ಪಾಸಿಟಿವ್‌ ಮನೋಭಾವ ಬೆಳೆಸಿಕೊಳ್ಳುವುದು ಹೇಗೆ? ಇಲ್ಲಿವೆ 7 ಸಲಹೆಗಳು! - Vistara News

ಲೈಫ್‌ಸ್ಟೈಲ್

ಪಾಸಿಟಿವ್‌ ಮನೋಭಾವ ಬೆಳೆಸಿಕೊಳ್ಳುವುದು ಹೇಗೆ? ಇಲ್ಲಿವೆ 7 ಸಲಹೆಗಳು!

ಧನಾತ್ಮಕ ಮನೋಭಾವ ಗೆಲುವಿನ ಹಾದಿ. ಯಾವೆಲ್ಲ ಅಭ್ಯಾಸಗಳಿಂದ ನಮ್ಮ ಮಿದುಳು ಪಾಸಿಟಿವ್‌ ಮನೋಭಾವದ ಹಾದಿಗೆ ಪಳಗುತ್ತದೆ, ಅದಕ್ಕೆ ಪ್ರಯತ್ನ ಪಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ ಏಳು ಸಲಹೆಗಳು.

VISTARANEWS.COM


on

positive attitude
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಕಾರಾತ್ಮಕ ಮನೋಭಾವ (ಪಾಸಿಟಿವ್‌ ಥಿಂಕಿಂಗ್‌) ಬೆಳೆಸಿಕೊಳ್ಳಿ ಎಂದು ಹೇಳುವುದು ಸುಲಭ. ಆದರೆ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಕಷ್ಟ ಅಂತನಿಸುತ್ತಿದೆಯೇ? ಹೌದು. ಪಾಸಿಟಿವ್‌ ಥಿಂಕಿಂಗ್‌ ತಾನೇ ತಾನಾಗಿ ಬರುವುದಿಲ್ಲ. ಅದನ್ನು ಸಾಧಿಸಲು ಕೊಂಚ ಪ್ರಯತ್ನವನ್ನೂ ಪಡಬೇಕಾಗುತ್ತದೆ. ಪ್ರಯತ್ನ ಪಡುತ್ತಲೇ ಇದ್ದರೆ ನಿಧಾನವಾಗಿ ಅದು ನಮ್ಮ ಹಾದಿಗೆ ಬರುತ್ತದೆ. ಹಾಗಾದರೆ ಪಾಸಿಟಿವ್‌ ಮನೋಭಾವ ಬೆಳೆಸಿಕೊಳ್ಳುವುದು ಹೇಗೆ? ಯಾವೆಲ್ಲ ಅಭ್ಯಾಸಗಳಿಂದ ನಮ್ಮ ಮಿದುಳು ಪಾಸಿಟಿವ್‌ ಮನೋಭಾವದ ಹಾದಿಗೆ ಪಳಗುತ್ತದೆ, ಅದಕ್ಕೆ ಪ್ರಯತ್ನ ಪಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ ಏಳು ಸಲಹೆಗಳು.

೧. ಯಾವುದೇ ಕೆಲಸದ ಸಂದರ್ಭ ಸವಾಲುಗಳು ಹಾಗೂ ಅಡೆತಡೆಗಳು ಸಾಮಾನ್ಯ. ಆದರೆ, ಆ ಕೆಲಸದತ್ತ ಗಮನ ಹರಿಸುವಾಗ ಪ್ರಯತ್ನಪಟ್ಟು ಒಳ್ಳೆಯ ವಿಚಾರಗಳನ್ನಷ್ಟೆ ಗಣನೆಗೆ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ಪಾಸಿಟಿವ್‌ ವಿಚಾರ ತೀರಾ ಸಣ್ಣದಿರಬಹುದು. ಕಷ್ಟ ದೊಡ್ಡದಿರಬಹುದು. ಆದರೂ, ಮಾಡಿ ಮುಗಿಸಬೇಕೆಂಬ ಹಠದೊಂದಿಗೆ ಆಗುವ ಲಾಭಗಳನ್ನಷ್ಟೇ ಯೋಚಿಸಿ. ಹೀಗೆ ಮಾಡಲು ಅಭ್ಯಾಸ ಮಾಡುವುದರಿಂದ ಪ್ರತಿಯೊಂದರಲ್ಲೂ ಆಶಾಕಿರಣ ನಿಮ್ಮೆದುರು ಕಾಣಲಾರಂಭಿಸುತ್ತದೆ. ಅದರಲ್ಲಿ ಸಿಗುವ ಸುಖ ಯಾವ ಸವಾಲಿಗೂ ಕಮ್ಮಿ ಇಲ್ಲ ಎಂಬ ಸತ್ಯದ ಅರಿವಾಗಲಾರಂಭಿಸುತ್ತದೆ.

೨. ಕೃತಜ್ಞತೆಯನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಹಲವು ಒತ್ತಡಗಳನ್ನು, ಮಾನಸಿಕ ತುಮುಲಗಳ್ನು ನಿವಾಳಿಸಿ ಎಸೆದುಬಿಡುವ ಸಾಮರ್ಥ್ಯ ಈ ಕೃತಜ್ಞತೆಗಿದೆ. ಇದು ನಿಮ್ಮಲ್ಲಿ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಕಷ್ಟಕಾಲದಲ್ಲಿ ಆತ್ಮವಿಶ್ವಾಸ, ಛಲದ ಜೊತೆಗೆ ಸರ್ವರನ್ನೂ ಪ್ರೀತಿಸುವ, ಮಮತೆ ಹಂಚುವ ಗುಣವನ್ನೂ ಚಿಮ್ಮಿಸುತ್ತದೆ. ನಿಮಗೆ ಕಂಫರ್ಟ್‌ ನೀಡುವ ಜನರು, ಸ್ಥಳ, ಇತ್ಯಾದಿಗಳ ಬಗ್ಗೆ ಯೋಚಿಸಿ. ಪ್ರತಿ ದಿನವೂ ಬದುಕಿನ ಉತ್ತಮ ವಿಷಯಗಳಿಗೆ ಕೃತಜ್ಞತಾ ಭಾವ ಹೊಂದುವುದನ್ನು, ನೆನಪಿಸಿಕೊಳ್ಳುವುದನ್ನು ರೂಢಿಸಿಕೊಳ್ಳಿ. ನಿಮಗೆ ಸಹಾಯ ಮಾಡಿದ ಯಾರೋ ಅಪರಿಚಿತ, ಅಥವಾ ಒಂದು ನಾಯಿ, ಅಥವಾ ಊಟ ಹಾಕಿದ ಪುಣ್ಯಾತ್ಮ ಎಲ್ಲವೂ ನಿಮಗೆ ಬದುಕಿನ ಬಗೆಗೆ ಬೇರೆಯದೇ ದೃಷ್ಠಿಕೋನವನ್ನು ಹೊಂದುವಂತೆ ಮಾಡುತ್ತದೆ.

೩. ಡೈರಿ ಬರೆಯಿರಿ. ದಿನವೂ ಕೊಂಚ ಹೊತ್ತು, ನಿಮ್ಮ ಬದುಕಿಗೆ ಆ ದಿನ ಸಂತಸ ಕೊಟ್ಟ ಜೀವಗಳು, ಮನಸುಗಳು ಅಥವಾ ಖುಷಿ ಕೊಟ್ಟ ಗಳಿಗೆಗಳನ್ನು ಬರೆಯಲು ಮೀಸಲಿಡಿ. ನೀವು ನಿಮ್ಮ ಜೊತೆ ಕಳೆಯುವ ನಿಮ್ಮದೇ ಸಮಯವಿದು. ಈ ಸಂಪೂರ್ಣ ಸಮಯ ನಿಮ್ಮ ಶ್ರೇಯಸ್ಸಿಗೇ ಮೀಸಲು. ನಿಮ್ಮ ಮೇಲೆ ವರ್ಕ್‌ ಮಾಡಿ. ದಿನಚರಿ ಬರೆಹ ರೂಪಕ್ಕೆ ಇಳಿಯುವಾಗ ಪ್ರತಿದಿನದ ಸಣ್ಣ ಸಣ್ಣ ಕ್ಷಣಗಳೂ ಅಮೋಘ ಖುಷಿ ಕೊಡುವ ಸಾಮರ್ಥ್ಯ ಹೊಂದಿವೆ ಎಂದು ಅರಿವಾಗುತ್ತದೆ.

