿಸಿ ಆರಿಸಿದ ನೀರನ್ನೇ ಕುಡಿಯುವುದು ಸೂಕ್ತ. ಇಲಾಖಾ ಸಿಬ್ಬಂದಿಗಳು ಮನೆ ಭೇಟಿ ನೀಡಿದಾಗ ಜ್ವರ ಮತ್ತು ಇತರೆ ಕಾಯಿಲೆಗಳಿದ್ದರೆ ಸರಿಯಾಗಿ ಮಾಹಿತಿ ನೀಡಬೇಕು ಎಂದ ಅವರು, ಓ.ಆರ್.ಎಸ್. ತಯಾರಿಸಿ ಬಳಸುವ ವಿಧಾನ, ಸೊಳ್ಳೆ ನಿಯಂತ್ರಣ, ವೈಯಕ್ತಿಕ ಸ್ವಚ್ಛತೆ, ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಿಕೊಳ್ಳುವ ಕುರಿತು ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಎಲ್ಲ ಇಲಾಖೆಗಳ ಸಹಕಾರ ಮತ್ತು ಸಮನ್ವಯತೆ ಬಹಳ ಮುಖ್ಯವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕ್ಷಿಪ್ರ ಪ್ರತಿಕ್ರಿಯಾ ತಂಡ ರಚಿಸಲಾಗಿದ್ದು ಯಾವುದೇ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯಿಲೆಗಳು ಕಂಡು ಬಂದರೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಡೆದ ಲಸಿಕಾ ಕಾರ್ಯಪಡೆಯ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಆರ್‌.ಸಿ.ಎಚ್.‌ ಅಧಿಕಾರಿ ಡಾ. ನಟರಾಜ್‌ ಕೆ., ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳಲ್ಲಿ ದಡಾರ ಕೂಡ ಒಂದಾಗಿದ್ದು, ದಡಾರ ನಿರ್ಮೂಲನೆಗೆ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Washing Machine Cleaning Tips: ವಾಷಿಂಗ್ ಮೆಷಿನ್ ಹೆಚ್ಚು ಬಾಳಿಕೆ ಬರಬೇಕೆ? ಈ ರೀತಿ ಸ್ವಚ್ಛಗೊಳಿಸಿ

ಸಭೆಯಲ್ಲಿ ಬಿಪಿಎಂ ಎಸ್‌.ಎಸ್‌. ಪಾಟೀಲ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟೆ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಟಿ. ಭಟ್ಟ ವಂದಿಸಿದರು.

Continue Reading

ಲೈಫ್‌ಸ್ಟೈಲ್

Washing Machine Cleaning Tips: ವಾಷಿಂಗ್ ಮೆಷಿನ್ ಹೆಚ್ಚು ಬಾಳಿಕೆ ಬರಬೇಕೆ? ಈ ರೀತಿ ಸ್ವಚ್ಛಗೊಳಿಸಿ

ಮನೆಯಲ್ಲಿರುವ ವಾಷಿಂಗ್ ಮೆಷಿನ್ ಅನ್ನು ತಿಂಗಳಿಗೊಮ್ಮೆಯಾದರೂ ಚೆನ್ನಾಗಿ ಸ್ವಚ್ಛ ಮಾಡಲೇಬೇಕು. ಇಲ್ಲವಾದರೆ ಇದು ಸೋಂಕು ಹರಡುವ ಮೂಲವಾಗಬಹುದು. ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಕೆಲವು ಸರಳ ಟಿಪ್ಸ್ (Washing Machine Cleaning Tips) ಇಲ್ಲಿದೆ.

VISTARANEWS.COM


on

By

Washing Machine Cleaning Tips
Koo

ಮನೆಯಲ್ಲಿರುವ ವಾಷಿಂಗ್ ಮೆಷಿನ್ (Washing Machine Cleaning Tips) ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ಅದು ಸೂಕ್ಷ್ಮಜೀವಿಗಳಿಂದ (germs) ಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹುಮುಖ್ಯ, ಇಲ್ಲವಾದರೆ ಬಟ್ಟೆಯ (cloth) ಮೂಲಕ ಅದು ನಮ್ಮ ದೇಹವನ್ನು ಪ್ರವೇಶಿಸಬಹುದು. ಇದರಿಂದ ಚರ್ಮದ ಕಾಯಿಲೆಗಳು (skin problem) ಕಾಣಿಸಿಕೊಳ್ಳಬಹುದು. ಹೀಗಾಗಿ ವಾಷಿಂಗ್ ಮೆಷಿನ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ.

ವಾಷಿಂಗ್ ಮೆಷಿನ್ ಚೆನ್ನಾಗಿ ಕಾರ್ಯ ನಿರ್ವಹಿಸಲು ಆಗಾಗ್ಗೆ ಸ್ವಚ್ಛಗೊಳಿಸುವುದು ಅತ್ಯಗತ್ಯ. ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದರೆ ಉತ್ತಮ. ಇದಕ್ಕಾಗಿ ಕೆಲವೊಂದು ಸರಳ ವಿಧಾನಗಳಿವೆ.

