Sleep Tips: ಸೊಂಪಾದ ನಿದ್ದೆ ಬರಲು ಈ 5 ಗಿಡಗಳು ಮನೆಯೊಳಗಿದ್ದರೆ ಸಾಕು! - Vistara News

ಆರೋಗ್ಯ

Sleep Tips: ಸೊಂಪಾದ ನಿದ್ದೆ ಬರಲು ಈ 5 ಗಿಡಗಳು ಮನೆಯೊಳಗಿದ್ದರೆ ಸಾಕು!

ಕೆಲವು ಸಸ್ಯಗಳನ್ನು ನಮ್ಮ ಮಲಗುವ ಕೋಣೆಯಲ್ಲಿ ಬೆಳೆಸುವುದರಿಂದಲೂ ನಿದ್ದೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತವೆ ಸಂಶೋಧನೆಗಳು. ಹಾಗಾದರೆ ಯಾವ ಗಿಡಗಳನ್ನು ಬೆಡ್‌ರೂಂನಲ್ಲಿಟ್ಟುಕೊಳ್ಳುವುದರಿಂದ ನಿದ್ದೆಯನ್ನು ಉತ್ತಮ ಪಡಿಸಿಕೊಳ್ಳಬಹುದು ಎಂಬುದನ್ನು ನೋಡೋಣ.

VISTARANEWS.COM


on

plants in bedroom
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಲವರಿಗೆ ನಿದ್ದೆಯೇ ಸಮಸ್ಯೆ. ಇದಕ್ಕೆ ಕಾರಣ ಹಲವು. ಕೆಲಸದ ಒತ್ತಡ, ಏರುಪೇರಾದ ನಿದ್ದೆಯ ಸಮಯ, ವ್ಯಾಯಾಮವಿಲ್ಲದ ಆಲಸಿ ಜೀವನ, ಬದಲಾದ ಆಹಾರ ಶೈಲಿ, ಅತಿಯಾದ ವ್ಯಾಯಾಮ ಇತ್ಯಾದಿ ಇತ್ಯಾದಿ ಕಾರಣಗಳ ಜೊತೆಗೆ ಬೇರೆ ಹಲವಾರು ವಿಚಾರಗಳು ನಮ್ಮ ನಿದ್ದೆಯ ಸಮಸ್ಯೆಗೆ (sleep tips) ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕಾರಣವಾಗಿರುತ್ತದೆ. ಆದರೆ, ಅದನ್ನು ಅರಿತುಕೊಳ್ಳುವಷ್ಟರಲ್ಲಿ ಸಮಯ ಮುಂದೆ ಸಾಗಿರುತ್ತದೆ. ಸಮಸ್ಯೆ ಉಲ್ಬಣಿಸುವ ತೊಂದರೆಯೂ ಇದೆ. ಅದಕ್ಕಾಗಿಯೇ ಇಂಥ ಸಮಸ್ಯೆಗಳನ್ನು ಸಮಸ್ಯೆಯೇ ಅಲ್ಲ ಎಂಬಂತೆ ನೋಡುವುದೂ ತಪ್ಪಾಗುತ್ತದೆ. ಆಗಾಗ ಇಂಥದ್ದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವುದೂ (health tips) ಮುಖ್ಯವಾಗುತ್ತದೆ.

ಇಂಥ ನಿದ್ದೆಯ ಸಮಸ್ಯೆಗೆ ನಮ್ಮಲ್ಲೇ ಕೆಲವು ಪರಿಹಾರೋಪಾಯಗಳ ಪೈಕಿ ಕೆಲವು ಸಸ್ಯಗಳನ್ನು ನಮ್ಮ ಮಲಗುವ ಕೋಣೆಯಲ್ಲಿ ಬೆಳೆಸುವುದರಿಂದಲೂ ನಿದ್ದೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತವೆ ಸಂಶೋಧನೆಗಳು. ಕೆಲವು ಬಗೆಯ ಸಸ್ಯಗಳು ನಮ್ಮ ಮೂಡ್‌ ಹಾಗೂ ಆರೋಗ್ಯದ ಮೇಲೆ ಪಾಸಿಟಿವ್‌ ಪರಿಣಾಮ ಬೀರುತ್ತದಂತೆ. ಇವುಗಳನ್ನು ಬೆಳೆಸುವ ಮೂಲಕ ಬೇಗನೆ ನಾವು ನಿದ್ದೆಗೆ ಜಾರುತ್ತೇವೆ. ಹಾಗಾಗಿ, ನಿದ್ದೆಯ ಸಮಸ್ಯೆಯಲ್ಲಿ ನಿದ್ದೆಯ ತೊಂದರೆಯನ್ನು ಕಡಿಮೆ ಮಾಡಬಹುದಂತೆ. ಹಾಗಾದರೆ ಯಾವ ಗಿಡಗಳನ್ನು ಬೆಡ್‌ರೂಂನಲ್ಲಿಟ್ಟುಕೊಳ್ಳುವುದರಿಂದ ನಿದ್ದೆಯನ್ನು ಉತ್ತಮಪಡಿಸಿಕೊಳ್ಳಬಹುದು ಎಂಬುದನ್ನು ನೋಡೋಣ.

1. ಮಲ್ಲಿಗೆ: ಮಲ್ಲಿಗೆ ಕೇವಲ ಒಂದು ಬಿಳಿಯ ಹೂವಷ್ಟೇ ಅಲ್ಲ.  ಇದಕ್ಕೊಂದು ಅತ್ಯದ್ಭುತವಾದ ತನ್ನದೇ ಆದ ವಿಶೇಷ ಘಮವಿದೆ. ಇದರ ಘಮಕ್ಕೆ ಮನ ಸೋಲದೆ ಇದ್ದವರು ಯಾರಿದ್ದಾರು ಹೇಳಿ. ಮಲ್ಲಿಗೆಯ ಪರಿಮಳಕ್ಕೆ ನಮ್ಮ ಮೂಡನ್ನು ಇದ್ದಕ್ಕಿದ್ದಂತೆ ಉತ್ತಮಪಡಿಸುವ ಶಕ್ತಿಯಿದೆ. ಅದಕ್ಕೇ, ಮಲ್ಲಿಗೆಯನ್ನು ಪರಿಮಳಯುಕ್ತ ತೈಲಗಳ ತಯಾರಿಕೆಯಲ್ಲಿ ಬಳಸುತ್ತಾರೆ ಹಾಗೂ ಇಂತಹ ಎಣ್ಣೆಯನ್ನು ಮಾನಸಿಕವಾಗಿ ಚೈತನ್ಯ ನೀಡಲು, ಒತ್ತಡವನ್ನು ಕಡಿಮೆ ಮಾಡಲು ಬಹಳ ಸಂದರ್ಭಗಳಲ್ಲಿ ಅರೋಮಾ ಥೆರಪಿಯಲ್ಲೂ ಬಳಸಲಾಗುತ್ತದೆ. ಮಲ್ಲಿಗೆಯ ಗಿಡವನ್ನು ಬೆಳೆಸುವುದು ಕಷ್ಟವೇನಲ್ಲ. ಪುಟ್ಟ ಕುಂಡಗಳಲ್ಲೂ ಇದನ್ನು ಸುಲಭವಾಗಿ ಬೆಳೆಸಬಹುದು. ಕಿಟಕಿ ಬದಿಯಲ್ಲಿ, ಬೆಡ್‌ಸೈಡ್‌ ಟೇಬಲ್‌ ಮೇಲೆ ಮಲ್ಲಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಇದು ನಮ್ಮ ದುಗುಡದ ಮನಸ್ಥಿತಿಯನ್ನು ಶಾಂತಗೊಳಿಸಿ ನಮ್ಮನ್ನು ರಿಲ್ಯಾಕ್ಸ್‌ ಮಾಡುತ್ತದೆ. ಹಾಗಾಗಿ ಇದು ಉತ್ತಮ ನಿದ್ದೆಯನ್ನೂ ತರಿಸುತ್ತದೆ.