ಇದನ್ನೂ ಓದಿ | World heart day | ಕಾಪಾಡಿಕೊಳ್ಳಲು ಹೃದಯವನ್ನು, ಸೇವಿಸಿ ಪ್ರತಿದಿನ ಇವನ್ನು

೪. ನಗು, ತಮಾಷೆಗೆ ಸಮಯ ಕೊಡಿ. ನಗುವಿನಷ್ಟು ದಿವ್ಯೌಷಧ ಇನ್ನೊಂದಿಲ್ಲ. ಒತ್ತಡ, ಚಿಂತೆ, ಖಿನ್ನತೆಯಂತಹ ಮಾನಸಿಕ ತುಮುಲಗಳನ್ನು ದೂರ ಇಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ, ನಿಮ್ಮ ಪ್ರೀತಿಪಾತ್ರರ ಜೊತೆ ಕಳೆಯಲು ಕೊಂಚ ಸಮಯ ಮೀಸಲಿಡಿ. ಸಂಬಂಧಗಳ ಮಹತ್ವ ಅರಿತು ಅವರ ಜೊತೆಗೆ ಪ್ರಿತಿ, ತಮಾಷೆ, ಲಘು ಹರಟೆಗಳಲ್ಲಿ ನಕ್ಕು ಹಗುರಾಗಿ.

೫. ಪಾಸಿಟಿವ್‌ ಮನಸ್ಥಿತಿಯ ಮಂದಿಯೊಂದಿಗೆ ಕಾಲ ಕಳೆಯಿರಿ. ಅವರ ಮಾತುಗಳು, ಅವರು ಮಾಡುವ ಕೆಲಸಗಳು ನಿಮಗೆ ಸ್ಪೂರ್ತಿ ಕೊಡುವಂತಿರಲಿ. ಸಮಯದ ಸದ್ಭಳಕೆ ಇಂಥವರಿಂದ ನೋಡಿ ಕಲಿಯಬೇಕು ಎಂದು ಅನಿಸುವ ಮಂದಿಯ ಜೊತೆಗೆ ಸ್ನೇಹವಿರಲಿ. ಪ್ರತಿಯೊಂದರಲ್ಲೂ ಹೊಸತನ ಕಾಣುವ, ಬದುಕನ್ನು ಖುಷಿಯಿಂದ ಪಾಸಿಟಿವ್‌ ಆಗಿ ತೆಗೆದುಕೊಳ್ಳುವ, ಕಷ್ಟದ ಸಂದರ್ಭದಲ್ಲೂ ಪಟ್ಟು ಬಿಡದೆ ಪಾಸಿಟಿವ್‌ ಮನೋಭಾವದಿಂದ ಹೋರಾಡುವ ಮಂದಿ ನಿಮ್ಮ ಜೊತೆಗಿದ್ದರೆ, ಖಂಡಿತ ನಿಮಗೂ ಅವರ ಗಾಳಿ ಬೀಸುತ್ತದೆ.

೬. ನೀವು ಮಾಡಿದ ಕೆಲಸಗಳ ಬಗೆಗೆ ನಿಮ್ಮ ನೆಗೆಟಿವ್‌ ವಿಚಾರಗಳ ಮೇಲೆ ವರ್ಕ್‌ ಮಾಡಿ. ನಿಮ್ಮ ವೀಕ್‌ನೆಸ್‌ಗಳನ್ನು ಪತ್ತೆ ಹಚ್ಚಿ. ಅವುಗಳನ್ನು ಸರಿಪಡಿಸಿಕೊಳ್ಳುವಲ್ಲಿಗೆ ಗಮನ ಕೊಡಿ. ಇನ್ನೊಬ್ಬರು ನಿಮ್ಮ ನೆಗೆಟಿವ್‌ ಅಂಶಗಳನ್ನು ಹೇಳಿದಾಗ ಅದನ್ನು ಉತ್ತಮ ಮನೋಭಾವದಲ್ಲಿ ಸ್ವೀಕರಿಸಲು ಪ್ರಯತ್ನಿಸಿ.

೭. ಪ್ರತಿದಿನದ ಆರಂಭವನ್ನೂ ಒಂದು ಪಾಸಿಟಿವ್‌ ಮನೋಭಾವದಿಂದ ಆರಂಭಿಸಿ. ಬೆಳಗ್ಗೆ ಬೇಗ ಏಳುವುದರಿಂದ ಹಿಡಿದು, ನಿಮ್ಮ ಪ್ರೀತಿ ಪಾತ್ರರಿಗೆ ನೆರವಾಗುವುದು, ನಿಮ್ಮ ದೈಹಿಕ ಮಾನಸಿಕ ಆರೋಗ್ಯಕ್ಕೆ ಪೂರಕವಾದ ವ್ಯಾಯಾಮಗಳನ್ನು ಮಾಡುವುದು ಹೀಗೆ ಎಲ್ಲವೂ ನಿಮ್ಮ ಇಡೀ ದಿನಕ್ಕೆ ಚೈತನ್ಯ ನೀಡುತ್ತದೆ. ಇತರರ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ. ಇತರರ ಕೆಲಸಗಳಿಗೆ ನೀವೂ ಹೆಗಲು ಕೊಟ್ಟು ಖುಷಿಯನ್ನು ಹಂಚಿ. ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಖಂಡಿತವಾಗಿಯೂ ಇದರಲ್ಲಿ ನೀವು ಸಫಲರಾಗುತ್ತೀರಿ.

ಇದನ್ನೂ ಓದಿ | Bad dreams | ಪದೇ ಪದೇ ದುಃಸ್ವಪ್ನ ಬೀಳುತ್ತಿದೆಯೇ? ಇದು ಮರೆವಿನ ಕಾಯಿಲೆಯ ಲಕ್ಷಣ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Nandini Milk: ನಂದಿನಿ ಹಾಲಿನ ಯಾವ ಬಣ್ಣದ ಪ್ಯಾಕೆಟ್ ಯಾವುದಕ್ಕೆ ಸೂಕ್ತ? ಖರೀದಿಸುವಾಗ ಈ ಸಂಗತಿ ನೆನಪಿನಲ್ಲಿರಲಿ

ವಿವಿಧ ಬಣ್ಣದ ಪ್ಯಾಕೆಟ್ ನಲ್ಲಿ ಲಭ್ಯವಿರುವ ನಂದಿನಿ ಹಾಲು (Nandini Milk) ಬೇರೆಬೇರೆಯಾಗಿರುತ್ತದೆ. ವಿವಿಧ ರೀತಿಯ ಬಳಕೆಗೆ ಬೇರೆಬೇರೆ ಬಣ್ಣದ ಪ್ಯಾಕೆಟ್ ನಲ್ಲಿ ಲಭ್ಯವಿರುವ ಹಾಲನ್ನು ಬಳಸಿದರೆ ರುಚಿ, ಸುವಾಸನೆಯಲ್ಲಿ ವ್ಯತ್ಯಾಸ ಕಾಣಬಹುದು. ಎಲ್ಲ ಹಾಲು ಎಲ್ಲರಿಗೂ ಸೂಕ್ತವಲ್ಲ. ಯಾವ ಹಾಲು ಯಾರಿಗೆ ಹೆಚ್ಚು ಸೂಕ್ತ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Nandini Milk
Koo