ಯಾವುದರಿಂದ ಸ್ವಚ್ಛಗೊಳಿಸಬಹುದು?

ವಾಷಿಂಗ್ ಮೆಷಿನ್ ಅನ್ನು ಸ್ವಚ್ಛಗೊಳಿಸುವ ಮೊದಲು ಯಾವುದರಿಂದ ಸ್ವಚ್ಛ ಮಾಡುವುದು ಎಂಬುದನ್ನು ನೋಡಿಕೊಳ್ಳಿ. ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಬಿಳಿ ವಿನೆಗರ್, ಅಡಿಗೆ ಸೋಡಾ, ಮೈಕ್ರೋಫೈಬರ್ ಬಟ್ಟೆ ಅಥವಾ ಸ್ಪಾಂಜ್, ಹಳೆಯ ಹಲ್ಲುಜ್ಜುವ ಬ್ರಷ್, ಬಿಸಿ ನೀರು, ಸೌಮ್ಯವಾದ ಸಾಬೂನು ಮತ್ತು ಬಕೆಟ್ ಅಗತ್ಯವಾಗಿರುತ್ತದೆ.

ಡ್ರಾಯರ್‌ಗಳನ್ನು ಸ್ವಚ್ಛಗೊಳಿಸಿ

ವಾಷಿಂಗ್ ಮೆಷಿನ್‌ನಲ್ಲಿ ಮೊದಲು ಡ್ರಾಯರ್‌ಗಳನ್ನು ತೆಗೆದು ಸ್ವಚ್ಛಗೊಳಿಸಿ. ಬಿಸಿ ಸಾಬೂನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಯಾವುದೇ ಕಲೆಗಳು ಇದ್ದರೆ ಸ್ಕ್ರಬ್ ಮಾಡಲು ಹಳೆಯ ಟೂತ್ ಬ್ರಷ್ ಅನ್ನು ಬಳಸಿ. ಡ್ರಾಯರ್‌ಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಅವುಗಳನ್ನು ಯಂತ್ರಕ್ಕೆ ಮರುಸೇರಿಸುವ ಮೊದಲು ಒಣಗಲು ಬಿಡಿ.

ವಿನೆಗರ್‌ನೊಂದಿಗೆ ಬಿಸಿ ನೀರು

ಎರಡು ಕಪ್ ಬಿಳಿ ವಿನೆಗರ್ ಅನ್ನು ನೇರವಾಗಿ ವಾಷಿಂಗ್ ಮೆಷಿನ್‌ಗೆ ಹಾಕಿ. ಬಿಸಿ ನೀರು ಹಾಕಿ ತಿರುಗಿಸಿ. ವಿನೆಗರ್ ಮೆಷಿನ್‌ನ ಒಳಗೆ ಇರುವ ಶಿಲೀಂಧ್ರವನ್ನು ಕರಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಹಿತಕರ ವಾಸನೆಯನ್ನು ತೊಡೆದುಹಾಕುತ್ತದೆ.

ಬಾಗಿಲನ್ನು ಸ್ವಚ್ಛಗೊಳಿಸಿ

ವಾಷಿಂಗ್ ಮೆಷಿನ್‌ನ ಬಾಗಿಲಿನ ಸಂಧುಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ. ಇದಕ್ಕಾಗಿ ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ವಿನೆಗರ್‌ ಅನ್ನು ಸಮ ಪ್ರಮಾಣದಲ್ಲಿ ಹಾಕಿ ದ್ರಾವಣವನ್ನು ಬಾಗಿಲಿಗೆ ಸಿಂಪಡಿಸಿ. ಬಳಿಕ ಮೈಕ್ರೋಫೈಬರ್ ಬಟ್ಟೆ ಅಥವಾ ಸ್ಪಂಜನ್ನು ಬಳಸಿ ಉಜ್ಜಿ. ಕೊಳಕು ಸಂಗ್ರಹಗೊಳ್ಳುವ ಭಾಗಗಳತ್ತ ವಿಶೇಷ ಗಮನಕೊಡಿ.

ಇದನ್ನೂ ಓದಿ: Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!

