Quitting Smoking: ಈ ಆಹಾರ ಸೇವಿಸುವ ಮೂಲಕ ಸಿಗರೇಟು, ಗುಟ್ಕಾ ಚಟದಿಂದ ದೂರ ಆಗಬಹುದು! - Vistara News

ಆರೋಗ್ಯ

Quitting Smoking: ಈ ಆಹಾರ ಸೇವಿಸುವ ಮೂಲಕ ಸಿಗರೇಟು, ಗುಟ್ಕಾ ಚಟದಿಂದ ದೂರ ಆಗಬಹುದು!

ನಿಕೋಟಿನ್‌ ವ್ಯಸನ ದೂರ ಮಾಡುವ ಪ್ರಯತ್ನದಲ್ಲಿದ್ದೀರಾ? ಸಿಗರೇಟ್‌ ಅಥವಾ ಗುಟ್ಕಾ ಇಲ್ಲವೇ ನಿಕೋಟಿನ್‌ ಇರುವಂಥ ಇನ್ನೇನೋ ನೆನಪಾಗುತ್ತಿದ್ದಂತೆ, ಬೇಕೇಬೇಕು ಎನಿಸಲು ಆರಂಭಿಸಬಹುದು. ಇಂಥ ದಿನಗಳಲ್ಲಿ ಕೆಲವು ಆಹಾರಗಳು ವ್ಯಸನ ದೂರ ಮಾಡಲು ಹೆಚ್ಚುವರಿ ನೆರವನ್ನು ನೀಡುತ್ತವೆ. ಈ ಬಗ್ಗೆ ಹೆಚ್ಚಿನ (Quitting Smoking) ಮಾಹಿತಿ ಇಲ್ಲಿವೆ.

VISTARANEWS.COM


on

Quitting Smoking
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಶ್ವದೆಲ್ಲೆಡೆ ತಂಬಾಕು ರಹಿತ ದಿನವನ್ನು (ಮೇ 31) ಆಚರಿಸಲಾಗುತ್ತಿದೆ. ಒಮ್ಮೆ ಹೇಗೋ ಅಂಟಿಕೊಂಡ ತಂಬಾಕು ವ್ಯಸನವನ್ನು ಬಿಡುವುದಕ್ಕೆ ಮಾನಸಿಕ ಸ್ಥಿರತೆಯ ಅಗತ್ಯವಿದೆ. ಜೊತೆಗೆ ಹೊರಗಿನಿಂದ ದೊರೆಯುವ ನೆರವು ಸಹ ಗುರಿ ತಲುಪಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ, ನಿಕೋಟಿನ್‌ ಬೇಕು ಎನ್ನುವ ಬಯಕೆಗೆ ಕಡಿವಾಣ ಹಾಕುವುದಕ್ಕೆ ಕೆಲವು ಆಹಾರಗಳು ನೆರವಾಗುತ್ತವೆ. ಯಾವುದು ಆ ಆಹಾರಗಳು ಮತ್ತು ನಿಕೋಟಿನ್‌/ತಂಬಾಕು ಬೇಕೆನ್ನುವ ಬಯಕೆಯನ್ನು ಹತ್ತಿಕ್ಕಲು ಹೇಗೆ ನೆರವಾಗುತ್ತವೆ? ಈ ಕುರಿತ ವಿವರ ಇಲ್ಲಿದೆ.

No Tobacco Day

ವ್ಯಸನ ಯಾವುದೇ ಆದರೂ, ಅದನ್ನು ದೂರ ಮಾಡುವುದು ಸವಾಲಿನದು. ಜೊತೆಗೆ, ವ್ಯಸನದಿಂದ ಹಿಂತೆಗೆಯುವಾಗ ಶರೀರ ಪ್ರತಿಕ್ರಿಯಿಸುವ ರೀತಿಯನ್ನು ನಿಭಾಯಿಸುವುದು ಬಹಳಷ್ಟು ಜನರಿಗೆ ಕಷ್ಟವಾಗಬಹುದು. ಒಮ್ಮೆ ಸಿಗರೇಟ್‌ ಅಥವಾ ಗುಟ್ಕಾ ಇಲ್ಲವೇ ನಿಕೋಟಿನ್‌ ಇರುವಂಥ ಇನ್ನೇನೋ ನೆನಪಾಗುತ್ತಿದ್ದಂತೆ, ಬೇಕೇಬೇಕು ಎನಿಸಲು ಆರಂಭಿಸಬಹುದು. ಇಂಥ ದಿನಗಳಲ್ಲಿ ಕೆಲವು ಆಹಾರಗಳು ವ್ಯಸನ ದೂರ ಮಾಡಲು ಹೆಚ್ಚುವರಿ ನೆರವನ್ನು ನೀಡುತ್ತವೆ.

Appetite Control Dark Chocolate Benefits

ಡಾರ್ಕ್‌ ಚಾಕೊಲೇಟ್‌

ಅಂದರೆ ಶೇ. 70ಕ್ಕಿಂತ ಹೆಚ್ಚಿನ ಕೊಕೊ ಇರುವಂಥ ಈ ಚಾಕಲೇಟ್‌ಗಳು ರುಚಿಯಲ್ಲಿ ಕೊಂಚ ಕಹಿ ಇರುತ್ತವೆ. ಆದರೆ ಸಿಹಿ ಮತ್ತು ನಿಕೋಟಿನ್‌- ಈ ಎರಡೂ ಬೇಕು ಎನ್ನುವ ಬಯಕೆಯನ್ನು ಹತ್ತಿಕ್ಕುತ್ತವೆ. ಕಾರಣ, ಡಾರ್ಕ್‌ ಚಾಕಲೇಟ್‌ನಲ್ಲಿ ಸಾಂದ್ರವಾಗಿರುವ ಫ್ಲೆವನಾಯ್ಡ್‌ಗಳು ದೇಹದ ಡೋಪಮಿನ್‌ ಚೋದಕದ ಮಟ್ಟವನ್ನು ಹೆಚ್ಚಿಸುತ್ತವೆ. ಇದರಿಂದ ಶರೀರ ತನ್ನಷ್ಟಕ್ಕೇ ರಿಲಾಕ್ಸ್‌ ಆಗಿ, ನಿಕೋಟಿನ್‌ ಬೇಕು ಎನ್ನುವ ತುಡಿತವನ್ನು ತಾನಾಗಿ ಕಳೆದುಕೊಳ್ಳುತ್ತದೆ.

The seeds

ಇಡೀ ಧಾನ್ಯಗಳು

ನಿಕೋಟಿನ್‌ ಬಿಡುತ್ತಿದ್ದಂತೆ ಸಕ್ಕರೆ ಮತ್ತು ಪಿಷ್ಟದ ವಸ್ತುಗಳನ್ನು ಹೆಚ್ಚು ಬೇಕೆಂದು ಶರೀರ ಬಯಸುತ್ತದೆ. ಇದರಿಂದ ದೇಹದಲ್ಲಿ ಸಕ್ಕರೆ ಮಟ್ಟ ಏರಿಳಿತ ಆಗಬಹುದು. ಇದನ್ನು ತಡೆಯುವುದಕ್ಕಾಗಿ, ಇಡೀ ಧಾನ್ಯಗಳ ಸೇವನೆ ಉಪಯುಕ್ತ. ಜವೆ ಗೋಧಿ, ಕೆಂಪಕ್ಕಿ, ಬಾರ್ಲಿ, ಓಟ್‌, ಕಿನೊವಾ, ಸಿರಿಧಾನ್ಯಗಳನ್ನು ಆಹಾರವಾಗಿ ಬಳಸಿದರೆ ದೇಹದಲ್ಲಿ ಸಕ್ಕರೆಯಂಶವನ್ನು ಸ್ಥಿರಗೊಳಿಸಬಹುದು. ಜೊತೆಗೆ ಇವುಗಳಲ್ಲಿರುವ ಸಂಕೀರ್ಣ ಪಿಷ್ಟಗಳು ಮತ್ತು ನಾರು ದೀರ್ಘ ಕಾಲ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತವೆ.

