Health Benefits Of Green Beans: ಹುರುಳಿಕಾಯಿ ಎಂಬ ಸರಳ ತರಕಾರಿಯ ಸದ್ಗುಣಗಳು ಹಲವು! - Vistara News

ಆರೋಗ್ಯ

Health Benefits Of Green Beans: ಹುರುಳಿಕಾಯಿ ಎಂಬ ಸರಳ ತರಕಾರಿಯ ಸದ್ಗುಣಗಳು ಹಲವು!

ಸೂಪರ್‌ಫುಡ್‌ಗಳ ಭರಾಟೆಯಲ್ಲಿ ನಮ್ಮ ಅಂಗಳದಲ್ಲಿ ಬೆಳೆಯಬಹುದಾದ ಹುರುಳಿಕಾಯಿ (health benefits of green beans) ಎಂಬ ಸರಳ ತರಕಾರಿಯನ್ನು ಮರೆಯುವಂತಿಲ್ಲ. ಎಲ್ಲಾ ರೀತಿಯ ಅಡುಗೆಗಳಿಗೂ ಹೊಂದಿಕೊಳ್ಳಬಲ್ಲ ಈ ಬೀನ್ಸ್‌ ತಿನ್ನುವುದ ಹಿಂದಿನ ಪ್ರಯೋಜನಗಳನ್ನು ತಿಳಿಯೋಣ.

VISTARANEWS.COM


on

Green Beans
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಲ್ಲೆಡೆ ಸೂಪರ್‌ ಫುಡ್‌ಗಳ ಸಡಗರ. ಒಂದೇ ಆಹಾರದಲ್ಲಿ ಅತಿ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದಾದರೆ ಅಂಥ ಆಹಾರಗಳಿಗೆ ಆದ್ಯತೆ. ದೇಹಕ್ಕೆ ಬೇಕಾದ ಹಲವು ಸತ್ವಗಳಿಗಾಗಿ ನಾನಾ ರೀತಿಯ ಆಹಾರಗಳನ್ನು ತಿನ್ನುವುದಕ್ಕೆ ಅಥವಾ ತಯಾರಿಸುವುದಕ್ಕೆ ಈಗ ಯಾರಿಗೂ ಹೊತ್ತಿಲ್ಲ. ಅದಕ್ಕಾಗಿಯೇ ಖಂಡಾಂತರ ಪ್ರವಾಸ ಮಾಡಿ ಬಂದ ಹಣ್ಣು-ತರಕಾರಿಗಳು ಮಾರುಕಟ್ಟೆಯ ದುಬಾರಿ ಬೆಲೆಯ ವಿಭಾಗದಲ್ಲಿ ಕುಳಿತುಕೊಳ್ಳುತ್ತವೆ. ತುಟ್ಟಿಬೆಲೆಯ ಧಾನ್ಯಗಳದ್ದೂ ಅದೇ ಕತೆ. ಇಂಥವೆಲ್ಲ ಪೌಷ್ಟಿಕ ಹೌದಾಗಿದ್ದರೂ, ಸತ್ವಗಳಿಗಾಗಿ ಅವುಗಳನ್ನೇ ಅವಲಂಬಿಸಬೇಕೆಂದಿಲ್ಲ. ನಮ್ಮ ಹಿತ್ತಲಲ್ಲಿ ಬೆಳೆಯಬಲ್ಲ ತರಕಾರಿಗಳಲ್ಲೂ ಪೌಷ್ಟಿಕಾಂಶ ಕಡಿಮೆಯೇನಿಲ್ಲ. ಉದಾಹರಣೆಗೆ, ಬೀನ್ಸ್‌ ಎಂದು ಕರೆಸಿಕೊಳ್ಳುವ ಹುರುಳಿಕಾಯನ್ನೇ ತೆಗೆದುಕೊಳ್ಳಿ. ನಂನಮ್ಮ ಹಿತ್ತಲಲ್ಲಿ ಅಥವಾ ಬಾಲ್ಕನಿಯ ಕುಂಡಗಳಲ್ಲೇ ನಾಲ್ಕು ಬೀಜ ಬಿತ್ತಿದರೆ ಬೆಳೆಯಬಹುದಾದರೆ ಬಳ್ಳಿಯೂ ಸಾಕು ಹುರುಳಿಕಾಯಿ ಕೊಯ್ಯುವುದಕ್ಕೆ. ಏನೀ ತರಕಾರಿ (health benefits of green beans) ತಿನ್ನುವುದರ ಲಾಭಗಳು?

Green Beans benefits

ಸತ್ವಗಳು ಬಹಳ

ನಾರು ಹೆಚ್ಚು, ಕ್ಯಾಲರಿ ಕಡಿಮೆ ಎನ್ನುವಂಥ ಈ ತರಕಾರಿಯಲ್ಲಿ ಸತ್ವಗಳೂ ಸಾಕಷ್ಟಿವೆ. ಎ, ಸಿ, ಮತ್ತು ಕೆ ಜೀವಸತ್ವಗಳು ಇದರಲ್ಲಿ ಹೇರಳವಾಗಿವೆ. ಜೊತೆಗೆ ಮ್ಯಾಂಗನೀಸ್‌, ಕ್ಯಾಲ್ಶಿಯಂ, ಮೆಗ್ನೀಶಿಯಂ, ಪೊಟಾಶಿಯಂ, ಫಾಸ್ಫರಸ್‌ ಹಾಗೂ ಫೋಲೇಟ್‌ನಂಥವು ಇದರಿಂದ ವಿಫುಲವಾಗಿ ದೇಹಕ್ಕೆ ದೊರೆಯುತ್ತವೆ. ಪಿಷ್ಟ ಮತು ಪ್ರೊಟೀನ್‌ಗಂತೂ ಕೊರತೆಯೇ ಇಲ್ಲ.

Heart Health Fish Benefits

ಹೃದಯದ ಮಿತ್ರ

ಇದರಲ್ಲಿರುವ ನಾರು ಹೃದಯದ ಆರೋಗ್ಯಕ್ಕೆ ಪೂರಕವಾದದ್ದು. ದೇಹದಲ್ಲಿ ಜಮೆಯಾಗಿರುವ ಕೊಬ್ಬು ಕಡಿತ ಮಾಡಿ, ಕೊಲೆಸ್ಟ್ರಾಲ್‌ ತಗ್ಗಿಸುವುದಕ್ಕೆ ಇದು ಅಗತ್ಯ. ಜೊತೆಗೆ ಇದರ ಪೊಟಾಶಿಯಂ ಅಂಶವು ರಕ್ತದೊತ್ತಡ ತಗ್ಗಿಸಿ, ಹೃದಯ ರೋಗಗಳು ಕಾಡದಂತೆ ಕಾಪಾಡುವಲ್ಲಿ ನೆರವಾಗುತ್ತದೆ.