ಫಿಲ್ಟರ್ ತೆಗೆದು ಸ್ವಚ್ಛಗೊಳಿಸಿ

ವಾಷಿಂಗ್ ಮೆಷಿನ್‌ನಲ್ಲಿ ತೆಗೆಯಬಹುದಾದ ಫಿಲ್ಟರ್ ಹೊಂದಿದ್ದರೆ ಅದನ್ನು ಪತ್ತೆ ಮಾಡಿ. ಅದರಲ್ಲಿರುವ ಸಂಗ್ರಹವಾಗಿರುವ ಕೊಳಕು ವಸ್ತುಗಳನ್ನು ತೆಗೆಯಿರಿ. ಫಿಲ್ಟರ್ ಅನ್ನು ಸ್ವಚ್ಛಗೊಳಿಸಲು ಬಿಸಿ ಸಾಬೂನು ನೀರು ಮತ್ತು ಬ್ರಷ್ ಅನ್ನು ಬಳಸಿ. ಅನಂತರ ಅದನ್ನು ಮರುಸ್ಥಾಪಿಸುವ ಮೊದಲು ಅದನ್ನು ಸಂಪೂರ್ಣವಾಗಿ ತೊಳೆಯಿರಿ.

ಬೇಕಿಂಗ್ ಸೋಡಾ ಬಳಸಿ

ವಿನೆಗರ್‌ನಿಂದ ಸ್ವಚ್ಛಗೊಳಿಸಿದ ಬಳಿಕ ಒಂದು ಕಪ್ ಅಡಿಗೆ ಸೋಡಾವನ್ನು ನೇರವಾಗಿ ತೊಳೆಯುವ ಯಂತ್ರಕ್ಕೆ ಹಾಕಿ ಬಿಸಿ ನೀರು ಬೆರೆಸಿ ತಿರುಗಿಸಿ. ಇದು ವಾಷಿಂಗ್ ಮೆಷಿನ್‌ನಲ್ಲಿರುವ ದುರ್ಗಂಧವನ್ನು ದೂರ ಮಾಡುತ್ತದೆ.

ಹೊರಭಾಗ ಸ್ವಚ್ಛತೆ

ವಾಷಿಂಗ್ ಮೆಷಿನ್‌ನ ಮೇಲ್ ಭಾಗವನ್ನು ಸ್ವಚ್ಛವಾದ ಒದ್ದೆ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಇದರಲ್ಲಿರುವ ಬಟನ್ ಗಳ ಬಗ್ಗೆ ಎಚ್ಚರವಿರಲಿ. ಯಾಕೆಂದರೆ ಈ ಪ್ರದೇಶಗಳು ಕಾಲಾನಂತರದಲ್ಲಿ ಧೂಳು ಮತ್ತು ಕೊಳೆಯನ್ನು ಸಂಗ್ರಹಿಸಬಹುದು.

ಗಾಳಿಯಲ್ಲಿ ಒಣಗಲು ಬಿಡಿ

ವಾಷಿಂಗ್ ಮೆಷಿನ್ ಸ್ವಚ್ಛತೆ ಪೂರ್ಣಗೊಂಡ ಬಳಿಕ ಒಳಭಾಗವನ್ನು ಗಾಳಿಯಲ್ಲಿ ಸಂಪೂರ್ಣವಾಗಿ ಒಣಗಲು ಬಿಡಿ. ಇದಕ್ಕಾಗಿ ಬಾಗಿಲು ತೆರೆದಿಡಿ. ಇದು ಶಿಲೀಂಧ್ರ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.

ವಾಷಿಂಗ್ ಮೆಷಿನ್ ಅನ್ನು ತಿಂಗಳಿಗೊಮ್ಮೆಯಾದರೂ ಈ ರೀತಿ ಸ್ವಚ್ಛ ಮಾಡಿದರೆ ಇದು ವಾಷಿಂಗ್ ಮೆಷಿನ್ ಹೆಚ್ಚು ಕಾಲ ಬಾಳಿಕೆ ಬರಲು ಸಹಾಯ ಮಾಡುವುದು.

Continue Reading

ಪ್ರಮುಖ ಸುದ್ದಿ

Ebola Virus: ಲ್ಯಾಬ್‌ನಲ್ಲಿ ಮತ್ತೊಂದು ಡೆಡ್ಲಿ ವೈರಸ್‌ ಸೃಷ್ಟಿಸಿದ ಚೀನಾ; ಈ ಲಕ್ಷಣ ಕಂಡರೆ ಮರಣ ನಿಶ್ಚಿತ!

Ebola Virus: ಎಬೋಲಾ ಸಾಂಕ್ರಾಮಿಕವಾಗಿದ್ದು, ಇದು ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಕೋತಿ, ಬಾವಲಿಯ ರಕ್ತ, ಸೋಂಕಿನಿಂದ ಕೂಡಿದ ಗಾಳಿ ಅಥವಾ ಎಬೋಲಾ ಸೋಂಕಿತನ ವೀರ್ಯದಿಂದ ಹರಡುತ್ತದೆ ಎಂದು ತಿಳಿದುಬಂದಿದೆ. ಸೋಂಕು ತಗುಲಿದವರು ಬಹು ಅಂಗಾಂಗ ವೈಫಲ್ಯದಿಂದ ಮೃತಪಡುತ್ತಾರೆ ಎಂಬುದಾಗಿ ಚೀನಾದ ವಿಜ್ಞಾನಿಗಳು ಹೇಳಿದ್ದಾರೆ. ಇದರಿಂದಾಗಿ ಭಾರತ ಸೇರಿ ಜಗತ್ತಿನಾದ್ಯಂತ ಭೀತಿ ಎದುರಾಗಿದೆ.

