High heels | ನೀವು ಹೈಹೀಲ್ಸ್‌ ಚಪ್ಪಲಿ ಪ್ರಿಯರೇ? ಇಲ್ಲಿವೆ ಇದರ ಎಂಟು ಬಾಧಕಗಳು! - Vistara News

ಆರೋಗ್ಯ

High heels | ನೀವು ಹೈಹೀಲ್ಸ್‌ ಚಪ್ಪಲಿ ಪ್ರಿಯರೇ? ಇಲ್ಲಿವೆ ಇದರ ಎಂಟು ಬಾಧಕಗಳು!

ಬಹಳಷ್ಟು ಮಂದಿಗೆ ಹೈಹೀಲ್ಸ್‌ ಒಳ್ಳೆಯದಲ್ಲ ಎಂಬ ಸತ್ಯ ಗೊತ್ತಿದ್ದರೂ ಹೀಲ್ಸ್‌ ಆಯ್ಕೆಯನ್ನು ಮಾತ್ರ ಕೈಬಿಡುವುದಿಲ್ಲ. ಹಾಗಾದರೆ ಹೈ ಹೀಲ್ಸ್‌ ಚಪ್ಪಲಿ ಧರಿಸುವುದರಿಂದ ಆಗುವ ತೊಂದರೆಗಳೇನು ಎಂಬುದನ್ನು ನೋಡೋಣ.

VISTARANEWS.COM


on

high heels
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಹಳಷ್ಟು ಮಹಿಳೆಯರಿಗೆ, ಮುಖ್ಯವಾಗಿ ಯುವತಿಯರಿಗೆ ಹೈಹೀಲ್ಸ್‌ ಅಂದರೆ ಪಂಚಪ್ರಾಣ. ತಾನು ಇರುವ ಎತ್ತರಕ್ಕಿಂತ ಹೆಚ್ಚು ಎತ್ತರವಾಗಿ ಹಾಗೂ ಸ್ಟೈಲಿಶ್‌ ಆಗಿ ಕಾಣಬೇಕೆಂಬ ಬಯಕೆಯಿಂದ ತಮ್ಮ ಕೈಲಾಗದಿದ್ದರೂ, ನಡೆಯಲು ಕಷ್ಟವಾದರೂ ಹೈಹೀಲ್ಸ್‌ ಚಪ್ಪಲಿ ಆಯ್ಕೆ ಮಾಡುತ್ತಾರೆ. ಅದನ್ನೇ ಹಾಕಿಕೊಂಡು ಒದ್ದಾಡುತ್ತಾ ನಡೆಯುತ್ತಾರೆ. ಬಹಳಷ್ಟು ಮಂದಿಗೆ ಹೈಹೀಲ್ಸ್‌ ಒಳ್ಳೆಯದಲ್ಲ ಎಂಬ ಸತ್ಯ ಗೊತ್ತಿದ್ದರೂ ಹೀಲ್ಸ್‌ ಆಯ್ಕೆಯನ್ನು ಮಾತ್ರ ಕೈಬಿಡುವುದಿಲ್ಲ. ಆದರೆ, ಆಮೂಲಕ ತಮ್ಮದೇ ದೇಹಕ್ಕೆ ಮಾಡಬಾರದ ತೊಂದರೆಗಳನ್ನೂ, ಕಷ್ಟಗಳನ್ನೂ ಕೊಡುತ್ತಾರೆ ಎಂಬುದನ್ನು ಸ್ವತಃ ಅವರೇ ಒಪ್ಪಿಕೊಳ್ಳಲೂ ಸಿದ್ಧವಿರುವುದಿಲ್ಲ.

ಹಾಗಾದರೆ ಹೈ ಹೀಲ್ಸ್‌ ಚಪ್ಪಲಿ ಧರಿಸುವುದರಿಂದ ಆಗುವ ತೊಂದರೆಗಳೇನು ಎಂಬುದನ್ನು ನೋಡೋಣ.

೧. ಸೊಂಟ ನೋವು: ಸೊಂಟನೋವಿಗೆ ಕಾರಣ ಏನೆಂದು ಹುಡುಕುತ್ತಿದ್ದೀರಾ? ಯಾರಿಗ್ಗೊತ್ತು, ಇದರ ಮೂಲ ಕಾರಣ ನಿಮ್ಮ ಹೈಹೀಲ್ಸ್‌ ಆಗಿರಬಹುದು. ಹೈಹೀಲ್ಸ್‌ ನಿಮ್ಮ ಹಿಮ್ಮಡಿಗೆ ಸಂಪೂರ್ಣ ಆಧಾರ ನೀಡುವುದಿಲ್ಲವಾದ್ದರಿಂದ ಹಾಗೂ ಸಮತೋಲಿತ ತೂಕ ಇದರಲ್ಲಿ ಹಂಚಿ ಹೋಗುವುದಿಲ್ಲವಾದ್ದರಿಂದ ಸಾಕಷ್ಟು ದೈಹಿಕ ಸಮಸ್ಯೆಗಳು ಬರಬಹುದು. ಅವುಗಳಲ್ಲಿ ಪ್ರಮುಖವಾದುದು ಸೊಂಟನೋವು.

೨ ಮೀನಖಂಡದ ನೋವು: ಹೀಲ್ಸ್‌ ಧರಿಸಿ ನಡೆಯುವುದರಿಂದ ಮೀನಖಂಡಗಳ ಮೇಲೆ ಒತ್ತಡ ಬೀಳುವುದರಿಂದ ವಿಪರೀತ ನೋವುಂಟಾಗಬಹುದು. ಬಹಳಷ್ಟು ಸಾರಿ ಮೀನಖಂಡದ ಉರಿಯೂತ, ಬಾವು ಮುಂತಾದ ಸಮಸ್ಯೆಗಳೂ ತಲೆದೋರಬಹುದು.

೩. ಹಿಮ್ಮಡಿ ನೋವು: ಇದು ಬಹುತೇಕ ಎಲ್ಲರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ಹೀಲ್ಸ್‌ ಧರಿಸು ಬಹುತೇಕ ಮಂದಿ ತಮ್ಮ ಹಿಮ್ಮಡಿಯ ನೋವುಂಡು ಅನುಭವ ಉಳ್ಳವರಾಗಿರುತ್ತಾರೆ. ಸುಲಭ ಹಾಗೂ ಸರಳವಾದ ಚಪ್ಪಲಿಯನ್ನು ಧರಿಸದೆ, ಕಷ್ಟವಾಗುವಂಥ ಚಪ್ಪಲಿ ಧರಿಸುವುದರ ಪ್ರಮುಖ ಸಮಸ್ಯೆ ಎಂದರೆ ಹಿಮ್ಮಡಿ ನೋವು.

high heels
high heels

೪. ಪಾದದ ಸುತ್ತ ನೋವು: ಡಿಸೈನರ್‌ ಹೀಲ್ಸ್‌ಗಳೇನೋ ನೋಡಲು ಚಂದ ನಿಜ. ಆದರೆ, ಇದರ ಜೊತೆಗೆ ಪಾದ, ಹಿಮ್ಮಡಿ ನೋವುಗಳೆಲ್ಲವೂ ಉಚಿತವಾಗಿಯೇ ಸಿಗುತ್ತವೆ ಎಂಬುದು ಅಷ್ಟೇ ನಿಜ. ಹೀಲ್ಸ್‌ ಧರಿಸಿಕೊಂಡು ಏರುಪೇರುಗಳಿರುವ, ಗುಂಡಿ ಹೋಂಡಗಳಿರುವ ರಸ್ತೆಯಲ್ಲಿ ನಡೆದು ಹೋಗುವಾಗ ಕಾಲು ಉಳುಕಿ ನೋವುಂಟಾಗುವ ಸಂದರ್ಭ ಪ್ರತಿ ಹೈಹೀಲ್ಸ್‌ ಪ್ರಿಯರಿಗೂ ಅನುಭವ ಆಗಿಯೇ ಇರುತ್ತದೆ. ಬಹಳ ಸಾರಿ ಇದು ಸರಳವಾದ ವಿಚಾರವಾಗದೆ, ಮೂಳೆ ಮುರಿತದವರೆಗೂ ತಲುಪಬಹುದು.

