Spinach benefits: ಚಳಿಗಾಲದಲ್ಲಿ ದಿನವೂ ಪಾಲಕ್‌ ತಿನ್ನಿ, ಆರೋಗ್ಯವಾಗಿರಿ! - Vistara News

ಆರೋಗ್ಯ

Spinach benefits: ಚಳಿಗಾಲದಲ್ಲಿ ದಿನವೂ ಪಾಲಕ್‌ ತಿನ್ನಿ, ಆರೋಗ್ಯವಾಗಿರಿ!

ರೋಗಗಳು ದೇಹವನ್ನು ಆಕ್ರಮಿಸದಂತೆ ತಡೆಯಲು ದೇಹಕ್ಕೆ ಸಾಮರ್ಥ್ಯಬೇಕು. ಈ ನಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿ (immunity) ದೇಹದಲ್ಲಿರಬೇಕು. ಹಾಗಾಗಿಯೇ ಚಳಿಗಾಲದಲ್ಲಿ ಸದಾ ಪಾಲಕ್‌ (Spinach benefits) ತಿನ್ನುತ್ತಿರಬೇಕು.

VISTARANEWS.COM


on

spinach
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬರುವ ಚಳಿಗಾಲದಲ್ಲಿ ಯಾವ ಆರೋಗ್ಯದ (Winter health) ಸಮಸ್ಯೆಯೂ ಬಾರದಂತೆ ಇರುವುದು ಹೇಗೆ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯೇ? ಚಳಿಗಾಲದಲ್ಲಿ ಸದಾ ಬೆಚ್ಚಗೆ ಇರುವುದು ಹೇಗಪ್ಪಾ ಅಂತನಿಸುತ್ತಿದೆಯೇ? ಈನ್ನು ಕೆಲ ತಿಂಗಳು ಮಾತ್ರ ತೂಕ ನಿಯಂತ್ರಿಸಲು ಸಾಧ್ಯವೇ ಇಲ್ಲವೆಂದು ಬೇಸರವೇ? ಹಾಗಿದ್ದರೆ ನಿಮ್ಮೆಲ್ಲ ವಿವಿಧ ಪ್ರಶ್ನೆಗಳಿಗೆ ಉತ್ತರ ಒಂದು ಹಿಡಿ ಪಾಲಕ್‌ ಸೊಪ್ಪಿನಲ್ಲಿದೆ! ಚಳಿಗಾಲದಲ್ಲಿ ಹೇರಳವಾಗಿ ಸಿಗುವ ತಾಜಾ ಸೊಪ್ಪುಗಳ ಪೈಕಿ ಪಾಲಕ್‌ಗೆ (spinach leaves) ಅಗ್ರಸ್ಥಾನ. ಶ್ರೀಮಂತ ಬಡವರೆನ್ನದೆ ಎಲ್ಲರ ಕೈಗೆ ಧಾರಾಳವಾಗಿ ಎಟಕುವ ಈ ಸೊಪ್ಪು ಪೋಷಕಾಂಶಗಳ (Spinach benefits) ಪವರ್‌ ಹೌಸ್‌. ಅದರಲ್ಲೂ, ಶೀತ, ನೆಗಡಿ, ಜ್ವರ ಸೇರಿದಂತೆ ಆರೋಗ್ಯದ ಸಮಸ್ಯೆಗಳು ಬರುವ ಚಳಿಗಾಲದಲ್ಲೇ ಪಾಲಕ್‌ ಯಾಕೆ ತಿನ್ನಬೇಕು (Spinach health benefits) ಎಂಬುದಕ್ಕೆ ಕಾರಣವೂ ಇವೆ.

ಪರ್ಷಿಯಾದಿಂದ ಮೂಲದಿಂದ ಭಾರತಕ್ಕೆ ಬಂದದ್ದು ಎಂದು ಹೇಳಲಾಗುವ ಪಲಾಕ್‌ ಸೊಪ್ಪು ಏಳನೇ ಶತಮಾನದಿಂದಲೂ ಬಾರತದಲ್ಲಿ ಹೇರಳವಾಗಿ ಆಹಾರದಲ್ಲಿ ದಿನನಿತ್ಯ ಬಳಕೆಯಾಗುತ್ತಿತ್ತು ಎಂಬ ಉಲ್ಲೇಖಗಳು ಇತಿಹಾಸದ ಪುಟಗಳಲ್ಲಿ ಸಿಗುತ್ತವಂತೆ. ಪೋಷಕಾಂಶಗಳ ವಿಚಾರಕ್ಕೆ ಬಂದರೆ ಪಲಾಕ್‌ ಸೊಪ್ಪನ್ನು ಮೀರಿಸುವವರಿಲ್ಲ. ವಿಟಮಿನ್‌ ಎ, ಸಿ, ಇ, ಕೆ1, ಬಿ9, ಕಬ್ಬಿಣಾಂಶ, ಪೊಟಾಶಿಯಂ, ಕ್ಯಾಲ್ಶಿಯಂ, ಮೆಗ್ನೀಶಿಯಂ ಹೀಗೆ ಎಲ್ಲವೂ ಇರುವ ಸಂಪದ್ಭರಿತ ಆಹಾರ. ಅದಕ್ಕೇ ಇದು ಪವರ್‌ ಹೌಸ್‌. ಮನೆಯಲ್ಲೂ, ಪುಟ್ಟ ಜಾಗದಲ್ಲಿ ಬೆಳೆಯಬಹುದಾದ ಪಾಲಕ್‌ ಸುಲಭವಾಗಿ ಬಾಲ್ಕನಿಯಲ್ಲಿ ಕುಂಡಗಳಲ್ಲಿ ಸುಲಭವಾಗಿ ಬೆಳೆದುಕೊಳ್ಳಬಹುದು.

ಹೇಳಿ ಕೇಳಿ ಚಳಿಗಾಲವೆಂದರೆ ಆರೋಗ್ಯ ಕೈಕೊಡುವ ಕಾಲ. ಇಂತಹ ಕಾಲದಲ್ಲಿ ನಮ್ಮ ದೇಹ ಬೆಚ್ಚಗಿರಬೇಕು. ದೇಹದ ಎಲ್ಲ ಅಂಗಗಳಿಗೂ ಸರಿಯಾದ ಶಕ್ತಿ ಉತ್ಪಾದನೆಗೆ ಪೂರಕ ಆಹಾರ ಬೇಕು. ರೋಗಗಳು ದೇಹವನ್ನು ಆಕ್ರಮಿಸದಂತೆ ತಡೆಯಲು ದೇಹಕ್ಕೆ ಸಾಮರ್ಥ್ಯಬೇಕು. ಈ ನಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿ (immunity) ದೇಹದಲ್ಲಿರಬೇಕು. ಹಾಗಾಗಿಯೇ ಚಳಿಗಾಲದಲ್ಲಿ ಸದಾ ಪಾಲಕ್‌ ತಿನ್ನುತ್ತಿರಬೇಕು.

