Suicide prevention | ಈ ಸೂಚನೆಗಳನ್ನು ಗಮನಿಸಿದರೆ ಆತ್ಮಹತ್ಯೆ ತಡೆಯಬಹುದು Vistara News

ಆರೋಗ್ಯ

Suicide prevention | ಈ ಸೂಚನೆಗಳನ್ನು ಗಮನಿಸಿದರೆ ಆತ್ಮಹತ್ಯೆ ತಡೆಯಬಹುದು

ಆತ್ಮಹತ್ಯೆ ಮಾಡಿಕೊಳ್ಳಬಯಸುವವರು ಮುನ್ನವೇ ಹಲವು ಸೂಚನೆಗಳನ್ನು ನೀಡುತ್ತಾರೆ. ಈ ಸೂಚನೆಗಳನ್ನು ಗಮನಿಸಿ ಎಚ್ಚೆತ್ತುಕೊಂಡರೆ ಅವರನ್ನು ಉಳಿಸಿಕೊಳ್ಳಬಹುದು. ಅದ್ಯಾವುವು? ನೋಡಿ.

VISTARANEWS.COM


on

sucide prevention
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻಈಸಬೇಕು, ಇದ್ದು ಜಯಿಸಬೇಕುʼ ಎಂಬ ದಾಸವಾಣಿ ಎಲ್ಲ ಕಾಲಕ್ಕೂ ನಿಜ. ಅದರಲ್ಲೂ, ಭಾರತದಲ್ಲಿ ೨೦೨೧ರಲ್ಲಿ ೧.೧೬ ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಎನ್‌ಸಿಆರ್‌ಬಿ ವರದಿಯನ್ನು ನೋಡಿದ ಮೇಲೆ, ಈ ದಾಸವಾಣಿ ಇನ್ನಷ್ಟು ಅರ್ಥ ಹೊಳೆಯಿಸುತ್ತದೆ. ಹೀಗೆ ಜೀವ ತೆಗೆದುಕೊಂಡವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಯುವಕರು ಎಂಬುದು ಘೋರ ಸತ್ಯ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಆತ್ಮಹತ್ಯೆಗೆ ಶರಣಾದವರ ನಿಕಟವರ್ತಿಗಳು ಗಮನಿಸಿದರೆ, ಈ ದುರಂತವನ್ನು ತಡೆಯಲು ಪೂರ್ವ ಸೂಚನೆಗಳು ದೊರೆಯುತ್ತವೆ ಎನ್ನುತ್ತಾರೆ ಮನೋವಿಜ್ಞಾನಿಗಳು.

ವೃತ್ತಿಯ ಒತ್ತಡಗಳು, ಆರ್ಥಿಕ ಕಾರಣಗಳು, ಕೌಟುಂಬಿಕ ಹಿಂಸೆ, ಏಕಾಂಗಿತನ, ಆರೋಗ್ಯ ಸಮಸ್ಯೆಯಂಥ ನಾನಾ ಕಾರಣಗಳಿಗಾಗಿ ಜನ ಜೀವತೆಗೆದುಕೊಳ್ಳುವ ಕ್ರೂರ ನಿರ್ಧಾರ ಮಾಡುತ್ತಾರೆ. ಕೆಲವೊಮ್ಮೆ ಖಿನ್ನತೆ, ಒತ್ತಡ, ಆತಂಕ, ಅನಿಶ್ಚಿತತೆಯಂಥ ಮಾನಸಿಕ ಕಾರಣಗಳೂ ಇದಕ್ಕೆ ಕಾರಣವಾಗಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇಂಥ ವ್ಯಕ್ತಿಗಳು ಜೀವನ ಕೊನೆಗೊಳಿಸುವ ಸೂಚನೆಯನ್ನು ತಮ್ಮ ಸಮೀಪವರ್ತಿಗಳಿಗೆ ನೀಡುವ ಸಾಧ್ಯತೆಯಿದೆ. ಇವುಗಳನ್ನು ಗಮನಿಸಿದರೆ ಸಂಭವನೀಯ ಅನಾಹುತವನ್ನು ತಪ್ಪಿಸಬಹುದು.

ಹಾನಿಮಾಡಿಕೊಂಡ ಚರಿತ್ರೆ: ತಮಗೆ ತಾವೇ ಹಾನಿಮಾಡಿಕೊಂಡ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿದ ಇತಿಹಾಸ ಆ ವ್ಯಕ್ತಿಗಿದ್ದರೆ ಅಥವಾ ಅವರ ಕುಟುಂಬದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನೋಸ್ಥಿತಿ ಕಂಡುಬಂದರೆ ಈ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ಅದರಲ್ಲೂ ಅವರ ಕೈ-ಮೈ ಮೇಲೆ ಅರ್ಥವಾಗದ ಗಾಯಗಳು ಕಂಡುಬಂದರೆ ಜಾಗ್ರತೆ ಬೇಕೇಬೇಕು.

ಕುಡಿತ ಹೆಚ್ಚಾದರೆ: ಸರಿ-ತಪ್ಪುಗಳ ವಿವೇಚನೆ ಇಂಥವರಲ್ಲಿ ಎಲ್ಲಿಂದ ಬರಬೇಕು? ಅಲ್ಕೋಹಾಲ್‌ ಮಾತ್ರವಲ್ಲ, ತಂಬಾಕು, ಡ್ರಗ್ಸ್‌ ಸೇವನೆ ಮಾಡುವವರಲ್ಲೂ ಯೋಚನಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಇಂಥ ಯಾವುದೇ ಅತಿರೇಕಗಳು ಕಂಡುಬಂದರೂ ಅವರ ಸಮೀಪವರ್ತಿಗಳು ವೈದ್ಯರ ನೆರವು ಕೋರುವುದು ಉತ್ತಮ.

ಇದನ್ನೂ ಓದಿ | World Suicide Prevention Day | ಮನವ ತಿನ್ನುವ ಚಿಂತೆ ಬದುಕು ಮುಗಿಸದಿರಲು ಹೀಗೆ ಮಾಡಿ

ವರ್ತನೆಯಲ್ಲಿ ವಿಚಿತ್ರವಾದರೆ: ಇದು ಇನ್ನೊಂದು ಪ್ರಮುಖ ಸೂಚನೆ. ಸದಾ ಚಟುವಟಿಕೆಯಲ್ಲಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಮೌನವಾದರೆ, ಸಾಮಾಜಿಕವಾಗಿ ಹಿಂದೆ ಸರಿದರೆ, ಯಾರೊಂದಿಗೂ ಮಾತಾಡಲು ಹಿಂದೇಟು ಹಾಕಿದರೆ ಅಥವಾ ಹಿಂದಿನ ಯಾವುದೋ ತಪ್ಪಿಗಾಗಿ ಪರಿತಪಿಸುತ್ತಾ ಮತ್ತೆ ಮತ್ತೆ ಕ್ಷಮೆ ಕೋರುತ್ತಿದ್ದರೆ, ಇದನ್ನು ಖಂಡಿತಾ ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಬಹುದು.

ಹಾಗೆ ಮಾತಾಡುತ್ತಿದ್ದರೆ: ʻಜೀವನ ಸಾಕು ಅಥವಾ ಸತ್ತರೇ ಸುಖʼ ಎಂಬಂತೆ ಮಾತನಾಡುತ್ತಿದ್ದರೆ, ಆತ್ಮಹತ್ಯೆಯ ಬಗ್ಗೆ ಮಾಹಿತಿ ಅಥವಾ ವಸ್ತುಗಳನ್ನು (ಉದಾ, ನಿದ್ದೆ ಮಾತ್ರೆ) ಕಲೆ ಹಾಕುವುದು, ಏನಾದರೂ ಬರೆದಿಡುವುದು ಮುಂತಾದವು ಕಂಡುಬಂದರೆ ತಕ್ಷಣವೇ ಮನೋಚಿಕಿತ್ಸಕರ ನೆರವು ಅಗತ್ಯ. ಈ ಬಗ್ಗೆ ಅತ್ಯಂತ ಜಾಗರೂಕತೆಯಿಂದ ನಿಕಟವರ್ತಿಗಳು ವ್ಯವಹರಿಸಬೇಕು.