ಇದನ್ನೂ ಓದಿ | Paneer Benefits | ಪನೀರ್‌ ತಿನ್ನುವುದರ ಪ್ರಯೋಜನಗಳು ಗೊತ್ತೇ?

೫. ಬೆನ್ನುಹುರಿ ನೋವು: ಕಾಲಿಗೆ ಧರಿಸುವ ಹೈಹೀಲ್ಸ್‌ಗೂ ಬೆನ್ನು ನೋವಿಗೂ ಏನು ಸಂಬಂಧ ಎನ್ನಬೇಡಿ. ಬಹಳಷ್ಟು ಮಂದಿ ತಮ್ಮ ಬಳುಕುವ ಬಳ್ಳಿಯಂಥ ದೇಹ ಪ್ರದರ್ಶನಕ್ಕಾಗಿ ಸಹಜವಾಗಿರುವುದಕ್ಕಿಂತ ಹೆಚ್ಚು, ಬೆನ್ನನ್ನು ವಕ್ರವಾಗಿಸಿಸ ನಡೆದು ಎಡವಟ್ಟು ಮಾಡಿಕೊಳ್ಳುತ್ತಾರೆ. ಇಂಥ ಸಂದರ್ಭ ಬೆನ್ನುನೋವಿನಂಥ ಸಮಸ್ಯೆಗಳು ತಲೆದೋರಬಹುದು.

೬. ಹೈಹೀಲ್ಸ್‌ ಯಾವಾಗಲೂ ಧರಿಸುವುದರಿಂದ ಕಾಲು ಹಾಗೂ ಪಾದದ ಆಕಾರವೇ ಬದಲಾಗಿ ಬಿಡುವ ಸಂಭವವಿದೆ. ಚೂಪಾದ ಹಾಗೂ ಉದ್ದವಾದ ಪಾದಗಳಾಗಿ ಬದಲಾಗುವ ಕಾರಣ, ಬೇರೆ ಚಪ್ಪಲ್ಲಿ, ಹಾಗೂ ಶೂ ಧರಿಸಲು ಕಾಲಿನ ಆಕಾರ ಸೂಕ್ತವಲ್ಲದ್ದಾಗಿ ಬದಲಾಗಿ ನೋವು ಅನುಭವಿಸಬೇಕಾಗುತ್ತದೆ.

೭. ಹೈಹೀಲ್ಸ್‌ನಲ್ಲಿ ನಡೆಯುವ ಭಂಗಿಯಿಂದಾಗಿ, ಕಾಲಿನ ಮೇಲೆ ಅನವಶ್ಯಕ ಒತ್ತಡ ಬಿದ್ದು ನಮ್ಮ ಗಂಟುಗಳಲ್ಲಿರುವ ಅತ್ಯಂತ ಅಗತ್ಯವಾದ ಲಿಗಮೆಂಟ್‌ಗಳು ಶಕ್ತಿಹೀನವಾಗುವ ಸಂಭವವೂ ಇದೆ.

೮. ಮೊಣಕಾಲು ನೋವು, ಗಂಟುನೋವುಗಳು ವಯಸ್ಸಾದವರ ಸಮಸ್ಯೆ ಎಂದು ಆರಾಮವಾಗಿರಬೇಡಿ. ನೀವು ಹೈ ಹೀಲ್ಸ್‌ ಧರಿಸುವ ಅಭ್ಯಾಸ ಹೊಂದಿದ್ದರೆ ಅದು ಸಣ್ಣ ವಯಸ್ಸಿನಲ್ಲೂ ಬರಬಹುದು. ಇತ್ತೀಚಿನ ದಿನಗಳಲ್ಲಿ, ಬದಲಾದ ಜೀವನಪದ್ಧತಿ ಹಾಗೂ ಇತರ ಅಭ್ಯಾಸಗಳಿಂದ ಹಲವು ಇಂತಹ ಸಮಸ್ಯೆಗಳು ವಯಸ್ಸಿನ ಭೇದವಿಲ್ಲದೆ ಸಣ್ಣ ವಯಸ್ಸಿನಲ್ಲೂ ಬರುವುದರಿಂದ ಈ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಫ್ಯಾಷನ್‌, ಟ್ರೆಂಡ್‌ಗಳನ್ನು ಅನುಕರಿಸುವಾಗ ತಮ್ಮ ಆರೋಗ್ಯಕ್ಕೆ ಪೂರಕವಾದ, ಸರಳವಾದ ಶೈಲಿ ಹಾಗೂ ಕ್ರಮವನ್ನು ಅನುಸರಿಸಿದರೆ ಒಳ್ಳೆಯದು.

ಇದನ್ನೂ ಓದಿ | Coriander Benefits | ಕೊತ್ತಂಬರಿ ಬೀಜ ಮತ್ತು ಸೊಪ್ಪು- ಅಡುಗೆಗೆ ರುಚಿ, ಆರೋಗ್ಯಕ್ಕೂ ಹಿತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Sadhguru Jaggi Vasudev: ನಮ್ಮ ಹೃದಯವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಹೇಗೆ? ಸದ್ಗುರು ಸಲಹೆ ಇಲ್ಲಿದೆ ಕೇಳಿ

ಆರೋಗ್ಯಕರ ಅಪಧಮನಿಗಳ ರಹಸ್ಯವು ಸಾಧಾರಣ ಮತ್ತು ಶಕ್ತಿಯುತವಾದ ಸೂಪರ್‌ಫುಡ್‌ನಲ್ಲಿ ಇದೆ. ಕರಿ ಮೆಣಸು ಕೂಡ ಇದರಲ್ಲೊಂದು. ಇದು ರಕ್ತಪರಿಚಲನೆಯನ್ನು ಸುಧಾರಿಸುವ, ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ಸಹಾಯ ಮಾಡುವ ಮತ್ತು ಆರೋಗ್ಯವನ್ನು ಹೆಚ್ಚು ವರ್ಧಿಸುವ ಆಹಾರವಾಗಿದೆ ಎಂದು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ (Sadhguru  Jaggi Vasudev) ಹೇಳಿದ್ದಾರೆ.

VISTARANEWS.COM


on

By

Sadhguru  Jaggi Vasudev
Koo

ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು (heart attack case) ಹೆಚ್ಚಾಗುತ್ತಿದೆ. ಹೀಗಾಗಿ ಇಂದು ಹೃದಯದ ಕಾಳಜಿ ಕೊಂಚ ಹೆಚ್ಚು ವಹಿಸುವುದು ಬಹುಮುಖ್ಯವಾಗಿದೆ. ಇದಕ್ಕಾಗಿ ಸುಪ್ರಸಿದ್ಧ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಸೂಪರ್ ಫುಡ್ ಗಳ ಬಗ್ಗೆ ಹೇಳಿದ್ದಾರೆ. ಇದರ ಮಾಹಿತಿ ಇಲ್ಲಿದೆ.

