Watermelon: ಕಲ್ಲಂಗಡಿ ಹಣ್ಣನ್ನು ಕತ್ತಲಾದ ಮೇಲೆ ತಿನ್ನಬಾರದು ಯಾಕೆ ಗೊತ್ತೇ? - Vistara News

ಆರೋಗ್ಯ

Watermelon: ಕಲ್ಲಂಗಡಿ ಹಣ್ಣನ್ನು ಕತ್ತಲಾದ ಮೇಲೆ ತಿನ್ನಬಾರದು ಯಾಕೆ ಗೊತ್ತೇ?

ಕಲ್ಲಂಗಡಿಯಲ್ಲಿ ಕ್ಯಾಲರಿ ಕಡಿಮೆ ಇದೆ ನಿಜ. ಆದರೆ, ಇದು ಕತ್ತಲು ಕವಿದ ಮೇಲೆ ತಿನ್ನಬಹುದಾದ ಹಣ್ಣಲ್ಲ. ಯಾಕೆಂದರೆ, ಈ ನೀರುನೀರಾದ ಹಣ್ಣು ಬೇಗ ದೇಹದಲ್ಲಿ ಕರಗಿಬಿಡುತ್ತದೆ ಎಂದು ನೀವು ಲೆಕ್ಕಾಚಾರ ಹಾಕಿದರೆ ನಿಮ್ಮ ಊಹೆ ಸುಳ್ಳಾಗಿ ಬಿಡಬಹುದು.

VISTARANEWS.COM


on

watermelon
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೇಸಿಗೆಯ ಧಗೆಗೆ ನಾವು ಸಹಜವಾಗಿಯೇ ಕಲ್ಲಂಗಡಿ ಹಣ್ಣಿನ ಮೊರೆ ಹೋಗುವುದು ಸಹಜ. ಬಿಸಿಲಿನ ಝಳಕ್ಕೆ ಕಲ್ಲಂಗಡಿಗಿಂತ ದೊಡ್ಡ ಅಮೃತ ಈ ಕಾಲದಲ್ಲಿ ಬೇರೆ ಇರಲಿಕ್ಕಿಲ್ಲ ಎಂದು ಅನಿಸುವುದೂ ಸಹಜ. ಇದು ಕೇವಲ ರುಚಿಯಷ್ಟೇ ಅಲ್ಲ, ಹೊಟ್ಟೆ ತುಂಬುವುದೂ ನಿಜ, ಆರೋಗ್ಯಕರ ಎಂಬುದೂ ಅಷ್ಟೇ ಸತ್ಯ. ತೂಕ ಇಳಿಸುವಿಕೆಗೆ ಪೂರಕವಾದ ಲೈಕೋಪೀನ್‌ ಪ್ರಮಾಣ ಇದರಲ್ಲಿ ಹೆಚ್ಚಿರುವುದರಿಂದ ಜೊತೆಗೆ ಆರೋಗ್ಯಕರವಾದ ಎಲ್ಲ ಲಾಭಗಳನ್ನೂ ಹೊತ್ತು ತಂದಿರುವುದರಿಂದ ಬಹಳಷ್ಟು ಮಂದಿ ಬೇಸಿಗೆಯಲ್ಲಿ ಇದನ್ನು ಊಟದ ಮಧ್ಯದ ಹಸಿವಿನ ಸಮಯಕ್ಕೆ ಅಂದರೆ ಸ್ನ್ಯಾಕ್‌ ಟೈಮ್‌ ಆಹಾರವಾಗಿ ಬಳಸುವುದೇ ಹೆಚ್ಚು. ಆ ಹೊತ್ತಿಗೆ ಇದು ಪರ್ಫೆಕ್ಟ್‌ ಆಹಾರ ಕೂಡಾ. ರಕ್ತದೊತ್ತಡದ ಏರುಪೇರು, ಹೃದಯದ ತೊಂದರೆ ಇರುವ ಮಂದಿಗೆ, ಕಿಡ್ನಿಯ ಆರೋಗ್ಯಕ್ಕೆ ಹಾಗೂ ಸಿಹಿ ತಿಂಡಿ ಬೇಕೆನಿಸುವ ಮಂದಿಗೆಈ ಹಣ್ಣು ಅತ್ಯುತ್ತಮ ಪರಿಹಾರ ಕೂಡಾ. ಹಾಗಾಗಿ ಒಳ್ಳೆಯ ಹಣ್ಣು ಎಂದು ಧಾರಾಳವಾಗಿ ತಿನ್ನಬಹುದು.

ಆದರೆ ಬಹಳಷ್ಟು ಮಂದಿ ಮಾಡುವ ತಪ್ಪು ಎಂದರೆ, ಇದು ತೂಕ ಇಳಿಸಲು ಪರ್ಫೆಕ್ಟ್‌ ಹಣ್ಣು ಎಂದುಕೊಂಡು ಮೂರೂ ಹೊತ್ತು ಕಲ್ಲಂಗಡಿಯನ್ನೇ ತಿನ್ನುವುದು. ಅಥವಾ ರಾತ್ರಿಯೂಟದ ಬದಲು ಕಲ್ಲಂಗಡಿ ತಿನ್ನುವುದು. ಕಲ್ಲಂಗಡಿಯಲ್ಲಿ ಕಡಿಮೆ ಕ್ಯಾಲರಿ ಇದೆಯಾದ್ದರಿಂದ ರಾತ್ರಿಗೆ ಒಳ್ಳೆಯದಿರಬಹುದು ಎಂದು ತಾವೇ ಊಹನೆ ಮಾಡಿಕೊಂಡು ತಿನ್ನುವುದು. ಹೀಗೆ ಇರುವ ತಪ್ಪು ಕಲ್ಪನೆಗಳಿಂದಾಗಿಯೇ, ಹಲವಾರು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ ಎಂಬುದನ್ನು ನೆನಪಿಡಿ.

ಕಲ್ಲಂಗಡಿಯಲ್ಲಿ ಕ್ಯಾಲರಿ ಕಡಿಮೆ ಇದೆ ನಿಜ. ಆದರೆ, ಇದು ಕತ್ತಲು ಕವಿದ ಮೇಲೆ ತಿನ್ನಬಹುದಾದ ಹಣ್ಣಲ್ಲ. ಯಾಕೆಂದರೆ, ಈ ನೀರುನೀರಾದ ಹಣ್ಣು ಬೇಗ ದೇಹದಲ್ಲಿ ಕರಗಿಬಿಡುತ್ತದೆ ಎಂದು ನೀವು ಲೆಕ್ಕಾಚಾರ ಹಾಕಿದರೆ ನಿಮ್ಮ ಊಹೆ ಸುಳ್ಳಾಗಿ ಬಿಡಬಹುದು. ದೇಹದಲ್ಲಿ ಬೇಗನೆ ಕರಗಬಲ್ಲ ಹಣ್ಣು ಇದಲ್ಲ. ಇದರಿಂದ ಮಾರನೇ ದಿನ ಹೊಟ್ಟೆ ಕೆಡುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಕತ್ತಲಾದ ಮೇಲೆ ಈ ಹಣ್ಣು ದೇಹದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಲ್ಲುದು. ಹಾಗಾಗಿ ಕಲ್ಲಂಗಡಿ ಹಣ್ಣನ್ನು ತಿನ್ನಲು ಸೂಕ್ತವಾದ ಸಮಯವೆಂದರೆ ಮಧ್ಯಾಹ್ನ 12ರಿಂದ 1 ಗಂಟೆಯಂತೆ. ಆಫೀಸಿನ ಕೆಲಸದ ಮಧ್ಯೆ, ದೇಹ ಮನಸ್ಸು ತಂಪಾಗಿಸಿಕೊಳ್ಳಲು, ಕೆಲಸ ಚುರುಕಾಗಿಸಿಕೊಳ್ಳಲು ನಮಗೆ ನಾವು ಕೊಡಬಹುದಾದ ಅತ್ಯುತ್ತಮ ಮಿಡ್‌ಟೈಮ್‌ ಸ್ನ್ಯಾಕ್‌ ಇದು, ಅಷ್ಟೇ.