ಆಪ್ತರು ಏನು ಮಾಡಬಹುದು?: ಇಂಥ ವರ್ತನೆಗಳು ಕಂಡುಬಂದಾಗ, ಅವರನ್ನು ಒಂಟಿಯಾಗಿ ಬಿಡುವುದು ಸರಿಯಲ್ಲ. ಎಲ್ಲಾ ಸಂದರ್ಭಗಳಲ್ಲೂ ಯಾರಾದರೂ ಅವರ ಜೊತೆಗಿರುವುದು ಅಗತ್ಯ. ಆದಷ್ಟೂ ಶೀಘ್ರ ಮನೋಚಿಕಿತ್ಸಕರ ನೆರವು ಪಡೆಯಲು ಪ್ರೋತ್ಸಾಹಿಸಿ. ಎಲ್ಲರಿಗಿಂತ ಅವರು ಸಾಂತ್ವನದ ನುಡಿಗಳು ಸಂತ್ರಸ್ತರನ್ನು ಹೆಚ್ಚು ಜೀವನ್ಮುಖಿಯಾಗಿಸಬಹುದು. ಬದುಕು ಎಂದಿಗೂ ಹೀಗೆಯೇ ಇರುವುದಿಲ್ಲ, ಬದಲಾಗುತ್ತದೆ. ಈಗಿರುವ ಕಷ್ಟ ಕಳೆದು ಒಳ್ಳೆಯ ದಿನಗಳು ಬರುತ್ತವೆ ಎಂಬ ಭರವಸೆಯನ್ನು ಅವರಲ್ಲಿ ಬಿತ್ತುವುದು ಮುಖ್ಯ. ನೆನಪಿಡಿ, ಮುಳುಗುತ್ತಿರುವವನಿಗೆ ಹುಲ್ಲಿನಾಸರೆ ಎಂಬಂತೆ ಸಣ್ಣ ನೆರವೂ ಅವರನ್ನು ಬದುಕಿನತ್ತ ನಡೆಯಲು ಪ್ರೇರೇಪಿಸಬಹುದು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆತ್ಮಹತ್ಯೆ ಮಾಡ್ಕೊಬೇಕು ಅನ್ನೋ ಯೋಚನೆ ಇದ್ದರೆ ಅದಕ್ಕಿಂತ ಮೊದಲು ಒಮ್ಮೆ ಇದನ್ನು ಓದಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Winter blues: ಚಳಿಗಾಲದ ಅನಾರೋಗ್ಯದಿಂದ ಪಾರಾಗಲು ಬಿಸಿಲಿಗೆ ಹೋಗಿ!

ಕೊರೆಯುವ ಚಳಿಯಿರುವ, ಸದಾ ಮೋಡ ಕವಿದ, ಹಗಲು ಅತಿ ಕಡಿಮೆ ಇರುವ, ಹಿಮ ಸುರಿಯುವ ಪ್ರದೇಶಗಳಲ್ಲಿ ಚಳಿಗಾಲವನ್ನು ಆರೋಗ್ಯಪೂರ್ಣವಾಗಿ ಕಳೆಯುವುದೆಂದರೆ ಯಜ್ಞದಂತೆ. ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಅನಾರೋಗ್ಯ ಕಾಡಬಹುದು, ಖಿನ್ನತೆಯತ್ತ ಜಾರಬಹುದು. ಇದನ್ನೇ ʻವಿಂಟರ್‌ ಬ್ಲೂಸ್ʼ‌ ಅಥವಾ ಋತುಮಾನಗಳಲ್ಲಿ ಕಾಡುವ ಸಮಸ್ಯೆಗಳು (Seasonal affective disorder (SAD)) ಎಂದು ಕರೆಯಲಾಗುತ್ತದೆ.

VISTARANEWS.COM


on

Winter Blue
Koo

ʻದಿನ ಕಳೆಯುವುದೇ ತಿಳಿಯುತ್ತಿಲ್ಲʼ ಎಂದು ಗೊಣಗುವವರ ಮಾತು ಸುಳ್ಳೇನಲ್ಲ! ಅಂದರೆ, ಹಗಲು ಕಡಿಮೆ ರಾತ್ರಿ ದೀರ್ಘ ಇರುವ ದಿನಗಳಿವು. ಎಷ್ಟೊತ್ತಾದರೂ ಬೆಳಗಾಗದೆ, ಬೇಗ ಕತ್ತಲಾಗುವುದರಿಂದ ದಿನ ಕಳೆಯುವುದೇ ತಿಳಿಯುವುದಿಲ್ಲ. ಇದಿಷ್ಟೇ ಆದರೆ ಪರವಾಗಿಲ್ಲ. ಏನೋ ಮೋಡ ಕವಿದ ವಾತಾವರಣ, ಚಳಿ, ಗಾಳಿ, ಒಂಥರಾ ಬೋರು, ಯಾವುದಕ್ಕೂ ಮೂಡಿಲ್ಲ, ಬೆಳಗಾದರೆ…ಅಯ್ಯೋ, ಏಳಬೇಕಲ್ಲ; ದಿನದ ಕೆಲಸ-ಕಾರ್ಯಗಳೇ ಆದರೂ, ಹಾಳಾದ್ದು, ಮಾಡಬೇಕಲ್ಲ! ಎಂಬ ಮನಸ್ಥಿತಿ ಕಾಣಲಾರಂಭಿಸುತ್ತದೆ. ಚಳಿಗಾಲವೆಂಬುದು ವಿಶೇಷವಾಗಿ ಬಾಧಿಸದ ಪ್ರದೇಶಗಳಲ್ಲಿ ಇಂಥ ಮೂಡಿಲ್ಲದ ಅವಸ್ಥೆಗಳು ಅಷ್ಟಾಗಿ ಕಾಣಲಾರವು. ಆದರೆ ಕೊರೆಯುವ ಚಳಿಯಿರುವ, ಸದಾ ಮೋಡ ಕವಿದ, ಹಗಲು ಅತಿ ಕಡಿಮೆ ಇರುವ, ಹಿಮ ಸುರಿಯುವ ಪ್ರದೇಶಗಳಲ್ಲಿ ಚಳಿಗಾಲವನ್ನು ಆರೋಗ್ಯಪೂರ್ಣವಾಗಿ ಕಳೆಯುವುದೆಂದರೆ ಯಜ್ಞದಂತೆ. ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಅನಾರೋಗ್ಯ ಕಾಡಬಹುದು, ಖಿನ್ನತೆಯತ್ತ ಜಾರಬಹುದು. ಇದನ್ನೇ ʻವಿಂಟರ್‌ ಬ್ಲೂಸ್ʼ‌ ಅಥವಾ ಋತುಮಾನಗಳಲ್ಲಿ ಕಾಡುವ ಸಮಸ್ಯೆಗಳು (Seasonal affective disorder (SAD)) ಎಂದು ಕರೆಯಲಾಗುತ್ತದೆ. ಏನೀ ಸಮಸ್ಯೆ? ಏನದರ ಲಕ್ಷಣಗಳು? ಇಲ್ಲಿವೆ ವಿವರಗಳು.

Melancholic woman watching video on laptop at home

ಲಕ್ಷಣಗಳು:

ಏನೋ ಬೇಸರ, ಸದಾ ಮೂಡಿಲ್ಲದಿರುವುದು, ಕಿರಿಕಿರಿ, ಮುಗಿಯದ ಸೋಮಾರಿತನ, ಸಿಹಿ ಅಥವಾ ಹೊಟ್ಟೆಭಾರಎನಿಸುವ ಆಹಾರ ತಿನ್ನಬೇಕೆಂಬ ಚಪಲ, ಏರುವ ತೂಕ, ಯಾವುದಕ್ಕೂ ಶಕ್ತಿ ಸಾಲವೆಂಬ ಭಾವ, ಯಾವುದರಲ್ಲೂ ಏಕಾಗ್ರತೆ ಇಲ್ಲದಿರುವುದು, ಸರ್ವತ್ರ ನಿರಾಸಕ್ತಿ, ಮುಗಿಯದ ನಿದ್ದೆ, ಖಿನ್ನತೆ ಅಧಿಕವಾಗಿ ಬದುಕು ಸಾಕು ಎನಿಸುವುದು- ಇವೆಲ್ಲ ವಿಂಟರ್‌ ಬ್ಲೂಸ್‌ ಲಕ್ಷಣಗಳು.

