Healthy Drinks For Summer: ಬೇಸಿಗೆ ಬರುತ್ತಿದ್ದಂತೆ ನಮ್ಮ ದೇಹ ಬಯಸುವ ಆರೋಗ್ಯಕರ ಪೇಯಗಳಿವು! - Vistara News

ಆರೋಗ್ಯ

Healthy Drinks For Summer: ಬೇಸಿಗೆ ಬರುತ್ತಿದ್ದಂತೆ ನಮ್ಮ ದೇಹ ಬಯಸುವ ಆರೋಗ್ಯಕರ ಪೇಯಗಳಿವು!

ನಮ್ಮ ದೇಹ ಒಂದು ಋತುವಿನಿಂದ ಇನ್ನೊಂದು ಋತುವಿಗೆ ಬದಲಾಗುವ ಸಂದರ್ಭ ಸಹಜವಾಗಿಯೇ ಕೊಂಚ ಹೆಚ್ಚಿನ ಕಾಳಜಿ ಬಯಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚು ಮಾಡುವ ಪೇಯಗಳ ಸೇವನೆ, ಆಹಾರ ಸೇವನೆ ಎಲ್ಲವೂ ಅತ್ಯಂತ (Healthy Drinks For Summer) ಅಗತ್ಯವಾಗಿರುತ್ತದೆ.

VISTARANEWS.COM


on

summer drinks
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಳಿಗಾಲದ ಚಳಿಯಲ್ಲಿ ಬೆಚ್ಚಗೆ ಇದ್ದು, ಈಗ ಇದ್ದಕ್ಕಿದ್ದಂತೆ ಹವಾಮಾನ ಬದಲಾಗುತ್ತಾ ದೇಹ ಮನಸ್ಸು ಅದಕ್ಕೆ ಒಗ್ಗಿಸಿಕೊಳ್ಳಬೇಕಾಗುತ್ತದೆ. ಪ್ರಕೃತಿಯಲ್ಲಿ ಋತು ಬದಲಾವಣೆ ಸಾಮಾನ್ಯ. ಮುಖ್ಯವಾಗಿ ಚಳಿಯಲ್ಲಿ ಮುದುಡಿದ್ದ ದೇಹಕ್ಕೆ ಸೂರ್ಯನ ಬಿಸಿಲನ್ನು ಸರಿಯಾಗಿ ಕಾಣದೆ ಇದ್ದ ಮಂದಿಗೆ ಸ್ವಲ್ಪ ಸ್ವಲ್ಪವೇ ಸೂರ್ಯನ ಬಿಸಿಲು ಮೈ ಸೋಕಿದಾಗ ಆಗುವ ಖುಷಿ ಬೇರೆಯೇ. ಆದರೆ, ಇದ್ದಕ್ಕಿದ್ದಂತೆ ಬದಲಾಗುವ ಹವಾಮಾನದಿಂದಾಗಿ ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನಮ್ಮ ದೇಹ ಒಂದು ಋತುವಿನಿಂದ ಇನ್ನೊಂದು ಋತುವಿಗೆ ಬದಲಾಗುವ ಸಂದರ್ಭ ಸಹಜವಾಗಿಯೇ ಕೊಂಚ ಹೆಚ್ಚಿನ ಕಾಳಜಿಯನ್ನು ಬಯಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಪೇಯಗಳ ಸೇವನೆ, ಆಹಾರ ಸೇವನೆ ಎಲ್ಲವೂ ಅತ್ಯಂತ ಅಗತ್ಯವಾಗಿರುತ್ತದೆ. ಬನ್ನಿ, ಬೇಸಿಗೆ ಹತ್ತಿರ ಬರುತ್ತಿದ್ದಂತೆ ಯಾವೆಲ್ಲ ಪೇಯಗಳನ್ನು ನಾವು ಸೇವಿಸುವುದು ಆರೋಗ್ಯದ ದೃಷ್ಠಿಯಿಂದ ಅತ್ಯಂತ ಒಳ್ಳೆಯದು (Healthy Drinks For Summer) ಎಂಬುದನ್ನು ನೋಡೋಣ.

Coconut water Foods For Fight Against Dengue Fever

ಎಳನೀರು

ಬೇಸಿಗೆ ಬರುತ್ತಿದ್ದಂತೆ ಎಳನೀರು ಕುಡಿಯುವುದು ಅತ್ಯಂತ ಒಳ್ಳೆಯದು. ಎಳನೀರಿನಲ್ಲಿ ಸಾಕಷ್ಟು ಖನಿಜಾಂಶಗಳೂ ಸೇರಿದಂತೆ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ, ಬೇಸಗೆಯ ಕಾವು ಹೆಚ್ಚುತ್ತಿದ್ದಂತೆ ದೇಹಕ್ಕೆ ಬೇಕಾದ ತೇವಾಂಶವನ್ನು ನೀಡಿ ದೇಹವನ್ನು ತಂಪಾಗಿರಿಸುತ್ತದೆ. ಅಷ್ಟೇ ಅಲ್ಲ, ಬೇಸಗೆಯಲ್ಲಿ ಕಾಡುವ ಎದೆಯುರಿ, ಹೊಟ್ಟೆಯುಬ್ಬರ, ಗ್ಯಾಸ್‌, ಅಸಿಡಿಟಿ ಮತ್ತಿತರ ಸಮಸ್ಯೆಗಳಿಗೂ ಎಳನೀರಿನಲ್ಲಿ ಉತ್ತರವಿದೆ. ಜೀರ್ಣಕ್ರಿಯೆಯನ್ನೂ ಇದು ಸರಾಗವಾಗಿಸುತ್ತದೆ. ಬೆಳಗ್ಗಿನ ವಾಕಿಂಗ್‌ ಅಥವಾ ವರ್ಕೌಟ್‌ನ ಮೊದಲೇ ಎಳನೀರನ್ನು ಕುಡಿದರೆ, ಇದರ ಸಂಪೂರ್ಣ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ, ಪೋಷಕಾಂಶಗಳ ತಜ್ಞರು.

ಶುಂಠಿ ಹಾಗೂ ನೆಲ್ಲಿಕಾಯಿ ಶಾಟ್‌

ನಿಮ್ಮ ಏರಿದ ಮಧುಮೇಹದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ನಿಮಗೆ ಬೇಸಗೆಯಲ್ಲಿ ಕುಡಿಯಬಹುದಾದ ಡ್ರಿಂಕ್‌ ಎಂದರೆ ಅದು ನೆಲ್ಲಿಕಾಯಿ ಹಾಗೂ ಶುಂಠಿಯ ಶಾಟ್‌. ಬೆಳಗ್ಗೆ ಎದ್ದ ಕೂಡಲೇ, ನೆಲ್ಲಿಕಾಯಿ ಹಾಗೂ ಸ್ವಲ್ಪ ಶುಂಠಿಯನ್ನು ತುರಿದು, ಜ್ಯೂಸ್‌ ತೆಗೆದು ಹಾಗೆಯೇ ಕುಡಿಯುವುದು ಒಳ್ಲೆಯದು. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವೂ ಹತೋಟಿಗೆ ಬರುತ್ತದೆ. ಸುಮಾರು 30 ಎಂಎಲ್‌ಗಳಾಗುವಷ್ಟು ನೆಲ್ಲಿಕಾಯಿ ಶುಂಠಿ ಶಾಟ್‌ ನಿತ್ಯವೂ ಕುಡಿಯಬಹುದು. ನೆಲ್ಲಿಕಾಯಿಗೆ ಒಂದು ಚಮಚ ಶುಂಠಿರಸ ಸೇರಿಸಿದರೆ ಸಾಕು. ಪ್ರತಿದಿನ ಹೀಗೆ ಮಾಡಿ ಕುಡಿಯುವುದರಿಂದ ನಿಮ್ಮ ಆರೋಗ್ಯದಲ್ಲಿ ಗಣನೀಯ ಸುಧಾರಣೆಯನ್ನು ನೀವು ಕಾಣಬಹುದು.