2. ನಾಗದಾಳೆ (ಸ್ನೇಕ್‌ ಪ್ಲಾಂಟ್‌): ನಾಗದಾಳೆ ಅಥವಾ ಸ್ನೇಕ್‌ ಪ್ಲಾಂಟ್‌ ಬೆಳೆಸುವುದುದ ಬಹಳ ಸುಲಭ. ಹೆಚ್ಚು ನೀರು ಹಾಗೂ ಪೋಷಣೆ ಬೇಡದ ಈ ಗಿಡದಿಂದ ಹಲವಾರು ಪ್ರಯೋಜನಗಳಿವೆ. ನೋಡಲು ಹಾವಿನಂತೆಯೇ ಕಾಣುವ ಕಾರಣ ಇದಕ್ಕೆ ಸುಲಭವಾಗಿ ಸ್ನೇಕ್‌ ಪ್ಲಾಂಟ್‌ ಎಂಬ ಹೆಸರೇ ಬಂದಿದೆ. ಇದನ್ನು ನೈಸರ್ಗಿಕ ಏರ್‌ ಪ್ಯೂರಿಫೈಯರ್‌ ಎಂದೂ ಕರೆಯುತ್ತಾರೆ. ಹೀಗೆ ಕರೆಯಲು ಕಾರಣವೂ ಇದೆ. ಇದು ಗಾಳಿಯಲ್ಲಿರುವ ವಿಷಕಾರಿ ಅನಿಲಗಳನ್ನು ತೆಗೆದು ಹಾಕಿ ವಾತಾವರಣವನ್ನು ಶುದ್ಧಗೊಳಿಸುತ್ತದೆ. ಇದನ್ನು ಕೋಣೆಯೊಳಗಿಟ್ಟರೆ ನಮಗೆ ರಾತ್ರಿಯಿಡೀ ಭರಪೂರ ಆಮ್ಲಜನಕದ ಪೂರೈಕೆಯೂ ಆಗುತ್ತದೆ. ಹೀಗಾಗಿಯೇ ಒಳ್ಳೆಯ ನಿದ್ದೆಯೂ ಆಗುತ್ತದೆ.

3. ಲೋಳೆಸರ (ಅಲೋವೆರಾ): ಆಲೊವೆರಾದ ಉಪಯೋಗಗಳು ಜನಜನಿತ. ಚರ್ಮಕ್ಕೆ ಸಂಬಂಧಿಸಿದಂತೆ ಇದರ ಪ್ರಯೋಜನಗಳು ಅನೇಕ. ಆದರೆ, ಇವು ನಮ್ಮ ರಾತ್ರಿಯ ನಿದ್ದೆಗೂ ಪ್ರಯೋಜನಕಾರಿ ಎಂಬ ವಿಷಯ ನಿಮಗೆ ಗೊತ್ತೇ? ಹೌದು. ಲೋಳೆಸರ ರಾತ್ರಿ ಆಮ್ಲಜನಕವನ್ನು ಬಿಡುಗಡೆ ಮಾಡಿ ಉತ್ತಮ ಪರಿಣಾಮಕಾರಿ ನಿದ್ದೆಗೆ ಸಹಾಯ ಮಾಡುತ್ತದೆ. ನಾಸಾದ ಸಂಶೋಧನೆಗಳ ಪ್ರಕಾರ, ಅತ್ಯುತ್ತಮ ಏರ್‌ ಪ್ಯೂರಿಫೈಯರ್‌ ಸಸ್ಯವೆಂದರೆ ಅಲೊವೆರಾವಂತೆ. ಇವುಗಳನ್ನು ಮನೆಯೊಳಗೆ ಬೆಳೆಸುವುದರಿಂದ ನಾವು ಉಸಿರಾಡುವ ಪರಿಸರದಲ್ಲಿ ಉತ್ತಮ ಗಾಳಿಯನು ಇರುವಂತೆ ಮಾಡಿ, ವಿಷಾನಿಲಗಳನ್ನು ಹೊಡೆದೋಡಿಸುತ್ತದೆ ಎಂದು ನಾಸಾವೇ ಹೇಳಿದೆ. ಜೊತೆಗೆ ಅತ್ಯಂತ ಸುಲಭವಾಗಿ ಬೆಳೆಸಬಹುದಾದ ಸಸ್ಯ ಇದಾಗಿದ್ದು, ಕಡಿಮೆ ಸೂರ್ಯನ ಬೆಳಕು ಹಾಗೂ ಕಡಿಮೆ ನೀರನ್ನು ಇವು ಉಪಯೋಗಿಸುತ್ತವೆ.

ಇದನ್ನೂ ಓದಿ: Sleep tips | ಚಳಿಗಾಲದಲ್ಲಿ ನಿದ್ದೆ ಬೇಕೆಂದರೆ ಈ ಏಳು ಸೂತ್ರಗಳನ್ನು ಮರೆಯದಿರಿ!

4. ಲ್ಯಾವೆಂಡರ್:‌ ಮಲ್ಲಿಗೆಯಂತೆಯೇ, ತನ್ನ ಪರಿಮಳದ ಕಾರಣದಿಂದ ಪ್ರಯೋಜನಗಳಿರುವ ಲ್ಯಾವೆಂಡರ್‌ ಶಾಂತಿ ಹಾಗೂ ನೆಮ್ಮದಿಯ ನಿದ್ದೆಯನ್ನು ನಮಗೆ ನೀಡುವಲ್ಲಿ ತನ್ನ ಕೊಡುಗೆ ಖಂಡಿತವಾಗಿಯೂ ನೀಡುತ್ತದೆ. ಇದರದೊಂದು ಗಿಡವನ್ನು ಕೋಣೆಯಲ್ಲಿ ಹೊಂದಿರುವುದರಿಂದ ಇಡೀ ದಿನ ಉಲ್ಲಾಸವನ್ನೂ, ಚೈತನ್ಯವನ್ನೂ ಪಡೆಯಬಹುದು. ಇದರಿಂದ ಒತ್ತಡ, ಮಾನಸಿಕ ಖಿನ್ನತೆ ಎಲ್ಲವೂ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೂ ಇದು ಒಳ್ಳೆಯದು. ಲ್ಯಾವೆಂಡರ್‌ ಹೂವಿನ ಸ್ಪ್ರೇಯನ್ನು ತಮ್ಮ ದಿಂಬಿನ ಮೇಲೆ, ಬೆಡ್‌ಶೀಟಿನ ಮೇಲೆ ಚುಮುಕಿಸಿ ನಿದ್ದೆ ಮಾಡುವವರೂ ಇದ್ದಾರೆ. ಸ್ನಾನದ ನೀರಿಗೆ ಲ್ಯಾವೆಂಡರ್‌ ಎಣ್ಣೆಯ ಹನಿ ಹಾಕಿ ಸ್ನಾನ ಮಾಡಿ ಮಲಗಿದರೆ ಸೊಂಪಾದ ನಿದ್ದೆ ಬರುತ್ತದೆಯಂತೆ. ಹಲವರು ಒಣಗಿಸಿಸ ಶೇಖರಿಸಿಟ್ಟ ಲ್ಯಾಂವೆಂಡರ್‌ ಹೂಗೊಂಚಲನ್ನು ಇದೇ ಕಾರಣಕ್ಕೆ ತಮ್ಮ ಬೆಡ್‌ರೂಂನಲ್ಲಿಡುತ್ತಾರೆ. ಆದರೆ, ಇವೆಲ್ಲಕ್ಕಿಂತ ಹೆಚ್ಚು ಪ್ರಯೋಜನಕಾರಿ, ಲ್ಯಾವೆಂಡರ್‌ ಗಿಡವನ್ನೇ ಮಲಗುವ ಕೋಣೆಯಲ್ಲಿ ಬೆಳೆಸುವುದು.