ಯಾಕೆ ಹೀಗಾಗುತ್ತದೆ?

ಸೂರ್ಯನ ಬೆಳಕು ಕಡಿಮೆಯಾಗುವುದೇ ಇವೆಲ್ಲದರ ಮುಖ್ಯ ಕಾರಣ. ಇದರಿಂದ ದೇಹದ ಸರ್ಕಾಡಿಯನ್‌ವ್ಯವಸ್ಥೆಯಲ್ಲಿ ಅಥವಾ ದೇಹದ ಆಂತರಿಕ ಗಡಿಯಾರದಲ್ಲಿ ಏರುಪೇರು ಉಂಟಾಗುತ್ತದೆ. ಮೆದುಳಿಗೆ ಸಂದೇಶ ರವಾನಿಸುವ ಸೆರೊಟೋನಿನ್‌ ಚೋದಕಗಳ ಸ್ರವಿಸುವಿಕೆಯಲ್ಲಿ ವ್ಯತ್ಯಾಸ ಆಗುತ್ತಿದ್ದಂತೆ ಇಂಥ ತೊಂದರೆಗಳು ಗಂಟಿಕ್ಕಿಕೊಳ್ಳುತ್ತವೆ. ಹ್ಯಾಪಿ ಹಾರ್ಮೋನ್‌ ಎಂದೇ ಕರೆಯಲಾಗುವ ಸೆರೊಟೋನಿನ್‌ ಕಡಿಮೆಯಾಗುತ್ತಿದ್ದಂತೆ ಖಿನ್ನತೆಯತ್ತ ವಾಲುತ್ತೇವೆ. ಜೊತೆಗೆ, ಸೂರ್ಯನ ಬೆಳಕು ಕಡಿಮೆಯಾದಂತೆ ವಿಟಮಿನ್‌ ಡಿ ಮತ್ತು ಮೆಲಟೋನಿನ್‌ ಮಟ್ಟವೂ ಕುಸಿಯುತ್ತದೆ. ಇದರಿಂದ ಮೂಡಿಲ್ಲದಂಥ ಅವಸ್ಥೆ ಸಾಮಾನ್ಯ. ಅದರಲ್ಲೂ ಮಾನಸಿಕವಾಗಿ ಸೂಕ್ಷ್ಮ ಇರುವವರಲ್ಲಿ ಈ ಅವಸ್ಥೆಗಳು ಹೆಚ್ಚಾಗಿ ಕಂಡುಬರುತ್ತವೆ.

ಪರಿಣಾಮಗಳೇನು?

ಸಾಮಾನ್ಯವಾಗಿ ತೀವ್ರವಾದಂಥ ಪರಿಣಾಮಗಳು ಅಥವಾ ಆರೋಗ್ಯದ ಗಂಭೀರ ಏರುಪೇರುಗಳು ಕಾಣುವುದುಕಡಿಮೆ. ಉದಾ, ದೈನಂದಿನ ಕೆಲಸಗಳಿಗೆ ತೊಂದರೆಯಾಗಬಹುದು, ಸಾಮಾಜಿಕ ಚಟುವಟಿಕೆಗಳು ಏರುಪೇರಾಗಬಹುದು. ಆದರೆ ವ್ಯಕ್ತಿಗತವಾಗಿ ಅಥವಾ ಕೌಟುಂಬಿಕವಾಗಿ ಖಿನ್ನತೆಯ ಚರಿತ್ರೆಯಿದ್ದರೆ ಮಾತ್ರ ವೈದ್ಯಕೀಯವಾಗಿಯೇ ಪರಿಹಾರ ಅರಸಬೇಕಾಗುತ್ತದೆ. ಅದಿಲ್ಲದಿದ್ದರೆ, ಮಾದಕ ವಸ್ತುಗಳ ವ್ಯಸಕ, ಕುಡಿತದಂಥ ಚಟಗಳತ್ತ ಜಾರದಂತೆ ಕುಟುಂಬದವರು ಗಮನಿಸಬೇಕಾಗುತ್ತದೆ.

ಪರಿಹಾರವಿದೆಯೇ?

ಖಂಡಿತ ಈ ಸಮಸ್ಯೆಗೆ ಪರಿಹಾರವಿದೆ. ಎಲ್ಲಕ್ಕಿಂತ ಮುಖ್ಯವಾಗಿ ದಿನದ ಯಾವ ಹೊತ್ತಿಗಾದರೂ ಸರಿ, ಬಿಸಿಲಿಗೆಹೋಗಿ. ಸೂರ್ಯನ ಬೆಳಕು ದೇಹದ ಮೇಲೆ ಬೀಳುವುದು ಅತ್ಯಗತ್ಯ. ಅದಿಲ್ಲದೆಯೇ ಇಷ್ಟೆಲ್ಲಾ ಸಮಸ್ಯೆಗಳು ಬೆನ್ನು ಬೀಳುತ್ತಿವೆ. ಹಾಗಾಗಿ, ಮೋಡದ ಮರೆಯ ಬಿಸಿಲಾದರೂ ಸರಿ, ಗಾಳಿ-ಬಿಸಿಲು ಬೇಕು.
ದಿನದ ಚಟುವಟಿಕೆಗಳಿಗೆ ಸರಿಯಾದ ನಿಯಮ ಮಾಡಿಕೊಳ್ಳಿ. ಅಂದರೆ, ದಿನವೂ ಸಮಯಕ್ಕೆ ಸರಿಯಾಗಿ ಮಲಗುವುದು, ಏಳುವುದು ಅಗತ್ಯ. ಇದರಿಂದ ವ್ಯತ್ಯಾಸವಾಗಿರುವ ದೇಹದ ಆಂತರಿಕ ಗಡಿಯಾರಕ್ಕೆ ಹೊಂದಿಕೊಳ್ಳಲು ಅನುಕೂಲವಾಗುತ್ತದೆ. ದೈಹಿಕ ಚಟುವಟಿಕೆಗಳಿಗೆ ಎಂದಿಗೂ ರಜಾ ಕೊಡಬೇಡಿ. ಬೆಳಗಿನ ವಾಕಿಂಗ್‌ ಮಾಡುವವರು ನೀವಾದರೆ, ಚಳಿಯ ನೆವವನ್ನೊಡ್ಡಿ ತಪ್ಪಿಸಬೇಡಿ. ಹವಾಮಾನ ಚೆನ್ನಾಗಿಲ್ಲದಿದ್ದರೆ ಒಳಾಂಗಣದ್ದೇ ಏನಾದರೂ ಚಟುವಟಿಕೆ ಮಾಡಿ, ಆದರೆ ದೇಹವನ್ನು ಜಡವಾಗಲು ಬಿಡಬೇಡಿ.

ಬಾಯಿ ಬೇಡುತ್ತದೆ ಎನ್ನುವ ನೆವಕ್ಕೆ ಸಿಕ್ಕಿದ್ದೆಲ್ಲಾ ತಿನ್ನಬೇಡಿ. ಸತ್ವಪೂರ್ಣ ಆಹಾರ ಸೇವನೆಯು ಬೇಡದ ಚಪಲಗಳಿಗೆ ಕಡಿವಾಣ ಹಾಕಲು ನೆರವಾಗುತ್ತದೆ. ವಿಟಮಿನ್‌ ಡಿ ಆಹಾರಗಳನ್ನು ಮರೆಯದೆ ಸೇವಿಸಿ. ಪೂರಕ ಮಾತ್ರೆಗಳು ಅಗತ್ಯ ಎನಿಸಿದರೆ ವೈದ್ಯರಲ್ಲಿ ಸಲಹೆ ಪಡೆಯಿರಿ. ಇಷ್ಟದ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಸ್ನೇಹಿತರನ್ನು ಭೇಟಿ ಮಾಡಿ. ಬಂಧು-ಮಿತ್ರರೊಂದಿಗೆ ಹರಟಿ. ಸಂಗೀತ ಕೇಳುವುದು, ಸಿನೆಮಾ ನೋಡುವುದು, ಪ್ರವಾಸ ಹೋಗುವುದು ಮುಂತಾದ ಚೇತೋಹಾರಿ ಎನಿಸುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಕೆಲವೇ ದಿನಗಳಲ್ಲಿ ಚಳಿಗಾಲ ಮುಗಿದು ಬೇಸಿಗೆ ಬರುತ್ತದೆ ಎಂಬುದನ್ನು ನಿಮಗೆ ನೀವೆ ಆಗಾಗ ನೆನಪು ಮಾಡಿಕೊಡಿ.

