Dry Fruit For Woman: ಮೂವತ್ತು ವರ್ಷ ದಾಟಿದ ಮಹಿಳೆಯರು ಈ ಒಣಹಣ್ಣು ಬೀಜಗಳನ್ನು ಸೇವಿಸುವುದೊಳಿತು - Vistara News

ಆರೋಗ್ಯ

Dry Fruit For Woman: ಮೂವತ್ತು ವರ್ಷ ದಾಟಿದ ಮಹಿಳೆಯರು ಈ ಒಣಹಣ್ಣು ಬೀಜಗಳನ್ನು ಸೇವಿಸುವುದೊಳಿತು

ಬಹುತೇಕ ಮಹಿಳೆಯರು ಮೂವತ್ತು ವರ್ಷ (dry fruit for woman) ದಾಟಿ ನಲುವತ್ತಾಗುವಷ್ಟರಲ್ಲಿ ಕುಟುಂಬದ ಜವಾಬ್ದಾರಿ, ಮಕ್ಕಳು, ತಮ್ಮ ಉದ್ಯೋಗ, ಹೀಗೆ ಎಲ್ಲವನ್ನೂ ಸಂಭಾಳಿಸಿಕೊಳ್ಳುವಷ್ಟರಲ್ಲಿ, ತಮ್ಮ ಆರೋಗ್ಯವನ್ನೇ ಕಡೆಗಣಿಸುತ್ತಾರೆ. ಹೀಗೆ ಮಾಡದೆ ಆರೋಗ್ಯದ ಕಡೆ ಗಮನ ಹರಿಸಬೇಕು.

VISTARANEWS.COM


on

Dry Fruits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೂವತ್ತು ವರ್ಷ ದಾಟಿದ ಮಹಿಳೆಯರು (dry fruit for woman) ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕು. ಮೂವತ್ತು ಎಂಬ ವಯಸ್ಸು ಮಹಿಳೆಯರ ಬದುಕಿನ ಅತ್ಯಂತ ಮುಖ್ಯ ಘಟ್ಟ. ಮಹಿಳೆಯರು ಇದೇ ವಯಸ್ಸಿನ ಆಸುಪಾಸಿನಲ್ಲೇ, ಸಂತಾನೋತ್ಪತ್ತಿ ಸೇರಿದಂತೆ, ದೇಹ ಹಲವಾರು ಹಾರ್ಮೋನಿನ ಬದಲಾವಣೆಗೂ ಒಡ್ಡಿಕೊಳ್ಳುವುದರಿಂದ ಮಹಿಳೆಯರು ತಮ್ಮ ದೇಹದ ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸಬೇಕು. ಮುಖ್ಯವಾಗಿ ಪೋಷಕಾಂಶಯುಕ್ತ ಆಹಾರ ಸೇವನೆ ಸೇರಿದಂತೆ ವ್ಯಾಯಾಮ, ಯೋಗ, ನಡಿಗೆ ಇತ್ಯಾದಿಗಳಿಗೆ ತಮಗೆ ತಾವು ಸಮಯ ನೀಡಬೇಕು. ಆದರೆ, ಬಹುತೇಕ ಮಹಿಳೆಯರು ಮೂವತ್ತು ದಾಟಿ ನಲುವತ್ತಾಗುವಷ್ಟರಲ್ಲಿ, ಕುಟುಂಬದ ಜವಾಬ್ದಾರಿ, ಮಕ್ಕಳು, ತಮ್ಮ ಉದ್ಯೋಗ, ಹೀಗೆ ಎಲ್ಲವನ್ನೂ ಸಂಭಾಳಿಸಿಕೊಳ್ಳುವಷ್ಟರಲ್ಲಿ, ತಮ್ಮ ಆರೋಗ್ಯವನ್ನೇ ಕಡೆಗಣಿಸುತ್ತಾರೆ. ಅದಕ್ಕಾಗಿಯೇ ಮಹಿಳೆಯರು ತಮ್ಮ ಆರೋಗ್ಯಕ್ಕಾಗಿ ಪೋಷಕಾಂಶಯುಕ್ತ ಆಹಾರ ಸೇವನೆಯನ್ನು ಎಂದಿಗೂ ನಿರ್ಲಕ್ಷಿಸಬಾರದು. ಮುಖ್ಯವಾಗಿ 30 ವರ್ಷ ದಾಟಿದ ಮಹಿಳೆಯರು ಬೀಜಗಳು ಹಾಗೂ ಒಣಹಣ್ಣುಗಳ ಸೇವನೆಯನ್ನು ನಿತ್ಯದ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ಬನ್ನಿ, ಯಾವೆಲ್ಲ ಬೀಜಗಳು ಹಾಗೂ ಒಣಹಣ್ಣುಗಳನ್ನು ಮೂವತ್ತು ದಾಟಿದ ಮಹಿಳೆಯರು ಸೇವಿಸಬೇಕು ಹಾಗೂ ಯಾಕಾಗಿ ಎಂಬುದನ್ನು ನೋಡೋಣ.

ಮೆಗ್ನೀಷಿಯಂ ಹಾಗೂ ಕ್ಯಾಲ್ಶಿಯಂ ಅಧಿಕವಾಗಿರುವ ಒಣಹಣ್ಣುಗಳು ಹಾಗೂ ಬೀಜಗಳ ಸೇವನೆ ಮಹಿಳೆಯರಿಗೆ ಅತ್ಯಂತ ಅಗತ್ಯ. ಬಾದಾಮಿ, ಪಿಸ್ತಾಗಳಲ್ಲಿ ಈ ಪೋಷಕಾಂಶಗಳಿವೆ. ಇದರಿಂದ ಮೂಳೆಗಳು ಗಟ್ಟಿಯಾಗಿ ಮಹಿಳೆಯರಲ್ಲಿ 40ರ ನಂತರ ಕಾಡುವ ಮೂಳೆ ಸವಕಳಿ, ಶಕ್ತಿಹೀನತೆಯಂತಹ ಸಮಸ್ಯೆಗಳು ಬರದಂತೆ ಮುಂಚಿತವಾಗಿ ಜಾಗ್ರತೆ ವಹಿಸಬಹುದು. ಒಣಹಣ್ಣುಗಳಲ್ಲಿರುವ ಝಿಂಕ್‌ ಹಾಗೂ ಫೋಲೇಟ್‌ಗಳ ಸೇವನೆಯಿಂದ ಸಂತಾನೋತ್ಪಾದನೆಯ ಸಂಬಂಧೀ ಸಮಸ್ಯೆಗಳು ದೂರವಾಗಿ, ಆರೋಗ್ಯ ವೃದ್ಧಿಯಾಗುತ್ತದೆ.

cashew nuts

ಗೋಡಂಬಿಯಲ್ಲಿ ಅತ್ಯಂತ ಹೆಚ್ಚು ಕಬ್ಬಿಣಾಂಶವಿದ್ದು ಇದು ಮಹಿಳೆಯರಿಗೆ ಅತ್ಯಂತ ಅವಶ್ಯಕ ಪೋಷಕಾಂಶಗಳಲ್ಲಿ ಇದೂ ಒಂದು. ಹಾಗಾಗಿ ಕಬ್ಬಿಣಾಂಶ ಅಧಿಕವಿರುವ ಆಹಾರ ಸೇವನೆ ಬಹಳ ಅಗತ್ಯ.