Improved Digestion Tea Benefits

ಜೀರ್ಣಾಂಗಗಳು ಸಬಲ

ನಮ್ಮ ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸುವುದಕ್ಕೆ ಆಹಾರದಲ್ಲಿ ನೀರು-ನಾರು ಅಗತ್ಯವಾಗಿ ಬೇಕು. ಹುರುಳಿಕಾಯಲ್ಲಿರುವ ಕರಗದಿರುವ ನಾರಿನಂಶವು ಮಲಬದ್ಧತೆಯನ್ನು ನಿವಾರಿಸುತ್ತದೆ. ಜೊತೆಗೆ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸಿ, ಪಚನಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸುತ್ತದೆ.

Diabetes management Daruharidra Benefits

ಮಧುಮೇಹಿಗಳಿಗೆ ಸ್ನೇಹಿತ

ಹುರುಳಿಕಾಯಿಯ ಗ್ಲೈಸೆಮಿಕ್‌ ಸೂಚಿ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಇದು ಸೇವನೆಗೆ ಯೋಗ್ಯವಾದದ್ದು. ಇದರಲ್ಲಿರುವ ಗ್ಲೂಕೋಸ್‌ ಅಂಶ ತ್ವರಿತವಾಗಿ ರಕ್ತ ಸೇರುವುದಿಲ್ಲ. ಇದರಿಂದ ರಕ್ತದಲ್ಲಿ ಸಕ್ಕರೆಯಂಶ ದಿಢೀರ್‌ ಏರಿಳಿತ ಆಗದಂತೆ ಕಾಪಾಡುವುದು ಸಾಧ್ಯವಾಗುತ್ತದೆ.

Weight Loss Slim Body Healthy Lifestyle Concept Benefits Of Saffron

ತೂಕ ನಿರ್ವಹಣೆ

ನಾರು ಮತ್ತು ಪ್ರೊಟೀನ್‌ ಹೆಚ್ಚಿರುವ ಆಹಾರಗಳು ದೇಹದ ತೂಕ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಎರಡು ಅಂಶಗಳಿಂದ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ ಮತ್ತು ಬೇಗಸೆ ಹಸಿವಾಗುವುದಿಲ್ಲ. ಇದರಿಂದ ಮತ್ತೆ ಮತ್ತೆ ತಿನ್ನುವುದನ್ನು ತಪ್ಪಿಸಿ, ಹಸಿವನ್ನು ಮುಂದೂಡಬಹುದು. ಹಾಗಾಗಿ ತೂಕ ಇಳಿಕೆಗೆ ಇದು ನೆರವಾಗುತ್ತದೆ.

Eye Health Guava Benefits

ದೃಷ್ಟಿಗೆ ಪೂರಕ

ಇದರಲ್ಲಿರುವ ಕೆರೊಟಿನಾಯ್ಡ್‌ಗಳು ದೃಷ್ಟಿಯನ್ನು ಚುರುಕಾಗಿಸುತ್ತವೆ. ಇದರ ಬೀಟಾ ಕ್ಯಾರೊಟಿನ್‌ನಂಥ ಉತ್ಕರ್ಷಣ ನಿರೋಧಕಗಳು ವಯಸ್ಸಾದಂತೆ ದೃಷ್ಟಿ ಮಂದವಾಗುವ ಸಮಸ್ಯೆಯನ್ನು ಮುಂದೂಡುತ್ತವೆ. ವಿಟಮಿನ್‌ ಎ ಇರುವಂಥ ಆಹಾರಗಳೆಲ್ಲವೂ ಸಾಮಾನ್ಯವಾಗಿ ದೃಷ್ಟಿಯನ್ನು ಕಾಪಾಡುವಂಥ ಗುಣವನ್ನು ಹೊಂದಿರುತ್ತವೆ.

ಉತ್ಕರ್ಷಣ ನಿರೋಧಕಗಳು

ದೇಹದಲ್ಲಿ ಉರಿಯೂತ ಹೆಚ್ಚದಂತೆ, ಒಂದೊಮ್ಮೆ ಹೆಚ್ಚಿದ್ದರೆ ಕ್ರಮೇಣ ತಗ್ಗುವಂತೆ ಮಾಡುವ ಸಾಧ್ಯತೆ ಹುರುಳಿಕಾಯನ್ನು ನಿಯಮಿತವಾಗಿ ಸೇವಿಸುವುದರಲ್ಲಿ ಇದೆ. ಇದರ ಫ್ಲೆವನಾಯ್ಡ್‌ಗಳು ದೇಹದಲ್ಲಿರುವ ಮುಕ್ತ ಕಣಗಳನ್ನು ನಿರ್ಬಂಧಿಸಿ, ಮಾರಕ ರೋಗಗಳಿಂದ ರಕ್ಷಿಸುತ್ತವೆ. ಉರಿಯೂತದಿಂದಲೇ ವಕ್ಕರಿಸುವ ಆರ್ಥರೈಟಿಸ್‌ನಂಥ ರೋಗಗಳ ನಿಯಂತ್ರಣಕ್ಕೆ ನೆರವಾಗುತ್ತದೆ.

ಪಾಕ ವೈವಿಧ್ಯ

ಹುರುಳಿಕಾಯನ್ನು ಹಲವು ರೀತಿಯ ಅಡುಗೆಗಳಲ್ಲಿ ಉಪಯೋಗಿಸಬಹುದು. ಎಳೆಯದಾಗಿದ್ದಾಗ ಹಸಿಯಾಗಿ ಸಲಾಡ್‌ ಮಾಡಿ ತಿಂದರೂ ರುಚಿ. ಭಾತ್‌ಗಳಲ್ಲಿ ಪಲ್ಯ, ಹುಳಿ, ಗ್ರೇವಿಗಳಲ್ಲಿ, ಬೇಕ್‌ ಮಾಡಿದ ತರಕಾರಿಗಳ ಜೊತೆಗೆ, ಗ್ರಿಲ್ಲಿಂಗ್‌ನಲ್ಲೂ ಇದನ್ನು ಬಳಸಬಹುದು. ಯಾವುದೇ ಪಾಕಪದ್ಧತಿಗೆ ಹೊಂದಿಕೊಳ್ಳಬಲ್ಲದು ಈ ತರಕಾರಿ.