1. ರಕ್ತಹೀನತೆಯನ್ನು ತಡೆಯುತ್ತದೆ: ಪಾಲಕ್‌ ಸೊಪ್ಪನ್ನು ಆಹಾರದಲ್ಲಿ ಸೇರಿಸಿಕೊಂಡರೆ ಖಂಡಿತವಾಗಿಯೂ ರಕ್ತ ಪರಿಚಲನೆಯನ್ನು ಸರಾಗವಾಗಿಸುವುದಲ್ಲದೆ, ದೇಹದಲ್ಲಿ ಹೆಚ್ಚಿ ರಕ್ತದ ಉತ್ಪಾದನೆಗೆ ಸಹಕಾರಿಯಾಗುತ್ತದೆ. ರಕ್ತಹೀನತೆಯಂತ ಸಮಸ್ಯೆಯನ್ನು ದೂರವಿರಿಸುತ್ತದೆ.

2. ದೃಷ್ಟಿದೋಷವನ್ನು ನಿವಾರಿಸುತ್ತದೆ: ಪಾಲಕ್‌ನಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕಣ್ಣುನ ದೃಷ್ಟಿಗೆ ಸಹಕಾರಿ. ಕಣ್ಣಿಗೆ ಸೂರ್ಯನ ಕಿರಣಗಳಿಂದಾಗುವ ಹಾನಿಯನ್ನು ಇದು ತಡೆಯುವುದಲ್ಲದೆ, ದೃಷ್ಟಿಯನ್ನು ಚುರುಕಾಗಿಸುತ್ತದೆ. ಕಣ್ಣಿನ ಪೊರೆ ಬೇಗ ಬರದಂತೆ ನೋಡಿಕೊಳ್ಳುತ್ತದೆ.

spinach-juice

3. ರಕ್ತದೊತ್ತಡವನ್ನು ಸರಿಪಡಿಸುತ್ತದೆ: ಅಧಿಕ ರಕ್ತದೊತ್ತಡ ಸದ್ಯ ಎಲ್ಲರನ್ನೂ ಕಾಡುವ ಸಮಸ್ಯೆ. ಗರ್ಭಿಣಿ ಸ್ತ್ರೀಯರನ್ನೂ ಕೂಡಾ. ಆದರೆ, ಪಾಲಕ್‌ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಅಧಿಕ ರಕ್ತದೊತ್ತಡವನ್ನು ಸಮತೋಲನದಲ್ಲಿರಿಸುವಲ್ಲಿ ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಿ ಸಹಜಸ್ಥಿತಿಗೆ ತರುವ ಕಾರಣವಾಗಿಯೇ ಇದು ಹೃದ್ರೋಗ ಸಮಸ್ಯೆಯಿರುವ ಮಂದಿಗೂ ಒಳ್ಳೆಯದು.

4. ಎಲುಬನ್ನು ಗಟ್ಟಿಗೊಳಿಸುತ್ತದೆ: ಇದರಲ್ಲಿರುವ ಕಬ್ಬಿಣಾಂಶ, ವಿಟಮಿನ್‌ ಕೆ, ಕ್ಯಾಲ್ಶಿಯಂ, ಪೊಟಾಶಿಯಂಗಳು ಎಲುಬಿನ ಶಕ್ತಿವರ್ಧನೆಗೆ ಅನುಕೂಲಕರವಾಗಿದೆ. ದೇಹ ಸರಿಯಾದ ಪ್ರಮಾಣದ ಕ್ಯಾಲ್ಶಿಯಂ ಅನ್ನು ಆಹಾರದಿಂದ ಹೀರಿಕೊಳ್ಳಲು ಪಾಲಕ್‌ ಸಹಾಯ ಮಾಡುವ ಕೆಲಸವನ್ನೂ ಇದು ಮಾಡುತ್ತದೆ. ಪ್ರತಿದಿನವೂ ಒಂದು ಕಪ್‌ ಪಾಲಕ್‌ ಸೊಪ್ಪನ್ನು ಆಹಾರವಾಗಿ ಸೇವಿಸಸುವುದರಿಂದ ಖಂಡಿತವಾಗಿಯೂ ಎಲುಬು ಶಕ್ತಿಯುತವಾಗುತ್ತದೆ.

5. ತೂಕ ಇಳಿಕೆ ಮಾಡುತ್ತದೆ: ಚಳಿಗಾಲದಲ್ಲಿ ದಿಢೀರ್‌ ಏರುವ ತೂಕದ ಸಮಸ್ಯೆಗೆ ಪಾಲಕ್‌ ಬೆಸ್ಟ್‌ ಪರಿಹಾರ. ಏಕೆಂದರೆ ಇದು ತೂಕವನ್ನು ಕಡಿಮೆ ಮಾಡಲು ಪೂರಕವಾಘಿರುವ ಆಹಾರ. ಪಾಲಕ್‌ ತಿನ್ನುವುದರಿಂದ ಬಹಳ ಹೊತ್ತಿನವರೆಗೆ ಬೇರೇನೂ ತಿನ್ನದೆ ಇರಲು ಸಾಧ್ಯವಾಗುತ್ತದೆ, ಇದರಿಂದ ನಾವು ಸೇವಿಸುವ ಆಹಾರದಲ್ಲಿ ಗಣನೀಯ ಬದಲಾವಣೆಯಾಗುವುದಲ್ಲದೆ, ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ. ಹಾಗೂ ಆರೋಗ್ಯವನ್ನೂ ವೃದ್ಧಿಸುತ್ತದೆ.

ಇದನ್ನೂ ಓದಿ: Health Tips: ಈ ಆಹಾರಗಳನ್ನು ಸೇವಿಸಿದರೆ ಸರಸದ ಸಮಯ ಆದೀತು ವಿರಸಮಯ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

sleep apnea: ಸಣ್ಣ ಪ್ರಮಾಣದಲ್ಲಿ ಗೊರೆಯುವವರು, ಆಯಾಸವಾದಾಗ, ನಿದ್ದೆಗೆಟ್ಟಾಗ ಗೊರೆಯುವವರು ಬಹಳಷ್ಟು ಜನರಿದ್ದಾರೆ. ಆದರೆ ಇಂಥ ಸಂದರ್ಭಗಳಲ್ಲದೆ, ಸದಾ ಕಾಲ ಗೊರಕೆ ಹೊಡೆಯುವುದು, ಜೋರಾದ ಕರ್ಕಶವಾದ ಗೊರಕೆಗಳು, ಆಗಾಗ ಉಸಿರುಗಟ್ಟುವಂಥದ್ದು- ಇವೆಲ್ಲ ದೀರ್ಘ ಕಾಲದಲ್ಲಿ ಸಮಸ್ಯೆಗಳನ್ನು ತರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Sleep Apnea
Koo