ನಿತ್ಯವೂ ಬಾದಾಮಿ ಸೇವನೆ ಮಹಿಳೆಯರಿಗೆ ಅತ್ಯಂತ ಒಳ್ಳೆಯದು. ದಿನವೂ ಮೂರ್ನಾಲ್ಕು ನೆನೆಸಿಟ್ಟ ಬಾದಾಮಿ ತಿನ್ನುವ ಮೂಲಕ ಆರೋಗ್ಯವೃದ್ಧಿಯ ಕಡೆ ಗಮನ ಹರಿಸಬೇಕು. ಪ್ರೊಟೀನ್, ಮೆಗ್ನೀಷಿಯಂ, ವಿಟಮಿನ್‌ ಇ, ನಾರಿನಂಶ ಹಾಗೂ ಅತ್ಯುತ್ತಮ ಕೊಬ್ಬು ಇದರಲ್ಲಿದ್ದು, ಇವೆಲ್ಲ ಪೋಷಕಾಂಶಗಳೂ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯಕ.

Pistachio

ಪಿಸ್ತಾದಲ್ಲೂ ಕೂಡಾ ಸಾಕಷ್ಟು ಉತ್ತಮ ಕೊಬ್ಬು ಹಾಗೂ ಇತರ ಪೋಷಕಾಂಶಗಳು ಹೇರಳವಾಗಿ ಇರುವುದರಿಂದ ಇದೂ ಕೂಡಾ ಮಹಿಳೆಯರಿಗೆ ಒಳ್ಳೆಯದು. ಆದರೆ, ಹಿತಮಿತವಾಗಿ ತಿನ್ನುವುದು ಒಳ್ಳೆಯದು.

ಕಪ್ಪು ಒಣದ್ರಾಕ್ಷಿ ಮಹಿಳೆಯರ ಆರೋಗ್ಯದ ದೃಷ್ಠಿಯಿಂದ ಅತ್ಯಂತ ಅವಶ್ಕಕ. ಇದು ಮಹಿಳೆಯರ ಆರೋಗ್ಯ ಸಮಸ್ಯೆಗಳಾದ ಋತುಚಕ್ರದಲ್ಲಿ ಏರುಪೇರು, ಅತಿಯಾದ ಋತುಸ್ರಾವ, ಪಿಸಿಒಡಿ ಹಾಗೂ ಋತುಚಕ್ರದ ಸಂಬಂಧೀ ಸಮಸ್ಯೆಗಳಿಗೆ ಬಹಳ ಒಳ್ಳೆಯದು. ನಿತ್ಯವೂ ಐದಾರು ದ್ರಾಕ್ಷಿಗಳನ್ನು ನೆನೆಸಿ ತಿನ್ನುವುದರಿಂದ ಮಹಿಳೆಯರಲ್ಲಿ ಕಾಡುವ ಅತೀವ ಸುಸ್ತು, ನಿತ್ರಾಣ, ಶಕ್ತಿಹೀನತೆ ಇತ್ಯಾದಿ ಸಮಸ್ಯೆಗಳೂ ಕ್ರಮೇಣ ದೂರವಾಗುವುದು.

ಖರ್ಜೂರದಲ್ಲಿ ಸಾಕಷ್ಟು ಕಬ್ಬಿಣಾಂಶ, ಪೊಟಾಶಿಯಂ, ನಾರಿನಂಶ, ಹಾಗೂ ಪ್ರೊಟೀನ್‌ ಇರುವುದರಿಂದ ಮಹಿಳೆಯರ ಆರೋಗ್ಯ ವೃದ್ಧಿಯಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಸುಸ್ತು, ಶಕ್ತಿಹೀನತೆ ಇತ್ಯಾದಿ ಸಮಸ್ಯೆಗಳಿಗೂ ಇದು ಒಳ್ಳೆಯದು. ಇದು ಮೂಳೆಗಳನ್ನು ಬಲಪಡಿಸುವ ಜೊತೆಗೆ, ನೈಸರ್ಗಿಕ ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ.

ಇದನ್ನೂ ಓದಿ: Bone Health: 40ರ ನಂತರ ಮೂಳೆಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Fortis Hospital: ಪಾರ್ಕಿನ್ಸನ್‌ ಕಾಯಿಲೆ ಚಿಕಿತ್ಸೆಗೆ ಪ್ರತ್ಯೇಕ ಕ್ಲಿನಿಕ್‌ ಆರಂಭಿಸಿದ ಫೋರ್ಟಿಸ್‌ ಆಸ್ಪತ್ರೆ

Fortis Hospital: ಪಾರ್ಕಿನ್ಸನ್‌ನಿಂದ ಉಂಟಾಗುವ ನರಮಂಡಲದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಥೆರಪಿಗಾಗಿ ಬೆಂಗಳೂರಿನ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಪಾರ್ಕಿನ್ಸನ್‌ ಮತ್ತು ಡೀಪ್‌ ಬ್ರೇನ್‌ ಸ್ಟಿಮುಲೇಷನ್‌ (ಡಿಬಿಎಸ್) ಎನ್ನುವ ಪ್ರತ್ಯೇಕ ಕ್ಲಿನಿಕ್‌ನ ಉದ್ಘಾಟನೆ ನಡೆದಿದೆ. ಈ ಕುರಿತ ವರದಿ ಇಲ್ಲಿದೆ.

VISTARANEWS.COM


on

Fortis Hospital Launches Deep Brain Stimulation DBS Clinic to Treat Parkinson Disease
Koo

ಬೆಂಗಳೂರು: ಪಾರ್ಕಿನ್ಸನ್‌ನಿಂದ ಉಂಟಾಗುವ ನರಮಂಡಲದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಥೆರಪಿಗಾಗಿ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ (Fortis Hospital) ಪಾರ್ಕಿನ್ಸನ್‌ ಮತ್ತು ಡೀಪ್‌ ಬ್ರೇನ್‌ ಸ್ಟಿಮುಲೇಷನ್‌ (ಡಿಬಿಎಸ್) ಎನ್ನುವ ಪ್ರತ್ಯೇಕ ಕ್ಲಿನಿಕ್‌ ಪ್ರಾರಂಭಿಸಲಾಗಿದೆ.

ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ರಾಜಕುಮಾರ್ ದೇಶಪಾಂಡೆ, ನೂತನ ಕ್ಲಿನಿಕ್‌ ಅನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದು ಸಾಕಷ್ಟು ಜನರು ವಯಸ್ಸಾದ ಬಳಿಕ ಪಾರ್ಕಿನ್ಸನ್‌ ಕಾಯಿಲೆಗೆ ತುತ್ತಾಗುತ್ತಿದ್ದಾರೆ, ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಫೋರ್ಟಿಸ್‌ ಆಸ್ಪತ್ರೆ ಈಗಾಗಲೇ ಪರಿಚಯಿಸಿದೆ, ಆದರೆ ಕೆಲವರಿಗೆ ಚಿಕಿತ್ಸೆಗಿಂತ ಹೆಚ್ಚಾಗಿ ಕೆಲವು ದೈಹಿಕ ಅಭ್ಯಾಸಗಳ ಮೂಲಕವೂ ಪಾರ್ಕಿನ್ಸನ್‌ನ ಲಕ್ಷಣಗಳಾದ ಕೈ-ಕಾಲು ನಡುಕ ಇತರೆ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಾಧ್ಯವಾಗಲಿದೆ. ಇದಕ್ಕಾಗಿಯೇ ಪ್ರತ್ಯೇಕ ಕ್ಲಿನಿಕ್‌ ತೆರೆದಿದ್ದೇವೆ. ಇದರ ಜತೆಗೆ, ಡೀಪ್‌ ಬ್ರೇನ್ ಸ್ಟಿಮ್ಯುಲೇಶನ್ (ಡಿಬಿಎಸ್‌) ಚಿಕಿತ್ಸೆಯೂ ದೊರೆಯಲಿದೆ. ಡೀಪ್‌ ಬ್ರೇನ್ ಸ್ಟಿಮ್ಯುಲೇಶನ್ ಪಾರ್ಕಿನ್ಸನ್‌ ಸಮಸ್ಯೆಗೆ ಚಿಕಿತ್ಸೆಯ ಭಾಗ ಎಂದು ವಿವರಿಸಿದರು.