Some herbal teas can relax the mind and induce sleep Tips For Better Sleep

ಹರ್ಬಲ್‌ ಚಹಾ

ನಿಕೋಟಿನ್‌ ಬಿಡುತ್ತಿದ್ದಂತೆ ಉಂಟಾಗುವ ಒತ್ತಡ, ಆಯಾಸಗಳನ್ನು ಕಡಿಮೆ ಮಾಡುವಲ್ಲಿ ಹರ್ಬಲ್‌ ಚಹಾಗಳು ನೆರವಾಗುತ್ತವೆ. ಉದಾ, ಕ್ಯಾಮೊಮೈಲ್‌ ಚಹಾ- ಒತ್ತಡ ನಿವಾರಣೆಯಲ್ಲಿ ಸಹಕಾರಿ. ಪೆಪ್ಪರ್‌ಮಿಂಟ್‌ ಚಹಾ ಮನಸ್ಸನ್ನು ಚೇತೋಹಾರಿಯಾಗಿ ಇರಿಸಬಲ್ಲದು. ಶುಂಠಿ ಚಹಾ ಉರಿಯೂತ ನಿವಾರಣೆಗೆ ನೆರವಾಗುತ್ತದೆ. ಗ್ರೀನ್‌ ಟೀಯಲ್ಲಿರುವ ಅಲ್ಪ ಪ್ರಮಾಣದ ಕೆಫೇನ್‌ ಮತ್ತು ಎಲ್‌-ಥಿಯಾನಿನ್‌ ಅಂಶಗಳು ಒತ್ತಡ ನಿವಾರಣೆಗೆ ನೆರವಾಗುತ್ತವೆ. ನಿಂಬೆ ಹುಲ್ಲಿನ ಚಹಾ ಸಹ ಇದೇ ಸಾಲಿಗೆ ಸೇರುವಂಥದ್ದು.

Vibrant Produce Vegetables and Fruits

ಹಸಿ ತರಕಾರಿ ಮತ್ತು ಹಣ್ಣುಗಳು

ಹಸಿಯಾದ ಕ್ಯಾರೆಟ್‌, ಸೌತೇಕಾಯಿ, ಟೊಮೇಟೊ, ಕ್ಯಾಪ್ಸಿಕಂನಂಥವು ಬಾಯಿಯ ಬೇಡಿಕೆ ಕಡಿಮೆ ಮಾಡುತ್ತವೆ. ಯಾವುದೇ ಸಿಹಿ ಹಣ್ಣುಗಳ ಸಹ ಬಯಕೆಯನ್ನು ಹತ್ತಿಕ್ಕಲು ನೆರವಾಗುತ್ತವೆ. ಜೊತೆಗೆ ಉಪ್ಪಿಲ್ಲದ ಬಾದಾಮಿ, ಪಿಸ್ತಾ, ಗೋಡಂಬಿ, ವಾಲ್‌ನಟ್‌ಗಳು ಹಾಗೂ ಸಣ್ಣ ಬೀಜಗಳು ರಕ್ತದಲ್ಲಿನ ಸಕ್ಕರೆಯಂಶವನ್ನು ಸ್ಥಿರಗೊಳಿಸಲು ನೆರವಾಗುತ್ತವೆ. ಜೊತೆಗೆ, ಬಾಯಿಯ ಚಪಲವನ್ನು ಹತ್ತಿಕ್ಕಲು ಅನುಕೂಲವಾಗುವಂತೆ, ಅಗಿದು ತಿನ್ನುವಂಥ ಆಹಾರಗಳಿವು.

Dairy products

ಡೇರಿ ಉತ್ಪನ್ನಗಳು

ಕಾಟೇಜ್‌ ಚೀಸ್‌, ಗ್ರೀಕ್‌ ಯೋಗರ್ಟ್‌ನಂಥ ಹೆಚ್ಚು ಪ್ರೊಟೀನ್‌ ಇರುವಂಥ ಡೇರಿ ಉತ್ಪನ್ನಗಳು ಈ ಹಂತದಲ್ಲಿ ನೆರವು ನೀಡುತ್ತವೆ. ನಿಕೋಟಿನ್‌ನ ರುಚಿಗೆ ಬಾಯಿ ಒಗ್ಗಿದ್ದರೆ, ಅದನ್ನು ಬದಲಿಸಲು ಈ ವಸ್ತುಗಳು ಸಹಕಾರಿ. ಬಾಯಿ ಮತ್ತು ಹೊಟ್ಟೆಯಲ್ಲಿರುವ ಆರೋಗ್ಯಪೂರ್ಣ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಇವು ಹೆಚ್ಚಿಸುತ್ತವೆ. ಇದರಿಂದ ನಿಕೋಟಿನ್‌ ಬೇಕು ಎನ್ನುವ ಭಾವನೆ ಕಡಿಮೆಯಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

Period Insomnia: ಮೆನೋಪಾಸ್‌ ಸಮಯದಲ್ಲಿ, ಮೂಡ್‌ನ ಏರುಪೇರು, ಇದ್ದಕ್ಕಿದ್ದಂತೆ ಮೈಬಿಸಿಯಾಗಿ ಬೆವರುವುದು, ರಾತ್ರಿ ಎಷ್ಟೇ ಹೊತ್ತಾದರೂ ನಿದ್ದೆ ಬರದೇ ಇರುವುದು ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ನಲವತ್ತರ ಆಸುಪಾಸಿನಲ್ಲೇ ಕೆಲವರಿಗೆ ಈ ಸಮಸ್ಯೆಗಳು ಆರಂಭವಾಗುವುದುಂಟು. ಮೆನೋಪಾಸ್‌ ಹಲವು ಬಗೆಯ ಇಂತಹ ಸಮಸ್ಯೆಗಳನ್ನು ವರ್ಷಾನುಗಟ್ಟಲೆ ಹೊತ್ತು ತರುವುದುಂಟು. ಮುಖ್ಯವಾಗಿ ಮಹಿಳೆಯರು ಈ ಸಂದರ್ಭದಲ್ಲಿ ಎದುರಿಸುವ ಸಮಸ್ಯೆ ಎಂದರೆ, ನಿದ್ದೆಯದ್ದು. ಎಷ್ಟು ಹೊತ್ತಾದರೂ ರಾತ್ರಿ ನಿದ್ದೆ ಬರದೇ ಇರುವುದೇ ವ್ಯಾಪಕವಾಗಿ ಮಹಿಳೆಯರು ಅನುಭವಿಸುವ ಸಮಸ್ಯೆ. ಇದಕ್ಕೇನು ಪರಿಹಾರ?