ನಾವು ದಿನ ನಿತ್ಯ ಬಳಸುವ ನಂದಿನಿ ಹಾಲಿನ (Nandini Milk) ಬಗ್ಗೆ ನಮಗೆಷ್ಟು ಗೊತ್ತಿದೆ ಎನ್ನುವುದನ್ನು ಪರೀಕ್ಷಿಸಬೇಕು. ಯಾಕೆಂದರೆ ಮನೆ (Home) ಬಳಕೆಗೆ ನಾವು ಇಷ್ಟವಾಗುವ ಹಾಲನ್ನು (milk) ಹೊತ್ತುಕೊಂಡು ಬರುತ್ತೇವೆ. ಆದರೆ ಅದರ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ವಿವಿಧ ಬಣ್ಣದ (different colour) ಪ್ಯಾಕೆಟ್ ನಲ್ಲಿರುವ ನಂದಿನಿ ಹಾಲು ಯಾರಿಗೆ, ಯಾವುದು ಸೂಕ್ತ ಎಂದು ತಿಳಿದುಕೊಂಡು ಬಳಸಿದರೆ ಅದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯ. ಹಲವಾರು ಕಂಪನಿಗಳ ಹಾಲು ಪ್ಯಾಕೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಕರ್ನಾಟಕದ ಜನರು ಇಷ್ಟಪಡುವ ಹೆಮ್ಮೆಯ ಬ್ರಾಂಡ್ ನಂದಿನಿ. ಲಕ್ಷಾಂತರ ಮನೆಗಳನ್ನು ತಲುಪುವ ಇದರೊಂದಿಗೆ ನಮ್ಮ ನಂಟು ಕೂಡ ಬಿಡಿಸಲಾಗದ್ದು ಎಂದರೆ ತಪ್ಪಾಗಲಾರದು. ನೀಲಿ, ಹಸಿರು, ಕೇಸರಿ.. ಸೇರಿ ವಿವಿಧ ಬಣ್ಣದ ಪ್ಯಾಕೆಟ್ ನಲ್ಲಿ ಇದು ಲಭ್ಯವಿದ್ದು, ಇದರ ಪ್ರಯೋಜನ ಏನು ಎಂಬುದನ್ನು ತಿಳಿದುಕೊಳ್ಳೋಣ.

Good life

ಗುಡ್ ಲೈಫ್ ಪ್ಯಾಕೆಟ್

ಬೆಳಗ್ಗೆ ಎದ್ದು ಹಾಲು ಕಾಯಿಸಲು ಪುರುಸೊತ್ತು ಇಲ್ಲ ಎನ್ನುವವರು ಈ ಹಾಲನ್ನು ಮನೆಗೆ ತರಬಹುದು. ಟೆಟ್ರಾ ಪ್ಯಾಕೆಟ್ ನಲ್ಲಿ ಲಭ್ಯವಿರುವ ಈ ಹಾಲನ್ನು ಕಾಯಿಸದೇ ಕುಡಿಯಬಹುದು. ಯಾಕೆಂದರೆ ಈ ಹಾಲು ಪ್ಯಾಕ್ ಮೊದಲು 137 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ನಾಲ್ಕು ನಿಮಿಷಗಳವರೆಗೆ ಕಾಯಿಸಲಾಗುತ್ತದೆ. ಬಳಿಕ ತಕ್ಷಣವೇ ತಣ್ಣಗೆ ಮಾಡಿ ಪ್ಯಾಕ್ ಮಾಡಲಾಗುತ್ತದೆ. ಹೀಗಾಗಿ ಇದರಲ್ಲೂ ಬ್ಯಾಕ್ಟೀರಿಯಾ ಬೆಳೆಯುವುದಿಲ್ಲ. ಟೆಟ್ರಾ ಪ್ಯಾಕ್ ನಲ್ಲಿ ಇರುವುದರಿಂದ ಹಾಲು ಹಾಳಾಗುವುದಿಲ್ಲ. ಪ್ರವಾಸಕ್ಕೆ ಹೋಗ್ಬೇಕು, ಮಕ್ಕಳಿಗೆ ಹಾಲು ಸಿಗೋದಿಲ್ಲ ಎಂಬ ಚಿಂತೆ ಇರುವವರು ಗುಡ್ ಲೈಫ್ ಟೆಟ್ರಾ ಪ್ಯಾಕ್ ಖರೀದಿ ಮಾಡಿ ಹತ್ತು ದಿನದವರೆಗೆ ಇಟ್ಟುಕೊಳ್ಳಬಹುದು. ಕಾಯಿಸದೇ ಹಾಗೇ ಕುಡಿಯಬಹುದು.

Nandini Milk green color

ಹಸಿರು ಬಣ್ಣದ ಪ್ಯಾಕೆಟ್

ಕಾಫಿ, ಟೀ ಮಾಡಿ ಕುಡಿಯುವವರು ಹಸಿರು ಬಣ್ಣದ ಪ್ಯಾಕೆಟ್ ಅನ್ನು ಬಳಸಬಹುದು. ಇದು ಹೊಮೊಜಿನೈಸೆಡ್ ಪಾಸ್ಚರೀಕರಿಸಿದ ಹಸುವಿನ ಹಾಲು ಕೊಂಚ ಗಾಢವಾಗಿರುತ್ತದೆ. ಕಾಫಿ, ಟೀ ರುಚಿಯನ್ನು ಹೆಚ್ಚಿಸುತ್ತದೆ. ಈ ಹಾಲನ್ನು ಮನೆಯಲ್ಲಿರುವ ಪುಟ್ಟ ಮಕ್ಕಳಿಗೂ ಕೊಡಬಹುದು. ಯಾಕೆಂದರೆ ಬೇರೆ ಪ್ಯಾಕೆಟ್ ಹಾಲಿನಲ್ಲಿ ಹಸುಗಳ ಹಾಲಿನ ಜೊತೆಗೆ ಎಮ್ಮೆ ಹಾಲು ಸೇರಿಕೊಂಡಿರುತ್ತದೆ. ಕೇವಲ ಹಾಲು ಕುಡಿಯುವವರಿಗೂ ಇದು ಒಳ್ಳೆಯದು. ಗಟ್ಟಿ ಮೊಸರು ಮಾಡಬೇಕಿದ್ದರೆ ಹಸಿರು ಬಣ್ಣದ ಪ್ಯಾಕೆಟ್ ನಲ್ಲಿ ಲಭ್ಯವಿರುವ ಸ್ಪೆಷಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ಖರೀದಿ ಮಾಡುವುದು ಒಳ್ಳೆಯದು.

purpel colour

ನೇರಳೆ ಬಣ್ಣದ ಪ್ಯಾಕೆಟ್

ಕಾಫಿಯಲ್ಲಿ ಕೆನೆ ಸಮೃದ್ದವಾಗಿರಬೇಕು ಎಂದು ಬಯಸುವವರು ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ಖರೀದಿ ಮಾಡಬಹುದು. ಇದರಲ್ಲಿ ಪೂರ್ತಿ ಕೆನೆಯ ಅಂಶ ಇರುತ್ತದೆ. ಆದರೂ ಇದು ಕೆನೆ ಕಟ್ಟಿಕೊಳ್ಳುವುದಿಲ್ಲ. ಯಾಕೆಂದರೆ ಇದನ್ನು ಹೊಮೊಜಿನೈಸ್ಡ್ ಹದಕ್ಕೆ ತಂದು ಪ್ಯಾಕ್ ಮಾಡಲಾಗುತ್ತದೆ. ಇದನ್ನು ಸಿಹಿ ಪದಾರ್ಥ, ಪಾಯಸ ಮಾಡಲು ಬಳಸಬಹುದು. ಯಾಕೆಂದರೆ ಇದು ಖಾದ್ಯದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುತ್ತದೆ.