ಇದನ್ನೂ ಓದಿ: Sharavathi Project: ಶರಾವತಿ ಜಲವಿದ್ಯುತ್ ಯೋಜನೆ; ಟೆಂಡರ್‌ ಪ್ರಶ್ನಿಸಿ ಎಲ್ & ಟಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ. ಮಾತನಾಡಿ, ಪಾರ್ಕಿನ್ಸನ್‌ ಕಾಯಿಲೆಯಿಂದ ಕೈ-ಕಾಲುಗಳಲ್ಲಿ ನಡುಕ, ತಲೆಯಲ್ಲಿ ನಡುಕ, ಸ್ನಾಯುಗಳ ಬಿಗಿತ, ಚಲನೆಯ ನಿಧಾನತೆ, ಖಿನ್ನತೆ ಮತ್ತು ಭಾವನಾತ್ಮಕ ಬದಲಾವಣೆಗಳು ಸೇರಿದಂತೆ ಸಾಕಷ್ಟು ಸಮಸ್ಯೆಗಳು ಕಂಡು ಬರುತ್ತವೆ. ಇಂತಹ ಕಾಯಿಲೆಗೆ ಕೆಲವೊಮ್ಮೆ ಚಿಕಿತ್ಸೆಗಿಂತ ಥೆರಪಿ ಮುಖ್ಯವಾಗಲಿದೆ.

ಹೀಗಾಗಿ ಡೀಪ್‌ ಬ್ರೇನ್‌ ಸ್ಟಿಮುಲೇಷನ್‌ ಥೆರಪಿಗೆ ಇಲ್ಲಿ ಅವಕಾಶ ನೀಡಲಾಗಿದೆ. ವಯಸ್ಸಾದವರು ಈ ರೀತಿಯ ಕಾಯಿಲೆ ಹೊಂದಿದ್ದರೆ, ಈ ಥೆರಪಿ ತೆಗೆದುಕೊಳ್ಳಬಹುದು. ಈ ಕ್ಲಿನಿಕ್‌ ವಾರದ ದಿನಗಳಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 3:00 ರವರೆಗೆ ತೆರೆದಿರಲಿದೆ. ಇಂದು ಉದ್ಘಾಟನೆಗೊಂಡ ಕ್ಲಿನಿಕ್‌ನಲ್ಲಿ ಮಾನಸಿಕ ಆರೋಗ್ಯ ತಜ್ಞರು ಮತ್ತು ಯೋಗ ತರಬೇತುದಾರರು, ಮಾನಸಿಕ ಯೋಗಕ್ಷೇಮ ಮತ್ತು ಯೋಗ ಅಭ್ಯಾಸಗಳ ಕುರಿತು ಸೆಷನ್‌ಗಳನ್ನು ನಡೆಯಲಿದೆ ಎಂದರು.

ಇದನ್ನೂ ಓದಿ: Multivitamin Pill: ಮಲ್ಟಿವಿಟಮಿನ್‌ ಮಾತ್ರೆಗಳ ಮೊರೆ ಹೋಗದೆ, ನೈಸರ್ಗಿಕವಾಗಿ ಪೋಷಣೆ ಪಡೆಯುವುದು ಹೇಗೆ?

ಕಾರ್ಯಕ್ರಮದಲ್ಲಿ ಫೋರ್ಟಿಸ್ ಆಸ್ಪತ್ರೆಯ ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ.ಗುರುಪ್ರಸಾದ್ ಹೊಸೂರ್ಕರ್, ಫೋರ್ಟಿಸ್ ಹಾಸ್ಪಿಟಲ್ಸ್ ಬೆಂಗಳೂರಿನ ಬಿಸಿನೆಸ್ ಹೆಡ್ ಅಕ್ಷಯ್ ಒಲೆಟಿ ಉಪಸ್ಥಿತರಿದ್ದರು.

Continue Reading

ಆರೋಗ್ಯ

Multivitamin Pill: ಮಲ್ಟಿವಿಟಮಿನ್‌ ಮಾತ್ರೆಗಳ ಮೊರೆ ಹೋಗದೆ, ನೈಸರ್ಗಿಕವಾಗಿ ಪೋಷಣೆ ಪಡೆಯುವುದು ಹೇಗೆ?

ನಾವು ಸೇವಿಸುವ ಎಲ್ಲವೂ ಸರಿಯಾದ ಮೂಲದಿಂದ ಬಂದ ಉತ್ತಮ ಪೋಷಣೆಯ ಮಾತ್ರೆಗಳೇ ಎಂಬ ಬಗ್ಗೆ ಗೊಂದಲಗಳು ಇದ್ದೇ ಇವೆ. ಆದರೆ, ನಾವು ಸರಿಯಾದ ಆಹಾರ ಸೇವನೆಯ ಮೂಲಕವೂ ನಮ್ಮ ದೇಹಕ್ಕೆ ಅಗತ್ಯವಾದ ಪೋಷಣೆಯನ್ನೂ ಆರೋಗ್ಯಯುತವಾದ ನೈಸರ್ಗಿಕ ಮಾರ್ಗದಲ್ಲಿಯೇ ಪಡೆದುಕೊಳ್ಳಬಹುದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ ನಿಮ್ಮ ಮಲ್ಟಿವಿಟಮಿನ್‌ ಮಾತ್ರೆಗಳಿಗಿಂತಲೂ (multivitamin pill) ಹೆಚ್ಚು ಪೋಷಣೆಯನ್ನು ಪಡೆಯಬಹುದು. ಈ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Multivitamin Pill
Koo