VISTARANEWS.COM


on

Period Insomnia
Koo

ಮಹಿಳೆ ತನ್ನ ಜೀವನದ ಹಲವು ಹಂತಗಳಲ್ಲಿ ಆಗಾಗ ಹಾರ್ಮೋನಿನ ಏರುಪೇರಿನಂಥ ಸಮಸ್ಯೆಗೆ ಒಳಗಾಗುತ್ತಾಳೆ (Period Insomnia). ಮೆನೋಪಾಸ್‌ ಸಮಯದಲ್ಲಿ, ಮೂಡ್‌ನ ಏರುಪೇರು, ಇದ್ದಕ್ಕಿದ್ದಂತೆ ಮೈಬಿಸಿಯಾಗಿ ಬೆವರುವುದು, ರಾತ್ರಿ ಎಷ್ಟೇ ಹೊತ್ತಾದರೂ ನಿದ್ದೆ ಬರದೇ ಇರುವುದು ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ನಲವತ್ತರ ಆಸುಪಾಸಿನಲ್ಲೇ ಕೆಲವರಿಗೆ ಈ ಸಮಸ್ಯೆಗಳು ಆರಂಭವಾಗುವುದುಂಟು. ಮೆನೋಪಾಸ್‌ ಹಲವು ಬಗೆಯ ಇಂತಹ ಸಮಸ್ಯೆಗಳನ್ನು ವರ್ಷಾನುಗಟ್ಟಲೆ ಹೊತ್ತು ತರುವುದುಂಟು. ಮುಖ್ಯವಾಗಿ ಮಹಿಳೆಯರು ಈ ಸಂದರ್ಭದಲ್ಲಿ ಎದುರಿಸುವ ಸಮಸ್ಯೆ ಎಂದರೆ, ನಿದ್ದೆಯದ್ದು. ಎಷ್ಟು ಹೊತ್ತಾದರೂ ರಾತ್ರಿ ನಿದ್ದೆ ಬರದೇ ಇರುವುದೇ ವ್ಯಾಪಕವಾಗಿ ಮಹಿಳೆಯರು ಅನುಭವಿಸುವ ಸಮಸ್ಯೆ. ಬನ್ನಿ, ಮೆನೋಪಾಸ್‌ ಸಮಯದಲ್ಲಿ ಮಹಿಳೆಯರು ಎದುರಿಸುವ ನಿದ್ದೆಯ ಸಮಸ್ಯೆಗಳಿಗೆ ಇಲ್ಲಿ ಕೆಲವು ಸರಳ ಉಪಾಯಗಳಿವೆ.

Vastu Tips

ಮೆನೋಪಾಸ್‌ ಸಮಯದಲ್ಲಿ ಉತ್ತಮ ನಿದ್ದೆ ಬಹಳ ಮುಖ್ಯ. ಈ ಸಂದರ್ಭ ತೂಕ ಇಳಿಸುವ ಬಗ್ಗೆ, ಸಪ್ಲಿಮೆಂಟ್‌ಗಳ ಬಗ್ಗೆ ಹೇಳಿದಷ್ಟು ನಿದ್ದೆಯ ಬಗ್ಗೆ ಯಾರೂ ಹೇಳುವುದಿಲ್ಲ. ಆದರೆ, ನಿದ್ದೆ ಇಲ್ಲಿ ಅತ್ಯಂತ ಮುಖ್ಯವಾದ ಅಗತ್ಯ. ಮೆನೋಪಾಸ್‌ನ ಹಂತದಲ್ಲಿರುವ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಏಳರಿಂದ ಒಂಭತ್ತು ಗಂಟೆಗಳಷ್ಟು ನಿದ್ದೆ ಬೇಕು. ಮಧ್ಯರಾತ್ರಿಯಾದ ಮೇಲೆ ಮಲಗಿದರೆ ಖಂಡಿತಾ ಸಾಲದು.

ಒಳ್ಳೆಯ ನಿದ್ದೆ ಬರಬೇಕಾದರೆ, ಈ ಹಂತದಲ್ಲಿ ಮಹಿಳೆ ರಾತ್ರಿ ಒಂಭತ್ತರಿಂದ 11 ಗಂಟೆಯೊಳಗೆ ನಿದ್ದೆಗೆ ಜಾರಬೇಕು. ಈ ಸಮಯದಲ್ಲಿ ಮಲಗಿಬಿಟ್ಟರೆ, ಬೆಳಗ್ಗೆ ತಾಜಾ ಆಗಿ ಸೂರ್ಯ ಹುಟ್ಟುವಾಗಲೇ ಏಳಬಹುದು. ನಿಮ್ಮ ಬಹಳಷ್ಟು ಸಮಸ್ಯೆಗಳೆಲ್ಲವೂ ಇದನ್ನು ಅಭ್ಯಾಸ ಮಾಡಿಕೊಂಡರೆ ಪರಿಹಾರ ಕಾಣುತ್ತದೆ.

Menopause

ಅತ್ಯಂತ ಹೆಚ್ಚು ಅಥವಾ ಅತ್ಯಂತ ಕಡಿಮೆ ಋಥ್ರಿ ಉಣ್ಣುವುದು ಎರಡೂ ಒಳ್ಳೆಯದಲ್ಲ. ಹಿತಮಿತವಾಗಿ, ಹೊಟ್ಟೆ ಭಾರವೆನಿಸದಂತೆ ಊಟ ಮಾಡಿ. ರಾತ್ರಿ ಏಳರಿಂದ ಎಂಟು ಗಂಟೆಯೊಳಗೆ ಊಟ ಮುಗಿಸಿಬಿಡಿ. ಬೆಳಗ್ಗೆ ಎದ್ದ ಕೂಡಲೇ ಪೋಷಕಾಂಶಯುಕ್ತ ಉಪಹಾರ ಬಹಳ ಮುಖ್ಯ. ಇಡ್ಲಿ, ಪೋಹಾ, ದೋಸೆ, ಉಪ್ಪಿಟ್ಟು, ಪರಾಠಾ ಇತ್ಯಾದಿಗಳಿರುವ ಉಪಹಾರ ಒಳ್ಳೆಯದು. ಕಾರ್ಬೋಹೈಡ್ರೇಟ್‌ ಹೆಚ್ಚಿದೆ ಎಂದು ಇಂತಹ ದೇಸೀ ಆಹಾರಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಇವು ನಿಜಕ್ಕೂ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಹೊಂದಿವೆ.

ನೀವು ಮೆನೋಪಾಸ್‌ ಹಂತದಲ್ಲಿರುವಾಗ ಮನೆಯಲ್ಲೇ ಇದ್ದರೆ, ಮಧ್ಯಾಹ್ನ ಊಟವಾದ ಮೇಲೆ ಒಂದು ಸಣ್ಣ ನಿದ್ದೆ ಮಾಡಬಹುದು. ಆದರೆ ಆ ನಿದ್ದೆ ಅರ್ಧ ಗಂಟೆಯನ್ನು ಮೀರದಿರಲಿ. ಹೀಗೆ ಮಲಗುವುದರಿಂದ ಕೊಂಚ ಆರಾಮವೆನಿಸುತ್ತದೆ. ಥೈರಾಯ್ಡ್‌ ಸಮಸ್ಯೆ, ಋತುಚಕ್ರದಲ್ಲಿ ಏರಿಪೇರು ಹಾಗೂ ಕೈಕಾಲು ನೋವು, ಸೊಂಟ ನೋವಿನ ಸಮಸ್ಯೆ ಇರುವ ಮಂದಿಗೆ ಕೊಂಚ ಆರಾಮ ದೊರೆಯುತ್ತದೆ.