ಬೂದುಗುಂಬಳ ಜ್ಯೂಸ್‌

ಬೇಸಿಗೆ ಹತ್ತಿರ ಬರುತ್ತಿದ್ದಂತೆ ಹಾಗೂ ಬೇಸಿಗೆಯ ಧಗೆಯಲ್ಲಿ ಕುಡಿಯಬಹುದಾದ ಹಾಗೂ ಕುಡಿಯಬೇಕಾದ ಡ್ರಿಂಕ್‌ ಎಂದರೆ ಅದು ಬೂದುಗುಂಬಳ ಜ್ಯೂಸ್‌. ಇದರಲ್ಲಿ ಅತೀ ಹೆಚ್ಚು ನೀರನಂಶ ಇರುವಿದರಿಂದ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ತೇವಾಂಶ ನೀಡುತ್ತದೆ. ಸೊಪ್ಪು ತರಕಾರಿಗಳಲ್ಲೇ ಅತ್ಯಂತ ಆರೋಗ್ಯಕರ ಸರ್ವಗುಣ ಸಂಪನ್ನ ತಾಜಾ ಜ್ಯೂಸ್‌ ಮಾತಬಹುದಾದ ತರಕಾರಿ ಎಂದರೆ ಬೂದುಕುಂಬಳಕಾಯಿ. ಇದು ದೇಹವನ್ನು ಒಳಗಿನಿಂದಲೇ ತಂಪು ಮಾಡಿ, ಇಡೀ ದಿನ ದೇಹವನ್ನು ಉಲ್ಲಾಸದಾಯಕವನ್ನಾಗಿ ಮಾಡುತ್ತದೆ. ನಿಮಗೆ ಆಗಾಗ ಮಲಬದ್ಧತೆ, ಹೊಟ್ಟೆಯುಬ್ಬರ, ಎದುಯುರಿಯಂತಹ ಸಮಸ್ಯೆಗಳಿದ್ದರೆ, ನೀವು ನಿತ್ಯವೂ ಬೂದುಗುಂಬಳ ಜ್ಯೂಸ್‌ ಮಾಡಿ ಕುಡಿಯುವ ಮೂಲಕ ನಿಮ್ಮ ದಿನವನ್ನು ಆರಂಭಿಸಿ. ಖಂಡಿತವಾಗಿಯೂ ಈ ಸಮಸ್ಯೆಗಳಿಂದ ಮುಕ್ತರಾಗುವಿರಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Summer Health Tips: ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!

ವಿಟಮಿನ್‌ ಸಿ ಅಂಶವನ್ನು ಹೇರಳವಾಗಿ ತುಂಬಿಕೊಂಡಿರುವ ಬೆಟ್ಟದ ನೆಲ್ಲಿಕಾಯಿಗಳನ್ನು ಹಲವು ರೀತಿಯಲ್ಲಿ ಸೇವಿಸುವುದರಿಂದ ಬಿಸಿಲ ದಿನಗಳಲ್ಲಿ ದೇಹ ನಿತ್ರಾಣಗೊಳ್ಳದಂತೆ ಮತ್ತು ರೋಗನಿರೋಧಕ ಶಕ್ತಿ ಕುಂಠಿತವಾಗದಂತೆ ಕಾಪಾಡಿಕೊಳ್ಳಬಹುದು. ಬಿಸಿಲಿನ ದಿನಗಳಿಗೆ ಪೂರಕವಾಗುವಂತೆ ನೆಲ್ಲಿಕಾಯಿಯನ್ನು ಬಳಸುವುದು ಹೇಗೆ? ಈ (summer Health Tips) ಲೇಖನ ಓದಿ.

VISTARANEWS.COM


on

Summer Health Tips
Koo

ದೇಹದ ಪ್ರತಿರೋಧಕ ಶಕ್ತಿಯನ್ನು ಕುಂದಿಸುವಂಥ ಹವಾಮಾನ ಯಾವುದೇ ದಿನಗಳಲ್ಲೂ ಎದುರಾಗಬಹುದು. ಅದಕ್ಕೇನು ಮಳೆಯೇ ಬೇಕು. ಚಳಿಯೇ ಇರಬೇಕು ಎಂದಿಲ್ಲ. ಈ ಬಿರು ಬೇಸಿಗೆಯಲ್ಲೂ ಕಾಟ ಕೊಡುವ ವೈರಸ್‌ಗಳು ತಪ್ಪುವುದಿಲ್ಲ. ಇದಕ್ಕಾಗಿ ಭದ್ರವಾದ ಪ್ರತಿರೋಧಕ ವ್ಯವಸ್ಥೆಯನ್ನ ನಮ್ಮ ದೇಹ ಹೊಂದಬೇಕಾಗುತ್ತದೆ. ಅದಿಲ್ಲದಿದ್ದರೆ ಬಿಸಿಲಾಘಾತ, ನಿರ್ಜಲೀಕರಣದಿಂದಲೂ ತಪ್ಪಿಸಿಕೊಳ್ಳುವುದಕ್ಕೆ ದೇಹ ಸೋಲುತ್ತದೆ. ಇಂಥ ದಿನಗಳಲ್ಲಿ ನಮ್ಮ ನೆರವಿಗೆ ಬರುವುದು ಹುಳಿ-ಸಿಹಿಯ ಬೆಟ್ಟದ ನೆಲ್ಲಿಕಾಯಿ. ವಿಟಮಿನ್‌ ಸಿ ಅಂಶವನ್ನು ಹೇರಳವಾಗಿ ತುಂಬಿಕೊಂಡಿರುವ ಈ ಪುಟ್ಟ ಕಾಯಿಗಳನ್ನು ಹಲವು ರೀತಿಯಲ್ಲಿ ಸೇವಿಸುವುದರಿಂದ ಬಿಸಿಲ ದಿನಗಳಲ್ಲಿ ದೇಹ ನಿತ್ರಾಣಗೊಳ್ಳದಂತೆ ಮತ್ತು ರೋಗನಿರೋಧಕ ಶಕ್ತಿ ಕುಂಠಿತವಾಗದಂತೆ (summer Health Tips) ಕಾಪಾಡಿಕೊಳ್ಳಬಹುದು. ಬಿಸಿಲಿನ ದಿನಗಳಿಗೆ ಪೂರಕವಾಗುವಂತೆ ನೆಲ್ಲಿಕಾಯಿಯನ್ನು ಬಳಸುವುದು ಹೇಗೆ?

pudina gooseberry juice

ಪುದೀನಾ-ನೆಲ್ಲಿ ಪಾನಕ

ವಿಟಮಿನ್‌ ಸಿ, ಇ ಮತ್ತು ಎ, ನಾರು ಹಾಗೂ ವಿಟಮಿನ್‌ ಬಿ1 ಸತ್ವಗಳನ್ನು ಈ ಪಾನಕ ಭರಪೂರ ತುಂಬಿಕೊಂಡಿರುತ್ತದೆ. ಬೇಸಿಗೆಯಲ್ಲಿ ಕಾಡುವ ಜೀರ್ಣಾಂಗಗಳ ಸಮಸ್ಯೆಯಿಂದ ಮುಕ್ತಿ ನೀಡುವಂಥ ಪೇಯವಿದು. ಬೆಟ್ಟದ ನೆಲ್ಲಿಕಾಯಿಗೆ ಚಿಟಿಕೆ ಉಪ್ಪು ಮತ್ತು ಪುದೀನಾ ಎಲೆಗಳನ್ನು ಸೇರಿಸಿ ರುಬ್ಬಿ, ರಸ ತೆಗೆಯಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಅಥವಾ ಹಾಗೆಯೇ ಕುಡಿಯುವವರು ಅಂತೆಯೇ ಕುಡಿಯಬಹುದು.