ಈಗ ಏನಿದ್ದರೂ ರೆಡಿಮೇಡ್‌ ಕಾಲ. ಎಲ್ಲವೂ ದಿಢೀರ್‌ ಆಗಬೇಕು. ಕಾಯುವುದಕ್ಕೆ, ಮಾಡುವುದಕ್ಕೆ ಯಾರಿಗೂ ಸಮಯವಿಲ್ಲ. ಅಡುಗೆಯಿಂದ ಹಿಡಿದು ಪೋಷಣೆಯವರೆಗೆ ನಮಗೆ ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್‌ ವಸ್ತುಗಳೇ ಬೇಕು. ಪ್ರೊಟೀನ್‌ಗಾಗಿ ಪ್ರೊಟೀನ್‌ ಮಿಕ್ಸ್‌ಗಳು, ಮಲ್ಟಿವಿಟಮಿನ್‌ ಮಾತ್ರೆಗಳು ಇತ್ಯಾದಿಗಳ ಸೇವನೆಯೂ ಸಹಜ ಎಂಬಷ್ಟು ಸಲೀಸಾಗಿದೆ. ಆದರೆ, ನಾವು ನಿತ್ಯವೂ ಸೇವಿಸುವ ಆಹಾರ ಮೂಲಗಳಲ್ಲೇ ನಾವು ಪೋಷಕಾಂಶಗಳನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ ಎಂಬುದು ವಿಪರ್ಯಾಸ. ಮಾರುಕಟ್ಟೆಯಲ್ಲೂ ವಿಧವಿಧವಾದ ಮಲ್ಟಿವಿಟಮಿನ್‌ಗಳು, ಪೋಷಣೆಯ ಡ್ರಿಂಕ್‌ಗಳೂ ಲಭ್ಯವಿರುವುದರಿಂದ ನಿತ್ಯದ ಪೋಷಣೆಯನ್ನು ಅವುಗಳ ಮೂಲಕವೇ ಸುಲಭವಾಗಿ ಪಡೆಯುವುದು ಬಹಳ ಮಂದಿಗೆ ಧಾವಂತದ ಜೀವನದಲ್ಲಿ ಅಭ್ಯಾಸವೂ ಆಗಿಬಿಟ್ಟಿದೆ. ಆದರೆ ಇವು ನಿಜಕ್ಕೂ, ಆಹಾರಗಳನ್ನು ಸೇವಿಸುವ ಮೂಲಕ ಪಡೆಯುವ ಪೋಷಣೆಯಂತೆ ಒಳ್ಳೆಯದನ್ನೇ ಮಾಡಬಲ್ಲವೇ? ನಾವು ಸೇವಿಸುವ ಎಲ್ಲವೂ ಸರಿಯಾದ ಮೂಲದಿಂದ ಬಂದ ಉತ್ತಮ ಪೋಷಣೆಯ ಮಾತ್ರೆಗಳೇ ಎಂಬ ಬಗ್ಗೆ ಗೊಂದಲಗಳು ಇದ್ದೇ ಇವೆ. ಆದರೆ, ನಾವು ಸರಿಯಾದ ಆಹಾರ ಸೇವನೆಯ ಮೂಲಕವೂ ನಮ್ಮ ದೇಹಕ್ಕೆ ಅಗತ್ಯವಾದ ಪೋಷಣೆಯನ್ನೂ ಆರೋಗ್ಯಯುತವಾದ ನೈಸರ್ಗಿಕ ಮಾರ್ಗದಲ್ಲಿಯೇ ಪಡೆದುಕೊಳ್ಳಬಹುದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ ನಿಮ್ಮ ಮಲ್ಟಿವಿಟಮಿನ್‌ ಮಾತ್ರೆಗಳಿಗಿಂತಲೂ (multivitamin pill) ಹೆಚ್ಚು ಪೋಷಣೆಯನ್ನು ಪಡೆಯಬಹುದು ಎಂಬುದನ್ನು ನೋಡೋಣ.

Yellow capsicum

ಹಳದಿ ಕ್ಯಾಪ್ಸಿಕಂ

ಹಳದಿ ಬಣ್ಣದ ಕ್ಯಾಪ್ಸಿಕಂ ವಿಟಮಿನ್‌ ಸಿ ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರಗಳ ಪೈಕಿ ಬಹುಮುಖ್ಯವಾದುದು. ವಿಟಮಿನ್‌ ಸಿ ನೀರಿನಲ್ಲಿ ಕರಗಬಲ್ಲ ಹಾಗೂ ದೇಹ ಹೆಚ್ಚುವರಿಯನ್ನು ಶೇಖರಿಸಿ ಇಡಲಾಗದ ಪೋಷಕಾಂಶವಾದ್ದರಿಂದ ಇದು ನಿತ್ಯವೂ ನಮ್ಮ ದೇಹಕ್ಕೆ ಬೇಕಾದ ಪೋಷಣೆ. ವಿಟಮಿನ್‌ ಸಿ ಕೊರತೆಯಿಂದ ಸ್ಕರ್ವಿ ಸೇರಿದಂತೆ ತಲೆಸುತ್ತು, ಸುಸ್ತು, ಚರ್ಮದಲ್ಲಿ ಕಜ್ಜಿ-ಗುಳ್ಳೆಗಳು, ಮಾಂಸಖಂಡಗಳಲ್ಲಿ ಊತ ಹಾಗೂ ರಕ್ತಸ್ರಾವದಂತಹ ಸಮಸ್ಯೆಗಳೂ ಬರಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ವಿಟಮಿನ್‌ ಸಿ ಬೇಕೇಬೇಕು. ಒಂದು ಹಳದಿ ಕ್ಯಾಪ್ಸಿಕಂನಲ್ಲಿ 75-90 ಎಂಜಿಗಳಷ್ಟು ವಿಟಮಿನ್‌ ಸಿ ಇರುವುದರಿಂದ ಹಲವು ಹಲವು ಸಮಸ್ಯೆಗಳನ್ನು ಇದರ ಸೇವನೆಯಿಂದಲೇ ದೂರ ಇರಿಸಬಹುದಾಗಿದೆ.

Green vegetables

ಹಸಿರು ತರಕಾರಿಗಳು

ಹಸಿರು ಬಣ್ಣದ ತರಕಾರಿಗಳಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳಿರುತ್ತವೆ. ಪಾಲಕ್‌, ಬಸಳೆ, ನುಗ್ಗೆಸೊಪ್ಪು, ಕ್ಯಾಬೇಜ್‌ ಇತ್ಯಾದಿಗಳಲ್ಲಿ ಹೆಚ್ಚು ವಿಟಮಿನ್‌ ಇರುತ್ತದೆ. ವಿಟಮಿನ್‌ ಎ, ಕೆ, ಇ, ಸಿ, ಬೀಟಾ ಕೆರೋಟಿನ್‌, ಫೋಲೇಟ್‌, ವಿಟಮಿನ್‌ ಬಿ1, ಬಿ2, ಬಿ5, ಬಿ3 ಹಾಗೂ ಬಿ6ಗಳಿಗಾಗಿ ಈ ಹಸಿರು ಬಣ್ಣದ ತರಕಾರಿ ಸೊಪ್ಪುಗಳನ್ನು ಆಗಾಗ ಸೇವಿಸಿ.

Mackerel fish on ice

ಮೀನು

ಒಮೆಗಾ 3 ಫ್ಯಾಟಿ ಆಸಿಡ್‌ಗಳಿಗಾಗಿ ಮೀನಿನ ಸೇವನೆ ಬಹಳ ಮುಖ್ಯ. ಮೀನಿನಲ್ಲಿ ವಿಟಮಿನ್‌ ಬಿ೨, ವಿಟಮಿನ್‌ ಡಿ, ಕ್ಯಾಲ್ಶಿಯಂ, ಕಬ್ಬಿಣಾಂಶ, ಝಿಂಕ್‌, ಪಾಸ್ಪರಸ್‌, ಮೆಗ್ನೀಶಿಯಂ, ಅಯೋಡಿನ್‌, ಪೊಟಾಶಿಯಂ ಇವೆಲ್ಲ ಖನಿಜಾಂಶಗಳೂ ಇರುವುದರಿಂದ ಇದು ಅತ್ಯಂತ ಆರೋಗ್ಯಕರ.

Boiled Eggs

ಮೊಟ್ಟೆ

ಪ್ರೊಟೀನ್‌ಗಾಗಿ ರೆಡಿಮೇಡ್‌ ಡ್ರಿಂಕ್‌ಗಳನ್ನು ಕುಡಿಯುವ ಬದಲು ಮೊಟ್ಟೆ ಸೇವಿಸಿದರೆ ಸಾಕು. ಅತ್ಯಂತ ಸರಳ ಹಾಗೂ ಸುಲಭವಾದ ವಿಧಾನವಿದು. ಮೊಟ್ಟೆಯಲ್ಲಿ ಪ್ರೊಟೀನ್‌, ವಿಟಮಿನ್‌ ಎ, ಬಿ, ಬಿ೨, ಬಿ12 ಹಾಗೂ ವಿಟಮಿನ್‌ ಡಿ ಹೇರಳವಾಗಿದೆ. ಅಯೋಡಿನ್‌ ಹಾಗೂ ಸೆಲೆನಿಯಮ್‌ ಕೂಡಾ ಇವೆ.