ಕಲ್ಲಂಗಡಿ ಹಣ್ಣನ್ನು ರಾತ್ರಿಯಾದ ಮೇಲೆ ತಿನ್ನುವುದು ಒಳ್ಳೆಯದಲ್ಲ ಎನ್ನಲು ಇನ್ನೂ ಅನೇಕ ಕಾರಣಗಳಿವೆ. ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಹೇರಳವಾಗಿ ಇರುವುದರಿಂದ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗಬಹುದು. ಇದರಿಂದ ರಾತ್ರಿ ತಿಂದರೆ, ನಿದ್ದೆಗೂ ತೊಂದರೆಯಾಗಬಹುದು. ನೆಗಡಿ, ಶೀತದ ತೊಂದರೆಯಿರುವ ಮಂದಿಗೂ ಕಲ್ಲಂಗಡಿ ರಾತ್ರಿಯ ಹೊತ್ತು ಇಂತಹ ತೊಂದರೆಯನ್ನು ಹೆಚ್ಚು ಮಾಡುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Watermelon Selection: ಸಿಹಿಯಾದ ಪರ್ಫೆಕ್ಟ್‌ ಕಲ್ಲಂಗಡಿ ಹಣ್ಣು ಆಯ್ಕೆ ಹೇಗೆ? ಇಲ್ಲಿವೆ ಟಿಪ್ಸ್!

ಕಲ್ಲಂಗಡಿ ಹಣ್ಣಿನಲ್ಲಿ ಮಾಡಬಹುದಾದ ಕೆಲವು ಅತ್ಯುತ್ತಮ ಪೇಯಗಳ ವಿವರ ಇಲ್ಲಿದೆ.

ಕಲ್ಲಂಗಡಿ ನಿಂಬೆ ಟಾನಿಕ್:‌ ಕಲ್ಲಂಗಡಿ ಹಣ್ಣಿನ ಜೊತೆ ನಿಂಬೆಹಣ್ಣನ್ನೂ ಸೇರಿಸಿ ಜ್ಯೂಸ್‌ ಮಾಡಿ ಮಧ್ಯಾಹ್ನದ ಹೊತ್ತಿನಲ್ಲಿ ಹೀರಿ. ಬೇಕಿದ್ದರೆ ತಣ್ಣಗಿರಲು ಒಂದೆರಡು ಐಸ್‌ಕ್ಯೂಬನ್ನೂ ಸೇರಿಸಿ. ದಣಿದ ದೇಹಕ್ಕೆ ಒಳ್ಳೆಯ ಟಾನಿಕ್‌ ಇದು. ಇದು ಬಾಯಾರಿಕೆಯನ್ನಷ್ಟೇ ಓಡಿಸುವುದಿಲ್ಲ. ದೇಹವನ್ನೂ ತಂಪಾಗಿಸುತ್ತದೆ.

೨. ಕಲ್ಲಂಗಡಿ ಸೌತೆಕಾಯಿ ಜ್ಯೂಸ್‌: ಬೇಸಿಗೆಗೆ ಹೇಳಿ ಮಾಡಿಸಿದಂತಹ ಸೌತೆಕಾಯಿಯ ಜೊತೆಗೆ ಕಲ್ಲಂಗಡಿ ಹಣ್ಣನ್ನೂ ಸೇರಿಸಿ ಐಸ್‌ ಕ್ಯೂಬ್‌ ಹಾಕಿ ಜ್ಯೂಸ್‌ ಮಾಡಿ. ಆಯಾಸಗೊಂಡ ದೇಹ ಹಾಗೂ ಮನಸ್ಸಿಗೆ ಇದಕ್ಕಿಂತ ತಣ್ಣಗಿನ ಡ್ರಿಂಕ್‌ ಇನ್ನೊಂದು ಸಿಗಲಿಕ್ಕಿಲ್ಲ.

೩. ಕಲ್ಲಂಗಡಿ ಸ್ಮೂದಿ: ಹೊಟ್ಟೆ ತುಂಬುವಂಥ ಡ್ರಿಂಕ್‌ ಏನಾದರೂ ಕುಡಿಯಬೇಕು ಅನಿಸಿದರೆ, ಕಲ್ಲಂಗಡಿ ಸ್ಮೂದಿ ಬೆಸ್ಟ್‌. ಸ್ವಲ್ಪ ಸ್ಟ್ರಾಬೆರಿ ಹಣ್ಣುಗಳನ್ನು ಕಲ್ಲಂಗಡಿ ಹಣ್ಣಿನ ಜೊತೆಗೆ ಸೇರಿಸಿ ದಪ್ಪದ ಸ್ಮೂದಿ ಮಾಡಿ. ಸ್ವಲ್ಪ ಮೊಸರು ಸೇರಿಸಿಕೊಳ್ಳಿ. ಹೊಟ್ಟೆ ತಣ್ಣಗಾಗುವ ಜೊತೆಗೆ ಹಸಿವೂ ಇಂಗುತ್ತದೆ.

ಇದನ್ನೂ ಓದಿ: Watermelon: ಕಲ್ಲಂಗಡಿ ಹಣ್ಣನ್ನು ಅತಿಯಾಗಿ ಯಾಕೆ ತಿನ್ನಬಾರದು ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

ಸೊಳ್ಳೆಯಿಂದ ಬರುವಂಥ ರೋಗಗಳೆಲ್ಲ (World Malaria Day) ಒಂದೇ ರೀತಿಯವು ಎನ್ನುವಂತಿಲ್ಲ. ಪ್ರತಿಯೊಂದು ರೋಗಕ್ಕೂ ಅದರದ್ದೇ ಆದ ಭಿನ್ನ ಸ್ವರೂಪವಿದೆ, ಲಕ್ಷಣಗಳಿವೆ, ಹಾಗಾಗಿ ಚಿಕಿತ್ಸೆಯೂ ಬೇರೆ ಆಗಬೇಕು. ಹಾಗಾಗಿ ಈ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿದ್ದರೆ, ಸಮಸ್ಯೆ ಬಿಗಡಾಯಿಸುತ್ತದೆ. ಸೊಳ್ಳೆಗಳಿಂದಲೇ ಪ್ರಸರಣವಾಗುವ ಮಲೇರಿಯ ಮತ್ತು ಡೆಂಗು ರೋಗಗಳಿಗೆ ವ್ಯತ್ಯಾಸವೇನು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