ಇದನ್ನೂ ಓದಿ: Keep Your Heart Healthy: ಹೀಗೆ ಮಾಡಿ ಹೃದಯವನ್ನು ಭದ್ರವಾಗಿಟ್ಟುಕೊಳ್ಳಿ!

Continue Reading

ಆರೋಗ್ಯ

Menstrual Pain: ಮುಟ್ಟಿನ ನೋವಿಗೆ ಮೆಫ್ಟಾಲ್‌ ಮಾತ್ರೆ ನುಂಗುತ್ತೀರಾ? ಹಾಗಾದರೆ ಹುಷಾರ್‌!

ಸಾಮಾನ್ಯವಾಗಿ ಬಹುತೇಕ ಮಂದಿ ದೇಹದ ಯಾವುದೇ ಭಾಗದಲ್ಲಿ ನೋವು ಕಂಡರೂ ಎಲ್ಲರೂ ತಕ್ಷಣ ನೋವಿನಿಂದ (menstrual pain) ಮುಕ್ತಿ ಪಡೆಯಲು ನೋವು ನಿವಾರಕ ಗುಳಿಗೆಯನ್ನು ಅಂದರೆ ಪೇನ್‌ ಕಿಲ್ಲರ್‌ ಮಾತ್ರೆಯನ್ನು ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಈ ಸಂಗತಿ ತಿಳಿದುಕೊಂಡಿರಿ.

VISTARANEWS.COM


on

Menstrual Pain
Koo

ಪ್ರತಿ ತಿಂಗಳು ಋತುಚಕ್ರದ ಸಂದರ್ಭ ಅತೀವವಾಗಿ ಕಾಡುವ ನೋವು (menstrual pain), ಮಾಂಸಖಂಡಗಳ ಸೆಳೆತಕ್ಕೆ ಮೆಫ್ಟಾಲ್‌ ಮಾತ್ರೆಯನ್ನು ಅನಾಯಾಸವಾಗಿ ನುಂಗಿ ನೆಮ್ಮದಿಯ ಉಸಿರು ಬಿಡುತ್ತೀರಾ? ಕೈಕಾಲು ಗಂಟು ನೋವು ಎಂಬ ಕಾರಣಕ್ಕೆ ಆಗಾಗ ಮೆಫ್ಟಾಲ್‌ ನುಂಗುವ ಅಭ್ಯಾಸ ನಿಮಗಿದೆಯೇ? ಹಾಗಾದರೆ ಎಚ್ಚರ. ಇದೀಗ ಭಾರತ ಸರ್ಕಾರವೇ ಅಧಿಕೃತವಾಗಿ ಈ ಬಗ್ಗೆ ಎಚ್ಚರಿಕೆ ನೀಡಿದೆ.

Black Woman, Stomach Pain and Digestion with

ಸಾಮಾನ್ಯವಾಗಿ ಬಹುತೇಕ ಮಂದಿ ದೇಹದ ಯಾವುದೇ ಭಾಗದಲ್ಲಿ ನೋವು ಕಂಡರೂ ಎಲ್ಲರೂ ತಕ್ಷಣ ನೋವಿನಿಂದ ಮುಕ್ತಿ ಪಡೆಯಲು ನೋವು ನಿವಾರಕ ಗುಳಿಗೆಯನ್ನು ಅಂದರೆ ಪೇನ್‌ ಕಿಲ್ಲರ್‌ ಮಾತ್ರೆಯನ್ನು ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಭಾರತದಲ್ಲಿ ಮೆಫ್ಟಾಲ್‌ ಎಂಬ ಮಾತ್ರೆ ಬಹಳ ಸುಲಭವಾಗಿ ಎಲ್ಲರೂ, ಏನೇ ನೋವುಗಳಿದ್ದರೂ ಬಳಸುವ ಸಾಮಾನ್ಯ ಮಾತ್ರೆ. ಪ್ರತಿ ಮನೆಯಲ್ಲೂ ಮೆಫ್ಟಾಲ್‌ ಎಂಬ ನೋವುನಿವಾರಕ ಆಪತ್ಬಾಂಧವನಂತೆ ಕೆಲಸ ಮಾಡುತ್ತಿರುತ್ತದೆ. ವೈದ್ಯರು ಈ ಮಾತ್ರೆಯನ್ನು ಬರೆದುಕೊಟ್ಟರೋ ಇಲ್ಲವೋ, ಬಹುತೇಕ ಎಲ್ಲರೂ, ಋತುಚಕ್ರದ ಸಂದರ್ಭದಲ್ಲಿ ಕಾಡುವ ಸೊಂಟನೋವು, ಕೈಕಾಲುಗಳಲ್ಲಿ ಸೆಳೆತ, ಹಿಂಡಿದಂಥ ನೋವು, ಸಂಧಿವಾತ, ಗಂಟುನೋವು, ಉಳುಕು, ಕೀಲುನೋವು, ಹಲ್ಲುನೋವು ಮತ್ತಿತರ ಏನೇ ನೋವು ಸಂಬಂಧೀ ಸಮಸ್ಯೆಗಳಿಗೆ ಧಾರಾಳವಾಗಿ ನುಂಗುವುದು ಮೆಫ್ಟಾಲ್‌ನನ್ನೇ. ಮಕ್ಕಳಿಗೂ ಇದನ್ನು ಕೊಡಲಾಗುತ್ತದೆ. ಈ ಅಭ್ಯಾಸ ನಿಮಗೂ ಇದ್ದರೆ ಹುಷಾರು. ಇದೀಗ ಇಂಡಿಯನ್‌ ಫಾರ್ಮಾಕೋಪೋಯಿಯಾ ಕಮಿಷನ್‌ (ಐಪಿಸಿ), ಈ ಮಾತ್ರೆಯನ್ನು ಬೇಕಾಬಿಟ್ಟಿಯಾಗಿ ನಿಮ್ಮ ಎಲ್ಲ ನೋವುಗಳಿಗೂ ಧಾರಾಳವಾಗಿ ತಿನ್ನಬೇಡಿ, ಇದರಿಂದ ಸಾಕಷ್ಟು ತೊಂದರೆಗಳು, ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ಎಚ್ಚರಿಸಿದೆ.

ಭಾರತದ ಫಾರ್ಮಾಕೋವಿಜಿಲೆನ್ಸ್‌ ಪ್ರೋಗ್ರಾಮ್‌ ಅಡಿಯಲ್ಲಿ, ಮಾತ್ರೆಗಳ ಅಡ್ಡ ಪರಿಣಾಮಗಳ ಬಗೆಗೆ ಅಧ್ಯಯನಗಳೂ ನಡೆಯುತ್ತಿದ್ದು ಇದೀಗ ಮೆಫ್ಟಾಲ್‌ ಬಗೆಗೆ ಈ ಆತಂಕಕಾರಿ ವಿಚಾರವನ್ನು ಹೊರಹಾಕಿದೆ. ಮೆಫ್ಟಾಲ್‌ನಂತಹ ಮಾತ್ರೆಯಿಂದ ತಾತ್ಕಾಲಿಕವಾಗಿ ನೋವು ಶಮನಗೊಂಡರೂ ಸಮಸ್ಯೆಯ ಮೂಲದಲ್ಲಿ ಪರಿಹಾರವಾಗಿರುವುದಿಲ್ಲ. ಆದರೆ, ಸುಲಭದ ದಾರಿ ಇದಾದ್ದರಿಂದ ಬಹುತೇಕರು ಈ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಆದರೆ, ಇದರಿಂದ ಸಾಕಷ್ಟು ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇದು ಹೇಳಿದೆ.