Health Tips about curd

ಮೊಸರು

ಕ್ಯಾಲ್ಶಿಯಂ ದೇಹಕ್ಕೆ ಬೇಕೆಂದರೆ, ಮೊಸರು ತಿನ್ನುವುದನ್ನು ಬಿಡಬೇಡಿ. ಕ್ಯಾಲ್ಶಿಯಂ, ವಿಟಮಿನ್‌ ಬಿ, ಬಿ12 ಇತ್ಯಾದಿಗಳ ಆಗರ ಮೊಸರು. ಹಾಗೂ ಹಾಲಿನ ಉತ್ಪನ್ನಗಳು. ಹಾಗಾಗಿ, ಹಾಲು, ಮೊಸರು, ಪನೀರ್‌ನಂತಹ ಆಹಾರಗಳನ್ನು ಆಗಾಗ ಸೇವಿಸಿ. ದೇಹಕ್ಕೆ ನಿತ್ಯವೂ ಕ್ಯಾಲ್ಶಿಯಂ ಕೊರತೆಯಾಗದಂತೆ ನೋಡಿಕೊಳ್ಳಿ. ನೆನಪಿಡಿ, ಇವಿಷ್ಟಲ್ಲದೆ, ಒಣಹಣ್ಣುಗಳು, ಒಣ ಬೀಜಗಳು, ಧಾನ್ಯ ಬೇಳೆ ಕಾಳುಗಳು, ತರಕಾರಿ ಹಣ್ಣುಗಳು ಇತ್ಯಾದಿಗಳಿಂದ ಸಮೃದ್ಧವಾದ ಊಟವನ್ನು ನೀವು ನಿತ್ಯವೂ ಮಾಡುತ್ತಿದ್ದರೆ, ಖಂಡಿತವಾಗಿಯೂ ಮಲ್ಟಿ ವಿಟಮಿನ್‌ಗಳ ಸೇವನೆಯ ಅಗತ್ಯವೂ ಬಾರದು.

ಇದನ್ನೂ ಓದಿ: Sleeping Tips: ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು? ಇದು ಗಂಭೀರ ವಿಷಯ!

Continue Reading

ಆರೋಗ್ಯ

Leg Swelling: ಪ್ರಯಾಣಿಸುವಾಗ ನಮ್ಮ ಕಾಲುಗಳು ಊದಿಕೊಳ್ಳುವುದೇಕೆ?

ಪ್ರಯಾಣಿಸುವಾಗ, ಕುಳಿತಲ್ಲಿಂದ ಕದಲದಿದ್ದಾಗ, ರಕ್ತ ಪರಿಚಲನೆಗೆ ಅಗತ್ಯವಾದ ದೈಹಿಕ ಚಲನೆಗಳು ಶರೀರದಲ್ಲಿ ಇರುವುದಿಲ್ಲ. ಇದರಿಂದ ನೀರಿನಂಶ ಕಾಲಿನ ಭಾಗದಲ್ಲಿ ತುಂಬಿಕೊಳ್ಳುತ್ತದೆ. ಇದರಿಂದ ಕಾಲುಗಳು ದಪ್ಪವಾದಂತೆ, ಊದಿಕೊಂಡಂತೆ ಕಾಣಬಹುದು. ಸಾಮಾನ್ಯವಾಗಿ ಇದಕ್ಕೆ ಸಿಕ್ಕಾಪಟ್ಟೆ ಚಿಂತೆ ಮಾಡುವ ಅಗತ್ಯವಿಲ್ಲದಿದ್ದರೂ, ಕೆಲವೊಮ್ಮೆ ಕಾಲು ಊದಿಕೊಳ್ಳುವುದರಲ್ಲಿ ಅಪಾಯದ ಮುನ್ಸೂಚನೆಗಳನ್ನು ಕಾಣಬಹುದು. ಏನದು? ಒಂದೆಡೆ ಹೆಚ್ಚು ಸಮಯ ಕೂತಿದ್ದರೆ ಕಾಲುಗಳು ಊದಿಕೊಳ್ಳುವುದೇಕೆ? ಈ ಬಗ್ಗೆ (Leg Swelling) ತಿಳಿದುಕೊಳ್ಳೋಣ.

VISTARANEWS.COM


on

Leg Swelling
Koo

ಪ್ರಯಾಣ ಮಾಡುತ್ತಿದ್ದೀರಿ, ಬಸ್ಸು, ಕಾರು, ವಿಮಾನ… ಯಾವುದೋ ಒಂದರಲ್ಲಿ. ನಾಲ್ಕಾರು ತಾಸುಗಳ ದಾರಿಯಲ್ಲಿ ಕೂತಲ್ಲೇ ಕೂತಿರುತ್ತೀರಿ. ನಿಮ್ಮ ಗಮ್ಯ ತಲುಪಿದ ಮೇಲೆ ನೋಡಿದರೆ, ಕಾಲುಗಳು ಊದಿಕೊಂಡಂತಿವೆ. ʻಅರೆ! ಏನಾಯ್ತು… ಚೆನ್ನಾಗೇ ಇತ್ತಲ್ಲ ಹೊರಡುವಾಗʼ ಎಂದು ಗಾಬರಿ ಬೀಳುತ್ತೀರಿ. ಇದು ನಿಮಗಷ್ಟೇ ಅಲ್ಲ, ಬಹಳಷ್ಟು ಮಂದಿಗೆ ಅನುಭವಕ್ಕೆ ಬಂದಿರಬಹುದು. ಒಂದೆಡೆ ದೀರ್ಘಕಾಲ ಕುಳಿತಿದ್ದರೆ ಕಾಲುಗಳು ಊದಿಕೊಂಡಂತಾಗಿ, ʻಏನಾಯ್ತಪ್ಪ!ʼ ಎಂದು ಚಿಂತಿಸುವಂತಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ ಸಿಕ್ಕಾಪಟ್ಟೆ ಚಿಂತೆ ಮಾಡುವ ಅಗತ್ಯವಿಲ್ಲದಿದ್ದರೂ, ಕೆಲವೊಮ್ಮೆ ಕಾಲು ಊದಿಕೊಳ್ಳುವುದರಲ್ಲಿ ಅಪಾಯದ ಮುನ್ಸೂಚನೆಗಳನ್ನು ಕಾಣಬಹುದು. ಏನದು? ಒಂದೆಡೆ ಹೆಚ್ಚು ಸಮಯ ಕೂತಿದ್ದರೆ ಕಾಲುಗಳು (Leg Swelling) ಊದಿಕೊಳ್ಳುವುದೇಕೆ?

Middle aged woman suffer from Arthritis,Patellar Tendinitis

ಹೀಗೇಕಾಗುತ್ತದೆ?