ನಾವೆಲ್ಲ ನಿದ್ದೆ ಮಾಡುವವರೇ (sleep apnea) ಆದರೂ, ನಮ್ಮಲ್ಲಿ ನಿದ್ದೆ ಸರಿಯಾಗಿ ಬಾರದೆ ಒದ್ದಾಡುವವರದ್ದು ಒಂದು ವರ್ಗ. ನಿದ್ದೆ ಬಂದ ಮೇಲೂ ಒದ್ದಾಡುವವರದ್ದು ಇನ್ನೊಂದು ವರ್ಗ. ಈ ಎರಡನೇ ಸಾಲಿಗೆ ಸೇರಿದವರು, ನಿದ್ದೆ ಬಂದ ಮೇಲೆ ತಾವು ಒದ್ದಾಡುವುದಿಲ್ಲ, ಆಚೀಚಿನವರನ್ನು ಒದ್ದಾಡಿಸುತ್ತಾರೆ- ಗೊರಕೆ ಹೊಡೆಯುವ ಮೂಲಕ. ಅರೆ! ಗೊರೆಯುವುದು ನಿದ್ದೆಯ ಅವಿಭಾಜ್ಯ ಅಂಗ ಎಂದು ತಿಳಿದವರೇ ಭಾರತದಲ್ಲಿ ಹೆಚ್ಚಿರುವಾಗ, ಗೊರೆದು ಒರಗುವವರ ಬಗ್ಗೆ ಹೀಗೆ ತಕರಾರು ತೆಗೆಯಬಹುದೇ ಎನ್ನಬಹುದು. ಬೇರೆ ದೇಶಗಳಲ್ಲಿ ಹಾಗಲ್ಲ, ಗೊರೆದು ನಿದ್ದೆಗೆಡಿಸುವ ಸಂಗಾತಿ ಬೇಡವೆಂದು ಸೋಡಾಚೀಟಿ ಕೊಟ್ಟ ನಿದರ್ಶನಗಳು ಸಾಕಷ್ಟಿವೆ. ಇರಲಿ, ಗೊರೆದರೆ ಪಕ್ಕದಲ್ಲಿ ಮಲಗಿದವರ ನಿದ್ದೆ ಹಾಳು ಎನ್ನುವುದು ದೊಡ್ಡ ವಿಷಯವೇ ಅಲ್ಲ. ಹಾಗೆ ಗಂಟಲು ಬಿರಿಯುವಂತೆ ಗೊರೆದರೆ, ಗೊರೆಯುವವರದ್ದೇ ಆರೋಗ್ಯ ಹಾಳು ಎನ್ನುವುದು ಮುಖ್ಯ ಸಂಗತಿ.

Difficulty Sleeping

ಸ್ಲೀಪ್‌ ಅಪ್ನಿಯ

ಗೊರಕೆ ಹೊಡೆಯುವ ಮತ್ತು ಹಾಗೆ ಮಾಡುವಾಗ ಕೆಲವು ಕ್ಷಣಗಳ ಕಾಲ ಉಸಿರಾಟ ನಿಲ್ಲಿಸುವ ಈ ಪ್ರಕ್ರಿಯೆಯನ್ನು ಅಬ್‌ಸ್ಟ್ರಕ್ಟಿವ್‌ ಸ್ಲೀಪ್‌ ಅಪ್ನಿಯ (ಒಎಸ್‌ಎ) ಎಂದು ಕರೆಯಲಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಗೊರೆಯುವವರು, ಆಯಾಸವಾದಾಗ, ನಿದ್ದೆಗೆಟ್ಟಾಗ ಗೊರೆಯುವವರು ಬಹಳಷ್ಟು ಜನರಿದ್ದಾರೆ. ಆದರೆ ಇಂಥ ಸಂದರ್ಭಗಳಲ್ಲದೆ, ಸದಾ ಕಾಲ ಗೊರೆಯುವುದು, ಜೋರಾದ ಕರ್ಕಶವಾದ ಗೊರಕೆಗಳು, ಆಗಾಗ ಉಸಿರುಗಟ್ಟುವಂಥದ್ದು- ಇವೆಲ್ಲ ದೀರ್ಘ ಕಾಲದಲ್ಲಿ ಆರೋಗ್ಯಕ್ಕೆ ಸಮಸ್ಯೆಗಳನ್ನು ತರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಸ್ಥಿತಿಯನ್ನು ಸರಿಯಾಗಿ ನಿರ್ವಹಿಸದೇ ಹೋದಲ್ಲಿ, ಹೃದಯ ರೋಗಗಳು ಬರುವ ಸಾಧ್ಯತೆಯನ್ನು ಶೇ. 30ರಷ್ಟು ಮತ್ತು ಪಾರ್ಶ್ವವಾಯು ಬಡಿಯುವ ಸಾಧ್ಯತೆಯನ್ನು ಶೇ. 60ರಷ್ಟು ಹೆಚ್ಚಿಸುತ್ತದಂತೆ. ಅಂದರೆ ನಿದ್ರಿಸಿದವರು ಏಳದಿರುವ ಸಾಧ್ಯತೆ ಈ ಪ್ರಮಾಣದಲ್ಲಿದೆ.

ಲಕ್ಷಣಗಳೇನು?