World Malaria Day
Koo

ಈ ಬೇಸಿಗೆಯಲ್ಲಿ ಸೊಳ್ಳೆಗಳ ಹಾವಳಿ (World Malaria Day) ಹೆಚ್ಚಿನ ಕಡೆಗಳಲ್ಲಿ ತೀವ್ರವಾಗಿ ಕಾಣುತ್ತಿದೆ. ಮುಂಗಾರು ಬರುವ ಮೊದಲೇ ಸೊಳ್ಳೆಗಳು ದಾಂಗುಡಿಯಿಟ್ಟಿವೆ. ಬೇಸಿಗೆ ರಜೆಯೆಂಬ ನೆವದಲ್ಲಿ ಪ್ರಯಾಣ ಮಾಡುವಾಗ ಸೊಳ್ಳೆಗಳ ಕಾಟವಿರುವ ಊರು ಎದುರಾದರೆ ಆತಂಕವಾಗುವುದು ಸಹಜ. ಸೊಳ್ಳೆಯಿಂದ ಬರುವಂಥ ರೋಗಗಳೆಲ್ಲ ಒಂದೇ ರೀತಿಯವು ಎನ್ನುವಂತಿಲ್ಲ. ಪ್ರತಿಯೊಂದು ರೋಗಕ್ಕೂ ಅದರದ್ದೇ ಆದ ಭಿನ್ನ ಸ್ವರೂಪವಿದೆ, ಲಕ್ಷಣಗಳಿವೆ, ಹಾಗಾಗಿ ಚಿಕಿತ್ಸೆಯೂ ಬೇರೆ ಆಗಬೇಕು. ಹಾಗಾಗಿ ಈ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿದ್ದರೆ, ಸಮಸ್ಯೆ ಬಿಗಡಾಯಿಸುತ್ತದೆ. ಈ ನಿಟ್ಟಿನಲ್ಲಿ, ಸೊಳ್ಳೆಗಳಿಂದಲೇ ಪ್ರಸರಣವಾಗುವ ಮಲೇರಿಯ ಮತ್ತು ಡೆಂಗು ರೋಗಗಳಿಗೆ ವ್ಯತ್ಯಾಸವೇನು ಎಂಬ ಅರಿವಿನ ಲೇಖನವಿದು.

World Malaria Day

ಪ್ರಸರಣ ಹೇಗೆ?

ಮಲೇರಿಯ

ಅನಾಫಿಲಿಸ್‌ ಸೊಳ್ಳೆಯಿಂದ ದೇಹ ಪ್ರವೇಶಿಸುವ ಪ್ಲಾಸ್ಮೋಡಿಯಂ ಎಂಬ ಏಕಕೋಶ ಜೀವಿಯಿಂದ ಬರುವ ರೋಗವಿದು. ಮಲೇರಿಯ ಹೆಚ್ಚಿರುವ ಪ್ರದೇಶಗಳಿಗೆ ಹೋದಾಗ ಇದಕ್ಕೆ ತುತ್ತಾಗುವ ಸಂಭವ ಹೆಚ್ಚು.

ಡೆಂಗ್ಯು

ಈಡಿಸ್‌ ಸೊಳ್ಳೆಯು ದೇಹಕ್ಕೆ ಚುಚ್ಚುವ ಡೆಂಗ್ಯು ವೈರಸ್‌ನಿಂದ ಬರುವ ರೋಗವಿದು. ಅಂದರೆ ಮಲೇರಿಯ ಬರುವುದು ಪರಾವಲಂಬಿ ಜೀವಿಯಿಂದಾದರೆ, ಡೆಂಗ್ಯು ಬರುವುದು ವೈರಸ್‌ನಿಂದ. ಯಾವುದೇ ಪ್ರದೇಶದಲ್ಲೂ ಡೆಂಗು ಸೊಳ್ಳೆಗಳು ಕಾಣಬಹುದು, ಸೊಳ್ಳೆ ಕಚ್ಚಿದಾಗ ಬರಬಹುದು.

ಲಕ್ಷಣಗಳೇನು?

ಮಲೇರಿಯ

ಜ್ವರ, ನಡುಕ, ಬೆವರು, ತಲೆನೋವು, ಮೈಕೈ ನೋವು, ಹೊಟ್ಟೆ ತೊಳೆಸುವುದು, ವಾಂತಿ.

ಡೆಂಗ್ಯು

ಇದ್ದಕ್ಕಿದ್ದಂತೆ ತೀವ್ರವಾದ ಜ್ವರ, ತೀಕ್ಷ್ಣ ತಲೆನೋವು, ಕಣ್ಣು ನೋವು, ಮೈಮೇಲೆಲ್ಲ ದದ್ದುಗಳು, ಕೀಲು, ಸ್ನಾಯುಗಳಲ್ಲಿ ತೀವ್ರ ನೋವು. ಜೊತೆಗೆ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯುತ್ತದೆ. ಅಂದರೆ ಮಲೇರಿಯ ಫ್ಲೂ ಮಾದರಿಯ ಲಕ್ಷಣಗಳನ್ನು ತೋರಿಸಿದರೆ, ಡೆಂಗು ಜ್ವರದಲ್ಲಿ ತಲೆನೋವು ಮತ್ತು ಕೀಲು-ಸ್ನಾಯುಗಳ ನೋವು ತೀವ್ರವಾಗಿರುತ್ತದೆ.

dengue flue

ಪತ್ತೆ ಹೇಗೆ?

ಎರಡೂ ಮಾದರಿಯ ಜ್ವರಗಳಿಗೆ ರಕ್ತ ಪರೀಕ್ಷೆಯೇ ಪತ್ತೆ ಮಾಡುವುದಕ್ಕೆ ನಿಖರವಾದ ಆಧಾರ.

ಚಿಕಿತ್ಸೆ ಏನು?

ಮಲೇರಿಯ

ಕ್ಲೊರೊಕ್ವಿನ್‌ನಂಥ ಔಷಧಿಗಳು ಇದಕ್ಕಾಗಿಯೇ ಇವೆ. ಪ್ಲಾಸ್ಮೋಡಿಯಂನಂಥ ಪರಾವಲಂಬಿಗಳ ಹತೋಟಿಗೆ ಔಷಧಿ ನೀಡಲಾಗುತ್ತದೆ. ಉಳಿದಂತೆ, ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ಬೇಕಾಗುತ್ತದೆ.

ಡೆಂಗ್ಯು

ಈ ವೈರಸ್‌ಗೆ ಪ್ರತ್ಯೇಕವಾದ ಆಂಟಿವೈರಸ್‌ ಚಿಕಿತ್ಸೆ ಲಭ್ಯವಿಲ್ಲ. ರೋಗಿಯ ಲಕ್ಷಣಗಳನ್ನು ಆಧರಿಸಿ ಅದಕ್ಕೆ ಔಷಧಿಯನ್ನು ನೀಡಲಾಗುತ್ತದೆ. ಪ್ಲೇಟ್‌ಲೆಟ್‌ ಕುಸಿದಂಥ ಸಂದರ್ಭಗಳಲ್ಲಿ ರೋಗಿಯ ಆಹಾರ ಪದ್ಧತಿ ಅತ್ಯಂತ ಮಹತ್ವದ್ದು.