ಆರೋಗ್ಯಕರ ಹೃದಯಕ್ಕಾಗಿ (healthy heart) ಅದರ ದಾರಿಯನ್ನು ಅನಿರ್ಬಂಧಿಸುವುದು ಕೂಡ ಅಷ್ಟೇ ಅಗತ್ಯ. ಆರೋಗ್ಯಕರ ಅಪಧಮನಿಗಳು ಮತ್ತು ಬಲವಾದ ಹೃದಯರಕ್ತನಾಳದ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ ವಿಧಾನವನ್ನು ಸದ್ಗುರು ಹೇಳಿದ್ದಾರೆ.

ಆರೋಗ್ಯಕರ ಅಪಧಮನಿಗಳ ರಹಸ್ಯವು ಸಾಧಾರಣ ಮತ್ತು ಶಕ್ತಿಯುತವಾದ ಸೂಪರ್‌ಫುಡ್‌ನಲ್ಲಿ ಇದೆ. ಇದು ರಕ್ತಪರಿಚಲನೆಯನ್ನು ಸುಧಾರಿಸುವ, ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ಸಹಾಯ ಮಾಡುವ ಮತ್ತು ಆರೋಗ್ಯವನ್ನು ಹೆಚ್ಚು ವರ್ಧಿಸುವ ಆಹಾರವಾಗಿದೆ. ನಾನು ಹೇಳುವ ಸಲಹೆಯನ್ನು ಪಾಲಿಸಿ ಮತ್ತು ಆರೋಗ್ಯವನ್ನು ಸುಧಾರಿಸಲು ಸಿದ್ಧರಾಗಿ ಎಂದು ಸದ್ಗುರು ತಿಳಿಸಿದ್ದಾರೆ.ಸದ್ಗುರು ತಮ್ಮ ಜೀವನವನ್ನು ಆರೋಗ್ಯಕರವಾಗಿ ರೂಪಿಸಿಕೊಂಡಿದ್ದಾರೆ. ಜೀವನದಲ್ಲಿ ಒಳ್ಳೆಯದನ್ನು ಸಾಧಿಸಲು ಎಲ್ಲರಿಗೂ ಸಹಾಯ ಮಾಡುವ ಅವರು, ತಮ್ಮ ಭಕ್ತರಿಗೆ ಆಗಾಗ್ಗೆ ಸಲಹೆಗಳನ್ನು ನೀಡುತ್ತಿರುತ್ತಾರೆ.


ಇತ್ತೀಚೆಗೆ ಅವರು ಅಪಧಮನಿಗಳನ್ನು ಉತ್ತಮಗೊಳಿಸಲು ಸಲಹೆಗಳನ್ನು ಹಂಚಿಕೊಂಡಿದ್ದು, ಇದು ಖಂಡಿತಾ ಪ್ರಯೋಜನಕಾರಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Curry Leaves: ಇದರ ಮಹತ್ವ ತಿಳಿದರೆ ನೀವು ಇನ್ನೆಂದೂ ಕರಿ ಬೇವಿನ ಎಲೆಯನ್ನು ಪಕ್ಕಕ್ಕೆ ಎತ್ತಿಡುವುದಿಲ್ಲ!

ಕಪ್ಪು ಬಂಗಾರ ಎಂದೇ ಕರೆಯಲ್ಪಡುವ ಕರಿ ಮೆಣಸನ್ನು ದೀರ್ಘಕಾಲದವರೆಗೆ ಸಂಗ್ರಹಿಸಿ ಇಡಬಹುದು. ಆಹಾರದಲ್ಲಿ ಕರಿಮೆಣಸು ಅಥವಾ ಕಾಳುಮೆಣಸನ್ನು ಬಳಸುವುದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

ಅಪಧಮನಿಗಳನ್ನು ಸ್ವಚ್ಛವಾಗಿಡುವಲ್ಲಿ ಮಹತ್ತರವಾದ ಪಾತ್ರ ವಹಿಸುವ ಕರಿಮೆಣಸು ಬಹಳ ದೊಡ್ಡ ಪ್ರಮಾಣದಲ್ಲಿ ಬಳಸಿದರೆ ಅದು ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಅದನ್ನು ಸಣ್ಣ ಪ್ರಮಾಣದಲ್ಲಿ ನಿತ್ಯವೂ ಆಹಾರದಲ್ಲಿ ಸೇವಿಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಸದ್ಗುರು.

Continue Reading

ಆರೋಗ್ಯ

Side Effects Of Dry Fruits: ಆರೋಗ್ಯಕ್ಕೆ ಒಳ್ಳೆಯದೆಂದು ಒಣಬೀಜಗಳನ್ನು ಅತಿಯಾಗಿ ತಿನ್ನುತ್ತೀರಾ? ಎಚ್ಚರ!

Side Effects Of Dry Fruits: ದೇಹಕ್ಕೆ ಸಿಗಬೇಕಾದ ಎಲ್ಲ ಬಗೆಯ ಪೋಷಕಾಂಶಗಳನ್ನೂ ಒದಗಿಸುವ ಸುಲಭವಾದ ನೈಸರ್ಗಿಕ ವಿಧಾನವಿದು. ಆದರೆ, ನೆನಪಿಡಿ. ಅತಿಯಾದರೆ ಅಮೃತವೂ ವಿಷವೇ ಅಲ್ಲವೇ? ಪೋಷಕಾಂಶಗಳ ಪವರ್‌ ಹೌಸ್‌ ಆಗಿದ್ದರೂ ಬೀಜಗಳ ಅತಿಯಾದ ಸೇವನೆಯಿಂದ ಕೆಲವೊಮ್ಮೆ ಇದು ತೊಂದರೆಯನ್ನೂ ತರಬಹುದು. ಆರೋಗ್ಯ ಹೆಚ್ಚಿಸಲು ಹೊರಟು ಅನಾರೋಗ್ಯದ ಕಡೆಗೆ ಮುಖ ಮಾಡಬೇಕಾಗಬಹುದು.

VISTARANEWS.COM


on

Side Effects Of Dry Fruits
Koo

ಒಣ ಬೀಜಗಳನ್ನು ತಿನ್ನುವುದು ಒಳ್ಳೆಯದು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಪೋಷಕಾಂಶಗಳ ಪವರ್‌ ಹೌಸ್‌ ಆಗಿರುವ ಈ ಬೀಜಗಳನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿಗೆ. ದೇಹಕ್ಕೆ ಸಿಗಬೇಕಾದ ಎಲ್ಲ ಬಗೆಯ ಪೋಷಕಾಂಶಗಳನ್ನೂ ಒದಗಿಸುವ ಸುಲಭವಾದ ನೈಸರ್ಗಿಕ ವಿಧಾನವಿದು. ಆದರೆ, ನೆನಪಿಡಿ. ಅತಿಯಾದರೆ ಅಮೃತವೂ ವಿಷವೇ ಅಲ್ಲವೇ? ಪೋಷಕಾಂಶಗಳ ಪವರ್‌ ಹೌಸ್‌ ಆಗಿದ್ದರೂ ಬೀಜಗಳ ಅತಿಯಾದ ಸೇವನೆಯಿಂದ ಕೆಲವೊಮ್ಮೆ ಇದು ತೊಂದರೆಯನ್ನೂ ತರಬಹುದು. ಆರೋಗ್ಯ ಹೆಚ್ಚಿಸಲು ಹೊರಟು ಅನಾರೋಗ್ಯದ ಕಡೆಗೆ ಮುಖ ಮಾಡಬೇಖಾಗಬಹುದು. ಬನ್ನಿ, ಅತಿಯಾಗಿ ಬೀಜಗಳನ್ನು ಸೇವಿಸುವುದರಿಂದ ಐವ ಸಮಸ್ಯೆಗಳು ಉದ್ಭವಿಸಬಹುದು (Side Effects Of Dry Fruits) ಎಂಬುದನ್ನು ನೋಡೋಣ.

