Sleep secret | ಇಷ್ಟಿದ್ದರೆ ದೇಹಕ್ಕೊಂದು ನೆಮ್ಮದಿಯ ಗುಡ್‌ ನೈಟ್‌! - Vistara News

ಆರೋಗ್ಯ

Sleep secret | ಇಷ್ಟಿದ್ದರೆ ದೇಹಕ್ಕೊಂದು ನೆಮ್ಮದಿಯ ಗುಡ್‌ ನೈಟ್‌!

ಒಳ್ಳೆಯ ಆರೋಗ್ಯಕ್ಕೆ ಉತ್ತಮ ನಿದ್ರೆ ಅಗತ್ಯ. ಚೆನ್ನಾಗಿ ನಿದ್ರೆ ಬರಬೇಕಿದ್ದರೆ ಕೆಲವೊಂದು ಉತ್ತಮ ಜೀವನಶೈಲಿಗಳನ್ನು ನೀವು ರೂಢಿಸಿಕೊಳ್ಳಲೇಬೇಕು.

VISTARANEWS.COM


on

sleep better
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻನಿದ್ದೆಯನ್ನು ಗೆದ್ದವನು ಲೋಕದಲ್ಲಿ ಇದ್ದಾನೋʼ ಎಂಬುದು ನಿದ್ದೆಯನ್ನು ಗೆಲ್ಲುವುದು ಅಸಾಧ್ಯ ಎಂಬ ಧೋರಣೆಯ ಮಾತು. ಆದಾಗ್ಯೂ ದ್ವಾಪರದಲ್ಲಿ ಅರ್ಜುನನಿಗೆ ನಿದ್ದೆಯನ್ನು ಗೆದ್ದವನೆಂಬ ಹಿರಿಮೆಯಿತ್ತು. ಈಗಿನ ದಿನಗಳಲ್ಲಿ ನಿದ್ದೆಯನ್ನು ಗೆದ್ದವರಿಲ್ಲದಿದ್ದರೂ, ನಿದ್ದೆ ಬಾರದೆ ರಾತ್ರಿ ಕಳೆಯುವವರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಿದೆ. ಇದರ ಬೆನ್ನಿಗೇ, ನಿದ್ರಾಹೀನತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೂ ಏರಿವೆ. ಉದ್ಯೋಗ, ದಿನದ ಕೆಲಸ, ಸಾಮಾಜಿಕ ಮಾಧ್ಯಮಗಳು, ಮನರಂಜನೆ ಇತ್ಯಾದಿಗಳೆಲ್ಲಾ ಮುಗಿದೂ ಸಮಯ ಉಳಿದರೆ ನಿದ್ದೆ ಎಂಬಂಥ ಇತ್ತೀಚಿನ ಮನಸ್ಥಿತಿಯ ಫಲವಿದು.

ನಿದ್ದೆ ಯಾಕೆ ಬೇಕು ಎಂದರೆ ಮೇಲ್ನೋಟಕ್ಕೆ ಕಾಣುವ ಕಾರಣಗಳು ಹೀಗಿವೆ- ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡುವುದಕ್ಕೆ, ಶಕ್ತಿ ಸಂಚಯನಕ್ಕೆ, ಅಂಗಾಂಶಗಳಲ್ಲಿ ತೊಂದರೆಯಿದ್ದರೆ ಸರಿಪಡಿಸಿಕೊಳ್ಳುವುದಕ್ಕೆ, ಮೆದುಳಿನ ಕಾರ್ಯ ಕ್ಷಮತೆಗೆ. ನಿದ್ದೆ ಇಲ್ಲದಿದ್ದರೆ ಆಗುವುದೇನು ಎಂಬ ಮಾಹಿತಿಯನ್ನೂ ಚುಟುಕಾಗಿ ಹೇಳುವುದಾದರೆ- ಸ್ಪಷ್ಟ ಯೋಚಿಸುವ ಸಾಮರ್ಥ್ಯ ಕಡಿತ, ಗಮನ ಕೇಂದ್ರೀಕರಿಸಲು ಕಷ್ಟ, ಪ್ರತಿಕ್ರಿಯೆ ಕುಂಠಿತ ಮತ್ತು ಭಾವನೆಗಳನ್ನು ಹಿಡಿತದಲ್ಲಿಡಲು ತೊಡಕಾಗುತ್ತದೆ. ಇವಲ್ಲದೆ, ಮಧುಮೇಹ, ಹೃದ್ರೋಗ, ತೂಕ ಹೆಚ್ಚಳ, ರೋಗನಿರೋಧಕ ಶಕ್ತಿ ಕುಂಠಿತ, ಲೈಂಗಿಕ ನಿರಾಸಕ್ತಿ, ಖಿನ್ನತೆಯಂಥ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ನಿದ್ರಾಹೀನತೆ ಕಾರಣವಾಗುತ್ತದೆ.

ಎಷ್ಟೊತ್ತು ನಿದ್ರಿಸಬೇಕು? ಈ ಪ್ರಶ್ನೆಗೆ ತಜ್ಞರಲ್ಲಿ ಸ್ಪಷ್ಟ ಉತ್ತರವಿದೆ. ಈ ಕೆಳಗಿನ ಕೋಷ್ಟಕವನ್ನು ಗಮನಿಸಿ.

ವರ್ಷ
ಅಗತ್ಯ ಪ್ರಮಾಣದ ನಿದ್ದೆ
65 ವರ್ಷ ಮತ್ತು ಮೇಲ್ಪಟ್ಟವರು
7ರಿಂದ 8 ತಾಸು
18ರಿಂದ 64ರ ಪ್ರಾಯ
7ರಿಂದ 9 ತಾಸು
14ರಿಂದ 17ರ ಪ್ರಾಯ
8ರಿಂದ 10 ತಾಸು
6ರಿಂದ 13ರ ಪ್ರಾಯ
9ರಿಂದ 11 ತಾಸು
3ರಿಂದ 5ರ ಪ್ರಾಯ
10ರಿಂದ 13 ತಾಸು
1ರಿಂದ 2 ವರ್ಷ
11ರಿಂದ 14 ತಾಸು
4ರಿಂದ 11 ತಿಂಗಳು
12ರಿಂದ 15 ತಾಸು
ಹುಟ್ಟಿದ ಮೊದಲ ಮೂರು ತಿಂಗಳು
14ರಿಂದ 17 ತಾಸು

ಕೆಲವೊಮ್ಮೆ ನಿದ್ದೆಯ ಪ್ರಮಾಣ, ರೀತಿಗಳಲ್ಲಿ ತಾತ್ಕಾಲಿಕ ವ್ಯತ್ಯಾಸವಾಗಬಹುದು. ಅದನ್ನು ಆದಷ್ಟೂ ಶೀಘ್ರ ಸಾಮಾನ್ಯ ಸ್ಥಿತಿಗೆ ತಂದುಕೊಳ್ಳುವುದು ಮುಖ್ಯ. ‍ಕಣ್ತುಂಬಾ ನಿದ್ದೆ ಬರಬೇಕಾದರೆ ಏನು ಮಾಡಬೇಕು ಎಂಬುದು ಬಹಳಷ್ಟು ಜನರ ಪ್ರಶ್ನೆ. ಇಂಥ ಕೆಲವು ವಿಷಯಗಳು ಸುಖನಿದ್ರೆಗೆ ನೆರವಾಗಬಹುದು-

ನಿದ್ದೆಗೊಂದು ನಿಯಮವಿರಲಿ: ದಿನಾ ರಾತ್ರಿ ಮಲಗುವ ಮತ್ತು ಬೆಳಗ್ಗೆ ಏಳುವ ವೇಳೆಯನ್ನು ಖಾಯಂ ಮಾಡಿಕೊಳ್ಳಿ. ರಜೆ, ಹಬ್ಬ-ಹರಿದಿನ, ಪಾರ್ಟಿ… ಏನೇ ಆದರೂ ಈ ವೇಳಾಪಟ್ಟಿಯನ್ನು ಆದಷ್ಟೂ ಬದಲಿಸದಿರುವುದು ಸೂಕ್ತ.