ಬಹುಮುಖ್ಯವಾಗಿ, ಮುಟ್ಟಿನ ದಿನಗಳಲ್ಲಿ ನೋವು ಅನುಭವಿಸುವ ಬಹುತೇಕ ಮಹಿಳೆಯರು ಪ್ರತೀ ತಿಂಗಳು ಮೆಫ್ಟಾಲ್‌ ಸೇವಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಮುಟ್ಟಿನ ನೋವನ್ನು ಆ ಸಮಯದಲ್ಲಿ ಕಡಿಮೆ ಮಾಡಬಹುದು. ಆದರೆ, ಮುಟ್ಟಿನ ನೋವಿಗೆ ಆಗುವ ಕಾರಣವನ್ನು ಬುಡದಿಂದ ತೆಗೆಯಲು ಸಹಾಯ ಮಾಡುವುದಿಲ್ಲ. ಮುಟ್ಟಿನ ನೋವಿಗೆ ಕಾರಣವೇನು ಎಂಬುದನ್ನು ಕಂಡುಹಿಡಿದು ಆ ನಿಟ್ಟಿನಲ್ಲಿ ಮಹಿಳೆಯರು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದೇ ಹೊರತು, ಈ ರೀತಿ ನೋವು ನಿವಾರಕ ಗುಳಿಗೆಗಳನ್ನು ತಿನ್ನುವುದರಿಂದ ಮುಂದೆ ಹಲವಾರು ಸಮಸ್ಯೆಗಳನ್ನು ಕೈಯಾರೆ ಆಹ್ವಾನ ಮಾಡಿದಂತಾಗುವುದು.

Woman with Stomach Ache, Menstrual Period Cramp, Abdominal Pain, Food Poisoning.

ಈ ಮೆಫ್ಟಾಲ್‌ನಲ್ಲಿರುವ ಮೆಫೆನಾಮಿಕ್‌ ಆಮ್ಲವು ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದ ಡ್ರೆಸ್‌ ಸಿಂಡ್ರೋಮ್‌ (Drug Reaction with Eosinophilia and Systemic Symptoms) ಕೂಡಾ ಉಂಟಾಗಬಹುದು. ಇದು ತೀವ್ರ ಅಲರ್ಜಿಯಂಥ ಸಮಸ್ಯೆಯಾಗಿದ್ದು, ಮೆಫ್ಟಾಲ್‌ ಸೇವಿಸಿದ ಎರಡರಿಂದ ಎಂಟು ವಾರಗಳ ಸಮಯದಲ್ಲಿ ಚರ್ಮದ ಮೇಲೆ ದದ್ದು, ಗುಳ್ಳೆ, ಉರಿಯೂತ, ಹಾಗೂ ಜ್ವರ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ, ಮೆಫ್ಟಾಲ್‌ ನೀವು ಸೇವಿಸಿದ್ದರೆ, ಆಗಾಗ ಸೇವಿಸುವ ಅಭ್ಯಾಸವಿದ್ದರೆ ಜಾಗರೂಕತೆ ವಹಿಸಿ. ಮೆಫ್ಟಾಲ್‌ ಸೇವಿಸಿದ ಮೇಲೆ ಈ ಲಕ್ಷಣಗಳು, ಸಮಸ್ಯೆಗಳು ಕಾಣಿಸಿಕೊಂಡರೆ, ಜನರು www.ipc.gov.in ವೆಬ್‌ಸೈಟ್‌ ಅಥವಾ ಆಂಡ್ರಾಯ್ಡ್‌ ಮೊಬೈಲ್‌ ಅಪ್ಲಿಕೇಶನ್‌ ಎಡಿಆರ್‌, ಪಿವಿಪಿಐ ಮತ್ತು ಪಿವಿಪಿಐ ಸಹಾಯವಾಣಿ ಸಂಖ್ಯೆ 1800-180-3024 ಮೂಲಕ ರಾಷ್ಟ್ರೀಯ ಸಮನ್ವಯ ಕೇಂದ್ರಕ್ಕೆ ವರದಿ ಮಾಡಬೇಕು ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

Continue Reading

ಆರೋಗ್ಯ

Winter Foods: ಚಳಿಯಲ್ಲಿ ಮೆದುಳಿನ ಆರೈಕೆಗೆ ಬೇಕು ಈ ಆಹಾರಗಳು

ಚಳಿಗಾಲಕ್ಕೆ ಮೆದುಳಿಗೂ ಒಂದಿಷ್ಟು ಆರೈಕೆ ಬೇಕು. ಮಸ್ತಿಷ್ಕವನ್ನು ಪೋಷಿಸುವ ಆಹಾರಗಳು (foods to boost brain health) ಹೊಟ್ಟೆ ಸೇರಿದರೆ ಮಾತ್ರವೇ, ಈ ಋತುವನ್ನು ನಿರುಮ್ಮಳವಾಗಿ ಕಳೆಯಲು ಸಾಧ್ಯ. ಯಾವ ಆಹಾರಗಳವು?

VISTARANEWS.COM


on

Winter Foods
Koo

ಚಳಿಗಾಲದಲ್ಲಿ ಎಲ್ಲೆಡೆ (foods to boost brain health) ಮಬ್ಬು ಆವರಿಸಿದಂತೆ, ಮೆದುಳಿಗೂ ಮೋಡ ಕವಿದ ವಾತಾವರಣವೇ. ಬೆಳಗಾದರೂ ಹೆಬ್ಬಾವಿನಂತೆ ಬಿದ್ದುಗೊಂಡಿರುವುದು, ಎದ್ದರೂ ಚಟುವಟಿಕೆಯಿಲ್ಲದಿರುವುದು ಇಂಥವೆಲ್ಲ ಮಾಮೂಲಿಯಾಗುತ್ತದೆ. ಆದರೆ ನಮ್ಮ ಶರೀರ ಮತ್ತು ಮೆದುಳು ಎಂದಿಗಿಂತಲೂ ಹೆಚ್ಚಿಗೆ ಕೆಲಸ ಮಾಡಬೇಕು. ಹೊರಗಿನ ಚಳಿಗೆ ಪ್ರತಿಯಾಗಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಲು, ಆಗಾಗ ದಾಳಿ ಮಾಡುವ ಸೋಂಕುಗಳಿಗೆ ಪ್ರತಿರೋಧವಾಗಿ ಶರೀರ ಹೆಚ್ಚು ಕೆಲಸ ಮಾಡಬೇಕು. ಈ ಎಲ್ಲಾ ಕೆಲಸಗಳ ಜೊತೆಗೆ ದೇಹ-ಮನಸ್ಸುಗಳು ಮಬ್ಬು, ಜಡತೆಯತ್ತ ಜಾರದಿರುವಂತೆ ಮಾಡಲು ಮೆದುಳು ಇನ್ನೂ ಚುರುಕಾಗಬೇಕು. ಚಳಿಗಾಲದಲ್ಲಿ ಇದಕ್ಕಾಗಿಯೇ ಮೆದುಳಿಗೆ ಹೆಚ್ಚಿನ ಪೋಷಣೆ ಬೇಕು. ವರ್ಷಾಂತ್ಯದ ಪ್ರವಾಸ ಮತ್ತು ರಜೆಯ ನೆವದಲ್ಲಿ ಸುಲಭಕ್ಕೆ ದೊರೆಯುವಂಥದ್ದು ಮತ್ತು ಬಾಯಿಗೆ ರುಚಿಸುವಂಥ ಆಹಾರಗಳತ್ತ ಮನಸ್ಸು ಹರಿಯುವುದು ಸಹಜ. ಆದರೆ ಇಂಥ ದಿನಗಳಲ್ಲಿ ದೇಹಕ್ಕೆ ಅಗತ್ಯವಾದ ಆಹಾರಗಳನ್ನು ಒದಗಿಸಿದರೆ, ಚಳಿಗಾಲದ ಸೋಂಕುಗಳೊಂದಿಗೆ ಹೋರಾಡಲು ಶರೀರ ಸಿದ್ಧವಿರುತ್ತದೆ. ಜೊತೆಗೆ ಮೆದುಳು ಸಹ ಚೈತನ್ಯಪೂರ್ಣವಾಗಿ ಇರುತ್ತದೆ. ಈ ಸತ್ವಗಳನ್ನು ಪೂರೈಸುವುದಕ್ಕೆ ಎಂಥ ಆಹಾರಗಳು ಅಗತ್ಯ?