Malaria

ಸಾವಿನ ಪ್ರಮಾಣ

ಮಲೇರಿಯ

ಸೂಕ್ತ ಸಮಯಲ್ಲೆ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ, ಮಲೇರಿಯ ಪ್ರಾಣಕ್ಕೆ ಎರವಾಗುತ್ತದೆ. ವಿಶ್ವದಲ್ಲಿ ಇಂದಿಗೂ ಮಲೇರಿಯಕ್ಕೆ ತುತ್ತಾಗು ಜೀವ ಕಳೆದುಕೊಳ್ಳುತ್ತಿರುವವರ ಸಾವಿನ ಸಂಖ್ಯೆ ಬಹಳಷ್ಟಿದೆ.

ಡೆಂಗ್ಯು

ಈ ಜ್ವರವೂ ಪ್ರಾಣಾಪಾಯ ತರಬಹುದಾದರೂ, ಮಲೇರಿಯಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಇದರಲ್ಲಿ ಕಡಿಮೆ.

World Malaria Day, Mosquito eradication is essential to prevent the disease

ತಡೆ ಹೇಗೆ?

ಈ ಎರಡೂ ರೋಗಗಳಲ್ಲಿ ಸೊಳ್ಳೆ ನಿರ್ಮೂಲನೆಯೇ ಮುಖ್ಯವಾಗಿದ್ದು. ಎಲ್ಲಾದರೂ ನೀರು ನಿಂತಿದ್ದರೆ ಅಲ್ಲೆಲ್ಲ ಕೀಟನಾಶಕ ಸಿಂಪಡಿಸಿ ತುರ್ತಾಗಿ ಸೊಳ್ಳೆಗಳ ಹೆಚ್ಚಳ ನಿಲ್ಲಿಸಬೇಕು. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಸೊಳ್ಳೆಗಳು ಕಚ್ಚದಂತೆ ರೆಪೆಲ್ಲೆಂಟ್‌ಗಳನ್ನು ಬಳಸುವುದು ಅಗತ್ಯ. ಕಿಟಕಿಗಳಿಗೆ ಸೊಳ್ಳೆ ಪ್ರವೇಶಿಸದಂಥ ಪರದೆಗಳು ಮತ್ತು ರಾತ್ರಿ ಮಲಗುವಾಗಲೂ ಪರದೆ ಬಳಸುವುದು ಸೂಕ್ತ. ತುಂಬು ಬಟ್ಟೆಗಳನ್ನು ಧರಿಸುವುದು ಸರಿಯಾದ ಕ್ರಮ. ಸೊಳ್ಳೆಗಳು ಹೆಚ್ಚು ಚಟುವಟಿಕೆಯಲ್ಲಿರುವ ಹೊತ್ತಿನಲ್ಲಿ ಮನೆಯೊಳಗೇ ಇರಬೇಕು.

ಇದನ್ನೂ ಓದಿ: World Malaria Day: ಭಾರತದಲ್ಲಿ ಮಲೇರಿಯಾಗೆ ಪ್ರತಿವರ್ಷ 20 ಸಾವಿರ ಬಲಿ; ಸೊಳ್ಳೆಗಳು ಭಾರಿ ಡೇಂಜರ್‌!

Continue Reading

ದೇಶ

Horlicks Label: ಹಾರ್ಲಿಕ್ಸ್‌ ಇನ್ನು ಹೆಲ್ತ್‌ ಡ್ರಿಂಕ್ಸ್‌ ಅಲ್ಲ ಎಂದ ಹಿಂದುಸ್ತಾನ್‌ ಯುನಿಲಿವರ್;‌ ಕಾರಣ ಏನು?

Horlicks Label: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹಾರ್ಲಿಕ್ಸ್‌ ಸೇರಿ ಹಲವು ಮಾಲ್ಟ್‌ ಆಧಾರಿತ ಪಾನೀಯಗಳ ಮೇಲಿನ ಹೆಲ್ತ್‌ ಫುಡ್‌ ಡ್ರಿಂಕ್ಸ್‌ ಎಂಬ ಲೇಬಲ್‌ ತೆಗೆದುಹಾಕಲಾಗಿದೆ. ಇನ್ನು ಇವು ಕ್ರಿಯಾತ್ಮಕ ಪೌಷ್ಟಿಕ ಪಾನೀಯ ಎನಿಸಿಕೊಳ್ಳಲಿವೆ. ಇದರಿಂದ ಜನರ ದಾರಿ ತಪ್ಪಿಸುವ ಜಾಹೀರಾತು, ಗ್ರಾಹಕರ ಗೊಂದಲ ನಿವಾರಣೆಯಾಗಲಿದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Horlicks Label
Koo

ನವದೆಹಲಿ: ಭಾರತದಲ್ಲಿ ಹಾರ್ಲಿಕ್ಸ್‌ ಕುಡಿಯದವರೇ ಇರಲಿಕ್ಕಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರವರೆಗೆ ಕುಡಿಯುತ್ತಾರೆ. ಅದರಲ್ಲೂ, ಯಾರು ಬಾಲ್ಯದಲ್ಲಿ ಹಾರ್ಲಿಕ್ಸ್‌ ಕುಡಿದಿಲ್ಲವೋ, ಅಷ್ಟರಮಟ್ಟಿಗೆ ಅವರ ಬಾಲ್ಯ ‘ಸಪ್ಪೆ’ ಎಂದೇ ಹೇಳಲಾಗುತ್ತಿದೆ. ಇಂತಹ ನೆನಪುಗಳ ಹಿನ್ನೆಲೆ ಹೊಂದಿರುವ ಹಾರ್ಲಿಕ್ಸ್‌ ಬಾಟಲಿ ಮೇಲಿನ ಹೆಲ್ತ್‌ ಫುಡ್‌ ಡ್ರಿಂಕ್ಸ್‌ (Health Food Drinks) ಎಂಬ ಲೇಬಲ್‌ಅನ್ನು (Horlicks Label) ಹಿಂದುಸ್ತಾನ್‌ ಯುನಿಲಿವರ್‌ (HUL) ತೆಗೆದುಹಾಕಿದೆ. ಇತ್ತೀಚಿನ ನಿಯಮಗಳ ಬದಲಾವಣೆ ಭಾಗವಾಗಿ ಲೇಬಲ್‌ಅನ್ನು ತೆಗೆದುಹಾಕಿದೆ ಎಂದು ಹೇಳಲಾಗುತ್ತಿದೆ.

ಹಾರ್ಲಿಕ್ಸ್‌ ಬಾಟಲಿ ಮೇಲಿನ ಹೆಲ್ತ್‌ ಫುಡ್‌ ಡ್ರಿಂಕ್ಸ್‌ ಲೇಬೆಲ್‌ ತೆಗೆದುಹಾಕಲಾಗಿದ್ದು, ಈಗ ಹಾರ್ಲಿಕ್ಸ್‌ ಸೇರಿ ಹಲವು ರೀತಿಯ ಪಾನೀಯಗಳನ್ನು ಕ್ರಿಯಾತ್ಮಕ ಪೌಷ್ಟಿಕ ಪಾನೀಯ (Functional Nutritional Drinks) ಎಂಬ ಹೊಸ ಕೆಟಗರಿಗೆ ಸೇರಿಸಲಾಗಿದೆ. ಪಾನೀಯಗಳನ್ನು ಹೆಲ್ತ್‌ ಫುಡ್‌ ಡ್ರಿಂಕ್ಸ್‌ ಕೆಟಗರಿಯಿಂದ ತೆಗೆದು, ಕ್ರಿಯಾತ್ಮಕ ಪೌಷ್ಟಿಕ ಪಾನೀಯಗಳ ಪಟ್ಟಿಗೆ ಸೇರಿಸಬೇಕು. ವೆಬ್‌ಸೈಟ್‌ ಸೇರಿ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲೂ ಇದನ್ನೇ ನಮೂದಿಸಬೇಕು ಎಂಬುದಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹಿಂದುಸ್ತಾನ್‌ ಯುನಿಲಿವರ್‌ ಈ ಕ್ರಮ ತೆಗೆದುಕೊಂಡಿದೆ.