ವಿಶ್ವದೆಲ್ಲೆಡೆಯ ಅಂಕಿ-ಅಂಶಗಳನ್ನು ನೋಡಿದರೆ, ಸುಮಾರು 936 ದಶಲಕ್ಷ ಮಂದಿ ಒಎಸ್‌ಎ ಹೊಂದಿದವರಿದ್ದಾರೆ. ಇವರಲ್ಲಿ ಹೆಚ್ಚಿನವರ ಲಕ್ಷಣಗಳು ಸೌಮ್ಯವಾದದ್ದು. ಈ ಲಕ್ಷಣಗಳು ತೀವ್ರವಾಗಿ ಇದ್ದವರಲ್ಲಿ, ನಿದ್ದೆಯಲ್ಲಿ ಆಗಾಗ ಉಸಿರುಗಟ್ಟುವುದು, ಕೆಮ್ಮುವುದು, ನಿದ್ದೆಯಿಂದ ಆಗಾಗ ಎಚ್ಚರವಾಗುವುದು, ಬಾತ್‌ರೂಂ ಓಡಾಟಗಳು, ನಿದ್ದೆಯಲ್ಲಿ ಬೆವರುವುದು ಇತ್ಯಾದಿಗಳು ಸಾಮಾನ್ಯ. ಇದರಿಂದಾಗಿ ಹಗಲಿಗೂ ಇವರು ಸುಸ್ತು, ಆಯಾಸ, ಏಕಾಗ್ರತೆಯ ಕೊರತೆ, ತಲೆನೋವು, ಎದೆ ಉರಿ, ಮೂಡ್‌ ಬದಲಾವಣೆ, ತೂಕಡಿಕೆಗಳಿಂದ ಮುಕ್ತರಾಗಿ ಇರುವುದಿಲ್ಲ. ಇದನ್ನು ವೈದ್ಯಕೀಯವಾಗಿ ನಿರ್ವಹಿಸದಿದ್ದರೆ ಮುಂದೆ ಗಂಭೀರ ಸಮಸ್ಯೆಗಳು ಬರಬಹುದು ಎನ್ನುವುದು ತಜ್ಞರ ಅಭಿಮತ.
ಬ್ರೆಜಿಲ್‌ ದೇಶದ ಸಾವೊ ಪೌಲೊ ವಿಶ್ವವಿದ್ಯಾಲಯದ ಅಧ್ಯಯನಕಾರರು ಹೇಳುವ ಪ್ರಕಾರ, ಒಂದು ಸರಳವಾದ ರಕ್ತ ಪರೀಕ್ಷೆಯ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು. ಇದನ್ನು ವಿವರಿಸಿ ಹೇಳುವುದಾದರೆ, ರಕ್ತದಲ್ಲಿರುವ ಹೋಮೋಸಿಸ್ಟೀನ್‌ ಎಂಬ ಅಮೈನೊ ಆಮ್ಲದ ಮಟ್ಟ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದರೆ ರಕ್ತ ಮತ್ತು ಹೃದಯದ ಸಮಸ್ಯೆಗಳು ಹೆಚ್ಚಾಗಬಹುದು. ಸರಿ, ಆದರೆ ಹೋಮೋಸಿಸ್ಟೀನ್‌ಗೂ ಗೊರೆಯುವುದಕ್ಕೂ ಎತ್ತಣಿದೆಂತ್ತ ಸಂಬಂಧ? ಇದಕ್ಕಾಗಿ ಈ ತಜ್ಞರು ನಡೆಸಿದ್ದ ಅಧ್ಯಯನದ ಬಗ್ಗೆ ಚುಟುಕಾಗಿ ಹೇಳಬೇಕಿದೆ.

ಇದನ್ನೂ ಓದಿ: Hair Oil Tips: ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಲಾಭವೋ ನಷ್ಟವೋ?

ವಿಷಯ ಏನೆಂದರೆ…

ಇದಕ್ಕಾಗಿ ಸುಮಾರು 20-80 ವರ್ಷ ವಯಸ್ಸಿನ ೮೦೦ಕ್ಕೂ ಹೆಚ್ಚಿನವರ ದತ್ತಾಂಶಗಳ ಅಧ್ಯಯನವನ್ನು ಈ ತಂಡ ನಡೆಸಿತು. ಇದರ ಪ್ರಕಾರ, ರಕ್ತದಲ್ಲಿ ಹೋಮೋಸಿಸ್ಟೀನ್‌ ಎಷ್ಟಿದೆ ಎನ್ನುವ ಆಧಾರದ ಮೇಲೆ ಕಡಿಮೆ, ಮಧ್ಯಮ, ಹೆಚ್ಚು ಎಂಬ ಮೂರು ಗುಂಪುಗಳನ್ನಾಗಿ ವಿಂಗಡಿಸಿದ್ದರು. ಈ ಗುಂಪುಗಳ ನಿದ್ದೆಯನ್ನು ಅಧ್ಯಯನಕ್ಕೆ (ಪಾಲಿಸೋಮ್ನೋಗ್ರಾಂ) ಒಳಪಡಿಸಿದಾಗ ಅಚ್ಚರಿಯ ಅಂಶಗಳು ಕಂಡವು. ಒಂದು ತಾಸಿನ ಸರಾಸರಿ ನಿದ್ದೆಯ ಹೊತ್ತಿನಲ್ಲಿ ಎಷ್ಟು ಬಾರಿ ಉಸಿರು ಕಡಿಮೆಯಾಗುತ್ತದೆ ಅಥವಾ ನಿಲ್ಲುತ್ತದೆ (ಒಎಸ್‌ಎ) ಎಂಬುದನ್ನು ಪರಿಶೀಲಿಸಲಾಯಿತು. ತಾಸಿಗೆ ಐದಕ್ಕಿಂತ ಕಡಿಮೆ ಬಾರಿ ಹೀಗಾದರೆ ಸಾಮಾನ್ಯ. 5-15 ಬಾರಿ ಹೀಗಾದರೆ ಸೌಮ್ಯ ಪ್ರಮಾಣದಲ್ಲಿ ಒಎಸ್‌ಎ ಇದೆ; 15-30 ಬಾರಿ ಹೀಗಾದರೆ ಮಧ್ಯಮ ಪ್ರಮಾಣದ ಒಎಸ್‌ಎ ಇದೆ; 30ಕ್ಕಿಂತ ಹೆಚ್ಚು ಬಾರಿ ಹೀಗಾದರೆ ತೀವ್ರ ತೆರನಾಗಿದೆ ಎಂಬುದು ಅಳತೆಗೋಲು. ಕಡಿಮೆ ಪ್ರಮಾಣದ ಒಎಸ್‌ಎ ಇದ್ದವರ ರಕ್ತದಲ್ಲಿ ಹೋಮೋಸಿಸ್ಟೀನ್‌ ಮಟ್ಟ ಕಡಿಮೆ ಇತ್ತು; ಮಧ್ಯಮ ಒಎಸ್‌ಎ ಇದ್ದವರಲ್ಲಿ ಹೋಮೋಸಿಸ್ಟೀನ್‌ ಮಟ್ಟವೂ ಮಧ್ಯಮ ಪ್ರಮಾಣದಲ್ಲೇ ಇತ್ತು; ಉಳಿದವರಲ್ಲಿ ಎರಡೂ ತೀವ್ರವಾಗಿಯೇ ಇದ್ದವು. ಹಾಗಾಗಿ ಇದೊಂದು ರಕ್ತ ಪರೀಕ್ಷೆ ಮುಂದಾಗುವುದನ್ನು ತಪ್ಪಿಸೀತು ಎನ್ನುವುದು ಅಧ್ಯಯನಕಾರರ ನಿಲುವು.

Continue Reading

ಕೋಲಾರ

Chemicals in Food: ಕ್ಯಾನ್ಸರ್​ ಕಾರಕ ಅಂಶವಿರುವ ರಾಸಾಯನಿಕ ಕಲರ್ ಬಳಸಿದ ಸ್ವೀಟ್​ ವಶಕ್ಕೆ

Chemicals in Food: ಇತ್ತೀಚೆಗಷ್ಟೇ ಕೋಲಾರದ ಕೆಜಿಎಫ್ ನಗರಸಭೆ ಅಧಿಕಾರಿಗಳು ಗೋಬಿ ಮಂಜೂರಿ, ಕಬಾಬ್‌ ಸೆಂಟರ್​ಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವುಗಳಲ್ಲಿ ಬಳಸಲಾಗುತ್ತಿದ್ದ ಬಣ್ಣದ ಐಟಂಗಳನ್ನು ಬ್ಯಾನ್ ಮಾಡಿದ್ದರು.

