Winter Sleep: ಚಳಿಗಾಲದಲ್ಲಿ ನಿದ್ದೆ ಹೆಚ್ಚೇ? ಕಾರಣವಿದೆ! - Vistara News

ಆರೋಗ್ಯ

Winter Sleep: ಚಳಿಗಾಲದಲ್ಲಿ ನಿದ್ದೆ ಹೆಚ್ಚೇ? ಕಾರಣವಿದೆ!

ಚಳಿ ಹೆಚ್ಚಾದಷ್ಟೂ ಹೊದ್ದು ಮಲಗಿದರಾಯ್ತು ಎಂಬ ಭಾವ ತೀವ್ರವಾಗುತ್ತದೆ. ಚಳಿಗಾಲ ಕಳೆದು, ರಾತ್ರಿ ಕಿರಿದಾಗಿ, ಸೆಖೆ ಏರುತ್ತಿದ್ದಂತೆ ನಿದ್ದೆಯೂ ಕಡಿಮೆಯಾಗುತ್ತದೆ. ಹೀಗೇಕೆ? ಈ ಲೇಖನ ಓದಿ.

VISTARANEWS.COM


on

Winter Sleep
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಳಿಗಾಲದ ರಾತ್ರಿಗಳು ದೀರ್ಘ; ನಿದ್ದೆ ಇನ್ನೂ ದೀರ್ಘ! ಬೆಳಗಾಗಿದ್ದು ಗೊತ್ತೇ ಆಗುವುದಿಲ್ಲ; ಗೊತ್ತಾದರೂ ಏಳಲು ಮನಸ್ಸಾಗುವುದಿಲ್ಲ. ನಸುಕಿಗೆ ಕಿರುಚುವ ಅಲಾರಾಂ ಗಡಿಯಾರ ಆ ಹೊತ್ತಿನ ಶತ್ರುವಿನಂತೆ ಭಾಸವಾಗುತ್ತದೆ. ಚಳಿ ಹೆಚ್ಚಾದಷ್ಟೂ ಹೊದ್ದು ಮಲಗಿದರಾಯ್ತು ಎಂಬ ಭಾವ ತೀವ್ರವಾಗುತ್ತದೆ. ಚಳಿಗಾಲ ಕಳೆದು, ರಾತ್ರಿ ಕಿರಿದಾಗಿ, ಸೆಖೆ ಏರುತ್ತಿದ್ದಂತೆ ನಿದ್ದೆಯೂ ಕಡಿಮೆಯಾಗುತ್ತದೆ. ಹೀಗೇಕೆ? ನಿಜಕ್ಕೂ ಹೀಗಾಗುವುದು ಹೌದೇ ಅಥವಾ ಇದು ನಮ್ಮ ಭ್ರಮೆಯೇ? ವಿಜ್ಞಾನಿಗಳ ಬಳಿ ಇದಕ್ಕೆ ಉತ್ತರವಿದೆ.

ಸೂರ್ಯನ ಬೆಳಕಿಗೆ ಮತ್ತು ದೇಹದೊಳಗಿನ ಜೈವಿಕ ಗಡಿಯಾರ ಅಥವಾ ಸರ್ಕಾಡಿಯನ್‌ ರಿದಂಗೆ ನೇರ ಸಂಬಂಧವಿದೆ. ಇದಕ್ಕೆ ತಕ್ಕಂತೆ ನಮ್ಮ ಚಟುವಟಿಕೆಗಳನ್ನು ನಾವು ಹೊಂದಿಸಿಕೊಳ್ಳುವುದು ಜಾಣತನ ಎನ್ನುತ್ತಾರೆ ಜರ್ಮನಿಯ ಹೆಡ್‌ವಿಗ್ಸ್‌ ಆಸ್ಪತ್ರೆಯ ಅಧ್ಯಯನಕಾರರು. ಹಾಗಾಗಿ ನಿದ್ದೆ ಹಾಳುಬೀಳಾದ ಇಂದಿನ ನಗರವಾಸಿಗಳಿಂದ ಹಿಡಿದು ಎಲ್ಲರಿಗೂ, ಚಳಿಗಾಲದಲ್ಲಿ ನಿದ್ದೆ ಸ್ವಲ್ಪ ಹೆಚ್ಚು. ಅದರಲ್ಲೂ ನಮಗೆ ಕನಸುಗಳನ್ನು ನೀಡುವ ಆರ್‌ಇಎಮ್‌ (rapid eye movement) ನಿದ್ದೆಯ ಅವಧಿ ಚಳಿಗಾಲದಲ್ಲಿ ದೀರ್ಘ, ಬೇಸಿಗೆಯಲ್ಲಿ ಕಡಿಮೆಯಂತೆ. ಹಾಗಾಗಿ ಋತುಮಾನಕ್ಕೂ ನಮ್ಮ ನಿದ್ದೆಗೂ ಸ್ಪಷ್ಟವಾದ ನಂಟಿದೆ.

Winter Sleep

ಈ ಅಧ್ಯಯನಕ್ಕಾಗಿ, ನಿದ್ದೆಯ ಸಮಸ್ಯೆಯಿರುವ 188 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಆದರೆ ಇವರಾರು ನಿದ್ದೆಗಾಗಿ ಔಷಧ ತೆಗೆದುಕೊಳ್ಳದವರಾಗಿದ್ದರು. ಅವರನ್ನು ಎಬ್ಬಿಸಲು ಯಾವುದೇ ಅಲರಾಂಗಳು ಇಲ್ಲದಂಥ, ಪ್ರಯೋಗಶಾಲೆಯಲ್ಲಿ ಅವರೆಲ್ಲರನ್ನೂ ಮಲಗಿಸಿ, ನಿದ್ದೆಯ ಪೂರ್ವಾಪರಗಳನ್ನು ಹಲವಾರು ತಿಂಗಳುಗಳವರೆಗೆ ಗಮನಿಸಲಾಗಿತ್ತು. ಬೇಸಿಗೆಗಿಂತಲೂ ಚಳಿಗಾಲದಲ್ಲಿ ಇವರ ನಿದ್ದೆಯ ಅವಧಿ ಸುಮಾರು ಒಂದು ತಾಸಿನಷ್ಟು ಹೆಚ್ಚಾಗಿತ್ತು. ಜೊತೆಗೆ, ಆರ್‌ಇಎಂ ನಿದ್ದೆಯ ಅವಧಿಯೂ ಅರ್ಧ ತಾಸಿನಷ್ಟು ಅಧಿಕವಾಗಿತ್ತು.

Winter Sleep

“ಋತುಮಾನದ ಬದಲಾವಣೆಯು ಭೂಮಿಯ ಮೇಲಿನ ಎಲ್ಲಾ ಜೀವಿಗಳ ಮೇಲೆ ಸರ್ವತ್ರವಾಗಿ ಪರಿಣಾಮ ಬೀರುತ್ತದೆ. ಇದು ಸಹಜ. ಆದರೆ ಈ ಪರಿಣಾಮದಿಂದ ನಮ್ಮಲ್ಲಿ ಹೆಚ್ಚಿನ ಬದಲಾವಣೆ ಆಗದಂತೆ ನಾವು ನಿರ್ವಹಿಸಲು ಯತ್ನಿಸುತ್ತೇವೆ” ಎನ್ನುತ್ತಾರೆ ಅಧ್ಯಯನಕಾರರು. ಆದರೆ ಈ ಅಧ್ಯಯನವನ್ನು ನಿದ್ದೆಯ ಸಮಸ್ಯೆಯಿಲ್ಲದ, ಆರೋಗ್ಯವಂತ ಜನರ ಮೇಲೆ ನಡೆಸಿ, ಪರಿಣಾಮ ಒಂದೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವ ಅಗತ್ಯವಿದೆ.