ಇದನ್ನೂ ಓದಿ: Coriander Benefits: ಕೊತ್ತಂಬರಿ ಸೊಪ್ಪು ಎಂಬ ಮಾಂತ್ರಿಕ: ಚರ್ಮದ ಯಾವುದೇ ಸಮಸ್ಯೆಗಳಿಗೂ ಇದರಿಂದ ಪರಿಹಾರ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ (healthy salad tips) ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ.

VISTARANEWS.COM


on

Healthy Salad Tips
Koo

ಪೋಷಕಾಂಶಯುಕ್ತ ಆಹಾರ ಎಂದಾಕ್ಷಣ ಸುಲಭವಾಗಿ ನೆನಪಿಗೆ ಬರುವುದು ಸಲಾಡ್‌ಗಳು. ಸುಲಭವಾಗಿ ಮಾಡಬಹುದಾದ, ಹೆಚ್ಚೂ ಶ್ರಮ ಬೇಡದ, ಬೇಗ ಹೊಟ್ಟೆ ತುಂಬಿಸುವ ಗುಣ ಉಳ್ಳ ಸಲಾಡ್‌ಗಳು ತೂಕ ಇಳಿಸುವ ಮಂದಿಯ ಪರಮಾಪ್ತ ಸ್ನೇಹಿತನಂತೆ. ಕಚೇರಿಗಳಿಗೆ ಬಿಡು ಹೊತ್ತಿನಲ್ಲಿ ತಿನ್ನಬಹುದಾದ ಸ್ನ್ಯಾಕ್‌ಗಳ ಬದಲಿಗೂ ಈ ಸಲಾಡ್‌ಗಳು ಅನೇಕರಿಗೆ ಸುಲಭವಾಗಿ ಮಾಡಬಹುದಾದ ಆಹಾರವೇ ಆಗಿದೆ. ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ. ಬನ್ನಿ, ನೀವು ಸಲಾಡ್‌ಗಳನ್ನು ಮಾಡುವ ಸಂದರ್ಭ ಈ ಕೆಳಗಿನ ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ, ಆರೋಗ್ಯಕ್ಕೆ ಒಳಿತಾಗುವ ರೀತಿಯಲ್ಲಿ ತಿದ್ದಿಕೊಳ್ಳಿ. ಬನ್ನಿ, ಸಲಾಡ್‌ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ (healthy salad tips) ಮಾಡುವ ತಪ್ಪುಗಳೇನು ಎಂಬುದನ್ನು ನೋಡೋಣ.

Greek Salad

ಡ್ರೆಸ್ಸಿಂಗ್‌ ಅತಿಯಾಗಿ ಮಾಡುವುದು

ಹೌದು, ಸಲಾಡ್‌ ಎಂದಾಕ್ಷಣ ಡ್ರೆಸ್ಸಿಂಗ್‌ ಸಹಜ. ಯಾಕೆಂದರೆ ಸಲಾಡ್‌ಗೆ ಒಂದು ರುಚಿಯನ್ನು ನೀಡುವುದೇ ಈ ಡ್ರೆಸ್ಸಿಂಗ್‌. ಆದರೆ, ಅತಿಯಾದ ಡ್ರೆಸ್ಸಿಂಗ್‌ ಮಾಡುವುದರಿಂದ ಸಲಾಡ್‌ನಲ್ಲಿ ಕೊಬ್ಬು ಜಾಸ್ತಿಯಾಗಬಹುದು. ಹೆಚ್ಚು ಕ್ಯಾಲರಿ ಸೇರಿಕೊಳ್ಳಬಹುದು. ಕೇವಲ ರುಚಿಗೆ ತಕ್ಕಷ್ಟೇ ಡ್ರೆಸ್ಸಿಂಗ್‌ ಮಾಡಿ.

ತರಕಾರಿಗಳನ್ನು ತೊಳೆಯದೆ ಇರುವುದು

ಹಸಿಯಾದ ತರಕಾರಿಗಳನ್ನು ಹಾಗೆಯೇ ಸಲಾಡ್‌ಗೆ ಬಳಸುವುದರಿಂದ ತರಕಾರಿಗಳನ್ನು ತೊಳೆಯುವುದು ಅತ್ಯಂತ ಮುಖ್ಯವಾದ ಘಟ್ಟ. ಹಾಗಾಗಿ ತರಕಾರಿಗಳನ್ನು ಒಮ್ಮೆ ಉಪ್ಪು ನೀರಿನಲ್ಲಿ ಹಾಕಿಟ್ಟು ತೊಳೆಯುವುದನ್ನು ರೂಢಿ ಮಾಡಿಕೊಳ್ಳಿ. ಯಾಕೆಂದರೆ ಇಲ್ಲಿ ತರಕಾರಿ ಬೇಯುವುದಿಲ್ಲವಾದ್ದರಿಂದ ಕೆಲವು ರಾಸಾಯನಿಕಗಳು ತರಕಾರಿಗೆ ಸಿಂಪಡಿಸಲ್ಪಟ್ಟದ್ದು ಹಾಗೆಯೇ ಉಳಿದಿರುವ ಸಾಧ್ಯತೆಯೂ ಇದೆ. ಹಾಗಾಗಿ, ತರಕಾರಿಯನ್ನು ಎರಡೆರಡು ಬಾರಿ ತೊಳೆದುಕೊಂಡು ಬಳಸಿ.