Nandini Milk Orange color

ಕಿತ್ತಳೆ ಬಣ್ಣದ ಪ್ಯಾಕೆಟ್

ಕಿತ್ತಳೆ ಬಣ್ಣದ ಶುಭಂ ಪ್ಯಾಕೆಟ್ ಅಥವಾ ಸಂಪೂರ್ಣ ಸ್ಟ್ಯಾಂಡರ್ಡೈಸ್ಡ್ ಮಿಲ್ಕ್ ಪ್ಯಾಕೆಟ್ ಹಾಲು ಬೆಳೆಯುವ ಮಕ್ಕಳಿಗೆ ಒಳ್ಳೆಯದು. ಇದರಲ್ಲಿ ಮಕ್ಕಳಿಗೆ ಬೇಕಾಗುವ ಕೊಬ್ಬಿನಾಂಶ ಇರತ್ತದೆ. ಮಕ್ಕಳ ನಿತ್ಯದ ಚಟುವಟುಕೆಗಳಿಗೆ ಸಾಕಷ್ಟು ಶಕ್ತಿ ತುಂಬುತ್ತದೆ.

Yellow color

ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್

ಗುಡ್ ಲೈಫ್ ಸ್ಲಿಮ್ಡ್ ಸ್ಕಿಮ್ ಮಿಲ್ಕ್ ಪ್ಯಾಕೆಟ್ ಹಿರಿಯರಿಗೆ ಒಳ್ಳೆಯದು. ಇದರಲ್ಲಿ ಕೊಬ್ಬಿನಾಂಶ ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ ನಲ್ಲಿರುವ ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ನಲ್ಲೂ ಕೊಬ್ಬಿನಾಂಶ ಕಡಿಮೆ ಇರುತ್ತದೆ. ದೇಹದ ಕೊಬ್ಬು ಕರಗಬೇಕು ಎನ್ನುವವರೂ ಈ ಹಾಲನ್ನು ಬಳಸಬಹುದು. ಹಳದಿ ಬಣ್ಣದ ಪ್ಯಾಕೆಟ್ ನಲ್ಲಿ ಲಭ್ಯವಿರುವ ನಂದಿನಿ ಸ್ಮಾರ್ಟ್ ಡಬಲ್ ಟೋನ್ಡ್ ಹೊಮೊಜಿನೈಸೆಡ್ ಮಿಲ್ಕ್ ಪ್ಯಾಕೆಟ್ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇರುವವರಿಗೆ ಸೂಕ್ತವಾಗಿದೆ. ಹಾಲನ್ನು ಚೆನ್ನಾಗಿ ಕುದಿಸಿ ಕುಡಿಯುವವರು ನಂದಿನಿಯ ಯಾವ ಬಣ್ಣದ ಪ್ಯಾಕೆಟ್ ಹಾಲನ್ನು ಬೇಕಾದರೂ ಬಳಸಬಹುದು.

ಇದನ್ನೂ ಓದಿ: Health Tips: ನೀವು ಕುಡಿಯುವ ಹಾಲಿನಲ್ಲಿ ಕಲಬೆರಕೆಯೇ? ಹೀಗೆ ಸುಲಭವಾಗಿ ಪತ್ತೆ ಹಚ್ಚಿ!

Continue Reading

ಆರೋಗ್ಯ

Sipping Tea Or Coffee With Meals: ಊಟತಿಂಡಿ ಜೊತೆಜೊತೆಗೆ ಚಹಾ ಕಾಫಿ ಹೀರುವ ಅಭ್ಯಾಸ ಒಳ್ಳೆಯದೇ, ಕೆಟ್ಟದ್ದೇ?

Sipping Tea Or Coffee With Meals: ಕೆಲವರು ಎದ್ದ ಕೂಡಲೇ, ಪೇಪರ್‌ ಕೈಗೆತ್ತಿಕೊಂಡು ಕಪ್‌ ಬಾಯಿಗಿಟ್ಟರೆ ಇನ್ನೂ ಕೆಲವರಿಗೆ ತಿಂಡಿಯ ಜೊತೆಗೆ ಬೇಕು. ಮತ್ತೆ ಕೆಲವರಿಗೆ ಎದ್ದ ಕೂಡಲೇ ಕುಡಿದರೂ ತಿಂಡಿಯ ಜೊತೆಗೂ ಬೇಕು. ಮತ್ತೆ ಕೆಲವರಿಗೆ ಊಟದ ಜೊತೆಗೂ ಬೇಕು. ಊಟವಾದ ತಕ್ಷಣ ಒಂದು ಲೋಟ ತುಂಬಾ ಕಾಫಿ ಅಥವಾ ಚಹಾ ಹೀರುವ ಮಂದಿಯೂ ಇದ್ದಾರೆ! ಹಾಗಾದರೆ, ಹೀಗೆ ಚಹಾ ಕಾಫಿಯನ್ನು ಊಟತಿಂಡಿಯ ಜೊತೆಗೆ ಕುಡಿಯುವುದು ಒಳ್ಳೆಯದೋ ಕೆಟ್ಟದ್ದೋ ಎಂಬ ಪ್ರಶ್ನೆ ಹಲವರಲ್ಲಿ ಇರಬಹುದು. ಅಂಥವರಿಗೆ ಉತ್ತರ ಇಲ್ಲಿದೆ!

