World Lung Day: ಶ್ವಾಸಕೋಶದ ಸಮಸ್ಯೆ ಉಂಟಾಗದಿರಲು ಹೀಗೆ ಮಾಡಿ Vistara News

ಆರೋಗ್ಯ

World Lung Day: ಶ್ವಾಸಕೋಶದ ಸಮಸ್ಯೆ ಉಂಟಾಗದಿರಲು ಹೀಗೆ ಮಾಡಿ

ದೇಹದ ಉಳಿದೆಲ್ಲ ಅಂಗಗಳಿಗೆ ಅನ್ವಯಿಸುವ ಬಹಳಷ್ಟು ನಿಯಮಗಳು ನಮ್ಮ ಪುಪ್ಪುಸಗಳಿಗೂ ಅನ್ವಯಿಸುತ್ತವೆ. ಸಮತೋಲಿತವಾದ ಆಹಾರ ಶ್ವಾಸಕೋಶಗಳ (World Lung Day) ದೀರ್ಘ ಬಾಳಿಕೆಗೆ ನಾಂದಿ ಹಾಡಬಲ್ಲದು. ಒತ್ತಡ ನಿವಾರಣೆಯ ಪ್ರಮುಖ ತಂತ್ರವಾದ ಪ್ರಾಣಾಯಾಮವು ಶ್ವಾಸಕೋಶಗಳಿಗೆ ಶಕ್ತಿ ತುಂಬಬಲ್ಲದು. ನಿಯಮಿತ ವ್ಯಾಯಾಮ ಬಹಳಷ್ಟು ಮಾಡಬಲ್ಲದು.

VISTARANEWS.COM


on

World Lung Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇವು ಜಟಿಲ ಪ್ರಶ್ನೆಗಳು- ಉಸಿರಾಡುವ ಗಾಳಿ ಇಷ್ಟೊಂದು ಕಲುಷಿತವಾಗಿರುವಾಗ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಸೋಂಕುಗಳು ನೇರವಾಗಿ ಶ್ವಾಸಕೋಶಕ್ಕೇ ದಾಳಿ ಇಡುವಾಗ, ಅದನ್ನು ಜೋಪಾನ ಮಾಡುವುದು ಸಾಧ್ಯವೇ? ಪುಪ್ಪುಸಗಳ ಅನಾರೋಗ್ಯ ಎಂಬುದು ಅತ್ಯಂತ ಸಾಮಾನ್ಯ ವಿಷಯ ಎನಿಸಿರುವ ದಿನಗಳಲ್ಲಿ, ಅವುಗಳ ದೀರ್ಘ ಬಾಳಿಕೆಗೆ ಏನು ಮಾಡಬೇಕು? ಸೆಪ್ಟೆಂಬರ್‌ 25ನೇ ದಿನ ವಿಶ್ವ ಶ್ವಾಸಕೋಶ ದಿನವನ್ನಾಗಿ (World Lung Day) ಆಚರಿಸುತ್ತಿರುವುದು, ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮಹತ್ವವನ್ನು ಹೆಚ್ಚಿಸಿಕೊಂಡಿದೆ.

World lung day or lung healthy concept

ಗಾಳಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವಲ್ಲಿ ಸಮುದಾಯದ ಇಚ್ಛಾಶಕ್ತಿ ಬೇಕು. ಏಕಾಂಗಿಯಾಗಿ ಹೋರಾಡಿ ಯಶಸ್ಸು ಪಡೆದವರಿಲ್ಲವೆಂದಲ್ಲ; ಆದರೆ ಅದು ಎಲ್ಲರಿಗೂ ಸಾಧ್ಯವೇ ಎಂಬುದೂ ಯೋಚಿಸುವ ವಿಚಾರ. ಈ ವಿಷಯದ ಹೊರತಾಗಿ, ಇನ್ನೇನನ್ನಾದರೂ ವೈಯಕ್ತಿವಾಗಿ ನಾವು ಮಾಡಬಹುದೇ? ಖಂಡಿತ, ದೇಹದ ಉಳಿದೆಲ್ಲಾ ಅಂಗಗಳಿಗೆ ಅನ್ವಯಿಸುವ ಬಹಳಷ್ಟು ನಿಯಮಗಳು ನಮ್ಮ ಪುಪ್ಪುಸಗಳಿಗೂ ಅನ್ವಯಿಸುತ್ತವೆ. ಸಮತೋಲಿತವಾದ ಆಹಾರ ಶ್ವಾಸಕೋಶಗಳ (World Lung Day) ದೀರ್ಘ ಬಾಳಿಕೆಗೆ ನಾಂದಿ ಹಾಡಬಲ್ಲದು. ಒತ್ತಡ ನಿವಾರಣೆಯ ಪ್ರಮುಖ ತಂತ್ರವಾದ ಪ್ರಾಣಾಯಾಮವು ಶ್ವಾಸಕೋಶಗಳಿಗೆ ಶಕ್ತಿ ತುಂಬಬಲ್ಲದು. ನಿಯಮಿತ ವ್ಯಾಯಾಮ ಬಹಳಷ್ಟು ಮಾಡಬಲ್ಲದು. ಇವುಗಳನ್ನೇ ವಿವರವಾಗಿ ನೋಡುವುದಾದರೆ-

Hot Vegetable Meal

ಬಿಸಿಯಾದ, ತಾಜಾ ಆಹಾರ ಸೇವಿಸಿ

ಅಡುಗೆ ಮಾಡುವುದಕ್ಕೆ ಸಮಯವೇ ಇಲ್ಲ ಎಂಬ ನೆವ ಇಟ್ಟುಕೊಂಡು ಸಿಕ್ಕಿದಲ್ಲಿ, ಸಿಕ್ಕಿದ್ದನ್ನು ತಿಂದುಕೊಂಡು ಕಾಲ ಹಾಕುವುದು ಖಂಡಿತಕ್ಕೂ ಆರೋಗ್ಯದ ಮೇಲೆ ಬರೆ ಹಾಕುತ್ತದೆ. ಅದರಲ್ಲೂ ತಂಗಳು ತಿನ್ನುವುದು, ಫ್ರಿಜ್‌ನಲ್ಲಿರುವ ಅತಿಯಾದ ತಣ್ಣನೆಯ ಆಹಾರ, ಹಲ್ಲು ಜುಂಮ್ಮೆನ್ನುವಂಥ ಜ್ಯೂಸ್‌, ಸೋಡಾಗಳು ಶ್ವಾಸಕೋಶಗಳ ಉರಿಯೂತವನ್ನು ಹೆಚ್ಚಿಸುತ್ತವೆ. ಹಾಗಾಗಿ ಇಡೀ ಧಾನ್ಯಗಳನ್ನು ಮತ್ತು ಬಿಸಿಯಾದ ಆಹಾರಗಳನ್ನು ತಾಜಾ ಇರುವಾಗಲೇ ಸೇವಿಸುವುದು ಒಳ್ಳೆಯದು

Herbs, condiments and spices

ಸಾಂಬಾರ್ ಪದಾರ್ಥಗಳು

ಭಾರತೀಯ ಅಡುಗೆ ಮನೆಗಳಲ್ಲಿ ಬಳಕೆಯಾಗುವ ಬಹಳಷ್ಟು ಸಾಂಬಾರ್ ಪದಾರ್ಥಗಳು ರುಚಿಗೆ ಮಾತ್ರವೇ ಅಲ್ಲ, ಪಚನ ಕಾರ್ಯಕ್ಕೂ ಸೈ. ಅರಿಶಿನ, ಜೀರಿಗೆ, ಧನಿಯಾ, ಕಾಳು ಮೆಣಸು, ಶುಂಠಿ, ಚಕ್ಕೆ ಮುಂತಾದವು ಜೀರ್ಣಕ್ರಿಯೆಯನ್ನು ಚುರುಕು ಮಾಡುತ್ತವೆ. ಸರಿಯಾಗಿ ಜೀರ್ಣವಾಗದ ಆಹಾರಗಳು ಕಫಕ್ಕೂ ಕಾರಣವಾಗಬಹುದು. ಕೆಲವೊಮ್ಮೆ ಅಲರ್ಜಿಯಂಥ ಪ್ರತಿಕ್ರಿಯೆಗಳನ್ನೂ ದೇಹ ತೋರಿಸಬಹುದು. ಹಾಗಾಗಿ ಸಾಂಬಾರ ಪದಾರ್ಥಗಳನ್ನು ನಿಯಮಿತ ಮತ್ತು ಮಿತವಾಗಿ ಬಳಸಿ