ಇದಕ್ಕೆ ಹಲವು ಕಾರಣಗಳು ಇರಬಹುದು. ಆದರೆ ಕಾಲುಗಳಲ್ಲಿ ನೀರು ತುಂಬಿಕೊಳ್ಳುವುದು ಎಲ್ಲಕ್ಕಿಂತ ಪ್ರಮುಖ ಕಾರಣ. ಕುಳಿತಲ್ಲಿಂದ ಕದಲದಿದ್ದಾಗ, ರಕ್ತ ಪರಿಚಲನೆಗೆ ಅಗತ್ಯವಾದ ದೈಹಿಕ ಚಲನೆಗಳು ಶರೀರದಲ್ಲಿ ಇರುವುದಿಲ್ಲ. ಇದರಿಂದ ನೀರಿನಂಶ ಕಾಲಿನ ಭಾಗದಲ್ಲಿ ತುಂಬಿಕೊಳ್ಳುತ್ತದೆ. ಇದರಿಂದ ಕಾಲುಗಳು ದಪ್ಪವಾದಂತೆ, ಕೆಲವೊಮ್ಮೆ ಕೈಗಳು ಸಹ ಊದಿಕೊಂಡಂತೆ ಕಾಣಬಹುದು. ಇದಲ್ಲದೆ ಇನ್ನೂ ಕೆಲವು ಕಾರಣಗಳು ಈ ತೊಂದರೆಯ ಹಿಂದಿರುವುದಕ್ಕೆ ಸಾಧ್ಯವಿದೆ.

ಎತ್ತರದ ಜಾಗದಲ್ಲಿ ಪ್ರಯಾಣ ಮಾಡುತ್ತಿರುವಾಗ ಅಲ್ಲಿನ ಗಾಳಿಯ ಒತ್ತಡ ಮತ್ತು ಆಮ್ಲಜನಕದ ಲಭ್ಯತೆ ವ್ಯತ್ಯಾಸವಾದಾಗಲೂ ಅದು ದೇಹದ ಮೇಲೆ ಪರಿಣಾಮ ಬೀರುತ್ತದೆ. ಆಗಲೂ ಕಾಲುಗಳಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆಯಿದೆ. ಅದಕ್ಕೆ ಸರಿಯಾಗಿ, ಹೆಚ್ಚು ಚಲನೆಯಿಲ್ಲದಂತೆ ಕುಳಿತಿದ್ದಾಗಲೂ ಇದರ ಪರಿಣಾಮ ಇನ್ನೂ ಹೆಚ್ಚಾದಂತೆ, ಪಾದ, ಕಾಲುಗಳಲ್ಲಿ ನೀರು ತುಂಬಿದಂತೆ ಕಾಣುತ್ತದೆ.

ಪ್ರಯಾಣದಲ್ಲಿ ಹೆಚ್ಚು ನೀರು ಕುಡಿಯದಿರುವುದು ಇದಕ್ಕೆ ಮತ್ತೊಂದು ಕಾರಣವಾಗಿರಬಹುದು. ಹೆಚ್ಚು ನೀರು ಕುಡಿದರೆ ಪದೇಪದೆ ಬಾತ್‌ರೂಂಗಳನ್ನು ಹುಡುಕಬೇಕು ಎನ್ನುವ ಕಾರಣಕ್ಕಾಗಿ ಬಹಳಷ್ಟು ಮಂದಿ ಪ್ರಯಾಣದ ಸಮಯದಲ್ಲಿ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದ ನೀರಿನ ಲಭ್ಯತೆ ಕಡಿಮೆಯಿದೆ ಎಂಬ ಭಾವ ದೇಹಕ್ಕೆ ಬರುತ್ತಿದ್ದಂತೆ, ಇರುವ ನೀರನ್ನು ಹಿಡಿದಿಟ್ಟುಕೊಳ್ಳಲು ಶರೀರ ಪ್ರಯತ್ನಿಸುತ್ತದೆ. ಆಗಲೂ ಕಾಲುಗಳಲ್ಲಿ ನೀರು ತುಂಬಿಕೊಂಡಂತಾಗುತ್ತದೆ. ಬಿಗಿಯಾದ ಉಡುಪುಗಳು, ಶೂಗಳನ್ನು ಧರಿಸಿ ಪ್ರಯಾಣಿಸುವುದು ಕೆಲವೊಮ್ಮೆ ಇದಕ್ಕೆ ಕಾರಣವಾಗುತ್ತದೆ. ಮೊದಲೇ ಚಲನೆಯಿಲ್ಲದೆ ಕುಳಿತಂಥ ಸ್ಥಿತಿಯಲ್ಲಿ ರಕ್ತಪರಿಚಲನೆ ಕಡಿಮೆಯೇ. ಅದರಲ್ಲಿ ಬಿಗಿಯಾದ ಧಿರಿಸುಗಳನ್ನು ತೊಟ್ಟರೆ, ಇನ್ನಷ್ಟು ತೊಂದರೆಯಾಗುತ್ತದೆ.

ಡಿವಿಟಿ

ಇವೆಲ್ಲಕ್ಕಿಂತ ಹೊರತಾಗಿ ಇನ್ನೊಂದು ಮುಖ್ಯ ಕಾರಣ ಕಾಲಿನ ಊತಕ್ಕೆ ಕಾರಣವಾಗಬಹುದು. ಡೀಪ್‌ ವೈಯ್ನ್‌ ಥ್ರೊಂಬೊಸಿಸ್‌ ಅಥವಾ ಡಿವಿಟಿ ಎಂದೇ ಕರೆಯಲಾಗುತ್ತದೆ ಈ ಕಾರಣವನ್ನು. ಕಾಲಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದಂತಾಗುತ್ತದೆ. ಇದರಿಂದ ಕಾಲು ದಪ್ಪವಾಗುತ್ತದೆ. ಹೀಗೆ ರಕ್ತ ಹೆಪ್ಪುಗಟ್ಟುವಂಥ ದೇಹಸ್ಥಿತಿ ಇದ್ದವರು ಪ್ರಯಾಣದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಈ ಸ್ಥಿತಿಯನ್ನು ತ್ವರಿತವಾಗಿ ಗ್ರಹಿಸಿ, ವೈದ್ಯರಲ್ಲಿ ಚಿಕಿತ್ಸೆಯನ್ನೂ ಪಡೆಯಬೇಕು. ಡಿವಿಟಿ ಇದ್ದರೇನಾಗುತ್ತದೆ? ಯಾವ ಲಕ್ಷಣಗಳನ್ನು ಗ್ರಹಿಸಬೇಕು?

ಲಕ್ಷಣಗಳು

ಊತ ಒಂದೇ ಕಾಲಿನಲ್ಲಿ ಕಾಣಬಹುದು. ಸಮಸ್ಯೆ ಇರುವ ಕಾಲು, ಇನ್ನೊಂದು ಕಾಲಿಗಿಂತ, ಭಾರವಾದ ಅನುಭವ ಆಗಬಹುದು. ಹೆಪ್ಪುಗಟ್ಟಿದ ಭಾಗದಲ್ಲಿ ನೋವು, ಉರಿ ಉಂಟಾದೀತು. ನಡೆದಾಡುವಾಗ, ನಿಂತಾಗ ಈ ನೋವು ಇನ್ನೂ ಹೆಚ್ಚು ಅನುಭವಕ್ಕೆ ಬರುತ್ತದೆ. ರಕ್ತ ಗರಣೆಯಾದಲ್ಲಿ ಚರ್ಮ ಕೆಂಪು, ನೀಲಿಯಂಥ ಗಾಢ ಬಣ್ಣದಲ್ಲಿ ಇರಬಹುದು, ಜೊತೆಗೆ ಚರ್ಮ ಬಿಸಿಯೂ ಅನಿಸಬಹುದು. ಆದರೆ ದೇಹದ ಉಳಿದೆಲ್ಲ ಭಾಗಗಳಲ್ಲಿ ಚರ್ಮ ಮಾಮೂಲಿ ಉಷ್ಣತೆಯಲ್ಲೇ ಇರುತ್ತದೆ. ರಕ್ತ ಹೆಪ್ಪುಗಟ್ಟಿದ ರಕ್ತನಾಳಗಳು ಉಬ್ಬಿದಂತೆ, ಎದ್ದುಬಂದಂತೆ ಕಾಣಬಹುದು. ಕಾಲಿನಲ್ಲಿ ಈ ಲಕ್ಷಣಗಳು ಕಂಡರೆ, ಉದಾಸೀನ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ಉಸಿರಾಟಕ್ಕೆ ತೊಂದರೆಯಾದರೆ ಶೀಘ್ರ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ.