VISTARANEWS.COM


on

Sipping Tea Or Coffee With Meals
Koo

ಭಾರತೀಯರಿಗೆ ಚಹಾ, ಕಾಫಿಯೆಂದರೆ ಕೇವಲ ಪೇಯಗಳಲ್ಲ. ಇವು ಶಕ್ತಿವರ್ಧಕಗಳಂತೆ ನಮ್ಮನ್ನು ಸದಾ ಪೊರೆಯುತ್ತವೆ. ಬೆಳಗ್ಗೆ ಎದ್ದರೆ ಚಹಾ, ಬೇಸರವಾದರೆ ಚಹಾ, ಸಂತೋಷವಾದರೆ ಚಹಾ, ಗೆಳೆಯರು ಸಿಕ್ಕರೆ ಚಹಾ, ಒಬ್ಬರೇ ಬೋರು ಬಂದರೂ ಚಹಾ, ನಿದ್ದೆ ಬರುವ ಹಾಗನಿಸಿದರೆ ಚಹಾ, ಸುಸ್ತಾದರೆ ಚಹಾ, ಮಳೆ ಬಂದರೆ ಚಹಾ, ಚಳಿಯಾದರೆ ಚಹಾ… ಹೀಗೆ ಚಹಾ ಇಲ್ಲದೆ ಜೀವನವೇ ಇಲ್ಲವೆಂಬಷ್ಟು ಚಹಾ-ಕಾಫಿಯ ಜೊತೆಗೆ ನಂಟು. ಈ ಚಹಾ ಕಾಫಿಗಳು ಒಳ್ಳೆಯದಲ್ಲ, ಹಾಳು ಎಂಬವರ ಬಳಿ, ಇವುಗಳಿಂದ ದೇಹಕ್ಕೆ ಒಳ್ಳೆಯದೂ ಇವೆ ಎಂಬ ವಾದವನ್ನು ಗಟ್ಟಿಯಾಗಿ ಮಂಡಿಸುತ್ತೇವೆ. ಯಾಕೆಂದರೆ ಬಹುತೇಕ ಭಾರತೀಯರಿಗೆ ಚಹಾ ಕೇವಲ ಪೇಯವಲ್ಲ. ಅದು ಭಾವನೆ.
ಅದೇನೇ ಇರಲಿ, ನಮ್ಮಲ್ಲಿ ಅನೇಕರಿಗೆ ಚಹಾ ಅಥವಾ ಕಾಫಿಯನ್ನು ತಿಂಡಿಯ ಜೊತೆಗೆ ಹೀರುವ ಅಭ್ಯಾಸವಿದೆ. ಕೆಲವರು ಎದ್ದ ಕೂಡಲೇ, ಪೇಪರ್‌ ಕೈಗೆತ್ತಿಕೊಂಡು ಕಪ್‌ ಬಾಯಿಗಿಟ್ಟರೆ ಇನ್ನೂ ಕೆಲವರಿಗೆ ತಿಂಡಿಯ ಜೊತೆಗೆ ಬೇಕು. ಮತ್ತೆ ಕೆಲವರಿಗೆ ಎದ್ದ ಕೂಡಲೇ ಕುಡಿದರೂ ತಿಂಡಿಯ ಜೊತೆಗೂ ಬೇಕು. ಮತ್ತೆ ಕೆಲವರಿಗೆ ಊಟದ ಜೊತೆಗೂ ಬೇಕು. ಊಟವಾದ ತಕ್ಷಣ ಒಂದು ಲೋಟ ತುಂಬಾ ಕಾಫಿ ಅಥವಾ ಚಹಾ ಹೀರುವ ಮಂದಿಯೂ ಇದ್ದಾರೆ! ಹಾಗಾದರೆ, ಹೀಗೆ ಚಹಾ ಕಾಫಿಯನ್ನು ಊಟತಿಂಡಿಯ ಜೊತೆಗೆ ಕುಡಿಯುವುದು (Sipping Tea Or Coffee With Meals) ಒಳ್ಳೆಯದೋ ಕೆಟ್ಟದ್ದೋ ಎಂಬ ಪ್ರಶ್ನೆ ಹಲವರಲ್ಲಿ ಇರಬಹುದು. ಅಂಥವರಿಗೆ ಉತ್ತರ ಇಲ್ಲಿದೆ!

tea cooffee

ಚಹಾ ಅಥವಾ ಕಾಫಿಯಿಲ್ಲದೆ ಹಲವರು ತಮ್ಮ ದಿನವನ್ನು ಹೇಗೆ ಆರಂಭಿಸುವುದು ಎಂಬ ಯೋಚನೆಯನ್ನೂ ಮಾಡಲಾರರು. ಚಹಾ-ಕಾಫಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು, ದೇಹಕ್ಕೆ ಒಳ್ಳೆಯದು, ಇವು ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಕಳುಹಿಸಲು ಸಹಾಐ ಮಾಡುತ್ತವೆ ಎಂಬ ವಾದಗಳೆಲ್ಲ ಸರಿಯಾದರೂ, ಅತಿಯಾಗಿ ಕುಡಿಯುವುದು ಒಳ್ಳೆಯದಲ್ಲ. ಜೊತೆಗೆ, ಕಾಫಿ ಚಹಾದ ಜೊತೆಗೆ ಬಿಸ್ಕತ್ತು, ರಸ್ಕ್‌, ಬ್ರೆಡ್‌ ಇತ್ಯಾದಿಗಳನ್ನೂ ತೆಗೆದುಕೊಳ್ಳುವುದು ಕೂಡಾ ಒಳ್ಳೆಯದಲ್ಲ. ಅಷ್ಟೇ ಅಲ್ಲ, ತಿಂಡಿಯ ಜೊತೆಗೆ, ಊಟದ ಜೊತೆಗೆ ಕಾಫಿ ಚಹಾ ಕುಡಿಯುವುದು ಖಂಡಿತ ಒಳ್ಳೆಯದಲ್ಲ. ಯಾಕೆ ಗೊತ್ತಾ? ಚಹಾ ಅಥವಾ ಕಾಫಿಯಂಥ ಪೇಯಗಳನ್ನು ತಿಂಡಿಯ ಜೊತೆಗೆ ಕುಡಿದರೆ, ತಿಂದ ಆಹಾರದಲ್ಲಿರುವ ಪೋಷಕಾಂಶಗಳು ಸರಿಯಾಗಿ ದೇಹಕ್ಕೆ ಸೇರದು.

ಇದನ್ನೂ ಓದಿ: Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಾವು ಆಹಾರದ ಮೂಲಕ ಸೇವಿಸಿದಾಗ ಅವುಗಳು ಸಂಪೂರ್ಣವಾಗಿ ಸಮರ್ಪಕವಾಗಿ ದೇಹದಲ್ಲಿ ಹೀರಿಕೆಯಾಗಬೇಕಾದರೆ, ಸೂಕ್ತ ವಾತಾವರಣ ಇರಬೇಕು. ಎಲ್ಲ ಪೋಷಕಾಂಶಗಳೂ ಎಲ್ಲ ಸಂದರ್ಭ ಹೀರಿಕೊಳ್ಳಲ್ಪಡುತ್ತದೆ ಎಂಬುದಕ್ಕೆ ಗ್ಯಾರೆಂಟಿ ಇಲ್ಲ. ಆ ಸೂಕ್ತ ವಾತಾವರಣವನ್ನು ನಾವು ನಿರ್ಮಿಸಬೇಕು. ಕಾಫಿ ಹಾಗೂ ಚಹಾದಲ್ಲಿ ಪಾಲಿಫಿನಾಲ್‌ ಹಾಗೂ ಟ್ಯಾನಿನ್‌ ಇರುವುದರಿಂದ ಇವುಗಳು ಆಹಾರದಿಂದ ಸಿಗುವ ಕಬ್ಬಿಣಾಂಶವನ್ನು ದೇಹ ಹೀರಿಕೊಳ್ಳದಂತೆ ಮಾಡುತ್ತದೆ. ಸಸ್ಯಾಧಾರಿತ ಕಬ್ಬಿಣಾಂಶವು ದೇಹಕ್ಕೆ ಸೇರುವ ಪ್ರಕ್ರಿಯೆಯೇ ನಿಧಾನವಿರುವುದರಿಂದ ಹಾಗೂ ಈ ಕ್ರಿಯೆ ಕಾಫಿ ಹಾಗೂ ಚಹಾದ ಜೊತೆ ಇನ್ನೂ ಕಷ್ಟವಾಗುತ್ತದೆ. ಕೇವಲ ಕಬ್ಬಿಣಾಂಶ ಮಾತ್ರವಲ್ಲ, ಬೇರೆ ಪೋಷಕಾಂಶಗಳೂ ಕೂಡಾ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸೇರದೆ, ಪೋಲಾಗಿ ಬಿಡುತ್ತದೆ. ಹಾಗಾಗಿ, ಚಹಾ ಕಾಫಿಯನ್ನು ಊಟತಿಂಡಿಯ ಜೊತೆಗೆ ಅಥವಾ ಇತರ ಆಹಾರದ ಜೊತೆಗೆ ಸೇವಿಸುವ ಅಭ್ಯಾಸವನ್ನು ಕಡಿಮೆ ಮಾಡಿ. ಸಾಧ್ಯವಾದರೆ, ಕನಿಷ್ಟವೆಂದರೆ ಒಂದು ಗಂಟೆಯ ಸಮಯ ಕೊಡಿ. ನಂತರ ಸೇವಿಸಿ. ಚಹಾ-ಕಾಫಿ ಚಟವಾಗದೆ, ಅದು ದಿನಕ್ಕೆ ಹೆಚ್ಚೆಂದರೆ ಎರಡು ಬಾರಿ ಇರಲಿ. ಅತಿಯಾಗದಂತೆ, ಹಿತಮಿತವಾಗಿ ಚಹಾ ಕಾಫಿ ಸೇವಿಸುವುದು ಯಾವತ್ತಿಗೂ ಒಳ್ಳೆಯದು. ನೆನಪಿಡಿ.