ಕೆಲವು ಭೌಗೋಳಿಕ ಪ್ರದೇಶಗಳಲ್ಲಿ ಋತುಮಾನದ ಬದಲಾವಣೆಯೊಂದಿಗೆ, ದಿನ-ರಾತ್ರಿಯ ಅವಧಿಯಲ್ಲಿ ತೀವ್ರ ಬದಲಾವಣೆ ಉಂಟಾಗುತ್ತದೆ. ಬೇಸಿಗೆಯಲ್ಲಿ ರಾತ್ರಿ 9ಕ್ಕೆ ಕತ್ತಲಾಗಿ, ಬೆಳಗಿನ 5ಕ್ಕೇ ಸೂರ್ಯ ಮೂಡಿದರೆ, ಚಳಿಗಾಲದಲ್ಲಿ ಸಿಕ್ಕಾಪಟ್ಟೆ ಹಿಮ ಸುರಿದು, ಸಂಜೆ ೪ಕ್ಕೆ ಕತ್ತಲಾಗಿ ಬೆಳಗಿನ 7ಕ್ಕೆ ರವಿ ಬರುವಂಥ ಪ್ರದೇಶಗಳಿವೆ. ಇಂಥ ಸ್ಥಳಗಳಲ್ಲಿ ಋತುಮಾನಕ್ಕೆ ತಕ್ಕಂತೆ ದಿನ-ರಾತ್ರಿಯನ್ನು ಮತ್ತು ನಿದ್ದೆಯನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಸುಲಭದ್ದಲ್ಲ.

ಇದನ್ನೂ ಓದಿ: Health Tips: ನಮ್ಮ ಶಕ್ತಿಗುಂದಿಸುವ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Benefits Of Black Raisins: ರಕ್ತದೊತ್ತಡ, ಕೊಲೆಸ್ಟ್ರಾಲ್‌ ನಿಯಂತ್ರಿಸಬೇಕೆ? ಕಪ್ಪು ಒಣದ್ರಾಕ್ಷಿ ನೆನೆಸಿ ತಿನ್ನಿ

ಕಪ್ಪು ಒಣದ್ರಾಕ್ಷಿಗಳನ್ನು ಯಾರಾದರೂ ಕೈಗಿತ್ತರೆ, ನೇರ ಬಾಯಿಯ ದಾರಿಯನ್ನೇ ಕಾಣಿಸುತ್ತೇವೆ ನಾವು. ಎಲ್ಲರಿಗೂ ಇಷ್ಟವಾಗುವ ಈ ಪುಟ್ಟ ತಿನಿಸಿನಲ್ಲಿ ಆರೋಗ್ಯಕ್ಕೆ ಲಾಭವಾಗುವ ಅಂಶಗಳು ಭರಪೂರ ಇವೆ. ಅವುಗಳನ್ನು ನೆನೆಸಿ ತಿಂದರೆ (benefits of black raisins) ಇನ್ನೂ ಒಳ್ಳೆಯದು.

VISTARANEWS.COM


on

Benefits Of Black Raisins
Koo

ಒಣ ಹಣ್ಣುಗಳನ್ನು ಮೆಲ್ಲುವುದನ್ನು ಇಷ್ಟಪಡದವರು ವಿರಳ. ಸುಮ್ಮನೆ ಕೂತಿದ್ದಾಗಲೂ ನಾಲ್ಕು ಒಣ ದ್ರಾಕ್ಷಿ ಕೈಗಿತ್ತರೆ ಬಾಯಿಗೆ ಒಗೆದುಕೊಳ್ಳಲು ಯಾರಿಗೂ ಬೇಸರವಿರುವುದಿಲ್ಲ. ಹಲ್ಲಿಲ್ಲದ ಬಾಯಲ್ಲಿ ಒತ್ತರಿಸಿಟ್ಟುಕೊಳ್ಳುವ ವೃದ್ಧರಿಂದ ಹಿಡಿದು, ಹಲ್ವಾ, ಪಾಯಸದಲ್ಲಿ ಹೆಕ್ಕಿ ತಿನ್ನುವ ಮಕ್ಕಳವರೆಗೆ ಒಣ ದ್ರಾಕ್ಷಿ ಎಲ್ಲರಿಗೂ ಮೆಚ್ಚು. ಸಾಮಾನ್ಯವಾಗಿ ಬಳಸುವ ಹೊಂಬಣ್ಣದ ದ್ರಾಕ್ಷಿಗಳ ಬದಲಿಗೆ ಕಪ್ಪು ದ್ರಾಕ್ಷಿಗಳ ಬಗ್ಗೆ ಇವತ್ತಿನ ನಮ್ಮ ಗಮನ. ಏನಿವುಗಳ ವಿಶೇಷತೆ?
ಒಣ ದ್ರಾಕ್ಷಿಯನ್ನು ನೆನೆಸಿ ತಿನ್ನಬೇಕೆನ್ನುತ್ತದೆ ಪರಂಪರಾಗತ ವೈದ್ಯ ಶಾಸ್ತ್ರ. ಯಾವುದೇ ಒಣ ಹಣ್ಣು, ಬೀಜಗಳನ್ನು ನೆನೆಸಿ ತಿನ್ನುವುದೇ ಶ್ರೇಷ್ಠ ಎಂಬುದನ್ನು ಆಹಾರ ತಜ್ಞರೂ ಅನುಮೋದಿಸುತ್ತಾರೆ. ಇದು ಒಣ ದ್ರಾಕ್ಷಿಯ ಮಟ್ಟಿಗೂ ನಿಜ. ಹಸಿರು, ಹೊಂಬಣ್ಣದ್ದು, ಕಪ್ಪು- ಹೀಗೆ ದ್ರಾಕ್ಷಿಯ ಬಣ್ಣ ಯಾವುದೇ ಇದ್ದರೂ, ಅವುಗಳ ಲಾಭಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯಬೇಕೆಂದರೆ ನೆನೆಸಿ ತಿನ್ನುವುದು, ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಮೆಲ್ಲುವುದು ಇನ್ನೂ ಉತ್ತಮ. ಏನಿದೆ ಇದನ್ನು ತಿನ್ನುವುದರ (benefits of black raisins) ಪ್ರಯೋಜನಗಳು?

ealthy internal organs of human digestive system / highlighted blue organs

ಜೀರ್ಣಾಂಗಗಳು ಸುಸೂತ್ರ

ನಾರಿನಂಶ ಹೆಚ್ಚಿರುವ ಈ ಹಣ್ಣುಗಳನ್ನು ತಿನ್ನುವುದರಿಂದ ಪಚನಾಂಗಗಳ ಮೇಲೆ ಪೂರಕ ಪರಿಣಾಮ ಉಂಟಾಗುತ್ತದೆ. ನೆನೆಸಿದ ಕಪ್ಪುದ್ರಾಕ್ಷಿಯು ಮಲಬದ್ಧತೆಯನ್ನು ನಿವಾರಿಸಿ, ಹೊಟ್ಟೆಯನ್ನು ಶುದ್ಧವಾಗಿಡುತ್ತದೆ. ಆಸಿಡಿಟಿಯನ್ನು ದೂರ ಮಾಡಿ, ಹೊಟ್ಟೆಯ ತೊಂದರೆಯನ್ನು ತಹಬಂದಿಗೆ ತರುತ್ತದೆ.

ಮೂಳೆಗಳು ಸದೃಢ

ಕಪ್ಪು ದ್ರಾಕ್ಷಿಯಲ್ಲಿ ಕ್ಯಾಲ್ಶಿಯಂ ಮತ್ತು ಪೊಟಾಶಿಯಂ ಅಂಶಗಳು ವಿಫುಲವಾಗಿವೆ. ಇದರಿಂದ ಸಣ್ಣ ಪ್ರಮಾಣದಲ್ಲೇ ಆದರೂ, ನಿಯಮಿತ ಸೇವನೆಯಿಂದ ಈ ಖನಿಜಗಳು ದೇಹಕ್ಕೆ ಸದಾ ದೊರೆಯುವಂತೆ ನೋಡಿಕೊಳ್ಳಬಹುದು. ಹೀಗೆ ನಿರಂತರವಾಗಿ ಈ ಪೋಷಕಗಳು ದೊರೆತರೆ, ಕ್ರಮೇಣ ಮೂಳೆಗಳು ಗಟ್ಟಿಯಾಗುತ್ತವೆ. ಅದರಲ್ಲೂ ಬೆಳೆಯುವ ಮಕ್ಕಳಿಗೆ ಮತ್ತು ವೃದ್ಧರಿಗೆ ಮೂಳೆ ಸಬಲವಾಗಿರಬೇಕಾದರೆ ಇಂಥ ಆಹಾರಗಳು ಅಗತ್ಯವಾಗುತ್ತವೆ.