Herbal tea with honey

ಹರ್ಬಲ್‌ ಚಹಾಗಳು ಅಥವಾ ಕಷಾಯಗಳು

ತುಳಸಿ, ಅತಿಮಧುರ, ಶುಂಠಿ, ನಿಂಬೆಹುಲ್ಲು, ಪುದೀನಾ ಮುಂತಾದ ಮೂಲಿಕೆಗಳ ಚಹಾ ಇಲ್ಲವೇ ಕಷಾಯಗಳು ಶ್ವಾಸಕೋಶಗಳ ಆರೋಗ್ಯಕ್ಕೆ ಹಿತಕಾರಿ. ಇವು ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡುವುದೇ ಅಲ್ಲದೆ, ಗಂಟಲಿಗೆ ಆರಾಮ ನೀಡಿ, ಕಫ ಕರಗಿಸಲೂ ನೆರವು ನೀಡುತ್ತವೆ

Healthy fat source

ಆರೋಗ್ಯಕರ ಕೊಬ್ಬು

ಕೊಬ್ಬೆಲ್ಲ ಕೆಟ್ಟದ್ದು ಎಂದು ಭಾವಿಸಿದವರಿಗೆ ಇಲ್ಲೊಂದು ಕಿವಿ ಮಾತು- ಸಂಸ್ಕರಿತ ಕೊಬ್ಬುಗಳನ್ನು, ಕರಿದ ಆಹಾರಗಳನ್ನು ದೂರ ಇರಿಸಿದಷ್ಟೂ ಕ್ಷೇಮ. ಆದರೆ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ದೊರೆಯಲೇಬೇಕು. ತುಪ್ಪ, ಕೊಬ್ಬರಿ ಎಣ್ಣೆ, ಆಲಿವ್‌ ಎಣ್ಣೆ, ಅಗಸೆ ಎಣ್ಣೆ ಮುಂತಾದವು ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಇದು ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಳಕ್ಕೂ ಬೇಕಾದವು.

Hand with dipper picking honey from a jar of honey

ಜೇನುತುಪ್ಪ

ಯಾವುದೇ ಸಂಸ್ಕರಣೆಗೆ ಒಳಗಾಗದ ನೈಸರ್ಗಿಕ ಜೇನುತುಪ್ಪ ಶ್ವಾಸಕೋಶ ಆರೋಗ್ಯಕ್ಕೆ ಬಹಳ ಒಳ್ಳೆಯದು. ಗಂಟಲಲ್ಲಿ ಕಿರಿಕಿರಿ, ನೆಗಡಿ, ಕೆಮ್ಮಿನಂಥ ಲಕ್ಷಣಗಳಿದ್ದರೆ, ಜೇನುತುಪ್ಪದೊಂದಿಗೆ ತುಳಸಿ ರಸ ಅಥವಾ ಶುಂಠಿ ರಸ ಮುಂತಾದ ಸರಳ ಮನೆಮದ್ದುಗಳು ಉಪಶಮನ ನೀಡುತ್ತವೆ.

Winter table appointments with macaroons and sweets

ಸಂಸ್ಕರಿತ/ರಿಫೈನ್ಡ್‌ ಆಹಾರಗಳು ಬೇಡ

ಬಿಳಿ ಅಕ್ಕಿ, ರಿಫೈನ್ಡ್‌ ಎಣ್ಣೆ, ಬಿಳಿ ಬ್ರೆಡ್‌, ಬಿಳಿ ಪಾಸ್ತಾ, ಮೈದಾದಿಂದ ತಯಾರಾದ ಆಹಾರಗಳು- ಇಂಥವೆಲ್ಲವೂ ಸಂಸ್ಕರಿತ ಆಹಾರಗಳ ಪಟ್ಟಿಯಲ್ಲಿ ಬರುತ್ತವೆ. ಆಹಾರ ಸಂಸ್ಕಾರಗೊಂಡಷ್ಟೂ ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುತ್ತವೆ. ಅದರಲ್ಲೂ ಶ್ವಾಸಕೋಶಗಳ ಉರಿಯೂತವೆಂದರೆ ಕೆಮ್ಮು, ಉಬ್ಬಸ, ಅಸ್ತಮಾದಂಥ ಲಕ್ಷಣಗಳು ಕಾಡತೊಡಗುತ್ತವೆ. ಹಾಗಾಗಿ ಉರಿಯೂತಕ್ಕೆ ಕಾರಣವಾಗುವ ಆಹಾರಗಳನ್ನು ದೂರ ಮಾಡಿ.

Woman Sleeping In

ನೀರು-ನಿದ್ದೆ ಬೇಕು

ದಿನಕ್ಕೆ ಎಂಟು ತಾಸುಗಳ ನಿದ್ದೆಯು ದೇಹದಲ್ಲಿ ಅಗತ್ಯ ದುರಸ್ತಿ ಕಾರ್ಯಗಳನ್ನು ಮಾಡಿಸಲು ನೆರವಾಗುತ್ತದೆ. ದಿನಕ್ಕೆಂಟು ಗ್ಲಾಸ್ ನೀರು ಕುಡಿಯುವುದು ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಅಗತ್ಯ.

ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

ನೀವು 40 ದಾಟಿದ ಮಹಿಳೆಯಾಗಿದ್ದಲ್ಲಿ, ಆರೋಗ್ಯದ ಕಡೆಗೆ ಗಮನ ಹರಿಸುವ ಜೊತೆಗೆ ಈ ಆಹಾರಗಳ ಸೇವನೆಯನ್ನು (Healthy Food For Women) ಮಾತ್ರ ಮರೆಯಬೇಡಿ.

VISTARANEWS.COM


on

woman eating
Koo

40 ದಾಟಿದ ಕೂಡಲೇ ಮಹಿಳೆಯಲ್ಲಿ ಆಗುವ ಬದಲಾವಣೆಗಳು ಅನೇಕ. ಹಾರ್ಮೋನಿನ ಏರುಪೇರು, ಕ್ಯಾಲ್ಶಿಯಂ ಕೊರತೆ, ಭಾವನಾತ್ಮಕ ಸಮಸ್ಯೆಗಳು, ಜೀರ್ಣಕ್ರಿಯೆ ಸಮಸ್ಯೆಗಳೂ ಸೇರಿದಂತೆ ಮಹಿಳೆ ಹಲವು ಮಜಲುಗಳನ್ನು ದೈಹಿಕವಾಗಿ, ಮಾನಸಿಕವಾಗಿ ದಾಟಬೇಕಾಗುತ್ತದೆ. ಕುಟುಂಬದ ಜವಾಬ್ದಾರಿಗಳು, ಕೆಲಸದ ಒತ್ತಡ, ಹೆರಿಗೆ, ಆರೋಗ್ಯದ ಕಡೆಗೆ ಗಮನ ಕಡಿಮೆಯಾದ ಕಾರಣಗಳಿಂದ ಮಹಿಳೆ ತನ್ನ ಆರೋಗ್ಯದಲ್ಲಿ ಈ ವಯಸ್ಸಿನ ನಂತರ ಸಾಕಷ್ಟು ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಇಂಥ ಸಂದರ್ಭ ಮಹಿಳೆಗೆ ಮಾನಸಿಕ ಸಾಂಗತ್ಯದ ಜೊತೆಗೆ ದೈಹಿಕ ಆರೋಗ್ಯಕ್ಕೆ ಪೂರಕವಾದ ಸಲಹೆ, ನೆರವು ಹಾಗೂ ಸಮತೋಲಿತ ಆಹಾರ ಸೇವನೆಯೂ (balanced diet) ಅತ್ಯಂತ ಅಗತ್ಯ. ಬನ್ನಿ, ನೀವು 40 ದಾಟಿದ ಮಹಿಳೆಯಾಗಿದ್ದಲ್ಲಿ, ಆರೋಗ್ಯದ ಕಡೆಗೆ ಗಮನ ಹರಿಸುವ ಜೊತೆಗೆ ಈ ಆಹಾರಗಳ ಸೇವನೆಯನ್ನು (Healthy Food For Women) ಮಾತ್ರ ಮರೆಯಬೇಡಿ.