“ಸಚಿವಾಲಯದ ಸೂಚನೆಯಂತೆ ನಾವು ಹೆಲ್ತ್‌ ಫುಡ್‌ ಡ್ರಿಂಕ್ಸ್‌ ಕೆಟಗರಿಯನ್ನು ಕ್ರಿಯಾತ್ಮಕ ಪೌಷ್ಟಿಕ ಪಾನೀಯ ಎಂಬುದಾಗಿ ಬದಲಾಯಿಸಿದ್ದೇವೆ. ಈ ಹೆಸರಿನಿಂದಲೇ ಕರೆಯುವುದು ಸಮಂಜಸ ಎಂಬ ನಿರ್ಧಾರಕ್ಕೆ ಬರಲಾಗಿದೆ. ಹಾಗೆಯೇ, ಹೊಸ ಹೆಸರು ಪಾರ್ದರ್ಶಕವಾಗಿಯೂ ಇದೆ. ಹಾಗಾಗಿ, ಹೊಸ ಹೆಸರನ್ನು ಇಡಲಾಗಿದೆ” ಎಂದು ಹಿಂದುಸ್ತಾನ್‌ ಯುನಿಲಿವರ್‌ನ ಚೀಫ್‌ ಫೈನಾನ್ಶಿಯಲ್‌ ಆಫೀಸರ್‌ ರಿತೇಶ್‌ ತಿವಾರಿ ಮಾಹಿತಿ ನೀಡಿದ್ದಾರೆ. ಇದರಿಂದ ದಾರಿತಪ್ಪಿಸುವ ಜಾಹೀರಾತುಗಳ ತಡೆಯಾಗುವುದರ ಜತೆಗೆ ಗ್ರಾಹಕರಿಗೂ ಗೊಂದಲ ಇರುವುದಿಲ್ಲ ಎಂಬುದು ಸಚಿವಾಲಯದ ಚಿಂತನೆಯಾಗಿದೆ ಎಂದು ತಿಳಿದುಬಂದಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಕಾಯ್ದೆ ಅಡಿಯಲ್ಲಿ ಹೆಲ್ತ್‌ ಡ್ರಿಂಕ್ಸ್‌ ಎಂಬ ಪದಕ್ಕೆ ಸರಿಯಾದ ವ್ಯಾಖ್ಯಾನ ಸಿಗದ ಕಾರಣ ಹೊಸ ಹೆಸರು ಸೂಚಿಸಲಾಗಿದೆ. ಇದೇ ಕಾರಣಕ್ಕಾಗಿ ಇತ್ತೀಚೆಗೆ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು (FSSAI) ಇತ್ತೀಚೆಗೆ ಎಲ್ಲ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಿಗೆ ಹೆಲ್ತ್‌ ಡ್ರಿಂಕ್ಸ್‌ ಅಥವಾ ಎನರ್ಜಿ ಡ್ರಿಂಕ್ಸ್‌ ಎಂಬ ಕೆಟಗರಿಯನ್ನು ತೆಗೆದುಹಾಕಬೇಕು ಎಂದು ಸೂಚಿಸಿತ್ತು. ಡೇರಿ, ಸಿರೀಲ್‌ ಅಥವಾ ಮಾಲ್ಟ್‌ ಆಧಾರಿತ ಪಾನೀಯಗಳ ಮೇಲಿನ ಲೇಬೆಲ್‌ ತೆಗೆದುಹಾಕಲು ಸೂಚಿಸಿತ್ತು. ಅದರಂತೆ, ಕೆಟಗರಿಯನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಗುಣಮಟ್ಟ ತಪಾಸಣೆಗೆ ಸೂಚನೆ

Continue Reading

ಆರೋಗ್ಯ

Baking Soda: ಅಡುಗೆ ಸೋಡಾ ನಿಜಕ್ಕೂ ಆರೋಗ್ಯಕ್ಕೆ ಕೆಟ್ಟದ್ದಾ?

ಬೇಕಿಂಗ್‌ ಸೋಡಾವನ್ನು (Baking Soda) ವಿಷದಂತೆ ಪರಿಗಣಿಸುವ ಧೋರಣೆಯೂ ನಮ್ಮ ಮನಸ್ಸಿನಿಂದ ಬದಲಾಗಬೇಕಿದೆ. ಯಾವಾಗಲಾದರೊಮ್ಮೆ ಬೇಖಿಂಗ್‌ ಸೋಡಾ ಅಡುಗೆಯಲ್ಲಿ ಬಳಸಿದರೆ, ಅದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದು. ಅತಿಯಾದರೆ ಮಾತ್ರ ಸಮಸ್ಯೆಗಳು ಬರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ವೈದ್ಯರು.

VISTARANEWS.COM


on

Baking Soda
Koo

ಅಡುಗೆಯಲ್ಲಿ ಆಸಕ್ತಿ ಇರುವ ಮಂದಿಗೆ, ಮೇಲಾಗಿ ಬೇಕಿಂಗ್‌ನಲ್ಲಿ ಅಭಿರುಚಿ ಇರುವ ಮಂದಿಗೆ ಬೇಕಿಂಗ್‌ ಸೋಡಾ (Baking Soda) ಎಂಬ ವಸ್ತು ಅತ್ಯಂತ ಮುಖ್ಯವಾದ ವಸ್ತು. ಮಿದುವಾದ ಸ್ಪಾಂಜೀಯಾಗಿರುವ ಕೇಕ್‌ಗಳನ್ನು ಮಾಡಲು ಬೇಕಿಂಗ್‌ ಸೋಡಾ ಇಲ್ಲದಿದ್ದರೆ ಹೇಗೆ? ಕೇವಲ ಕೇಕ್‌ ಅಂತಲ್ಲ. ಸಾಕಷ್ಟು ಅಡುಗೆಗಳಿಗೆ, ದಿಢೀರ್‌ ತಿಂಡಿಗಳಿಗೆ, ಹುಳಿಬರಿಸುವಷ್ಟು ಸಮಯ ಇಲ್ಲದಾದಾಗ ಮಾಡುವ ಡೋಕ್ಲಾ, ಇಡ್ಲಿ ಮತ್ತಿತರ ಬೆಳಗಿನ ಉಪಾಹಾರಕ್ಕೂ ಬಹಳ ಸಲ ಇಂದಿನ ಧಾವಂತದ ಯುಗದಲ್ಲಿ ಬೇಕಿಂಗ್‌ ಸೋಡಾ ಬೇಕೇ ಬೇಕು. ಹಾಗಾಗಿ ಇದು ಎಲ್ಲರ ಅಡುಗೆ ಮನೆಗಳಲ್ಲಿ ಇರುವ ಸಾಮಾನ್ಯ ವಸ್ತು.
ಎಲ್ಲ ಆಹಾರ ವಸ್ತುಗಳಂತೆ ಬೇಕಿಂಗ್‌ ಸೋಡಾದ ಬಗೆಯೂ ಹಲವು ಗೊಂದಲಗಳಿವೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಬಾವನೆಯೂ ಹಲವರಲ್ಲಿ ಇದೆ. ಸೋಡಾ ಬಳಸಿದರೆ, ಹೊಟ್ಟೆಯುಬ್ಬರ, ಅಸಿಡಿಟಿ ಹೆಚ್ಚಾಗುತ್ತದೆ, ಹುಳಿತೇಗು ಬರುತ್ತದೆ, ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿದಂತಾಗುತ್ತದೆ ಎಂಬ ಅಳಲು ಹಲವರದ್ದು. ಇವು ನಿಜವೇ ಆಗಿದ್ದರೂ, ಇದರ ಬಗ್ಗೆ ಹಲವು ತಪ್ಪು ತಿಳುವಳಿಕೆಗಳಿವೆ. ನಾವು ಅಂದುಕೊಳ್ಳುವಷ್ಟು ಬೇಕಿಂಗ್‌ ಸೋಡಾ ನಿಜಕ್ಕೂ ಕೆಟ್ಟದ್ದೇ? ಎಂಬ ಪ್ರಶ್ನೆ ಕಾಡಿರಬಹುದು. ಹಾಗಾದರೆ ಬನ್ನಿ, ಬೇಕಿಂಗ್‌ ಸೋಡಾದ ಸಾಧಕ ಬಾಧಕಗಳ ಬಗ್ಗೆ ತಿಳಿಯೋಣ.