Indian Male Doctor Check BP or Blood Pressure of a Patient L

ರಕ್ತದೊತ್ತಡ ನಿಯಂತ್ರಣ

ಕಪ್ಪು ದ್ರಾಕ್ಷಿಯಲ್ಲಿರುವ ಪೊಟಾಶಿಯಂ ಅಂಶವು ರಕ್ತದಲ್ಲಿರುವ ಸೋಡಿಯಂ ಅಂಶವನ್ನು ತಗ್ಗಿಸುವ ಕೆಲಸವನ್ನು ಮಾಡುತ್ತದೆ. ಇದರಿಂದ ರಕ್ತದ ಒತ್ತಡ ಏರಿಳಿತವಾಗದಂತೆ ನಿರ್ವಹಿಸುವುದು ಸುಲಭವಾಗುತ್ತದೆ. ಇದರಲ್ಲಿರುವ ಕರಗದಿರುವ ನಾರಿನಂಶವು ದೇಹದಲ್ಲಿ ಜಮೆಯಾಗಿರುವ ಕೊಬ್ಬು ಕರಗಿಸುವುದಕ್ಕೂ ಅಳಿಲುಸೇವೆ ಮಾಡುತ್ತದೆ.

ಕೊಲೆಸ್ಟ್ರಾಲ್‌ ನಿಯಂತ್ರಣ

ಶರೀರದಲ್ಲಿ ಕೊಲೆಸ್ಟ್ರಾಲ್‌ ಜಮೆಯಾದರೆ ಆಗುವಂಥ ಸಮಸ್ಯೆಗಳು ಒಂದೆರಡೇ ಅಲ್ಲ. ರಕ್ತನಾಳಗಳಲ್ಲಿ ಜಮೆಯಾಗುವ ಕೊಬ್ಬು ಕ್ರಮೇಣ ಹೃದಯಕ್ಕೆ ಅಳಿಸಲಾಗದ ಬರೆಯನ್ನೇ ಹಾಕಿಬಿಡುತ್ತದೆ. ಹಾಗಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವಂಥ ಆಹಾರಗಳಿಗೆ ಆದ್ಯತೆ ನೀಡುವುದು ಜಾಣತನ. ಕಪ್ಪು ಒಣದ್ರಾಕ್ಷಿಯಲ್ಲಿರುವ ಪಾಲಿಫೆನಾಲ್‌ಗಳಲ್ಲಿ ದೇಹದಲ್ಲಿನ ಕೆಟ್ಟ ಕೊಬ್ಬು ಕಡಿಮೆ ಮಾಡುವ ಗುಣವಿದೆ. ಜೊತೆಗೆ ರಕ್ತದೊತ್ತಡವನ್ನೂ ಇದು ಕಡಿಮೆ ಮಾಡುವುದರಿಂದ, ಹೃದಯದ ಸ್ನೇಹಿತ ಎನಿಸುತ್ತದೆ ಕಪ್ಪು ದ್ರಾಕ್ಷಿ.

ಹಲ್ಲುಗಳ ಆರೋಗ್ಯ ಸುಧಾರಣೆ

ಕಪ್ಪುದ್ರಾಕ್ಷಿಯಲ್ಲಿರುವ ಫೈಟೊ ಕೆಮಿಕಲ್‌ಗಳು ಹಲ್ಲುಗಳಲ್ಲಿ ಹುಳುಕಾಗುವುದನ್ನು ತಪ್ಪಿಸುತ್ತವೆ. ಒಸಡಿನ ಆರೋಗ್ಯವನ್ನೂ ಕಾಪಾಡಿ, ಬಾಯಿಯ ದುರ್ಗಂಧವನ್ನು ನಿವಾರಣೆ ಮಾಡುತ್ತವೆ. ನೆನೆಸಿದ ಕಪ್ಪು ದ್ರಾಕ್ಷಿಗಳನ್ನು ಜಗಿದು ತಿನ್ನುವುದರಿಂದ, ಹಲ್ಲುಗಳ ಎನಾಮಲ್‌ ಹೊದಿಕೆಯನ್ನು ಕ್ಷೇಮವಾಗಿ ಇರಿಸಬಹುದು.

Woman anemia image Coriander Benefits

ರಕ್ತಹೀನತೆ ದೂರ

ದ್ರಾಕ್ಷಿಯಲ್ಲಿ ಕಬ್ಬಿಣದಂಶ ಅಧಿಕವಾಗಿದೆ. ದೇಹದಲ್ಲಿ ಅಗತ್ಯ ಹಿಮೋಗ್ಲೋಬಿನ್‌ ಮಟ್ಟವನ್ನು ಕಾಯ್ದುಕೊಂಡು, ಆಮ್ಲಜನಕದ ಪ್ರಮಾಣದ ಕಡಿಮೆಯಾಗದಂತೆ ನಿರ್ವಹಿಸಲು ಕಬ್ಬಿಣದಂಶ ಅಗತ್ಯ. ಒಂದೊಮ್ಮೆ ಇದು ಕೊರತೆಯಾದರೆ ರಕ್ತಹೀನತೆ ಕಾಡುತ್ತದೆ. ಹಾಗಾಗಿ ನಿಯಮಿತವಾಗಿ ಕಪ್ಪು ದ್ರಾಕ್ಷಿಗಳನ್ನು ಸೇವಿಸುವುದರಿಂದ ಅಗತ್ಯ ಕಬ್ಬಿಣದಂಶವನ್ನು ಪೂರೈಸಿ, ರಕ್ತಹೀನತೆಯನ್ನು ದೂರ ಮಾಡಬಹುದು.

ಕೂದಲು, ಕಣ್ಣುಗಳಿಗೆ ಒಳ್ಳೆಯದು

ಇದರಲ್ಲಿರುವ ವಿಟಮಿನ್‌ ಸಿ ಮತ್ತು ಪಾಲಿಫೆನಾಲ್‌ ಅಂಶಗಳು ದೃಷ್ಟಿಯನ್ನು ಚುರುಕಾಗಿಸುತ್ತವೆ. ಇವುಗಳ ಜೊತೆಗೆ, ಉಳಿದ ಉತ್ಕರ್ಷಣ ನಿರೋಧಕಗಳೂ ಸೇರಿ, ತಲೆಯ ಚರ್ಮದ ಆರೋಗ್ಯವನ್ನು ಸುಧಾರಿಸುತ್ತವೆ. ಇದರಿಂದ ಕೂದಲಿನ ಆರೋಗ್ಯವನ್ನೂ ಸುಧಾರಿಸಲು ಸಾಧ್ಯವಿದೆ. ಕೂದಲು ಉದುರುವುದು, ಬೆಳ್ಳಗಾಗುವುದು, ಸೀಳುಗೂದಲು ಮುಂತಾದವನ್ನು ಕಡಿಮೆ ಮಾಡಲು ಅನುಕೂಲ.

ಇದನ್ನೂ ಓದಿ: Eye Protection: ಡಿಜಿಟಲ್ ಪರದೆಗಳಿಂದ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

Continue Reading

ಆರೋಗ್ಯ

Baby’s Food: ಶಿಶು ಆಹಾರಗಳಲ್ಲಿ ಸಕ್ಕರೆ ಅಂಶ ಇರಬೇಕೆ?

