Whiten Your Yellow Teeth: ಈ ಆಹಾರಗಳು ನಿಮ್ಮ ಹಲ್ಲುಗಳ ಬಣ್ಣಗೆಡಿಸುತ್ತವೆ ಎನ್ನುವುದು ಗೊತ್ತಿದೆಯೆ? - Vistara News

ಆರೋಗ್ಯ

Whiten Your Yellow Teeth: ಈ ಆಹಾರಗಳು ನಿಮ್ಮ ಹಲ್ಲುಗಳ ಬಣ್ಣಗೆಡಿಸುತ್ತವೆ ಎನ್ನುವುದು ಗೊತ್ತಿದೆಯೆ?

Whiten Your Yellow Teeth: ನಾವು ತಿನ್ನುವ ಆಹಾರಗಳು, ಕುಡಿಯುವ ಪೇಯಗಳು, ಬಾಯಿ ಸ್ವಚ್ಛಗೊಳಿಸುವ, ಗೊಳಿಸದಿರುವ ನಮ್ಮ ಅಭ್ಯಾಸಗಳು, ಕೆಲವೊಂದು ಔಷಧಗಳು- ಹೀಗೆ ಹಲವು ಕಾರಣಗಳಿಂದಾಗಿ ನಮ್ಮ ದಂತಪಂಕ್ತಿಯ ಬಣ್ಣ ಬದಲಾಗಬಹುದು. ಈ ಬಣ್ಣಗೇಡು ಹಲ್ಲುಗಳೊಂದಿಗೆ ನಗುವುದಕ್ಕೆ ಮುಜುಗರವಾಗಿ ಹೇಗ್ಹೇಗೋ ನಗುವವರು ಬಹಳ ಮಂದಿಯಿದ್ದಾರೆ. ಈ ಹಳದಿ ಹಲ್ಲುಗಳಿಗೆ ಆಹಾರಗಳ ಮೂಲಕ ಪರಿಹಾರ ಇದೆಯೇ?

VISTARANEWS.COM


on

Whiten Your Yellow Teeth
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೀಗೊಂದು ಸನ್ನಿವೇಶವನ್ನು (Whiten Your Yellow Teeth) ಊಹಿಸಿಕೊಳ್ಳಿ- ಅದೊಂದು ಸುಂದರವಾದ ನಗು. ಆದರೆ ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವಂಥ ಅವಸ್ಥೆ. ಅಂದರೆ ಬಾಯಿ ಮುಚ್ಚಿಕೊಂಡಾಗ ಸುಂದರವಾಗಿ ಕಾಣುವ ನಗು, ಬಾಯಿ ಬಿಟ್ಟಾಕ್ಷಣ ಹಳದಿ ಬಣ್ಣದ ಹಲ್ಲುಗಳೊಂದಿಗೆ ರಾರಾಜಿಸುತ್ತದೆ! ಈ ಬಣ್ಣಗೇಡು ಹಲ್ಲುಗಳೊಂದಿಗೆ ನಗುವುದಕ್ಕೆ ಮುಜುಗರವಾಗಿ ಹೇಗ್ಹೇಗೋ ನಗುವವರು ಬಹಳ ಮಂದಿಯಿದ್ದಾರೆ. ಹೌದು, ಮನಸ್ಸು ನಿರ್ಮಲವಾಗಿದ್ದರೆ, ನಗುವೂ ಸ್ವಚ್ಛವೇ. ಆದರೆ ʻಹಲ್ಲು ಬಿಟ್ಟರೆ ಸಂತೋಷ, ಬಿಡದಿದ್ದರೆ ಇನ್ನೂ ಸಂತೋಷʼ ಎನ್ನುವ ಅವಸ್ಥೆಯಲ್ಲಿ ಫೋಟೋಗೆ ನಿಲ್ಲುವುದಾದರೂ ಹೇಗೆ? ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ಹಾಕಿದಾಗ ಒಬ್ಬರಲ್ಲ ಒಬ್ಬರು ಈ ಬಗ್ಗೆ ಕಮೆಂಟಿಸಿಬಿಟ್ಟರೆ, ಶೋಕದ ಮಹಾಪೂರವೇ ಹರಿಯುವುದಿಲ್ಲವೇ? ಹಳದಿ ಹಲ್ಲುಗಳಿಗೆ ಏನು ಪರಿಹಾರ? ನಾವು ತಿನ್ನುವ ಆಹಾರಗಳು, ಕುಡಿಯುವ ಪೇಯಗಳು, ಬಾಯಿ ಸ್ವಚ್ಛಗೊಳಿಸುವ/ ಗೊಳಿಸದಿರುವ ನಮ್ಮ ಅಭ್ಯಾಸಗಳು, ಕೆಲವೊಂದು ಔಷಧಗಳು- ಹೀಗೆ ಹಲವು ಕಾರಣಗಳಿಂದಾಗಿ ನಮ್ಮ ದಂತಪಂಕ್ತಿಯ ಬಣ್ಣ ಬದಲಾಗಬಹುದು. ಇದಕ್ಕೆ ಸುಲಭದ ಪರಿಹಾರವೆಂದರೆ ದಂತವೈದ್ಯರನ್ನು ಕಾಣುವುದು ಮತ್ತು ಹಲ್ಲುಗಳನ್ನು ಬಿಳಿ ಮಾಡಿಸಿಕೊಳ್ಳುವುದು. ಅನತಿ ಸಮಯದಲ್ಲಿ, ಬೇಗನೇ ದೊರೆಯುವ ಪರಿಹಾರವಿದು. ಆದರೆ ಇದು ದೂರಗಾಮಿ ಪರಿಹಾರವಲ್ಲ. ಕೆಲವು ದಿನಗಳ ನಂತರ ದಂತಪಂಕ್ತಿ ಮತ್ತೆ ಬಣ್ಣಗೆಡಬಹುದು. ಎಷ್ಟು ಬಾರಿ ದಂತ ವೈದ್ಯರ ಬಳಿ ಹೋಗಿ ದುಬಾರಿ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಲು ಸಾಧ್ಯ? ಇದಕ್ಕೆ ದೀರ್ಘಾವಧಿ ಪರಿಹಾರವಿಲ್ಲವೇ ಎಂಬುದೀಗ ವಿಷಯ. ಮಾತ್ರವಲ್ಲ, ಆಹಾರಗಳಿಂದ ಇದನ್ನು ನಿರ್ವಹಿಸಲು ಸಾಧ್ಯವಿಲ್ಲವೇ?
ಕೆಲವು ಆಹಾರಗಳು ನಮ್ಮ ಹಲ್ಲುಗಳ ಮೇಲೆ ದೀರ್ಘಕಾಲ ಉಳಿದು ಎನಾಮಲ್‌ ಕವಚಕ್ಕೆ ಹಾನಿ ತರುವುದು ಮಾತ್ರವಲ್ಲ, ಬಿಳಿಯ ಬಣ್ಣವನ್ನೂ ಹಾಳು ಮಾಡಬಲ್ಲವು. ಅಂಥ ಕೆಲವು ಆಹಾರಗಳ ಬಗ್ಗೆ ಜಾಗ್ರತೆ ಬೇಕು. ಇದಲ್ಲದೆ, ಇನ್ನು ಕೆಲವು ಆಹಾರಗಳು ದಂತಗಳ ಸ್ವಾಸ್ಥ್ಯವನ್ನು ಹೆಚ್ಚಿಸಬಲ್ಲವು. ಅಂಥವುಗಳನ್ನು ಮರೆಯದೇ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆಗ ಹೆಚ್ಚಿನ ರಾಸಾಯನಿಕಗಳ ಗೊಡವೆ ಇಲ್ಲದೆಯೇ ಸುಂದರ, ಸ್ವಚ್ಛ ನಗುವನ್ನು ನಿಮ್ಮದಾಗಿಸಿಕೊಳ್ಳಬಹುದು. ಎಂಥ ಆಹಾರಗಳು ಹಲ್ಲುಗಳಿಗೆ ಸೂಕ್ತವಲ್ಲ?

Selection of Colorful Sweets
Fruits and Vegetables Spilling from Paper Bag

ಸಕ್ಕರೆ ಮಾರಿಗಳು

ಅಂಟಾದ ಶುಗರ್‌ ಕ್ಯಾಂಡಿಗಳು, ಸೋಡಾ, ಫ್ರೂಟ್‌ ಜ್ಯೂಸ್‌ಗಳು ಈ ಸಾಲಿನಲ್ಲಿ ಮುಂಚೂಣಿಯಲ್ಲಿವೆ. ಇವುಗಳಲ್ಲಿರುವ ಸಕ್ಕರೆಯಂಶ ಹಲ್ಲಿನ ಮೇಲೆ ದೀರ್ಘ ಕಾಲ ಅಂಟಿಕೂತು ಬ್ಯಾಕ್ಟೀರಿಯಗಳನ್ನು ಕೂಗಿ ಕರೆಯುತ್ತದೆ. ಸೋಡಾಗಳಲ್ಲಿರುವ ಕಾರ್ಬನ್‌ ಅಂಶವು ಎನಾಮಲ್‌ ದುರ್ಬಲ ಮಾಡುವುದರಲ್ಲಿ ಸದಾ ಮುಂದು. ಇದರ ಫಲವಾಗಿ ಹಲ್ಲುಗಳ ಬಣ್ಣವೂ ಹಾಳಾಗುತ್ತದೆ.