ನೆಲ್ಲಿ ಸ್ಮೂದಿ

ಇದಕ್ಕಾಗಿ ಮೊಸರು, ಬಾಳೆಹಣ್ಣು, ಕೊಂಚ ಪಾಲಕ್‌ ಎಲೆಗಳು ಮತ್ತು ನೆಲ್ಲಿಕಾಯಿಯನ್ನು ಬ್ಲೆಂಡರ್‌ಗೆ ಹಾಕಿ ತಿರುಗಿಸಿ. ಇದರನ್ನು ಸೋಸಬಾರದು. ಎಲ್ಲ ನಾರಿನಂಶ ಇರುವಂತೆಯೇ ಸೇವಿಸಬೇಕು. ಇದರಿಂದ ಬಾಳೆಹಣ್ಣಿನಲ್ಲಿರುವ ಶರ್ಕರಪಿಷ್ಟಗಳು, ಮೊಸರಿನಲ್ಲಿರುವ ಕೊಬ್ಬು ಮತ್ತು ಪ್ರೊಬಯಾಟಿಕ್‌ ಅಂಶಗಳು, ಪಾಲಕ್‌ನಲ್ಲಿರುವ ಖನಿಜಗಳು ಎಲ್ಲವೂ ನೆಲ್ಲಿ ಕಾಯಿಯ ಜೊತೆಗೆ ಹೊಟ್ಟೆ ಸೇರುತ್ತವೆ. ತೂಕ ಇಳಿಸುವವರು ಇದನ್ನು ಬೆಳಗಿನ ಉಪಹಾರವಾಗಿಯೂ ಸೇವಿಸಬಹುದು.

ನೆಲ್ಲಿ ಸಲಾಡ್‌

ಬೇಸಿಗೆಯಲ್ಲಿ ತಂಪಾದ ಸಲಾಡ್‌ಗಳು ಎಲ್ಲರಿಗೂ ಇಷ್ಟವಾಗುವಂಥವು. ಅದರಲ್ಲೂ ಹುಳಿ-ಸಿಹಿ ರುಚಿಯ ಸಲಾಡ್‌ಗಳು ಮತ್ತೂ ಇಷ್ಟವಾಗುತ್ತವೆ. ಇದಕ್ಕಾಗಿ ನೆಲ್ಲಿಕಾಯಿಯ ಜೊತೆ ಸೌತೇಕಾಯಿ, ದಾಳಿಂಬೆ, ಸೇಬು ಮತ್ತು ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ತೆಗೆದುಕೊಳ್ಳಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೇಕಿದ್ದರೆ ಕೊಂಚ ಕಾಳುಮೆಣಸಿನ ಪುಡಿ ಸೇರಿಸಿ. ನಿಮ್ಮ ರುಚಿಕರ ಸಲಾಡ್‌ ಸಿದ್ಧ.

Image Of Gooseberry Benefits

ನೆಲ್ಲಿ ಪಾಪ್ಸಿಕಲ್‌

ತಂಪಾದ ಏನನ್ನು ಕೊಟ್ಟರೂ ಕೈಯೊಡ್ಡುವಂಥ ಸ್ಥಿತಿ ಈ ಬೇಸಿಗೆಯಲ್ಲಿ. ಅದರಲ್ಲೂ ಫ್ರೋಜನ್‌ ತಿಂಡಿಗಳು ಮತ್ತೂ ಇಷ್ಟವಾಗುತ್ತವೆ. ಪಾಪ್ಸಿಕಲ್‌ ರೂಪದಲ್ಲಿ ನಮಗೆ ಪ್ರಿಯವಾದ್ದನ್ನು ಸವಿಯುವುದು ಬೇರೆಯದೇ ಸೊಗಸನ್ನು ನೀಡುತ್ತದೆ. ನೆಲ್ಲಿಕಾಯನ್ನು ರುಬ್ಬಿ ರಸ ತೆಗೆಯಿರಿ. ಇದಕ್ಕೆ ಕೊಂಚ ಜೇನುತುಪ್ಪ ಮತ್ತು ಸಿಹಿ ಮೊಸರು ಬೆರೆಸಿ. ಈ ಮಿಶ್ರಣವನ್ನು ಪಾಪ್ಸಿಕಲ್‌ ಅಚ್ಚಿಗೆ ಸುರಿಯಿರಿ. ಫ್ರೀಜ್‌ ಮಾಡಿ ತೆಗೆದು ಬಾಯಿ ಚಪ್ಪರಿಸಿದರಾಯಿತು.

ಡಿಟಾಕ್ಸ್‌ ನೀರು

ಬರೀ ನೀರು ಕುಡಿಯುವುದಕ್ಕೆ ಸಾಧ್ಯವಿಲ್ಲ ಎನಿಸಿದರೆ, ಐದು ಲೀ ಪಾತ್ರೆಯಲ್ಲಿ ಹತ್ತಿಪ್ಪತ್ತು ಪುದೀನಾ ಎಲೆಗಳು, ಸೌತೆಕಾಯಿ ಗಾಲಿಗಳು ಮತ್ತು ನೆಲ್ಲಿಯ ತುಂಡುಗಳನ್ನು ಧಾರಾಳವಾಗಿ ಸೇರಿಸಿ. ಒಂದೆರಡು ತಾಸು ಹಾಗೆಯೇ ಬಿಡಿ. ನಂತರ ದಿನವಿಡೀ ಈ ನೀರು ಕುಡಿದು ಸಂತೃಪ್ತಿಯಿಂದಿರಿ. ಇದರಿಂದ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ.

indian gooseberry

ನೆಲ್ಲಿ ಐಸ್‌ ಟೀ

ಆರೆಂಟು ಪುದೀನಾ ಚಿಗುರುಗಳ ಜೊತೆಗೆ ನೆಲ್ಲಿ ಕಾಯಿಯ ತುಣುಕುಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಇದು ಆರಿದ ಮೇಲೆ ಕೊಂಚ ಜೇನುತುಪ್ಪ ಸೇರಿಸಿ, ಫ್ರಿಜ್‌ನಲ್ಲಿಡಿ. ಬೇಕಾದಾಗ ಈ ಈ ಪೇಯವನ್ನು ತೆಗೆದು, ಕುಡಿದು ಸಂಭ್ರಮಿಸಿ. ನೆಲ್ಲಿಕಾಯಿಯನ್ನು ಅತಿಯಾಗಿ ಸೇವಿಸುವುದೂ ಸಮಸ್ಯೆಗಳನ್ನು ತರಬಹುದು. ಈಗಾಗಲೇ ತೂಕ ಕಡಿಮೆ ಇರುವವರು ಇನ್ನೂ ತೂಕ ಇಳಿದ ನಿದಾರ್ಶನಗಳಿವೆ. ಹಾಗಾಗಿ ತೂಕ ಇಳಿಸುವವರು ಇದನ್ನು ಸೇವಿಸಿದಷ್ಟು, ಕಡಿಮೆ ತೂಕದವರಿಗೆ ಬೇಕಾಗುವುದಿಲ್ಲ.

ಇದನ್ನೂ ಓದಿ: Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

Continue Reading

ಆರೋಗ್ಯ

Drinking Water Before Meals: ಊಟಕ್ಕಿಂತ ಎಷ್ಟು ಮೊದಲು ನೀರು ಕುಡಿದರೆ ಒಳ್ಳೆಯದು?

ನೀರು ಶರೀರಕ್ಕೆ ದೊರೆತಷ್ಟೂ ಒಳ್ಳೆಯದು. ಹಾಗೆಂದು ಹೊಟ್ಟೆ ತುಂಬಾ ನೀರು ಕುಡಿದು ಊಟ ಮಾಡಬಹುದೇ? ಆಹಾರ ಸೇವಿಸಿದ ತಕ್ಷಣ ಚೊಂಬುಗಟ್ಟಲೆ ನೀರು ಕುಡಿಯುವ (Drinking Water) ಅಭ್ಯಾಸ ಸರಿಯೇ? ಇಂಥ ಹಲವು ಪ್ರಶ್ನೆಗಳು ನಮ್ಮ ಮನದಲ್ಲಿರಬಹುದು. ಒಂದಿಷ್ಟು ಪ್ರಶ್ನೆಗಳಿಗೆ (Drinking water before meals) ಇಲ್ಲಿದೆ ಉತ್ತರ.