Weight gain

ತೂಕ ಏರಿಕೆ

ಬೀಜಗಳಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳಿವೆ. ವಿಟಮಿನ್‌ಗಳು, ಖನಿಜಾಂಶಗಳು, ನಾರಿನಂಶ, ಒಳ್ಳೆಯ ಕೊಬ್ಬು, ಸೇರಿದಂತೆ ಎಲ್ಲವೂ ಇದರಿಂದ ಪಡೆಯಬಹುದು. ಆದರೆ ಇವುಗಳ ಸೇವನೆ ಅತಿಯಾದರೆ, ತೂಕದಲ್ಲಿ ದಿಡೀರ್‌ ಏರಿಕೆಯಾಗಬಹುದು. ಬೊಜ್ಜು ಬರಬಹುದು. ಇದರಿಂದ ಸಿಗುವ ಲಾಭಗಳು ನಷ್ಟವಾಗಿ ಪರಿಣಮಿಸಬಹುದು. ಯಾಕೆಂದರೆ, ಹೆಚ್ಚಿನ ಕ್ಯಾಲರಿ ಇರುವ ಬೀಜಗಳನ್ನು ಅತಿಯಾಗಿ ತಿಂದರೆ, ಖಂಡಿತವಾಗಿಯೂ ತೂಕ ಏರಿಕೆಯಾಗಬಹುದು.

Improves Digestion Karela Benefits

ಜೀರ್ಣಕ್ರಿಯೆ ಸಮಸ್ಯೆ

ಜೀರ್ಣಕ್ರಿಯೆಯ ಸಮಸ್ಯೆಗಳೂ ಹಲವರಲ್ಲಿ ಬರುವ ಸಾಧ್ಯತೆಗಳಿವೆ. ಹೊಟ್ಟೆಯುಬ್ಬರ, ಗ್ಯಾಸ್‌, ಬೇದಿ ಇತ್ಯಾದಿಗಳಿಗೂ ಕಾರಣವಾಗಬಹುದು. ಮುಖ್ಯವಾಗಿ ಮೊದಲೇ ಜೀರ್ಣಕ್ರಿಯೆಯ ಸಮಸ್ಯೆ ಇರುವ ಮಂದಿಗೆ, ಸೂಕ್ಷ್ಮವಾದ ಜೀರ್ಣಕ್ರಿಯೆಯನ್ನು ಹೊಂದಿದ ಮಂದಿಯಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ಬಾದಾಮಿ, ಗೋಡಂಬಿಯಂತಹ ಬೀಜಗಳಲ್ಲಿ ಆಕ್ಸಲೇಟ್‌ ಹಾಗೂ ಫೈಟೇಟ್‌ಗಳಿದ್ದು ಇವು ಖನಿಜಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಕಡಿಮೆ ಮಾಡುವ ಕಾರಣ ಬಹಳ ಸಾರಿ, ಕಿಡ್ನಿ ಕಲ್ಲಿನಂತಹ ಸಮಸ್ಯೆಯನ್ನು ಹುಟ್ಟುಹಾಕಬಹುದು.
ಅಷ್ಟೇ ಅಲ್ಲ, ಬೀಜಗಳಲ್ಲಿ ಕೊಬ್ಬಿನಂಶ ಹೇರಳವಾಗಿ ಇರುವುದರಿಂದ ಇವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತೆ. ಇದರಿಂದ ಹೊಟ್ಟೆ ತುಂಬಿರುವ ಅನುಭವವೇ ಹೆಚ್ಚಿರುತ್ತದೆ. ಹೆಚ್ಚು ಬೀಜಗಳನ್ನು ತಿಂದಾಗ ಈ ಭಾವ ಹೆಚ್ಚಿರುವುದರಿಂದ ಹಾಗೂ ಬಹುಬೇಗನೆ ಜೀರ್ಣವಾಗದೆ, ಹೊಟ್ಟೆ ಭಾರವಾದ ಅನುಭವ ನೀರುತ್ತದೆ. ಬೀಜಗಳಲ್ಲಿರುವ ಆಕ್ಸಲೇಟ್‌ ಹಾಗೂ ಫೈಟೇಟ್‌ಗಳು ಪೋಷಕಾಂಶಗಳ ಹೀರಿಕೆಯ ವಿಚಾರದಲ್ಲಿ ಕೆಲವೊಮ್ಮೆ ಅಡ್ಡಿಯನ್ನು ಉಂಟು ಮಾಡುವ ಗುಂವನ್ನೂ ಹೊಂದಿದೆ. ಇದು ಜೀರ್ಣನಾಳಗಳ ಒಳಮೈಗೆ ಕಿರಿಕಿರಿನ್ನು ಉಂಟು ಮಾಡುತ್ತದೆ. ಆಗಾಗ ಬೀಜಗಳನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡವರು ಖಂಡಿತ ತಮ್ಮ ಅಭ್ಯಾಸದ ಬಗ್ಗೆ ಗಮನ ಹರಿಸುವುದು ಸೂಕ್ತ. ಯಾಕೆಂದರೆ ಈ ಅತಿಯಾದ ಬೀಜಗಳ ಸೇವನೆ ಅಭ್ಯಾಸ ಕೊಲೆಸ್ಟೆರಾಲ್‌ ಹಾಗೂ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಒಳ್ಳೆಯ ಕೊಬ್ಬು ಒಳ್ಳೆಯದಾಗಿಯೇ ವರ್ತಿಸಬೇಕೆಂದರೆ, ಇವುಗಳ ಸೇವನೆ ಹಿತಮಿತವಾಗಿರಬೇಕು.

ಮಿತವಾಗಿ ತಿನ್ನಬೇಕು

ತಜ್ಞರು ಹೇಳುವಂತೆ, ಬೀಜಗಳ ಅತ್ಯುನ್ನತ ಲಾಭಗಳನ್ನು ನಾವು ಪಡೆಯಬೇಕೆಂದರೆ ಅವನ್ನು ಮಿತವಾಗಿ ತಿನ್ನಬೇಕು. ಯಾವುದೂ ಅತಿಯಾಗಬಾರದು. ಬೀಜಗಳಲ್ಲಿ ಆರೋಗ್ಯಕರ ಕೊಬ್ಬು, ನಾರಿನಂಶ, ಪ್ರೊಟೀನ್‌, ವಿಟಮಿನ್‌ ಬಿ ಹಾಗೂ ಇಯಂತಹ ಪೋಷಕ ತತ್ವಗಳಿದ್ದು, ಮೆಗ್ನೀಷಿಯಂ, ಪೊಟಾಶಿಯಂ, ಝಿಂಕ್‌ನಂತಹ ಖನಿಜಾಂಶಗಳಿದ್ದು ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳೂ ಇವೆ. ಇವನ್ನು ಹಿತಮಿತವಾಗಿ ಸೇವಿಸಿದರೆ ಹೆಚ್ಚು ಲಾಭ ಪಡೆಯಬಹುದು.