ಇದನ್ನೂ ಓದಿ: Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

ಅತಿಯಾಗಿ ತರಕಾರಿಗಳನ್ನು ಬಳಸುವುದು

ಸಲಾಡ್‌ ಎಂದಾಕ್ಷಣ ಬೇಕಾದ ಹಾಗೆ ತರಕಾರಿಗಳನ್ನು ಬಳಸಬಹುದು ಎಂಬ ನಿಮ್ಮ ಎಣಿಕೆಯಾಗಿದ್ದರೆ ಅದು ತಪ್ಪು. ತರಕಾರಿಗಳ ಸಂಖ್ಯೆಯೂ ಅತಿಯಾಗಬಾರದು. ಒಂದಕ್ಕೊಂದು ಹೊಂದಿಕೊಳ್ಳುವ ಮೂರ್ನಾಲ್ಕು ಬಗೆಯ ತರಕಾರಿಗಳಿಗಿಂತ ಹೆಚ್ಚು ಬಳಸಬೇಡಿ. ತರಕಾರಿಗಳು ಅತಿಯಾದರೆ, ಅವು ಹಸಿಯಾಗಿರುವುದರಿಂದ ಇವು ಗ್ಯಾಸ್‌ನಂತಹ ಸಮಸಯೆಯನ್ನು ತಂದೊಡ್ಡಬಹುದು. ಜೀರ್ಣದ ಸಮಸ್ಯೆಗಳೂ ತಲೆದೋರಬಹುದು. ಕೆಲವರಿಗೆ ಹಸಿ ತರಕಾರಿಗಳು ಕರಗುವುದಿಲ್ಲ. ಇಂಥ ಮಂದಿ ತರಕಾರಿಗಳನ್ನು ಸ್ವಲ್ಪ ಬೇಯಿಸಿಕೊಂಡು ತಿನ್ನಬಹುದು. ಹೀಗೆ ಮಾಡುವುದರಿಂದ ಜೀರ್ಣ ಸಮಸ್ಯೆಗಳು ಬರದು.

Continue Reading

ಆರೋಗ್ಯ

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

Vijayanagara News: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದು ವಿಜಯನರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
Koo

ಹೊಸಪೇಟೆ: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ (Vijayanagara News) ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ದಡಾರಾ ಮತ್ತು ರುಬೆಲ್ಲಾ 2024 ಡಿಸೆಂಬರ್‌ದೊಳಗೆ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ ನಡೆಯಬೇಕು. ಮಗುವಿಗೆ 9 ತಿಂಗಳ ತುಂಬಿದ ನಂತರ ಮೊದಲನೇ ಡೋಸ್ ನೀಡಬೇಕು. ಆ ಬಳಿಕ ಒಂದೂವರೆ ವರ್ಷಕ್ಕೆ ಎರಡನೇ ಡೋಸ್ ನೀಡುವ ಕಾರ್ಯವು ಜಿಲ್ಲೆಯಲ್ಲಿ ಶೇ. 100ರಷ್ಟು ಆಗಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇದನ್ನೂ ಓದಿ: Forest Man Of India: ಇವರೇ ನೋಡಿ ಭಾರತದ ಫಾರೆಸ್ಟ್‌ ಮ್ಯಾನ್‌; ಏಕಾಂಗಿಯಾಗಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ ಸಾಹಸಿ

ಮಕ್ಕಳಿಗೆ ಲಸಿಕೆಯನ್ನು ಹಾಕಿಸಲು ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಜನರು ಸಹಕರಿಸುವುದಿಲ್ಲ. ಆದ್ದರಿಂದ ದಡಾರ ಮತ್ತು ರುಬೆಲ್ಲಾ ಲಸಿಕೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ, ಮಹಿಳಾ ಸಂಘ-ಸಂಸ್ಥೆಗಳ, ಆಶಾ ಕಾರ್ಯಕರ್ತೆಯರ ಸಹಕಾರ ಪಡೆದುಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಶಂಕರ್ ನಾಯ್ಕ್ ಎಲ್. ಮಾತನಾಡಿ, ಗ್ರಾಮೀಣ ಭಾಗದ ಕೆಲ ಜನರು ಮೂಢ ನಂಬಿಕೆಗಳಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಆರೋಗ್ಯ ಇಲಾಖೆಯ ಯಾವುದೇ ಲಸಿಕೆ ಮತ್ತು ಅದರ ಮಹತ್ವದ ಕುರಿತು ವ್ಯಾಪಕವಾಗಿ ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯವು ಲಸಿಕಾ ಅಭಿಯಾನದ ಜತೆಜತೆಗೆ ಸಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಮಕ್ಕಳಲ್ಲಿ ಜ್ವರ ಮತ್ತು ತದ್ದು ಕಂಡು ಬರುತ್ತಿದ್ದಲ್ಲಿ ಪಾಲಕರು ನಿರ್ಲಕ್ಷ್ಯ ಮಾಡಬಾರದು. ಅಂತಹ ಮಕ್ಕಳಿದ್ದಲ್ಲಿ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಜ್ವರ ಮತ್ತು ತದ್ದು ಕಂಡು ಬರುವ ಮಕ್ಕಳೇನಾದರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ ಈ ಬಗ್ಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗೆ ವರದಿ ಮಾಡಬೇಕು ಎಂದು ತಿಳಿಸಿದರು.

ಎನ್‌ಪಿಎಸ್‌ಪಿ ಸರ್ವೆಲನ್ಸ್ ನೋಡಲ್ ಅಧಿಕಾರಿ ಡಾ.ಶ್ರೀಧರ ಆರ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ.ಷಣ್ಮುಖ ನಾಯ್ಕ ಬಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಎಂ.ಪಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಕೆ.ಕಮಲಮ್ಮ, ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ರಾಧಿಕಾ, ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಭಾಸ್ಕರ್, ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಜಗದೀಶ್ ಪಾಟ್ನೆ ಸೇರಿದಂತೆ ಇತರರು ಇದ್ದರು.

Continue Reading

ಆರೋಗ್ಯ

World No Tobacco Day: ತಂಬಾಕಿನ ಚಟ ಎಷ್ಟೊಂದು ರೋಗಗಗಳಿಗೆ ಕಾರಣ ಆಗುತ್ತದೆ ನೋಡಿ!

ಜಗತ್ತಿನಲ್ಲಿ ಇಂದು (World No Tobacco Day )ತಂಬಾಕಿನ ಚಟ ಯುವ ವಯಸ್ಸಿನವರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ನಿತ್ಯವೂ ತಂಬಾಕಿನ ಸೇವನೆಯಿಂದಾಗಿ ದೇಹಾರೋಗ್ಯವನ್ನು ಕೆಡಿಸಿಕೊಂಡು, ಅನೇಕ ಮಾರಕ ಕಾಯಿಲೆಗಳಿಗೆ ಬಲಿ ಬೀಳುತ್ತಿರುವುದು ಸಾಮಾನ್ಯವಾಗಿದೆ. ಜಗತ್ತಿನಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿ ಸಾಯುವ ಮಂದಿಯ ಮುಖ್ಯ ಅನಾರೋಗ್ಯದ ಕಾರಣ ಈ ತಂಬಾಕೇ ಆಗಿದೆ. ಹಾಗಾಗಿ ಧೂಮಪಾನ ಸೇರಿದಂತೆ ತಂಬಾಕಿನ ಚಟ ಯಾವ ರೀತಿಯಲ್ಲಿ ದೇಹಾರೋಗ್ಯವನ್ನು ಹಾಳು ಮಾಡಬಹುದು, ಯಾವೆಲ್ಲ ಕಾಯಿಲೆಗಳಿಗೆ ಇದು ನೇರವಾದ ಆಹ್ವಾನ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