ಸಾಕು ಪ್ರಾಣಿಗಳನ್ನು ದೂರವಿಡಿ: ಬೆಕ್ಕು, ನಾಯಿಯಂಥ ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಹಾಸಿಗೆಯಲ್ಲೇ ಮಲಗಿಸಿಕೊಳ್ಳುವುದು ಅನೇಕರಿಗೆ ಪ್ರಿಯವಾಗಿರಬಹುದು. ಆದರೆ ಸಂಶೋಧನೆಯ ಪ್ರಕಾರ, ನಿದ್ದೆಗೇಡುತನಕ್ಕೆ ಇದೂ ಕಾರಣವಾಗಬಹುದು. ಹಾಗಾಗಿ ಮಲಗುವಾಗ ಅವುಗಳನ್ನು ದೂರ ಇಡಿ.

ಕೆಫೇನ್‌ ಸಾಕು!: ಹೆಚ್ಚಿನ ಕೆಫೇನ್‌ ದೇಹಕ್ಕೆ ಸೇರಿದರೆ ನಿದ್ದೆಗೇಡು ಗ್ಯಾರಂಟಿ. ಹಾಗಾಗಿ ಸಂಜೆಯ ನಂತರ ಕಾಫಿ, ಚಹಾ, ಪೆಪ್ಸಿ ಥರದ ಪಾನೀಯಗಳು, ಚಾಕಲೇಟ್‌ಗಳಿಗೆಲ್ಲಾ ಕಡಿವಾಣ ಹಾಕುವುದು ಸೂಕ್ತ.

ಇದನ್ನೂ ಓದಿ: ಪ್ರವಾಸವೆಂದರೆ ಪ್ರಯಾಸ ಪಡುವ Motion sickness ಮಂದಿಗೊಂದಿಷ್ಟು ಗುಟ್ಟು!

ಫೋನ್‌ ತೆಗೆದಿಡಿ: ಮಲಗುವ ಕನಿಷ್ಠ ಒಂದು ತಾಸು ಮುಂಚೆ ಎಲ್ಲಾ ರೀತಿಯ ಸ್ಕ್ರೀನ್‌ಗಳಿಂದ ಕಣ್ಣುಗಳನ್ನು ಮುಕ್ತಗೊಳಿಸಿ. ಅದರಲ್ಲೂ ಫೋನ್‌ ಪರದೆಯ ನೀಲಿ ಬೆಳಕು ಮೆದುಳನ್ನು ಪ್ರಚೋದಿಸುತ್ತಲೇ ಇರುತ್ತದಂತೆ.

ರಾತ್ರಿಗೆ…ನೋ ಚಿಯರ್ಸ್‌!: ರಾತ್ರಿಯ ಹೊತ್ತು ಒಂದೆರಡು ಪೆಗ್‌ ಒಳಗಿಳಿದರೆ ನಿದ್ದೆ ಖಾತ್ರಿ ಎನ್ನುವವರಿಗೆ ಈ ಕಿವಿಮಾತು. ಇದರಿಂದ ನಿದ್ದೆ ಬರಬಹುದು, ಆದರೆ ಬೆಳಗ್ಗೆ ಎದ್ದಾಗ ಸುಖನಿದ್ರೆ ಮಾಡಿದಂತಿರುವುದಿಲ್ಲ ದೇಹ ಮತ್ತು ಮನಸ್ಸು. ಈ ಹ್ಯಾಂಗೋವರ್‌ ಸ್ಥಿತಿಯೂ ನಿದ್ದೆಗೇಡುತನದ ಒಂದು ಭಾಗವೇ.

ವ್ಯಾಯಾಮ ಬೇಡ: ಅಂದರೆ ಹಾಗಲ್ಲ! ಮಲಗುವ ಮುನ್ನ ಮೆದುಳನ್ನು ಚೋದಿಸುವಂತೆ ಬೆವರು ಹರಿಸಿ ವ್ಯಾಯಾಮ ಮಾಡುವುದು ಖಂಡಿತಾ ಸಲ್ಲದು. ಬೆಳಗ್ಗೆ ಬೇಗೆದ್ದು ಎಷ್ಟಾದರೂ ಬೆವರು ಹರಿಸಿ, ತೊಂದರೆಯಿಲ್ಲ.

ತೈಲಗಳ ಬಳಕೆ: ಸ್ವಲ್ಪ ಪ್ರಮಾಣದಲ್ಲಿ ತಲೆಗೆ ತೈಲ ಲೇಪಿಸುವುದರಿಂದ ನಿದ್ದೆ ಉತ್ತಮವಾಗುವ ಸಾಧ್ಯತೆಯಿದೆ. ಅದರಲ್ಲೂ ಲ್ಯಾವೆಂಡರ್‌ ಆಯಿಲ್‌ನಂಥ ಸುಗಂಥ ತೈಲಗಳು, ಮಾನಸಿಕ ಒತ್ತಡ ಕಡಿಮೆ ಮಾಡಿ ನಿದ್ದೆಯನ್ನು ಉದ್ದೀಪಿಸುವ ಗುಣ ಹೊಂದಿವೆ.

ಧ್ಯಾನ: ಬೇಡದ ಆಲೋಚನೆಗಳನ್ನು ತಲೆಯಿಂದ ಹೊರಗಟ್ಟಿ, ನಿದ್ದೆಯ ಗುಣಮಟ್ಟವನ್ನು ಸುಧಾರಿಸುವ ಸಾಮರ್ಥ್ಯ ಧ್ಯಾನಕ್ಕಿದೆ. ಒಮ್ಮೆ ನಿದ್ದೆ ಮಾಡಿದ ಮೇಲೆ, ಪದೇಪದೆ ಎಚ್ಚರವಾಗದೆ, ಎಷ್ಟು ಹೊತ್ತು ಗಾಢವಾಗಿ ನಿದ್ರಿಸುತ್ತೀರಿ ಎಂಬುದರಿಂದ ನಿದ್ದೆಯ ಗುಣಮಟ್ಟ ನಿರ್ಧಾರವಾಗುತ್ತದೆ.

ಸುಖನಿದ್ರೆಯ ಪ್ರಯೋಜನಗಳು ಬೇಕಾದಷ್ಟಿವೆ. ನಿದ್ದೆಯಿಂದ ತೂಕ ಇಳಿಕೆಗೂ ಸಹಾಯಕ. ನಿದ್ರಾಹೀನತೆಯಿಂದ ನಮ್ಮ ಅರಿವಿಲ್ಲದೆಯೇ ತಿನ್ನುವ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ತೂಕವೂ ಹೆಚ್ಚೀತು. ನಿದ್ದೆ ಸರಿಯಾಯಿತೋ, ಇದೆಲ್ಲದಕ್ಕೂ ಕಡಿವಾಣ. ಖಿನ್ನತೆಯಂಥ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಶೇ. ೯೦ರಷ್ಟು ಮಂದಿಗೆ ನಿದ್ರಾಹೀನತೆಯ ಸಮಸ್ಯೆ ಕಂಡುಬಂದಿದೆ. ನಿದ್ದೆಯ ಗುಣಮಟ್ಟ ಸುಧಾರಣೆಗೆ ಪೂರಕವಾದಂಥ ಜೀವನಶೈಲಿ ಬದಲಾವಣೆಗಳಿಂದ ಜೀವನದ ಗುಣಮಟ್ಟವನ್ನೂ ವೃದ್ಧಿಸಿಕೊಳ್ಳಬಹುದು.

ಇದನ್ನೂ ಓದಿ: ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Fatty Liver: ಏನೆಲ್ಲ ಕಾರಣಗಳಿಗೆ ಫ್ಯಾಟಿ ಲಿವರ್‌ ಬರುತ್ತದೆ?

Fatty Liver: ಜೀವನಶೈಲಿಯ ದೋಷದಿಂದ ಬರುವಂಥ ಕಾಯಿಲೆಗಳ ಪೈಕಿ ಯಕೃತ್‌ನಲ್ಲಿ ಕೊಬ್ಬಿ ತುಂಬಿಕೊಳ್ಳುವುದೂ ಒಂದು. ಸಂಸ್ಕರಿತ ಆಹಾರಗಳು, ಅತಿಯಾದ ಸಕ್ಕರೆ ಮತ್ತು ಉಪ್ಪಿನ ಸೇವನೆ, ಮದ್ಯಪಾನ- ಇಂಥ ಹಲವು ಕಾರಣಗಳು ಈ ತೊಂದರೆಯ ಹಿಂದಿವೆ. ಇನ್ನೂ ಏನೆಲ್ಲಾ ಕಾರಣಗಳಿಗೆ ಫ್ಯಾಲಿ ಲಿವರ್‌ ಕಾಡಬಹುದು? ಇಲ್ಲಿದೆ ಮಾಹಿತಿ.