ಆಹಾರದಲ್ಲಿ ನೈಸರ್ಗಿಕವಾಗಿ ಇರುವಂಥ ಸಕ್ಕರೆಯ ಹೊರತಾಗಿ ಹೆಚ್ಚುವರಿಯಾಗಿ ಸಕ್ಕರೆಯನ್ನು ಸೇರಿಸುವುದರ ಹಿಂದೆ ಹಲವು ಕಾರಣಗಳಿಗೆ. ಆದರೆ ಸಂಸ್ಕರಿಸಿದ ಸಿಹಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಾಬೀತಾಗಿದ್ದರೂ, ಎಳೆಯ ಮಕ್ಕಳ (Baby’s Food) ಆಹಾರಕ್ಕೂ ಇದನ್ನು ಸೇರಿಸುವುದೇಕೆ? ಇಲ್ಲಿದೆ ಮಾಹಿತಿ.

VISTARANEWS.COM


on

Baby's Food
Koo

ಜನಪ್ರಿಯ ಬ್ರಾಂಡ್‌ಗಳ ಶಿಶು ಆಹಾರಗಳಲ್ಲಿ (Baby’s Food) ಅತಿ ಹೆಚ್ಚಿನ ಪ್ರಮಾಣದ ಸಕ್ಕರೆ ಸೇರಿರುವ ಬಗ್ಗೆ ಇತ್ತೀಚೆಗಷ್ಟೇ ವಿಸ್ತೃತವಾಗಿ ಚರ್ಚೆಯಾಗಿತ್ತು. ಶಿಶು ಆಹಾರಗಳಲ್ಲಿ ಸಕ್ಕರೆ ಅಥವಾ ಸಿಹಿ ಸೇರಿಸುವ ಪರಿಪಾಠ ಸುಮಾರು 50 ವರ್ಷಗಳಷ್ಟು ಹಿಂದಿನದ್ದು. ಅದು ಕೇವಲ ಶಿಶು ಅಹಾರಗಳಲ್ಲಿ ಮಾತ್ರವಲ್ಲ, ಸೀರಿಯಲ್‌ಗಳು, ಫ್ಲೇವರ್‌ ಇರುವ ಪೇಯಗಳು, ಬೇಕ್‌ ಮಾಡಿದ ತಿನಿಸುಗಳಿಂದ ಹಿಡಿದು ಲೆಕ್ಕವಿಲ್ಲದಷ್ಟು ಆಹಾರಗಳಲ್ಲಿ ನಮಗರಿವಿಲ್ಲದಂತೆಯೇ ಸಕ್ಕರೆ ವಕ್ಕರಿಸಿದೆ. ಸಂಸ್ಕರಿಸಿದ ಸಿಹಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಾಬೀತಾಗಿದ್ದರೂ, ಎಳೆಯ ಮಕ್ಕಳ ಆಹಾರದಿಂದ ಹಿಡಿದು ದೊಡ್ಡವರ ತಿನಿಸುಗಳವರೆಗೆ ಇದನ್ನು ಸೇರಿಸುವುದೇಕೆ? ಮಕ್ಕಳಿಗೂ ಹೀಗೆ ಬಾಯಿ ಸಿಹಿ ಮಾಡುವ ಉದ್ದೇಶವೇನು?
ಆಹಾರದಲ್ಲಿ ನೈಸರ್ಗಿಕವಾಗಿ ಇರುವಂಥ ಸಕ್ಕರೆಯ ಹೊರತಾಗಿ ಹೆಚ್ಚುವರಿಯಾಗಿ ಸಕ್ಕರೆಯನ್ನು ಸೇರಿಸುವುದರ ಹಿಂದೆ ಹಲವು ಕಾರಣಗಳಿಗೆ. ಆ ತಿನಿಸು ಅಥವಾ ಪೇಯದ ರುಚಿ, ಬಣ್ಣ ಮತ್ತು ಮೇಲ್ಮೈಯನ್ನು ಆಕರ್ಷಕವಾಗಿ ಮಾಡುವುದು ಎಲ್ಲಕ್ಕಿಂತ ಮೊದಲ ಕಾರಣ. ಎರಡನೆಯದು, ಸಕ್ಕರೆ ಎಂಬ ಗ್ಲೂಕೋಸ್‌ ಮತ್ತು ಫ್ರಕ್ಟೋಸ್‌ಗಳ ಮಿಶ್ರಣವು ವ್ಯಸನವನ್ನು ಉಂಟುಮಾಡುವಂಥದ್ದು. ಒಮ್ಮೆ ಸಕ್ಕರೆಯ ರುಚಿ ಕಂಡುಕೊಳ್ಳುವ ಪುಟ್ಟ ಮಕ್ಕಳನ್ನು ಅದರಿಂದ ಹೊರತಾಗಿಸುವುದು ಕಷ್ಟದ ಕೆಲಸ. ಅದು ಮಕ್ಕಳಿಗೆ ಮಾತ್ರ ಸೀಮಿತವಲ್ಲ, ಸಿಹಿ ಇಷ್ಟ ಎನ್ನುವ ಎಲ್ಲರ ವಿಷಯದಲ್ಲೂ ಇದು ಸತ್ಯ. ಇದಲ್ಲದೆಯೇ ಬೇರೆ ಕಾರಣಗಳೂ ಸಕ್ಕರೆ ಸೇರಿಸುವುದಕ್ಕಿರಬಹುದು. ಉಪ್ಪಿನಂತೆಯೇ ಸಕ್ಕರೆಯನ್ನೂ ಸಂರಕ್ಷಕವಾಗಿ ಕೆಲವೊಮ್ಮೆ ಬಳಸುವುದಿದೆ.

Colorful Baby Food Purees in Glass Jars

ಮಿತಿ ಇದೆ

ಆಹಾರ ತಜ್ಞರ ಪ್ರಕಾರ, ನೈಸರ್ಗಿಕವಾಗಿ ಹಣ್ಣು, ತರಕಾರಿ, ಅಂಜೂರ, ಖರ್ಜೂರದಂಥ ಆಹಾರಗಳಲ್ಲಿ ದೊರೆಯುವ ಸಕ್ಕರೆಯ ಬಗ್ಗೆ ತೀರಾ ಗಾಬರಿ ಬೀಳಬೇಕಿಲ್ಲ. ಸ್ವಲ್ಪ ಆಚೀಚೆ ಆದರೂ ದೇಹ ಸುಧಾರಿಸಿಕೊಳ್ಳುತ್ತದೆ. ಆದರೆ ಹೆಚ್ಚುವರಿ ಸಕ್ಕರೆಯನ್ನು ಸೇವಿಸುವುದಕ್ಕೆ ಮಿತಿಯಿದೆ. 2 ವರ್ಷದ ನಂತರದ ಮಕ್ಕಳಿಗೆ, ದಿನಕ್ಕೆ ಹೆಚ್ಚೆಂದರೆ ನಾಲ್ಕು ಟೀ ಚಮಚ ಹೆಚ್ಚುವರಿಯಾಗಿ ಸಕ್ಕರೆ ನೀಡಬಹುದು. ಅದರಲ್ಲಿ ಮಕ್ಕಳು ತಿನ್ನುವ ನಿತ್ಯದ ಆಹಾರ, ಸಿಹಿ ತಿನಿಸುಗಳು, ಬಿಸ್ಕೆಟ್‌ನಂಥವು, ಹಾಲಿಗೆ ಬೆರೆಸುವ ಪುಡಿಗಳು ಎಲ್ಲವೂ ಸೇರಿವೆ. ಅದಕ್ಕಿಂತ ಪುಟ್ಟ ಮಕ್ಕಳಿಗೆ ಹೆಚ್ಚುವರಿ ಸಕ್ಕರೆಯನ್ನು ನೀಡುವುದೇ ಬೇಡ ಎನ್ನುತ್ತಾರೆ ಆಹಾರ ತಜ್ಞರು. ಹಾಗಿರುವಾಗ ಶಿಶುಪೋಷಣೆಯ ಆಹಾರಗಳಲ್ಲೇ ಸಕ್ಕರೆ ಸೇರಿಸಬಹುದೇ?