World No Tobacco Day
Koo

ಮೇ 31 ವಿಶ್ವ ತಂಬಾಕು ದಿನ (World No Tobacco Day). ವಿಶ್ವದೆಲ್ಲೆಡೆ ತಂಬಾಕು ಮುಕ್ತ ಸಮಾಜಕ್ಕಾಗಿ ದನಿ ಎತ್ತುವ, ಜಾಗೃತಿ ಮೂಡಿಸುವ ದಿನವಾಗಿ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಪ್ರತೀ ವರ್ಷ ಹಮ್ಮಿಕೊಳ್ಳುತ್ತದೆ. ಈ ವರ್ಷ ಮಕ್ಕಳಿಂದ ತಂಬಾಕನ್ನು ದೂರವಿಡಿ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಸಣ್ಣ ಮಕ್ಕಳು ನೇರವಾಗಿ ತಂಬಾಕು ಬಳಸದಿದ್ದರೂ, ತಮ್ಮ ಹೆತ್ತವರಿಂದ, ಸುತ್ತಮುತ್ತಲ ಪರಿಸರದಿಂದ ಹಾಗೂ ತಂಬಾಕು ಮಾರುಕಟ್ಟೆಯ ಜಗತ್ತಿನಿಂದಾಗಿ ಇದರ ವರ್ತಲದೊಳಕ್ಕೆ ಬೀಳುವ ಸಂಭವ, ಅನಿವಾರ್ಯತೆ ಹೆಚ್ಚು. ಈ ಅನಿವಾರ್ಯತೆಗೆ ಬಿದ್ದ ಮಕ್ಕಳನ್ನು ತಂಬಾಕಿನ ಜಗತ್ತಿನಿಂದ ಮೇಲೆತ್ತುವ ಹಾಗೂ ತಾವು ಇದಕ್ಕೆ ಬಲಿ ಬೀಳದಿರುವ ಬಗ್ಗೆ ಅವರಲ್ಲಿ ಎಚ್ಚರಿಕೆಯ ಬೀಜ ಬಿತ್ತುವ ಚಿಂತನೆ, ಉದ್ದೇಶ ವಿಶ್ವ ಆರೋಗ್ಯ ಸಂಸ್ಥೆಯದ್ದು. ಮಕ್ಕಳು ತಂಬಾಕಿನ ಚಟಕ್ಕೆ ಎಳವೆಯಲ್ಲಿಯೇ ಬೀಳದಂತೆ ರಕ್ಷಿಸುವುದು ಹಾಗೂ ತಂಬಾಕು ಮುಕ್ತ ಸ್ವಸ್ಥ ಸಮಾಜದ ಕನಸು ಈ ಘೋಷವಾಕ್ಯದ ಹಿಂದಿರುವ ಉದ್ದೇಶ. ಜಗತ್ತಿನಲ್ಲಿ ಇಂದು ತಂಬಾಕಿನ ಚಟ ಯುವ ವಯಸ್ಸಿನವರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ನಿತ್ಯವೂ ತಂಬಾಕಿನ ಸೇವನೆಯಿಂದಾಗಿ ದೇಹಾರೋಗ್ಯವನ್ನು ಕೆಡಿಸಿಕೊಂಡು, ಅನೇಕ ಮಾರಕ ಕಾಯಿಲೆಗಳಿಗೆ ಬಲಿ ಬೀಳುತ್ತಿರುವುದು ಸಾಮಾನ್ಯವಾಗಿದೆ. ಜಗತ್ತಿನಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿ ಸಾಯುವ ಮಂದಿಯ ಮುಖ್ಯ ಅನಾರೋಗ್ಯದ ಕಾರಣ ಈ ತಂಬಾಕೇ ಆಗಿದೆ. ಹಾಗಾಗಿ ಧೂಮಪಾನ ಸೇರದಂತೆ ತಂಬಾಕಿನ ಚಟ ಯಾವ ರೀತಿಯಲ್ಲಿ ದೇಹಾರೋಗ್ಯವನ್ನು ಹಾಳು ಮಾಡಬಹುದು, ಯಾವೆಲ್ಲ ಕಾಯಿಲೆಗಳಿಗೆ ಇದು ನೇರವಾದ ಆಹ್ವಾನ ಎಂಬುದನ್ನು ನೋಡೋಣ.

Prevent Heart Attack

ಹೃದಯಾಘಾತಕ್ಕೂ ಮೂಲ

ತಂಬಾಕು ಎಂದ ತಕ್ಷಣ ಕೇವಲ ಶ್ವಾಸಕೋಶಕ್ಕೆ ಮಾತ್ರ ಸಂಬಂಧಿಸಿದ್ದು ಅಂದುಕೊಂಡರೆ ತಪ್ಪಾದೀತು. ಕಾರಣ, ಈ ಚಟ ದೇಹದ ಒಟ್ಟು ಆರೋಗ್ಯದ ಮೇಲೆ ಅತಿ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹೃದ್ರೋಗ, ಹೃದಯಾಘಾತದಂತಹ ಸಮಸ್ಯೆಗಳೂ ತಂಬಾಕಿನ ಚಟದಿಂದ ಬರಬಹುದು. ರಕ್ತನಾಳಗಳು ತೆಳ್ಳಗಾಗಿ, ರಕ್ತ ಹರಿಯಲು ಸರಿಯಾದ ಜಾಗವಿಲ್ಲದೆ, ಬ್ಲಾಕ್‌ ಆಗುವುದರಿಂದ ಹೃದಯಾಘಾತದಂತಹ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.

ಕ್ಯಾನ್ಸರ್‌ಗೆ ಕಾರಣ

ಪಿತ್ತಕೋಶ, ಜಠರ, ಕರುಳಿನ ಕ್ಯಾನ್ಸರ್‌ ಬರುವ ಸಾಧ್ಯತೆಗಳು ಜಾಸ್ತಿ. ಕರುಳು ಜಠರದಲ್ಲಿ ಹುಣ್ಣು, ಅನ್ನನಾಳದಲ್ಲಿ ಅಲ್ಸರ್‌ನಂತಹ ಸಮಸ್ಯೆಗಳು ತಲೆದೋರಬಹುದು. ನುಂಗಲು ಕಷ್ಟವಾಗುವುದು, ಹೊಟ್ಟೆ ನೋವು ಇತ್ಯಾದಿ ಆರಂಭಿಕ ಲಕ್ಷಣಗಳಿಂದ ಸಮಸ್ಯೆ ಶುರುವಾಗಬಹುದು.