VISTARANEWS.COM


on

Fatty Liver What Causes
Koo

ಬೆಂಗಳೂರು: ಯಕೃತ್‌ನ ಕೊಬ್ಬು ಅಥವಾ ಫ್ಯಾಟಿ ಲಿವರ್‌ ಸಮಸ್ಯೆ (Fatty Liver) ವಿಶ್ವದ ಶೇ. 25ರಷ್ಟು ಜನರನ್ನೀಗ ಬಾಧಿಸುತ್ತಿದೆ. ಭಾರತವಂತೂ ವಿಶ್ವದ ಫ್ಯಾಟಿ ಲಿವರ್‌ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಬೊಜ್ಜು, ಮಧುಮೇಹ, ಕೊಲೆಸ್ಟ್ರಾಲ್‌ನಂಥ ಜೀವನಶೈಲಿಯ ದೋಷದಿಂದ ಬರುವ ಸಮಸ್ಯೆಗಳು ಯಕೃತ್‌ನ ಕೊಬ್ಬಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಅದಲ್ಲದೆ, ಪ್ರತಿಯೊಬ್ಬರದ್ದೂ ಪ್ರತ್ಯೇಕವಾದ ಜೀವನಶೈಲಿಗಳು ಇಂಥ ತೊಂದರೆಗಳಿಗೆ ದಾರಿ ಮಾಡಿಕೊಡಬಹುದು. ಯಾವ ಕೆಟ್ಟ ಅಭ್ಯಾಸಗಳು ಇಂಥ ತೊಂದರೆಗಳನ್ನು ಮುಂದಿಡುತ್ತವೆ? ಅವುಗಳನ್ನು ಹೇಗೆ ದೂರ ಮಾಡಬಹುದು?

ಅತಿಯಾಗಿ ತಿನ್ನುವುದು

ನಮ್ಮ ಶರೀರಕ್ಕೆ ಬೇಕಾದ ಕ್ಯಾಲರಿಗಿಂತ ಅಧಿಕ ಪ್ರಮಾಣದಲ್ಲಿ ತಿನ್ನುವ ಅಭ್ಯಾಸವಿದ್ದರೆ, ಈ ವಿಷಯ ಗಮನದಲ್ಲಿರಬೇಕು. ಹೆಚ್ಚುವರಿ ಕ್ಯಾಲರಿಗಳೆಲ್ಲ ಶರೀರದಲ್ಲಿ ಶೇಖರಣೆಯಾಗುವುದು ಕೊಬ್ಬಿನ ರೂಪದಲ್ಲಿ. ಅದರಲ್ಲೂ ಜಿಡ್ಡು ಮತ್ತು ಪಿಷ್ಟದ ವಸ್ತುಗಳನ್ನು ಹೆಚ್ಚಾಗಿ ಸೇವಿಸುವುದು ಯಕೃತ್‌ನಲ್ಲಿ ಕೊಬ್ಬು ಜಮೆಯಾಗುವುದಕ್ಕೆ ಕಾರಣವಾಗುತ್ತದೆ. ಹಾಗಾಗಿ ಬೇಕಾದಷ್ಟೇ ತಿನ್ನುವುದು ಸುಲಭದ ಉಪಾಯ. ಅದರಲ್ಲೂ ಲೀನ್‌ ಪ್ರೊಟೀನ್‌, ಇಡೀ ಧಾನ್ಯಗಳು ಮತ್ತು ನಾರು ಭರಿತ ಆಹಾರಗಳ ಸೇವನೆಯನ್ನು ಅಗತ್ಯವಾಗಿ ಮಾಡಿ.

ಜಡಜೀವನ

ದೈಹಿಕ ಚಟುವಟಿಕೆ ಕಡಿಮೆಯಾದಷ್ಟು ಸ್ವಾಸ್ಥ್ಯವೂ ಕಡಿಮೆಯಾಗುತ್ತದೆ. ದೇಹದ ಕೊಬ್ಬು ಕರಗುವಂತೆ, ಬಕೆಟ್‌ಗಟ್ಟಲೆ ಬೆವರು ಹರಿಸಿ ವ್ಯಾಯಾಮ ಮಾಡಬೇಕೆಂದಲ್ಲ. ಬದಲಿಗೆ, ವಾಋಕ್ಕೆ 150 ನಿಮಿಷಗಳ ಅಥವಾ ದಿನಕ್ಕೆ 30 ನಿಮಿಷಗಳ ಮಧ್ಯಮ ಪ್ರಮಾಣದ ವ್ಯಾಯಾಮ ಸಾಕಾಗುತ್ತದೆ. ಚುರುಕು ನಡಿಗೆ, ಸೈಕಲ್‌ ಹೊಡೆಯುವುದು, ಈಜು, ಯೋಗ, ಏರೋಬಿಕ್ಸ್‌, ಜುಂಬಾ, ಪಿಲಾಟೆ ಮುಂತಾದ ಯಾವುದೇ ನಿಮ್ಮಿಷ್ಟದ ವ್ಯಾಯಾಮವನ್ನು ಮಾಡಬಹುದು. ದೀರ್ಘ ಕಾಲ ಒಂದೇ ಕಡೆ ಕೂತು ಕೆಲಸ ಮಾಡದೆ ಆಗಾಗ ಎದ್ದು ಓಡಾಡಿ. ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಿ.

ಆಲ್ಕೋಹಾಲ್‌

ಇದಂತೂ ಯಕೃತ್‌ನಲ್ಲಿ ಕೊಬ್ಬು ಜಮೆಯಾಗುವುದಕ್ಕೆ ಇರುವಂಥ ಅತಿದೊಡ್ಡ ಕಾರಣಗಳಲ್ಲಿ ಒಂದು. ಮೊದಲಿಗೆ ಅಂಥ ವ್ಯತ್ಯಾಸ ಕಾಣದ್ದರೂ, ದೀರ್ಘ ಕಾಲ ಮದ್ಯಪಾನದ ಚಟ ಮುಂದುವರಿಯುವುದು ಇಡೀ ದೇಹವನ್ನು ಒಳಗಿಂದೊಳಗೆ ಶಿಥಿಲಗೊಳಿಸಬಲ್ಲದು. ಹಾಗಾಗಿ ಹವ್ಯಾಸ, ಮಜಾ, ಸ್ನೇಹಿತರ ಜೊತೆಗೆ, ಎಂದೋ ಪಾರ್ಟಿಗೆ… ಇಂಥ ಕುಂಟು ನೆಪಗಳನ್ನು ಹೇಳಿಕೊಂಡು ಗುಂಡು ಹಾಕುವ ಬದಲು, ಮದ್ಯಪಾನವನ್ನು ಸಂಪೂರ್ಣ ತ್ಯಜಿಸಲು ದೃಢ ಮನಸ್ಸು ಮಾಡಿ.

ಅಧಿಕ ಸಕ್ಕರೆ

ಸಕ್ಕರೆಯಂಶ ಹೆಚ್ಚಿರುವ ನೈಸರ್ಗಿಕ ಆಹಾರಗಳು ಅಂಥ ಅಪಾಯವನ್ನು ತರುವುದಿಲ್ಲ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಮಿತಿಮೀರಿ ಹಣ್ಣುಗಳ ಸೇವನೆ ಮಾಡುವ ಅಭ್ಯಾಸದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆದರೆ ಕೃತಕ ಸಿಹಿಯನ್ನು ಸೇರಿಸಿದ ಆಹಾರಗಳು ಮಾತ್ರ ಯಾವತ್ತಿಗೂ ಕಂಟಕವನ್ನು ತರಬಲ್ಲವು. ಸೋಡಾ, ಫ್ರೂಟ್‌ ಜ್ಯೂಸ್‌, ಕ್ಯಾಂಡಿಗಳು, ಕೇಕ್‌, ಐಸ್‌ಕ್ರೀಮ್‌, ಜಿಲೇಬಿ, ಹಲ್ವಾಗಳಿಂದ ಹಿಡಿದು ಯಾವುದೇ ಸಿಹಿ ತಿನಿಸುಗಳು ಅತಿಯಾದರೆ ಯಕೃತ್‌ಗೆ ತೊಂದರೆ. ದಿನಕ್ಕೆ 4 ಚಮಚಕ್ಕಿಂತ ಹೆಚ್ಚಿನ ಸಕ್ಕರೆಯಂಶ ದೇಹಕ್ಕೆ ಹೋಗದಂತೆ ಎಚ್ಚರ ವಹಿಸಿ.