ಸಿಟ್ರಸ್‌ ಹಣ್ಣುಗಳು

ದ್ರಾಕ್ಷಿ, ಕಿತ್ತಳೆ, ನಿಂಬೆಯಂಥ ಹುಳಿ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯವೆ. ಹಾಗೆ ನೋಡಿದರೆ ಹಲ್ಲುಗಳ ಆರೋಗ್ಯಕ್ಕೆ ಇವೇನೂ ಹಾಳಲ್ಲ. ಹೊಳಪಿಗೂ ಸಮಸ್ಯೆ ತರುವಂಥವಲ್ಲ. ಆದರೆ ಇವುಗಳನ್ನು ತಿಂದ ಮೇಲೆ ನೆನಪಿನಿಂದ ಬಾಯಿ ಸ್ವಚ್ಛ ಮಾಡಿಕೊಳ್ಳಲೇಬೇಕು. ಅದಿಲ್ಲದಿದ್ದರೆ ಇದರಲ್ಲಿರುವ ಆಮ್ಲೀಯ ಅಂಶಗಳು ದಂತಪಂಕ್ತಿಗಳಿಗೆ ಹಾನಿ ಮಾಡಬಹುದು.

tea cooffee

ಕಾಫಿ, ಚಹಾ

ಹಲ್ಲುಗಳನ್ನು ಬಣ್ಣಗೇಡು ಮಾಡುವುದರಲ್ಲಿ ಇವುಗಳದ್ದು ಎತ್ತಿದ ಕೈ. ದಂತಗಳ ಬಿಳಿಯ ಬಣ್ಣ ಹಾಳು ಮಾಡುವ ಗುಣ ಇವುಗಳಿಗೆ ಇದ್ದೇ ಇದೆ. ಜೊತೆಗೆ, ಇವನ್ನು ಕುಡಿದ ಮೇಲೆ ಬಾಯಿ ತೊಳೆಯುವ ಅಭ್ಯಾಸ ಹೆಚ್ಚಿನವರಿಗೆ ಇರುವುದಿಲ್ಲ. ಹಾಗಾಗಿ ಸಮಸ್ಯೆ ಹೆಚ್ಚುತ್ತದೆ. ಕೆಫೇನ್‌ ಮಿತವಾಗಿದ್ದರೆ ಹಲ್ಲುಗಳಿಗೂ ಒಳ್ಳೆಯದು.

ಒಳ್ಳೆಯದಾವುದು?

ಚೀಸ್‌, ಯೋಗರ್ಟ್‌ನಂಥವು ದಂತಸ್ವಾಸ್ಥ್ಯಕ್ಕೆ ಪೂರಕವಾದವು. ಕ್ಯಾಲ್ಶಿಯಂ, ಫಾಸ್ಫೇಟ್‌ ಮತ್ತು ಪ್ರೊಬಯಾಟಿಕ್ಸ್‌ ಹೊಂದಿರುವ ಈ ಆಹಾರಗಳು ಹಲ್ಲುಗಳ ಎನಾಮಲ್‌ ಬಲಪಡಿಸುತ್ತವೆ. ಬಾಯಲ್ಲಿ ಜೊಲ್ಲು ರಸದ ಉತ್ಪಾದನೆಗೆ ಪ್ರೋತ್ಸಾಹ ನೀಡಿ, ಹಲ್ಲಿನ ಮೇಲ್ಮೈಯಲ್ಲಿ ಅಂಟಿ ಕೂರುವ ಬ್ಯಾಕ್ಟೀರಿಯಗಳನ್ನು ಕಡಿಮೆ ಮಾಡುತ್ತವೆ. ಈ ಮೂಲಕ ಹಲ್ಲಿನ ಹೊಳಪಿಗೆ ಕಾರಣವಾಗುತ್ತವೆ.

Fruits and Vegetables Spilling from Paper Bag

ತರಕಾರಿಗಳು

ಕ್ಯಾರೆಟ್‌, ಹಸಿರು ಸೊಪ್ಪು-ತರಕಾರಿಗಳು ಹಲ್ಲುಗಳ ಆರೋಗ್ಯಕ್ಕೆ ಬೇಕಾದಂಥವು. ಕರುಂಕುರುಂ ತಿನ್ನಬಹುದಾದ ಕ್ಯಾರೆಟ್‌, ಸೆಲೆರಿಯಂಥವು ಹಲ್ಲುಗಳಿಗೆ ನೈಸರ್ಗಿಕ ಬ್ರಷ್‌ನಂತೆ ಕೆಲಸ ಮಾಡುತ್ತವೆ. ಜೊತೆಗೆ ಕ್ಯಾಲ್ಶಿಯಂನಂಥ ಖನಿಜಗಳು ಮತ್ತು ಫಾಲಿಕ್‌ ಆಮ್ಲಗಳನ್ನು ಹೇರಳವಾಗಿ ಹೊಂದಿರುವ ಹಸಿರು ಸೊಪ್ಪುಗಳಿಗೆ ಹಲ್ಲುಗಳು ಎಲ್ಲ ರೀತಿಯಲ್ಲೂ ನಳನಳಿಸುತ್ತವೆ.

ಇದನ್ನೂ ಓದಿ: Almonds Benefits: ಈ 9 ಕಾರಣಗಳಿಗಾಗಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸಬೇಕು!

ಹಣ್ಣುಗಳು

ಈ ಸಾಲಿನಲ್ಲಿ ಮುಂದೆ ನಿಲ್ಲುವುದು ಸ್ಟ್ರಾಬೆರಿ. ನೈಸರ್ಗಿಕವಾಗಿಯೇ ಹಲ್ಲುಗಳನ್ನು ಬೆಳ್ಳಗೆ ಮಾಡುವ ಸಾಮರ್ಥ್ಯ ಇವುಗಳಿಗೆ ಇದೆ. ಜೊತೆಗೆ ಸೇಬು, ಬಾಳೆಯ ಹಣ್ಣುಗಳಲ್ಲೂ ಹಲ್ಲುಗಳ ಹೊಳಪು ಕಾಪಾಡುವ ಗುಣವಿದೆ. ಇವುಗಳಲ್ಲಿ ಇರುವ ಅಧಿಕ ನೀರಿನಂಶ ಲಾಲಾ ರಸದ ಉತ್ಪಾದನೆಗೆ ನೆರವಾಗುತ್ತದೆ. ಹಾಗಾಗಿ ಬಾಯಿಯ ಆರೋಗ್ಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದು ಮಹತ್ವದ್ದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Ghee For Health: ನಾವು ಆರೋಗ್ಯವಾಗಿರಲು ದಿನಕ್ಕೆಷ್ಟು ತುಪ್ಪ ತಿನ್ನಬೇಕು?

Ghee For Health: ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು ಎಂಬುದಕ್ಕೆ ನಿಖರವಾದ ಉತ್ತರವನ್ನು ನೀಡುವ ಮುನ್ನ, ನಮ್ಮ ಉಳಿದ ಜೀವನಶೈಲಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅಂದರೆ ಜಡ ಜೀವನವನ್ನು ಹೊಂದಿದ ವ್ಯಕ್ತಿಗೆ ಒಬ್ಬ ಅಥ್ಲೀಟ್‌ನಷ್ಟು ತುಪ್ಪ ಬೇಕಾಗುವುದಿಲ್ಲ, ಅಷ್ಟು ತಿನ್ನಬಾರದು!