Continue Reading

ಫೋಟೊ

Ms/Mrs india Karnataka Audition: ಮಿಸ್‌&ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಗೆ ಆಡಿಷನ್‌

Ms/Mrs india Karnataka Audition: ಮಿಸ್‌ ಮತ್ತು ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಯ ಆಡಿಷನ್‌ ಬೆಂಗಳೂರಿನ ಟುಲಿಪ್‌ ಇನ್‌ ಹೋಟೆಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಇದರಲ್ಲಿ, ವಯಸ್ಸಿನ ಭೇದ-ಭಾವವಿಲ್ಲದೇ ನಾನಾ ಯುವತಿಯರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Ms or Mrs india Karnataka Audition
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸ್‌/ಮಿಸೆಸ್‌ ಇಂಡಿಯಾ ಕರ್ನಾಟಕ (Ms/Mrs india Karnataka Audition) ಕೀರೀಟ ತಮ್ಮದಾಗಿಸಿಕೊಳ್ಳಲು ಯುವತಿಯರು ಹಾಗೂ ಮಹಿಳೆಯರು ಮುಂದಾಗಿದ್ದಾರೆ. ಹೌದು, ಫ್ಯಾಷನ್‌ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಕನಸು ಹೊಂದಿದ ಮಹಿಳೆಯರು ಇಂದು ಮಿಸ್‌ ಮತ್ತು ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಯ ಆಡಿಷನ್‌ನಲ್ಲಿ ಸಂತಸದಿಂದ ಪಾಲ್ಗೊಂಡರು. ಉದ್ಯಾನನಗರಿಯ ಟುಲಿಪ್‌ ಇನ್‌ ಹೋಟೆಲ್‌ನಲ್ಲಿ ಬೆಳಗ್ಗೆಯಿಂದಲೇ ಆರಂಭಗೊಂಡ ಆಡಿಷನ್‌ನಲ್ಲಿ ನಾನಾ ವರ್ಗದ, ವಯಸ್ಸಿನ ಮಹಿಳೆಯರು ಅತ್ಯುತ್ಸಾಹದಿಂದ ಭಾಗವಹಿಸಿದರು.

Ms or Mrs india Karnataka Audition

ಪ್ರತಿಭಾ ಸಂಶಿಮಠ್‌ ನೇತೃತ್ವ

ಈ ಪೇಜೆಂಟ್‌ ಆಡಿಷನ್‌ನ ನೇತೃತ್ವವನ್ನು ಪೇಜೆಂಟ್‌ನ ಕರ್ನಾಟಕ ಡೈರೆಕ್ಟರ್ ಪ್ರತಿಭಾ ಸಂಶಿಮಠ್‌ ವಹಿಸಿದ್ದರು. ನಿರೂಪಣೆಯೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

Ms or Mrs india Karnataka Audition

ಮಹಿಳೆಯರಿಗೆ ಪ್ರೋತ್ಸಾಹ

ಪಾಲ್ಗೊಂಡ ಮಹಿಳೆಯರನ್ನು ಪ್ರೋತ್ಸಾಹಿಸುತ್ತಾ, ಅವರ ಕ್ಷೇತ್ರ ಹಾಗೂ ಇತರೇ ವಿಷಯಗಳನ್ನು ಪ್ರಸ್ತಾಪಿಸುತ್ತಾ , ಎಲ್ಲರನ್ನೂ ಪರಿಚಯಿಸಿದರು. ರಾಜ್ಯದ ನಾನಾ ಕಡೆಯಿಂದ ಬಂದಂತಹ ಸ್ಪರ್ಧಾಳುಗಳಿಗೆ ಹುರಿದುಂಬಿಸಿದರು. ಒಬ್ಬೊಬ್ಬರಿಗೂ ಮುಂಬರುವ ಪೇಜೆಂಟ್‌ನ ಬಗ್ಗೆ ಸವಿವರವಾಗಿ ವಿವರಿಸಿದರು.

Ms or Mrs india Karnataka Audition

ಮಿಸ್‌ ಇಂಡಿಯಾ ಕರ್ನಾಟಕ ಟೈಟಲ್‌ಗೂ ನಡೆದ ಆಡಿಷನ್‌

ಹೊಸದಾಗಿ ಸೇರಿಸಲಾಗಿರುವ ಮಿಸ್‌ ಇಂಡಿಯಾ ಕರ್ನಾಟಕ ಟೈಟಲ್‌ ಅನ್ನು ಇದೇ ಮಿಸೆಸ್‌ ಪೇಜೆಂಟ್‌ನಲ್ಲಿ ಸೇರಿಸಲಾಗಿದ್ದು, 16 ವರ್ಷ ಪೂರ್ಣಗೊಳಿಸಿರುವ ಅವಿವಾಹಿತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪ್ರತಿಭಾ ಸಂಶಿಮಠ್‌ ವಿವರಿಸಿದರು.

Ms or Mrs india Karnataka Audition

ನಾನಾ ವಯೋಮಾನದವರ ಪಾಲ್ಗೊಳ್ಳುವಿಕೆ

ಇನ್ನು, ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಭಾಗವಹಿಸಲು ಇಚ್ಛಿಸುವ ನಾನಾ ವಯೋಮಾನದವರಿಗೆ ಪ್ರತ್ಯೇಕ ಗುಂಪುಗಳನ್ನು ರೂಪಿಸಲಾಗಿತ್ತು. 22-40 ರೊಳಗಿನ ವಯೋಮಾನದವರು, 41-60 ಹಾಗೂ 60ರ ಮೇಲ್ಪಟ್ಟವರು ಈ ಅಡಿಷನ್‌ನಲ್ಲಿ ಪಾಲ್ಗೊಂಡಿದ್ದರು.

ಅಡಿಷನ್‌ನಲ್ಲಿ ಭಾಗವಹಿಸಿದ ಸೆಲೆಬ್ರೆಟಿಗಳು

ಈ ಆಡಿಷನ್‌ನಲ್ಲಿ, ಮಿಸ್‌ ಕೆನಡಾ ಸೌತ್‌ ಏಷಿಯಾ 2019 & ಮಿಸ್‌ ಇಂಡಿಯಾ ಗ್ಲೋಬಲ್‌ 2019 ಪೂರ್ಣಿಮಾ ರಮೇಶ್‌ ವಿಶೇ‍ಷ ಅತಿಥಿಯಾಗಿ ಭಾಗವಹಿಸಿದ್ದರು. ಇವರೊಂದಿಗೆ ಬಿಗ್‌ ಬಾಸ್‌ ಸ್ಪರ್ಧಿ ಅವಿನಾಶ್‌ ಶೆಟ್ಟಿ, ಆಕ್ಸೀಸ್‌ ಬ್ಯಾಂಕ್‌ನ ಉಪಾಧ್ಯಕ್ಷೆ ಅನಿತಾ ಹರೀಶ್‌ ಹಾಗೂ ಪೇಜ್‌ ತ್ರೀ ಸೆಲೆಬ್ರೆಟಿ ಸತೀಶ್‌ ಕಡಾಬಮ್‌ ಅವರು ಕೂಡ ಪಾಲ್ಗೊಂಡಿದ್ದರು.

ಇದನ್ನೂ ಓದಿ: Twinning Fashion: ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ ಇಲ್ಲಿದೆ 5 ಐಡಿಯಾ!