VISTARANEWS.COM


on

Ebola Virus
Koo

ಬೀಜಿಂಗ್: ಜಗತ್ತಿಗೇ ಕೊರೊನಾ (Corona Virus) ಎಂಬ ಮಹಾಮಾರಿಯನ್ನು ಹರಡಿ, ಕೋಟ್ಯಂತರ ಜನರ ಪ್ರಾಣಕ್ಕೆ ಕುತ್ತು ತಂದ ಚೀನಾ ಈಗ ಮತ್ತೊಂದು ಜೈವಿಕ ಯುದ್ಧಕ್ಕೆ ಮುಂದಾಗಿದೆ. ಮಾರಣಾಂತಿಕ ಎಬೋಲಾ ರೂಪಾಂತರಿ ಸೋಂಕನ್ನು (Ebola Mutant Virus) ಚೀನಾದ ವಿಜ್ಞಾನಿಗಳು ಸೃಷ್ಟಿಸಿದ್ದು, ಇದರಿಂದ ಜಗತ್ತಿಗೇ ಆತಂಕ ಎದುರಾಗಿದೆ. ಹೆಬೈ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ವಿಜ್ಞಾನಿಗಳು ಎಬೋಲಾ ರೂಪಾಂತರಿ ವೈರಸ್‌ಅನ್ನು ಸೃಷ್ಟಿಸಿದ್ದಾರೆ. ಹ್ಯಾಮ್‌ಸ್ಟರ್‌ಗಳಿಗೆ (ಕಿರುಕಡಿಗ-ಇಲಿಯಂತ ಚಿಕ್ಕ ಪ್ರಾಣಿ) ವೈರಸ್‌ ಇಂಜೆಕ್ಟ್‌ ಮಾಡಿದರೆ, ಮೂರೇ ದಿನಗಳಲ್ಲಿ ಅವರು ಸಾಯುತ್ತವೆ ಎಂದು ಸೈನ್ಸ್‌ ಡೈರೆಕ್ಟ್‌ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ.

ಸಿರಿಯಾ ಮೂಲದ, ಮೂರು ವಾರಗಳ ಹಿಂದೆ ಜನಿಸಿದ ಹ್ಯಾಮ್‌ಸ್ಟರ್‌ಗಳಿಗೆ ಎಬೋಲಾ ರೂಪಾಂತರಿ ತಳಿಯ ವೈರಸ್‌ಅನ್ನು ಇಂಜೆಕ್ಟ್‌ ಮಾಡಲಾಗಿತ್ತು. 5 ಗಂಡು ಹಾಗೂ 5 ಹೆಣ್ಣು ಹ್ಯಾಮ್‌ಸ್ಟರ್‌ಗಳಿಗೆ ಸೋಂಕನ್ನು ಇಂಜೆಕ್ಷನ್‌ ಮೂಲಕ ನೀಡಲಾಗಿತ್ತು. ಮೂರು ದಿನಗಳಲ್ಲಿಯೇ ಅವರು ಮೃತಪಟ್ಟವು” ಎಂಬುದಾಗಿ ವಿಜ್ಞಾನಿಗಳೇ ಹೇಳಿದ್ದಾರೆ. ಹಾಗಾಗಿ, ಇದು ಕೂಡ ಕೊರೊನಾ ಸಾಂಕ್ರಾಮಿಕದಂತೆ ಮಾರಣಾಂತಿಕವಾಗಿದ್ದು, ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಿಗೆ ಕಮ್ಯುನಿಸ್ಟ್‌ ರಾಷ್ಟ್ರವು ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಮನುಷ್ಯರಿಗೆ ಹೇಗೆ ಅಪಾಯ?

ಹ್ಯಾಮ್‌ಸ್ಟರ್‌ಗಳಿಗೆ ಉಂಟಾದ ಪರಿಣಾಮವೇ ಮನುಷ್ಯರಿಗೂ ಆಗಲಿದೆ. ಮೊದಲು ಜೀವಕೋಶಗಳಿಗೆ ಹರಡುವ ಸೋಂಕು, ಹೃದಯ, ಶ್ವಾಸಕೋಶ, ಹೊಟ್ಟೆ, ಲಿವರ್‌ ಸೇರಿ ಹಲವು ಅಂಗಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಕೊನೆಗೆ, ಬಹು ಅಂಗಾಂಗ ವೈಫಲ್ಯದಿಂದ ಮನುಷ್ಯನು ಕೂಡ ಮೂರ್ನಾಲ್ಕು ದಿನಗಳಲ್ಲಿಯೇ ಮೃತಪಡಲಿದ್ದಾನೆ ಎಂಬುದಾಗಿ ಚೀನಾ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಜಗತ್ತಿನಾದ್ಯಂತ ಭೀತಿ ಎದುರಾಗಿದೆ.