Baking soda

ಗ್ಯಾಸ್‌ ಸಮತೋಲನಗೊಳಿಸುತ್ತದೆ

ಬೇಕಿಂಗ್‌ ಸೋಡಾ ನೈಸರ್ಗಿಕವಾದ ಎಂಟಾಸಿಡ್‌ನಂತೆ ವರ್ತಿಸುವ ಮೂಲಕ ಹೊಟ್ಟೆಯಲ್ಲಿರುವ ಅತಿಯಾದ ಗ್ಯಾಸ್‌ ಅನ್ನು ಸಮತೋಲನಗೊಳಿಸುತ್ತದೆ. ಇದು ಎದೆಯುರಿ, ಆಸಿಡಿಟಿ ಹಾಗೂ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವ ಸಮಸ್ಯೆಯೂ ಸೇರಿದಂತೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ!

Baking soda

ಬೇಗನೆ ಬೇಯುತ್ತದೆ

ಬೇಕಿಂಗ್‌ ಸೋಡಾ ಆಹಾರದಲ್ಲಿರುವ ಪೋಷಕಾಂಶಗಳನ್ನು ಕೊಲ್ಲುವುದಿಲ್ಲ. ಚಿಟಿಕೆಯಷ್ಟು ಬೇಕಿಂಗ್‌ ಸೋಡಾವನ್ನು ಧಾನ್ಯಗಳು ಹಾಗೂ ಬೇಳೆಕಾಳುಗಳು ಬೇಯುವಾಗ ಹಾಕಿದರೆ ಅದು ಬೇಗನೆ ಬೇಯುತ್ತದೆ.
ಇವೆರಡು ಲಾಭಗಳು ಬೇಕಿಂಗ್‌ ಸೋಡಾದಿಂದ ಇವೆಯಾದರೂ, ಇದರಿಂದಾಗುವ ಸಮಸ್ಯೆಗಳೂ ಇವೆ. ಬನ್ನಿ, ಬೇಕಿಂಗ್‌ ಸೋಡಾದ ಅತಿಯಾದ ಬಳಕೆಯಿಂದ ನಾವು ನಮಗೇ ಅರಿವಿಲ್ಲದೆ ಯಾವ ಸಮಸ್ಯೆಗಳನ್ನು ಆಹ್ವಾನಿಸಬಹುದು ಎಂಬುದನ್ನು ನೋಡೋಣ.

ಹೈಪರ್‌ಟೆನ್ಶನ್‌ ಸಮಸ್ಯೆ

ಬೇಕಿಂಗ್‌ ಸೋಡಾದಲ್ಲಿ ಹೆಚ್ಚು ಸೋಡಿಯಂ ಇರುವುದರಿಂದ, ಇದರ ಹೆಚ್ಚಿನ ಸೇವನೆಯಿಂದ ದೇಹದಲ್ಲಿ ನೀರಿನಂಶ ಶೇಖರಣೆಯಾಗುವುದು, ಎಲೆಕ್ಟ್ರೋಲೈಟ್‌ ಅಸಮತೋಲನ, ಹೈಪರ್‌ಟೆನ್ಶನ್‌ನಂತಹ ಸಮಸ್ಯೆಗಳು ಉಂಟಾಗಬಹುದು.

Woman anemia image Coriander Benefits

ವಾಂತಿ, ತಲೆಸುತ್ತುವಿಕೆ

ಪ್ರತಿದಿನವೂ ಬೇಕಿಂಗ್‌ ಸೋಡ ಸೇವಿಸುವುದರಿಂದ ಕೆಲವು ಮಂದಿಗೆ ಅಲ್ಕಲೋಸಿಸ್‌ ಎಂಬ ಸಮಸ್ಯೆ ಬರಬಹುದು. ಇದು ದೇಹದ ಆಸಿಡ್‌ ಸಮತೋಲನವನ್ನೇ ಹದಗೆಡಿಸಿ, ವಾಂತಿ, ತಲೆಸುತ್ತುವಿಕೆ, ಮಾಂಸಖಂಡಗಳಲ್ಲಿ ಸೆಳೆತ, ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಬಹುದು.

Thigh muscles are strengthened by walking Benefits Of Walking

ಮಾಂಸಖಂಡಗಳ ಸೆಳೆತ

ಅತೀ ಕಡಿಮೆ ಮಂದಿಯಲ್ಲಿ ಈ ಬೇಕಿಂಗ್‌ ಸೋಡಾ ಇನ್ನೂ ಒಂದು ಸಮಸ್ಯೆ ಹುಟ್ಟುಹಾಕಬಹುದು. ಹೈಪೋಕಲೇಮಿಯಾ ಎಂಬ ಈ ಸಮಸ್ಯೆಯಲ್ಲಿ ದೇಹದ ಪೊಟಾಶಿಯಂ ಮಟ್ಟವೇ ಇಳಿಯುತ್ತದೆ. ಪೊಟಾಶಿಯಂ ಮಟ್ಟದ ಇಳಿಕೆಯಿಂದ ಮಾಂಸಖಂಡಗಳ ಸೆಳೆತ, ದುರ್ಬಲತೆ, ಪಾರ್ಶ್ವವಾಯು, ದೇಹದಲ್ಲಿ ಅಲ್ಲಲ್ಲಿ ನೋವುಗಳು ಇತ್ಯಾದಿ ಸಮಸ್ಯೆಗಳು ಬರಬಹುದು. ಇದು ಕೆಲವೊಮ್ಮೆ ಮಾರಣಾಂತಿಕ ಸಮಸ್ಯೆಯಾಗಿಯೂ ಪರಿಣಮಿಸಬಹುದಾದ್ದರಿಂದ ವೈದ್ಯರ ನೆರವು ಅತ್ಯಗತ್ಯ.
ಆದರೆ, ಬೇಕಿಂಗ್‌ ಸೋಡಾವನ್ನು ವಿಷದಂತೆ ಪರಿಗಣಿಸುವ ಧೋರಣೆಯೂ ನಮ್ಮ ಮನಸ್ಸಿನಿಂದ ಬದಲಾಗಬೇಕಿದೆ. ಯಾವಾಗಲಾದರೊಮ್ಮೆ ಬೇಖಿಂಗ್‌ ಸೋಡಾ ಅಡುಗೆಯಲ್ಲಿ ಬಳಸಿದರೆ, ಅದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದು. ಅತಿಯಾದರೆ ಮಾತ್ರ ಸಮಸ್ಯೆಗಳು ಬರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: Food Poisoning: ಬಟರ್‌ ಚಿಕನ್‌ ತಿಂದಿದ್ದಕ್ಕೂ ದಿಢೀರ್‌ ಸಾವಿಗೂ ಏನು ಸಂಬಂಧ? ಇದೊಂದು ವಿಚಿತ್ರ ಕಾಯಿಲೆ!