ಇದನ್ನೂ ಓದಿ: Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?

ಎಷ್ಟು ತಿನ್ನಬಹುದು

ಹಾಗಾದರೆ ದಿನಕ್ಕೆ ಎಷ್ಟು ತಿನ್ನಬಹುದು ಎಂಬ ಗೊಂದಲ ನಿಮ್ಮನ್ನು ಕಾಡುವುದು ಸಹಜವೇ. ತಜ್ಞರ ಪ್ರಕಾರ, ನಿಮ್ಮ ಮುಷ್ಟಿಯೊಳಗೆ ಹಿಡಿಯುವಷ್ಟು ಬೀಜಗಳನ್ನು ನೀವು ದಿನವೊಂದಕ್ಕೆ ಸೇವಿಸಬಹುದು. ಎಲ್ಲ ಬೀಜಗಳೂ ಸೇರಿ ಅದು ನಿಮ್ಮ ಮುಷ್ಠಿ ಗಾತ್ರಕ್ಕಿಂತ ಹೆಚ್ಚಾಗುವುದು ಬೇಡ. ಅಂದರೆ ಸುಮಾರು ೨೮ ಗ್ರಾಂನಷ್ಟು ಬೀಜಗಳ ಸೇವನೆಯನ್ನು ನೀವು ಮಾಡಬಹುದು. ಈ ಮುಷ್ಠಿಯಲ್ಲಿ ಎಲ್ಲ ಬಗೆಯ ಬೀಜಗಳೂ ಸೇರಿರಲಿ, ಕುಂಬಳಕಾಯಿ ಬೀಜ, ಬಾದಾಮಿ, ವಾಲ್ನಟ್‌, ಗೋಡಂಬಿ, ಕಡಲೆಕಾಯಿ, ಸೂರ್ಯಕಾಂತಿ ಬೀಜ ಇತ್ಯಾದಿಗಳೆಲ್ಲ ನಿಮ್ಮ ಮುಷ್ಠಿ ಗಾತ್ರದಿಂದ ಹೊರಚೆಲ್ಲದಿರಲಿ. ಹೀಗೆ ಮಾಡುವುದರಿಂದ ಈ ಬೀಜಗಳ ಎಲ್ಲ ಬಗೆಯ ಪೋಷಕಾಂಶಗಳ ಲಾಭವನ್ನೂ ನೀವು ಪಡೆಯುವಂತಾಗುತ್ತೀರಿ.

Continue Reading

ಆರೋಗ್ಯ

Dengue Fever: ಡೆಂಗ್ಯೂ ಜ್ವರ ಕಡಿಮೆ ಆದ ಮೇಲೆ ಎಚ್ಚರ ತಪ್ಪಿದರೆ ಪ್ರಾಣಾಪಾಯ!

Dengue Fever: ರಾಜ್ಯದಲ್ಲಿ ಬಿಟ್ಟೂ ಬಿಡದಂತೆ ಕಾಡುತ್ತಿರುವ ಡೆಂಗ್ಯೂ ತನ್ನ ರೌದ್ರತೆಯನ್ನು ಹೆಚ್ಚಿಸುತ್ತಲೇ ಹೋಗುತ್ತಿದೆ. ಡೆಂಗ್ಯೂ ಬಂದು, ವಾಸಿಯಾದ ಬಳಿಕವೇ ಆ ವ್ಯಕ್ತಿಯನ್ನು ಇನ್ನಷ್ಟು ನಲುಗಿಸುತ್ತಿದೆ. ಡೆಂಗ್ಯು ವಾಸಿಯಾದ ಬಳಿಕ ದೇಹದಲ್ಲಿ ಬಿಳಿರಕ್ತ ಕಣ (ಪ್ಲೇಟ್‌ಲೆಟ್ಸ್‌)ಗಳನ್ನು ಕಾಪಾಡಿಕೊಳ್ಳುವುದು ಹಾಗೂ ಡೆಂಗ್ಯೂ ಚಿಕಿತ್ಸೆಯ ಬಗ್ಗೆ ಆರೋಗ್ಯ ಪರಿಣತರು ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

VISTARANEWS.COM


on

Dengue Fever
Koo

-ಡಾ ವಿಕಾಸ್ ನಾಯಕ್, ಸಲಹೆಗಾರ, ನ್ಯೂರೋಸರ್ಜರಿ, ಫೋರ್ಟಿಸ್ ಆಸ್ಪತ್ರೆ, ರಾಜಾಜಿ ನಗರ, ಬೆಂಗಳೂರು
ಎಲ್ಲರಿಗೂ ತಿಳಿದಿರುವಂತೆ ಡೆಂಗ್ಯೂ ಸೊಳ್ಳೆಯಿಂದ ಹರಡುವ ಸೋಂಕು. ಜ್ವರ, ತಲೆನೋವು ಮತ್ತು ದೇಹದ ನೋವುಗಳಂತಹ ಸೌಮ್ಯ ಲಕ್ಷಣಗಳಿಂದ ಉಂಟಾಗುವ ಡೆಂಗ್ಯೂ (Dengue Fever) ಪ್ರಾರಂಭದಲ್ಲಿ ಸಾಮಾನ್ಯ ಜ್ವರದಂತೆಯೇ ಭಾಸವಾಗುತ್ತದೆ. ಸಾಮಾನ್ಯವಾಗಿ ಜ್ವರ ಪ್ರಾರಂಭವಾದ 3-7 ದಿನಗಳ ನಂತರ ಕಾಣಿಸಿಕೊಳ್ಳುತ್ತವೆ ಜ್ವರವೆಂದು ನಿರ್ಲಕ್ಷಿಸಿ ಕೇವಲ ಜ್ವರ, ಮೈ-ಕೈ ನೋವಿನ ಮಾತ್ರೆ ತೆಗೆದುಕೊಂಡು ಸುಮ್ಮನಾದರೆ ಸಾಲದು. ನಾಲ್ಕೈದು ದಿನವಾದರೂ ದೇಹದಲ್ಲಿ ನಿಶ್ಶಕ್ತಿ, ನಿರಂತರ ವಾಂತಿ, ತೀವ್ರವಾದ ಹೊಟ್ಟೆ ನೋವು, ಉಸಿರಾಟದ ತೊಂದರೆ, ಒಸಡುಗಳಲ್ಲಿ ರಕ್ತಸ್ರಾವ, ಮೂಗಿನ ರಕ್ತಸ್ರಾವ ಅಥವಾ ವಾಂತಿ ಅಥವಾ ಮಲದಲ್ಲಿನ ರಕ್ತದ ರೋಗಲಕ್ಷಣಗಳಿದ್ದರೆ ತಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆಯಿರಿ.

man have a fever

ಪ್ಲೇಟ್‌ಲೆಟ್ಸ್‌ಗಳ ಬಗ್ಗೆ ಅರಿವಿರಲಿ

ಸಾಕಷ್ಟು ಜನರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಬಿಳಿ ರಕ್ತಕಣಗಳ ಬಗ್ಗೆ ಅಷ್ಟಾಗಿ ಅರಿವಿರುವುದಿಲ್ಲ. ಆದರೆ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಬಿಳಿರಕ್ತ ಕಣಗಳ ಪಾತ್ರ ದೊಡ್ಡದು. ಇದರ ಪ್ರಮಾಣ ಕುಸಿದರೆ ಜೀವವೇ ಹೋಗಬಹುದು. ಡೆಂಗ್ಯೂ ಬಂದ ವಾಸಿಯಾದ ಬಳಿಕ ಬಿಳಿರಕ್ತಕಣಗಳು, ಸಣ್ಣ ರಕ್ತ ಕಣ್ಣಗಳು ಕುಸಿತದ ಜೊತೆಗೆ ರಕ್ತವು ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೂಡಲೇ ದೇಹದಲ್ಲಿ ಪ್ಲೇಟ್‌ಲೇಟ್ಸ್‌ಗಳನ್ನು ಹೆಚ್ಚಿಸುವ ಚಿಕಿತ್ಸೆ ಪಡೆಯುವುದು ಅತಿ ಅವಶ್ಯಕ.