ಎಬೋಲಾ ಹರಡುವುದು ಹೇಗೆ?

ಎಬೋಲಾ ಸಾಂಕ್ರಾಮಿಕವಾಗಿದ್ದು, ಇದು ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಕೋತಿ, ಬಾವಲಿಯ ರಕ್ತ, ಸೋಂಕಿನಿಂದ ಕೂಡಿದ ಗಾಳಿ ಅಥವಾ ಎಬೋಲಾ ಸೋಂಕಿತನ ವೀರ್ಯದಿಂದ ಹರಡುತ್ತದೆ ಎಂದು ತಿಳಿದುಬಂದಿದೆ. ಗಂಟಲು ನೋವು, ಸ್ನಾಯು ನೋವು ಮತ್ತು ತಲೆನೋವು, ಯಕೃತ್ತು ಮತ್ತು ಮೂತ್ರ ಕಾರ್ಯನಿರ್ವಹಣೆಯ ಹದಗೆಡುತ್ತದೆ. ಸಾಮಾನ್ಯವಾಗಿ ವಾಕರಿಕೆ, ವಾಂತಿ ಮತ್ತು ಭೇದಿ ಇದರ ಲಕ್ಷಣಗಳಾಗಿವೆ. ಬಾವಲಿ, ಕೋತಿಯಂತಹ ಪ್ರಾಣಿಗಳಿಂದ ದೂರ ಇರುವುದು ಒಳಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Chocolate: ಏನಿದು ಮೀಲಿಬಗ್‌ ವೈರಸ್‌? ಚಾಕೊಲೇಟ್ ದರ ಏರಿಕೆಗೂ ಇದಕ್ಕೂ ಏನು ಸಂಬಂಧ?

Continue Reading

ಆರೋಗ್ಯ

Fruit Juice Side Effects: ಹಣ್ಣು ತಿಂದರೆ ಒಳ್ಳೆಯದೋ, ಹಣ್ಣಿನ ಜ್ಯೂಸ್‌ ಕುಡಿದರೆ ಒಳ್ಳೆಯದೋ?

ಬೇಸಿಗೆಯಲ್ಲಿ ಹಣ್ಣಿನ ಜ್ಯೂಸ್‌ಗೆ ಭಾರಿ ಬೇಡಿಕೆ. ಆದರೆ ತಾಜಾ ಹಣ್ಣುಗಳ ಜ್ಯೂಸ್‌ಗಳಿಂದಲೂ ಕೆಲವು ಸಮಸ್ಯೆಗಳಿವೆ. ಇವೂ ಕೂಡಾ ನಾವು ಅಂದುಕೊಂಡಷ್ಟು ಆರೋಗ್ಯಕರವಲ್ಲ. ಬನ್ನಿ, ಹಣ್ಣುಗಳ ಜ್ಯೂಸ್‌ ಕೂಡಾ ಅತಿಯಾಗಬಾರದು (Fruit Juice Side Effects) ಯಾಕೆ ಎಂಬುದನ್ನು ನೋಡೋಣ.

VISTARANEWS.COM


on

Fruit Juice Side Effects
Koo

ಬೇಸಿಗೆ ಕಾಲ ಹಾಗೂ ಜ್ಯೂಸ್‌ಗಳಿಗೆ ಇರುವ ಸಂಬಂಧ ದೊಡ್ಡದು. ಬೇಸಿಗೆಯ ಬಿಸಿಲಿಗೆ ತಂಪಾದ ಜ್ಯೂಸ್‌ ಹೀರಿದರೆ ಆಗುವ ನೆಮ್ಮದಿ, ಸುಖ ಪದಗಳಲ್ಲಿ ವರ್ಣಿಸುವುದು ಕಷ್ಟವೇ. ಆದರೂ, ಆರೋಗ್ಯದ ವಿಚಾರಕ್ಕೆ ಬಂದರೆ, ಹಲವರು, ನೈಸರ್ಗಿಕವಾದ ಜ್ಯೂಸ್‌ಗಳನ್ನು ಮಾಡಿ ಕುಡಿಯುವುದು ಒಳ್ಳೆಯದೇ ಹೊರತು, ಹೊರಗೆ ರೆಡಿಮೇಡ್‌ ಆಗಿ ಟೆಟ್ರಾ ಪ್ಯಾಕ್‌ಗಳಲ್ಲಿ ಸಿಗುವ ಕೃತಕ ರುಚಿಗಳ ಹಣ್ಣುಗಳ ಪೇಯಗಳು ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಜ್ಯೂಸ್‌ ಅಂಗಡಿಗಳಲ್ಲಿ ಬೇಸಿಗೆಯಲ್ಲಿ ನೆರೆದಿರುವ ಕಿಕ್ಕಿರಿದ ಜನಸಂದಣಿಯೇ ಇದಕ್ಕೆ ಸಾಕ್ಷಿ. ಆದರೆ, ತಾಜಾ ಹಣ್ಣುಗಳ ಜ್ಯೂಸ್‌ಗಳಿಂದಲೂ ಕೆಲವು ಸಮಸ್ಯೆಗಳಿವೆ. ಇವೂ ಕೂಡಾ ನಾವು ಅಂದುಕೊಂಡಷ್ಟು ಆರೋಗ್ಯಕರವಲ್ಲ. ಬನ್ನಿ, ಹಣ್ಣುಗಳ ಜ್ಯೂಸ್‌ ಕೂಡಾ ಅತಿಯಾಗಬಾರದು (Fruit Juice Side Effects) ಯಾಕೆ ಎಂಬುದನ್ನು ನೋಡೋಣ.