VISTARANEWS.COM


on

Ghee benefits
Koo

ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತಿದೆ. ತುತ್ತು ಎತ್ತುವುದಕ್ಕೆ ತುಪ್ಪ ಬೇಕು ಎಂದವರೂ ಇದ್ದಾರೆ. ಇಂಥ ಮಾತುಗಳು ತುಪ್ಪ ನಮಗೆಷ್ಟು ಆವಶ್ಯಕ ಎನ್ನುವುದನ್ನು ತೋರಿಸುವಂತಿದೆ. ನಮ್ಮ ಆರೋಗ್ಯದ ಮೇಲೆ ತುಪ್ಪವು ಹಲವು ರೀತಿಯಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರಬಲ್ಲದು ಎಂಬುದು ನಿಸ್ಸಂಶಯ. ಹಾಗೆಂದು ತಿನ್ನುವುದಕ್ಕೆಲ್ಲ ತುಪ್ಪ ಸುರಿದುಕೊಳ್ಳಬಹುದೇ? ಅಷ್ಟೊಂದು ಜಿಡ್ಡಿನ ಪದಾರ್ಥವನ್ನು ಒಳ್ಳೆಯದೆಂದು ತಿನ್ನುತ್ತಾ ಹೋದರೆ ಆರೋಗ್ಯದ ಗತಿ ಏನು? ಸಾಲ ಮಾಡಿ ತಿನ್ನುವಷ್ಟು ತುಪ್ಪ ನಮಗೆ ಬೇಕೆ! ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು? ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು ಎಂಬುದಕ್ಕೆ ನಿಖರವಾದ ಉತ್ತರವನ್ನು ನೀಡುವ ಮುನ್ನ, ನಮ್ಮ ಉಳಿದ ಜೀವನಶೈಲಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅಂದರೆ ಜಡ ಜೀವನವನ್ನು ಹೊಂದಿದ ವ್ಯಕ್ತಿಗೆ ಒಬ್ಬ ಅಥ್ಲೀಟ್‌ನಷ್ಟು ತುಪ್ಪ ಬೇಕಾಗುವುದಿಲ್ಲ, ಅಷ್ಟು ತಿನ್ನಬಾರದು. ಹಾಗಾಗಿ ನಮ್ಮ ವಯಸ್ಸು, ಆರೋಗ್ಯ, ತೂಕ ಇತ್ಯಾದಿಗಳ ಮೇಲೆ, ದಿನಕ್ಕೆಷ್ಟು ತುಪ್ಪ ಬೇಕು ಮತ್ತು ಸಾಕು ಎನ್ನುವುದನ್ನು ನಿರ್ಧರಿಸಬಹುದು. ಈಗಾಗಲೇ ಸಾಕಷ್ಟು ಎಣ್ಣೆ ಮತ್ತು ಜಿಡ್ಡಿನಂಶ ನಮ್ಮ ಆಹಾರದಲ್ಲಿದ್ದರೆ, ಅದಕ್ಕೆ ತುಪ್ಪವನ್ನೂ ಹೆಚ್ಚುವರಿಯಾಗಿ ಸೇರಿಸಬೇಕಿಲ್ಲ. ಬದಲಿಗೆ, ಈಗಾಗಲೇ ಇರುವ ಕೆಲವು ಜಿಡ್ಡಿನ ವಸ್ತುಗಳನ್ನು ಕಡಿಮೆ ಮಾಡಿ, ಅದರ ಬದಲಿಗೆ ತುಪ್ಪವನ್ನು (Ghee For Health) ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ghee Nutrients
Improves body metabolism Ghee Health Benefits

ಎಷ್ಟು ಬೇಕು?

ಸಾಮಾನ್ಯ ಅಂದಾಜಿಗೆ ಹೇಳುವುದಾದರೆ, ವಯಸ್ಕರಿಗೆ ದಿನಕ್ಕೆ 2-4 ಚಮಚ ತುಪ್ಪ ದಿನಕ್ಕೆ ಸಾಕಾಗುತ್ತದೆ. ಸಾಮಾನ್ಯವಾಗಿ ಬೆಳಗಿನ ಹೊತ್ತು ತುಪ್ಪವನ್ನು ತಿನ್ನುವುದು, ಅದರಲ್ಲೂ ಬೆಚ್ಚಗಿನ ತುಪ್ಪದ ಸೇವನೆ ಒಳ್ಳೆಯದು ಎನ್ನುತ್ತಾರೆ ಪೋಷಕಾಂಶ ತಜ್ಞರು. ಆದರೆ ಅವರ ಆರೋಗ್ಯ ಮತ್ತು ಜೀವನಶೈಲಿಯನ್ನು ಗಮನಿಸಿಕೊಳ್ಳಬೇಕು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ತುಪ್ಪ ಅಗತ್ಯವಾಗಿ ಬೇಕು. ಅದೇ ಹೃದ್ರೋಗಿಗಳಿಗಾದರೆ ವೈದ್ಯರಲ್ಲಿ ಮಾತಾಡಿಯೇ ನಿರ್ಧರಿಸಬೇಕು. ಜೀರ್ಣಾಂಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಗಳನ್ನು ಹೆಚ್ಚಿಸುವುದರಿಂದ ತೊಡಗಿ, ಶಕ್ತಿ ಸಂಚಯಿಸುವ, ಉರಿಯೂತ ಕಡಿಮೆ ಮಾಡುವವರೆಗೆ ಬಹಳಷ್ಟು ರೀತಿಯಲ್ಲಿ ದೇಹಕ್ಕೆ ನೆರವಾಗಬಲ್ಲವು.

It is rich in good fats Ghee Benefits

ಚಯಾಪಚಯ ಚುರುಕು

ತುಪ್ಪದಲ್ಲಿ ಕಿರುಕೊಂಡಿಗಳ ಕೊಬ್ಬಿನಾಮ್ಲ (SCFAs) ಇರುತ್ತದೆ. ಇವು ಸುಲಭವಾಗಿ ದೇಹಕ್ಕೆ ಹೀರಲ್ಪಡುತ್ತವೆ. ಇದರಿಂದ ಉತ್ಪತ್ತಿಯಾಗುವ ಶಾಖವು ದೇಹದಲ್ಲಿನ ಹೆಚ್ಚುವರಿ ಕೊಬ್ಬು ಕರಗಿಸಲು ನೆರವಾಗುತ್ತದೆ. ಅಂದರೆ, ಇದರಿಂದ ಚುರುಕಾಗುವ ಚಯಾಪಚಯ ಕ್ರಿಯೆಯಿಂದ ಹೆಚ್ಚಿನ ಕ್ಯಾಲರಿಗಳು ಕರಗಿ, ಕೊಬ್ಬೂ ಕಡಿಮೆಯಾಗುತ್ತದೆ

Improved Digestion Tea Benefits

ಜೀರ್ಣಾಂಗಗಳ ಆರೋಗ್ಯ ಸುಧಾರಣೆ

ಖಾಲಿ ಹೊಟ್ಟೆಗೆ ಬೀಳುವ ಬೆಚ್ಚನೆಯ ತುಪ್ಪವು ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ. ಇದರಲ್ಲಿರುವ ಬಟೈರೇಟ್‌ ಅಂಶವು ಜಠರ ಮತ್ತು ಕರುಳಿನ ಒಳಪದರಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಜೀರ್ಣ, ಆಸಿಡಿಟಿಯಂಥವು ಕಡಿಮೆಯಾಗುತ್ತವೆ. ಹೊಟ್ಟೆಯ ಆರೋಗ್ಯಕ್ಕೆ ಅಗತ್ಯವಾದ ಉತ್ತಮ ಬ್ಯಾಕ್ಟೀರಿಯಗಳ ಸಂಖೆಯನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ಸುಧಾರಿಸಿ, ಆಹಾರದಲ್ಲಿನ ಪೋಷಕಾಂಶಗಳು ಚೆನ್ನಾಗಿ ಹೀರಲ್ಪಡುತ್ತವೆ.

Improves body metabolism Ghee Health Benefits

ತಿನ್ನುವ ಬಯಕೆಗೆ ಕಡಿವಾಣ

ಬೆಳಗಿನ ಸಮಯದಲ್ಲಿ ದೇಹಕ್ಕೆ ದೊರೆಯುವ ಆರೋಗ್ಯಕರ ಕೊಬ್ಬಿನಿಂದ ದಿನವಿಡೀ ಹೆಚ್ಚು ತಿನ್ನಬೇಕೆಂಬ ಬಯಕೆಗೆ ಕಡಿವಾಣ ಹಾಕುವುದು ಸುಲಭವಾಗುತ್ತದೆ. ಇದರಿಂದ ಕಳ್ಳ ಹಸಿವಿಗೆ ಏನಾದರೂ ಬಾಯಾಡಬೇಕೆಂಬ ಚಟ ನಿಂತು, ದೇಹಕ್ಕೆ ಆರೋಗ್ಯಕರ ತೂಕವನ್ನು ಕಲ್ಪಿಸುವುದಕ್ಕೆ ಸಹಾಯವಾಗುತ್ತದೆ. ಹೊಟ್ಟೆ ತುಂಬಿದ ಭಾವವನ್ನು ಪ್ರಚೋದಿಸುವ ಚೋದಕಗಳ ಬಿಡುಗಡೆಗೂ ಇದು ನೆರವಾಗುತ್ತದೆ. ತಿಳಿದು ತಿಂದರೆ ತುಪ್ಪದಿಂದ ತೂಕವನ್ನು ಇಳಿಸಲೂ ಬಹುದು.