ಇದನ್ನೂ ಓದಿ: Foods For Hormone Balance: ಮಹಿಳೆಯರೇ, ಹಾರ್ಮೋನಿನ ಸಮತೋಲನಕ್ಕಾಗಿ ಈ ಆಹಾರಗಳನ್ನು ಮರೆಯದೇ ಸೇವಿಸಿ

ಆಲ್ಕೋಹಾಲ್‌, ತಂಬಾಕು ಇತ್ಯಾದಿಗಳಿಂದ ದೂರವಿರಿ. ಚಹಾ ಕಾಫಿ ಅಭ್ಯಾಸವಿದ್ದರೆ ದಿನಕ್ಕೆರಡು ಲೋಟಕ್ಕಿಂತ ಹೆಚ್ಚು ಸೇವಿಸಬೇಡಿ. ಚಾಕೋಲೇಟ್‌ ಕೂಡಾ ತಿನ್ನಬೇಡಿ.

Continue Reading

ಲೈಫ್‌ಸ್ಟೈಲ್

How to spot fake ghee: ನಾವು ಖರೀದಿಸಿದ ತುಪ್ಪ ಶುದ್ಧವೋ ಕಲಬೆರಕೆಯೋ ಪರೀಕ್ಷಿಸುವುದು ಹೇಗೆ?

How to spot fake ghee: ನಮ್ಮ ಭಾರತೀಯ ಶೈಲಿಯ ಕೆಲ ಅಡುಗೆಗಳಿಗೆ ತುಪ್ಪ ಹಾಕಿದರೆ ಅದರ ರುಚಿ, ಘಮ ಎಲ್ಲವೂ ಸ್ವರ್ಗಸದೃಶ. ಅನ್ನ, ದೋಸೆ, ಪರಾಠಾ, ಚಪಾತಿ ಸೇರಿದಂತೆ ನಿತ್ಯವೂ ತುಪ್ಪ ಹಾಕಿ ಉಣ್ಣುತ್ತೇವೆ. ದೇಸೀ ದನದ ತುಪ್ಪದ ಹಿತಮಿತ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ. ನಮ್ಮ ಹಿರಿಯರು ತಲೆತಲಾಂತರ ವರ್ಷಗಳಿಂದ ತುಪ್ಪದ ಬಹುಪಯೋಗಗಳ ಅರಿವನ್ನು ನಮಗೆ ದಾಟಿಸುತ್ತಲೇ ಬಂದಿದ್ದಾರೆ. ಆದರೆ ಇಂಥ ಅಮೂಲ್ಯ ತುಪ್ಪ ಕಲಬೆರಕೆ ಆಗುತ್ತಿದೆ. ಇದನ್ನು ಪತ್ತೆ ಹಚ್ಚುವುದು ಹೇಗೆ?

VISTARANEWS.COM


on

Ghee benefits
Koo

ಭಾರತೀಯರ ಅಡುಗೆ ಮನೆಯಲ್ಲಿ ತುಪ್ಪಕ್ಕೆ ಮಹತ್ವದ ಸ್ಥಾನವಿದೆ. ಅದು ಅಡುಗೆ ಮನೆಯೊಳಗಿನ ಚಿನ್ನವೂ ಹೌದು. ನಮ್ಮ ಭಾರತೀಯ ಶೈಲಿಯ ಕೆಲ ಅಡುಗೆಗಳಿಗೆ ತುಪ್ಪ ಹಾಕಿದರೆ ಅದರ ರುಚಿ, ಘಮ ಎಲ್ಲವೂ ಸ್ವರ್ಗಸದೃಶ. ಅನ್ನ, ದೋಸೆ, ಪರಾಠಾ, ಚಪಾತಿ ಸೇರಿದಂತೆ ನಿತ್ಯವೂ ತುಪ್ಪ ಹಾಕಿ ಉಣ್ಣುತ್ತೇವೆ. ದೇಸೀ ದನದ ತುಪ್ಪದ ಹಿತಮಿತ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ. ನಮ್ಮ ಹಿರಿಯರು ತಲೆತಲಾಂತರ ವರ್ಷಗಳಿಂದ ತುಪ್ಪದ ಬಹುಪಯೋಗಗಳ ಅರಿವನ್ನು ನಮಗೆ ದಾಟಿಸುತ್ತಲೇ ಬಂದಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ತುಪ್ಪದ ಬಗೆಗೆ ಮತ್ತೆ ಜನರಲ್ಲಿ ಅರಿವು ಮೂಡಿ ಮತ್ತೆ ತುಪ್ಪ ಸೇವನೆಯತ್ತ ಹಲವರು ಮುಖ ಮಾಡಿ ಅದರ ಲಾಭಗಳನ್ನು ಪಡೆಯುತ್ತಿದ್ದಾರೆ ಕೂಡಾ. ಆದರೆ, ಮನೆಗಳಲ್ಲಿ ತುಪ್ಪ ಮಾಡುವ ಪ್ರವೃತ್ತಿ ಅತ್ಯಂತ ಕಡಿಮೆಯಾಗುತ್ತಿದೆ. ಹೀಗಾಗಿ ಮಾರುಕಟ್ಟೆಯ ತುಪ್ಪವನ್ನು ಕೊಂಡು ತರುವುದು ಸಾಮಾನ್ಯ. ಆದರೆ, ಶುದ್ಧ ತುಪ್ಪ ಎಂದುಕೊಂಡು ನಾವು ಕೊಂಡು ತಂದು ಬಳಸುವ ತುಪ್ಪದಲ್ಲಿ ಕಲಬೆರಕೆಯೂ ಇರಬಹುದು ಎಂಬ ಸತ್ಯವನ್ನು ನಾವು ಅರಗಿಸಿಕೊಳ್ಳಲೇ ಬೇಕಾಗಿದೆ. ಯಾಕೆಂದರೆ ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ಸುಮಾರು 14 ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ಮೂರು ಸಾವಿರ ಲೀಟರ್‌ಗಳಷ್ಟು ತುಪ್ಪದಲ್ಲಿ ಕಲಬೆರಕೆಯಾಗಿರುವುದನ್ನು ಪತ್ತೆ ಹಚ್ಚಿರುವ ಎಫ್‌ಡಿಸಿಎ ಅವುಗಳನ್ನು ವಶಪಡಿಸಿಕೊಂಡಿದೆ. ಇದು ನಮಗೆ ಎಚ್ಚರಿಕೆಯ ಕರೆಗಂಟೆಯೂ ಆಗಿದೆ. ನಾವು ಮಾರುಕಟ್ಟೆಯಿಂದ ಕೊಂಡು ತರುವ ತುಪ್ಪದ ಮೇಲೆ ಎಷ್ಟೇ ನಂಬಿಕೆಯಿದ್ದರೂ, ನಮ್ಮ ನಂಬಿಕೆಯನ್ನೊಮ್ಮೆ ನಾವು ಪರೀಕ್ಷಿಸಿ ದೃಢಪಡಿಸಿಕೊಂಡರೆ ತಪ್ಪಿಲ್ಲ. ಬನ್ನಿ ತುಪ್ಪ ಪರಿಶುದ್ಧವಾಗಿದೆಯೋ (How to spot fake ghee), ಕಲಬೆರಕೆಯದ್ದೋ ಎಂದು ಹೇಗೆಲ್ಲ ಪರೀಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ.