Ankle, Pain

ಮುನ್ನೆಚ್ಚರಿಕೆ

ಡಿವಿಟಿ ಇರುವವರು ದೀರ್ಘ ಪ್ರಯಾಣಕ್ಕೆ ಮುಂಚಿತವಾಗಿ ವೈದ್ಯರಲ್ಲಿ ಸಲಹೆ ಕೇಳುವುದು ಸೂಕ್ತ. ಅಂಥ ತೊಂದರೆಗಳಿಲ್ಲದೆ, ನೀರು ತುಂಬಿದಂತಾಗಿ ಕಾಲು ಊದಿಕೊಳ್ಳುವವರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗದುಕೊಳ್ಳುವುದು ಒಳ್ಳೆಯದು. ಮೊದಲಿಗೆ, ದೀರ್ಘ ಪ್ರಯಾಣಕ್ಕೆ ಹಗುರವಾದ, ಸೆಡಿಲವಾದ, ಆರಾಮದಾಯಕ ವಸ್ತ್ರಗಳಿರಲಿ. ಬಿಗಿಯಾದ ಪಾದರಕ್ಷೆಗಳು ಬೇಡ, ಬೇಕೆಂದಾಗ ತೆಗೆಯುವಂಥ ಪಾದರಕ್ಷೆಗಳಲ್ಲಿ ಧರಿಸಿ. ಒಂದೇ ರೀತಿಯಲ್ಲಿ ಕಾಲುಗಳನ್ನು ನೇತಾಡಿಸುವ ಬದಲು, ಎತ್ತಿಟ್ಟುಕೊಳ್ಳಲು ಸಾಧ್ಯವೇ ಪರಿಶೀಲಿಸಿ. ಪ್ರಯಾಣದ ಸಂದರ್ಭದಲ್ಲಿ ಸಾಕಷ್ಟು ನೀರು ಕುಡಿಯಿರಿ. ಆಲ್ಕೊಹಾಲ್‌ ಮತ್ತು ಕೆಫೇನ್‌ ಸಮಸ್ಯೆಯನ್ನು ಹೆಚ್ಚಿಸುತ್ತವೆ, ಜೋಕೆ. ದೀರ್ಘ ಪ್ರಯಾಣದ ನಡುವೆ ಸಾಕಷ್ಟು ವಿರಾಮ ತೆಗೆದುಕೊಳ್ಳಿ. ಪ್ರತಿ ತಾಸಿಗೊಮ್ಮೆ ನಾಲ್ಕಾರು ನಿಮಿಷ ಓಡಾಡಿ. ಚೆನ್ನಾಗಿ ನೀರು ಕುಡಿದು, ಬಾತ್‌ರೂಮ್‌ ವಿರಾಮ ತೆಗೆದುಕೊಳ್ಳುವುದು ಹೆಚ್ಚು ಸೂಕ್ತ.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

Continue Reading

ದೇಶ

Covishield Vaccine: ಕೋವಿಡ್‌ ಲಸಿಕೆಯಿಂದ ಬರುತ್ತೆ ರಕ್ತ ಹೆಪ್ಪುಗಟ್ಟೋ ಕಾಯಿಲೆ! ವಿವರ ನಿಮಗೆ ತಿಳಿದಿರಲಿ

Covishield Vaccine: ಕೋವಿಶೀಲ್ಡ್, ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಲಸಿಕೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಅಪರೂಪದ ಸಂದರ್ಭಗಳಲ್ಲಿ ಅದು ಟಿಟಿಎಸ್‌ ಸ್ಥಿತಿಗೆ ಕಾರಣವಾಗಬಹುದು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಲಸಿಕೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ನೀಡಲಾಗಿದೆ.

VISTARANEWS.COM


on

covishield vaccine
Koo

ಹೊಸದಿಲ್ಲಿ: ಬ್ರಿಟಿಷ್ ಔಷಧೀಯ ದೈತ್ಯ ಕಂಪನಿ ಅಸ್ಟ್ರಾಜೆನೆಕಾ (AstraZeneca), ತನ್ನ ಕೋವಿಡ್-19 (Covid 19) ಲಸಿಕೆ ಕೋವಿಶೀಲ್ಡ್ (Covishield Vaccine)‌ ಇದು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕಂಪನಿಯ ವಿರುದ್ಧ ದಾಖಲಾಗಿರುವ ಒಂದು ಮೊಕದ್ದಮೆಯ ಸಂದರ್ಭದಲ್ಲಿ ಇದನ್ನು ಒಪ್ಪಿಕೊಳ್ಳಲಾಗಿದೆ.

ಈ ಮೊಕದ್ದಮೆಯಲ್ಲಿ ಲಸಿಕೆಗೆ ಸಂಬಂಧಿಸಿ ಗಂಭೀರ ದೈಹಿಕ ಹಾನಿ ಮತ್ತು ಸಾವುಗಳನ್ನು ಆರೋಪಿಸಲಾಗಿದೆ. ಕೋವಿಶೀಲ್ಡ್, ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಲಸಿಕೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಅಪರೂಪದ ಸಂದರ್ಭಗಳಲ್ಲಿ ಅದು ಟಿಟಿಎಸ್‌ ಸ್ಥಿತಿಗೆ ಕಾರಣವಾಗಬಹುದು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಲಸಿಕೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ನೀಡಲಾಗಿದೆ.

ಟಿಟಿಎಸ್ ಎಂದರೇನು?

ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಜೊತೆಗಿನ ಥ್ರಂಬೋಸಿಸ್ ಅಪರೂಪದ ಸ್ಥಿತಿಯಾಗಿದ್ದು, ದೇಹದಲ್ಲಿನ ಅಸಾಮಾನ್ಯ ಸ್ಥಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಪ್ಲೇಟ್‌ಲೆಟ್‌ಗಳು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಸಣ್ಣ ಕೋಶಗಳು. ಆದ್ದರಿಂದ ಅವು ತುಂಬಾ ಕಡಿಮೆ ಇರುವುದು ಅಪಾಯಕಾರಿ.

ಅಡೆನೊವೈರಲ್ ವೆಕ್ಟರ್ COVID-19 ಲಸಿಕೆಗಳನ್ನು ಪಡೆದ ಜನರಲ್ಲಿ ಈ ಸ್ಥಿತಿಯನ್ನು ಗಮನಿಸಲಾಗಿದೆ. ಉದಾಹರಣೆಗೆ Vaxzevria, Covishield (AstraZeneca) ಮತ್ತು Johnson & Johnson/Janssen COVID-19 ಲಸಿಕೆ ಪಡೆದವರಲ್ಲಿ. ದೇಹದ ರೋಗನಿರೋಧಕ ವ್ಯವಸ್ಥೆಯು ಲಸಿಕೆಗೆ ಪ್ರತಿಕ್ರಿಯಿಸಿ, ರಕ್ತದ ಹೆಪ್ಪುಗಟ್ಟುವಿಕೆಯಲ್ಲಿ ಒಳಗೊಂಡಿರುವ ಪ್ರೋಟೀನ್ ಮೇಲೆ ದಾಳಿ ಮಾಡುವ ಪ್ರತಿಕಾಯಗಳನ್ನು ತಯಾರಿಸುವುದರಿಂದ TTS ಸಂಭವಿಸುತ್ತದೆ.