ಆನ್‌ಲೈನ್‌ ಮಾಹಿತಿ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್‌ ಸೈಟ್‌ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. www.mrsindiakarnataka.com ಹಾಗೂ ವಾಟ್ಸಪ್‌ ಸಂಖ್ಯೆ: 9886761457

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಆರೋಗ್ಯ

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಚಹಾ ಬೇಕು, ಇಲ್ಲವಾದರೆ ಕಷ್ಟ ಎಂಬಂಥ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿರುತ್ತಾರೆ. ಆದರೆ, ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಮಗೆ ಗೊತ್ತಿದ್ದೂ ಇದನ್ನು ಬಿಡಲು ಸಾಧ್ಯವಾಗುವುದಿಲ್ಲ. ಇರಲಿ. ಇನ್ನೂ ಅನೇಕರು, ಈ ಅಭ್ಯಾಸವನ್ನು ತ್ಯಜಿಸಿ ಅನೇಕ ಹೊಸ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವ ಆಹಾರ ಸೇವಿಸಬಾರದು ಎಂಬ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Empty Stomach Foods
Koo

ಬೆಳಗ್ಗೆ ಎದ್ದ ಕೂಡಲೇ (Empty Stomach Foods) ಸಾಮಾನ್ಯವಾಗಿ ಒಂದು ಲೋಟ ಚಹಾ ಮಾಡಿಕೊಂಡು ಸೋಫಾದಲ್ಲಿ ಕೂತು ಪೇಪರು ಓದುತ್ತಲೋ, ಸುಮ್ಮನೆ ಬಾಲ್ಕನಿಯಲ್ಲಿ ಒಂದ್ಹತ್ತು ನಿಮಿಷ ಚಹಾ ಹಿಡಿದು ಕೂರುವ ಅಭ್ಯಾಸ ನಮ್ಮಲ್ಲಿ ಬಹುತೇಕರಿಗಿದೆ. ಬೆಳಗ್ಗೆ ಎದ್ದ ಕೂಡಲೇ ಚಹಾ ಬೇಕು, ಇಲ್ಲವಾದರೆ ಕಷ್ಟ ಎಂಬಂಥ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿರುತ್ತಾರೆ. ಆದರೆ, ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಮಗೆ ಗೊತ್ತಿದ್ದೂ ಇದನ್ನು ಬಿಡಲು ಸಾಧ್ಯವಾಗುವುದಿಲ್ಲ. ಇರಲಿ. ಇನ್ನೂ ಅನೇಕರು, ಈ ಅಭ್ಯಾಸವನ್ನು ತ್ಯಜಿಸಿ ಅನೇಕ ಹೊಸ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣು ಹಿಂಡಿದ ಬಿಸಿ ನೀರು, ತರಕಾರಿ ಸೇವನೆ ಇತ್ಯಾದಿ ಇತ್ಯಾದಿ ಅನೇಕ ಅಭ್ಯಾಸಗಳನ್ನು ಹಲವೆಡೆ ಓದಿ ತಿಳಿದುಕೊಂಡು, ಹಲವರ ಸಲಹೆ ಕೇಳಿ, ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದು ಅಭ್ಯಾಸ ಶುರು ಮಾಡಿರುತ್ತಾರೆ. ಆದರೆ, ಎಲ್ಲವೂ ಇವು ಒಳ್ಳೆಯದೇ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅಥವಾ ಕೆಲವರಿಗೆ ಒಳ್ಳೆಯದು ಮಾಡಿದೆ ಎಂದಾಕ್ಷಣ ಎಲ್ಲರಿಗೂ ಒಳ್ಳೆಯದನ್ನ ಮಾಡುತ್ತದೆ ಎಂದೇನಿಲ್ಲ. ಕಾರಣ ಒಬ್ಬೊಬ್ಬರ ದೇಹ ಪ್ರಕೃತಿಯೂ ಒಂದೊಂದು ಬಗೆಯದು. ಹೀಗಾಗಿ, ಬೆಳಗ್ಗೆ ಎದ್ದ ಕೂಡಲೇ, ಕೆಲವು ಆಹಾರಗಳನ್ನು ನಾವು ಆದಷ್ಟು ದೂರವಿರಿಸಿದರೆ ಒಳ್ಳೆಯದು. ಬನ್ನಿ, ಯಾವೆಲ್ಲ ಆಹಾರವನ್ನು ನಾವು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಅಷ್ಟು ಯೋಗ್ಯವಲ್ಲ ಎಂಬುದನ್ನು ನೋಡೋಣ.

Spicy Foods Superfoods To Get That Belly Fat

ಸ್ಪೈಸೀ ಆಹಾರಗಳು

ಬೆಳಗ್ಗೆ ಎದ್ದ ಕೂಡಲೇ ಸ್ಪೈಸೀ ಆಹಾರದ ಸೇವನೆ ಒಳ್ಳೆಯದಲ್ಲ. ಬೆಳಗ್ಗೆ ಕಾಲಿ ಹೊಟ್ಟೆಗೆ ಉತ್ತಮ ಆರೋಗ್ಯಕರವಾದ, ದಿನವಿಡೀ ದೇಹ ಉಲ್ಲಾಸ ಪಡೆಯುವ ಆಹಾರ ನೀಡಬೇಕೇ ಹೊರತು ಬೆಳ್ಳಂಬೆಳಗ್ಗೆಯೇ ಆಲಸ್ಯತನವನ್ನು ಆವಾಹಿಸುವ ಆಹಾರವನ್ನು ತಿನ್ನಬಾರದು. ಬೆಳಗ್ಗೆ ಖಾಲಿ ಹೊಟ್ಟೆಗೆ ಸ್ಪೈಸೀಯಾದ ಮಸಾಲೆಯುಕ್ತ ಆಹಾರವನ್ನು ನೀಡಿದರೆ, ಹೊಟ್ಟೆಯ ಒಳಪದರಕ್ಕೆ ಕಿರಿಕಿರಿಯಾದ ಭಾವ ಉಂಟಾಗುತ್ತದೆ. ಹೀಗಾಗಿ, ದೇಹವನ್ನು ತಂಪಾಗಿಡುವ ಪೋಷಕಾಂಶಯುಕ್ತ, ಮಸಾಲೆಯಿಲ್ಲದ ಆಹಾರ ಸೇವಿಸಿ. ದೇಹಕ್ಕೆ ಹಿತವಾದ ಅನುಭವ ನೀಡುವ ಆಹಾರ ಒಳ್ಳೆಯದು.