ವ್ಯತ್ಯಾಸವಿದೆ

ಮಾರುಕಟ್ಟೆಯಲ್ಲಿ ದೊರೆಯುವ ಬೇಬಿ ಸೀರಿಯಲ್‌ಗಳಲ್ಲಿನ ಸಕ್ಕರೆಯ ಅಂಶದಲ್ಲಿ ವ್ಯತ್ಯಾಸವಿದೆ. ಒಂದೇ ಬ್ರಾಂಡ್‌ನ ಭಿನ್ನ ವೇರಿಯೆಂಟ್‌ಗಳಲ್ಲಿ ಮಾತ್ರವಲ್ಲ, ಅದೇ ಹೆಸರಿನ ಸೀರಿಯಲ್‌ಗಳು ಬೇರೆ ಬೇರೆ ದೇಶಗಳಲ್ಲಿ ಮಾರಾಟ ಆಗುವಾಗಲೂ ಸಿಹಿ ಪ್ರಮಾಣ ವ್ಯತ್ಯಾಸವಾಗುತ್ತದೆ. ಅಂದರೆ ಬಡ ಮತ್ತು ಅಭಿವೃದ್ಧಶೀಲ ದೇಶಗಳ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸೀರಿಯಲ್‌ಗಳಲ್ಲಿ ಸಾಮಾನ್ಯವಾಗಿ ಸಿಹಿ ಹೆಚ್ಚಿರುತ್ತದೆ. ಇದರಿಂದ ಮಕ್ಕಳು ಅವುಗಳನ್ನೇ ಹೆಚ್ಚು ಬಯಸಿ, ಕಂಪೆನಿಗಳ ಮಾರಾಟವೂ ಹೆಚ್ಚಲೆಂಬ ಸರಳ ಹುನ್ನಾರವಷ್ಟೇ ಇವುಗಳ ಹಿಂದಿದೆ. ಹಾಗಾಗಿಯೇ ಇಂಥ ಸಕ್ಕರೆಭರಿತ ಪೇಯಗಳನ್ನು ʻಹೆಲ್ತ್‌ ಡ್ರಿಂಕ್‌ʼಗಳ ಪಟ್ಟಿಯಿಂದ ತೆಗೆಯುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಇತ್ತೀಚೆಗೆ ಆದೇಶಿಸಿದ್ದು.

ಏನು ಸಮಸ್ಯೆ?

ಮಕ್ಕಳಿಗೆ ಆಹಾರ ತಿನ್ನಿಸುವುದಕ್ಕೆ ಬಹಳಷ್ಟು ಹೆತ್ತವರು ಸರ್ಕಸ್‌ ಮಾಡಬೇಕು. ಹಾಗಿರುವಾಗ ಸಿಹಿಭರಿತ ಸೀರಿಯಲ್‌ಗಳನ್ನು ಅವು ರಗಳೆಯಿಲ್ಲದೆ ತಿನ್ನುತ್ತವೆ ಎಂದಾದರೆ, ಯಾಕೆ ಬೇಡ? ಆಹಾರ ಮತ್ತು ಆರೋಗ್ಯ ತಜ್ಞರ ಪ್ರಕಾರ, ಎಳೆಯ ವಯಸ್ಸಿನಲ್ಲಿ ಸಿಹಿ ತಿನ್ನಿಸುವುದರಿಂದ ಆಗುವ ತೊಂದರೆಗಳು ಬಹಳಷ್ಟು. ಮೊದಲಿಗೆ, ಹಾಲು ಹಲ್ಲುಗಳು ಮೊಳೆಯುತ್ತಲೇ ಹುಳುಕಾಗುತ್ತವೆ. ಪುಟಾಣಿಗಳು ಹಲ್ಲುನೋವಿನ ಪ್ರಕೋಪವನ್ನು ಮೂರ್ನಾಲ್ಕು ವರ್ಷಗಳ ಪ್ರಾಯದಲ್ಲೇ ಎದುರಿಸಬೇಕಾಗುತ್ತದೆ. ಇದಕ್ಕಿಂತ ಚಿಂತೆಯ ವಿಷಯವೆಂದರೆ ಮಕ್ಕಳಲ್ಲಿ ಪೇರಿಸಿಕೊಳ್ಳುವ ಬೊಜ್ಜು.

ರುಚಿಯೆಂದರೆ…!

ಇಷ್ಟಕ್ಕೇ ಮುಗಿಯುವುದಿಲ್ಲ. ಷಡ್ರಸೋಪೇತ ಆಹಾರ ಎನ್ನುವ ಕಲ್ಪನೆ ಈಗಲೇ ಮಕ್ಕಳ ಮನಕ್ಕೆ ನಿಲುಕುತ್ತಿಲ್ಲ. ಕಹಿ, ಒಗರು ಮುಂತಾದ ರುಚಿಗಳನ್ನೆಲ್ಲ ಬದಿಗೊತ್ತಿದ್ದಾಗಿದೆ. ಇದನ್ನೂ ಮೀರಿ, ರುಚಿಯೆಂದರೆ ಸಿಹಿ ಮಾತ್ರ ಎನ್ನುವಂತಾಗುತ್ತದೆ. ಜೀವನದುದ್ದಕ್ಕೂ ಇದನ್ನೇ ರೂಢಿಸಿಕೊಂಡರೆ ಮಧುಮೇಹ, ಹೃದ್ರೋಗಗಳೆಲ್ಲ ಮುತ್ತಿಕೊಳ್ಳುವುದಕ್ಕೆ ದೀರ್ಘ ಸಮಯ ಬೇಡ. ಇದೇ ಪರಿಪಾಠ ಉಪ್ಪಿಗೂ ಅನ್ವಯಿಸುತ್ತದೆ. ಹೆಚ್ಚು ಸೋಡಿಯಂ ಇರುವಂಥ ಪ್ಯಾಕೆಟ್‌ ತಿನಿಸುಗಳು ಮತ್ತು ಸಂಸ್ಕರಿತ ಆಹಾರಗಳು ಆರೋಗ್ಯವನ್ನು ಬುಡಮೇಲು ಮಾಡುತ್ತವೆ.

baby boy eating food by himself

ಪರ್ಯಾಯ ಉಂಟೇ?

ಯಾಕಿಲ್ಲ! ಮಾರುಕಟ್ಟೆಯಲ್ಲಿ ದೊರೆಯುವ ಸೀರಿಯಲ್‌ಗಳನ್ನೇ ತಿಂದು ಮಕ್ಕಳು ಬದುಕಬೇಕಿಲ್ಲ, ಬೆಳೆಯಬೇಕಿಲ್ಲ. ಮನೆಯಲ್ಲೇ ಮಾಡುವ ಆರೋಗ್ಯಕರ ಗಂಜಿಗಳು, ಅಂಬಲಿಗಳು ಯಾವತ್ತಿಗೂ ಶ್ರೇಷ್ಠ. ಇದಕ್ಕೆಲ್ಲ ಸಮಯವಿಲ್ಲ ಎಂದಿದ್ದರೆ, ಹಲವು ರೀತಿಯ ಮೊಳಕೆ ಕಟ್ಟಿದ ಪುಡಿಗಳನ್ನು ಮಾಡಿರಿಸಿಕೊಳ್ಳುವುದು ಲಾಗಾಯ್ತಿನಿಂದಲೂ ಬಂದ ಕ್ರಮ. ಇದಕ್ಕೆ ಹೆಚ್ಚುವರಿ ಸಿಹಿಯ ಬದಲಿಗೆ ಹಣ್ಣಿನ ರಸಗಳು, ಋತುವಿನ ತರಕಾರಿಗಳು, ಖರ್ಜೂರ ಅಥವಾ ಅಂಜೂರದ ಪೇಸ್ಟ್‌ ಇತ್ಯಾದಿಗಳನ್ನು ಸೇರಿಸಿ ರುಚಿ ಹೆಚ್ಚಿಸಬಹುದು.