Mackerel fish on ice

ಕೊಬ್ಬಿನ ಮೀನುಗಳು

ಮೆದುಳಿನ ಟಾನಿಕ್‌ ಎಂದೇ ಕರೆಸಿಕೊಳ್ಳುವ ಸತ್ವವೆಂದರೆ ಒಮೇಗಾ ೩ ಕೊಬ್ಬಿನಾಮ್ಲ. ಇದು ಮೆದುಳಿನ ಕಾರ್ಯ ಮತ್ತು ಕ್ಷಮತೆಯನ್ನು ವೃದ್ಧಿಸುತ್ತದೆ. ಇದರಿಂದ ಮೆದುಳಿಗೆ ಬೇಕಾದ ಆಮ್ಲಜನಕದ ಪೂರೈಕೆ ಸಮೃದ್ಧವಾಗಿ ನಡೆದು, ಮೆದುಳು ಚುರುಕಾಗುತ್ತದೆ. ಒಮೇಗಾ ೩ ಕೊಬ್ಬಿನಾಮ್ಲ ಹೆಚ್ಚಿರುವ ಸಾಲ್ಮನ್‌ನಂಥ ಕೊಬ್ಬಿನ ಮೀನುಗಳು ಈ ಹೊತ್ತಿಗೆ ಉಪಯುಕ್ತ.

Various Edible Nuts and Seeds

ಕಾಯಿ-ಬೀಜಗಳು

ಎಲ್ಲಿಗೆ ಪ್ರಯಾಣಿಸುವಾಗಲೂ ಇವುಗಳನ್ನು ಒಯ್ಯುವುದು ಕಷ್ಟವಲ್ಲ. ಬಾದಾಮಿ, ವಾಲ್‌ನಟ್‌, ಶೇಂಗಾ, ಸೂರ್ಯಕಾಂತಿ ಮತ್ತು ಕುಂಬಳಕಾಯಿ ಬೀಜಗಳು, ಪಿಸ್ತಾ ಇತ್ಯಾದಿ ನಿಮ್ಮಿಷ್ಟ ಬೀಜಗಳನ್ನು ಇರಿಸಿಕೊಳ್ಳಬಹುದು. ಇದರಿಂದ ಮೆದುಳಿಗೆ ಬೇಕಾದ ಒಮೇಗಾ ೩ ಕೊಬ್ಬಿನಾಮ್ಲ ಹಾಗೂ ದೇಹಕ್ಕೆ ಬೇಕಾದ ಪ್ರೊಟೀನ್‌ ಮತ್ತು ಖನಿಜಗಳು ಸುಲಭವಾಗಿ ದೊರೆಯುತ್ತವೆ. ಪೌಷ್ಟಿಕವಾದ ಈ ಆಹಾರವನ್ನು ಹಸಿವಾದಾಗೆಲ್ಲ ಬಾಯಾಡಬಹುದು, ಗುಜರಿ ತಿಂಡಿಗಳ ಅಗತ್ಯವೇ ಬೀಳುವುದಿಲ್ಲ.

Green fruits and vegetables

ಹಸಿರು ತರಕಾರಿ-ಸೊಪ್ಪು

ಮೆದುಳಿಗೆ ಪೂರಕವಾದ ಆಹಾರಗಳಲ್ಲಿ ಫೋಲೇಟ್‌ ಮತ್ತು ವಿಟಮಿನ್‌ ಇ ಸಹ ಹೌದು. ದೇಹದಲ್ಲಿ ಮುಕ್ತ ಕಣಗಳು ಉಪಟಳ ಕೊಡದಂತೆ ಕಾಯುವಂಥ ಸೈನಿಕರಂತೆ, ಈ ಹಸಿರಿನಲ್ಲಿರುವ ಉತ್ಕರ್ಷಣ ನಿರೋಧಕಗಳು ವರ್ತಿಸುತ್ತವೆ. ಯಾವುದೇ ಹಸಿರು ಸೊಪ್ಪುಗಳು, ನುಗ್ಗೆಕಾಯಿ, ಬೆಂಡೆಕಾಯಿ, ಬ್ರೊಕೊಲಿ, ಎಲೆಕೋಸಿನಂಥ ಹಸಿರು ಬಣ್ಣದ ತರಕಾರಿಗಳು ಊಟದ ತಟ್ಟೆ ಮತ್ತು ಹೊಟ್ಟೆ ಸೇರಲಿ.

Avocado slices

ಅವಕಾಡೊ

ಅಥವಾ ಬೆಣ್ಣೆ ಹಣ್ಣು ಹೆಚ್ಚಾಗಿ ಸೇವಿಸಿದಂತೆ, ದೇಹ ಮತ್ತು ಮೆದುಳು ನಮಗೆ ಧನ್ಯವಾದ ಹೇಳುತ್ತದೆ. ಚಳಿಗಾಲದಲ್ಲಿ ಶರೀರಕ್ಕೆ ಅವಶ್ಯವಾಗಿ ಬೇಕಾದ ಕೆಲವು ಸೂಕ್ಷ್ಮ ಪೋಷಕಾಂಶಗಳು ಮತ್ತು ನಾರು ಇದರಲ್ಲಿ ಹೇರಳವಾಗಿದೆ. ಜೊತೆಗೆ ವಿಟಮಿನ್‌ ಇ ಮತ್ತು ಒಮೇಗಾ ೩ ಕೊಬ್ಬಿನಾಮ್ಲವಂತೂ ಇದ್ದೇಇದೆ. ಹಾಗಾಗಿ ಬೆಣ್ಣೆ ಹಣ್ಣು ಸಿಕ್ಕಾಗೆಲ್ಲಾ ಸೇವಿಸಿ. ಇದರಿಂದ ಹಲವು ರೀತಿಯಲ್ಲಿ ದೇಹ, ಮೆದುಳಿಗೆ ಪೋಷಣೆ ದೊರೆಯುತ್ತದೆ.

Tumeric Rhizome with Green Leaf and Turmeric Powder

ಅರಿಶಿನ

ಹಸಿಯಾದ ಅರಿಶಿನದ ಗಡ್ಡೆಗಳು ಅಥವಾ ಬೇರುಗಳು ಈ ಕಾಲದಲೂ ದೊರೆಯುತ್ತವೆ. ಇದರಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಮೆದುಳನ್ನು ಗಂಭೀರ ಹಾನಿಯಿಂದ ರಕ್ಷಿಸುತ್ತದೆ. ಸೋಂಕುಗಳಿಂದ ದೇಹದಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ಇದು ಪರಿಣಾಮಕಾರಿಯಾಗಿ ಶಮನ ಮಾಡುತ್ತದೆ. ಹಾಗಾಗಿ ಚಳಿಗಾಲದ ಅನಾರೋಗ್ಯಕ್ಕೆ ಅರಿಶಿನ ಒಳ್ಳೆಯ ಮದ್ದು. ಜೊತೆಗೆ ಮೆದುಳಿನ ಜಡತೆಗೂ ನೀಡುತ್ತದೆ ಗುದ್ದು!

Berries

ಬೆರ್ರಿಗಳು

ಬ್ಲೂಬೆರಿ, ಸ್ಟ್ರಾಬೆರಿ ಮುಂತಾದ ಎಲ್ಲಾ ಬೆರ್ರಿಗಳಲ್ಲೂ ವಿಟಮಿನ್‌ ಸಿ ಅಧಿಕವಾಗಿದೆ. ಈ ಉತ್ಕರ್ಷಣ ನಿರೋಧಕವು ದೇಹ, ಮೆದುಳುಗಳ ಪೋಷಣೆಗೆ ಅಗತ್ಯವಾದದ್ದು. ನೆನಪಿನ ಶಕ್ತಿ ಹೆಚ್ಚಿಸಿ, ಒತ್ತಡ ನಿವಾರಿಸಿ, ಮೆದುಳನ್ನು ಚಟುವಟಿಕೆಯಿಂದಿಡುವ ಈ ಪುಟ್ಟ ಹಣ್ಣುಗಳು ಬಾಯಿಯ ಚಪಲವನ್ನೂ ತಣಿಸುತ್ತವೆ.