Rich in antioxidants ghee is anti-inflammatory Ghee Benefits

ನೀರಿನ ಮೂಲಕ ಪರೀಕ್ಷೆ

ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಗಟ್ಟಿಯಾದ ತುಪ್ಪವನ್ನು ಹಾಕಿ. ಅದು ತೇಲಿದರೆ ನಿಮ್ಮ ತುಪ್ಪ ಪರಿಶುದ್ಧವಾಗಿದೆ ಎಂದು ಅರ್ಥ.

ಕುದಿಸುವ ಪರೀಕ್ಷೆ

ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಅದನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ. ನಂತರ ಅದನ್ನು ತಣ್ಣಗಾಗಲು ಬಿಡಿ. ತಣ್ಣಾಗಾದಾಗ ಪ್ರತ್ಯೇಕವಾದ ಪದರವೊಂದು ತುಪ್ಪದ ಮೇಲ್ಮೈ ಮೇಲೆ ಸಂಗ್ರಹವಾಯಿತೆಂದರೆ, ಆ ತುಪ್ಪದಲ್ಲಿ ಕಲಬೆರಕೆಯಾಗಿರುವ ಸಾಧ್ಯತೆ ಹೆಚ್ಚು. ಮುಖ್ಯವಾಗಿ ಕೆಲ ಅಗ್ಗದ ಎಣ್ಣೆಗಳನ್ನು ತುಪ್ಪದ ಜೊತೆ ಕಲಬೆರಕೆ ಮಾಡಿರಲೂಬಹುದು ಎಂದರ್ಥ.

Ghee is rich in antioxidants Ghee Health Benefits

ಅಯೋಡಿನ್‌ ಪರೀಕ್ಷೆ

ಸ್ವಲ್ಪ ಅಯೋಡಿನ್‌ ಅನ್ನು ಮಾರುಕಟ್ಟೆಯಿಂದ ಕೊಂಡು ತನ್ನಿ. ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಅದಕ್ಕೆ ಮೂರ್ನಾಲ್ಕು ಬಿಂದುಗಳಷ್ಟು ಅಯೋಡಿನ್‌ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಿಮ್ಮ ತುಪ್ಪ ಪರಿಶುದ್ಧವಾಗಿದ್ದರೆ ಅದು ಬಣ್ಣ ಬದಲಾಯಿಸದು. ನಿಮ್ಮ ತುಪ್ಪಕ್ಕೆ ಸ್ಟಾರ್ಚ್‌ ಅಥವಾ ಗಂಜಿಯ ಕಲಬೆರಕೆ ಮಾಡಿದ್ದರೆ ನಿಮ್ಮ ತುಪ್ಪ ಅಯೋಡಿನ್‌ ಜೊತೆ ಸೇರಿದ ತಕ್ಷಣ ನೀಲಿ ಬಣ್ಣಕ್ಕೆ ತಿರುಗಬಹುದು.

ಅಂಗೈ ಪರೀಕ್ಷೆ

ಸ್ವಲ್ಪ ತುಪ್ಪವನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಳ್ಳಿ. ನಿಮ್ಮ ತುಪ್ಪ ಶುದ್ಧವಾಗಿದ್ದರೆ ಅದು ನಿಧಾನವಾಗಿ ಕರಗಿ ಹರಿಯಲು ಶುರು ಮಾಡುತ್ತದೆ. ನಿಮ್ಮ ತುಪ್ಪ ಕಲಬೆರಕೆಯದಾಗಿದ್ದರೆ, ಅದು ಗಟ್ಟಿಯಾಗಿ ಅಲುಗಾಡದೆ ಕೈಯಲ್ಲಿ ಹಾಗೆಯೇ ಇರುತ್ತದೆ. ಅತೀವ ಚಳಿ ಪ್ರದೇಶಗಳಲ್ಲಿ ಈ ಪರೀಕ್ಷೆ ಅನ್ವಯಿಸದು.

ಇದನ್ನೂ ಓದಿ: Superfoods: ಮಾರುಕಟ್ಟೆಯಲ್ಲಿ ಸೂಪರ್‌ಫುಡ್‌ಗಳೆನ್ನುವ ಈ ಆಹಾರಗಳು ನಿಜಕ್ಕೂ ಸೂಪರ್‌ಫುಡ್‌ಗಳೇ?

ಎಚ್‌ಸಿಎಲ್‌ ಪರೀಕ್ಷೆ

ಒಂದು ಟೆಸ್ಟ್‌ ಟ್ಯೂಬ್‌ ತೆಗದುಕೊಂಡು ಅದರಲ್ಲಿ ಸ್ವಲ್ಪ ತುಪ್ಪ ತೆಗೆದುಕೊಳ್ಳಿ. ನಂತರ ಅದಕ್ಕೆ ಕೆಲ ಬಿಂದುಗಳಷ್ಟು ಹೈಡ್ರೋಕ್ಲೋರಿಕ್‌ ಆಸಿಡ್‌ ಸೇರಿಸಿ ಕುಲುಕಿ. ಆಗ ನಿಮ್ಮದು ಶುದ್ಧ ತುಪ್ಪವಾಗಿದ್ದರೆ ಅದರ ಬಣ್ಣ ಬದಲಾಗದೆ ಹಾಗೆಯೇ ಇರುತ್ತದೆ. ಕಲಬೆರಕೆಯ ತುಪ್ಪವಾಗಿದ್ದರೆ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ.

Continue Reading

ಬೆಂಗಳೂರು

Dengue Scare: ಬೆಂಗಳೂರಿನಲ್ಲಿ ತೀವ್ರವಾಗಿ ಹರಡುತ್ತಿರುವ ಡೆಂಗ್ಯೂ; ನೂರಾರು ಮಂದಿ ಆಸ್ಪತ್ರೆಗೆ ದಾಖಲು

ಬೆಂಗಳೂರಿನಲ್ಲಿ ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ಡೆಂಗ್ಯೂ (Dengue Scare) ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ಡೆಂಗ್ಯೂ ಪೀಡಿತರ ಸಂಖ್ಯೆ 7,000 ದಾಟಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳು, ವೃದ್ಧರಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈಗಾಗಲೇ ಬೆಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಡಲು ವಿಫಲರಾದ ಆಸ್ತಿ ಮಾಲೀಕರ ವಿರುದ್ಧ 500 ರೂಪಾಯಿ ದಂಡ ವಿಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

VISTARANEWS.COM


on

By

Dengue Scare
Koo

ಬೆಂಗಳೂರು: ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು (Dengue Scare) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ (silicon city) ಬೆಂಗಳೂರಿನಲ್ಲಿ (bengaluru) ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಲಾಗುತ್ತಿದೆ. ಅನೇಕರು ಸೊಳ್ಳೆ ಬ್ಯಾಟ್‌ಗಳನ್ನು (Mosquito Bats) ಖರೀದಿಸುತ್ತಿದ್ದು, ಮನೆ ಸುತ್ತಮುತ್ತ ಸೊಳ್ಳೆಗಳು ಬರದಂತೆ ಮುನ್ನೆಚ್ಚರಿಕೆ ವಹಿಸುತ್ತಿರುವುದು ಕಂಡು ಬರುತ್ತಿದೆ. ಈ ನಡುವೆ, ಡೆಂಗ್ಯೂ ಪೀಡಿತರಾಗಿ ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಡೆಂಗ್ಯೂವಿನಿಂದಾಗಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸಿಲಿಕಾನ್ ಸಿಟಿಯು ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳನ್ನು ದಾಖಲಿಸಿದೆ. ರಾಜ್ಯಾದ್ಯಂತ ಒಟ್ಟು ಸಂಖ್ಯೆ 7,000 ದಾಟಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳು, ವೃದ್ಧರಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಮನೆಯಲ್ಲಿ ಹೆಚ್ಚುವರಿ ಸೊಳ್ಳೆ ಬ್ಯಾಟ್‌ಗಳನ್ನು ಖರೀದಿಸುವ ಅವಶ್ಯಕತೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು.

ಗಿಡಗಳಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಬಾವಲಿಗಳು ಹೆಚ್ಚುತ್ತಿದೆ. ಜೂನ್‌ನಲ್ಲಿ ಭಾರೀ ಮಳೆಯು ಸೊಳ್ಳೆಗಳಿಗೆ ಸೂಕ್ತವಾದ ಸಂತಾನೋತ್ಪತ್ತಿಯ ಸ್ಥಳವನ್ನು ಸೃಷ್ಟಿಸಿದ ಅನಂತರ ಬಾವಲಿಗಳೂ ಹೆಚ್ಚಾಗಿವೆ.


ಬೆಂಗಳೂರಿನಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮಗಳು

ಈಗಾಗಲೇ ಬೆಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಡಲು ವಿಫಲರಾದ ಆಸ್ತಿ ಮಾಲೀಕರ ವಿರುದ್ಧ 500 ರೂಪಾಯಿ ದಂಡ ವಿಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದ ಸಭೆಯಲ್ಲಿ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹರಡುವ ಡೆಂಗ್ಯೂ ನಿಯಂತ್ರಣದ ಬಗ್ಗೆ ಗಮನಹರಿಸಿ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ತಮ್ಮ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳದ ಆಸ್ತಿ ಮಾಲೀಕರಿಗೆ ಗರಿಷ್ಠ 50೦ ರೂಪಾಯಿ ದಂಡ ವಿಧಿಸುವಂತೆ ಆರೋಗ್ಯ ಸಚಿವರು ಸೂಚಿಸಿದ್ದಾರೆ.

ಇದನ್ನೂ ಓದಿ: Bomb Threat: ಬಾಯ್‌ ಫ್ರೆಂಡ್‌ ಬಿಟ್ಟು ಹೋಗ್ತಾನೆ ಎಂದು ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ!

ಇದಲ್ಲದೆ, ಬೆಂಗಳೂರಿನಲ್ಲಿ ಡೆಂಗ್ಯೂ ಹರಡುವುದನ್ನು ತಡೆಯಲು ಲಾರ್ವಾ ಪರೀಕ್ಷೆ ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಬಿಎಂಪಿಯಿಂದ ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ದಟ್ಟ ಜನಸಂಖ್ಯೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸುಮಾರು 25 ಲಕ್ಷ ನಗರ ಬಡವರನ್ನು ಸಮೀಕ್ಷೆಗಾಗಿ ಎಲ್ಲಾ ಬಿಬಿಎಂಪಿ ವಲಯಗಳಲ್ಲಿ ಗುರುತಿಸಲಾಗಿದೆ. ಅಲ್ಲಿ ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತರು, ಎಎನ್‌ಎಂಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸ್ವಯಂಸೇವಕರು ಇರಲಿದ್ದಾರೆ. ತಲಾ 1,000 ಮನೆಗಳನ್ನು ಒಳಗೊಂಡ ಬ್ಲಾಕ್ ರಚಿಸಲು ನಿರ್ದೇಶನ ನೀಡಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಕನಿಷ್ಠ 12-14 ಲಕ್ಷ ಮನೆಗಳನ್ನು ಆವರಿಸುವ ಗುರಿ ಹೊಂದಲಾಗಿದೆ.

Continue Reading

ಆರೋಗ್ಯ

Foods For Hormone Balance: ಮಹಿಳೆಯರೇ, ಹಾರ್ಮೋನಿನ ಸಮತೋಲನಕ್ಕಾಗಿ ಈ ಆಹಾರಗಳನ್ನು ಮರೆಯದೇ ಸೇವಿಸಿ

Foods for Hormone Balance: ಮಹಿಳೆಯ ಶಕ್ತಿ, ಲೈಂಗಿಕ ಆರೋಗ್ಯ, ಸಂತಾನೋತ್ಪತ್ತಿ ಕ್ರಿಯೆ, ಮೂಡು, ತೂಕ, ಮಾಸಿಕ ಚಕ್ರವೂ ಸೇರಿದಂತೆ ಪ್ರತಿಯೊಂದು ಆಕೆಯ ಹಾರ್ಮೋನಿನ ಆರೋಗ್ಯದ ಮೇಲೆ ನಿರ್ಧರಿತವಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಮಹಿಳೆಯನ್ನು ಬಾಧಿಸುವ ಸಮಸ್ಯೆಯೇ ಇದು. ಮನೆಯವರ ಕಷ್ಟಸುಖಗಳು, ಹೊರಗೆ ದುಡಿದು ಬಂದು ಮನೆಯನ್ನು ಸಂಭಾಳಿಸುವ ಆಧುನಿಕ ಮಹಿಳೆ ಬಹಳಷ್ಟು ಸಾರಿ ತನ್ನ ಆರೋಗ್ಯದ ನಿರ್ಲಕ್ಷ್ಯ ಮಾಡುತ್ತಾಳೆ. ಪರಿಣಾಮವಾಗಿ ಇಂತಹ ಸಮಸ್ಯೆಗಳು ಆಕೆಯನ್ನು ಬೆಂಬಿಡದೆ ಕಾಡುತ್ತವೆ. ಹಾಗಾದರೆ ಸರಿಯಾದ ಆಹಾರಕ್ರಮ ಪಾಲಿಸುವುದು ಹೇಗೆ?