1. ಸೇಬು: ದಿನಕ್ಕೊಂದು ಸೇಬು ಹಣ್ಣನ್ನು ತಿಂದರೆ ವೈದ್ಯರಿಂದ ದೂರವಿರಬಹುದು ಎಂಬ ಹಳೇ ಗಾದೆ ನೀವು ಕೇಳಿರಬಹುದು. ಅದು ಸತ್ಯ ಕೂಡಾ. ಸೇಬು ಹಣ್ಣೊಂದನ್ನು ನಿತ್ಯವೂ ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ನಾರಿನಂಶ ಹಾಗೂ ಫ್ಲೇವನಾಯ್ಡ್‌ಗಳು ಅಧಿಕವಾಗಿವೆ. ದೇಹದ ಉರಿಯೂತ, ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆಗೊಳಿಸುವ ಜೊತೆಗೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.

2. ಗ್ರೀನ್‌ ಚಹಾ: ಗ್ರೀನ್‌ ಟೀ ಎಂಬ ಚಹಾ ಸಾಕಷ್ಟ ಆಂಟಿ ಆಕ್ಸಿಡೆಂಟ್‌ಗಳಿರುವ ಚಹಾ. ಇದು ಸಾಮಾನ್ಯ ಚಹಾಕ್ಕಿಂತ ಭಿನ್ನವಾದ ಪ್ರಯೋಜನಗಳನ್ನು ನೀಡುವುದರಿಂದ ೪೦ ದಾಟಿದ ಮಹಿಳೆ ಮಾತ್ರವಲ್ಲ, ಎಲ್ಲ ಮಹಿಳೆಯರೂ ಪುರುಷರೂ ಕುಡಿಯಬೇಕಾದ್ದು. ದೇಹದ ಚೀರ್ಣಕ್ರಿಯೆಯನ್ನು ಚುರುಕುಗೊಳಿಸಿ ತೂಕವನ್ನು ಸಮತೋಲನಗೊಳಿಸಿ ಆರೋಗ್ಯ ನೀಡುತ್ತದೆ.

3. ಮೆಂತ್ಯಕಾಳು: ಮೆಂತ್ಯ ಕಾಳಿನ ಸೇವನೆ ದೇಹದ ಕೊಬ್ಬನ್ನು ಇಳಿಸಲು ಅತ್ಯಂತ ಸುಲಭ ಸರಳವಾದ ಉಪಾಯ. ಇದು ದೇಹದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ರಸಗಳ ಉತ್ಪಾದನೆಗೆ ಪ್ರಚೋದನೆ ನೀಡಿ, ಚಯಾಪಚಯ ಕ್ರಿಯೆಯನ್ನು ಪ್ರಚೋದಿಸುತ್ತದೆ.

methi seeds

4. ಅಗಸೆ ಬೀಜ: ಫ್ಲ್ಯಾಕ್‌ ಸೀಡ್‌ ಅಥವಾ ಅಗಸೆ ಬೀಜದಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ ಹೇರಳವಾಗಿದ್ದು, ಇದು ಹೃದಯದ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಕೊಬ್ಬಾಗಿದೆ. ಜೊತೆಗೆ ೪೦ ದಾಟಿದ ಮಹಿಳೆಯರಲ್ಲಿ ಸಾಮಾನಯವಾಗಿ ಕಂಡು ಬರುವ ಹಾರ್ಮೋನ್‌ ಸಮಸ್ಯೆಗಳು ಹಾಗೂ ಮುಟ್ಟಿನ ತೊಂದರೆಗಳಿಗೂ ಇದು ಅತ್ಯಂತ ಒಳ್ಳೆಯದು.

5. ಬೆಣ್ಣೆ ಹಣ್ಣು: ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ಪೊಟಾಶಿಯಂ ಹಾಗೂ ಆರೋಗ್ಯಕರ ಕೊಬ್ಬು ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿದೆ. ಚರ್ಮದ ಕಾಂತಿಗೆ, ಚರ್ಮ ಸುಕ್ಕಾಗದಂತೆ ತಡೆಯಲು, ಹೊಳಪಿನ ಕೂದಲಿಗೆ ಹಾಗೂ ರಕ್ತದೊತ್ತಡದ ಸಮತೋಲನಕ್ಕೆ ಬೆಣ್ಣೆ ಹಣ್ಣು ಅತ್ಯಂತ ಯೋಗ್ಯವಾದ ಹಣ್ಣು.

avocado health benefit

6. ಬೀಜಗಳು: ಒಣಬೀಜಗಳಲ್ಲಿ ಆರೋಗ್ಯಕರ ಕೊಬ್ಬು ಹಾಗೂ ನಾರಿನಂಶ ಹೇರಳವಾಗಿದ್ದು, ಹೃದಯದ ಆರೋಗ್ಯಕ್ಕೆ, ಮಧುಮೇಹ ಹಾಗೂ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಇವುಗಳು ಒಳ್ಳೆಯದನ್ನೇ ಮಾಡುತ್ತದೆ.

ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ

7. ಹಸಿರು ಸೊಪ್ಪುಗಳು: ಹಸಿರು ಸೊಪ್ಪುಗಳಲ್ಲಿ ವಿಟಮಿನ್‌ ಕೆ ಹೇರಳವಾಗಿದ್ದು, ಇದರ ಜೊತೆಗೆ ಫೋಲೇಟ್‌, ಕ್ಯಾಲ್ಶಿಯಂ, ಬೀಟಾ ಕೆರೋಟಿನ್‌ಗಳೂ ಸಾಕಷ್ಟು ಪ್ರಮಾಣದಲ್ಲಿವೆ. ಪಾಲಕ್‌, ಬಸಳೆ, ಮೆಂತೆ ಸೊಪ್ಪು ಸೇರಿದಂತೆ ಬಹುತೇಕ ಎಲ್ಲ ಹಸಿರು ಸೊಪ್ಪುಗಳೂ ಕೂಡಾ, ಪೋಷಕಾಂಶಗಳ ಭಂಡಾರವನ್ನೇ ಹೊಂದಿರುವುದರಿಂದ ಮಹಿಳೆಯರು ಆಗಾಗ ತಿನ್ನಲೇಬೇಕಾದ ಆಹಾರ ಇವು.

soppu

8. ಮೊಸರು: ಪ್ರತಿ ದಿನವೂ ಒಂದು ಕಪ್‌ ಗಟ್ಟಿಯಾದ ಮೊಸರಿನ ಸೇವನೆ ಮಹಿಳೆಯರಿಗೆ ಒಳ್ಳೆಯದು. ಮಹಿಳೆಯರು 40 ದಾಟಿದ ಮೇಲೆ ನಿಧಾನವಾಗಿ ಕ್ಯಾಲ್ಶಿಯಂ ಮತ್ತಿತರ ಪೋಷಕಾಂಶಗಳ ಕೊರತೆಯಿಂದ ಮೂಳೆಗಳು ಶಕ್ತಿ ಕುಂದಿ, ಅನುಭವಿಸುವ ಆರೋಗ್ಯ ಸಮಸ್ಯೆಗಳಿಗೆ ನಿಸರ್ಗದತ್ತವಾದ ಕ್ಯಾಲ್ಶಿಯಂ ಮೂಲಗಳಿರುವ ಆಹಾರ ಸೇವನೆ ತ್ಯಂತ ಅಗತ್ಯ. ಮೊಸರಿನಲ್ಲಿ ಕ್ಯಾಲ್ಶಿಯಂ ಸೇರಿದಂತೆ ಪ್ರೊಬಯಾಟಿಕ್‌ ಗುಣಗಳಿರುವುದರಿಂದ ಜೀರ್ಣಕ್ರಿಯೆಗೂ ಇದು ಒಳ್ಳೆಯದು. ಈ ಎಲ್ಲ ಆಹಾರಗಳೂ ಹಿತಮಿತವಾಗಿದ್ದರೆ ಆರೋಗ್ಯವೂ ಸರಿಯಾದ ಹಾದಿಯಲ್ಲಿರುತ್ತದೆ ಎಂಬುದನ್ನು ಮಾತ್ರ ಮರೆಯದಿರಿ.