ಆಂತರಿಕ ರಕ್ತಸ್ರಾವವೂ ಆಗಬಹುದು

ಕೇವಲ ಪ್ಲೇಟ್‌ಲೇಟ್ಸ್‌ಗಳು ಕಡಿಮೆಯಾಗುವುದಷ್ಟೇ ಅಲ್ಲದೆ, ದೇಹದ ಒಳಗಡೆ ರಕ್ತಸ್ರಾವವಾಗುವ ಸಾಧ್ಯತೆಯೂ ಹೆಚ್ಚು. ಹೊಟ್ಟೆ, ಕರುಳು, ಯಕೃತ್‌, ಮೆದುಳು ಸೇರಿದಂತ ವಿವಿಧ ಅಂಗಗಳಲ್ಲಿ ಈ ಆಂತರಿಕ ರಕ್ತಸ್ತ್ರಾವವಾಗಬಹುದು. ಆಂತರಿಕ ರಕ್ತಸ್ರಾವದ ಲಕ್ಷಣಗಳು ಪ್ರಾರಂಭದಲ್ಲಿ ಸೂಕ್ಷ್ಮವಾಗಿದ್ದರೂ, ನಂತರದಲ್ಲಿ ವೇಗವಾಗಿ ಪ್ರಗತಿ ಹೊಂದಬಹುದು. ನಿರಂತರ ವಾಂತಿ, ಕಪ್ಪು ಮಲ, ಮೂತ್ರದಲ್ಲಿ ರಕ್ತ, ತೀವ್ರವಾದ ಹೊಟ್ಟೆ ನೋವು ಇದು ಆಂತರಿಕ ರಕ್ತಸ್ತ್ರಾವದ ಲಕ್ಷಣಗಳು.

doctor and patient

ಚಿಕಿತ್ಸೆ ಏನು?

ಡೆಂಗ್ಯುಗೆ ಇಂಥದ್ದೇ ನಿಖರ ಚಿಕಿತ್ಸೆಗಳಿಲ್ಲ. ಹೆಚ್ಚು ಜ್ವರವಿದ್ದರೆ, ಅದರ ನಿಯಂತ್ರಣಕ್ಕೆ ವೈದ್ಯರು ಔಷಧಿ ನೀಡಲಿದ್ದಾರೆ. ಒಂದು ವೇಳೆ ಪ್ಲೇಟ್‌ಲೆಟ್ಸ್‌ಗಳ ಕುಸಿತ ಕಂಡು ಬಂದರೆ ಕೂಡಲೇ ಅವರಿಗೆ ಆಸ್ಪತ್ರೆಯಲ್ಲಿ ತುರ್ತು ಮೇಲ್ವಿಚಾರಣೆಯ ಅಗತ್ಯವಿರುತ್ತದೆ. ಪ್ಲೇಟ್‌ಲೇಟ್‌ಗಳ ಸಂಖ್ಯೆ ಕುಸಿಯುತ್ತಲೇ ಇದ್ದರೆ, ವೈದ್ಯರು ಪ್ಲೇಟ್‌ಲೇಟ್‌ಗಳನ್ನು ದೇಹಕ್ಕೆ ಡ್ರಿಪ್ಸ್‌ ಮೂಲಕ ಹಾಕಲಾಗುತ್ತದೆ.

ಇದನ್ನೂ ಓದಿ: Nonstick Pans: ನಾನ್‌ಸ್ಟಿಕ್‌ ಪಾತ್ರೆಗಳ ತಪ್ಪು ಬಳಕೆಯಿಂದಲೂ ಜ್ವರ ಬಾಧಿಸುತ್ತದೆ!

ನಿಯಂತ್ರಣ ಹೇಗೆ?

ಮೊದಲಿಗೆ ನಿಮ್ಮ ಸುತ್ತಲಿನ ಪ್ರದೇಶವನ್ನು ಸೊಳ್ಳೆ ಮುಕ್ತಗೊಳಿಸಿಕೊಳ್ಳಿ. ಎಲ್ಲಿಯೂ ನೀರು ನಿಲ್ಲದಂತೆ ನಿಗಾ ವಹಿಸಿ. ದೇಹವನ್ನು ಸಂಪೂರ್ಣ ಮುಚ್ಚುವ ಉಡುಪು ಧರಿಸಿ, ಬೆಳಗ್ಗೆ ಹಾಗೂ ಸಂಜೆ ಸಂದರ್ಭದಲ್ಲಿ ಪಾರ್ಕ್‌ಗಳಲ್ಲಿ ವಾಕ್‌ಗೆ ಹೋಗುವುದನ್ನು ನಿಯಂತ್ರಿಸಿ, ಬೇರೆ ಸಂದರ್ಭದಲ್ಲಿ ವಾಕ್‌ಗೆ ತೆರಳುವುದು ಉತ್ತಮ.

Continue Reading

ಆರೋಗ್ಯ

Natural Mosquito Repellents: ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ನೈಸರ್ಗಿಕ ಉಪಾಯಗಳು!

Natural Mosquito Repellents: ಸೊಳ್ಳೆಗಳಿಂದಾಗಿ ಬರುವ ರೋಗಗಳು ಒಂದಾ ಎರಡಾ? ಮಲೇರಿಯಾದಿಂದ ಹಿಡಿದು ಡೆಂಗ್ಯೂವರೆಗೆ ಸೊಳ್ಳೆಗಳ ಕಾಣಿಕೆ ಬಹಳಷ್ಟಿವೆ. ಸಣ್ಣ ಜೀವಿಗಳೆಂದು ನಿರ್ಲಕ್ಷ್ಯ ಮಾಡಲಾಗದ ಮಾಡಬಾರದ ಇವನ್ನು ಮಟ್ಟ ಹಾಕಲು ಮನುಷ್ಯ ನೂರಾರು ವಿಧಾನಗಳನ್ನು ಕಂಡು ಹಿಡಿದಿದ್ದರೂ, ಬಹಳ ಸಾರಿ ಇದರಿಂದ ಅಡ್ಡ ಪರಿಣಾಮಗಳೂ ಆಗುವುದುಂಟು. ಪ್ರಕೃತಿಯೇ ನಮಗೆ ವರದಂತೆ ಸಾಕಷ್ಟು ಉಪಾಯಗಳನ್ನು ಕೊಟ್ಟಿರುವಾಗ, ನೈಸರ್ಗಿಕ ವಿಧಾನಗಳನ್ನು ನಾವು ಯಾಕೆ ಮರೆಯಬೇಕು?