ಶಕ್ತಿ ಸಂಚಯನ

ಇದರ ಕೊಬ್ಬಿನ ಸ್ವರೂಪವು ಹೇಗಿದೆಯೆಂದರೆ ದೀರ್ಘಕಾಲದವರೆಗೆ ದೇಹಕ್ಕೆ ಸುಸ್ಥಿರವಾಗಿ ಶಕ್ತಿಯನ್ನು ನೀಡುತ್ತಲೇ ಇರುವಂತೆ ರೂಪಿತವಾಗಿದೆ. ತ್ವರಿತವಾಗಿ ಶಕ್ತಿಯ ಸ್ವರೂಪ ಪಡೆದು, ದೇಹಕ್ಕೆ ಬೇಕಾದ ಇಂಧನವನ್ನು ಒದಗಿಸುವುದು ತುಪ್ಪದಲ್ಲಿರುವ ಕೊಬ್ಬಿಗೆ ಸಾಧ್ಯ.

ಇದನ್ನೂ ಓದಿ: Oats or Quinoa: ಓಟ್ಸ್‌, ಕಿನೊವಾ- ಇವೆರೆಡರಲ್ಲಿ ಯಾವುದು ಬೆಸ್ಟ್?

ಹೃದಯದ ಆರೋಗ್ಯಕ್ಕೂ ಪೂರಕ

ತುಪ್ಪದಲ್ಲಿ ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕ ಸತ್ವಗಳಿವೆ. ಇದು ಶರೀರದಲ್ಲಿ ಆಗಬಹುದಾದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿ, ಮಾರಕ ರೋಗಗಳನ್ನು ದೂರ ಇರಿಸುತ್ತವೆ. ಉತ್ತಮ ಕೊಬ್ಬನ್ನು ದೇಹಕ್ಕೆ ನೀಡುತ್ತಾ ಕೊಲೆಸ್ಟ್ರಾಲ್‌ನಂಥ ಬೇಡದ ಕೊಬ್ಬನ್ನು ಕಡಿಮೆ ಮಾಡಬಹುದು. ಆದರೆ ನೆನಪಿಡಿ, ಅತಿಯಾದರೆ ಅಮೃತವೂ ವಿಷ! ತುಪ್ಪ ಒಳ್ಳೆಯದು ಎಂಬ ಕಾರಣಕ್ಕಾಗಿ ಹೆಚ್ಚು ತಿನ್ನುವಂತಿಲ್ಲ. ಅದೇ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಿತವಾಗಿಯೇ ಬೆಳಗಿನ ತಿಂಡಿಯ ಜೊತೆಗೆ ಸೇರಿಸಿಕೊಂಡರೆ, ಹಲವು ರೀತಿಯ ಲಾಭಗಳನ್ನು ಪಡೆಯಬಹುದು.

Continue Reading

ಆರೋಗ್ಯ

Sweet Potato Benefits: ಸವಿದವರೇ ಬಲ್ಲರು ಗೆಣಸಿನ ಸೊಗಸು! ಹಲವು ಆರೋಗ್ಯ ಸಮಸ್ಯೆಗೂ ಪರಿಹಾರ

Sweet Potato Benefits: ಗೆಣಸನ್ನು ಸುಮ್ಮನೆ ಬೇಯಿಸಿ ತಿನ್ನುವುದರಿಂದ ಹಿಡಿದು ಪಲ್ಯ, ಭಾಜಿಗಳ ರೀತಿಯಲ್ಲಿ ಅಡುಗೆಗೆ ಬಳಸಬಹುದು, ಸಲಾಡ್‌ಗೆ, ಚಾಟ್‌ಗಳಿಗೆ ಹಾಕಿ ರುಚಿ ಹೆಚ್ಚಿಸಬಹುದು. ಪೋಡಿ, ಬಜ್ಜಿಗಳ ರೀತಿಯಲ್ಲಿ ಸವಿಯುವವರಿಗೂ ಬರವಿಲ್ಲ. ಇಂಥ ಗಡ್ಡೆಯನ್ನು ತಿನ್ನುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ.

VISTARANEWS.COM


on

Blood Pressure
Koo

ಗಡ್ಡೆ-ಗೆಣಸುಗಳು ಪೂರ್ವಿಕರ ಕಾಲದಿಂದಲೇ ನಮ್ಮ ಆಹಾರವಾಗಿ ಬಳಕೆಯಾಗುತ್ತಿದೆ. ಅದರಲ್ಲೂ ಮರಗೆಣಸಿಗಿಂತಲೂ ಸಿಹಿ ಗೆಣಸು ಎಲ್ಲರಿಗೂ ಇಷ್ಟವಾಗುವಂಥ ಗಡ್ಡೆ. ತಿಳಿಗುಲಾಬಿ, ಕಂದು, ತಿಳಿ ಹಳದಿ, ನೇರಳೆ ಮುಂತಾಗಿ ಒಂದಕ್ಕಿಂತ ಹೆಚ್ಚು ಬಣ್ಣಗಳಲ್ಲಿರುವ ಈ ಗೆಣಸಿನ ಎಲ್ಲ ಬಣ್ಣಗಳೂ ಆರೋಗ್ಯಕ್ಕೆ ಒಳ್ಳೆಯವೆ. ಇದರ ಬಣ್ಣ ಗಾಢವಾದಷ್ಟೂ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು ಎಂದು ತಿಳಿಯಬಹುದು. ಸುಮ್ಮನೆ ಬೇಯಿಸಿ ತಿನ್ನುವುದರಿಂದ ಹಿಡಿದು, ಪಲ್ಯ, ಭಾಜಿಗಳ ರೀತಿಯಲ್ಲಿ ಅಡುಗೆಗೆ ಬಳಸಬಹುದು, ಸಲಾಡ್‌ಗೆ, ಚಾಟ್‌ಗಳಿಗೆ ಹಾಕಿ ರುಚಿ ಹೆಚ್ಚಿಸಬಹುದು. ಪೋಡಿ, ಬಜ್ಜಿಗಳ ರೀತಿಯಲ್ಲಿ ಸವಿಯುವವರಿಗೂ ಬರವಿಲ್ಲ. ಇಂಥ ಗಡ್ಡೆಯನ್ನು ತಿನ್ನುವುದರಿಂದ (Sweet Potato Benefits) ಆಗುವ ಲಾಭಗಳೇನು?

Sweet potatoes have the ability to control diabetes and prevent cancer

ನಾರಿನಂಶ ಹೇರಳ

ಗೆಣಸಿನಲ್ಲಿ ನಾರಿನ ಅಂಶ ವಿಫುಲವಾಗಿದೆ. ಹೆಚ್ಚು ನಾರು ಇರುವಂಥ ಆಹಾರಗಳು ನಮಗೆ ಹಲವು ರೀತಿಯಲ್ಲಿ ಉಪಕಾರವನ್ನು ಮಾಡಬಲ್ಲವು. ಅದರಲ್ಲೂ ಕಳ್ಳ ಹಸಿವನ್ನು ಮಟ್ಟ ಹಾಕುವಲ್ಲಿ ಇದರ ನೆರವು ಅಗತ್ಯವಾಗಿ ಬೇಕಾಗುತ್ತದೆ. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಭಾವವನ್ನು ನೀಡುವ ಇವು, ತಿಂದ ತೃಪ್ತಿಯನ್ನು ಹೆಚ್ಚಿಸುತ್ತವೆ. ಕರಗಬಲ್ಲ ನಾರುಗಳು ದೇಹದಲ್ಲಿ ಅಡಗಿರುವ ಕೊಬ್ಬಿನಂಶವನ್ನು ಕರಗಿಸಿದರೆ, ಕರಗದಿರುವ ನಾರು ಮಲಬದ್ಧತೆಯನ್ನು ನಿವಾರಿಸುತ್ತದೆ.

ಗ್ಲೈಸೆಮಿಕ್‌ ಸೂಚಿ

ಇದರ ರುಚಿ ಸಿಹಿಯೇ ಆದರೂ ಗ್ಲೈಸೆಮಿಕ್‌ ಸೂಚಿ ತೀರಾ ಹೆಚ್ಚೇನಿಲ್ಲ. ಹಾಗಾಗಿ ಜಿಐ ಹೆಚ್ಚಿರುವ ಆಹಾರಗಳಿಗೆ ಹೋಲಿಸಿದಲ್ಲಿ, ರಕ್ತದಲ್ಲಿ ಸಕ್ಕರೆಯಂಶ ದಿಢೀರ್‌ ಏರಿಕೆಯಾಗದಂತೆ ಇದು ನಿರ್ವಹಿಸುತ್ತದೆ. ಇದರಿಂದ ರಕ್ತದಲ್ಲಿ ಇನ್‌ಸುಲಿನ್‌ ಮಟ್ಟವನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ. ಇದರಿಂದ ತಿನ್ನುವ ಬಯಕೆಯನ್ನು ನಿಯಂತ್ರಿಸಬಹುದು. ಈ ಮೂಲಕ ಚಯಾಪಚಯ ಕೆಡದಂತೆ ಕಾಪಾಡಿಕೊಂಡು, ಹೊಟ್ಟೆಯಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆಯಬಹುದು.