ಇದನ್ನೂ ಓದಿ: Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Continue Reading

ಆರೋಗ್ಯ

Dry Fruits Benefits: ಒಣಹಣ್ಣುಗಳನ್ನೂ, ಬೀಜಗಳನ್ನೂ ತಿನ್ನಿ: ಕ್ಯಾನ್ಸರ್‌ ನಿರೋಧಕತೆ ಬೆಳೆಸಿಕೊಳ್ಳಿ!

ಕೆಲವು ಆರೋಗ್ಯಕರ ಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಕ್ಯಾನ್ಸರ್‌ ಸೇರಿದಂತೆ ಅನೇಕ ರೋಗಗಳು ಬರದಂತೆ ನಾವು ಜಾಗ್ರತೆ ವಹಿಸಬಹುದು. ಬನ್ನಿ, ಯಾವೆಲ್ಲ ಒಣಹಣ್ಣು ಹಾಗೂ ಬೀಜಗಳಲ್ಲಿ (dry fruits benefits) ಕ್ಯಾನ್ಸರ್‌ ವಿರೋಧಿ ಗುಣಗಳಿವೆ ಎಂಬುದನ್ನು ನೋಡೋಣ.

VISTARANEWS.COM


on

dry fruits
Koo

ಕ್ಯಾನ್ಸರ್‌ (cancer) ಜಗತ್ತಿನಾದ್ಯಂತ ಅತ್ಯಂತ ಭಯ ಹುಟ್ಟಿಸಿರುವ ರೋಗಗಳಲ್ಲಿ ಒಂದು. ಗೊತ್ತೇ ಆಗದಂತೆ ದೇಹದಲ್ಲಿ ಭೂತಾಕಾರವಾಗಿ ಬೆಳೆದುಬಿಡುವ ಸಮಸ್ಯೆ ಇದು. ರೋಗಿಗೆ ತನ್ನ ದೇಹದಲ್ಲೇ ರಾಕ್ಷಸನೊಬ್ಬ ಬೆಳೆಯುತ್ತಿದ್ದಾನೆಂಬ ಅರಿವೂ ಕೂಡಾ ಬಹಳ ಸಲ ಆಗುವುದೇ ಇಲ್ಲ. ಯಾವುದೇ ಅಂಗವನ್ನೂ ಆಕ್ರಮಿಸಿ ನಿಧಾನವಾಗಿ ತನ್ನ ಕಬಂಧ ಬಾಹುಗಳನ್ನು ಚಾಚಿ ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆಯುವ ಈ ಕ್ಯಾನ್ಸರ್‌ ಎಂಬ ಹೆಮ್ಮಾರಿಯ ಹೆಸರು ಕೇಳಿದೊಡನೆಯೇ ಬಹಳಷ್ಟು ಮಂದಿ ನಡುಗಿಬಿಡುತ್ತಾರೆ. ಇನ್ನು ಕ್ಯಾನ್ಸರ್‌ ವಿರುದ್ಧ ಹೋರಾಡಿ ಜಯಗಳಿಸುವುದೆಂದರೆ ಸುಲಭದ ಮಾತಲ್ಲ. ಆದರೆ, ಅಷ್ಟು ಧೃತಿಗೆಡುವ ಅಗತ್ಯವಿಲ್ಲ, ಅದು ಸಾಧ್ಯವಿದೆ ಎಂದು ಸಾಧಿಸಿ ತೋರಿಸಿ ಫೀನಿಕ್ಸ್‌ನಂತೆ ಎದ್ದು ಬಂದು ನಮ್ಮ ನಡುವೆ ಸ್ಪೂರ್ತಿಯಾಗಿ ಬದುಕುತ್ತಿರುವ ಮಂದಿಯೂ ಇದ್ದಾರೆ.

ಇಂಥ ಕ್ಯಾನ್ಸರ್‌ ನಮಗೆ ಬರದಂತೆ ಕಾಪಾಡುವುದರಲ್ಲಿ ನಮ್ಮ ಕೈಯಲ್ಲೇನಿದೆ ಎಂದು ನಾವು ಕೈಚೆಲ್ಲಿ ಕೂರಬೇಕಿಲ್ಲ. ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಕ್ಯಾನ್ಸರ್‌ ಸೇರಿದಂತೆ ಅನೇಕ ರೋಗಗಳು ಬರದಂತೆ ನಾವು ಜಾಗ್ರತೆ ವಹಿಸಬಹುದು. ಕೆಲವು ಆಹಾರ ಕ್ರಮಗಳ (Healthy food) ಅಳವಡಿಕೆ, ಜೀವನಕ್ರಮದಲ್ಲಿ ಬದಲಾವಣೆ (Lifestyle change) ಇತ್ಯಾದಿ ಇತ್ಯಾದಿಗಳ ಬಗ್ಗೆ ಅರಿವು ಹೆಚ್ಚು ಮಾಡಿಕೊಳ್ಳುವ ಅಗತ್ಯವೂ ಇದೆ. ಒಂದು ಅಧ್ಯಯನದ ಪ್ರಕಾರ, ಒಣ ಹಣ್ಣುಗಳನ್ನೂ, ಬೀಜಗಳನ್ನೂ ನಿತ್ಯವೂ ಸೇವನೆ ಮಾಡುವ ಮೂಲಕ ಕ್ಯಾನ್ಸರ್‌ ನಿರೋಧಕತೆಯನ್ನು ನಾವು ಬೆಳೆಸಿಕೊಳ್ಳಬಹುದು ಎಂಬುದು. ಹಾಗಂತ, ಇವು ಒಳ್ಳೆಯದೆಂದ ಇವನ್ನೇ ಹೆಚ್ಚು ತಿಂದು ತೂಕ ಹೆಚ್ಚಿಸಿಕೊಳ್ಳುವ ಅಪಾಯವೂ ಇದೆ. ಆ ಮೂಲಕ ಬೇರೆ ಅಪಾಯಗಳನ್ನು ಸ್ವಾಗತಿಸುವ ಹಾಗಾದೀತು. ಹಾಗಾಗಿ, ಹಿತಮಿತವಾಗಿ ತಿನ್ನುವುದು ಇಲ್ಲಿ ಮುಖ್ಯವೆನಿಸುತ್ತದೆ. ಬನ್ನಿ, ಯಾವೆಲ್ಲ ಒಣಹಣ್ಣು ಹಾಗೂ ಬೀಜಗಳಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳಿವೆ ಎಂಬುದನ್ನು ನೋಡೋಣ.

1. ಬಾದಾಮಿ, ಹೇಜಲ್‌ನಟ್‌, ಪೈನ್‌ ನಟ್‌ ಮೊದಲಾದ ಒಣ ಬೀಜಗಳಲ್ಲಿ ಆಲ್ಫಾ ಟೋಕೋಫೆರಾಲ್‌ ಎಂಬ ವಿಟಮಿನ್‌ ಇ ಇದೆ. ಇದು ಆಂಟಿ ಆಕ್ಸಿಡೆಂಟ್‌ ಗುಣಗಳನ್ನು ಹೊಂದಿರುವುದರಿಂದ ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ.