VISTARANEWS.COM


on

chemicals in food
Koo

ಕೋಲಾರ: ಕ್ಯಾನ್ಸರ್‌ ಕಾರಕ (Carcinogenic) ಅಂಶಗಳನ್ನು ಹೊಂದಿರುವ ರಾಸಾಯನಿಕ ಬಣ್ಣಗಳನ್ನು (Chemical color) ಬಳಸುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಕೆಜಿಎಫ್​ (KGF) ನಗರಸಭೆ ವ್ಯಾಪ್ತಿಯಲ್ಲಿ ಸ್ವೀಟ್​​ ಅಂಗಡಿಗಳ (Sweet stalls) ಮೇಲೆ ನಗರಸಭೆ ಪೌರಾಯುಕ್ತ ಪವನ್​ ಕುಮಾರ್​ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ರಾಸಾಯನಿಕ ಹೊಂದಿದ (Chemicals in Food) ಕೃತಕ ಬಣ್ಣ ಬಳಸಿ ತಯಾರು ಮಾಡಿದ್ದ ಸ್ವೀಟ್​ ಹಾಗೂ ತಿಂಡಿಗಳನ್ನು (Seize) ವಶಕ್ಕೆ ಪಡೆಯಲಾಯಿತು.

ಜೊತೆಗೆ ಆಹಾರ ಸುರಕ್ಷತೆ ನಿಯಮ ಪಾಲಿಸದೆ ಸ್ವೀಟ್​ ತಯಾರು ಮಾಡುತ್ತಿದ್ದ ಅಂಗಡಿಗಳಿಗೆ ನೋಟೀಸ್​ ನೀಡಿ ದಂಡ ವಿಧಿಸಲಾಗಿದೆ. ಕಲರ್ ಬಳಸಿ ತಯಾರು ಮಾಡಿದ ಸ್ವೀಟ್​ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಕಸದ ಲಾರಿಗೆ ತುಂಬಿಸಿದರು.

ಇತ್ತೀಚೆಗಷ್ಟೇ ಕೋಲಾರದ ಕೆಜಿಎಫ್ ನಗರಸಭೆ ಅಧಿಕಾರಿಗಳು ಗೋಬಿ ಮಂಜೂರಿ, ಕಬಾಬ್‌ ಸೆಂಟರ್​ಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವುಗಳಲ್ಲಿ ಬಳಸಲಾಗುತ್ತಿದ್ದ ಬಣ್ಣದ ಐಟಂಗಳನ್ನು ಬ್ಯಾನ್ ಮಾಡಿದ್ದರು. ಜೊತೆಗೆ ಕಲರ್‌ ಬಳಸುವ ಎಲ್ಲಾ ಗೋಬಿ ಮಂಚೂರಿ, ಕಬಾಬ್ ಸೆಂಟರ್​ಗಳಿಗೆ ಭೇಟಿ ನೀಡಿ ಸರ್ಕಾರದ ಆದೇಶದಂತೆ ನಿಷೇಧಿತ ಕಲರ್ ಬಳಸದಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸ್ವೀಟ್​​ ಅಂಗಡಿಗಳ ಮೇಲೆ ದಾಳಿ ನಡೆದಿದೆ.

ಪಾನಿಪುರಿಯಲ್ಲೂ ಹಾನಿಕಾರಕ ರಾಸಾಯನಿಕ, ಬ್ಯಾನ್‌ಗೆ ಚಿಂತನೆ

ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (food safety and standards authority of india) ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕೆ ಕಾರಣ, ಪಾನಿಪುರಿಯಲ್ಲಿ ಕಂಡುಬಂದಿರುವ ಕ್ಯಾನ್ಸರ್‌ಕಾರಕ (Carcinogenic), ಹಾನಿಕಾರಕ ರಾಸಾಯನಿಕ (Chemicals in Food) ವಿಷಗಳು.

ಹೌದು. ಗೋಬಿ ಮಂಚೂರಿ (Gobi Manchurian) ಹಾಗೂ ಕಬಾಬ್ (Kebab) ಬಳಿಕ ಇದೀಗ ಪಾನಿಪುರಿಯಲ್ಲಿಯೂ ಕ್ಯಾನ್ಸರ್ ಕಾರಕ ಅಂಶಗಳು ಇರುವುದನ್ನು ಪತ್ತೆ ಮಾಡಲಾಗಿದೆ. ಇದರ ಪರಿಶೀಲನೆಗಾಗಿ ಬೆಂಗಳೂರಿನ 49 ಪ್ರದೇಶಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಪರಿಶೀಲಿಸಿದಾಗ, ಎಲ್ಲ 19 ಕಡೆಯ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಲ್ಯಾಬ್‌ ಟೆಸ್ಟಿಂಗ್‌ನಲ್ಲಿ, ಪಾನಿಪೂರಿಗೆ ಬಳಸುವ ಐದು ಸಾಸ್, ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಕ್ಯಾನ್ಸರ್ ಕಾರಕಗಳು ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡಲಾಗುತ್ತದೆ.

ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿಕೊಂಡು ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಹೀಗಾಗಿ, ಇನ್ನೊಂದು ವಾರದಲ್ಲಿ ಪಾನಿಪುರಿಗೆ ಹಾಕುವ ಸಾಸ್ ಮತ್ತು ಮಿಟಾ ಬ್ಯಾನ್ ಮಾಡಲು ನಿರ್ಧರಿಸಲಾಗಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.

ಪಾನಿಪುರಿಯಲ್ಲಿ ವಿಷಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್, ಜನತೆ ವಿವೇಚನೆಯಿಂದ ಈ ಆಹಾರ ಸೇವಿಸಬೇಕು ಎಂದಿದ್ದಾರೆ.

ಇದನ್ನೂ ಓದಿ | Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

Continue Reading

ಆರೋಗ್ಯ

Hair Oil Tips: ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಲಾಭವೋ ನಷ್ಟವೋ?

Hair Oil Tips: ಮಕ್ಕಳ ಕೂದಲಿಗೆ ಎಣ್ಣೆ ಹಾಕುವ ಅಥವಾ ಪ್ರೀತಿ ಪಾತ್ರರ ತಲೆಗೆ ಎಣ್ಣೆ ತಟ್ಟುವ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ. ಹಾಗೆಂದು ದಿನವೂ ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ, ಬೆಳಗ್ಗೆ ತಲೆಸ್ನಾನ ಮಾಡುವುದು ಸರಿಯೇ? ಇದರಿಂದ ಲಾಭ ಹೆಚ್ಚೋ ನಷ್ಟವೋ? ಇಲ್ಲಿದೆ ತುಂಬಾ ಜನರನ್ನು ಕಾಡುವ ಪ್ರಶ್ನೆಗೆ ಉತ್ತರ.