Drinking Glasses with Fruit Juice

ಅಧಿಕ ಸಕ್ಕರೆಯ ಅಂಶ

ತಾಜಾ ಹಣ್ಣಿನ ಜ್ಯೂಸ್‌ಗಳನ್ನು, ಮಿಲ್ಕ್‌ ಶೇಕ್‌ಗಳನ್ನು ಮಾಡಲು ಒಂದಷ್ಟು ಸಕ್ಕರೆ ಸುರಿದಿರುತ್ತೇವೆ. ಅಧಿಕವಾಗಿ ಸಕ್ಕರೆ ಸುರಿದು ಜ್ಯೂಸ್‌ಗಳನ್ನು ಮಾಡುವಿದರಿಂದ ಹಣ್ಣುಗಳು ತಾಜಾ ಆಗಿದ್ದರೂ ಕೂಡಾ ಅದರಲ್ಲಿರುವ ಸಕ್ಕರೆಯಿಂದಾಗಿ ಇವು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜೊತೆಗೆ ಹಣ್ಣಿನ ಜ್ಯೂಸ್‌ ದ್ರವರೂಪದಲ್ಲಿರುವುದರಿಂದ ಬಹುಬೇಗನೆ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರ್ಪಡೆಯಾಗುತ್ತದೆ. ಸಕ್ಕರೆಯ ಮಟ್ಟ ಏರಲು ಇದೂ ಕಾರಣವಾಗಬಹುದು. ಹೀಗಾಗಿ, ಹಣ್ಣನ್ನು ಜ್ಯೂಸ್‌ ಮಾಡಿ ಕುಡಿಯುವ ಬದಲು, ಹಾಗೆಯೇ ತಿನ್ನಬಹುದು. ಹಣ್ಣುಗಳಲ್ಲಿರುವ ನಾರಿನಂಶವೂ ಹೊಟ್ಟೆ ಸೇರುವುದರಿಂದ ಸಕ್ಕರೆ ಬಹುಬೇಗನೆ ರಕ್ತಕ್ಕೆ ಸೇರದು. ಹೀಗಾಗಿ ಜ್ಯೂಸ್‌ ಕುಡಿಯುವ ಯೋಚನೆಯಿದ್ದರೆ ಆರೋಗ್ಯದ ದೃಷ್ಟಿಯಿಂದ ತರಕಾರಿಗಳ ಜ್ಯೂಸ್‌ ಹಣ್ಣಿನ ಜ್ಯೂಸ್‌ಗಳಿಗಿಂತ ಒಳ್ಳೆಯದು. ಇವುಗಳಲ್ಲಿ ಸಕ್ಕರೆಯ ಅಂಶ ಅತ್ಯಂತ ಕಡಿಮೆ ಇರುತ್ತದೆ.

ನಾರಿನಂಶ ಕಡಿಮೆ ಇರುತ್ತದೆ

ಜ್ಯೂಸ್‌ ಮಾಡಿದಾಗ, ಹಣ್ಣುಗಳಲ್ಲಿರುವ ನಾರಿನಂಶ ವ್ಯರ್ಥವಾಗುತ್ತದೆ. ಹಣ್ಣಿನಿಂದ ಜ್ಯೂಸನ್ನು ಹಿಂಡಿ ಉಳಿದೆಲ್ಲವನ್ನೂ ಸೋಸಿ ಎಸೆಯುವುದರಿಂದ ಇದರ ನಾರಿನಂಶವು ನಷ್ಟವಾಗುತ್ತದೆ. ಒಳ್ಳೆಯ ಪೋಷಕಾಂಶಗಳು ನಷ್ಟವಾಗುವುದರಿಂದ ಜ್ಯೂಸ್‌ನಲ್ಲಿರುವ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರುತ್ತದೆ. ಹಾಗಾಗಿ ಜ್ಯೂಸ್‌ ಕುಡಿಯುವ ಇರಾದೆಯಿದ್ದರೆ, ಹೆಚ್ಚು ಸೋಸಬೇಡಿ. ಸೋಸಿದರೂ ಬೀಜ ಬೇರ್ಪಡಿಸಿ ಹಣ್ಣಿನ ನಾರಿನಂಶವನ್ನು ಮತ್ತೆ ಜ್ಯೂಸ್‌ಗೆ ಹಾಕಿ.