2. ವಾಲ್‌ನಟ್‌, ಪಿಸ್ತಾ ಮತ್ತಿತರ ಒಣಬೀಜಗಳಲ್ಲಿಹಾರ್ಬರ್‌ ಟೋಕೋಟ್ರೈನಾಲ್‌ಗಳು ಹಾಗೂ ಗಮ್ಮಾ- ಟೋಕೋಫೆರಾಲ್ಗಳು ಇವೆ. ಇದು ವಿಟಮಿನ್‌ ಇ ಯ ಪರ್ಯಾಯವಾಗಿದ್ದು ಇದು ಆಲ್ಫಾ ಟೋಕೋಫೆರಾಲ್‌ಗಿಂತಲೂ ಒಂದು ಪಟ್ಟು ಹೆಚ್ಚೇ ಆಂಟಿ ಇನ್‌ಫ್ಲಮೇಟರಿ ಗುಣಗಳನ್ನು ಹೊಂದುವ ಮೂಲಕ ಕ್ಯಾನ್ಸರ್‌ ನಿರೋಧಕವಾಗಿಯೂ ದೇಹದಲ್ಲಿ ಕೆಲಸ ಮಾಡುತ್ತದೆ.

nuts

3. ಒಣಹಣ್ಣುಗಳಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳಿದ್ದು, ಆಂಟಿ ಇನ್‌ಫ್ಲಮೇಟರಿ ಗುಣಗಳು ಹೆಚ್ಚಿವೆ. ಇವುಗಳಲ್ಲಿರುವ ಫೈಟೋ ಕೆಮಿಕಲ್‌ಗಳಾದ, ಟರ್ಪೀನ್‌, ಆಂಥೋಸಯನಿನ್‌, ಕೌಮಾರಿನ್‌, ಕ್ಸಾಂಥೋನ್‌ ಹಾಗೂ ಕೆರೋಟಿನಾಯ್ಡ್‌ಗಳು ಕ್ಯಾನ್ಸರ್‌ ನಿರೋಧಕವಾಗಿ ದೇಹದಲ್ಲಿ ಕೆಲಸ ಮಾಡುತ್ತವೆ.

ಇದನ್ನೂ ಓದಿ: Health Tips: ಮೋದಿ ಆರೋಗ್ಯದ ಹಿಂದಿದೆ ‘ನುಗ್ಗೆಕಾಯಿ ಮಹಿಮೆ’; ತೂಕ ಇಳಿಕೆಗೆ ನುಗ್ಗೆ ಹೇಗೆ ನೆರವು?

4. ಅಮೆರಿಕನ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಕ್ಯಾನ್ಸರ್‌ ರೀಸರ್ಚ್‌ನ ಪ್ರಕಾರ, ಎಲ್ಲ ಬಗೆಯ ಬೀಜಗಳು ಮುಖ್ಯವಾಗಿ ವಾಲ್ನಟ್‌ ಕ್ಯಾನ್ಸರ್‌ ನಿರೋಧಕ ಗುಣವನ್ನು ಹೊಂದಿವೆ. ವಾಲ್ನಟ್‌ನಲ್ಲಿರುವ ಪೆಡಂಕ್ಯುಲಾಗಿನ್‌ ಅಂಶವು ಯುರೋಲಿಥಿನ್‌ ಆಗ ಬದಲಾಯಿಸುವ ಮೂಲಕ ಸ್ತನ ಕ್ಯಾನ್ಸರ್‌ ಬರದಂತೆ ತಡೆಯುತ್ತದೆ. ಹಾಗಾಗಿ ಮಹಿಳೆಯರಿಗೆ ಮುಖ್ಯವಾಗಿ ವಾಲ್ನಟ್‌ ಬಹಳ ಒಳ್ಳೆಯದು.

5. ಒಣದ್ರಾಕ್ಷಿಯ ನಿತ್ಯ ಸೇವನೆಯಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಇದು ಪ್ರೊಸ್ಟಾಗ್ಲಾಂಡಿನ್‌ ಮೆಟಬೋಲೈಟ್‌ ಸ್ರವಿಸುವ ಮೂಲಕ ಕ್ಯಾನ್ಸರ್‌ ಅಂಗಾಂಶಗಳ ಬೆಳವಣಿಗೆಯಾಗದಂತೆ ತಡೆಯುತ್ತದೆ.

6. ಒಣ ಪ್ಲಮ್‌ ಹಣ್ಣಿನಲ್ಲಿ ಅತ್ಯುತ್ತಮ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳಿದ್ದು, ಬೀಟಾ ಕೆರೋಟಿನ್‌ ಹಾಗೂ ಕಾರ್ಬೋಲಿನ್‌, ಫಿನೋಲಿಕ್‌ ಅಂಶಗಳೂ ಇವೆ. ಇವೆಲ್ಲವೂ, ಹೊಟ್ಟೆ ಹಾಗೂ ಸಂಬಂಧಿತ ಅಂಗಗಳಲ್ಲಿ ಕ್ಯಾನ್ಸರ್‌ ಬರದಂತೆ ತಡೆಯುತ್ತವೆ.

7. ಒಣ ಅಂಜೂರ: ಒಣ ಅಂಜೂರ ಹಣ್ಣಿನಲ್ಲಿ ನಾರಿನಂಶವೂ ಸಾಕಷ್ಟು ವಿಟಮಿನ್‌ಗಳೂ, ಖನಿಜಾಂಶಗಳೂ, ಪಾಲಿಫಿನಾಲ್‌ಗಳೂ ಶ್ರೀಮಂತವಾಗಿದ್ದು ಕ್ಯಾನ್ಸರ್‌ಗೆ ಅತ್ಯುತ್ತಮವಾಗಿದೆ.

ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

Continue Reading

ಆರೋಗ್ಯ

Weight Loss Tips: ದೇಹ ತೂಕ ಇಳಿಸಲು ಸಹಕಾರಿ ಈ ಈರುಳ್ಳಿ ಹೂವು!

Weight Loss Tips: ಋತುಮಾನದ ತರಕಾರಿಗಳ ಪೈಕಿ ತೂಕ ಇಳಿಸುವವರಿಗೆ ಮೆಚ್ಚಾಗುವುದು ಈರುಳ್ಳಿ ಹೂವು. ಕೊಂಚ ಘಾಟು ಪರಿಮಳದ ಈ ಹೂವು, ದೇಹವನ್ನು ಹೇಗೆ ಕರಗಿಸುತ್ತದೆ (Weight Loss with Spring Onions) ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

onion flower
Koo

ಬೆಂಗಳೂರು: ಋತುಮಾನದ ಹಣ್ಣು-ತರಕಾರಿಗಳ ಸೇವನೆ ಯಾವತ್ತಿಗೂ ಲಾಭದಾಯಕ- ಕಿಸೆಗೆ ಮಾತ್ರವಲ್ಲ, ದೇಹಕ್ಕೂ ಹೌದು. ತೂಕ ಇಳಿಸುವ ಪ್ರಯತ್ನದಲ್ಲಿ ಇರುವವರಿಗೆ ತಟ್ಟೆ ತುಂಬಾ ಹಣ್ಣು-ತರಕಾರಿಗಳನ್ನೇ ಸೇವಿಸಲು ಸೂಚಿಸಲಾಗುತ್ತದೆ. ಹೀಗಿರುವಾಗ ಋತುಮಾನಕ್ಕೆ ತಕ್ಕಂತೆ ಆಹಾರವನ್ನು ರೂಢಿಸಿಕೊಂಡರೆ ನಾಲಿಗೆಯ ಸವಿಯನ್ನೂ ತಣಿಸಿಕೊಳ್ಳಬಹುದು. ಚಳಿಗಾಲದಲ್ಲಿ ದೊರೆಯುವ ತರಕಾರಿಗಳ ಪೈಕಿ ರುಚಿಕಟ್ಟಾಗಿದ್ದು ಈರುಳ್ಳಿ ಹೂವು ಅಥವಾ ಸ್ಪ್ರಿಂಗ್‌ ಆನಿಯನ್.‌ ಖಾದ್ಯಗಳ ಘಮ, ಸ್ವಾದ ಹೆಚ್ಚಿಸಿ, ಸತ್ವಗಳನ್ನೂ ಏರಿಸುವ ಈ ಹಸಿರು ದಂಟಿನಂಥ ಘಾಟು ತರಕಾರಿ, ಹಲವಾರು ವ್ಯಂಜನಗಳಿಗೆ ಒಗ್ಗಿಕೊಳ್ಳುತ್ತದೆ. ತೂಕ ಇಳಿಸುವ ಉತ್ಸಾಹದಲ್ಲಿ ಇರುವವರಿಗೆ ಇದು ಸೂಕ್ತವಾದ ತರಕಾರಿ. ಹೇಗೆ ಎಂಬುದನ್ನು ಗಮನಿಸೋಣ (Weight Loss Tips).