Fenugreek Seeds

ಮೆಂತೆ

ಇದನ್ನು ಸೊಪ್ಪಿನ ರೂಪದಲ್ಲಾದರೂ ತಿನ್ನಿ ಅಥವಾ ಕಾಳುಗಳನ್ನಾದರೂ ಸೇವಿಸಿ. ದೇಹದ ಉರಿಯೂತಗಳನ್ನು ಶಮನ ಮಾಡುವಲ್ಲಿ ಮೆಂತೆ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿಯೇ ನೋವು ನಿವಾರಕ ಗುಣವನ್ನೂ ಮೆಂತೆ ಬೀಜಗಳು ಹೊಂದಿವೆ.

ಇದನ್ನೂ ಓದಿ: Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

Continue Reading

ಆರೋಗ್ಯ

Health Card: ಸರ್ಕಾರದ ಹೊಸ ಹೆಲ್ತ್‌ ಕಾರ್ಡ್‌; ದೇಶದ ಎಲ್ಲೆಡೆ ಸಿಗಲಿದೆ Treatment! ಏನಿದರ ವಿಶೇಷತೆ?

Health Card : ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೊರ್ಟಲ್‌ಗೆ ನೂತನ ಹೆಲ್ತ್ ಕಾರ್ಡ್‌ಗಳನ್ನು ಸಂಯೋಜನೆಗೊಳಿಸಲಾಗಿದ್ದು, ರಾಜ್ಯದ ಬಿಪಿಎಲ್ ಕಾರ್ಡುದಾರರು ದೇಶದ ಇತರೆ ರಾಜ್ಯಗಳಲ್ಲಿ ಹೆಲ್ತ್ ಕಾರ್ಡ್‌ನ ಅಡಿ ಚಿಕಿತ್ಸೆ ಪಡೆಯಬಹುದಾಗಿದೆ.

VISTARANEWS.COM


on

Arogya Karnataka New card Treatment
Koo

ಬೆಂಗಳೂರು: ಆಯುಷ್ಮಾನ್ ಭಾರತ್ (Ayushman Bharat) – ಆರೋಗ್ಯ ಕರ್ನಾಟಕ (Arogya Karnataka) ಹೆಲ್ತ್ ಕಾರ್ಡ್‌ಗಳಿಗೆ (Health Card) ಆರೋಗ್ಯ ಇಲಾಖೆ ಈಗ ಹೊಸ ರೂಪ ನೀಡಿದೆ. ಇದರ ಹೆಸರಿನಲ್ಲೂ ಅಲ್ಪ ಬದಲಾವಣೆಯಾಗಿದ್ದು, ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಎಂದು ಹೆಸರಿಡಲಾಗಿದೆ. ಇದರ ವೈಶಿಷ್ಟ್ಯತೆ ಎಂದರೆ ಈ ಕಾರ್ಡ್‌ ಹೊಂದಿದವರು ದೇಶದ ಯಾವುದೇ ಕಡೆ (ನೋಂದಾಯಿತ) ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ಈ ನವೀಕೃತ ಹೆಲ್ತ್ ಕಾರ್ಡ್‌ಗಳನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಡಿಸೆಂಬರ್‌ 6ರಂದು ಬಿಡುಗಡೆ ಮಾಡಿದ್ದಾರೆ. ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಹೆಲ್ತ್ ಕಾರ್ಡ್‌ ಅನ್ನು ರಾಜ್ಯದ 5.9 ಕೋಟಿ ಜನರಿಗೆ ವಿತರಿಸುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ.‌

Ayushman Bharat Arogya Karnataka Health Card

ಇತರೆ ರಾಜ್ಯಗಳಲ್ಲಿ ಚಿಕಿತ್ಸೆ ಪಡೆಯಬಹುದು

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೊರ್ಟಲ್‌ಗೆ ನೂತನ ಹೆಲ್ತ್ ಕಾರ್ಡ್‌ಗಳನ್ನು ಸಂಯೋಜನೆಗೊಳಿಸಲಾಗಿದ್ದು, ರಾಜ್ಯದ ಬಿಪಿಎಲ್ ಕಾರ್ಡುದಾರರು ದೇಶದ ಇತರೆ ರಾಜ್ಯಗಳಲ್ಲಿ ಹೆಲ್ತ್ ಕಾರ್ಡ್‌ನ ಅಡಿ ಚಿಕಿತ್ಸೆ ಪಡೆಯಬಹುದಾಗಿದೆ.

6 ತಿಂಗಳಲ್ಲಿ 5.09 ಕೋಟಿ ಮಂದಿಗೆ ಕಾರ್ಡ್‌ ವಿತರಣೆ ಗುರಿ

ರಾಜ್ಯದಲ್ಲಿರುವ ಒಟ್ಟು 5.09 ಕೋಟಿ ಫಲಾನುಭವಿಗಳಿಗೆ ಮುಂದಿನ 6 ತಿಂಗಳ ಒಳಗಾಗಿ “ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಕಾರ್ಡ್‌ ಸೃಜನೆ ಮತ್ತು ವಿತರಣಾ ಗುರಿಯನ್ನು ಹೊಂದಲಾಗಿದೆ.

ರಾಜ್ಯದ ಪಾಲು ಶೇ.66 ಮತ್ತು ಕೇಂದ್ರದ ಪಾಲು ಶೇ. 34

ಈ ಯೋಜನೆಯ ಒಟ್ಟು ಅನುದಾನದ ಪಾಲಿನಲ್ಲಿ ರಾಜ್ಯ ಸರ್ಕಾರವು ಶೇ.66 ರಷ್ಟು ನೀಡುತ್ತಿದ್ದರೆ, ಕೇಂದ್ರ ಸರ್ಕಾರವು 34% ನೀಡುತ್ತಿದೆ.

ವಾರ್ಷಿಕ 5 ಲಕ್ಷ ರೂ. ಮೌಲ್ಯದ ಚಿಕಿತ್ಸೆ ಪಡೆಯಬಹುದು

ಈ ಯೋಜನೆಯಡಿಯಲ್ಲಿ BPL ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳು ವಾರ್ಷಿಕ 5 ಲಕ್ಷ ರೂ. ಮೌಲ್ಯದ ಚಿಕಿತ್ಸೆಯನ್ನು ಕುಟುಂಬದ ಒಬ್ಬರು ಅಥವಾ ಹಲವರು Family Floater ಆಧಾರದ ಮೇಲೆ ಬಳಸಿಕೊಳ್ಳಬಹುದು.‌

ಎಪಿಎಲ್‌ನವರಿಗೆ ಗರಿಷ್ಠ ರೂ.1.5 ಲಕ್ಷ ವೆಚ್ಚ ಪಾವತಿ

APL ಕುಟುಂಬದವರಿಗೂ ಸಹ ಯೋಜನೆಯಲ್ಲಿ ಅವಕಾಶ ಕಲ್ಪಿಸಿರುವ ಮೊದಲ ರಾಜ್ಯ ಕರ್ನಾಟಕವಾಗಿದ್ದು, APL ಕುಟುಂಬಗಳಿಗೆ 5 ಲಕ್ಷದ ರೂ. ಮೌಲ್ಯದ ಚಿಕಿತ್ಸೆಯಲ್ಲಿ ಗರಿಷ್ಠ ರೂ.1.5 ಲಕ್ಷ ವೆಚ್ಚವನ್ನು ರಾಜ್ಯ ಸರ್ಕಾರ ಪಾವತಿಸಲಿದೆ. ಎಪಿಎಲ್ ಕಾರ್ಡುದಾರರು ಶೇ. 70 ರಷ್ಟು ಚಿಕಿತ್ಸಾ ವೆಚ್ಚವನ್ನು ಪಾವತಿಸಿದರೆ, ಶೇ.30ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.\