VISTARANEWS.COM


on

Foods For Hormone Balance
Koo

ಮಹಿಳೆಯರ ಆರೋಗ್ಯದಲ್ಲಿ ಹಾರ್ಮೋನಿನ (Foods for Hormone Balance) ಆರೋಗ್ಯಕ್ಕೆ ಬಹಳ ಮುಖ್ಯವಾದ ಸ್ಥಾನವಿದೆ. ಆಕೆಯ ಹಾರ್ಮೋನುಗಳು ಸಮತೋಲನದಲ್ಲಿದ್ದರೆ ಆಕೆ ಆರೋಗ್ಯವಾಗಿದ್ದಾಳೆ ಎಂದರ್ಥ. ಆಕೆಯ ಶಕ್ತಿ, ಲೈಂಗಿಕ ಆರೋಗ್ಯ, ಸಂತಾನೋತ್ಪತ್ತಿ ಕ್ರಿಯೆ, ಮೂಡು, ತೂಕ, ಮಾಸಿಕ ಚಕ್ರವೂ ಸೇರಿದಂತೆ ಪ್ರತಿಯೊಂದು ಆಕೆಯ ಹಾರ್ಮೋನಿನ ಆರೋಗ್ಯದ ಮೇಲೆ ನಿರ್ಧರಿತವಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಮಹಿಳೆಯನ್ನು ಬಾಧಿಸುವ ಸಮಸ್ಯೆಯೇ ಇದು. ಮನೆಯವರ ಕಷ್ಟಸುಖಗಳು, ಹೊರಗೆ ದುಡಿದು ಬಂದು ಮನೆಯನ್ನು ಸಂಭಾಳಿಸುವ ಆಧುನಿಕ ಮಹಿಳೆ ಬಹಳಷ್ಟು ಸಾರಿ ತನ್ನ ಆರೋಗ್ಯದ ನಿರ್ಲಕ್ಷ್ಯ ಮಾಡುತ್ತಾಳೆ. ಪರಿಣಾಮವಾಗಿ ಇಂತಹ ಸಮಸ್ಯೆಗಳು ಆಕೆಯನ್ನು ಬೆಂಬಿಡದೆ ಕಾಡುತ್ತವೆ. ಆಹಾರಕ್ರಮದಲ್ಲಿ ಕೊಂಚ ವ್ಯತ್ಯಾಸ, ಆರೋಗ್ಯಕರ ಜೀವನ ಪದ್ಧತಿ ಹಾಗೂ ಸ್ವಂತ ಕಾಳಜಿ, ಮಾಡಿದರೆ, ಈ ಸಮಸ್ಯೆಗಳು ಬರದಂತೆ ತಡೆಯಬಹುದು. ಮೆನೋಪಾಸ್‌ ಎಂಬ ಸಂದಿಗ್ಧದ ಹೊತ್ತಿನಲ್ಲಿ ಆಕೆ ಆರೋಗ್ಯಕರವಾಗಿ ಮತ್ತಷ್ಟು ಆತ್ಮವಿಶ್ವಾಸದಿಂದ ಮುನ್ನಡೆಯಬಹುದು. ಬನ್ನಿ, ಹಾರ್ಮೋನಿನ ಸಮಸ್ಯೆ ಎದುರಿಸುವ ಪ್ರತಿ ಮಹಿಳೆಯೂ ಯಾವೆಲ್ಲ ಸೂಪರ್‌ಫುಡ್‌ಗಳನ್ನು ತನ್ನ ನಿತ್ಯದ ಆಹಾರಕ್ರಮದಲ್ಲಿ ಸೇರಿಸಿಕೊಂಡು ಲಾಭ ಪಡೆಯಬಹುದು ಎಂಬುದನ್ನು ನೋಡೋಣ.

Flax Seeds with Pottery

ಅಗಸೆ ಬೀಜ

ಅಗಸೆ ಬೀಜ ಅಥವಾ ಫ್ಲ್ಯಾಕ್‌ಸೀಡ್‌ನಲ್ಲಿ ಲಿಗ್ನನ್‌ ಹೇರಳವಾಗಿದ್ದು, ಇವು ಫೈಟೀ ಎಸ್ಟ್ರೋಜೆನ್‌ಗಳಾಗಿದ್ದು ಇವು ಇಸ್ಟ್ರೋಜೆನ್‌ ಮಟ್ಟದ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ಗಳೂ ಹೇರಳವಾಗಿದ್ದು, ಹಾರ್ಮೋನಿನ ಆರೋಗ್ಖಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶವಾಗಿದೆ. ಹಾಗಾಗಿ ಅಗಸೆ ಬೀಜವನ್ನು ಪುಡಿ ಮಾಡಿ ಅಥವಾ ಕ್ರಶ್‌ ಮಾಡಿ, ಬಳಕೆ ಮಾಡುವ ಮೂಲಕ ಲಾಭ ಪಡೆಯಬಹುದು.

Fatty Fish Joint Pain Relief Foods

ಸಾಲ್ಮನ್‌

ಸಾಲ್ಮನ್‌ನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ ಹೇರಳವಾಗಿದ್ದು, ದೇಹದ ಉರಿಯೂತವನ್ನು ಕಡಿಮೆ ಮಾಡುವ ಅತ್ಯಂತ ಅಗತ್ಯವಾದ ಹಾರ್ಮೋನಿನ ಉತ್ಪಾದನೆಗೆ ಪ್ರಚೋದಿಸುತ್ತದೆ. ದೇಹದ ಜೀವಕೋಶಗಳ ಪದರಗಳ ಆರೋಗ್ಯಕ್ಕೂ ಈ ಪೋಷಕಾಂಶ ಬೇಕು. ಯಾಕೆಂದರೆ, ತಿಂದ ಆಹಾರದ ಪೋಷಕಾಂಶಗಳು ಜೀವಕೋಶಗಳಿಗೆ ತಲುಪಬೇಕಿದ್ದರೆ ಅವುಗಳ ಪದರದ ಮೂಲಕ ಪ್ರವೇಶ ಸಲಭವಾಗಬೇಕು. ಈ ಎಲ್ಲ ಕಾರಣಗಳಿಗೆ ಒಮೆಗಾ 3 ಫ್ಯಾಟಿ ಆಸಿಡ್‌ ಬಹಳ ಮುಖ್ಯ. ಅದು ಸಾಲ್ಮನ್‌ನಲ್ಲಿದೆ.

Avocado Anti Ageing Fruits Avocados contain healthy monounsaturated fats and vitamin E, which are beneficial for skin health and preventing oxidative damage.

ಬೆಣ್ಣೆಹಣ್ಣು

ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯಕರ ಕೊಬ್ಬಿದೆ. ಪೊಟಾಶಿಯಂ, ನಾರಿನಂಶ, ಮೆಗ್ನೀಶಿಯಂ ಸೇರಿದಂತೆ ಎಲ್ಲ ಪೋಷಕಾಂಶಗಳೂ ಇದರಲ್ಲಿ ಇರುವುದರಿಂದ ಹಾರ್ಮೋನಿನ ಆರೋಗ್ಯಕ್ಕೆ ಇದು ಒಳ್ಳೆಯದು.

Green leafy vegetables like celery and spinach are high in sodium and cause blood clots Foods To Avoid For Blood Pressure

ಹಸಿರು ಸೊಪ್ಪು ತರಕಾರಿ

ಮಹಿಳೆಯರು ಹಸಿರು ಸೊಪ್ಪು ತರಕಾರಿಗಳ ಸೇವನೆ ಹೆಚ್ಚು ಮಾಡಬೇಕು. ಇದರಲ್ಲಿ ಮೆಗ್ನೀಶಿಯಂ ಅಧಿಕವಾಗಿರುತ್ತವೆ. ಮೆಗ್ನೀಶಿಯಂ ಕಾರ್ಟಿಸಾಲ್‌ ಮಟ್ಟವನ್ನು ಸಮತೋಲಗೊಳಿಸಲು ನೆರವಾಗುತ್ತದೆ. ಹಾಗೆಯೇ ಇವುಗಳಲ್ಲಿರುವ ವಿಟಮಿನ್‌ ಬಿ6, ಪ್ರೊಜೆಸ್ಟೆರಾನ್‌ ಉತ್ಪಾದನೆಯನ್ನೂ ಪ್ರೋತ್ಸಾಹಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಿ, ಹಾರ್ಮೋನಿನ ಮಟ್ಟವನ್ನು ಸಮತೋಲನಗೊಳಿಸಲು ಇಂತಹ ಆಹಾರ ಮಹಿಳೆಗೆ ಮುಖ್ಯ.