ಇದನ್ನೂ ಓದಿ: Actor Suriya: ಸೂರ್ಯಗೆ ಸೆಟ್‌ನಲ್ಲಿ ಗಾಯ: ಆರೋಗ್ಯ ಸ್ಥಿತಿ ಹೇಗಿದೆ?

ನಿದ್ದೆಗೇಡಿತನ

ದಿನಕ್ಕೆ ಅಗತ್ಯ ಪ್ರಮಾಣದ ನಿದ್ದೆಯನ್ನು ಮಾಡದವರಲ್ಲಿ ಯಕೃತ್‌ನ ಆರೋಗ್ಯ ಚೆನ್ನಾಗಿಲ್ಲ ಎಂಬ ಅಂಶವನ್ನು ಅಧ್ಯಯನಗಳು ಎತ್ತಿ ಹಿಡಿದಿವೆ. ಹಾಗಾಗಿ ದಿನಕ್ಕೆ 7-8 ತಾಸು ಕಡ್ಡಾಯವಾಗಿ ನಿದ್ರಿಸಬೇಕು ಎಂಬ ನಿಯಮವನ್ನು ಹಾಕಿಕೊಳ್ಳಿ. ನಿದ್ದೆಯೆಂದರೆ ಕೇವಲ ಹಾಸಿಗೆಯ ಮೇಲೆ ಮಲಗಿ, ಕೈಯಲ್ಲಿ ಮೊಬೈಲ್‌ ಹಿಡಿಯುವುದಲ್ಲ. ಬದಲಿಗೆ, ಅದಷ್ಟೂ ತಾಸುಗಳ ಗಾಢ ನಿದ್ದೆ. ಇದರಿಂದ ದೇಹದ ಬಹಳಷ್ಟು ರಿಪೇರಿ ಕೆಲಸಗಳು ಸುಗಮವಾಗುತ್ತವೆ.

ಸಂಸ್ಕರಿತ ಆಹಾರ

ಇದು ಸಹ ಯಕೃತ್ತನ್ನು ಹಾಳು ಮಾಡುವ ಕೇಡಿಗಳಲ್ಲಿ ಒಂದು. ಅತಿಯಾದ ಕೊಬ್ಬಿನ ಆಹಾರಗಳು, ಉಪ್ಪು ಹೆಚ್ಚಿರುವ ಚಿಪ್ಸ್‌ನಂಥ ತಿನಿಸುಗಳು, ಮೈದಾಭರಿತ ಆಹಾರಗಳು, ಶೀತಲೀಕರಿಸಿದ ತಿನಿಸುಗಳು- ಇವೆಲ್ಲ ಪಿತ್ತಕೋಶದ ಆಯುಷ್ಯವನ್ನೇ ಕಡಿತ ಮಾಡುವ ಸಾಮರ್ಥ್ಯ ಹೊಂದಿದವು. ಹಾಗಾಗಿ ತಾಜಾ ಆಹಾರ ಸೇವಿಸಿ, ಇಡೀ ಧಾನ್ಯಗಳನ್ನು, ಸಾಕಷ್ಟು ಹಣ್ಣು-ತರಕಾರಿಗಳನ್ನು ಹೊಂದಿದ ಸತ್ವಯುತ ಆಹಾರವನ್ನೇ ತಿನ್ನಿ.

Continue Reading

ಆರೋಗ್ಯ

Almonds Benefits: ಈ 9 ಕಾರಣಗಳಿಗಾಗಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸಬೇಕು!

Almonds Benefits: ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದ ಮೇಲೆ ಸಿಪ್ಪೆ ಸುಲಿದು ನೀವು ತಿಂದಿರಬಹುದು, ನಿಮ್ಮ ಮಕ್ಕಳಿಗೂ ಕೊಟ್ಟಿರಬಹುದು. ಹೀಗೆ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇರುವ ಲಾಭಗಳೇನು ಗೊತ್ತೇ? ಬನ್ನಿ, ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲೇ ನಾವು ಯಾಕೆ ತಿನ್ನಬೇಕು ಎಂಬುದಕ್ಕೆ ಕಾರಣಗಳನ್ನು ತಿಳಿಯೋಣ.

VISTARANEWS.COM


on

Almonds
Koo

ಕೆಲವು ಆಹಾರಗಳ್ನು ಕೆಲವು ಹೊತ್ತಿನಲ್ಲಿ ತಿಂದರೆ ಆ ಆಹಾರದ ಸರ್ವ ಗುಣಗಳ ಲಾಭವನ್ನೂ ನಾವು ಪಡೆಯಬಹುದು ಎನ್ನುತ್ತಾರೆ ತಜ್ಞರು. ಆಹಾರವೇ ಹಾಗೆ, ಹೊತ್ತಲ್ಲದ ಹೊತ್ತಿನಲ್ಲಿ ತಿಂದರೆ ಲಾಭಕ್ಕಿಂತ ನಷ್ಟ ಹೆಚ್ಚು. ಯಾವಾಗ, ಹೇಗೆ ಮತ್ತು ಎಷ್ಟು ತಿನ್ನಬೇಕು ಎಂಬ ಸಾಮಾನ್ಯ ಜ್ಞಾನ, ನಮಗೆ ತಿಳಿದಿರಬೇಕು. ಅದು ಪ್ರತಿ ಆಹಾರಕ್ಕೂ ಅನ್ವಯಿಸುತ್ತದೆ. ಇನ್ನು ಕೆಲವು ಆಹಾರಗಳನ್ನು ಇಂತಹ ಹೊತ್ತಿನಲ್ಲಿ ತಿಂದರೆ, ಹೆಚ್ಚು ಅಡ್ಡ ಪರಿಣಾಮಗಳಾಗದು ಎಂಬ ಸತ್ಯವೂ ಇದೆ. ಒಟ್ಟಾರೆ, ಆಹಾರದ ಬಗೆಗಿನ ಸಾಮಾನ್ಯ ಜ್ಞಾನ ಜೀವನದಲ್ಲಿ ನಮಗಿದ್ದರೆ, ಆರೋಗ್ಯವೂ ನಮ್ಮ ಕೈಯಲ್ಲಿದ್ದಂತೆ. ಯಾಕೆಂದರೆ, ನಮ್ಮ ಆರೋಗ್ಯದ ಬಹುಪಾಲು ಗುಟ್ಟು ಅಡಗಿರುವುದು ನಾವು ತಿನ್ನುವ ಆಹಾರದಲ್ಲಿಯೇ.
ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದ ಮೇಲೆ ಸಿಪ್ಪೆ ಸುಲಿದು ನೀವು ತಿಂದಿರಬಹುದು, ನಿಮ್ಮ ಮಕ್ಕಳಿಗೂ ಕೊಟ್ಟಿರಬಹುದು. ಹೀಗೆ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇರುವ ಲಾಭಗಳೇನು ಗೊತ್ತೇ? ಬನ್ನಿ, ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲೇ ನಾವು ಯಾಕೆ ತಿನ್ನಬೇಕು ಎಂಬುದಕ್ಕೆ (Almonds Benefits) ಕಾರಣಗಳನ್ನು ತಿಳಿಯೋಣ.