TTS ಅನ್ನು 2 ಹಂತಗಳಾಗಿ ವರ್ಗೀಕರಿಸಲಾಗಿದೆ.

ಹಂತ 1

  • ಅಪರೂಪದ ರಕ್ತ ಹೆಪ್ಪುಗಟ್ಟುವಿಕೆ, ಮೆದುಳು ಅಥವಾ ಕರುಳಿನಲ್ಲಿ, ಕೆಲವೊಮ್ಮೆ ಕಾಲುಗಳು ಅಥವಾ ಶ್ವಾಸಕೋಶಗಳಲ್ಲಿ.
  • ಕಡಿಮೆ ಪ್ಲೇಟ್ಲೆಟ್ ಎಣಿಕೆ (ಪ್ರತಿ ಮೈಕ್ರೋಲೀಟರ್‌ಗೆ 150,000ಕ್ಕಿಂತ ಕಡಿಮೆ).
  • ಧನಾತ್ಮಕ PF4 ವಿರೋಧಿ ELISA ಪರೀಕ್ಷೆಗಳು ರೋಗನಿರ್ಣಯವನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ.
  • ಹಂತ 1 ಪ್ರಕರಣಗಳು ಸಾಮಾನ್ಯವಾಗಿ ಹೆಚ್ಚು ತೀವ್ರವಾಗಿರುತ್ತವೆ ಮತ್ತು ಅಪಾಯಕಾರಿಯಾಗಿರುತ್ತವೆ.
  • ಇದು ಯುವ ಜನರಲ್ಲಿ ಹೆಚ್ಚು ಸಾಮಾನ್ಯವಾಗಿದೆ.

ಹಂತ 2

  • ಕಾಲುಗಳು ಅಥವಾ ಶ್ವಾಸಕೋಶಗಳಲ್ಲಿರುವಂತೆ ಸಾಮಾನ್ಯ ರಕ್ತ ಹೆಪ್ಪುಗಟ್ಟುವಿಕೆ.
  • ಕಡಿಮೆ ಪ್ಲೇಟ್ಲೆಟ್ ಎಣಿಕೆ (ಪ್ರತಿ ಮೈಕ್ರೋಲೀಟರ್‌ಗೆ 150,000ಕ್ಕಿಂತ ಕಡಿಮೆ).
  • ರೋಗನಿರ್ಣಯಕ್ಕೆ ಧನಾತ್ಮಕ PF4 ELISA ಪರೀಕ್ಷೆ ಅಗತ್ಯ.

ರೋಗಲಕ್ಷಣಗಳು

TTSನ ಲಕ್ಷಣಗಳು ತೀವ್ರವಾದ ತಲೆನೋವು, ಹೊಟ್ಟೆ ನೋವು, ಕಾಲುಗಳಲ್ಲಿ ಊತ, ಉಸಿರಾಟದ ತೊಂದರೆ, ಚಿಂತನೆಯಲ್ಲಿ ಸಮಸ್ಯೆ, ದೇಹದ ಕಂಪನಗಳು. ಲಸಿಕೆ ಪಡೆದ ನಂತರ ಯಾರಲ್ಲಾದರೂ ಈ ಚಿಹ್ನೆಗಳು ಕಂಡುಬಂದರೆ ಅವರು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

Continue Reading
Advertisement
Kantesh
ಪ್ರಮುಖ ಸುದ್ದಿ12 mins ago

Kanthesh : ಅಶ್ಲೀಲ ವಿಡಿಯೊ ಪ್ರಕಟಿಸದಂತೆ ಕೋರ್ಟ್​​ನಿಂದ ನಿರ್ಬಂಧ ತಂದ ಈಶ್ವರಪ್ಪ ಪುತ್ರ ಕಾಂತೇಶ್​​

Election Commission
Lok Sabha Election 202420 mins ago

Election Commission: ಜಮ್ಮು & ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಕ್ಷೇತ್ರದ ಮತದಾನ ಮುಂದೂಡಿಕೆ; ಹೊಸ ವೇಳಾಪಟ್ಟಿ ಇಂತಿದೆ

Hassan Pen drive Case
ಪ್ರಮುಖ ಸುದ್ದಿ24 mins ago

Hassan Pen Drive Case: ಪೆನ್‌ಡ್ರೈವ್‌ನಲ್ಲಿ ಅಶ್ಲೀಲ ವಿಡಿಯೊ ಅಪ್‌ಲೋಡ್‌ ಆಗಿದ್ದು ವಿದೇಶದಲ್ಲಿ! ದುಬೈನಲ್ಲಿ ನಡೆದಿದ್ದೇನು?

IPL 2024
ಪ್ರಮುಖ ಸುದ್ದಿ36 mins ago

IPL 2024 : ಅತಿ ವೇಗದ ಬೌಲರ್​ ಮಾಯಾಂಕ್​ ಯಾದವ್​ಗೆ ಮತ್ತೆ ಗಾಯ?

labour Day
ಪ್ರಮುಖ ಸುದ್ದಿ2 hours ago

Labour Day : ಮೇ 1ರಂದೇ ಕಾರ್ಮಿಕ ದಿನ ಆಚರಿಸುವುದು ಯಾಕೆ? ರಜೆ ಕೊಡಲು ಶುರು ಮಾಡಿದ್ದು ಯಾವಾಗ?

Parliament Flashback
Lok Sabha Election 20242 hours ago

Parliament Flashback: 1996ರಲ್ಲಿ ಬಿಜೆಪಿ ಮೊದಲ ಬಾರಿ ಕೇಂದ್ರದಲ್ಲಿ ಸರ್ಕಾರ ನಡೆಸಿದ್ದು ಹೇಗೆ?

Viral Video
ವೈರಲ್ ನ್ಯೂಸ್2 hours ago

Viral News: ಸೆಕೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಕಾಪಾಡಲು ಶಿಕ್ಷಕರ ಸೂಪರ್‌ ಐಡಿಯಾ; ಇಲ್ಲಿದೆ ವಿಡಿಯೊ

Prime Minister Narendra Modi wrote a letter to former CM Basavaraj Bommai
ಕರ್ನಾಟಕ2 hours ago

Lok Sabha Election 2024: ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಪ್ರಧಾನಿ ಮೋದಿ; ಕೊಟ್ಟ ಟಾಸ್ಕ್‌ ಏನು?

Labour Day 2024
ದೇಶ2 hours ago

Labour Day 2024: ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳಿವು

State government conspiracy behind Prajwal Hassan Pen Drive Case says HD Kumaraswamy
ಕ್ರೈಂ2 hours ago

Hassan Pen Drive Case: ಪ್ರಜ್ವಲ್‌ಗೆ ಕಾಂಗ್ರೆಸ್‌ ಸರ್ಕಾರದಿಂದಲೇ ಖೆಡ್ಡಾ? ಏನಿದು ಹಕೀಕತ್ತು? ಮಾಜಿ ಸಿಎಂ ಗರಂ ಆಗಿದ್ದೇಕೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ18 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20241 day ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 day ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