VISTARANEWS.COM


on

Mosquito Repellents
Koo

ಸೊಳ್ಳೆ ಎಂಬ ಪುಟಾಣಿ ಜೀವಿ ನಮ್ಮ ಬದುಕನ್ನು ಕೆಲವೊಮ್ಮೆ ಅಲ್ಲೋಲಕಲ್ಲೋಲ ಮಾಡುವುದಂತೂ ನಿಜ. ಮಳೆಗಾಲ ಬಂದ ತಕ್ಷಣ ಅದೆಲ್ಲಿಂದಲೋ ಉದ್ಭವಗೊಂಡು ಮನೆಯೊಳಗೆ ನುಸುಳಿಕೊಂಡು ನಮ್ಮ ಜೀವ ಹಿಂಡಿ ಬಿಡುತ್ತವೆ. ಸೊಳ್ಳೆಗಳಿಂದಾಗಿ ಬರುವ ರೋಗಗಳು ಒಂದಾ ಎರಡಾ? ಮಲೇರಿಯಾದಿಂದ ಹಿಡಿದು ಡೆಂಗ್ಯೂವರೆಗೆ ಸೊಳ್ಳೆಗಳ ಕಾಣಿಕೆ ಬಹಳಷ್ಟಿವೆ. ಸಣ್ಣ ಜೀವಿಗಳೆಂದು ನಿರ್ಲಕ್ಷ್ಯ ಮಾಡಲಾಗದ ಮಾಡಬಾರದ ಇವನ್ನು ಮಟ್ಟ ಹಾಕಲು ಮನುಷ್ಯ ನೂರಾರು ವಿಧಾನಗಳನ್ನು ಕಂಡು ಹಿಡಿದಿದ್ದರೂ, ಬಹಳ ಸಾರಿ ಇದರಿಂದ ಅಡ್ಡ ಪರಿಣಾಮಗಳೂ ಆಗುವುದುಂಟು. ಪ್ರಕೃತಿಯೇ ನಮಗೆ ವರದಂತೆ ಸಾಕಷ್ಟು ಉಪಾಯಗಳನ್ನು ಕೊಟ್ಟಿರುವಾಗ, ನೈಸರ್ಗಿಕ ವಿಧಾನಗಳನ್ನು ನಾವು ಯಾಕೆ ಮರೆಯಬೇಕು ಹೇಳಿ! ಬನ್ನಿ, ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ಸುರಕ್ಷಿತವಾದ Natural (Mosquito Repellents) ಉಪಾಯಗಳು.

Weight Loss with Lemongrass

ಲೆಮೆನ್‌ಗ್ರಾಸ್‌(ಮಜ್ಜಿಗೆಹುಲ್ಲು)

ನಿಂಬೆ ಘಮದ ಹುಲ್ಲೊಂದನ್ನು ನೀವು ನಿಮ್ಮ ಮನೆಗಳಲ್ಲಿ ಬೆಳೆಸಿರಬಹುದು. ಅಂಗಳದ ಮೂಲೆಯಲ್ಲೆಲ್ಲೋ ಬೆಳೆಸಿದ ಈ ಹುಲ್ಲಿನ ನಿಜವಾದ ಲಾಭವನ್ನು ನೀವು ಬಳಸಿಕೊಂಡಿದ್ದೀರಾ? ಇಲ್ಲವೆಂದಾದರೆ, ಬಳಸಿ. ಸೊಳ್ಳೆಗಳ ಕಾಲಕ್ಕೆ ಮಾರುಕಟ್ಟೆಯ ರಾಸಾಯನಿಕಯುಕ್ತ ಸೊಳ್ಳೆ ಬತ್ತಿಗಳ ಮೊರೆ ಯಾಕೆ ಹೋಗುವಿರಿ? ನಿಮ್ಮ ಮನೆಯಂಗಳದ ಈ ಲೆಮೆನ್‌ ಗ್ರಾಸ್‌ನ ಎಲೆಯನ್ನು ಸ್ವಲ್ಪ ಕೈಯಲ್ಲಿ ಕಿವುಚಿಕೊಂಡು ಅದನ್ನು ಮೈಮೇಲೆ ಸವರಿ. ಅಥವಾ ಇದರ ಎಣ್ಣೆಯನ್ನು ಮಾಡಿ ಅಥವಾ ಕೊಂಡುಕೊಂಡು ಮೈಮೇಲೆ ಹಚ್ಚಿ. ಯಾವ ಸೊಳ್ಳೆಯೂ ನಿಮ್ಮ ಹತ್ತಿರ ಏಳೆಂಟು ಗಂಟೆಗಳ ಕಾಲ ಸುಳಿಯದು.

Vinegar

ವಿನೆಗರ್‌

ಮೂರು ಕಪ್‌ ನೀರಿಗೆ ಒಂದು ಕಪ್‌ ವಿನೆಗರ್‌ ಅನ್ನು ಸೇರಿಸಿ ಒಂದು ಸ್ಪ್ರೇ ಮಾಡುವ ಬಾಟಲಿಯಲ್ಲಿ ಹಾಕಿಡಿ. ಮನೆಯಲ್ಲಿ ಬೇಕಾದ ಜಾಗದಲ್ಲಿ ಸ್ಪ್ರೇ ಮಾಡಬಹುದು. ಅಥವಾ ನಿಮ್ಮ ಮೈಮೇಲೂ ಸ್ಪ್ರೇ ಮಾಡಬಹುದು.

Lavender oil
Coffee powder

ಲ್ಯಾವೆಂಡರ್‌ ಎಣ್ಣೆ

ಸೊಳ್ಳೆಗಳಿಗೆ ಪರಿಮಳ/ವಾಸನೆ ಎಂದರೆ ಆಗದು. ಹಾಗಾಗಿ ಅವುಗಳನ್ನು ದೂರ ಓಡಿಸಲು ಲ್ಯಾವೆಂಡರ್‌ ಎಣ್ಣೆ ಸೂಕ್ತ. ಲ್ಯಾವೆಂಡರ್‌ ಎಣ್ಣೆಯನ್ನು ನಿಮ್ಮ ಮೈಮೇಲೆ ಹಚ್ಚುವ ಮೂಲಕ ಅಥವಾ ಸ್ಪ್ರೇ ಮಾಡುವ ಮೂಲಕ ಸೊಳ್ಳೆಯಿಂದ ಮುಕ್ತಿ ಪಡೆಯುವಿರಿ.

Tulsi Plant

ತುಳಸಿ

ಮೇಲೆ ಹೇಳಿರುವುದೆಲ್ಲವುಗಳು ಸಿಗುತ್ತಿಲ್ಲವಾದರೆ ತುಳಸಿಯನ್ನು ಬಳಸಿ. ತುಳಸಿ ಎಲ್ಲರಿಗೂ ಸುಲಭವಾಗಿ ಲಭ್ಯವಿರುವ ಸಸ್ಯ. ತುಳಸಿಯ ಎಣ್ಣೆಯನ್ನು ಮೈಮೇಲೆ ಹಚ್ಚುವುದರಿಂದ ಸೊಳ್ಳೆ ನಿಮ್ಮ ಹತ್ತಿರ ಸುಳಿಯದು. ಎಣ್ಣೆ ಮಾಡಲಾಗದಿದ್ದರೆ, ತುಳಸಿ ಎಲೆಯನ್ನು ಕಿವುಚಿಕೊಂಡು ಚರ್ಮದ ಮೇಲೆ ಹಚ್ಚಿಕೊಳ್ಳಿ.