VISTARANEWS.COM


on

Drinking Water Before Meals
Koo

ಬೇಸಿಗೆಯ ಬಿರುಸಿಗೆ ದಿನವಿಡೀ ನೀರು (Health Tips Kannada) ಕುಡಿಯುತ್ತಲೇ ಇರುತ್ತೇವೆ. ಬಿಸಿಲಿನ ದಿನಗಳಲ್ಲಿ ಆರೋಗ್ಯವನ್ನು ಕ್ಷೇಮವಾಗಿ ಇರಿಸಿಕೊಳ್ಳಲು ನೀರು ಕುಡಿಯುವುದು (Drinking Water) ಅಗತ್ಯ. ಆದರೆ ಕುಡಿಯುವ ಸಮಯ ಯಾವುದು ಎಂಬುದು ಕೆಲವೊಮ್ಮೆ ಮುಖ್ಯವಾಗುತ್ತದೆ. ಅಂದರೆ ದಿನವಿಡೀ ಗುಟುಕರಿಸುತ್ತಲೇ ಇರುತ್ತೇವೆ ಎಂಬುದು ಹೌದಾದರೂ, ಊಟಕ್ಕಿಂತ ಎಷ್ಟು ಮೊದಲು-ನಂತರ ಕುಡಿಯಬಹುದು, ಊಟ ಮಾಡುವಾಗಲೂ ಬಾಯಾರಿಕೆ ಎನಿಸಿದರೆ ಆಗೇನು ಮಾಡಬಹುದೆಂಬ ಅನುಮಾನ ಕೆಲವರಿಗಾದರೂ ಬಂದೀತು. ಇನ್ನೇನು ಊಟದ ಹೊತ್ತು ಎನ್ನುವಾಗ ಚೆನ್ನಾಗಿ ನೀರು ಕುಡಿದರೆ ಪಚನಕ್ರಿಯೆಗೆ ಅಡ್ಡಿಯಾಗುತ್ತದೆ. ಇದರಿಂದ ಸತ್ವಗಳನ್ನು ಸರಿಯಾಗಿ ಹೀರಿಕೊಳ್ಳಲಾಗದು ದೇಹಕ್ಕೆ. ಹಾಗಾದರೆ ಬೇಸಿಗೆಯಾದರೂ ನೀರು ಕುಡಿಯುವ ಹೊತ್ತುಗಳನ್ನು ನಿರ್ವಹಿಸುವುದು ಹೇಗೆ? ಈ ಮೂಲಕ ಜೀರ್ಣಕ್ರಿಯೆ ಹೆಚ್ಚು-ಕಡಿಮೆ ಆಗದಂತೆ ಕಾಪಾಡಿಕೊಳ್ಳುವುದು ಹೇಗೆ?

drinking water

ಊಟದ ಮುನ್ನ

ಆಹಾರ ತೆಗೆದುಕೊಳ್ಳುವ ಮುನ್ನ ನೀರು ಕುಡಿಯುವ ಬಗ್ಗೆಯೂ ತಜ್ಞರಲ್ಲಿ ಒಮ್ಮತ ಇದೆ. ಬೆಳಗಿನ ತಿಂಡಿಯ ವಿಷಯಕ್ಕೆ ಬಂದರೆ, ಎದ್ದ ತಕ್ಷಣ ಒಂದೆರಡು ಗ್ಲಾಸ್‌ ನೀರು ಕುಡಿಯುವುದು ಸರಿಯಾದ ಕ್ರಮ. ಕೇವಲ ನೀರೆಂದಲ್ಲ, ಡಿಟಾಕ್ಸ್‌ ಪೇಯಗಳು, ಬಿಸಿ-ತಣ್ಣೀರು ಯಾವುದಾದರೂ ಸರಿ. ಇದನ್ನು ಕುಡಿದ ನಂತರ 45 ನಿಮಿಷಗಳು ಬಿಟ್ಟು ಉಪಾಹಾರ ಸೇವಿಸುವುದು ಒಳ್ಳೆಯದು. ಇದರಿಂದ ಜೀರ್ಣಕ್ರಿಯೆಗೆ ಸರಿಯಾದ ವಾತಾವರಣ ಹೊಟ್ಟೆಯಲ್ಲಿ ನಿರ್ಮಾಣ ಆಗುತ್ತದೆ. ಸತ್ವಗಳನ್ನು ಹೀರಿಕೊಳ್ಳಲು, ಅದನ್ನು ಜೀರ್ಣಿಸಿಕೊಳ್ಳಲು ಪಚನಾಂಗಗಳಿಗೆ ನೆರವಾಗುತ್ತದೆ. ಉಳಿದೆರಡು ಹೊತ್ತಿನ ಊಟಗಳ ವಿಷಯದಲ್ಲಿ ಸ್ವಲ್ಪ ವ್ಯತ್ಯಾಸ ಬೇಕು. 30 ನಿಮಿಗಳ ಮೊದಲು ಬೇಕಾದಷ್ಟು ನೀರು ಕುಡಿಯುವುದು ಹಲವು ರೀತಿಯಲ್ಲಿ ಒಳ್ಳೆಯದು. ಮೊದಲನೇದಾಗಿ, ಊಟ ಮಾಡುವ ಮುನ್ನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವುದು ತಪ್ಪುತ್ತದೆ. ಎರಡನೇದಾಗಿ, ಹೊಟ್ಟೆ ಅತಿಯಾಗಿ ಹಸಿದಿದ್ದರೆ ಸಿಕ್ಕಾಪಟ್ಟೆ ತಿನ್ನುವಂತಾಗುತ್ತದೆ. ಇದೀಗ ಹೊಟ್ಟೆ ಅತಿಯಾಗಿ ಹಸಿದಂತೆಯೂ ಅನಿಸದೆ, ಅಗತ್ಯಕ್ಕಿಂತ ಹೆಚ್ಚು ತಿನ್ನುವುದರ ಮೇಲೆ ಕಡಿವಾಣ ಹಾಕಿದಂತಾಗುತ್ತದೆ. ಹಾಗಾಗಿ ಊಟಕ್ಕಿಂತ 30 ನಿಮಿಷ ಮುನ್ನ ಬೇಕಾದಷ್ಟು ನೀರು ಕುಡಿಯುವುದು ಸರಿಯಾದ ಕ್ರಮ.