5. ಸ್ಪೈಡರ್‌ ಪ್ಲಾಂಟ್‌: ಸ್ನೇಕ್‌ ಪ್ಲಾಂಟ್‌ನಂತೆಯೇ ಕಾಣಿಸುವ ಆದರೆ, ಅದರಷ್ಟು ದಪ್ಪ ಎಲೆಯಲ್ಲದ ಗಿಡವಿದು. ಮನೆಯೊಳಗೆ ಬೆಳೆಸಬಹುದಾದ, ಕಡಿಮೆ ಪೋಷಣೆ ಬಯಸುವ ಇದು ಅತ್ಯಂತ ಬೆಸ್ಟ್‌ ನೈಸರ್ಗಿಕ ಏರ್‌ ಪ್ಯೂರಿಫೈಯರ್‌ ಗಿಡ. ಇದು ನಮ್ಮ ಕೋಣೆಯಲ್ಲಿರುವ ವಿಷಕಾರಿ ಅನಿಲಗಳನ್ನು ತೆಗೆದು ಹಾಕಿ ಶುದ್ಧ ಆಮ್ಲಜನಕದ ಪೂರೈಕೆಯನ್ನು ರಾತ್ರಿಯೂ ಮಾಡುತ್ತದೆ. ನಾಸಾದ ಸಂಶೋದನೆಯ ಪ್ರಕಾರ 24 ಗಂಟೆಗಳಲ್ಲಿ ಕೋಣೆಯೊಂದರ ವಿಷಕಾರಿ ಅನಿಲಗಳ ಶೇ 95ರಷ್ಟು ತೆಗೆದು ಹಾಕಿದ ಗಿಡ ಈ ಸ್ಪೈಡರ್‌ ಪ್ಲಾಂಟ್‌. ಹಾಗಾಗಿ ಇದನ್ನು ಕೋಣೆಯಲ್ಲಿ ಇಡುವುದರಿಂದ ಶುದ್ಧ ಗಾಳಿಯ ಜೊತೆಗೆ ಸೊಂಪಾದ ನಿದ್ದೆ ಖಚಿತ.

ಇದನ್ನೂ ಓದಿ: Lifestyle Tips: ಆರೋಗ್ಯಕರ ಒತ್ತಡರಹಿತ ಜೀವನಕ್ಕೆ ಸರಳ ಸಪ್ತಸೂತ್ರಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

Health Tips in Kannada: ಹೊರಗಿನ ಉಷ್ಣತೆಯ ಜೊತೆಗೆ ದೇಹಕ್ಕೂ ನಾವು ಉಷ್ಣ ಪ್ರಕೃತಿಯ ಆಹಾರವನ್ನೇ ನೀಡಿದರೆ ದೇಹಕ್ಕೆ ಬೇಸಿಗೆಯಲ್ಲಿ ಬೇಕಾದ ನಿಜವಾದ ತಂಪು ಸಿಗುವುದಿಲ್ಲ. ದೇಹವನ್ನು ತಂಪಾಗಿರಿಸಬೇಕೆಂದರೆ, ನಾವು ಬೇಸಗೆಯಲ್ಲಿ ಕೆಲವು ಆಹಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ಸೇವಿಸಬೇಕು. ಬನ್ನಿ, ನಿಮ್ಮ ದೇಹಕ್ಕೆ ಬೇಸಿಗೆಯಲ್ಲಿ ಬೇಕಾದ್ದೇನು ಎಂಬುದನ್ನು ನೋಡೋಣ.

VISTARANEWS.COM


on

These foods are really what our body needs in summer
Koo

ಬೆಂಗಳೂರು: ಬೇಸಿಗೆಯ ಬಿಸಿಗೆ ದೇಹ ತಂಪಾಗಬೇಕು. ಆಗಷ್ಟೇ ಆರೋಗ್ಯ ಸರಿಯಾಗುತ್ತದೆ (Health Tips in Kannada). ಹೊರಗಿನ ಉಷ್ಣತೆಯ ಜೊತೆಗೆ ದೇಹಕ್ಕೂ ನಾವು ಉಷ್ಣ ಪ್ರಕೃತಿಯ ಆಹಾರವನ್ನೇ ನೀಡಿದರೆ ದೇಹಕ್ಕೆ ಬೇಸಿಗೆಯಲ್ಲಿ ಬೇಕಾದ ನಿಜವಾದ ತಂಪು ಸಿಗುವುದಿಲ್ಲ. ದೇಹವನ್ನು ತಂಪಾಗಿರಿಸಬೇಕೆಂದರೆ, ನಾವು ಬೇಸಗೆಯಲ್ಲಿ ಕೆಲವು ಆಹಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ಸೇವಿಸಬೇಕು. ಬನ್ನಿ, ನಿಮ್ಮ ದೇಹಕ್ಕೆ ಬೇಸಿಗೆಯಲ್ಲಿ ಬೇಕಾದ್ದೇನು ಎಂಬುದನ್ನು ನೋಡೋಣ.

ಹೆಚ್ಚು ನೀರು ಸೇವಿಸಿ

ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚು ನೀರು ಬೇಕು. ಬಾಯಾರಿದಾಗಲೆಲ್ಲ ದೇಹಕ್ಕೆ ನೀರು ಕೊಡಲೇಬೇಖು. ಬೇಸಿಗೆಯ ಧಗೆ ಬಾಯಾರುವುದೂ ಕೂಡಾ ಹೆಚ್ಚು. ಇಂಥ ಸಂದರ್ಭದಲ್ಲಿ ಸಕ್ಕರೆ ಹೆಚ್ಚಿರುವ ಜ್ಯೂಸ್‌ಗಳ ಮೊರೆ ಹೋಗುವ ಬದಲು ಹೆಚ್ಚಾಗಿ ನೀರನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ದಿನಕ್ಕೆ ಕಡಿಮೆಯೆಂದರೂ ಎಂಟರಿಂದ ಹತ್ತು ಗ್ಲಾಸ್‌ ನೀರನ್ನು ನಾವು ಸೇವಸಲೇಬೇಕು.