Coffee powder

ಕರ್ಪೂರ

ಕರ್ಪೂರವಂತೂ ಎಲ್ಲರ ಮನೆಗಳಲ್ಲಿ ದೇವರ ಕೋನೆಯಲ್ಲಿ ಇದ್ದೇ ಇರುತ್ತದೆ. ಸ್ವಲ್ಪ ನೀರಿನಲ್ಲಿ ಕರ್ಪೂರವನ್ನು ಕರಗಿಸಿಕೊಂಡು ಅದನ್ನು ನಿಮ್ಮ ಮನೆಯೊಳಗೆ ಹಾಗೂ ಸೊಳ್ಳೆ ಬರುವ ಜಾಗಗಳಿಗೆ ಸ್ಪ್ರೇ ಮಾಡಿ. ಜೊತೆಗೆ ಮನೆಯ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿ, ೨೦ ನಿಮಿಷಗಳ ಕಾಲ ಕರ್ಪೂರವನ್ನು ಮನೆಯೊಳಗೆ ಹೊತ್ತಿಸಿಟ್ಟು ನೀವು ಹೊರಗಿರಿ. ಸೊಳ್ಳೆಗಳೆಲ್ಲ ಓಡುತ್ತವೆ.

Coconut oil and bitter neem oil

ತೆಂಗಿನೆಣ್ಣೆ ಹಾಗೂ ಕಹಿ ಬೇವಿನೆಣ್ಣೆ

ಈ ಎರಡೂ ಎಣ್ನೆಗಳನ್ನು ಮಿಕ್ಸ್‌ ಮಾಡಿ ನೀರನ್ನೂ ಸ್ವಲ್ಪ ಸೇರಿಸಿ, ನಿಮ್ಮ ಮೈಮೇಲೆ ಸಿಂಪಡಿಸಿಕೊಳ್ಳಬಹುದು. ಸುಮಾರು ನಾಲ್ಕೈದು ಗಂಟಗಳ ಕಾಲ ಸೊಳ್ಲೆಗಳಿಂದ ನಿಮಗೆ ರಕ್ಷಣೆ ದೊರೆಯುತ್ತದೆ.

Coffee powder

ಕಾಫಿ

ಕಾಫಿ ಪುಡಿಯನ್ನು ಒಂದು ಟ್ರೇಯಲ್ಲಿಟ್ಟು ಬೆಂಕಿ ಕೊಡಿ. ಇದನ್ನು ಉರಿಸುವುದರಿಂದ ಸೊಳ್ಳೆಗಳು ಓಡಿಹೋಗುತ್ತವೆ.

ಇದನ್ನೂ ಓದಿ: Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

ಚೆಕ್ಕೆ ಎಣ್ಣೆ

ಚೆಕ್ಕೆಯನ್ನು ಕೇವಲ ಪಲಾವಿಗೆ ಮಾತ್ರ ಬಳಸುತ್ತೀರಾ? ಇದನ್ನು ಸೊಳ್ಳೆಯ ವಿರುದ್ಧವೂ ಬಳಸಿ ನೋಡಿ. ಚೆಕ್ಕೆಯ ಎಣ್ಣೆಯಲ್ಲಿ ಸೊಳ್ಳೆಯ ಮೊಟ್ಟೆಗಳೆಲ್ಲ ಸಾಯುತ್ತವಂತೆ. ದೊಡ್ಡ ಸೊಳ್ಳೆಗಳು ಚೆಕ್ಕೆ ಎಣ್ಣೆಗೆ ಹೆದರಿ ಓಡುತ್ತವಂತೆ. ಮೈಮೇಲೆ ಸ್ವಲ್ಪ ಹಚ್ಚಿಕೊಂಡರೂ ಸಾಕು, ಸೊಳ್ಳೆ ನಿಮ್ಮನ್ನು ಮೂಸುವ ಧೈರ್ಯವನ್ನೂ ಮಾಡಲಾರದು.

Continue Reading
Advertisement
Sadhguru  Jaggi Vasudev
ಆರೋಗ್ಯ2 mins ago

Sadhguru Jaggi Vasudev: ನಮ್ಮ ಹೃದಯವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಹೇಗೆ? ಸದ್ಗುರು ಸಲಹೆ ಇಲ್ಲಿದೆ ಕೇಳಿ

Paris Olympics 2024
ಕ್ರೀಡೆ17 mins ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

Side Effects Of Dry Fruits
ಆರೋಗ್ಯ17 mins ago

Side Effects Of Dry Fruits: ಆರೋಗ್ಯಕ್ಕೆ ಒಳ್ಳೆಯದೆಂದು ಒಣಬೀಜಗಳನ್ನು ಅತಿಯಾಗಿ ತಿನ್ನುತ್ತೀರಾ? ಎಚ್ಚರ!

Karnataka Weather Forecast
ಮಳೆ17 mins ago

Karnataka Weather : 8 ಜಿಲ್ಲೆಗಳಿಗೆ ವ್ಯಾಪಕ ಮಳೆ ಎಚ್ಚರಿಕೆ, ಬಿರುಗಾಳಿ ಸಾಥ್‌

dina bhavishya
ಭವಿಷ್ಯ47 mins ago

Dina Bhavishya : ಬಣ್ಣದ ಮಾತುಗಳನ್ನು ನಂಬಿ ಈ ರಾಶಿಯವರು ಯಾವುದೇ ವ್ಯವಹಾರ ಮಾಡ್ಬೇಡಿ

NEET-UG
ಪ್ರಮುಖ ಸುದ್ದಿ5 hours ago

NEET-UG : ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್ ಆರಂಭ

ವೈರಲ್ ನ್ಯೂಸ್6 hours ago

Viral News: ಜಗಳವಾಡಿಕೊಂಡು ನಡುರಸ್ತೆಯಲ್ಲಿ ಬೆತ್ತಲೆ ಓಡಾಟ; ಜೋಡಿಯ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆ; ಭಾರೀ ಆಕ್ರೋಶ ವ್ಯಕ್ತ

Paris Olympics 2024
ಕ್ರೀಡೆ6 hours ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಈಜುಪಟುವಿಗೆ ಕೊರೊನಾ ಸೋಂಕು!

Asia Cup cricket
ಪ್ರಮುಖ ಸುದ್ದಿ6 hours ago

Asia Cup Cricket : ಭಾರತದಲ್ಲಿ ನಡೆಯಲಿದೆ 2025ರ ಏಷ್ಯಾ ಕಪ್ ಕ್ರಿಕೆಟ್​, ಇಲ್ಲಿದೆ ಪೂರ್ಣ ವಿವರ

Viral video
ವೈರಲ್ ನ್ಯೂಸ್6 hours ago

Viral Video: ಕಾರಿನಲ್ಲೇ ಸೆಕ್ಸ್‌.. ಡಿವೈಡರ್‌ಗೆ ಡಿಕ್ಕಿ; ನಗ್ನ ಸ್ಥಿತಿಯಲ್ಲಿದ್ದ ಇಬ್ಬರು ಯುವಕರು, ಯುವತಿಯನ್ನು ಕಂಡು ಜನ ಶಾಕ್‌-ವಿಡಿಯೋ ಇದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ12 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ13 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ16 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ1 day ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ3 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ3 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