Sweet Potatoes Vegetarian foods for stamina

ಸತ್ವಯುತ

ಇದರಲ್ಲಿ ಪಿಷ್ಟ ಮತ್ತು ನಾರಿನ ಹೊರತಾಗಿ ವಿಟಮಿನ್‌ ಎ, ಸಿ ಮತ್ತು ಬಿ೬ ವಿಫುಲವಾಗಿವೆ. ಜೊತೆಗೆ ಪೊಟಾಶಿಯಂ, ಮ್ಯಾಂಗನೀಸ್‌ನಂಥ ಖನಿಜಗಳು ತುಂಬಿವೆ. ಇವುಗಳೊಂದಿಗೆ ಉತ್ಕರ್ಷಣ ನಿರೋಧಕಗಳು ಸೇರಿಕೊಂಡು ಸತ್ವಯುತ ಆಹಾರವೊಂದು ನಮ್ಮೆದುರಿಗೆ ತೆರೆದುಕೊಳ್ಳುತ್ತದೆ. ಚರ್ಮದ ಹೊಳಪಿಗೆ, ದೃಷ್ಟಿಯ ಪೋಷಣೆಗೆ ಅಗತ್ಯವಾದ ಸತ್ವಗಳು ಇದರಲ್ಲಿವೆ. ಗೆಣಸು ತಿನ್ನುವಾಗ ಅದರ ಸಿಪ್ಪೆ ಸಮೇತ ತಿನ್ನಿ. ಇದರಿಂದ ವಿಟಮಿನ್‌ ಎ ಅಂಶ ಸಮೃದ್ಧವಾಗಿ ದೇಹಕ್ಕೆ ದೊರೆಯುತ್ತದೆ. ಕಡಿಮೆ ಕ್ಯಾಲರಿಯಲ್ಲಿ, ರುಚಿಕಟ್ಟಾದ ಸತ್ವಯುತ ಆಹಾರ ದೊರೆತರೆ ಬೇಡ ಎನ್ನುವವರಾರು?

Weight Loss Tips kannada
Weight Loss Tips kannada

ತೂಕ ಇಳಿಕೆ

ಇದರಲ್ಲಿರುವ ಪೊಟಾಶಿಯಂ ಅಂಶವು ಡೈಯುರೇಟಿಕ್‌ನಂತೆ ಕೆಲಸ ಮಾಡುತ್ತದೆ. ಅಂದರೆ ಹೆಚ್ಚುವರಿ ನೀರಿನಂಶ ದೇಹದಲ್ಲಿ ಉಳಿಯದಂತೆ, ಹೊಟ್ಟೆ ಉಬ್ಬರಿಸದಂತೆಯೂ ಪರಿಣಾಮ ಬೀರುತ್ತದೆ. ತೂಕ ಇಳಿಸುವವರಿಗೆ ಇದು ಇಂಥ ಹಲವು ವಿಷಯಗಳಲ್ಲಿ ಉಪಯುಕ್ತ ಎನಿಸಬಹುದು. ಅಂದರೆ, ನಾರಿನಂಶ ಹೆಚ್ಚಿರುವುದರಿಂದ ಬೇಗ ಹಸಿವಾಗುವುದಿಲ್ಲ. ಆಗಾಗ ತಿನ್ನು ಬೇಡಿಕೆಯನ್ನು ಮಟ್ಟ ಹಾಕಬಹುದು ಜೊತೆಗೆ ದೇಹದಲ್ಲಿನ ಹೆಚ್ಚುವರಿ ನೀರನ್ನು ತೆಗೆದು ಹೊಟ್ಟೆಯೆಲ್ಲ ಸಪೂರ ಆದಂತೆ ಕಾಣಿಸುತ್ತದೆ.

ಇದನ್ನೂ ಓದಿ: Hair Oil Tips: ನಮ್ಮ ತಲೆಗೂದಲಿಗೆ ಬೇಕಾದ ತೈಲವನ್ನು ಆಯ್ದುಕೊಳ್ಳುವುದು ಹೇಗೆ?

ಎಲ್ಲದಕ್ಕೂ ಹೊಂದುತ್ತದೆ

ಯಾವುದೇ ರೀತಿಯ ಅಡುಗೆಗಳಿಗೆ ಇದನ್ನು ಕಷ್ಟವಿಲ್ಲದೆ ಹೊಂದಿಕೊಳ್ಳಬಹುದು. ಚಪಾತಿಯೊಂದಿಗೆ ಗೆಣಸಿನ ಭಾಜಿ ಮಾಡಿದರೆ ರುಚಿ ಹೆಚ್ಚು. ಊಟಕ್ಕೆ ಜೊತೆಯಾಗಿ ಪಲ್ಯ ಮಾಡಿದರೆ ಒಲ್ಲೆ ಎನ್ನುವವರಿಲ್ಲ. ಬರೀ ಸಲಾಡ್‌ ಮಾಡುವ ಯೋಚನೆಯಿದ್ದರೆ ಗೆಣಸನ್ನು ಬೇಯಿಸಿ ಸೇರಿಸಿಕೊಳ್ಳಬಹುದು. ಸೂಪ್‌ ಜೊತೆಗೆ ಬೇಯಿಸಿದ ಗೆಣಸು ಬೇಗ ಹೊಟ್ಟೆ ತುಂಬಿಸಿ, ನಿಮ್ಮ ಡಯೆಟ್‌ ಯೋಜನೆಯನ್ನು ಕಾಪಾಡುತ್ತದೆ. ಪಾಸ್ತಾ ಮಾಡುವ ಯೋಚನೆಯಿದ್ದರೆ, ಯಾವುದಾದರೂ ಒಂದಿಷ್ಟು ನಟ್‌ಗಳನ್ನು ನೆನೆಸಿ, ಬೇಯಿಸಿದ ಗೆಣಸಿನೊಂಸಿಗೆ ಪೇಸ್ಟ್‌ ಮಾಡಿ ಸಾಸ್‌ ಮಾಡಿದರೆ ಮಕ್ಕಳು ಚಪ್ಪರಿಸಿಕೊಂಡು ತಿನ್ನುತ್ತವೆ. ಮಳೆಗಾಲದಲ್ಲಿ, ಚಳಿಗಾಲದಲ್ಲಿ ಸುಮ್ಮನೆ ಕೆಂಡದಲ್ಲಿ ಸುಟ್ಟು ಅಥವಾ ಬೇಯಿಸಿಕೊಂಡು ಸಿಪ್ಪೆ ಸಮೇತ ತಿಂದರೆ, ಬೇರೆ ಸ್ವರ್ಗವೇ ಬೇಡ!

Continue Reading

ಆರೋಗ್ಯ

Fatty Liver: ಏನೆಲ್ಲ ಕಾರಣಗಳಿಗೆ ಫ್ಯಾಟಿ ಲಿವರ್‌ ಬರುತ್ತದೆ?

Fatty Liver: ಜೀವನಶೈಲಿಯ ದೋಷದಿಂದ ಬರುವಂಥ ಕಾಯಿಲೆಗಳ ಪೈಕಿ ಯಕೃತ್‌ನಲ್ಲಿ ಕೊಬ್ಬಿ ತುಂಬಿಕೊಳ್ಳುವುದೂ ಒಂದು. ಸಂಸ್ಕರಿತ ಆಹಾರಗಳು, ಅತಿಯಾದ ಸಕ್ಕರೆ ಮತ್ತು ಉಪ್ಪಿನ ಸೇವನೆ, ಮದ್ಯಪಾನ- ಇಂಥ ಹಲವು ಕಾರಣಗಳು ಈ ತೊಂದರೆಯ ಹಿಂದಿವೆ. ಇನ್ನೂ ಏನೆಲ್ಲಾ ಕಾರಣಗಳಿಗೆ ಫ್ಯಾಲಿ ಲಿವರ್‌ ಕಾಡಬಹುದು? ಇಲ್ಲಿದೆ ಮಾಹಿತಿ.