ಇದನ್ನೂ ಓದಿ: Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್‌ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ

Continue Reading

ಆರೋಗ್ಯ

Health Tips: ಒಂದೇ ಕಡೆ ಕೂತಿರುತ್ತೀರಾ? ಸಮಸ್ಯೆಗಳು ಒಂದೆರಡಲ್ಲ!

ಜಡ ಜೀವನವೆಂದರೆ (Health Tips) ಎಚ್ಚರವಿದ್ದಾಗ ಒಂದೆಡೆ ಕೂರುವ ಅಥವಾ ಮಲಗುವ ಮೂಲಕ ಅತಿ ಕಡಿಮೆ ಶಕ್ತಿಯನ್ನು ವ್ಯಯಿಸುವುದು- ಟಿವಿ ನೋಡುವುದರಿಂದ ಹಿಡಿದು, ಮೊಬೈಲು ಇಲ್ಲವೇ ಕಂಪ್ಯೂಟರ್‌ ಹಿಡಿದು ಕೂರುವುದು ಅಥವಾ ಬಿದ್ದುಕೊಂಡು ಓದುವವರೆಗೆ ಯಾವುದೇ ಕೆಲಸಗಳು ಇದರಲ್ಲಿ ಬರಬಹುದು. ಇದರಿಂದ ದೇಹದಲ್ಲಿ ರಕ್ತಸಂಚಾರ ಕಡಿಮೆಯಾಗಿ, ಸ್ನಾಯುಗಳಲ್ಲಿ ಸಂಚಲನ ಕುಂಠಿತವಾಗಿ, ಚಯಾಪಚಯ ಏರುಪೇರಾಗಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಇದನ್ನು ಸರಿಪಡಿಸಲು ಕಠಿಣವಾದ ವ್ಯಾಯಾಮದಿಂದಲೂ ಕಷ್ಟಸಾಧ್ಯ ಎನ್ನುತ್ತಾರೆ ಅಧ್ಯಯನಕಾರರು.

VISTARANEWS.COM


on

Health Tips
Koo

ದೀರ್ಘಕಾಲ ಒಂದೇ ಕಡೆ ಕೂತು ಕೆಲಸ ಮಾಡುವವರೇ ನೀವು? (Health Tips) ಹಾಗಾದರೆ ನೀವಿದನ್ನು ಓದಲೇಬೇಕು. ಕಾರಣ ಯಾವುದೇ ಇರಲಿ, ಒಂದೆಡೆ ದೀರ್ಘ ಕಾಲ ಕೂತಿರುತ್ತೀರಿ ಎಂದಾದರೆ ಸಾವಿಗೆ ಬೇಗ ಹತ್ತಿರವಾಗುತ್ತೀರಿ ಎನ್ನುತ್ತಾರೆ ಹೃದಯ ತಜ್ಞರು. ಜಡ ಜೀವನದಿಂದ ಸಾವು ಬೇಗನೇ ಆಕ್ರಮಿಸುವ ಸಾಧ್ಯತೆ ಶೇ. ೩೦ರಷ್ಟು ಹೆಚ್ಚುತ್ತದೆ ಎನ್ನುವುದು ಅಧ್ಯಯನಗಳು ಕಂಡುಕೊಂಡ ಸತ್ಯ. ಏನು ಹೀಗೆಂದರೆ? ಅದು ಹೇಗೆ ಸಾಧ್ಯ?
ಜಡ ಜೀವನವೆಂದರೆ ಎಚ್ಚರವಿದ್ದಾಗ ಒಂದೆಡೆ ಕೂರುವ ಅಥವಾ ಮಲಗುವ ಮೂಲಕ ಅತಿ ಕಡಿಮೆ ಶಕ್ತಿಯನ್ನು ವ್ಯಯಿಸುವುದು- ಟಿವಿ ನೋಡುವುದರಿಂದ ಹಿಡಿದು, ಮೊಬೈಲು ಇಲ್ಲವೇ ಕಂಪ್ಯೂಟರ್‌ ಹಿಡಿದು ಕೂರುವುದು ಅಥವಾ ಬಿದ್ದುಕೊಂಡು ಓದುವವರೆಗೆ ಯಾವುದೇ ಕೆಲಸಗಳು ಇದರಲ್ಲಿ ಬರಬಹುದು. ಇದರಿಂದ ದೇಹದಲ್ಲಿ ರಕ್ತಸಂಚಾರ ಕಡಿಮೆಯಾಗಿ, ಸ್ನಾಯುಗಳಲ್ಲಿ ಸಂಚಲನ ಕುಂಠಿತವಾಗಿ, ಚಯಾಪಚಯ ಏರುಪೇರಾಗಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಇದನ್ನು ಸರಿಪಡಿಸಲು ಕಠಿಣವಾದ ವ್ಯಾಯಾಮದಿಂದಲೂ ಕಷ್ಟಸಾಧ್ಯ ಎನ್ನುತ್ತಾರೆ ಅಧ್ಯಯನಕಾರರು. ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ದೀರ್ಘಕಾಲ ಒಂದೇ ಕಡೆ ಕೂತಿರುವುದರಿಂದ?

Belly Fat Reduction

ಕಿಣ್ವಗಳ ಕ್ಷಮತೆ ಕಡಿಮೆಯಾಗುತ್ತದೆ

ಬೊಜ್ಜು, ಮಧುಮೇಹ, ಬಿಪಿ: ಬಹಳ ಹೊತ್ತಿನವರೆಗೆ ಜಡವಾಗಿ ಕೂತಿರುವುದರಿಂದ, ನಮ್ಮ ದೇಹದಲ್ಲಿ ಕೊಬ್ಬಿನಾಂಶಗಳನ್ನು ವಿಘಟಿಸುವ ಲಿಪೊಪ್ರೊಟೀನ್‌ ಲಿಪೇಸ್‌ ಎಂಬ ಕಿಣ್ವಗಳ ಕ್ಷಮತೆ ಕಡಿಮೆಯಾಗುತ್ತದೆ. ಈ ಕಿಣ್ವಗಳ ಚಟುವಟಿಕೆ ಕಡಿಮೆಯಾದರೆ ಟ್ರೈಗ್ಲಿಸರೈಡ್‌ ಮಟ್ಟ ಏರಿ, ಬೊಜ್ಜು ಹೆಚ್ಚುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಏರಿಕೆಯಾಗಿ ಕ್ರಮೇಣ ಮಧುಮೇಹಕ್ಕೆ ಆಹ್ವಾನ ನೀಡುತ್ತದೆ. ಬದಲಿಗೆ, ಪ್ರತಿ 30-60 ನಿಮಿಷಗಳಿಗೆ ಒಮ್ಮೆ ಎದ್ದು ನಾಲ್ಕಾರು ನಿಮಿಷಗಳ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಈ ಕಿಣ್ವಗಳ ಮಟ್ಟ ಕುಸಿಯದಂತೆ ನೋಡಿಕೊಳ್ಳಬಹುದು.

Muscle weakness

ಸ್ನಾಯುಗಳ ಬಲಹೀನತೆ

ಮಾಂಸಖಂಡಗಳ ತತ್ವ ಒಂದೇ- ಬಳಸಿ ಇಲ್ಲವೇ ಕಳೆದುಕೊಳ್ಳಿ (ಯೂಸ್ ಇಟ್‌ ಆರ್‌ ಲೂಸ್‌ ಇಟ್‌) ಸ್ನಾಯುಗಳನ್ನು ಬಳಸದೆ, ಅವುಗಳಲ್ಲಿ ಸಂಕೋಚ-ವಿಕಾಸಗಳಿಲ್ಲದೆ ಜಡವಾಗಿದ್ದರೆ ಅವು ಕ್ರಮೇಣ ಬಲಹೀನಗೊಳ್ಳುತ್ತವೆ. ಸ್ನಾಯುಗಳಲ್ಲಿ ಹುದುಗಿರುವ ಪ್ರೊಟೀನ್‌ಗಳು ನಶಿಸಿ, ಉಬ್ಬಿರುವ ಮಾಂಸಪೇಶಿಗಳ ಬದಲಿಗೆ ಕೊಬ್ಬಿರುವ ಭಾಗಗಳು ಕಾಣತೊಡಗುತ್ತವೆ. ಆಗಾಗ ಸ್ನಾಯುಗಳಲ್ಲಿ ಸಂಚಲನವಿದ್ದರೆ, ಅವುಗಳು ದುರ್ಬಲವಾಗದಂತೆ ತಡೆಯಬಹುದು. ಹಾಗಾಗಿ ಆಗಾಗ ಎದ್ದು ಓಡಾಡಿ.