Continue Reading

ಆರೋಗ್ಯ

World Malaria Day: ಭಾರತದಲ್ಲಿ ಮಲೇರಿಯಾಗೆ ಪ್ರತಿವರ್ಷ 20 ಸಾವಿರ ಬಲಿ; ಸೊಳ್ಳೆಗಳು ಭಾರಿ ಡೇಂಜರ್‌!

ಮಲೇರಿಯಾ ವಿರುದ್ಧದ ಜಾಗತಿಕ ಹೋರಾಟದಲ್ಲಿ (World Malaria Day) ಮೇಲುಗೈ ಸಾಧಿಸಬೇಕೆಂಬ ಉದ್ದೇಶದಿಂದ, ಈ ರೋಗದ ಕುರಿತಾದ ತಿಳುವಳಿಕೆ, ಬಾರದಂತೆ ಜಾಗೃತಿ ಮತ್ತು ಬಂದಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಕುರಿತು ಅರಿವನ್ನು ಮೂಡಿಸುವ ಉದ್ದೇಶದಿಂದ- “ನನ್ನ ಆರೋಗ್ಯ, ನನ್ನ ಹಕ್ಕು” (My Health, My Right) ಎಂಬ ಘೋಷವಾಕ್ಯವನ್ನು ಈ ಸಾಲಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಹಾಗಾಗಿ ರೋಗ ಬಾರದಂತೆ ತಡೆಯುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುವ ಸಮಯವಿದು.

VISTARANEWS.COM


on

World Malaria Day
Koo

ಪ್ರತಿವರ್ಷ 20 ಸಾವಿರ ಮಂದಿ ಮಲೇರಿಯಾ ರೋಗಕ್ಕೆ ಭಾರತದಲ್ಲಿ ಜೀವ ತೆರುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2021ರಲ್ಲಿ ವಿಶ್ವದೆಲ್ಲೆಡೆಯಿಂದ 21.7 ಕೋಟಿ ಪ್ರಕರಣಗಳು ವರದಿಯಾಗಿವೆ ಮತ್ತು 6 ಲಕ್ಷಕ್ಕೂ ಹೆಚ್ಚು ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. ಇದರಲ್ಲಿ ಆಫ್ರಿಕಾದ್ದೇ ಸಿಂಹಪಾಲು. ಹಾಗಾಗಿ ಮೊದಲಿಗೆ ಆಫ್ರಿಕಾ ಮಲೇರಿಯ ದಿನ ಎಂದು ಪ್ರಾರಂಭವಾದ ಅರಿವಿನ ದಿನವನ್ನು, ಎಪ್ರಿಲ್‌ 25ರಂದು ವಿಶ್ವ ಮಲೇರಿಯಾ ಜಾಗೃತಿ ದಿನ (World Malaria Day) ಎಂದು ಗುರುತಿಸಲಾಗಿದೆ. ಮಲೇರಿಯಾ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮೇಲುಗೈ ಸಾಧಿಸಬೇಕೆಂಬ ಉದ್ದೇಶದಿಂದ, ಈ ರೋಗದ ಕುರಿತಾದ ತಿಳಿವಳಿಕೆ, ಬಾರದಂತೆ ಜಾಗೃತಿ ಮತ್ತು ಬಂದಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಕುರಿತು ಅರಿವನ್ನು ಮೂಡಿಸುವ ಉದ್ದೇಶದಿಂದ- “ನನ್ನ ಆರೋಗ್ಯ, ನನ್ನ ಹಕ್ಕು” (My Health, My Right) ಎಂಬ ಘೋಷವಾಕ್ಯವನ್ನು ಈ ಸಾಲಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಹಾಗಾಗಿ ರೋಗ ಬಾರದಂತೆ ತಡೆಯುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುವ ಸಮಯವಿದು.

World Malaria Day, Mosquito eradication is essential to prevent the disease

ತಡೆಯುವುದು ಹೇಗೆ?

ಈ ಬಾರಿಯ ಕಠೋರ ಬೇಸಿಗೆಯ ಪರಿಣಾಮವಾಗಿ ಎಲ್ಲೆಡೆ ಸೊಳ್ಳೆಗಳ ಸಂಖ್ಯೆ ಹೆಚ್ಚಿರುವುದು ಕಾಣುತ್ತದೆ. ಹಾಗಾಗಿ, ವೃದ್ಧಿಯಾಗುವ ಸೊಳ್ಳೆಗಳನ್ನು ನಾಶ ಮಾಡಲೇಬೇಕು. ಎಲ್ಲಾದರೂ ನೀರು ನಿಂತಿದ್ದರೆ ಅಲ್ಲೆಲ್ಲ ಕೀಟನಾಶಕ ಸಿಂಪಡಿಸಿ ತುರ್ತಾಗಿ ಸೊಳ್ಳೆಗಳ ಹೆಚ್ಚಳ ನಿಲ್ಲಿಸಬೇಕು. ಸೊಳ್ಳೆಗಳ ಹೆಚ್ಚಳ ತಡೆಯುವುದು ಈ ರೋಗ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ. ಮಾತ್ರವಲ್ಲ, ಸೊಳ್ಳೆಗಳು ಕಚ್ಚದಂತೆ ರೆಪೆಲ್ಲೆಂಟ್‌ಗಳನ್ನು ಬಳಸುವುದು ಅಗತ್ಯ. ಕಿಟಕಿಗಳಿಗೆ ಸೊಳ್ಳೆ ಪ್ರವೇಶಿಸದಂಥ ಪರದೆಗಳು ಮತ್ತು ರಾತ್ರಿ ಮಲಗುವಾಗಲೂ ಪರದೆ ಬಳಸುವುದು ಸೂಕ್ತ. ತುಂಬು ಬಟ್ಟೆಗಳನ್ನು ಧರಿಸುವುದು ಸರಿಯಾದ ಕ್ರಮ. ಸೊಳ್ಳೆಗಳು ಹೆಚ್ಚು ಚಟುವಟಿಕೆಯಲ್ಲಿರುವ ಹೊತ್ತಿನಲ್ಲಿ ಮನೆಯೊಳಗೇ ಇರಿ. ಮಲೇರಿಯ ನಿರೋಧಕತೆ ಉದ್ದೀಪಿಸುವಂಥ ಲಸಿಕೆಗಳು ಮಕ್ಕಳಿಗಾಗಿ ಲಭ್ಯವಿದೆ. ಈ ಬಗ್ಗೆ ವೈದ್ಯರಲ್ಲಿ ಮಾತಾಡುವುದು ಕ್ಷೇಮ.