ನೀರಿನಂಶ ಹೆಚ್ಚಿರುವ ಹಣ್ಣು ಸೇವಿಸಿ

ಬೇಸಿಗೆಯಲ್ಲಿ ಹಣ್ಣು ತಂದು ಹಣ್ಣಿಗೆ ಒಂದಷ್ಟು ಸಕ್ಕರೆ ಸುರಿದು ಜ್ಯೂಸ್‌ ಮಾಡಿ ಕುಡಿಯುವ ಬದಲು ಹಣ್ಣನ್ನು ಹಾಗೆಯೇ ಸೇವಿಸಿ. ಅಥವಾ ಹಣ್ಣಿನ ರಸ ಹಿಂಡಿಯೂ ಸೇವಿಸಬಹುದು. ಆದರೆ, ಈ ಆಯ್ಕೆಯನ್ನು ಮಾಡುವಾಗ ರಸಭರಿತ, ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಆಯ್ಕೆ ಮಾಡಿ. ಉದಾಹರಣೆಗೆ, ಬೇಸಿಗೆ ಬಂದ ಕೂಡಲೇ ಮಾರುಕಟ್ಟೆಗೆ ಬರುವ ಕಲ್ಲಂಗಡಿ, ಖರ್ಬೂಜ, ಲಿಚಿ, ಮಾವು, ಹಲಸು, ನಿಂಬೆ ಮತ್ತಿತರ ಹಣ್ಣುಗಳು. ಜೊತೆಗೆ ಸೌತೆಕಾಯಿಯಂತಹ ತರಕಾರಿಗಳು. ಇವುಗಳಲ್ಲಿ ಹೆಚ್ಚು ನೀರಿನಂಶ ಇದ್ದು, ಇವು ದೇಹವನ್ನು ತಂಪಾಗಿರಿಸುತ್ತವೆ. ಜೊತೆಗೆ ಪೋಷಕಾಂಶಗಳಿಂದಲೂ ಸಮೃದ್ಧವಾಗಿರುತ್ತವೆ.

ಇದನ್ನೂ ಓದಿ: Health Tips in Kannada: ಬೆಂಡೆಕಾಯಿ ನೀರನ್ನು ಕುಡಿಯೋದರಿಂದ ಏನೆಲ್ಲ ಲಾಭಗಳಿವೆ ತಿಳಿದುಕೊಳ್ಳಿ

ತಂಪಾಗಿರಿಸುವ ಮೂಲಿಕೆಗಳನ್ನು ಆಯ್ಕೆ ಮಾಡಿ

ದೇಹವನ್ನು ತಂಪಾಗಿರಿಸಲು, ಕೆಲವು ಮೂಲಿಕೆಗಳೂ ಸಹಾಯ ಮಾಡುತ್ತವೆ. ಉದಾಹರಣೆಗೆ ಪುದಿನ, ಕೊತ್ತಂಬರಿ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು, ಬಡೇಸೋಂಪು, ಜೀರಿಗೆ, ಕೊತ್ತಂಬರಿ ಇತ್ಯಾದಿಗಳಲ್ಲಿ ತಂಪುಕಾರಕ ಗುಣಗಳಿವೆ. ಇವುಗಳನ್ನು ಆಹಾರಗಳನ್ನು ಬಳಸಿ. ಚಹಾ ಮಾಡಿ ಕುಡಿಯಿರಿ. ಮಜ್ಜಿಗೆ ಅಥವಾ ಇತರ ತಂಪು ಪೇಯಗಳಿಗೆ ಹಾಕಿ.

ಮಸಾಲೆಯುಕ್ತ ಆಹಾರಗಳಿಂದ ದೂರವಿರಿ

ಮಸಾಲೆಯುಕ್ತ ಆಹಾರಗಳು ದೇಹವನ್ನು ಬಿಸಿಯಾಗಿಸುತ್ತವೆ. ಆದರೂ ನಿಮಗೆ ಇಂತಹ ಆಹಾರಗಳು ಬೇಕೆನಿಸಿದರೆ, ಕೊಂಚ ಕಡಿಮೆ ಮಸಾಲೆಯ ಆಹಾರಗಳನ್ನು ಬಳಸಿ. ಆದರೆ, ಖಾರವಾದ ತಿನಿಸುಗಳು ಅಥವಾ ಅತಿಯಾದ ಮಸಾಲೆ ಹಾಕಿದ ಊಟ ಬೇಸಿಗೆಯಲ್ಲಿ ಒಳ್ಳೆಯದಲ್ಲ.

ಎಲೆಕ್ಟ್ರೋಲೈಟ್‌ಯುಕ್ತ ಆಹಾರ ಸೇವಿಸಿ

ಎಲೆಕ್ಟ್ರೋಲೈಟ್‌ಗಳಾದ ಸೋಡಿಯಂ, ಪೊಟಾಶಿಯಂ, ಮೆಗ್ನೀಶಿಯಂ ಹೆಚ್ಚಿರುವ ಆಹಾರಗಳಾದ, ಬಾಳೆಹಣ್ಣು, ಎಳನೀರು, ಸೊಪ್ಪು, ಮೊಸರು, ಮಜ್ಜಿಗೆ ಮತ್ತಿತರ ಆಹಾರಗಳನ್ನು ಸೇವಿಸಿ. ಇದರಿಂದ ದೇಹಕ್ಕೆ ಬೇಕಾದ ನೀರಿನಂಶದ ಜೊತೆಗೆ ಶಕ್ತಿ ಸಾಮರ್ಥ್ಯವೂ ಹೆಚ್ಚುತ್ತದೆ.

ಆಲ್ಕೋಹಾಲ್‌, ಕೆಫೀನ್ ಕಡಿಮೆ ಮಾಡಿ

ಬೇಸಿಗೆಯಲ್ಲಿ ಕೆಫೀನ್‌ಯುಕ್ತ ಪೇಯಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಆಲ್ಕೋಹಾಲ್‌ ಬಿಟ್ಟರೆ ಒಳ್ಳೆಯದು. ನೀರು, ಹರ್ಬಲ್‌ ಚಹಾಗಳು, ಕಷಾಯ, ಹಣ್ಣಿನ ಪಾನಕಗಳು ಇತ್ಯಾದಿಗಳನ್ನು ಸೇವಿಸಿ. ರಾಗಿ ಅಂಬಲಿ, ಬಾರ್ಲಿ ನೀರು, ಬಾದಾಮಿ ಹಾಲು, ಮಜ್ಜಿಗೆ ನೀರು ಇತ್ಯಾದಿಗಳು ದೇಹವನ್ನು ತಂಪು ಮಾಡುತ್ತವೆ.

ಸಾಮಾನ್ಯ ಉಷ್ಣತೆಯ ಅಥವಾ ತಂಪಾದ ಆಹಾರ ಸೇವಿಸಿ

ಕೋಣೆಯ ಉಷ್ಣತೆಯ ಆಹಾರಗಳನ್ನು ಹೆಚ್ಚು ತಿನ್ನಿ. ಸಲಾಡ್‌, ತಂಬುಳಿ, ತಣ್ಣಗೆ ಮಾಡಿದ ಸೂಪ್‌ಗಳು, ಫ್ರುಟ್‌ ಸಲಾಡ್‌ಗಳು ಇತ್ಯಾದಿಗಳು ಒಳ್ಳೆಯದು. ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದು, ಅಥವಾ ಹದ ಬಿಸಿಯ ಆಹಾರಗಳಾದರೆ ಸರಿ. ಬಿಸಿ ಬಿಸಿಯಾಗಿ ತಿನ್ನಬೇಕಾದ ಅಗತ್ಯವಿಲ್ಲ. ತಂಪಾದ ಆಹಾರವೆಂದರೆ, ಐಸ್‌ಕ್ರೀಂ ಅಲ್ಲ ಎಂಬುದು ನೆನಪಿರಲಿ!

Continue Reading

ಆರೋಗ್ಯ

World Hypertension Day: ಇಂದು ಜಾಗತಿಕ ರಕ್ತದೊತ್ತಡ ದಿನ; ಈ ಸಮಸ್ಯೆಯ ಅರಿವು ನಿಮಗೆಷ್ಟಿದೆ?