VISTARANEWS.COM


on

Hair Oil Tips
Koo

ಕೂದಲಿಗೆ ಎಣ್ಣೆ (Hair Oil Tips) ಹಾಕುವ ಬಗ್ಗೆ ನಾನಾ ಅಭಿಪ್ರಾಯಗಳಿವೆ. ಹಾಕುವುದೇ ಇಲ್ಲ ಎನ್ನುವವರಿಂದ ಹಿಡಿದು, ಹಾಕಿದ ಎಣ್ಣೆ ತೆಗೆಯುವುದೇ ಇಲ್ಲ ಎನ್ನುವವರೆಗೆ, ದೇಶದ ಉದ್ದಗಲಕ್ಕೆ ಹಲವು ಮಾತುಗಳು ಕೇಳಬರುತ್ತವೆ. ಅದರಲ್ಲೂ ಮಕ್ಕಳ ಕೂದಲಿಗೆ ಎಣ್ಣೆ ಹಾಕುವ ಅಥವಾ ಪ್ರೀತಿ ಪಾತ್ರರ ತಲೆಗೆ ಎಣ್ಣೆ ತಟ್ಟುವ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ. ಹೀಗಿರುವಾಗ ದಿನವೂ ರಾತ್ರಿ ಎಣ್ಣೆ ಹಾಕಿ (ಅಂದರೆ… ತಲೆಗೆ!) ಬೆಳಗ್ಗೆ ಕೂದಲು ಸ್ವಚ್ಛ ಮಾಡುವುದು ಸರಿಯೇ? ಇದರಿಂದ ಲಾಭ ಹೆಚ್ಚೋ ನಷ್ಟವೋ ಎಂಬ ಅನುಮಾನ ಹಲವರಲ್ಲಿ ಇರಬಹುದು. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Lady Sitting on the Couch Gives Herself a Scalp Massage Gooseberry Benefits

ಲಾಭಗಳೇನು?

ಕೂದಲಿಗೆ ಸರಿಯಾದ ತೇವವನ್ನು ನೀಡುವದು ಮುಖ್ಯವಾದ ಕೆಲಸ. ರಾತ್ರಿಡಿ ತೈಲದಂಶವನ್ನು ಕೂದಲಲ್ಲೇ ಉಳಿಸಿದರೆ, ಬೆಳಗಿನವರೆಗೆ ಆಳವಾಗಿ ಕಂಡೀಶನಿಂಗ್‌ ಮಾಡುವುದಕ್ಕೆ ಸಾಧ್ಯವಿದೆ. ಕೂದಲಿನ ಬುಡ ಮತ್ತು ತಲೆಯ ಚರ್ಮವನ್ನು ಚೆನ್ನಾಗಿ ಕಂಡೀಶನಿಂಗ್‌ ಮಾಡಿ, ತೇವವನ್ನು ಸರಿಯಾಗಿ ಹೀರಿಕೊಳ್ಳುವುದಕ್ಕೆ ಸಾಕಷ್ಟು ಸಮಯಾವಕಾಶ ದೊರೆಯುತ್ತದೆ. ತಲೆಗೆ ಎಣ್ಣೆ ಮಸಾಜ್‌ ಮಾಡಿದ ಕೆಲವೇ ತಾಸುಗಳಲ್ಲಿ ತಲೆಸ್ನಾನ ಮಾಡಿದಾಗ, ಈ ಕೆಲಸ ಪೂರ್ಣ ಆಗಿರುವವ ಸಂಭವ ಕಡಿಮೆ.

ಸುರುಳಿ ಕೂದಲಿಗೆ ಲಾಭ

ನೇರವಾದ, ನಯವಾದ ಕೂದಲುಗಳಿಗಿಂತ, ಒರಟಾದ, ಗುಂಗುರಾದ ಕೂದಲುಗಳಿಗೆ ಅಹೋರಾತ್ರಿ ತೈಲದಲ್ಲಿ ನೆನೆಸುವುದು ಹೆಚ್ಚು ಲಾಭದಾಯಕ. ಇದರಿಂದ ಕೂದಲಿನ ಒರಟುತನ ಕಡಿಮೆಯಾಗಿ, ತೇವ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಕೂದಲಿನ ನೈಸರ್ಗಿಕ ತೈಲದಂಶವನ್ನು ಉಳಿಸಿಕೊಂಡು, ಕೂದಲಿಗೆ ಹೆಚ್ಚಿನ ಆರೈಕೆ ಒದಗಿಸಲು ಅನುಕೂಲ.

Young Woman Takes Care of Her Hair Using Natural Oils and Conditioners for Hair Care

ಚರ್ಮದ ಆರೋಗ್ಯ

ತಲೆಯ ಚರ್ಮ ಕಣ್ಣಿಗೆ ಕಾಣುವುದಿಲ್ಲ, ಆದರೆ ಸೂಕ್ಷ್ಮವಾದ ಪ್ರಕೃತಿಯದ್ದು. ತಲೆಯ ಚರ್ಮ ಶುಷ್ಕವಾದರೆ ಹೊಟ್ಟು, ತುರಿಕೆ ಗಂಟು ಬೀಳುತ್ತದೆ. ಇದನ್ನೆಲ್ಲ ನಿವಾರಿಸಿಕೊಳ್ಳಲು ಇರುವ ಸರಳವಾದ ನೈಸರ್ಗಿಕವಾದ ಉಪಾಯವೆಂದರೆ ರಾತ್ರಿಯ ಸಮಯದಲ್ಲಿ ತಲೆಯ ಚರ್ಮಕ್ಕೆ ಲಘುವಾಗಿ ಎಣ್ಣೆ ಮಸಾಜ್‌ ಮಾಡುವುದು. ಇದರಿಂದ ತಲೆಯ ಭಾಗಕ್ಕೆ ರಕ್ತ ಸಂಚಾರ ಹೆಚ್ಚಿ, ಕೂದಲು ಸೊಂಪಾಗಿ ಬೆಳೆಯುವುದಕ್ಕೆ ಸಹಾಯವಾಗುತ್ತದೆ.

ರಕ್ಷಣೆ

ತೈಲದಂಶವು ಕೂದಲು ಮತ್ತು ತಲೆಯ ಚರ್ಮದ ಮೇಲೆ ತೆಳುವಾದ ರಕ್ಷಣಾ ಕವಚವನ್ನು ನಿರ್ಮಿಸಬಲ್ಲದು. ಈ ಕವಚವು ವಾತಾವರಣದ ಮಾಲಿನ್ಯ, ದೂಳು, ಹೊಗೆ ಮುಂತಾದವುಗಳಿಂದ ರಕ್ಷಣೆಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ತಲೆಗೆ ಉಪಯೋಗಿಸುವ ಹಲವು ರೀತಿಯ ಜೆಲ್‌, ಬಣ್ಣದಂಥ ರಾಸಾಯನಿಕಗಳು ಮತ್ತು ಹೀಟ್‌ ಸ್ಟೈಲಿಂಗ್‌ ನಿಂದ ಆಗಬಹುದಾದ ಹಾನಿಯನ್ನೂ ತಗ್ಗಿಸುತ್ತದೆ.