ಸಂತಾನೋತ್ಪತ್ತಿಯ ಶಕ್ತಿ ಕುಂಠಿತ

ತಂಬಾಕಿನ ಚಟವು ಸಂತಾನೋತ್ಪತ್ತಿಯ ಶಕ್ತಿಯ ಮೇಲೆಯೂ ಕೆಟ್ಟ ಪರಿಣಾಮ ಬೀರಬಹುದು. ಮಹಿಳೆಯರಿಗಾದರೆ ಗರ್ಭ ನಿಲ್ಲದಿರುವುದು, ಗರ್ಭಸ್ರಾವ, ಮಕ್ಕಳಾಗದಿರುವ ಸಮಸ್ಯೆ, ಪುರುಷರಿಗೆ ವೀರ್ಯದ ಸಂಖ್ಯೆಯಲ್ಲಿ ಕುಸಿತ ಇತ್ಯಾದಿಗಳಿಂದ ಲೈಂಗಿಕ ಬಯಕೆಗಳಾಗದೇ ಇರುವುದು ಇತ್ಯಾದಿ ಸಮಸ್ಯೆಗಳೂ ಉದ್ಭವಿಸಬಹುದು.

Dark lip May be due to increased cigarette smoking or excessive sun exposure Lips Healthy Tips

ಬಾಯಿ ಆರೋಗ್ಯಕ್ಕೂ ಮಾರಕ

ಬಾಯಿಯ ಆರೋಗ್ಯ ಬಹಳ ಬೇಗನೆ ಹಾಳಾಗುತ್ತದೆ. ಬಾಯಿಯಲ್ಲಿ ಅಲ್ಸರ್‌, ಹುಣ್ಣುಗಳು, ಕೆಟ್ಟ ವಾಸನೆ, ಹಲ್ಲು ನೋವು ಇತ್ಯಾದಿ ಸಮಸ್ಯೆಗಳಾಗಬಹುದು.

ಚರ್ಮ ಕಳೆಗುಂದುತ್ತದೆ

ಚರ್ಮಕ್ಕೆ ಬಹುಬೇಗನೆ ವಯಸ್ಸಾದಂತೆ ಕಾಣಬಹುದು. ತುಟಿ, ಚರ್ಮ ಕಪ್ಪಾಗುವುದು, ಚರ್ಮದಲ್ಲಿ ನಿರಿಗೆಗಳ ಸಮಸ್ಯೆ, ಚರ್ಮ ಜೋತು ಬೀಳುವುದು ಇತ್ಯಾದಿ ಸಾಮಾನ್ಯ.

Food Beneficial For Eye Health

ದೃಷ್ಟಿ ಮಂದ

ಕಣಿನ ದೃಷ್ಟಿಯ ಮೇಲೆಯೂ ಇದು ಪರಿಣಾಮ ಬೀರುತ್ತದೆ. ದೃಷ್ಟಿ ಮಂಜಾಗುವುದು, ಕಣ್ಣಿನ ಸಮಸ್ಯೆಗಳು ಕೂಡಾ ಸಾಮಾನ್ಯ.

ರೋಗನಿರೋಧಕ ಶಕ್ತಿ ಕುಂಠಿತ

ರೋಗನಿರೋಧಕ ಶಕ್ತಿಯೂ ಕುಂಠಿತವಾಗುತ್ತದೆ. ಬಹುಬೇಗನೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು, ಕಾಯಿಲೆಗೆ ಬೀಳುವುದೂ ಕೂಡಾ ಸಹಜವೇ ಆಗುತ್ತದೆ.

ಇದನ್ನೂ ಓದಿ : World No Tobacco Day: ಇಂದು ವಿಶ್ವ ತಂಬಾಕು ರಹಿತ ದಿನ; ತಂಬಾಕು ಸೇವನೆಯಿಂದ ವರ್ಷಕ್ಕೆ 60 ಲಕ್ಷ ಜನರ ಸಾವು!

ಖಿನ್ನತೆ ಕಾರಣ

ಮಾನಸಿಕ ಆರೋಗ್ಯದಲ್ಲಿ ಏರುಪೇರು, ಖಿನ್ನತೆ, ಒತ್ತಡ, ಉದ್ವೇಗದಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತದೆ.

Continue Reading

ಆರೋಗ್ಯ

Quitting Smoking: ಈ ಆಹಾರ ಸೇವಿಸುವ ಮೂಲಕ ಸಿಗರೇಟು, ಗುಟ್ಕಾ ಚಟದಿಂದ ದೂರ ಆಗಬಹುದು!

ನಿಕೋಟಿನ್‌ ವ್ಯಸನ ದೂರ ಮಾಡುವ ಪ್ರಯತ್ನದಲ್ಲಿದ್ದೀರಾ? ಸಿಗರೇಟ್‌ ಅಥವಾ ಗುಟ್ಕಾ ಇಲ್ಲವೇ ನಿಕೋಟಿನ್‌ ಇರುವಂಥ ಇನ್ನೇನೋ ನೆನಪಾಗುತ್ತಿದ್ದಂತೆ, ಬೇಕೇಬೇಕು ಎನಿಸಲು ಆರಂಭಿಸಬಹುದು. ಇಂಥ ದಿನಗಳಲ್ಲಿ ಕೆಲವು ಆಹಾರಗಳು ವ್ಯಸನ ದೂರ ಮಾಡಲು ಹೆಚ್ಚುವರಿ ನೆರವನ್ನು ನೀಡುತ್ತವೆ. ಈ ಬಗ್ಗೆ ಹೆಚ್ಚಿನ (Quitting Smoking) ಮಾಹಿತಿ ಇಲ್ಲಿವೆ.