Almonds Dry Fruits for Womens Health

ಜೀವಸತ್ವಗಳು ಸರಿಯಾಗಿ ಹೀರಲ್ಪಡುತ್ತವೆ

ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಆಹಾರದಲ್ಲಿರುವ ಜೀವಸತ್ವಗಳು ಸರಿಯಾಗಿ ಹೀರಲ್ಪಡುತ್ತವೆ. ಬಾದಾಮಿಯಲ್ಲಿರುವ ಪ್ರೊಟೀನ್‌ ಹಾಗೂ ಕೊಬ್ಬು ಈ ಕೆಲಸವನ್ನು ಮಾಡುತ್ತವೆ. ಬಾದಾಮಿಯ ಸೇವನೆಯ ನಂತರ ನಮ್ಮ ದೇಹಕ್ಕೆ ಸೇರಿದ ಆಹಾಋದ ಸಂಪೂರ್ಣ ಉಪಯೋಗವನ್ನು ನಾವು ಪಡೆಯುವಂತಾಗುತ್ತದೆ.

weight loss

ತೂಕ ಇಳಿಕೆಗೆ ಸಹಕಾರಿ

ನೀವು ತೂಕ ಇಳಿಸುವವರಾಗಿದ್ದರೆ, ಈ ಅಭ್ಯಾಸ ಬಹಳ ಒಳ್ಳೆಯದು. ಬಾದಾಮಿಯಲ್ಲಿ ಹೆಚ್ಚು ನಾರಿನಂಶ ಹಾಗೂ ಪ್ರೊಟೀನ್‌ ಇರುವುದರಿಂದ ಇದು ಹೆಚ್ಚು ಹಸಿವಾಗಲು ಬಿಡುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಬಾದಾಮಿ ಸೇವಿಸಿದ್ದರಿಂದ ಹಸಿವು ಕೊಂಚ ನಿಯಂತ್ರಣಕ್ಕೆ ಬಂದು ನೀವು ಕಡಿಮೆ ತಿನ್ನುತ್ತೀರಿ. ಸಹಜವಾಗಿಯೇ, ಕ್ಯಾಲರಿ ಕಡಿಮೆ ದೇಹಕ್ಕೆ ಸೇರುವುದರಿಂದ ತೂಕ ಇಳಿಕೆಯತ್ತ ಸಾಗುತ್ತದೆ.

ealthy internal organs of human digestive system / highlighted blue organs

ಜೀರ್ಣಕ್ರಿಯೆ ಹೆಚ್ಚಳ

ನಿಮ್ಮ ಜೀರ್ಣಕ್ರಿಯೆಯ ಶಕ್ತಿ ಇಮ್ಮಡಿಗೊಳ್ಳುತ್ತದೆ. ಬಾದಾಮಿಯಲ್ಲಿ ನಾರಿನಂಶವು ಹೇರಳವಾಗಿರುವುದರಿಂದ ಇದು ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುವ ತಾಕತ್ತನ್ನು ಹೊಂದಿದೆ.

ಚಯಾಪಚಯಕ್ರಿಯೆ ಚುರುಕು

ಚಯಾಪಚಯಕ್ರಿಯೆ ಚುರುಕಾಗುತ್ತದೆ. ದೇಹದಲ್ಲಿ ಈ ಕ್ರಿಯೆಗೆ ಚುರುಕು ಬಂದ ತಕ್ಷಣ ಶಕ್ತಿ ಉತ್ಪಾದನೆಯೂ ಹೆಚ್ಚಾಗುತ್ತದೆ. ನಿಮ್ಮ ಸುಸ್ತು, ಬೇಸರಗಳೆಲ್ಲ ಮಾಯವಾಗಿ ನಿಮ್ಮ ದೇಹ ಚುರುಕಾಗುತ್ತದೆ.

Heart Health Fish Benefits

ಹೃದಯ ಸ್ನೇಹಿ

ಎಲ್ಲಕ್ಕಿಂತ ಮುಖ್ಯವಾಗಿ ಬಾದಾಮಿ ಹೃದಯ ಸ್ನೇಹಿ. ಇದರಲ್ಲಿರುವ ಮೋನೋ ಸ್ಯಾಚುರೇಟೆಡ್‌ ಕೊಬ್ಬು ಹೃದಯಕ್ಕೆ ಒಳ್ಳೆಯದನ್ನೇ ಬಯಸುತ್ತದೆ. ಹೃದಯದಲ್ಲಿ ರಕ್ತಪೂರಣಕ್ಕೆ ಚುರುಕು ಮುಟ್ಟುತ್ತದೆ. ಹೃದಯದ ಸಮಸ್ಯೆಗಳು ದೂರ ನಿಲ್ಲುತ್ತವೆ.

ಸಕ್ಕರೆ ಮಟ್ಟ ಏರಿಕೆ ಕಡಿಮೆ

ಬಾದಾಮಿಯಲ್ಲಿ ಗ್ಲಿಸೆಮಿಕ್‌ ಇಂಡೆಕ್ಸ್‌ ತೀರಾ ಕಡಿಮೆ ಇದೆ. ಇದರಿಂದ ಸಹಜವಾಗಿಯೇ, ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆಯ ಪರಿಣಾಮ ಕಡಿಮೆಯೇ ಇರುತ್ತದೆ.

ಚರ್ಮದ ಆರೋಗ್ಯಕ್ಕೆ ಪೂರಕ

ಚರ್ಮದ ಕಾಳಜಿ ವಹಿಸುವ ಮಂದಿ ಇದನ್ನು ಖಂಡಿತ ಬಳಸಬೇಕು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಜೀವಸತ್ವಗಳು ಚರ್ಮದ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಇವು ಆಂಟಿ ಏಜಿಂಗ್‌ ಕೂಡಾ. ಚರ್ಮವನ್ನು ನಯವಾಗಿ ಹೊಳಪಾಗಿ ಇರಿಸುವ ಜೊತೆಗೆ ಚರ್ಮಕ್ಕೆ ಬೇಕಾದ ಪೋಷಣಾಯನ್ನು ನೀಡುತ್ತವೆ.

Antioxidants in it keep immunity strong Benefits Of Mandakki

ರೋಗ ನಿರೋಧಕ ಶಕ್ತಿ

ಬಾದಾಮಿಯಲ್ಲಿ ವಿಟಮಿನ್‌ ಇ ಹಾಗೂ ಝಿಂಕ್‌ ಇರುವುದರಿಂದ ಇವು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನೂ ನೀಡುತ್ತವೆ. ದೇಹವನ್ನು ಇನ್‌ಫೆಕ್ಷನ್‌ನಿಂದ ದೂರವಿರಿಸುತ್ತದೆ. ಒಟ್ಟಾರೆ ರೋಗನಿರೋಧಕತೆ ಹೆಚ್ಚುತ್ತದೆ.

ಇದನ್ನೂ ಓದಿ: Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

ದೇಹವನ್ನು ಹೈಡ್ರೇಟ್‌ ಆಗಿ ಇರಿಸುತ್ತದೆ

ಬಾದಾಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರೂ ಇದೆ ಎಂದರೆ ನೀವು ನಂಬಲೇ ಬೇಕು. ಅದು ಒಣವಾಗಿ ಕಂಡರೂ, ತನ್ನ ಒಣ ಅಂಶದಷ್ಟೇ ಪ್ರಮಾಣದಲ್ಲಿ ನೀರನ್ನೂ ಹೊಂದಿದೆ ಎಂದರೆ ನೀವು ನಂಬಬೇಕು. ಹೀಗಾಗಿ, ದೇಹವನ್ನು ಸದಾ ಹೈಡ್ರೇಟ್‌ ಆಗಿ ಇಡುವಲ್ಲಿ ಇದು ತನ್ನ ಕಾಣಿಕೆಯನ್ನೂ ನೀಡುತ್ತದೆ.