ಕ್ಯಾಲರಿ ಕಡಿಮೆ

ಇದರಲ್ಲಿ ಅನಗತ್ಯ ಕ್ಯಾಲರಿ ಮತ್ತು ಕೊಬ್ಬು ಇಲ್ಲವೇಇಲ್ಲ ಎನ್ನುವಷ್ಟು ಕಡಿಮೆ. ಸುಮಾರು 100 ಗ್ರಾಂನಷ್ಟು ಕತ್ತರಿಸಿದ ಈರುಳ್ಳಿ ಹೂವಿನಲ್ಲಿ ಇರುವುದು 31 ಕ್ಯಾಲರಿಗಳು ಮಾತ್ರ. ಅದರಲ್ಲೂ ೦.1ರಷ್ಟು ಕ್ಷೀಣವಾದ ಕೊಬ್ಬಿನಂಶ. ಹಾಗಾಗಿ ಹಸಿರು ತರಕಾರಿಗಳನ್ನು ಉಪಯೋಗಿಸುವ ಎಲ್ಲಾ ಅಡುಗೆಗಳಲ್ಲಿ ಈರುಳ್ಳಿ ಹೂವನ್ನು ಧಾರಾಳವಾಗಿ ಬಳಸಬಹುದು.

ನಾರು ಭರಪೂರ

ಒಂದು ಕಪ್‌ ಕತ್ತರಿಸಿದ ಈರುಳ್ಳಿ ಹೂವಿನಲ್ಲಿ 1.8 ಗ್ರಾಂನಷ್ಟು ನಾರು ದೊರೆಯುತ್ತದೆ. ಇದೀಗ ದೇಹದ ಚಯಾಪಚಯವನ್ನು ಹೆಚ್ಚಿಸುವುದಕ್ಕೆ ಸಹಕಾರಿ. ದೀರ್ಘ ಕಾಲದವರೆಗೆ ಹಸಿವು ಮುಂದೂಡಲು ನೆರವಾಗುತ್ತದೆ. ಕಳ್ಳ ಹಸಿವನ್ನು ದೂರ ಮಾಡಿ, ಸಿಕ್ಕಿದ್ದನ್ನೆಲ್ಲಾ ತಿನ್ನದಂತೆ ಬಾಯಿ ಕಟ್ಟಲು ಸಹಾಯ ಮಾಡುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಇದು ಉಪಕಾರಿ.

ಚಯಾಪಚಯ ಹೆಚ್ಚಳ

ತೂಕ ಇಳಿಸುವವರಿಗೆ ತೊಂದರೆ ಕೊಡುವ ಹಲವು ವಿಷಯಗಳಲ್ಲಿ ದೇಹದ ಚಯಾಪಚಯ ಕುಸಿಯುವುದೂ ಒಂದು ಹೌದು. ದೇಹ ತನ್ನಲ್ಲಿ ಖರ್ಚಾಗದ ಶಕ್ತಿಯನ್ನು ಜಮೆ ಮಾಡಿಕೊಳ್ಳುವುದು ಕೊಬ್ಬಿನ ರೂಪದಲ್ಲಿ. ಆದರೆ ದೇಹಕ್ಕೆ ಬೇಕಾಗುವ ಶಕ್ತಿಗಿಂತ ಕಡಿಮೆಯೇ ಶಕ್ತಿ ಒದಗಿಸಿದರೆ ಮತ್ತು ದೊರೆಯುವ ಶಕ್ತಿಗಿಂತ ಹೆಚ್ಚಿನ ಕ್ಯಾಲರಿಗಳು ಖರ್ಚಾದರೆ ತೂಕ ಇಳಿಸುವುದು ಕಷ್ಟವಾಗುವುದಿಲ್ಲ. ಈರುಳ್ಳಿ ಹೂವಿನಲ್ಲಿನ ಅಲ್ಲಿಸಿನ್‌ ಅಂಶಕ್ಕೆ ದೇಹದ ಚಯಾಪಚಯವನ್ನು ಹೆಚ್ಚಿಸುವ ಸಾಮರ್ಥ್ಯವಿದೆ.

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ಜಠರ ಮತ್ತು ಕರುಳುಗಳಲ್ಲಿ ಇರಬೇಕಾದ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಪ್ರೊಬಯಾಟಿಕ್‌ ಎಷ್ಟು ಮುಖ್ಯವೊ ಪ್ರಿಬಯಾಟಿಕ್‌ ಆಹಾರಗಳೂ ಅಷ್ಟೇ ಮುಖ್ಯ. ಈರುಳ್ಳಿ ಹೂವು ಒಳ್ಳೆಯ ಪ್ರಿಬಯಾಟಿಕ್‌ ಸತ್ವಗಳನ್ನು ಹೊಂದಿದ್ದು, ಜೀರ್ಣಾಂಗಗಳ ಆರೋಗ್ಯ ವೃದ್ಧಿಗೆ ಅನುಕೂಲ ಒದಗಿಸುತ್ತದೆ. ಇದರಿಂದ ಸೇವಿಸಿದ ಆಹಾರಗಳನ್ನು ಹೀರಿಕೊಳ್ಳಲು ದೇಹಕ್ಕೆ ಸುಲಭವಾಗುತ್ತದೆ. ಇದರಿಂದ ಮತ್ತೆ ಮತ್ತೆ ತಿನ್ನುವ ಅಗತ್ಯವಿಲ್ಲದೆ, ತಿಂದಷ್ಟು ತೃಪ್ತಿ ನೀಡುತ್ತದೆ.

ಡೈಯುರೇಟಿಕ್‌

ದೇಹದಲ್ಲಿರುವ ಹೆಚ್ಚುವರಿ ನೀರನ್ನು ಹೊರಹಾಕುವ ಸಾಮರ್ಥ್ಯ ಈರುಳ್ಳಿ ಹೂವಿಗಿದೆ. ದೇಹ ಉಬ್ಬರಿಸಿದಂತೆ ಅನಿಸುವುದು, ಹೊಟ್ಟೆ ಉಬ್ಬರದ ಭಾವ- ಇಂಥವುಗಳು ಕಡಿಮೆಯಾಗಿ ದೇಹಕ್ಕಿರುವ ಅನಗತ್ಯ ತೂಕ ಇಳಿದಂತಾಗುತ್ತದೆ.

ಹೇಗೆಲ್ಲಾ ಉಪಯೋಗಿಸಬಹುದು?

ತೂಕ ಇಳಿಸುವುದಕ್ಕೆ ಈರುಳ್ಳಿ ಹೂವುಗಳು ಅನುಕೂಲಕರ ಎಂಬುದೇನೋ ಸರಿ. ಆದರೆ ಇವುಗಳನ್ನು ಹೆಚ್ಚೆಚ್ಚು ಉಪಯೋಗಿಸಿದರೆ ಮಾತ್ರವೇ ಇದರ ಲಾಭಗಳನ್ನು ಪಡೆಯಲು ಸಾಧ್ಯ. ಹಾಗಾದರೆ ಏನೆಲ್ಲಾ ವ್ಯಂಜನಗಳಿಗೆ ಇದನ್ನು ಉಪಯೋಗಿಸಬಹುದು?

ಇದನ್ನೂ ಓದಿ: Health Tips: ಮೋದಿ ಆರೋಗ್ಯದ ಹಿಂದಿದೆ ‘ನುಗ್ಗೆಕಾಯಿ ಮಹಿಮೆ’; ತೂಕ ಇಳಿಕೆಗೆ ನುಗ್ಗೆ ಹೇಗೆ ನೆರವು?