VISTARANEWS.COM


on

Quitting Smoking
Koo

ವಿಶ್ವದೆಲ್ಲೆಡೆ ತಂಬಾಕು ರಹಿತ ದಿನವನ್ನು (ಮೇ 31) ಆಚರಿಸಲಾಗುತ್ತಿದೆ. ಒಮ್ಮೆ ಹೇಗೋ ಅಂಟಿಕೊಂಡ ತಂಬಾಕು ವ್ಯಸನವನ್ನು ಬಿಡುವುದಕ್ಕೆ ಮಾನಸಿಕ ಸ್ಥಿರತೆಯ ಅಗತ್ಯವಿದೆ. ಜೊತೆಗೆ ಹೊರಗಿನಿಂದ ದೊರೆಯುವ ನೆರವು ಸಹ ಗುರಿ ತಲುಪಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ, ನಿಕೋಟಿನ್‌ ಬೇಕು ಎನ್ನುವ ಬಯಕೆಗೆ ಕಡಿವಾಣ ಹಾಕುವುದಕ್ಕೆ ಕೆಲವು ಆಹಾರಗಳು ನೆರವಾಗುತ್ತವೆ. ಯಾವುದು ಆ ಆಹಾರಗಳು ಮತ್ತು ನಿಕೋಟಿನ್‌/ತಂಬಾಕು ಬೇಕೆನ್ನುವ ಬಯಕೆಯನ್ನು ಹತ್ತಿಕ್ಕಲು ಹೇಗೆ ನೆರವಾಗುತ್ತವೆ? ಈ ಕುರಿತ ವಿವರ ಇಲ್ಲಿದೆ.

No Tobacco Day

ವ್ಯಸನ ಯಾವುದೇ ಆದರೂ, ಅದನ್ನು ದೂರ ಮಾಡುವುದು ಸವಾಲಿನದು. ಜೊತೆಗೆ, ವ್ಯಸನದಿಂದ ಹಿಂತೆಗೆಯುವಾಗ ಶರೀರ ಪ್ರತಿಕ್ರಿಯಿಸುವ ರೀತಿಯನ್ನು ನಿಭಾಯಿಸುವುದು ಬಹಳಷ್ಟು ಜನರಿಗೆ ಕಷ್ಟವಾಗಬಹುದು. ಒಮ್ಮೆ ಸಿಗರೇಟ್‌ ಅಥವಾ ಗುಟ್ಕಾ ಇಲ್ಲವೇ ನಿಕೋಟಿನ್‌ ಇರುವಂಥ ಇನ್ನೇನೋ ನೆನಪಾಗುತ್ತಿದ್ದಂತೆ, ಬೇಕೇಬೇಕು ಎನಿಸಲು ಆರಂಭಿಸಬಹುದು. ಇಂಥ ದಿನಗಳಲ್ಲಿ ಕೆಲವು ಆಹಾರಗಳು ವ್ಯಸನ ದೂರ ಮಾಡಲು ಹೆಚ್ಚುವರಿ ನೆರವನ್ನು ನೀಡುತ್ತವೆ.

Appetite Control Dark Chocolate Benefits

ಡಾರ್ಕ್‌ ಚಾಕೊಲೇಟ್‌

ಅಂದರೆ ಶೇ. 70ಕ್ಕಿಂತ ಹೆಚ್ಚಿನ ಕೊಕೊ ಇರುವಂಥ ಈ ಚಾಕಲೇಟ್‌ಗಳು ರುಚಿಯಲ್ಲಿ ಕೊಂಚ ಕಹಿ ಇರುತ್ತವೆ. ಆದರೆ ಸಿಹಿ ಮತ್ತು ನಿಕೋಟಿನ್‌- ಈ ಎರಡೂ ಬೇಕು ಎನ್ನುವ ಬಯಕೆಯನ್ನು ಹತ್ತಿಕ್ಕುತ್ತವೆ. ಕಾರಣ, ಡಾರ್ಕ್‌ ಚಾಕಲೇಟ್‌ನಲ್ಲಿ ಸಾಂದ್ರವಾಗಿರುವ ಫ್ಲೆವನಾಯ್ಡ್‌ಗಳು ದೇಹದ ಡೋಪಮಿನ್‌ ಚೋದಕದ ಮಟ್ಟವನ್ನು ಹೆಚ್ಚಿಸುತ್ತವೆ. ಇದರಿಂದ ಶರೀರ ತನ್ನಷ್ಟಕ್ಕೇ ರಿಲಾಕ್ಸ್‌ ಆಗಿ, ನಿಕೋಟಿನ್‌ ಬೇಕು ಎನ್ನುವ ತುಡಿತವನ್ನು ತಾನಾಗಿ ಕಳೆದುಕೊಳ್ಳುತ್ತದೆ.

The seeds

ಇಡೀ ಧಾನ್ಯಗಳು

ನಿಕೋಟಿನ್‌ ಬಿಡುತ್ತಿದ್ದಂತೆ ಸಕ್ಕರೆ ಮತ್ತು ಪಿಷ್ಟದ ವಸ್ತುಗಳನ್ನು ಹೆಚ್ಚು ಬೇಕೆಂದು ಶರೀರ ಬಯಸುತ್ತದೆ. ಇದರಿಂದ ದೇಹದಲ್ಲಿ ಸಕ್ಕರೆ ಮಟ್ಟ ಏರಿಳಿತ ಆಗಬಹುದು. ಇದನ್ನು ತಡೆಯುವುದಕ್ಕಾಗಿ, ಇಡೀ ಧಾನ್ಯಗಳ ಸೇವನೆ ಉಪಯುಕ್ತ. ಜವೆ ಗೋಧಿ, ಕೆಂಪಕ್ಕಿ, ಬಾರ್ಲಿ, ಓಟ್‌, ಕಿನೊವಾ, ಸಿರಿಧಾನ್ಯಗಳನ್ನು ಆಹಾರವಾಗಿ ಬಳಸಿದರೆ ದೇಹದಲ್ಲಿ ಸಕ್ಕರೆಯಂಶವನ್ನು ಸ್ಥಿರಗೊಳಿಸಬಹುದು. ಜೊತೆಗೆ ಇವುಗಳಲ್ಲಿರುವ ಸಂಕೀರ್ಣ ಪಿಷ್ಟಗಳು ಮತ್ತು ನಾರು ದೀರ್ಘ ಕಾಲ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತವೆ.