Continue Reading

ಆರೋಗ್ಯ

High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

High Calcium Foods: ಕ್ಯಾಲ್ಶಿಯಂ ಆಹಾರ ಎನ್ನುತ್ತಿದ್ದಂತೆ ನಮಗೆ ನೆನಪಾಗುವುದು ಡೇರಿ ಉತ್ಪನ್ನಗಳು. ಆದರೆ ಕ್ಯಾಲ್ಶಿಯಂ ಆಹಾರಗಳು ಅದಷ್ಟೇ ಅಲ್ಲ, ಇನ್ನೂ ಎಷ್ಟೋ ಬೇರೆಯ ಆಹಾರಗಳು ಒಂದು ಸರ್ವಿಂಗ್‌ನಲ್ಲಿ ಒಂದು ಗ್ಲಾಸ್‌ ಹಾಲಿಗಿಂತಲೂ ಹೆಚ್ಚಿನ ಕ್ಯಾಲ್ಶಿಯಂ ಒದಗಿಸುತ್ತವೆ ದೇಹಕ್ಕೆ. ಯಾವ ಆಹಾರಗಳವು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

High Calcium Foods
Koo

ಕ್ಯಾಲ್ಶಿಯಂ ಖನಿಜ (High Calcium Foods) ನಮ್ಮ ಆರೋಗ್ಯಕ್ಕೆ ಅಗತ್ಯ ಎಂಬುದು ನಮಗೆಲ್ಲ ಗೊತ್ತು. ಹಲ್ಲು, ಮೂಳೆಗಳಿಂದ ಹಿಡಿದು ನಮ್ಮಿಡೀ ದೇಹದ ಸ್ವಾಸ್ಥ್ಯ ರಕ್ಷಣೆಗೆ ಇದು ಅಗತ್ಯ. ನರಗಳ ಆರೋಗ್ಯ ಚೆನ್ನಾಗಿರಿಸಲು, ಸ್ನಾಯುಗಳ ವಿಕಸನಕ್ಕೆ, ರಕ್ತ ಹೆಪ್ಪುಗಟ್ಟಲು… ಹೀಗೆ ಬಹಳಷ್ಟು ಕೆಲಸಗಳಿಗೆ ಕ್ಯಾಲ್ಶಿಯಂ ಅಗತ್ಯವಿದೆ. ಕ್ಯಾಲ್ಶಿಯಂ ಆಹಾರ ಎನ್ನುತ್ತಿದ್ದಂತೆ ನಮಗೆ ನೆನಪಾಗುವುದು ಡೇರಿ ಉತ್ಪನ್ನಗಳು. ಸಸ್ಯಾಹಾರಿಗಳಂತೂ ಹಾಲು, ಚೀಸ್‌, ಪನೀರ್‌ ಮುಂತಾದವುಗಳನ್ನೇ ಕ್ಯಾಲ್ಶಿಯಂ ಪೂರೈಕೆಗೆ ನೆಚ್ಚಿಕೊಂಡಿರುತ್ತಾರೆ. ಆದರೆ ಕ್ಯಾಲ್ಶಿಯಂ ಆಹಾರಗಳು ಅದಷ್ಟೇ ಅಲ್ಲ, ಇನ್ನೂ ಎಷ್ಟೋ ಬೇರೆಯ ಆಹಾರಗಳು ಒಂದು ಸರ್ವಿಂಗ್‌ನಲ್ಲಿ ಒಂದು ಗ್ಲಾಸ್‌ ಹಾಲಿಗಿಂತಲೂ ಹೆಚ್ಚಿನ ಕ್ಯಾಲ್ಶಿಯಂ ಒದಗಿಸುತ್ತವೆ ದೇಹಕ್ಕೆ. ಯಾವ ಆಹಾರಗಳವು?

Greens vegetables

ಹಸಿರು ಸೊಪ್ಪುಗಳು

ಪಾಲಕ್‌ ಸೊಪ್ಪು, ಲೆಟೂಸ್‌, ಸ್ವಿಸ್‌ ಚಾರ್ಡ್‌, ಸಾಸಿವೆ ಸೊಪ್ಪುಗಳು, ಟರ್ನಿಪ್‌ ಸೊಪ್ಪು, ಕೆಲವು ಬಗೆಯ ಎಲೆಕೋಸು ಮುಂತಾದ ಹಲವು ಬಗೆಯ ಸೊಪ್ಪುಗಳಲ್ಲಿ ಕ್ಯಾಲ್ಶಿಯಂ ಅಂಶ ಅಧಿಕವಾಗಿದೆ. ಒಂದು ಕಪ್‌ ಬೇಯಿಸಿದ ಸೊಪ್ಪಿನಲ್ಲಿ 265 ಮಿ.ಗ್ರಾಂನಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಅದೇ ಒಂದು ಕಪ್‌ (160 ಎಂ.ಎಲ್‌) ಹಾಲಿನಲ್ಲಿ 250 ಮಿ.ಗ್ರಾಂ.ನಷ್ಟು ಕ್ಯಾಲ್ಶಿಯಂ ಇರುತ್ತದೆ. ಹಾಗಾಗಿ ಇಂಥ ಸೊಪ್ಪುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕ್ಯಾಲ್ಶಿಯಂ ಮಾತ್ರವಲ್ಲ, ಅವುಗಳಿಂದ ದೊರೆಯುವ ಸೂಕ್ಷ್ಮ ಪೋಷಕಾಂಶಗಳು ದೇಹದ ಆರೋಗ್ಯ ಹೆಚ್ಚಿಸುವಲ್ಲಿ ಮಹತ್ವದ ಕೆಲಸ ಮಾಡುತ್ತವೆ.

Mackerel fish on ice
Broccoli

ಮೀನು

ಮೀನುಗಳಲ್ಲಿರುವ ಲೀನ್‌ ಮೀಟ್‌ ಆರೋಗ್ಯಕ್ಕೆ ಸೂಕ್ತವಾದದ್ದು. ಅದರಲ್ಲೂ ಭೂತಾಯಿಯಂಥ ಮೀನಿನಲ್ಲಿ ಕ್ಯಾಲ್ಶಿಯಂ ಪ್ರಮಾಣ ಅಧಿಕ 3.75 ಔನ್ಸ್‌ ಮೀನಿನಿಂದ 325 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಇದರಲ್ಲಿ ಕ್ಯಾಲ್ಶಿಯಂ ಮಾತ್ರವಲ್ಲ, ಹಲವು ಬಗೆಯ ಖನಿಜಗಳು ಮತ್ತು ಒಮೇಗಾ 3 ಕೊಬ್ಬಿನಾಮ್ಲವೂ ಇದರಿಂದ ವಿಫುಲವಾಗಿ ಸಿಗುತ್ತದೆ.

Health Benefits Of Tofu

ತೋಫು

ಸೋಯಾ ಉತ್ಪನ್ನವಾದ ತೋಫುವಿನಲ್ಲೂ ಅಧಿಕ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ. ಇದರ ಸಂಸ್ಕರಣೆಯಲ್ಲಿ ಕ್ಯಾಲ್ಶಿಯಂ ಸಲ್ಫೇಟ್‌ ಬಳಸಲಾಗಿದ್ದರೆ, ಅರ್ಧ ಕಪ್‌ ತೋಫುವಿನಿಂದ 250ರಿಂದ 850 ಎಂ.ಜಿ.ವರೆಗೂ ಕ್ಯಾಲ್ಶಿಯಂ ದೊರೆಯುತ್ತದೆ. ನೋಡುವುದಕ್ಕೆ ಪನೀರ್‌ನಂತೆಯೇ ಇರುವ ಇದನ್ನು ಹಲವು ರೀತಿಯ ಅಡುಗೆಗಳಲ್ಲಿ ಬಳಸಿ, ಕ್ಯಾಲ್ಶಿಯಂ ಸೇವನೆಯನ್ನು ಹೆಚ್ಚಿಸಿಕೊಳ್ಳಬಹುದು.

Black Chia Seed

ಚಿಯಾ ಬೀಜಗಳು

ನೋಡುವುದಕ್ಕೆ ತೀರಾ ಸಣ್ಣದಾಗಿರು ಈ ಬೀಜಗಳು ಸತ್ವದಲ್ಲಿ ತ್ರಿವಿಕ್ರಮನಂತೆ. ಕೇವಲ ಎರಡು ಟೇಬಲ್‌ ಚಮಚ ಚಿಯಾ ಬೀಜಗಳಿಂದ 180 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಇವುಗಳನ್ನು ನೀರಿನಲ್ಲಿ ನೆನೆಸಿ, ನಂತರ ಸ್ಮೂದಿ, ಸಲಾಡ್‌ ಮುಂತಾದ ಯಾವುದಕ್ಕೇ ಆದರೂ ಸೇರಿಸಿಕೊಳ್ಳಬಹುದು. ಇವುಗಳಲ್ಲಿ ನಾರು ಮತ್ತು ಒಳ್ಳೆಯ ಕೊಬ್ಬು ವಿಫುಲವಾಗಿವೆ.

sesame-seeds

ಎಳ್ಳು

ಇದನ್ನು ಅಂತೆಯೇ ತಿನ್ನುವುದಕ್ಕಿಂತ ಚಟ್ನಿಯಂತೆ ರುಬ್ಬಿ ತಿನ್ನುವುದು ಹೆಚ್ಚು ಪರಿಣಾಮಕಾರಿ. ಯಾವುದೇ ರೀತಿಯಲ್ಲಿ ಎಳ್ಳನ್ನು ರುಬ್ಬಿ ಅಡುಗೆಗೆ ಸೇರಿಸಿಕೊಳ್ಳಬಹುದು. ಎರಡು ಟೇಬಲ್‌ ಚಮಚ ಎಳ್ಳಿನಿಂದ 130 ಎಂ.ಜಿ.ಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ.