ಊಟ ಮಾಡುವಾಗ

ತಿಂಡಿ-ಊಟ ಮಾಡುವಾಗ ನೀರಿಟ್ಟುಕೊಳ್ಳುವುದು ಬಹಳಷ್ಟು ಜನರ ಪದ್ಧತಿ. ʻನೀರಿಲ್ಲದಿದ್ದರೆ ತುತ್ತು ಗಂಟಲಲ್ಲಿ ಇಳಿಯುವುದೇ ಇಲ್ಲʼ ಎನ್ನುವವರೂ ಇದ್ದಾರೆ. ಊಟ ಮಾಡುವಾಗ ನೀರು ಕುಡಿಯುವುದು ತಪ್ಪಲ್ಲದಿದ್ದರೂ, ಅತಿಯಾಗಿ ಕುಡಿಯುವುದು ಸರಿಯಲ್ಲ. ಹಾಗಾಗಿ ಬೇಕಾದಾಗ ಒಂದೊಂದೇ ಗುಟುಕು ಕುಡಿಯುವುದು ಒಳ್ಳೆಯದು. ಊಟದ ನಡುವೆ ಅಲ್ಪ ಪ್ರಮಾಣದ ನೀರು ಕುಡಿಯುವುದು ಒಳ್ಳೆಯದೇ ಎನ್ನುತ್ತಾರೆ ಕೆಲವು ಪೋಷಕಾಂಶ ತಜ್ಞರು. ಇದರಿಂದ ಆಹಾರವನ್ನು ನುಚ್ಚುನುರಿ ಮಾಡುವುದಕ್ಕೆ, ಅನ್ನನಾಳದಲ್ಲಿ ಸರಾಗವಾಗಿ ಕೆಳಗಿಳಿಯುವುದಕ್ಕೆ ಅನುಕೂಲವಾಗುತ್ತದೆ. ಈ ಮೂಲಕ ಪಚನವಾಗುವುದಕ್ಕೂ ಸುಲಭವಾಗುತ್ತದೆ. ಆದರೆ ಲೋಟಗಟ್ಟಲೆ ಕುಡಿಯುವ ಬದಲು ಸ್ವಲ್ಪ ಕುಡಿದರೆ ಒಳ್ಳೆಯದು.

drink water

ಊಟದ ನಂತರ

ಊಟವಾದ ನಂತರ ಸಿಕ್ಕಾಪಟ್ಟೆ ನೀರು ಕುಡಿಯುವ ಅಭ್ಯಾಸವಿದ್ದರೆ, ಅದನ್ನು ದೂರ ಮಾಡುವುದು ಕ್ಷೇಮ. ಕಾರಣ, ಆಹಾರ ಹೊಟ್ಟೆ ಸೇರಿದ ಕೂಡಲೆ ಚೊಂಬುಗಟ್ಟಲೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಏರುಪೇರಾಗುತ್ತದೆ. ಅಜೀರ್ಣ, ಹೊಟ್ಟೆಯುಬ್ಬರದಂಥ ತೊಂದರೆಗಳು ಕಾಣಬಹುದು. ಬದಲಿಗೆ, ಆಹಾರ ಸೇವನೆಯ ನಂತರ ಅಗತ್ಯವಿರುವಷ್ಟೇ ನೀರು ಕುಡಿಯಿರಿ. ಅಲ್ಲಿಂದ 30-60 ನಿಮಿಷಗಳ ವಿರಾಮ ನೀಡಿ. ಆನಂತರ ಬೇಕಾದಷ್ಟು ನೀರು ಕುಡಿಯಿರಿ. ಇದರಿಂದ ಪಚನಕ್ರಿಯೆ ಸುಲಲಿತವಾಗಿ ನೆರವೇರುತ್ತದೆ. ಊಟದ ನಂತರ ಅತಿಯಾಗಿ ನೀರು ಕುಡಿಯುವುದು ಸಲ್ಲದಿದ್ದರೂ, ನೀರನ್ನಂತೂ ಕುಡಿಯಲೇ ಬೇಕು. ಇದರಿಂದ ಹೊಟ್ಟೆ ಚೆನ್ನಾಗಿ ತುಂಬಿದ ಅನುಭವ ದೊರೆಯುತ್ತದೆ. ಹಾಗಾಗಿ ನಡುವೆ ಚುಟುಕು ತಿನಿಸುಗಳನ್ನು ಬಾಯಾಡುವ ಬಯಕೆಗೆ ಕಡಿವಾಣ ಹಾಕುವುದು ಸುಲಭವಾಗುತ್ತದೆ. ಆದರೆ ಆಹಾರದ ನಂತರ ಔಷಧ ತೆಗೆದುಕೊಳ್ಳುವುದಿದ್ದರೆ, ಯಾವುದಾದರೂ ಆರೋಗ್ಯ ಸಮಸ್ಯೆಗಳಿದ್ದರೆ ಅವರ ಅಗತ್ಯಕ್ಕೆ ತಕ್ಕಂತೆ ನೀರು ಕುಡಿಯುವುದು ಸೂಕ್ತ.

ಇದನ್ನೂ ಓದಿ: Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

8-8 ನಿಯಮ

ಬೇಸಿಗೆಯಲ್ಲಿ ಮಾತ್ರವೇ ಅಲ್ಲ, ಎಲ್ಲಾ ದಿನಗಳಲ್ಲೂ 8 ಔನ್ಸ್‌ ಗ್ಲಾಸಿನ ತುಂಬಾ 8 ಬಾರಿ ನೀರು ಕುಡಿಯಲೇ ಬೇಕು ಎನ್ನುತ್ತಾರೆ ಆಹಾರ ತಜ್ಞರು. ದೇಹಕ್ಕೆ ಸಾಕಷ್ಟು ನೀರುಣಿಸುವುದರಿಂದ ಜೀರ್ಣಾಂಗಗಲ್ಲಿರುವ ಬ್ಯಾಕ್ಟೀರಿಯಗಳ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಜೀರ್ಣಕ್ರಿಯೆ ಸರಾಗ ಆಗಿ, ಮಲಬದ್ಧತೆ ದೂರವಾಗಿ, ದೇಹ-ಮನಸ್ಸುಗಳಿಗೆ ಚೈತನ್ಯ ದೊರೆತು, ಪ್ರತಿರೋಧಕ ಶಕ್ತಿ ಪ್ರಬಲವಾಗುತ್ತದೆ. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ.

Continue Reading

ಆರೋಗ್ಯ

World Laughter Day 2024: ಇಂದು ವಿಶ್ವ ನಗುವಿನ ದಿನ; ನಗುನಗುತ ಬಾಳೋಣ

ನಗುವುದರಿಂದ ಆರೋಗ್ಯ ಎಷ್ಟೊಂದು ಲಾಭವಿದೆ ಗೊತ್ತೇ. ಇದನ್ನು ತಿಳಿಸಲೆಂದೇ ವಿಶ್ವದಾದ್ಯಂತ ಮೇ ತಿಂಗಳ ಮೊದಲ ಭಾನುವಾರ ವಿಶ್ವ ನಗುವಿನ ದಿನವನ್ನು (Laughter Day 2024) ಆಚರಿಸಲಾಗುತ್ತದೆ.

VISTARANEWS.COM


on

By

World Laughter Day
Koo

ಎಲ್ಲ ಕಾಯಿಲೆಗಳನ್ನು (illness) ದೂರ ಮಾಡುವ ಶಕ್ತಿ ನಗುವಿಗೆ ಇದೆ. ನಗು ನಮ್ಮ ದೇಹಾರೋಗ್ಯವನ್ನು ಮಾತ್ರವಲ್ಲ ಮನಸ್ಸಿನ ಆರೋಗ್ಯವನ್ನು (mental health) ಉತ್ತಮ ಗೊಳಿಸುತ್ತದೆ. ಹೀಗಾಗಿಯೇ ನಗುವಿನ ಪ್ರಾಮುಖ್ಯತೆಯನ್ನು ಸಾರಲು ವಿಶ್ವದಾದ್ಯಂತ ಮೇ (may) ತಿಂಗಳ ಮೊದಲ ಭಾನುವಾರ ವಿಶ್ವ ನಗುವಿನ ದಿನವನ್ನು (World Laughter Day) ಆಚರಿಸಲಾಗುತ್ತದೆ.


ಮೇ 5ರಂದು ಈ ಬಾರಿ ವಿಶ್ವ ನಗುವಿನ ದಿನವನ್ನು ಆಚರಿಸಲಾಗುತ್ತಿದೆ. ಈ ದಿನವು ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಯಾಕೆಂದರೆ ಇದು ನಗುವಿನ ಅನೇಕ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.