Curry Leaves and Coconut Oil Hair Pack Discover the Best Herbal Hair Pack for Hair Growth

ತೊಂದರೆಗಳೂ ಇವೆ

ಹಾಗೆಂದು ಕೂದಲಿಗೆ ತೈಲ ಹಾಕುವುದರಿಂದ ಎಲ್ಲವೂ ಸರಾಗ ಎಂದು ಭಾವಿಸುವಂತಿಲ್ಲ. ಅಹೋರಾತ್ರಿ ತೈಲದಲ್ಲಿ ಕೂದಲು ನೆನೆಸುವುದರಿಂದ ತಲೆಯ ಚರ್ಮದ ಸೂಕ್ಷ್ಮ ರಂಧ್ರಗಳು ಕಟ್ಟಿಕೊಳ್ಳಬಹುದು. ಇದರಿಂದ ತ್ವಚೆಯ ಆ ಭಾಗ ಸೋಂಕುಗಳಿಗೆ ಸುಲಭ ತುತ್ತಾಗುತ್ತದೆ. ಹಾಗಾಗಿ ಮಾರನೇ ದಿನ ತಲೆಸ್ನಾನ ಮಾಡುವಾಗ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

ಕೊಳೆ

ತಲೆಯಲ್ಲಿ ದೀರ್ಘ ಕಾಲ ಎಣ್ಣೆ ಉಳಿಯಿತು ಎಂದಾದರೆ, ಕೂದಲು ಬೇಗನೇ ಕೊಳೆಯಾಗುತ್ತವೆ. ತಲೆಯಲ್ಲಿ ಹೊಟ್ಟು, ತುರಿಕೆಗಳು ಪ್ರಾರಂಭವಾಗುತ್ತವೆ. ಹೊಳೆಯುವ ಸ್ವಚ್ಛವಾದ ಕೂದಲಿಗೂ ಜಿಡ್ಡುಜಿಡ್ಡಾದ ಮೆತ್ತಿಕೊಂಡು ಮುದ್ದೆಯಂತಾದ ಕೂದಲಿಗೂ ಎಲ್ಲಿಂದೆಲ್ಲಿಯ ಹೋಲಿಕೆ! ಹಾಗಾಗಿ ಎಣ್ಣೆಯಂಶ ಅತಿಯಾಗಿ ಉಳಿಯದಂತೆ ಸ್ವಚ್ಛ ಮಾಡುವುದು ಮುಖ್ಯ. ಹಾಗೆಂದು ತಲೆ ಚರ್ಮದ ನೈಸರ್ಗಿಕ ತೈಲವೂ ತೊಳೆದು ಹೋಗುವಂತೆ ಶಾಂಪೂ ಹಾಕಿ ಉಜ್ಜುವುದು ಬೇಡ.

ಇದನ್ನೂ ಓದಿ: Health Tips: ಮಧ್ಯಾಹ್ನದ ನಂತರ ಏನಾದರು ಸಿಹಿತಿನಿಸು ತಿನ್ನಬೇಕು ಅನಿಸುತ್ತಿದೆಯೆ? ಇದಕ್ಕೂ ಇದೆ ಕಾರಣ

ಯಾವ ಎಣ್ಣೆ?

ತಲೆಗೆ ಹಾಕುವುದಕ್ಕೆಂದೇ ಮಾರುಕಟ್ಟೆಯಲ್ಲಿ ಲೆಕ್ಕವಿಲ್ಲದಷ್ಟು ತೈಲಗಳು ಲಭ್ಯವಿವೆ. ಇವುಗಳಲ್ಲಿ ಯಾವುದನ್ನು ಹಾಕುವುದು? ಅಸಂಖ್ಯಾತ ಗಿಡಮೂಲಿಕೆಗಳನ್ನು ಸೇರಿಸಿದ, ಚಿತ್ರವಿಚಿತ್ರ ಬಣ್ಣದ ಎಣ್ಣೆಗಳಿಗಿಂತ ಸರಳವಾದ ಕೊಬ್ಬರಿ ಎಣ್ಣೆ ಉತ್ತಮ ಆಯ್ಕೆ. ನಿಮ್ಮ ಎಣ್ಣೆಯನ್ನು ನೀವೇ ತಯಾರಿಸಿಕೊಳ್ಳುವವರಾದರೆ ಆ ಮಾತು ಬೇರೆ. ಹಾಗಲ್ಲದಿದ್ದರೆ, ಶುದ್ಧವಾದ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯಂಥವು ಕೂದಲಿಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತವೆ.
ಕೂದಲಿಗೆ ಎಣ್ಣೆ ಹಾಕುವ ಭರದಲ್ಲಿ ತಲೆ ನೆನೆಯುವಂತೆ ಎಣ್ಣೆ ಮೆತ್ತಿಕೊಳ್ಳಬೇಡಿ. ಇದರಿಂದ ಹಾಸಿಗೆ ದಿಂಬುಗಳೂ ಹಾಳಾಗಿ ಹೋಗುತ್ತವೆ. ಎಷ್ಟು ಎಣ್ಣೆ ನಿಮ್ಮ ತಲೆಗೆ ಬೇಕು ಎನ್ನುವುದು ನಿಮ್ಮ ಕೂದಲಿನ ಉದ್ದ, ದಪ್ಪಗಳನ್ನು ಅವಲಂಬಿಸಿದೆ. ತಲೆಯ ಬುಡವನ್ನು ಲಘುವಾಗಿ ಮಸಾಜ್‌ ಮಾಡಿ, ಉಜ್ಜುವ ಭರದಲ್ಲಿ ಕೂದಲು ಕಿತ್ತುಕೊಳ್ಳಬೇಡಿ. ತೀರಾ ಅಂಟಾದ ಎಣ್ಣೆಯೂ ಸೂಕ್ತವಲ್ಲ. ಹಗುರವಾದ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಿ.

Continue Reading

ಚಿಕ್ಕಬಳ್ಳಾಪುರ

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

Chikkaballapura News : ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ (Chintamani Taluk Hospital) ಒಂದು ವರ್ಷದ ಮಗುವನ್ನ ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್ ಆಗಿದ್ದಾಳೆ. ಮಗುವನ್ನು ತೊಟ್ಟಿಲಲ್ಲಿ ಹಾಕಿ ಬಿಟ್ಟೋಗ್ತಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

VISTARANEWS.COM


on

By

Chikkaballapura News
Koo

ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ಹೆತ್ತ ಮಗುವನ್ನು ಆಸ್ಪತ್ರೆಯಲ್ಲಿ (Chikkaballapura News) ಬಿಟ್ಟು ಓಡಿ ಹೋಗಿದ್ದಾಳೆ. ಒಂದು ವರ್ಷದ ಮಗುವನ್ನು ಆಸ್ಪತ್ರೆಯ ತೊಟ್ಟಿಲಲ್ಲಿ ಬಿಟ್ಟು ಹೋಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ (Chintamani Taluk Hospital) ನಡೆದಿದೆ.