Image Of Fruit Juices Role in Managing Blood Sugar Levels

ಪೋಷಕಾಂಶ ನಷ್ಟವಾಗಬಹುದು

ಜ್ಯೂಸ್‌ ಮಾಡುವುದರಿಂದ ಹಣ್ಣನ್ನು ಮಿಕ್ಸಿಯಲ್ಲಿ ತಿರುಗಿಸಿ ಸೋಸುವ ಕಾರಣ ಅದರ ಪೋಷಕಾಂಶ ನಷ್ಟವಾಗುವ ಸಾಧ್ಯತೆ ಹೆಚ್ಚು. ಹಣ್ಣಿನಲ್ಲಿರುವ ನಾರಿನಂಶ ಮಾತ್ರ ನಷ್ಟವಾಗುವುದಲ್ಲ, ಅದರಲ್ಲಿರುವ ವಿಟಮಿನ್‌ಗಳು, ಖನಿಜಾಂಶಗಳು, ಆಂಟಿ ಆಕ್ಸಿಡೆಂಟ್‌ಗಳೂ ನಾಶವಾಗುತ್ತವೆ. ಹಾಗಾಗಿ ಹಣ್ಣನ್ನು ಹಾಗೆಯೇ ತಿನ್ನುವುದೇ ಬಹಳ ಉತ್ತಮ.

ಅಧಿಕ ಕ್ಯಾಲರಿ ಇರುತ್ತವೆ

ಜ್ಯೂಸ್‌ಗೆ ಒಂದಷ್ಟು ಸಕ್ಕರೆಯನ್ನೂ ಹಾಕಿರುವುದರಿಂದ ಕ್ಯಾಲರಿಯ ವಿಚಾರಕ್ಕೆ ಬಂದರೆ ಇದರಲ್ಲಿ ಅಧಿಕ ಕ್ಯಾಲರಿ ಇರುತ್ತದೆ. ಹೀಗಾಗಿ ಫಿಟ್‌ನೆಸ್‌ ಬಯಸುವ ಮಂದಿಗೆ, ಹೃದ್ರೋಗ, ಮಧುಮೇಹ, ಕೊಲೆಸ್ಟೆರಾಲ್‌ ಇತ್ಯಾದಿಗಳ ಸಮಸ್ಯೆ ಇರುವ ಮಂದಿಗೆ ಇದು ಖಂಡಿತವಾಗಿ ಒಳ್ಳೆಯದಲ್ಲ.

Acidity sourness flatulence are constant guests of sleepless persons Sleeping Tips

ಅಸಿಡಿಟಿ ಸಮಸ್ಯೆ

ಕೆಲವು ಹಣ್ಣಿನ ಜ್ಯೂಸ್‌ಗಳು, ಬಹಳ ಮುಖ್ಯವಾಗಿ ಸಿಟ್ರಸ್‌ ಹಣ್ಣಿನ ಜ್ಯೂಸ್‌ಗಳು ಕೆಲವು ಮಂದಿಯಲ್ಲಿ ಅಸಿಡಿಟಿ ಸಮಸ್ಯೆಯನ್ನೂ ಹುಟ್ಟು ಹಾಕುತ್ತದೆ. ಅಸಿಡಿಕ್‌ ಜ್ಯೂಸ್‌ಗಳು ಈ ಸಮಸ್ಯೆ ತರುತ್ತವೆ ಎಂದಾದಲ್ಲಿ ಅವಕ್ಕೆ ಹೆಚ್ಚು ನೀರು ಸೇರಿಸಿ ಜ್ಯೂಸ್‌ ಮಾಡಿ. ನೀರು ಸಾಕಷ್ಟು ಕುಡಿಯಿರಿ.