ಈರುಳ್ಳಿಯಷ್ಟು ಅಲ್ಲದಿದ್ದರೂ, ಕೊಂಚ ಘಾಟು ಘಮವಿರುವ ಹೂವಿದು. ಹಾಗಾಗಿ ಹಸಿಯಾಗಿ ತಿನ್ನಬಹುದಾದ ಕೋಸಂಬರಿ, ಸಲಾಡ್‌ಗಳಿಗೆ ಹೊಂದುತ್ತದೆ. ಸಾರು, ಸೂಪ್‌ಗಳಿಗೆ ಬಳಸಿದರೆ ರುಚಿಗೆ ಮೋಸವಿಲ್ಲ. ಯಾವುದೇ ತರಕಾರಿಗಳ ಪಲ್ಯಗಳ ಜತೆ ಇದನ್ನು ಉಪಯೋಗಿಸಬಹುದು. ಹುಳಿ, ಸಾಂಬಾರ್‌, ಕೂಟುಗಳಿಗೂ ಇದು ಜೋಡಿಯಾಗಬಲ್ಲದು. ದೋಸೆ, ಉತ್ತಪ್ಪಗಳ ಮೇಲೆ ಉದುರಿಸಿದರೆ ಸವಿ ಹೆಚ್ಚಿಸಬಹುದು. ಉತ್ತರ ಭಾರತೀಯ ಗ್ರೇವಿಗಳಿಗೆ ಇದು ಸಂಗಾತಿ. ಬ್ಯಾಚುಲರ್‌ಗಳ ನೆಚ್ಚಿನ ಆಮ್ಲೆಟ್‌ಗೂ ಇದು ಜೋಡಿಯೇ. ಇಷ್ಟಾದ ಮೇಲೆ ಇನ್ನೇನು? ತೂಕ ಇಳಿಸುವ ಪ್ರಯತ್ನಕ್ಕೆ ಜಯವಾಗಲಿ!

Continue Reading

ಆರೋಗ್ಯ

Orange Peel Benefits: ಕಿತ್ತಳೆ ಸಿಪ್ಪೆ ಎಸೆಯದಿರಿ, ನಿಮ್ಮ ಸೌಂದರ್ಯವರ್ಧಕ ನೀವೇ ತಯಾರಿಸಿ!

ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ಸೌಂದರ್ಯವರ್ಧಕಗಳಿಗಿಂತಲೂ ಒಳ್ಳೆಯ ಫಲ ನೀಡುವ ಕಿತ್ತಳೆ ಸಿಪ್ಪೆಯೇ (Orange Peel Benefits) ನಿಮ್ಮ ಕೈಯಲ್ಲಿರುವಾಗ ವೃಥಾ ಅದನ್ನು ನಿರ್ಲಕ್ಷಿಸುವುದು ಸರಿಯೇ ಹೇಳಿ!

VISTARANEWS.COM


on

orange peel
Koo

ಚಳಿಗಾಲ ಬಂದೊಡನೆ ಮಾರುಕಟ್ಟೆಯ ತುಂಬ ಕಿತ್ತಳೆಯೂ ರಾಶಿ ಬೀಳುತ್ತದೆ. ಸಿ ವಿಟಮಿನ್‌ (Vitamin C) ಹಾಗೂ ಭರಪೂರ ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿರುವ ಈ ಕಿತ್ತಳೆ ಹಣ್ಣು (Orange fruit) ರೋಗ ನಿರೋಧಕ (immunity) ಶಕ್ತಿಯನ್ನೂ ಹೆಚ್ಚು ಮಾಡುತ್ತದೆ. ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು (winter health problems) ಹತ್ತಿರ ಸುಳಿಯದಂತೆ ಕಾಫಾಡುವ ಶಕ್ತಿಯೂ ಈ ಕಿತ್ತಳೆಯಲ್ಲಿದೆ. ಇಂತಹ ಕಿತ್ತಳೆ ಹಣ್ಣನ್ನು ತಿಂದು ತಿಂದು ಸಿಪ್ಪೆಯನ್ನು ಮಾತ್ರ ಕಸದ ಬುಟ್ಟಿಗೆ ಎಸೆಯುತ್ತಿದ್ದೀರಾ? ಹಾಗಾದರೆ, ಮತ್ತೆ ಎಸೆಯುವ ಮೊದಲು ಒಮ್ಮೆ ಯೋಚಿಸಿ. ಅಂಗೈಯಲ್ಲಿ ಬಂಗಾರವನ್ನಿಟ್ಟು ಅದಕ್ಕಾಗಿ ಊರೆಲ್ಲ ಹುಡುಕಿದ ಹಾಗಾಯಿತು ನಿಮ್ಮ ಸ್ಥಿತಿ. ಯಾಕೆಂದರೆ, ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ಸೌಂದರ್ಯವರ್ಧಕಗಳಿಗಿಂತಲೂ (Cosmetics) ಒಳ್ಳೆಯ ಫಲ ನೀಡುವ ಕಿತ್ತಳೆ ಸಿಪ್ಪೆಯೇ (Orange Peel Benefits) ನಿಮ್ಮ ಕೈಯಲ್ಲಿರುವಾಗ ವೃಥಾ ಅದನ್ನು ನಿರ್ಲಕ್ಷಿಸುವುದು ಸರಿಯೇ ಹೇಳಿ. ಕೊಂಚ ತಾಳ್ಮೆಯಿದ್ದರೆ, ನಿಮ್ಮ ಸೌಂದರ್ಯವರ್ಧಕವನ್ನು ನೀವೇ ತಯಾರಿ ಮಾಡಿಕೊಳ್ಳಬಹುದು!

1. ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿ ಇಟ್ಟುಕೊಂಡರೆ, ಮಾರುಕಟ್ಟೆಯಿಂದ ಸ್ಕ್ರಬ್‌ಗೆ ದುಡ್ಡು ಕೊಡಬೇಕಾಗಿಲ್ಲ. ಒಣಗಿಸಿಟ್ಟುಕೊಂಡ ಕಿತ್ತಳೆಯ ಸಿಪ್ಪೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪುಡಿ ಮಾಡಿಕೊಂಡು ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಂಡರೆ ಆಗಾಗ ವಾರಕ್ಕೊಮ್ಮೆ ಈ ಕಿತ್ತಳೆ ಸಿಪ್ಪೆಯ ಪುಡಿಗೆ ನೀರು ಹಾಗೂ ಮೊಸರು ಸೇರಿ ಮುಖಕ್ಕೆ ಸ್ಕ್ರಬ್‌ ಮಾಡಿಕೊಳ್ಳಬಹುದು. ನೈಸರ್ಗಿಕವಾದ ಈ ಸ್ಕ್ರಬ್‌ ಸಾಮಾನ್ಯವಾದ ಮಾರುಕಟ್ಟೆಯ ರಾಸಾಯನಿಕಯುಕ್ತ ಸ್ಕ್ರಬ್‌ಗಳಿಗಿಂತಲೂ ಚೆನ್ನಾಗಿ ಫಲ ನೀಡುತ್ತದೆ. ಚರ್ಮದ ಒಣ ಸತ್ತ ಪದರಗಳು ಬಿದ್ದು ಹೋಗಿ ನಿಮ್ಮ ಮುಖದ ಚರ್ಮ ನಳನಳಿಸುತ್ತದೆ.