VISTARANEWS.COM


on

Fatty Liver What Causes
Koo

ಬೆಂಗಳೂರು: ಯಕೃತ್‌ನ ಕೊಬ್ಬು ಅಥವಾ ಫ್ಯಾಟಿ ಲಿವರ್‌ ಸಮಸ್ಯೆ (Fatty Liver) ವಿಶ್ವದ ಶೇ. 25ರಷ್ಟು ಜನರನ್ನೀಗ ಬಾಧಿಸುತ್ತಿದೆ. ಭಾರತವಂತೂ ವಿಶ್ವದ ಫ್ಯಾಟಿ ಲಿವರ್‌ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಬೊಜ್ಜು, ಮಧುಮೇಹ, ಕೊಲೆಸ್ಟ್ರಾಲ್‌ನಂಥ ಜೀವನಶೈಲಿಯ ದೋಷದಿಂದ ಬರುವ ಸಮಸ್ಯೆಗಳು ಯಕೃತ್‌ನ ಕೊಬ್ಬಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಅದಲ್ಲದೆ, ಪ್ರತಿಯೊಬ್ಬರದ್ದೂ ಪ್ರತ್ಯೇಕವಾದ ಜೀವನಶೈಲಿಗಳು ಇಂಥ ತೊಂದರೆಗಳಿಗೆ ದಾರಿ ಮಾಡಿಕೊಡಬಹುದು. ಯಾವ ಕೆಟ್ಟ ಅಭ್ಯಾಸಗಳು ಇಂಥ ತೊಂದರೆಗಳನ್ನು ಮುಂದಿಡುತ್ತವೆ? ಅವುಗಳನ್ನು ಹೇಗೆ ದೂರ ಮಾಡಬಹುದು?

ಅತಿಯಾಗಿ ತಿನ್ನುವುದು

ನಮ್ಮ ಶರೀರಕ್ಕೆ ಬೇಕಾದ ಕ್ಯಾಲರಿಗಿಂತ ಅಧಿಕ ಪ್ರಮಾಣದಲ್ಲಿ ತಿನ್ನುವ ಅಭ್ಯಾಸವಿದ್ದರೆ, ಈ ವಿಷಯ ಗಮನದಲ್ಲಿರಬೇಕು. ಹೆಚ್ಚುವರಿ ಕ್ಯಾಲರಿಗಳೆಲ್ಲ ಶರೀರದಲ್ಲಿ ಶೇಖರಣೆಯಾಗುವುದು ಕೊಬ್ಬಿನ ರೂಪದಲ್ಲಿ. ಅದರಲ್ಲೂ ಜಿಡ್ಡು ಮತ್ತು ಪಿಷ್ಟದ ವಸ್ತುಗಳನ್ನು ಹೆಚ್ಚಾಗಿ ಸೇವಿಸುವುದು ಯಕೃತ್‌ನಲ್ಲಿ ಕೊಬ್ಬು ಜಮೆಯಾಗುವುದಕ್ಕೆ ಕಾರಣವಾಗುತ್ತದೆ. ಹಾಗಾಗಿ ಬೇಕಾದಷ್ಟೇ ತಿನ್ನುವುದು ಸುಲಭದ ಉಪಾಯ. ಅದರಲ್ಲೂ ಲೀನ್‌ ಪ್ರೊಟೀನ್‌, ಇಡೀ ಧಾನ್ಯಗಳು ಮತ್ತು ನಾರು ಭರಿತ ಆಹಾರಗಳ ಸೇವನೆಯನ್ನು ಅಗತ್ಯವಾಗಿ ಮಾಡಿ.

ಜಡಜೀವನ

ದೈಹಿಕ ಚಟುವಟಿಕೆ ಕಡಿಮೆಯಾದಷ್ಟು ಸ್ವಾಸ್ಥ್ಯವೂ ಕಡಿಮೆಯಾಗುತ್ತದೆ. ದೇಹದ ಕೊಬ್ಬು ಕರಗುವಂತೆ, ಬಕೆಟ್‌ಗಟ್ಟಲೆ ಬೆವರು ಹರಿಸಿ ವ್ಯಾಯಾಮ ಮಾಡಬೇಕೆಂದಲ್ಲ. ಬದಲಿಗೆ, ವಾಋಕ್ಕೆ 150 ನಿಮಿಷಗಳ ಅಥವಾ ದಿನಕ್ಕೆ 30 ನಿಮಿಷಗಳ ಮಧ್ಯಮ ಪ್ರಮಾಣದ ವ್ಯಾಯಾಮ ಸಾಕಾಗುತ್ತದೆ. ಚುರುಕು ನಡಿಗೆ, ಸೈಕಲ್‌ ಹೊಡೆಯುವುದು, ಈಜು, ಯೋಗ, ಏರೋಬಿಕ್ಸ್‌, ಜುಂಬಾ, ಪಿಲಾಟೆ ಮುಂತಾದ ಯಾವುದೇ ನಿಮ್ಮಿಷ್ಟದ ವ್ಯಾಯಾಮವನ್ನು ಮಾಡಬಹುದು. ದೀರ್ಘ ಕಾಲ ಒಂದೇ ಕಡೆ ಕೂತು ಕೆಲಸ ಮಾಡದೆ ಆಗಾಗ ಎದ್ದು ಓಡಾಡಿ. ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಿ.

ಆಲ್ಕೋಹಾಲ್‌

ಇದಂತೂ ಯಕೃತ್‌ನಲ್ಲಿ ಕೊಬ್ಬು ಜಮೆಯಾಗುವುದಕ್ಕೆ ಇರುವಂಥ ಅತಿದೊಡ್ಡ ಕಾರಣಗಳಲ್ಲಿ ಒಂದು. ಮೊದಲಿಗೆ ಅಂಥ ವ್ಯತ್ಯಾಸ ಕಾಣದ್ದರೂ, ದೀರ್ಘ ಕಾಲ ಮದ್ಯಪಾನದ ಚಟ ಮುಂದುವರಿಯುವುದು ಇಡೀ ದೇಹವನ್ನು ಒಳಗಿಂದೊಳಗೆ ಶಿಥಿಲಗೊಳಿಸಬಲ್ಲದು. ಹಾಗಾಗಿ ಹವ್ಯಾಸ, ಮಜಾ, ಸ್ನೇಹಿತರ ಜೊತೆಗೆ, ಎಂದೋ ಪಾರ್ಟಿಗೆ… ಇಂಥ ಕುಂಟು ನೆಪಗಳನ್ನು ಹೇಳಿಕೊಂಡು ಗುಂಡು ಹಾಕುವ ಬದಲು, ಮದ್ಯಪಾನವನ್ನು ಸಂಪೂರ್ಣ ತ್ಯಜಿಸಲು ದೃಢ ಮನಸ್ಸು ಮಾಡಿ.

ಅಧಿಕ ಸಕ್ಕರೆ

ಸಕ್ಕರೆಯಂಶ ಹೆಚ್ಚಿರುವ ನೈಸರ್ಗಿಕ ಆಹಾರಗಳು ಅಂಥ ಅಪಾಯವನ್ನು ತರುವುದಿಲ್ಲ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಮಿತಿಮೀರಿ ಹಣ್ಣುಗಳ ಸೇವನೆ ಮಾಡುವ ಅಭ್ಯಾಸದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆದರೆ ಕೃತಕ ಸಿಹಿಯನ್ನು ಸೇರಿಸಿದ ಆಹಾರಗಳು ಮಾತ್ರ ಯಾವತ್ತಿಗೂ ಕಂಟಕವನ್ನು ತರಬಲ್ಲವು. ಸೋಡಾ, ಫ್ರೂಟ್‌ ಜ್ಯೂಸ್‌, ಕ್ಯಾಂಡಿಗಳು, ಕೇಕ್‌, ಐಸ್‌ಕ್ರೀಮ್‌, ಜಿಲೇಬಿ, ಹಲ್ವಾಗಳಿಂದ ಹಿಡಿದು ಯಾವುದೇ ಸಿಹಿ ತಿನಿಸುಗಳು ಅತಿಯಾದರೆ ಯಕೃತ್‌ಗೆ ತೊಂದರೆ. ದಿನಕ್ಕೆ 4 ಚಮಚಕ್ಕಿಂತ ಹೆಚ್ಚಿನ ಸಕ್ಕರೆಯಂಶ ದೇಹಕ್ಕೆ ಹೋಗದಂತೆ ಎಚ್ಚರ ವಹಿಸಿ.

ಇದನ್ನೂ ಓದಿ: Actor Suriya: ಸೂರ್ಯಗೆ ಸೆಟ್‌ನಲ್ಲಿ ಗಾಯ: ಆರೋಗ್ಯ ಸ್ಥಿತಿ ಹೇಗಿದೆ?