ಬರಲು ಕಾರಣವೇನು?

ಪ್ಲಾಸ್ಮೋರಿಯಂ ಎಂಬ ಏಕಕೋಶ ಜೀವಿಯಿಂದ ಬರುವ ರೋಗವಿದು. ಈ ಜೀವಿಯ ಪ್ರಸರಣಕ್ಕೆ ಪೂರಕವಾಗಿ ಒದಗುವುದು ಅನಾಫಿಲಿಸ್‌ ಸೊಳ್ಳೆಗಳು. ಕಚ್ಚುವ ಸೊಳ್ಳೆಗಳ ಮೂಲಕ ಮಾನವದ ದೇಹವನ್ನು ಪ್ರವೇಶಿಸುವ ರೋಗಾಣು, ಯಕೃತ್‌ನಲ್ಲಿ ಸಂತಾನಾಭಿವೃದ್ಧಿ ನಡೆಸುತ್ತದೆ. ರೋಗಾಣುಗಳು ಸಾಕಷ್ಟು ವೃದ್ಧಿಯಾಗಿ, ಸೋಂಕು ಪಸರಿಸುವ ಹೊತ್ತಿನಲ್ಲಿ ರೋಗ ಲಕ್ಷಣಗಳು ಕಾಣಲು ಆರಂಭಿಸುತ್ತವೆ. ಇದಕ್ಕೆ ಸಾಮಾನ್ಯವಾಗಿ ಸೋಂಕು ತಗುಲಿದ ನಂತರ, 10 ದಿನಗಳಿಂದ ನಾಲ್ಕು ವಾರಗಳವರೆಗೂ ಬೇಕಾಗುತ್ತದೆ.

image of Preventing Mosquitoborne Disease

ಲಕ್ಷಣಗಳೇನು?

ತೀವ್ರ ಜ್ವರ, ಚಳಿನಡುಕ, ತಲೆನೋವು, ಮೈಕೈ ನೋವು, ವಾಂತಿ, ವಿಪರೀತ ಸುಸ್ತು- ಇವು ಸಾಮಾನ್ಯವಾಗಿ ಮಲೇರಿಯ ರೋಗಿಯಲ್ಲಿ ಕಂಡುಬರುವ ಲಕ್ಷಣಗಳು. ಮಕ್ಕಳಲ್ಲಿ ಇವಿಷ್ಟರ ಜೊತೆಗೆ ಕೆಮ್ಮು ಮತ್ತು ಡಯರಿಯ ಸಹ ಬರಬಹುದು. ಮಲೇರಿಯದಿಂದ ಕಾಮಾಲೆ (ಜಾಂಡೀಸ್)‌ ಮತ್ತು ರಕ್ತಹೀನತೆ (ಅನಿಮಿಯ) ಸಹ ಬರಬಹುದು. ಇಂಥ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ರಕ್ತಪರೀಕ್ಷೆ ಮಾಡಿಸಲು ವೈದ್ಯರು ಸೂಚಿಸುತ್ತಾರೆ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ಯಕೃತ್‌ ಸಮಸ್ಯೆ, ಶ್ವಾಸಕೋಶಗಳಲ್ಲಿ ನೀರು ತುಂಬುವುದು, ನ್ಯುಮೋನಿಯ, ದೃಷ್ಟಿಯ ತೊಂದರೆ, ಕಿಡ್ನಿ ವೈಫಲ್ಯ- ಹೀಗೆ ಹಲವು ರೀತಿಯಲ್ಲಿ ಆರೋಗ್ಯ ಕೈಕೊಟ್ಟು ಸಾವು ವಕ್ಕರಿಸಬಹುದು.

ಇದನ್ನೂ ಓದಿ: Healthy Foods For Kidney: ಕಿಡ್ನಿಯ ಆರೋಗ್ಯವರ್ಧನೆಗೆ ಈ ಕೆಳಗಿನ ಆಹಾರಶೈಲಿಯ ಬಗೆಗೆ ಗೊತ್ತಿರಲಿ!

Continue Reading
Advertisement
Lok Sabha Election
ಕರ್ನಾಟಕ21 seconds ago

Lok Sabha Election: ನಾಳೆ ಮೊದಲ ಹಂತದ ಮತದಾನ; ಬೆಂಗಳೂರಿನಲ್ಲಿ ಏನಿರತ್ತೆ? ಏನಿರಲ್ಲ?

KKR vs PBKS
ಕ್ರೀಡೆ10 mins ago

KKR vs PBKS: ಪಂಜಾಬ್​ಗೆ ಮಸ್ಟ್​ ವಿನ್​ ಗೇಮ್; ಕೆಕೆಆರ್​ ಎದುರಾಳಿ

IPL 2024
ಕ್ರೀಡೆ14 mins ago

IPL 2024 : ಸಾಯಿ ಕಿಶೋರ್ ನಿಂದನೆ; ರಸಿಕ್ ಸಲಾಂಗೆ ಪಾಠ ಕಲಿಸಿದ ಜಯ್​ ಶಾ

Haji Akbar Afridi
ವಿದೇಶ16 mins ago

Lashkar-e-Islam: ಮತ್ತೊಬ್ಬ ಭಾರತ ವಿರೋಧಿ ಉಗ್ರ ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿಗೆ ಖತಂ

Tata Motors gets approval for 333 patents
ದೇಶ22 mins ago

Tata Motors: ಟಾಟಾ ಮೋಟಾರ್ಸ್‌ನಿಂದ ಹೊಸ ಮೈಲುಗಲ್ಲು; 333 ಪೇಟೆಂಟ್‌ಗಳಿಗೆ ಅನುಮೋದನೆ

Neha Murder Case in hubblli
ಹುಬ್ಬಳ್ಳಿ34 mins ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ40 mins ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

ICICI Bank
ದೇಶ41 mins ago

ICICI Bank: ಐಸಿಐಸಿಐ ಬ್ಯಾಂಕ್‌ ಗ್ರಾಹಕರೇ ಎಚ್ಚರ; 17 ಸಾವಿರ ಜನರ ಕಾರ್ಡ್‌ ಮಾಹಿತಿ ಸೋರಿಕೆ!

Kannada Serials TRP Lakshmi Nivasa In Top Amruthadhaare in Top 5
ಕಿರುತೆರೆ48 mins ago

Kannada Serials TRP: ಈ ವಾರ ಟಿಆರ್‌ಪಿಯಲ್ಲಿ ʻಲಕ್ಷ್ಮೀ ನಿವಾಸʼಕ್ಕೆ ಎರಡನೇ ಸ್ಥಾನ: ಟಾಪ್‌ 5ನಲ್ಲಿ ʻಅಮೃತಧಾರೆʼ!

Lok Sabha Election 2024 No names of election officials in voter list Protest in front of the polling booth
Lok Sabha Election 202452 mins ago

Lok Sabha Election 2024: ವೋಟರ್‌ ಲಿಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳ ಹೆಸರೇ ಇಲ್ಲ; ಮತಗಟ್ಟೆ ಮುಂದೆಯೇ ಪ್ರೊಟೆಸ್ಟ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ34 mins ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ40 mins ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ4 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20246 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