Some herbal teas can relax the mind and induce sleep Tips For Better Sleep

ಹರ್ಬಲ್‌ ಚಹಾ

ನಿಕೋಟಿನ್‌ ಬಿಡುತ್ತಿದ್ದಂತೆ ಉಂಟಾಗುವ ಒತ್ತಡ, ಆಯಾಸಗಳನ್ನು ಕಡಿಮೆ ಮಾಡುವಲ್ಲಿ ಹರ್ಬಲ್‌ ಚಹಾಗಳು ನೆರವಾಗುತ್ತವೆ. ಉದಾ, ಕ್ಯಾಮೊಮೈಲ್‌ ಚಹಾ- ಒತ್ತಡ ನಿವಾರಣೆಯಲ್ಲಿ ಸಹಕಾರಿ. ಪೆಪ್ಪರ್‌ಮಿಂಟ್‌ ಚಹಾ ಮನಸ್ಸನ್ನು ಚೇತೋಹಾರಿಯಾಗಿ ಇರಿಸಬಲ್ಲದು. ಶುಂಠಿ ಚಹಾ ಉರಿಯೂತ ನಿವಾರಣೆಗೆ ನೆರವಾಗುತ್ತದೆ. ಗ್ರೀನ್‌ ಟೀಯಲ್ಲಿರುವ ಅಲ್ಪ ಪ್ರಮಾಣದ ಕೆಫೇನ್‌ ಮತ್ತು ಎಲ್‌-ಥಿಯಾನಿನ್‌ ಅಂಶಗಳು ಒತ್ತಡ ನಿವಾರಣೆಗೆ ನೆರವಾಗುತ್ತವೆ. ನಿಂಬೆ ಹುಲ್ಲಿನ ಚಹಾ ಸಹ ಇದೇ ಸಾಲಿಗೆ ಸೇರುವಂಥದ್ದು.

Vibrant Produce Vegetables and Fruits

ಹಸಿ ತರಕಾರಿ ಮತ್ತು ಹಣ್ಣುಗಳು

ಹಸಿಯಾದ ಕ್ಯಾರೆಟ್‌, ಸೌತೇಕಾಯಿ, ಟೊಮೇಟೊ, ಕ್ಯಾಪ್ಸಿಕಂನಂಥವು ಬಾಯಿಯ ಬೇಡಿಕೆ ಕಡಿಮೆ ಮಾಡುತ್ತವೆ. ಯಾವುದೇ ಸಿಹಿ ಹಣ್ಣುಗಳ ಸಹ ಬಯಕೆಯನ್ನು ಹತ್ತಿಕ್ಕಲು ನೆರವಾಗುತ್ತವೆ. ಜೊತೆಗೆ ಉಪ್ಪಿಲ್ಲದ ಬಾದಾಮಿ, ಪಿಸ್ತಾ, ಗೋಡಂಬಿ, ವಾಲ್‌ನಟ್‌ಗಳು ಹಾಗೂ ಸಣ್ಣ ಬೀಜಗಳು ರಕ್ತದಲ್ಲಿನ ಸಕ್ಕರೆಯಂಶವನ್ನು ಸ್ಥಿರಗೊಳಿಸಲು ನೆರವಾಗುತ್ತವೆ. ಜೊತೆಗೆ, ಬಾಯಿಯ ಚಪಲವನ್ನು ಹತ್ತಿಕ್ಕಲು ಅನುಕೂಲವಾಗುವಂತೆ, ಅಗಿದು ತಿನ್ನುವಂಥ ಆಹಾರಗಳಿವು.

Dairy products

ಡೇರಿ ಉತ್ಪನ್ನಗಳು

ಕಾಟೇಜ್‌ ಚೀಸ್‌, ಗ್ರೀಕ್‌ ಯೋಗರ್ಟ್‌ನಂಥ ಹೆಚ್ಚು ಪ್ರೊಟೀನ್‌ ಇರುವಂಥ ಡೇರಿ ಉತ್ಪನ್ನಗಳು ಈ ಹಂತದಲ್ಲಿ ನೆರವು ನೀಡುತ್ತವೆ. ನಿಕೋಟಿನ್‌ನ ರುಚಿಗೆ ಬಾಯಿ ಒಗ್ಗಿದ್ದರೆ, ಅದನ್ನು ಬದಲಿಸಲು ಈ ವಸ್ತುಗಳು ಸಹಕಾರಿ. ಬಾಯಿ ಮತ್ತು ಹೊಟ್ಟೆಯಲ್ಲಿರುವ ಆರೋಗ್ಯಪೂರ್ಣ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಇವು ಹೆಚ್ಚಿಸುತ್ತವೆ. ಇದರಿಂದ ನಿಕೋಟಿನ್‌ ಬೇಕು ಎನ್ನುವ ಭಾವನೆ ಕಡಿಮೆಯಾಗುತ್ತದೆ.

Continue Reading
Advertisement
Healthy Salad Tips
ಆಹಾರ/ಅಡುಗೆ14 mins ago

Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

Lok Sabha Election
ದೇಶ1 hour ago

Lok Sabha Election: ಇಂದು ಕೊನೇ ಹಂತದ ಮತದಾನ; ಸಂಜೆ ಎಕ್ಸಿಟ್‌ ಪೋಲ್, ಇಂದೇ ತಿಳಿಯಲಿದೆ ಭವಿಷ್ಯ!

Dina Bhavishya
ಭವಿಷ್ಯ1 hour ago

Dina Bhavishya : ತಿಂಗಳ ಮೊದಲ ದಿನವೇ ಉದ್ಯೋಗದ ಸ್ಥಳದಲ್ಲಿ ಈ ರಾಶಿಯವರಿಗೆ ಕಿರಿಕಿರಿ ಅನುಭವ

Anti Islam Rally
ವಿದೇಶ6 hours ago

Anti Islam Rally: ಇಸ್ಲಾಂ ವಿರೋಧಿ ರ‍್ಯಾಲಿಯಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ; ಗುಂಡಿಕ್ಕಿದ ಪೊಲೀಸರು

Modi Meditation
ದೇಶ7 hours ago

Modi Meditation: ವಿವೇಕಾನಂದರ ಮೂರ್ತಿ ಎದುರು ಮೋದಿ ಗಾಢ ಧ್ಯಾನ; ಇಲ್ಲಿವೆ ಫೋಟೊಗಳು

Yamaha has opened a new Blue Square outlet in Bengaluru
ಬೆಂಗಳೂರು8 hours ago

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

Neha Hiremath
ಕರ್ನಾಟಕ8 hours ago

Neha Hiremath: ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

Kanyakumari Tour
ಪ್ರವಾಸ9 hours ago

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

Sri Huligemma Devi Maharathotsava in Hulagi
ಧಾರ್ಮಿಕ9 hours ago

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
ಆರೋಗ್ಯ9 hours ago

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