Broccoli

ಬ್ರೊಕೊಲಿ

ವಿಟಮಿನ್‌ ಸಿ ಮತ್ತು ಕೆ ಹೆಚ್ಚಾಗಿರುವ ಈ ತರಕಾರಿಯನ್ನು ಯಾವುದೇ ರೂಪದಲ್ಲಿ ತಿಂದರೂ ಆರೋಗ್ಯಕ್ಕೆ ಒಳ್ಳೆಯದು. ಒಂದು ಕಪ್‌ ಬೇಯಿಸಿದ ಬ್ರೊಕೊಲಿಯಿಂದ 62 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಉಳಿದೆಲ್ಲ ಹಸಿರು ಸೊಪ್ಪುಗಳ ಜೊತೆಗೆ ಇದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬಹುದು.

ಇದನ್ನೂ ಓದಿ: Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

ಬಾದಾಮಿ, ಅಂಜೂರ

ಒಂದು ಔನ್ಸ್‌ ಬಾದಾಮಿಯಲ್ಲಿ (ಅಂದಾಜು 23 ಬಾದಾಮಿ) 76 ಎಂ.ಜಿ.ಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಅದಲ್ಲದೆ, ಈ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೊಟೀನ್‌ ಮತ್ತು ಇತರ ಖನಿಜಗಳು ಧಾರಾಳವಾಗಿವೆ. ಅಂಜೂರವೂ ಇದಕ್ಕಿಂತ ಕಡಿಮೆಯೇನಿಲ್ಲ. ಕಾಲು ಕಪ್‌ನಷ್ಟು ಅಂಜೂರದಲ್ಲಿ ಸುಮಾರು 90 ಎಂ.ಜಿಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಇದರಲ್ಲಿ ನಾರಿನಂಶವೂ ಸಾಕಷ್ಟಿದ್ದು, ಜೀರ್ಣಾಂಗಗಳ ಆರೋಗ್ಯವನ್ನು ವೃದ್ಧಿಸುತ್ತದೆ.

Continue Reading

ಆರೋಗ್ಯ

Knuckle Cracking: ನೆಟಿಕೆ ಮುರಿಯುವುದು ಒಳ್ಳೆಯದೇ ಕೆಟ್ಟದ್ದೇ? ಇದರಿಂದ ಸಂಧಿವಾತ ಬರುತ್ತದೆಯೇ?

Knuckle Cracking: ಬೆರಳುಗಳನ್ನು ಒಮ್ಮೆ ಎಳೆದು ಅಥವಾ ಮಡಚಿ, ಟಕ್‌ ಎಂಬ ಶಬ್ದ ಕೇಳಿದಾಗ ನಮಗೆ ನೆಮ್ಮದಿಯ ಅನುಭವವಾಗುತ್ತದೆ. ಆಹಾ ಎಂಬ ನಿಟ್ಟುಸಿರು ಬಿಡುತ್ತೇವೆ. ಅನೇಕರಿಗೆ ಇದು ನಿತ್ಯದ ಅಭ್ಯಾಸ. ದಿನಕ್ಕೊಮ್ಮೆ ನೆಟಿಕೆ ಮುರಿಯದಿದ್ದರೆ ಯಾಕೋ ಏನೋ ಕಳೆದುಕೊಂಡ ಭಾವ. ಆದರೆ, ಇನ್ನೂ ಕೆಲವರಿಗೆ ನೆಟಿಕೆ ಮುರಿಯುವುದು ಆಗದು. ಎಲ್ಲಿ ಬೆರಳು ಮುರಿದೇ ಬಿಡುತ್ತೇವೋ ಎಂಬ ಆತಂಕ ಕೆಲವರದ್ದು. ಒಟ್ಟಾರೆ, ಹೇಳುವುದಾದರೆ, ನೆಟಿಕೆ ಮುರಿಯುವುದು ಹಲವರ ಒಂದು ಅಭ್ಯಾಸ. ಉದ್ವೇಗವನ್ನು ದೂರ ಮಾಡುವ ಮಾರ್ಗವೂ ಹೌದು. ಆದರೆ…

VISTARANEWS.COM


on

knuckle cracking
Koo

ನಾವು ಬಹಳಷ್ಟು ಮಂದಿ ಕೈಕಾಲುಗಳ ಬೆರಳುಗಳಲ್ಲಿ, ಗಂಟುಗಳಲ್ಲಿ ನೆಟಿಕೆ ಮುರಿಯುವುದರ (Knuckle Cracking) ಮೂಲಕ ರಿಲ್ಯಾಕ್ಸ್‌ ಫೀಲ್‌ ಮಾಡುತ್ತೇವೆ. ಬೆರಳುಗಳನ್ನು ಒಮ್ಮೆ ಎಳೆದು ಅಥವಾ ಮಡಚಿ, ಟಕ್‌ ಎಂಬ ಶಬ್ದ ಕೇಳಿದಾಗ ನಮಗೆ ನೆಮ್ಮದಿಯ ಅನುಭವವಾಗುತ್ತದೆ. ಆಹಾ ಎಂಬ ನಿಟ್ಟುಸಿರು ಬಿಡುತ್ತೇವೆ. ಅನೇಕರಿಗೆ ಇದು ನಿತ್ಯದ ಅಭ್ಯಾಸ. ದಿನಕ್ಕೊಮ್ಮೆ ನೆಟಿಕೆ ಮುರಿಯದಿದ್ದರೆ ಯಾಕೋ ಏನೋ ಕಳೆದುಕೊಂಡ ಭಾವ. ಆದರೆ, ಇನ್ನೂ ಕೆಲವರಿಗೆ ನೆಟಿಕೆ ಮುರಿಯುವುದು ಆಗದು. ಎಲ್ಲಿ ಬೆರಳು ಮುರಿದೇ ಬಿಡುತ್ತೇವೋ ಎಂಬ ಆತಂಕ ಕೆಲವರದ್ದು. ಒಟ್ಟಾರೆ, ಹೇಳುವುದಾದರೆ, ನೆಟಿಕೆ ಮುರಿಯುವುದು ಹಲವರ ಒಂದು ಅಭ್ಯಾಸ. ಉದ್ವೇಗವನ್ನು ದೂರ ಮಾಡುವ ಮಾರ್ಗವೂ ಹೌದು. ಈ ನೆಟಿಕೆ ತೆಗೆಯುವ (Knuckle Cracking) ಅಭ್ಯಾಸಕ್ಕೆ ಯಾವುದೇ ವೈಜ್ಞಾನಿಕ, ಮಾನಸಿಕ ಕಾರಣಗಳಿಲ್ಲ. ಆದರೆ ಇದು ಚಡಪಡಿಕೆಯ ಸಂಕೇತ. ಸುಮ್ಮನೆ ಕುಳಿತಲ್ಲಿ, ಕಾಯುತ್ತಾ ಇರುವಾಗ, ತಮ್ಮ ಸರದಿಗಾಗಿ ಉದ್ವೇಗದಲ್ಲಿ ಕುಳಿತಿರುವಾಗ, ಪರೀಕ್ಷೆ ಬರೆಯುವ ಮೊದಲು ಹೀಗೆ ಯಾವುದೇ ಸ್ಪರ್ಧೆಗಳನ್ನು ಎದುರಿಸುವುದಕ್ಕೂ ಮೊದಲು ನೆಟಿಕೆ ಮುರಿಯುವ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿರುತ್ತಾರೆ. ಮನಸ್ಸು ಉದ್ವೇಗಕ್ಕೆ ಒಳಗಾಗುವ ಸಂದರ್ಭ ಅದರಿಂದ ಹೊರಬರಲು, ರಿಲ್ಯಾಕ್ಸ್‌ ಮಾಡಿಕೊಳ್ಳುವುದಕ್ಕೂ ಇದನ್ನು ತಮಗರಿವಿಲ್ಲದಂತೆ ಮಾಡುವ ಅಭ್ಯಾಸವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಒಟ್ಟಾರೆಯಾಗಿ, ನೆಟಿಕೆ ಮುರಿಯುವುದು, ತಮ್ಮ ಉದ್ವೇಗದಿಂದ, ಹೊರಬರಲು ಮಾಡುವ ಮಾನಸಿಕ ತಯಾರಿಯೂ ಕೆಲವು ಸಂದರ್ಭದಲ್ಲಿ ಆಗಿರುತ್ತದೆ. ನರ್ವಸ್‌ ಆದಾಗಲೂ, ಸ್ಟೇಜ್‌ನ ಮೇಲೆ ಹೋಗುವ ಮೊದಲು ಆಗುವ ಭಯವನ್ನು ನಿವಾರಿಸಲೂ, ಸಂದರ್ಶನಗಳನ್ನು ಎದುರಿಸುವುದಕ್ಕೂ ಮೊದಲು ನೆಟಿಕೆ ಮುರಿಯುವುವಂತೆ ಪ್ರೇರಣೆ ಆಗುವುದೂ ಸಾಮಾನ್ಯ. ಹಾಗಾಗಿ, ನೆಟಿಕೆ ಮುರಿಯುವುದು, ವ್ಯಕ್ತಿತ್ವದ ದೃಷ್ಟಿಯಿಂದ ನೋಡಿದಾಗ ನರ್ವಸ್‌ನೆಸ್‌ನ ಸಂಕೇತವಾಗಿಯೂ ಕಾಣಲಾಗುತ್ತದೆ.