ವಿಶ್ವ ನಗು ದಿನವನ್ನು ಮೊದಲ ಬಾರಿಗೆ 1998ರಲ್ಲಿ ಡಾ. ಮದನ್ ಕಟಾರಿಯಾ ಅವರು ಆಚರಿಸಬೇಕು ಎನ್ನುವುದನ್ನು ಪ್ರಸ್ತಾಪಿಸಿದರು. ಇದರ ಮುಖ್ಯ ಉದ್ದೇಶ ಜಾಗತಿಕ ಏಕತೆ ಮತ್ತು ಸ್ನೇಹದ ಭಾವವನ್ನು ಬೆಳೆಸುವುದಾಗಿತ್ತು. ಆದರೆ ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಸುಧಾರಿಸಲು ಪ್ರಯೋಜನಕಾರಿಯಾಗಿದೆ ಎಂಬುದು ಸಂಶೋಧನೆಗಳಿಂದ ಸಾಬೀತಾದ ಬಳಿಕ ವಿಶ್ವ ನಗುವಿನ ದಿನಾಚರಣೆಯ ಮಹತ್ವ ಮತ್ತಷ್ಟು ಹೆಚ್ಚಾಗಿದೆ.

ನಗುವಿನ ಪ್ರಯೋಜನಗಳೇನು?

ದಕ್ಷತೆ ಸುಧಾರಣೆ

ಸಂತೋಷದ ಸ್ವಭಾವ ಮತ್ತು ನಗು ಸರಳತೆಯ ಭಾವನೆಯನ್ನು ಪ್ರೋತ್ಸಾಹಿಸುವ ಮೂಲಕ ಉತ್ತಮ ಕೆಲಸದ ವಾತಾವರಣವನ್ನು ನಿರ್ಮಿಸಿ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ.

ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ

ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಗುವು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲ ಪಡಿಸುತ್ತದೆ. ರೋಗಗಳನ್ನು ದೂರವಿರಿಸುತ್ತದೆ. ಸಂತೋಷವನ್ನು ಸ್ವೀಕರಿಸುವ ಮನಸ್ಥಿತಿ ಇದ್ದರೆ ಜೀವನದ ಕಷ್ಟಗಳನ್ನು ಸುಲಭವಾಗಿ ನಿಭಾಯಿಸಲು ಮಾನಸಿಕವಾಗಿ ನಾವು ಸದೃಢರಾಗುತ್ತೇವೆ.

ಉತ್ತಮ ಹಾರ್ಮೋನು ಬಿಡುಗಡೆ

ನಗು ಎಂಡಾರ್ಫಿನ್‌ಗಳ ಆಗಮನವನ್ನು ಪ್ರಚೋದಿಸುತ್ತದೆ ಮತ್ತು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನ್‌ಗಳನ್ನು ಕಡಿಮೆ ಮಾಡುತ್ತದೆ. ಇದು ನೋವನ್ನು ನಿವಾರಿಸುತ್ತದೆ, ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ದೇಹದಲ್ಲಿನ ಅಂಗಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಧನಾತ್ಮಕ ಚಿಂತನೆಗೆ ಪ್ರೇರಣೆ

ನಗು ಮನಸ್ಸು ಮತ್ತು ದೇಹವನ್ನು ಧನಾತ್ಮಕವಾಗಿ ಚಿಂತಿಸಲು ಪ್ರೇರಣೆ ನೀಡುತ್ತದೆ. ತೃಪ್ತಿ ಮತ್ತು ಆಸಕ್ತಿಯ ಭಾವನೆಯು ಖಿನ್ನತೆ, ಒತ್ತಡ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಇದು ಧನಾತ್ಮಕ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಮೇಲೆ ಮನಸ್ಸಿನ ಹಿಡಿತ ಸಾಧಿಸುವಂತೆ ಮಾಡುತ್ತದೆ.


ಆತ್ಮವಿಶ್ವಾಸ ವೃದ್ಧಿ

ನಗುವುದು ಮತ್ತು ಸಂತೋಷವನ್ನು ಅಳವಡಿಸಿಕೊಳ್ಳುವುದು ಸರಳ ಜೀವನಕ್ಕೆ ದಾರಿಯಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು ಸಹಾಯ ಮಾಡುತ್ತದೆ. ಪ್ರ ಆತ್ಮವಿಶ್ವಾಸವನ್ನು ವೃದ್ಧಿಸಿ ಶಾಂತ ಮನೋಭಾವವನ್ನು ಬೆಳೆಸುತ್ತದೆ.

ಅಸ್ವಸ್ಥತೆ ದೂರ

ನಗುವಿನಿಂದ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ವೃದ್ಧಿಯಾಗಿ ಮಾನಸಿಕ ಅಸ್ವಸ್ಥತೆಯಿಂದ ನಮ್ಮನ್ನು ದೂರವಿರಿಸುತ್ತದೆ. ಒತ್ತಡದಂತಹ ಋಣಾತ್ಮಕ ಪರಿಣಾಮಗಳಿಂದ ನಮ್ಮನ್ನು ರಕ್ಷಿಸುತ್ತದೆ. ಒಳ್ಳೆಯ ನಗು ನಿಮ್ಮ ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯ ಉಂಟು ಮಾಡುತ್ತದೆ.

ಇದನ್ನೂ ಓದಿ: Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

ಭಾವನೆಗಳ ಸಮತೋಲನ

ನಗು ನಮ್ಮಲ್ಲಿ ಭರವಸೆಯನ್ನು ಹುಟ್ಟುಹಾಕುತ್ತದೆ. ನಗು ನಮ್ಮನ್ನು ಇತರರೊಂದಿಗೆ ಸುಲಭವಾಗಿ ಹೊಂದಿಕೊಂಡು ಹೋಗಲು ಸಹಾಯ ಮಾಡುತ್ತದೆ. ಇದರಿಂದ ಆಕ್ರೋಶ ಕಡಿಮೆಯಾಗುತ್ತದೆ. ಕ್ಷಮೆಯ ಗುಣವನ್ನು ಉತ್ತೇಜಿಸುತ್ತದೆ.

ಸಂಬಂಧಗಳನ್ನು ಬಲಪಡಿಸುತ್ತದೆ

ನಗು ಸಂಬಂಧಗಳಲ್ಲಿ ಇರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಲು, ಸಂಬಂಧಗಳನ್ನು ಬಲಪಡಿಸಲು ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

Continue Reading

ಆರೋಗ್ಯ

Mobile Side Effect: ಅತಿಯಾದ ಮೊಬೈಲ್ ಬಳಕೆ; ಮಕ್ಕಳು ಕಿವುಡರಾಗುತ್ತಿದ್ದಾರೆ!

ಮೊಬೈಲ್ ಫೋನ್‌ಗಳು, ಟ್ಯಾಬ್‌ಗಳು, ಗೇಮಿಂಗ್ ಸಾಧನಗಳು ಮತ್ತು ಪರದೆಯ ಬಳಕೆಯಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆಯಿಂದಾಗಿ ಮಕ್ಕಳಲ್ಲಿ ವಿಳಂಬ ಚಟುವಟಿಕೆಗಳು ಮಾತ್ರವಲ್ಲದೇ 15 ರಿಂದ 30 ವರ್ಷದೊಳಗಿನವರಲ್ಲಿ ಶ್ರವಣ ದೋಷ ಹೆಚ್ಚಾಗಿ ಕಂಡು ಬರುತ್ತಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಈ ಕುರಿತು ನಡೆದ ಸಂಶೋಧನೆಯ ಮಾಹಿತಿ (Mobile Side Effect)ಇಲ್ಲಿದೆ.