ನಿದ್ದೆಗೇಡಿತನ

ದಿನಕ್ಕೆ ಅಗತ್ಯ ಪ್ರಮಾಣದ ನಿದ್ದೆಯನ್ನು ಮಾಡದವರಲ್ಲಿ ಯಕೃತ್‌ನ ಆರೋಗ್ಯ ಚೆನ್ನಾಗಿಲ್ಲ ಎಂಬ ಅಂಶವನ್ನು ಅಧ್ಯಯನಗಳು ಎತ್ತಿ ಹಿಡಿದಿವೆ. ಹಾಗಾಗಿ ದಿನಕ್ಕೆ 7-8 ತಾಸು ಕಡ್ಡಾಯವಾಗಿ ನಿದ್ರಿಸಬೇಕು ಎಂಬ ನಿಯಮವನ್ನು ಹಾಕಿಕೊಳ್ಳಿ. ನಿದ್ದೆಯೆಂದರೆ ಕೇವಲ ಹಾಸಿಗೆಯ ಮೇಲೆ ಮಲಗಿ, ಕೈಯಲ್ಲಿ ಮೊಬೈಲ್‌ ಹಿಡಿಯುವುದಲ್ಲ. ಬದಲಿಗೆ, ಅದಷ್ಟೂ ತಾಸುಗಳ ಗಾಢ ನಿದ್ದೆ. ಇದರಿಂದ ದೇಹದ ಬಹಳಷ್ಟು ರಿಪೇರಿ ಕೆಲಸಗಳು ಸುಗಮವಾಗುತ್ತವೆ.

ಸಂಸ್ಕರಿತ ಆಹಾರ

ಇದು ಸಹ ಯಕೃತ್ತನ್ನು ಹಾಳು ಮಾಡುವ ಕೇಡಿಗಳಲ್ಲಿ ಒಂದು. ಅತಿಯಾದ ಕೊಬ್ಬಿನ ಆಹಾರಗಳು, ಉಪ್ಪು ಹೆಚ್ಚಿರುವ ಚಿಪ್ಸ್‌ನಂಥ ತಿನಿಸುಗಳು, ಮೈದಾಭರಿತ ಆಹಾರಗಳು, ಶೀತಲೀಕರಿಸಿದ ತಿನಿಸುಗಳು- ಇವೆಲ್ಲ ಪಿತ್ತಕೋಶದ ಆಯುಷ್ಯವನ್ನೇ ಕಡಿತ ಮಾಡುವ ಸಾಮರ್ಥ್ಯ ಹೊಂದಿದವು. ಹಾಗಾಗಿ ತಾಜಾ ಆಹಾರ ಸೇವಿಸಿ, ಇಡೀ ಧಾನ್ಯಗಳನ್ನು, ಸಾಕಷ್ಟು ಹಣ್ಣು-ತರಕಾರಿಗಳನ್ನು ಹೊಂದಿದ ಸತ್ವಯುತ ಆಹಾರವನ್ನೇ ತಿನ್ನಿ.

Continue Reading

ಆರೋಗ್ಯ

Almonds Benefits: ಈ 9 ಕಾರಣಗಳಿಗಾಗಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸಬೇಕು!

Almonds Benefits: ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದ ಮೇಲೆ ಸಿಪ್ಪೆ ಸುಲಿದು ನೀವು ತಿಂದಿರಬಹುದು, ನಿಮ್ಮ ಮಕ್ಕಳಿಗೂ ಕೊಟ್ಟಿರಬಹುದು. ಹೀಗೆ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇರುವ ಲಾಭಗಳೇನು ಗೊತ್ತೇ? ಬನ್ನಿ, ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲೇ ನಾವು ಯಾಕೆ ತಿನ್ನಬೇಕು ಎಂಬುದಕ್ಕೆ ಕಾರಣಗಳನ್ನು ತಿಳಿಯೋಣ.

VISTARANEWS.COM


on

Almonds
Koo

ಕೆಲವು ಆಹಾರಗಳ್ನು ಕೆಲವು ಹೊತ್ತಿನಲ್ಲಿ ತಿಂದರೆ ಆ ಆಹಾರದ ಸರ್ವ ಗುಣಗಳ ಲಾಭವನ್ನೂ ನಾವು ಪಡೆಯಬಹುದು ಎನ್ನುತ್ತಾರೆ ತಜ್ಞರು. ಆಹಾರವೇ ಹಾಗೆ, ಹೊತ್ತಲ್ಲದ ಹೊತ್ತಿನಲ್ಲಿ ತಿಂದರೆ ಲಾಭಕ್ಕಿಂತ ನಷ್ಟ ಹೆಚ್ಚು. ಯಾವಾಗ, ಹೇಗೆ ಮತ್ತು ಎಷ್ಟು ತಿನ್ನಬೇಕು ಎಂಬ ಸಾಮಾನ್ಯ ಜ್ಞಾನ, ನಮಗೆ ತಿಳಿದಿರಬೇಕು. ಅದು ಪ್ರತಿ ಆಹಾರಕ್ಕೂ ಅನ್ವಯಿಸುತ್ತದೆ. ಇನ್ನು ಕೆಲವು ಆಹಾರಗಳನ್ನು ಇಂತಹ ಹೊತ್ತಿನಲ್ಲಿ ತಿಂದರೆ, ಹೆಚ್ಚು ಅಡ್ಡ ಪರಿಣಾಮಗಳಾಗದು ಎಂಬ ಸತ್ಯವೂ ಇದೆ. ಒಟ್ಟಾರೆ, ಆಹಾರದ ಬಗೆಗಿನ ಸಾಮಾನ್ಯ ಜ್ಞಾನ ಜೀವನದಲ್ಲಿ ನಮಗಿದ್ದರೆ, ಆರೋಗ್ಯವೂ ನಮ್ಮ ಕೈಯಲ್ಲಿದ್ದಂತೆ. ಯಾಕೆಂದರೆ, ನಮ್ಮ ಆರೋಗ್ಯದ ಬಹುಪಾಲು ಗುಟ್ಟು ಅಡಗಿರುವುದು ನಾವು ತಿನ್ನುವ ಆಹಾರದಲ್ಲಿಯೇ.
ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದ ಮೇಲೆ ಸಿಪ್ಪೆ ಸುಲಿದು ನೀವು ತಿಂದಿರಬಹುದು, ನಿಮ್ಮ ಮಕ್ಕಳಿಗೂ ಕೊಟ್ಟಿರಬಹುದು. ಹೀಗೆ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇರುವ ಲಾಭಗಳೇನು ಗೊತ್ತೇ? ಬನ್ನಿ, ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲೇ ನಾವು ಯಾಕೆ ತಿನ್ನಬೇಕು ಎಂಬುದಕ್ಕೆ (Almonds Benefits) ಕಾರಣಗಳನ್ನು ತಿಳಿಯೋಣ.

Almonds Dry Fruits for Womens Health

ಜೀವಸತ್ವಗಳು ಸರಿಯಾಗಿ ಹೀರಲ್ಪಡುತ್ತವೆ

ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಆಹಾರದಲ್ಲಿರುವ ಜೀವಸತ್ವಗಳು ಸರಿಯಾಗಿ ಹೀರಲ್ಪಡುತ್ತವೆ. ಬಾದಾಮಿಯಲ್ಲಿರುವ ಪ್ರೊಟೀನ್‌ ಹಾಗೂ ಕೊಬ್ಬು ಈ ಕೆಲಸವನ್ನು ಮಾಡುತ್ತವೆ. ಬಾದಾಮಿಯ ಸೇವನೆಯ ನಂತರ ನಮ್ಮ ದೇಹಕ್ಕೆ ಸೇರಿದ ಆಹಾಋದ ಸಂಪೂರ್ಣ ಉಪಯೋಗವನ್ನು ನಾವು ಪಡೆಯುವಂತಾಗುತ್ತದೆ.

weight loss

ತೂಕ ಇಳಿಕೆಗೆ ಸಹಕಾರಿ

ನೀವು ತೂಕ ಇಳಿಸುವವರಾಗಿದ್ದರೆ, ಈ ಅಭ್ಯಾಸ ಬಹಳ ಒಳ್ಳೆಯದು. ಬಾದಾಮಿಯಲ್ಲಿ ಹೆಚ್ಚು ನಾರಿನಂಶ ಹಾಗೂ ಪ್ರೊಟೀನ್‌ ಇರುವುದರಿಂದ ಇದು ಹೆಚ್ಚು ಹಸಿವಾಗಲು ಬಿಡುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಬಾದಾಮಿ ಸೇವಿಸಿದ್ದರಿಂದ ಹಸಿವು ಕೊಂಚ ನಿಯಂತ್ರಣಕ್ಕೆ ಬಂದು ನೀವು ಕಡಿಮೆ ತಿನ್ನುತ್ತೀರಿ. ಸಹಜವಾಗಿಯೇ, ಕ್ಯಾಲರಿ ಕಡಿಮೆ ದೇಹಕ್ಕೆ ಸೇರುವುದರಿಂದ ತೂಕ ಇಳಿಕೆಯತ್ತ ಸಾಗುತ್ತದೆ.

ealthy internal organs of human digestive system / highlighted blue organs

ಜೀರ್ಣಕ್ರಿಯೆ ಹೆಚ್ಚಳ

ನಿಮ್ಮ ಜೀರ್ಣಕ್ರಿಯೆಯ ಶಕ್ತಿ ಇಮ್ಮಡಿಗೊಳ್ಳುತ್ತದೆ. ಬಾದಾಮಿಯಲ್ಲಿ ನಾರಿನಂಶವು ಹೇರಳವಾಗಿರುವುದರಿಂದ ಇದು ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುವ ತಾಕತ್ತನ್ನು ಹೊಂದಿದೆ.