World Hypertension Day: ತಲೆನೋವು, ತಲೆ ಸುತ್ತು, ಎದೆನೋವು, ಉಸಿರಾಡಲು ಕಷ್ಟವಾಗುವುದು, ಆತಂಕ, ಗೊಂದಲ, ಹೊಟ್ಟೆ ತೊಳೆಸುವುದು, ವಾಂತಿ, ದೃಷ್ಟಿ ಮಂಜಾಗುವುದು, ಅನಿಯಂತ್ರಿತ ಎದೆ ಬಡಿತ ಮುಂತಾದ ಲಕ್ಷಣಗಳು ಕಂಡುಬಂದರೆ, ರಕ್ತದೊತ್ತಡವನ್ನು ತಪ್ಪದೇ ಪರೀಕ್ಷಿಸಿಕೊಳ್ಳಿ. ಜನರಲ್ಲಿ ಬಿಪಿ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದಲೇ ಮೇ 17ರಂದು ಜಾಗತಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತದೆ.

VISTARANEWS.COM


on

World Hypertension Day Today is Global Blood Pressure Day
Koo

ಬೆಂಗಳೂರು: ಶೀತ, ಜ್ವರ, ಕೆಮ್ಮು ಮುಂತಾದ ಸೋಂಕು ರೋಗಗಳು ಇಂದಿಲ್ಲದಿದ್ದರೂ ನಾಳೆಗೆ ಬಂದುಬಿಡಬಹುದು. ಆದರೆ ಜೀವನಶೈಲಿಯಿಂದ ಬರುವ ರೋಗಗಳು (World Hypertension Day) ಹಾಗಲ್ಲ, ನಮಗೇ ತಿಳಿಯದಂತೆ ನಾವೆಂದೋ ಬಿತ್ತಿದ ಬೀಜ, ಆಳವಾದ ಬೇರುಗಳನ್ನು ಬಿಟ್ಟ ಮೇಲೆಯೇ ಮೊಳಕೆ ಕಾಣುವುದು. ಉದಾ, ರಕ್ತದೊತ್ತಡದಂಥ ಸಮಸ್ಯೆಯನ್ನೇ ಗಮನಿಸಿದರೆ, ಎಂದಿನಿಂದ ಪ್ರಾರಂಭವಾಯಿತು ಎನ್ನುವುದೇ ತಿಳಿಯುವುದಿಲ್ಲ. ಆದರೆ ದೀರ್ಘಕಾಲದಿಂದಲೇ ಒತ್ತಡದ ಬದುಕು, ವ್ಯಾಯಾಮ ರಹಿತ ಜೀವನ, ಅನಾರೋಗ್ಯಕರ ಆಹಾರ ಮುಂತಾದ ಕಾರಣಗಳು ಈ ಬೀಜಕ್ಕೆ ನೀರು, ಗೊಬ್ಬರ ಹಾಕುತ್ತಲೇ ಇರುತ್ತವೆ. ಇದರಿಂದಲೇ ಹೃದಯದ ಸಮಸ್ಯೆಗಳು ಹುಟ್ಟಿಕೊಳ್ಳುವುದು. ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಮೇ ತಿಂಗಳ ಹದಿನೇಳನೇ ದಿನವನ್ನು ಜಾಗತಿಕ ರಕ್ತದೊತ್ತಡದ ದಿನವೆಂದು ಘೋಷಿಸಲಾಗಿದೆ. ರಕ್ತದೊತ್ತಡ ಅಥವಾ ಬಿಪಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಬಿಪಿ ಎಂದರೆ?

ಬಿಪಿ ಏರಿಸಿಕೊಳ್ಳುವುದು ಎಂದು ಆಡು ಮಾತಿನಲ್ಲಿ ಹೇಳುವುದು ಸಾಮಾನ್ಯ. ಹಾಗೆಂದರೆ ಏನು? ರಕ್ತನಾಳಗಳಲ್ಲಿ ಪ್ರವಹಿಸುವ ರಕ್ತವು ನಿಗದಿತ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಹರಿಯುತ್ತಿದ್ದರೆ ಅದನ್ನು ರಕ್ತದ ಏರೊತ್ತಡ ಅಥವಾ ಬಿಪಿ ಎಂದು ಕರೆಯಲಾಗುತ್ತದೆ. ಇಂದಿನ ಜೀವನಶೈಲಿಯಲ್ಲಿ ವಯಸ್ಸು, ಲಿಂಗ ಮುಂತಾದ ಯಾವುದೇ ತಾರತಮ್ಯವಿಲ್ಲದೆ ಯಾರನ್ನೂ ಕಾಡಬಹುದಾದ ಸಮಸ್ಯೆಯಿದು. ಕೇವಲ ರಕ್ತದ ಏರೊತ್ತಡ ಎಂಬುದರಿಂದ ಆರಂಭವಾಗುವ ಸಮಸ್ಯೆಯು ಕ್ರಮೇಣ ಹೃದ್ರೋಗ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.

ಮೊದಲಿಗೆ ತನ್ನ ಇರುವಿಕೆಯನ್ನು ಅಷ್ಟಾಗಿ ಪ್ರಕಟಿಸದ ಈ ಸಮಸ್ಯೆಯು, 180/120ರ ಆಜೂಬಾಜು ಬಿಪಿ ತಲುಪುತ್ತಿದ್ದಂತೆ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಸಾಮಾನ್ಯವಾಗಿ- ತಲೆನೋವು, ತಲೆ ಸುತ್ತು, ಎದೆನೋವು, ಉಸಿರಾಡಲು ಕಷ್ಟವಾಗುವುದು, ಆತಂಕ, ಗೊಂದಲ, ಹೊಟ್ಟೆ ತೊಳೆಸುವುದು, ವಾಂತಿ, ದೃಷ್ಟಿ ಮಂಜಾಗುವುದು, ಅನಿಯಂತ್ರಿತ ಎದೆ ಬಡಿತ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಒಂದು ಅಂದಾಜಿನ ಪ್ರಕಾರ, ಸುಮಾರು ಶೇ. ೪೬ರಷ್ಟು ಮಂದಿಗೆ ತಮಗೆ ರಕ್ತದೊತ್ತಡ ಇರುವ ವಿಷಯವೇ ತಿಳಿದಿರುವುದಿಲ್ಲ. ಹಾಗಾಗಿ ಇಂಥ ಯಾವುದೇ ಲಕ್ಷಣಗಳು ಕಾಣುವವರೆಗೆ ಕಾಯದೆ, ನಿಯಮಮಿತವಾಗಿ ಬಿಪಿ ಪರೀಕ್ಷಿಸಿಕೊಳ್ಳುವುದು ಅಗತ್ಯ.

ಇದನ್ನೂ ಓದಿ: Swati Maliwal: ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆಆರೋಪಿ ಕೇಜ್ರಿವಾಲ್‌ ಜೊತೆ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ

ಕಡಿಮೆ ಮಾಡುವುದು ಹೇಗೆ?