VISTARANEWS.COM


on

By

Mobile Side Effect
Koo

ಕೋವಿಡ್ (covid) ಬಳಿಕ ಕಳೆದ ಮೂರು ನಾಲ್ಕು ವರ್ಷಗಳಿಂದ ಮಕ್ಕಳು (Mobile Side Effect) ತಡವಾಗಿ ಮಾತನಾಡುವ ಪ್ರಕರಣಗಳು, ಸೀಮಿತ ಭಾಷೆಯೊಂದಿಗೆ ಮತ್ತು ಸ್ವಲೀನತೆಯ (autism) ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಮೊಬೈಲ್ ಫೋನ್ ಗಳ (phone) ಸುದೀರ್ಘ ಬಳಕೆಯಿಂದ ಶ್ರವಣ ದೋಷ (Hearing Disorder) ಉಂಟಾಗುತ್ತದೆ ಎಂದು ಚಂಡೀಗಢ (Chandigarh) ಪಿಜಿಐನ (PGI) ಓಟೋಲರಿಂಗೋಲಜಿ ವಿಭಾಗದ ಪ್ರೊ. ಸಂಜಯ್ ಮುಂಜಾಲ್ ತಿಳಿಸಿದ್ದಾರೆ.


ಪಿಜಿಐನ ಓಟೋಲರಿಂಗೋಲಜಿ (ಇಎನ್‌ಟಿ) ವಿಭಾಗವು ಐಸಿಎಂಆರ್‌ಗೆ ಸಲ್ಲಿಸಿದ ಹೊಸ ಸಂಶೋಧನೆ ವರದಿಯಲ್ಲಿ ಮೊಬೈಲ್ ಫೋನ್‌ಗಳು, ಟ್ಯಾಬ್‌ಗಳು, ಗೇಮಿಂಗ್ ಸಾಧನಗಳು ಮತ್ತು ಪರದೆಯ ಬಳಕೆಯಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆಯಿಂದಾಗಿ ಮಕ್ಕಳಲ್ಲಿ ವಿಳಂಬ ಚಟುವಟಿಕೆಗಳು ಮಾತ್ರವಲ್ಲದೇ 15 ರಿಂದ 30 ವರ್ಷದೊಳಗಿನವರಲ್ಲಿ ಶ್ರವಣ ದೋಷ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹೇಳಿದೆ. ಕೋವಿಡ್ ಅನಂತರ ಮಕ್ಕಳಲ್ಲಿ ಏಕಮುಖ ಸಂವಹನ ಹೆಚ್ಚಾಗಿದೆ. ಮೊಬೈಲ್ ನಲ್ಲಿ ಆಟಗಳನ್ನು ಆಡುವುದು, ಫೋನ್‌ ಪರದೆಯನ್ನು ವೀಕ್ಷಿಸುವುದು, ಟ್ಯಾಬ್‌ಗಳಲ್ಲಿ ಏಕಮುಖ ಸಂವಹನ ನಡೆಸುವುದು ಅತ್ಯಧಿಕವಾಗಿದೆ. ಮಾತು ದ್ವಿಮುಖವಾಗಿರುತ್ತದೆ. ಇದನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸುತ್ತಿಲ್ಲ ಎಂದು ತಿಳಿಸಿದರು.

ಮಕ್ಕಳಿಗೆ ಪ್ರಾರಂಭದ ಎರಡು ವರ್ಷಗಳಲ್ಲಿ ಸಾಕಷ್ಟು ಸಾಮಾಜಿಕ ಸಂವಹನದ ಅವಶ್ಯಕವಿರುತ್ತದೆ. ಆದರೆ ಈ ಸಂದರ್ಭದಲ್ಲಿ ಅವರು ತಮ್ಮದೇ ಆದ ಜಗತ್ತಿನಲ್ಲಿ ವಾಸಿಸುವುದು, ಕೇವಲ ನೋಡುವುದು ಮತ್ತು ಆಲಿಸುವುದನ್ನು ಮಾಡುತ್ತಾರೆ. ಆದರೆ ಗ್ಯಾಜೆಟ್ ಗಳು ಮೊದಲ ಎರಡು ವರ್ಷಗಳಲ್ಲಿ ಅಗತ್ಯವಿರುವ ಸಾಕಷ್ಟು ಪ್ರಚೋದನೆಯನ್ನು ಒದಗಿಸುವುದಿಲ್ಲ. ಅಂತಹ ಚಿಕ್ಕ ಮಕ್ಕಳು ಗಂಟೆಗಟ್ಟಲೆ ಗ್ಯಾಜೆಟ್‌ಗಳನ್ನು ಬಳಸುವುದರಿಂದ ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ಕಳೆದ ಒಂದು ತಿಂಗಳಲ್ಲಿ ಆಟಿಸಂ ನ ಅನೇಕ ಪ್ರಕರಣಗಳು ಕಂಡು ಬರುತ್ತಿದೆ. ಮಕ್ಕಳ ಮತ್ತು ಮನೋವೈದ್ಯಕೀಯ ವಿಭಾಗಗಳಿಂದ ಪ್ರಾಥಮಿಕ ರೋಗನಿರ್ಣಯದ ಅನಂತರ ಮಕ್ಕಳನ್ನು ಆಟಿಸಂ ನ ವಿಭಾಗಕ್ಕೆ ಕಳುಹಿಸಲಾಗುತ್ತಿದೆ ಎನ್ನುತ್ತಾರೆ ಡಾ. ಮುಂಜಾಲ್ ಹೇಳಿದ್ದಾರೆ.


ಆಟಿಸಂನ ಚಿಹ್ನೆಗಳು ಹೆಚ್ಚುತ್ತಿರುವುದು ಯಾಕೆ?


ಪೋಷಕರು ಆಟಿಸಂನ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿದಿರಬೇಕು. ಮಕ್ಕಳಿಗೆ ಒಂದರಿಂದ ಆರು ವರ್ಷಗಳ ನಡುವಿನ ವಯಸ್ಸು ಅತ್ಯಂತ ಮುಖ್ಯವಾಗಿದೆ.‌ ಈ ವಯಸ್ಸಿನ ಮಕ್ಕಳು ಸಂವಾದಿಸಲು ಹೆಚ್ಚು ಸನ್ನೆ ಮತ್ತು ಚಿಹ್ನೆಗಳನ್ನು ಬಳಸುತ್ತಿದ್ದಾರೆ. ಅವರ ಭಾವನೆಗಳನ್ನು ವ್ಯಕ್ತಪಡಿಸಲು ಮೂಲಭೂತ ಅಗತ್ಯಗಳನ್ನು ಸನ್ನೆಗಳ ಮೂಲಕ ಪ್ರಯತ್ನಿಸುತ್ತಾರೆ. ಇವರಲ್ಲಿ ಭಾಷೆಯ ಬಳಕೆಯ ಕೊರತೆಯಿದೆ ಎಂದರು.

ಕಡಿಮೆ ಮಾನವ ಸಂವಹನ, ಅವಿಭಕ್ತ ಕುಟುಂಬ ವ್ಯವಸ್ಥೆಯ ವಿಘಟನೆ ಹೀಗೆ ಈಗಿನ ಸಮಸ್ಯೆಗಳು ಹಲವಾರು ಮಕ್ಕಳ ಸರಿಯಾದ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಮಕ್ಕಳು ಯಾವುದೇ ಗ್ಯಾಜೆಟ್‌ಗೆ ಒಂದು ಗಂಟೆಗಿಂತ ಹೆಚ್ಚು ಅಥವಾ ಕಡಿಮೆ ಕಾಲ ಒಡ್ಡಿಕೊಳ್ಳಬಾರದು ಎಂದು ನಮಗೆ ತಿಳಿದಿದೆ ಆದರೂ ಮಕ್ಕಳ ಮೇಲೆ ಅವುಗಳ ಪರಿಣಾಮವನ್ನು ಉಂಟು ಮಾಡುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ವಾಕ್ ಪ್ರಚೋದನೆ ಸೇರಿದಂತೆ ಹಲವಾರು ಚಿಕಿತ್ಸೆಗಳನ್ನು ನೀಡುತ್ತೇವೆ. ಇದಕ್ಕಾಗಿ ಪೂರ್ಣ ಪ್ರಮಾಣದ ಅಧ್ಯಯನವನ್ನು ಮಾಡಲು ಯೋಜಿಸುತ್ತಿದ್ದೇವೆ. ಈ ಕುರಿತು ಯೋಜನೆಯನ್ನು ಐಸಿಎಂಆರ್ ಗೆ ಸಲ್ಲಿಸಿದ್ದೇವೆ ಎಂದರು.