Improved Blood Circulation Health Benefits Of Hot Water Bath

ರಕ್ತಸಂಚಾರ ಕುಂಠಿತ

ಒಂದೇ ಕಡೆ ಕೂತಿದ್ದರೆ ರಕ್ತನಾಳಗಳಿಗೂ ತೊಂದರೆ. ನಾಳಗಳು ಬಿಗಿದಂತಾಗಿ ರಕ್ತಸಂಚಾರಕ್ಕೆ ತೊಡಕಾಗುತ್ತದೆ. ಪರಿಣಾಮವೆಂದರೆ ಉಬ್ಬಿದ ವೆರಿಕೋಸ್‌ ವೇನ್‌, ರಕ್ತ ಹೆಪ್ಪುಗಟ್ಟುವುದು, ರಕ್ತದೊತ್ತಡ ಏರುವುದು- ಇಂಥವು ಗಂಟುಬೀಳಬಹುದು. ಹಾಗಾಗಿ ಚಟುವಟಿಕೆಯನ್ನು ಆಗಾಗ ಇರಿಸಿಕೊಳ್ಳುವುದು, ಚುಟುಕು ವ್ಯಾಯಾಮಗಳು, ನೀರು ಕುಡಿಯಲೋ ಅಥವಾ ಬಾತ್‌ರೂಮಿಗಾಗಿಯೋ ಎದ್ದು ಓಡಾಡುವುದು ಹಲವು ರೀತಿಯಲ್ಲಿ ಉಪಯುಕ್ತ.

ಬೆನ್ನು, ಕುತ್ತಿಗೆ ನೋವು

ಸದಾ ಕಾಲ ಕೂತೇ ಇರುವುದರಿಂದ ಬೆನ್ನುಹುರಿ, ಕುತ್ತಿಗೆಯ ಸ್ನಾಯುಗಳು, ಸೊಂಟದ ಡಿಸ್ಕ್‌ ಮೇಲೆ ಅತಿ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರಿಂದ ಬೆನ್ನಿನ ಕೆಳಭಾಗದಲ್ಲಿ ನೋವು, ಕುತ್ತಿಗೆ, ಭುಜ, ನಡು ಬೆನ್ನಲ್ಲೂ ತೀವ್ರ ನೋವು ಕಾಣಬಹುದು. ಜೊತೆಗೆ, ಕೆಲವೇ ಸ್ನಾಯುಗಳನ್ನು ವಿಪರೀತ ಉಪಯೋಗಿಸುವುದರಿಂದ, ಅಡ್ಡ ಪರಿಣಾಮಗಳು ಅಲ್ಲೂ ಕಾಣುತ್ತವೆ.

Cardiac Arrest

ಹೃದ್ರೋಗಗಳ ಭೀತಿ ಹೆಚ್ಚಳ

ಹೆಚ್ಚಿನ ಸಮಸ್ಯೆ ಇರುವುದು ಇಲ್ಲಿ. ಮೇಲ್ನೋಟಕ್ಕೆ ಬೊಜ್ಜಿಲ್ಲದಂತೆ ಕಾಣುವವರಲ್ಲೂ ಹೃದಯ ತೊಂದರೆ ಕೊಡುತ್ತಿದೆ. ಜಡಜೀವನದಿಂದ ಹೃದಯದ ತೊಂದರೆಗಳು ಶೇ.147ರಷ್ಟು ಹೆಚ್ಚುತ್ತವೆ ಎಂಬುದು ಅ‍ಧ್ಯಯನಗಳ ಮಾತು. ಇದರ ಬದಲಿಗೆ, ಆಗಾಗ ಚಲನೆಯಲ್ಲಿರುವುದು ಮತ್ತು ವಾರಕ್ಕೆ 150 ನಿಮಿಷಗಳ ಮಧ್ಯಮಗತಿಯ ವ್ಯಾಯಾಮದಿಂದ ಹೃದಯವನ್ನು ಆರೋಗ್ಯವಾಗಿ ಇರಿಸಬಹುದು.

Bone Health In Winter

ದುರ್ಬಲ ಮೂಳೆಗಳು

ಸ್ನಾಯುಗಳ ದೌರ್ಬಲ್ಯವು ಕ್ರಮೇಣ ಮೂಳೆಗಳನ್ನೂ ದುರ್ಬಲಗೊಳಿಸುತ್ತದೆ. ಇದರಿಂದ ಆಸ್ಟಿಯೊಪೊರೊಸಿಸ್‌ನಂಥ ತೊಂದರೆಗಳು ಅಮರಿಕೊಳ್ಳಬಹುದು. ಹಾಗಾಗಿ ಅಲ್ಪ ಪ್ರಮಾಣದ ತೂಕ ಎತ್ತುವುದು, ಪ್ರತಿರೋಧಕತೆಯ ತರಬೇತಿ, ಕಾರ್ಡಿಯೊ ಮಾದರಿಯ ವ್ಯಾಯಾಮಗಳು ಮೂಳೆಗಳ ಆರೋಗ್ಯಕ್ಕೆ ಒಳಿತನ್ನು ಮಾಡುತ್ತವೆ.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

Continue Reading

ದೇಶ

Everest Spices: ಸಿಂಗಾಪುರ ಬಳಿಕ ಹಾಂಕಾಂಗ್‌ನಲ್ಲೂ ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ ಬ್ಯಾನ್!

Everest Spices: ಮಸಾಲಾ ಉತ್ಪನ್ನಗಳಿಗಾಗಿ ಜಾಗತಿಕವಾಗಿ ಹೆಸರು ಗಳಿಸಿರುವ ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ ಕಂಪನಿಗಳು ಈಗ ನಕಾರಾತ್ಮಕವಾಗಿ ಸುದ್ದಿಯಾಗುತ್ತಿವೆ. ಸಿಂಗಾಪುರ ಬಳಿಕ ಹಾಂಕಾಂಗ್‌ಲ್ಲೂ ಎವರೆಸ್ಟ್‌ ಹಾಗೂ ಎಂಡಿಎಚ್‌ ಕಂಪನಿಯ ನಾಲ್ಕು ಮಸಾಲಾ ಪದಾರ್ಥಗಳ ಮಾರಾಟ ನಿಷೇಧಿಸಿದ್ದು, ಕಂಪನಿಗಳು ಈಗ ಸಂಕಷ್ಟಕ್ಕೆ ಸಿಲುಕಿವೆ.

VISTARANEWS.COM


on

Everest Spices
Koo

ಸಿಟಿ ಆಫ್‌ ವಿಕ್ಟೋರಿಯಾ: ಸಿಂಗಾಪುರದಲ್ಲಿ ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ (Spices) ತಯಾರಕ ಎವರೆಸ್ಟ್‌ನ (Everest Spices) ಫಿಶ್ ಕರಿ ಮಸಾಲಾ (Fish Curry Masala) ಮಾರಾಟ ನಿಷೇಧಗೊಳಿಸಿದ ಬೆನ್ನಲ್ಲೇ, ಹಾಂಕಾಂಗ್‌ನಲ್ಲೂ (Hong Kong) ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ. ಹಾಗಾಗಿ, ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ. ಇದರ ಪರಿಣಾಮ ಭಾರತದ ಉತ್ಪನ್ನಗಳ ಮೇಲೂ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.