Image Of Navaratri sweets

ಸಿಹಿತಿನಿಸುಗಳು

ಬೆಳಗ್ಗೆ ಸಿಹಿತಿನಿಸು ತಿನ್ನುವ ಕ್ರಮ ಹಲವರ ಪದ್ಧತಿಯಲ್ಲಿದೆ. ಆದರೆ ಇದು ಒಳ್ಳೆಯದಲ್ಲ. ಇನ್ನೂ ಕೆಲವರು ಈಗ ಆಧುನಿಕ ಪಾಶ್ಚಾತ್ಯ ಶೈಲಿಯ ಅನುಕರಣೆಯಲ್ಲಿ ಪ್ಯಾನ್‌ ಕೇಕ್‌, ವ್ಯಾಫಲ್‌ಗಳನ್ನು ಸೇವಿಸುವ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ಮಕ್ಕಳಿಗೆ ಬ್ರೆಡ್‌ ಮೇಲೆ ಒಂದಿಷ್ಟು ಜ್ಯಾಮ್‌, ಚಾಕೋಲೇಟ್‌ ಸಿರಪ್‌ಗಳನ್ನು ಸುರಿದು ತಿನ್ನಿಸುವುದೂ ಉಂಟು. ಆದರೆ ಈ ಅಭ್ಯಾಸಗಳಾವುದೂ ಹೊಟ್ಟೆಗೆ ಒಳ್ಳೆಯದಲ್ಲ ನೆನಪಿಡಿ. ಇದು ತೂಕ ಹೆಚ್ಚಿಸುವ ಜೊತೆಗೆ, ಪಿತ್ತಕೋಶದ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತದೆ.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ತಂಪು ಪಾನೀಯಗಳು

ಬೆಳಗ್ಗೆ ಎದ್ದು ಹಲವರು ತಂಪು ಪಾನೀಯಗಳನ್ನೂ ಸೇವಿಸುವುದೂ ಇದೆ. ಐಸ್ಡ್‌ ಟೀ, ಹಣ್ಣಿನ ಜ್ಯೂಸ್‌ಗಳು, ಪ್ಯೇಕೇಜ್ಡ್‌ ಡ್ರಿಂಕ್‌ಗಳು ಇತ್ಯಾದಿಗಳನ್ನು ಬೆಳಗ್ಗಿನ ಹೊತ್ತು ಕುಡಿಯುತ್ತಾರೆ. ತಣ್ಣಗಿನ ಇಂತಹ ಡ್ರಿಂಕ್‌ಗಳನ್ನು ಬೆಳಗ್ಗೆ ಕುಡಿಯುವುದರಿಂದ ಇದ್ದಕ್ಕಿದ್ದ ಹಾಗೆ ಶಕ್ತಿ ಬಂದಂಥ ಅನುಭವವಾದರೂ, ಇವು ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುತ್ತವೆ. ಅಷ್ಟೇ ಅಲ್ಲ, ಇದರಲ್ಲಿರುವ ಅಧಿಕ ಸಕ್ಕರೆಯೂ ದೇಹದ ಮೇಲೆ ಕೆಟ್ಟ ಪರಿಣಾಮವನ್ನೇ ಬೀರುತ್ತದೆ.

Citrus Fruits Healthy Foods That Are Harmful To Consume At Night

ಸಿಟ್ರಸ್‌ ಹಣ್ಣುಗಳು

ಬೆಳಗ್ಗೆ ಎದ್ದ ಕೂಡಲೇ ಸಿಟ್ರಸ್‌ ಹಣ್ಣುಗಳನ್ನು ಸೇವಿಸುವ ಅಭ್ಯಾಸವಿದ್ದರೆ ಬಿಡಿ. ಇವು ದೇಹದಲ್ಲಿ ಆಸಿಡ್‌ ಮಟ್ಟವನ್ನು ಏರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನೂ ಕುಂಠಿತಗೊಳಿಸುವ ಸಾಧ್ಯತೆ ಹೆಚ್ಚು.

Green vegetables

ಹಸಿ ತರಕಾರಿಗಳು

ಹಸಿ ತರಕಾರಿಗಳು ದೇಹಾರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಖಾಲಿ ಹೊಟ್ಟೆಯಲ್ಲಿ ಹಸಿ ತರಕಾರಿ ತಿನ್ನುವುದು ಅಷ್ಟು ಒಳ್ಳೆಯದಲ್ಲ. ಇವು ಕರಗಲು ಸ್ವಲ್ಪ ಹೆಚ್ಚೇ ಸಮಯ ಬೇಕು. ಅಷ್ಟೇ ಅಲ್ಲ, ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿರುವಾಗ, ಜೀರ್ಣಾಂಗಗಳಿಗೆ ಹೆಚ್ಚಿನ ಒತ್ತಡವನ್ನು ಕೊಟ್ಟು ಕೆಲಸವನ್ನು ಮಾಡಿಸುತ್ತವೆ. ಹಾಗಾಗಿ, ಜೀರ್ಣಕ್ರಿಯೆಗೆ ಹೆಚ್ಚು ಒತ್ತಡವಾಗದಂಥ ಆಹಾರವನ್ನು ಬೆಳಗ್ಗೆ ತಿನ್ನುವುದು ಒಳ್ಳೆಯದು.

Continue Reading
Advertisement
Surrogacy Leaves
ಪ್ರಮುಖ ಸುದ್ದಿ39 mins ago

Surrogacy Leaves: ಬಾಡಿಗೆ ತಾಯ್ತನದ ನಿಯಮ ಬದಲಿಸಿದ ಕೇಂದ್ರ; ಇನ್ನು ಸಿಗಲಿದೆ 6 ತಿಂಗಳು ರಜೆ!

T20 world Cup 2024
ಕ್ರೀಡೆ1 hour ago

T20 World Cup 2024 : ಇಂಗ್ಲೆಂಡ್ ವಿರುದ್ಧ ಯುಎಸ್​​ಎ ತಂಡಕ್ಕೆ 10 ವಿಕೆಟ್​ ಹೀನಾಯ ಸೋಲು

SBI
ದೇಶ1 hour ago

SBI: ನಿಮ್ಮೂರಿಗೂ ಬರಲಿದೆ ಎಸ್‌ಬಿಐ ಹೊಸ ಬ್ರ್ಯಾಂಚ್;‌ 400 ಶಾಖೆ ತೆರೆಯಲು ಬ್ಯಾಂಕ್‌ ನಿರ್ಧಾರ

IND vs SA
ಪ್ರಮುಖ ಸುದ್ದಿ2 hours ago

IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ

T20 world cup 2024
ಪ್ರಮುಖ ಸುದ್ದಿ2 hours ago

T20 World Cup 2024 : ಅಮೆರಿಕ ವಿರುದ್ಧವೂ ಸೋತ್ರಲ್ಲೋ… ಪಾಕ್​ ಪಾರ್ಲಿಮೆಂಟ್​ನಲ್ಲೂ ವಿಶ್ವ ಕಪ್ ಸೋಲಿನ ಚರ್ಚೆ!

Rahul Gandhi
ದೇಶ2 hours ago

Rahul Gandhi: ಎಲ್ಲರೂ ಬೈಯುವಾಗ ನೀವು ಪ್ರೀತಿ ಕೊಟ್ರಿ; ವಯನಾಡು ಜನತೆಗೆ ರಾಹುಲ್‌ ಗಾಂಧಿ ಭಾವುಕ ಪತ್ರ

Babar Azam
ಪ್ರಮುಖ ಸುದ್ದಿ3 hours ago

Babar Azam: ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದವನ ಮೇಲೆ 1 ಕೋಟಿ ರೂ. ಮಾನನಷ್ಠ ಮೊಕದ್ದಮೆ ಹೂಡಿದ ಬಾಬರ್ ಅಜಮ್​

Abbi Falls
ಕರ್ನಾಟಕ4 hours ago

Abbi Falls: ಅಬ್ಬಿ ಫಾಲ್ಸ್ ಬಳಿ ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ; ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ

Shakib Al Hasan
ಪ್ರಮುಖ ಸುದ್ದಿ4 hours ago

Shakib Al Hasan : ನಿವೃತ್ತಿಯಾಗು ಶಕಿಬ್…, ಬಾಂಗ್ಲಾ ಮಾಜಿ ನಾಯಕನ ಮೇಲೆ ಮತ್ತೆ ಗುಡುಗಿದ ಸೆಹ್ವಾಗ್​

Vashu Bhagnani
ಸಿನಿಮಾ4 hours ago

Vashu Bhagnani: ‘ಬೆಲ್ ಬಾಟಮ್’ ಚಿತ್ರದ ನಿರ್ಮಾಪಕ ದಿವಾಳಿ; ಕಚೇರಿ ಕಟ್ಟಡ ಸೇಲ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು7 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