ಚಯಾಪಚಯಕ್ರಿಯೆ ಚುರುಕು

ಚಯಾಪಚಯಕ್ರಿಯೆ ಚುರುಕಾಗುತ್ತದೆ. ದೇಹದಲ್ಲಿ ಈ ಕ್ರಿಯೆಗೆ ಚುರುಕು ಬಂದ ತಕ್ಷಣ ಶಕ್ತಿ ಉತ್ಪಾದನೆಯೂ ಹೆಚ್ಚಾಗುತ್ತದೆ. ನಿಮ್ಮ ಸುಸ್ತು, ಬೇಸರಗಳೆಲ್ಲ ಮಾಯವಾಗಿ ನಿಮ್ಮ ದೇಹ ಚುರುಕಾಗುತ್ತದೆ.

Heart Health Fish Benefits

ಹೃದಯ ಸ್ನೇಹಿ

ಎಲ್ಲಕ್ಕಿಂತ ಮುಖ್ಯವಾಗಿ ಬಾದಾಮಿ ಹೃದಯ ಸ್ನೇಹಿ. ಇದರಲ್ಲಿರುವ ಮೋನೋ ಸ್ಯಾಚುರೇಟೆಡ್‌ ಕೊಬ್ಬು ಹೃದಯಕ್ಕೆ ಒಳ್ಳೆಯದನ್ನೇ ಬಯಸುತ್ತದೆ. ಹೃದಯದಲ್ಲಿ ರಕ್ತಪೂರಣಕ್ಕೆ ಚುರುಕು ಮುಟ್ಟುತ್ತದೆ. ಹೃದಯದ ಸಮಸ್ಯೆಗಳು ದೂರ ನಿಲ್ಲುತ್ತವೆ.

ಸಕ್ಕರೆ ಮಟ್ಟ ಏರಿಕೆ ಕಡಿಮೆ

ಬಾದಾಮಿಯಲ್ಲಿ ಗ್ಲಿಸೆಮಿಕ್‌ ಇಂಡೆಕ್ಸ್‌ ತೀರಾ ಕಡಿಮೆ ಇದೆ. ಇದರಿಂದ ಸಹಜವಾಗಿಯೇ, ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆಯ ಪರಿಣಾಮ ಕಡಿಮೆಯೇ ಇರುತ್ತದೆ.

ಚರ್ಮದ ಆರೋಗ್ಯಕ್ಕೆ ಪೂರಕ

ಚರ್ಮದ ಕಾಳಜಿ ವಹಿಸುವ ಮಂದಿ ಇದನ್ನು ಖಂಡಿತ ಬಳಸಬೇಕು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಜೀವಸತ್ವಗಳು ಚರ್ಮದ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಇವು ಆಂಟಿ ಏಜಿಂಗ್‌ ಕೂಡಾ. ಚರ್ಮವನ್ನು ನಯವಾಗಿ ಹೊಳಪಾಗಿ ಇರಿಸುವ ಜೊತೆಗೆ ಚರ್ಮಕ್ಕೆ ಬೇಕಾದ ಪೋಷಣಾಯನ್ನು ನೀಡುತ್ತವೆ.

Antioxidants in it keep immunity strong Benefits Of Mandakki

ರೋಗ ನಿರೋಧಕ ಶಕ್ತಿ

ಬಾದಾಮಿಯಲ್ಲಿ ವಿಟಮಿನ್‌ ಇ ಹಾಗೂ ಝಿಂಕ್‌ ಇರುವುದರಿಂದ ಇವು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನೂ ನೀಡುತ್ತವೆ. ದೇಹವನ್ನು ಇನ್‌ಫೆಕ್ಷನ್‌ನಿಂದ ದೂರವಿರಿಸುತ್ತದೆ. ಒಟ್ಟಾರೆ ರೋಗನಿರೋಧಕತೆ ಹೆಚ್ಚುತ್ತದೆ.

ಇದನ್ನೂ ಓದಿ: Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

ದೇಹವನ್ನು ಹೈಡ್ರೇಟ್‌ ಆಗಿ ಇರಿಸುತ್ತದೆ

ಬಾದಾಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರೂ ಇದೆ ಎಂದರೆ ನೀವು ನಂಬಲೇ ಬೇಕು. ಅದು ಒಣವಾಗಿ ಕಂಡರೂ, ತನ್ನ ಒಣ ಅಂಶದಷ್ಟೇ ಪ್ರಮಾಣದಲ್ಲಿ ನೀರನ್ನೂ ಹೊಂದಿದೆ ಎಂದರೆ ನೀವು ನಂಬಬೇಕು. ಹೀಗಾಗಿ, ದೇಹವನ್ನು ಸದಾ ಹೈಡ್ರೇಟ್‌ ಆಗಿ ಇಡುವಲ್ಲಿ ಇದು ತನ್ನ ಕಾಣಿಕೆಯನ್ನೂ ನೀಡುತ್ತದೆ.

Continue Reading
Advertisement
ಪ್ರಮುಖ ಸುದ್ದಿ31 mins ago

Train Accident : ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲಿನ ಎರಡು ಬೋಗಿ

Pralhad Joshi
ದೇಶ47 mins ago

Pralhad Joshi: ಪ್ರತಿ ಜಿಲ್ಲೆಗೊಂದು ‘ಮಾದರಿ ಸೌರ ಗ್ರಾಮ’ ಅನುಷ್ಠಾನಕ್ಕೆ ಕ್ರಮ; ಪ್ರಲ್ಹಾದ್‌ ಜೋಶಿ

CM Siddaramaiah
ಕರ್ನಾಟಕ49 mins ago

CM Siddaramaiah: 6000ಕ್ಕೂ ಹೆಚ್ಚು ಗ್ರಂಥಾಲಯ ಮೇಲ್ಚಿಚಾರಕರು ಕನಿಷ್ಠ ವೇತನ ವ್ಯಾಪ್ತಿಗೆ; ಸಿದ್ದರಾಮಯ್ಯ ಮಹತ್ವದ ಘೋಷಣೆ

Independence day speech in Kannada
ದೇಶ53 mins ago

Independence day speech in Kannada: ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧ ಭಾಷಣ!

S Jaishankar's Maldives visit
ಪ್ರಮುಖ ಸುದ್ದಿ54 mins ago

S Jaishankar’s Maldives visit : ಚೀನಾ ವಿರುದ್ಧ ಭಾರತಕ್ಕೆ ರಾಜತಾಂತ್ರಿಕ ಗೆಲುವು, 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್​​

Manu Bhaker
ಕ್ರೀಡೆ1 hour ago

Manu Bhaker : ಮದುವೆಯಾಗ್ತೀರಾ ಹೇಗೆ? ನೀರಜ್​ ಚೋಪ್ರಾ- ಮನು ಭಾಕರ್​ ಭೇಟಿಯ ವಿಡಿಯೊ ವೈರಲ್ ಮಾಡಿದ ನೆಟ್ಟಿಗರು

Namma Metro
ನೋಟಿಸ್ ಬೋರ್ಡ್1 hour ago

Namma Metro: ಹಸಿರು ಮಾರ್ಗದಲ್ಲಿ ಆ.13ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ

Lakshmi Hebbalkar
ಕರ್ನಾಟಕ2 hours ago

Lakshmi Hebbalkar: ಹಾಲಕೆರೆ ಮಠದ ಬೆಳ್ಳಿ ರಥೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ

NIRF 2024 Rank
ಶಿಕ್ಷಣ2 hours ago

NIRF 2024 Rank: ದೇಶದ ಟಾಪ್‌ 10 ಮೆಡಿಕಲ್‌ ಕಾಲೇಜುಗಳಲ್ಲಿ ನಿಮ್ಹಾನ್ಸ್‌ ನಂ.4; ಫಾರ್ಮಸಿಯಲ್ಲಿ ರಾಜ್ಯದ 2 ಕಾಲೇಜುಗಳಿಗೆ ಸ್ಥಾನ

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಸಿಕ್ಕಿದ ಕೋಟಿಗಟ್ಟಲೆ ಬಹುಮಾನಗಳ ವಿವರ ಇಲ್ಲಿದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ4 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು6 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