ಭಾರತ ಸೇರಿ ಜಗತ್ತಿನೆಲ್ಲೆಡೆ ಖ್ಯಾತಿ ಗಳಿಸಿರುವ ಎಂಡಿಎಚ್‌ನ ಮೂರು ಮಸಾಲಾ ಪದಾರ್ಥಗಳು ಹಾಗೂ ಎವರೆಸ್ಟ್‌ನ ಒಂದು ಮಸಾಲಾ ಪದಾರ್ಥದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್‌ ರಾಸಾಯನಿಕ ಇರುವ ಕಾರಣ ಹಾಂಕಾಂಗ್‌ ಆಹಾರ ನಿಯಂತ್ರಣ ಪ್ರಾಧಿಕಾರವು ನಾಲ್ಕೂ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ. ಎಂಡಿಎಚ್‌ನ ಕರಿ ಪೌಡರ್‌, ಮಿಕ್ಸ್ಡ್‌ ಮಸಾಲಾ ಪೌಡರ್‌ ಹಾಗೂ ಸಾಂಬಾರ್‌ ಮಸಾಲಾ ಮತ್ತು ಎವರೆಸ್ಟ್‌ನ ಫಿಶ್‌ ಕರಿ ಮಸಾಲಾವನ್ನು ನಿಷೇಧಿಸಲಾಗಿದೆ.

“ಎಂಡಿಎಚ್‌ನ ಮೂರು ಹಾಗೂ ಎವರೆಸ್ಟ್‌ನ ಒಂದು ಉತ್ಪನ್ನದ ಸ್ಯಾಂಪಲ್‌ ಪಡೆದು ಪರಿಶೀಲನೆ ನಡೆಸಲಾಗಿದೆ. ಇವುಗಳಲ್ಲಿ ಪೆಸ್ಟಿಸೈಡ್‌ ಎಥಿಲೀನ್‌ ಆಕ್ಸೈಡ್‌ ಪತ್ತೆಯಾಗಿದೆ. ಈ ಆಕ್ಸೈಡ್‌ ಮನುಷ್ಯನು ಸೇವಿಸಲು ಅಪಾಯಕಾರಿಯಾಗಿದೆ. ಕ್ಯಾನ್ಸರ್‌ ಕಾರಕ ಕಾರ್ಸಿನೋಜೆನಿಕ್‌ ರಾಸಾಯನಿಕವೂ ಪತ್ತೆಯಾಗಿದೆ. ಹಾಗಾಗಿ, ದೇಶದ ಮಾರಾಟಗಾರರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡದಂತೆ, ಮಳಿಗೆಗಳಲ್ಲಿ ಇರಿಸದಂತೆ ಸೂಚಿಸಲಾಗಿದೆ” ಎಂಬುದಾಗಿ ಹಾಂಕಾಂಗ್‌ನ ಸೆಂಟರ್‌ ಫಾರ್‌ ಫುಡ್‌ ಸೇಫ್ಟಿ ತಿಳಿಸಿದೆ. ಇವುಗಳನ್ನು ನಿಷೇಧಿಸಿ ಏಪ್ರಿಲ್‌ 5ರಂದೇ ಆದೇಶ ಹೊರಡಿಸಿದೆ.

ಕ್ಯಾನ್ಸರ್‌ ಕುರಿತು ಸಂಶೋಧನೆ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆಯೇ ಎಥಿಲೀನ್‌ ಆಕ್ಸೈಡ್‌ನ ಅಪಾಯದ ಕುರಿತು ವರದಿ ನೀಡಿದೆ. ಇದು ಕ್ಯಾನ್ಸರ್‌ ಕಾರಕ ಎಂಬುದಾಗಿ ಜಾಗತಿಕ ಸಂಸ್ಥೆ ತಿಳಿಸಿದೆ. ಹಾಗಾಗಿ, ನಾಲ್ಕೂ ಉತ್ಪನ್ನಗಳ ಸಂಗ್ರಹ, ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಹಾಂಕಾಗ್‌ ತಿಳಿಸಿದೆ. ಅನುಮತಿ ನೀಡಿದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿ ಇಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಸಿಂಗಾಪುರ ಕೂಡ ಎವರೆಸ್ಟ್‌ ಫಿಶ್‌ ಕರಿ ಮಸಾಲಾ ನಿಷೇಧಿಸುವಾಗ ತಿಳಿಸಿತ್ತು.

ಇದನ್ನೂ ಓದಿ: Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

Continue Reading
Advertisement
Lok Sabha Election 2024 BJP released Pick pocket Congress poster
Lok Sabha Election 20241 min ago

LoK Sabha Election 2024: ಚೊಂಬು ಆರೋಪಕ್ಕೆ ಚಿಪ್ಪು ಕೊಟ್ಟ ಬಿಜೆಪಿ! ಪಿಕ್‌ ಪಾಕೆಟ್‌ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆ!

Match Fixing
ಕ್ರೀಡೆ3 mins ago

Match Fixing : ಇರ್ಫಾನ್​ ಪಠಾಣ್​, ಸುರೇಶ್ ರೈನಾ ಪಾಲ್ಗೊಂಡಿದ್ದ ​ ಕ್ರಿಕೆಟ್ ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್?

Ballari lok sabha constituency congress candidate e Tukaram election campaign in Ballari city
ಬಳ್ಳಾರಿ6 mins ago

Lok Sabha Election 2024: ಪಂಚ ಗ್ಯಾರಂಟಿ ಜಾರಿ ಮಾಡಿ ನುಡಿದಂತೆ ನಡೆದಿದ್ದು ಕಾಂಗ್ರೆಸ್ ಸರ್ಕಾರ: ಈ.ತುಕಾರಾಂ

Murugha Seer
ಕರ್ನಾಟಕ8 mins ago

Murugha Seer: ಪೋಕ್ಸೊ ಕೇಸ್‌ನಲ್ಲಿ ಮುರುಘಾ ಶ್ರೀಗೆ ಮತ್ತೆ ಸಂಕಷ್ಟ; 4 ತಿಂಗಳು ಜೈಲಿಗೆ

T20 World Cup 2024
ಕ್ರಿಕೆಟ್18 mins ago

T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟಿಸಲು ಮುಹೂರ್ತ ಫಿಕ್ಸ್‌​; ಈ ದಿನ ಘೋಷಣೆ

BrahMos Missiles
ಪ್ರಮುಖ ಸುದ್ದಿ26 mins ago

BrahMos Missiles: ಫಿಲಿಪ್ಪೀನ್ಸ್‌ಗೆ ನಾಲ್ಕನೇ ಬ್ರಹ್ಮೋಸ್‌ ಕ್ಷಿಪಣಿ ಬ್ಯಾಟರಿ ಕಳುಹಿಸಲು ಭಾರತ ಸಜ್ಜು

Reliance Jio
ವಾಣಿಜ್ಯ30 mins ago

Reliance Jio: ಡಾಟಾ ಟ್ರಾಫಿಕ್‌; ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರ ಹೊಮ್ಮಿದ ರಿಲಯನ್ಸ್ ಜಿಯೊ

CM Siddaramaiah Congress protests against Centre Go back to Modi and Amit Shah announced
ಕರ್ನಾಟಕ46 mins ago

CM Siddaramaiah: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ಮೋದಿ, ಅಮಿತ್ ಶಾಗೆ ಗೋ ಬ್ಯಾಕ್‌ ಘೋಷಣೆ

Mahesh Babu
ಕ್ರಿಕೆಟ್1 hour ago

IPL 2024: ಸನ್​ರೈಸರ್ಸ್​ ತಂಡದ ಆಟಗಾರರನ್ನು ಭೇಟಿ ಮಾಡಿದ ನಟ ಮಹೇಶ್‌ ಬಾಬು

arvind kejriwal in tihar jail
ದೇಶ1 hour ago

Arvind Kejriwal: ಕೇಜ್ರಿವಾಲ್‌, ಕವಿತಾ ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು23 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ24 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