ಯಾರಲ್ಲಿ ಹೆಚ್ಚು?

ಇಲಾಖೆಯಲ್ಲಿ ಪ್ರತಿದಿನ ಎರಡು ಅಥವಾ ಮೂರು ಶ್ರವಣ ದೋಷದ ಪ್ರಕರಣಗಳು ಕಂಡುಬರುತ್ತಿವೆ. ಇವರಲ್ಲ 15ರಿಂದ 30 ವರ್ಷ ವಯಸ್ಸಿನವರು ಹೆಚ್ಚಾಗುತ್ತಿದ್ದಾರೆ. ಮೊಬೈಲ್ ಫೋನ್‌ಗಳಲ್ಲಿ ಹೆಚ್ಚು ಗಂಟೆಗಳ ಕಾಲ ಮಾತನಾಡುವುದು, ಹೆಡ್‌ಫೋನ್‌ಗಳ ಅತಿಯಾದ ಬಳಕೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದರು.
ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಮೊಬೈಲ್ ಫೋನ್ ಗಳನ್ನು ಬಳಕೆ ಮಾಡುವುದರಿಂದ ಶ್ರವಣದೋಷವು ಹೆಚ್ಚಾಗುತ್ತಿದೆ. ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಶ್ರವಣ ಸಾಧನಗಳ ಮೇಲೆ ಅತಿಯಾದ ಅವಲಂಬನೆಯನ್ನು ತಡೆಯಬೇಕು ಎಂದು ಡಾ. ಮುಂಜಾಲ್ ವಿವರಿಸುತ್ತಾರೆ.


ಶ್ರವಣ ದೋಷಕ್ಕೆ ಕಾರಣ

ಹೆಡ್‌ಫೋನ್‌ಗಳ ಅತಿಯಾದ ದೈನಂದಿನ ಬಳಕೆಯು ಶ್ರವಣ ನಷ್ಟದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಏಕೆಂದರೆ ಇದು ನೇರವಾದ ಧ್ವನಿಯಾಗಿದೆ ಮತ್ತು ನಮ್ಮ ಕಿವಿಗಳು 85 ಡೆಸಿಬಲ್‌ಗಳ (dB) ವರೆಗಿನ ಶಬ್ದಗಳನ್ನು ಮಾತ್ರ ಕೇಳಲು ವಿನ್ಯಾಸಗೊಳಿಸಲಾಗಿದೆ, ಆದರೆ ಇಯರ್‌ಫೋನ್‌ಗಳು ಅಥವಾ ಹೆಡ್‌ಫೋನ್‌ಗಳು ಇದಕ್ಕಿಂತ ಹೆಚ್ಚಿನ ಶಬ್ದಗಳನ್ನು ಹೊರಸೂಸುತ್ತವೆ.

ಇದನ್ನೂ ಓದಿ; Tips For Healthy Skin: ಕಡಲೆಹಿಟ್ಟೆಂಬ ಶತಮಾನಗಳ ಹಳೆಯ ಸೌಂದರ್ಯವರ್ಧಕ!

ಏನು ಮಾಡಬಹುದು ?

ಡೆಸಿಬಲ್ ಹೆಚ್ಚಾದರೆ, ಬಳಕೆಯನ್ನು ಕಡಿಮೆ ಮಾಡಬೇಕು. ಅಂದರೆ 90 ಡಿಬಿ ನಾಲ್ಕು ಗಂಟೆಗಳಿಗಿಂತ ಹೆಚ್ಚಿರಬಾರದು. ಎರಡು ಗಂಟೆಗೆ 95 ಡಿಬಿ ಮತ್ತು ಒಂದು ಗಂಟೆಗೆ 100 ಡಿಬಿ ಇರಬಾರದು. ಈಗಿನ ಪೀಳಿಗೆಯು ಚಿಕ್ಕ ವಯಸ್ಸಿನಿಂದಲೇ ಗ್ಯಾಜೆಟ್‌ಗಳಿಗೆ ಒಡ್ಡಿಕೊಳ್ಳುವುದರಿಂದ ಹಾನಿಯು ಆರಂಭಿಕ ಹಂತದಲ್ಲಿ ಕಂಡುಬರುತ್ತದೆ ಮತ್ತು ಮೊದಲ ಲಕ್ಷಣವೆಂದರೆ ಕಿವಿ ಅಥವಾ ಟಿನ್ನಿಟಸ್‌ನಲ್ಲಿ ರಿಂಗಿಂಗ್ ಶಬ್ದ. ದೀರ್ಘ ಕರೆಗಳನ್ನು ತಪ್ಪಿಸಿ, ಸ್ಪೀಕರ್ ಫೋನ್ ಬಳಸಿ. ದೀರ್ಘಾವಧಿಯವರೆಗೆ ಜೋರಾಗಿ ಧ್ವನಿಯಲ್ಲಿ ಸಂಗೀತವನ್ನು ಕೇಳಬೇಡಿ ಮತ್ತು ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ, ಯಾವುದೇ ರೋಗಲಕ್ಷಣದ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಎನ್ನುತ್ತಾರೆ ಡಾ. ಮುಂಜಾಲ್ ತಿಳಿಸಿದ್ದಾರೆ.

Continue Reading
Advertisement
Summer Health Tips
ಆರೋಗ್ಯ7 mins ago

Summer Health Tips: ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!

karnataka Weather Forecast
ಮಳೆ37 mins ago

Karnataka Weather : ಮುಕ್ಕಾಲು ಕರ್ನಾಟಕಕ್ಕೆ ಸುಡು ಬಿಸಿಲು; ಉಳಿದೆಡೆ ಗುಡುಗು ಸಹಿತ ಮಳೆ

Vistara Editorial
ಸಂಪಾದಕೀಯ1 hour ago

ವಿಸ್ತಾರ ಸಂಪಾದಕೀಯ: ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ, ನಿಷ್ಪಕ್ಷಪಾತ ತನಿಖೆಯಾಗಲಿ

Drinking Water Before Meals
ಆರೋಗ್ಯ1 hour ago

Drinking Water Before Meals: ಊಟಕ್ಕಿಂತ ಎಷ್ಟು ಮೊದಲು ನೀರು ಕುಡಿದರೆ ಒಳ್ಳೆಯದು?

World Laughter Day
ಆರೋಗ್ಯ2 hours ago

World Laughter Day 2024: ಇಂದು ವಿಶ್ವ ನಗುವಿನ ದಿನ; ನಗುನಗುತ ಬಾಳೋಣ

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

HD Revanna
ಕರ್ನಾಟಕ7 hours ago

HD Revanna: ಛೇ, ಎಂಥ ಸ್ಥಿತಿ ಬಂತಪ್ಪ; ಎಸ್‌ಐಟಿ ಸೆಲ್‌ನಲ್ಲಿ ಗಳಗಳನೆ ಅತ್ತ ಎಚ್‌.ಡಿ.ರೇವಣ್ಣ

Road Accident
ಕರ್ನಾಟಕ7 hours ago

Road Accident: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವು

Virat kohli
ಪ್ರಮುಖ ಸುದ್ದಿ7 hours ago

IPL 2024 : ಟೀಕೆಗಳಿಗೆ ಪ್ರತಿಕ್ರಿಯಿಸುವುದು ಯಾಕೆ? ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗವಾಸ್ಕರ್​

IPL 2024
ಕ್ರೀಡೆ8 hours ago

IPL 2024 : ಅತಿ ವೇಗದ ಬೌಲರ್​ ಮಯಾಂಕ್ ಐಪಿಎಲ್​ನಿಂದ ಔಟ್​​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