ಇದನ್ನು ಸಂಪೂರ್ಣ ಹತೋಟಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ಜೀವನಶೈಲಿಯಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡರೆ, ರಕ್ತದ ಏರೊತ್ತಡವನ್ನು ನಿಯಂತ್ರಣಕ್ಕೆ ತರಬಹುದು. ಮೊದಲಿಗೆ ಸೋಡಿಯಂ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಂದರೆ ಉಪ್ಪು ಹೆಚ್ಚು ತಿನ್ನಬೇಡಿ. ಇದು ನೇರವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಯಾವುದೇ ಸಂಸ್ಕರಿತ ಆಹಾರಗಳು ಬೇಡ. ಸಾಫ್ಟ್‌ ಡ್ರಿಂಕ್‌, ಚಿಪ್ಸ್‌, ಪ್ಯಾಕೆಟ್‌ ಅಥವಾ ಕ್ಯಾನ್ಡ್‌ ಆಹಾರಗಳಲ್ಲಿ ಉಪ್ಪಿನ ಅಂಶ ಹೆಚ್ಚಿರುತ್ತದೆ. ಪ್ರಿಸರ್ವೇಟಿವ್‌ ಬಳಸಿದ ಬಹುತೇಕ ಆಹಾರಗಳಲ್ಲಿ ಸೋಡಿಯಂ ಪ್ರಮಾಣ ಹೆಚ್ಚು. ಹಾಗಾಗಿ ತಾಜಾ ಆಹಾರಗಳು, ಸತ್ವಭರಿತ ಆಹಾರಗಳ ಸೇವನೆಯತ್ತ ಗಮನ ನೀಡಿ. ಆಹಾರದ ರುಚಿ ಹೆಚ್ಚಿಸುವುದಕ್ಕೆ ಉಪ್ಪು ಹೆಚ್ಚು ಉಪಯೋಗಿಸುವ ಬದಲು ಹರ್ಬ್‌ಗಳ ಬಳಕೆಯನ್ನು ಹೆಚ್ಚಿಸಿ.

ಎಂಥಾ ಕೊಬ್ಬು?

ನಿತ್ಯ ತಿನ್ನುವ ಕೊಬ್ಬಿನ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆಯೂ ಗಮನ ಅಗತ್ಯ. ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವ ಆಹಾರಗಳ ಬದಲಿಗೆ ಆರೋಗ್ಯಕರ ಕೊಬ್ಬಿರುವ ಎಣ್ಣೆ ಬೀಜಗಳು, ಅವಕಾಡೊ ಮುಂತಾದವು ದೇಹಕ್ಕೆ ಹಿತವಾಗುತ್ತವೆ. ಬಳಸುವ ಎಣ್ಣೆಯ ಬಗ್ಗೆಯೂ ಸರಿಯಾದ ಅರಿವು ಅಗತ್ಯ. ಕರಿದ ತಿಂಡಿಗಳನ್ನು ದೂರ ಮಾಡಿದಷ್ಟೂ ಒಳ್ಳೆಯದು. ಬದಲಿಗೆ, ಋತುಮಾನಕ್ಕೆ ದೊರೆಯುವ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತ.

ವ್ಯಾಯಾಮ

ಹಾಗೆನ್ನುತ್ತಿದ್ದಂತೆ ಜಿಮ್‌ನಲ್ಲಿ ಬೆವರಿಳಿಸುವುದು, ಉಸಿರುಗಟ್ಟಿ ರಸ್ತೆ ಮೇಲೆ ಓಡುವವರೇ ನೆನಪಾಗಬಹುದು. ಇಂಥವೆಲ್ಲ ಮಾತ್ರವೇ ವ್ಯಾಯಾಮವಲ್ಲ. ನಡಿಗೆ, ಸೈಕಲ್‌ ಹೊಡೆಯುವುದು, ಈಜು, ನೃತ್ಯ, ಯಾವುದೇ ಆಟಗಳು, ಯೋಗ, ಏರೋಬಿಕ್ಸ್‌ ಮುಂತಾದ ಯಾವುದೇ ದೈಹಿಕ ಚಟುವಟಿಕೆಗಳು ವಾರದಲ್ಲಿ ಕನಿಷ್ಟ ೫ ದಿನವಾದರೂ ಇರಲಿ. ದೇಹದ ತೂಕ ಹೆಚ್ಚಾಗಿದ್ದರೆ, ಅದನ್ನು ಆದ್ಯತೆಯ ಮೇರೆಗೆ ಇಳಿಸಿಕೊಳ್ಳಿ.

ತಪಾಸಣೆ

ಕಾಲಕಾಲಕ್ಕೆ ವೈದ್ಯರಲ್ಲಿ ಹೋಗಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ. ನಿಯಂತ್ರಣಕ್ಕೆ ಔಷಧಿ ಅಗತ್ಯವಾಗಿದ್ದರೆ, ಅದನ್ನು ಮರೆಯಬೇಡಿ. ಧೂಮಪಾನ, ಆಲ್ಕೊಹಾಲ್‌ನಂಥ ಚಟಗಳಿದ್ದರೆ, ಅವುಗಳ ಹೊರತಾಗಿ ಬದುಕುವ ಮಾರ್ಗವಿದೆ ಎಂಬುದನ್ನು ತಿಳಿಯಿರಿ. ಮಾನಸಿನ ಒತ್ತಡ ದೂರ ಮಾಡಲು ಆರೋಗ್ಯಕರ ಮಾರ್ಗಗಳತ್ತ ಗಮನ ಹರಿಸಿ.

Continue Reading

ದೇಶ

ಶಾರುಖ್‌ ಖಾನ್‌ ಜಾಹೀರಾತು ನೋಡಿ ಗುಟ್ಕಾ ತಿಂದ ಮಕ್ಕಳು; ನಟ ಸಾಯಲ್ಲ, ನಾವು ಸಾಯ್ತೀವಾ ಅಂದರು!

ಮಕ್ಕಳು ಗುಟ್ಕಾ ತಿಂದು, ಅದರ ಪರಿಣಾಮ ಗೊತ್ತಿರದೆ ಮಾತನಾಡಿದ ವಿಡಿಯೊವನ್ನು ಸತ್ಯ, ನ್ಯಾಯ, ಪ್ರೀತಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ನೀವು ಗುಟ್ಕಾ ತಿಂತಿದ್ದೀರಲ್ಲ, ಸತ್ತು ಹೋದ್ರೆ ಏನ್‌ ಗತಿ” ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಕೇಳುತ್ತಾರೆ. ಆಗ ಮಕ್ಕಳು, “ಶಾರುಖ್‌ ಖಾನ್‌ ಸತ್ತಿಲ್ಲ, ನಾವು ಸಾಯ್ತೀವಾ” ಎಂದಿದ್ದಾರೆ.