Man Cracking His Knuckles on Blurred Background
Man Cracking His Knuckles on Blurred Background

ಸಂಧಿವಾತ ಬರದು

ಆದರೆ, ಸಮಾಜದಲ್ಲಿ ಸಾಕಷ್ಟು ಮಂದಿಯಲ್ಲಿ, ಈ ನೆಟಿಕೆ ಮುರಿಯುವುದರಿಂದ ಮುಂದೊಮ್ಮೆ ಸಂಧಿವಾತ, ಎಲುಬಿನ ತೊಂದರೆ ಬರುವ ಸಂಭವ ಹೆಚ್ಚಿದೆ ಎಂಬ ನಂಬಿಕೆಯಿದೆ. ನೆಟಿಕೆ ಎಂಬುದು ಸಾಮಾನ್ಯವಾಗಿ ಗಂಟುಗಳನ್ನು ಸದಾ ತೇವವಾಗಿಟ್ಟುಕೊಳ್ಳುವ ಸೈನೋವಿಯಲ್‌ ಎಂಬ ದ್ರವದಲ್ಲಿ ಇರುವ ಗುಳ್ಳೆಗಳು ಒಡೆದಾಗ ಆಗುವ ಶಬ್ದ. ಈ ದ್ರವದಲ್ಲಿ ಸಾರಜನಕ, ಆಮ್ಲಜನಕ, ಕಾರ್ಬನ್‌ ಡೈ ಆಕ್ಸೈಡ್‌ನ ಗುಳ್ಳೆಗಳನ್ನು ಬಿಡುಗಡೆ ಮಾಡುತ್ತವೆ. ನಾವು ನಮ್ಮ ಗಂಟುಗಳನ್ನು ಎಳೆದಾಗ ಹಾಗೂ ಮುರಿದಂತೆ ಮಾಡುವಾಗ ಅದು ʻಟಕ್‌ʼ ಎಂಬ ಸದ್ದಿನೊಂದಿಗೆ ಸಿಡಿಯುತ್ತದೆ. ಇದು ಹಲವರಿಗೆ ಸಂದುಗಳಲ್ಲಿರು ಟೈಟ್‌ನೆಸ್‌ ಅನ್ನು ಕಡಿಮೆ ಮಾಡುವ ಜೊತೆಗೆ ಆರಾಮದ ಅನುಭವ ನೀಡುತ್ತದೆ. ಆದರೆ ಎಲ್ಲರೂ ನಂಬಿರುವಂತೆ ಇದು ಸಂಧಿವಾತ ಅಥವಾ ಮೂಳೆಗಳ ಸಮಸ್ಯೆಯನ್ನು ತಂದೊಡ್ಡುವುದಿಲ್ಲ. ಸಂಧಿವಾತ ವಯಸ್ಸಾದಂತೆ ಹಾಗೂ ವಂಶವಾಹಿನಿಯಿಂದ ಬರುವ ಸಮಸ್ಯೆಯಾಗಿದ್ದು, ನೆಟಿಕೆ ಮುರಿಯುವುದರಿಂದ ಬರುವುದಿಲ್ಲ ಎಂದು ವೈದ್ಯರು ಸ್ಪಷ್ಟವಾಗಿ ಹೇಳುತ್ತಾರೆ. ಆದರೆ, ಸರಿಯಾಗಿ ನೆಟಿಕೆ ತೆಗೆಯದಿದ್ದರೆ, ಖಂಡಿತ ಉಳುಕು ಹಾಗೂ ಸಮಸ್ಯೆಯನ್ನು ತಂದೊಡ್ಡಬಹುದು. ಇಲ್ಲವಾದರೆ ಇದರಿಂದ ಏನೂ ಹಾನಿಯಿಲ್ಲ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Bluetooth Side Effects: ಬ್ಲೂಟೂತ್‌ ಹೆಡ್‌ಫೋನ್‌ ರೇಡಿಯೊ ಕಿರಣಗಳಿಂದ ಕ್ಯಾನ್ಸರ್‌?

Continue Reading
Advertisement
Dina bhavishya
ಭವಿಷ್ಯ8 mins ago

Dina Bhavishya : ಈ ದಿನ ಹತಾಶೆ ಹಾಗೂ ಆತುರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಬೇಡ

ಪ್ರಮುಖ ಸುದ್ದಿ4 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ಗೆ ತೆರೆ; ಅದ್ಧೂರಿ ಸಮಾರೋಪದಲ್ಲಿ ಮನು ಭಾಕರ್​, ಶ್ರೀಜೇಶ್​ ಭಾಗಿ

Paris Olympics 2024
ಕ್ರೀಡೆ6 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ ಮುಕ್ತಾಯ; ಅಮೆರಿಕಕ್ಕೆ ಅಗ್ರಸ್ಥಾನ; ಚೀನಾಕ್ಕೆ ಎರಡನೇ ಸ್ಥಾನ

Farooq Abdullah
ಪ್ರಮುಖ ಸುದ್ದಿ6 hours ago

Farooq Abdullah : ಗಡಿಯಲ್ಲಿನ ಭಯೋತ್ಪಾದನಾ ಕೃತ್ಯಗಳಲ್ಲಿ ಉಗ್ರರು, ಸೇನೆ ಶಾಮೀಲು; ವಿವಾದದ ಕಿಡಿ ಹೊತ್ತಿಸಿದ ಫಾರೂಕ್ ಅಬ್ದುಲ್ಲಾ

Hindenburg Report
ದೇಶ7 hours ago

Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

Hindenburg report
ಪ್ರಮುಖ ಸುದ್ದಿ7 hours ago

Hindenburg Report : ಹುರುಳಿಲ್ಲದ ಆರೋಪ; ಹಿಂಡೆನ್​ಬರ್ಗ್​ ವರದಿ ಬಗ್ಗೆ ಸೆಬಿ ಸ್ಪಷ್ಟನೆ

Paris Olympics 2024
ಕ್ರೀಡೆ8 hours ago

Paris Olympics 2024 : ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಐಫೆಲ್​ ಟವರ್​ ಏರಿ ಕುಳಿತ ಆಗಂತುಕ!

Self Harming
ಕರ್ನಾಟಕ8 hours ago

Self Harming: ಡೆತ್‌ ನೋಟ್‌ ಬರೆದಿಟ್ಟು ಜಮ್ಮು-ಕಾಶ್ಮೀರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

PR Sreejesh
ಕ್ರೀಡೆ9 hours ago

PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

Vinesh Phogat
ಕ್ರೀಡೆ9 hours ago

Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ3 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