ಇದನ್ನೂ ಓದಿ: Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

ಹಲ್ಲು ಹುಳುಕಾಗಬಹುದು

ಜ್ಯೂಸ್‌ನಲ್ಲಿ ಸಕ್ಕರೆಯ ಅಂಶ ಹೆಚ್ಚಿರುವುದರಿಂದ ನೇರವಾಗಿ ಹಲ್ಲಿನ ಸಂಪರ್ಕಕ್ಕೆ ಬರುವುದರಿಂದ ಜ್ಯೂಸ್‌ನ ಸಕ್ಕರೆಯ ಅಂಶ ಹಲ್ಲಿನ ಭಾಗದಲ್ಲಿ ಸೇರಿಕೊಳ್ಳುವುದರಿಂದ ಹಲ್ಲು ಹುಳುಕಾಗಬಹುದು.
ಇವಿಷ್ಟಲ್ಲದೆ, ಸರಿಯಾದ ಶುದ್ಧ ನೀರಿನ ಬಳಕೆಯಿಲ್ಲದೆ ಮಾಡಿದ ರಸ್ತೆ ಬದಿಯ ಹಣ್ಣಿನ ಜ್ಯೂಸ್‌ ಅಂಗಡಿಗಳಲ್ಲಿ ಕುಡಿಯುವುದರಿಂದ ಆರೋಗ್ಯ ಕೈಕೊಡುವ ಸಂಭವವೂ ಅಧಿಕ. ಐಸ್‌ ಹಾಕಿ ಕುಡಿಯುವುದರಿಂದ ನೆಗಡಿ, ಗಂಟಲು ನೋವು, ಜ್ವರ ಇತ್ಯಾದಿಗಳ ಸಂಭವವೂ ಇರುತ್ತದೆ. ಜೊತೆಗೆ ಈಗಾಗಲೇ ನಿತ್ಯವೂ ತಮ್ಮ ಆರೋಗ್ಯ ಸಮಸ್ಯೆಗಳಿಗಾಗಿ ಮಾತ್ರೆಗಳನ್ನು ತಿನ್ನುವ ಮಂದಿ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಮತ್ತಷ್ಟು ಸಮಸ್ಯೆಗಳನ್ನೂ ಆಹ್ವಾನಿಸುವ ಸಂದರ್ಭಗಳೂ ಬರಬಹುದು. ಉದಾಹರಣೆಗೆ ಮಧುಮೇಹ, ಹೃದ್ರೋಗ ಅಥವಾ ಇನ್ನೂ ಅನೇಕ ಸಮಸ್ಯೆಗಳಿರುವ ಮಂದಿ ನಿತ್ಯವೂ ಮಾತ್ರೆಗಳನ್ನು ಸೇವಿಸುತ್ತಿರುವಾಗ ಆರೋಗ್ಯಕರ ಆಹಾರದ ಕಾಳಜಿ ವಹಿಸಲೇ ಬೇಕಾಗುತ್ತದೆ. ಇಂಥವರೂ ಜ್ಯೂಸ್‌ ಬದಲು ಹಣ್ಣನ್ನೇ ನೆಚ್ಚಿದರೆ ಒಳ್ಳೆಯದು.

Continue Reading
Advertisement
Narendra Modi
ದೇಶ14 mins ago

Narendra Modi: ನನ್ನನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ; ಮಮತಾ ಬ್ಯಾನರ್ಜಿಗೆ ಮೋದಿ ಚಾಟಿ

ಕರ್ನಾಟಕ14 mins ago

Driving Bus With Umbrella: ಛತ್ರಿ ಹಿಡಿದು ಬಸ್ ಚಾಲನೆ; ಮೋಜಿಗಾಗಿ ವಿಡಿಯೊ ಮಾಡಿದ ಡ್ರೈವರ್‌, ಕಂಡಕ್ಟರ್‌ ಸಸ್ಪೆಂಡ್‌!

Vistara editorial
ಬೆಂಗಳೂರು39 mins ago

ವಿಸ್ತಾರ ಸಂಪಾದಕೀಯ: ಕಸ ವಿಲೇವಾರಿಗೆ ಹೊಸ ಸಂಸ್ಥೆ, ಜಾರಿಕೊಳ್ಳುವ ನೆಪ ಆಗದಿರಲಿ

SRH vs RR
ಕ್ರೀಡೆ57 mins ago

SRH vs RR: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್’; ಫೈನಲ್​ನಲ್ಲಿ ಕೆಕೆಆರ್ ವಿರುದ್ಧ ಕಣಕ್ಕೆ​

Electric Shock
ಕ್ರೈಂ1 hour ago

Electric Shock: ಲಿಂಗಸುಗೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Prajwal Revanna Case
ಕರ್ನಾಟಕ1 hour ago

Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ

Kangana Ranaut
ದೇಶ2 hours ago

Kangana Ranaut: ಈ ಗುಲಾಬಿಯು ನಿಮಗಾಗಿ; ಮೋದಿಗೆ ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದ ಕಂಗನಾ! Photo ಇದೆ

T20 World Cup 2024
ಕ್ರೀಡೆ2 hours ago

T20 World Cup 2024: ಕೊನೆಗೂ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ

Prajwal Revanna Case
ಕರ್ನಾಟಕ2 hours ago

Prajwal Revanna Case: ವಕೀಲ ದೇವರಾಜೇಗೌಡಗೆ ಇನ್ನೂ 14 ದಿನ ಜೈಲೇ ಗತಿ; ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

Yuzvendra Chahal
ಕ್ರಿಕೆಟ್3 hours ago

Yuzvendra Chahal: ಸಿಕ್ಸರ್​ ಹೊಡೆಸಿಕೊಂಡು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