VISTARANEWS.COM


on

Shah Rukh Khan
Koo

ನವದೆಹಲಿ: ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ ಹೀರೊಗಳು, ಕ್ರಿಕೆಟಿಗರು, ಸೆಲೆಬ್ರಿಟಿಗಳು (Celebrities) ನೂರಾರು ಉತ್ಪನ್ನಗಳ ಜಾಹೀರಾತುಗಳಲ್ಲಿ (Advertisements) ಅಭಿನಯಿಸುವ ಮೂಲಕ, ಆ ಉತ್ಪನ್ನಗಳನ್ನೂ ತಾವೇ ಬಳಸಿದ್ದೇವೆ ಎಂದು ಹೇಳುವ ಮೂಲಕ ಅಥವಾ ನಟಿಸುವ ಮೂಲಕ ಕೋಟ್ಯಂತರ ಜನರನ್ನು ಸೆಳೆಯುತ್ತಾರೆ. ಇನ್ನು, ಅಭಿಮಾನಿಗಳು, ಅನುಯಾಯಿಗಳು ಕೂಡ ನೆಚ್ಚಿನ ನಟ, ಕ್ರಿಕೆಟಿಗನ ಜಾಹೀರಾತು ನೋಡಿ, ಆ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಹೀಗೆ ನಟರು ಸೇರಿ ಸೆಲೆಬ್ರಿಟಿಗಳ ಜಾಹೀರಾತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೌದು, ಶಾರುಖ್‌ ಖಾನ್‌ ಅವರ ಪಾನ್‌ ಮಸಾಲ (Pan Masala) ಜಾಹೀರಾತಿನಿಂದ ಪ್ರಚೋದನೆಗೊಂಡು ಗುಟ್ಕಾ ಸೇವಿಸಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಮಕ್ಕಳು ಗುಟ್ಕಾ ತಿಂದು, ಅದರ ಪರಿಣಾಮ ಗೊತ್ತಿರದೆ ಮಾತನಾಡಿದ ವಿಡಿಯೊವನ್ನು ಸತ್ಯ, ನ್ಯಾಯ, ಪ್ರೀತಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ನೀವು ಗುಟ್ಕಾ ತಿಂತಿದ್ದೀರಲ್ಲ, ಸತ್ತು ಹೋದ್ರೆ ಏನ್‌ ಗತಿ” ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಕೇಳುತ್ತಾರೆ. ಆಗ ಮಕ್ಕಳು, “ಶಾರುಖ್‌ ಖಾನ್‌ ಸತ್ತಿಲ್ಲ, ನಾವು ಸಾಯ್ತೀವಾ” ಎಂದಿದ್ದಾರೆ. “ಶಾರುಖ್‌ ಖಾನ್‌ ಏಕೆ ಸಾಯುತ್ತಾರೆ” ಎಂಬ ಪ್ರಶ್ನೆಗೆ, “ಶಾರುಖ್‌ ಖಾನ್‌ ಗುಟ್ಕಾ ತಿಂತಾರಲ್ಲ, ಅವ್ರೇ ಸಾಯಲ್ಲ, ನಾವ್‌ ಹೇಗೆ ಸಾಯ್ತೀವಿ” ಎಂದಿದ್ದಾರೆ. ಅಷ್ಟೇ ಅಲ್ಲ, “ಶಾರುಖ್ ಖಾನ್‌ ಗುಟ್ಕಾ ತಿನ್ನೋದು ನಿಮಗೆ ಹೇಗೆ ಗೊತ್ತು” ಎಂದು ಕೇಳಿದ್ದಕ್ಕೆ, “ಜಾಹೀರಾತಿನಲ್ಲಿ ನೋಡಿದ್ದೀವಲ್ಲ” ಎಂದಿದ್ದಾರೆ.

ಶಾರುಖ್‌ ಖಾನ್‌ ಪಾನ್‌ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದನ್ನೇ ಈ ಮಕ್ಕಳು ನಿಜ ಎಂದು ಭಾವಿಸಿದ್ದಾರೆ. ಶಾರುಖ್‌ ಖಾನ್‌ ಗುಟ್ಕಾ ತಿಂತಾರೆ, ಅವರಿಗೇ ಏನೂ ಆಗಲ್ಲ. ಇನ್ನು ನಮಗೆ ಏನಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದು, ಚಿಕ್ಕ ವಯಸ್ಸಿನಲ್ಲೇ ಗುಟ್ಕಾ ತಿನ್ನೋದನ್ನು ಕಲಿತಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳ ಜಾಹೀರಾತುಗಳಲ್ಲಿ ನಟಿಸುವಾಗ, ಆ ಉತ್ಪನ್ನದಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮ ಏನು ಎಂಬುದನ್ನು ಈ ವಿಡಿಯೊ ನೋಡಿ ಕಲಿಯಬೇಕಿದೆ ಎಂದು ಆಗ್ರಹಿಸಿದ್ದಾರೆ.

“ಸೆಲೆಬ್ರಿಟಿಗಳು ನಮ್ಮ ಕನ್ನಡದ ಕಣ್ಮಣಿ ಡಾಕ್ಟರ್ ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರಂತಹವರನ್ನು ನೋಡಿ ಕಲಿಯಬೇಕು. ಥೂ ನಿಮ್ಮ, ನಿಮಗೆಲ್ಲ ಇದನ್ನು ನೋಡಿ ನಾಚಿಕೆ ಆಗಬೇಕು. ಇಂತಹ ಜಾಹೀರಾತು ಕೊಟ್ಟು ಯುವ ಜನತೆಯ ದಾರಿ ತಪ್ಪಿಸುತಿರುವ ನಿಮಗೆ ಧಿಕ್ಕಾರವಿರಲಿ” ಎಂಬುದಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಕಮೆಂಟ್‌ ಮಾಡಿದ್ದು, “ಈ ಗುಟ್ಕಾ ತಿಂದು ಮಕ್ಕಳು ಏನಾದರೂ ಮೃತಪಟ್ಟರೆ ಆಯಾ ಜಾಹೀರಾತು ಕಂಪನಿ ಹಾಗೂ ಜಾಹೀರಾತಿನಲ್ಲಿ ನಟಿಸುವ ಸೆಲೆಬ್ರಿಟಿಗಳು ಪರಿಹಾರ ನೀಡಬೇಕು ಎಂಬ ಕಾನೂನು ಬಂದರೆ ಮಾತ್ರ ಇದೆಲ್ಲ ಸರಿಯಾಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: IPL 2024 : “ಶಾರುಖ್​ ಎಂದೂ ನಮ್ಮನ್ನು ಪ್ರಶ್ನಿಸಿಲ್ಲ”, ಎಲ್​ಎಸ್​​ಜಿ ಮಾಲೀಕನಿಗೆ ತಿರುಗೇಟು ಕೊಟ್ಟ ಗಂಭೀರ್​

Continue Reading

ದೇಶ

Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

Medicine Price: ರಕ್ತದ ಗ್ಲುಕೋಸ್‌ ಕಡಿಮೆಯಾದಾಗ ಬಳಿಸುವ Dapagliflozin Metformin Hydrochlorideಗೆ ಮೊದಲು 30 ರೂ. ಇತ್ತು. ಈಗ ಅದಕ್ಕೆ 16 ರೂ. ನಿಗದಿಪಡಿಸಲಾಗಿದೆ. ಅಸ್ತಮಾ ಹಾಗೂ ಶ್ವಾಸಕೋಶದ ಸಮಸ್ಯೆ ಇದ್ದವರು ತೆಗೆದುಕೊಳ್ಳವ ಬ್ಯೂಡ್‌ಸೊನೈಡ್‌ ಹಾಗೂ ಫಾರ್ಮೊಟೆರೋಲ್‌ನ ಒಂದು ಡೋಸ್‌ ಬೆಲೆಯನ್ನು 6.62 ರೂ.ಗೆ ಇಳಿಕೆ ಮಾಡಲಾಗಿದೆ.

VISTARANEWS.COM


on

Medicine Price
Koo

ನವದೆಹಲಿ: ದೇಶದಲ್ಲಿ ಅಗತ್ಯ ಔಷಧಗಳ ಬೆಲೆ ಏರಿಕೆ ಕುರಿತು ವದಂತಿಗಳು ಹರಡಿದ ಬೆನ್ನಲ್ಲೇ ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್‌ಗಳ ಬೆಲೆಯನ್ನು ಕೇಂದ್ರ ಸರ್ಕಾರ (Central Government) ಇಳಿಸಿದೆ. ಔಷಧಗಳ ಬೆಲೆ ಇಳಿಕೆ (Medicine Price) ಮಾಡಿ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (NPPA) ಆದೇಶ ಹೊರಡಿಸಿದೆ. ಇದರಿಂದ ದೇಶಾದ್ಯಂತ ಕೋಟ್ಯಂತರ ಜನರು ಕಡಿಮೆ ಬೆಲೆಗೆ ಔಷಧಗಳನ್ನು ಖರೀದಿಸಬಹುದಾಗಿದೆ.