Sweet potatoes have the ability to control diabetes and prevent cancer

ಸಿಹಿಗೆಣಸು

ಸಿಹಿ ಗೆಣಸಿನಲ್ಲಿ ಹೆಚ್ಚು ಬೀಟಾ ಕೆರಟಿನ್‌ ಇದ್ದು ಇದು ಹಾರ್ಮೋನಿನ ಉತ್ಪಾದನೆಗೆ ಬಹಳ ಒಳ್ಳೆಯದು. ಇದರಲ್ಲಿ ನಾರಿನಂಶವೂ ಹೇರಳವಾಗಿದೆ. ದೇಹದ ರಕ್ತದ ಮಟ್ಟವನ್ನು ಸಮತೋಲನಗೊಳಿಸಲೂ ಇದು ನೆರವಾಗುತ್ತದೆ.

Raw Turmeric with Powder Cutout

ಅರಿಶಿನ

ಕರ್ಕ್ಯುಮಿನ್‌ ಎಂಬ ಆಂಟಿ ಇನ್‌ಫ್ಲಮೇಟರಿ ಅಂಶಗಳನ್ನು ಹೊಂದಿರುವ ಅರಿಶಿನ ಮಹಿಳೆಯ ಹಾರ್ಮೋನಿನ ಸಮತೋಲನಕ್ಕೂ ಬಹಳ ಮುಖ್ಯ. ಪಿತ್ತಕೋಶದ ಆರೋಗ್ಯಕ್ಕೆ, ಹಾರ್ಮೋನ್‌ ಡಿಟಾಕ್ಸಿಫಿಕೇಶನ್‌ಗೆ ಇದು ಒಳ್ಳೆಯದು.

Dry Seeds

ಒಣಬೀಜಗಳು

ಬಾದಾಮಿ, ವಾಲ್ನಟ್‌, ಚಿಯಾ ಬೀಜಗಳು, ಕುಂಬಳಕಾಯಿ ಬೀಜಗಳು ಸೇರಿದಂತೆ ಒಣ ಬೀಜಗಳಲ್ಲಿ ಫ್ಯಾಟಿ ಆಸಿಡ್‌ಗಳು, ವಿಟಮಿನ್‌ಗಳು, ಪ್ರೊಟೀನ್‌ ಹಾಗೂ ಖನಿಜಾಂಶಗಳು ಹೇರಳವಾಗಿರುತ್ತವೆ. ಇವು ಮಹಿಳೆಯ ಸಂಪೂರ್ಣ ಆರೋಗ್ಯಕ್ಕೆ ಅತ್ಯಂತ ಮುಖ್ಯ.

homemade curd in a clay pot Stomach Bloating Relief

ಮೊಸರು

ಪ್ರೊಬಯಾಟಿಕ್‌ ಗುಣಗಳಿರುವ ಆಹಾರಗಳೂ ಮಹಿಳೆಗೆ ಮುಖ್ಯ. ಮೊಸರಿನಲ್ಲಿ ಈ ಗುಣವಿದ್ದು ಇದು ಹಾರ್ಮೋನಿನ ಆರೋಗ್ಯಕ್ಕೆ ಬಹಳ ಮುಖ್ಯ. ಮಹಿಳೆಗೆ ವಯಸ್ಸಾದಂತೆ ಕ್ಯಾಲ್ಶಿಯಂ ಅಗತ್ಯ ಹೆಚ್ಚು. ಈ ಕ್ಯಾಲ್ಶಿಯಂ ಇದರಲ್ಲಿ ದೊರೆಯುವ ಕಾರಣ, ಮೊಸರು ಸೇರಿದಂತೆ ಕ್ಯಾಲ್ಶಿಯಂ ಹೆಚ್ಚಿರುವ ಆಹಾರಗಳನ್ನು ಆಕೆ ನಿತ್ಯಾಹಾರದಲ್ಲಿ ಬಳಸಬೇಕು.

ಇದನ್ನೂ ಓದಿ: Saffron For Baby: ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆಯೇ?

Continue Reading
Advertisement
road accident vijayapura
ವಿಜಯಪುರ53 seconds ago

Road Accident: ಬಸ್‌ ಹರಿದು ವ್ಯಕ್ತಿ ಸಾವು; ಮರಳೇಕಾಯಿ ತಿಂದು 8 ಮಕ್ಕಳು ಅಸ್ವಸ್ಥ

Virat kohli
ಪ್ರಮುಖ ಸುದ್ದಿ4 mins ago

Virat Kohli : ಇನ್​ಸ್ಟಾಗ್ರಾಮ್ ಪೋಸ್ಟ್​ ಮೂಲಕ ಬಿಟಿಎಸ್​ ಬ್ಯಾಂಡ್​ನ ದಾಖಲೆ ಮುರಿದ ವಿರಾಟ್​ ಕೊಹ್ಲಿ

Period Insomnia
ಆರೋಗ್ಯ14 mins ago

Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

Kundapura Kannada This time Kundapura Kannada Festival at the palace grounds Here is the list of program
ಉಡುಪಿ25 mins ago

Kundapura Kannada:  ಅರಮನೆ ಮೈದಾನದಲ್ಲಿ ಈ ಬಾರಿ `ವಿಶ್ವ ಕುಂದಾಪುರ ಕನ್ನಡ ಹಬ್ಬ’; ಕಾರ್ಯಕ್ರಮದ ವಿವರ ಪಟ್ಟಿ ಇಲ್ಲಿದೆ!

swamiji death kalaburagi viraktha math
ಕಲಬುರಗಿ27 mins ago

Swamiji Death: ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ ವಿಧಿವಶ

Smriti Mandhana
ಕ್ರಿಕೆಟ್30 mins ago

Smriti Mandhana : ಬಾಯ್​ಫ್ರೆಂಡ್​ ಜತೆಗಿನ ಐದು ವರ್ಷಗಳ ಬಾಂಧವ್ಯವನ್ನು ಕೇಕ್​ ಕಟ್​ ಮಾಡುವ ಮೂಲಕ ಸಂಭ್ರಮಿಸಿದ ಸ್ಮೃತಿ ಮಂದಾನಾ

child abandon
ಕ್ರೈಂ39 mins ago

Child Abandon: ಮೂರು ತಿಂಗಳ ಮಗು ಬಿಟ್ಟು ತಾಯಿ ಪರಾರಿ

Chandan Shetty talk about future decision
ಸ್ಯಾಂಡಲ್ ವುಡ್52 mins ago

Chandan Shetty: ಚಂದನ್‌ ಶೆಟ್ಟಿಗೆ ಒಳ್ಳೆ ಹುಡುಗಿ ಜತೆ ಮದುವೆಯಾಗುವ ಕನಸು ಏನೋ ಇತ್ತಂತೆ ಆದರೆ….

Mumbai rain
ಪ್ರಮುಖ ಸುದ್ದಿ56 mins ago

Mumbai Rain : ಭಾನುವಾರ ರಾತ್ರಿ ಪೂರ್ತಿ ಸುರಿದ ಮಳೆಗೆ ಮುಂಬೈ ನಗರದ ಹಲವು ಪ್ರದೇಶಗಳು ಜಲಾವೃತ

Mumbai hit and run
ದೇಶ1 hour ago

Mumbai Hit And Run: ಹಿಟ್‌ ಆ್ಯಂಡ್‌ ರನ್‌ಗೂ ಮುನ್ನ ಪಬ್‌ಗೆ ಹೋಗಿದ್ದ ಆರೋಪಿ; ವೈರಲ್‌ ಆಗ್ತಿದೆ ಈ ವಿಡಿಯೋ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ14 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ16 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ17 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