1650 ಚಿಕಿತ್ಸಾ ಪ್ಯಾಕೇಜ್‌ಗಳು ಲಭ್ಯ

ಪ್ರಸ್ತುತ ರಾಜ್ಯದಲ್ಲಿ 3450ಕ್ಕೂ ಹೆಚ್ಚಿನ ಆರೋಗ್ಯ ಸಂಸ್ಥೆಗಳು “ಆಯುಷ್ಮಾನ್‌ ಭಾರತ್- “ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಯೋಜನೆಯಲ್ಲಿ ಸೇವೆ ನೀಡಲು ನೋಂದಾಯಿಸಿಕೊಂಡಿರುತ್ತಾರೆ. ಸುಮಾರು 1650 ಚಿಕಿತ್ಸಾ ಪ್ಯಾಕೇಜ್‌ಗಳು ರಾಜ್ಯದ ಎಲ್ಲ ಸಾರ್ವಜನಿಕ ಆಸ್ಪತ್ರೆ ಮತ್ತು 540 ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ. 171 ಅತ್ಯಂತ ತುರ್ತು ಚಿಕಿತ್ಸೆಯ ಮತ್ತು ಜೀವ ಉಳಿಸುವ ಪ್ಯಾಕೇಜ್‌ಗಳನ್ನು ಒಳಗೊಂಡಿದೆ.

60:40 ಅನುಪಾತದಲ್ಲಿ ಅನುದಾನ

ರಾಜ್ಯದಲ್ಲಿ 1.15 ಕೋಟಿ ಬಿಪಿಎಲ್‌ ಕುಟುಂಬಗಳಿದ್ದು, ಇದರಲ್ಲಿ 69 ಲಕ್ಷ SECC 2011 ಸಮೀಕ್ಷೆಯಂತೆ ಬಡತನ ರೇಖೆಗಿಂತ ಕೆಳಗಿವೆ. ಕೇಂದ್ರ ಸರ್ಕಾರ ಈ ಕುಟುಂಬಗಳಿಗೆ 60:40 ಅನುಪಾತದಲ್ಲಿ ಅನುದಾನ ಒದಗಿಸುತ್ತಿದೆ. ರಾಜ್ಯ ಸರ್ಕಾರವು ಉಳಿದ 46 ಲಕ್ಷ ಬಿಪಿಎಲ್‌ ಹಾಗೂ 19 ಲಕ್ಷ ಎಪಿಎಲ್‌ ಕುಟುಂಬಗಳಿಗೆ 100% ಅನುದಾನ ಒದಗಿಸುತ್ತಿದೆ.

ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸಿಲ್ವಾ? ಕೂಡಲೇ ಈ ಕೆಲಸ ಮಾಡಿ!

ಸುಲಭವಾಗಿ ನೋಂದಾಯಿಸಿ

ಆಯುಷ್ಮಾನ್‌ ಭಾರತ್‌ – ಪ್ರಧಾನ ಮಂತ್ರಿ ಜನಾರೋಗ್ಯ ಯೋಜನಾ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯ Co-branded ಗುರುತಿನ ಚೀಟಿಗಳಾಗಿದ್ದು, Co-branded ಗುರುತಿನ ಚೀಟಿಗಳನ್ನು ಉಚಿತವಾಗಿ ನೀಡಲಾಗುವುದು.‌ ಈ ಗುರುತಿನ ಚೀಟಿಗಳನ್ನು ರಾಷ್ಟ್ರೀಯ ಆರೋಗ್ಯ ID (ABHA ID) ಯೊಂದಿಗೆ ಜೋಡಿಸಲಾಗಿರುತ್ತದೆ. ಇದರಿಂದ ಫಲಾನುಭವಿಗಳ ವ್ಯೆದ್ಯಕೀಯ ದಾಖಲೆಗಳನ್ನು ಸಂರಕ್ಷಿಸಿ ಸುಲಭ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ನೆರವಾಗುತ್ತದೆ. ಪಡಿತರ ಚೀಟಿಯೊಂದಿಗೆ ಜೋಡಿಸಲಾದ ಮೂಲ ಆಧಾರ್‌ ಗುರುತಿನ ಚೀಟಿಯ ಸಹಾಯದಿಂದ ಹತ್ತಿರದ ಗ್ರಾಮ-1 ಕೇಂದ್ರಗಳು ಅಥವಾ ನಾಗರೀಕ ಸೇವಾ “ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಗುರುತಿನ ಚೀಟಿಗಳನ್ನು ಸುಲಭವಾಗಿ ನೋಂದಾಯಿಸಿ ಪಡೆಯಬಹುದಾಗಿರುತ್ತದೆ.

Continue Reading
Advertisement
Killers who killed lawyer for property in kalaburagi
ಕರ್ನಾಟಕ7 mins ago

ವಕೀಲನ ಹತ್ಯೆ ಮಾಡಿ ರಕ್ತದ ಕೈಯಲ್ಲೇ ದಂಪತಿಯಿಂದ ಹಣ ಪಡೆದಿದ್ದ ಸುಪಾರಿ ಕಿಲ್ಲರ್ಸ್‌!

air india
ಉದ್ಯೋಗ8 mins ago

Job Alert: ಏರ್‌ ಇಂಡಿಯಾದಲ್ಲಿದೆ ಉದ್ಯೋಗಾವಕಾಶ; ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

man accused of murder wins acquittal after studying law and fighting own Case
ದೇಶ12 mins ago

ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಮಾಯಕ, ಲಾ ಓದಿ ತನ್ನ ಕೇಸನ್ನು ತಾನೇ ಗೆದ್ದ!

Kate Cross reveals ‘soft spot for RCB’ after bagging deal
ಕ್ರಿಕೆಟ್13 mins ago

ಚೆನ್ನೈ ತಂಡದ ಕಟ್ಟರ್‌ ಅಭಿಮಾನಿಯನ್ನು ಖರೀದಿ ಮಾಡಿದ ಆರ್​ಸಿಬಿ ಫ್ರಾಂಚೈಸಿ

Mysore people
ಕರ್ನಾಟಕ20 mins ago

Congress Guarantee: ಸಿಎಂ ಸಿದ್ದರಾಮಯ್ಯ ತವರಲ್ಲೇ ಸಿಗದ ಗ್ಯಾರಂಟಿ ಯೋಜನೆಗಳು; ಸ್ಲಂ ನಿವಾಸಿಗಳ ಪರದಾಟ

Winter Food Tips
ಆಹಾರ/ಅಡುಗೆ36 mins ago

Winter Food Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ದೇಸೀ ಸಿಹಿತಿಂಡಿಗಳಿವು!

ipl fans
ಕ್ರಿಕೆಟ್1 hour ago

IPL 2024: ಕ್ರಿಕೆಟ್​ ಪ್ರಿಯರಿಗೆ ಗುಡ್​ ನ್ಯೂಸ್​; ಐಪಿಎಲ್​ ಆರಂಭಕ್ಕೆ ಡೇಟ್​ ಫಿಕ್ಸ್!​

Moral policing
ಕರ್ನಾಟಕ1 hour ago

Moral Policing: ಉಪ್ಪಿನಂಗಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿ ಜೋಡಿಗೆ ತಡೆದು ಧಮಕಿ!

Akash anand is BSP Leader mayawati's political heir
ದೇಶ1 hour ago

Akash Anand: ಯಾರಿವರು ಮಾಯಾವತಿ ಉತ್ತರಾಧಿಕಾರಿ ಆಕಾಶ್ ಆನಂದ್?

Cloudy weather in Bengaluru for the entire day Rain Forecast
ಉಡುಪಿ1 hour ago

Karnataka weather: ಬೆಂಗಳೂರಲ್ಲಿ ನಾಳೆ ಇಡೀ ದಿನ ಮೋಡ ಕವಿದ ವಾತಾವರಣ; ಇಲ್ಲಷ್ಟೇ ಮಳೆ ಸೂಚನೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ3 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ6 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ14 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