ಮಗುವನ್ನು ತೊಟ್ಟಿಲಲ್ಲಿ ಹಾಕಿ ಹೋಗುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಕೆ ಮಗು ಬಿಟ್ಟು ಕ್ಷಣಾರ್ಧದಲ್ಲೇ ಮಾಯವಾಗಿದ್ದಾಳೆ.

ಮಗು ಅಳುವುದನ್ನು ಕಂಡು ಆಸ್ಪತ್ರೆಯ ಸಿಬ್ಬಂದಿ ತಾಯಿಗಾಗಿ ಹುಡುಕಾಟ ನಡೆಸಿ, ಅಕ್ಕಪಕ್ಕದವರನ್ನು ವಿಚಾರಿಸಿದ್ದಾರೆ. ಬಳಿಕ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದಾಗ ತರಾತುರಿಯಲ್ಲಿ ಬರುವ ಮಹಿಳೆ ಅತ್ತಿಂದಿತ್ತ ಕಣ್ಣಾಡಿಸಿ ಏಕಾಏಕಿ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಕಾಲ್ಕಿತ್ತಿದ್ದಾರೆ.

ಸದ್ಯ ಆಸ್ಪತ್ರೆ ಸಿಬ್ಬಂದಿ ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ್ವಯ ಪೊಲೀಸರು ಮಗುವಿನ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಮಹಿಳೆ ಯಾಕಾಗಿ ಮಗುವನ್ನು ಬಿಟ್ಟು ಹೋಗಿದ್ದಾಳೆ? ಆ ಮಗು ಆಕೆಯದ್ದಾ ಅಥವಾ ಬೇರೆಯವರದ್ದಾ? ಹೀಗೆ ಎಲ್ಲ ಆಯಾಮದಲ್ಲೂ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Murder case : ಹಾಸನದಲ್ಲಿ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ

ಹಾಸನ: ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ನಡುವೆ ಶುರುವಾದ ಜಗಳವು ಕೊಲೆಯಲ್ಲಿ (Murder case) ಅಂತ್ಯವಾಗಿದೆ. ದಯಾನಂದ್ (40) ಮೃತ ದುರ್ದೈವಿ. ಹಾಸನ ಜಿಲ್ಲೆಯ (Hasana News) ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ದಮ್ಮನಿಂಗಳ ಗ್ರಾಮದಲ್ಲಿ ಘಟನೆ ನಡೆದಿದೆ.

ಜಲಜೀವನ್ ಮಿಷನ್ ಯೋಜನೆಯ ನೀರಿನಲ್ಲಿ ಸಂಪರ್ಕ ಅಳವಡಿಸುವ ಜಾಗದ ವಿಷಯಕ್ಕೆ ದಯಾನಂದ್ ಹಾಗೂ ವರುಣ್ ನಡುವೆ ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು ಸಹೋದರರು ಚಾಕು ಹಾಗೂ ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.

ಈ ವೇಳೆ ದಯಾನಂದ್‌ ಸ್ಥಳದಲ್ಲೇ ಮೃತಪಟ್ಟರೆ, ವರುಣ್ (36) ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ವರುಣ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಪಕ್ಕದ ನಾಲ್ಕು ಅಡಿ ಜಾಗಕ್ಕಾಗಿ ಹಲವಾರು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು. ಇದೇ ಜಾಗಕ್ಕಾಗಿ ಸಹೋದರರ ನಡುವೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.

ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Team India
ಕ್ರೀಡೆ5 mins ago

Team India: ವಾಂಖೆಡೆ ಸ್ಟೇಡಿಯಂನಲ್ಲಿ ವಂದೇ ಮಾತರಂ ಹಾಡಿದ ಟೀಮ್​ ಇಂಡಿಯಾ; ವಿಡಿಯೊ ಹಂಚಿಕೊಂಡ ಎ.ಆರ್. ರೆಹಮಾನ್

Vastu Tips
ಧಾರ್ಮಿಕ13 mins ago

Vastu Tips: ಮನೆಯೊಳಗೆ ಎಲ್ಲೆಂದರಲ್ಲಿ ಕನ್ನಡಿ ಇಟ್ಟು ಕುಟುಂಬದ ನೆಮ್ಮದಿ ಹಾಳು ಮಾಡಬೇಡಿ!

assault case anekal
ಕ್ರೈಂ14 mins ago

Assault Case: ʼಏಯ್‌ ಹೋಗೋʼ ಅಂದಿದ್ದಕ್ಕೆ ವಿಕಲ ಚೇತನನನ್ನು ಕೊಚ್ಚಿ ಹಾಕಿದರು!

Anant-Radhika Wedding Justin Bieber arrives in Mumbai
ಬಾಲಿವುಡ್17 mins ago

Anant-Radhika Wedding: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮಕ್ಕೆ ಕೆನಡಾದ ಖ್ಯಾತ ಗಾಯಕ ಆಗಮನ; ಸಂಭಾವನೆ ಕೇಳಿದ್ರೆ ದಂಗಾಗ್ತೀರಾ!

Upcoming SUVs
ಆಟೋಮೊಬೈಲ್17 mins ago

Upcoming SUVs: ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಸ್ ಯು ವಿಗಳು

UK Election
ವಿದೇಶ21 mins ago

UK Election: ಬ್ರಿಟನ್‌ ಸಂಸತ್‌ ಚುನಾವಣೆ; ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಪಕ್ಷಕ್ಕೆ ಭಾರೀ ಹಿನ್ನಡೆ

Paris Olympics 2024
ಕ್ರೀಡೆ35 mins ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ದೇಶದ ಕ್ರೀಡಾಪಟುಗಳ ಶ್ರೇಷ್ಠ ಪ್ರದರ್ಶನ; ಮೋದಿ ವಿಶ್ವಾಸ

Prajwal Devaraj New Movie Rakshasa
ಸ್ಯಾಂಡಲ್ ವುಡ್42 mins ago

Prajwal Devaraj: ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಡೈನಾಮಿಕ್‌ ಪ್ರಿನ್ಸ್ `ಪ್ರಜ್ವಲ್ ದೇವರಾಜ್`

Hathras Stampede
ದೇಶ58 mins ago

Hathras Stampede: ಇಂದು ಹತ್ರಾಸಕ್ಕೆ ರಾಹುಲ್‌ ಗಾಂಧಿ; ಕಾಲ್ತುಳಿತ ಸಂತ್ರಸ್ತರ ಭೇಟಿ

Sleep Apnea
ಆರೋಗ್ಯ59 mins ago

Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast Rain
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ15 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ16 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ17 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ19 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ20 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ21 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ22 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ3 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ4 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