2. ಕಿತ್ತಳೆ ಸಿಪ್ಪೆಯನ್ನು ಹಾಗೆಯೇ ಕಸದ ಬುಟ್ಟಿಗೆ ಹಾಕುವ ಮೊದಲು ಒಂದಿಷ್ಟು ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಕುದಿಸಿ. ಚೆನ್ನಾಗಿ ಕುದಿದ ಮೇಲೆ ನೀರನ್ನು ಸೋಸಿಕೊಂಡು ತಣಿಸಿ ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿಡಿ. ಆಗಾಗ ಮುಖಕ್ಕೆ ಇದನ್ನು ಟೋನರ್‌ನಂತೆ ಬಳಸಿಕೊಳ್ಳಬಹುದು. ಇದು ಮುಖದ ರಂಧ್ರಗಳನ್ನು ಬಿಗಿಗೊಳಿಸಿ ನೈಸರ್ಗಿಕ ಕಾಂತಿಯನ್ನು ಚಿಮ್ಮಿಸಿ ಯೌವನವನ್ನು ತುಳುಕಿಸುತ್ತದೆ. ಈ ನೀರನ್ನು 10ರಿಂದ 15 ದಿನಗಳ ಕಾಲ ಫ್ರಿಡ್ಜ್‌ನಲ್ಲಿ ಇಟ್ಟುಕೊಂಡು ನಿತ್ಯವೂ ಬಳಸಬಹುದು.

orange fruit benefits

3. ಒಣಗಿಸಿ ಪುಡಿ ಮಾಡಿಟ್ಟುಕೊಂಡ ಕಿತ್ತಳೆ ಪುಡಿಯನ್ನು ಜೇನಿನ ಜೊತೆಗೆ ಮಿಕ್ಸ್‌ ಮಾಡಿ ಮುಖಕ್ಕೆ ಪ್ಯಾಕ್‌ ಹಚ್ಚಿಕೊಳ್ಳಬಹುದು. ಈ ಫೇಸ್‌ ಪ್ಯಾಕ್‌ ಮುಖವನ್ನು ಇನ್ನಷ್ಟು ಹೊಳಪಾಗಿಸುತ್ತದೆ. 15-20 ನಿಮಿಷಗಳ ಕಾಳ ಇಟ್ಟುಕೊಂಡು ತೊಳೆಯಿರಿ.

4. ಕಿತ್ತಳೆಯ ಸಿಪ್ಪೆಯ ಒಳಭಾಗವನ್ನು ಅಂದರೆ ಬಿಳಿಯ ಭಾಗವನ್ನು ಚರ್ಮಕ್ಕೆ ಉಜ್ಜಿ. ಇದು ಹೆಚ್ಚುವರಿ ಎಣ್ಣೆಯಂಶ ಉತ್ಪತ್ತಿಯಾಗದಂತೆ ತಡೆಯುವ ಮೂಲಕ ಮೊಡವೆಯನ್ನು ತಡೆಯುತ್ತದೆ.

5. ಕಿತ್ತಳೆ ಸಿಪ್ಪೆಯನ್ನು ಎಸೆಯದೆ, ಅದನ್ನು ಸ್ನಾನ ಮಾಡುವ ನೀರಿನಲ್ಲಿ ಹಾಕಿಡಿ. ಈ ನೀರು ಕೇವಲ ಒಳ್ಳೆಯ ಪರಿಮಳವನ್ನಷ್ಟೇ ಅಲ್ಲ, ನೀರಿಗೆ ಸಿಟ್ರಸ್‌ ತೈಲದಂಶವನ್ನೂ ಸೇರಿಸುವ ಮೂಲಕ ಚರ್ಮವನ್ನು ಹೊಳಪಾಗಿಸುತ್ತದೆ.

ಇದನ್ನೂ ಓದಿ: Dinner time: ಸೂರ್ಯಾಸ್ತಕ್ಕೂ ಮೊದಲೇ ರಾತ್ರಿಯೂಟ ಮಾಡುವ ಅಭ್ಯಾಸದ ಲಾಭಗಳೇನು ಗೊತ್ತೇ?

6. ಕಿತ್ತಳೆ ಸಿಪ್ಪೆಗೆ ಸಕ್ಕರೆ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಕೊಂಚ ಆಲಿವ್‌ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣದಿಂದ ದೇಹದ ಚರ್ಮಕ್ಕೆ ಮಸಾಜ್‌ ಮಾಡಿ. ಬಾಡಿ ಸ್ಕ್ರಬ್‌ ಆಗಿ ಬಳಸಿ. ಇದು ಒಣ, ಸತ್ತ ಚರ್ಮವನ್ನು ತೆಗೆದು ಚರ್ಮವನ್ನು ಹೊಳಪಾಗಿ, ನುಣುಪಾಗಿಸುತ್ತದೆ.

7. ಕಣ್ಣಿನ ಅಡಿಭಾಗದಲ್ಲಿ ಕಪ್ಪಾಗಿಬಿಡುವುದು ಹಾಗೂ ಊದಿಕೊಳ್ಳುವುದು ಇತ್ಯಾದಿ ಸಮಸ್ಯೆಗಳಿಗೂ ಕಿತ್ತಳೆ ಸಿಪ್ಪೆ ಒಳ್ಳೆಯದು. ಕಿತ್ತಳೆ ಸಿಪ್ಪೆಯನ್ನು ಫ್ರಿಡ್ಜ್‌ನಲ್ಲಿಟ್ಟು ನಂತರ ತಣ್ಣಗಿನ ಸಿಪ್ಪೆಯನ್ನು ಕಣ್ಣ ಕೆಳಗಿನ ವರ್ತುಲದ ಮೇಲೆ ಸ್ವಲ್ಪ ಹೊತ್ತು ಇಡಬಹುದು.

8. ಕಿತ್ತಳೆ ಸಿಪ್ಪೆಯ ಪುಡಿಯನ್ನು ತೆಂಗಿನೆಣ್ಣೆಯ ಜೊತೆಗೆ ಬೆರೆಸಿದರೆ ಅದನ್ನು ಲಿಪ್‌ ಬಾಮ್‌ವಂತೆಯೂ ಬಳಸಬಹುದು.

ಇದನ್ನೂ ಓದಿ: Ragi malt Benefits: ಮುಂಜಾನೆ ರಾಗಿ ಅಂಬಲಿ ಸೇವಿಸಿ, ಆರೋಗ್ಯದ ಚಿಂತೆ ಮರೆತುಬಿಡಿ!

Continue Reading
Advertisement
cleaning
ದೇಶ24 mins ago

ಒಳ ಚರಂಡಿ ಸ್ವಚ್ಛಗೊಳಿಸುವಾಗ 5 ವರ್ಷಗಳಲ್ಲಿ 443 ಕಾರ್ಮಿಕರ ಸಾವು!

Ajitabh Bachchan, Younger Brother Of Amitabh At The Archies Film Screening
ಬಾಲಿವುಡ್26 mins ago

The Archies Film: ನಿಮಗೆ ಅಮಿತಾಭ್‌ ತಮ್ಮ ಅಜಿತಾಭ್‌ ಗೊತ್ತಾ? ಅವರೇ ಇವರು!

MLA Basanagouda Patil Yatnal and CM Siddaramaiah
ಕರ್ನಾಟಕ28 mins ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ41 mins ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Khalistani Terrorist Pannun
ದೇಶ59 mins ago

ಸಂಸತ್ತಿನ ಮೇಲೆ ಡಿ.13ರಂದು ಉಗ್ರ ದಾಳಿ: ಬೆದರಿಕೆ ವಿಡಿಯೋ ಹರಿಬಿಟ್ಟ ಖಲಿಸ್ತಾನಿ ಉಗ್ರ ಪನ್ನುನ್‌

lidkar ambassador dolly dhananjay Officially
South Cinema1 hour ago

Dolly Dhananjay: ಸಂಭಾವನೆ ಪಡೆಯದೆ ಲಿಡ್ಕರ್‌ ರಾಯಭಾರಿಯಾದ ಡಾಲಿ ಧನಂಜಯ್‌!

Government Job Vistara Exclusive and CM Siddaramaiah
ಉದ್ಯೋಗ1 hour ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

kim
ವಿದೇಶ2 hours ago

Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

narendra modi amit shah jp nadda
ದೇಶ2 hours ago

Assembly Election 2023: 3 ರಾಜ್ಯಗಳಲ್ಲೂ ಮುಖ್ಯಮಂತ್ರಿಯಾಗಿ ಬಿಜೆಪಿಯಿಂದ ಹೊಸ ಮುಖ

Vinay Gowda and sangeetha Bigg boss
ಬಿಗ್ ಬಾಸ್2 hours ago

BBK SEASON 10: ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದ ವಿನಯ್‌!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

MLA Basanagouda Patil Yatnal and CM Siddaramaiah
ಕರ್ನಾಟಕ28 mins ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ41 mins ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 hour ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ2 hours ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ9 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ18 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ18 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ18 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

ಟ್ರೆಂಡಿಂಗ್‌