ಯಾವ ಕಾಯಿಲೆಗಳ ಔಷಧ ಬೆಲೆ ಇಳಿಕೆ?

ಮಧುಮೇಹ, ಹೃದ್ರೋಗ, ಯಕೃತ್ತಿನ ಸಮಸ್ಯೆ, ಆ್ಯಂಟಿಬಯೋಟಿಕ್ಸ್‌, ಮಲ್ಟಿ ವಿಟಮಿನ್‌ ಸೇರಿ ಹಲವು ಔಷಧಗಳ ಬೆಲೆಯನ್ನು ಎನ್‌ಪಿಪಿಎ ಇಳಿಕೆ ಮಾಡಿದೆ. ಭಾರತದಲ್ಲಿ 10 ಕೋಟಿಗೂ ಅಧಿಕ ಮಂದಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಮಧುಮೇಹಿಗಳು ಇರುವ ದೇಶಗಳಲ್ಲಿ ಭಾರತವೂ ಸೇರಿದೆ. ಹಾಗಾಗಿ, ಸಕ್ಕರೆ ಕಾಯಿಲೆಗೆ ಬಳಸುವ ಮಾತ್ರೆಗಳು ಹಾಗೂ ಇನ್ಸುಲಿನ್‌ಗಳ ಬೆಲೆಯನ್ನು ಇಳಿಕೆ ಮಾಡಿರುವುದು ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.

medicines

“ಸಾರ್ವಜನಿಕರಿಗೆ ಅನುಕೂಲವಾಗುವ ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಬೆಲೆ ಇಳಿಕೆಯು ಒಂದು ನಿಯಮಿತ ಪ್ರಕ್ರಿಯೆಯಾಗಿದ್ದು, ಪ್ರಾಧಿಕಾರವು ಅದನ್ನು ಅನುಸರಿಸಿದೆ” ಎಂದು ಎನ್‌ಪಿಪಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಕ್ತದ ಗ್ಲುಕೋಸ್‌ ಕಡಿಮೆಯಾದಾಗ ಬಳಿಸುವ Dapagliflozin Metformin Hydrochlorideಗೆ ಮೊದಲು 30 ರೂ. ಇತ್ತು. ಈಗ ಅದಕ್ಕೆ 16 ರೂ. ನಿಗದಿಪಡಿಸಲಾಗಿದೆ. ಅಸ್ತಮಾ ಹಾಗೂ ಶ್ವಾಸಕೋಶದ ಸಮಸ್ಯೆ ಇದ್ದವರು ತೆಗೆದುಕೊಳ್ಳವ ಬ್ಯೂಡ್‌ಸೊನೈಡ್‌ ಹಾಗೂ ಫಾರ್ಮೊಟೆರೋಲ್‌ನ ಒಂದು ಡೋಸ್‌ ಬೆಲೆಯನ್ನು 6.62 ರೂ.ಗೆ ಇಳಿಕೆ ಮಾಡಲಾಗಿದೆ.

ಕೆಲ ತಿಂಗಳ ಹಿಂದಷ್ಟೇ, ಔಷಧಗಳ ಬೆಲೆಯೇರಿಕೆ ಕುರಿತು ವದಂತಿಗಳು ಹರಡಿದ್ದವು. ಆದರೆ, ಕೇಂದ್ರ ಸರ್ಕಾರವು ಇದನ್ನು ಅಲ್ಲಗಳೆದಿತ್ತು. “ಏಪ್ರಿಲ್‌ 1ರಿಂದ 500ಕ್ಕೂ ಅಧಿಕ ಔಷಧಗಳ ಬೆಲೆಯಲ್ಲಿ ಶೇ.12ರಷ್ಟು ಬೆಲೆ ಏರಿಕೆಯಾಗಿದೆ ಎಂಬ ವದಂತಿಗಳು, ವರದಿಗಳು ಸತ್ಯಕ್ಕೆ ದೂರವಾಗಿವೆ. ಜನರ ಹಾದಿ ತಪ್ಪಿಸಲು ಇಂತಹ ವರದಿಗಳನ್ನು ಪಸರಿಸಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ಸಗಟು ಬೆಲೆ ಸೂಚ್ಯಂಕದ ಆಧಾರದ ಬೆಲೆ ಏರಿಕೆ ಮಾಡುತ್ತದೆ. ಆದರೆ, 782 ಔಷಧಗಳ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಇನ್ನು ಸುಮಾರು 54 ಔಷಧಗಳ ಬೆಲೆಯು ಒಂದು ಪೈಸೆ ಮಾತ್ರ ಏರಿಕೆಯಾಗಿದೆ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿತ್ತು. ಇದರ ಬೆನ್ನಲ್ಲೇ, ಅಗತ್ಯ ಔಷಧಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.

ಇದನ್ನೂ ಓದಿ: Jan Aushadhi: ಪ್ರಯಾಣಿಕರಿಗೆ ಗುಡ್‌ ನ್ಯೂಸ್; ರೈಲು ನಿಲ್ದಾಣಗಳಲ್ಲೂ ಸಿಗಲಿವೆ ಕಡಿಮೆ ಬೆಲೆಗೆ ಔಷಧ!

Continue Reading
Advertisement
RCB vs CSK
ಕ್ರೀಡೆ3 mins ago

RCB vs CSK: ಚೆನ್ನೈ-ಆರ್​ಸಿಬಿ ಪಂದ್ಯಕ್ಕೆ ಹವಾಮಾನ ಇಲಾಖೆ ನೀಡಿದ ಎಚ್ಚರಿ ಏನು?

illegal hunting chikkamagaluru
ಕ್ರೈಂ14 mins ago

Illegal hunting: ಶಿಕಾರಿಗೆ ತೆರಳಿದ ಯುವಕನಿಗೆ ಗುಂಡು ತಗುಲಿ ಸಾವು, ಆಕಸ್ಮಿಕವೋ ಕೊಲೆಯೋ?

Cannes 2024 Aishwarya Rai turns lady in black in Falguni
ಸಿನಿಮಾ20 mins ago

Cannes 2024: ಬ್ಯಾಂಡೇಜ್​ ಸುತ್ತಿಕೊಂಡೇ ರೆಡ್​ ಕಾರ್ಪೆಟ್ ಮೇಲೆ ಪೋಸ್‌ ಕೊಟ್ಟ ​ಐಶ್ವರ್ಯಾ ರೈ!

These foods are really what our body needs in summer
ಆರೋಗ್ಯ43 mins ago

Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

Lok Sabha Election 2024
ದೇಶ53 mins ago

Lok Sabha Election 2024: ಬಿಜೆಪಿಯ 400+ ಲೆಕ್ಕಾಚಾರ ಉಲ್ಟಾ? ಚುನಾವಣೆ ಹೊತ್ತಲ್ಲೇ ಪಕ್ಷಕ್ಕೆ ಬಿಗ್‌ ಶಾಕ್‌!

Medical Negligence
ದೇಶ55 mins ago

ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

anjali murder case girish
ಕ್ರೈಂ1 hour ago

Anjali Murder Case: ಅಂಜಲಿ ಹಂತಕನಿಗೆ ಸಾರ್ವಜನಿಕರಿಂದ ಗೂಸಾ, ಬಂಧನ

techie wife udr case
ಕ್ರೈಂ2 hours ago

UDR Case: ಟೆಕ್ಕಿ ಪತ್ನಿಯ ಅನುಮಾನಾಸ್ಪದ ಸಾವು

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ16 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ19 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು22 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